23.02.20    Avyakt Bapdada     Kannada Murli     27.11.85     Om Shanti     Madhuban


ಹಳೆಯ ಪ್ರಪಂಚ ಮತ್ತು ಹಳೆಯ ಸಂಸ್ಕಾರಗಳನ್ನು ಮರೆಸುವ ಉಪಾಯ


ಬಾಪ್ದಾದಾರವರು ಎಲ್ಲಾ ನಿಶ್ಚಯಬುದ್ಧಿ ಮಕ್ಕಳ ನಿಶ್ಚಯದ ಪ್ರತ್ಯಕ್ಷ ಜೀವನದ ಸ್ವರೂಪವನ್ನು ನೋಡುತ್ತಿದ್ದಾರೆ. ನಿಶ್ಚಯ ಬುದ್ಧಿಯವರ ವಿಶೇಷತೆಗಳನ್ನು ಎಲ್ಲರೂ ಕೇಳಿದಿರಿ. ಹೀಗೆ ವಿಶೇಷತಾ ಸಂಪನ್ನವಾದ ನಿಶ್ಚಯಬುದ್ಧಿ ವಿಜಯಿರತ್ನಗಳು, ಈ ಬ್ರಾಹ್ಮಣ ಜೀವನದ ಅಥವಾ ಪುರುಷೋತ್ತಮ ಸಂಗಮಯುಗಿ ಜೀವನದಲ್ಲಿ ಸದಾ ನಿಶ್ಚಯದನುಸಾರವಾಗಿ, ಅವರು ನಶೆಯಲ್ಲಿರಬಹುದು. ಆತ್ಮಿಕ ನಶೆಯು ನಿಶ್ಚಯದ ದರ್ಪಣ ಸ್ವರೂಪವಾಗಿದೆ. ನಿಶ್ಚಯವು ಕೇವಲ ಬುದ್ಧಿಯಲ್ಲಿ ಸ್ಮೃತಿಯವರೆಗಲ್ಲ. ಆದರೆ ಪ್ರತೀ ಹೆಜ್ಜೆಯಲ್ಲಿ ಆತ್ಮಿಕ ನಶೆಯ ರೂಪದಲ್ಲಿ, ಕರ್ಮದ ಮೂಲಕ ಪ್ರತ್ಯಕ್ಷ ಸ್ವರೂಪದಲ್ಲಿ ಸ್ವಯಂಗೂ ಅನುಭವವಾಗುತ್ತದೆ, ಅನ್ಯರಿಗೂ ಅನುಭವವಾಗುತ್ತದೆ. ಏಕೆಂದರೆ ಇದು ಜ್ಞಾನಿ ಮತ್ತು ಯೋಗಿ ಜೀವನವಾಗಿದೆ. ಕೇವಲ ಕೇಳುವ-ಹೇಳುವವರೆಗಷ್ಟೇ ಅಲ್ಲ, ಜೀವನವನ್ನು ರೂಪಿಸಿಕೊಳ್ಳುವುದಾಗಿದೆ. ಜೀವನದಲ್ಲಿ ಸ್ಮೃತಿ ಅರ್ಥಾತ್ ಸಂಕಲ್ಪ, ಮಾತು, ಕರ್ಮ, ಸಂಬಂಧ ಎಲ್ಲವೂ ಬಂದು ಬಿಡುತ್ತದೆ. ನಿಶ್ಚಯ ಬುದ್ಧಿ ಅರ್ಥಾತ್ ನಶೆಯ ಜೀವನವಾಗಿದೆ. ಇಂತಹ ಆತ್ಮಿಕ ನಶೆಯಿರುವ ಆತ್ಮನ ಪ್ರತೀ ಸಂಕಲ್ಪವು ಸದಾ ನಶೆಯಿಂದ ಸಂಪನ್ನವಾಗಿರುತ್ತದೆ. ಸಂಕಲ್ಪ, ಮಾತು, ಕರ್ಮ ಮೂರರಿಂದಲೂ ನಿಶ್ಚಯದ ನಶೆಯ ಅನುಭವವಾಗುವುದು. ನಶೆಯು ಹೇಗಿರುತ್ತದೆಯೋ ಹಾಗೆಯೇ ನಶೆಯ ಹೊಳಪು ಚಹರೆಯಿಂದ, ಚಲನೆಯಿಂದ ಪ್ರತ್ಯಕ್ಷವಾಗುವುದು. ನಿಶ್ಚಯದ ಪ್ರಮಾಣವಾಗಿದೆ - ನಶೆ ಮತ್ತು ನಶೆಯ ಪ್ರಮಾಣವಾಗಿದೆ - ಖುಷಿ. ನಶೆಯು ಎಷ್ಟು ಪ್ರಕಾರದ್ದಿದೆ, ಇದರ ವಿಸ್ತಾರವಂತು ಬಹಳ ದೊಡ್ಡದಾಗಿದೆ. ಆದರೆ ಸಾರ ರೂಪದಲ್ಲಿ ಒಂದು ನಶೆಯಿದೆ - ಅಶರೀರಿ ಆತ್ಮಿಕ ಸ್ವರೂಪದ ನಶೆ. ಇದರ ವಿಸ್ತಾರವನ್ನು ತಿಳಿದಿದ್ದೀರಾ? ಆತ್ಮವಂತು ಎಲ್ಲರೂ ಆಗಿದ್ದಾರೆ, ಆದರೆ ಆತ್ಮಿಕ ನಶೆಯ ಅನುಭವವು ಆಗ ಆಗುತ್ತದೆ, ಯಾವಾಗ ಈ ಸ್ಮೃತಿಯನ್ನಿಡುತ್ತೀರಿ - ನಾನು ಎಂತಹ ಆತ್ಮನಾಗಿರುವೆನು? ಇದರ ವಿಸ್ತಾರವನ್ನು ಪರಸ್ಪರದಲ್ಲಿ ಹೊರ ತೆಗೆಯಿರಿ ಅಥವಾ ಸ್ವಯಂ ತಾವು ಮನನ ಮಾಡಿರಿ.

ಇನ್ನೊಂದು - ನಶೆಯ ವಿಶೇಷ ರೂಪವಾಗಿ ಸಂಗಮಯುಗದ ಅಲೌಕಿಕ ಜೀವನವಾಗಿದೆ. ಈ ಜೀವನದಲ್ಲಿಯೂ ಎಂತಹ ಜೀವನವಾಗಿದೆ, ಇದರದೂ ವಿಸ್ತಾರವನ್ನು ಯೋಚಿಸಿರಿ. ಅಂದಮೇಲೆ ಒಂದಾಯಿತು - ಆತ್ಮಿಕ ಸ್ವರೂಪದ ನಶೆ. ಇನ್ನೊಂದಾಯಿತು - ಅಲೌಕಿಕ ಜೀವನದ ನಶೆ. ಮೂರನೆಯದಿದೆ - ಫರಿಶ್ತಾತನದ ನಶೆ. ಫರಿಶ್ತೆ ಎಂದು ಯಾವುದಕ್ಕೆ ಹೇಳಲಾಗುತ್ತದೆ, ಇದರದೂ ವಿಸ್ತಾರವನ್ನು ಮಾಡಿರಿ. ನಾಲ್ಕನೆಯದಾಗಿದೆ - ಭವಿಷ್ಯದ ನಶೆ. ಈ ನಾಲ್ಕೂ ಪ್ರಕಾರದ ಅಲೌಕಿಕ ನಶೆಗಳಲ್ಲಿಂದ ಯಾವುದಾದರೂ ನಶೆಯು ಜೀವನದಲ್ಲಿರುತ್ತದೆಯೆಂದರೆ, ಸ್ವತಹವಾಗಿಯೇ ಖುಷಿಯಲ್ಲಿ ನರ್ತಿಸುತ್ತಿರುತ್ತಾರೆ. ನಿಶ್ಚಯವೂ ಇದೆ ಆದರೆ ಖುಷಿಯಿಲ್ಲವೆಂದರೆ ಇದಕ್ಕೆ ಕಾರಣ? ನಶೆಯಿಲ್ಲ. ನಶೆಯು ಸಹಜವಾಗಿಯೇ ಹಳೆಯ ಪ್ರಪಂಚ ಮತ್ತು ಹಳೆಯ ಸಂಸ್ಕಾರವನ್ನು ಮರೆಸಿ ಬಿಡುತ್ತದೆ. ಈ ಪುರುಷಾರ್ಥಿ ಜೀವನದಲ್ಲಿ ವಿಶೇಷವಾಗಿ ವಿಘ್ನ ರೂಪವಾಗಿದೆ ಇವೆರಡು ಮಾತುಗಳಿವೆ. ಭಲೆ ಹಳೆಯ ಪ್ರಪಂಚವಿರಬಹುದು ಅಥವಾ ಹಳೆಯ ಸಂಸ್ಕಾರವಿರಬಹುದು. ಸಂಸಾರದಲ್ಲಿ ದೇಹದ ಸಂಬಂಧ ಮತ್ತು ದೇಹದ ಪದಾರ್ಥವೆರಡೂ ಬಂದು ಬಿಡುತ್ತದೆ. ಜೊತೆ ಜೊತೆಗೆ ಸಂಸಾರ(ಪ್ರಪಂಚ)ಕ್ಕಿಂತಲೂ ಹಳೆಯ ಸಂಸ್ಕಾರವು ಹೆಚ್ಚಾಗಿ ವಿಘ್ನರೂಪವಾಗಿ ಬಿಡುತ್ತದೆ. ಸಂಸಾರವನ್ನು ಮರೆತು ಬಿಡುತ್ತೀರಿ, ಆದರೆ ಸಂಸ್ಕಾರವನ್ನು ಮರೆಯುವುದಿಲ್ಲ. ಅಂದಮೇಲೆ ಸಂಸ್ಕಾರ ಪರಿವರ್ತನೆ ಮಾಡಿಕೊಳ್ಳುವ ಸಾಧನವಾಗಿದೆ - ಈ ನಾಲ್ಕೂ ನಶೆಗಳಲ್ಲಿಂದ ಯಾವುದಾದರೂ ನಶೆಯು ಸಾಕಾರ ಸ್ವರೂಪದಲ್ಲಿರಲಿ. ಕೇವಲ ಸಂಕಲ್ಪ ಸ್ವರೂಪದಲ್ಲಲ್ಲ. ಸಾಕಾರ ಸ್ವರೂಪದಲ್ಲಿರುವುದರಿಂದ ಎಂದಿಗೂ ವಿಘ್ನ ರೂಪವಾಗುವುದಿಲ್ಲ. ಈಗಿನವರೆಗೆ ಸಂಸ್ಕಾರ ಪರಿವರ್ತನೆಯಾಗದಿರುವ ಕಾರಣವು ಇದೇ ಆಗಿದೆ. ಈ ನಶೆಯನ್ನು ಸಂಕಲ್ಪ ರೂಪದಲ್ಲಿ ಅರ್ಥಾತ್ ಜ್ಞಾನದ ರೂಪದಲ್ಲಿ ಬುದ್ಧಿಯವರೆಗೆ ಧಾರಣೆಯಾಯಿತು. ಆದ್ದರಿಂದ ಕೆಲವೊಮ್ಮೆ ಕೆಲವರಲ್ಲಿ ಹಳೆಯ ಸಂಸ್ಕಾರವು ಇಮರ್ಜ್ ಆಗಿ ಬಿಡುತ್ತದೆ, ಆಗಲೇ ಈ ಭಾಷೆಯಲ್ಲಿ ಮಾತನಾಡುತ್ತಾರೆ - ನಾನು ಎಲ್ಲವನ್ನೂ ತಿಳಿದಿದ್ದೇನೆ, ಬದಲಾಗಬೇಕು ಎನ್ನುವುದನ್ನೂ ತಿಳಿಯುತ್ತಾರೆ ಆದರೆ ತಿಳಿಯುವವರೆಗಲ್ಲ, ಕರ್ಮ ಅರ್ಥಾತ್ ಜೀವನದವರೆಗೂ ಆಗಬೇಕು. ಜೀವನದ ಮೂಲಕ ಪರಿವರ್ತನೆಯು ಅನುಭವದಲ್ಲಿ ಬರಲಿ. ಇದಕ್ಕೆ ಹೇಳಲಾಗುತ್ತದೆ – ಸಾಕಾರ ಸ್ವರೂಪದಲ್ಲಿ ಬರುವುದು. ಈಗ ಬುದ್ಧಿಯವರೆಗೆ ಪಾಯಿಂಟುಗಳ ರೂಪದಲ್ಲಿ ಯೋಚಿಸುವ ಮತ್ತು ವರ್ಣನೆ ಮಾಡುವವರೆಗೆ ಇದೆ. ಆದರೆ ಪ್ರತೀ ಕರ್ಮದಲ್ಲಿ, ಸಂಪರ್ಕದಲ್ಲಿ ಪರಿವರ್ತನೆಯು ಕಾಣಿಸಲಿ, ಇದಕ್ಕೆ ಹೇಳಲಾಗುತ್ತದೆ - ಸಾಕಾರ ರೂಪದಿಂದ ಅಲೌಕಿಕ ನಶೆ. ಈಗ ಪ್ರತಿಯೊಂದು ನಶೆಯನ್ನು ಜೀವನದಲ್ಲಿ ತಂದುಕೊಳ್ಳಿರಿ. ಯಾರೇ ತಮ್ಮ ಮಸ್ತಕದ ಕಡೆಗೆ ನೋಡಿದರೆ, ಮಸ್ತಕದ ಮೂಲಕ ಆತ್ಮಿಕ ನಶೆಯ ವೃತ್ತಿಯು ಅನುಭವವಾಗಲಿ. ಭಲೆ ಯಾರೇ ಮಾಡಲಿ ಅಥವಾ ಮಾಡದಿರಲಿ ಆದರೆ ವೃತ್ತಿ, ವಾಯುಮಂಡಲ ಮತ್ತು ವೈಬ್ರೇಷನ್ ಹರಡಿಸುತ್ತದೆ. ತಮ್ಮ ವೃತ್ತಿಯು ಅನ್ಯರನ್ನೂ ಖುಷಿಯ ವಾಯುಮಂಡಲದಲ್ಲಿ, ಖುಷಿಯ ಪ್ರಕಂಪನಗಳ ಅನುಭವ ಮಾಡಿಸಲಿ. ಇದಕ್ಕೆ ಹೇಳಲಾಗುತ್ತದೆ - ನಶೆಯಲ್ಲಿ ಸ್ಥಿತರಾಗುವುದು. ಅದೇರೀತಿ ದೃಷ್ಟಿಯಿಂದ, ಮುಖದ ಮುಗುಳ್ನಗೆಯಿಂದ, ಮುಖದ ಮಾತಿನಿಂದ, ಆತ್ಮಿಕ ನಶೆಯ ಸಾಕಾರ ರೂಪವು ಅನುಭವವಾಗಲಿ. ಆಗ ಹೇಳಲಾಗುತ್ತದೆ - ನಶೆಯಲ್ಲಿರುವ ನಿಶ್ಚಯಬುದ್ಧಿ ವಿಜಯಿ ರತ್ನಗಳು. ಇದರಲ್ಲಿ ಗುಪ್ತವಾಗಿರಬಾರದು. ಕೆಲವರು ಹೀಗೂ ಚತುರತೆಯನ್ನು ಮಾಡುತ್ತಾರೆ - ನಾವು ಗುಪ್ತವಾಗಿದ್ದೇವೆ. ಹೇಗೆ ಹೇಳಿಕೆಯಿದೆ - ಸೂರ್ಯನನ್ನು ಎಂದಿಗೂ ಯಾರೂ ಬಚ್ಚಿಡಲು ಸಾಧ್ಯವಿಲ್ಲ. ಎಷ್ಟೇ ದಟ್ಟ ಮೋಡಗಳೇ ಕವಿದಿರಲಿ ಆದರೂ ಸಹ ಸೂರ್ಯನು ತನ್ನ ಪ್ರಕಾಶತೆಯನ್ನು ಬಿಡಲು ಸಾಧ್ಯವಿಲ್ಲ. ಸೂರ್ಯನು ದೂರವಾಗುತ್ತಾನೆಯೇ ಅಥವಾ ಮೋಡಗಳು ಚದುರತ್ತವೆಯೇ? ಮೋಡಗಳು ಖಂಡಿತ ಬರುತ್ತವೆ ಮತ್ತು ದೂರವಾಗುತ್ತವೆ. ಆದರೆ ಸೂರ್ಯನು ತನ್ನ ಪ್ರಕಾಶ ಸ್ವರೂಪದಲ್ಲಿ ಸ್ಥಿತವಾಗಿರುತ್ತದೆ. ಅಂದಮೇಲೆ ಆತ್ಮಿಕ ನಶೆಯಲ್ಲಿರುವವರೂ ಸಹ ಆತ್ಮಿಕ ಹೊಳಪಿನಿಂದ ಬಚ್ಚಿಟ್ಟುಕೊಂಡಿರಲು ಸಾಧ್ಯವಿಲ್ಲ. ಅವರ ಆತ್ಮಿಕ ನಶೆಯ ಹೊಳಪು ಅವಶ್ಯವಾಗಿ ಪ್ರತ್ಯಕ್ಷ ರೂಪದಲ್ಲಿ ಅನುಭವವಾಗುತ್ತದೆ. ಅವರ ಪ್ರಕಂಪನಗಳು ಸ್ವತಹವಾಗಿಯೇ ಅನ್ಯರನ್ನೂ ಆಕರ್ಷಣೆ ಮಾಡುತ್ತದೆ. ಆತ್ಮಿಕ ನಶೆಯಲ್ಲಿ ಇರುವವರ ಪ್ರಕಂಪನಗಳು ಸ್ವಯಂನ ಪ್ರತಿ ಅಥವಾ ಅನ್ಯರ ಪ್ರತಿ ಛತ್ರಛಾಯೆಯ ಕಾರ್ಯವನ್ನು ಮಾಡುತ್ತದೆ. ಅಂದಮೇಲೆ ಈಗ ಏನು ಮಾಡಬೇಕು? ಸಾಕಾರದಲ್ಲಿ ಬನ್ನಿರಿ. ಜ್ಞಾನದ ಲೆಕ್ಕದಿಂದ ಜ್ಞಾನಪೂರ್ಣರಾಗಿ ಬಿಟ್ಟಿರಿ. ಆದರೆ ಜ್ಞಾನವನ್ನು ಸಾಕಾರ ಜೀವನದಲ್ಲಿ ತರುವುದರಿಂದ ಜ್ಞಾನಪೂರ್ಣನ ಜೊತೆ ಜೊತೆಗೆ ಸಫಲತಾಪೂರ್ಣ, ಆನಂದಮಯದ ಅನುಭವವನ್ನು ಮಾಡುವಿರಿ. ಒಳ್ಳೆಯದು. ಸಫಲತಾಪೂರ್ಣ(ಸಕ್ಸಸ್ಫುಲ್) ಮತ್ತು ಆನಂದಮಯದ ಸ್ವರೂಪವೇನಾಗುತ್ತದೆ? ಮತ್ತೆಂದಾದರೂ ತಿಳಿಸುತ್ತೇವೆ.

ಇಂದಂತು ಆತ್ಮಿಕ ನಶೆಯ ಮಾತನ್ನು ತಿಳಿಸುತ್ತಿದ್ದೇವೆ. ಎಲ್ಲರಿಗೂ ನಶೆಯ ಅನುಭವವಾಗಲಿ. ಈ ನಾಲ್ಕೂ ನಶೆಗಳಲ್ಲಿ ಒಂದು ನಶೆಯನ್ನು ಭಿನ್ನ-ಭಿನ್ನ ರೂಪಗಳಿಂದ ಉಪಯೋಗಿಸಿರಿ. ಈ ನಶೆಯನ್ನು ಜೀವನದಲ್ಲಿ ಎಷ್ಟು ಅನುಭವ ಮಾಡುತ್ತೀರಿ, ಅಷ್ಟು ಸದಾ ಎಲ್ಲರೂ ಚಿಂತೆಯಿಂದ ನಿಶ್ಚಿಂತ, ನಿಶ್ಚಿಂತ ಚಕ್ರವರ್ತಿಯೇ ಆಗಿ ಬಿಡುತ್ತೀರಿ. ಎಲ್ಲರೂ ತಮ್ಮನ್ನು ನಿಶ್ಚಿಂತ ಚಕ್ರವರ್ತಿಯ ರೂಪದಲ್ಲಿ ನೋಡುವರು. ಅಂದಮೇಲೆ ಈಗ ವಿಸ್ತಾರದಲ್ಲಿ ಹೊರ ತೆಗೆಯುವುದು ಅಥವಾ ಅಭ್ಯಾಸದಲ್ಲಿ ತರಬೇಕು. ಎಲ್ಲಿ ಖುಷಿಯಿದೆ ಅಲ್ಲಿ ಮಾಯೆಯ ಯಾವುದೇ ರೂಪವೂ ನಡೆಯಲು ಸಾಧ್ಯವಿಲ್ಲ. ನಿಶ್ಚಿಂತ ಚಕ್ರವರ್ತಿಯ ರಾಜಧಾನಿಯ ಒಳಗೂ ಮಾಯೆ ಬರಲು ಸಾಧ್ಯವಿಲ್ಲ. ಬರುತ್ತದೆ ಮತ್ತು ಓಡಿಸುತ್ತೀರಿ, ಮತ್ತೆ ಬರುತ್ತದೆ ಮತ್ತೆ ಓಡಿಸುತ್ತೀರಾ! ಕೆಲವೊಮ್ಮೆ ದೇಹದ ರೂಪದಲ್ಲಿ ಬರುತ್ತದೆ, ಕೆಲವೊಮ್ಮೆ ದೇಹದ ಸಂಬಂಧದ ರೂಪದಲ್ಲಿ ಬರುತ್ತದೆ, ಇದಕ್ಕೇ ಕೆಲವೊಮ್ಮೆ ಮಾಯೆಯು ಆನೆಯಾಗಿ ಬರುತ್ತದೆ, ಕೆಲವೊಮ್ಮೆ ಬೆಕ್ಕಾಗಿ ಬರುತ್ತದೆ, ಕೆಲವೊಮ್ಮೆ ಇಲಿಯಾಗಿ ಬರುತ್ತದೆ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಇಲಿಯನ್ನು ಹೊರ ಹಾಕುತ್ತೀರಿ, ಕೆಲವೊಮ್ಮೆ ಬೆಕ್ಕನ್ನು ಹೊರ ಹಾಕುತ್ತೀರಿ, ಇದೇರೀತಿ ಓಡಿಸುವ ಕಾರ್ಯದಲ್ಲಿ ಸಮಯವು ಹೊರಟು ಹೋಗುತ್ತದೆ ಆದ್ದರಿಂದ ಸದಾ ಆತ್ಮಿಕ ನಶೆಯಲ್ಲಿರಿ. ಮೊದಲು ಸ್ವಯಂನ್ನು ಪ್ರತ್ಯಕ್ಷ ಮಾಡಿರಿ, ಆಗಲೇ ತಂದೆಯ ಪ್ರತ್ಯಕ್ಷತೆಯನ್ನು ಮಾಡುವಿರಿ ಏಕೆಂದರೆ ತಮ್ಮ ಮೂಲಕ ತಂದೆಯ ಪ್ರತ್ಯಕ್ಷತೆಯಾಗುವುದು. ಒಳ್ಳೆಯದು.

ಸದಾ ಸ್ವಯಂನ ಮೂಲಕ ಸರ್ವಶಕ್ತಿವಂತನನ್ನು ಪ್ರತ್ಯಕ್ಷಗೊಳಿಸುವ, ಸದಾ ತಮ್ಮ ಸಾಕಾರ ಜೀವನದ ದರ್ಪಣದಿಂದ ಆತ್ಮಿಕ ನಶೆಯ ವಿಶೇಷತೆಯನ್ನು ಪ್ರತ್ಯಕ್ಷ ಮಾಡುವ, ಸದಾ ನಿಶ್ಚಿಂತ ಚಕ್ರವರ್ತಿಯಾಗಿ ಮಾಯೆಗೆ ವಿದಾಯಿ ಕೊಡುವಂತಹ, ಸದಾ ಜ್ಞಾನವನ್ನು ಸ್ವರೂಪದಲ್ಲಿ ತರುವಂತಹ - ಇಂತಹ ನಿಶ್ಚಯ ಬುದ್ಧಿಯಲ್ಲಿ ಇರುವಂತಹ, ಸದಾ ಖುಷಿಯಲ್ಲಿ ತೂಗಾಡುತ್ತಿರುವ, ಇಂತಹ ಶ್ರೇಷ್ಠಾತ್ಮರಿಗೆ, ವಿಶೇಷ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಸೇವಾಧಾರಿ(ಟೀಚರ್ಸ್) ಸಹೋದರಿಯರೊಂದಿಗೆ:-
ಸೇವಾಧಾರಿ ಅರ್ಥಾತ್ ತಮ್ಮ ಶಕ್ತಿಗಳ ಮೂಲಕ ಅನ್ಯರನ್ನೂ ಶಕ್ತಿಶಾಲಿಯನ್ನಾಗಿ ಮಾಡುವವರು. ಸೇವಾಧಾರಿಯ ವಾಸ್ತವಿಕ ವಿಶೇಷತೆಯು ಇದೇ ಆಗಿದೆ. ನಿರ್ಬಲನಲ್ಲಿ ಬಲವನ್ನು ತುಂಬಲು ನಿಮಿತ್ತರಾಗುವುದು, ಇದೇ ಸತ್ಯ ಸೇವೆಯಾಗಿದೆ. ಇಂತಹ ಸೇವೆಯ ಪಾತ್ರವು ಸಿಗುವುದೂ ಸಹ ಹೀರೋ ಪಾತ್ರವಾಗಿದೆ. ಅಂದಮೇಲೆ ಹೀರೋ ಪಾತ್ರಧಾರಿಗಳು ನಶೆಯಲ್ಲಿ ಎಷ್ಟಿರುತ್ತೀರಿ? ಸೇವೆಯ ಪಾತ್ರದಿಂದ ತಮ್ಮನ್ನೆಷ್ಟು ನಂಬರಿನಲ್ಲಿ ಮುಂದುವರೆಸಬೇಕೆಂದು ಬಯಸುತ್ತೀರಿ, ಅಷ್ಟೂ ಮುಂದುವರೆಸಬಹುದು. ಏಕೆಂದರೆ ಸೇವೆಯು ಮುಂದುವರೆಯುವ ಸಾಧನವಾಗಿದೆ. ಸೇವೆಯಲ್ಲಿ ಬ್ಯುಸಿಯಾಗಿರುವುದರಿಂದ ಸ್ವತಹವಾಗಿಯೇ ಎಲ್ಲಾ ಮಾತುಗಳಿಂದ ದೂರವಾಗಿ ಬಿಡುತ್ತೀರಿ. ಪ್ರತಿಯೊಂದು ಸೇವಾಸ್ಥಾನವು ಸ್ಟೇಜ್ ಆಗಿದೆ, ಆ ಸ್ಟೇಜಿನಲ್ಲಿ ಪ್ರತಿಯೊಂದು ಆತ್ಮನು ತನ್ನ ಪಾತ್ರವನ್ನಭಿನಯಿಸುತ್ತಿದ್ದಾರೆ. ಸಾಧನಗಳಂತು ಬಹಳಷ್ಟಿವೆ ಆದರೆ ಸದಾ ಸಾಧನೆಗಳಲ್ಲಿ ಶಕ್ತಿಯಿರಬೇಕು. ಒಂದುವೇಳೆ ಶಕ್ತಿಯಿಲ್ಲದೆ ಸಾಧನಗಳನ್ನು ಉಪಯೋಗಿಸುತ್ತೀರೆಂದರೆ, ಸೇವೆಯ ಫಲಿತಾಂಶವೇನು ಬರಬೇಕಾಗಿದೆ, ಅದು ಬರುವುದಿಲ್ಲ. ಹಿಂದಿನ ಕಾಲದಲ್ಲಿ ವೀರ ಜನರೇನು ಇರುತ್ತಿದ್ದರು, ಅವರು ಸದಾ ತಮ್ಮ ಶಸ್ತ್ರಗಳನ್ನು ದೇವತೆಗಳ ಮುಂದೆ ಅರ್ಪಣೆ ಮಾಡಿ, ಅದರಲ್ಲಿ ಶಕ್ತಿಯನ್ನು ತುಂಬಿದ ನಂತರ ಉಪಯೋಗಿಸುತ್ತಿದ್ದರು. ಅಂದಾಗ ತಾವೆಲ್ಲರೂ ಸಹ ಯಾವುದೇ ಸಾಧನವನ್ನು ಉಪಯೋಗಿಸುತ್ತೀರೆಂದರೆ, ಅದನ್ನು ಉಪಯೋಗ ಮಾಡುವುದಕ್ಕೆ ಮೊದಲು, ಅದೇ ವಿಧಿಪೂರ್ವಕ ಕಾರ್ಯದಲ್ಲಿ ಉಪಯೋಗಿಸುತ್ತೀರಾ? ಈಗ ಏನೆಲ್ಲಾ ಸಾಧನಗಳನ್ನು ಕಾರ್ಯದಲ್ಲಿ ಉಪಯೋಗಿಸುತ್ತೀರಿ, ಅದರಲ್ಲಿ ಸ್ವಲ್ಪ ಸಮಯಕ್ಕಾಗಿ ಜನರು ಆಕರ್ಷಿತರಾಗುತ್ತಾರೆ. ಸದಾಕಾಲಕ್ಕಾಗಿ ಪ್ರಭಾವಿತರಾಗುವುದಿಲ್ಲ. ಏಕೆಂದರೆ ಇಷ್ಟು ಶಕ್ತಿಶಾಲಿಯಾದ ಆತ್ಮರಿದ್ದಾರೆ, ಅವರು ಶಕ್ತಿಯ ಮೂಲಕ ಪರಿವರ್ತನೆ ಮಾಡಿ ತೋರಿಸಲಿ - ಅದು ನಂಬರ್ವಾರ್ ಆಗಿದೆ. ಸೇವೆಯನ್ನಂತು ಎಲ್ಲರೂ ಮಾಡುತ್ತೀರಿ, ಎಲ್ಲರ ಹೆಸರಿದೆ - ಟೀಚರ್ಸ್. ಸೇವಾಧಾರಿಯಾಗಿದ್ದೀರಿ ಅಥವಾ ಟೀಚರ್ ಆಗಿದ್ದೀರಿ ಆದರೆ ಸೇವೆಯಲ್ಲಿ ಅಂತರವೇಕೆ ಇದೆ? ಕಾರ್ಯಕ್ರಮಗಳನ್ನೂ ಒಂದೇ ರೀತಿಯಾಗಿ ಮಾಡುತ್ತೀರಿ, ಯೋಜನೆಯನ್ನೂ ಒಂದೇ ರೀತಿ ಮಾಡುತ್ತೀರಿ. ರೀತಿ-ನಿಯಮಗಳೂ ಸಹ ಒಂದೇ ರೀತಿಯಾಗುತ್ತದೆ, ಆದರೂ ಸಫಲತೆಯಲ್ಲಿ ಅಂತರವಾಗಿ ಬಿಡುತ್ತದೆ, ಅದರ ಕಾರಣವೇನಾಗಿದೆ? ಶಕ್ತಿಯ ಕೊರತೆ. ಅಂದಮೇಲೆ ಸಾಧನದಲ್ಲಿ ಶಕ್ತಿಯನ್ನು ತುಂಬಿರಿ. ಹೇಗೆ ಖಡ್ಗದಲ್ಲೇನಾದರೂ ಹರಿತವಿಲ್ಲವೆಂದರೆ ಖಡ್ಗವು, ಖಡ್ಗದ ಕಾರ್ಯವನ್ನು ಮಾಡುವುದಿಲ್ಲ. ಖಡ್ಗವು ಇಂತಹ ಸಾಧನವಾಗಿದೆ ಆದರೆ ಅದರಲ್ಲಿ ಶಕ್ತಿಯ ಹರಿತವಿರಬೇಕು. ಅದನ್ನೆಷ್ಟು ತಮ್ಮಲ್ಲಿ ತುಂಬಿಕೊಳ್ಳುತ್ತೀರಿ, ಅಷ್ಟು ಸೇವೆಯಲ್ಲಿ ಸ್ವತಹವಾಗಿಯೇ ಸಫಲತೆಯು ಸಿಗುತ್ತದೆ. ಅಂದಮೇಲೆ ಶಕ್ತಿಶಾಲಿಯಾದ ಸೇವಾಧಾರಿಯಾಗಿರಿ. ಸದಾ ವಿಧಿಯ ಮೂಲಕ ವೃದ್ಧಿಯ ಪ್ರಾಪ್ತಿಯಾಗುವುದೇನೂ ದೊಡ್ಡ ಮಾತಲ್ಲ. ಆದರೆ ಶಕ್ತಿಶಾಲಿ ಆತ್ಮರಲ್ಲಿ ವೃದ್ಧಿಯ ಪ್ರಾಪ್ತಿಯಾಗಲಿ - ಇದರ ವಿಶೇಷ ಗಮನವಿರಲಿ. ಕ್ವಾಲಿಟಿಯನ್ನು ತೆಗೆಯಿರಿ. ಕ್ವಾಂಟಿಟಿಯಂತು ಇನ್ನೂ ಹೆಚ್ಚಿನದಾಗಿ ಬರುತ್ತದೆ. ಕ್ವಾಲಿಟಿಯ ಮೇಲೆ ಗಮನವಿರಲಿ. ನಂಬರ್ ಕ್ವಾಲಿಟಿಗೆ ಸಿಗುತ್ತದೆ, ಕ್ವಾಂಟಿಟಿಗೆ ಅಲ್ಲ. ಕ್ವಾಲಿಟಿಯಲ್ಲಿರುವ ಒಬ್ಬರು 100 ಕ್ವಾಂಟಿಟಿಗೆ ಸಮಾನವಾಗಿದೆ.

ಕುಮಾರರೊಂದಿಗೆ:-
ಕುಮಾರರೇನು ಕಮಾಲ್ ಮಾಡುತ್ತೀರಿ? ಧಮಾಲ್ ಮಾಡುವವರಂತು ಅಲ್ಲ ಅಲ್ಲವೇ! ಕಮಾಲ್ ಮಾಡುವುದಕ್ಕಾಗಿ ಶಕ್ತಿಶಾಲಿಯಾಗಿರಿ ಮತ್ತು ಮಾಡಿರಿ. ಶಕ್ತಿಶಾಲಿಯಾಗುವುದಕ್ಕಾಗಿ ಸದಾ ತಮ್ಮ ಮಾಸ್ಟರ್ ಸರ್ವಶಕ್ತಿವಂತನ ಟೈಟಲ್ನ್ನು ಸ್ಮೃತಿಯಲ್ಲಿಟ್ಟುಕೊಳ್ಳಿರಿ. ಎಲ್ಲಿ ಶಕ್ತಿಯಿರುತ್ತದೆಯೋ ಅಲ್ಲಿ ಮಾಯೆಯಿಂದ ಮುಕ್ತಿಯಾಗುತ್ತೀರಿ. ಸ್ವಯಂನ ಮೇಲೆ ಎಷ್ಟು ಗಮನವಿರುತ್ತದೆಯೋ ಅಷ್ಟೇ ಸೇವೆಯಲ್ಲಿ ಗಮನ ಹರಿಯುತ್ತದೆ. ಒಂದುವೇಳೆ ಸ್ವ ಪ್ರತಿ ಗಮನವಿಲ್ಲವೆಂದರೆ ಸೇವೆಯಲ್ಲಿ ಶಕ್ತಿಯು ತುಂಬುವುದಿಲ್ಲ. ಆದ್ದರಿಂದ ಸದಾ ತಮ್ಮನ್ನು ಸಫಲತಾ ಸ್ವರೂಪರನ್ನಾಗಿ ಮಾಡಿಕೊಳ್ಳುವುದಕ್ಕಾಗಿ ಶಕ್ತಿಶಾಲಿ ಅಭ್ಯಾಸದ ಸಾಧನವನ್ನು ತಯಾರು ಮಾಡಿಕೊಳ್ಳಬೇಕಾಗಿದೆ. ಯಾವುದಾದರೂ ಅಂತಹ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಿರಿ, ಅದರಿಂದ ಸದಾ ಪ್ರಗತಿಯಾಗುತ್ತಿರಲಿ. ಮೊದಲು ಸ್ವ ಪ್ರತಿ ಉನ್ನತಿಯ ಪ್ರಗತಿಯಾಗಲಿ, ಆಗಲೇ ಸೇವೆಯು ಸಹಜ ಮತ್ತು ಸಫಲವಾಗುವುದು. ಕುಮಾರ ಜೀವನವು ಭಾಗ್ಯವಂತ ಜೀವನವಾಗಿದೆ ಏಕೆಂದರೆ ಕೆಲವು ಬಂಧನಗಳಿಂದ ಪಾರಾಗಿ ಬಿಟ್ಟಿರಿ. ಇಲ್ಲವೆಂದರೆ ಗೃಹಸ್ಥಿ ಜೀವನದಲ್ಲಿ ಎಷ್ಟೊಂದು ಬಂಧನಗಳಿವೆ. ಅಂದಾಗ ಇಂತಹ ಭಾಗ್ಯವಂತ ಆತ್ಮರು, ಎಂದಿಗೂ ತಮ್ಮ ಭಾಗ್ಯವನ್ನು ಮರೆತು ಬಿಡುವುದಿಲ್ಲ. ಸದಾ ತಮ್ಮನ್ನು ಶ್ರೇಷ್ಠ ಭಾಗ್ಯಶಾಲಿ ಆತ್ಮನೆಂದು ತಿಳಿದು ಅನ್ಯರ ಭಾಗ್ಯರೇಖೆಯನ್ನೆಳೆಯುವವರು ಆಗಿದ್ದೀರಿ. ಯಾರು ನಿರ್ಬಂಧನರಾಗುತ್ತಾರೆ ಅವರು ಸ್ವತಹವಾಗಿಯೇ ಹಾರುವ ಕಲೆಯ ಮೂಲಕ ಮುಂದುವರೆಯುತ್ತಾ ಸಾಗುತ್ತಾರೆ. ಆದ್ದರಿಂದ ಕುಮಾರ ಮತ್ತು ಕುಮಾರಿ ಜೀವನವು ಬಾಪ್ದಾದಾರವರಿಗೆ ಸದಾ ಪ್ರಿಯವೆನಿಸುತ್ತದೆ. ಗೃಹಸ್ಥಿ ಜೀವನವು ಬಂಧನವಿರುವುದಾಗಿದೆ ಮತ್ತು ಕುಮಾರಿ ಜೀವನವು ಬಂಧನಮುಕ್ತ ಜೀವನವಾಗಿದೆ. ಅಂದಮೇಲೆ ನಿರ್ಬಂಧನ ಆತ್ಮರಾಗಿ ಅನ್ಯರನ್ನೂ ನಿರ್ಬಂಧನರನ್ನಾಗಿ ಮಾಡಿರಿ. ಕುಮಾರ ಅರ್ಥಾತ್ ಸದಾ ಸೇವೆ ಮತ್ತು ನೆನಪಿನ ಬ್ಯಾಲೆನ್ಸ್ ಇಟ್ಟುಕೊಳ್ಳುವವರು. ಬ್ಯಾಲೆನ್ಸ್ ಇದೆಯೆಂದರೆ ಸದಾ ಹಾರುವ ಕಲೆಯಿದೆ. ಯಾರು ಬ್ಯಾಲೆನ್ಸ್ ಇಡುವುದನ್ನು ಕಲಿಯುತ್ತಾರೆಯೋ, ಅವರೆಂದಿಗೂ ಸಹ ಯಾವುದೇ ಪರಿಸ್ಥಿತಿಯಲ್ಲಿ ಏರುಪೇರಾಗಲು ಸಾಧ್ಯವಿಲ್ಲ.

ಅಧರ್ ಕುಮಾರರೊಂದಿಗೆ:-
ಎಲ್ಲರೂ ತಮ್ಮ ಜೀವನದ ಪ್ರತ್ಯಕ್ಷ ಪ್ರಮಾಣದ ಮೂಲಕ ಸೇವೆಯನ್ನು ಮಾಡುವವರಾಗಿದ್ದೀರಿ ಅಲ್ಲವೆ! ಎಲ್ಲದಕ್ಕಿಂತಲೂ ಅತಿ ದೊಡ್ಡ ಪ್ರತ್ಯಕ್ಷ ಪ್ರಮಾಣವಾಗಿದೆ - ತಮ್ಮೆಲ್ಲರ ಜೀವನದ ಪರಿವರ್ತನೆ. ಕೇಳುವವರು ಹೇಳುವವರಂತು ಬಹಳ ನೋಡಿದೆವು. ಈಗ ಎಲ್ಲರೂ ನೋಡಲು ಬಯಸುತ್ತಾರೆ, ಕೇಳಲು ಬಯಸುವುದಿಲ್ಲ. ಅಂದಾಗ ಸದಾ ಯಾವಾಗ ಯಾವುದೇ ಕರ್ಮವನ್ನು ಮಾಡುತ್ತೀರಿ, ಆಗ ಈ ಲಕ್ಷ್ಯವನ್ನಿಡಿ - ಯಾವ ಕರ್ಮವನ್ನು ನಾವು ಮಾಡುತ್ತಿದ್ದೇವೆ, ಅದರಲ್ಲಿ ಇಂತಹ ಪರಿವರ್ತನೆಯಾಗಲಿ. ಅದನ್ನು ಅನ್ಯರು ನೋಡಿ ಪರಿವರ್ತನೆಯಾಗಿ ಬಿಡಲಿ. ಇದರಿಂದ ಸ್ವಯಂ ತಾವೂ ಸಹ ಸಂತುಷ್ಟ ಮತ್ತು ಖುಷಿಯಾಗಿರುತ್ತೀರಿ ಮತ್ತು ಅನ್ಯರದೂ ಕಲ್ಯಾಣ ಮಾಡುವಿರಿ. ಅಂದಮೇಲೆ ಪ್ರತೀ ಕರ್ಮವನ್ನು ಸೇವಾರ್ಥವಾಗಿ ಮಾಡಿರಿ. ಒಂದುವೇಳೆ ನನ್ನ ಪ್ರತೀ ಕರ್ಮವು ಸೇವಾರ್ಥವಾಗಿ ಇರುವುದೆಂದು ಸ್ಮೃತಿಯಿರುತ್ತದೆಯೆಂದರೆ, ಸ್ವತಹವಾಗಿಯೇ ಶ್ರೇಷ್ಠ ಕರ್ಮವನ್ನು ಮಾಡುತ್ತೀರಿ. ನೆನಪಿಡಿ – ಸ್ವ ಪರಿವರ್ತನೆಯಿಂದ ಅನ್ಯರ ಪರಿವರ್ತನೆ ಮಾಡಬೇಕು. ಈ ಸೇವೆಯು ಸಹಜವೂ ಇದೆ ಮತ್ತು ಶ್ರೇಷ್ಠವೂ ಆಗಿದೆ. ಮುಖದ ಭಾಷಣವೂ ಆಗಲಿ ಮತ್ತು ಜೀವನವೂ ಭಾಷಣವಾಗಲಿ- ಇವರಿಗೆ ಹೇಳಲಾಗುತ್ತದೆ ಸೇವಾಧಾರಿ. ಸದಾ ತಮ್ಮ ದೃಷ್ಟಿಯ ಮೂಲಕ ಅನ್ಯರ ದೃಷ್ಟಿಯನ್ನು ಬದಲಾಯಿಸುವ ಸೇವಾಧಾರಿ. ದೃಷ್ಟಿಯು ಎಷ್ಟು ಶಕ್ತಿಶಾಲಿಯಾಗಿರುತ್ತದೆಯೋ ಅಷ್ಟು ಅನೇಕರ ಪರಿವರ್ತನೆ ಮಾಡಲು ಸಾಧ್ಯವಾಗುವುದು. ಸದಾ ದೃಷ್ಟಿ ಮತ್ತು ಶ್ರೇಷ್ಠ ಕರ್ಮದ ಮೂಲಕ ಅನ್ಯರ ಸೇವೆ ಮಾಡಲು ನಿಮಿತ್ತರಾಗಿರಿ.

2. ಏನಾಗಿದ್ದೆವು ಮತ್ತು ಏನಾಗಿ ಬಿಟ್ಟೆವು! ಇದನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳುತ್ತೀರಾ! ಈ ಸ್ಮೃತಿಯಲ್ಲಿರುವುದರಿಂದ ಎಂದಿಗೂ ಹಳೆಯ ಸಂಸ್ಕಾರವು ಇಮರ್ಜ್ ಆಗಲು ಸಾಧ್ಯವಿಲ್ಲ. ಜೊತೆ ಜೊತೆಗೆ ಭವಿಷ್ಯದಲ್ಲಿಯೂ ಏನಾಗುವವರಿದ್ದೇವೆ, ಇದನ್ನೂ ನೆನಪಿಟ್ಟುಕೊಳ್ಳುತ್ತೀರೆಂದರೆ ವರ್ತಮಾನ ಮತ್ತು ಭವಿಷ್ಯವು ಶ್ರೇಷ್ಠವಾಗುವ ಕಾರಣದಿಂದ ಖುಷಿಯಿರುತ್ತದೆ ಮತ್ತು ಖುಷಿಯಲ್ಲಿರುವುದರಿಂದ ಸದಾ ಮುಂದುವರೆಯುತ್ತಿರುತ್ತೀರಿ. ವರ್ತಮಾನ ಮತ್ತು ಭವಿಷ್ಯ ಪ್ರಪಂಚವು ಶ್ರೇಷ್ಟವಾಗಿದೆ, ಅಂದಮೇಲೆ ಶ್ರೇಷ್ಠದ ಮುಂದೆ ದುಃಖದ ಪ್ರಪಂಚವಿದೆ ಎನ್ನುವುದು ನೆನಪಿಗೂ ಬರುವುದಿಲ್ಲ. ಸದಾ ತಮ್ಮ ಈ ಬೇಹದ್ದಿನ ಪರಿವಾರವನ್ನು ನೋಡುತ್ತಾ ಖುಷಿಯಾಗುತ್ತಿರಿ. ಎಂದಿಗೂ ಸ್ವಪ್ನದಲ್ಲಿಯೂ ಯೋಚಿಸಿದ್ದಿರಾ - ಇಂತಹ ಭಾಗ್ಯಶಾಲಿ ಪರಿವಾರವು ಸಿಗುತ್ತದೆ ಎಂದು. ಆದರೆ ಈಗ ಸಾಕಾರದಲ್ಲಿ ನೋಡುತ್ತಿದ್ದೀರಿ, ಅನುಭವ ಮಾಡುತ್ತಿದ್ದೀರಿ. ಇಂತಹ ಪರಿವಾರವಾಗಿದೆ, ಅದು ಏಕಮತ ಪರಿವಾರವಾಗಿದೆ, ಇಷ್ಟು ದೊಡ್ಡ ಪರಿವಾರವಾಗಿದೆ - ಇದು ಇಡೀ ಕಲ್ಪದಲ್ಲಿಯೂ ಈಗಲೇ ಇದೆ. ಸತ್ಯಯುಗದಲ್ಲಿಯೂ ಚಿಕ್ಕ ಪರಿವಾರವೇ ಆಗುತ್ತದೆ. ಅಂದಮೇಲೆ ಬಾಪ್ದಾದಾ ಮತ್ತು ಪರಿವಾರವನ್ನು ನೋಡುತ್ತಾ ಖುಷಿಯಾಗುತ್ತದೆಯಲ್ಲವೆ. ಈ ಪರಿವಾರವು ಪ್ರಿಯವೆನಿಸುತ್ತದೆಯೇ? ಏಕೆಂದರೆ ಇಲ್ಲಿ ಸ್ವಾರ್ಥ ಭಾವವಿಲ್ಲ. ಯಾರು ಇಂತಹ ಪರಿವಾರದವರಾಗುತ್ತಾರೆಯೋ, ಅವರು ಭವಿಷ್ಯದಲಿಲ್ಯೂ ಒಬ್ಬರಿನ್ನೊಬ್ಬರ ಸಮೀಪ ಬರುತ್ತಾರೆ. ಸದಾ ಈ ಈಶ್ವರೀಯ ಪರಿವಾರದ ವಿಶೇಷತೆಗಳನ್ನು ನೋಡುತ್ತಾ ಮುಂದುವರೆಯುತ್ತಾ ಸಾಗಿರಿ.

ಕುಮಾರಿಯರೊಂದಿಗೆ:-
ಎಲ್ಲಾ ಕುಮಾರಿಯರು ತಮ್ಮನ್ನು ವಿಶ್ವ ಕಲ್ಯಾಣಕಾರಿ ಎಂದು ತಿಳಿದು ಮುಂದುವರೆಯುತ್ತಾ ಇರುತ್ತೀರಾ? ಈ ಸ್ಮೃತಿಯು ಸದಾ ಸಮರ್ಥರನ್ನಾಗಿ ಮಾಡುತ್ತದೆ. ಕುಮಾರಿ ಜೀವನವು ಸಮರ್ಥ ಜೀವನವಾಗಿದೆ. ಕುಮಾರಿಯರು ಸ್ವಯಂ ಸಮರ್ಥರಾಗಿದ್ದು ಅನ್ಯರನ್ನು ಸಮರ್ಥರನ್ನಾಗಿ ಮಾಡುವವರಾಗಿದ್ದೀರಿ. ವ್ಯರ್ಥಕ್ಕೆ ಸದಾಕಾಲಕ್ಕಾಗಿ ವಿದಾಯಿ ಕೊಡುವವರು. ಕುಮಾರಿ ಜೀವನದ ಭಾಗ್ಯವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತಾ ಮುಂದುವರೆಯುತ್ತಾ ಇರಿ. ಇದೂ ಸಹ ಸಂಗಮದ ಶ್ರೇಷ್ಠ ಭಾಗ್ಯವಾಗಿದೆ, ಯಾರು ಕುಮಾರಿಯರಾದರು, ಕುಮಾರಿಯು ತನ್ನ ಜೀವನದ ಮೂಲಕ ಅನ್ಯರ ಜೀವನವನ್ನು ರೂಪಿಸುವವರು, ತಂದೆಯ ಜೊತೆಯಿರುವವರು. ಸದಾ ಸ್ವಯಂನ್ನು ಶಕ್ತಿಶಾಲಿಯೆಂದು ಅನುಭವ ಮಾಡಿ, ಅನ್ಯರನ್ನೂ ಶಕ್ತಿಶಾಲಿ ಮಾಡುವವರು. ಸದಾ ಶ್ರೇಷ್ಠ, ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ. ಇಂತಹ ನಶೆಯಲ್ಲಿ ಪ್ರತೀ ಹೆಜ್ಜೆಯನ್ನು ಮುಂದುವರೆಸುವವರು! ಅಂದಮೇಲೆ ಇಂತಹ ಕುಮಾರಿಯರಾಗಿದ್ದೀರಲ್ಲವೆ!

ಪ್ರಶ್ನೆ:
ಯಾವ ವಿಶೇಷತೆ ಅಥವಾ ಗುಣದಿಂದ ಸರ್ವಪ್ರಿಯರಾಗಲು ಸಾಧ್ಯ?

ಉತ್ತರ:-
ಭಿನ್ನ ಹಾಗೂ ಪ್ರಿಯರಾಗುವ ಗುಣ ಅಥವಾ ನಿಸ್ಸಂಕಲ್ಪವಾಗಿರುವ ವಿಶೇಷತೆಯೇನಿದೆ - ಇದೇ ವಿಶೇಷತೆಯಿಂದ ಸರ್ವರ ಪ್ರಿಯರಾಗಲು ಸಾಧ್ಯ, ಭಿನ್ನವಾಗಿರುವುದರಿಂದ ಎಲ್ಲರ ಹೃದಯದ ಪ್ರೀತಿಯು ಸ್ವತಹವಾಗಿಯೇ ಪ್ರಾಪ್ತಿಯಾಗಿ ಬಿಡುತ್ತದೆ. ಇದೇ ವಿಶೇಷತೆಯಿಂದ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯ.

ವರದಾನ:  
ಸರ್ವ ಸಮಸ್ಯೆಗಳ ಬೀಳ್ಕೊಡುಗೆ ಸಮಾರಂಭವನ್ನು ಆಚರಿಸುವಂತಹ ಸಮಾಧಾನ ಸ್ವರೂಪ ಭವ.

ಸಮಾಧಾನ ಸ್ವರೂಪ ಆತ್ಮರ ಮಾಲೆಯು ಆಗ ತಯಾರಾಗುತ್ತದೆ, ಯಾವಾಗ ತಾವು ತಮ್ಮ ಸಂಪೂರ್ಣ ಸ್ಥಿತಿಯಲ್ಲಿ ಸ್ಥಿತರಾಗುತ್ತೀರಿ. ಸಂಪೂರ್ಣ ಸ್ಥಿತಿಯಲಿ ಸಮಸ್ಯೆಗಳು ಬಾಲ್ಯದ ಆಟವೆನ್ನುವಂತೆ ಅನುಭವವಾಗುತ್ತದೆ ಅರ್ಥಾತ್ ಸಮಾಪ್ತಿಯಾಗಿ ಬಿಡುತ್ತದೆ. ಹೇಗೆ ಒಂದುವೇಳೆ ಬ್ರಹ್ಮಾ ತಂದೆಯವರ ಮುಂದೆ ಯಾವುದೇ ಮಗು ಸಮಸ್ಯೆಯನ್ನು ತೆಗೆದುಕೊಂಡು ಬರುತ್ತಿದ್ದರು, ಆಗ ಸಮಸ್ಯೆಯ ಮಾತುಗಳನ್ನಾಡುವ ಸಾಹಸವೂ ಇರುತ್ತಿರಲಿಲ್ಲ, ಆ ಮಾತುಗಳೇ ಮರೆತು ಹೋಗುತ್ತಿತ್ತು. ಹೀಗೆ ತಾವು ಮಕ್ಕಳೂ ಸಹ ಸಮಾಧಾನ ಸ್ವರೂಪರಾಗಿರಿ, ಆಗ ಅರ್ಧಕಲ್ಪಕ್ಕಾಗಿ ಸಮಸ್ಯೆಗಳ ಬೀಳ್ಕೊಡುಗೆ ಸಮಾರಂಭವಾಗಿ ಬಿಡಲಿ. ವಿಶ್ವದ ಸಮಸ್ಯೆಗಳ ಸಮಾಧಾನವೇ ಪರಿವರ್ತನೆಯಾಗಿದೆ.

ಸ್ಲೋಗನ್:
ಯಾರು ಸದಾ ಜ್ಞಾನದ ಸ್ಮರಣೆಯನ್ನು ಮಾಡುತ್ತಾರೆ, ಅವರು ಮಾಯೆಯ ಆಕರ್ಷಣೆಯಿಂದ ಪಾರಾಗಿ ಬಿಡುತ್ತಾರೆ.