31.01.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಯೋಗವು ಅಗ್ನಿ ಸಮಾನವಾಗಿದೆ, ಇದರಲ್ಲಿ ನಿಮ್ಮ ಪಾಪಗಳು ಸುಟ್ಟು ಹೋಗುತ್ತವೆ, ಆತ್ಮವು ಸತೋಪ್ರಧಾನವಾಗುತ್ತದೆ ಆದ್ದರಿಂದ ಒಬ್ಬ ತಂದೆಯ ನೆನಪಿನಲ್ಲಿರಿ (ಯೋಗದಲ್ಲಿ)”

ಪ್ರಶ್ನೆ:
ಪುಣ್ಯಾತ್ಮರಾಗುವ ಮಕ್ಕಳು ಯಾವ ಮಾತಿನ ಬಹಳ-ಬಹಳ ಗಮನವಿಡಬೇಕು?

ಉತ್ತರ:
ಹಣವನ್ನು ಯಾರಿಗೆ ದಾನ ಮಾಡಬೇಕು ಎಂಬ ಮಾತಿನ ಮೇಲೆ ಸಂಪೂರ್ಣ ಗಮನವಿಡಬೇಕಾಗಿದೆ. ಒಂದುವೇಳೆ ಯಾರಿಗಾದರೂ ಹಣವನ್ನು ಕೊಟ್ಟಿರಿ ಮತ್ತು ಅವರು ಹೋಗಿ ಮಧ್ಯಪಾನವನ್ನು ಮಾಡಿದರು ಅಥವಾ ಕೆಟ್ಟ ಕರ್ಮಗಳನ್ನು ಮಾಡಿದರೆಂದರೆ ಅವರ ಪಾಪಗಳು ನಿಮ್ಮ ಮೇಲೆ ಬಂದು ಬಿಡುತ್ತದೆ. ನೀವು ಪಾಪಾತ್ಮರೊಂದಿಗೆ ಈಗ ಲೇವಾದೇವಿ ಮಾಡಬಾರದು. ಇಲ್ಲಂತೂ ನೀವು ಪುಣ್ಯಾತ್ಮರಾಗಬೇಕಾಗಿದೆ.

ಗೀತೆ:
ಅವರು ನಮ್ಮನ್ನು ಅಗಲುವುದಿಲ್ಲ.........

ಓಂ ಶಾಂತಿ.
ಇದಕ್ಕೆ ನೆನಪಿನ ಅಗ್ನಿಯೆಂದು ಕರೆಯಲಾಗುತ್ತದೆ. ಯೋಗ ಅಗ್ನಿಯೆಂದರೆ ನೆನಪಿನ ಅಗ್ನಿ. ‘ಅಗ್ನಿ’ ಅಕ್ಷರವನ್ನು ಏಕೆ ಹೇಳಿದ್ದಾರೆ? ಏಕೆಂದರೆ ಇದರಲ್ಲಿ ಪಾಪಗಳು ಸುಟ್ಟು ಹೋಗುತ್ತವೆ. ಹೇಗೆ ನಾವು ಸತೋಪ್ರಧಾನರಾಗುತ್ತೇವೆಂದು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಸತೋಪ್ರಧಾನದ ಅರ್ಥವೇ ಆಗಿದೆ - ಪುಣ್ಯಾತ್ಮ ಮತ್ತು ತಮೋಪ್ರಧಾನದ ಅರ್ಥವೇ ಆಗಿದೆ - ಪಾಪಾತ್ಮ. ಇವರು ಬಹಳ ಪುಣ್ಯಾತ್ಮನಾಗಿದ್ದಾರೆ, ಇವರು ಪಾಪಾತ್ಮನಾಗಿದ್ದಾರೆ ಎಂದು ಹೇಳಲಾಗುತ್ತದೆ. ಇದರಿಂದಲೇ ಸಿದ್ಧವಾಗುತ್ತದೆ - ಆತ್ಮವೇ ಸತೋಪ್ರಧಾನವಾಗುತ್ತದೆ ಮತ್ತೆ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ತಮೋಪ್ರಧಾನವಾಗುತ್ತದೆ ಆದ್ದರಿಂದ ಅದಕ್ಕೆ ಪಾಪಾತ್ಮವೆಂದು ಹೇಳಲಾಗುತ್ತದೆ. ಬಂದು ಪಾವನ ಮಾಡಿ ಎಂದು ಪತಿತ-ಪಾವನ ತಂದೆಯನ್ನೇ ನೆನಪು ಮಾಡುತ್ತಾರೆ. ಪತಿತ ಆತ್ಮನನ್ನಾಗಿ ಯಾರು ಮಾಡಿದರು? ಇದು ಯಾರಿಗೂ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ - ಯಾವಾಗ ಪಾವನ ಆತ್ಮಗಳಾಗಿದ್ದೆವೆಯೋ ಆಗ ಅದಕ್ಕೆ ರಾಮರಾಜ್ಯವೆಂದು ಕರೆಯಲಾಗುತ್ತಿತ್ತು. ಈಗ ಪತಿತ ಆತ್ಮಗಳಾಗಿರುವುದರಿಂದ ಇದಕ್ಕೆ ರಾವಣ ರಾಜ್ಯವೆಂದು ಹೇಳಲಾಗುವುದು. ಭಾರತವೇ ಪಾವನ, ಭಾರತವೇ ಪತಿತವಾಗುತ್ತದೆ. ತಂದೆಯೇ ಬಂದು ಭಾರತವನ್ನು ಪಾವನವನ್ನಾಗಿ ಮಾಡುತ್ತಾರೆ. ಉಳಿದೆಲ್ಲಾ ಆತ್ಮಗಳು ಪಾವನರಾಗಿ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಈಗ ದುಃಖಧಾಮವಾಗಿದೆ. ಈ ಸಹಜ ಮಾತೂ ಸಹ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಯಾವಾಗ ಇದನ್ನು ಹೃದಯದಿಂದ ಅರಿತುಕೊಳ್ಳುವರೋ ಆಗ ಸತ್ಯ ಬ್ರಾಹ್ಮಣರಾಗುವರು. ಬ್ರಾಹ್ಮಣರಾಗದ ಹೊರತು ತಂದೆಯಿಂದ ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ.

ಈಗ ಇದು ಸಂಗಮಯುಗದ ಯಜ್ಞವಾಗಿದೆ. ಯಜ್ಞಕ್ಕಾಗಿ ಬ್ರಾಹ್ಮಣರು ಅವಶ್ಯವಾಗಿ ಬೇಕು. ಈಗ ನೀವು ಬ್ರಾಹ್ಮಣರಾಗಿದ್ದೀರಿ. ನಿಮಗೆ ತಿಳಿದಿದೆ - ಇದು ಮೃತ್ಯುಲೋಕದ ಅಂತಿಮ ಯಜ್ಞವಾಗಿದೆ. ಮೃತ್ಯುಲೋಕದಲ್ಲಿಯೇ ಯಜ್ಞಗಳಾಗುತ್ತವೆ, ಅಮರಲೋಕದಲ್ಲಿ ಯಜ್ಞಗಳನ್ನು ಮಾಡುವುದಿಲ್ಲ. ಭಕ್ತರ ಬುದ್ಧಿಯಲ್ಲಿ ಈ ಮಾತುಗಳು ಕುಳಿತುಕೊಳ್ಳಲು ಸಾಧ್ಯವಿಲ್ಲ. ಭಕ್ತಿಯೇ ಬೇರೆ, ಜ್ಞಾನವೇ ಬೇರೆಯಾಗಿದೆ. ಮನುಷ್ಯರು ವೇದಶಾಸ್ತ್ರಗಳನ್ನೇ ಜ್ಞಾನವೆಂದು ತಿಳಿಯುತ್ತಾರೆ ಒಂದುವೇಳೆ ಅದರಲ್ಲಿ ಜ್ಞಾನವಿದ್ದರೆ ಅವರು ಹಿಂತಿರುಗಿ ಹೊರಟು ಹೋಗುತ್ತಿದ್ದರು ಆದರೆ ನಾಟಕದನುಸಾರವಾಗಿ ಯಾರೂ ಹಿಂತಿರುಗಿ ಹೋಗುವುದಿಲ್ಲ. ತಂದೆಯು ತಿಳಿಸಿದ್ದಾರೆ - ಮೊದಲ ನಂಬರಿನವರೇ ಸತೋ, ರಜೋ, ತಮೋದಲ್ಲಿ ಬರಬೇಕಾಗಿದೆ ಅಂದಮೇಲೆ ನಂತರದವರು ಕೇವಲ ಸತೋ ಪಾತ್ರವನ್ನಭಿನಯಿಸಿ ಹಿಂತಿರುಗಿ ಹೋಗಲು ಹೇಗೆ ಸಾಧ್ಯ! ಅವರು ಮತ್ತೆ ತಮೋದಲ್ಲಿ ಬರಲೇಬೇಕಾಗಿದೆ ಪಾತ್ರವನ್ನಭಿನಯಿಸಲೇಬೇಕಾಗಿದೆ. ಪ್ರತಿಯೊಬ್ಬ ಪಾತ್ರಧಾರಿಯ ಶಕ್ತಿಯು ಬೇರೆ-ಬೇರೆಯಾಗಿದೆ. ದೊಡ್ಡ-ದೊಡ್ದ ಪಾತ್ರಧಾರಿಗಳು ಎಷ್ಟು ಹೆಸರುವಾಸಿಯಾಗುತ್ತಾರೆ. ಎಲ್ಲರಿಗಿಂತ ಮುಖ್ಯ ರಚಯಿತ-ನಿರ್ದೇಶಕ ಮತ್ತು ಮುಖ್ಯಪಾತ್ರಧಾರಿ ಯಾರು? ಈಗ ನೀವು ತಿಳಿದುಕೊಂಡಿದ್ದೀರಿ - ಪರಮಾತ್ಮನೇ ಮುಖ್ಯ ಪಾತ್ರಧಾರಿಯಾಗಿದ್ದಾರೆ ಅವರ ನಂತರ ಜಗದಂಬಾ-ಜಗತ್ಪಿತ. ಜಗತ್ತಿನ ಮಾಲೀಕರು ವಿಶ್ವದ ಮಾಲೀಕರಾಗುತ್ತಾರೆ. ಅಂದಾಗ ಇವರ ಪಾತ್ರವು ಅವಶ್ಯವಾಗಿ ಶ್ರೇಷ್ಠವಾಗಿದೆ. ಅಂದಮೇಲೆ ಅವರ ವೇತನವೂ ಹೆಚ್ಚಾಗಿದೆ, ವೇತನವನ್ನು ತಂದೆಯೇ ಕೊಡುತ್ತಾರೆ ಯಾರು ಎಲ್ಲರಿಗಿಂತ ಶ್ರೇಷ್ಠರಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವು ನನಗೆ ಎಷ್ಟು ಸಹಯೋಗ ಕೊಡುತ್ತೀರೋ ಅಷ್ಟು ನಿಮಗೆ ವೇತನವೂ ಅವಶ್ಯವಾಗಿ ಸಿಗುವುದು. ವಕೀಲ ವಿದ್ಯೆಯನ್ನು ಓದಿಸುವವರು ಹೇಳುತ್ತಾರಲ್ಲವೆ - ನಾನು ಇಷ್ಟು ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಸುತ್ತೇನೆ ಎಂದು. ಅಂದಮೇಲೆ ಈ ವಿದ್ಯೆಯ ಮೇಲೆ ಮಕ್ಕಳು ಎಷ್ಟೊಂದು ಗಮನವಿಡಬೇಕು. ಗೃಹಸ್ಥದಲ್ಲಿಯೂ ಇರಬೇಕು, ಕರ್ಮಯೋಗವು ಸನ್ಯಾಸವಾಗಿದೆಯಲ್ಲವೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ, ಎಲ್ಲವನ್ನೂ ಮಾಡುತ್ತಾ ತಂದೆಯಿಂದ ಆಸ್ತಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕಾಗಿದೆ. ಇದರಲ್ಲಿ ಯಾವುದೇ ಕಷ್ಟವಿಲ್ಲ. ಕೆಲಸ ಕಾರ್ಯಗಳನ್ನು ಮಾಡುತ್ತಲೂ ಶಿವ ತಂದೆಯ ನೆನಪಿನಲ್ಲಿರಬೇಕಾಗಿದೆ. ಜ್ಞಾನವು ಬಹಳ ಸಹಜವಾಗಿದೆ. ಹೇ ಪತಿತ-ಪಾವನ ಬನ್ನಿ, ಬಂದು ಪಾವನ ಮಾಡಿ ಎಂದು ಹಾಡುತ್ತಾರೆ. ಪಾವನ ಪ್ರಪಂಚದಲ್ಲಿ ರಾಜಧಾನಿಯಿರುತ್ತದೆ. ಅಂದಾಗ ತಂದೆಯು ಆ ರಾಜಧಾನಿಗೆ ಯೋಗ್ಯರನ್ನಾಗಿ ಮಾಡುತ್ತಾರೆ.

ಈ ಜ್ಞಾನದಲ್ಲಿ ಮುಖ್ಯವಾಗಿ ಎರಡು ಸಬ್ಜೆಕ್ಟ್ಗಳಿವೆ - ‘ತಂದೆ ಮತ್ತು ಆಸ್ತಿ’ ಸ್ವದರ್ಶನ ಚಕ್ರಧಾರಿಗಳಾಗಿ ಮತ್ತು ತಂದೆಯನ್ನು ನೆನಪು ಮಾಡಿ ಆಗ ನೀವು ಸದಾ ಆರೋಗ್ಯವಂತ ಮತ್ತು ಸಂಪತ್ತಿವಂತರಾಗುತ್ತೀರಿ. ತಂದೆಯು ತಿಳಿಸುತ್ತಾರೆ - ನನ್ನನ್ನು ಪರಮಧಾಮದಲ್ಲಿ ನೆನಪು ಮಾಡಿ, ಮನೆಯನ್ನೂ ನೆನಪು ಮಾಡಿ. ನನ್ನನ್ನು ನೆನಪು ಮಾಡುವುದರಿಂದ ಮನೆಗೆ ಹೋಗುವಿರಿ. ಸ್ವದರ್ಶನ ಚಕ್ರಧಾರಿಗಳಾಗುವುದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ. ಇದು ಚೆನ್ನಾಗಿ ಬುದ್ಧಿಯಲ್ಲಿರಬೇಕು. ಈ ಸಮಯದಲ್ಲಿ ಎಲ್ಲವೂ ತಮೋಪ್ರಧಾನವಾಗಿದೆ. ಸುಖಧಾಮದಲ್ಲಿ ಸುಖ, ಶಾಂತಿ, ಸಂಪತ್ತು ಎಲ್ಲವೂ ಸಿಗುತ್ತದೆ. ಅಲ್ಲಿ ಒಂದು ಧರ್ಮವಿರುತ್ತದೆ, ಈಗಂತೂ ನೋಡಿ - ಮನೆ-ಮನೆಯಲ್ಲಿ ದುಃಖ-ಅಶಾಂತಿಯಿದೆ. ವಿದ್ಯಾರ್ಥಿಗಳು ಎಷ್ಟೊಂದು ಹೊಡೆದಾಡುತ್ತಾರೆ, ತಮ್ಮ ಬಿಸಿ ರಕ್ತವನ್ನು ತೋರಿಸಿಕೊಳ್ಳುತ್ತಾರೆ. ಇದು ತಮೋಪ್ರಧಾನ ಪ್ರಪಂಚವಾಗಿದೆ. ಸತ್ಯಯುಗವು ಸತೋಪ್ರಧಾನವಾಗಿದೆ. ತಂದೆಯು ಸಂಗಮಯುಗದಲ್ಲಿ ಬಂದಿದ್ದಾರೆ, ಮಹಾಭಾರತ ಯುದ್ಧವು ಸಂಗಮದ ಸಮಯದ್ದೇ ಆಗಿದೆ. ಈಗ ಈ ಪ್ರಪಂಚವು ಬದಲಾಗುವುದಿದೆ. ನಾನು ಹೊಸ ಪ್ರಪಂಚದ ಸ್ಥಾಪನೆ ಮಾಡಲು ಸಂಗಮಯುಗದಲ್ಲಿ ಬರುತ್ತೇನೆ, ಇದಕ್ಕೆ ಪುರುಷೋತ್ತಮ ಸಂಗಮಯುಗವೆಂದು ಹೇಳುತ್ತಾರೆ. ಪುರುಷೋತ್ತಮ ಮಾಸ, ಪುರುಷೋತ್ತಮ ಸಂವತ್ಸರವನ್ನೂ ಆಚರಿಸುತ್ತಾರೆ ಆದರೆ ಈ ಪುರುಷೋತ್ತಮ ಸಂಗಮಯುಗವು ಯಾರಿಗೂ ತಿಳಿದಿಲ್ಲ. ಸಂಗಮದಲ್ಲಿಯೇ ತಂದೆಯು ಬಂದು ನಿಮ್ಮನ್ನು ವಜ್ರ ಸಮಾನರನ್ನಾಗಿ ಮಾಡುತ್ತಾರೆ ಮತ್ತೆ ಅದರಲ್ಲಿಯೂ ನಂಬರ್ವಾರ್ ಇದ್ದೇ ಇರುತ್ತಾರೆ, ವಜ್ರದಂತಹ ರಾಜರಾಗಿ ಬಿಡುತ್ತಾರೆ. ಉಳಿದಂತೆ ಚಿನ್ನದಂತಹ ಪ್ರಜೆಗಳಾಗಿ ಬಿಡುತ್ತಾರೆ. ಮಕ್ಕಳು ಜನ್ಮ ತೆಗೆದುಕೊಂಡರೆಂದರೆ ಆಸ್ತಿಗೆ ಹಕ್ಕುದಾರರಾದರು. ನೀವು ಪಾವನ ಪ್ರಪಂಚದ ಹಕ್ಕುದಾರರಾಗಿ ಬಿಡುತ್ತೀರಿ ಮತ್ತೆ ಅದರಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ. ಈ ಸಮಯದ ನಿಮ್ಮ ಪುರುಷಾರ್ಥವೇ ಕಲ್ಪ-ಕಲ್ಪದ ಪುರುಷಾರ್ಥವಾಗುವುದು. ಈಗ ಮಾಡಿದುದರ ಆಧಾರದ ಮೇಲೆ ಕಲ್ಪ-ಕಲ್ಪವೂ ಇದೇ ರೀತಿ ಪುರುಷಾರ್ಥ ಮಾಡುತ್ತೇವೆಂದು ತಿಳಿಯಲಾಗುತ್ತದೆ. ಇದಕ್ಕಿಂತ ಹೆಚ್ಚಿನ ಪುರುಷಾರ್ಥವು ಆಗುವುದೇ ಇಲ್ಲ. ಜನ್ಮ-ಜನ್ಮಾಂತರ, ಕಲ್ಪ-ಕಲ್ಪಾಂತರ ಪ್ರಜೆಗಳಲ್ಲಿಯೇ ಬರುತ್ತಾರೆ. ಇಂತಹವರು ಸಾಹುಕಾರ ಪ್ರಜೆಗಳಲ್ಲಿ ದಾಸ-ದಾಸಿಯರಾಗುತ್ತಾರೆ. ನಂಬರ್ವಾರಂತೂ ಇರುತ್ತಾರಲ್ಲವೆ. ವಿದ್ಯೆಯ ಆಧಾರದಿಂದ ಎಲ್ಲವೂ ತಿಳಿಯುತ್ತದೆ. ಈ ಸ್ಥಿತಿಯಲ್ಲಿ ನಿಮ್ಮದು ನಾಳೆ ಶರೀರ ಬಿಟ್ಟು ಹೋದರೆ ಏನಾಗುವಿರಿ ಎಂಬುದನ್ನು ತಂದೆಯು ತಿಳಿಸಬಲ್ಲರು. ದಿನ-ಪ್ರತಿದಿನ ಸಮಯವು ಕಡಿಮೆಯಾಗುತ್ತಾ ಹೋಗುವುದು. ಒಂದುವೇಳೆ ಯಾರಾದರೂ ಶರೀರ ಬಿಟ್ಟರೆ ಮತ್ತೆ ಓದಲು ಸಾಧ್ಯವಿಲ್ಲ. ಹಾ! ಅಲ್ಪ ಸ್ವಲ್ಪ ಬುದ್ಧಿಯಲ್ಲಿ ಬರುವುದು, ಶಿವ ತಂದೆಯನ್ನು ನೆನಪು ಮಾಡುತ್ತಾರೆ. ಹೇಗೆ ಚಿಕ್ಕ ಮಕ್ಕಳಿಗೂ ಸಹ ನೆನಪು ಮಾಡಿಸುತ್ತೀರೆಂದರೆ ಶಿವಬಾಬಾ, ಶಿವಬಾಬಾ ಎಂದು ಹೇಳುತ್ತಿರುತ್ತಾರೆ. ಅಂದಮೇಲೆ ಅವರಿಗೂ ಸ್ವಲ್ಪ ಪ್ರಾಪ್ತಿಯು ಸಿಗುವುದು. ಚಿಕ್ಕ ಮಗು ಮಹಾತ್ಮನ ಸಮಾನವಾಗಿದೆ, ವಿಕಾರಗಳ ಬಗ್ಗೆ ಗೊತ್ತೇ ಇಲ್ಲ. ಎಷ್ಟು ದೊಡ್ಡವರಾಗುತ್ತಾ ಹೋಗುವರೋ ಅಷ್ಟು ವಿಕಾರಗಳ ಪ್ರಭಾವವಾಗುತ್ತಾ ಹೋಗುವುದು. ಕ್ರೋಧವಿರುವುದು, ಮೋಹವಿರುವುದು..... ಈಗ ನಿಮಗಂತೂ ತಿಳಿಸಲಾಗುತ್ತದೆ - ಈ ಪ್ರಪಂಚದಲ್ಲಿ ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರಿ ಅದೆಲ್ಲದರಿಂದ ಮಮತ್ವವನ್ನು ಕಳೆಯಬೇಕಾಗಿದೆ. ಆತ್ಮಕ್ಕೆ ಗೊತ್ತಿದೆ - ಇದೆಲ್ಲವೂ ಸ್ಮಶಾನವಾಗಲಿದೆ, ತಮೋಪ್ರಧಾನ ವಸ್ತುಗಳಾಗಿವೆ. ಮನುಷ್ಯರು ಸತ್ತಾಗ ಅವರ ಹಳೆಯ ವಸ್ತುಗಳನ್ನು ಸ್ಮಶಾನದ ಕಾವಲುಗಾರರಿಗೆ ಕೊಟ್ಟು ಬಿಡುತ್ತಾರೆ. ತಂದೆಯಂತೂ ಬೇಹದ್ದಿನ ಕಾವಲುಗಾರನಾಗಿದ್ದಾರೆ, ಅಗಸನೂ ಆಗಿದ್ದಾರೆ, ನಿಮ್ಮಿಂದ ಏನನ್ನು ತೆಗೆದುಕೊಳ್ಳುತ್ತಾರೆ ಮತ್ತು ಏನನ್ನು ಕೊಡುತ್ತಾರೆ? ನೀವು ಯಾವುದೆಲ್ಲಾ ಅಲ್ಪಸ್ವಲ್ಪ ಹಣವನ್ನು ಕೊಡುತ್ತೀರೋ ಅದು ನಿಮ್ಮ ಬಳಿಯಿದ್ದರೂ ಸಮಾಪ್ತಿಯಾಗಿಯೇ ಆಗುತ್ತದೆ ಆದರೂ ಸಹ ತಂದೆಯು ತಿಳಿಸುತ್ತಾರೆ - ಈ ಧನವನ್ನು ತಮ್ಮ ಬಳಿಯೇ ಇಟ್ಟುಕೊಳ್ಳಿ, ಕೇವಲ ಇದರಿಂದ ಮಮತ್ವವನ್ನು ತೆಗೆಯಿರಿ. ಲೆಕ್ಕವನ್ನು ತಂದೆಗೆ ತಿಳಿಸುತ್ತಾ ಇರಿ ನಂತರ ಅವರಿಂದ ಸಲಹೆಯು ಸಿಗುತ್ತಿರುತ್ತದೆ. ನಿಮ್ಮ ಬಳಿ ಯಾವ ಹಳೆಯ ವಸ್ತುಗಳಿವೆಯೋ ಅದನ್ನು ವಿಶ್ವ ವಿದ್ಯಾಲಯದಲ್ಲಿ ಮತ್ತು ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಭಾಗ್ಯಕ್ಕಾಗಿ ತೊಡಗಿಸುತ್ತೀರಿ. ಆಸ್ಪತ್ರೆಯು ರೋಗಿಗಳಿಗಾಗಿ ಇರುತ್ತದೆ. ವಿಶ್ವ ವಿದ್ಯಾಲಯವು ಓದಿಸುವುದಕ್ಕಾಗಿ ಇರುತ್ತದೆ. ಇದು ಕಾಲೇಜು ಮತ್ತು ಆಸ್ಪತ್ರೆ ಎರಡೂ ಒಟ್ಟಿಗೆ ಇದೆ. ಇದಕ್ಕಾಗಿ ಕೇವಲ ಮೂರು ಹೆಜ್ಜೆಗಳಷ್ಟು ಪೃಥ್ವಿಯು ಬೇಕು. ಯಾರ ಬಳಿ ಏನೂ ಇಲ್ಲವೋ ಅವರು ಕೇವಲ ಮೂರು ಹೆಜ್ಜೆಗಳಷ್ಟು ಜಮೀನನ್ನು ಕೊಟ್ಟರೂ ಸಾಕು ಅದರಲ್ಲಿ ಮುರುಳಿ ತರಗತಿಯನ್ನು ನಡೆಸಿ. ಮೂರು ಹೆಜ್ಜೆಗಳಷ್ಟು ಜಾಗವು ಕೇವಲ ಕುಳಿತುಕೊಳ್ಳುವಷ್ಟು ಸ್ಥಾನವಾಯಿತಲ್ಲವೆ. ಆಸನವು ಮೂರು ಹೆಜ್ಜೆಗಳಷ್ಟು ಅಗಲವೇ ಇರುತ್ತದೆ. ಮೂರು ಹೆಜ್ಜೆಗಳಷ್ಟು ಸ್ಥಳದಲ್ಲಿ ಯಾರೇ ಬಂದರೆಂದರೆ ಬಹಳ ಚೆನ್ನಾಗಿ ಅರಿತುಕೊಂಡು ಓದುವರು. ಯಾರೇ ಬರಲಿ ಆಸನದ ಮೇಲೆ ಕುಳ್ಳರಿಸುವುದು ಮತ್ತು ತಂದೆಯ ಪರಿಚಯ ಕೊಡುವುದು. ಸರ್ವೀಸಿಗಾಗಿ ಬ್ಯಾಡ್ಜ್ಗಳನ್ನು ಮಾಡಿಸಲಾಗಿದೆ, ಇದು ಸರಳವಾಗಿದೆ, ಚಿತ್ರಗಳೂ ಚೆನ್ನಾಗಿದೆ. ಪೂರ್ಣ ಬರವಣಿಗೆಯೂ ಇದೆ, ಇದರಿಂದ ನಿಮ್ಮ ಬಹಳ ಸೇವೆಯಾಗುವುದು. ದಿನ-ಪ್ರತಿದಿನ ಎಷ್ಟು ಆಪತ್ತುಗಳು ಬರುತ್ತಿರುವುದೋ ಅಷ್ಟು ಮನುಷ್ಯರಿಗೆ ವೈರಾಗ್ಯವು ಬರುವುದು ಮತ್ತು ತಂದೆಯನ್ನು ನೆನಪು ಮಾಡತೊಡಗುತ್ತಾರೆ - ನಾವಾತ್ಮಗಳು ಅವಿನಾಶಿಯಾಗಿದ್ದೇವೆ, ನಮ್ಮ ಅವಿನಾಶಿ ತಂದೆಯನ್ನು ನೆನಪು ಮಾಡಬೇಕು. ಸ್ವಯಂ ತಂದೆಯೇ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ಕಳೆಯುತ್ತವೆ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯೊಂದಿಗೆ ಸಂಪೂರ್ಣ ಪ್ರೀತಿಯನ್ನಿಟ್ಟುಕೊಳ್ಳಿ, ದೇಹಾಭಿಮಾನದಲ್ಲಿ ಬರಬೇಡಿ. ಹಾ! ಭಲೆ ಮಕ್ಕಳು ಮೊದಲಾದವರೊಂದಿಗೆ ಹೊರಗಿನ ಪ್ರೀತಿಯನ್ನಿಡಿ ಆದರೆ ಆತ್ಮದ ಸತ್ಯ ಪ್ರೀತಿಯು ಆತ್ಮಿಕ ತಂದೆಯೊಂದಿಗಿರಲಿ. ಇವರ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತದೆ. ಮಿತ್ರ ಸಂಬಂಧಿಗಳು, ಮಕ್ಕಳು ಮೊದಲಾದವರನ್ನು ನೋಡುತ್ತಿದ್ದರೂ ಸಹ ಬುದ್ಧಿಯು ತಂದೆಯ ನೆನಪಿನಲ್ಲಿ ತಗುಲಿಹಾಕಿಕೊಂಡಿರಲಿ. ನೀವು ಮಕ್ಕಳು ಹೇಗೆ ನೆನಪೆಂಬ ನೇಣಿಗೆ ತಗುಲಿಹಾಕಿಕೊಂಡಿದ್ದೀರಿ, ಆತ್ಮವು ತನ್ನ ತಂದೆ ಪರಮಾತ್ಮನನ್ನೇ ನೆನಪು ಮಾಡಬೇಕಾಗಿದೆ. ಬುದ್ಧಿಯು ಮೇಲೆ ತಗುಲಿಹಾಕಿಕೊಂಡಿರಲಿ. ತಂದೆಯ ಮನೆಯೂ ಸಹ ಮೇಲಿದೆಯಲ್ಲವೆ. ಮೂಲವತನ, ಸೂಕ್ಷ್ಮವತನ ಮತ್ತು ಇದು ಸ್ಥೂಲವತನವಾಗಿದೆ. ಈಗ ಪುನಃ ಹಿಂತಿರುಗಿ ಹೋಗಬೇಕಾಗಿದೆ.

ಈಗ ನಿಮ್ಮ ಯಾತ್ರೆಯು ಮುಕ್ತಾಯವಾಯಿತು. ನೀವೀಗ ಯಾತ್ರೆಯಿಂದ ಹಿಂದಿರುಗುತ್ತಿದ್ದೀರಿ. ಆದ್ದರಿಂದ ತಮ್ಮ ಮನೆಯು ಎಷ್ಟೊಂದು ಪ್ರಿಯವೆನಿಸುತ್ತದೆ. ಅದು ಬೇಹದ್ದಿನ ಮನೆಯಾಗಿದೆ, ಹಿಂತಿರುಗಿ ತಮ್ಮ ಮನೆಗೆ ಹೋಗಬೇಕಾಗಿದೆ. ಮನುಷ್ಯರು ಮನೆಗೆ ಹೋಗುವುದಕ್ಕಾಗಿಯೇ ಭಕ್ತಿ ಮಾಡುತ್ತಾರೆ. ಆದರೆ ಪೂರ್ಣ ಜ್ಞಾನವಿಲ್ಲದಿದ್ದರೂ ಮನೆಗೆ ಹೋಗಲು ಸಾಧ್ಯವಿಲ್ಲ. ಭಗವಂತನ ಬಳಿ ಹೋಗಲು ಅಥವಾ ನಿರ್ವಾಣಧಾಮಕ್ಕೆ ಹೋಗುವುದಕ್ಕಾಗಿ ಎಷ್ಟೊಂದು ತೀರ್ಥ ಯಾತ್ರೆಗಳಿಗೆ ಹೋಗುತ್ತಾರೆ, ಎಷ್ಟೊಂದು ಪರಿಶ್ರಮ ಪಡುತ್ತಾರೆ. ಸನ್ಯಾಸಿಗಳು ಕೇವಲ ಶಾಂತಿಯ ಮಾರ್ಗವನ್ನೇ ತಿಳಿಸುತ್ತಾರೆ. ಸುಖಧಾಮವನ್ನು ಅವರು ಅರಿತುಕೊಂಡೇ ಇಲ್ಲ, ಸುಖಧಾಮದ ಮಾರ್ಗವನ್ನು ಕೇವಲ ತಂದೆಯೇ ತಿಳಿಸುತ್ತಾರೆ. ಮೊದಲು ಅವಶ್ಯವಾಗಿ ನಿರ್ವಾಣಧಾಮ, ವಾನಪ್ರಸ್ಥದಲ್ಲಿ ಹೋಗಬೇಕಾಗಿದೆ ಅದಕ್ಕೆ ಬ್ರಹ್ಮಾಂಡವೆಂದೂ ಹೇಳುತ್ತಾರೆ. ಇದಕ್ಕೆ ಅವರು ಬ್ರಹ್ಮ್ತತ್ವವನ್ನೇ ಈಶ್ವರನೆಂದು ತಿಳಿದು ಕುಳಿತಿದ್ದಾರೆ. ನಾವಾತ್ಮಗಳು ಬಿಂದುವಾಗಿದ್ದೇವೆ. ನಾವಿರುವ ಸ್ಥಾನವು ಬ್ರಹ್ಮಾಂಡವಾಗಿದೆ, ನಿಮ್ಮದೂ ಪೂಜೆಯಾಗುತ್ತದೆಯಲ್ಲವೆ. ಈಗ ಬಿಂದುವಿನ ಪೂಜೆಯನ್ನೇನು ಮಾಡುತ್ತಾರೆ! ಯಾವಾಗ ಪೂಜೆ ಮಾಡುವರೋ ಆಗ ಸಾಲಿಗ್ರಾಮಗಳ ರೂಪದಲ್ಲಿ ಮಾಡಿ ಒಂದೊಂದು ಆತ್ಮವನ್ನೂ ಪೂಜಿಸುತ್ತಾರೆ. ಬಿಂದುವಿಗೆ ಹೇಗೆ ಪೂಜೆ ಮಾಡುವುದು ಆದ್ದರಿಂದ ದೊಡ್ಡ-ದೊಡ್ಡ ಗಾತ್ರದಲ್ಲಿ ಮಾಡುತ್ತಾರೆ. ತಂದೆಗಂತೂ ತಮ್ಮ ಶರೀರವಿಲ್ಲ, ಈ ಮಾತುಗಳನ್ನು ನೀವು ಈಗ ತಿಳಿದುಕೊಂಡಿದ್ದೀರಿ. ಚಿತ್ರಗಳಲ್ಲಿಯೂ ನೀವು ದೊಡ್ಡ ರೂಪವನ್ನೇ ತೋರಿಸಬೇಕಾಗುತ್ತದೆ. ಬಿಂದುವಿನಿಂದ ಹೇಗೆ ತಿಳಿದುಕೊಳ್ಳುವರು? ಹಾಗೆ ನೋಡಿದರೆ ವಾಸ್ತವದಲ್ಲಿ ಬಿಂದು ರೂಪದಲ್ಲಿಯೇ ತೋರಿಸಬೇಕು. ಹೀಗೆ ಅನೇಕ ಮಾತೆಯರು ತಿಲಕವನ್ನು ಇಟ್ಟುಕೊಳ್ಳುತ್ತಾರೆ, ಸಿದ್ಧವಾಗಿರುವಂತಹ ಬಿಳಿಯ ಬಿಂದುಗಳು ಸಿಗುತ್ತವೆ. ಆತ್ಮವೂ ಸಹ ಶ್ವೇತ ಬಣ್ಣದ್ದಾಗಿದೆಯಲ್ಲವೆ. ನಕ್ಷತ್ರದ ಮಾದರಿಯಾಗಿದೆ. ಇದೂ ಸಹ ಒಂದು ಗುರುತಾಗಿದೆ. ಭೃಕುಟಿಯ ಮಧ್ಯೆ ಆತ್ಮವಿದೆ ಆದರೆ ಇದರ ಅರ್ಥವು ಯಾರಿಗೂ ತಿಳಿದಿಲ್ಲ. ಇದನ್ನು ತಂದೆಯು ತಿಳಿಸುತ್ತಾರೆ - ಇಷ್ಟು ಸೂಕ್ಷ್ಮ ಆತ್ಮದಲ್ಲಿ ಎಷ್ಟೊಂದು ಜ್ಞಾನವಿದೆ! ಎಷ್ಟೊಂದು ಬಾಂಬು ಮೊದಲಾದುವುಗಳನ್ನು ತಯಾರಿಸುತ್ತಿರುತ್ತಾರೆ. ಆಶ್ಚರ್ಯವೇನೆಂದರೆ ಇಷ್ಟು ಸೂಕ್ಷ್ಮ ಆತ್ಮದಲ್ಲಿ ಎಷ್ಟೊಂದು ಪಾತ್ರವು ತುಂಬಲ್ಪಟ್ಟಿದೆ! ಇವು ಬಹಳ ಗುಹ್ಯ ಮಾತುಗಳಾಗಿವೆ. ಇಷ್ಟು ಚಿಕ್ಕ ಆತ್ಮವು ಶರೀರದಿಂದ ಕೆಲಸ ಮಾಡುತ್ತದೆ. ಆತ್ಮವು ಅವಿನಾಶಿಯಾಗಿದೆ, ಅದರ ಪಾತ್ರವೆಂದೂ ವಿನಾಶ ಹೊಂದುವುದಿಲ್ಲ ಅಥವಾ ಪಾತ್ರವು ಬದಲಾಗುವುದೂ ಇಲ್ಲ. ಈಗ ಬಹಳ ದೊಡ್ಡ ವೃಕ್ಷವಾಗಿದೆ, ಸತ್ಯಯುಗದಲ್ಲಿ ಮಾನವ ವಂಶವೃಕ್ಷವು ಎಷ್ಟು ಚಿಕ್ಕದಾಗಿರುತ್ತದೆ! ಹಳೆಯದಾಗಿರುವುದಿಲ್ಲ. ಮಧುರ ಚಿಕ್ಕ ಸಸಿಯ ನಾಟಿಯು ಈಗಲೇ ಆಗುತ್ತಿದೆ. ನೀವು ಪತಿತರಾಗಿದ್ದಿರಿ, ಈಗ ಪುನಃ ಪಾವನರಾಗುತ್ತಿದ್ದೀರಿ. ಅತಿ ಸೂಕ್ಷ್ಮ ಆತ್ಮದಲ್ಲಿ ಎಷ್ಟೊಂದು ಪಾತ್ರವಿದೆ. ಇದು ಸೃಷ್ಟಿಯಾಗಿದೆ, ಅವಿನಾಶಿ ಪಾತ್ರವು ನಡೆಯುತ್ತಾ ಇರುತ್ತದೆ. ಇದು ಎಂದೂ ನಿಂತು ಹೋಗುವುದಿಲ್ಲ. ಅವಿನಾಶಿಯಾಗಿದೆ, ಅದರಲ್ಲಿ ಅವಿನಾಶಿ ಪಾತ್ರವೇ ತುಂಬಲ್ಪಟ್ಟಿದೆ. ಇದು ಅದೃಷ್ಟವಾಗಿದೆಯಲ್ಲದೆ, ಇದು ಅದ್ಭುತವಾಗಿದೆಯಲ್ಲವೆ! ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಗಳಾಗಬೇಕಾಗಿದೆ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಇದರಲ್ಲಿಯೇ ಪರಿಶ್ರಮವಿದೆ. ಎಲ್ಲರಿಗಿಂತ ಹೆಚ್ಚಿನ ಪಾತ್ರವು ನಿಮ್ಮದಾಗಿದೆ, ನಿಮ್ಮದೆಷ್ಟು ಪಾತ್ರವಿದೆಯೋ ಅಷ್ಟು ತಂದೆಯದು ಇಲ್ಲ.

ತಂದೆಯು ತಿಳಿಸುತ್ತಾರೆ - ನೀವು ಸ್ವರ್ಗದಲ್ಲಿ ಸುಖಿಯಾಗಿ ಬಿಡುತ್ತೀರಿ. ಆಗ ನಾನು ವಿಶ್ರಾಂತಿಯಲ್ಲಿ ಕುಳಿತು ಬಿಡುತ್ತೇನೆ. ಆ ಸಮಯದಲ್ಲಿ ನನ್ನದು ಯಾವುದೇ ಪಾತ್ರವಿಲ್ಲ. ಈ ಸಮಯದಲ್ಲಿ ಎಷ್ಟೊಂದು ಸೇವೆಯನ್ನು ಮಾಡುತ್ತೇನೆ ಅಲ್ಲವೆ. ಈ ಜ್ಞಾನವು ಎಷ್ಟು ವಿಚಿತ್ರವಾಗಿದೆ, ಇದನ್ನು ನಿಮ್ಮ ವಿನಃ ಮತ್ತ್ಯಾರೂ ಅರಿತುಕೊಂಡಿಲ್ಲ. ತಂದೆಯ ನೆನಪಿನಲ್ಲಿರದ ಹೊರತು ಧಾರಣೆಯೂ ಆಗುವುದಿಲ್ಲ. ಆಹಾರ-ಪಾನೀಯಗಳ ವ್ಯತ್ಯಾಸವಾಗುವುದರಿಂದ ಧಾರಣೆಯಲ್ಲಿಯೂ ವ್ಯತ್ಯಾಸವಾಗುತ್ತದೆ. ಇದರಲ್ಲಿ ಪವಿತ್ರತೆಯು ಬಹಳ ಚೆನ್ನಾಗಿರಬೇಕು. ತಂದೆಯನ್ನು ನೆನಪು ಮಾಡುವುದು ಬಹಳ ಸಹಜವಾಗಿದೆ. ತಂದೆಯನ್ನು ನೆನಪು ಮಾಡಬೇಕು ಮತ್ತು ಆಸ್ತಿಯನ್ನು ಪಡೆಯಬೇಕಾಗಿದೆ. ಆದ್ದರಿಂದ ತಂದೆಯು ತಿಳಿಸಿದ್ದರು - ನೀವು ತಮ್ಮ ಬಳಿ ಚಿತ್ರವನ್ನಿಟ್ಟುಕೊಳ್ಳಿ. ಯೋಗದ ಮತ್ತು ಆಸ್ತಿಯ ಚಿತ್ರವನ್ನಿಟ್ಟುಕೊಳ್ಳಿ ಆಗ ನಶೆಯಿರುವುದು. ನಾವು ಬ್ರಾಹ್ಮಣರಿಂದ ದೇವತೆಗಳಾಗುತ್ತಿದ್ದೇವೆ ಮತ್ತೆ ದೇವತೆಗಳಿಂದ ಕ್ಷತ್ರಿಯರಾಗುತ್ತೇವೆ. ಬ್ರಾಹ್ಮಣರು ಪುರುಷೋತ್ತಮ ಸಂಗಮಯುಗದ ನಿವಾಸಿಗಳಾಗಿದ್ದೀರಿ. ನೀವು ಪುರುಷೋತ್ತಮರಾಗುತ್ತೀರಲ್ಲವೆ. ಮನುಷ್ಯರು ಈ ಮಾತುಗಳನ್ನು ಬುದ್ಧಿಯಲ್ಲಿ ಕುಳ್ಳರಿಸಲು ಎಷ್ಟೊಂದು ಪರಿಶ್ರಮ ಪಡಬೇಕಾಗುತ್ತದೆ. ದಿನ-ಪ್ರತಿದಿನ ಜ್ಞಾನವನ್ನು ಅರ್ಥ ಮಾಡಿಕೊಳ್ಳುತ್ತಾ ಹೋದಂತೆ ಖುಷಿಯು ಹೆಚ್ಚುವುದು.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ನಮ್ಮ ಬಹಳಷ್ಟು ಕಲ್ಯಾಣ ಮಾಡುತ್ತಾರೆ, ಕಲ್ಪ-ಕಲ್ಪವೂ ನಮ್ಮದು ಏರುವ ಕಲೆಯಾಗುತ್ತದೆ. ಇಲ್ಲಿರುತ್ತಾ ಶರೀರ ನಿರ್ವಹಣಾರ್ಥವಾಗಿ ಎಲ್ಲವನ್ನೂ ಮಾಡಬೇಕಾಗುತ್ತದೆ. ಬುದ್ಧಿಯಲ್ಲಿರಲಿ - ನಾವು ಶಿವ ತಂದೆಯ ಭಂಡಾರದಿಂದ ತಿನ್ನುತ್ತೇವೆ, ಶಿವ ತಂದೆಯನ್ನು ನೆನಪು ಮಾಡುತ್ತಾ ಇದ್ದರೆ ಕಾಲಕಂಟಕಗಳೆಲ್ಲವೂ ದೂರವಾಗಿ ಬಿಡುತ್ತವೆ ಮತ್ತು ನಾವು ಈ ಹಳೆಯ ಶರೀರವನ್ನು ಬಿಟ್ಟು ಹೊರಟು ಹೋಗುತ್ತೇವೆ. ಮಕ್ಕಳಿಗೆ ಗೊತ್ತಿದೆ, ತಂದೆಯು ನಮ್ಮಿಂದ ಏನನ್ನೂ ತೆಗೆದುಕೊಳ್ಳುವುದಿಲ್ಲ. ಅವರು ದಾತನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನನ್ನ ಶ್ರೀಮತದಂತೆ ನಡೆಯಿರಿ, ನೀವು ಧನದಾನವನ್ನು ಯಾರಿಗೆ ಮಾಡಬೇಕು? ಈ ಮಾತಿನ ಮೇಲೆ ಪೂರ್ಣ ಗಮನ ಕೊಡಬೇಕಾಗಿದೆ. ಒಂದುವೇಳೆ ಯಾರಿಗೋ ಹಣವನ್ನು ಕೊಟ್ಟರಿ, ಅವರು ಹೋಗಿ ಮಧ್ಯಪಾನ ಮಾಡಿದರು, ಕೆಟ್ಟ ಕೆಲಸಗಳನ್ನು ಮಾಡಿದರೆಂದರೆ ಅವರ ಪಾಪವು ನಿಮ್ಮಮೇಲೆ ಬಂದು ಬಿಡುತ್ತದೆ. ಪಾಪಾತ್ಮರೊಂದಿಗೆ ಕಾರ್ಯ ವ್ಯವಹಾರವನ್ನು ಮಾಡುತ್ತಾ ಪಾಪಾತ್ಮರಾಗಿ ಬಿಡುತ್ತಾರೆ. ಎಷ್ಟೊಂದು ಅಂತರವಿದೆ! ಪಾಪಾತ್ಮರು ಪಾಪಾತ್ಮರೊಂದಿಗೆ ಲೇವಾದೇವಿ ಮಾಡಿ ಪಾಪಾತ್ಮರಾಗಿ ಬಿಡುತ್ತಾರೆ. ಇಲ್ಲಂತೂ ನೀವು ಪುಣ್ಯಾತ್ಮರಾಗಬೇಕಾಗಿದೆ ಆದ್ದರಿಂದ ಪಾಪಾತ್ಮರ ಜೊತೆ ವ್ಯವಹಾರವನ್ನಿಟ್ಟುಕೊಳ್ಳಬಾರದು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯಾರಿಗೂ ದುಃಖವನ್ನು ಕೊಡಬಾರದು, ಯಾರಲ್ಲಿಯೂ ಮೋಹವನ್ನಿಟ್ಟುಕೊಳ್ಳಬಾರದು. ತಂದೆಯು ಅತಿ ಮಧುರನಾಗಿ ಬರುತ್ತಾರೆ. ಹಳೆಯ ಕೆಟ್ಟಿರುವುದನ್ನು ತೆಗೆದುಕೊಳ್ಳುತ್ತಾರೆ ಮತ್ತು ಕೊಡುವುದನ್ನು ನೋಡಿ, ಎಷ್ಟು ಸುಂದರವಾದದನ್ನು ಕೊಡುತ್ತಾರೆ! ಎಷ್ಟೊಂದು ಮುಗ್ಧನಾಗಿದ್ದಾರೆ. ಎರಡು ಹಿಡಿಗೆ ಬದಲಾಗಿ ಮಹಲನ್ನೇ ಕೊಟ್ಟು ಬಿಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈಗ ಯಾತ್ರೆಯು ಮುಗಿಯಿತು, ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಆದ್ದರಿಂದ ಈ ಹಳೆಯ ಪ್ರಪಂಚದೊಂದಿಗೆ ಬೇಹದ್ದಿನ ವೈರಾಗ್ಯವನ್ನಿಟ್ಟುಕೊಳ್ಳಿ. ಬುದ್ಧಿಯೋಗವನ್ನು ತಂದೆಯ ನೆನಪಿನಲ್ಲಿ ಜೋಡಿಸಿರಬೇಕಾಗಿದೆ.

2. ಸಂಗಮಯುಗದಲ್ಲಿ ತಂದೆಯು ಯಾವ ಯಜ್ಞವನ್ನು ರಚಿಸಿದ್ದಾರೆ, ಈ ಯಜ್ಞದ ಸಂಭಾಲನೆ ಮಾಡಲು ಸತ್ಯ-ಸತ್ಯ ಪವಿತ್ರ ಬ್ರಾಹ್ಮಣರಾಗಬೇಕಾಗಿದೆ. ಕೆಲಸ ಕಾರ್ಯಗಳನ್ನು ಮಾಡುತ್ತಲೂ ತಂದೆಯ ನೆನಪಿನಲ್ಲಿರಬೇಕು.

ವರದಾನ:
ತಮ್ಮ ಸರ್ವ ಖಜಾನೆಗಳನ್ನು ಅನ್ಯ ಆತ್ಮಗಳ ಸೇವೆಯಲ್ಲಿ ತೊಡಗಿಸುತ್ತಾ ಸಹಯೋಗಿಗಳಾಗುವಂತಹ ಸಹಜಯೋಗಿ ಭವ.

ಸಹಜಯೋಗಿಗಳಾಗುವ ಸಾಧನವಾಗಿದೆ - ಸದಾ ತಮ್ಮನ್ನು ಸಂಕಲ್ಪದ ಮೂಲಕ, ವಾಣಿಯ ಮೂಲಕ ಹಾಗೂ ಪ್ರತಿ ಕಾರ್ಯದ ಮೂಲಕ ವಿಶ್ವದ ಸರ್ವ ಆತ್ಮಗಳ ಪ್ರತಿ ಸೇವಾಧಾರಿ ಎಂದು ತಿಳಿದು ಸೇವೆಯಲ್ಲಿಯೆ ಎಲ್ಲವನ್ನೂ ತೊಡಗಿಸಿ. ಬ್ರಾಹ್ಮಣ ಜೀವನದಲ್ಲಿ ಶಕ್ತಿಗಳ, ಗುಣಗಳ, ಜ್ಞಾನದ ಹಾಗೂ ಶ್ರೇಷ್ಠ ಸಂಪಾದನೆಯ ಸಮಯದ ಖಜಾನೆ ತಂದೆಯ ಮೂಲಕ ಪ್ರಾಪ್ತಿಯಾಗಿದೆ ಅದನ್ನು ಸೇವೆಯಲ್ಲಿ ತೊಡಗಿಸಿ ಅರ್ಥಾತ್ ಸಹಯೋಗಿಗಳಾಗಿ ನಂತರ ಸಹಜಯೋಗಿ ಆಗಿ ಬಿಡುವಿರಿ. ಆದರೆ ಯಾರು ಸಂಪನ್ನರಾಗಿದ್ದಾರೆ ಅವರೇ ಸಹಯೋಗಿಗಳಾಗಲು ಸಾಧ್ಯ. ಸಹಯೋಗಿಗಳಾಗುವುದು ಅರ್ಥಾತ್ ಮಹಾಧಾನಿಗಳಾಗುವುದು.

ಸ್ಲೋಗನ್:
ಬೇಹದ್ಧಿನ ವೈರಾಗಿಗಳಾದಾಗ ಆಕರ್ಷಣೆಯ ಎಲ್ಲಾ ಸಂಸ್ಕಾರ ಸಹಜವಾಗಿ ಸಮಾಪ್ತಿಯಾಗಿ ಬಿಡುವುದು.


ಅವ್ಯಕ್ತ ಸ್ಥಿತಿಯ ಅನುಭವ ಮಾಡವುದಕ್ಕಾಗಿ ವಿಶೇಷ ಹೋಮ್ ವರ್ಕ್ –
ಬ್ರಾಹ್ಮಣರ ಭಾಷೆ ಪರಸ್ಪರರಲ್ಲಿ ಅವ್ಯಕ್ತ ಭಾವದಿಂದ ಕೂಡಿರಬೇಕು. ಯಾರದೇ ತಪ್ಪನ್ನು ಕೇಳಿದರೆ ಅದನ್ನು ಸಂಕಲ್ಪದಲ್ಲಿಯೂ ಸ್ವೀಕಾರ ಮಾಡಬಾರದು ಹಾಗೂ ಮಾಡಿಸಬಾರದು. ಸಂಘಟನೆಯಲ್ಲಿ ವಿಶೇಷ ಅವ್ಯಕ್ತ ಅನುಭವಗಳನ್ನು ಪರಸ್ಪರರಲ್ಲಿ ಹಂಚಿಕೊಳ್ಳಬೇಕು.