11.01.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಒಬ್ಬ ತಂದೆಯ ಆದೇಶದಂತೆ ನಡೆಯುತ್ತಾ ಹೋಗಿ ಆಗ ತಂದೆಯು ನಿಮ್ಮ ಜವಾಬ್ದಾರರಾಗಿರುತ್ತಾರೆ. ತಂದೆಯ ಆದೇಶವಾಗಿದೆ, ನಡೆಯುತ್ತಾ-ತಿರುಗಾಡುತ್ತಾ ನನ್ನನ್ನು ನೆನಪು ಮಾಡಿ”

ಪ್ರಶ್ನೆ:
ಒಳ್ಳೆಯ ಗುಣವಂತ ಮಕ್ಕಳ ಮುಖ್ಯ ಲಕ್ಷಣಗಳೇನು?

ಉತ್ತರ:
ಅವರು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಒಳ್ಳೆಯ ಸೇವೆ ಮಾಡುತ್ತಾರೆ. ಯಾರಿಗೂ ಮುಳ್ಳನ್ನು ಚುಚ್ಚುವುದಿಲ್ಲ, ಎಂದೂ ಪರಸ್ಪರ ಜಗಳವಾಡುವುದಿಲ್ಲ, ಯಾರಿಗೂ ದುಃಖವನ್ನು ಕೊಡುವುದಿಲ್ಲ. ದುಃಖ ಕೊಡುವುದೂ ಸಹ ಮುಳ್ಳು ಚುಚ್ಚುವುದಾಗಿದೆ.

ಗೀತೆ:
ಈ ಸಮಯವು ಕಳೆಯುತ್ತಿದೆ .........

ಓಂ ಶಾಂತಿ.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಆತ್ಮೀಯ ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ ಈ ಗೀತೆಯನ್ನು ತಿಳಿದುಕೊಂಡಿರಿ. ನಂಬರ್ವಾರ್ ಎಂದು ಏಕೆ ಹೇಳುತ್ತೇವೆಂದರೆ ಕೆಲವರು ಪ್ರಥಮ ದರ್ಜೆಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ. ಕೆಲವರು ಮಧ್ಯಮ ದರ್ಜೆಯಲ್ಲಿ, ಇನ್ನೂ ಕೆಲವರು ತೃತಿಯ ದರ್ಜೆಯಲ್ಲಿ ಅರಿತುಕೊಳ್ಳುತ್ತಾರೆ. ತಿಳುವಳಿಕೆಯೂ ಸಹ ಪ್ರತಿಯೊಬ್ಬರಿಗೂ ಬೇರೆ-ಬೇರೆಯಾಗಿರುತ್ತದೆ. ನಿಶ್ಚಯ ಬುದ್ಧಿಯೂ ಸಹ ಪ್ರತಿಯೊಬ್ಬರಿಗೂ ಬೇರೆಯಾಗಿರುತ್ತದೆ. ತಂದೆಯಂತೂ ತಿಳಿಸುತ್ತಿರುತ್ತಾರೆ - ಮಕ್ಕಳೇ, ಸದಾ ನಮಗೆ ಶಿವ ತಂದೆಯು ಇವರ ಮೂಲಕ ಆದೇಶ ನೀಡುತ್ತಾರೆಂದು ತಿಳಿಯಿರಿ. ನೀವು ಅರ್ಧಕಲ್ಪ ಆಸುರೀ ಮತದಂತೆ ನಡೆಯುತ್ತಾ ಬಂದಿದ್ದೀರಿ. ಈಗ ಈ ನಿಶ್ಚಯ ಮಾಡಿಕೊಳ್ಳಿ - ನಾವು ಈಶ್ವರೀಯ ಆದೇಶದಂತೆ ನಡೆಯುತ್ತೇವೆ. ಇದರಿಂದ ದೋಣಿಯು ಪಾರಾಗುತ್ತದೆ. ಒಂದುವೇಳೆ ಈಶ್ವರೀಯ ಮತವೆಂದು ತಿಳಿಯದೇ ಮನುಷ್ಯ ಮತವೆಂದು ತಿಳಿಯುತ್ತೀರೆಂದರೆ ಗೊಂದಲಕ್ಕೊಳಗಾಗುವಿರಿ. ನನ್ನ ಆದೇಶದಂತೆ ನಡೆಯುವುದರಿಂದ ನಾನೇ ಜವಾಬ್ದಾರನಾಗಿರುತ್ತೇನಲ್ಲವೆ. ಇವರ ಮೂಲಕ ಏನೆಲ್ಲವೂ ಆಗುತ್ತದೆಯೋ ಅವರ (ಬ್ರಹ್ಮಾ) ಚಟುವಟಿಕೆಗಳಿಗೆ ನಾನೇ ಜವಾಬ್ದಾರನಾಗಿರುತ್ತೇನೆ. ನಾನು ಅದನ್ನು ಸರಿ ಪಡಿಸುತ್ತೇನೆ, ನೀವು ಕೇವಲ ನನ್ನ ಆದೇಶದಂತೆ ನಡೆಯುತ್ತಾ ಹೋಗಿ. ಯಾರು ಬಹಳ ಚೆನ್ನಾಗಿ ನೆನಪು ಮಾಡುವರೋ ಅವರೇ ಆದೇಶದಂತೆ ನಡೆಯುತ್ತಾರೆ. ಹೆಜ್ಜೆ-ಹೆಜ್ಜೆಯಲ್ಲಿ ಈಶ್ವರನ ಆದೇಶವೆಂದು ತಿಳಿದು ನಡೆಯುತ್ತೀರೆಂದರೆ ಎಂದೂ ನಷ್ಟವಾಗುವುದಿಲ್ಲ. ನಿಶ್ಚಯದಲ್ಲಿಯೇ ವಿಜಯವಿದೆ. ಅನೇಕರು ಈ ಮಾತುಗಳನ್ನು ಅರಿತುಕೊಳ್ಳುವುದೇ ಇಲ್ಲ. ಸ್ವಲ್ಪ ಜ್ಞಾನವಿದ್ದರೆ ಸಾಕು ದೇಹಾಭಿಮಾನವು ಬಂದು ಬಿಡುತ್ತದೆ. ಯೋಗವು ಬಹಳ ಕಡಿಮೆಯಿದೆ. ಇತಿಹಾಸ-ಭೂಗೋಳವನ್ನು ಅರಿತುಕೊಳ್ಳುವುದು ಜ್ಞಾನವಾಗಿದೆ. ಇದು ಸಹಜವಾಗಿದೆ. ಇಲ್ಲಿಯೂ ಸಹ ಮನುಷ್ಯರು ಎಷ್ಟೊಂದು ವಿಜ್ಞಾನ ಇತ್ಯಾದಿಯನ್ನು ಓದುತ್ತಾರೆ. ಈ ವಿದ್ಯೆಯು ಬಹಳ ಸಹಜವಾಗಿದೆ ಆದರೆ ಯೋಗದಲ್ಲಿ ಪರಿಶ್ರಮವಿದೆ.

ಬಾಬಾ ನಾವು ಯೋಗದಲ್ಲಿ ಬಹಳ ಮಸ್ತರಾಗಿರುತ್ತೇವೆಂದು ಯಾರಾದರೂ ಹೇಳಿದರೆ ಅದನ್ನು ತಂದೆಯು ಒಪ್ಪುವುದಿಲ್ಲ. ತಂದೆಯು ಪ್ರತಿಯೊಬ್ಬರ ಪಾತ್ರವನ್ನು ನೋಡುತ್ತಾರೆ. ತಂದೆಯನ್ನು ನೆನಪು ಮಾಡುವವರು ಬಹಳ ಪ್ರಿಯರಾಗುವರು. ನೆನಪು ಮಾಡುವುದಿಲ್ಲ, ಆದ್ದರಿಂದ ಉಲ್ಟಾ-ಸುಲ್ಟಾ ಕೆಲಸಗಳಾಗುತ್ತವೆ. ಈಗ ನೀವು ಏಣಿಯ ಚಿತ್ರದ ಮೇಲೂ ಬಹಳ ಚೆನ್ನಾಗಿ ತಿಳಿಸಬಹುದು. ಈ ಸಮಯದಲ್ಲಿ ಮುಳ್ಳುಗಳ ಕಾಡಾಗಿದೆ. ಇದು ಹೂದೋಟವಲ್ಲ, ಅಂದಾಗ ಇದನ್ನು ಸ್ಪಷ್ಟವಾಗಿ ತಿಳಿಸಬೇಕು - ಭಾರತವು ಹೂದೋಟವಾಗಿತ್ತು, ಹೂದೋಟದಲ್ಲಿ ಎಂದಾದರೂ ಕಾಡು ಪ್ರಾಣಿಗಳಿರುತ್ತವೆಯೇ? ಸತ್ಯಯುಗದಲ್ಲಂತೂ ದೇವಿ-ದೇವತೆಗಳಿರುತ್ತಾರೆ. ತಂದೆಯು ಹೈಯೆಸ್ಟ್ ಅಥಾರಿಟಿಯಾಗಿದ್ದಾರೆ ಮತ್ತು ಈ ಪ್ರಜಾಪಿತ ಬ್ರಹ್ಮಾರವರೂ ಸಹ ಹೈಯೆಸ್ಟ್ ಅಥಾರಿಟಿಯಾಗಿರುವರು. ಈ ದಾದಾರವರು ಎಲ್ಲರಿಗಿಂತ ದೊಡ್ಡ ಅಥಾರಿಟಿಯಾಗಿದ್ದಾರೆ. ಶಿವ ಮತ್ತು ಪ್ರಜಾಪಿತ ಬ್ರಹ್ಮಾ. ಆತ್ಮಗಳು ಶಿವ ತಂದೆಯ ಮಕ್ಕಳಾಗಿದ್ದಾರೆ ಮತ್ತು ಸಾಕಾರದಲ್ಲಿ ನಾವೆಲ್ಲರೂ ಪ್ರಜಾಪಿತ ಬ್ರಹ್ಮನ ಮಕ್ಕಳು ಸಹೋದರ-ಸಹೋದರರಾಗಿದ್ದೇವೆ. ಇವರು ಎಲ್ಲರ ಗ್ರೇಟ್-ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದಾರೆ. ಇಂತಹ ಹೈಯೆಸ್ಟ್ ಅಥಾರಿಟಿಗಾಗಿ ನಮಗೆ ಮನೆಯು ಬೇಕು. ಹೀಗೆ ನೀವು ಬರೆಯಿರಿ ನಂತರ ನೋಡಿ, ಬುದ್ಧಿಯಲ್ಲಿ ಸ್ವಲ್ಪವಾದರೂ ಕುಳಿತುಕೊಳ್ಳುತ್ತದೆಯೇ.

ಶಿವ ತಂದೆ ಮತ್ತು ಪ್ರಜಾಪಿತ ಬ್ರಹ್ಮಾ, ಶಿವ ತಂದೆಯು ಆತ್ಮಗಳ ತಂದೆಯಾಗಿದ್ದಾರೆ ಮತ್ತು ಪ್ರಜಾಪಿತ ಬ್ರಹ್ಮಾ ಎಲ್ಲಾ ಮನುಷ್ಯ ಮಾತ್ರರ ತಂದೆಯಾಗಿದ್ದಾರೆ. ಈ ವಿಷಯವು ಬಹಳ ತಿಳಿಸುವಂತಹದ್ದಾಗಿದೆ. ಆದರೆ ಮಕ್ಕಳು ಪೂರ್ಣ ರೀತಿಯಿಂದ ತಿಳಿಸುವುದಿಲ್ಲ, ಮರೆತು ಹೋಗುತ್ತಾರೆ. ಜ್ಞಾನದ ಅಭಿಮಾನವು ಏರಿ ಬಿಡುತ್ತದೆ. ಹೇಗೆ ಬಾಪ್ದಾದಾರವರೂ ಸಹ ಜಯ ಗಳಿಸುತ್ತಾರೆ. ಈ ದಾದಾರವರು ತಿಳಿಸುತ್ತಾರೆ - ಭಲೆ ನಾನು ಹೇಳಿದ್ದನ್ನು ಕೇಳಬೇಡಿ, ಸದಾ ನಮಗೆ ಶಿವ ತಂದೆಯು ಹೇಳುತ್ತಾರೆಂದು ತಿಳಿಯಿರಿ. ಅವರ ಮತದಂತೆ ನಡೆಯಿರಿ. ಡೈರೆಕ್ಟ್ ಈಶ್ವರನೇ ಮತವನ್ನು ಕೊಡುತ್ತಾರೆ - ಹೀಗೀಗೆ ಮಾಡಿ, ಎಲ್ಲದಕ್ಕೂ ನಾನು ಜವಾಬ್ದಾರನಾಗಿದ್ದೇನೆ. ಈಶ್ವರೀಯ ಮತದಂತೆ ನಡೆಯಿರಿ, ಈ ಬ್ರಹ್ಮನೇ ಈಶ್ವರನಲ್ಲ. ನೀವು ಈಶ್ವರನಿಂದ ಓದಬೇಕಲ್ಲವೆ. ಸದಾ ಈ ಆದೇಶವನ್ನು ಈಶ್ವರನೇ ಕೊಡುತ್ತಾರೆಂದು ತಿಳಿಯಿರಿ. ಈ ಲಕ್ಷ್ಮಿ-ನಾರಾಯಣರೂ ಸಹ ಭಾರತದ ಮಾನವರೇ ಆಗಿದ್ದಾರೆ. ಇವರೂ ಸಹ ಎಲ್ಲರೂ ಮನುಷ್ಯರೇ ಆಗಿದ್ದಾರೆ. ಈ ಲಕ್ಷ್ಮಿ-ನಾರಾಯಣರು ಶಿವಾಲಯದ ನಿವಾಸಿಗಳಾಗಿರುವುದರಿಂದ ಎಲ್ಲರೂ ನಮಸ್ಕಾರ ಮಾಡುತ್ತಾರೆ, ಆದರೆ ಮಕ್ಕಳು ಪೂರ್ಣ ತಿಳಿಸುವುದಿಲ್ಲ. ತಮ್ಮ ನಶೆಯೇರಿ ಬಿಡುತ್ತದೆ. ಅನೇಕರಲ್ಲಿ ಲೋಪ ದೋಷಗಳಿವೆಯಲ್ಲವೆ. ಯಾವಾಗ ಪೂರ್ಣ ಯೋಗವಿರುವುದೋ ಆಗ ವಿಕರ್ಮಗಳು ವಿನಾಶವಾಗುವುದು. ವಿಶ್ವದ ಮಾಲೀಕರಾಗುವುದು ಚಿಕ್ಕಮ್ಮನ ಮನೆಯಂತಲ್ಲ. ತಂದೆಯು ನೋಡುತ್ತಾರೆ - ಮಾಯೆಯು ಒಮ್ಮೆಲೆ ಮೂಗನ್ನು ಹಿಡಿದು ಮೋರಿಯಲ್ಲಿ ಬೀಳಿಸುತ್ತದೆ. ತಂದೆಯ ನೆನಪಿನಲ್ಲಿ ಬಹಳ ಖುಷಿಯಲ್ಲಿ ಪ್ರಫುಲ್ಲಿತರಾಗಿರಬೇಕು. ನಿಮ್ಮ ಸನ್ಮುಖದಲ್ಲಿ ಗುರಿ-ಉದ್ದೇಶವಿದೆ - ನಾವು ಈ ಲಕ್ಷ್ಮಿ-ನಾರಾಯಣರಾಗಿದ್ದೆವು. ಇದನ್ನು ಮರೆತು ಹೋಗಿರುವುದರಿಂದ ಖುಷಿಯ ನಶೆಯೇರುವುದಿಲ್ಲ. ನಮ್ಮನ್ನು ಯೋಗದಲ್ಲಿ ಕುಳ್ಳಿಸಿ. ಹೊರಗಡೆಯಂತೂ ನೆನಪು ಮಾಡಲು ನಮ್ಮಿಂದ ಸಾಧ್ಯವಿಲ್ಲವೆಂದು ಹೇಳುತ್ತಾರೆ. ನೆನಪಿನಲ್ಲಿರುವುದಿಲ್ಲ ಆದ್ದರಿಂದ ಕೆಲವೊಮ್ಮೆ ತಂದೆಯೂ ಸಹ ಕೆಲವೊಂದು ಜ್ಞಾನ ಬಿಂದುಗಳನ್ನು ಕಳುಹಿಸುತ್ತಾರೆ ಆದರೆ ನೆನಪಿನಲ್ಲಿ ಕುಳಿತುಕೊಳ್ಳುವುದಿಲ್ಲ. ಬುದ್ಧಿಯು ಅಲ್ಲಿ-ಇಲ್ಲಿ ಅಲೆದಾಡುತ್ತಿರುತ್ತದೆ. ತಂದೆಯು ತಮ್ಮ ಉದಾಹರಣೆಯನ್ನು ತಿಳಿಸುತ್ತಾರೆ - ನಾನು ನಾರಾಯಣನ ಎಷ್ಟೊಂದು ಪಕ್ಕಾ ಭಕ್ತನಾಗಿದ್ದೆನು. ಎಲ್ಲಿ ನೋಡಿದರೂ ಜೊತೆಯಲ್ಲಿ ನಾರಾಯಣ ಚಿತ್ರವಿರುತ್ತಿತ್ತು ಆದರೂ ಸಹ ಪೂಜೆಯ ಸಮಯದಲ್ಲಿ ಬುದ್ಧಿಯು ಅಲ್ಲಿ-ಇಲ್ಲಿ ಓಡುತ್ತಿತ್ತು. ಇಲ್ಲಿಯೂ ಸಹ ಅದೇ ರೀತಿ ಆಗುತ್ತದೆ. ತಂದೆಯು ತಿಳಿಸುತ್ತಾರೆ, ನಡೆದಾಡುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿ ಆದರೆ ಸಹೋದರಿಯು ಯೋಗ ಮಾಡಿಸಲಿ ಎಂದು ಕೆಲವರು ಹೇಳುತ್ತಾರೆ. ತಂದೆಯು ಯಾವಾಗಲೂ ತಿಳಿಸುತ್ತಾರೆ - ನೆನಪಿನಲ್ಲಿರಿ, ಕೆಲವು ಮಕ್ಕಳು ಯೋಗದಲ್ಲಿ ಕುಳಿತು-ಕುಳಿತಿದ್ದಂತೆಯೇ ಧ್ಯಾನದಲ್ಲಿ ಹೊರಟು ಹೋಗುತ್ತಾರೆ. ಜ್ಞಾನವೂ ಇಲ್ಲ, ಯೋಗವೂ ಇಲ್ಲ. ಇಲ್ಲವೆಂದರೆ ತೂಕಡಿಸ ತೊಡಗುತ್ತಾರೆ, ಅನೇಕರಿಗೆ ಇದು ಹವ್ಯಾಸವಾಗಿ ಬಿಟ್ಟಿದೆ. ಇದಂತೂ ಅಲ್ಪಕಾಲದ ಶಾಂತಿಯಾಯಿತು ಅಂದರೆ ಉಳಿದಂತೆ ಇಡೀ ದಿನ ಅಶಾಂತಿಯಿರುತ್ತದೆ. ನಡೆಯುತ್ತ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡುವುದಿಲ್ಲ, ಇಲ್ಲವೆಂದರೆ ಪಾಪಗಳ ಹೊರೆಯು ಹೇಗೆ ಇಳಿಯುವುದು? ಅರ್ಧಕಲ್ಪದ ಹೊರೆಯಿದೆ ಇದರಲ್ಲಿಯೇ ಬಹಳ ಪರಿಶ್ರಮವಿದೆ, ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಭಲೆ ತಂದೆಗೆ ಅನೇಕ ಮಕ್ಕಳು ಬಾಬಾ, ಇಷ್ಟು ಸಮಯ ನಾವು ನೆನಪಿನಲ್ಲಿದ್ದೆವೆಂದು ಬರೆದು ಕಳುಹಿಸುತ್ತಾರೆ ಆದರೆ ನೆನಪಿರುವುದೇ ಇಲ್ಲ. ಚಾರ್ಟನ್ನು ಅರಿತುಕೊಂಡೇ ಇಲ್ಲ. ಬಾಬಾ ಬೇಹದ್ದಿನ ತಂದೆಯಾಗಿದ್ದಾರೆ, ಪತಿತ-ಪಾವನನಾಗಿದ್ದಾರೆ ಅಂದಮೇಲೆ ಖುಷಿಯಿರಬೇಕು. ನಾವಂತೂ ಶಿವ ತಂದೆಯ ಮಕ್ಕಳಾಗಿದ್ದೇವಲ್ಲವೆ ಎಂದಲ್ಲ. ಹೀಗೂ ಅನೇಕರಿದ್ದಾರೆ, ನಾವಂತೂ ತಂದೆಯ ಮಕ್ಕಳಾಗಿದ್ದೇವೆಂದು ತಿಳಿಯುತ್ತಾರೆ. ಆದರೆ ಸ್ವಲ್ಪವೂ ನೆನಪು ಮಾಡುವುದಿಲ್ಲ. ಒಂದುವೇಳೆ ನೆನಪು ಮಾಡುತ್ತಿದ್ದರೆ ನಂಬರ್ವನ್ನಲ್ಲಿ ಹೋಗಬೇಕು. ಅನ್ಯರಿಗೆ ತಿಳಿಸುವುದರಲ್ಲಿಯೂ ಬಹಳ ಒಳ್ಳೆಯ ಬುದ್ಧಿಯಿರಬೇಕು. ತಿಳಿಸಿ, ನಾವಂತೂ ಭಾರತದ ಮಹಿಮೆ ಮಾಡುತ್ತೇವೆ, ಹೊಸ ಪ್ರಪಂಚದಲ್ಲಿ ಆದಿ ಸನಾತನ ದೇವಿ-ದೇವತೆಗಳ ರಾಜ್ಯವಿತ್ತು, ಈಗ ಹಳೆಯ ಪ್ರಪಂಚ ಕಲಿಯುಗವಾಗಿದೆ. ಅದು ಸುಖಧಾಮ, ಇದು ದುಃಖಧಾಮವಾಗಿದೆ. ಭಾರತವು ಸ್ವರ್ಗವಾಗಿತ್ತು ಆಗ ಈ ದೇವತೆಗಳ ರಾಜ್ಯವಿತ್ತು. ನಾವು ಇವರ ರಾಜ್ಯವಿತ್ತೆಂದು ಹೇಗೆ ತಿಳಿಯುವುದು? ಎಂದು ಕೆಲವರು ಕೇಳುತ್ತಾರೆ. ಈ ಜ್ಞಾನವು ಬಹಳ ಅದ್ಭುತವಾಗಿದೆ. ಯಾರ ಅದೃಷ್ಟದಲ್ಲಿ ಏನಿದೆ, ಯಾರೆಷ್ಟು ಪುರುಷಾರ್ಥ ಮಾಡುತ್ತಾರೆಯೋ ಎಂಬುದು ಕಾಣುತ್ತದೆಯಲ್ಲವೆ. ನೀವು ಚಟುವಟಿಕೆಯಿಂದ ತಿಳಿದುಕೊಂಡಿದ್ದೀರಿ. ಭಲೆ ಕಲಿಯುಗದವರು ಮನುಷ್ಯರೇ, ಸತ್ಯಯುಗಿಗಳೂ ಮನುಷ್ಯರೆ ಆದರೆ ಅವರ ಮುಂದೆ ಹೋಗಿ ಏಕೆ ತಲೆಬಾಗುತ್ತಾರೆ. ಇವರನ್ನು ಸ್ವರ್ಗದ ಮಾಲೀಕರೆಂದು ಹೇಳುತ್ತಾರಲ್ಲವೆ. ಯಾರಾದರೂ ಮರಣ ಹೊಂದಿದಾಗ ಇಂತಹವರು ಸ್ವರ್ಗವಾಸಿಯಾದರು ಎಂದು ಹೇಳುತ್ತಾರೆ ಆದರೆ ಇದನ್ನೂ ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಈ ಸಮಯದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ. ಅವಶ್ಯವಾಗಿ ಇಲಿಯೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆ. ತಂದೆಯು ಪ್ರತಿಯೊಬ್ಬರ ನಡುವಳಿಕೆಯನ್ನು ನೋಡುತ್ತಿರುತ್ತಾರೆ. ತಂದೆಯು ಎಷ್ಟು ಸಾಧಾರಣ ರೀತಿಯಲ್ಲಿ ಯಾರ್ಯಾರೊಂದಿಗೋ ಮಾತನಾಡಬೇಕಾಗುತ್ತದೆ. ಬಹಳ ಸಂಭಾಲನೆ ಮಾಡಬೇಕಾಗುತ್ತದೆ. ತಂದೆಯು ಎಷ್ಟು ಸ್ಪಷ್ಟಮಾಡಿ ತಿಳಿಸುತ್ತಾರೆ. ಈ ಮಾತು ಸರಿ ಎಂಬುದನ್ನೂ ತಿಳಿಯುತ್ತಾರೆ ಆದರೂ ಸಹ ಮತ್ತೇಕೆ ದೊಡ್ಡ-ದೊಡ್ಡ ಮುಳ್ಳುಗಳಾಗಿಬಿಡುತ್ತಾರೆ? ಪರಸ್ಪರ ದುಃಖವನ್ನು ಕೊಡುವುದರಿಂದ ಮುಳ್ಳುಗಳಾಗುತ್ತಾರೆ. ಈ ಚಟವನ್ನು ಬಿಡುವುದೇ ಇಲ್ಲ. ಈಗ ಹೂದೋಟದ ಮಾಲಿಯಾದ ತಂದೆಯು ಹೂದೋಟವನ್ನಾಗಿ ಮಾಡುತ್ತಾರೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ. ಅವರ ಕರ್ತವ್ಯವೇ ಇದಾಗಿದೆ. ಯಾರು ತಾನೇ ಮುಳ್ಳಾಗಿರುವರೋ ಅವರು ಅನ್ಯರನ್ನು ಹೂಗಳನ್ನಾಗಿ ಹೇಗೆ ಮಾಡುವರು? ಪ್ರದರ್ಶನಿಯಲ್ಲಿಯೂ ಸಹ ಬಹಳ ಎಚ್ಚರವಹಿಸಿ ಬುದ್ಧಿವಂತರನ್ನು ಕಳುಹಿಸಲಾಗುತ್ತದೆ.

ಯಾರು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಒಳ್ಳೆಯ ಸೇವೆ ಮಾಡುವರೋ ಅವರೇ ಒಳ್ಳೆಯ ಗುಣವಂತ ಮಕ್ಕಳಾಗುತ್ತಾರೆ, ಯಾರಿಗೂ ಮುಳ್ಳು ಚುಚ್ಚುವುದಿಲ್ಲ ಅರ್ಥಾತ್ ದುಃಖವನ್ನು ಕೊಡುವುದಿಲ್ಲ, ಎಂದೂ ಸಹ ಪರಸ್ಪರ ಜಗಳವಾಡುವುದಿಲ್ಲ. ನೀವು ಮಕ್ಕಳು ಬಹಳ ನಿಖರವಾಗಿ ತಿಳಿಸುತ್ತೀರಿ. ಇದರಲ್ಲಿ ಯಾರದೂ ನಿಂದನೆಯ ಮಾತಿಲ್ಲ. ಈಗ ಶಿವ ಜಯಂತಿಯು ಬರುತ್ತಿದೆ, ನೀವು ಹೆಚ್ಚಿನ ಪ್ರದರ್ಶನಿಗಳನ್ನು ಇಡುತ್ತಾ ಹೋಗಿ. ಚಿಕ್ಕ-ಚಿಕ್ಕ ಪ್ರದರ್ಶನಿಯಲ್ಲಿಯೂ ಸಹ ತಿಳಿಸಬಹುದು - ಒಂದು ಸೆಕೆಂಡಿನಲ್ಲಿ ಸ್ವರ್ಗವಾಸಿಗಳಾಗಿ ಅಥವಾ ಪತಿತ ಭ್ರಷ್ಟಾಚಾರಿಗಳಿಂದ ಶ್ರೇಷ್ಠಾಚಾರಿಗಳಾಗಿ. ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳಿ. ಜೀವನ್ಮುಕ್ತಿಯ ಅರ್ಥವನ್ನೂ ಸಹ ತಿಳಿದುಕೊಂಡಿಲ್ಲ. ನೀವು ಮಕ್ಕಳೂ ಸಹ ಈಗ ತಿಳಿದುಕೊಳ್ಳುತ್ತೀರಿ. ತಂದೆಯ ಮೂಲಕ ಎಲ್ಲರಿಗೆ ಜೀವನ್ಮುಕ್ತಿಯು ಸಿಗುತ್ತದೆ, ಆದರೆ ನಾಟಕವನ್ನೂ ಅರಿತುಕೊಳ್ಳಬೇಕಾಗಿದೆ. ಎಲ್ಲಾ ವರ್ಗದವರು ಸ್ವರ್ಗದಲ್ಲಿ ಬರುವುದಿಲ್ಲ, ಅವರು ತಮ್ಮ-ತಮ್ಮ ವಿಭಾಗದಲ್ಲಿರುತ್ತಾರೆ ನಂತರ ತಮ್ಮ-ತಮ್ಮ ಸಮಯದಲ್ಲಿ ಬಂದು ಸ್ಥಾಪನೆ ಮಾಡುತ್ತಾರೆ. ವೃಕ್ಷದಲ್ಲಿ ಎಷ್ಟು ಸ್ಪಷ್ಟವಾಗಿದೆ! ಒಬ್ಬ ಸದ್ಗುರುವಿನ ವಿನಃ ಮತ್ತ್ಯಾರೂ ಸದ್ಗತಿದಾತನಾಗಲು ಸಾಧ್ಯವಿಲ್ಲ. ಉಳಿದಂತೆ ಭಕ್ತಿಯನ್ನು ಕಲಿಸಿಕೊಡುವಂತಹ ಗುರುಗಳು ಅನೇಕರಿದ್ದಾರೆ. ಸದ್ಗತಿಗೆ ಮನುಷ್ಯ ಗುರುಗಳು ಇರಲು ಸಾಧ್ಯವಿಲ್ಲ. ಈಗ ನೀವು ಮಕ್ಕಳು ತಿಳಿಸಬಹುದು - ಈ ರಾಮಾಯಣದ ಕಥೆ ಮೊದಲಾದುವುಗಳು ಇಡೀ ಭಾರತದಲ್ಲಿವೆ. ಕೇವಲ ತಿಳಿಸಿಕೊಡುವ ಬುದ್ಧಿವಂತಿಕೆಯೂ ಬೇಕು. ಇದರಲ್ಲಿ ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗುತ್ತದೆ. ನಾಟಕದ ಇಷ್ಟು ವಿಚಿತ್ರವಾದ ಆಟವಾಗಿದೆ, ನಿಮ್ಮಲ್ಲಿಯೂ ಸಹ ಬಹಳ ಕೆಲವರೇ ಈ ನಶೆಯಲ್ಲಿರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ರಾತ್ರಿ ಕ್ಲಾಸ್ 18-03-68
ವಾಸ್ತವದಲ್ಲಿ ನೀವು ಶಾಸ್ತ್ರಗಳ ಮೇಲೆ ವಾದ-ವಿವಾದವನ್ನು ಮಾಡುವ ಅವಶ್ಯಕತೆಯಿಲ್ಲ. ಮೂಲ ಮಾತು ನೆನಪಿನದಾಗಿದೆ ಮತ್ತು ಸೃಷ್ಠಿಯ ಆದಿ ಮಧ್ಯ ಅಂತ್ಯವನ್ನು ತಿಳಿಯಬೇಕು. ಚಕ್ರವರ್ತಿ ರಾಜ ಆಗಬೇಕು. ಕೇವಲ ಈ ಚಕ್ರವನ್ನು ಮಾತ್ರ ತಿಳಿದುಕೊಳ್ಳಬೇಕು, ಇದರದೆ ಗಾಯನವಿದೆ ಸೆಕೆಂಡ್ ನಲ್ಲಿ ಜೀವನ್ಮುಕ್ತಿ. ನೀವು ಮಕ್ಕಳಿಗೆ ಆಶ್ಚರ್ಯವಾಗುತ್ತಿರಬಹುದು ಅರ್ಧ ಕಲ್ಪ ಭಕ್ತಿ ನಡೆಯುತ್ತದೆ. ಸ್ವಲ್ಪವೂ ಜ್ಞಾನವಿರುವುದಿಲ್ಲ. ಜ್ಞಾನವಿರುವುದೇ ತಂದೆಯ ಬಳಿ. ತಂದೆಯ ಮೂಲಕವೇ ತಿಳಿಯ ಬೇಕು. ಈ ತಂದೆ ಎಷ್ಟು ಅಸಾಮಾನ್ಯ ಆಗಿದ್ದಾರೆ. ಆದ್ದರಿಂದ ಕೋಟಿಯಲ್ಲಿ ಕೆಲವರು ಬರುತ್ತಾರೆ. ಅಲ್ಲಿ ಟೀಚರ್ಸ್ ಈ ರೀತಿ ಹೇಳುವುದಿಲ್ಲ. ಇವರು ಹೇಳುತ್ತಾರೆ ನಾನೇ ತಂದೆ, ಟೀಚರ್, ಗುರುವಾಗಿದ್ದೇನೆ. ಇದನ್ನು ಮನುಷ್ಯರು ಕೇಳಿ ಆಶ್ಚರ್ಯ ಚಕಿತರಾಗುತ್ತಾರೆ. ಭಾರತವನ್ನು ತಾಯ್ನಾಡು ಎಂದು ಹೇಳುತ್ತಾರೆ ಏಕೆಂದರೆ ಅಂಬಾನ ಹೆಸರು ಬಹಳ ಪ್ರಸಿದ್ದವಾಗಿದೆ. ಅಂಬಾಳ ಮೇಳಾ ಸಹಾ ಆಗುತ್ತೆ, ಅಂಬಾ ಮಧುರವಾದ ಅಕ್ಷರವಾಗಿದೆ. ಚಿಕ್ಕ ಮಕ್ಕಳೂ ಸಹ ತಾಯಿಯನ್ನು ಪ್ರೀತಿಮಾಡುವರಲ್ಲವೆ ಏಕೆಂದರೆ ತಾಯಿ ತಿನ್ನಿಸುತ್ತಾರೆ. ಕುಡಿಸುತ್ತಾರೆ, ಸಂಭಾಲನೆ ಮಾಡುತ್ತಾರೆ. ಅಂಬಾಗೆ ತಂದೆ ಸಹ ಇರಬೇಕಲ್ಲವೆ. ಈ ಮಗುವಂತೂ ದತ್ತು ಮಗಳಾಗಿದ್ದಾರೆ. ಪತಿಯಂತೂ ಅಲ್ಲ ಇದು ಹೊಸ ಮಾತಾಯಿತಲ್ಲವೆ. ಪ್ರಜಾಪಿತ ಬ್ರಹ್ಮಾರವರು ಖಂಡಿತ ದತ್ತು ತೆಗೆದುಕೊಂಡಿರಬೇಕು. ಈ ಎಲ್ಲಾ ಮಾತುಗಳನ್ನು ತಂದೆಯೇ ಬಂದು ನೀವು ಮಕ್ಕಳಿಗೆ ತಿಳಿಸುತ್ತಾರೆ. ಅಂಬಾದು ಎಷ್ಟು ಮೇಳಾಗಳು ನಡೆಯುತ್ತವೆ, ಪೂಜೆಯಾಗುತ್ತದೆ. ಏಕೆಂದರೆ ಈ ಮಗು ಬಹಳ ಸೇವೆ ಮಾಡಿದ್ದಾರೆ. ಮಮ್ಮಾರವರು ಎಷ್ಟು ಜನಕ್ಕೆ ಓದಿಸಿರಬಹುದು ಅಷ್ಟು ಬೇರೆ ಯಾರೂ ಓದಿಸಿರಲಾರರು. ಮಮ್ಮಾರವರ ಹೆಸರು ಬಹಳ ಪ್ರಸಿದ್ದವಾಗಿದೆ, ಬಹಳ ದೊಡ್ಡ ಮೇಳಾ ಸಹಾ ನಡೆಯುತ್ತೆ. ಈಗ ನೀವು ಮಕ್ಕಳು ತಿಳಿದಿರುವಿರಿ ತಂದೆಯೇ ಬಂದು ರಚನೆಯ ಆದಿ-ಮಧ್ಯ-ಅಂತ್ಯದ ಇಡೀ ರಹಸ್ಯ ನೀವು ಮಕ್ಕಳಿಗೆ ತಿಳಿಸಿದ್ದಾರೆ. ನಿಮಗೆ ತಂದೆಯ ಮನೆಯೂ ಸಹ ಗೊತ್ತಾಗಿದೆ. ತಂದೆಯ ಜೊತೆ ಪ್ರೀತಿ ಇದೆ ಎಂದಮೇಲೆ ಮನೆಯ ಮೇಲೂ ಸಹ ಪ್ರೀತಿಯಿದೆ. ಈ ಜ್ಞಾನ ನಿಮಗೆ ಈಗ ಸಿಗುತ್ತದೆ. ಈ ವಿಧ್ಯೆಯಿಂದ ಎಷ್ಟು ಸಂಪಾದನೆಯಾಗುತ್ತದೆ. ಅದಕ್ಕಾಗಿ ಖುಷಿಯಾಗ ಬೇಕಲ್ಲವೆ. ಮತ್ತು ನೀವಾಗಿರುವಿರಿ ಸಂಪೂರ್ಣ ಸಾಧಾರಣ. ಇದು ಪ್ರಪಂಚಕ್ಕೆ ಗೊತ್ತಿಲ್ಲ, ತಂದೆ ಬಂದು ಈ ಜ್ಞಾನವನ್ನು ಹೇಳುತ್ತಾರೆ. ತಂದೆಯೆ ಬಂದು ಎಲ್ಲಾ ಹೊಸ ಹೊಸ ಮಾತುಗಳನ್ನು ಮಕ್ಕಳಿಗೆ ಹೇಳುತ್ತಾರೆ. ಹೊಸ ಪ್ರಪಂಚ ಬೇಹದ್ದಿನ ವಿದ್ಯೆಯಿಂದ ಆಗುತ್ತದೆ. ಹಳೆಯ ಪ್ರಪಂಚದಿಂದ ವೈರಾಗ್ಯ ಬಂದು ಬಿಡುವುದು. ನೀವು ಮಕ್ಕಳೊಳಗೆ ಜ್ಞಾನದ ಖುಶಿ ಇರುವುದು. ತಂದೆ ಮತ್ತು ಮನೆಯನ್ನು ನೆನಪು ಮಾಡಬೇಕು. ಎಲ್ಲರೂ ಮನೆಗೆ ಹೋಗಲೇ ಬೇಕು. ತಂದೆಯಂತೂ ಎಲ್ಲರಿಗೂ ಮಗು, ಮಗು ಎಂದು ಹೇಳುತ್ತಾರಲ್ಲವೆ. ನಾನು ನಿಮಗೆ ಮುಕ್ತಿ ಮತ್ತು ಜೀವನ್ಮುಕ್ತಿಯ ಆಸ್ತಿಯನ್ನು ಕೊಡಲು ಬಂದಿದ್ದೇನೆ. ಆದರೆ ನೀವು ಏಕೆ ಮರೆತು ಬಿಡುವಿರಿ. ನಾನು ನಿಮ್ಮ ಬೇಹದ್ದಿನ ತಂದೆಯಾಗಿದ್ದೇನೆ. ರಾಜಯೋಗವನ್ನು ಕಲಿಸಲು ಬಂದಿದ್ದೇನೆ. ಅಂದಮೇಲೆ ನೀವು ಶ್ರೀಮತದಂತೆ ನಡೆಯುವುದಿಲ್ಲವೆ! ಆಮೇಲೆ ನಿಮಗೆ ಬಹಳ ನಷ್ಟವಾಗಿ ಬಿಡುವುದು. ಇದಾಗಿದೆ ಬೇಹದ್ದಿನ ನಷ್ಟ. ತಂದೆಯ ಕೈ ಬಿಟ್ಟಿದ್ದೇ ಆದರೆ ಸಂಪಾದನೆಯಲ್ಲಿ ನಷ್ಟವಾಗಿ ಬಿಡುವುದು. ಒಳ್ಳೆಯದು ಶುಭರಾತ್ರಿ. ಓಂ ಶಾಂತಿ.

ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ತಂದೆಯ ನೆನಪಿನಿಂದ ಬಹಳ ಪ್ರಿಯರಾಗಬೇಕಾಗಿದೆ. ನಡೆಯುತ್ತಾ-ತಿರುಗಾಡುತ್ತಾ, ಕರ್ಮ ಮಾಡುತ್ತಲೂ ನೆನಪಿನಲ್ಲಿರುವ ಅಭ್ಯಾಸ ಮಾಡಬೇಕಾಗಿದೆ. ತಂದೆಯ ನೆನಪು ಮತ್ತು ಖುಷಿಯಲ್ಲಿ ಪ್ರಫುಲ್ಲಿತರಾಗಿರಬೇಕು.

2. ಹೆಜ್ಜೆ-ಹೆಜ್ಜೆಯಲ್ಲಿ ಈಶ್ವರೀಯ ಆದೇಶದಂತೆ ನಡೆದು ಪ್ರತಿಯೊಂದು ಕಾರ್ಯವನ್ನು ಮಾಡಬೇಕಾಗಿದೆ. ತಮ್ಮ ದೇಹಾಭಿಮಾನದ ನಶೆಯನ್ನು ತೋರಿಸಬಾರದು. ಯಾವುದೇ ಉಲ್ಟಾ-ಸುಲ್ಟಾ ಕೆಲಸಗಳನ್ನು ಮಾಡಬಾರದು, ಗೊಂದಲಕ್ಕೊಳಗಾಗಬಾರದು.

ವರದಾನ:
ವಿಶ್ವ ಕಲ್ಯಾಣದ ಜವಾಬ್ದಾರಿ ಎಂದು ತಿಳಿದು ಸಮಯ ಮತ್ತು ಶಕ್ತಿಗಳ ಉಳಿತಾಯ ಮಾಡುವಂತಹ ಮಾಸ್ಟರ್ ರಚೈತಾ ಭವ.

ವಿಶ್ವದ ಸರ್ವ ಆತ್ಮರು ತಾವು ಶ್ರೇಷ್ಠ ಆತ್ಮರ ಪರಿವಾರ ಆಗಿದೆ, ಎಷ್ಟು ದೊಡ್ಡ ಪರಿವಾರವಿರುತ್ತೆ. ಅಷ್ಟೂ ಉಳಿತಾಯದ ಚಿಂತನೆ ಮಾಡಲಾಗುವುದು. ಆದ್ದರಿಂದ ಸರ್ವ ಆತ್ಮಗಳನ್ನು ಎದುರಿನಲ್ಲಿಟ್ಟುಕೊಂಡು, ಸ್ವಯಂನ್ನು ಬೇಹದ್ಧಿನ ಸೇವಾರ್ಥ ನಿಮಿತ್ತಾ ಎಂದು ತಿಳಿಯುತ್ತಾ ತಮ್ಮ ಸಮಯ ಮತ್ತು ಶಕ್ತಿಗಳನ್ನು ಕಾರ್ಯದಲ್ಲಿ ತೊಡಗಿಸಿ. ತಮ್ಮ ಪ್ರತಿಯೇ ಸಂಪಾದಿಸುವುದು, ತಿನ್ನುವುದು ಮತ್ತು ಕಳೆಯುವುದು - ಈ ರೀತಿ ಬೇಜವಾಬ್ದಾರಿಯಾಗಬೇಡಿ. ಸರ್ವ ಖಜಾನೆಗಳ ಉಳಿತಾಯ ಯೋಜನೆ ಮಾಡಿ. ಮಾಸ್ಟರ್ ರಚೈತಾ ಭವದ ವರದಾನವನ್ನು ಸ್ಮೃತಿಯಲ್ಲಿಟ್ಟು ಸಮಯ ಮತ್ತು ಶಕ್ತಿಯ ಸ್ಟಾಕ್ ಸೇವೆಯ ಪ್ರತಿ ಜಮಾ ಮಾಡಿ.

ಸ್ಲೋಗನ್:
ಮಹಾದಾನಿ ಅವರೇ ಆಗಿದ್ದಾರೆ ಯಾರ ಸಂಕಲ್ಪ ಮತ್ತು ಮಾತಿನ ಮೂಲಕ ಎಲ್ಲರಿಗೂ ವರದಾನಗಳ ಪ್ರಾಪ್ತಿ ಮಾಡಿಸುವರು.


ಅವ್ಯಕ್ತ ಸ್ಥಿತಿಯ ಅನುಭವ ಮಾಡವುದಕ್ಕಾಗಿ ವಿಶೇಷ ಹೋಮ್ ವರ್ಕ್ -
ಫರಿಶ್ಥಾ ಅಥವಾ ಅವ್ಯಕ್ತ ಜೀವನದ ವಿಶೇಷತೆಯಾಗಿದೆ - ಇಚ್ಛಾ ಮಾತ್ರಂ ಅವಿದ್ಯಾ. ದೇವತಾ ಜೀವನದಲ್ಲಂತೂ ಇಚ್ಛೆಯ ಮಾತೇ ಇಲ್ಲ. ಯಾವಾಗ ಬ್ರಾಹ್ಮಣ ಜೀವನದಿಂದ ಫರಿಶ್ಥಾ ಜೀವನವಾಗುತ್ತೆ ಅರ್ಥಾತ್ ಕರ್ಮಾತೀತ ಸ್ಥಿತಿಯ ಪ್ರಾಪ್ತಿಯಾಗುತ್ತೆ ಆಗ ಯಾವುದೇ ಶುದ್ಧ ಕರ್ಮ, ವ್ಯರ್ಥ ಕರ್ಮ, ವಿಕರ್ಮ ಅಥವಾ ಹಳೆಯ ಕರ್ಮ, ಯಾವುದೇ ಕರ್ಮದ ಬಂದನದಲ್ಲಿ ಬಂದಿತರಾಗುವುದಿಲ್ಲ.