17.01.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ಹಳೆಯ ಪ್ರಪಂಚದಲ್ಲಿ ಯಾವುದೇ ಪ್ರಕಾರದ ಸಾರವಿಲ್ಲ, ಆದ್ದರಿಂದ ನೀವು ನಿಮ್ಮ ಮನಸ್ಸನ್ನು ಇದರಿಂದ ದೂರವಿಡಬೇಕಾಗಿದೆ, ತಂದೆಯ ನೆನಪನ್ನು ಮರೆತಿದ್ದೇ ಆದರೆ ಶಿಕ್ಷೆಯನ್ನುನುಭವಿಸಬೇಕಾಗುತ್ತದೆ”

ಪ್ರಶ್ನೆ:
ತಂದೆಯ ಮುಖ್ಯ ಸಲಹೆಯೇನಾಗಿದೆ, ಇದರ ಉಲ್ಲಂಘನೆ ಏಕೆ ಆಗುತ್ತದೆ?

ಉತ್ತರ:
ತಂದೆಯ ಸಲಹೆಯಾಗಿದೆ - ಯಾರೊಂದಿಗೂ ಸೇವೆಯನ್ನು ತೆಗೆದುಕೊಳ್ಳಬೇಡಿ, ಏಕೆಂದರೆ ನೀವು ಸ್ವಯಂ ಸೇವಕರಾಗಿದ್ದೀರಿ. ಆದರೆ ದೇಹಾಭಿಮಾನದ ಕಾರಣ ತಂದೆಯ ಈ ಸಲಹೆಯನ್ನು ಉಲ್ಲಂಘನೆ ಮಾಡುತ್ತಾರೆ. ಇಲ್ಲಿ ನೀವು ಸುಖ ಪಡೆದಿದ್ದೇ ಆದರೆ ಅಲ್ಲಿ ಸುಖವು ಕಡಿಮೆಯಾಗುತ್ತದೆ ಎಂದು ತಂದೆಯು ಹೇಳುತ್ತಾರೆ. ಕೆಲವು ಮಕ್ಕಳು ನಾವು ಸ್ವತಂತ್ರವಾಗಿರುತ್ತೇವೆ ಎಂದೂ ಹೇಳುತ್ತಾರೆ. ಆದರೆ ನೀವೆಲ್ಲರೂ ತಂದೆಯ ಮೇಲೆ ಅವಲಂಭಿತರಾಗಿದ್ದೀರಿ.

ಗೀತೆ:
ಹೃದಯದ ಆಶ್ರಯವು ತುಂಡರಿಸಿ ಹೋಗಬಾರದು.............

ಓಂ ಶಾಂತಿ.
ಶಿವ ಭಗವಾನುವಾಚ ತನ್ನ ಸಾಲಿಗ್ರಾಮಗಳ ಪ್ರತಿ. ಶಿವ ಮತ್ತು ಸಾಲಿಗ್ರಾಮಗಳನ್ನು ಎಲ್ಲಾ ಮನುಷ್ಯರು ತಿಳಿದುಕೊಂಡಿದ್ದಾರೆ. ಇಬ್ಬರೂ ನಿರಾಕಾರನಾಗಿದ್ದಾರೆ. ಈಗ ಕೃಷ್ಣ ಭಗವಾನುವಾಚ ಎಂದು ಹೇಳಲು ಸಾಧ್ಯವಿಲ್ಲ. ಭಗವಂತನೊಬ್ಬರೇ ಇದ್ದಾರೆ ಅಂದಾಗ ಶಿವಭಗವಾನುವಾಚ ಯಾರ ಪ್ರತಿ? ಆತ್ಮೀಯ ಮಕ್ಕಳ ಪ್ರತಿ. ತಂದೆಯು ತಿಳಿಸಿದ್ದಾರೆ - ಮಕ್ಕಳ ಸಂಬಂಧವು ತಂದೆಯೊಂದಿಗಿದೆ ಏಕೆಂದರೆ ಪತಿತ-ಪಾವನ, ಜ್ಞಾನಸಾಗರ, ಸ್ವರ್ಗದ ಆಸ್ತಿಯನ್ನು ಕೊಡುವಂತಹವರು ಶಿವ ತಂದೆಯೇ ಆಗಿದ್ದಾರೆ. ಅವರನ್ನೇ ನೆನಪು ಮಾಡಬೇಕು. ಬ್ರಹ್ಮಾರವರು ಅವರ ಭಾಗ್ಯಶಾಲಿ ರಥವಾಗಿದ್ದಾರೆ, ರಥದ ಮೂಲಕವೇ ತಂದೆಯು ಆಸ್ತಿಯನ್ನು ಕೊಡುತ್ತಾರೆ. ಬ್ರಹ್ಮಾರವರು ಆಸ್ತಿಯನ್ನು ಕೊಡುವವರಲ್ಲ, ತೆಗೆದುಕೊಳ್ಳುವವರಾಗಿದ್ದಾರೆ ಅಂದಾಗ ಮಕ್ಕಳು ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು. ಉದಾಹರಣೆಗೆ - ರಥಕ್ಕೆ ಏನಾದರೂ ತೊಂದರೆಯಾದರೆ ತೊಂದರೆಯಾಯಿತೆಂದು ತಿಳಿಯಿರಿ ಅಥವಾ ಕಾರಣ-ಅಕಾರಣದಿಂದ ಮಕ್ಕಳಿಗೆ ಮುರುಳಿಯು ಸಿಗಲಿಲ್ಲವೆಂದರೆ ಮಕ್ಕಳ ಪೂರ್ಣ ಗಮನ ಶಿವ ತಂದೆಯ ಕಡೆಗೆ ಹೋಗುತ್ತದೆ. ಅವರು ಎಂದೂ ಸಹ ಅನಾರೋಗ್ಯರಾಗಲು ಸಾಧ್ಯವಿಲ್ಲ. ಮಕ್ಕಳಿಗೆ ಇಷ್ಟೆಲ್ಲಾ ಜ್ಞಾನವು ಸಿಕ್ಕಿದೆ ಅದನ್ನು ತಿಳಿಸಿಕೊಡಲು ಸಾಧ್ಯವಿದೆ. ಪ್ರದರ್ಶನಿಯಲ್ಲಿ ಮಕ್ಕಳು ಎಷ್ಟೊಂದು ತಿಳಿಸಿಕೊಡುತ್ತಾರೆ. ಮಕ್ಕಳಲ್ಲಿ ಜ್ಞಾನವಿದೆಯಲ್ಲವೆ. ಪ್ರತಿಯೊಬ್ಬರ ಬುದ್ಧಿಯಲ್ಲಿ ಚಿತ್ರಗಳ ಜ್ಞಾನವು ತುಂಬಲ್ಪಟ್ಟಿದೆ. ಮಕ್ಕಳು ಎಲ್ಲಿಯೂ ಸಿಲುಕಿಕೊಳ್ಳಲು ಸಾಧ್ಯವಿಲ್ಲ. ಪೋಸ್ಟ್ ಬರುವುದು-ಹೋಗುವುದು ನಿಂತು ಹೋಯಿತೆಂದು ತಿಳಿದುಕೊಳ್ಳಿ, ಸ್ಟ್ರೈಕ್ ಆಯಿತೆಂದರೆ ಮತ್ತೇನು ಮಾಡುತ್ತೀರಿ? ಜ್ಞಾನವಂತೂ ಮಕ್ಕಳಲ್ಲಿದೆ. ಸತ್ಯಯುಗವಿತ್ತು, ಈಗ ಕಲಿಯುಗ ಹಳೆಯದಾಗಿದೆ ಎಂದು ತಿಳಿಸಿಕೊಡಿ. ಗೀತೆಯಲ್ಲಿಯೂ ಸಹ ಹಳೆಯ ಪ್ರಪಂಚದಲ್ಲಿ ಯಾವುದೇ ಸಾರವಿಲ್ಲ, ಆದ್ದರಿಂದ ಇದರಲ್ಲಿ ಮನಸ್ಸನ್ನಿಡಬೇಡಿ ಎಂದು ಹೇಳಲಾಗಿದೆ. ಇಲ್ಲವೆಂದರೆ ಶಿಕ್ಷೆಯನ್ನುನುಭವಿಸಬೇಕಾಗುತ್ತದೆ. ತಂದೆಯ ನೆನಪಿನಿಂದ ಶಿಕ್ಷೆಯು ಕಡಿಮೆಯಾಗುತ್ತದೆ. ತಂದೆಯ ನೆನಪನ್ನು ಮರೆತಾಗ ಮತ್ತೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು ಮತ್ತೆ ಹಳೆಯ ಪ್ರಪಂಚದಲ್ಲಿ ಹೋಗುವುದು - ಈ ರೀತಿಯಾಗಬಾರದು. ಈ ರೀತಿ ಅನೇಕರು ಹೋಗಿದ್ದಾರೆ. ಕೆಲವರಿಗೆ ತಂದೆಯ ನೆನಪೇ ಇಲ್ಲ, ಹಳೆಯ ಪ್ರಪಂಚದೊಂದಿಗೆ ಮನಸ್ಸು ಸಿಲುಕಿಕೊಂಡಿದೆ. ಪ್ರಪಂಚವು ಬಹಳ ಕೆಟ್ಟು ಹೋಗಿದೆ. ಯಾರೊಂದಿಗಾದರೂ ಮನಸ್ಸು ಸಿಲುಕಿಕೊಂಡರೆ ಶಿಕ್ಷೆಯು ಬಹಳಷ್ಟು ಸಿಗುತ್ತದೆ. ಮಕ್ಕಳು ಜ್ಞಾನವನ್ನು ಕೇಳಬೇಕು, ಭಕ್ತಿಮಾರ್ಗದ ಗೀತೆಯನ್ನೂ ಸಹ ಕೇಳಬಾರದು. ನೀವು ಈಗ ಸಂಗಮದಲ್ಲಿದ್ದೀರಿ, ಜ್ಞಾನ ಸಾಗರ ತಂದೆಯ ಮೂಲಕ ನಿಮಗೆ ಸಂಗಮದಲ್ಲಿಯೇ ಜ್ಞಾನವು ಸಿಗುತ್ತದೆ. ಪ್ರಪಂಚದಲ್ಲಿ ಜ್ಞಾನಸಾಗರ ಒಬ್ಬರೇ ಆಗಿದ್ದಾರೆಂಬುದು ಯಾರಿಗೂ ತಿಳಿದಿಲ್ಲ. ಅವರು ಯಾವಾಗ ಜ್ಞಾನವನ್ನು ಕೊಡುತ್ತಾರೆಯೋ ಆಗ ಮನುಷ್ಯರದು ಸದ್ಗತಿಯಾಗುತ್ತದೆ. ಸದ್ಗತಿದಾತ ಒಬ್ಬರೇ ಆಗಿದ್ದಾರೆ, ಅವರ ಮತದಂತೆ ನಡೆಯಬೇಕು. ಮಾಯೆಯು ಯಾರನ್ನೂ ಸಹ ಬಿಡುವುದಿಲ್ಲ, ದೇಹಾಭಿಮಾನದ ನಂತರವೇ ಒಂದಲ್ಲಒಂದು ತಪ್ಪುಗಳಾಗುತ್ತವೆ. ಕೆಲವರು ಸೆಮಿ-ಕಾಮಕ್ಕೆ ವಶರಾಗುತ್ತಾರೆ, ಕೆಲವರು ಕ್ರೋಧಕ್ಕೆ ವಶರಾಗುತ್ತಾರೆ, ಮನಸ್ಸಿನಲ್ಲಿ ಬಿರುಗಾಳಿಗಳಂತೂ ಬಹಳ ಬರುತ್ತವೆ - ಪ್ರೀತಿ ಮಾಡಬೇಕು, ಅದು ಮಾಡಬೇಕು, ಇದು ಮಾಡಬೇಕು.... ಯಾರದೇ ಶರೀರದೊಂದಿಗೆ ಮನಸ್ಸನ್ನಿಡಬಾರದು. ತನ್ನನ್ನು ಆತ್ಮನೆಂದು ತಿಳಿಯಿರಿ ಆಗ ಶರೀರದ ಪರಿವೆಯಿರುವುದಿಲ್ಲವೆಂದು ತಂದೆಯು ತಿಳಿಯುತ್ತಾರೆ. ಇಲ್ಲವೆಂದರೆ ತಂದೆಯ ಆಜ್ಞೆಯ ಉಲ್ಲಂಘನೆ ಮಾಡಿದಂತಾಗುತ್ತದೆ. ದೇಹದ ಅಹಂಕಾರದಿಂದ ಬಹಳ ನಷ್ಟವಾಗುತ್ತದೆ ಆದ್ದರಿಂದ ದೇಹ ಸಹಿತ ಎಲ್ಲವನ್ನೂ ಮರೆಯಬೇಕಾಗಿದೆ. ಕೇವಲ ತಂದೆಯನ್ನು ಮತ್ತು ಮನೆಯನ್ನು ನೆನಪು ಮಾಡಬೇಕು. ಆತ್ಮರಿಗೆ ತಂದೆಯು ತಿಳಿಸುತ್ತಾರೆ - ಶರೀರದಿಂದ ಕೆಲಸ ಮಾಡುತ್ತಾ ನನ್ನನ್ನು ನೆನಪು ಮಾಡಿದ್ದೇ ಆದರೆ ವಿಕರ್ಮವು ಭಸ್ಮವಾಗುತ್ತದೆ. ದಾರಿಯಂತೂ ಬಹಳ ಸಹಜವಾಗಿದೆ! ಇವರೂ ಸಹ ನಿಮ್ಮಿಂದ ತಪ್ಪುಗಳಾಗುತ್ತವೆಯಂದು ತಿಳಿಯುತ್ತಾರೆ ಆದರೆ ತಪ್ಪುಗಳಲ್ಲಿಯೇ ಮುಳುಗುತ್ತಾ ಹೋಗುವುದು - ಈ ರೀತಿ ಆಗಬಾರದು. ಒಂದು ದೊಡ್ಡ ತಪ್ಪಾಯಿತೆಂದರೆ ಮತ್ತೆ ಆ ತಪ್ಪನ್ನು ಮಾಡಬಾರದು. ತಮ್ಮ ಕಿವಿಯನ್ನಿಡಿಯಬೇಕು ಮತ್ತೆ ಈ ತಪ್ಪು ಆಗುವುದಿಲ್ಲ. ಪುರುಷಾರ್ಥವನ್ನು ಮಾಡಬೇಕು, ಒಂದುವೇಳೆ ಮತ್ತೆ-ಮತ್ತೆ ತಪ್ಪುಗಳಾಗುತ್ತಾ ಇದ್ದರೆ ನನಗೆ ಬಹಳ ನಷ್ಟವಾಗುತ್ತಾ ಇದೆ ಎಂದು ತಿಳಿಯಬೇಕು. ತಪ್ಪನ್ನು ಮಾಡುತ್ತಾ-ಮಾಡುತ್ತಾ ದುರ್ಗತಿಯನ್ನು ಹೊಂದುತ್ತೀರಲ್ಲವೆ. ಇಷ್ಟೊಂದು ದೊಡ್ಡ ಏಣಿಯನ್ನು ಇಳಿದು ಏನಾಗಿ ಬಿಟ್ಟಿದ್ದೀರಿ! ಮೊದಲಾದರೂ ಈ ತಿಳುವಳಿಕೆಯಿರಲಿಲ್ಲ, ಈಗ ನಂಬರ್ವಾರ್ ಪುರುಷಾರ್ಥದನುಸಾರ ಜ್ಞಾನದಲ್ಲಿ ಎಲ್ಲರೂ ಪ್ರವೀಣರಾಗಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಅಂತರ್ಮುಖಿಗಳಾಗಿರಬೇಕು, ಮುಖದಿಂದ ಏನನ್ನೂ ಹೇಳಬಾರದು. ಯಾರು ಜ್ಞಾನದಲ್ಲಿ ಪ್ರವೀಣ ಮಕ್ಕಳಿದ್ದಾರೆಯೋ ಅವರು ಎಂದೂ ಹಳೆಯ ಪ್ರಪಂಚದೊಂದಿಗೆ ಮನಸ್ಸನ್ನಿಡುವುದಿಲ್ಲ. ನಾವಂತೂ ರಾವಣ ರಾಜ್ಯವನ್ನು ವಿನಾಶ ಮಾಡಬಯಸುತ್ತೇವೆಂದು ಅವರ ಬುದ್ಧಿಯಲ್ಲಿರುತ್ತದೆ. ಈ ಶರೀರವೂ ಸಹ ಹಳೆಯ ರಾವಣನ ಸಂಪ್ರದಾಯದ್ದಾಗಿದೆ ಅಂದಾಗ ನಾವು ರಾವಣನ ಸಂಪ್ರದಾಯದವರು ಏನನ್ನು ನೆನಪು ಮಾಡುವುದು? ಒಬ್ಬ ರಾಮನನ್ನೇ ನೆನಪು ಮಾಡಬೇಕು. ಸತ್ಯ ಪಿತಾವ್ರತರಾಗಬೇಕಲ್ಲವೆ.

ನನ್ನನ್ನು ನೆನಪು ಮಾಡಿದ್ದೇ ಆದರೆ ನಿಮ್ಮ ವಿಕರ್ಮ ವಿನಾಶವಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಪಿತಾವ್ರತ ಅಥವಾ ಭಗವಂತನ ವ್ರತವುಳ್ಳವರಾಗಬೇಕು. ಭಕ್ತರು ಭಗವಂತನನ್ನೇ ನೆನಪು ಮಾಡುತ್ತಾರೆ - ಹೇ ಭಗವಂತ ತಾವು ಬಂದು ನಮಗೆ ಸುಖ-ಶಾಂತಿಯ ಆಸ್ತಿಯನ್ನು ಕೊಡಿ. ಭಕ್ತಿಮಾರ್ಗದಲ್ಲಿಯಾದರೂ ಬಲಿಹಾರಿಯಾಗುತ್ತಾರೆ, ಬಲಿ ಕೊಡುತ್ತಾರೆ. ಇಲ್ಲಿ ಬಲಿಕೊಡುವ ಮಾತೇ ಇಲ್ಲ. ನಾವು ಜೀವಿಸಿದ್ದಂತೆಯೇ ಸಾಯುವುದು ಅಂದರೆ ಬಲಿಯಾಗುವುದು, ಇದು ಜೀವಿಸಿದ್ದಂತೆಯೇ ತಂದೆಯ ಮಕ್ಕಳಾಗುವುದು ಏಕೆಂದರೆ ಅವರಿಂದ ಆಸ್ತಿಯನ್ನು ಪಡೆಯಬೇಕು, ಅವರ ಮತದಂತೆ ನಡೆಯಬೇಕು. ಜೀವಿಸಿದ್ದಂತೆಯೇ ಬಲಿಯಾಗುವುದು ವಾಸ್ತವದಲ್ಲಿ ಈಗಿನ ಮಾತಾಗಿದೆ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಜೀವಘಾತ ಮುಂತಾದುದನ್ನು ಮಾಡುತ್ತಾರೆ. ಇಲ್ಲಿ ಜೀವಘಾತದ ಮಾತಿಲ್ಲ. ತನ್ನನ್ನು ಆತ್ಮನೆಂದು ತಿಳಿಯಿರಿ, ತಂದೆಯೊಂದಿಗೆ ಯೋಗವನ್ನಿಡಿ, ದೇಹಾಭಿಮಾನದಲ್ಲಿ ಬರಬೇಡಿ ಎಂದು ತಂದೆಯು ಹೇಳುತ್ತಾರೆ. ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನು ನೆನಪು ಮಾಡುವ ಪುರುಷಾರ್ಥ ಮಾಡಬೇಕು. 100% ತೇರ್ಗಡೆಯಂತೂ ಯಾರೂ ಆಗಿಲ್ಲ, ಏರುಪೇರಾಗುತ್ತಿರುತ್ತದೆ. ತಪ್ಪುಗಳಾಗುತ್ತವೆ, ಅದರ ಮೇಲೆ ಎಚ್ಚರಿಕೆ ನೀಡಲಿಲ್ಲವೆಂದರೆ ತಪ್ಪು ಮಾಡುವುದನ್ನು ಹೇಗೆ ಬಿಡುವುದು? ಮಾಯೆಯು ಯಾರನ್ನೂ ಸಹ ಬಿಡುವುದಿಲ್ಲ. ಬಾಬಾ, ನಾವು ಮಾಯೆಯಿಂದ ಸೋಲುತ್ತೇವೆ ಎಂದು ಹೇಳುತ್ತಾರೆ. ಪುರುಷಾರ್ಥವನ್ನು ಮಾಡಿದರೂ ಸಹ ಏನಾಗುತ್ತದೆಯಂದು ಗೊತ್ತಾಗುವುದಿಲ್ಲವೆಂದು ಹೇಳುತ್ತಾರೆ. ನಮ್ಮಿಂದ ಇಷ್ಟೊಂದು ಘೋರ ತಪ್ಪುಗಳು ಹೇಗಾಗುತ್ತದೆಯೋ ಅದು ಗೊತ್ತಾಗುವುದೇ ಇಲ್ಲ. ಬ್ರಾಹ್ಮಣ ಕುಲದಲ್ಲಿ ಇದರಿಂದ ನಮ್ಮ ಹೆಸರು ಹಾಳಾಗಿ ಬಿಡುತ್ತದೆ ಎಂದು ತಿಳಿದಿರುತ್ತಾರೆ ಆದರೂ ಸಹ ಮಾಯೆಯದು ಇಂತಹ ಯುದ್ಧವಾಗುತ್ತದೆ ಅದು ಗೊತ್ತಾಗುವುದೇ ಇಲ್ಲ. ದೇಹದ ಅಭಿಮಾನದಲ್ಲಿ ಬರುವುದರಿಂದ ಹೇಗೆ ತಿಳುವಳಿಕೆ ಹೀನರಾಗಿ ಬಿಡುತ್ತಾರೆ. ತಿಳುವಳಿಕೆಹೀನ ಕೆಲಸವಾಗುತ್ತದೆಯಂದರೆ ನಿಂದನೆಯೂ ಆಗುತ್ತದೆ, ಆಸ್ತಿಯೂ ಸಹ ಕಡಿಮೆಯಾಗುತ್ತದೆ, ಈ ರೀತಿ ಬಹಳ ತಪ್ಪುಗಳನ್ನು ಮಾಡುತ್ತಾರೆ. ಮಾಯೆಯು ಇಷ್ಟು ಜೋರಾಗಿ ಪೆಟ್ಟು ಕೊಡುತ್ತದೆ, ಸ್ವಯಂ ಸೋಲನ್ನನುಭವಿಸುತ್ತಾರೆ ನಂತರ ಕೋಪದಿಂದ ಬಂದು ಯಾರಿಗಾದರೂ ಕೆನ್ನೆಗೆ ಹೊಡೆಯುತ್ತಾರೆ ಅಥವಾ ಚಪ್ಪಲಿಯನ್ನು ತೆಗೆದುಕೊಂಡು ಹೊಡೆಯಲು ತೊಡಗುತ್ತಾರೆ ನಂತರ ಪಶ್ಚಾತ್ತಾಪವನ್ನೂ ಪಡುತ್ತಾರೆ. ಈಗ ಬಹಳ ಪರಿಶ್ರಮ ಪಡಬೇಕೆಂದು ತಂದೆಯು ಹೇಳುತ್ತಾರೆ. ತನ್ನದನ್ನೂ ನಷ್ಟ ಮಾಡಿಕೊಂಡಿರಿ, ಬೇರೆಯವರದನ್ನೂ ನಷ್ಟ ಮಾಡಿದಿರಿ ಅಂದಾಗ ಎಷ್ಟೊಂದು ನಷ್ಟವಾಯಿತು! ರಾಹುವಿನ ಗ್ರಹಣ ಕುಳಿತು ಬಿಟ್ಟಿತು. ಈಗ ದಾನವನ್ನು ಕೊಟ್ಟಿದ್ದೇ ಆದರೆ ಗ್ರಹಣವು ಬಿಟ್ಟು ಹೋಗುತ್ತದೆಯಂದು ಹೇಳುತ್ತಾರೆ. ರಾಹುವಿನ ಗ್ರಹಣವು ಕುಳಿತುಕೊಂಡಿತೆಂದರೆ ಮತ್ತೆ ಸಮಯವು ಹಿಡಿಸುತ್ತದೆ. ಏಣಿಯನ್ನು ಹತ್ತಿ ನಂತರ ಇಳಿಯುವುದು ಕಷ್ಟವಾಗುತ್ತದೆ. ಮನುಷ್ಯರಿಗೆ ಸಾರಾಯಿಯ ಅಭ್ಯಾಸವಾಯಿತೆಂದರೆ ಮತ್ತೆ ಅದನ್ನು ಬಿಡಲು ಎಷ್ಟು ಕಷ್ಟವಾಗುತ್ತದೆ! ಎಲ್ಲದಕ್ಕಿಂತ ದೊಡ್ಡ ತಪ್ಪು ಮುಖವನ್ನು ಕಪ್ಪು ಮಾಡಿಕೊಳ್ಳುವುದಾಗಿದೆ. ಘಳಿಗೆ-ಘಳಿಗೆಗೆ ಶರೀರವನ್ನು ನೆನಪು ಮಾಡುವುದು, ಮಕ್ಕಳು ಇರುತ್ತಾರೆಂದರೆ ಅವರದೇ ನೆನಪು ಬರುತ್ತಾಇರುತ್ತದೆ, ಅಂತಹವರು ಅನ್ಯರಿಗೆ ಜ್ಞಾನವನ್ನೇನು ಕೊಡುತ್ತಾರೆ! ಅವರದನ್ನು ಯಾರೂ ಸಹ ಕೇಳುವುದಿಲ್ಲ. ನೀವೀಗ ಎಲ್ಲರನ್ನೂ ಮರೆಯುವ ಪ್ರಯತ್ನಪಡಿ, ಒಬ್ಬರ ನೆನಪನ್ನು ಮಾಡುತ್ತೇವೆ. ಇದರಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಮಾಯೆಯು ಬಹಳ ತೀಕ್ಷ್ಣವಾಗಿದೆ, ಇಡೀ ದಿನ ಶಿವ ತಂದೆಯನ್ನು ನೆನಪು ಮಾಡುವ ವಿಚಾರವಿರಬೇಕು. ಈಗ ನಾಟಕವು ಪೂರ್ಣವಾಗುತ್ತದೆ, ಈಗ ನಾವು ಹೋಗಬೇಕಾಗಿದೆ, ಈ ಶರೀರವೂ ಸಹ ಸಮಾಪ್ತಿಯಾಗುತ್ತದೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೆಂದರೆ ದೇಹಾಭಿಮಾನವು ಬಿಟ್ಟು ಹೋಗುತ್ತದೆ ಮತ್ತು ಯಾರದೇ ನೆನಪು ಬರುವುದಿಲ್ಲ. ಎಷ್ಟು ದೊಡ್ಡ ಗುರಿಯಾಗಿದೆ! ಒಬ್ಬ ತಂದೆಯ ವಿನಃ ಮತ್ತ್ಯಾರೊಂದಿಗೂ ಮನಸ್ಸನ್ನಿಡಬಾರದು ಇಲ್ಲವೆಂದರೆ ಅವಶ್ಯವಾಗಿ ಅವರೇ ಮುಂದೆ ಬರುತ್ತಾರೆ. ಬಹಳ ಶ್ರೇಷ್ಠವಾದಂತಹ ಗುರಿಯಿದೆ. ಹೇಳುವುದಂತೂ ಬಹಳ ಸಹಜವಾಗಿದೆ, ಲಕ್ಷದಲ್ಲಿ ಯಾರಾದರೊಬ್ಬರು ಹುಟ್ಟಿಕೊಳ್ಳುತ್ತಾರೆ, ವಿದ್ಯಾರ್ಥಿ ವೇತನವನ್ನೂ ತೆಗೆದುಕೊಳ್ಳುತ್ತಾರಲ್ಲವೆ. ಯಾರು ಚೆನ್ನಾಗಿ ಪರಿಶ್ರಮ ಪಡುತ್ತಾರೋ ಅವರು ಅವಶ್ಯವಾಗಿ ವಿದ್ಯಾರ್ಥಿ ವೇತನವನ್ನು ತೆಗೆದುಕೊಳ್ಳುತ್ತಾರೆ. ನಾನು ಹೇಗೆ ಸೇವೆಯನ್ನು ಮಾಡುತ್ತೇನೆ? ಎಂಬುದನ್ನು ಸಾಕ್ಷಿಯಾಗಿ ನೋಡಬೇಕಷ್ಟೆ. ನಾವು ಸ್ಥೂಲ ಸೇವೆಯನ್ನು ಬಿಟ್ಟು ಇದರಲ್ಲಿಯೇ ತೊಡಗಬೇಕೆಂದು ಬಹಳ ಮಕ್ಕಳು ಹೇಳುತ್ತಾರೆ ಆದರೆ ತಂದೆಯು ಸಂದರ್ಭವನ್ನೂ ಸಹ ನೋಡುತ್ತಾರೆ. ಒಂಟಿಯಾಗಿದ್ದಾರೆಯೇ? ಯಾವುದೇ ಸಂಬಂಧಿಕರಿಲ್ಲವೆ? ಇಲ್ಲವೆಂದರೆ ಪರವಾಗಿಲ್ಲ. ಆದರೂ ಸಹ ನೌಕರಿಯನ್ನೂ ಮಾಡಿ ಮತ್ತು ಈ ಸೇವೆಯನ್ನೂ ಮಾಡಿ. ನೌಕರಿಯಲ್ಲಿಯೂ ಸಹ ಅನೇಕರ ಜೊತೆ ಮಾತುಕತೆ ನಡೆಯುತ್ತದೆ. ನೀವು ಮಕ್ಕಳಿಗಂತೂ ಬಹಳ ಜ್ಞಾನವು ಸಿಕ್ಕಿದೆ. ಮಕ್ಕಳ ಮೂಲಕವೇ ತಂದೆಯು ಬಹಳಷ್ಟು ಸೇವೆ ಮಾಡಿಸುತ್ತಾರೆ, ಯಾರಲ್ಲಾದರೂ ಪ್ರವೇಶವಾಗಿ ಸೇವೆ ಮಾಡುತ್ತಾರೆ. ಸೇವೆಯನ್ನಂತೂ ಮಾಡಲೇಬೇಕಾಗಿದೆ. ಯಾರ ತಲೆಯ ಮೇಲೆ ಜವಾಬ್ದಾರಿಯಿರುತ್ತದೆಯೋ ಅವರು ಹೇಗೆ ನಿದ್ದೆ ಮಾಡಲು ಸಾಧ್ಯ? ಶಿವ ತಂದೆಯಂತೂ ಜ್ಯೋತಿಯಾಗಿದ್ದಾರೆ, ನಾನು ಹಗಲು-ರಾತ್ರಿ ಸೇವೆ ಮಾಡುತ್ತೇನೆಂದು ತಂದೆಯು ಹೇಳುತ್ತಾರೆ ಆದರೆ ಶರೀರಕ್ಕೆ ದಣಿವಾಗುತ್ತದೆ. ಶರೀರವು ಕೆಲಸ ಮಾಡದಿದ್ದರೆ ಆತ್ಮವಂತೂ ಏನು ಮಾಡುತ್ತದೆ! ತಂದೆಯಂತೂ ಅವಿಶ್ರಾಂತರಾಗಿದ್ದಾರಲ್ಲವೆ. ಅವರು ಜಾಗಂತಜ್ಯೋತಿ, ಇಡೀ ಜಗತ್ತನ್ನೇ ಎಚ್ಚರಿಸುತ್ತಾರೆ. ಅವರ ಪಾತ್ರವೇ ಅದ್ಭುತವಾಗಿದೆ. ಅದನ್ನು ನೀವು ಮಕ್ಕಳೂ ಸಹ ಕೆಲವರೇ ತಿಳಿದುಕೊಂಡಿದ್ದೀರಿ. ತಂದೆಯು ಕಾಲರ ಕಾಲನಾಗಿದ್ದಾರೆ, ಅವರ ಆಜ್ಞೆಯನ್ನು ಒಪ್ಪುವುದಿಲ್ಲವೆಂದರೆ ಶಿಕ್ಷೆಯನ್ನು ಭೋಗಿಸುತ್ತೀರಿ. ಯಾರೊಂದಿಗೂ ಸೇವೆಯನ್ನು ತೆಗೆದುಕೊಳ್ಳಬೇಡಿ ಎಂಬುದು ತಂದೆಯ ಮುಖ್ಯ ಸೂಚನೆಯಾಗಿದೆ ಆದರೆ ದೇಹಾಭಿಮಾನದಲ್ಲಿ ಬಂದು ತಂದೆಯ ಆಜ್ಞೆಯನ್ನು ಉಲ್ಲಂಘನೆ ಮಾಡುತ್ತಾರೆ. ನೀವು ಸ್ವಯಂ ಸೇವಕರಾಗಿದ್ದೀರಿ, ಇಲ್ಲಿ ಸುಖವನ್ನು ಪಡೆದಿದ್ದೇ ಆದರೆ ಅಲ್ಲಿ ಸುಖವು ಕಡಿಮೆಯಾಗುತ್ತದೆ. ಅಭ್ಯಾಸವಾಯಿತೆಂದರೆ ಸೇವಕರಿಲ್ಲದೇ ಇರಲು ಸಾಧ್ಯವಿಲ್ಲ. ನಾವು ಸ್ವತಂತ್ರವಾಗಿರಬೇಕೆಂದು ಕೆಲವರು ಹೇಳುತ್ತಾರೆ ಆದರೆ ಅವಲಂಬಿತರಾಗಿರುವುದು ಒಳ್ಳೆಯದಾಗಿದೆ ಎಂದು ತಂದೆಯು ತಿಳಿಸುತ್ತಾರೆ. ನೀವೆಲ್ಲರೂ ತಂದೆಯನ್ನವಲಂಬಿಸಿದ್ದೀರಿ. ಸ್ವತಂತ್ರರಾಗುತ್ತೀರೆಂದರೆ ಬಿದ್ದು ಹೋಗುತ್ತೀರಿ. ನೀವೆಲ್ಲರೂ ಶಿವ ತಂದೆಯನ್ನವಲಂಬಿಸಿದ್ದೀರಿ. ಇಡೀ ಪ್ರಪಂಚವೇ ಅವಲಂಬಿತವಾಗಿದೆ ಆದ್ದರಿಂದ ಪತಿತ-ಪಾವನ ಬನ್ನಿ ಎಂದು ಹೇಳುತ್ತಾರೆ. ಅವರಿಂದಲೇ ಸುಖ-ಶಾಂತಿಯು ಸಿಗುತ್ತದೆ ಆದರೆ ತಿಳಿದುಕೊಳ್ಳುವುದಿಲ್ಲ. ಭಕ್ತಿಮಾರ್ಗದ ಸಮಯವನ್ನೂ ಸಹ ಪಾಸ್ ಮಾಡಬೇಕಾಗಿದೆ. ಯಾವಾಗ ರಾತ್ರಿಯಾಗುವುದೋ ಆಗ ತಂದೆಯು ಬರಬೇಕಾಗುತ್ತದೆ. ಒಂದು ಸೆಕೆಂಡಿನ ವ್ಯತ್ಯಾಸವಾಗಲೂ ಸಾಧ್ಯವಿಲ್ಲ. ನಾನು ಈ ಡ್ರಾಮವನ್ನು ತಿಳಿದುಕೊಂಡಿರುವವನಾಗಿದ್ದೇನೆಂದು ತಂದೆಯು ತಿಳಿಸುತ್ತಾರೆ, ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಸತ್ಯಯುಗದಿಂದ ಹಿಡಿದು ಈ ಜ್ಞಾನವು ಪ್ರಾಯಲೋಪವಾಗಿದೆ, ಈಗ ನೀವು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಇದಕ್ಕೆ ಜ್ಞಾನವೆಂದು ಹೇಳಲಾಗುತ್ತದೆ, ಉಳಿದೆಲ್ಲವೂ ಭಕ್ತಿಯಾಗಿದೆ. ತಂದೆಯನ್ನು ಜ್ಞಾನಪೂರ್ಣನೆಂದು ಹೇಳುತ್ತಾರೆ. ನಮಗೆ ಅವರಿಂದ ಜ್ಞಾನವು ಸಿಗುತ್ತಾ ಇದೆ, ಮಕ್ಕಳಿಗೆ ಒಳ್ಳೆಯ ನಶೆಯಿರಬೇಕು ಆದರೆ ರಾಜಧಾನಿಯು ಸ್ಥಾಪನೆಯಾಗುತ್ತಾ ಇದೆ ಎಂಬುದೂ ಸಹ ತಿಳಿದಿದೆ. ಕೆಲವರು ಪ್ರಜೆಯಲ್ಲಿಯೂ ಸಹ ಸಾಧಾರಣ ನೌಕರ-ಚಾಕರರಾಗುತ್ತಾರೆ. ಸ್ವಲ್ಪವಾದರೂ ಜ್ಞಾನದ ಅರಿವು ಮೂಡುವುದಿಲ್ಲ, ವಿಚಿತ್ರವಲ್ಲವೆ! ಜ್ಞಾನವಂತೂ ಬಹಳ ಸಹಜವಾಗಿದೆ, 84 ಜನ್ಮಗಳ ಚಕ್ರವು ಈಗ ಪೂರ್ಣವಾಗಲಿದೆ, ಈಗ ಮನೆಗೆ ಹಿಂತಿರುಗಿ ಹೋಗಬೇಕಾಗಿದೆ, ನಾವು ಡ್ರಾಮಾದ ಮುಖ್ಯ ಪಾತ್ರಧಾರಿಗಳಾಗಿದ್ದೇವೆ. 84 ಜನ್ಮಗಳ ಚಕ್ರವು ಪೂರ್ಣವಾಗಿದೆ. ಡ್ರಾಮಾದಲ್ಲಿ ನಾಯಕ-ನಾಯಕಿಯರ ಪಾತ್ರವು ನಮ್ಮದೇ ಆಗಿದೆ, ಇದು ಎಷ್ಟು ಸುಲಭವಾಗಿದೆ ಆದರೂ ಅದೃಷ್ಟದಲ್ಲಿಲ್ಲವೆಂದರೆ ಅದೃಷ್ಟವನ್ನು ರೂಪಿಸುವವರು ಏನು ಮಾಡುತ್ತಾರೆ! ಓದಿನಲ್ಲಿಯೂ ಈ ರೀತಿಯಾಗುತ್ತದೆ. ಕೆಲವರು ಅನುತ್ತೀರ್ಣರಾಗುತ್ತಾರೆ, ಇದು ಎಷ್ಟು ದೊಡ್ಡ ಪಾಠಶಾಲೆಯಾಗಿದೆ! ರಾಜಧಾನಿಯು ಸ್ಥಾಪನೆಯಾಗಲಿದೆ. ಈಗ ಯಾರು ಎಷ್ಟು ಓದುತ್ತಾರೆ, ನಾವು ಯಾವ ಪದವಿಯನ್ನು ಪಡೆಯುತ್ತೇವೆ? ಎಂಬುದನ್ನು ಮಕ್ಕಳು ತಿಳಿದುಕೊಳ್ಳುತ್ತೀರಿ. ಅನೇಕ ಮಕ್ಕಳಿದ್ದಾರೆ ಆದರೆ ಎಲ್ಲಾ ಮಕ್ಕಳೂ ವಾರಸುಧಾರರಾಗಲು ಸಾಧ್ಯವಿಲ್ಲ, ಪವಿತ್ರರಾಗುವುದು ಬಹಳ ಕಷ್ಟವಾಗಿದೆ. ತಂದೆಯು ಎಷ್ಟೊಂದು ಸಹಜವಾಗಿ ತಿಳಿಸಿಕೊಡುತ್ತಾರೆ! ಈಗ ನಾಟಕವು ಪೂರ್ಣವಾಗುತ್ತಿದೆ, ತಂದೆಯ ನೆನಪಿನಿಂದ ಸತೋಪ್ರಧಾನರಾಗಿ ಸತೋಪ್ರಧಾನ ಜಗತ್ತಿಗೆ ಮಾಲೀಕರಾಗಬೇಕು. ಎಷ್ಟು ಸಾಧ್ಯವೋ ಅಷ್ಟು ನೆನಪಿನಲ್ಲಿರಬೇಕು ಆದರೆ ಅದೃಷ್ಟದಲ್ಲಿಲ್ಲವೆಂದರೆ ತಂದೆಯ ಬದಲಾಗಿ ಯಾರು-ಯಾರನ್ನೋ ನೆನಪು ಮಾಡುತ್ತಾರೆ. ಮನಸ್ಸನ್ನಿಡುವುದರಿಂದ ಬಹಳಷ್ಟು ಅಳಬೇಕಾಗುತ್ತದೆ, ಹಳೆಯ ಪ್ರಪಂಚದೊಂದಿಗೆ ಮನಸ್ಸನ್ನಿಡಬೇಡಿ ಎಂದು ತಂದೆಯು ತಿಳಿಸುತ್ತಾರೆ. ಇದಂತೂ ಸಮಾಪ್ತಿಯಾಗಲಿದೆ ಎಂಬುದು ಬೇರೆ ಯಾರಿಗೂ ತಿಳಿದಿಲ್ಲ. ಅವರು ಕಲಿಯುಗವು ಇನ್ನೂ ಬಹಳ ಸಮಯವಿರುತ್ತದ ಯಂದು ತಿಳಿದಿದ್ದಾರೆ, ಘೋರ ನಿದ್ದೆಯಲ್ಲಿ ಮಲಗಿ ಬಿಟ್ಟಿದ್ದಾರೆ. ನಿಮ್ಮ ಪ್ರದರ್ಶನಿಯು ಪ್ರಜೆಗಳನ್ನಾಗಿ ಮಾಡಲು ವಿಹಂಗ ಮಾರ್ಗದ ಸೇವೆಯ ಸಾಧನವಾಗಿದೆ. ರಾಜ-ರಾಣಿಯರೂ ಸಹ ಹುಟ್ಟಿಕೊಳ್ಳುತ್ತಾರೆ. ಅನೇಕರಿಗೆ ಸೇವೆಯನ್ನು ಮಾಡುವ ಬಹಳ ಉತ್ಸುಕತೆಯಿದೆ. ಕೆಲವರು ಬಡವರು, ಕೆಲವರು ಸಾಹುಕಾರರಿದ್ದಾರೆ. ಅನ್ಯರನ್ನು ತಮ್ಮ ಸಮಾನ ಮಾಡಿಕೊಂಡರೆ ಅವರಿಗೆ ಲಾಭವಾಗುತ್ತದೆಯಲ್ಲವೆ! ಅಂಧರಿಗೆ ಊರುಗೋಲಾಗಬೇಕು. ಕೇವಲ ಹೇಳುವವರಲ್ಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು ತಿಳಿಸಿಕೊಡಬೇಕು. ವಿನಾಶವು ಎದುರಿನಲ್ಲಿದೆ, ಯಾವಾಗ ವಿನಾಶದ ಸಮಯವು ಸಮೀಪದಲ್ಲಿ ನೋಡುತ್ತಾರೆಯೋ ಆಗ ನಿಮ್ಮ ಮಾತುಗಳನ್ನು ಕೇಳುತ್ತಾರೆ. ನಿಮ್ಮ ಸೇವೆಯೂ ಸಹ ವೃದ್ಧಿಯಾಗುತ್ತದೆ. ಇವರು ಹೇಳುವುದು ಸರಿಯಂದು ತಿಳಿದುಕೊಳ್ಳುತ್ತಾರೆ. ನೀವು ವಿನಾಶವಾಗುತ್ತದೆ ಎಂದು ಹೇಳುತ್ತಲೇ ಇರುತ್ತೀರಿ.

ನಿಮ್ಮ ಪ್ರದರ್ಶನಿ, ಮೇಳದಿಂದ ಸೇವೆಯು ವೃದ್ಧಿಯಾಗುತ್ತಾ ಹೋಗುತ್ತದೆ. ಪ್ರಯತ್ನ ಪಟ್ಟು ಯಾವುದಾದರೂ ಒಳ್ಳೆಯ ಹಾಲ್ ಸಿಕ್ಕಿದ್ದೇ ಆದರೆ ಬಾಡಿಗೆಗೆ ತೆಗೆದುಕೊಳ್ಳಲು ನಾವು ತಯಾರಿದ್ದೇವೆ. ಇದರಿಂದ ನಿಮ್ಮ ಹೆಸರು ಇನ್ನೂ ಪ್ರಸಿದ್ಧವಾಗುತ್ತದೆ ಎಂದು ಹೇಳಿ ಹಾಗೆ ಅನೇಕರ ಬಳಿ ವಿಶಾಲವಾದ ಸ್ಥಳಗಳಿರುತ್ತವೆ, ಪುರುಷಾರ್ಥವನ್ನು ಮಾಡುವುದರಿಂದ ಮೂರು ಅಡಿ ಭೂಮಿಯು ಸಿಗುತ್ತದೆ. ಅಲ್ಲಿಯವರೆಗೂ ನೀವು ಸಣ್ಣ-ಸಣ್ಣ ಪ್ರದರ್ಶನಿಗಳನ್ನಿಡಿ. ಶಿವ ಜಯಂತಿಯನ್ನು ನೀವು ಆಚರಿಸಿದ್ದೇ ಆದರೆ ಹೆಚ್ಚು ಪ್ರಚಾರವಾಗುತ್ತದೆ. ಶಿವ ಜಯಂತಿಯ ರಜಾ ದಿನವನ್ನು ಗೊತ್ತು ಮಾಡಿ. ವಾಸ್ತವದಲ್ಲಿ ಜನ್ಮ ದಿನವನ್ನು ಒಬ್ಬರದನ್ನೇ ಆಚರಿಸಬೇಕು. ಅವರೇ ಪತಿತ-ಪಾವನನಾಗಿದ್ದಾರೆ. ಸ್ಟಾಂಪನ್ನೂ ಸಹ ವಾಸ್ತವದಲ್ಲಿ ತ್ರಿಮೂರ್ತಿಗಳದ್ದಾಗಬೇಕು. ಸತ್ಯಮೇವ ಜಯತೆ....... ಇದು ವಿಜಯವನ್ನು ಪಡೆಯುವ ಸಮಯವಾಗಿದೆ. ತಿಳಿಸಿಕೊಡುವವರೂ ಸಹ ಬುದ್ಧಿವಂತರಾಗಿರಬೇಕು. ಸೇವಾಕೇಂದ್ರದಲ್ಲಿ ಯಾರು ಮುಖ್ಯವಾಗಿದ್ದಾರೆಯೋ ಅವರು ಬಹಳ ಗಮನ ಕೊಡಬೇಕು. ತಮ್ಮ ಸ್ಟಾಂಪನ್ನು ಹೊರಡಿಸಲು ಸಾಧ್ಯವಿದೆ, ಇದು ತ್ರಿಮೂರ್ತಿ ಶಿವ ಜಯಂತಿಯಾಗಿದೆ. ಕೇವಲ ಶಿವ ಜಯಂತಿ ಎಂದು ಹೇಳುವುದರಿಂದ ಅವರಿಗೆ ಅರ್ಥವಾಗಲು ಸಾಧ್ಯವಿಲ್ಲ. ಈಗ ಈ ಕೆಲಸವನ್ನು ಮಕ್ಕಳೇ ಮಾಡಬೇಕು. ಅನೇಕರ ಕಲ್ಯಾಣ ಮಾಡಬೇಕೆಂದರೆ ಎಷ್ಟೊಂದು ಲಿಫ್ಟ್ ಸಿಗುತ್ತದೆ. ಸರ್ವೀಸಿನ ಲಿಫ್ಟ್ ಸಿಗುತ್ತದೆ, ಪ್ರದರ್ಶನಿಯಿಂದ ಬಹಳಷ್ಟು ಸೇವೆಯಾಗಲು ಸಾಧ್ಯವಿದೆ. ಪ್ರಜೆಗಳಂತೂ ಆಗುತ್ತಾರಲ್ಲವೆ. ಸೇವೆಯಲ್ಲಿ ಯಾವ ಮಕ್ಕಳ ಗಮನವಿರುತ್ತದೆ ಎಂದು ತಂದೆಯು ನೋಡುತ್ತಾರೆ. ಅವರೇ ಹೃದಯವನ್ನೇರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಂದುವೇಳೆ ಒಮ್ಮೆ ಏನಾದರೂ ತಪ್ಪಾಯಿತೆಂದರೆ ಅದೇ ಸಮಯದಲ್ಲಿ ಕಿವಿ ಹಿಡಿದುಕೊಳ್ಳಬೇಕು ಮತ್ತೊಮ್ಮೆ ಆ ತಪ್ಪು ಆಗಬಾರದು. ಎಂದೂ ಸಹ ದೇಹದ ಅಹಂಕಾರದಲ್ಲಿ ಬರಬಾರದು. ಜ್ಞಾನದಲ್ಲಿ ಪ್ರವೀಣರಾಗಿ ಅಂತರ್ಮುಖಿಗಳಾಗಬೇಕು.

2. ಸತ್ಯ ಪಿತಾವ್ರತರಾಗಬೇಕು. ಜೀವಿಸಿದ್ದಂತೆಯೇ ಬಲಿಯಾಗಬೇಕು. ಯಾರೊಂದಿಗೂ ಸಹ ಮನಸ್ಸನ್ನಿಡಬಾರದು. ತಿಳುವಳಿಕೆಹೀನವಾದ ಯಾವುದೇ ಕೆಲಸ ಮಾಡಬಾರದು.

ವರದಾನ:
ವಿಶಾಲ ಬುದ್ಧಿ, ವಿಶಾಲ ಹೃದಯದಿಂದ ನಮ್ಮ ತನದ ಅನುಭೂತಿ ಮಾಡಿಸುವಂತಹ ಮಾಸ್ಟರ್ ರಚೈತ ಭವ.

ಮಾಸ್ಟರ್ ರಚೈತನ ಮೊದಲ ರಚನೆ - ಈ ದೇಹವಾಗಿದೆ. ಯಾರು ಈ ದೇಹದ ಮಾಲೀಕತನದಲ್ಲಿ ಸಂಪೂರ್ಣ ಸಫಲತೆ ಪ್ರಾಪ್ತಿ ಮಾಡಿಕೊಳ್ಳುತ್ತಾರೆ, ಅವರು ತಮ್ಮ ಸ್ನೇಹ ಹಾಗೂ ಸಂಪರ್ಕದ ಮೂಲಕ ಎಲ್ಲರಿಗೆ ನಮ್ಮ ತನದ ಅನುಭವವನ್ನು ಮಾಡಿಸುತ್ತಾರೆ. ಆ ಆತ್ಮದ ಸಂಪರ್ಕದಿಂದ ಸುಖದ, ದಾತಾತನದ, ಶಾಂತಿ, ಪ್ರೇಮ, ಆನಂದ, ಸಹಯೋಗ, ಸಾಹಸ, ಉತ್ಸಾಹ, ಉಮ್ಮಂಗ ಯಾವುದಾದರೂ ಒಂದು ವಿಶೇಷತೆ ಅನುಭೂತಿಯಾಗುವುದು. ಅವರನ್ನೇ ಹೇಳಲಾಗುವುದು ವಿಶಾಲ ಬುದ್ಧಿ, ವಿಶಾಲ ಹೃದಯವುಳ್ಳವರು.

ಸ್ಲೋಗನ್:
ಉಮ್ಮಂಗ-ಉತ್ಸಾಹದ ರೆಕ್ಕೆಯ ಮೂಲಕ ಸದಾ ಹಾರುವ ಕಲೆಯ ಅನುಭೂತಿ ಮಾಡಿಸುತ್ತಾ ಹೋಗಿ.


ಅವ್ಯಕ್ತ ಸ್ಥಿತಿಯ ಅನುಭವ ಮಾಡವುದಕ್ಕಾಗಿ ವಿಶೇಷ ಹೋಮ್ ವರ್ಕ್ -
ಯಾವುದೇ ಕರ್ಮ ಮಾಡಿ, ಮಾತು ಮಾತನಾಡಿ ಅಥವಾ ಸಂಕಲ್ಪ ಮಾಡಿ ಅದಕ್ಕೆ ಮೊದಲು ಚೆಕ್ಕ್ ಮಾಡಿ ಇದು ಬ್ರಹ್ಮಾ ತಂದೆ ಸಮಾನವಾಗಿದೆಯಾ! ಬ್ರಹ್ಮಾ ತಂದೆಯ ವಿಶೇಷತೆ ವಿಶೇಷವಾಗಿ ಇದೇ ಆಗಿತ್ತು - ಏನು ಯೋಚಿಸಿದರೋ ಅದನ್ನೇ ಮಾಡಿದರು, ಏನು ಹೇಳಿದರೋ ಅದನ್ನೇ ಮಾಡಿದರು ಈ ರೀತಿ ತಂದೆಯನ್ನು ಫಾಲೋ ಮಾಡಿ. ತಮ್ಮ ಸ್ವಮಾನದ ಸ್ಮೃತಿಯಿಂದ, ತಂದೆಯ ಜೊತೆಯ ಸಮರ್ಥತೆಯಿಂದ, ಧೃಡತೆ ಮತ್ತು ನಿಶ್ಚಯದ ಶಕ್ತಿಯಿಂದ ಶ್ರೇಷ್ಠ ಫೊಜಿಷನ್ ನಲ್ಲಿರುತ್ತಾ ಅಫೊಜಿಷನ್ ಅನ್ನು ಸಮಾಪ್ತಿ ಮಾಡಿ ಬಿಡಿ ಆಗ ಅವ್ಯಕ್ತ ಸ್ಥಿತಿ ಸಹಜವಾಗಿ ಆಗುವುದು.