24.01.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಅಶರೀರಿಗಳಾಗಿ ಯಾವಾಗ ತಂದೆಯನ್ನು ನೆನಪು ಮಾಡುತ್ತೀರೋ ಆಗ ನಿಮ್ಮ ಪಾಲಿಗೆ ಈ ಜಗತ್ತೇ ಸಮಾಪ್ತಿಯಾಗಿ
ಬಿಡುತ್ತದೆ, ದೇಹ ಮತ್ತು ಜಗತ್ತು ಮರೆತು ಹೋಗಿಬಿಡುತ್ತದೆ”
ಪ್ರಶ್ನೆ:
ತಂದೆಯ ಮೂಲಕ ನೀವು ಮಕ್ಕಳಿಗೆ ಜ್ಞಾನದ ಮೂರನೆಯ ನೇತ್ರವು ಏಕೆ ಸಿಕ್ಕಿದೆ?
ಉತ್ತರ:
ತಮ್ಮನ್ನು ಆತ್ಮನೆಂದು ತಿಳಿದು, ತಂದೆಯು ಯಾರಾಗಿದ್ದಾರೆ, ಹೇಗಿದ್ದಾರೆಯೋ ಹಾಗೆಯೇ ನೆನಪು ಮಾಡಲು
ಮೂರನೆಯ ನೇತ್ರವು ಸಿಕ್ಕಿದೆ. ಆದರೆ ಈ ಮೂರನೆಯ ನೇತ್ರವು ಪೂರ್ಣ ಯೋಗಯುಕ್ತರಾದಾಗ ಕೆಲಸ ಮಾಡುತ್ತದೆ
ಅರ್ಥಾತ್ ಒಬ್ಬ ತಂದೆಯೊಂದಿಗೆ ಸತ್ಯ ಪ್ರೀತಿಯಿದ್ದಾಗ. ಯಾರ ನಾಮ-ರೂಪದಲ್ಲಿಯೂ ಸಿಕ್ಕಿ
ಹಾಕಿಕೊಂಡಿರಬಾರದು. ಮಾಯೆಯು ಪ್ರೀತಿಯನ್ನಿಡುವುದರಲ್ಲಿಯೇ ವಿಘ್ನವನ್ನು ಹಾಕುತ್ತದೆ. ಇದರಲ್ಲಿಯೇ
ಮಕ್ಕಳು ಮೋಸ ಹೋಗುತ್ತಾರೆ.
ಗೀತೆ:
ಸತ್ತರೂ ನಿನ್ನ ಮಡಿಲಿನಲ್ಲಿಯೇ..........
ಓಂ ಶಾಂತಿ.
ನೀವು ಬ್ರಾಹ್ಮಣರ ವಿನಃ ಈ ಗೀತೆಯ ಅರ್ಥವನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಹೇಗೆ
ವೇದ-ಶಾಸ್ತ್ರ ಮುಂತಾದುವುಗಳಲ್ಲಿ ಬರೆದಿದ್ದಾರೆ. ಆದರೆ ಏನೆಲ್ಲವನ್ನೂ ಓದುತ್ತಾರೆಯೋ ಅದರ
ಅರ್ಥವನ್ನು ತಿಳಿಯಲು ಸಾಧ್ಯವಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಬ್ರಹ್ಮಾರವರ
ಮೂಲಕ ಎಲ್ಲಾ ವೇದ-ಶಾಸ್ತ್ರಗಳ ಸಾರವನ್ನು ತಿಳಿಸಿಕೊಡುತ್ತೇನೆ ಹಾಗೆಯೇ ಈ ಗೀತೆಗಳ ಅರ್ಥವನ್ನೂ ಸಹ
ಯಾರೂ ತಿಳಿದುಕೊಂಡಿಲ್ಲ. ತಂದೆಯೇ ಇದರ ಅರ್ಥವನ್ನು ತಿಳಿಸಿಕೊಡುತ್ತಾರೆ. ಆತ್ಮವು ಯಾವಾಗ ಈ
ಶರೀರದಿಂದ ಭಿನ್ನವಾಗುತ್ತದೆಯೋ ಆಗ ಈ ಪ್ರಪಂಚದಿಂದ ಎಲ್ಲಾ ಸಂಬಂಧವು ಕಡಿದು ಹೋಗುತ್ತದೆ. ಗೀತೆಯೂ
ಸಹ ಹೇಳುತ್ತದೆ - ತನ್ನನ್ನು ಆತ್ಮನೆಂದು ತಿಳಿದು ಅಶರೀರಿ ತಂದೆಯನ್ನು ನೆನಪು ಮಾಡಿದರೆ ಈ
ಪ್ರಪಂಚವೇ ಸಮಾಪ್ತಿಯಾಗಿ ಬಿಡುತ್ತದೆ. ಈ ಶರೀರವು ಭೂಮಿಯ ಮೇಲಿದೆ, ಆತ್ಮವು ಇದರಿಂದ ಬಿಟ್ಟು
ಹೋಯಿತೆಂದರೆ ಮತ್ತೆ ಆ ಸಮಯದಲ್ಲಿ ಅದಕ್ಕೆ ಈ ಮನುಷ್ಯ ಸೃಷ್ಟಿಯೇ ಇರುವುದಿಲ್ಲ, ಆತ್ಮವು
ಅಶರೀರಿಯಾಗಿ ಬಿಡುತ್ತದೆ ನಂತರ ಯಾವಾಗ ಶರೀರದಲ್ಲಿ ಮತ್ತೆ ಪ್ರವೇಶವಾಗುತ್ತದೆಯೋ ಆಗ ಪಾತ್ರವು
ಪ್ರಾರಂಭವಾಗುತ್ತದೆ ಮತ್ತೆ ಒಂದು ಶರೀರವನ್ನು ಬಿಟ್ಟು ಮತ್ತೊಂದರಲ್ಲಿ ಪ್ರವೇಶ ಮಾಡುತ್ತದೆ ಆದರೆ
ಹಿಂತಿರುಗಿ ಮಹಾತತ್ವದಲ್ಲಿ ಹೋಗುವುದಿಲ್ಲ. ಅದು ಹಾರಿ ಮತ್ತೊಂದು ಶರೀರದಲ್ಲಿ ಹೋಗುತ್ತದೆ. ಈ
ಆಕಾಶ ತತ್ವದಲ್ಲಿಯೇ ಅದು ಪಾತ್ರವನ್ನಭಿನಯಿಸಬೇಕಾಗುತ್ತದೆ, ಮೂಲವತನದಲ್ಲಿ ಹೋಗುವುದಿಲ್ಲ. ಯಾವಾಗ
ಶರೀರ ಬಿಡುತ್ತದೆಯಂದರೆ ಇಲ್ಲಿನ ಕರ್ಮ ಬಂಧನವೂ ಇರುವುದಿಲ್ಲ, ಆ ಕರ್ಮದ ಬಂಧನವೂ ಇರುವುದಿಲ್ಲ,
ಶರೀರದಿಂದಲೇ ಭಿನ್ನವಾಗುತ್ತದೆಯಲ್ಲವೆ! ಮತ್ತೊಂದು ಶರೀರವನ್ನು ಪಡೆದಾಗ ಆ ಕರ್ಮ ಬಂಧನವು ಮತ್ತೆ
ಪ್ರಾರಂಭವಾಗುತ್ತದೆ. ಇವೆಲ್ಲಾ ಮಾತುಗಳನ್ನು ನಿಮ್ಮನ್ನು ಬಿಟ್ಟು ಮತ್ತ್ಯಾವ ಮನುಷ್ಯರು
ತಿಳಿದುಕೊಂಡಿಲ್ಲ, ಎಲ್ಲರೂ ಸಂಪೂರ್ಣ ತಿಳುವಳಿಕೆಹೀನರಾಗಿದ್ದಾರೆಂದು ತಂದೆಯು ತಿಳಿಸುತ್ತಾರೆ.
ಆದರೆ ತನ್ನನ್ನು ಈ ರೀತಿ ಯಾರಾದರೂ ತಿಳಿದುಕೊಳ್ಳುತ್ತಾರೆಯೇ! ತನ್ನನ್ನು ಎಷ್ಟೊಂದು
ಬುದ್ಧಿವಂತನೆಂದು ತಿಳಿದುಕೊಳ್ಳುತ್ತಾರೆ. ಶಾಂತಿಯ ಬಹುಮಾನಗಳನ್ನು ಕೊಡುತ್ತಿರುತ್ತಾರೆ. ನೀವು
ಬ್ರಾಹ್ಮಣ ಕುಲಭೂಷಣರು ಚೆನ್ನಾಗಿ ತಿಳಿಸಿಕೊಡಲು ಸಾಧ್ಯವಿದೆ. ಅವರಿಗೆ ಶಾಂತಿಯೆಂದು ಯಾವುದಕ್ಕೆ
ಹೇಳಲಾಗುತ್ತದೆ? ಎಂಬುದು ತಿಳಿದೇ ಇಲ್ಲ. ಮನಸ್ಸಿಗೆ ಹೇಗೆ ಶಾಂತಿ ಸಿಗುತ್ತದೆಯಂದು ಕೆಲವರು
ಮಹಾತ್ಮರ ಬಳಿ ಹೋಗುತ್ತಾರೆ ನಂತರ ವಿಶ್ವದಲ್ಲಿ ಹೇಗಾಗುತ್ತದೆ ಎಂದು ಕೇಳುತ್ತಾರೆ! ಆದರೆ ನಿರಾಕಾರಿ
ಜಗತ್ತಿನಲ್ಲಿ ಶಾಂತಿಯು ಹೇಗಿರುತ್ತದೆ ಎಂದು ಯಾರೂ ಸಹ ಕೇಳುವುದಿಲ್ಲ. ಅದಂತೂ ಶಾಂತಿಧಾಮವಾಗಿದೆ,
ನಾವಾತ್ಮರು ಶಾಂತಿಧಾಮದಲ್ಲಿರುತ್ತೇವೆ. ಆದರೆ ಮನಸ್ಸಿನ ಶಾಂತಿಯಂದು ಹೇಳಲಾಗುತ್ತದೆ. ಅದು ಅವರಿಗೆ
ಹೇಗೆ ಸಿಗುತ್ತದೆಯಂದು ತಿಳಿದಿಲ್ಲ. ಶಾಂತಿಧಾಮ ನಮ್ಮ ಮನೆಯಾಗಿದೆ, ಇಲ್ಲಿ ಶಾಂತಿಯು ಸಿಗಲು ಹೇಗೆ
ಸಾಧ್ಯ? ಹೌದು, ಸತ್ಯಯುಗದಲ್ಲಿ ಸುಖ-ಶಾಂತಿ-ಸಂಪತ್ತು ಎಲ್ಲವೂ ಇರುತ್ತದೆ, ಅದರ ಸ್ಥಾಪನೆಯನ್ನು
ತಂದೆಯೇ ಮಾಡುತ್ತಾರೆ. ಇಲ್ಲಿಯಾದರೂ ಎಷ್ಟೊಂದು ಅಶಾಂತಿಯಿದೆ! ಇದೆಲ್ಲವನ್ನೂ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ. ಸುಖ-ಶಾಂತಿ-ಸಂಪತ್ತು ಭಾರತದಲ್ಲಿಯೇ ಇತ್ತು, ಆ ಆಸ್ತಿಯು ತಂದೆಯದಾಗಿತ್ತು.
ದುಃಖ, ಅಶಾಂತಿ, ಕಂಗಾಲತನ - ಈ ಆಸ್ತಿಯು ರಾವಣನದಾಗಿದೆ. ಈ ಎಲ್ಲಾ ಮಾತುಗಳನ್ನು ಬೇಹದ್ದಿನ ತಂದೆಯು
ಬೇಹದ್ದಿನ ಮಕ್ಕಳಿಗೆ ತಿಳಿಸುತ್ತಾರೆ. ತಂದೆಯು ಪರಮಧಾಮದಲ್ಲಿರುವಂತಹ ಜ್ಞಾನಪೂರ್ಣನಾಗಿದ್ದಾರೆ.
ಯಾರು ಸುಖಧಾಮದ ಆಸ್ತಿಯನ್ನು ನಮಗೆ ಕೊಡುತ್ತಾರೆ ಅವರು ನಾವಾತ್ಮಗಳಿಗೆ ತಿಳಿಸಿಕೊಡುತ್ತಾರೆ.
ಜ್ಞಾನವು ಆತ್ಮನಲ್ಲಿಯೇ ಇರುತ್ತದೆ, ಅವರಿಗೆ ಜ್ಞಾನಸಾಗರನೆಂದು ಕರೆಯಲಾಗುತ್ತದೆ, ಆ ಜ್ಞಾನಸಾಗರ
ಇವರ (ಬ್ರಹ್ಮಾ) ಶರೀರದ ಮೂಲಕ ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸಿಕೊಡುತ್ತಾರೆ. ವಿಶ್ವದ
ಆಯಸ್ಸು ಇರಬೇಕಲ್ಲವೆ! ವಿಶ್ವವಂತೂ ಇದ್ದೇ ಇದೆ, ಕೇವಲ ಹೊಸ ಜಗತ್ತು ಮತ್ತು ಹಳೆಯ ಜಗತ್ತೆಂದು
ಕರೆಯಲಾಗುತ್ತದೆ ಎಂಬುದೂ ಸಹ ಮನುಷ್ಯರಿಗೆ ತಿಳಿದಿಲ್ಲ. ಹೊಸ ಜಗತ್ತಿನಿಂದ ಹಳೆಯದಾಗುವುದರಲ್ಲಿ
ಎಷ್ಟು ಸಮಯ ಹಿಡಿಸುತ್ತದೆ?
ಕಲಿಯುಗದ ನಂತರ ಸತ್ಯಯುಗವು ಅವಶ್ಯವಾಗಿ ಬರುತ್ತದೆಯೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ.
ಆದ್ದರಿಂದ ಕಲಿಯುಗ ಮತ್ತು ಸತ್ಯಯುಗದ ಸಂಗಮದಲ್ಲಿ ತಂದೆಯು ಬರಬೇಕಾಗುತ್ತದೆ. ಪರಮಪಿತ ಪರಮಾತ್ಮ
ಬ್ರಹ್ಮಾರವರ ಮೂಲಕ ಹೊಸ ಜಗತ್ತಿನ ಸ್ಥಾಪನೆಯನ್ನು, ಶಂಕರನ ಮೂಲಕ ವಿನಾಶವನ್ನು ಮಾಡಿಸುತ್ತಾರೆ.
ತ್ರಿಮೂರ್ತಿಯ ಅರ್ಥವೇ ಇದಾಗಿದೆ - ಸ್ಥಾಪನೆ, ವಿನಾಶ, ಪಾಲನೆ. ಇದು ಸಾಧಾರಣ ಮಾತಾಗಿದೆ ಆದರೆ ಈ
ಮಾತುಗಳನ್ನು ನೀವು ಮಕ್ಕಳು ಮರೆತು ಬಿಡುತ್ತೀರಿ. ಇಲ್ಲವೆಂದರೆ ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು,
ನಿರಂತರ ನೆನಪಿರಬೇಕು - ಬಾಬಾ ನಮ್ಮನ್ನು ಈಗ ಹೊಸ ಜಗತ್ತಿಗೆ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ.
ನೀವು ಭಾರತವಾಸಿಗಳೇ ಯೋಗ್ಯರಾಗುತ್ತಿದ್ದೀರಿ, ಬೇರೆ ಯಾರೂ ಅಲ್ಲ. ಹಾ! ಯಾರು ಅನ್ಯ ಧರ್ಮಗಳಲ್ಲಿ
ಮತಾಂತರ ಹೊಂದಿದ್ದಾರೆಯೋ ಅವರು ಬರಲು ಸಾಧ್ಯ. ಮತ್ತೆ ಕಲ್ಪದ ಹಿಂದಿನಂತೆ ಅದೇ ಧರ್ಮದಲ್ಲಿ ಹೋಗಿ
ಸೇರಿಕೊಳ್ಳುತ್ತಾರೆ. ಎಲ್ಲದರ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಈ ಹಳೆಯ ಪ್ರಪಂಚವು
ಬದಲಾವಣೆಯಾಗುತ್ತದೆ ಎಂದು ಮನುಷ್ಯರಿಗೆ ತಿಳಿಸಬೇಕು. ಮಹಾಭಾರತ ಯುದ್ಧವು ಅವಶ್ಯವಾಗಿ ಆಗಲಿದೆ, ಈ
ಸಮಯದಲ್ಲಿಯೇ ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ. ಯಾರು ರಾಜಯೋಗವನ್ನು ಕಲಿಯುತ್ತಾರೆಯೋ
ಅವರು ಹೊಸ ಜಗತ್ತಿನಲ್ಲಿ ಹೊರಟು ಹೋಗುತ್ತಾರೆ. ನೀವು ಎಲ್ಲರಿಗೂ ತಿಳಿಸಬೇಕು - ಶ್ರೇಷ್ಠಾತಿ
ಶ್ರೇಷ್ಠ ಭಗವಂತನಾಗಿದ್ದಾರೆ ನಂತರ ಬ್ರಹ್ಮಾ-ವಿಷ್ಣು-ಶಂಕರರು. ಇಲ್ಲಿ ಜಗದಂಬಾ-ಜಗತ್ಪಿತರು
ಮುಖ್ಯವಾಗಿದ್ದಾರೆ. ತಂದೆಯು ಬ್ರಹ್ಮಾರವರ ತನುವಿನಲ್ಲಿ ಬರುತ್ತಾರೆ, ಪ್ರಜಾಪಿತ ಬ್ರಹ್ಮಾರವರು
ಇಲ್ಲಿಯೇ ಇದ್ದಾರಲ್ಲವೆ. ಬ್ರಹ್ಮಾರವರ ಮೂಲಕ ಸ್ಥಾಪನೆಯು ಸೂಕ್ಷ್ಮವತನದಲ್ಲಿ ಆಗುವುದಿಲ್ಲ,
ಇಲ್ಲಿಯೇ ಆಗುತ್ತದೆ. ಇವರು ವ್ಯಕ್ತದಿಂದ ಅವ್ಯಕ್ತನಾಗುತ್ತಾರೆ, ರಾಜಯೋಗವನ್ನು ಕಲಿತು ವಿಷ್ಣುವಿನ
ಎರಡು ರೂಪವಾಗುತ್ತಾರೆ. ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿದುಕೊಳ್ಳಬೇಕಲ್ಲವೆ. ಮನುಷ್ಯರೇ
ತಿಳಿದುಕೊಳ್ಳುತ್ತಾರೆ. ವಿಶ್ವದ ಮಾಲೀಕ, ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸಿಕೊಡಲು ಸಾಧ್ಯವಿದೆ.
ಅವರು ಜ್ಞಾನಪೂರ್ಣರು, ಪುನರ್ಜನ್ಮರಹಿತನಾಗಿದ್ದಾರೆ. ಈ ಜ್ಞಾನವು ಯಾರದೇ ಬುದ್ಧಿಯಲ್ಲಿಲ್ಲ.
ಪರೀಕ್ಷಿಸುವಂತಹ ಬುದ್ಧಿಯು ಬೇಕಲ್ಲವೆ. ಹೇಗೆ ಸ್ವಲ್ಪ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆಯೋ ಅಥವಾ
ಹಾಗೆಯೇ ಇದ್ದಾರೆಯೇ ಎಂಬುದನ್ನು ನೋಡಬೇಕು. ಒಬ್ಬ ಅಜ್ಮಲ್ ಖಾನ್ ಹೆಸರಾಂತ ವೈದ್ಯನಾಗಿ ಹೋಗಿದ್ದಾರೆ.
ಆತನು ನೋಡಿದ ತಕ್ಷಣವೇ ರೋಗವನ್ನು ಪತ್ತೆ ಹಚ್ಚುತ್ತಿದ್ದರು ಎಂದು ಹೇಳುತ್ತಿದ್ದರು. ಈಗ ನೀವು
ಮಕ್ಕಳೂ ಸಹ ಇವರು ಈ ಜ್ಞಾನವನ್ನು ತಿಳಿದುಕೊಳ್ಳಲು ಯೋಗ್ಯರೇ ಅಥವಾ ಇಲ್ಲವೆ ಎಂದು
ತಿಳಿದುಕೊಳ್ಳಬೇಕು.
ತಂದೆಯು ಮಕ್ಕಳಿಗೆ ಜ್ಞಾನದ ಮೂರನೆಯ ನೇತ್ರವನ್ನು ಕೊಟ್ಟಿದ್ದಾರೆ, ಇದರಿಂದ ನೀವು ತನ್ನನ್ನು
ಆತ್ಮನೆಂದು ತಿಳಿದು ತಂದೆ ಯಾರಾಗಿದ್ದಾರೆ, ಹೇಗಿದ್ದಾರೆಯೋ ಅದೇ ರೂಪದಲ್ಲಿ ನೆನಪು ಮಾಡುತ್ತೀರಿ.
ಆದರೂ ಸಹ ಯಾರು ಪೂರ್ಣ ಯೋಗಯುಕ್ತರಾಗಿರುತ್ತಾರೆಯೋ ಅವರದು ತಂದೆಯ ಜೊತೆ
ಪ್ರೀತಿಬುದ್ಧಿಯಾಗಿರುತ್ತದೆ. ಇಂತಹ ಬುದ್ಧಿಯುಳ್ಳವರು ಎಲ್ಲರೂ ಇರುವುದಿಲ್ಲ. ಒಬ್ಬರಿಗೊಬ್ಬರು
ನಾಮ-ರೂಪದಲ್ಲಿ ಸಿಲುಕಿಕೊಂಡಿರುತ್ತಾರೆ. ನಿಮ್ಮ ಪ್ರೀತಿಯನ್ನು ನನ್ನೊಂದಿಗೆ ಜೋಡಿಸಿ ಎಂದು ತಂದೆಯು
ಹೇಳುತ್ತಾರೆ. ಮಾಯೆಯು ತಂದೆಯ ಜೊತೆ ಪ್ರೀತಿಯನ್ನಿಡಲು ಬಿಡುವುದಿಲ್ಲ. ಮಾಯೆಯೂ ಸಹ ನೋಡುತ್ತದೆ -
ಇವರು ನನ್ನ ಗ್ರಾಹಕರಾಗಿದ್ದಾರೆಯೇ ಎಂದು ನೋಡಿ ಒಂದೇಸಾರಿ ಮೂಗು-ಕಿವಿಯನ್ನು ಹಿಡಿದು ಬಿಡುತ್ತದೆ,
ಮತ್ತೆ ಯಾವಾಗ ಮೋಸ ಹೋಗುತ್ತಾರೆಯೋ ಆಗ ಮಾಯೆಯಿಂದ ಮೋಸ ಹೋದೆನೆಂದು ತಿಳಿಯುತ್ತಾರೆ,
ಮಾಯಾಜೀತರು-ಜಗಜ್ಜೀತರಾಗಲು ಸಾಧ್ಯವಿಲ್ಲ, ಶ್ರೇಷ್ಠ ಪದವಿಯನ್ನೂ ಪಡೆಯಲು ಸಾಧ್ಯವಿಲ್ಲ. ಇದರಲ್ಲಿಯೇ
ಶ್ರಮವಿದೆ. ನನ್ನೊಬ್ಬನನ್ನೇ ನೆನಪು ಮಾಡಿದ್ದೇ ಆದರೆ ನಿಮ್ಮ ಪತಿತ ಬುದ್ಧಿಯು ಪಾವನವಾಗಿ
ಬಿಡುತ್ತದೆ ಎಂದು ಶ್ರೀಮತವು ಹೇಳುತ್ತದೆ. ಆದರೂ ಸಹ ಇದು ಕೆಲವರಿಗೆ ಬಹಳ ಕಷ್ಟವೆನಿಸುತ್ತದೆ.
ಇದರಲ್ಲಿ ಒಂದೇ ವಿಷಯವಿದೆ - ತಂದೆ ಮತ್ತು ಆಸ್ತಿ. ಕೇವಲ ಎರಡು ಅಕ್ಷರದ ನೆನಪು ಮಾಡಲು
ಸಾಧ್ಯವಿಲ್ಲವೆ! ತಂದೆಯನ್ನು ನೆನಪು ಮಾಡಿ ಆದರೆ ತನ್ನ ದೇಹವನ್ನು, ಅನ್ಯರ ದೇಹವನ್ನು ನೆನಪು
ಮಾಡುತ್ತಿರುತ್ತಾರೆ. ದೇಹವನ್ನು ನೋಡುತ್ತಿದ್ದರೂ ಸಹ ನೀವು ನನ್ನನ್ನು ನೆನಪು ಮಾಡಿ. ಆತ್ಮನಿಗೆ
ಈಗ ನನ್ನನ್ನು ನೋಡಲು-ಅರಿಯಲು ಮೂರನೆಯ ನೇತ್ರವು ಸಿಕ್ಕಿದೆ, ಅದರಿಂದ ಕೆಲಸ ತೆಗೆದುಕೊಳ್ಳಿ.
ನೀವೀಗ ತ್ರಿಕಾಲದರ್ಶಿ, ತ್ರಿನೇತ್ರಿಗಳಾಗುತ್ತೀರಿ, ತ್ರಿಕಾಲದರ್ಶಿಗಳಲ್ಲಿಯೂ ಸಹ ನಂಬರ್ವಾರ್
ಇದ್ದೀರಿ. ಜ್ಞಾನವನ್ನು ಧಾರಣೆ ಮಾಡುವುದು ಯಾವುದೇ ಕಷ್ಟವಿಲ್ಲ. ಬಹಳ ಚೆನ್ನಾಗಿದೆಯೆನಿಸುತ್ತದೆ
ಆದರೆ ಯೋಗಬಲವು ಕಡಿಮೆ, ಆತ್ಮಾಭಿಮಾನಿ ಸ್ಥಿತಿಯು ಬಹಳ ಕಡಿಮೆಯಿದೆ. ಸ್ವಲ್ಪ ಮಾತಿನಲ್ಲಿ ಕೋಪ,
ಕ್ರೋಧವು ಬಂದು ಬಿಡುತ್ತದೆ, ಬೀಳುತ್ತಾ-ಏಳುತ್ತಾ ಇರುತ್ತಾರೆ. ಇಂದು ಮೇಲಕ್ಕೆ ಎದ್ದರೆ ನಾಳೆ
ಬಿದ್ದು ಹೋಗುತ್ತಾರೆ. ದೇಹದ ಅಭಿಮಾನವು ಮುಖ್ಯವಾದದ್ದಾಗಿದೆ ನಂತರ ಅನ್ಯ ಕೋಪ, ಕ್ರೋಧ
ಮುಂತಾದುವುದರಲ್ಲಿ ಮುಳುಗಿ ಬಿಡುತ್ತಾರೆ. ದೇಹದೊಂದಿಗೆ ಮೋಹವಿರುತ್ತದೆಯಲ್ಲವೆ. ಮಾತೆಯರಲ್ಲಿ
ಹೆಚ್ಚು ಮೋಹವಿರುತ್ತದೆ. ತಂದೆಯು ಅದರಿಂದ ಈಗ ನಿಮ್ಮನ್ನು ಬಿಡಿಸುತ್ತಿದ್ದಾರೆ. ನಿಮಗೆ ಬೇಹದ್ದಿನ
ತಂದೆಯು ಸಿಕ್ಕಿದ್ದಾರೆ, ನೀವು ಮೋಹವನ್ನೇಕೆ ಇಡುತ್ತೀರಿ? ಆ ಸಮಯದ ಚಹರೆ, ಮಾತುಕತೆ, ಎಲ್ಲವೂ
ಕಪಿಯ ಸಮಾನವಿರುತ್ತದೆ. ನಷ್ಟಮೋಹಿಗಳಾಗಿ, ನಿರಂತರ ನನ್ನನ್ನು ನೆನಪು ಮಾಡಿ ಎಂದು ತಂದೆಯು
ತಿಳಿಸುತ್ತಾರೆ. ಪಾಪದ ಹೊರೆಯು ತಲೆಯ ಮೇಲೆ ಬಹಳಷ್ಟಿದೆ, ಅದು ಹೇಗೆ ಇಳಿಯುವುದು? ಆದರೆ ಮಾಯೆಯು ಈ
ರೀತಿಯಿದೆ, ಅದು ನೆನಪು ಮಾಡಲು ಬಿಡುವುದೇ ಇಲ್ಲ. ಭಲೆ ಎಷ್ಟೇ ತಲೆ ಕೆಡಿಸಿಕೊಂಡರೂ ಘಳಿಗೆ-ಘಳಿಗೆಗೆ
ಬುದ್ಧಿಯಿಂದ ಹೊರಟು ಹೋಗುತ್ತದೆ. ನಾವು ಅತೀ ಪ್ರಿಯನಾದ ತಂದೆಯನ್ನೇ ಮಹಿಮೆ ಮಾಡುತ್ತಿರಬೇಕು ಎಂದು
ಎಷ್ಟೊಂದು ಪ್ರಯತ್ನ ಪಡುತ್ತಾರೆ, ಬಾಬಾ ನಿಮ್ಮ ಬಳಿ ಬಂದೇ ಬಿಟ್ಟೆವು ಎಂದು ಹೇಳುತ್ತಾರೆ ಆದರೆ
ಮರೆತು ಬಿಡುತ್ತಾರೆ, ಬುದ್ಧಿಯು ಬೇರೆ ಕಡೆ ಹೋಗುತ್ತಿರುತ್ತದೆ. ಮೊದಲನೆಯ ನಂಬರಿನಲ್ಲಿ
ಹೋಗುವಂತಹವರೂ ಸಹ ಪುರುಷಾರ್ಥಿಯಾಗಿದ್ದಾರಲ್ಲವೆ.
ನಾವು ಈಶ್ವರನ ವಿದ್ಯಾರ್ಥಿಗಳಾಗಿದ್ದೇವೆಂಬುದು ಮಕ್ಕಳ ಬುದ್ಧಿಯಲ್ಲಿರಬೇಕು. ಭಗವಾನುವಾಚ -
ಗೀತೆಯಲ್ಲಿಯೂ ಇದೆ, ನಾನು ನಿಮ್ಮನ್ನು ರಾಜರುಗಳ ರಾಜನನ್ನಾಗಿ ಮಾಡುತ್ತೇನೆ. ಕೇವಲ ಶಿವನ ಹೆಸರಿಗೆ
ಬದಲಾಗಿ ಕೃಷ್ಣನ ಹೆಸರನ್ನು ಹಾಕಿದ್ದಾರೆ. ವಾಸ್ತವದಲ್ಲಿ ಶಿವ ಜಯಂತಿಯನ್ನು ಇಡೀ ವಿಶ್ವದಲ್ಲಿ
ಆಚರಿಸಬೇಕು. ಶಿವ ತಂದೆಯು ಎಲ್ಲರನ್ನೂ ದುಃಖದಿಂದ ಮುಕ್ತರನ್ನಾಗಿ ಮಾಡಿ ಮಾರ್ಗದರ್ಶಕನಾಗಿ
ಕರೆದುಕೊಂಡು ಹೋಗುತ್ತಾರೆ. ಅವರು ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ, ಇದನ್ನು ಎಲ್ಲರೂ
ಒಪ್ಪುತ್ತಾರೆ. ಎಲ್ಲರ ಪತಿತ-ಪಾವನ ತಂದೆಯಾಗಿದ್ದಾರೆ. ಎಲ್ಲರನ್ನೂ ಶಾಂತಿಧಾಮ-ಸುಖಧಾಮದಲ್ಲಿ
ಕರೆದುಕೊಂಡು ಹೋಗುವವರಾಗಿದ್ದಾರೆ ಅಂದಾಗ ಅವರ ಜಯಂತಿಯನ್ನೇಕೆ ಆಚರಿಸಬಾರದು? ಭಾರತವಾಸಿಗಳೇ
ಆಚರಿಸುವುದಿಲ್ಲ. ಆದ್ದರಿಂದ ಭಾರತದ ಗತಿಯು ದುರ್ಗತಿಯಾಗಿದೆ. ಸಾವು ಸಹ ಕೆಟ್ಟ ಗತಿಯಿಂದ ಆಗುತ್ತದೆ.
ಈ ರೀತಿ ಬಾಂಬುಗಳನ್ನು ತಯಾರಿಸುತ್ತಾರೆ ಅದರಿಂದ ಅನಿಲವು ಹೊರಬಂದಿತೆಂದರೆ ಎಲ್ಲರೂ
ಸಮಾಪ್ತಿಯಾಗುತ್ತಾರೆ, ಹೇಗೆ ಕ್ಲೋರೋಫಾರಂ ಕೊಟ್ಟ ಹಾಗೆ ಆಗಿ ಬಿಡುತ್ತದೆ. ಅವರೂ ಸಹ ಇವೆಲ್ಲವನ್ನೂ
ಮಾಡಲೇಬೇಕು. ಇವೆಲ್ಲವನ್ನೂ ನಿಲ್ಲಿಸುವುದು ಅಸಾಧ್ಯದ ಮಾತು, ಕಲ್ಪದ ಹಿಂದೆ ಏನಾಗಿತ್ತೋ ಅದು
ಪುನರಾವರ್ತನೆಯಾಗುತ್ತದೆ. ಈ ಅಣ್ವಸ್ತ್ರಗಳು ಮತ್ತು ಪ್ರಾಕೃತಿಕ ವಿಕೋಪಗಳಿಂದ ವಿನಾಶವಾಗಿತ್ತು ಅದು
ಈಗಲೂ ಸಹ ಆಗಲಿದೆ. ವಿನಾಶದ ಸಮಯವು ಯಾವಾಗ ಬರುತ್ತದೆಯೋ ಆಗ ಡ್ರಾಮಾದ ಯೋಜನೆಯನುಸಾರ ಅದು
ಪಾತ್ರದಲ್ಲಿ ಬಂದೇ ಬಿಡುತ್ತದೆ. ನಾಟಕವು ಅವಶ್ಯವಾಗಿ ವಿನಾಶವನ್ನು ಮಾಡಿಸುತ್ತದೆ. ರಕ್ತದ ನದಿಗಳು
ಇಲ್ಲಿಯೇ ಹರಿಯುತ್ತದೆ. ಸಿವಿಲ್ವಾರ್ನಲ್ಲಿ ಒಬ್ಬರಿಗೊಬ್ಬರನ್ನು ಸಾಯಿಸಿ ಬಿಡುತ್ತಾರೆ. ಈ
ಪ್ರಪಂಚವು ಬದಲಾವಣೆಯಾಗುತ್ತದೆ ಎಂದು ನಿಮ್ಮಲ್ಲಿಯೂ ಕೆಲವರು ತಿಳಿದುಕೊಂಡಿದ್ದೀರಿ. ನಾವೀಗ
ಸುಖಧಾಮದಲ್ಲಿ ಹೋಗುತ್ತೇವೆ ಅಂದಾಗ ಸದಾಕಾಲ ಜ್ಞಾನದ ಅತೀಂದ್ರಿಯ ಸುಖದಲ್ಲಿರಬೇಕು. ಎಷ್ಟು
ನೆನಪಿನಲ್ಲಿರುತ್ತೀರಿ ಅಷ್ಟು ಸುಖವು ಹೆಚ್ಚುತ್ತಾ ಹೋಗುವುದು. ಈ ಕೊಳಕು ದೇಹದಿಂದ ದೂರವಾಗುತ್ತೀರಿ.
ನೀವು ತಂದೆಯನ್ನು ನೆನಪು ಮಾಡಿದ್ದೇ ಆದರೆ ರಾಜ್ಯಭಾಗ್ಯವು ನಿಮ್ಮದಾಗುತ್ತದೆ, ಸೆಕೆಂಡಿನಲ್ಲಿ
ರಾಜ್ಯಭಾಗ್ಯ. ರಾಜನಿಗೆ ಮಗುವಾಯಿತೆಂದರೆ ಆತ ರಾಜುಕುಮಾರನಾದನಲ್ಲವೆ! ಅಂದಾಗ ತಂದೆಯು ಹೇಳುತ್ತಾರೆ
- ನನ್ನನ್ನು ನೆನಪು ಮಾಡಿ ಮತ್ತು ಚಕ್ರವನ್ನು ನೆನಪು ಮಾಡಿದ್ದೇ ಆದರೆ ಚಕ್ರವರ್ತಿ ರಾಜರಾಗುತ್ತಾರೆ.
ಆದ್ದರಿಂದ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ, ಸೆಕೆಂಡಿನಲ್ಲಿ ಭಿಕಾರಿಯಿಂದ
ರಾಜಕುಮಾರನಾಗುತ್ತಾನೆಂದು ಗಾಯನವಿದೆ. ಎಷ್ಟು ಚೆನ್ನಾಗಿದೆ! ಅಂದಾಗ ಶ್ರೀಮತದಂತೆ ಚೆನ್ನಾಗಿ
ನಡೆಯಬೇಕು, ಹೆಜ್ಜೆ-ಹೆಜ್ಜೆಯಲ್ಲಿ ಸಲಹೆಯನ್ನು ತೆಗೆದುಕೊಳ್ಳಬೇಕು.
ಮಧುರ ಮಕ್ಕಳೇ, ನಿಮಿತ್ತರಾಗಿ ಇದ್ದಿದ್ದೇ ಆದರೆ ಮಮತ್ವವು ಅಳಿದು ಹೋಗುತ್ತದೆ ಎಂದು ತಂದೆಯು
ತಿಳಿಸುತ್ತಾರೆ. ಆದರೆ ನಿಮಿತ್ತರಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಇವರು ಸ್ವಯಂ
ನಿಮಿತ್ತರಾಗಿದ್ದಾರೆ, ಮಕ್ಕಳನ್ನೂ ಸಹ ನಿಮಿತ್ತರನ್ನಾಗಿ ಮಾಡುತ್ತಾರೆ. ಇವರು ಏನನ್ನಾದರೂ
ತೆಗೆದುಕೊಳ್ಳುತ್ತಾರೆಯೇ? ನೀವು ನಿಮಿತ್ತರಾಗಿ ಸಂಭಾಲನೆ ಮಾಡಿ ಎಂದು ತಿಳಿಸುತ್ತಾರೆ.
ನಿಮಿತ್ತರಾಗಿದ್ದಿದ್ದೇ ಆದರೆ ನಂತರ ಮಮತ್ವವು ಅಳಿದು ಹೋಗುತ್ತದೆ. ಈಶ್ವರನೇ ಎಲ್ಲವನ್ನೂ
ನೀಡಿದ್ದಾರೆ ಎಂದು ಹೇಳುತ್ತಾರೆ. ಮತ್ತೆ ಸ್ವಲ್ಪವೇನಾದರೂ ನಷ್ಟವಾಯಿತೆಂದರೆ ಅಥವಾ ಯಾರಾದರೂ ಸತ್ತು
ಹೋಗುತ್ತಾರೆಂದರೆ ನಂತರ ಅನಾರೋಗ್ಯವಂತರಾಗುತ್ತಾರೆ. ಏನಾದರೂ ಪ್ರಾಪ್ತಿಯಾದರೆ ಖುಷಿಯಾಗುತ್ತಾರೆ.
ಈಶ್ವರನು ಕೊಟ್ಟಿದ್ದಾರೆಂದರೆ ಸತ್ತ ನಂತರ ಅಳುವಂತಹ ಅಗತ್ಯವೇನಿದೆ? ಆದರೆ ಮಾಯೆಯು ಕಡಿಮೆಯೇನಿಲ್ಲ,
ಚಿಕ್ಕಮನ ಮನೆಯಂತೇನು! ಈ ಸಮಯದಲ್ಲಿ ತಂದೆಯು ಹೇಳುತ್ತಾರೆ - ಈ ಪತಿತ ಪ್ರಪಂಚದಲ್ಲಿ ನಾವು ಇರಲು
ಇಷ್ಟ ಪಡುವುದಿಲ್ಲ, ನಮ್ಮನ್ನು ಪಾವನ ಜಗತ್ತಿಗೆ ಜೊತೆಯಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ.
ಆದರೆ ಇದರ ಅರ್ಥವನ್ನೂ ತಿಳಿದುಕೊಂಡಿಲ್ಲ. ಪತಿತ-ಪಾವನ ಬರುತ್ತಾರೆಂದರೆ ಅವಶ್ಯವಾಗಿ ಶರೀರವೆಲ್ಲವೂ
ಸಮಾಪ್ತಿಯಾಗಿ ಬಿಡುತ್ತದೆ, ಆಗಲೇ ಆತ್ಮಗಳನ್ನು ಕರೆದುಕೊಂಡು ಹೋಗುತ್ತಾರೆ. ಇಂತಹ ತಂದೆಯ ಜೊತೆ
ಪ್ರೀತಿ ಬುದ್ಧಿಯಿರಬೇಕು. ಒಬ್ಬರೊಂದಿಗೆ ಪ್ರೀತಿಯನ್ನಿಡಬೇಕು, ಅವರನ್ನೇ ನೆನಪು ಮಾಡಬೇಕು, ಮಾಯೆಯ
ಬಿರುಗಾಳಿಯಂತೂ ಬರುತ್ತಿರುತ್ತವೆ. ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮವನ್ನು ಮಾಡಬಾರದು. ಅದು
ಕಾಯಿದೆಗೆ ವಿರುದ್ಧವಾಗುತ್ತದೆ. ನಾನು ಈ ಶರೀರದ (ಬ್ರಹ್ಮಾ) ಆಧಾರವನ್ನು ತೆಗೆದುಕೊಳ್ಳುತ್ತೇನೆಂದು
ತಂದೆಯು ಹೇಳುತ್ತಾರೆ. ಇದು ಇವರ ಶರೀರವಲ್ಲವೆ, ನೀವು ತಂದೆಯನ್ನು ನೆನಪು ಮಾಡಬೇಕು. ಬ್ರಹ್ಮಾರವರೂ
ತಂದೆಯಾಗಿದ್ದಾರೆ, ಶಿವನೂ ಸಹ ತಂದೆಯಾಗಿದ್ದಾರೆಂಬುದು ನಿಮಗೆ ತಿಳಿದಿದೆ. ವಿಷ್ಣು ಮತ್ತು
ಶಂಕರನಿಗೆ ತಂದೆಯಂದು ಹೇಳುವುದಿಲ್ಲ. ಶಿವ ನಿರಾಕಾರ ತಂದೆಯಾಗಿದ್ದಾರೆ, ಪ್ರಜಾಪಿತ ಬ್ರಹ್ಮನು
ಸಾಕಾರಿ ತಂದೆಯಾಗಿದ್ದಾರೆ. ಈಗ ನೀವು ಸಾಕಾರದ ಮೂಲಕ ನಿರಂತರ ನಿರಾಕಾರ ತಂದೆಯಿಂದ ಆಸ್ತಿಯನ್ನು
ತೆಗೆದುಕೊಳ್ಳುತ್ತಿದ್ದೀರಿ. ತಾತಾರವರು ಇವರಲ್ಲಿ ಪ್ರವೇಶ ಮಾಡುತ್ತಾರೆ, ಆಗ ತಾತನಿಂದ ಆಸ್ತಿಯು
ತಂದೆಯ ಮೂಲಕ ನಾವು ತೆಗೆದುಕೊಳ್ಳುತ್ತೇವೆ. ದಾದಾ (ನಿರಾಕಾರ) ತಂದೆ (ಸಾಕಾರ) ಇದು ಅದ್ಭುತವಾದ
ಹೊಸ ಮಾತಲ್ಲವೆ. ತ್ರಿಮೂರ್ತಿಯನ್ನು ತೋರಿಸುತ್ತಾರೆ ಆದರೆ ತಿಳಿದುಕೊಂಡಿಲ್ಲ. ಶಿವನನ್ನೇ ತೆಗೆದು
ಬಿಟ್ಟಿದ್ದಾರೆ. ತಂದೆಯು ಎಷ್ಟು ಒಳ್ಳೊಳ್ಳೆಯ ಮಾತುಗಳಿಂದ ತಿಳಿಸಿಕೊಡುತ್ತಾರೆ ಅಂದಾಗ
ಖುಷಿಯಾಗಬೇಕು. ನಾವು ವಿದ್ಯಾರ್ಥಿಗಳಾಗಿದ್ದೇವೆ, ತಂದೆಯು ನಮ್ಮ ತಂದೆಯಾಗಿದ್ದಾರೆ,
ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ತಂದೆಯು ಈಗ ವಿಶ್ವದ ಚರಿತ್ರೆ-ಭೂಗೋಳವನ್ನು ಬೇಹದ್ದಿನ
ತಂದೆಯಿಂದ ಕೇಳುತ್ತಿದ್ದೀರಿ ಮತ್ತೆ ನೀವು ಅನ್ಯರಿಗೂ ಸಹ ಹೇಳುತ್ತಾ ಇರಿ. ಇದು 5000 ವರ್ಷದ
ಚಕ್ರವಾಗಿದೆ. ಕಾಲೇಜಿನ ಮಕ್ಕಳಿಗೆ ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸಿಕೊಡಬೇಕು. 84 ಜನ್ಮಗಳ
ಏಣಿಯ ಬಗ್ಗೆ, ಭಾರತದ ಏರುವ ಮತ್ತು ಇಳಿಯುವ ಕಲೆ ಹೇಗಾಗುತ್ತದೆ - ಇದನ್ನು ತಿಳಿಸಿಕೊಡಬೇಕು.
ಸೆಕೆಂಡಿನಲ್ಲಿ ಭಾರತವು ಸ್ವರ್ಗವಾಗಿ ಬಿಡುತ್ತದೆ ನಂತರ 84 ಜನ್ಮಗಳಲ್ಲಿ ಭಾರತವು ನರಕವಾಗುತ್ತದೆ.
ಇದು ಬಹಳ ಸಹಜವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಭಾರತವು ಸ್ವರ್ಣಿಮ ಯುಗದಿಂದ ಕಬ್ಬಿಣದ
ಯುಗದಲ್ಲಿ ಹೇಗೆ ಬಂದಿದೆ? ಇದನ್ನು ಭಾರತವಾಸಿಗಳಿಗೇ ತಿಳಿಸಿಕೊಡಬೇಕು. ಶಿಕ್ಷಕರಿಗೂ ಸಹ
ತಿಳಿಸಿಕೊಡಬೇಕು - ಅದು ಭೌತಿಕ ಜ್ಞಾನ, ಇದು ಆತ್ಮಿಕ ಜ್ಞಾನವಾಗಿದೆ. ಆ ಜ್ಞಾನವನ್ನು ಮನುಷ್ಯರು
ತಿಳಿಸುತ್ತಾರೆ, ಇದನ್ನು ಪರಮಪಿತ ಪರಮಾತ್ಮ ತಿಳಿಸುತ್ತಾರೆ. ಅವರು ಮನುಷ್ಯ ಸೃಷ್ಟಿಯ
ಬೀಜರೂಪನಾಗಿದ್ದಾರೆ, ಅವರ ಬಳಿ ಮನುಷ್ಯ ಸೃಷ್ಟಿಯ ಜ್ಞಾನವಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ ಕೊಳಕು
ಶರೀರದಿಂದ ಪೂರ್ಣ ನಷ್ಟಮೋಹಿಗಳಾಗಿ ಜ್ಞಾನದ ಅತೀಂದ್ರಿಯ ಸುಖದಲ್ಲಿರಬೇಕು. ಈ ಪ್ರಪಂಚವು
ಬದಲಾವಣೆಯಾಗಲಿದೆ, ನಾವು ನಮ್ಮ ಸುಖಧಾಮದಲ್ಲಿ ಹೋಗುತ್ತೇವೆ ಎಂಬುದು ಬುದ್ಧಿಯಲ್ಲಿರಲಿ.
2. ನಿಮಿತ್ತರಾಗಿ ಎಲ್ಲವನ್ನೂ ಸಂಭಾಲನೆ ಮಾಡುತ್ತಾ ತನ್ನ ಮಮತ್ವವನ್ನು ಅಳಿಸಿ ಹಾಕಬೇಕಾಗಿದೆ.
ಒಬ್ಬ ತಂದೆಯ ಜೊತೆ ಸತ್ಯ ಪ್ರೀತಿಯನ್ನಿಡಬೇಕು. ಕರ್ಮೇಂದ್ರಿಯಗಳಿಂದ ಎಂದೂ ಸಹ ವಿಕರ್ಮ ಮಾಡಬಾರದು.
ವರದಾನ:
ಸರ್ವ
ಕರ್ಮೇಂದ್ರಿಯಗಳ ಆಕರ್ಷಣೆಯಿಂದ ದೂರ ಕಮಲದ ಸಮಾನವಾಗಿರುವಂತಹ ದಿವ್ಯ ಬುದ್ಧಿ ಮತ್ತು ದಿವ್ಯ
ನೇತ್ರದ ಿ ಭವ.
ಬಾಪ್ದಾದಾರವರ ಮೂಲಕ
ಎಲ್ಲಾ ಬ್ರಾಹ್ಮಣ ಮಕ್ಕಳಿಗೆ ಜನ್ಮ ಪಡೆದೊಡನೆ ದಿವ್ಯ ಸಮರ್ಥ ಬುದ್ಧಿ ಮತ್ತು ದಿವ್ಯ ನೇತ್ರದ
ವರದಾನ ಸಿಕ್ಕಿದೆ. ಯಾವ ಮಕ್ಕಳು ತಮ್ಮ ಜನ್ಮದಿನದ ಈ ಉಡುಗೊರೆಯನ್ನು ಸದಾ ಯಥಾರ್ಥ ರೀತಿ
ಉಪಯೋಗಿಸುತ್ತಾರೆ ಅವರು ಕಮಲ ಪುಷ್ಪ ಸಮಾನ ಶ್ರೇಷ್ಠ ಸ್ಥಿತಿಯ ಆಸನದ ಮೇಲೆ ಸ್ಥಿತರಾಗಿರುತ್ತಾರೆ.
ಯಾವುದೇ ಪ್ರಕಾರದ ಆಕರ್ಷಣೆ- ದೇಹದ ಸಂಬಂಧ, ದೇಹದ ಪದಾರ್ಥ ಅಥವಾ ಯಾವುದೇ ಕರ್ಮೇಂದ್ರಿಯ ಸಹಾ
ಅವರನ್ನು ಆಕರ್ಷಣೆ ಮಾಡಲು ಸಾಧ್ಯವಿಲ್ಲ. ಅವರು ಸರ್ವ ಆಕರ್ಷಣೆಗಳಿಂದ ದೂರ ಸದಾ
ಹರ್ಷಿತರಾಗಿರುತ್ತಾರೆ. ಅವರು ಸ್ವಯಂ ಅನ್ನು ಕಲಿಯುಗಿ ಪತಿತ ವಿಕಾರಿ ಆಕರ್ಷಣೆಗಳಿಂದ ಬೇರೆ
ಆಗಿರುವಂತೆ ಅನುಭೂತಿ ಮಾಡುತ್ತಾರೆ.
ಸ್ಲೋಗನ್:
ಯಾವಾಗ ಎತ್ತ ಕಡೆಯೂ
ಆಸಕ್ತಿ ಇಲ್ಲದೇ ಹೋಗುತ್ತೆ ಆಗ ಶಕ್ತಿ ಸ್ವರೂಪ ಪ್ರತ್ಯಕ್ಷವಾಗುವುದು.
ಅವ್ಯಕ್ತ ಸ್ಥಿತಿಯ
ಅನುಭವ ಮಾಡವುದಕ್ಕಾಗಿ ವಿಶೇಷ ಹೋಮ್ ವರ್ಕ್ -
ಸೆಳೆತಗಳ ಹಗ್ಗಗಳನ್ನು ಚೆಕ್ ಮಾಡಿಕೊಳ್ಳಿ. ಬುದ್ಧಿ ಎಲ್ಲಾದರೂ ಕಚ್ಚಾ-ದಾರದಲ್ಲಿ ಸಿಕ್ಕಿ
ಹಾಕಿಕೊಂಡಿಲ್ಲ ತಾನೇ? ಯಾವುದೇ ಸೂಕ್ಷ್ಮ ಬಂಧನಗಳೂ ಸಹಾ ಇರಬಾರದು, ತಮ್ಮ ದೇಹದ ಮೇಲೂ ಸಹ ಆಕರ್ಷಣೆ
ಇರಬಾರದು - ಈ ರೀತಿ ಸ್ವತಂತ್ರ ಅರ್ಥಾತ್ ಸ್ಪಷ್ಟವಾಗಲು ಬೆಹದ್ದಿನ ವೈರಾಗಿಗಳಾಗಿ ಆಗ ಅವ್ಯಕ್ತ
ಸ್ಥಿತಿಯಲ್ಲಿ ಸ್ಥಿತರಾಗುವಿರಿ.