26.02.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಆತ್ಮಾಭಿಮಾನಿಗಳಾಗಿ ತಂದೆಯನ್ನು ನೆನಪು ಮಾಡಿ ಎಂದು ಶ್ರೀಮತವು ನಿಮಗೆ ಸಿಕ್ಕಿದೆ, ಯಾವುದೇ
ಮಾತಿನಲ್ಲಿ ನೀವು ವಾದ-ವಿವಾದ ಮಾಡಬಾರದು”
ಪ್ರಶ್ನೆ:
ಬುದ್ಧಿಯೋಗವು
ಸ್ವಚ್ಛವಾಗಿ ತಂದೆಯ ಜೊತೆ ಜೋಡಣೆಯಾಗಬೇಕು - ಅದಕ್ಕಾಗಿ ಯಾವ ಯುಕ್ತಿಯನ್ನು ರಚಿಸಲಾಗಿದೆ?
ಉತ್ತರ:
7 ದಿನಗಳ ಭಟ್ಟಿ. ಯಾರೇ ಹೊಸಬರು ಬರುತ್ತಾರೆಂದರೆ ಅವರಿಗೆ 7 ದಿನದ ಭಟ್ಟಿಯಲ್ಲಿ ಕುಳ್ಳ್ಳಿರಿಸಿ.
ಇದರಿಂದ ಬುದ್ಧಿಯ ಕೊಳಕೆಲ್ಲವೂ ಹೋಗುತ್ತದೆ ಮತ್ತು ಗುಪ್ತ ತಂದೆ, ಗುಪ್ತ ವಿದ್ಯೆ ಮತ್ತು ಗುಪ್ತ
ಆಸ್ತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಂದುವೇಳೆ ಹಾಗೆಯೇ ಕುಳಿತುಕೊಂಡರೆ
ತಬ್ಬಿಬ್ಬಾಗಿ ಬಿಡುತ್ತಾರೆ. ಸ್ವಲ್ಪವೂ ತಿಳಿದುಕೊಳ್ಳುವುದಿಲ್ಲ.
ಗೀತೆ:
ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ............
ಓಂ ಶಾಂತಿ.
ಮಕ್ಕಳನ್ನು ಜ್ಞಾನಿ ಆತ್ಮಗಳನ್ನಾಗಿ ಮಾಡಲು ಇಂತಹ ಗೀತೆಗಳನ್ನು ಕೇಳಿ ನಂತರ ಅದರ ಅರ್ಥವನ್ನು
ತಿಳಿಸಬೇಕು. ಆಗ ಇವರು ಎಷ್ಟರ ಮಟ್ಟಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ಬುದ್ಧಿಯಲ್ಲಿದೆ
ಎಂಬುದು ತಿಳಿದು ಬರುತ್ತದೆ. ನೀವು ಮಕ್ಕಳ ಬುದ್ಧಿಯಲ್ಲಿ ಮೇಲಿನಿಂದ ಹಿಡಿದು ಮೂಲವತನ,
ಸೂಕ್ಷ್ಮವತನ, ಸ್ಥೂಲ ವತನದ ಆದಿ-ಮಧ್ಯ-ಅಂತ್ಯದ ಎಲ್ಲಾ ರಹಸ್ಯವು ತಮ್ಮಲ್ಲಿ ಹೊಳೆಯುತ್ತಾ ಇದೆ.
ತಂದೆಯ ಬಳಿಯೂ ಸಹ ಈ ಜ್ಞಾನವಿದೆ ಅದನ್ನೇ ತಮಗೆ ತಿಳಿಸುತ್ತಾರೆ. ಇದು ಸಂಪೂರ್ಣ ಹೊಸ ಜ್ಞಾನವಾಗಿದೆ.
ಭಲೆ ಶಾಸ್ತ್ರ ಮುಂತಾದವುಗಳಲ್ಲಿ ಹೆಸರಿದೆ ಆದರೆ ಆ ಹೆಸರನ್ನು ತೆಗೆದುಕೊಳ್ಳುವುದರಿಂದ ವಾದ ಮಾಡಲು
ಪ್ರಾರಂಭಿಸುತ್ತಾರೆ. ಇಲ್ಲಿ ಸಂಪೂರ್ಣ ಸರಳ ರೀತಿಯಿಂದ ತಿಳಿಸಲಾಗುತ್ತದೆ. ಭಗವಾನುವಾಚ - ನನ್ನನ್ನು
ನೆನಪು ಮಾಡಿರಿ, ನಾನೇ ಪತಿತ-ಪಾವನನಾಗಿದ್ದೇನೆ. ಎಂದೂ ಸಹ ಬ್ರಹ್ಮಾ-ವಿಷ್ಣು-ಶಂಕರ ಮುಂತಾದವರನ್ನು
ಪತಿತ-ಪಾವನ ಎಂದು ಹೇಳುವುದಿಲ್ಲ. ಸೂಕ್ಷ್ಮವತನವಾಸಿಗಳನ್ನೂ ಸಹ ನೀವು ಪತಿತ-ಪಾವನನೆಂದು
ಹೇಳುವುದಿಲ್ಲ ಅಂದಾಗ ಸ್ಥೂಲವತನದ ಮನುಷ್ಯರು ಪತಿತ-ಪಾವನನಾಗಲು ಹೇಗೆ ಸಾಧ್ಯ. ಈ ಜ್ಞಾನವೂ ಸಹ
ನಿಮ್ಮ ಬುದ್ಧಿಯಲ್ಲಿದೆ. ಶಾಸ್ತ್ರಗಳ ಬಗ್ಗೆ ಹೆಚ್ಚು ವಾದ ಮಾಡುವುದು ಸರಿಯಲ್ಲ. ಬಹಳಷ್ಟು
ವಾದ-ವಿವಾದವಾಗುತ್ತದೆ, ಪರಸ್ಪರ ಒಬ್ಬರಿಗೊಬ್ಬರು ಹೊಡೆದಾಡಲು ಪ್ರಾರಂಭಿಸುತ್ತಾರೆ, ಇಲ್ಲಿ ನಿಮಗೆ
ಬಹಳ ಸಹಜವಾಗಿ ತಿಳಿಸಿಕೊಡಲಾಗುತ್ತದೆ. ಶಾಸ್ತ್ರದ ಮಾತುಗಳಲ್ಲಿ ಅತಿಯಾಗಿ ಹೋಗಬಾರದು.
ಆತ್ಮಾಭಿಮಾನಿಯಾಗುವುದೇ ಮೂಲ ಮಾತಾಗಿದೆ. ತನ್ನನ್ನು ಆತ್ಮನೆಂದು ತಿಳಿಯಬೇಕು ಮತ್ತು ತಂದೆಯನ್ನು
ನೆನಪು ಮಾಡಬೇಕು - ಇದು ಮುಖ್ಯವಾದ ಶ್ರೀಮತವಾಗಿದೆ, ಉಳಿದದ್ದು ವಿಸ್ತಾರವಾಗಿದೆ. ಬೀಜ ಎಷ್ಟು
ಚಿಕ್ಕದಾಗಿದೆ, ವೃಕ್ಷದ ವಿಸ್ತಾರ ಎಷ್ಟು ದೊಡ್ಡದಿರುತ್ತದೆ. ಹೇಗೆ ಬೀಜದಲ್ಲಿ ಎಲ್ಲಾ ಜ್ಞಾನವು
ಸಮಾವೇಶವಾಗಿದೆ ಹಾಗೆಯೇ ಈ ಎಲ್ಲಾ ಜ್ಞಾನವು ಬೀಜದಲ್ಲಿ ಅಡಕವಾಗಿದೆ. ನೀವು ಮಕ್ಕಳ ಬುದ್ಧಿಯಲ್ಲಿ
ಬೀಜ ಮತ್ತು ವೃಕ್ಷವು ಬಂದಿದೆ. ನೀವು ಯಾವ ರೀತಿ ತಿಳಿದುಕೊಳ್ಳುತ್ತೀರೋ ಹಾಗೆಯೇ ಮತ್ತ್ಯಾರೂ
ತಿಳಿದುಕೊಳ್ಳಲು ಸಾಧ್ಯವಿಲ್ಲ. ವೃಕ್ಷದ ಆಯಸ್ಸನ್ನು ತುಂಬಾ ಧೀರ್ಘವಾಗಿ ತೋರಿಸಿದ್ದಾರೆ. ತಂದೆಯು
ಕುಳಿತು ವೃಕ್ಷ ಮತ್ತು ಡ್ರಾಮಾದ ರಹಸ್ಯವನ್ನು ತಿಳಿಸುತ್ತಾರೆ. ನೀವು ಸ್ವದರ್ಶನ
ಚಕ್ರಧಾರಿಗಳಾಗಿದ್ದೀರಿ. ಒಂದುವೇಳೆ ಯಾರಾದರೂ ಹೊಸಬರು ಬಂದರೆ ತಿಳಿದುಕೊಳ್ಳುವುದಿಲ್ಲ. ಯಾರಾದರೂ
ಹೊಸಬರು ಬಂದಾಗ ಅವರನ್ನು ತಂದೆಯು ಸ್ವದರ್ಶನ ಚಕ್ರಧಾರಿ ಮಕ್ಕಳೇ ಎಂದು ಮಹಿಮೆ ಮಾಡಿದರೆ ಅವರಿಗೆ
ಏನೂ ಸಹ ತಿಳಿಯುವುದಿಲ್ಲ. ಏಕೆಂದರೆ ಅವರು ತನ್ನನ್ನು ಮಗುವೆಂದು ತಿಳಿದುಕೊಂಡಿರುವುದಿಲ್ಲ. ಈ
ತಂದೆಯೂ ಸಹ ಗುಪ್ತವಾಗಿದ್ದಾರೆ, ಜ್ಞಾನವೂ ಸಹ ಗುಪ್ತವಾಗಿದೆ, ಆಸ್ತಿಯೂ ಸಹ ಗುಪ್ತವಾಗಿದೆ. ಹೊಸಬರು
ಯಾರಾದರೂ ಕೇಳಿ ತಬ್ಬಿಬ್ಬಾಗಿ ಬಿಡುತ್ತಾರೆ. ಆದ್ದರಿಂದ 7 ದಿನಗಳ ಭಟ್ಟಿಯಲ್ಲಿ
ಕುಳ್ಳರಿಸಲಾಗುತ್ತದೆ. ಹೇಗೆ 7 ದಿನ ಭಾಗವತ ಅಥವಾ ರಾಮಾಯಣ ಮುಂತಾದುದನ್ನು ಓದುತ್ತಾರೆ,
ವಾಸ್ತವದಲ್ಲಿ ಈ ಸಮಯದಲ್ಲಿ 7 ದಿನಗಳ ಕಾಲ ಭಟ್ಟಿಯಲ್ಲಿ ಕುಳ್ಳರಿಸಲಾಗುತ್ತದೆ ಅಂದಾಗ ಬುದ್ಧಿಯಲ್ಲಿ
ಏನೆಲ್ಲಾ ಕೊಳಕಿದೆಯೋ ಅದು ಹೊರಟು ಹೋಗುತ್ತದೆ ಮತ್ತು ತಂದೆಯೊಂದಿಗೆ ಬುದ್ಧಿಯೋಗ ಜೋಡಣೆಯಾಗುತ್ತದೆ.
ಇಲ್ಲಿ ಎಲ್ಲರೂ ರೋಗಿಗಳಾಗಿದ್ದಾರೆ, ಸತ್ಯಯುಗದಲ್ಲಿ ಈ ರೋಗಗಳಿರುವುದಿಲ್ಲ, ಇದು ಅರ್ಧಕಲ್ಪದ
ರೋಗವಾಗಿದೆ. 5 ವಿಕಾರಗಳ ರೋಗ ಬಹಳ ಹೆಚ್ಚಾಗಿದೆ. ಅಲ್ಲಿಯಾದರೂ ದೇಹೀ-ಅಭಿಮಾನಿಗಳಿರುತ್ತಾರೆ.
ನಾನಾತ್ಮ ಒಂದು ಶರೀರ ಬಿಟ್ಟು ಮತ್ತೊಂದು ಶರೀರವನ್ನು ತೆಗೆದುಕೊಳ್ಳುತ್ತೇನೆ ಎಂಬುದೂ
ತಿಳಿದಿರುತ್ತದೆ. ಮೊದಲೇ ಸಾಕ್ಷಾತ್ಕಾರವಾಗುತ್ತದೆ. ಎಂದೂ ಅಕಾಲಮೃತ್ಯುವಾಗುವುದಿಲ್ಲ. ನಿಮಗೆ
ಕಾಲದ ಮೇಲೆ ಜಯವನ್ನು ಪ್ರಾಪ್ತಿ ಮಾಡಿಸಲಾಗುತ್ತದೆ. ಕಾಲರ ಕಾಲ ಮಹಾಕಾಲನೆಂದು ಹೇಳಲಾಗುತ್ತದೆ.
ಮಹಾಕಾಲನ ಮಂದಿರವೂ ಇದೆ. ಸಿಖ್ಖರ ಅಕಾಲಸಿಂಹಾಸನವೂ ಇದೆ. ವಾಸ್ತವದಲ್ಲಿ ಅಕಾಲ ಸಿಂಹಾಸನವು ಈ
ಭೃಕುಟಿಯಾಗಿದೆ, ಇಲ್ಲಿ ಆತ್ಮವು ವಿರಾಜಮಾನವಾಗುತ್ತದೆ. ಎಲ್ಲಾ ಆತ್ಮಗಳು ಈ ಅಕಾಲ ಸಿಂಹಾಸನದ ಮೇಲೆ
ಕುಳಿತಿದ್ದಾರೆ. ಇದನ್ನು ತಂದೆಯು ತಿಳಿಸುತ್ತಾರೆ. ತಂದೆಗೆ ತಮ್ಮ ಸಿಂಹಾಸನವಂತೂ ಇಲ್ಲ, ಅವರು ಬಂದು
ಈ ಬ್ರಹ್ಮಾರವರ ಸಿಂಹಾಸನವನ್ನು ಆಧಾರವಾಗಿ ತೆಗೆದುಕೊಳ್ಳುತ್ತಾರೆ. ಈ ಸಿಂಹಾಸನದ ಮೇಲೆ ಕುಳಿತು
ಮಕ್ಕಳನ್ನು ಮಯೂರ ಸಿಂಹಾಸನಾಧಿಕಾರಿಗಳನ್ನಾಗಿ ಮಾಡುತ್ತಾರೆ. ಆ ಮಯೂರ ಸಿಂಹಾಸನವು ಹೇಗಿರುತ್ತದೆ,
ಅದರ ಮೇಲೆ ಲಕ್ಷ್ಮಿ-ನಾರಾಯಣರು ವಿರಾಜಮಾನರಾಗಿರುತ್ತಾರೆಂದು ತಿಳಿದುಕೊಂಡಿರುತ್ತೀರಿ. ಮಯೂರ
ಸಿಂಹಾಸನವೆಂದು ಗಾಯನವಿದೆಯಲ್ಲವೆ.
ವಿಚಾರ ಮಾಡಬೇಕು - ತಂದೆಯನ್ನು ಭೋಲಾನಾಥ ಭಗವಂತನೆಂದು ಏಕೆ ಹೇಳಲಾಗುತ್ತದೆ? ಭೋಲಾನಾಥ ಭಗವಂತನೆಂದು
ಹೇಳಿದಾಗ ಬುದ್ಧಿಯು ಮೇಲೆ ಹೋಗುತ್ತದೆ. ಸಾಧು-ಸಂತ ಮೊದಲಾದವರು ಅವರನ್ನು ನೆನಪು ಮಾಡಿ ಎಂದು ತಮ್ಮ
ಬೆರಳನ್ನು ಮೇಲೆ ತೋರಿಸುತ್ತಾರೆ. ಯಥಾರ್ಥ ರೀತಿಯಲ್ಲಿ ಯಾರೂ ಅರಿತುಕೊಂಡಿಲ್ಲ. ಈಗ ಪತಿತ-ಪಾವನ
ತಂದೆಯು ಸನ್ಮುಖದಲ್ಲಿ ಬಂದು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಆಗ ವಿಕರ್ಮಗಳು
ವಿನಾಶವಾಗುತ್ತವೆ, ಇದು ಗ್ಯಾರಂಟಿಯಿದೆ. ಗೀತೆಯಲ್ಲಿಯೂ ಬರೆಯಲ್ಪಟ್ಟಿದೆ. ಆದರೆ ನೀವು ಗೀತೆಯ ಒಂದು
ಉದಾಹರಣೆಯನ್ನು ತೆಗೆದರೆ ಅವರು 10 ತೆಗೆಯುತ್ತಾರೆ ಆದ್ದರಿಂದ ಅವಶ್ಯಕತೆಯಿಲ್ಲ. ಯಾರು ಶಾಸ್ತ್ರ
ಮೊದಲಾದುವುಗಳನ್ನು ಓದಿದ್ದಾರೆಯೋ ನಾವು ವಾದಮಾಡಬಲ್ಲೆವೆಂದು ತಿಳಿಯುತ್ತಾರೆ. ನೀವು ಮಕ್ಕಳು ಯಾರು
ಈ ಶಾಸ್ತ್ರ ಮೊದಲಾದುವುಗಳನ್ನು ತಿಳಿದುಕೊಂಡೇ ಇಲ್ಲವೋ ಅಂತಹವರು ಅದರ ಹೆಸರನ್ನೂ ಸಹ ಎಂದೂ
ತೆಗೆದುಕೊಳ್ಳಬಾರದು. ಕೇವಲ ತಿಳಿಸಿ ಭಗವಂತನು ಹೇಳುತ್ತಾರೆ, ನನ್ನನ್ನು ನೆನಪು ಮಾಡಿ ಎಂದು,
ಅವರನ್ನೇ ಪತಿತ-ಪಾವನನೆಂದು ಕರೆಯಲಾಗುತ್ತದೆ. ಪತಿತ-ಪಾವನ ಸೀತಾರಾಮ ಎಂದು ಹಾಡುತ್ತಾರೆ.
ಸನ್ಯಾಸಿಗಳೂ ಸಹ ಎಲ್ಲಿ ನೋಡಿದರಲ್ಲಿ ಅದನ್ನೇ ಹಾಡುತ್ತಾ ಮಗ್ನರಾಗುತ್ತಾರೆ. ಇಂತಹ
ಮತ-ಮತಾಂತರಗಳಂತೂ ಬಹಳಷ್ಟಿವೆಯಲ್ಲವೆ. ಈ ಗೀತೆಗಳು ಎಷ್ಟು ಸುಂದರವಾಗಿದೆ, ನಾಟಕದ ಯೋಜನೆಯನುಸಾರ
ಕಲ್ಪ-ಕಲ್ಪವೂ ಇಂತಹ ಗೀತೆಗಳು ರಚನೆಯಾಗುತ್ತದೆ, ಇವು ನೀವು ಮಕ್ಕಳಿಗಾಗಿಯೇ ಮಾಡಲ್ಪಟ್ಟಿವೆ. ಹೀಗೆ
ಬಹಳ ಒಳ್ಳೊಳ್ಳೆಯ ಗೀತೆಗಳಿವೆ. ಹೇಗೆ ಉದಾಹರಣೆಗೆ ನಯನಹೀನನಿಗೆ ಮಾರ್ಗ ತೋರಿಸು ಪ್ರಭು, ಕೃಷ್ಣನಿಗೆ
ಯಾರೂ ಸಹ ಪ್ರಭು ಎಂದು ಹೇಳುವುದಿಲ್ಲ, ಪ್ರಭು ಅಥವಾ ಈಶ್ವರನೆಂದು ನಿರಾಕಾರನಿಗೆ ಹೇಳುತ್ತಾರೆ.
ಇಲ್ಲಿ ನೀವು ಹೇಳುತ್ತೀರಿ - ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆಂದು ಅಂದರೆ ಅವರೂ ಆತ್ಮನೇ
ಆಗಿದ್ದಾರಲ್ಲವೆ. ಭಕ್ತಿಮಾರ್ಗದಲ್ಲಿ ಬಹಳ ವಿಸ್ತಾರದಲ್ಲಿ ಹೋಗಿದ್ದಾರೆ. ಇಲ್ಲಂತೂ ಬಹಳ ಸಹಜ
ಮಾತಾಗಿದೆ. ತಂದೆ ಮತ್ತು ಆಸ್ತಿ. ತಂದೆ ಮತ್ತು ಆಸ್ತಿ ಎಷ್ಟು ಸಹಜ ಮಾತಾಗಿದೆ. ತಂದೆಯನ್ನು ನೆನಪು
ಮಾಡಿದರೆ ನೀವು ಸ್ವರ್ಗದ ಮಾಲೀಕರಾಗುವಿರಿ, ಅವಶ್ಯವಾಗಿ ಈ ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರು,
ಸಂಪೂರ್ಣ ನಿರ್ವಿಕಾರಿಗಳಾಗಿದ್ದರು ಅಂದಮೇಲೆ ತಂದೆಯನ್ನು ನೆನಪು ಮಾಡುವುದರಿಂದಲೇ ನೀವು ಈ ರೀತಿ
ಸಂಪೂರ್ಣರಾಗುತ್ತೀರಿ. ಯಾರೆಷ್ಟು ನೆನಪು ಮಾಡುತ್ತಾರೆ ಮತ್ತು ಸೇವೆ ಮಾಡುತ್ತಾರೆಯೋ ಅಷ್ಟು
ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ, ಅದರ ಅರ್ಥವೂ ಆಗುತ್ತದೆ. ಶಾಲೆಯಲ್ಲಿ ನಾನು ಎಷ್ಟು
ಓದುತ್ತೇನೆ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವುದಿಲ್ಲವೆ! ಯಾರು ಪೂರ್ಣ
ಗಮನವನ್ನಿಡುವುದಿಲ್ಲವೋ ಅವರು ಕೊನೆಯಲ್ಲಿ ಕುಳಿತುಕೊಂಡಿರುತ್ತಾರೆ ಅಂದಾಗ ಅವರು ಅವಶ್ಯವಾಗಿ
ಅನುತ್ತೀರ್ಣರಾಗುತ್ತಾರೆ.
ತಮ್ಮನ್ನು ತಾವು ರಿಫ್ರೆಷ್ ಮಾಡಿಕೊಳ್ಳಲು ಜ್ಞಾನದ ಯಾವ ಒಳ್ಳೊಳ್ಳೆಯ ಗೀತೆಗಳಿವೆಯೋ ಅವನ್ನು
ಕೇಳುತ್ತಿರಬೇಕು. ಇಂತಹ ಗೀತೆಗಳನ್ನು ತಮ್ಮ ಮನೆಯಲ್ಲಿಟ್ಟುಕೊಂಡಿರಬೇಕು. ಯಾರಿಗಾದರೂ ಇದರ ಮೇಲೆ
ತಿಳಿಸಿಕೊಡಲೂಬಹುದು. ಹೇಗೆ ಮಾಯೆಯ ನೆರಳು ಪುನಃ ಬೀಳುತ್ತದೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು
5000 ವರ್ಷಗಳೆಂಬ ಮಾತು ಇಲ್ಲವೇ ಇಲ್ಲ. ಬ್ರಹ್ಮನ ದಿನ ಮತ್ತು ಬ್ರಹ್ಮನ ರಾತ್ರಿ ಅರ್ಧ-ಅರ್ಧವಾಗಿದೆ.
ಈ ಗೀತೆಯನ್ನೂ ಸಹ ಯಾರೋ ಮಾಡಿಸಿದ್ದಾರೆ ತಂದೆಯು ಬುದ್ಧಿವಂತರಿಗೂ ಬುದ್ಧಿವಂತನಾಗಿದ್ದಾರೆ, ಯಾರ
ಬುದ್ಧಿಯಲ್ಲಿ ಬಂದಿತೋ ಅದನ್ನು ಕುಳಿತು ಮಾಡಿಸಿದ್ದಾರೆ. ಈ ಗೀತೆಗಳು ಹಾಡುವಾಗಲೂ ಸಹ ನಿಮ್ಮಲ್ಲಿ
ಅನೇಕರು ಧ್ಯಾನದಲ್ಲಿ ಹೊರಟು ಹೋಗುತ್ತಿದ್ದರು. ಇಂತಹ ಒಂದು ದಿನವು ಬರುತ್ತದೆ, ಈ ಜ್ಞಾನದ
ಗೀತೆಗಳನ್ನು ಹಾಡುವವರೂ ಸಹ ನಿಮ್ಮ ಬಳಿ ಬರುತ್ತಾರೆ. ತಂದೆಯ ಮಹಿಮೆಯಲ್ಲಿ ಇಂತಹ ಗೀತೆಯನ್ನು
ಹಾಡುತ್ತಾರೆ, ಅದರಿಂದ ಎಲ್ಲರಲ್ಲಿ ತಂದೆಯ ಮುದ್ರೆಯನ್ನು ಹಾಕಿ ಬಿಡುತ್ತಾರೆ, ಅಂತಹವರು ಕೊನೆಗೆ
ಬರುತ್ತಾರೆ. ಸಂಗೀತದ ಮೇಲೆ ಅವಲಂಭಿತವಾಗಿದೆ. ಗಾಯನ ವಿದ್ಯೆಗೂ ಬಹಳ ಹೆಸರಿದೆ, ಈಗಂತೂ ಅಂತಹವರು
ಯಾರೂ ಇಲ್ಲ. ಎಷ್ಟು ಮಧುರ, ಎಷ್ಟು ಪ್ರಿಯ ಎಂದು ಕೇವಲ ಒಂದು ಗೀತೆಯನ್ನು ರಚಿಸಿದ್ದರು. ತಂದೆಯಂತೂ
ಬಹಳ ಮಧುರ, ಬಹಳ ಪ್ರಿಯರಾಗಿದ್ದಾರೆ. ಆದ್ದರಿಂದಲೇ ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ.
ದೇವತೆಗಳು ಅವರನ್ನು ನೆನಪು ಮಾಡುತ್ತಾರೆಂದಲ್ಲ. ಚಿತ್ರಗಳಲ್ಲಿ ರಾಮನ ಮುಂದೆ ಶಿವಲಿಂಗವನ್ನಿಟ್ಟು
ರಾಮನು ಪೂಜೆ ಮಾಡುತ್ತಿರುವುದನ್ನು ತೋರಿಸಿದ್ದಾರೆ, ಇದು ತಪ್ಪಾಗಿದೆ. ದೇವತೆಗಳು ಯಾರನ್ನಾದರೂ
ನೆನಪು ಮಾಡುತ್ತಾರೆಯೇ? ಮನುಷ್ಯರೇ ನೆನಪು ಮಾಡುತ್ತಾರೆ. ನೀವೂ ಸಹ ಈಗ ಮನುಷ್ಯರಾಗಿದ್ದೀರಿ ಮತ್ತೆ
ದೇವತೆಗಳಾಗುತ್ತೀರಿ. ದೇವತೆಗಳು ಮತ್ತು ಮನುಷ್ಯರಲ್ಲಿ ರಾತ್ರಿ-ಹಗಲಿನ ಅಂತರವಿದೆ. ಅದೇ ದೇವತೆಗಳು
ನಂತರ ಮನುಷ್ಯರಾಗುತ್ತಾರೆ. ಹೇಗೆ ಚಕ್ರವು ಸುತ್ತುತ್ತಾ ಇರುತ್ತದೆ, ಇದು ಯಾರಿಗೂ ತಿಳಿದಿಲ್ಲ.
ನಾವೇ ಸತ್ಯವಾಗಿ ದೇವತೆಗಳಾಗುತ್ತೇವೆ, ಈಗ ನಾವು ಬ್ರಾಹ್ಮಣರಾಗಿದ್ದೇವೆ, ಹೊಸಪ್ರಪಂಚದಲ್ಲಿ
ದೇವತೆಗಳೆಂದು ಕರೆಸಿಕೊಳ್ಳುತ್ತೇವೆಂದು ನಿಮಗೆ ಈಗಲೇ ಅರ್ಥವಾಗಿದೆ. ಈಗ ನೀವು
ಆಶ್ಚರ್ಯಚಕಿತರಾಗುತ್ತೀರಿ. ಈ ಬ್ರಹ್ಮಾ ಸ್ವತಃ ತಾವೇ ಈ ಜನ್ಮದಲ್ಲಿ ಮೊದಲು ಪೂಜಾರಿಯಾಗಿದ್ದರು,
ಶ್ರೀನಾರಾಯಣನ ಮಹಿಮೆ ಮಾಡುತ್ತಿದ್ದರು, ನಾರಾಯಣನೊಂದಿಗೆ ಬಹಳ ಪ್ರೀತಿಯಿತ್ತು ಆದರೆ ಈಗ ನಾವೇ ಆ
ರೀತಿಯಾಗುತ್ತಿದ್ದೇವೆ ಎಂದು ಆಶ್ಚರ್ಯವಾಗುತ್ತದೆ ಅಂದಾಗ ಎಷ್ಟೊಂದು ಖುಷಿಯ ನಶೆಯೇರಿರಬೇಕು. ನೀವು
ಗುಪ್ತ ಸೈನಿಕರಾಗಿದ್ದೀರಿ, ಅಹಿಂಸಕರಾಗಿದ್ದೀರಿ. ನೀವು ನಿಜವಾಗಿಯೂ ಡಬಲ್ ಅಹಿಂಸಕರಾಗಿದ್ದೀರಿ,
ಕಾಮ ಕಟಾರಿಯೂ ಇಲ್ಲ, ಸ್ಥೂಲ ಯುದ್ಧವೂ ಇಲ್ಲ. ಕಾಮವು ಬೇರೆಯಾಗಿದೆ, ಕ್ರೋಧವೇ ಬೇರೆಯಾಗಿದೆ ಅಂದಾಗ
ನೀವು ಡಬಲ್ ಅಹಿಂಸಕರಾಗಿದ್ದೀರಿ. ಸೈನ್ಯ ಎಂಬ ಶಬ್ಧದಿಂದ ಅವರು ಸ್ಥೂಲ ಸೈನ್ಯವನ್ನು ನಿಲ್ಲಿಸಿ
ಬಿಟ್ಟಿದ್ದಾರೆ. ಮಹಾಭಾರತ ಯುದ್ಧದಲ್ಲಿ ಪುರುಷರ ಹೆಸರನ್ನು ತೋರಿಸಿದ್ದಾರೆ, ಸ್ತ್ರೀಯರಿಲ್ಲ.
ವಾಸ್ತವದಲ್ಲಿ ನೀವು ಶಿವಶಕ್ತಿಯರಾಗಿದ್ದೀರಿ. ಸ್ತ್ರೀಯರೇ ಬಹುತೇಕ ಮಂದಿಯಿರುವ ಕಾರಣ ಶಿವಶಕ್ತಿ
ಸೇನೆಯೆಂದು ಕರೆಯಲಾಗುತ್ತದೆ - ಈ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ.
ಈಗ ನೀವು ಮಕ್ಕಳು ನವಯುಗವನ್ನು ನೆನಪು ಮಾಡುತ್ತೀರಿ. ಪ್ರಪಂಚದಲ್ಲಿ ಯಾರಿಗೂ ನವಯುಗದ ಬಗ್ಗೆ
ತಿಳಿದಿಲ್ಲ. ನವಯುಗವು ಇನ್ನೂ 40 ಸಾವಿರ ವರ್ಷಗಳ ನಂತರ ಬರುವುದೆಂದು ತಿಳಿಯುತ್ತಾರೆ. ಸತ್ಯಯುಗವು
ನವಯುಗವಾಗಿದೆ, ಇದು ಬಹಳ ಸ್ಪಷ್ಟವಾಗಿದೆ. ಅಂದಾಗ ತಂದೆಯು ಸಲಹೆ ನೀಡುತ್ತಾರೆ - ಇಂತಿಂತಹ ಒಳ್ಳೆಯ
ಗೀತೆಗಳನ್ನೂ ಸಹ ಕೇಳಿ ರಿಫ್ರೆಷ್ ಆಗುತ್ತಾರೆ ಮತ್ತು ಅನ್ಯರಿಗೂ ತಿಳಿಸುತ್ತಾರೆ - ಇವೆಲ್ಲವೂ
ಯುಕ್ತಿಗಳಾಗಿವೆ, ಇದರ ಅರ್ಥವನ್ನು ಕೇವಲ ನೀವೇ ತಿಳಿದುಕೊಳ್ಳುತ್ತೀರಿ. ತಮ್ಮನ್ನು ರಿಫ್ರೆಷ್
ಮಾಡಿಕೊಳ್ಳಲು ಬಹಳ ಒಳ್ಳೊಳ್ಳೆಯ ಗೀತೆಗಳಿವೆ, ಈ ಗೀತೆಗಳು ಬಹಳ ಸಹಯೋಗ ಕೊಡುತ್ತವೆ, ಇದರ
ಅರ್ಥವನ್ನು ತೆಗೆದಾಗ ಬಾಯಿ ತೆರೆಯಲ್ಪಡುವುದು ಮತ್ತು ಖುಷಿಯೂ ಆಗುವುದು. ಉಳಿದಂತೆ ಯಾರು
ಹೆಚ್ಚಿನದಾಗಿ ಧಾರಣೆ ಮಾಡುವುದಿಲ್ಲವೋ ಅವರಿಗಾಗಿ ತಂದೆಯು ತಿಳಿಸುತ್ತಾರೆ - ಮನೆಯಲ್ಲಿಯೇ ಕುಳಿತು
ತಂದೆಯನ್ನು ನೆನಪು ಮಾಡುತ್ತಾ ಇರಿ, ಗೃಹಸ್ಥ ವ್ಯವಹಾರದಲ್ಲಿರುತ್ತಾ ತಂದೆಯನ್ನು ನೆನಪು ಮಾಡಿ
ಮತ್ತು ಪವಿತ್ರರಾಗಿ ಎಂಬ ಮಹಾಮಂತ್ರವನ್ನು ನೆನಪಿಟ್ಟುಕೊಳ್ಳಿ. ಮೊದಲಿಗೆ ಪುರುಷರೂ ಸಹ ತಮ್ಮ
ಪತ್ನಿಯರಿಗೆ ತಿಳಿಸುತ್ತಿದ್ದರು - ಭಗವಂತನನ್ನು ಮನೆಯಲ್ಲಿಯೂ ನೆನಪು ಮಾಡಬಹುದಾಗಿದೆ. ಅಂದಮೇಲೆ
ಮಂದಿರಗಳಲ್ಲಿ ಅಲೆದಾಡುವ ಅವಶ್ಯಕತೆಯೇನಿದೆ? ನಾವು ನಿಮಗೆ ಮನೆಯಲ್ಲಿಯೇ ತಂದು ಕೊಡುತ್ತೇವೆ,
ಇಲ್ಲಿಯೇ ನೆನಪು ಮಾಡಿ ಅಲೆದಾಡಲು ಏಕೆ ಹೋಗುತ್ತೀರಿ ಎಂದು ಹೇಳಿ ಬಹಳ ಮಂದಿ ಪುರುಷರು
ಸ್ತ್ರೀಯರನ್ನು ಹೋಗಲು ಬಿಡುತ್ತಿರಲಿಲ್ಲ. ವಸ್ತು ಒಂದೇ ಆಗಿದೆ, ಪೂಜೆ ಮಾಡಬೇಕು ಮತ್ತು ನೆನಪು
ಮಾಡಬೇಕಾಗಿದೆ. ಒಂದು ಬಾರಿ ನೋಡಿ ಬಿಟ್ಟರೆ ಮತ್ತೆ ಹಾಗೆಯೇ ನೆನಪು ಮಾಡಬಹುದು. ಮೋರ ಮುಕುಟ
ಕೃಷ್ಣನ ಚಿತ್ರವಂತೂ ಸಾಮಾನ್ಯ ಮಾತಾಗಿದೆ. ಅಲ್ಲಿ ಹೇಗೆ ಜನ್ಮವಾಗುತ್ತದೆ ಎಂಬುದನ್ನು ನೀವು ಮಕ್ಕಳು
ಸಾಕ್ಷಾತ್ಕಾರ ಮಾಡಿದ್ದೀರಿ. ಆದರೆ ನೀವು ಅದರ ಭಾವಚಿತ್ರವನ್ನು ತೆಗೆಯಲು ಸಾಧ್ಯವೇ? ನಿಖರವಾಗಿ
ಯಾರೂ ತೆಗೆಯಲು ಸಾಧ್ಯವಿಲ್ಲ, ಕೇವಲ ದಿವ್ಯದೃಷ್ಟಿಯಿಂದ ನೋಡಬಹುದಾಗಿದೆ ಆದರೆ ಮಾಡಲು ಸಾಧ್ಯವಿಲ್ಲ.
ಹಾ! ನೋಡಿ ವರ್ಣನೆ ಮಾಡಬಹುದು. ಆದರೆ ಅದೇ ರೀತಿಯಾಗಿ ಬಣ್ಣಗಳಿಂದ ಬಿಡಿಸಲು ಸಾಧ್ಯವಿಲ್ಲ. ಭಲೆ
ಬುದ್ಧಿವಂತ ಚಿತ್ರಕಾರನಾಗಿರಲಿ, ಸಾಕ್ಷಾತ್ಕಾರ ಮಾಡಿದರೂ ಸಹ ಅದೇ ತರಹದ ನಿಖರವಾದ ಮುಖ
ಲಕ್ಷಣಗಳನ್ನು ಬರೆಯಲು ಸಾಧ್ಯವಿಲ್ಲ. ತಂದೆಯು ತಿಳಿಸಿದರು - ಯಾರೊಂದಿಗೂ ಹೆಚ್ಚಿನದಾಗಿ
ವಾದ-ವಿವಾದ ಮಾಡಬಾರದಾಗಿದೆ. ತಿಳಿಸಿ, ನಿಮಗೆ ಪಾವನರಾಗುವುದು ನಿಮ್ಮ ಕೆಲಸವಾಗಿದೆ ಮತ್ತು
ಶಾಂತಿಯನ್ನು ಬಯಸುತ್ತೀರೆಂದರೆ ತಂದೆಯನ್ನು ನೆನಪು ಮಾಡಿ ಮತ್ತು ಪವಿತ್ರರಾಗಿ. ಪವಿತ್ರ ಆತ್ಮವು
ಇಲ್ಲಿರಲು ಸಾಧ್ಯವಿಲ್ಲ, ಹಿಂತಿರುಗಿ ಹೊರಟು ಹೋಗುತ್ತದೆ. ಆತ್ಮಗಳನ್ನು ಪಾವನರನ್ನಾಗಿ ಮಾಡುವ
ಶಕ್ತಿಯು ಒಬ್ಬ ತಂದೆಯಲ್ಲಿದೆ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಇದೆಲ್ಲವೂ ಸ್ಟೇಜ್ ಆಗಿದೆ, ಇದರಲ್ಲಿ ನಾಟಕವು ನಡೆಯುತ್ತದೆ. ಈ ಸಮಯದಲ್ಲಿ
ಸಂಪೂರ್ಣ ಸ್ಟೇಜಿನ ಮೇಲೆ ರಾಜ್ಯವಿದೆ. ಇಡೀ ಸಮುದ್ರದಲ್ಲಿ ಸೃಷ್ಟಿಯು ನಿಂತಿದೆ, ಇದು ಬೇಹದ್ದಿನ
ಮಾತಾಗಿದೆ, ಅವು ಹದ್ದಿನ ಮಾತಾಗಿದೆ. ಯಾವುದರಲ್ಲಿ ಅರ್ಧಕಲ್ಪ ದೈವೀರಾಜ್ಯ ಇನ್ನರ್ಧ ಕಲ್ಪ ಆಸುರೀ
ರಾಜ್ಯವಿರುತ್ತದೆ. ಹಾಗೆ ನೋಡಿದರೆ ಖಂಡಗಳು ಬೇರೆ-ಬೇರೆಯಾಗಿದೆ ಆದರೆ ಇದು ಬೇಹದ್ದಿನ ಮಾತಾಗಿದೆ.
ನಿಮಗೆ ತಿಳಿದಿದೆ, ನಾವು ಗಂಗಾ-ಯುಮುನಾ ನದಿಯ ಸಿಹಿ ನೀರಿನ ತೀರದಲ್ಲಿರುತ್ತೇವೆ. ಸಮುದ್ರ ಮೊದಲಾದ
ಕಡೆ ಹೋಗುವ ಅವಶ್ಯಕತೆಯಿಲ್ಲ. ಇಲ್ಲಿ ಯಾವುದಕ್ಕೆ ದ್ವಾರಿಕೆಯೆಂದು ಹೇಳುತ್ತಾರೆ ಅದು ಸಮುದ್ರದ
ನಡುವೆ ಇಲ್ಲ. ದ್ವಾರಿಕಾ ಎಂದು ಯಾವುದೇ ವಸ್ತುವಿಲ್ಲ, ನೀವು ಮಕ್ಕಳು ಸಾಕ್ಷಾತ್ಕಾರದಲ್ಲಿ
ನೋಡಿದ್ದೀರಿ. ಆರಂಭದಲ್ಲಿ ಈ ಸಂದೇಶಿ ಮತ್ತು ಗುಲ್ಜಾರ್ ಬಹಳ ಸಾಕ್ಷಾತ್ಕಾರ ಮಾಡುತ್ತಿದ್ದರು. ಇವರು
ಬಹಳ ದೊಡ್ಡ ಪಾತ್ರವನ್ನಭಿನಯಿಸಿದ್ದಾರೆ. ಏಕೆಂದರೆ ಭಟ್ಟಿಯಲ್ಲಿ ಮಕ್ಕಳನ್ನು ಬಹಳ ಖುಷಿ
ಪಡಿಸಬೇಕಾಗುತ್ತಿತ್ತು, ಅಂದಾಗ ಸಾಕ್ಷಾತ್ಕಾರದಿಂದ ಬಹಳ-ಬಹಳ ಖುಷಿಯ ಅನುಭವ ಮಾಡುತ್ತಾರೆ. ತಂದೆಯು
ತಿಳಿಸುತ್ತಾರೆ - ಹೇಗೆ ಆರಂಭದಲ್ಲಿ ಮಾಡಿದಿರೋ ಹಾಗೆಯೇ ಕೊನೆಯಲ್ಲಿ ಬಹಳಷ್ಟು ಖುಷಿಯಲ್ಲಿರುತ್ತೀರಿ.
ಆ ಪಾತ್ರವೇ ಬೇರೆಯಿದೆ, ನಾವೇನನ್ನು ನೋಡಿದೆವೋ ಅದನ್ನು ನೀವೂ ನೋಡಲಿಲ್ಲವೆಂಬ ಗೀತೆಯಿದೆಯಲ್ಲವೆ.
ನೀವು ಬೇಗ-ಬೇಗನೆ ಸಾಕ್ಷಾತ್ಕಾರ ಮಾಡುತ್ತಿರುತ್ತೀರಿ. ಹೇಗೆ ಪರೀಕ್ಷೆಯ ದಿನಗಳು
ಸಮೀಪವಾಗುತ್ತಿದ್ದಂತೆ ನಾವು ಎಷ್ಟು ಅಂಕಗಳಿಂದ ತೇರ್ಗಡೆಯಾಗುತ್ತೇವೆಂಬುದು ತಿಳಿದು ಬರುತ್ತದೆ.
ಹಾಗೆಯೇ ನಿಮಗೆ ಇದೂ ಸಹ ವಿದ್ಯೆಯಾಗಿದೆ. ಈಗ ನೀವು ಜ್ಞಾನಪೂರ್ಣರಾಗಿ ಕುಳಿತುಕೊಂಡಿದ್ದೀರಿ.
ಎಲ್ಲರೂ ನಂಬರ್ವನ್ ಬರುವುದಿಲ್ಲ. ಶಾಲೆಯಲ್ಲಿ ನಂಬರ್ವಾರ್ ಇರುತ್ತಾರೆ, ಹಾಗೆಯೇ ಇದೂ ಸಹ
ಜ್ಞಾನವಾಗಿದೆ. ಮೂಲವತನ, ಸೂಕ್ಷ್ಮವತನ, ಸ್ಥೂಲವತನ - ಮೂರೂ ಲೋಕಗಳ ಜ್ಞಾನವು ನಿಮಗಿದೆ. ಈ
ಸೃಷ್ಟಿಚಕ್ರವನ್ನು ನೀವು ಅರಿತುಕೊಂಡಿದ್ದೀರಿ, ಇದು ಸುತ್ತುತ್ತಿರುತ್ತದೆ. ತಂದೆಯು ತಿಳಿಸುತ್ತಾರೆ
- ನಿಮಗೆ ಯಾವ ಜ್ಞಾನವನ್ನು ಕೊಟ್ಟಿದ್ದೇನೆಯೋ ಇದನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನಿಮ್ಮ
ಮೇಲೆ ಬೇಹದ್ದಿನ ದೆಶೆಯಿದೆ, ಕೆಲವರ ಮೇಲೆ ಬೃಹಸ್ಪತಿಯ ದೆಶೆ ಇನ್ನೂ ಕೆಲವರ ಮೇಲೆ ರಾಹುವಿನ
ದೆಶೆಯಿರುತ್ತದೆ. ರಾಹುವಿನ ದೆಶೆಯಿದ್ದಾಗ ಹೋಗಿ ಚಂಡಾಲರಾಗುತ್ತಾರೆ. ಇದು ಬೇಹದ್ದಿನ ದೆಶೆ, ಅದು
ಹದ್ದಿನ ದೆಶೆಯಾಗಿದೆ. ಬೇಹದ್ದಿನ ತಂದೆಯು ಬೇಹದ್ದಿನ ಮಾತುಗಳನ್ನು ತಿಳಿಸುತ್ತಾರೆ, ಬೇಹದ್ದಿನ
ಆಸ್ತಿಯನ್ನು ಕೊಡುತ್ತಾರೆ ಅಂದಾಗ ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು! ನೀವು ಅನೇಕ ಬಾರಿ
ರಾಜ್ಯವನ್ನು ಪಡೆದಿದ್ದೀರಿ ಮತ್ತು ಕಳೆದುಕೊಂಡಿದ್ದೀರಿ - ಇದು ಸಂಪೂರ್ಣ ನಿಶ್ಚಯದ ಮಾತಾಗಿದೆ.
ಹೊಸದೇನಲ್ಲ, ಆದ್ದರಿಂದ ನೀವು ಸದಾ ಹರ್ಷಿತರಾಗಿರುತ್ತೀರಿ ಇಲ್ಲವೆಂದರೆ ಮಾಯೆಯು ಮೋಸಗೊಳಿಸುತ್ತದೆ.
ನೀವೆಲ್ಲರೂ ಒಬ್ಬ ಪ್ರಿಯತಮನಿಗೆ ಪ್ರಿಯತಮೆಯರಾಗಿದ್ದೀರಿ. ಎಲ್ಲಾ ಪ್ರಿಯತಮೆಯರು ಆ ಒಬ್ಬ
ಪ್ರಿಯತಮನನ್ನೇ ನೆನಪು ಮಾಡುತ್ತಾರೆ, ಅವರು ಬಂದು ಎಲ್ಲರಿಗೂ ಸುಖವನ್ನು ಕೊಡುತ್ತಾರೆ. ಅರ್ಧಕಲ್ಪ
ಅವರನ್ನು ನೆನಪು ಮಾಡಿದ್ದೀರಿ, ಅವರು ಈಗ ಸಿಕ್ಕಿದ್ದಾರೆಂದಮೇಲೆ ಎಷ್ಟೊಂದು ಖುಷಿಯಾಗಬೇಕು.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸದಾ
ಹರ್ಷಿತರಾಗಿರಲು ಹೊಸದೇನಲ್ಲ ಎಂಬ ಪಾಠವನ್ನು ಪಕ್ಕಾ ಮಾಡಿಕೊಳ್ಳಬೇಕು. ಬೇಹದ್ದಿನ ತಂದೆ ಬೇಹದ್ದಿನ
ರಾಜ್ಯಭಾಗ್ಯವನ್ನು ಕೊಡುತ್ತಿದ್ದಾರೆ ಎಂಬ ಖುಷಿಯಲ್ಲಿ ಇರಬೇಕು.
2. ಜ್ಞಾನದ ಒಳ್ಳೊಳ್ಳೆ ಹಾಡುಗಳನ್ನು ಕೇಳಿ ರಿಫ್ರೆಶ್ ಆಗಬೇಕು. ಅದರ ಅರ್ಥವನ್ನು ತಿಳಿದುಕೊಂಡು
ಅನ್ಯರಿಗೆ ತಿಳಿಸಬೇಕು.
ವರದಾನ:
ಅನೇಕ ಪ್ರಕಾರದ
ಪ್ರವೃತ್ತಿಯಿಂದ ನಿವೃತ್ತಿಯಾಗುವಂತಹ ನಷ್ಠಮೋಹ ಸ್ಮೃತಿ ಸ್ವರೂಪ ಭವ.
ಸ್ವಯಂ ನ ಪ್ರವೃತ್ತಿ,
ದೈವೀ ಪರಿವಾರದ ಪ್ರವೃತ್ತಿ, ಸೇವೆಯ ಪ್ರವೃತ್ತಿ, ಹದ್ಧಿನ ಪ್ರಾಪ್ತಿಗಳ ಪ್ರವೃತ್ತಿ ಈ ಎಲ್ಲದರಿಂದ
ನಷ್ಠಮೋಹ ಅರ್ಥಾತ್ ನ್ಯಾರಾ ಆಗುವುದಕ್ಕಾಗಿ ಬಾಪ್ದಾದಾರವರ ಸ್ನೇಹ ರೂಪವನ್ನು ಎದುರಿಗೆ ಇಟ್ಟುಕೊಂಡು
ಸ್ಮೃತಿ ಸ್ವರೂಪರಾಗಿ. ಸ್ಮೃತಿ ಸ್ವರೂಪರಾಗುವುದರಿಂದ ನಷ್ಠಮೋಹ ಸ್ವತಃವಾಗಿ ಆಗಿ ಬಿಡುವಿರಿ.
ಪ್ರವೃತ್ತಿಯಿಂದ ನಿವೃತ್ತರಾಗುವುದು ಅರ್ಥಾತ್ ನನ್ನತನವನ್ನು ಸಮಾಪ್ತಿ ಮಾಡಿ ನಷ್ಠಮೋಹ ಆಗುವುದು.
ಈ ರೀತಿಯ ನಷ್ಠಮೋಹ ಆಗುವ ಮಕ್ಕಳು ಬಹಳ ಕಾಲದ ಪುರುಷಾರ್ಥದಿಂದ ಬಹಳ ಕಾಲದ ಪ್ರಾಲಬ್ಧದ ಪ್ರಾಪ್ತಿಯ
ಅಧಿಕಾರಿ ಆಗುವರು.
ಸ್ಲೋಗನ್:
ಕಮಲದ ಹೂವಿನ ಹಾಗೆ
ನ್ಯಾರೆ ಆಗಿರಿ ಆಗ ಪ್ರಭುವಿನ ಪ್ರೀತಿ ಸಿಗುತ್ತಿರುವುದು.