12.02.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ – ಸತ್ಯ
ಸಂಗವು ಜ್ಞಾನಮಾರ್ಗದಲ್ಲೇ ಆಗುತ್ತದೆ, ಈಗ ನೀವು ಸತ್ಯ ತಂದೆಯ ಸಂಗದಲ್ಲಿ ಕುಳಿತಿದ್ದೀರಿ, ತಂದೆಯ
ನೆನಪಿನಲ್ಲಿ ಇರುವುದೆಂದರೆ ಸತ್ಸಂಗ ಮಾಡುವುದಾಗಿದೆ”
ಪ್ರಶ್ನೆ:
ಈಗಲೇ ನೀವು
ಮಕ್ಕಳಿಗೆ ಸತ್ಸಂಗದ ಅವಶ್ಯಕತೆಯಿದೆ - ಏಕೆ?
ಉತ್ತರ:
ಏಕೆಂದರೆ ತಮೋಪ್ರಧಾನ ಆತ್ಮವು ಸತ್ಯ ತಂದೆ, ಸತ್ಯ ಶಿಕ್ಷಕ ಮತ್ತು ಸದ್ಗುರುವಿನ ಸಂಗದಿಂದಲೇ
ಸತೋಪ್ರಧಾನ ಅರ್ಥಾತ್ ಪತಿತರಿಂದ ಪಾವನರಾಗಲು ಸಾಧ್ಯ. ಸತ್ಸಂಗವಿಲ್ಲದೆ ನಿರ್ಬಲ ಆತ್ಮಗಳು
ಬಲಶಾಲಿಯಾಗಲು ಸಾಧ್ಯವಿಲ್ಲ. ತಂದೆಯ ಸಂಗದಿಂದ ಆತ್ಮದಲ್ಲಿ ಪವಿತ್ರತೆಯ ಬಲವು ಬಂದು ಬಿಡುತ್ತದೆ.
21 ಜನ್ಮಗಳಿಗಾಗಿ ಜೀವನದ ದೋಣಿಯು ಪಾರಾಗಿ ಬಿಡುತ್ತದೆ.
ಓಂ ಶಾಂತಿ.
ಮಕ್ಕಳು ಸತ್ಸಂಗದಲ್ಲಿ ಕುಳಿತಿದ್ದೀರಿ. ಈ ಸತ್ಸಂಗದಲ್ಲಿ ಕಲ್ಪ-ಕಲ್ಪವೂ ಕೇವಲ ಸಂಗಮಯುಗದಲ್ಲಿಯೇ
ಮಕ್ಕಳು ಕುಳಿತುಕೊಳ್ಳುತ್ತೀರಿ. ಸತ್ಸಂಗವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು
ಪ್ರಪಂಚದವರು ತಿಳಿದುಕೊಂಡಿಲ್ಲ. ಸತ್ಸಂಗವೆಂಬ ಹೆಸರು ಅವಿನಾಶಿಯಾಗಿ ನಡೆದು ಬರುತ್ತದೆ.
ಭಕ್ತಿಮಾರ್ಗದಲ್ಲಿಯೂ ಸಹ ನಾವು ಇಂತಹ ಸತ್ಸಂಗಕ್ಕೆ ಹೋಗುತ್ತೇವೆಂದು ಹೇಳುತ್ತಾರೆ. ವಾಸ್ತವದಲ್ಲಿ
ಭಕ್ತಿಮಾರ್ಗದಲ್ಲಿ ಯಾರೂ ಸತ್ಸಂಗದಲ್ಲಿ ಹೋಗುವುದಿಲ್ಲ. ಜ್ಞಾನಮಾರ್ಗದಲ್ಲಿಯೇ ಸತ್ಸಂಗವಿರುತ್ತದೆ.
ಈಗ ನೀವು ಸತ್ಸಂಗದಲ್ಲಿ ಕುಳಿತಿದ್ದೀರಿ. ಆತ್ಮಗಳು ಸತ್ಯತಂದೆಯ ಸಂಗದಲ್ಲಿ ಕುಳಿತಿದ್ದಾರೆ
ಮತ್ತೆಲ್ಲಿಯೂ ಆತ್ಮಗಳು ಪರಮಪಿತ ಪರಮಾತ್ಮನ ಸಂಗದಲ್ಲಿ ಕುಳಿತುಕೊಳ್ಳುವುದಿಲ್ಲ. ತಂದೆಯನ್ನು
ಅರಿತುಕೊಂಡೇ ಇಲ್ಲ. ನಾವು ಸತ್ಸಂಗದಲ್ಲಿ ಹೋಗುತ್ತೇವೆಂದು ಭಲೆ ಹೇಳುತ್ತಾರೆ ಆದರೆ ಅವರು
ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ, ನೀವು ದೇಹದ ಅಭಿಮಾನದಲ್ಲಿ ಬರುವುದಿಲ್ಲ. ಏಕೆಂದರೆ ನಾವು
ಆತ್ಮಗಳಾಗಿದ್ದೇವೆ, ಸತ್ಯ ತಂದೆಯ ಸಂಗದಲ್ಲಿದ್ದೇವೆಂದು ನಿಮಗೆ ತಿಳಿದಿದೆ. ಮತ್ತ್ಯಾವ ಮನುಷ್ಯರೂ
ಸತ್ಸಂಗದಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸತ್ಸಂಗವೆಂಬ ಹೆಸರೂ ಸಹ ಈಗಲೇ ಇದೆ. ‘ಸತ್ಸಂಗದ’
ಯಥಾರ್ಥ ಅರ್ಥವನ್ನು ತಂದೆಯು ಈ ಸಮಯದಲ್ಲಿ ತಿಳಿಸಿಕೊಡುತ್ತಾರೆ. ನೀವಾತ್ಮಗಳು ಈಗ ಪರಮಾತ್ಮ ತಂದೆ
ಅಂದರೆ ಯಾರು ಸತ್ಯನಾಗಿದ್ದಾರೆಯೋ ಅವರ ಜೊತೆಯಲ್ಲಿ ಕುಳಿತಿದ್ದೀರಿ. ಅವರು ಸತ್ಯ ತಂದೆ, ಸತ್ಯ
ಶಿಕ್ಷಕ, ಸದ್ಗುರುವಾಗಿದ್ದಾರೆ ಅಂದರೆ ಅರ್ಥ - ನೀವು ಸತ್ಸಂಗದಲ್ಲಿ ಕುಳಿತಿದ್ದೀರಿ. ಭಲೆ ನೀವು
ಇಲ್ಲಿ ಅಥವಾ ಮನೆಯಲ್ಲಿ ಕುಳಿತಿದ್ದೀರಿ ಆದರೆ ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು
ಮಾಡುತ್ತೀರಿ. ನಾವಾತ್ಮಗಳು ಈಗ ಸತ್ಯ ತಂದೆಯನ್ನು ನೆನಪು ಮಾಡುತ್ತೇವೆ ಅರ್ಥಾತ್ ಸತ್ಯ
ಸಂಗದಲ್ಲಿದ್ದೇವೆ. ತಂದೆಯು ಮಧುಬನದಲ್ಲಿ ಕುಳಿತಿದ್ದಾರೆ, ತಂದೆಯನ್ನು ನೆನಪು ಮಾಡುವ ಅನೇಕ
ಪ್ರಕಾರದ ಯುಕ್ತಿಗಳು ಸಿಗುತ್ತವೆ, ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಇದೂ ಸಹ
ಮಕ್ಕಳಿಗೆ ತಿಳಿದಿದೆ - ನಾವು 16 ಕಲಾಸಂಪೂರ್ಣರಾಗುತ್ತೇವೆ ನಂತರ ಇಳಿಯುತ್ತಾ-ಇಳಿಯುತ್ತಾ ಕಲೆಗಳು
ಕಡಿಮೆಯಾಗುತ್ತಾ ಹೋಗುತ್ತವೆ. ಭಕ್ತಿಯೂ ಸಹ ಮೊದಲು ಅವ್ಯಭಿಚಾರಿಯಾಗಿರುತ್ತದೆ ನಂತರ
ಕೆಳಗಿಳಿಯುತ್ತಾ ವ್ಯಭಿಚಾರಿ ಭಕ್ತಿಯಾಗುವ ಕಾರಣ ತಮೋಪ್ರಧಾನರಾಗಿ ಬಿಡುತ್ತಾರೆ ಮತ್ತೆ ಅವರಿಗೆ
ಸತ್ಯ ಸಂಗವು ಅವಶ್ಯವಾಗಿ ಬೇಕು. ಇಲ್ಲವಾದರೆ ಹೇಗೆ ಪವಿತ್ರರಾಗುವುದು? ಆದ್ದರಿಂದ ಈಗ
ನೀವಾತ್ಮಗಳಿಗೆ ಸತ್ಯ ಸಂಗವು ಸಿಕ್ಕಿದೆ. ಆತ್ಮಕ್ಕೆ ಗೊತ್ತಿದೆ, ನಾವು ತಂದೆಯನ್ನು ನೆನಪು
ಮಾಡಬೇಕಾಗಿದೆ, ಅವರದೇ ಸಂಗವಾಗಿದೆ. ನೆನಪನ್ನೂ ಸಂಗವೆಂದು ಹೇಳುತ್ತಾರೆ. ಇದು ಸತ್ಯ ತಂದೆಯ
ಸಂಗವಾಗಿದೆ. ಈ ದೇಹವಿದ್ದರೂ ಸಹ ನೀವಾತ್ಮಗಳು ನನ್ನನ್ನು ನೆನಪು ಮಾಡಿ, ಇದು ಸತ್ಯ ತಂದೆಯ
ಸಂಗವಾಗಿದೆ. ಹೇಗೆ ಇವರಿಗೆ ದೊಡ್ಡ ವ್ಯಕ್ತಿಯ ಸಂಗವು ಹಿಡಿದಿದೆ ಆದ್ದರಿಂದ ದೇಹಾಭಿಮಾನಿಯಾಗಿ
ಬಿಟ್ಟಿದ್ದಾರೆಂದು ಹೇಳುತ್ತಾರಲ್ಲವೆ. ಈಗ ನಿಮ್ಮ ಸಂಗವು ಸತ್ಯ ತಂದೆಯ ಜೊತೆಯಿದೆ. ಇದರಿಂದ ನೀವು
ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ಒಂದೇ ಬಾರಿ
ಬರುತ್ತೇನೆ. ಈಗ ಪರಮಾತ್ಮನೊಂದಿಗೆ ಆತ್ಮದ ಸಂಗವಿರುವ ಕಾರಣ ನೀವು 21 ಜನ್ಮಗಳಿಗಾಗಿ ಪಾರಾಗಿ
ಬಿಡುತ್ತೀರಿ ನಂತರ ನಿಮಗೆ ದೇಹದ ಸಂಗವು ಹಿಡಿಯುತ್ತದೆ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ.
ತಂದೆಯು ತಿಳಿಸುತ್ತಾರೆ - ನನ್ನ ಜೊತೆ ನೀವು ಮಕ್ಕಳ ಸಂಗವಿರುವುದರಿಂದ ನೀವು ಸತೋಪ್ರಧಾನರಾಗಿ
ಬಿಡುತ್ತೀರಿ. ಅದಕ್ಕೆ ಸತ್ಯಯುಗವೆಂದು ಹೇಳಲಾಗುತ್ತದೆ.
ಆತ್ಮವು ನಿರ್ಲೇಪವಾಗಿದೆ. ಎಲ್ಲರೂ ಪರಮಾತ್ಮನೇ ಪರಮಾತ್ಮನಾಗಿದ್ದಾರೆಂದು ಸಾಧು-ಸಂತ ಮೊದಲಾದವರು
ತಿಳಿಯುತ್ತಾರೆ ಅಂದರೆ ಪರಮಾತ್ಮನಲ್ಲಿ ಈಗ ತುಕ್ಕು ಉಂಟಾಗಿದೆಯೆಂದರ್ಥ. ಆದರೆ ಪರಮಾತ್ಮನಲ್ಲೆಂದೂ
ತುಕ್ಕು ಬೀಳಲು ಸಾಧ್ಯವಿಲ್ಲ. ತಂದೆಯು ಕೇಳುತ್ತಾರೆ - ಪರಮಾತ್ಮನಾದ ನನ್ನಲ್ಲಿ ತುಕ್ಕು
ಉಂಟಾಗುತ್ತದೆಯೇ? ಇಲ್ಲ. ನಾನಂತೂ ಸದಾ ಪರಮಧಾಮದಲ್ಲಿರುತ್ತೇನೆ, ಏಕೆಂದರೆ ನಾನು ಜನನ-ಮರಣದಲ್ಲಿ
ಬರುವುದಿಲ್ಲ, ಇದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನಿಮ್ಮಲ್ಲಿಯೂ ಕೆಲವರದು ಹೆಚ್ಚಿನ
ಸಂಗವಿದೆ ಕೆಲವರದು ಕಡಿಮೆ ಇನ್ನೂ ಕೆಲವರದು ಒಳ್ಳೆಯ ರೀತಿಯಲ್ಲಿ ಪುರುಷಾರ್ಥ ಮಾಡಿ
ಯೋಗದಲ್ಲಿರುತ್ತಾರೆ, ಎಷ್ಟು ಸಮಯ ಆತ್ಮವು ತಂದೆಯ ಸಂಗದಲ್ಲಿರುವುದೋ ಅಷ್ಟೂ ಲಾಭವಿದೆ. ವಿಕರ್ಮಗಳು
ವಿನಾಶವಾಗುತ್ತವೆ. ತಂದೆಯು ತಿಳಿಸುತ್ತಾರೆ – ಆತ್ಮಗಳೇ ತಂದೆಯಾದ ನನ್ನನ್ನು ನೆನಪು ಮಾಡಿ, ನನ್ನ
ಸಂಗ ಮಾಡಿ, ನನಗೆ ಈ ಶರೀರದ ಆಧಾರ ತೆಗೆದುಕೊಳ್ಳಬೇಕಾಗುತ್ತದೆ ಇಲ್ಲವೆಂದರೆ ಪರಮಾತ್ಮನು
ಮಾತನಾಡುವುದಾದರೂ ಹೇಗೆ? ಆತ್ಮಗಳು ಕೇಳುವುದಾದರೂ ಹೇಗೆ? ಈಗ ನೀವು ಮಕ್ಕಳ ಸಂಗವು ಸತ್ಯತಂದೆಯ
ಜೊತೆಯಿದೆ. ಸತ್ಯ ತಂದೆಯನ್ನು ನಿರಂತರ ನೆನಪು ಮಾಡಬೇಕಾಗಿದೆ. ಆತ್ಮವು ಸತ್ಯದ ಸಂಗ ಮಾಡಬೇಕಾಗಿದೆ,
ಆತ್ಮವು ವಿಚಿತ್ರವಾಗಿದೆ, ಪರಮಾತ್ಮನೂ ವಿಚಿತ್ರವಾಗಿದ್ದಾರೆ, ಪ್ರಪಂಚವೂ ವಿಚಿತ್ರವಾಗಿದೆ. ಈ
ಪ್ರಪಂಚವು ಹೇಗೆ ಸುತ್ತುತ್ತದೆ, ಇದೂ ಸಹ ವಿಚಿತ್ರವಾಗಿದೆ. ನೀವು ಇಡೀ ನಾಟಕದಲ್ಲಿ ಸರ್ವತೋಮುಖ
ಪಾತ್ರವನ್ನಭಿನಯಿಸುತ್ತೀರಿ. ನೀವಾತ್ಮಗಳಲ್ಲಿ 84 ಜನ್ಮಗಳ ಪಾತ್ರವು ನಿಗದಿಯಾಗಿದೆ, ಇದೂ ಸಹ
ವಿಚಿತ್ರವಾಗಿದೆ. ಸತ್ಯಯುಗೀ ಆತ್ಮಗಳು ಮತ್ತು ಈಗಿನ ಆತ್ಮಗಳು ಅದರಲ್ಲಿಯೂ ನೀವಾತ್ಮಗಳು
ಎಲ್ಲರಿಗಿಂತ ಹೆಚ್ಚಿನ ಸರ್ವತೋಮುಖಿಯಾಗಿದ್ದೀರಿ. ನಾಟಕದಲ್ಲಿ ಕೆಲವರದು ಆರಂಭದಿಂದಲೇ
ಪಾತ್ರವಿರುತ್ತದೆ, ಕೆಲವರದು ನಡುವೆ, ಇನ್ನೂ ಕೆಲವರ ಪಾತ್ರವು ಕೊನೆಯಲ್ಲಿರುತ್ತದೆ. ಅವೆಲ್ಲವೂ
ಕ್ಷಣಿಕ ನಾಟಕಗಳಾಗಿವೆ, ಅವೂ ಸಹ ಈಗಲೇ ರಚಿಸಲ್ಪಟ್ಟಿವೆ. ಈಗ ವಿಜ್ಞಾನದ ಎಷ್ಟೊಂದು ಪ್ರಭಾವವಿದೆ.
ಸತ್ಯಯುಗದಲ್ಲಿ ಇನ್ನೆಷ್ಟು ವಿಜ್ಞಾನದ ಬಲವಿರಬಹುದು. ಹೊಸ ಪ್ರಪಂಚವು ಎಷ್ಟು ಬೇಗನೆ ತಯಾರಾಗಬಹುದು!
ಅಲ್ಲಿ ಪವಿತ್ರತೆಯ ಬಲವು ಮುಖ್ಯವಾದುದಾಗಿದೆ. ಈಗ ನಿರ್ಬಲರಿದ್ದಾರೆ, ಸತ್ಯಯುಗದಲ್ಲಿ
ಬಲಶಾಲಿಗಳಿರುತ್ತಾರೆ. ಈ ಲಕ್ಷ್ಮಿ-ನಾರಾಯಣರು ಶಕ್ತಿಶಾಲಿಗಳಲ್ಲವೆ. ಈಗ ರಾವಣನು ಶಕ್ತಿಯನ್ನು
ಕಸಿದುಕೊಂಡಿದ್ದಾನೆ ಮತ್ತೆ ನೀವು ಆ ರಾವಣನ ಮೇಲೆ ಎಷ್ಟೊಂದು ಶಕ್ತಿಶಾಲಿಗಳಾಗುತ್ತೀರಿ. ಎಷ್ಟು
ಸತ್ಯ ತಂದೆಯ ಸಂಗ ಮಾಡುವಿರೋ ಅರ್ಥಾತ್ ಆತ್ಮವು ಎಷ್ಟು ತಂದೆಯನ್ನು ನೆನಪು ಮಾಡುವುದೋ ಅಷ್ಟು
ಬಲಶಾಲಿಯಾಗುತ್ತದೆ. ವಿದ್ಯೆಯಲ್ಲಿಯೂ ಸಹ ಬಲ ಸಿಗುತ್ತದೆಯಲ್ಲವೆ. ನಿಮಗೂ ಬಲ ಸಿಗುತ್ತದೆ, ಇಡೀ
ವಿಶ್ವದ ಮೇಲೆ ನೀವು ಆಳ್ವಿಕೆ ನಡೆಸುತ್ತೀರಿ. ಸಂಗಮಯುಗದಲ್ಲಿಯೇ ಸತ್ಯ ತಂದೆಯ ಜೊತೆ ಆತ್ಮದ
ಯೋಗವಾಗುತ್ತದೆ. ತಂದೆಯು ತಿಳಿಸುತ್ತಾರೆ - ಆತ್ಮಕ್ಕೆ ನನ್ನ ಸಂಗವು ಸಿಗುವುದರಿಂದ ಆತ್ಮವು ಬಹಳ
ಶಕ್ತಿಶಾಲಿಯಾಗಿ ಬಿಡುತ್ತದೆ. ತಂದೆಯು ವಿಶ್ವದ ಸರ್ವಶಕ್ತಿವಂತನಾಗಿದ್ದಾರಲ್ಲವೆ, ಅವರ ಮೂಲಕ ಶಕ್ತಿ
ಸಿಗುತ್ತದೆ. ಅವರಲ್ಲಿ ಎಲ್ಲಾ ವೇದಶಾಸ್ತ್ರಗಳ ಆದಿ-ಮಧ್ಯ-ಅಂತ್ಯದ ಜ್ಞಾನವು ಬಂದು ಬಿಡುತ್ತದೆ.
ಹೇಗೆ ತಂದೆಯು ಸರ್ವಶಕ್ತಿವಂತನಾಗಿದ್ದಾರೆ ಹಾಗೆಯೇ ನೀವೂ ಸಹ ಸರ್ವಶಕ್ತಿವಂತರಾಗುತ್ತೀರಿ, ವಿಶ್ವದ
ಮೇಲೆ ನೀವು ರಾಜ್ಯಭಾರ ಮಾಡುತ್ತೀರಿ. ನಿಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನಿಮಗೆ ನನ್ನ
ಮೂಲಕ ಎಷ್ಟೊಂದು ಬಲವು ಸಿಗುತ್ತದೆ, ಇವರಿಗೂ ಬಲವು ಸಿಗುತ್ತದೆ. ತಂದೆಯನ್ನು ಎಷ್ಟು ನೆನಪು
ಮಾಡುತ್ತೀರೋ ಅಷ್ಟು ಬಲವು ಸಿಗುವುದು. ತಂದೆಯು ಮತ್ತ್ಯಾವುದೇ ಕಷ್ಟವನ್ನು ಕೊಡುವುದಿಲ್ಲ, ಕೇವಲ
ನೆನಪು ಮಾಡಬೇಕಷ್ಟೆ. 84 ಜನ್ಮಗಳ ಚಕ್ರವು ಈಗ ಪೂರ್ಣವಾಗಿದೆ, ಹಿಂತಿರುಗಿ ಹೋಗಬೇಕಾಗಿದೆ, ಇದನ್ನು
ತಿಳಿದುಕೊಳ್ಳುವುದೇನೂ ದೊಡ್ಡ ಮಾತಲ್ಲ. ಹೆಚ್ಚಿನ ವಿಸ್ತಾರದಲ್ಲಿ ಹೋಗುವ ಅವಶ್ಯಕತೆಯಿಲ್ಲ.
ಬೀಜವನ್ನು ಅರಿತುಕೊಳ್ಳುವುದರಿಂದ ಇಡೀ ವೃಕ್ಷವು ಹೇಗೆ ಬರಬಹುದೆಂಬುದನ್ನು ಅರಿತುಕೊಳ್ಳಬಹುದು.
ಬುದ್ಧಿಯಲ್ಲಿ ಸಾರ ರೂಪದಲ್ಲಿ ಬಂದು ಬಿಡುತ್ತದೆ. ಇವು ಬಹಳ ವಿಚಿತ್ರವಾದ ಮಾತುಗಳಾಗಿವೆ.
ಭಕ್ತಿಮಾರ್ಗದಲ್ಲಿ ಮನುಷ್ಯರು ಎಷ್ಟೊಂದು ಪೆಟ್ಟು ತಿನ್ನುತ್ತಾರೆ, ಪರಿಶ್ರಮ ಪಡುತ್ತಾರೆ.
ಸಿಗುವುದೇನೂ ಇಲ್ಲ ಆದರೂ ಸಹ ತಂದೆಯು ಮತ್ತೆ ಬಂದು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ
ಮಾಡುತ್ತಾರೆ. ನಾವು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೇವೆ, ಇದೇ ಪುರುಷಾರ್ಥ ಮಾಡಬೇಕಾಗಿದೆ.
ಭಾರತದ ಯೋಗವು ಹೆಸರುವಾಸಿಯಾಗಿದೆ, ಯೋಗದಿಂದ ನಿಮ್ಮದು ಧೀರ್ಘಾಯಸ್ಸಾಗುವುದು. ಸತ್ಯ ಸಂಗದಿಂದ
ಎಷ್ಟೊಂದು ಲಾಭವಾಗುತ್ತದೆ! ಆಯಸ್ಸೂ ದೊಡ್ಡದು ಮತ್ತು ಕಾಯವೂ ನಿರೋಗಿಯಾಗಿ ಬಿಡುತ್ತದೆ. ಇವೆಲ್ಲಾ
ಮಾತುಗಳನ್ನು ನೀವು ಮಕ್ಕಳ ಬುದ್ಧಿಯಲ್ಲಿಯೇ ಕುಳ್ಳರಿಸಲಾಗುತ್ತದೆ. ನೀವು ಬ್ರಾಹ್ಮಣರ ವಿನಃ
ಮತ್ತ್ಯಾರದೂ ಸತ್ಸಂಗವಲ್ಲ. ನೀವು ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದೀರಿ, ಶಿವನ ಮಕ್ಕಳಾಗಿದ್ದೀರಿ
ಅಂದಮೇಲೆ ನಾವು ಶಿವನಿಗೆ ಮೊಮ್ಮಕ್ಕಳಾಗಿದ್ದೇವೆಂದು ಎಷ್ಟೊಂದು ಖುಷಿಯಿರಬೇಕು! ಆಸ್ತಿಯೂ ಸಹ
ತಾತನಿಂದಲೇ ಸಿಗುತ್ತದೆ. ಇದೇ ನೆನಪಿನ ಯಾತ್ರೆಯಾಗಿದೆ. ಬುದ್ಧಿಯಲ್ಲಿ ಇದೇ ಸ್ಮರಣೆಯಿರಬೇಕು. ಆ
ಸತ್ಸಂಗಗಳಲ್ಲಂತೂ ಒಂದು ಜಾಗದಲ್ಲಿ ಹೋಗಿ ಕುಳಿತುಕೊಂಡು ಬಿಡುತ್ತಾರೆ. ಇಲ್ಲಿ ಆ ಮಾತಿಲ್ಲ. ಒಂದು
ಜಾಗದಲ್ಲಿ ಕುಳಿತುಕೊಳ್ಳುವುದರಿಂದಲೇ ಸತ್ಸಂಗವಾಗುವುದೆಂದಲ್ಲ. ಏಳುತ್ತಾ-ಕುಳಿತುಕೊಳ್ಳುತ್ತಾ,
ನಡೆಯುತ್ತಾ-ತಿರುಗಾಡುತ್ತಾ ನಾವು ಸತ್ಸಂಗದಲ್ಲಿದ್ದೇವೆ, ಅವರನ್ನು ನೆನಪು ಮಾಡಿದಾಗ ಮಾತ್ರ. ನೆನಪು
ಮಾಡಲಿಲ್ಲವೆಂದರೆ ದೇಹಾಭಿಮಾನದಲ್ಲಿದ್ದಾರೆಂದರ್ಥ. ದೇಹವು ಅಸತ್ಯ ವಸ್ತುವಲ್ಲವೆ. ದೇಹಕ್ಕೆ
ಸತ್ಯವೆಂದು ಹೇಳುವುದಿಲ್ಲ, ಶರೀರವು ಜಡವಾಗಿದೆ, ಪಂಚತತ್ವಗಳಿಂದಾಗಿದೆ. ಅದರಲ್ಲಿ
ಆತ್ಮವಿಲ್ಲವೆಂದರೆ ಶರೀರವು ಕದಲುವುದಿಲ್ಲ. ಮನುಷ್ಯನ ಶರೀರಕ್ಕಂತೂ ಏನೂ ಬೆಲೆಯಿಲ್ಲ, ಉಳಿದೆಲ್ಲಾ
ದೇಹಗಳಿಗೆ ಬೆಲೆಯಿದೆ. ಸೌಭಾಗ್ಯವು ಆತ್ಮಕ್ಕೆ ಸಿಗಬೇಕಾಗಿದೆ, ನಾನು ಇಂತಹವನಾಗಿದ್ದೇನೆಂದು ಆತ್ಮವೇ
ಹೇಳುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಆತ್ಮವು ಯಾವ ಸ್ಥಿತಿಗೆ ಇಳಿದು ಬಿಟ್ಟಿದೆ,
ಮೀನು-ಮೊಟ್ಟೆ, ಮೊಸಳೆ ಎಲ್ಲವನ್ನೂ ತಿಂದು ಬಿಡುತ್ತದೆ. ಪ್ರತಿಯೊಬ್ಬರೂ ಭಸ್ಮಾಸುರರಾಗಿದ್ದಾರೆ,
ತಮ್ಮನ್ನು ತಾವೇ ಭಸ್ಮ ಮಾಡಿಕೊಳ್ಳುತ್ತಾರೆ - ಹೇಗೆ? ಕಾಮಚಿತೆಯ ಮೇಲೆ ಪ್ರತಿಯೊಬ್ಬರೂ ತಮ್ಮನ್ನು
ಭಸ್ಮ ಮಾಡಿಕೊಳ್ಳುತ್ತಿದ್ದಾರೆ ಅಂದಮೇಲೆ ಭಸ್ಮಾಸುರರಾದರಲ್ಲವೆ. ಈಗ ನೀವು ಜ್ಞಾನ ಚಿತೆಯ ಮೇಲೆ
ಕುಳಿತು ದೇವತೆಗಳಾಗುತ್ತೀರಿ. ಇಡೀ ಪ್ರಪಂಚವು ಕಾಮಚಿತೆಯ ಮೇಲೆ ಕುಳಿತು ಭಸ್ಮವಾಗಿ ಬಿಟ್ಟಿದೆ,
ತಮೋಪ್ರಧಾನ ಕಪ್ಪಾಗಿ ಬಿಟ್ಟಿದೆ. ತಂದೆಯು ಮಕ್ಕಳನ್ನು ಶ್ಯಾಮನಿಂದ ಸುಂದರರನ್ನಾಗಿ ಮಾಡಲು
ಬರುತ್ತಾರೆ. ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ - ದೇಹದ ಅಭಿಮಾನವನ್ನು ಬಿಟ್ಟು
ತನ್ನನ್ನು ಆತ್ಮವೆಂದು ತಿಳಿಯಿರಿ. ಮಕ್ಕಳು ಶಾಲೆಯಲ್ಲಿ ಓದುತ್ತಾರೆ ಮತ್ತೆ ಆ ವಿದ್ಯೆಯು
ಮನೆಯಲ್ಲಿದ್ದರೂ ಸಹ ಬುದ್ಧಿಯಲ್ಲಿರುತ್ತದೆಯಲ್ಲವೆ. ಇದೂ ಸಹ ನಿಮ್ಮ ಬುದ್ಧಿಯಲ್ಲಿರಬೇಕು - ಇದು
ನಿಮ್ಮ ವಿದ್ಯಾರ್ಥಿ ಜೀವನವಾಗಿದೆ. ಲಕ್ಷ್ಯವು ನಿಮ್ಮ ಸನ್ಮುಖದಲ್ಲಿದೆ.
ಏಳುತ್ತಾ-ಕುಳಿತುಕೊಳ್ಳುತ್ತಾ-ನಡೆದಾಡುತ್ತಾ ಬುದ್ಧಿಯಲ್ಲಿ ಈ ಜ್ಞಾನವಿರಬೇಕು.
ಇಲ್ಲಿ ಮಕ್ಕಳು ಬರುತ್ತೀರಿ, ರಿಫ್ರೆಷ್ ಆಗುತ್ತೀರಿ. ಹೀಗ್ಹೀಗೆ ತಿಳಿಸಿಕೊಡಿ ಎಂದು ಯುಕ್ತಿಗಳನ್ನು
ತಿಳಿಸಿಕೊಡಲಾಗುತ್ತದೆ. ಪ್ರಪಂಚದಲ್ಲಿ ಅನೇಕಾನೇಕ ಸತ್ಸಂಗಗಳಿರುತ್ತವೆ, ಎಷ್ಟೊಂದು ಮಂದಿ ಬಂದು
ಒಟ್ಟಿಗೆ ಸೇರುತ್ತಾರೆ. ವಾಸ್ತವದಲ್ಲಿ ಅವು ಸತ್ಸಂಗಗಳಲ್ಲ. ಸತ್ಯ ತಂದೆಯ ಸಂಗವು ಈಗ ನೀವು
ಮಕ್ಕಳಿಗೇ ಸಿಗುತ್ತದೆ. ತಂದೆಯು ಬಂದು ಸತ್ಯಯುಗದ ಸ್ಥಾಪನೆ ಮಾಡುತ್ತಾರೆ. ನೀವು ಮಾಲೀಕರಾಗಿ
ಬಿಡುತ್ತೀರಿ. ದೇಹಾಭಿಮಾನ ಅಥವಾ ಸುಳ್ಳು ಅಭಿಮಾನಗಳಿಂದ ನೀವು ಕೆಳಗೆ ಬೀಳುತ್ತೀರಿ ಮತ್ತು ನೀವು
ಸತ್ಯ ತಂದೆಯ ಸಂಗದಿಂದ ನೀವು ಮೇಲೇರುತ್ತೀರಿ, ಅರ್ಧಕಲ್ಪ ನೀವು ಪ್ರಾಲಬ್ಧವನ್ನು ಭೋಗಿಸುತ್ತೀರಿ.
ಸತ್ಯಯುಗದಲ್ಲಿಯೂ ನಿಮಗೆ ಸತ್ಸಂಗವಿರುವುದೆಂದಲ್ಲ, ಯಾವಾಗ ಎರಡೂ ಸಂಗಗಳು ಹಾಜರಿರುವುದೋ ಆಗ
ಸತ್ಸಂಗ ಮತ್ತು ಅಸತ್ಯ ಸಂಗವೆಂದು ಹೇಳುತ್ತಾರೆ. ಸತ್ಯ ತಂದೆಯು ಬಂದಾಗಲೇ ಎಲ್ಲಾ ಮಾತುಗಳನ್ನು
ತಿಳಿಸುತ್ತಾರೆ. ಎಲ್ಲಿಯವರೆಗೆ ಅವರು ಬರುವುದಿಲ್ಲವೋ ಅಲ್ಲಿಯ ತನಕ ಯಾರೂ ತಿಳಿದುಕೊಂಡಿರುವುದೂ
ಇಲ್ಲ. ಈಗ ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ - ಹೇ ಆತ್ಮಗಳೇ, ನನ್ನ ಜೊತೆ ಸಂಗವನ್ನಿಡಿ,
ದೇಹದ ಯಾವ ಸಂಗವು ಸಿಕ್ಕಿದೆಯೋ ಅದರಿಂದ ಉಪರಾಂ ಆಗಿಬಿಡಿ. ಸತ್ಯಯುಗದಲ್ಲಿಯೂ ಭಲೆ ದೇಹದ
ಸಂಗವಿರುವುದು ಆದರೆ ಅಲ್ಲಿ ನೀವು ಪಾವನರಾಗಿರುತ್ತೀರಿ. ಈಗ ನೀವು ಸತ್ಸಂಗದಿಂದ ಪತಿತರಿಂದ
ಪಾವನರಾಗುತ್ತೀರಿ ಮತ್ತೆ ಶರೀರವೂ ಪಾವನವಾಗಿರುವುದೇ ಸಿಗುವುದು. ಆತ್ಮವೂ ಸತೋಪ್ರಧಾನವಾಗಿರುವುದು.
ಈಗಂತೂ ಪ್ರಪಂಚವೂ ತಮೋಪ್ರಧಾನವಾಗಿರುವುದು, ಪ್ರಪಂಚವು ಹಳೆಯದು ಮತ್ತು ಹೊಸದಾಗುತ್ತದೆ. ಹೊಸ
ಪ್ರಪಂಚದಲ್ಲಿ ಅವಶ್ಯವಾಗಿ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಇಂದು ಆ ಧರ್ಮವನ್ನು ಮುಚ್ಚಿ
ಹಾಕಿ ಆದಿ ಸನಾತನ ಹಿಂದೂ ಧರ್ಮವೆಂದು ಹೇಳಿಕೊಳ್ಳುತ್ತಾರೆ, ಗೊಂದಲಕ್ಕೊಳಗಾಗಿದ್ದಾರೆ. ಈಗ ನೀವು
ಭಾರತವಾಸಿಗಳು ತಿಳಿದುಕೊಂಡಿದ್ದೀರಿ - ನಾವು ಪ್ರಾಚೀನ ದೇವಿ-ದೇವತಾ ಧರ್ಮದವರಾಗಿದ್ದೆವು,
ಸತ್ಯಯುಗದ ಮಾಲೀಕರಾಗಿದ್ದೆವು ಆದರೆ ಆ ನಶೆಯೆಲ್ಲಿದೆ! ಕಲ್ಪದ ಆಯಸ್ಸನ್ನೇ ಬಹಳ ದೀರ್ಘ ಮಾಡಿ
ಬಿಟ್ಟಿದ್ದಾರೆ, ಎಲ್ಲಾ ಮಾತುಗಳನ್ನು ಮರೆತು ಬಿಟ್ಟಿದ್ದಾರೆ - ಇದರ ಹೆಸರೇ ಆಗಿದೆ -
ಮರೆತು-ಮರೆಯಿಸುವ ಆಟ. ಈಗ ಸತ್ಯ ತಂದೆಯ ಮೂಲಕ ನೀವು ಎಲ್ಲಾ ಜ್ಞಾನವನ್ನು ಅರಿತುಕೊಂಡಿರುವುದರಿಂದ
ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ಮತ್ತೆ ಅರ್ಧಕಲ್ಪದ ನಂತರ ಕೆಳಗಿಳಿಯುತ್ತೀರಿ ಏಕೆಂದರೆ ರಾವಣ
ರಾಜ್ಯವು ಆರಂಭವಾಗುತ್ತದೆ. ಪ್ರಪಂಚವಂತೂ ಹಳೆಯದಾಗುತ್ತದೆಯಲ್ಲವೆ. ನಾವು ಹೊಸ ಪ್ರಪಂಚದ
ಮಾಲೀಕರಾಗಿದ್ದೆವು, ಈಗ ಹಳೆಯ ಪ್ರಪಂಚದವರಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ, ಕೆಲವರಿಗಂತೂ
ಇದೂ ಸಹ ನೆನಪಿಗೆ ಬರುವುದಿಲ್ಲ. ತಂದೆಯು ನಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ.
ಅರ್ಧಕಲ್ಪ ನಾವು ಸ್ವರ್ಗವಾಸಿಗಳಾಗಿರುತ್ತೇವೆ ಮತ್ತೆ ಇನ್ನರ್ಧ ಕಲ್ಪದ ನಂತರ ಕೆಳಗಿಳಿಯುತ್ತೇವೆ
ಏಕೆಂದರೆ ರಾವಣನ ರಾಜ್ಯವು ಆರಂಭವಾಗುತ್ತದೆ. ಪ್ರಪಂಚವು ಹಳೆಯದಾಗುತ್ತದೆಯಲ್ಲವೆ. ನೀವು
ತಿಳಿದುಕೊಂಡಿದ್ದೀರಿ, ತಂದೆಯು ನಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ, ಅರ್ಧಕಲ್ಪ ನಾವು
ಸ್ವರ್ಗವಾಸಿಗಳಾಗಿರುತ್ತೇವೆ ನಂತರ ನರಕವಾಸಿಗಳಾಗುತ್ತೇವೆ. ನಂಬರ್ವಾರ್ ಪುರುಷಾರ್ಥದನುಸಾರ ನೀವೂ
ಸಹ ಮಾ|| ಸರ್ವಶಕ್ತಿವಂತರಾಗಿದ್ದೀರಿ. ಇದು ಜ್ಞಾನಾಮೃತದ ಪಾನವಾಗಿದೆ. ಶಿವ ತಂದೆಗೆ ಹಳೆಯ
ಕರ್ಮೇಂದ್ರಿಯಗಳು ಸಿಕ್ಕಿವೆ. ಹೊಸ ಕರ್ಮೇಂದ್ರಿಯಗಳಂತೂ ಸಿಗುವುದಿಲ್ಲ. ಹಳೆಯ ವಸ್ತ್ರವು
ಸಿಗುತ್ತದೆ ತಂದೆಯು ವಾನಪ್ರಸ್ಥದಲ್ಲಿಯೇ ಬರುತ್ತಾರೆ. ಮಕ್ಕಳಿಗೆ ಖುಷಿಯಾಗುತ್ತದೆ, ಆಗ ತಂದೆಯೂ
ಖುಷಿಯಾಗುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಮಕ್ಕಳಿಗೆ ಜ್ಞಾನವನ್ನು ನೀಡಿ ರಾವಣನಿಂದ
ಬಿಡಿಸಲು ಬಂದಿದ್ದೇನೆ. ಪಾತ್ರವನ್ನಂತೂ ಬಹಳ ಖುಷಿಯಿಂದ ಅಭಿನಯಿಸಲಾಗುತ್ತದೆಯಲ್ಲವೆ ಅಂದಾಗ ತಂದೆಯು
ಬಹಳ ಖುಷಿಯಿಂದ ಪಾತ್ರವನ್ನಭಿನಯಿಸುತ್ತಾರೆ. ತಂದೆಯು ಕಲ್ಪ-ಕಲ್ಪವೂ ಬರಬೇಕಾಗುತ್ತದೆ, ಈ
ಪಾತ್ರವಂತೂ ಎಂದೂ ನಿಂತು ಹೋಗುವುದಿಲ್ಲ. ಮಕ್ಕಳಿಗೆ ಬಹಳ ಖುಷಿಯಿರಬೇಕು - ಎಷ್ಟು ಸತ್ಸಂಗ
ಮಾಡುವಿರೋ ಅಷ್ಟು ಖುಷಿಯಿರುವುದು. ಕಡಿಮೆ ನೆನಪು ಮಾಡುವ ಕಾರಣವೇ ಅಷ್ಟು ಖುಷಿಯಿರುವುದಿಲ್ಲ.
ತಂದೆಯು ಮಕ್ಕಳಿಗೆ ಸಂಪತ್ತನ್ನು ಕೊಡುತ್ತಾರೆ. ಸತ್ಯ ಹೃದಯದ ಮಕ್ಕಳ ಮೇಲೆ ತಂದೆಗೆ ಬಹಳ
ಪ್ರೀತಿಯಿರುತ್ತದೆ. ಸತ್ಯ ಹೃದಯದವರ ಮೇಲೆ ಪ್ರಭು ಪ್ರಸನ್ನರಾಗಿರುತ್ತಾರೆ. ಯಾವ ಮಕ್ಕಳು
ಒಳಗೂ-ಹೊರಗೂ ಸತ್ಯವಾಗಿರುತ್ತಾರೆ, ತಂದೆಗೆ ಸಹಯೋಗಿಗಳಾಗುತ್ತಾರೆ, ಸೇವೆಯಲ್ಲಿ
ತತ್ಫರರಾಗಿರುತ್ತಾರೆಯೋ ಅವರೇ ತಂದೆಗೆ ಪ್ರಿಯರಾಗುತ್ತಾರೆ. ಅಂದಮೇಲೆ ತಮ್ಮ ಹೃದಯವನ್ನು
ಕೇಳಿಕೊಳ್ಳಬೇಕು - ನಾವು ಸತ್ಯ-ಸತ್ಯವಾದ ಸೇವೆ ಮಾಡುತ್ತೇವೆಯೇ? ಸತ್ಯ ತಂದೆಯ ಜೊತೆ ಸಂಗವನ್ನು
ಇಡುತ್ತೇವೆಯೇ? ಒಂದುವೇಳೆ ಸತ್ಯ ತಂದೆಯ ಜೊತೆ ಸಂಗವನ್ನು ಇಡಲಿಲ್ಲವೆಂದರೆ ಯಾವ ಗತಿಯಾಗಬಹುದು?
ಅನೇಕರಿಗೆ ಮಾರ್ಗವನ್ನು ತಿಳಿಸುತ್ತಿದ್ದರೆ ಶ್ರೇಷ್ಠ ಪದವಿಯನ್ನೂ ಪಡೆಯುತ್ತೀರಿ. ಸತ್ಯ ತಂದೆಯಿಂದ
ನಾವು ಯಾವ ಆಸ್ತಿಯನ್ನು ಪಡೆದಿದ್ದೇವೆಂದು ತಮ್ಮೊಳಗೆ ಕೇಳಿಕೊಳ್ಳಬೇಕಾಗಿದೆ. ಇದಂತೂ ತಿಳಿದಿದೆ,
ಎಲ್ಲರೂ ನಂಬರ್ವಾರ್ ಇದ್ದಾರೆ. ಕೆಲಕೆಲವರು ಕೆಲವಷ್ಟು ಆಸ್ತಿಯನ್ನು ಪಡೆಯುತ್ತಾರೆ,
ರಾತ್ರಿ-ಹಗಲಿನ ಅಂತರವಿರುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನಿಮಗೆ ಈ
ದೇಹದ ಯಾವ ಸಂಗವು ಸಿಕ್ಕಿದೆ, ಈ ಸಂಗದಿಂದ ಉಪರಾಂ ಆಗಿರಬೇಕು. ಸತ್ಯ ತಂದೆಯ ಸಂಗದಿಂದ
ಪಾವನರಾಗಬೇಕಾಗಿದೆ.
2. ಈ ವಿದ್ಯಾರ್ಥಿ ಜೀವನದಲ್ಲಿ ನಡೆದಾಡುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ಜ್ಞಾನವು
ತಿರುಗುತ್ತಿರಲಿ, ಗುರಿ-ಧ್ಯೇಯವನ್ನು ಸನ್ಮುಖದಲ್ಲಿಟ್ಟುಕೊಂಡು ಪುರುಷಾರ್ಥ ಮಾಡಬೇಕು, ಸತ್ಯ
ಹೃದಯದಿಂದ ತಂದೆಗೆ ಸಹಯೋಗಿಗಳಾಗಬೇಕಾಗಿದೆ.
ವರದಾನ:
ಗೋಲ್ಡನ್ ಏಜ್ಡ್
ಸ್ವಭಾವದ ಮೂಲಕ ಗೋಲ್ಡನ್ ಏಜ್ಡ್ ಸೇವೆ ಮಾಡುವಂತಹ ಶ್ರೇಷ್ಠ ಪುರುಷಾರ್ಥಿ ಭವ.
ಯಾವ ಮಕ್ಕಳ ಸ್ವಭಾವದಲ್ಲಿ
ಈಷ್ರ್ಯೆ, ಸಿದ್ಧ ಮತ್ತು ಜಿದ್ಧು ಮಾಡುವ ಭಾವದ ಅಥವಾ ಯಾವುದೇ ಹಳೆಯ ಸಂಸ್ಕಾರದ ಅಲಾಯ್ ಮಿಕ್ಸ್
ಆಗಿರಲ್ಲ ಅವರಾಗಿದ್ದಾರೆ ಗೋಲ್ಡನ್ ಏಜ್ಡ್ ಸ್ವಭಾವದವರು. ಇಂತಹ ಗೋಲ್ಡನ್ ಏಜ್ಡ್ ಸ್ವಭಾವ ಮತ್ತು
ಸದಾ ಹಾಂ! ಜೀ ಯ ಸಂಸ್ಕಾರ ಮಾಡಿಕೊಳ್ಳುವಂತಹವರು ಶ್ರೇಷ್ಠ ಪುರುಷಾರ್ಥಿ ಮಕ್ಕಳು ಎಂತಹ ಸಮಯ, ಎಂತಹ
ಸೇವೆ ಹಾಗೆ ಸ್ವಯಂ ಅನ್ನು ಮೋಲ್ಡ್ ಮಾಡಿಕೊಂಡು ರಿಯಲ್ ಗೋಲ್ಡ್ ಆಗಿ ಬಿಡುತ್ತಾರೆ. ಸೇವೆಯಲ್ಲಿಯೂ
ಸಹ ಅಭಿಮಾನ ಅಥವಾ ಅಪಮಾನದ ಅಲಾಯ್ ಮಿಕ್ಸ್ ಆಗಿರಬಾರದು, ಆಗ ಹೇಳಲಾಗುವುದು ಗೋಲ್ಡನ್ ಏಜ್ಡ್ ಸೇವೆ
ಮಾಡುವಂತಹವರು.
ಸ್ಲೋಗನ್:
ಏಕೆ? ಏನು? ಎನ್ನುವ
ಪ್ರಶ್ನೆಗಳನ್ನು ಸಮಾಪ್ತಿ ಮಾಡಿ ಸದಾ ಪ್ರಸನ್ನಚಿತ್ತರಾಗಿರಿ.