16.01.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ತಮ್ಮ ಯೋಗಬಲದಿಂದಲೇ ವಿಕರ್ಮ ವಿನಾಶ ಮಾಡಿಕೊಂಡು ಪಾವನರಾಗಿ ಪಾವನ ಪ್ರಪಂಚವನ್ನಾಗಿ ಮಾಡಬೇಕಾಗಿದೆ, ಇದೇ ನಿಮ್ಮ ಸೇವೆಯಾಗಿದೆ”

ಪ್ರಶ್ನೆ:
ದೇವಿ-ದೇವತಾ ಧರ್ಮದ ಯಾವ ವಿಶೇಷತೆಯ ಗಾಯನವಿದೆ?

ಉತ್ತರ:
ದೇವಿ-ದೇವತಾ ಧರ್ಮವೇ ಬಹಳ ಸುಖ ನೀಡುವುದಾಗಿದೆ, ಅಲ್ಲಿ ದುಃಖದ ಹೆಸರು-ಗುರುತೂ ಇರುವುದಿಲ್ಲ. ನೀವು ಮಕ್ಕಳು 3/4 (ಮುಕ್ಕಾಲು) ಭಾಗ ಸುಖವನ್ನು ಪಡೆಯುತ್ತೀರಿ, ಒಂದುವೇಳೆ ಅರ್ಧ ಸುಖ - ಅರ್ಧ ದುಃಖವಿದ್ದರೂ ಸಹ ಮಜಾ ಬರುವುದಿಲ್ಲ.


ಓಂ ಶಾಂತಿ.
ಭಗವಾನುವಾಚ, ಭಗವಂತನೇ ತಿಳಿಸಿದ್ದಾರೆ - ಯಾವುದೇ ಮನುಷ್ಯನಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ದೇವಿ-ದೇವತೆಗಳಿಗೂ ಸಹ ಭಗವಂತನೆಂದು ಹೇಳುವುದಿಲ್ಲ. ಭಗವಂತನು ನಿರಾಕಾರನಾಗಿದ್ದಾರೆ. ಅವರಿಗೆ ಯಾವುದೇ ಸಾಕಾರಿ ಅಥವಾ ಅಕಾರಿ ರೂಪವಿಲ್ಲ. ಸೂಕ್ಷ್ಮವತನವಾಸಿಗಳಿಗಾದರೂ ಸೂಕ್ಷ್ಮ ಆಕಾರ (ಶರೀರ) ವಿದೆ. ಆದ್ದರಿಂದ ಅದಕ್ಕೆ ಸೂಕ್ಷ್ಮವತನವೆಂದು ಕರೆಯಲಾಗುತ್ತದೆ. ಇಲ್ಲಿ ಸಾಕಾರಿ ಮನುಷ್ಯ ಶರೀರವಿದೆ ಆ ಕಾರಣ ಇದಕ್ಕೆ ಸ್ಥೂಲವತನವೆಂದು ಹೇಳಲಾಗುತ್ತದೆ, ಸೂಕ್ಷ್ಮವತನದಲ್ಲಿ ಈ ಸ್ಥೂಲ ಪಂಚ ತತ್ವಗಳ ಶರೀರವಿರುವುದಿಲ್ಲ. ಈ ಪಂಚತತ್ವಗಳಿಂದಲೇ ಮನುಷ್ಯನ ಶರೀರವು ಮಾಡಲ್ಪಟ್ಟಿದೆ. ಇದಕ್ಕೆ ಮಣ್ಣಿನ ಗೊಂಬೆ ಎಂದು ಹೇಳುತ್ತಾರೆ. ಸೂಕ್ಷ್ಮವತನವಾಸಿಗಳಿಗೆ ಈ ಮಣ್ಣಿನ ಗೊಂಬೆ (ಶರೀರ) ಯಿರುವುದಿಲ್ಲ. ದೇವತಾ ಧರ್ಮದವರು ಮನುಷ್ಯರೇ ಆದರೆ ಅವರಿಗೆ ದೈವೀ ಗುಣವಂತ ಮನುಷ್ಯರೆಂದು ಹೇಳುತ್ತಾರೆ. ಶಿವ ತಂದೆಯಿಂದ ಈ ದೈವೀ ಗುಣಗಳನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ದೈವೀ ಗುಣವಂತ ಮನುಷ್ಯರು ಹಾಗೂ ಆಸುರೀ ಗುಣವುಳ್ಳ ಮನುಷ್ಯರಲ್ಲಿ ಎಷ್ಟೊಂದು ಅಂತರವಿದೆ! ಮನುಷ್ಯರು ಶಿವಾಲಯ ಹಾಗೂ ವೇಶ್ಯಾಲಯದಲ್ಲಿರಲು ಯೋಗ್ಯರಾಗುತ್ತಾರೆ. ಸತ್ಯಯುಗಕ್ಕೆ ಶಿವಾಲಯವೆಂದು ಹೇಳಲಾಗುತ್ತದೆ, ಸತ್ಯಯುಗವು ಇಲ್ಲಿಯೇ ಆಗುತ್ತದೆ. ಯಾವುದೇ ಮೂಲವತನ ಅಥವಾ ಸೂಕ್ಷ್ಮವತನದಲ್ಲಿ ಸ್ಥಾಪನೆಯಾಗುವುದಿಲ್ಲ. ನೀವು ಮಕ್ಕಳಿಗೆ ತಿಳಿದಿದೆ - ಸತ್ಯಯುಗವು ಶಿವ ತಂದೆಯಿಂದ ಸ್ಥಾಪನೆಯಾಗಿರುವ ಶಿವಾಲಯವಾಗಿದೆ. ಯಾವಾಗ ಸ್ಥಾಪನೆ ಮಾಡಿದರು? ಸಂಗಮದಲ್ಲಿ. ಇದು ಪುರುಷೋತ್ತಮ ಯುಗವಾಗಿದೆ. ಈಗ ಈ ಪ್ರಪಂಚವು ಪತಿತ, ತಮೋಪ್ರಧಾನವಾಗಿದೆ. ಇದಕ್ಕೆ ಸತೋಪ್ರಧಾನ, ಹೊಸ ಪ್ರಪಂಚವೆಂದು ಹೇಳುವುದಿಲ್ಲ. ಹೊಸ ಪ್ರಪಂಚಕ್ಕೆ ಸತೋಪ್ರಧಾನವೆಂದು ಹೇಳಲಾಗುತ್ತದೆ. ಮತ್ತೆ ಅದೇ ಪ್ರಪಂಚವು ಯಾವಾಗ ಹಳೆಯದಾಗುವುದೋ ಆಗ ಅದಕ್ಕೆ ತಮೋಪ್ರಧಾನವೆಂದು ಹೇಳಲಾಗುತ್ತದೆ. ನಂತರ ಅದು ಹೇಗೆ ಸತೋಪ್ರಧಾನವಾಗುತ್ತದೆ? ನೀವು ಮಕ್ಕಳ ಯೋಗಬಲದಿಂದ. ಯೋಗಬಲದಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಪವಿತ್ರರಾಗಿ ಬಿಡುತ್ತೀರಿ. ನೀವು ಪವಿತ್ರರಾದರೆ ಪವಿತ್ರರಿಗಾಗಿ ಪವಿತ್ರ ಪ್ರಪಂಚವೇ ಬೇಕು. ಹೊಸ ಪ್ರಪಂಚವನ್ನು ಪವಿತ್ರ, ಹಳೆಯ ಪ್ರಪಂಚವನ್ನು ಅಪವಿತ್ರವೆನ್ನಲಾಗುತ್ತದೆ. ಪವಿತ್ರ ಪ್ರಪಂಚವನ್ನು ತಂದೆಯು ಸ್ಥಾಪನೆ ಮಾಡುತ್ತಾರೆ, ಪತಿತ ಪ್ರಪಂಚವನ್ನು ರಾವಣನು ಸ್ಥಾಪನೆ ಮಾಡುತ್ತಾನೆ, ಈ ಮಾತುಗಳನ್ನು ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ. ಈ ಪಂಚ ವಿಕಾರಗಳು ಇಲ್ಲದೇ ಇದ್ದಿದ್ದರೆ ಮನುಷ್ಯರು ದುಃಖಿಯಾಗಿ ತಂದೆಯನ್ನು ಏಕೆ ನೆನಪು ಮಾಡುತ್ತಿದ್ದರು! ತಂದೆಯು ತಿಳಿಸುತ್ತಾರೆ - ನಾನೇ ದುಃಖಹರ್ತ-ಸುಖಕರ್ತನಾಗಿದ್ದೇನೆ. ರಾವಣನ ಪಂಚ ವಿಕಾರಗಳ 10 ತಲೆಗಳ ಗೊಂಬೆಯನ್ನು ಮಾಡಿ ಬಿಟ್ಟಿದ್ದಾರೆ. ಆ ರಾವಣನನ್ನು ಶತ್ರುವೆಂದು ತಿಳಿದು ಸುಡುತ್ತಾರೆ ಅಂದರೆ ದ್ವಾಪರದ ಆದಿಯಿಂದಲೇ ಸುಡುವುದನ್ನು ಆರಂಭಿಸುತ್ತಾರೆಂದಲ್ಲ. ಯಾವಾಗ ತಮೋಪ್ರಧಾನರಾಗುವರೋ ಆಗ ಯಾವುದೋ ಮತ-ಮತಾಂತರದವರು ಕುಳಿತು ಈ ಹೊಸ ಪದ್ಧತಿಗಳನ್ನು ಮಾಡಿದ್ದಾರೆ. ಯಾರಾದರೂ ಬಹಳ ದುಃಖವನ್ನು ಕೊಟ್ಟಾಗ ಅವರ ಪ್ರತಿಮೆಯನ್ನು ಮಾಡಿ ಸುಡುತ್ತಾರೆ. ನೀವು ಮಕ್ಕಳಿಗೆ 3/4 ಸುಖವಿರುತ್ತದೆ. ಒಂದುವೇಳೆ ಅರ್ಧ ದುಃಖವಿದ್ದರೂ ಸಹ ಮಜವೇ ಇರುವುದಿಲ್ಲ. ತಂದೆಯು ತಿಳಿಸುತ್ತಾರೆ - ನಿಮ್ಮ ಈ ದೇವಿ-ದೇವತಾ ಧರ್ಮವು ಬಹಳ ಸುಖ ನೀಡುವಂತಹದ್ದಾಗಿದೆ. ಸೃಷ್ಟಿಯಂತೂ ಅನಾದಿಯಾಗಿ ಮಾಡಲ್ಪಟ್ಟಿದೆ. ಸೃಷ್ಟಿಯು ಏಕಾಯಿತು? ಇದು ಯಾವಾಗ ಮುಕ್ತಾಯವಾಗುವುದು? ಎಂಬ ಮಾತನ್ನು ಯಾರೂ ಕೇಳಲು ಸಾಧ್ಯವಿಲ್ಲ. ಈ ಚಕ್ರವು ಸುತ್ತುತ್ತಲೇ ಇರುತ್ತದೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದು ಬಿಟ್ಟಿದ್ದಾರೆ. ಅವಶ್ಯವಾಗಿ ಸಂಗಮಯುಗವು ಬರುವುದು, ಯಾವಾಗ ಸೃಷ್ಟಿಯು ಬದಲಾಗುವುದು. ಈಗ ಹೇಗೆ ನೀವು ಇದನ್ನು ಅನುಭವ ಮಾಡುತ್ತೀರೋ ಹಾಗೆ ಮತ್ತ್ಯಾರೂ ಅರಿತುಕೊಳ್ಳುವುದಿಲ್ಲ. ಬಾಲ್ಯದಲ್ಲಿ ರಾಧೆ-ಕೃಷ್ಣರು ಎಂಬ ಹೆಸರಿರುತ್ತದೆ ನಂತರ ಸ್ವಯಂವರವಾಗುತ್ತದೆ. ಇಬ್ಬರೂ ಬೇರೆ-ಬೇರೆ ರಾಜಧಾನಿಯವರಾಗಿರುತ್ತಾರೆ ನಂತರ ಅವರ ಸ್ವಯಂವರವಾದಾಗ ಲಕ್ಷ್ಮಿ-ನಾರಾಯಣರಾಗುತ್ತಾರೆ - ಈ ಮಾತನ್ನೂ ಸಹ ಅರ್ಥ ಮಾಡಿಕೊಳ್ಳುವುದಿಲ್ಲ. ಈ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ತಂದೆಯು ಜ್ಞಾನಪೂರ್ಣನಾಗಿದ್ದಾರೆ ಅಂದರೆ ಅವರು ಎಲ್ಲರ ಹೃದಯವನ್ನು ಹೊಕ್ಕು ನೋಡುವವರು ಎಂದಲ್ಲ. ಈಗ ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ - ತಂದೆಯು ಬಂದು ಜ್ಞಾನವನ್ನು ತಿಳಿಸುತ್ತಾರೆ, ಜ್ಞಾನವು ಪಾಠಶಾಲೆಯಲ್ಲಿ ಸಿಗುತ್ತದೆ. ಪಾಠಶಾಲೆಯೆಂದಮೇಲೆ ಗುರಿ-ಧ್ಯೇಯವು ಅವಶ್ಯವಾಗಿ ಇರಬೇಕು. ಈಗ ನೀವು ಓದುತ್ತಿದ್ದೀರಿ, ಈ ಛೀ ಛೀ ಪ್ರಪಂಚದಲ್ಲಿ ನೀವು ರಾಜ್ಯಭಾರ ಮಾಡಲು ಸಾಧ್ಯವಿಲ್ಲ. ನೀವು ಪವಿತ್ರ, ಸತೋಪ್ರಧಾನ ಪ್ರಪಂಚದಲ್ಲಿ ರಾಜ್ಯ ಮಾಡುವಿರಿ. ರಾಜಯೋಗವನ್ನು ಸತ್ಯಯುಗದಲ್ಲಿ ಕಲಿಸಿಕೊಡಲಾಗುವುದಿಲ್ಲ. ಸಂಗಮಯುಗದಲ್ಲಿಯೇ ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ, ಇದು ಬೇಹದ್ದಿನ ಮಾತಾಗಿದೆ. ತಂದೆಯು ಯಾವಾಗ ಬರುತ್ತಾರೆಂಬುದೂ ಸಹ ಯಾರಿಗೂ ತಿಳಿದಿಲ್ಲ. ಘೋರ ಅಂಧಕಾರದಲ್ಲಿದ್ದಾರೆ! ಜ್ಞಾನಸೂರ್ಯನ ಹೆಸರಿನಿಂದ ಜಪಾನಿನಲ್ಲಿರುವವರು ತಮ್ಮನ್ನು ಸೂರ್ಯವಂಶಿಗಳೆಂದು ಕರೆಸಿಕೊಳ್ಳುತ್ತಾರೆ. ವಾಸ್ತವದಲ್ಲಿ ದೇವತೆಗಳು ಸೂರ್ಯವಂಶಿಗಳಾದರು. ಸೂರ್ಯವಂಶಿಯರ ರಾಜ್ಯವು ಸತ್ಯಯುಗದಲ್ಲಿಯೇ ಇತ್ತು. ಜ್ಞಾನಸೂರ್ಯ ಪ್ರಕಟ, ಅಜ್ಞಾನ ಅಂಧಕಾರ ವಿನಾಶವೆಂದು ಗಾಯನವಿದೆ ಅಂದಾಗ ಭಕ್ತಿಮಾರ್ಗದ ಅಂಧಕಾರ ವಿನಾಶವಾಗುವುದು. ಹೊಸ ಪ್ರಪಂಚವೇ ಹಳೆಯದು, ಹಳೆಯ ಪ್ರಪಂಚದಿಂದ ಮತ್ತೆ ಹೊಸದಾಗುತ್ತದೆ. ಇದು ಬೇಹದ್ದಿನ ಅತಿ ದೊಡ್ಡ ಮನೆಯಾಗಿದೆ. ಇದು ಎಷ್ಟು ದೊಡ್ಡ ರಂಗಮಂಚವಾಗಿದೆ! ಸೂರ್ಯ, ಚಂದ್ರ, ನಕ್ಷತ್ರಗಳು ಎಷ್ಟೊಂದು ಕಾರ್ಯ ಮಾಡುತ್ತದೆ! ರಾತ್ರಿಯಲ್ಲಿ ಬಹಳ ಕೆಲಸವು ನಡೆಯುತ್ತದೆ. ಹಾಗೆ ನೋಡಿದರೆ ಕೆಲವು ರಾಜರು ದಿನದಲ್ಲಿ ಮಲಗುತ್ತಾರೆ, ರಾತ್ರಿಯ ಸಮಯದಲ್ಲಿ ತಮ್ಮ ಸಭೆ ನಡೆಸುತ್ತಾರೆ. ಇದು ಈಗಲೂ ಸಹ ಕೆಲವೊಂದೆಡೆ ನಡೆಯುತ್ತಿದೆ. ಕಾರ್ಖಾನೆಗಳೂ ಸಹ ರಾತ್ರಿಯಲ್ಲಿಯೇ ನಡೆಯುತ್ತದೆ ಆದರೆ ಇದು ಹದ್ದಿನ ದಿನ-ರಾತ್ರಿಯಾಗಿದೆ, ಅದು ಬೇಹದ್ದಿನ ಮಾತಾಗಿದೆ. ಈ ಮಾತುಗಳನ್ನು ನಿಮ್ಮ ವಿನಃ ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ಶಿವ ತಂದೆಯನ್ನೂ ಸಹ ತಿಳಿದುಕೊಂಡಿಲ್ಲ. ತಂದೆಯು ಪ್ರತಿಯೊಂದು ಮಾತನ್ನು ತಿಳಿಸುತ್ತಿರುತ್ತಾರೆ. ಬ್ರಹ್ಮನನ್ನು ಕುರಿತು ತಿಳಿಸುತ್ತಾರೆ - ಇವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ, ತಂದೆಯು ಸೃಷ್ಟಿಯನ್ನು ರಚನೆ ಮಾಡಬೇಕೆಂದರೆ ಅವಶ್ಯವಾಗಿ ಇವರಲ್ಲಿ ಪ್ರವೇಶ ಮಾಡುತ್ತಾರೆ. ಪಾವನ ಮನುಷ್ಯರು ಅವಶ್ಯವಾಗಿ ಸತ್ಯಯುಗದಲ್ಲಿಯೇ ಇರುತ್ತಾರೆ, ಕಲಿಯುಗದಲ್ಲಿ ಎಲ್ಲರೂ ವಿಕಾರದಿಂದಲೇ ಜನ್ಮ ಪಡೆಯುತ್ತಾರೆ ಆದ್ದರಿಂದಲೇ ಪತಿತರೆಂದು ಕರೆಯುತ್ತಾರೆ. ವಿಕಾರವಿಲ್ಲದೆ ಸೃಷ್ಟಿಯು ಹೇಗೆ ನಡೆಯುತ್ತದೆಯೆಂದು ಮನುಷ್ಯರು ಹೇಳುತ್ತಾರೆ. ಅರೆ! ದೇವತೆಗಳಿಗೆ ನೀವು ಸಂಪೂರ್ಣ ನಿರ್ವಿಕಾರಿಗಳೆಂದು ಹೇಳುತ್ತೀರಿ. ಎಷ್ಟು ಶುದ್ಧತೆಯಿಂದ ಅವರ ಮಂದಿರವನ್ನು ಕಟ್ಟುತ್ತಾರೆ. ಬ್ರಾಹ್ಮಣರಲ್ಲದೆ ಮತ್ತ್ಯಾರನ್ನೂ ಒಳಗೆ ಬರಮಾಡಿಕೊಳ್ಳುವುದಿಲ್ಲ. ವಾಸ್ತವದಲ್ಲಿ ಈ ದೇವತೆಗಳನ್ನು ವಿಕಾರಿಗಳು ಸ್ಪರ್ಶಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಇತ್ತೀಚೆಗೆ ಎಲ್ಲವೂ ಹಣದಿಂದಲೇ ನಡೆಯುತ್ತದೆ. ಯಾರಾದರೂ ಮನೆಯಲ್ಲಿ ಮಂದಿರ ಮಾಡಿಕೊಳ್ಳುತ್ತಾರೆಂದರೆ ಬ್ರಾಹ್ಮಣರನ್ನೇ ಕರೆಸುತ್ತಾರೆ. ಈಗಂತೂ ಕೇವಲ ಹೆಸರು ಮಾತ್ರ ಬ್ರಾಹ್ಮಣರೆಂದಿದೆ, ಆದರೆ ಅವರೂ ಸಹ ಪತಿತರಾಗಿದ್ದಾರೆ. ಈ ಪ್ರಪಂಚವೇ ವಿಕಾರಿಯಾಗಿದೆ ಆದ್ದರಿಂದ ಪೂಜೆಯೂ ವಿಕಾರಿಗಳಿಂದಲೇ ಆಗುತ್ತದೆ. ನಿರ್ವಿಕಾರಿಗಳು ಎಲ್ಲಿಂದ ಬರುವರು! ನಿರ್ವಿಕಾರಿಗಳು ಸತ್ಯಯುಗದಲ್ಲಿಯೇ ಇರುತ್ತಾರೆ, ವಿಕಾರದಲ್ಲಿ ಯಾರು ಹೋಗುವುದಿಲ್ಲವೋ ಅವರಿಗೆ ನಿರ್ವಿಕಾರಿಗಳೆಂದು ಹೇಳುತ್ತಾರೆಂದಲ್ಲ. ಶರೀರವಂತೂ ವಿಕಾರದಿಂದಲೇ ಜನ್ಮ ಪಡೆದಿದೆಯಲ್ಲವೆ! ತಂದೆಯು ಒಂದೇ ಮಾತನ್ನು ತಿಳಿಸಿದ್ದಾರೆ - ಇದೆಲ್ಲವೂ ರಾವಣ ರಾಜ್ಯವಾಗಿದೆ, ರಾಮ ರಾಜ್ಯದಲ್ಲಿ ಸಂಪೂರ್ಣ ನಿರ್ವಿಕಾರಿಗಳಿರುತ್ತಾರೆ. ರಾವಣ ರಾಜ್ಯದಲ್ಲಿ ವಿಕಾರಿಗಳಿದ್ದಾರೆ, ಸತ್ಯಯುಗದಲ್ಲಿ ಪವಿತ್ರತೆಯಿತ್ತು ಆಗ ಸುಖ-ಶಾಂತಿಯಿತ್ತು. ನೀವಿದನ್ನು ತೋರಿಸುತ್ತೀರಿ, ಸತ್ಯಯುಗದಲ್ಲಿ ಈ ಲಕ್ಷ್ಮಿ-ನಾರಾಯಣರ ರಾಜ್ಯವಿರುತ್ತದೆಯಲ್ಲವೆ, ಅಲ್ಲಿ ಪಂಚ ವಿಕಾರಗಳಿರುವುದಿಲ್ಲ, ಅದು ಪವಿತ್ರ ರಾಜ್ಯವಾಗಿತ್ತು. ಅದನ್ನು ಭಗವಂತನು ಸ್ಥಾಪನೆ ಮಾಡುತ್ತಾರೆ. ಭಗವಂತನು ಪತಿತ ರಾಜ್ಯವನ್ನೇನೂ ಸ್ಥಾಪನೆ ಮಾಡುವುದಿಲ್ಲ. ಸತ್ಯಯುಗದಲ್ಲಿ ಒಂದುವೇಳೆ ಪತಿತರಿದ್ದಿದ್ದರೆ ಭಗವಂತನನ್ನು ಕರೆಯುತ್ತಿದ್ದರಲ್ಲವೆ! ಅಲ್ಲಂತೂ ಯಾರೂ ಕರೆಯುವುದೇ ಇಲ್ಲ. ಸುಖದಲ್ಲಿ ಯಾರೂ ನೆನಪು ಮಾಡುವುದಿಲ್ಲ. ಸುಖದ ಸಾಗರ, ಪವಿತ್ರತೆಯ ಸಾಗರ ಎಂದು ಪರಮಾತ್ಮನ ಮಹಿಮೆಯನ್ನೂ ಮಾಡುತ್ತಾರೆ. ಶಾಂತಿಯು ಬೇಕೆಂದು ಎಲ್ಲರೂ ಕೇಳುತ್ತಾರೆ. ಈಗ ಇಡೀ ಪ್ರಪಂಚದಲ್ಲಿ ಸಂಪೂರ್ಣ ಶಾಂತಿಯನ್ನು ಮನುಷ್ಯರು ಹೇಗೆ ಸ್ಥಾಪಿಸುವರು? ಶಾಂತಿಯ ರಾಜ್ಯವು ಸ್ವರ್ಗದಲ್ಲಿ ಮಾತ್ರವೇ ಇತ್ತು. ಯಾವಾಗ ಪರಸ್ಪರ ಹೊಡೆದಾಡಿದರೆ ಆಗ ಅವರನ್ನು ಶಾಂತಗೊಳಿಸಲಾಗುತ್ತದೆ. ಸತ್ಯಯುಗದಲ್ಲಂತೂ ಒಂದೇ ರಾಜ್ಯವಿರುತ್ತದೆ.

ತಂದೆಯು ತಿಳಿಸುತ್ತಾರೆ - ಈ ಹಳೆಯ ಪ್ರಪಂಚವೇ ಈಗ ಸಮಾಪ್ತಿಯಾಗಲಿದೆ. ಈ ಮಹಾಭಾರತ ಯುದ್ಧದಲ್ಲಿ ಎಲ್ಲರೂ ವಿನಾಶವಾಗುತ್ತಾರೆ. ವಿನಾಶಕಾಲೇ ವಿಪರೀತಬುದ್ಧಿ ಎಂಬ ಅಕ್ಷರವನ್ನು ಬರೆಯಲಾಗಿದೆ. ಅವಶ್ಯವಾಗಿ ಪಾಂಡವರು ನೀವಲ್ಲವೆ. ನೀವು ಆತ್ಮೀಯ ಮಾರ್ಗದರ್ಶಕರಾಗಿದ್ದೀರಿ. ಎಲ್ಲರಿಗೆ ಮುಕ್ತಿಧಾಮದ ಮಾರ್ಗವನ್ನು ತೋರಿಸುತ್ತೀರಿ. ಅದು ಆತ್ಮಗಳ ಮನೆ ಶಾಂತಿಧಾಮವಾಗಿದೆ. ಇದು ದುಃಖಧಾಮವಾಗಿದೆ. ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ಈ ದುಃಖಧಾಮವನ್ನು ನೋಡುತ್ತಿದ್ದರೂ ಮರೆತು ಹೋಗಿ. ಕೇವಲ ನಾವೀಗ ಶಾಂತಿಧಾಮದಲ್ಲಿ ಹೋಗಬೇಕಾಗಿದೆ. ಇದನ್ನು ಆತ್ಮವೇ ಹೇಳುತ್ತದೆ. ಆತ್ಮವೇ ಅನುಭೂತಿ ಮಾಡುತ್ತದೆ. ನಾನಾತ್ಮನಾಗಿದ್ದೇನೆಂದು ಆತ್ಮಕ್ಕೆ ಈಗ ಸ್ಮೃತಿಯು ಬಂದಿದೆ. ತಂದೆಯು ತಿಳಿಸುತ್ತಾರೆ - ನಾನು ಹೇಗಿದ್ದೇನೆ? ಯಾರಾಗಿದ್ದೇನೆ? ಎಂಬುದನ್ನು ಯಥಾರ್ಥವಾಗಿ ಅನ್ಯರ್ಯಾರೂ ಅರಿತುಕೊಳ್ಳಲು ಸಾಧ್ಯವಿಲ್ಲ. ನಾನು ಬಿಂದುವಾಗಿದ್ದೇನೆ ಎಂದು ನಿಮಗೇ ತಿಳಿಸಿದ್ದಾರೆ. ನಿಮಗಿದು ಪದೇ-ಪದೇ ಬುದ್ಧಿಯಲ್ಲಿರಬೇಕು - ನಾವು 84 ಜನ್ಮಗಳ ಚಕ್ರವನ್ನು ಹೇಗೆ ಸುತ್ತಿದ್ದೇವೆ. ಇದರಲ್ಲಿ ತಂದೆಯ ನೆನಪೂ ಬರುವುದು, ಮನೆಯ ನೆನಪೂ ಬರುವುದು, ಚಕ್ರದ ನೆನಪೂ ಬರುವುದು. ವಿಶ್ವದ ಇತಿಹಾಸ-ಭೂಗೋಳವನ್ನು ನೀವೇ ಅರಿತುಕೊಂಡಿದ್ದೀರಿ. ಎಷ್ಟೊಂದು ಖಂಡಗಳಿವೆ! ಎಷ್ಟೊಂದು ಯುದ್ಧಗಳಾಯಿತು. ಸತ್ಯಯುಗದಲ್ಲಿ ಯುದ್ಧದ ಮಾತೇ ಇಲ್ಲ. ರಾಮರಾಜ್ಯವೆಲ್ಲಿ! ರಾವಣ ರಾಜ್ಯವೆಲ್ಲಿ! ಈಗ ನೀವು ಹೇಗೆ ಈಶ್ವರೀಯ ರಾಜ್ಯದಲ್ಲಿದ್ದೀರಿ! ಏಕೆಂದರೆ ರಾಜ್ಯ ಸ್ಥಾಪನೆ ಮಾಡಲು ಈಶ್ವರನು ಇಲ್ಲಿಗೆ ಬಂದಿದ್ದಾರೆ. ಈಶ್ವರನಂತೂ ರಾಜ್ಯ ಮಾಡುವುದಿಲ್ಲ. ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವುದಿಲ್ಲ, ನಿಷ್ಕಾಮ ಸೇವೆ ಮಾಡುತ್ತಾರೆ. ಸರ್ವಶ್ರೇಷ್ಠ ಭಗವಂತನು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಬಾಬಾ ಎಂದು ಹೇಳುವುದರಿಂದಲೇ ಒಮ್ಮೆಲೆ ಖುಷಿಯ ನಶೆಯೇರಬೇಕು. ನಿಮ್ಮ ಅಂತಿಮ ಸ್ಥಿತಿಯ ಅತೀಂದ್ರಿಯ ಸುಖದ ಗಾಯನವಿದೆ. ಯಾವಾಗ ಪರೀಕ್ಷೆಯ ದಿನಗಳು ಹತ್ತಿರ ಬರುವುದೋ ಆ ಸಮಯದಲ್ಲಿ ಎಲ್ಲವೂ ಸಾಕ್ಷಾತ್ಕಾರವಾಗುವುದು, ಅತೀಂದ್ರಿಯ ಸುಖವೂ ಸಹ ಮಕ್ಕಳಿಗೆ ನಂಬರ್ವಾರ್ ಇದೆ. ಕೆಲವರಂತೂ ತಂದೆಯ ನೆನಪಿನಲ್ಲಿ ಅಪಾರ ಖುಷಿಯಲ್ಲಿರುತ್ತಾರೆ.

ನೀವು ಮಕ್ಕಳಿಗೆ ಇಡೀ ದಿನ ಇದೇ ಸ್ಮೃತಿಯು ಬರುತ್ತಿರಲಿ. ಓಹೋ! ಬಾಬಾ, ತಾವು ನಮ್ಮನ್ನು ಹೇಗಿದ್ದವರನ್ನು ಹೇಗೆ ಮಾಡಿದಿರಿ! ತಮ್ಮಿಂದ ನಮಗೆ ಎಷ್ಟೊಂದು ಸುಖ ಸಿಗುತ್ತದೆ...... ತಂದೆಯನ್ನು ನೆನಪು ಮಾಡುತ್ತಾ ಆನಂದ ಭಾಷ್ಫಗಳು ಬಂದು ಬಿಡುತ್ತವೆ. ಬಾಬಾ, ತಾವು ಬಂದು ದುಃಖದಿಂದ ಬಿಡಿಸುತ್ತೀರಿ. ವಿಷಯ ಸಾಗರದಿಂದ ಕ್ಷೀರ ಸಾಗರದೆಡೆಗೆ ಕರೆದುಕೊಂಡು ಹೋಗುತ್ತೀರಿ. ತಮ್ಮದು ಚಮತ್ಕಾರವಾಗಿದೆ ಬಾಬಾ ಎಂದು ಇಡೀ ದಿನ ಇದೇ ನಶೆಯಲ್ಲಿರಬೇಕು. ತಂದೆಯು ಯಾವ ಸಮಯದಲ್ಲಿ ನಿಮಗೆ ನೆನಪು ತರಿಸುವರೋ ಆಗ ನೀವು ಎಷ್ಟು ಗದ್ಗದಿತರಾಗುತ್ತೀರಿ. ಶಿವ ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಾರೆ. ಅವಶ್ಯವಾಗಿ ಶಿವರಾತ್ರಿಯನ್ನೂ ಆಚರಿಸಲಾಗುತ್ತದೆ. ಆದರೆ ಮನುಷ್ಯರು ಗೀತೆಯಲ್ಲಿ ಶಿವ ತಂದೆಯ ಬದಲು ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಇದು ಮೊಟ್ಟ ಮೊದಲನೆಯ ಅತಿ ದೊಡ್ಡ ತಪ್ಪಾಗಿದೆ. ನಂಬರ್ವನ್ ಗೀತೆಯಲ್ಲಿಯೇ ತಪ್ಪು ಮಾಡಿ ಬಿಟ್ಟಿದ್ದಾರೆ. ನಾಟಕವೇ ಹೀಗೆ ಮಾಡಲ್ಪಟ್ಟಿದೆ, ತಂದೆಯು ಬಂದು ಈ ತಪ್ಪನ್ನು ತಿಳಿಸುತ್ತಾರೆ, ಪತಿತ-ಪಾವನನು ನಾನಾಗಿದ್ದೇನೆಯೋ ಅಥವಾ ಕೃಷ್ಣನೋ? ನಾನು ನಿಮಗೆ ರಾಜಯೋಗವನ್ನು ಕಲಿಸಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದೆನು. ನನ್ನದೇ ಗಾಯನವಿದೆಯಲ್ಲವೆ - ಅಕಾಲಮೂರ್ತಿ, ಅಯೋನಿಜ, ಅವಿನಾಶಿ........ ಈ ಮಹಿಮೆಯನ್ನು ಕೃಷ್ಣನಿಗೆ ಮಾಡಲು ಸಾಧ್ಯವಿಲ್ಲ. ಕೃಷ್ಣನು ಪುನರ್ಜನ್ಮದಲ್ಲಿ ಬರುತ್ತಾನೆ, ನೀವು ಮಕ್ಕಳಲ್ಲಿಯೂ ನಂಬರ್ವಾರ್ ಇದ್ದಾರೆ, ಕೆಲವರ ಬುದ್ಧಿಯಲ್ಲಷ್ಟೆ ಈ ಮಾತುಗಳಿರುತ್ತವೆ. ಜ್ಞಾನದ ಜೊತೆ ನಡುವಳಿಕೆಯೂ ಚೆನ್ನಾಗಿರಬೇಕು. ಮಾಯೆಯೇನೂ ಕಡಿಮೆಯಿಲ್ಲ, ಯಾರು ಮೊಟ್ಟ ಮೊದಲು ಬರುವರೋ ಅವರು ಬಹಳ ಶಕ್ತಿಶಾಲಿಗಳಾಗಿರುತ್ತಾರೆ. ಪಾತ್ರಧಾರಿಗಳಲ್ಲಿಯೂ ಭಿನ್ನ-ಭಿನ್ನ ಪ್ರಕಾರದವರಿರುತ್ತಾರೆ. ನಾಯಕ-ನಾಯಕಿಯ ಪಾತ್ರವು ಭಾರತವಾಸಿಗಳಿಗೇ ಸಿಕ್ಕಿದೆ. ನೀವು ಎಲ್ಲರನ್ನೂ ರಾವಣ ರಾಜ್ಯದಿಂದ ಬಿಡಿಸುತ್ತೀರಿ. ಶ್ರೀಮತದನುಸಾರ ನಿಮಗೆ ಎಷ್ಟೊಂದು ಬಲವು ಸಿಗುತ್ತದೆ! ಮಾಯೆಯು ಬಹಳ ಮೋಸಗಾರನಾಗಿದೆ, ನಡೆಯುತ್ತಾ-ನಡೆಯುತ್ತಾ ಮೋಸಗೊಳಿಸುತ್ತದೆ.

ತಂದೆಯು ಪ್ರೀತಿಯ ಸಾಗರನಾಗಿದ್ದಾರೆ ಅಂದಮೇಲೆ ನೀವು ಮಕ್ಕಳೂ ಸಹ ತಂದೆಯ ಸಮಾನ ಪ್ರೀತಿಯ ಸಾಗರನಾಗಬೇಕಾಗಿದೆ, ಎಂದೂ ಕಟು ವಚನವನ್ನು ಮಾತನಾಡಬಾರದು. ಯಾರಿಗಾದರೂ ದುಃಖ ಕೊಟ್ಟರೆ ದುಃಖಿಯಾಗಿಯೇ ಸಾಯುವರು. ಆದ್ದರಿಂದ ಈ ಚಟಗಳನ್ನು ಕಳೆಯಬೇಕು. ವಿಷಯ ಸಾಗರದಲ್ಲಿ ಮುಳುಗುವುದೇ ಕೆಟ್ಟದಕ್ಕಿಂತ ಕೆಟ್ಟ ಚಟವಾಗಿದೆ. ತಂದೆಯೂ ಸಹ ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ. ಎಷ್ಟೊಂದು ಮಂದಿ ಕನ್ಯೆಯರು ಪೆಟ್ಟು ತಿನ್ನುತ್ತಾರೆ. ಕೆಲಕೆಲವರಂತೂ ತಮ್ಮ ಮಕ್ಕಳಿಗೆ ಭಲೆ ಪವಿತ್ರರಾಗಿರಿ ಎಂದು ಹೇಳುತ್ತಾರೆ. ಅರೆ! ಮೊದಲು ತಾನು ಪವಿತ್ರನಾಗಿ ಮಕ್ಕಳನ್ನು ತಂದೆಗೆ ಕೊಟ್ಟು ಬಿಟ್ಟಿರಿ. ಖರ್ಚಿನ ಹೊರೆಯಿಂದ ಇನ್ನೂ ಮುಕ್ತರಾದಿರಿ ಏಕೆಂದರೆ ಇವರ ಅದೃಷ್ಟದಲ್ಲಿ ಏನಿದೆಯೋ ತಿಳಿದಿಲ್ಲ. ಮುಂದೆ ಸುಖವಾದ ಮನೆ ಸಿಗುವುದೋ ಅಥವಾ ಇಲ್ಲವೋ ಅದಕ್ಕಿಂತಲೂ ಸಮರ್ಪಣೆ ಮಾಡಿಸುವುದೇ ಒಳ್ಳೆಯದೆಂದು ತಿಳಿಯುತ್ತಾರೆ. ಈಗಿನ ಸಮಯದಲ್ಲಿ ಮಕ್ಕಳಿಗೆ ಬಹಳಷ್ಟು ಖರ್ಚಾಗುತ್ತದೆ. ಬಡವರಂತೂ ಬಹುಬೇಗನೆ ಕೊಟ್ಟು ಬಿಡುತ್ತಾರೆ. ಕೆಲವರಿಗಂತೂ ಮೋಹವಿರುತ್ತದೆ, ಮೊದಲು ಒಬ್ಬರು ಕಾಡು ಜನಾಂಗದ ಸ್ತ್ರೀಯರು ಬರುತ್ತಿದ್ದರು, ಅವರು ಜ್ಞಾನದಲ್ಲಿ ಬರಲು ಬಿಡಲಿಲ್ಲ. ಏಕೆಂದರೆ ಇವರು ಜಾದೂ ಮಾಡುವರೆಂಬ ಭಯವಿತ್ತು. ಭಗವಂತನಿಗೆ ಜಾದೂಗರನೆಂತಲೂ ಕರೆಯುತ್ತಾರೆ, ದಯಾ ಸಾಗರನೆಂದೂ ಭಗವಂತನಿಗೇ ಹೇಳುತ್ತಾರೆಯೇ ಹೊರತು ಕೃಷ್ಣನಿಗೆ ಹೇಳುವುದಿಲ್ಲ. ನಿರ್ದಯಿಯಿಂದ ಬಿಡಿಸುವವರೇ ದಯಾಹೃದಯಿಯಾಗಿದ್ದಾರೆ. ರಾವಣನು ನಿರ್ದಯಿಯಾಗಿದ್ದಾನೆ.

ಮೊಟ್ಟ ಮೊದಲು ಜ್ಞಾನವಾಗಿದೆ, ಜ್ಞಾನ-ಭಕ್ತಿ ನಂತರ ವೈರಾಗ್ಯ. ಭಕ್ತಿ, ಜ್ಞಾನ ಮತ್ತೆ ವೈರಾಗ್ಯವೆಂದು ಹೇಳುವುದಿಲ್ಲ. ಜ್ಞಾನದ ವೈರಾಗ್ಯವೆಂದೂ ಹೇಳಲಾಗುವುದಿಲ್ಲ. ಭಕ್ತಿಯಿಂದ ವೈರಾಗ್ಯವು ಬರುತ್ತದೆ, ಆದ್ದರಿಂದ ಜ್ಞಾನ, ಭಕ್ತಿ, ವೈರಾಗ್ಯ - ಇದು ಸರಿಯಾದ ಶಬ್ಧವಾಗಿದೆ. ತಂದೆಯು ನಿಮಗೆ ಬೇಹದ್ದಿನ ಅರ್ಥಾತ್ ಹಳೆಯ ಪ್ರಪಂಚದಿಂದ ವೈರಾಗ್ಯ ತರಿಸುತ್ತಾರೆ. ಸನ್ಯಾಸಿಗಳಂತೂ ಕೇವಲ ಗೃಹಸ್ಥದಿಂದ ವೈರಾಗ್ಯವನ್ನು ಹೊಂದುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಮನುಷ್ಯರ ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ಭಾರತವು 100% ಸಾಹುಕಾರ, ನಿರ್ವಿಕಾರಿ, ಆರೋಗ್ಯವಂತನಾಗಿದ್ದು ಇಲ್ಲಿ ಎಂದೂ ಅಕಾಲಮೃತ್ಯುವಾಗುತ್ತಿರಲಿಲ್ಲ. ಇವೆಲ್ಲಾ ಮಾತುಗಳ ಧಾರಣೆಯು ಕೆಲವು ಮಂದಿಗೇ ಆಗುತ್ತದೆ. ಯಾರು ಚೆನ್ನಾಗಿ ಸರ್ವೀಸ್ ಮಾಡುವರೋ ಅವರು ಬಹಳ ಸಾಹುಕಾರರಾಗುತ್ತಾರೆ. ಮಕ್ಕಳಿಗಂತೂ ಇಡೀ ದಿನ ಬಾಬಾ, ಬಾಬಾ ಎಂದೇ ನೆನಪಿರಬೇಕು. ಆದರೆ ಮಾಯೆಯು ನೆನಪು ಮಾಡಲು ಬಿಡುವುದಿಲ್ಲ. ತಂದೆಯು ತಿಳಿಸುತ್ತಾರೆ - ಸತೋಪ್ರಧಾನರಾಗಬೇಕೆಂದರೆ ನಡೆಯುತ್ತಾ-ತಿರುಗಾಡುತ್ತಾ, ತಿನ್ನುತ್ತಲೂ ನನ್ನನ್ನು ನೆನಪು ಮಾಡಿ. ನಾನು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ ಅಂದಮೇಲೆ ನೀವು ನೆನಪು ಮಾಡುವುದಿಲ್ಲವೆ! ಅನೇಕರಿಗೆ ಮಾಯೆಯ ಬಿರುಗಾಳಿಗಳು ಬಹಳಷ್ಟು ಬರುತ್ತವೆ. ತಂದೆಯು ತಿಳಿಸುತ್ತಾರೆ - ಇದೆಲ್ಲವೂ ಆಗುತ್ತದೆ. ನಾಟಕದಲ್ಲಿ ನಿಗಧಿಯಾಗಿದೆ. ಸ್ವರ್ಗದ ಸ್ಥಾಪನೆಯೂ ಸಹ ಆಗಲೇಬೇಕಾಗಿದೆ. ಸದಾ ಹೊಸ ಪ್ರಪಂಚವಂತೂ ಇರಲು ಸಾಧ್ಯವಿಲ್ಲ. ಚಕ್ರವು ತಿರುಗುತ್ತದೆಯೆಂದರೆ ಮತ್ತೆ ಅವಶ್ಯವಾಗಿ ಕೆಳಗಿಳಿಯುತ್ತೀರಿ. ಪ್ರತಿಯೊಂದು ವಸ್ತುವು ಹೊಸದರಿಂದ ಹಳೆಯದು ಅವಶ್ಯವಾಗಿ ಆಗುತ್ತದೆ. ಈ ಸಮಯದಲ್ಲಿ ಮಾಯೆಯು ಎಲ್ಲರನ್ನೂ ಏಪ್ರಿಲ್ಫೂಲ್ ಮಾಡಿ ಬಿಟ್ಟಿದೆ. ತಂದೆಯು ಬಂದು ಪವಿತ್ರರನ್ನಾಗಿ ಮಾಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಸಮಾನ ಪ್ರೀತಿಯ ಸಾಗರರಾಗಬೇಕಾಗಿದೆ. ಎಂದೂ ಯಾರಿಗೂ ದುಃಖ ಕೊಡಬಾರದು. ಕಟು ವಚನಗಳನ್ನು ಮಾತನಾಡಬಾರದು, ಕೆಟ್ಟ ಚಟಗಳನ್ನು ಅಳಿಸಬೇಕಾಗಿದೆ.

2. ತಂದೆಯೊಂದಿಗೆ ಮಧುರಾತಿ ಮಧುರವಾದ ಮಾತುಗಳನ್ನಾಡುತ್ತಾ ಇದೇ ನಶೆಯಲ್ಲಿರಬೇಕಾಗಿದೆ - ಓಹೋ ತಂದೆಯೇ, ತಾವು ನಮ್ಮನ್ನು ಹೇಗಿದ್ದವರನ್ನು ಹೇಗೆ ಮಾಡಿದಿರಿ! ತಾವು ನಮಗೆ ಎಷ್ಟು ಸುಖವನ್ನು ಕೊಟ್ಟಿದ್ದೀರಿ! ಬಾಬಾ, ತಾವು ಕ್ಷೀರ ಸಾಗರದಲ್ಲಿ ಕರೆದುಕೊಂಡು ಹೋಗುವಿರಿ..... ಇಡೀ ದಿನ ಬಾಬಾ, ಬಾಬಾ ಎಂದು ನೆನಪಿರಲಿ.

ವರದಾನ:
ತಮ್ಮ ಪ್ರತಿ ಕರ್ಮ ಅಥವಾ ವಿಶೇಷತೆಯ ಮೂಲಕ ದಾತಾನ ಕಡೆ ಕೈ ತೋರಿಸುವಂತಹ ಸತ್ಯ ಸೇವಾಧಾರಿ ಭವ.

ಸತ್ಯ ಸೇವಾಧಾರಿ ಯಾವುದೇ ಆತ್ಮಕ್ಕೆ ಸಹಯೋಗ ಕೊಟ್ಟು ಸ್ವಯಂ ನಲ್ಲಿ ಸಿಕ್ಕಿ ಹಾಕಿಸಿಕೊಳ್ಳುವುದಿಲ್ಲ. ಅವರು ಎಲ್ಲರ ಸಂಪರ್ಕವನ್ನು ತಂದೆಯ ಜೊತೆ ಮಾಡಿಸುತ್ತಾರೆ. ಅವರ ಪ್ರತಿ ಮಾತು ತಂದೆಯ ಸ್ಮೃತಿ ತರಿಸುವಂತಹದಾಗಿರುತ್ತದೆ. ಅವರ ಪ್ರತಿ ಕರ್ಮದಿಂದ ತಂದೆ ಕಂಡು ಬರುತ್ತಾರೆ. ಅವರಿಗೆ ಎಂದೂ ಇಂತಹ ಸಂಕಲ್ಪ ಸಹ ಬರುವುದಿಲ್ಲ ನನ್ನ ವಿಶೇಷತೆಗೆ ಕಾರಣ ಈ ನನ್ನ ಸಹಯೋಗಿಯಾಗಿದ್ದಾರೆ ಎಂದು. ಒಂದುವೇಳೆ ನಿಮ್ಮನ್ನು ನೋಡಿ, ತಂದೆಯನ್ನು ನೋಡದೆ ಸೇವೆ ಮಾಡಿದರೆ ಆ ಸೇವೆ ಸೇವೆಯಾಗಿರುವುದಿಲ್ಲ, ತಂದೆಯನ್ನು ಮರೆಸಿ ಬಿಟ್ಟರು. ಸತ್ಯ ಸೇವಾಧಾರಿ ಸತ್ಯದ ಕಡೆ ಎಲ್ಲರ ಸಂಬಂಧವನ್ನು ಜೋಡಿಸುತ್ತಾರೆ, ಸ್ವಯಂ ಕಡೆ ಅಲ್ಲ.

ಸ್ಲೋಗನ್:
ಯಾವುದೇ ಪ್ರಕಾರದ ಅರ್ಜಿ ಹಾಕುವ ಬದಲು ಸದಾ ರಾಜಿಯಾಗಿರಿ.


ಅವ್ಯಕ್ತ ಸ್ಥಿತಿಯ ಅನುಭವ ಮಾಡವುದಕ್ಕಾಗಿ ವಿಶೇಷ ಹೋಮ್ ವರ್ಕ್ -
ಈ ಸ್ಥೂಲ ದೇಹದಲ್ಲಿ ಪ್ರವೇಶ ಮಾಡಿ ಕರ್ಮೇಂದ್ರಿಯಗಳಿಂದ ಕಾರ್ಯ ಮಾಡಿಸುತ್ತಿದ್ದೇನೆ ಎಂದು ಅಭ್ಯಾಸ ಮಾಡಿ. ಯಾವಾಗ ಬೇಕೊ ಆಗ ಪ್ರವೇಶ ಮಾಡಿ ಮತ್ತು ಯಾವಾಗ ಬೇಕೊ ಆಗ ಬೇರೆಯಾಗಿ ಬಿಡಿ. ಒಂದು ಸೆಕೆಂಡ್ನಲ್ಲಿ ದೇಹದ ಭಾನ ಬಿಟ್ಟು ದೇಹೀ ಆಗಿ ಬಿಡಿ, ಇದೇ ಅಭ್ಯಾಸ ಅವ್ಯಕ್ತ ಸ್ಥಿತಿಯ ಆಧಾರವಾಗಿದೆ.