30.01.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ತಂದೆಯು
ನಿಮಗೆ ಜ್ಞಾನ-ಯೋಗದ ಔಷಧಿಯನ್ನು ತಿನ್ನಿಸಿ, ಶ್ರೇಷ್ಠವಾದ ಸತ್ಕಾರವನ್ನು ಮಾಡುತ್ತಾರೆ, ಅಂದಮೇಲೆ
ಸದಾ ಖುಷಿ-ಮೋಜಿನಲ್ಲಿರಿ ಮತ್ತು ಶ್ರೀಮತದನುಸಾರ ಎಲ್ಲರ ಸತ್ಕಾರ ಮಾಡುತ್ತಾ ಸಾಗಿರಿ"
ಪ್ರಶ್ನೆ:
ಈ ಸಂಗಮಯುಗದ್ಲಲಿ ತಮ್ಮ ಬಳಿ ಎಲ್ಲದಕ್ಕಿಂತಲೂ ಅಮೂಲ್ಯವಾದ ವಸ್ತು ಯಾವುದಿದೆ, ಅದರ ಸಂಭಾಲನೆಯನ್ನೂ
ಮಾಡಬೇಕಾಗಿದೆ?
ಉತ್ತರ:
ಈ ಸರ್ವೋತ್ತಮ ಬ್ರಾಹ್ಮಣ ಕುಲದಲ್ಲಿ ತಮ್ಮ ಈ ಜೀವನವು ಬಹಳ ಅಮೂಲ್ಯವಾದುದಾಗಿದೆ, ಆದ್ದರಿಂದ ಶರೀರದ
ಸಂಭಾಲನೆಯನ್ನು ಅವಶ್ಯವಾಗಿ ಮಾಡಬೇಕಾಗಿದೆ. ಹೀಗಲ್ಲ- ಇದಂತು ಮಣ್ಣಿನ ಗೊಂಬೆಯಾಗಿದೆ, ಇದು
ಎಲ್ಲಿಯಾದರೂ ಸಮಾಪ್ತಿಯಾಗಿ ಬಿಡಲಿ! ಇಲ್ಲ. ಇದನ್ನು ಬದುಕಿಸಿಡಬೇಕಾಗಿದೆ. ರೋಗಿಯಾಗುತ್ತದೆಯೆಂದರೆ,
ಅದರಿಂದ ಬೇಸರವಾಗಬಾರದು. ಅದಕ್ಕೆ ಹೇಳಿರಿ- ಶಿವ ತಂದೆಯನ್ನು ನೆನಪು ಮಾಡಿರಿ. ಎಷ್ಟು ನೆನಪು
ಮಾಡುತ್ತೀರಿ ಅಷ್ಟು ಪಾಪಗಳು ಕಳೆದು ಹೋಗುತ್ತದೆ. ಅದರ ಸೇವೆಯನ್ನು ಮಾಡಬೇಕು, ಜೀವಂತವಾಗಿರಿ, ಶಿವ
ತಂದೆಯನ್ನು ನೆನಪು ಮಾಡುತ್ತಿರಲಿ.
ಓಂ ಶಾಂತಿ.
ಜ್ಞಾನದ ಮೂರನೇ ನೇತ್ರವನ್ನು ಕೊಡುವ ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ.
ಜ್ಞಾನದ ಮೂರನೇ ನೇತ್ರವನ್ನು ತಂದೆಯಲ್ಲದೆ ಮತ್ತ್ಯಾರೂ ಸಹ ಕೊಡಲು ಸಾಧ್ಯವಿಲ್ಲ. ಈಗ ನೀವು
ಮಕ್ಕಳಿಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿರುವುದು. ಈಗ ನೀವು ಮಕ್ಕಳು ತಿಳಿದಿದ್ದೀರಿ - ಈ ಹಳೆಯ
ಪ್ರಪಂಚವು ಬದಲಾಗುವುದಿದೆ. ಪಾಪ! ಮನುಷ್ಯರಿಗೆ ಗೊತ್ತೇ ಇಲ್ಲ - ಇದನ್ನು ಯಾರು ಬದಲಾಯಿಸುತ್ತಾರೆ
ಮತ್ತು ಹೇಗೆ ಬದಲಾಯಿಸುತ್ತಾರೆ! ಏಕೆಂದರೆ ಅವರಿಗೆ ಜ್ಞಾನದ ಮೂರನೇ ನೇತ್ರವೇ ಇಲ್ಲ. ನೀವು
ಮಕ್ಕಳಿಗೀಗ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ, ಅದರಿಂದ ನೀವು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು
ತಿಳಿದಿದ್ದೀರಿ. ಇದು ಜ್ಞಾನದ ಸ್ಯಾಕ್ರೀನ್ ಆಗಿದೆ. ಸ್ಯಾಕ್ರೀನ್ನ ಒಂದು ಹನಿಯೂ ಸಹ ಎಷ್ಟೊಂದು
ಮಧುರವಾಗಿರುತ್ತದೆ! ಜ್ಞಾನದ ಆ ಒಂದೇ ಅಕ್ಷರವಾಗಿದೆ - ಮನ್ಮನಾಭವ. ಈ ಅಕ್ಷರವು ಎಷ್ಟೊಂದು
ಮಧುರವಾಗಿದೆ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ. ತಂದೆಯು ಶಾಂತಿಧಾಮ
ಮತ್ತು ಸುಖಧಾಮದ ಮಾರ್ಗವನ್ನು ತಿಳಿಸುತ್ತಿದ್ದಾರೆ. ತಂದೆಯು ಮಕ್ಕಳಿಗೆ ಸ್ವರ್ಗದ ಆಸ್ತಿಯನ್ನು
ಕೊಡಲು ಬಂದಿದ್ದಾರೆ. ಅಂದಮೇಲೆ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು! ಹೇಳುತ್ತಾರೆ - ಖುಷಿಯಂತಹ
ಔಷಧಿಯೇ ಇಲ್ಲ. ಯಾರು ಸದಾ ಖುಷಿ-ಮೋಜಿನಲಿರುತ್ತಾರೆ, ಅವರಿಗಾಗಿ ಇದು ಔಷಧಿಯಾಗುತ್ತದೆ. 21
ಜನ್ಮಗಳು ಮೋಜಿನಲ್ಲಿರುವ ಈ ಔಷಧಿಯು ಬಹಳ ಶ್ರೇಷ್ಠವಾದುದಾಗಿದೆ. ಈ ಔಷಧಿಯನ್ನು ಸದಾ
ಒಬ್ಬರಿನ್ನೊಬ್ಬರಿಗೆ ತಿನ್ನಿಸುತ್ತಿರಿ. ಇದಾಗಿದೆ - ಒಬ್ಬರಿನ್ನೊಬ್ಬರಿಗೆ ಶ್ರೇಷ್ಠವಾದ ಸತ್ಕಾರ.
ಇಂತಹ ಸತ್ಕಾರವನ್ನು ಮತ್ತ್ಯಾವುದೇ ಮನುಷ್ಯನು ಮನುಷ್ಯನಿಗೆ ಮಾಡಲು ಸಾಧ್ಯವಿಲ್ಲ.
ನೀವು ಮಕ್ಕಳು ಶ್ರೀಮತದಂತೆ ಎಲ್ಲರ ಆತ್ಮಿಕ ಸತ್ಕಾರವನ್ನು ಮಾಡುತ್ತೀರಿ. ಸತ್ಯ-ಸತ್ಯವಾದ ಖುಷಿಯ
ವಿಷಯವೂ ಇದೇ ಆಗಿದೆ - ಯಾರಿಗೇ ಆದರೂ ತಂದೆಯ ಪರಿಚಯವನ್ನು ಕೊಡುವುದು. ಮಧುರ ಮಕ್ಕಳು
ತಿಳಿದಿದ್ದಾರೆ - ಬೇಹದ್ದಿನ ತಂದೆಯ ಮೂಲಕ ನಮಗೆ ಜೀವನ್ಮುಕ್ತಿಯ ಉಡುಗೊರೆಯು ಸಿಗುತ್ತದೆ.
ಸತ್ಯಯುಗದಲ್ಲಿ ಭಾರತವು ಜೀವನ್ಮುಕ್ತವಿತ್ತು, ಪಾವನವಿತ್ತು. ತಂದೆಯು ಬಹಳ ಶ್ರೇಷ್ಠವಾದ ಔಷಧಿಯನ್ನು
ಕೊಡುತ್ತಾರೆ, ಆದ್ದರಿಂದ ಗಾಯನವಿದೆ - ಅತೀಂದ್ರಿಯ ಸುಖವನ್ನು ಕೇಳಬೇಕೆಂದರೆ ಗೋಪ-ಗೋಪಿಕೆಯರಿಂದ
ಕೇಳಿರಿ. ಇದು ಜ್ಞಾನ ಮತ್ತು ಯೋಗದ ಎಷ್ಟೊಂದು ಫಸ್ಟ್ಕ್ಲಾಸ್ ಅದ್ಭುತವಾದ ಔಷಧಿಯಾಗಿದೆ ಮತ್ತು ಈ
ಔಷಧಿಯು ಒಬ್ಬ ಆತ್ಮಿಕ ಸರ್ಜನ್ನ ಬಳಿಯೇ ಇದೆ. ಮತ್ತ್ಯಾರಿಗೂ ಈ ಔಷಧಿಯು ಗೊತ್ತೇ ಇಲ್ಲ. ತಂದೆಯು
ಹೇಳುತ್ತಾರೆ - ಮಧುರ ಮಕ್ಕಳೇ, ನಿಮಗಾಗಿ ಅಂಗೈಯಲ್ಲಿ ಉಡುಗೊರೆಯನ್ನು ತೆಗೆದುಕೊಂಡು ಬಂದಿರುವೆನು.
ಮುಕ್ತಿ, ಜೀವನ್ಮುಕ್ತಿಯ ಈ ಉಡುಗೊರೆಯು ನನ್ನ ಬಳಿಯೇ ಇರುತ್ತದೆ. ಕಲ್ಪ-ಕಲ್ಪವೂ ನಾನೇ ಬಂದು ನಿಮಗೆ
ಈ ಉಡುಗೊರೆಯನ್ನು ಕೊಡುತ್ತೇನೆ, ನಂತರ ರಾವಣನು ಕಸಿದುಕೊಳ್ಳುತ್ತಾನೆ. ಅಂದಮೇಲೆ ಈಗ ನೀವು
ಮಕ್ಕಳಿಗೆ ಎಷ್ಟೊಂದು ಖುಷಿಯ ನಶೆಯೇರಿರಬೇಕು. ನೀವು ತಿಳಿದಿದ್ದೀರಿ - ನಮಗೆ ಒಬ್ಬರೇ ತಂದೆ, ಟೀಚರ್
ಮತ್ತು ಸತ್ಯ-ಸತ್ಯವಾದ ಸದ್ಗುರುವಿದ್ದಾರೆ, ಅವರು ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ.
ಅತಿ ಪ್ರಿಯವಾದ ತಂದೆಯ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ. ಇದು ಕಡಿಮೆ ಮಾತೇನು! ಮಕ್ಕಳು ಸದಾ
ಹರ್ಷಿತವಾಗಿರಬೇಕು. ಈಶ್ವರೀಯ ವಿದ್ಯಾರ್ಥಿ ಜೀವನವು ಅತ್ಯಮೂಲ್ಯವಾದುದು. ಇದು ಈಗಿನದೇ ಗಾಯನವಲ್ಲವೆ!
ನಂತರ ಹೊಸ ಪ್ರಪಂಚದಲ್ಲಿ ನೀವು ಸದಾ ಖುಷಿಯನ್ನೇ ಆಚರಿಸುತ್ತಿರುತ್ತೀರಿ. ಪ್ರಪಂಚದವರು ತಿಳಿದಿಲ್ಲ
- ಸತ್ಯ-ಸತ್ಯವಾದ ಖುಷಿಯು ಯಾವಾಗ ಆಚರಿಸುತ್ತಾರೆ ಎಂದು. ಮನುಷ್ಯರಿಗಂತು ಸತ್ಯಯುಗದ ಜ್ಞಾನವೇ
ಇಲ್ಲ ಆದ್ದರಿಂದ ಇಲ್ಲಿಯೇ ಆಚರಿಸುತ್ತಾರೆ. ಆದರೆ ಈ ಹಳೆಯ ತಮೋಪ್ರಧಾನ ಪ್ರಪಂಚದಲ್ಲಿ
ಖುಷಿಯೆಲ್ಲಿಂದ ಬರುವುದು! ಇಲ್ಲಂತು ಅಯ್ಯೊ-ಅಯ್ಯೊ ಎನ್ನುತ್ತಿರುತಾರೆ. ಎಷ್ಟೊಂದು ದುಃಖದ
ಪ್ರಪಂಚವಾಗಿದೆ.
ತಂದೆಯು ನೀವು ಮಕ್ಕಳಿಗೆ ಎಷ್ಟೊಂದು ಸಹಜ ಮಾರ್ಗವನ್ನು ತಿಳಿಸುತ್ತಾರೆ. ಗೃಹಸ್ಥ
ವ್ಯವಹಾರಗದಲ್ಲಿರುತ್ತಾ ಕಮಲಪುಷ್ಪ ಸಮಾನವಿರಿ. ಕಾರ್ಯ ವ್ಯವಹಾರಗಳು ಮುಂತಾದವನ್ನು ಮಾಡುತ್ತಿದ್ದರೂ
ನನ್ನನ್ನು ನೆನಪು ಮಾಡುತ್ತಿರಿ. ಹೇಗೆ ಪ್ರಿಯತಮ ಮತ್ತು ಪ್ರಿಯತಮೆಯಿರುತ್ತಾರೆ, ಅವರಂತು
ಒಬ್ಬರಿನ್ನೊಬ್ಬರನ್ನು ನೆನಪು ಮಾಡುತ್ತಿರುತ್ತಾರೆ. ಇಲ್ಲಿ ಈ ಮಾತಿಲ್ಲ, ಇಲ್ಲಂತು ನೀವೆಲ್ಲರೂ
ಒಬ್ಬ ಪ್ರಿಯತಮನಿಗೆ ಜನ್ಮ-ಜನ್ಮಾಂತರದಿಂದ ಪ್ರಿಯತಮೆಯಾಗಿದ್ದೀರಿ. ತಂದೆಯು ನಿಮಗೆಂದಿಗೂ
ಪ್ರಿಯತಮೆಯಾಗುವುದಿಲ್ಲ. ನೀವು ಆ ಪ್ರಿಯತಮನು ಬರುವುದಕ್ಕಾಗಿ ನೆನಪು ಮಾಡುತ್ತಾ ಬಂದಿದ್ದೀರಿ.
ಯಾವಾಗ ದುಃಖವು ಹೆಚ್ಚಾಗುತ್ತದೆಯೋ ಆಗ ಹೆಚ್ಚು ಸ್ಮರಿಸುತ್ತೀರಿ, ಆ ಸಮಯದ ಗಾಯನವೂ ಇದೆ -
ದುಃಖದಲ್ಲಿ ಎಲ್ಲರೂ ಸ್ಮರಿಸುತ್ತಾರೆ, ಸುಖದಲ್ಲಿ ಯಾರೂ ಮಾಡುವುದಿಲ್ಲ. ಈ ಸಮಯದಲ್ಲಿ ತಂದೆಯು
ಸರ್ವಶಕ್ತಿವಂತನಿದ್ದಾರೆ. ದಿನ-ಪ್ರತಿದಿನದಲ್ಲಿ ಮಾಯೆಯೂ ಸರ್ವಶಕ್ತಿವಂತ, ತಮೋಪ್ರಧಾನವಾಗುತ್ತಾ
ಹೋಗುತ್ತದೆ. ಆದ್ದರಿಂದ ಈಗ ತಂದೆಯು ಹೇಳುತ್ತಾರೆ- ಮಧುರ ಮಕ್ಕಳೇ, ದೇಹೀ ಅಭಿಮಾನಿಯಾಗಿರಿ.
ತಮ್ಮನ್ನು ಆತ್ಮವೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ ಮತ್ತು ಜೊತೆ ಜೊತೆಗೆ ದೈವೀ
ಗುಣಗಳನ್ನೂ ಧಾರಣೆ ಮಾಡಿಕೊಳ್ಳಿರಿ, ಆಗ ಹೀಗೆ (ಲಕ್ಷ್ಮೀ-ನಾರಾಯಣ) ಆಗಿಬಿಡುತ್ತೀರಿ. ಈ
ವಿದ್ಯೆಯಲ್ಲಿ ಮುಖ್ಯವಾದ ಮಾತಿರುವುದೇ ನೆನಪಿನ ಮಾತು. ಸರ್ವ ಶ್ರೇಷ್ಠ ತಂದೆಯನ್ನು ಬಹಳ ಪ್ರೀತಿ,
ಸ್ನೇಹದಿಂದ ನೆನಪು ಮಾಡಬೇಕಾಗಿದೆ. ಆ ಸರ್ವಶ್ರೇಷ್ಠ ತಂದೆಯೇ ಹೊಸ ಪ್ರಪಂಚದ ಸ್ಥಾಪನೆ
ಮಾಡುವವರಾಗಿದ್ದಾರೆ. ತಂದೆಯು ಹೇಳುತ್ತಾರೆ - ನಾನು ನೀವು ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ
ಮಾಡಲು ಬಂದಿರುವೆನು. ಆದ್ದರಿಂದ ಈಗ ನನ್ನನ್ನು ನೆನಪು ಮಾಡುತ್ತೀರೆಂದರೆ, ನಿಮ್ಮ ಅನೇಕ ಜನ್ಮಗಳ
ಪಾಪಗಳು ಕಳೆದು ಹೋಗುತ್ತವೆ. ಪತಿತ-ಪಾವನ ತಂದೆಯು ಹೇಳುತ್ತಾರೆ- ನೀವು ಬಹಳ ಪತಿತರಾಗಿ
ಬಿಟ್ಟಿದ್ದೀರಿ, ಆದ್ದರಿಂದ ಈಗ ನನ್ನನ್ನು ನೆನಪು ಮಾಡುತ್ತೀರೆಂದರೆ ನೀವು ಪಾವನರಾಗಿ ಮತ್ತು ಪಾವನ
ಪ್ರಪಂಚದ ಮಾಲೀಕರಾಗಿ ಬಿಡುತ್ತೀರಿ. ಪತಿತ-ಪಾವನ ತಂದೆಯನ್ನೇ ಕರೆಯುತ್ತಾರಲ್ಲವೆ. ಈಗ ತಂದೆಯು
ಬಂದಿದ್ದಾರೆಂದರೆ ಅವಶ್ಯವಾಗಿ ಪಾವನರಾಗಬೇಕಾಗುತ್ತದೆ. ತಂದೆಯು ದುಃಖಹರ್ತ, ಸುಖಕರ್ತನಿದ್ದಾರೆ.
ಅವಶ್ಯವಾಗಿ ಸತ್ಯಯುಗದಲ್ಲಿ ಪಾವನ ಪ್ರಪಂಚವಿತ್ತು, ಆಗ ಎಲ್ಲರೂ ಸುಖಿಗಳೇ ಇದ್ದರು. ಈಗ ತಂದೆಯು
ಪುನಃ ಹೇಳುತ್ತಾರೆ- ಮಕ್ಕಳೇ, ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡುತ್ತಿರಿ. ಈಗಿರುವುದು
ಸಂಗಮಯುಗ. ಅಂಬಿಗನು ನಿಮ್ಮನ್ನು ಈ ದಡದಿಂದ ಆ ದಡದಲ್ಲಿ ಕರೆದುಕೊಂಡು ಹೋಗುತ್ತಾರೆ. ದೋಣಿಯೇನೂ
ಒಬ್ಬರದಲ್ಲ, ಇಡೀ ಪ್ರಪಂಚವೇ ಹೇಗೆಂದರೆ ಒಂದು ಹಡಗು ಆಗಿದೆ. ಅದನ್ನು ಪಾರು ಮಾಡಿಬಿಡುತ್ತಾರೆ.
ನೀವು ಮಧುರ ಮಕ್ಕಳು ಎಷ್ಟೊಂದು ಖುಷಿಯಲ್ಲಿ ನರ್ತಿಸಬೇಕು! ನಿಮಗಂತು ಸದಾ ಖುಷಿಯೇ ಖುಷಿಯಿದೆ.
ಬೇಹದ್ದಿನ ತಂದೆಯು ನಮಗೆ ಓದಿಸುತ್ತಿದ್ದಾರೆ, ವಾಹ್! ಇದನ್ನಂತು ಎಂದಿಗೂ ಕೇಳಿಲ್ಲ, ಓದಿಲ್ಲ.
ಭಗವಾನುವಾಚ- ನಾನು ನೀವು ಆತ್ಮಿಕ ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಿದ್ದೇನೆ. ಅಂದಮೇಲೆ ಪೂರ್ಣ
ರೀತಿಯಿಂದ ಕಲಿಯಬೇಕು, ಧಾರಣೆ ಮಾಡಿಕೊಳ್ಳಬೇಕು. ಪೂರ್ಣ ರೀತಿಯಿಂದ ಓದಬೇಕಾಗಿದೆ. ವಿದ್ಯೆಯನ್ನು
ಓದುವುದರಲ್ಲಿ ನಂಬರ್ವಾರಂತು ಇದ್ದೇ ಇರುತ್ತಾರೆ. ತಮ್ಮನ್ನು ನೋಡಿಕೊಳ್ಳಬೇಕು - ನಾನು ಉತ್ತಮನೇ,
ಮಧ್ಯಮನೇ ಅಥವಾ ಕನಿಷ್ಟನೇ? ತಂದೆಯು ಹೇಳುತ್ತಾರೆ - ತಮ್ಮನ್ನು ನೋಡಿಕೊಳ್ಳಿ, ನಾನು ಶ್ರೇಷ್ಠ
ಪದವಿಯನ್ನು ಪಡೆಯಲು ಯೋಗ್ಯನಿದ್ದೇನೆಯೇ? ಆತ್ಮಿಕ ಸೇವೆಯನ್ನು ಮಾಡುತ್ತೇನೆಯೇ? ಏಕೆಂದರೆ ತಂದೆಯು
ಹೇಳುತ್ತಾರೆ - ಮಕ್ಕಳೇ, ಸೇವಾಧಾರಿಯಾಗಿರಿ, ಫಾಲೋ ಮಾಡಿರಿ. ನಾನು ಬಂದಿರುವುದೇ ಸೇವೆಗಾಗಿ.
ಪ್ರತಿನಿತ್ಯವೂ ಸೇವೆಯನ್ನು ಮಾಡುತ್ತೇನೆ ಆದ್ದರಿಂದಲೇ ಈ ರಥವನ್ನು ತೆಗೆದುಕೊಂಡಿದ್ದೇನೆ. ಈ ರಥವು
ರೋಗಿಯಾಗಿ ಬಿಡುತ್ತದೆಯೆಂದರೆ, ನಾನು ಇದರಲ್ಲಿ ಕುಳಿತು ಮುರುಳಿಯನ್ನು ಬರೆಯುತ್ತೇನೆ. ಮುಖದಿಂದಂತು
ಹೇಳಲು ಸಾಧ್ಯವಾಗುವುದಿಲ್ಲವೆಂದರೆ, ನಾನು ಬರೆದು ಬಿಡುತ್ತೇನೆ. ಅದರಿಂದ ಮಕ್ಕಳಿಗಾಗಿ ಮುರುಳಿ
ಮಿಸ್ ಆಗುವುದಿಲ್ಲ, ಅಂದಾಗ ನಾನೂ ಸೇವೆಯಲ್ಲಿದ್ದೇನೆ ಅಲ್ಲವೆ. ಇದಾಗಿದೆ ಆತ್ಮಿಕ ಸೇವೆ. ಹಾಗಾದರೆ
ನೀವು ಮಕ್ಕಳೂ ಸಹ ತಂದೆಯ ಸೇವೆಯಲ್ಲಿ ತೊಡಗಿಬಿಡಿ. ಆನ್ ಗಾಡ್ಫಾದರ್ಲೀ ಸರ್ವೀಸ್. ಯಾರು ಒಳ್ಳೆಯ
ಪುರುಷಾರ್ಥ ಮಾಡುತ್ತಾರೆ, ಒಳ್ಳೆಯ ಸೇವೆ ಮಾಡುತ್ತಾರೆ, ಅವರನ್ನು ಮಹಾವೀರನೆಂದು ಹೇಳಲಾಗುತ್ತದೆ.
ನೋಡಲಾಗುತ್ತದೆ- ಯಾರು ಮಹಾವೀರನಾಗಿದ್ದಾರೆ, ಅವರು ತಂದೆಯ ನಿರ್ದೇಶದನುಸಾರವಾಗಿ ನಡೆಯುತ್ತಾರೆಯೇ?
ತಂದೆಯ ಆದೇಶವಿದೆ, ತಮ್ಮನ್ನು ಆತ್ಮನೆಂದು ತಿಳಿದು ಸಹೋದರನನ್ನು ನೋಡಿರಿ. ಈ ಶರೀರವನ್ನು ಮರೆತು
ಬಿಡಿ. ತಂದೆಯೂ ಸಹ ಶರೀರವನ್ನು ನೋಡುವುದಿಲ್ಲ. ತಂದೆಯು ಹೇಳುತ್ತಾರೆ - ನಾನು ಆತ್ಮರನ್ನು
ನೋಡುವೆನು. ಬಾಕಿ ಇದಂತು ಜ್ಞಾನವಾಗಿದೆ - ಆತ್ಮವು ಶರೀರವಿಲ್ಲದೆ ಮಾತನಾಡಲು ಸಾಧ್ಯವಿಲ್ಲ. ನಾನೂ
ಸಹ ಈ ಶರೀರದಲ್ಲಿ ಬಂದಿರುವೆನು, ಲೋನ್ ತೆಗೆದುಕೊಂಡಿರುವೆನು. ಶರೀರದ ಜೊತೆಯೇ ಆತ್ಮವು ಓದಲು
ಸಾಧ್ಯ. ಬಾಬಾರವರ ಸಿಂಹಾಸನವು ಇಲ್ಲಿ(ಭೃಕುಟಿ) ಇದೆ. ಇದು ಅಕಾಲ ಸಿಂಹಾಸನವಾಗಿದೆ. ಆತ್ಮವು
ಅಕಾಲಮೂರ್ತಿಯಾಗಿದೆ. ಆತ್ಮವೆಂದಿಗೂ ಸಹ ಚಿಕ್ಕದು-ದೊಡ್ಡದಾಗುವುದಿಲ್ಲ. ಶರೀರವು ಚಿಕ್ಕದು
ದೊಡ್ಡದಾಗುತ್ತದೆ. ಯಾರೆಲ್ಲಾ ಆತ್ಮರಿದ್ದಾರೆ, ಅವರೆಲ್ಲರೂ ಸಿಂಹಾಸನವು ಈ ಭೃಕುಟಿಯಾಗಿದೆ.
ಶರೀರವಂತು ಎಲ್ಲರದೂ ಭಿನ್ನ-ಭಿನ್ನವಾಗಿರುತ್ತದೆ. ಕೆಲವರ ಅಕಾಲ ಸಿಂಹಸಾನವು ಪುರುಷನದಾಗಿರುತ್ತದೆ,
ಕೆಲವರ ಅಕಾಲ ಸಿಂಹಾಸನವು ಸ್ತ್ರೀಯದ್ದಾಗಿರುತ್ತದೆ, ಕೆಲವರ ಅಕಾಲ ಸಿಂಹಾಸನವು ಮಕ್ಕಳದಾಗಿರುತ್ತದೆ.
ತಂದೆಯು ಕುಳಿತು ಮಕ್ಕಳಿಗೆ ಆತ್ಮಿಕ ವ್ಯಾಯಾಮವನ್ನು ಕಲಿಸುತ್ತಾರೆ. ಯಾವಾಗ ಯಾರೊಂದಿಗೇ
ಮಾತನಾಡುತ್ತೀರೆಂದರೆ, ಮೊದಲು ತಮ್ಮನ್ನು ಆತ್ಮವೆಂದು ತಿಳಿಯಿರಿ. ನಾವು ಆತ್ಮ, ಇಂತಹ
ಸಹೋದರನೊಂದಿಗೆ ಮಾತನಾಡುತ್ತೇನೆ. ತಂದೆಯ ಸಂದೇಶವನ್ನು ಕೊಡುತ್ತೇನೆ - ಶಿವ ತಂದೆಯನ್ನು ನೆನಪು
ಮಾಡಿರಿ. ನೆನಪಿನಿಂದಲೇ ತುಕ್ಕು ಬಿಡುತ್ತದೆ. ಚಿನ್ನದಲ್ಲಿ ಯಾವಾಗ ಅಲಾಯಿ ಹಾಕುತ್ತಾರೆ, ಆಗ
ಚಿನ್ನದ ಮೌಲ್ಯವು ಕಡಿಮೆಯಾಗಿಬಿಡುತ್ತದೆ. ನೀವು ಆತ್ಮರಲ್ಲಿಯೂ ತುಕ್ಕುಬೀಳುವುದರಿಂದ ನೀವು
ಮೌಲ್ಯವಿಲ್ಲದಿರುವವರು ಆಗಿ ಬಿಟ್ಟಿದ್ದೀರಿ. ಈಗ ಮತ್ತೆ ಪಾವನರಾಗಬೇಕಾಗಿದೆ. ನೀವು ಆತ್ಮರಿಗೆ ಈಗ
ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ಆ ನೇತ್ರದಿಂದ ತಮ್ಮ ಸಹೋದರರನ್ನು ನೋಡಿರಿ.
ಸಹೋದರ-ಸಹೋದರನನ್ನು ನೋಡುವುದರಿಂದ ಕರ್ಮೇಂದ್ರಿಯಗಳು ಚಂಚಲವಾಗುವುದಿಲ್ಲ. ರಾಜ್ಯಭಾಗ್ಯವನ್ನು
ತೆಗೆದುಕೊಳ್ಳಬೇಕು, ವಿಶ್ವದ ಮಾಲೀಕರಾಗಬೇಕೆಂದರೆ ಈ ಪರಿಶ್ರಮ ಪಡಬೇಕು. ಸಹೋದರ-ಸಹೋದರನೆಂದು
ತಿಳಿದು ಎಲ್ಲರಿಗೂ ಜ್ಞಾನವನ್ನು ಕೊಡಿ. ಮತ್ತೆ ಈ ಹವ್ಯಾಸವು ಪರಿಪಕ್ವವಾಗಿ ಬಿಡುತ್ತದೆ.
ಸತ್ಯ-ಸತ್ಯವಾದ ಸಹೋದರರು ನೀವೆಲ್ಲರೂ ಆಗಿದ್ದೀರಿ. ತಂದೆಯೂ ಸಹ ಮೇಲಿಂದ ಬಂದಿದ್ದಾರೆ, ನೀವೂ
ಬಂದಿದ್ದೀರಿ. ತಂದೆಯು ಮಕ್ಕಳ ಸಹಿತವಾಗಿ ಸೇವೆಯನ್ನು ಮಾಡುತ್ತಿದ್ದಾರೆ. ಸೇವೆ ಮಾಡುವ ಸಾಹಸವನ್ನು
ತಂದೆಯು ಕೊಡುತ್ತಾರೆ. ಸಾಹಸ ಮಕ್ಕಳದು, ಸಹಯೋಗ ತಂದೆಯದು...... ಅಂದಮೇಲೆ ಈ ಅಭ್ಯಾಸವನ್ನು
ಮಾಡಬೇಕಾಗಿದೆ. ನಾನು ಆತ್ಮನು ಸಹೋದರನಿಗೆ ಓದಿಸುತ್ತಿದ್ದೇನೆ. ಆತ್ಮವು ಓದುತ್ತದೆಯಲ್ಲವೆ. ಇದಕ್ಕೆ
ಆಧ್ಯಾತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ, ಇದು ಆತ್ಮಿಕ ತಂದೆಯಿಂದಲೇ ಸಿಗುತ್ತದೆ. ಸಂಗಮದಲ್ಲಿಯೇ
ತಂದೆಯು ಬಂದು ಈ ಜ್ಞಾನವನ್ನು ಕೊಡುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ. ನೀವು
ಅಶರೀರಿಯಾಗಿ ಬಂದಿದ್ದಿರಿ, ನಂತರ ಇಲ್ಲಿ ಶರೀರ ಧಾರಣೆ ಮಾಡಿ 84 ಜನ್ಮಗಳ ಪಾತ್ರವನ್ನು
ಅಭಿನಯಿಸಿದಿರಿ. ಈಗ ಮತ್ತೆ ಹಿಂತಿರುಗಿ ನಡೆಯಬೇಕಾಗಿದೆ ಆದ್ದರಿಂದ ತಮ್ಮನ್ನು ಆತ್ಮನೆಂದು ತಿಳಿದು
ಸಹೋದರ-ಸಹೋದರನ ದೃಷ್ಟಿಯಿಂದ ನೋಡಬೇಕಾಗಿದೆ. ಈ ಪರಿಶ್ರಮ ಪಡಬೇಕಾಗಿದೆ. ತಮ್ಮ ಪರಿಶ್ರಮ
ಮಾಡಬೇಕಾಗಿದೆ, ಇನ್ನೊಬ್ಬರಲ್ಲಿ ನಮ್ಮದೇನು ಹೋಗುತ್ತದೆ! ಮನೆಯೆ ಮೊದಲ ಪಾಠಶಾಲೆ ಅರ್ಥಾತ್ ಮೊದಲು
ಸ್ವಯಂನ್ನು ಆತ್ಮವೆಂದು ತಿಳಿದು, ನಂತರ ಸಹೋದರರಿಗೆ ತಿಳಿಸಿರಿ. ಆಗ ಬಹಳ ಚೆನ್ನಾಗಿ ಬಾಣ
ನಾಟುತ್ತದೆ. ಈ ಹರಿತವನ್ನು ತುಂಬಬೇಕಾಗಿದೆ. ಪರಿಶ್ರಮ ಪಟ್ಟಾಗಲೇ ಶ್ರೇಷ್ಠ ಪದವಿಯನ್ನು ಪಡೆಯುವಿರಿ.
ಇದರಲ್ಲಿ ಸ್ವಲ್ಪ ಸಹನೆಯನ್ನೂ ಮಾಡಬೇಕಾಗುತ್ತದೆ. ಒಬ್ಬರ ಮುಖದ ಚಪ್ಪಾಳೆಯಾಯಿತು, ಇನ್ನೊಬ್ಬರು
ಶಾಂತ ಮಾಡಿಬಿಡುತ್ತೀರೆಂದರೆ, ಅವರು ತಾವಾಗಿಯೇ ಶಾಂತವಾಗಿ ಬಿಡುತ್ತಾರೆ. ಚಪ್ಪಾಳೆಯೊಂದಿಗೆ
ಚಪ್ಪಾಳೆಯನ್ನು ಹಾಕುವುದರಿಂದ ಶಬ್ಧವುಂಟಾಗುತ್ತದೆ. ಮಕ್ಕಳು ಒಬ್ಬರಿನ್ನೊಬ್ಬರ ಕಲ್ಯಾಣ
ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸದಾ ಖುಷಿಯಲ್ಲಿರಲು ಬಯಸುತ್ತೀರೆಂದರೆ
ಮನ್ಮಾನಭವ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ. ಸಹೋದರರ(ಆತ್ಮರನ್ನು) ಕಡೆ
ನೋಡಿರಿ, ಅಂದಮೇಲೆ ಮಕ್ಕಳಲ್ಲಿ ಆತ್ಮಿಕ ಯಾತ್ರೆಯಲ್ಲಿರುವ ಹವ್ಯಾಸವನ್ನು ಹಾಕಿಕೊಳ್ಳಬೇಕಾಗಿದೆ.
ನಿಮ್ಮದೇ ಲಾಭದ ಮಾತಾಗಿದೆ. ತಂದೆಯ ಶಿಕ್ಷಣವನ್ನು ಸಹೋದರರಿಗೂ ಕೊಡಬೇಕಾಗಿದೆ. ತಂದೆಯು ಹೇಳುತ್ತಾರೆ
- ನಾನು ನೀವು ಆತ್ಮರಿಗೆ ಜ್ಞಾನವನ್ನು ಕೊಡುತ್ತಿದ್ದೇನೆ. ಆತ್ಮವನ್ನೇ ನೋಡುತ್ತೇನೆ.
ಮನುಷ್ಯ-ಮನುಷ್ಯನೊಂದಿಗೆ ಮಾತನಾಡುತ್ತಾರೆಂದರೆ, ಅವರ ಮುಖವನ್ನು ನೋಡುತ್ತಾರಲ್ಲವೆ. ನೀವು
ಆತ್ಮನೊಂದಿಗೆ ಮಾತನಾಡುತ್ತೀರೆಂದರೆ ಆತ್ಮವನ್ನೇ ನೋಡಬೇಕು. ಭಲೆ ಶರೀರದ ಮೂಲಕ ಜ್ಞಾನವನ್ನು
ಕೊಡುತ್ತೀರಿ ಆದರೆ ಇದರಲ್ಲಿ ಶರೀರದ ಭಾನವನ್ನು ಮುರಿಯಬೇಕಾಗುತ್ತದೆ. ನಿಮ್ಮ ಆತ್ಮವು ತಿಳಿಯುತ್ತದೆ
- ಪರಮಾತ್ಮ ತಂದೆಯು ನಮಗೆ ಜ್ಞಾನವನ್ನು ಕೊಡುತ್ತಿದ್ದಾರೆ. ತಂದೆಯೂ ಸಹ ಹೇಳುತ್ತಾರೆ- ಆತ್ಮರನ್ನು
ನೋಡುತ್ತೇನೆ, ಆತ್ಮರೂ ಸಹ ಹೇಳುತ್ತಾರೆ - ನಾವು ಪರಮಾತ್ಮ ತಂದೆಯನ್ನು ನೋಡುತ್ತಿದ್ದೇವೆ. ಅವರಿಂದ
ಜ್ಞಾನವನ್ನು ತೆಗೆದುಕೊಳ್ಳುತ್ತಿದ್ದೇವೆ, ಇದಕ್ಕೆ ಹೇಳಲಾಗುತ್ತದೆ - ಆಧ್ಯಾತ್ಮಿಕ ಜ್ಞಾನದ
ಲೇವಾದೇವಿ, ಆತ್ಮವು ಆತ್ಮದ ಜೊತೆ. ಆತ್ಮದಲ್ಲಿಯೇ ಜ್ಞಾನವಿದೆ. ಆತ್ಮಕ್ಕೇ ಜ್ಞಾನ ಕೊಡಬೇಕಾಗಿದೆ.
ಇದು ಹೇಗೆಂದರೆ ಹರಿತವಿದ್ದಂತೆ. ನಿಮ್ಮ ಜ್ಞಾನದಲ್ಲಿ ಈ ಹರಿತವು ತುಂಬಿ ಬಿಡುತ್ತದೆ. ಅದರಿಂದ
ಯಾರಿಗೇ ತಿಳಿಸುವುದರಿಂದ ತಕ್ಷಣದಲ್ಲಿ ಬಾಣ ನಾಟುತ್ತದೆ. ತಂದೆಯು ಹೇಳುತ್ತಾರೆ- ಅಭ್ಯಾಸ ಮಾಡಿ
ನೋಡಿರಿ, ಬಾಣ ನಾಟುತ್ತದೆ ಅಲ್ಲವೆ. ಈ ಹೊಸ ಹವ್ಯಾಸವನ್ನು ಹಾಕಿಕೊಳ್ಳಬೇಕಾಗಿದೆ, ನಂತರ ಈ ಶರೀರದ
ಪರಿವೆಯು ಹೊರಟು ಹೋಗುತ್ತದೆ. ಮಾಯೆಯ ಬಿರುಗಾಳಿಯು ಕಡಿಮೆಯಾಗುತ್ತದೆ. ಕೆಟ್ಟ ಸಂಕಲ್ಪವು
ಬರುವುದಿಲ್ಲ. ಕೆಟ್ಟ ದೃಷ್ಟಿಯೂ ಇರುವುದಿಲ್ಲ. ನಾವು ಆತ್ಮ 84ರ ಚಕ್ರವನ್ನು ಸುತ್ತಿದೆವು. ಈಗ
ನಾಟಕವು ಪೂರ್ಣವಾಗುತ್ತದೆ. ಈಗ ತಂದೆಯ ನೆನಪಿನಲ್ಲಿರಬೇಕು. ನೆನಪಿನಿಂದಲೇ ತಮೋಪ್ರಧಾನದಿಂದ
ಸತೋಪ್ರಧಾನರಾಗಿ, ಸತೋಪ್ರಧಾನ ಪ್ರಪಂಚದ ಮಾಲೀಕರಾಗಿ ಬಿಡುತ್ತೇವೆ. ಎಷ್ಟು ಸಹಜವಿದೆ! ತಂದೆಗೆ
ಗೊತ್ತಿದೆ - ಮಕ್ಕಳಿಗೆ ಈ ಶಿಕ್ಷಣವನ್ನು ಕೊಡುವುದೂ ಸಹ ನನ್ನದೇ ಪಾತ್ರವಾಗಿದೆ. ಹೊಸ ಮಾತೇನಿಲ್ಲ.
ಪ್ರತೀ 5000 ವರ್ಷಗಳ ನಂತರ ನಾವು ಬರಬೇಕಾಗುತ್ತದೆ. ನಾನು ಬಂಧಿಸಲ್ಪಟ್ಟಿದ್ದೇನೆ. ಮಕ್ಕಳಿಗೆ
ಕುಳಿತು ತಿಳಿಸುತ್ತೇನೆ – ಮಧುರ ಮಕ್ಕಳೇ, ಆತ್ಮಿಕ ನೆನಪಿನ ಯಾತ್ರೆಯಲ್ಲಿರಿ, ಆಗ ಅಂತ್ಯಮತಿ ಸೋ
ಗತಿಯಾಗಿ ಬಿಡುತ್ತದೆ. ಇದು ಅಂತ್ಯಕಾಲವಾಗಿದೆಯಲ್ಲವೆ! ನನ್ನೊಬ್ಬನನ್ನೇ ನೆನಪು ಮಾಡುತ್ತೀರೆಂದರೆ
ನಿಮ್ಮ ಸದ್ಗತಿಯಾಗಿ ಬಿಡುತ್ತದೆ. ನೆನಪಿನ ಯಾತ್ರೆಯಿಂದ ಶಕ್ತಿಶಾಲಿಯಾಗಿ ಬಿಡುತ್ತೀರಿ. ಈ
ದೇಹೀ-ಅಭಿಮಾನಿಯಾಗುವ ಶಿಕ್ಷಣವು ನೀವು ಮಕ್ಕಳಿಗೆ ಒಂದೇ ಬಾರಿ ಸಿಗುತ್ತದೆ. ಎಷ್ಟು ಅದ್ಭುತವಾದ
ಜ್ಞಾನವಾಗಿದೆ! ಬಾಬಾರವರು ವಂಡರ್ಫುಲ್ ಆಗಿದ್ದಾರೆ, ಬಾಬಾರವರ ಜ್ಞಾನವೂ ವಂಡರ್ಫುಲ್ ಆಗಿದೆ. ಎಂದೂ
ಯಾರೂ ತಿಳಿಸಲು ಸಾಧ್ಯವಿಲ್ಲ. ಈಗ ಹಿಂತಿರುಗಿ ನಡೆಯಬೇಕು. ಆದ್ದರಿಂದ ಬಾಬಾ ಹೇಳುತ್ತಾರೆ - ಮಧುರ
ಮಕ್ಕಳೇ, ಇದರ ಅಭ್ಯಾಸ ಮಾಡಿರಿ. ತಮ್ಮನ್ನು ಆತ್ಮವೆಂದು ತಿಳಿದು ಆತ್ಮನಿಗೆ ಜ್ಞಾನ ಕೊಡಿ. ಮೂರನೇ
ನೇತ್ರದಿಂದ ಸಹೋದರ-ಸಹೋದರನನ್ನು ನೋಡಬೇಕು. ಇದೇ ಬಹಳ ಪರಿಶ್ರಮದ್ದಾಗಿದೆ.
ಇದು ನೀವು ಬ್ರಾಹ್ಮಣರ ಸರ್ವೋತ್ತಮ ಸರ್ವ ಶ್ರೇಷ್ಠವಾದ ಕುಲವಾಗಿದೆ. ಈ ಸಮಯದಲ್ಲಿ ನಿಮ್ಮ ಜೀವನವು
ಅಮೂಲ್ಯವಾದುದಾಗಿದೆ ಆದ್ದರಿಂದ ಈ ಶರೀರದ್ದೂ ಸಂಭಾಲನೆ ಮಾಡಬೇಕು. ತಮೋಪ್ರಧಾನವಾಗಿರುವ ಕಾರಣದಿಂದ
ಶರೀರದ ಆಯಸ್ಸೂ ಸಹ ಕಡಿಮೆಯಾಗುತ್ತಾ ಹೋಗುತ್ತದೆ. ಈಗ ನೀವೆಷ್ಟು ಯೋಗದಲ್ಲಿರುತ್ತೀರಿ, ಅಷ್ಟು
ಆಯಸ್ಸು ಹೆಚ್ಚಾಗುತ್ತದೆ. ನಿಮ್ಮ ಆಯಸ್ಸು ಹೆಚ್ಚುತ್ತಾ-ಹೆಚ್ಚುತ್ತಾ 150 ವರ್ಷಗಳಾಗಿಬಿಡುತ್ತದೆ
ಸತ್ಯಯುಗದಲ್ಲಿ, ಆದ್ದರಿಂದ ಶರೀರವನ್ನೂ ಸಂಭಾಲನೆ ಮಾಡಬೇಕು. ಈ ರೀತಿಯಂತು ಹೇಳುವುದಲ್ಲ - ಇದಂತು
ಮಣ್ಣಿನ ಗೊಂಬೆ, ಇದು ಎಲ್ಲಾದರೂ ಸಮಾಪ್ತಿಯಾಗಿ ಬಿಡಲಿ ಅಲ್ಲ. ಇದನ್ನು ಬದುಕಿಟ್ಟಿರಬೇಕು. ಇದು
ಅಮೂಲ್ಯವಾದ ಜೀವನವಾಗಿದೆಯಲ್ಲವೆ! ಯಾವುದೇ ರೋಗವಾಗುತ್ತದೆಯೆಂದರೆ ಅದರ ಸೇವೆ ಮಾಡಬೇಕಾಗಿದೆ.
ಬದುಕಿರಲಿ, ಶಿವ ತಂದೆಯನ್ನು ನೆನಪು ಮಾಡುತ್ತಿರಲಿ. ನಾವು ತಂದೆಯನ್ನು ನೆನಪು ಮಾಡುತ್ತಿರುತ್ತೇವೆ
ಎನ್ನುವ ತಿಳುವಳಿಕೆಯಂತು ಇರುತ್ತದೆಯಲ್ಲವೆ! ಆತ್ಮವು ನೆನಪು ಮಾಡುತ್ತದೆ, ತಂದೆಯಿಂದ ಆಸ್ತಿಯನ್ನು
ಪಡೆಯುವುದಕ್ಕಾಗಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ
ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮನ್ನು
ನೋಡಿಕೊಳ್ಳಿರಿ - ನಾನು ಪುರುಷಾರ್ಥದಲ್ಲಿ ಉತ್ತಮನೇ, ಮಧ್ಯಮನೇ ಅಥವಾ ಕನಿಷ್ಠವಾಗಿದ್ದೇನೆಯೇ? ನಾನು
ಶ್ರೇಷ್ಠ ಪದವಿಯನ್ನು ಪಡೆಯಲು ಯೋಗ್ಯನಾಗಿದ್ದೇನೆಯೇ? ನಾನು ಆತ್ಮಿಕ ಸೇವೆಯನ್ನು ಮಾಡುತ್ತೇನೆಯೇ?
2. ಮೂರನೇ ನೇತ್ರದಿಂದ ಆತ್ಮ ಸಹೋದರನನ್ನು ನೋಡಿರಿ, ಸಹೋದರ-ಸಹೋದರನೆಂದು ತಿಳಿದು, ಎಲ್ಲರಿಗೂ
ಜ್ಞಾನವನ್ನು ಕೊಡಿ, ಆತ್ಮಿಕ ಸ್ಥಿತಿಯಲ್ಲಿರುವ ಹವ್ಯಾಸವನ್ನು ಹಾಕಿಕೊಳ್ಳುತ್ತೀರೆಂದರೆ
ಕರ್ಮೇಂದ್ರಿಯಗಳು ಚಂಚಲವಾಗುವುದಿಲ್ಲ.
ವರದಾನ:
ಪರೀಕ್ಷೆಯಲ್ಲಿ
ಗಾಬರಿಗೊಳ್ಳುವುದಕ್ಕೆ ಬದಲಾಗಿ ಪೂರ್ಣ ವಿರಾಮವನ್ನಿಟ್ಟು ಫುಲ್ಪಾಸ್ ಆಗುವಂತಹ ಸಫಲತಾಮೂರ್ತಿ ಭವ.
ಯಾವಾಗ ಯಾವುದೇ ಪ್ರಕಾರದ
ಪರೀಕ್ಷೆಯು ಬರುತ್ತದೆಯೆಂದರೆ ಗಾಬರಿಯಾಗದಿರಿ, ಪ್ರಶ್ನಾರ್ಥಕದಲ್ಲಿ ಬರಬಾರದು, ಇದೇಕೆ ಬಂದಿತು?
ಎಂದು. ಇದನ್ನು ಯೋಚಿಸುವುದರಲ್ಲಿ ಸಮಯವನ್ನು ವ್ಯರ್ಥ ಮಾಡದಿರಿ. ಪ್ರಶ್ನೆಯು ಸಮಾಪ್ತಿ ಮತ್ತು
ಪೂರ್ಣವಿರಾಮ. ಆಗಲೇ ಕ್ಲಾಸ್ ಬದಲಾವಣೆಯಾಗುತ್ತದೆ ಅರ್ಥಾತ್ ಪರೀಕ್ಷೆಯಲ್ಲಿ ಪಾಸ್ ಆಗುತ್ತೀರಿ.
ಫುಲ್ಸ್ಟಾಪ್ ಹಾಕುವವರು ಫುಲ್ಪಾಸ್ ಆಗುವರು ಏಕೆಂದರೆ ಫುಲ್ಸ್ಟಾಪ್ ಇರುವುದೇ ಬಿಂದುವಿನ ಸ್ಥಿತಿ.
ನೋಡುತ್ತಿದ್ದರೂ ನೋಡದಿರುವುದು, ಕೇಳುತ್ತಿದ್ದರೂ ಕೇಳದಿರುವುದು. ತಂದೆಯು ತಿಳಿಸಿರುವುದನ್ನಷ್ಟೇ
ಕೇಳಿರಿ, ತಂದೆಯವರು ಏನು ಕೊಟ್ಟಿದ್ದಾರೆ ಅದನ್ನು ನೋಡುತ್ತಿರುತ್ತೀರೆಂದರೆ ಫುಲ್ಪಾಸ್ ಆಗಿ
ಬಿಡುತ್ತೀರಿ ಮತ್ತು ಪಾಸ್ ಆಗುವ ಚಿಹ್ನೆಯಾಗಿದೆ- ಸದಾ ಏರುವ ಕಲೆಯ ಅನುಭವ ಮಾಡುತ್ತಾ, ಸಫಲತೆಯ
ನಕ್ಷತ್ರಗಳಾಗಿ ಬಿಡುತ್ತೀರಿ.
ಸ್ಲೋಗನ್:
ಸ್ವ-ಉನ್ನತಿ
ಮಾಡಿಕೊಳ್ಳಬೇಕೆಂದರೆ ಪ್ರಶ್ನೆ, ತಿದ್ದುಪಡಿ ಮತ್ತು ಟಿಪ್ಪಣಿಗಳ ತ್ಯಾಗ ಮಾಡಿ, ತಮ್ಮ ಸಂಬಂಧವನ್ನು
ಸರಿಯಾಗಿಟ್ಟುಕೊಳ್ಳಿರಿ.
ಅವ್ಯಕ್ತ ಸ್ಥಿತಿಯ
ಅನುಭವ ಮಾಡುವುದಕ್ಕಾಗಿ ವಿಶೇಷ ಹೋಮ್ವರ್ಕ್ -
ಯಾವುದೇ ಪ್ರಕಾರದ ವಿಘ್ನವನ್ನು ಬುದ್ಧಿಯನ್ನು ಸತಾಯಿಸುತ್ತದೆಯೆಂದರೆ, ಯೋಗದ ಪ್ರಯೋಗದ ಮೂಲಕ ಮೊದಲು
ಆ ವಿಘ್ನವನ್ನು ಸಮಾಪ್ತಿಗೊಳಿಸಿರಿ. ಮನಸ್ಸು-ಬುದ್ಧಿಯಲ್ಲಿ ಸ್ವಲ್ಪವೂ ತೊಂದರೆಯಿರಬಾರದು.
ಅವ್ಯಕ್ತ ಸ್ಥಿತಿಯಲ್ಲಿ ಸ್ಥಿತರಾಗುವ ಇಂತಹ ಅಭ್ಯಾಸವಾಗಲಿ, ಅದರಿಂದ ಆತ್ಮವು ಆತ್ಮನ ಮಾತನ್ನು ಅಥವಾ
ಯಾರದೇ ಮನಸ್ಸಿನ ಭಾವಗಳನ್ನು ಸಹಜವಾಗಿ ತಿಳಿದುಕೊಂಡುಬಿಡಲಿ.