19.01.20    Avyakt Bapdada     Kannada Murli     02.09.85     Om Shanti     Madhuban


"ಪ್ರತಿಯೊಂದು ಕಾರ್ಯದಲ್ಲಿ ಸಫಲತೆಯ ಸಹಜಸಾಧನ ಸ್ನೇಹ"


ಇಂದು ಮುದ್ದಾದ ಮಕ್ಕಳ ಸ್ನೇಹದ ರಿಟರ್ನ್ ಕೊಡುವುದಕ್ಕಾಗಿ ಬಂದಿದ್ದಾರೆ. ಮಧುಬನದವರಿಗೆ ಅವಿಶ್ರಾಂತ ಸೇವೆಯ ವಿಶೇಷವಾದ ಫಲವನ್ನು ಕೊಡುವುದಕ್ಕಾಗಿ, ಕೇವಲ ಮಿಲನ ಮಾಡಲು ಬಂದಿದ್ದೇವೆ. ಇದು ಸ್ನೇಹದ ಪ್ರತ್ಯಕ್ಷ ಪ್ರಮಾಣ ಸ್ವರೂಪವಾಗಿದೆ. ಬ್ರಾಹ್ಮಣ ಪರಿವಾರದ ವಿಶೇಷ ಬುನಾದಿಯೇ ಈ ವಿಶೇಷ ಸ್ನೇಹವಾಗಿದೆ. ವರ್ತಮಾನ ಸಮಯದಲ್ಲಿ ಸ್ನೇಹವು ಪ್ರತಿಯೊಂದು ಸೇವಾ ಕಾರ್ಯದಲ್ಲಿ ಸಫಲತೆಗೆ ಸಹಜ ಸಾಧನವಾಗಿದೆ. ಯೋಗಿ ಜೀವನದ ಬುನಾದಿಯಂತು ನಿಶ್ಚಯವಿರುವುದಾಗಿದೆ, ಆದರೆ ಪರಿವಾರದ ಬುನಾದಿಯು ಸ್ನೇಹವಾಗಿದೆ. ಆ ಸ್ನೇಹವೇ ಯಾರದೇ ಹೃದಯವನ್ನೂ ಸಮೀಪದಲ್ಲಿ ತೆಗೆದುಕೊಂಡು ಬರುತ್ತದೆ. ವರ್ತಮಾನ ಸಮಯದಲ್ಲಿ ನೆನಪು ಮತ್ತು ಸೇವೆಯ ಬ್ಯಾಲೆನ್ಸ್ನ ಜೊತೆಗೆ ಸ್ನೇಹ ಮತ್ತು ಸೇವೆಯ ಬ್ಯಾಲೆನ್ಸ್ ಸಫಲತೆಯ ಸಾಧನವಾಗಿದೆ. ಭಲೆ ದೇಶದ ಸೇವೆಯಾಗಿರಬಹುದು, ಭಲೆ ವಿದೇಶದ ಸೇವೆಯಾಗಿರಬಹುದು, ಎರಡರ ಸಫಲತೆಯ ಸಾಧನವು ಆತ್ಮಿಕ ಸ್ನೇಹವಾಗಿದೆ. ಜ್ಞಾನ ಮತ್ತು ಯೋಗದ ಶಬ್ಧವನ್ನಂತು ಅನೇಕರಿಂದ ಕೇಳಿರಬಹುದು. ಆದರೆ ದೃಷ್ಟಿಯಿಂದ ಅಥವಾ ಶ್ರೇಷ್ಠ ಸಂಕಲ್ಪದಿಂದ ಆತ್ಮರಿಗೆ ಸ್ನೇಹದ ಅನುಭೂತಿಯಾಗುವುದು - ಇದು ವಿಶೇಷತೆ ಮತ್ತು ನವೀನತೆಯಾಗಿದೆ. ಮತ್ತು ಇಂದಿನ ವಿಶ್ವಕ್ಕೆ ಸ್ನೇಹದ ಅವಶ್ಯಕತೆಯಿದೆ. ಎಷ್ಟೇ ಅಭಿಮಾನಿ ಆತ್ಮನನ್ನೂ ಸ್ನೇಹವು ಸಮೀಪದಲ್ಲಿ ತರಬಹುದು. ಸ್ನೇಹದ ಭಿಕಾರಿ, ಶಾಂತಿಯ ಭಿಕಾರಿಯಿದ್ದಾರೆ ಆದರೆ ಶಾಂತಿಯ ಅನುಭವವೂ ಸಹ ಸ್ನೇಹದ ದೃಷ್ಟಿಯ ಮೂಲಕವೇ ಮಾಡಿಸಬಹುದು. ಅಂದಮೇಲೆ ಸ್ನೇಹವು ಸ್ವತಹವಾಗಿಯೇ ಶಾಂತಿಯ ಅನುಭವ ಮಾಡಿಸುತ್ತದೆ ಏಕೆಂದರೆ ಸ್ನೇಹದಲ್ಲಿ ಮುಳುಗಿ ಬಿಡುತ್ತಾರೆ. ಆದ್ದರಿಂದ ಸ್ವಲ್ಪ ಸಮಯಕ್ಕಾಗಿ ಸ್ವತಹವಾಗಿಯೇ ಅಶರೀರಿಯಾಗಿ ಬಿಡುತ್ತಾರೆ. ಅಶರೀರಿಯಾಗುವ ಕಾರಣದಿಂದ ಶಾಂತಿಯ ಅನುಭವವು ಸಹಜವಾಗಿ ಆಗುತ್ತದೆ. ತಂದೆಯೂ ಸಹ ಸ್ನೇಹದ ಪ್ರತ್ಯುತ್ತರವನ್ನೇ ಕೊಡುತ್ತಾರೆ. ಭಲೆ ರಥವು ನಡೆಯಲಿ ಅಥವಾ ನಡೆಯದಿರಲಿ, ಆದರೂ ತಂದೆಯು ಸ್ನೇಹದ ಪ್ರಮಾಣವನ್ನು ಕೊಡಲೇಬೇಕಾಗಿದೆ. ಬಾಪ್ದಾದಾರವರೂ ಸಹ ಮಕ್ಕಳಲ್ಲಿಯೂ ಇದೇ ಸ್ನೇಹದ ಪ್ರತ್ಯಕ್ಷ ಫಲವನ್ನು ನೋಡಲು ಬಯಸುತ್ತಾರೆ. ಯಾರೇ (ಗುಲ್ಜಾರ್ ಬೆಹೆನ್, ಜಗದೀಶ್ ಭಾಯಿಜೀ, ನಿರ್ವೈರ್ ಭಾಯಿಜೀ) ವಿದೇಶದ ಸೇವೆ ಮಾಡಿ ಹಿಂತಿರುಗಿದ್ದಾರೆ ಮತ್ತು ಯಾರೇ(ದಾದೀಜಿ ಮತ್ತು ಮೋಹಿನಿ ಬೆಹೆನ್) ಹೊರಡುತ್ತಿದ್ದಾರೆ. ಇದೂ ಸಹ ಆ ಆತ್ಮರ ಸ್ನೇಹದ ಫಲವು ಅವರಿಗೆ ಸಿಗುತ್ತಿದೆ. ಡ್ರಾಮಾನುಸಾರ ಯೋಚಿಸುವುದು ಬೇರೆಯಾಗಿದೆ. ಆದರೆ ಆಗುವುದು ಬೇರೆಯಿರುತ್ತದೆ. ಆದರೂ ಸಹ ಫಲವು ಸಿಕ್ಕೇ ಸಿಗುತ್ತದೆ ಆದ್ದರಿಂದ ಕಾರ್ಯಕ್ರಮಗಳಾಗಿ ಬಿಡುತ್ತದೆ. ಎಲ್ಲರೂ ತಮ್ಮ-ತಮ್ಮ ಬಹಳ ಒಳ್ಳೆಯ ಪಾತ್ರವನ್ನು ಅಭಿನಯಿಸುತ್ತಾ ಬಂದಿದ್ದೀರಿ. ಮಾಡಿ-ಮಾಡಲ್ಪಟ್ಟ ಡ್ರಾಮಾವು ನೊಂದಣಿಯಾಗಿದೆ ಅಂದಮೇಲೆ ಸಹಜವಾಗಿಯೇ ರಿಟರ್ನ್ ಸಿಕ್ಕಿ ಬಿಡುತ್ತದೆ. ವಿದೇಶದವರೂ ಸಹ ಬಹಳ ಒಳ್ಳೆಯ ಲಗನ್ನಿನಿಂದ ಸೇವೆಯಲ್ಲಿ ಮುಂದುವರೆಯುತ್ತಿದ್ದಾರೆ. ಸಾಹಸ ಮತ್ತು ಉಮ್ಮಂಗವು ಅವರಲ್ಲಿ ನಾಲ್ಕೂ ಕಡೆಯಲ್ಲಿಯೂ ಚೆನ್ನಾಗಿದೆ. ಎಲ್ಲರ ಹೃದಯದ ಧನ್ಯವಾದಗಳ ಸಂಕಲ್ಪವು ಬಾಪ್ದಾದಾರವರ ಬಳಿ ತಲುಪುತ್ತಿರುತ್ತದೆ ಏಕೆಂದರೆ ಅವರೂ ತಿಳಿಯುತ್ತಾರೆ, ಭಾರತದಲ್ಲಿಯೂ ಎಷ್ಟೊಂದು ಅವಶ್ಯಕತೆಯಿದೆ, ಆದರೂ ಭಾರತದ ಸ್ನೇಹವೇ ನಮಗೆ ಸಹಯೋಗವನ್ನು ಕೊಡುತ್ತಿದೆ. ಇದೇ ಭಾರತದಲ್ಲಿ ಸೇವೆ ಮಾಡುವಂತಹ ಸಹಯೋಗಿ ಪರಿವಾರಕ್ಕೆ ಹ್ರದಯದಿಂದ ಧನ್ಯವಾದಗಳನ್ನು ಕೊಡುತ್ತೇವೆ. ದೇಶವು ಎಷ್ಟೇ ದೂರವೋ, ಅಷ್ಟೇ ಹೃದಯದಿಂದ ಪಾಲನೆಗೆ ಪಾತ್ರರಾಗುವುದರಲ್ಲಿ ಸಮೀಪವಿದ್ದಾರೆ. ಆದ್ದರಿಂದ ಬಾಪ್ದಾದಾರವರು ನಾಲ್ಕೂ ಕಡೆಯ ಮಕ್ಕಳಿಗೆ ಧನ್ಯವಾದಗಳ ರಿಟರ್ನ್ನಲ್ಲಿ ನೆನಪು-ಪ್ರೀತಿ ಮತ್ತು ಧನ್ಯವಾದಗಳನ್ನು ಕೊಡುತ್ತಿದ್ದೇವೆ. ತಂದೆಯವರಂತು ಹಾಡನ್ನಾಡುತ್ತಾರಲ್ಲವೆ.

ಭಾರತದಲ್ಲಿಯೂ ಬಹಳ ಉಮ್ಮಂಗ-ಉತ್ಸಾಹದಿಂದ ಪಾದ ಯಾತ್ರೆಯ ಬಹಳ ಒಳ್ಳೆಯ ಪಾತ್ರವನ್ನಭಿನಯಿಸುತ್ತಿದ್ದಾರೆ. ನಾಲ್ಕೂ ಕಡೆಯಲ್ಲಿ ವಿಜೃಂಭಣೆಯ ಸೇವೆಯು ಬಹಳ ಚೆನ್ನಾಗಿ ಶೋಭನೀಯವಾಗಿದೆ. ಉಮ್ಮಂಗ-ಉತ್ಸಾಹವು ಸುಸ್ತನ್ನು ಮರೆಸಿ ಸಫಲತೆಯನ್ನು ಪ್ರಾಪ್ತಿ ಮಾಡಿಸುತ್ತಿದೆ. ನಾಲ್ಕೂ ಕಡೆಯ ಸೇವೆಯ ಸಫಲತೆಯು ಚೆನ್ನಾಗಿದೆ. ಬಾಪ್ದಾದಾರವರೂ ಎಲ್ಲಾಮಕ್ಕಳ ಸೇವೆಯ ಉಮ್ಮಂಗ-ಉತ್ಸಾಹದ ಸ್ವರೂಪವನ್ನು ನೋಡುತ್ತಾ ಹರ್ಷಿತವಾಗುತ್ತಿದ್ದಾರೆ.

(ನೈರೋಬಿಯಲ್ಲಿ ಜಗದೀಶ್ ಅಣ್ಣನವರು ಪೋಪ್ರವರೊಂದಿಗೆ ಭೇಟಿಯಾಗಿ ಬಂದಿದ್ದಾರೆ) ಪೋಪ್ರವರಿಗೂ ದೃಷ್ಟಿಯನ್ನು ಕೊಟ್ಟಿರಲ್ಲವೆ. ಇದೂ ಸಹ ತಮಗಾಗಿ ವಿಶೇಷ ವಿ.ಐ.ಪಿ.ಯ ಸೇವೆಯ ಸಫಲತೆಯ ಸಹಜವಾದ ಸಾಧನವಾಗಿದೆ. ಹೇಗೆ ಭಾರತದಲ್ಲಿ ವಿಶೇಷವಾಗಿ ರಾಷ್ಟ್ರಪತಿ ಬಂದಿದ್ದರು. ಅಂದಮೇಲೆ ಈಗ ಹೇಳಬಹುದು - ಭಾರತದಲ್ಲಿಯೂ ಬಂದಿದ್ದಾರೆ. ಹಾಗೆಯೇ ವಿಶೇಷವಾಗಿ ವಿದೇಶದಲ್ಲಿ ವಿದೇಶದ ಮುಖ್ಯ ಧರ್ಮದ ಪ್ರಭಾವದ ಸಂಬಂಧದಿಂದ ಸಂಪರ್ಕದಲ್ಲಿ ಬಂದರೆಂದರೆ, ನಾವೂ ಸಹ ಸಂಪರ್ಕದಲ್ಲಿ ಬಂದೆವೆಂದು ಯಾರಿಗಾದರೂ ಸಹಜವಾಗಿ ಧೈರ್ಯವು ಬರಬಹುದು. ಅಂದಮೇಲೆ ದೇಶದ ಸೇವೆಯಲ್ಲಿಯೂ ಒಳ್ಳೆಯ ಸಾಧನವಾಯಿತು ಮತ್ತು ವಿದೇಶದ ಸೇವೆಯಲ್ಲಿಯೂ ವಿಶೇಷ ಸಾಧನವಾಯಿತು. ಅಂದಮೇಲೆ ಸಮಯ ಪ್ರಮಾಣವಾಗಿ ಯಾರೆಲ್ಲರೂ ಸೇವೆಯಲ್ಲಿ ಸಮೀಪ ಬರುವುದರಲ್ಲಿ ಯಾವುದೇ ಅಡಚಣೆಗಳು ಬರುತ್ತದೆ, ಅದೂ ಸಹ ಸಹಜವಾಗಿ ಸಮಾಪ್ತಿಯಾಗಿ ಬಿಡುತ್ತದೆ. ಪ್ರಧಾನಮಂತಿಯವರ ಭೇಟಿಯಂತು ಆಯಿತಲ್ಲವೆ. ಅಂದಮೇಲೆ ಪ್ರಪಂಚದವರಿಗಾಗಿ ಈ ಉದಾಹರಣೆಯೂ ಸಹ ಸಹಯೋಗವನ್ನು ಕೊಡುತ್ತದೆ. ಎಲ್ಲರ ಪ್ರಶ್ನೆಯಿದೆ - ಮತ್ತ್ಯಾರಾದರೂ ಬಂದಿದ್ದಾರೆಯೇ? ಈ ಪ್ರಶ್ನೆಯು ಇದರಿಂದ ಸಮಾಪ್ತಿಯಾಗಿ ಬಿಡುತ್ತದೆ. ಅಂದಮೇಲೆ ಇದೂ ಸಹ ಡ್ರಾಮಾನುಸಾರವಾಗಿ ಇದೇ ವರ್ಷದ ಸೇವೆಯಲ್ಲಿ ಸಹಜ ಪ್ರತ್ಯಕ್ಷತೆಯ ಸಾಧನವಾಯಿತು. ಈಗ ಸಮೀಪಕ್ಕೆ ಬರುತ್ತಿದ್ದಾರೆ. ಇವರಿಗಂತು ಕೇವಲ ಹೆಸರೇ ಕಾರ್ಯವನ್ನು ಮಾಡುತ್ತದೆ. ಅಂದಮೇಲೆ ಹೆಸರಿನಿಂದ ಯಾವ ಕಾರ್ಯವಾಗಬೇಕು ಅದರ ಧರಣಿಯಂತು ತಯಾರಾಯಿತು. ಧ್ವನಿಯನ್ನು ಇವರು ಹರಡಿಸುವುದಿಲ್ಲ. ಧ್ವನಿ ಮೊಳಗಿಸುವ ಮೈಕ್ ಬೇರೆಯಿದ್ದಾರೆ. ಇವರು ಮೈಕ್(ಪ್ರಸಿದ್ಧ ಗಣ್ಯರು) ಆತ್ಮರಿಗೆ ಲೈಟ್ ಕೊಡುವವರಾಗಿದ್ದಾರೆ. ಆದರೆ ಆದರೂ ಸಹ ಧರಣಿಯ ತಯಾರಿಯು ಚೆನ್ನಾಗಿ ಆಗಿ ಬಿಟ್ಟಿತು. ವಿದೇಶದಲ್ಲಿ ಮುಂಚೆ ವಿ.ಐ.ಪಿ. ಸೇವೆಗಾಗಿ ಯಾವ ಕಷ್ಟದ ಅನುಭವ ಮಾಡುತ್ತಿದ್ದಿರಿ, ಈಗ ಅವರು ನಾಲ್ಕೂ ಕಡೆಯಲ್ಲಿ ಸಹಜ ಅನುಭವ ಮಾಡುತ್ತಾರೆ, ಈ ಫಲಿತಾಂಶವೂ ಸಹ ಈಗ ಚೆನ್ನಾಗಿದೆ. ಇವರುಗಳ ಹೆಸರಿನಿಂದ ಕಾರ್ಯವನ್ನು ಮಾಡುವವರು ತಯಾರಾಗಿ ಬಿಡುತ್ತಾರೆ. ಈಗ ನೋಡಿ - ಯಾರು ನಿಮಿತ್ತರಾಗುತ್ತಾರೆ ಎಂದು. ಧರಣಿಯು ತಯಾರಾಗುವುದಕ್ಕಾಗಿ ನಾಲ್ಕೂ ಕಡೆಯಲ್ಲಿ ಎಲ್ಲರೂ ಹೋದರು. ಭಿನ್ನ-ಭಿನ್ನ ಕಡೆಗಳಲ್ಲಿ ಕಾಲನ್ನಿಟ್ಟು ತಯಾರಿಯಂತು ಮಾಡಿದ್ದೀರಿ. ಈಗ ಫಲವು ಪ್ರತ್ಯಕ್ಷ ರೂಪದಲ್ಲಿ ಯಾರ ಮೂಲಕ ಆಗುತ್ತದೆ, ಅದರ ತಯಾರಿಯು ಈಗ ಆಗುತ್ತಿದೆ. ಎಲ್ಲರ ಫಲಿತಾಂಶವು ಚೆನ್ನಾಗಿದೆ.

ಪಾದಯಾತ್ರಿಗಳೂ ಸಹ ಒಂದು ಬಲ ಒಂದು ಭರವಸೆಯನ್ನಿಟ್ಟು ಮುಂದುವರೆಯುತ್ತಿದ್ದಾರೆ. ಮುಂಚೆ ಕಷ್ಟವೆನಿಸುತ್ತಿತ್ತು. ಆದರೆ ಯಾವಾಗ ಪ್ರಾಕ್ಟಿಕಲ್ನಲ್ಲಿ ಬರುತ್ತಾರೆಂದರೆ ಸಹಜವಾಗಿ ಬಿಡುತ್ತದೆ. ಅಂದಮೇಲೆ ದೇಶ-ವಿದೇಶದವರೆಲ್ಲರೂ ಮತ್ತು ಯಾರೆಲ್ಲರೂ ಸೇವೆಗೆ ನಿಮಿತ್ತರಾಗಿದ್ದು ಸೇವೆಯ ಮೂಲಕ ಅನೇಕರಿಗೆ ಬಾಪ್ದಾದಾರವರ ಸ್ನೇಹಿ-ಸಹಯೋಗಿಯನ್ನಾಗಿ ಮಾಡುತ್ತಾ ಬಂದಿದ್ದಾರೆ, ಅವರೆಲ್ಲರಿಗೂ ವಿಶೇಷವಾಗಿ ನೆನಪು-ಪ್ರೀತಿಯನ್ನು ಕೊಡುತ್ತಿದ್ದೇವೆ. ಪ್ರತಿಯೊಂದು ಮಗುವಿನ ವರದಾನವು ತನ್ನ-ತನ್ನದಾಗಿದೆ. ವಿಶೇಷವಾಗಿ ಭಾರತದ ಎಲ್ಲಾ ಪಾದಯಾತ್ರೆಯಲ್ಲಿ ನಡೆಯುವ ಮಕ್ಕಳಿಗೆ ಮತ್ತು ವಿದೇಶದ ಸೇವಾರ್ಥವಾಗಿ ನಾಲ್ಕೂ ಕಡೆಯಲ್ಲಿ ನಿಮಿತ್ತವಾಗಿರುವ ಮಕ್ಕಳಿಗೆ ಮತ್ತು ಮಧುಬನ ನಿವಾಸಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿರುವ ಮಕ್ಕಳಿಗೆ, ಜೊತೆ ಜೊತೆಗೆ ಯಾರೆಲ್ಲಾ ಭಾರತವಾಸಿ ಮಕ್ಕಳು ಯಾತ್ರೆಯಲ್ಲಿರುವವರಿಗೆ ಉಮ್ಮಂಗ-ಉತ್ಸಾಹದಲ್ಲಿ ತರಲು ನಿಮಿತ್ತರಾದರು, ನಾಲ್ಕೂ ಕಡೆಯಲ್ಲಿರುವ ಆ ಎಲ್ಲಾ ಮಕ್ಕಳಿಗೆ ವಿಶೇಷ ನೆನಪು-ಪ್ರೀತಿ ಮತ್ತು ಸೇವೆಯ ಸಫಲತೆಯ ಶುಭಾಶಯಗಳನ್ನು ಕೊಡುತ್ತಿದ್ದೇವೆ. ಪ್ರತಿಯೊಂದು ಸ್ಥಾನದಲ್ಲಿ ಕಷ್ಟ ಪಟ್ಟಿದ್ದೀರಿ ಆದರೆ ಈ ವಿಶೇಷ ಕಾರ್ಯಾರ್ಥವಾಗಿ ನಿಮಿತ್ತರಾದಿರಿ ಆದ್ದರಿಂದ ವಿಶೇಷ ಜಮಾ ಆಗಿ ಬಿಟ್ಟಿತು. ಪ್ರತಿಯೊಂದು ದೇಶಗಳು ಮೊರಿಷಸ್, ನೈರೋಬಿ, ಅಮೇರಿಕಾ ಇವೆಲ್ಲವೂ ಉದಾಹರಣೆಯಾಗಿ ತಯಾರಾಗುತ್ತಿದೆ ಮತ್ತು ಈ ಉದಾಹರಣೆಯು ಮುಂದೆ ಪ್ರತ್ಯಕ್ಷತೆಯಲ್ಲಿ ಸಹಯೋಗಿಯಾಗುತ್ತದೆ. ಅಮೇರಿಕಾದವರೂ ಸಹ ಕಡಿಮೆಯೇ ಮಾಡಿಲ್ಲ, ಒಂದೊಂದು ಚಿಕ್ಕ ಸ್ಥಾನದವರೂ ಸಹ ಎಷ್ಟೊಂದು ಉಮ್ಮಂಗ-ಉಲ್ಲಾಸದಿಂದ ತಮ್ಮ ಶಕ್ತಿಯ ಲೆಕ್ಕದಿಂದ ಬಹಳ ಹೆಚ್ಚಾಗಿ ಮಾಡಿದ್ದಾರೆ. ವಿದೇಶದಲ್ಲಿ ಮೆಜಾರಿಟಿ ಕ್ರಿಶ್ಚಿಯನ್ನರಿದ್ದಾರೆ, ಅವರ ರಾಜ್ಯವಂತು ಇದೆಯಲ್ಲವೆ. ಈಗ ಭಲೆ ಅವರ ಶಕ್ತಿಯು ಸಮಾಪ್ತಿಯಾಗಿ ಬಿಟ್ಟಿದೆ ಆದರೆ ಧರ್ಮವನ್ನಂತು ಬಿಟ್ಟಿಲ್ಲ. ಚರ್ಚ್ ಬಿಟ್ಟಿದ್ದಾರೆ ಆದರೆ ಧರ್ಮವನ್ನಂತು ಬಿಟ್ಟಿಲ್ಲ. ಆದ್ದರಿಂದ ಪೋಪ್ ಸಹ ಅಲ್ಲಿ ರಾಜನ ಸಮಾನವಿದ್ದಾರೆ. ರಾಜನವರೆಗೆ ತಲುಪುತ್ತೀರೆಂದರೆ ಪ್ರಜೆಗಳಲ್ಲಿ ಸ್ವತಹವಾಗಿಯೇ ಗೌರವವು ಕುಳಿತುಕೊಳ್ಳುತ್ತದೆ. ಯಾರು ಕಟ್ಟು ನಿಟ್ಟಾಗಿರುವ ಕ್ರಿಶ್ಚಿಯನ್ ಇದ್ದಾರೆ, ಅವರಿಗಾಗಿಯೂ ಈ ಉದಾಹರಣೆಯು ಚೆನ್ನಾಗಿದೆ. ಉದಾಹರಣೆಯಾಗಿರುವವರು ಕ್ರಿಶ್ಚಿಯನ್ನರಿಗಾಗಿ ನಿಮಿತ್ತರಾಗುವರು. ಕೃಷ್ಣ ಮತ್ತು ಕ್ರಿಶ್ಚಿಯನ್ನ ಸಂಬಂಧವಿದೆಯಲ್ಲವೆ. ಭಾರತದ ವಾತಾವರಣವಂತು ಆದರೂ ಬೇರೆಯದಾಗಿರುತ್ತದೆ. ಸೆಕ್ಯುರಿಟಿ ಮುಂತಾದವಂತು ಬಹಳಷ್ಟಿರುತ್ತದೆ. ಆದರೆ ಇವರು ಪ್ರೀತಿಯಿಂದ ಭೇಟಿಯಾದರು, ಇದು ಚೆನ್ನಾಗಿದೆ. ರಾಯಲಿಟಿಯಿಂದ ಸಮಯ ಕೊಡುವುದು, ವಿಧಿಪೂರ್ವಕವಾಗಿ ಭೇಟಿಯಾಗುವುದು - ಅದರ ಪ್ರಭಾವವು ಬೀರುತ್ತದೆ. ಇದನ್ನು ತೋರಿಸುತ್ತದೆ - ಈಗ ಸಮಯವು ಸಮೀಪಕ್ಕೆ ಬರುತ್ತೈದೆ.

ಲಂಡನ್ನಲ್ಲಿಯೂ ವಿದೇಶದ ಲೆಕ್ಕದಿಂದ ಬಹಳ ಒಳ್ಳೆಯ ಸಂಖ್ಯೆಯಿದೆ ಮತ್ತು ವಿಶೇಷವಾಗಿ ಮುರುಳಿಯೊಂದಿಗೆ ಪ್ರೀತಿಯಿದೆ, ವಿದ್ಯೆಯೊಂದಿಗೂ ಪ್ರೀತಿಯಿದೆ, ಇದು ಬುನಾದಿಯಾಗಿದೆ. ಇದರಲ್ಲಿ ಲಂಡನ್ ನಂಬರ್ವನ್ ಆಗಿದೆ. ಏನೇ ಆಗಲಿ, ಎಂದಿಗೂ ಕ್ಲಾಸ್ ಮಿಸ್ ಮಾಡುವುದಿಲ್ಲ. ನಾಲ್ಕು ಗಂಟೆ ಯೋಗ ಮತ್ತು ಕ್ಲಾಸಿನ ಮಹತ್ವವು ಬಹಳ ಚೆನ್ನಾಗಿದೆ. ಇದರ ಕಾರಣವೂ ಸ್ನೇಹವೇ ಆಗಿದೆ. ಸ್ನೇಹದ ಕಾರಣದಿಂದ ಸೆಳೆಯುತ್ತಾ ಬರುತ್ತಾರೆ. ವಾತಾರವಣವನ್ನು ಶಕ್ತಿಶಾಲಿ ಮಾಡುವುದರಲ್ಲಿ ಬಹಳ ಒಳ್ಳೆಯ ಗಮನವಿದೆ. ಹಾಗೆ ನೋಡಿದರೆ ದೂರ ದೇಶದವರು ಯಾರಿದ್ದಾರೆ, ಅಲ್ಲಿ ವಾಯುಮಂಡಲವೇ ಆಶ್ರಯವೆಂದು ತಿಳಿಯುತ್ತಾರೆ. ಭಲೆ ಸೇವಾಕೇಂದ್ರದ್ದಿರಬಹುದು ಅಥವಾ ತಮ್ಮದಿರಬಹುದು. ಸ್ವಲ್ಪವೇನಾದರೂ ಯಾವುದೇ ಮಾತು ಬರುತ್ತದೆಯೆಂದರೆ ತಕ್ಷಣದಲ್ಲಿಯೇ ತನ್ನನ್ನು ಪರಿಶೀಲನೆ ಮಾಡಿಕೊಂಡು, ವಾತಾವರಣವನ್ನು ಶಕ್ತಿಶಾಲಿ ಮಾಡುವುದರ ಪ್ರಯತ್ನವನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಅಲ್ಲಿ ವಾತಾವರಣವನ್ನು ಶಕ್ತಿಶಾಲಿ ಮಾಡುವುದರ ಲಕ್ಷ್ಯವು ಚೆನ್ನಾಗಿದೆ. ಚಿಕ್ಕ-ಚಿಕ್ಕ ಮಾತುಗಳಲ್ಲಿ ವಾತಾವರಣವನ್ನು ಹಾಳು ಮಾಡುವುದಿಲ್ಲ. ಅವರು ತಿಳಿಯುತ್ತಾರೆ - ವಾತಾವರಣವು ಶಕ್ತಿಶಾಲಿಯಾಗಿರುವುದಿಲ್ಲವೆಂದರೆ ಸೇವೆಯಲ್ಲಿ ಸಫಲತೆಯಾಗುವುದಿಲ್ಲ. ಆದ್ದರಿಂದ ಈ ಗಮನವನ್ನು ಬಹಳ ಚೆನ್ನಾಗಿ ಇಟ್ಟುಕೊಳ್ಳುತ್ತಾರೆ. ತಮ್ಮ ಪುರುಷಾರ್ಥದಲ್ಲಿಯೂ ಹಾಗೂ ಸೇವಾಕೇಂದ್ರದ ವಾತಾರವಣಕ್ಕಾಗಿಯೂ ಗಮನವಿಡುತ್ತಾರೆ. ಸಾಹಸ ಮತ್ತು ಉಮ್ಮಂಗದಲ್ಲೇನೂ ಕಡಿಮೆಯಿಲ್ಲ.

ಎಲ್ಲಿಯೇ ಹೆಜ್ಜೆಯನ್ನಿಡುತ್ತಾರೆ ಅಲ್ಲಿ ಅವಶ್ಯವಾಗಿ ವಿಶೇಷ ಪ್ರಾಪ್ತಿಗಳು ಬ್ರಾಹ್ಮಣರಿಗೂ ಆಗುತ್ತದೆ ಮತ್ತು ದೇಶಕ್ಕೂ ಆಗುತ್ತದೆ. ಸಂದೇಶವೂ ಸಿಗುತ್ತದೆ ಮತ್ತು ಬ್ರಾಹ್ಮಣರಲ್ಲಿಯೂ ವಿಶೇಷವಾಗಿ ಶಕ್ತಿ ಹೆಚ್ಚುತ್ತದೆ ಮತ್ತು ಪಾಲನೆಯೂ ಸಿಗುತ್ತದೆ. ಸಾಕಾರ ರೂಪದಿಂದ ವಿಶೇಷ ಪಾಲನೆಯನ್ನು ಪಡೆದು ಎಲ್ಲರಿಗೂ ಖುಷಿಯಾಗುತ್ತದೆ ಮತ್ತು ಅದೇ ಖುಷಿಯಲ್ಲಿ ಸೇವೆಯಲ್ಲಿ ಮುಂದುವರೆಯುತ್ತಾ ಮತ್ತು ಸಫಲತೆಯನ್ನು ಪಡೆಯುತ್ತಾರೆ. ದೂರ ದೇಶದಲ್ಲಿರುವವರಿಗಾಗಿ ಪಾಲನೆಯಂತು ಅವಶ್ಯವಾಗಿ ಬೇಕು. ಪಾಲನೆಯನ್ನು ಪಡೆದು ಹಾರುತ್ತಾರೆ. ಯಾರು ಮಧುಬನಕ್ಕೆ ಬರಲು ಸಾಧ್ಯವಿಲ್ಲವೋ ಅವರು ಅಲ್ಲಿಯೇ ಕುಳಿತು ಮಧುಬನದ ಅನುಭವ ಮಾಡುತ್ತಾರೆ. ಹೇಗೆ ಇಲ್ಲಿ ಸ್ವರ್ಗದ ಮತ್ತು ಸಂಗಮಯುಗದ ಆನಂದವನ್ನೆರಡೂ ಅನುಭವ ಮಾಡುತ್ತಾರೆ, ಆದ್ದರಿಂದ ಡ್ರಾಮಾನುಸಾರವಾಗಿ ವಿದೇಶದಲ್ಲಿ ಹೋಗುವ ಪಾತ್ರವೇನು ಮಾಡಲ್ಪಟ್ಟಿದೆ, ಅದು ಅವಶ್ಯಕವಿದೆ ಮತ್ತು ಸಫಲತೆಯೂ ಇದೆ. ವಿದೇಶದ ಪ್ರತಿಯೊಂದು ಮಕ್ಕಳು ತಮ್ಮ-ತಮ್ಮ ಹೆಸರಿನಿಂದ ವಿಶೇಷವಾಗಿ ಸೇವೆಯ ಶುಭಾಶಯಗಳು ಮತ್ತು ವಿಶೇಷವಾಗಿ ಸೇವೆಯ ಸಫಲತೆಯ ರಿಟರ್ನ್ನಲ್ಲಿ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ. ತಂದೆಯ ಮುಂದೆ ಒಂದೊಂದು ಮಗುವಿದ್ದಾರೆ. ಪ್ರತಿಯೊಂದು ದೇಶದ ಪ್ರತಿಯೊಂದು ಮಕ್ಕಳು ನಯನಗಳ ಮುಂದೆ ಬರುತ್ತಿದ್ದಾರೆ. ಒಬ್ಬೊಬ್ಬರಿಗೆ ಬಾಪ್ದಾದಾರವರು ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ಯಾರು ಚಡಪಡಿಸುವ ಮಕ್ಕಳಿದ್ದಾರೆ, ಬಾಪ್ದಾದಾರವರು ಅವರ ಚಮತ್ಕಾರವನ್ನೂ ನೋಡುತ್ತಾ ಮಕ್ಕಳ ಮೇಲೆ ಸದಾ ಸ್ನೇಹದ ಪುಷ್ಫಗಳ ಮಳೆ ಸುರಿಸುತ್ತಾರೆ. ಅವರ ಬುದ್ಧಿಬಲವು ಎಷ್ಟೊಂದು ತೀಕ್ಷ್ಣವಾಗಿದೆ. ಇನ್ನೊಂದು - ವಿಮಾನವಿಲ್ಲವೆಂದರೆ ಬುದ್ಧಿಯ ವಿಮಾನವು ತೀವ್ರವಾಗಿದೆ. ಅವರ ಬುದ್ಧಿ ಬಲದ ಬಗ್ಗೆ ಬಾಪ್ದಾದಾರವರೂ ಸಹ ಹರ್ಷಿತವಾಗುತ್ತಾರೆ. ಪ್ರತಿಯೊಂದು ಸ್ಥಾನದ ವಿಶೇಷತೆಯು ತನ್ನ-ತನ್ನದಾಗಿದೆ. ಸಿಂಧಿ ಜನರೂ ಸಹ ಈಗ ಸಮೀಪಕ್ಕೆ ಬರುತ್ತಿದ್ದಾರೆ. ಆದಿಯಲ್ಲೇನಿತ್ತು ಅದು ಅಂತ್ಯವಂತು ಆಗಲೇಬೇಕು.

ಇವರು ಸಮಾಜ ಸೇವೆಯನ್ನು ಮಾಡುವುದಿಲ್ಲ - ಈ ಭ್ರಾಂತಿಯೇನು ಕುಳಿತಿದೆ, ಅದೂ ಸಹ ಪಾದ ಯಾತ್ರೆಯನ್ನು ನೋಡುತ್ತಾ, ಈ ಭ್ರಾಂತಿಯು ಸಮಾಪ್ತಿಯಾಯಿತು. ಈಗ ಕ್ರಾಂತಿಯ ತಯಾರಿಯು ಬಹಳ ವೇಗವಾಗಿ ಆಗುತ್ತಿದೆ.

ದಿಲ್ಲಿಯವರೂ ಸಹ ಪಾದಯಾತ್ರಿಗಳ ಆಹ್ವಾನ ಮಾಡುತ್ತಿದ್ದಾರೆ, ಇಷ್ಟು ಬ್ರಾಹ್ಮಣರು ಮನೆಯಲ್ಲಿ ಬರುವರು ಎಂದು. ಹಾಗೆ ನೋಡಿದರೆ ಬ್ರಾಹ್ಮಣ ಅತಿಥಿಗಳಂತು ಭಾಗ್ಯವಂತರ ಬಳಿಯೇ ಬರುತ್ತಾರೆ. ದೆಹಲಿಯಲ್ಲಿರುವವರೆಲ್ಲರಿಗೂ ಅಧಿಕಾರವಿದೆ. ಅಧಿಕಾರಿಗೆ ಸತ್ಕಾರವನ್ನಂತು ಕೊಡಬೇಕಾಗಿದೆ. ದೆಹಲಿಯಿಂದಲೇ ವಿಶ್ವದಲ್ಲಿ ಹೆಸರಾಗುತ್ತದೆ. ತಮ್ಮ-ತಮ್ಮ ಪ್ರಾಂತ್ಯಗಳಲ್ಲಂತು ಮಾಡುತ್ತಿದ್ದಾರೆ. ಆದರೆ ದೇಶ-ವಿದೇಶದಲ್ಲಂತು ದೆಹಲಿಯದೇ ಟಿ.ವಿ., ರೇಡಿಯೋ ನಿಮಿತ್ತವಾಗುತ್ತದೆ. ಒಳ್ಳೆಯದು.

ದೀದಿ ನಿರ್ಮಲಶಾಂತಜೀಯವರೊಂದಿಗೆ:-
ಇವರು ಆದಿರತ್ನಗಳ ಸಂಕೇತವಾಗಿದ್ದಾರೆ. ಹಾಜೀ ಪಾಠವು ಸದಾ ನೆನಪಲ್ಲಿದ್ದು ಶರೀರಕ್ಕೂ ಶಕ್ತಿಯನ್ನು ಕೊಟ್ಟು ತಲುಪಿ ಬಿಟ್ಟರು. ಆದಿ ರತ್ನಗಳಲ್ಲಿ ಇದು ಸ್ವಾಭಾವಿಕ ಸಂಸ್ಕಾರವಿದೆ, ಎಂದೂ ಸಹ ಇಲ್ಲ ಎನ್ನುವುದಿಲ್ಲ. ಸದಾ ಹಾಜೀ ಮಾಡುತ್ತಾರೆ. ಮತ್ತು ಹಾಜೀ ಎಂದೇ ಮಾಡಿದರು. ಆದ್ದರಿಂದ ಬಾಪ್ದಾದಾರವರೂ ಖುಷಿಯಾಗಿದ್ದಾರೆ. ಸಾಹಸವಂತ ಮಗುವಿಗೆ ಸಹಯೋಗವನ್ನು ಕೊಟ್ಟು, ತಂದೆಯ ಸ್ನೇಹಮಿಲನದ ಫಲವನ್ನು ಕೊಟ್ಟರು.

(ದಾದೀಜಿಯವರಿಗೆ) ಎಲ್ಲರಿಗೂ ಸೇವೆಯ ಉಮ್ಮಂಗ-ಉತ್ಸಾಹಕ್ಕಾಗಿ ಶುಭಾಶಯಗಳನ್ನು ಕೊಡಿ ಮತ್ತು ಸದಾ ಖುಷಿಯ ಉಯ್ಯಾಲೆಯಲ್ಲಿ ತೂಗುತ್ತಿರುತ್ತಾ, ಖುಷಿಯಿಂದ ಸೇವೆಯಲ್ಲಿ ಪ್ರತ್ಯಕ್ಷತೆಯ ಲಗನ್ನಿನಿಂದ ಮುಂದುವರೆಯುತ್ತಿರುತ್ತಾರೆ. ಆದ್ದರಿಂದ ಶುದ್ಧ ಶ್ರೇಷ್ಠ ಸಂಕಲ್ಪಕ್ಕಾಗಿ ಎಲ್ಲರಿಗೂ ಶುಭಾಶಯಗಳು. ಚಾರ್ಲೆ, ಕೆನ್ ಮುಂತಾದವರು., ಈ ಮೊದಲ ಫಲವಾಗಿ ಯಾರು ಬಂದರು - ಈ ಗ್ರೂಪ್ ಒಳ್ಳೆಯ ರಿಟರ್ನ್ ಕೊಡುತ್ತಿದ್ದಾರೆ. ನಿರ್ಮಾಣತೆ, ನಿರಹಂಕಾರಿ ಗುಣವು ಕಾರ್ಯವನ್ನು ಸಹಜಗೊಳಿಸುತ್ತದೆ. ಎಲ್ಲಿಯವರೆಗೆ ನಿರಹಂಕಾರಿಯಾಗುವುದಿಲ್ಲ ಅಲ್ಲಿಯವರೆಗೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಈ ಪರಿವರ್ತನೆಯು ಬಹಳ ಚೆನ್ನಾಗಿದೆ. ಎಲ್ಲರೂ ಕೇಳುವುದು ಮತ್ತು ಸಮಾವೇಶ ಮಾಡಿಕೊಳ್ಳುವುದು ಮತ್ತು ಎಲ್ಲರಿಗೂ ಸ್ನೇಹ ಕೊಡುವುದು - ಇದು ಸಫಲತೆಯ ಆಧಾರವಾಗಿದೆ. ಒಳ್ಳೆಯ ಪ್ರಗತಿಯನ್ನು ಮಾಡಿದ್ದೀರಿ. ಹೊಸ-ಹೊಸ ಪಾಂಡವರೂ ಸಹ ಚೆನ್ನಾಗಿ ಪರಿಶ್ರಮ ಪಟ್ಟಿದ್ದಾರೆ. ಒಳ್ಳೆಯದು - ತಮ್ಮಲ್ಲಿ ಪರಿವರ್ತನೆಯನ್ನು ತಂದುಕೊಂಡಿದ್ದೀರಿ. ಎಲ್ಲಾ ಕಡೆ ವೃದ್ಧಿಯು ಬಹಳ ಚೆನ್ನಾಗಿ ಆಗುತ್ತಿದೆ. ಈಗ ಇನ್ನೂ ನವೀನತೆ ಮಾಡುವ ಯೋಜನೆಯನ್ನು ಮಾಡಿರಿ. ಇಲ್ಲಿಯವರೆಗಂತು ಎಲ್ಲರ ಪರಿಶ್ರಮದ ಫಲವಂತು ಬಂದಿದೆ, ಮೊದಲಂತು ಯಾರು ಕೇಳುತ್ತಿರಲಿಲ್ಲ ಅವರೂ ಸಮೀಪ ಬಂದು ಬ್ರಾಹ್ಮಣ ಆತ್ಮರಾಗುತ್ತಿದ್ದಾರೆ. ಈಗ ಇನ್ನೂ ಪ್ರತ್ಯಕ್ಷತೆ ಮಾಡುವ ಯಾವುದಾದರೂ ಹೊಸ ಸೇವೆಯ ಸಾಧನವಾಗುತ್ತದೆ. ಬ್ರಾಹ್ಮಣರ ಸಂಘಟನೆಯೂ ಚೆನ್ನಾಗಿದೆ. ಈಗ ಸೇವೆಯ ವೃದ್ಧಿಯು ಇನ್ನೂ ಹೆಚ್ಚುತ್ತಿದೆ. ಒಂದು ಬಾರಿ ವೃದ್ಧಿಯು ಪ್ರಾರಂಭವಾಯಿತೆಂದರೆ, ಅದರ ಪ್ರಕಂಪನಗಳು ಹರಡುತ್ತದೆ. ಒಳ್ಳೆಯದು.

ವರದಾನ:  
ಸಂಘಟನೆಯೆಂಬ ಕೋಟೆಯನ್ನು ಶಕ್ತಿಶಾಲಿಗೊಳಿಸುವಂತಹ ಸರ್ವರ ಸ್ನೇಹಿ, ಸಂತುಷ್ಟ ಆತ್ಮ ಭವ.

ಸಂಘಟನೆಯ ಶಕ್ತಿಯು ವಿಶೇಷ ಶಕ್ತಿಯಾಗಿದೆ. ಏಕಮತ ಸಂಘಟನೆಯ ಕೋಟೆಯನ್ನು ಯಾರೂ ಸಹ ಅಲುಗಾಡಿಸಲು ಸಾಧ್ಯವಿಲ್ಲ. ಆದರೆ ಇದರ ಆಧಾರವಾಗಿದೆ - ಒಬ್ಬರಿನ್ನೊಬ್ಬರ ಸ್ನೇಹಿಯಾಗಿದ್ದು ಸರ್ವರಿಗೂ ರಿಗಾರ್ಡ್ ಕೊಡುವುದು ಮತ್ತು ಸ್ವಯಂ ಸಂತುಷ್ಟವಾಗಿದ್ದು ಸರ್ವರನ್ನು ಸಂತುಷ್ಟ ಪಡಿಸುವುದು. ಯಾರೂ ಬೇಸರವಾಗಬಾರದು ಮತ್ತು ಯಾರನ್ನೂ ಬೇಸರ ಪಡಿಸಬಾರದು. ಎಲ್ಲರೂ ಒಬ್ಬರಿನ್ನೊಬ್ಬರಿಗೆ ಶುಭ ಭಾವನೆ ಮತ್ತು ಶುಭ ಕಾಮನೆಯ ಸಹಯೋಗವನ್ನು ಕೊಡುತ್ತಿದ್ದರೆ. ಸಂಘಟನೆಯ ಕೋಟೆಯು ಶಕ್ತಿಶಾಲಿಯಾಗಿ ಬಿಡುತ್ತದೆ. ಸಂಘಟನೆಯ ಶಕ್ತಿಯೇ ವಿಜಯದ ವಿಶೇಷ ಆಧಾರ ಸ್ವರೂಪವಾಗಿದೆ.

ಸ್ಲೋಗನ್:
ಯಾವಾಗ ಪ್ರತಿಯೊಂದು ಕರ್ಮವು ಯಥಾರ್ಥ ಮತ್ತು ಯುಕ್ತಿಯುಕ್ತವಾಗಿರುತ್ತದೆ ಆಗಲೇ ಪವಿತ್ರ ಆತ್ಮ ಎಂದು ಹೇಳಲಾಗುವುದು.


ಅವ್ಯಕ್ತಸ್ಥಿತಿಯ ಅನುಭವ ಮಾಡುವುದಕ್ಕಾಗಿ ವಿಶೇಷ ಹೋಮ್ವರ್ಕ್ -
ಹೇಗೆ ಬ್ರಹ್ಮಾ ತಂದೆಯು ನಿಶ್ಚಯದ ಆಧಾರದಿಂದ, ಆತ್ಮಿಕ ನಶೆಯ ಆಧಾರದಿಂದ, ಪೂರ್ವ ನಿಶ್ಚಿತದ ಜ್ಞಾನಿಯಾಗಿ ಸೆಕೆಂಡಿನಲ್ಲಿ ಎಲ್ಲವನ್ನೂ ಸಫಲ ಮಾಡಿ ಬಿಟ್ಟರು. ತನಗಾಗಿ ಏನನ್ನೂ ಇಟ್ಟುಕೊಳ್ಳಲಿಲ್ಲ. ಅಂದಾಗ ಸ್ನೇಹದ ಪ್ರಮಾಣವಾಗಿದೆ - ಎಲ್ಲವನ್ನೂ ಸಫಲ ಮಾಡಿರಿ. ಸಫಲ ಮಾಡುವ ಅರ್ಥವಾಗಿದೆ - ಶ್ರೇಷ್ಠದ ಕಡೆ ಉಪಯೋಗಿಸುವುದು.