29.01.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯ
ಶ್ರೀಮತವು ನಿಮಗೆ 21 ಪೀಳಿಗೆಗಳು ಸುಖವನ್ನು ಕೊಡುತ್ತದೆ, ಇಂತಹ ಭಿನ್ನವಾದ ಮತವನ್ನು ತಂದೆಯನ್ನು
ಬಿಟ್ಟು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ ನೀವು ಶ್ರೀಮತದಂತೆ ನಡೆಯುತ್ತಾ ಇರಿ”
ಪ್ರಶ್ನೆ:
ತಮಗೆ ತಾವು ರಾಜತಿಲಕ ಕೊಟ್ಟುಕೊಳ್ಳುವುದರ ಸಹಜ ಪುರುಷಾರ್ಥವೇನು?
ಉತ್ತರ:
1. ತಮಗೆ ತಾವು ರಾಜತಿಲಕವನ್ನು ಕೊಟ್ಟುಕೊಳ್ಳಲು ತಂದೆಯಿಂದ ಯಾವ ಶಿಕ್ಷಣ ಸಿಗುತ್ತದೆಯೋ ಅದರ ಮೇಲೆ
ಚೆನ್ನಾಗಿ ನಡೆಯಿರಿ. ಇದರಲ್ಲಿ ಆಶೀರ್ವಾದ ಅಥವಾ ಕೃಪೆಯ ಮಾತಿಲ್ಲ. 2. ಫಾಲೋ ಫಾದರ್ ಆಗಬೇಕು.
ಅನ್ಯರನ್ನು ನೋಡಬಾರದು. ಮನ್ಮನಾಭವ - ಇದರಿಂದ ತನಗೆ ತಾನೇ ತಿಲಕವು ಸಿಗುತ್ತದೆ. ವಿದ್ಯೆ ಮತ್ತು
ನೆನಪಿನ ಯಾತ್ರೆಯಿಂದ ನೀವು ಭಿಕ್ಷುಕರಿಂದ ರಾಜಕುಮಾರರಾಗುತ್ತೀರಿ.
ಗೀತೆ:
ಓಂ ನಮಃ ಶಿವಾಯ.................
ಓಂ ಶಾಂತಿ.
ಯಾವಾಗ ತಂದೆ ಮತ್ತು ತಾತ ಓಂ ಶಾಂತಿ ಎಂದು ಹೇಳುತ್ತಾರೆಂದರೆ ಎರಡು ಬಾರಿ ಹೇಳಬಹುದು ಏಕೆಂದರೆ
ಇಬ್ಬರೂ ಒಬ್ಬರಲ್ಲಿಯೇ ಇದ್ದಾರೆ. ಒಬ್ಬರು ಅವ್ಯಕ್ತ, ಇನ್ನೊಬ್ಬರು ವ್ಯಕ್ತ - ಇಬ್ಬರೂ ಒಟ್ಟಿಗೆ
ಇದ್ದಾರೆ. ಇಬ್ಬರು ಜೊತೆ ಸೇರಿ ಮಾತನಾಡುತ್ತಾರೆ. ಬೇರೆ-ಬೇರೆಯೂ ಆಗಿರಬಹುದು, ಇದು ಒಂದು
ವಿಚಿತ್ರವಾಗಿದೆ. ಪರಮಪಿತ ಪರಮಾತ್ಮನು ಇವರ (ಬ್ರಹ್ಮಾ) ಶರೀರದಲ್ಲಿ ಕುಳಿತು ಜ್ಞಾನವನ್ನು
ಹೇಳುತ್ತಾರೆಂಬುದನ್ನು ಜಗತ್ತಿನಲ್ಲಿ ಯಾರೂ ಸಹ ತಿಳಿದುಕೊಂಡಿಲ್ಲ, ಈ ರೀತಿ ಎಲ್ಲಿಯೂ ಸಹ
ಬರೆಯಲ್ಪಟ್ಟಿಲ್ಲ. ತಂದೆಯು ಕಲ್ಪದ ಹಿಂದೆಯೂ ಸಹ ಹೇಳಿದ್ದರು, ಈಗಲೂ ಸಹ ಹೇಳುತ್ತಾರೆ - ನಾನು ಈ
ಸಾಧಾರಣ ತನುವಿನಲ್ಲಿ ಬಹಳ ಜನ್ಮಗಳ ಅಂತ್ಯದಲ್ಲಿ ಇವರಲ್ಲಿ ಪ್ರವೇಶ ಮಾಡುತ್ತೇನೆ, ಇವರ ಆಧಾರವನ್ನು
ತೆಗೆದುಕೊಳ್ಳುತ್ತೇನೆ. ಗೀತೆಯಲ್ಲಿ ಒಂದಲ್ಲಒಂದು ಇಂತಹ ಮಹಾವಾಕ್ಯಗಳು ಕೆಲವೊಂದು ಸತ್ಯವಾಗಿವೆ. ಈ
ಸತ್ಯವಾದ ಅಕ್ಷರವೆಂದರೆ - ನಾನು ಬಹಳ ಜನ್ಮದ ಅಂತ್ಯದಲ್ಲಿ ಪ್ರವೇಶ ಮಾಡುತ್ತೇನೆ ಯಾವಾಗ ಇವರದು
ವಾನಪ್ರಸ್ಥ ಅವಸ್ಥೆಯಲ್ಲಿರುವುದು, ಇವರ ಬಗ್ಗೆ ಹೇಳಿರುವುದು ಸತ್ಯವಾಗಿದೆ. ಸತ್ಯಯುಗದಲ್ಲಿ ಜನ್ಮವೂ
ಸಹ ಇವರದೇ ಮೊದಲಿರುತ್ತದೆ ನಂತರ ಕೊನೆಯಲ್ಲಿ ವಾನಪ್ರಸ್ಥ ಸ್ಥಿತಿಯಲ್ಲಿ ಇವರಲ್ಲಿಯೇ ತಂದೆಯು
ಪ್ರವೇಶ ಮಾಡುತ್ತಾರೆ. ನಾನು ಎಷ್ಟು ಪುನರ್ಜನ್ಮದಲ್ಲಿ ಬಂದೆನು ಎಂಬುದನ್ನು ತಿಳಿದಿಲ್ಲವೆಂದು ಇವರ
ಬಗ್ಗೆ ಹೇಳಲಾಗುತ್ತದೆ. ಶಾಸ್ತ್ರಗಳಲ್ಲಿ 84 ಲಕ್ಷ ಪುನರ್ಜನ್ಮವನ್ನು ಬರೆದಿದ್ದಾರೆ ಇದೆಲ್ಲವೂ
ಭಕ್ತಿಮಾರ್ಗವಾಗಿದೆ. ಇದಕ್ಕೆ ಭಕ್ತಿಕಾಂಡವೆಂದು ಕರೆಯಲಾಗುತ್ತದೆ. ಜ್ಞಾನಕಾಂಡವೇ ಬೇರೆಯಾಗಿದೆ,
ಭಕ್ತಿಕಾಂಡವೇ ಬೇರೆಯಾಗಿದೆ. ಭಕ್ತಿ ಮಾಡುತ್ತಾ-ಮಾಡುತ್ತಾ ಕೆಳಗಿಳಿಯುತ್ತಲೇ ಬರುತ್ತಾರೆ.
ಜ್ಞಾನವಂತೂ ಒಂದೇ ಬಾರಿ ಸಿಗುತ್ತದೆ, ಒಬ್ಬ ತಂದೆಯೇ ಒಂದೇ ಬಾರಿ ಸರ್ವರ ಸದ್ಗತಿಯನ್ನು ಮಾಡಲು
ಬರುತ್ತಾರೆ. ಒಂದೇ ಬಾರಿ ತಂದೆಯು ಬಂದು ಎಲ್ಲರ ಭವಿಷ್ಯ ಪ್ರಾಲಬ್ಧವನ್ನು ರೂಪಿಸುತ್ತಾರೆ. ನೀವು
ಭವಿಷ್ಯ ಹೊಸ ಪ್ರಪಂಚಕ್ಕಾಗಿ ಓದುತ್ತೀರಿ. ತಂದೆಯು ಹೊಸ ರಾಜಧಾನಿಯನ್ನು ಸ್ಥಾಪನೆ ಮಾಡಲು ಅಂದಾಗ
ಇದಕ್ಕೆ ರಾಜಯೋಗವೆಂದು ಕರೆಯಲಾಗುವುದು. ಇದರದು ಬಹಳ ಮಹತ್ವಿಕೆಯಿದೆ, ಭಾರತದ ಪ್ರಾಚೀನ
ರಾಜಯೋಗವನ್ನು ಯಾರಾದರೂ ಕಲಿಸಬೇಕು, ಆದರೆ ಸನ್ಯಾಸಿಗಳು ಹೊರಗಡೆ ಹೋಗಿ ನಾವು ಭಾರತದ ಪ್ರಾಚೀನ
ರಾಜಯೋಗವನ್ನು ಕಲಿಸಲು ಬಂದಿದ್ದೇವೆಂದು ಹೇಳುತ್ತಾರೆ. ಅವರೂ ಸಹ ನಾವು ಕಲಿಯಬೇಕೆಂದು
ಇಚ್ಛಿಸುತ್ತಾರೆ, ಏಕೆಂದರೆ ಈ ಯೋಗದಿಂದ ರಾಜಧಾನಿಯು ಸ್ಥಾಪನೆಯಾಗಿತ್ತು. ತಂದೆಯು ತಿಳಿಸುತ್ತಾರೆ
- ಯೋಗಬಲದಿಂದ ನೀವು ವಿಶ್ವಕ್ಕೆ ಮಾಲೀಕರಾಗುತ್ತೀರಿ. ತಂದೆಯು ಸ್ವರ್ಗವನ್ನು ಸ್ಥಾಪನೆ ಮಾಡುತ್ತಾರೆ
ಅದನ್ನು ಹೇಗೆ ಸ್ಥಾಪನೆ ಮಾಡುತ್ತಾರೆ? ಇದನ್ನು ತಿಳಿದುಕೊಂಡಿಲ್ಲ. ರಾಜಯೋಗವನ್ನು ಆತ್ಮೀಯ ತಂದೆಯೇ
ಕಲಿಸುತ್ತಾರೆ. ಶರೀರಧಾರಿ ಮನುಷ್ಯರು ಯಾರೂ ಕಲಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ
ಕಲಬೆರಕೆಯೂ ಬಹಳಷ್ಟಾಗಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಪತಿತರನ್ನು ಪಾವನರನ್ನಾಗಿ
ಮಾಡುವಂತಹವನಾಗಿದ್ದೇನೆ, ಅವಶ್ಯವಾಗಿ ಮತ್ತೆ ಪತಿತರನ್ನಾಗಿ ಮಾಡುವವನೂ ಸಹ ಯಾರೋ ಇರಬೇಕು. ಈಗ ನೀವೇ
ತೀರ್ಮಾನಿಸಿ - ಈ ರೀತಿಯೇ ತಾನೆ? ನಾನೇ ಬಂದು ಎಲ್ಲಾ ವೇದಶಾಸ್ತ್ರಗಳು ಮುಂತಾದುದರ ಸಾರವನ್ನು
ತಿಳಿಸಿಕೊಡುತ್ತೇನೆ. ಜ್ಞಾನದಿಂದ ನಿಮಗೆ 21 ಜನ್ಮಗಳ ಸುಖ ಸಿಗುತ್ತದೆ. ಭಕ್ತಿಮಾರ್ಗದಲ್ಲಿ
ಅಲ್ಪಕಾಲದ, ಕ್ಷಣಭಂಗುರ ಸುಖ ಸಿಗುತ್ತದೆ. ಆದರೆ ಇಲ್ಲಿ 21 ಪೀಳಿಗೆಯವರೆಗೂ ಸುಖವನ್ನು ತಂದೆಯು
ಕೊಡುತ್ತಾರೆ. ತಂದೆಯು ನಿಮಗೆ ಸದ್ಗತಿಯನ್ನು ಕೊಡಲು ಯಾವ ಶ್ರೀಮತವನ್ನು ಕೊಡುತ್ತಾರೆಯೋ ಅದು
ಎಲ್ಲದಕ್ಕಿಂತ ಭಿನ್ನವಾದುದಾಗಿದೆ. ತಂದೆಯು ಎಲ್ಲರ ಹೃದಯವನ್ನು ಗೆಲ್ಲುವವರಾಗಿದ್ದಾರೆ. ಅದು ಜಡ
ದಿಲ್ವಾಡಾ ಮಂದಿರ, ಇದು ಚೈತನ್ಯ ದಿಲ್ವಾಡಾ ಮಂದಿರವಾಗಿದೆ. ಯಥಾರ್ಥವಾದ ಚಟುವಟಿಕೆಯ ಚಿತ್ರಣವನ್ನು
ಮಾಡಲಾಗಿದೆ. ಈ ಸಮಯದಲ್ಲಿ ನಿಮ್ಮ ಚಟುವಟಿಕೆಯು ನಡೆಯುತ್ತಾ ಇದೆ. ಹೃದಯರಾಮ ತಂದೆಯು ಸಿಕ್ಕಿದ್ದಾರೆ,
ಸರ್ವರ ಸದ್ಗತಿಯನ್ನು ಮಾಡುವಂತಹ, ಸರ್ವರ ದುಃಖವನ್ನು ದೂರ ಮಾಡಿ ಡುವಂತಹವರಾಗಿದ್ದಾರೆ. ಎಷ್ಟೊಂದು
ಶ್ರೇಷ್ಠಾತಿ ಶ್ರೇಷ್ಠನೆಂದು ಗಾಯನ ಮಾಡಲಾಗಿದೆ. ಶ್ರೇಷ್ಠಾತಿ ಶ್ರೇಷ್ಠರಲ್ಲಿ ಭಗವಂತ ಶಿವನ
ಮಹಿಮೆಯಿದೆ. ಭಲೆ ಚಿತ್ರಗಳಲ್ಲಿ ಶಂಕರನ ಮುಂದೆ ಶಿವಲಿಂಗದ ಚಿತ್ರವನ್ನು ತೋರಿಸುತ್ತಾರೆ.
ವಾಸ್ತವದಲ್ಲಿ ದೇವತೆಗಳ ಮುಂದೆ ಶಿವನ ಚಿತ್ರವನ್ನು ತೋರಿಸುವುದು ನಿಷೇಧಿಸಲಾಗಿದೆ. ಅವರಾದರೂ
ಭಕ್ತಿಯನ್ನು ಮಾಡುವುದೇ ಇಲ್ಲ. ಭಕ್ತಿಯನ್ನು ದೇವತೆಗಳೂ ಮಾಡುವುದಿಲ್ಲ, ಸನ್ಯಾಸಿಗಳು ಮಾಡಲು
ಸಾಧ್ಯವಿದೆ. ಅವರು ಬಹ್ಮ್ಜ್ಞಾನಿ, ತತ್ವಜ್ಞಾನಿಗಳಾಗಿದ್ದಾರೆ. ಹೇಗೆ ಈ ಆಕಾಶ ತತ್ವವಿದೆಯೋ ಹಾಗೆಯೇ
ಅದು ಬಹ್ಮ್ತತ್ವವಾಗಿದೆ. ಸನ್ಯಾಸಿಗಳು ತಂದೆಯನ್ನು ನೆನಪು ಮಾಡುವುದಿಲ್ಲ ಮತ್ತೆ ಅವರಿಗೆ ಮಂತ್ರವೂ
ಸಹ ಸಿಗುವುದಿಲ್ಲ. ಈ ಮಹಾಮಂತ್ರವನ್ನು ತಂದೆಯೇ ಬಂದು ಸಂಗಮಯುಗದಲ್ಲಿ ಕೊಡುತ್ತಾರೆ. ಸರ್ವರ
ಸದ್ಗತಿದಾತ ತಂದೆಯೊಬ್ಬರೇ ಬಂದು ಮನ್ಮನಾಭವದ ಮಂತ್ರವನ್ನು ಕೊಡುತ್ತಾರೆ - ಮಕ್ಕಳೇ, ದೇಹ ಸಹಿತ
ದೇಹದ ಎಲ್ಲಾ ಧರ್ಮವನ್ನು ತ್ಯಾಗ ಮಾಡಿ ತನ್ನನ್ನು ಅಶರೀರಿ ಆತ್ಮನೆಂದು ತಿಳಿದು ನನ್ನನ್ನು ನೆನಪು
ಮಾಡಿ. ಇದು ಎಷ್ಟು ಸಹಜವಾಗಿ ತಿಳಿಸಿಕೊಡುತ್ತಾರೆ! ರಾವಣ ರಾಜ್ಯವಾಗಿರುವ ಕಾರಣ ತಾವೆಲ್ಲರೂ
ದೇಹಾಭಿಮಾನಿಗಳಾಗಿದ್ದೀರಿ, ಈಗ ತಂದೆಯು ಬಂದು ನಿಮ್ಮನ್ನು ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಾರೆ.
ತನ್ನನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿದ್ದೇ ಆದರೆ ಆತ್ಮನಲ್ಲಿ ಏನೆಲ್ಲಾ ತುಕ್ಕು
ಹಿಡಿದಿದೆಯೋ ಅದು ಬಿಟ್ಟು ಹೋಗುತ್ತದೆ. ಸತೋಪ್ರಧಾನದಿಂದ ಸತೋದಲ್ಲಿ ಬರುವುದರಿಂದ ಕಲೆಗಳು
ಕಡಿಮೆಯಾಗುತ್ತವೆ. ಚಿನ್ನದಲ್ಲಿಯೂ ಸಹ ಗುಣಮಟ್ಟವಿರುತ್ತದೆಯಲ್ಲವೆ. ಈಗಂತೂ ಕಲಿಯುಗದ ಅಂತ್ಯದಲ್ಲಿ
ಚಿನ್ನವು ನೋಡಲೂ ಸಹ ಕಾಣಿಸುವುದಿಲ್ಲ, ಸತ್ಯಯುಗದಲ್ಲಂತೂ ಚಿನ್ನದ ಮಹಲುಗಳಿರುತ್ತವೆ. ಎಷ್ಟೊಂದು
ಹಗಲು-ರಾತ್ರಿಯ ವ್ಯತ್ಯಾಸವಿದೆ! ಅದರ ಹೆಸರೇ ಸ್ವರ್ಣಿಮ ಯುಗ. ಅಲ್ಲಿ ಇಟ್ಟಿಗೆ-ಕಲ್ಲು
ಮುಂತಾದುವುಗಳ ಕೆಲಸವಾಗುವುದಿಲ್ಲ. ಕಟ್ಟಡಗಳನ್ನು ಕಟ್ಟುತ್ತಾರೆಂದರೂ ಅದರಲ್ಲಿಯೂ ಚಿನ್ನ-ಬೆಳ್ಳಿಯ
ವಿನಃ ಮತ್ತ್ಯಾವುದೇ ಇಲ್ಲಿನ ತರಹ ಕಚ್ಚಾ ವಸ್ತುಗಳಿರುವುದಿಲ್ಲ. ಇದೂ ಸಹ ನಾಟಕದಲ್ಲಿ
ಮಾಡಲ್ಪಟ್ಟಿದೆ. ಈ ಸಮಯದಲ್ಲಿ ವಿಜ್ಞಾನದಿಂದ ಅಭಿಮಾನವಿದೆ, ಸತ್ಯಯುಗದಲ್ಲಿ ಇದಕ್ಕೆ ಅಭಿಮಾನವೆಂದು
ಹೇಳುವುದಿಲ್ಲ. ಅಲ್ಲಂತೂ ವಿಜ್ಞಾನದಿಂದ ನಿಮಗೆ ಸುಖ ಸಿಗುತ್ತದೆ. ಇಲ್ಲಿ ಅಲ್ಪಕಾಲದ ಸುಖವಿದೆ,
ಮತ್ತೆ ಇದರಿಂದಲೂ ಬಹಳ ಬಾರಿ ದುಃಖವು ಸಿಗುತ್ತದೆ. ಬಾಂಬುಗಳು ಇತ್ಯಾದಿಗಳನ್ನು ವಿನಾಶಕ್ಕಾಗಿಯೇ
ತಯಾರು ಮಾಡುತ್ತಿರುತ್ತಾರೆ. ಬಾಂಬುಗಳನ್ನು ತಯಾರಿಸಲು ಅನ್ಯರಿಗೆ ನಿಷೇಧ ಮಾಡುತ್ತಾರೆ ಮತ್ತೆ ತಾವೇ
ತಯಾರಿಸುತ್ತಿರುತ್ತಾರೆ. ಈ ಬಾಂಬುಗಳಿಂದ ನಮ್ಮದೇ ಮೃತ್ಯುವಾಗುವುದು ಎಂಬುದೂ ಸಹ ತಿಳಿದಿದೆ ಆದರೂ
ಸಹ ತಯಾರು ಮಾಡುತ್ತಲೇ ಇರುತ್ತಾರೆ ಅಂದಮೇಲೆ ಬುದ್ಧಿಯು ಭ್ರಷ್ಟವಾಗಿದೆಯಲ್ಲವೆ. ಇದೆಲ್ಲವೂ
ನಾಟಕದಲ್ಲಿ ನಿಗಧಿಯಾಗಿದೆ. ಬಾಂಬುಗಳನ್ನು ತಯಾರು ಮಾಡದ ಹೊರತು ಅವರಿಗೆ ಇರುವುದಕ್ಕೇ ಆಗುವುದಿಲ್ಲ.
ಈ ಬಾಂಬುಗಳಿಂದ ನಮ್ಮದೇ ಮೃತ್ಯುವಾಗುವುದು ಆದರೆ ಯಾರೋ ಪ್ರೇರಣೆ ನೀಡುತ್ತಿದ್ದಾರೆ. ನಾವು ಮಾಡದ
ಹೊರತು ಇರಲು ಸಾಧ್ಯವಿಲ್ಲವೆಂದು ತಿಳಿಯುತ್ತಾರೆ. ಅವಶ್ಯವಾಗಿ ಅವರು ಮಾಡಲೇಬೇಕಾಗಿದೆ ಏಕೆಂದರೆ
ವಿನಾಶವೂ ಸಹ ನಾಟಕದಲ್ಲಿ ನಿಗದಿಯಾಗಿದೆ. ಭಲೆ ಎಷ್ಟಾದರೂ ಶಾಂತಿಯ ಪಾರಿತೋಷಕವನ್ನು ಕೊಡಲಿ. ಆದರೆ
ಸಂಪೂರ್ಣ ಶಾಂತಿಯನ್ನು ಸ್ಥಾಪನೆ ಮಾಡುವವರು ತಂದೆಯೊಬ್ಬರೇ ಆಗಿದ್ದಾರೆ. ಶಾಂತಿಯ ಸಾಗರ ತಂದೆಯು
ಶಾಂತಿ, ಸುಖ, ಪವಿತ್ರತೆಯ ಆಸ್ತಿಯನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ಬೇಹದ್ದಿನ ಸಂಪತ್ತಿದೆ.
ಅಲ್ಲಂತೂ ಹಾಲಿನ ನದಿಗಳು ಹರಿಯುತ್ತವೆ. ವಿಷ್ಣುವನ್ನು ಕ್ಷೀರಸಾಗರದಲ್ಲಿ ತೋರಿಸುತ್ತಾರೆ ಅಂದರೆ
ಇಲ್ಲಿ ಮತ್ತು ಅಲ್ಲಿಗೆ ಹೋಲಿಕೆ ಮಾಡಲಾಗುತ್ತದೆ. ಕ್ಷೀರಸಾಗರವೆಲ್ಲಿ, ಈ ವಿಷಯ ಸಾಗರವೆಲ್ಲಿ!
ಇದರಿಂದ ಮತ್ತೆ ಭಕ್ತಿಮಾರ್ಗದಲ್ಲಿ ನೀರಿನ ಕೊಳವನ್ನು ಮಾಡಿ ಅದರಲ್ಲಿ ವಿಷ್ಣುವಿನ ಕಲ್ಲಿನ
ಮೂರ್ತಿಯನ್ನು ಮಲಗಿಸುತ್ತಾರೆ. ಭಕ್ತಿಯಲ್ಲಿ ಎಷ್ಟೊಂದು ಖರ್ಚು ಮಾಡುತ್ತಾರೆ. ಸಮಯವೂ ವ್ಯರ್ಥ,
ಹಣವನ್ನೂ ವ್ಯರ್ಥ ಮಾಡುತ್ತಾರೆ. ದೇವಿಯರ ಮೂರ್ತಿಗಳನ್ನು ಎಷ್ಟೊಂದು ಖರ್ಚು ಮಾಡಿ ತಯಾರು
ಮಾಡುತ್ತಾರೆ ಮತ್ತೆ ಅದನ್ನು ಸಮುದ್ರದಲ್ಲಿ ಹಾಕುತ್ತಾರೆಂದರೆ ಹಣವು ವ್ಯರ್ಥವಾಯಿತಲ್ಲವೆ! ಇದು
ಗೊಂಬೆ ಪೂಜೆಯಾಗಿದೆ. ಯಾರೆಲ್ಲರ ಪೂಜೆ ಮಾಡುವರೋ ಅವರ ಪರಿಚಯವನ್ನೇ ತಿಳಿದುಕೊಂಡಿಲ್ಲ. ಈಗ ನೀವು
ಯಾರದೇ ಮಂದಿರದಲ್ಲಿ ಹೋದರೆ ನೀವು ಪ್ರತಿಯೊಬ್ಬರ ಕರ್ತವ್ಯವನ್ನು ಅರಿತುಕೊಂಡಿದ್ದೀರಿ. ಮಕ್ಕಳೇ,
ಎಲ್ಲಿಗೇ ಹೋಗಲು ತಂದೆಯು ನಿಷೇಧಿಸುವುದಿಲ್ಲ ಏಕೆಂದರೆ ಮೊದಲಂತೂ ತಿಳುವಳಿಕೆಯಿಲ್ಲದವರಾಗಿದ್ದಿರಿ.
ಈಗ ತಿಳುವಳಿಕೆಯುಳ್ಳವರಾಗಿ ಹೋಗುತ್ತೀರಿ. ನಾವು ಇವರ 84 ಜನ್ಮಗಳನ್ನು ಅರಿತುಕೊಂಡಿದ್ದೇವೆಂದು
ನೀವು ಹೇಳುತ್ತೀರಿ. ಭಾರತವಾಸಿಗಳಿಗಂತೂ ಕೃಷ್ಣನ ಜನ್ಮದ ಬಗ್ಗೆಯೂ ಸಹ ತಿಳಿದಿಲ್ಲ. ನಿಮ್ಮ
ಬುದ್ಧಿಯಲ್ಲಿ ಇದೆಲ್ಲಾ ಜ್ಞಾನವಿದೆ. ಜ್ಞಾನವು ಆದಾಯದ ಮೂಲಾಧಾರವಾಗಿದೆ. ವೇದಶಾಸ್ತ್ರ
ಮೊದಲಾದುವುಗಳಲ್ಲಿ ಯಾವುದೇ ಲಕ್ಷ್ಯವಿಲ್ಲ. ಶಾಲೆಯಲ್ಲಿ ಯಾವಾಗಲೂ ಗುರಿ-ಧ್ಯೇಯವಿರುತ್ತದೆ. ಈ
ವಿದ್ಯೆಯಿಂದ ನೀವು ಎಷ್ಟೊಂದು ಸಾಹುಕಾರರಾಗುತ್ತೀರಿ.
ಜ್ಞಾನದಿಂದಲೇ ಸದ್ಗತಿಯಾಗುತ್ತದೆ, ಈ ಜ್ಞಾನದಿಂದ ನೀವು ಸಂಪತ್ತಿವಂತರಾಗುತ್ತೀರಿ. ನೀವು ಯಾವುದೇ
ಮಂದಿರದಲ್ಲಿ ಹೋಗುತ್ತೀರೆಂದರೆ ಇದು ಯಾರ ನೆನಪಾರ್ಥವಾಗಿದೆ ಎಂಬುದನ್ನು ಬಹುಬೇಗನೆ
ತಿಳಿದುಕೊಳ್ಳುತ್ತೀರಿ. ಹೇಗೆ ದಿಲ್ವಾಡಾ ಮಂದಿರವಿದೆ, ಅದು ಜಡವಾಗಿದೆ, ಇದು ಚೈತನ್ಯವಾಗಿದೆ. ಹೇಗೆ
ಇಲ್ಲಿ ವೃಕ್ಷದಲ್ಲಿ ತೋರಿಸಿದ್ದಾರೆಯೋ ಅದೇ ರೀತಿ ಜಡ ಮಂದಿರವು ಮಾಡಲ್ಪಟ್ಟಿದೆ. ಕೆಳಗೆ
ತಪಸ್ಸಿನಲ್ಲಿ ಕುಳಿತಿದ್ದಾರೆ, ಮೇಲ್ಭಾಗದಲ್ಲಿ ಸ್ವರ್ಗವಿದೆ. ಬಹಳ ಖರ್ಚು ಮಾಡಿ ಕಟ್ಟಿಸಿದ್ದಾರೆ,
ಇಲ್ಲಂತೂ ಏನೂ ಇಲ್ಲ. ಭಾರತವು 100% ಸಾಹುಕಾರ, ಪಾವನವಾಗಿತ್ತು ಈಗ ಅದೇ ಭಾರತವು 100% ಬಡರಾಷ್ಟ್ರ
ಮತ್ತು ಪತಿತವಾಗಿದೆ, ಏಕೆದರೆ ಇಲ್ಲಿ ಎಲ್ಲರೂ ವಿಕಾರದಿಂದ ಜನ್ಮ ಪಡೆಯುತ್ತಾರೆ. ಸತ್ಯಯುಗದಲ್ಲಿ ಈ
ಕೊಳಕಿನ ಮಾತುಗಳೇ ಇರುವುದಿಲ್ಲ. ಮನುಷ್ಯರು ಸುಧಾರಣೆಯಾಗಲೆಂದು ಗರುಡ ಪುರಾಣದಲ್ಲಿ ಬಹಳ ರೋಚಕವಾದ
ಮಾತುಗಳನ್ನು ಬರೆದಿದ್ದಾರೆ. ಆದರೆ ನಾಟಕದಲ್ಲಿ ಮನುಷ್ಯರು ಸುಧಾರಣೆಯಾಗುವುದು ಇಲ್ಲವೇ ಇಲ್ಲ. ಈಗ
ಈಶ್ವರೀಯ ಸ್ಥಾಪನೆಯಾಗುತ್ತಿದೆ, ಈಶ್ವರನೇ ಸ್ವರ್ಗ ಸ್ಥಾಪನೆ ಮಾಡುತ್ತಾನಲ್ಲವೆ. ಅವರಿಗೆ ಪರಮಪಿತ
ಪರಮಾತ್ಮನೆಂದು ಕರೆಯಲಾಗುತ್ತದೆ. ತಂದೆಯು ತಿಳಿಸಿದ್ದಾರೆ - ಆ ಸೈನ್ಯಗಳು ಏನೆಲ್ಲಾ
ಹೊಡೆದಾಡುತ್ತಾರೆಯೋ ಅವರು ಎಲ್ಲವನ್ನೂ ರಾಜ-ರಾಣಿಗಾಗಿಯೇ ಮಾಡುತ್ತಾರೆ. ಇಲ್ಲಿ ನೀವು ತಮಗಾಗಿ
ಮಾಯೆಯ ಮೇಲೆ ಜಯ ಗಳಿಸುತ್ತೀರಿ. ನೀವು ಪ್ರತಿಯೊಬ್ಬರೂ ಭಾರತವನ್ನು ಸ್ವರ್ಗ ಮಾಡುವುದರಲ್ಲಿ ತಮ್ಮ
ತನು-ಮನ-ಧನವನ್ನು ಸಫಲ ಮಾಡಬೇಕಾಗುತ್ತದೆ. ಎಷ್ಟು ಮಾಡುವಿರೋ ಅಷ್ಟು ಶ್ರೇಷ್ಠ ಪದವಿಯನ್ನು
ಪಡೆಯುತ್ತೀರಿ. ಇಲ್ಲಿ ಏನೂ ಸಹ ಉಳಿಯುವುದಿಲ್ಲ. ಈಗಿನ ಸಮಯದ ಗಾಯನವೇ ಇದೆ - ಕೆಲವರದು ಮಣ್ಣು
ಪಾಲಾಯಿತು, ಕೆಲವರದು ಬೆಂಕಿಯಲ್ಲಿ ಹೋಯಿತು...... ಈಗ ತಂದೆಯು ನಿಮಗೆ ರಾಜ್ಯಭಾಗ್ಯವನ್ನು ಕೊಡಲು
ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ತನು-ಮನ-ಧನ ಎಲ್ಲವನ್ನೂ ಇದರಲ್ಲಿ ತೊಡಗಿಸಿ.
ಹೇಗೆ ಈ ಬ್ರಹ್ಮಾರವರೂ ಸಹ ಎಲ್ಲವನ್ನೂ ಅರ್ಪಣೆ ಮಾಡಿ ಬಿಟ್ಟರಲ್ಲವೆ. ಇವರಿಗೆ ಮಹಾದಾನಿ ಎಂದು
ಹೇಳಲಾಗುತ್ತದೆ. ವಿನಾಶಿ ಧನದ ದಾನ ಮಾಡುತ್ತೀರೆಂದರೆ ಅವಿನಾಶಿ ಧನದ ದಾನವನ್ನೂ ಮಾಡಬೇಕಾಗುತ್ತದೆ.
ಯಾರೆಷ್ಟಾದರೂ ದಾನ ಮಾಡಬಹುದು. ಪ್ರಸಿದ್ಧ ದಾನಿಗಳಾಗಿದ್ದರೆ ಇಂತಹವರು ಬಹಳ ದೊಡ್ಡ
ದಾನಿಯಾಗಿದ್ದರೆಂದು ಹೇಳುತ್ತಾರೆ. ಹೆಸರುವಾಸಿಯಂತೂ ಆಗುತ್ತಾರಲ್ಲವೆ! ಆದರೆ ಅವರು ಪರೋಕ್ಷವಾಗಿ
ಈಶ್ವರಾರ್ಥವಾಗಿ ಮಾಡುತ್ತಾರೆ. ರಾಜಧಾನಿಯು ಸ್ಥಾಪನೆಯಾಗುವುದಿಲ್ಲ, ಈಗಂತೂ ರಾಜಧಾನಿಯು
ಸ್ಥಾಪನೆಯಾಗುತ್ತದೆ. ಆದ್ದರಿಂದ ಸಂಪೂರ್ಣ ಮಹಾದಾನಿಗಳಾಗಬೇಕಾಗಿದೆ. ಭಕ್ತಿಮಾರ್ಗದಲ್ಲಿ ನಾವು
ಬಲಿಹಾರಿಯಾಗುತ್ತೇವೆಂದು ಹಾಡುತ್ತಾರೆ. ಇದರಲ್ಲಿ ಏನೂ ಖರ್ಚಿಲ್ಲ. ಅಲ್ಲಿ ಸರ್ಕಾರದಿಂದ ಎಷ್ಟೊಂದು
ಖರ್ಚಾಗುತ್ತದೆ, ಇಲ್ಲಿ ನೀವು ಏನೆಲ್ಲವನ್ನೂ ಮಾಡುವಿರೋ ತಮಗಾಗಿಯೇ ಮಾಡುವಿರಿ. 8ರ
ಮಾಲೆಯಲ್ಲಿಯಾದರೂ ಬನ್ನಿ, 108ರ ಮಾಲೆಯಲ್ಲಾದರೂ ಬನ್ನಿ, 16,108ರ ಮಾಲೆಯಲ್ಲಾದರೂ ಬನ್ನಿ - ಅದು
ನಿಮ್ಮ ಮೇಲೆ ಆಧಾರಿತವಾಗಿದೆ. ಪಾಸ್-ವಿತ್-ಆನರ್ ಆಗಬೇಕಾಗಿದೆ. ಈ ರೀತಿ ತಮ್ಮ
ಯೋಗಬಲವನ್ನಿಟ್ಟುಕೊಳ್ಳಿ ಅದರಿಂದ ಯಾವುದೇ ಶಿಕ್ಷೆಯನ್ನನುಭವಿಸದೇ ಕರ್ಮಾತೀತ ಸ್ಥಿತಿಯನ್ನು
ಪಡೆಯುವಂತಿರಬೇಕು.
ನೀವೆಲ್ಲರೂ ಯೋಧರಾಗಿದ್ದೀರಿ. ನಿಮ್ಮ ಯುದ್ಧವು ರಾವಣನೊಂದಿಗಿದೆ ಯಾವುದೇ ಮನುಷ್ಯರೊಂದಿಗೆ ಅಲ್ಲ.
ಅನುತ್ತೀರ್ಣರಾಗುವ ಕಾರಣ ತ್ರೇತಾಯುಗದಲ್ಲಿ 2 ಕಲೆಗಳು ಕಡಿಮೆಯಾಯಿತು. ತ್ರೇತಾಯುಗಕ್ಕೆ ಎರಡು
ಕಲೆಗಳು ಕಡಿಮೆಯ ಸ್ವರ್ಗವೆಂದು ಹೇಳಲಾಗುತ್ತದೆ. ತಂದೆಯನ್ನು ಪೂರ್ಣ ಅನುಸರಿಸುವ
ಪುರುಷಾರ್ಥವನ್ನಂತೂ ಮಾಡಬೇಕಲ್ಲವೆ. ಇದರಲ್ಲಿ ಮನಸ್ಸು-ಬುದ್ಧಿಯಿಂದ ಸಮರ್ಪಣೆಯಾಗಬೇಕಾಗುತ್ತದೆ.
ಬಾಬಾ, ಇದೆಲ್ಲವೂ ತಮ್ಮದಾಗಿದೆ ಎಂದು ಹೇಳಿದಾಗ ತಂದೆಯು ತಿಳಿಸುತ್ತಾರೆ - ಇದನ್ನು ಸೇವೆಯಲ್ಲಿ
ತೊಡಗಿಸಿ, ನಾನು ನಿಮಗೆ ಯಾವ ಮತವನ್ನು ಕೊಡುತ್ತೇನೆಯೋ ಆ ಕಾರ್ಯವನ್ನು ಮಾಡಿ ವಿಶ್ವ
ವಿದ್ಯಾಲಯಗಳನ್ನು ತೆರೆಯಿರಿ, ಸೇವಾಕೇಂದ್ರಗಳನ್ನು ತೆರೆಯಿರಿ. ಕೇವಲ ಈ ಸಂದೇಶವನ್ನು ಕೊಡಬೇಕಾಗಿದೆ
- ತಂದೆಯು ಬ್ರಹ್ಮಾರವರ ಮೂಲಕ ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು
ವಿನಾಶವಾಗುತ್ತವೆ ಮತ್ತು ಜೀವನ್ಮುಕ್ತಿಯು ಸಿಗುತ್ತದೆ. ಈಗ ಜೀವನ ಬಂಧನವಿದೆ ನಂತರ ನೀವು
ಜೀವನ್ಮುಕ್ತರಾಗುವಿರಿ. ನಾನು ಭಾರತದಲ್ಲಿಯೇ ಬರುತ್ತೇನೆಂದು ತಂದೆಯು ತಿಳಿಸುತ್ತಾರೆ. ಈ ನಾಟಕವು
ಅನಾದಿಯಾಗಿ ಮಾಡಲ್ಪಟ್ಟಿದೆ, ಯಾವಾಗ ಆಯಿತು, ಹೇಗೆ ಪೂರ್ಣವಾಗುವುದೆಂಬ ಪ್ರಶ್ನೆಯು
ಉದ್ಭವಿಸುವುದಿಲ್ಲ. ಈ ನಾಟಕವು ಅನಾದಿಯಾಗಿ ನಡೆಯುತ್ತಲೇ ಇರುತ್ತದೆ. ಆತ್ಮವು ಇಷ್ಟು ಚಿಕ್ಕ
ಬಿಂದುವಾಗಿದೆ ಅದರಲ್ಲಿ ಈ ಅವಿನಾಶಿ ಪಾತ್ರವು ನೊಂದಾವಣೆಯಾಗಿದೆ. ಎಷ್ಟು ಗುಹ್ಯ ಮಾತುಗಳಾಗಿವೆ.
ಆತ್ಮವು ನಕ್ಷತ್ರದಂತಿರುತ್ತದೆ. ಮಾತೆಯರೂ ಸಹ ಇಲ್ಲಿ ಮಸ್ತಕದಲ್ಲಿಯೇ
ಬಿಂದುವನ್ನಿಟ್ಟುಕೊಳ್ಳುತ್ತಾರೆ. ಈಗ ನೀವು ಮಕ್ಕಳು ಪುರುಷಾರ್ಥದಿಂದ ತಮಗೆ ತಾವು
ರಾಜತಿಲಕವನ್ನಿಟ್ಟುಕೊಳ್ಳುತ್ತಿದ್ದೀರಿ. ನೀವು ತಂದೆಯ ಶಿಕ್ಷಣದಂತೆ ಒಳ್ಳೆಯ ರೀತಿಯಲ್ಲಿ
ನಡೆಯುತ್ತೀರೆಂದರೆ ತಮಗೆ ರಾಜತಿಲಕವನ್ನಿಟ್ಟುಕೊಳ್ಳುತ್ತೀರಿ. ಇದರಲ್ಲಿ ಆಶೀರ್ವಾದ ಅಥವಾ ಕೃಪೆಯ
ಮಾತಿಲ್ಲ. ನೀವೇ ನಿಮ್ಮ ಪುರುಷಾರ್ಥದಿಂದ ರಾಜತಿಲಕವನ್ನಿಟ್ಟುಕೊಳ್ಳುತ್ತೀರಿ. ಮೂಲತಃ ಇದು ರಾಜ
ತಿಲಕವಾಗಿದೆ, ತಂದೆಯನ್ನು ಅನುಸರಿಸುವ ಪುರುಷಾರ್ಥ ಮಾಡಬೇಕಾಗಿದೆ. ಅನ್ಯರನ್ನು ನೋಡಬಾರದು, ಇದು
ಮನ್ಮನಾಭವ ಆಗಿದೆ, ಇದರಿಂದ ತನಗೆ ತಾನೇ ತಿಲಕವು ಸಿಗುತ್ತದೆ ತಂದೆಯಂತೂ ಕೊಡುವುದಿಲ್ಲ. ಇದು
ರಾಜಯೋಗವಾಗಿದೆ. ಇದರಿಂದ ನೀವು ಭಿಕಾರಿಗಳಿಂದ ರಾಜಕುಮಾರರಾಗುತ್ತೀರಿ. ಅಂದಮೇಲೆ ಎಷ್ಟು ಒಳ್ಳೆಯ
ಪುರುಷಾರ್ಥ ಮಾಡಬೇಕು ಮತ್ತು ಇವರನ್ನೂ ಸಹ ಅನುಸರಿಸಬೇಕಾಗಿದೆ. ಇದು ತಿಳುವಳಿಕೆಯ ಮಾತಾಗಿದೆಯಲ್ಲವೆ.
ವಿದ್ಯೆಯಿಂದ ಸಂಪಾದನೆಯಾಗುತ್ತದೆ. ಎಷ್ಟೆಷ್ಟು ಯೋಗವೋ ಅಷ್ಟು ಧಾರಣೆಯಾಗುವುದು. ಯೋಗದಲ್ಲಿಯೇ
ಪರಿಶ್ರಮವಿದೆ, ಆದ್ದರಿಂದ ಭಾರತದ ರಾಜಯೋಗದ ಗಾಯನವಿದೆ. ಬಾಕಿ ಗಂಗಾ ಸ್ನಾನವನ್ನು
ಮಾಡುತ್ತಾ-ಮಾಡುತ್ತಾ ಆಯಸ್ಸೆಲ್ಲವೂ ಕಳೆದರೂ ಸಹ ಪಾವನರಾಗಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿ
ಈಶ್ವರಾರ್ಥವಾಗಿ ಬಡವರಿಗೆ ದಾನ ಮಾಡುತ್ತಾರೆ. ಇಲ್ಲಿ ಸ್ವಯಂ ಈಶ್ವರನೇ ಬಡವರಿಗೇ ವಿಶ್ವದ
ರಾಜ್ಯಭಾಗ್ಯವನ್ನು ನೀಡುತ್ತಾರೆ. ಬಡವರ ಬಂಧುವಾಗಿದ್ದಾರಲ್ಲವೆ. ಯಾವ ಭಾರತವು 100%
ಸಾಹುಕಾರನಾಗಿತ್ತೋ ಅದೇ ಈ ಸಮಯದಲ್ಲಿ 100% ಬಡಭಾರತವಾಗಿದೆ. ಯಾವಾಗಲೂ ದಾನವನ್ನು ಬಡವರಿಗೇ
ಮಾಡಲಾಗುತ್ತದೆ. ತಂದೆಯು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ, ಇಂತಹ ತಂದೆಗೂ ಸಹ ನಿಂದನೆ
ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಯಾವಾಗ ಈ ರೀತಿ ನಿಂದನೆ ಮಾಡುವರೋ ಆಗ ನಾನು
ಬರಬೇಕಾಗುತ್ತದೆ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ಇವರು ತಂದೆಯೂ ಆಗಿದ್ದಾರೆ, ಶಿಕ್ಷಕರೂ
ಆಗಿದ್ದಾರೆ, ಸದ್ಗುರು ಅಕಾಲ್ ಎಂದು ಸಿಖ್ಖರು ಹೇಳುತ್ತಾರೆ. ಆದರೆ ಭಕ್ತಿಮಾರ್ಗದಲ್ಲಿ ಅನೇಕ
ಗುರುಗಳಿದ್ದಾರೆ. ಅಕಾಲಮೂರ್ತಿಗೆ ಕೇವಲ ಈ ಸಿಂಹಾಸನವು ಸಿಗುತ್ತದೆ. ನೀವು ಮಕ್ಕಳ ಸಿಂಹಾಸನವೂ ಕೂಡ
ಉಪಯೋಗಿಸುತ್ತಾರೆ. ತಿಳಿಸುತ್ತಾರೆ - ನಾನು ಇವರಲ್ಲಿ ಪ್ರವೇಶ ಮಾಡಿ ಎಲ್ಲರ ಕಲ್ಯಾಣ ಮಾಡುತ್ತೇನೆ,
ಈ ಸಮಯದಲ್ಲಿ ಇವರದು ಈ ಪಾತ್ರವಿದೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಇವನ್ನು ಹೊಸಬರು
ಯಾರೂ ತಿಳಿಯಲು ಸಾಧ್ಯವಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಅವಿನಾಶಿ
ಜ್ಞಾನ ಧನದ ದಾನ ಮಾಡಿ ಮಹಾದಾನಿಗಳಾಗಬೇಕಾಗಿದೆ. ಹೇಗೆ ಬ್ರಹ್ಮಾ ತಂದೆಯು ತನ್ನ ಸರ್ವಸ್ವವನ್ನೂ
ಇದರಲ್ಲಿ ತೊಡಗಿಸಿದರು, ಅದೇರೀತಿ ತಂದೆಯನ್ನು ಅನುಸರಿಸಿ ರಾಜಧಾನಿಯಲ್ಲಿ ಶ್ರೇಷ್ಠ ಪದವಿಯನ್ನು
ಪಡೆಯಬೇಕು.
2. ಶಿಕ್ಷೆಗಳಿಂದ ಪಾರಾಗಲು ಇಷ್ಟು ಯೋಗಬಲವನ್ನು ಜಮಾ ಮಾಡಿಕೊಳ್ಳಬೇಕಾಗಿದೆ ಅದರಿಂದ ಕರ್ಮಾತೀತ
ಸ್ಥಿತಿಯನ್ನು ಪಡೆಯಬೇಕಾಗಿದೆ. ಪಾಸ್-ವಿತ್-ಆನರ್ ಆಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ.
ಅನ್ಯರನ್ನು ನೋಡಬಾರದು.
ವರದಾನ:
ತಮ್ಮ ಪೂರ್ವಜ
ಸ್ವರೂಪದ ಸ್ಮೃತಿಯ ಮೂಲಕ ಸರ್ವ ಆತ್ಮಗಳಿಗೆ ಶಕ್ತಿಶಾಲಿಯನ್ನಾಗಿ ಮಾಡುವಂತಹ ಆಧಾರ, ಉದ್ದಾರಮೂರ್ತಿ
ಭವ.
ಈ ಸೃಷ್ಟಿ ವೃಕ್ಷದ ಮೂಲ
ಬುಡ, ಸರ್ವರ ಪೂರ್ವಜರು ತಾವು ಬ್ರಾಹ್ಮಣ ರಿಂದ ದೇವತೆಗಳಾಗಿರುವಿರಿ. ಪ್ರತಿ ಕರ್ಮದ ಆಧಾರ, ಕುಲ
ಮರ್ಯಾದೆಗಳ ಆಧಾರ, ರೀತಿ, ನೀತಿಯ ಆಧಾರ ತಾವು ಪೂರ್ವಜ ಆತ್ಮಗಳ ಆಧಾರ ಮತ್ತು ಉದ್ದಾರ
ಮೂರ್ತಿಗಳಾಗಿರುವಿರಿ. ತಾವು ಬುಡದಿಂದಲೇ ಸರ್ವ ಆತ್ಮಗಳಿಗೆ ಶ್ರೇಷ್ಠ ಸಂಕಲ್ಪಗಳ ಶಕ್ತಿ ಅಥವಾ
ಸರ್ವ ಶಕ್ತಿಗಳ ಪ್ರಾಪ್ತಿಯಾಗುವುದು. ತಮ್ಮನ್ನು ಎಲ್ಲರೂ ಫಾಲೋ ಮಾಡುತ್ತಿದ್ದಾರೆ ಆದ್ದರಿಂದ ಇಷ್ಟು
ದೊಡ್ಡ ಜವಾಬ್ದಾರಿ ಎಂದು ತಿಳಿಯುತ್ತಾ ಪ್ರತಿ ಸಂಕಲ್ಪ ಮತ್ತು ಕರ್ಮ ಮಾಡಿ ಏಕೆಂದರೆ ತಾವು ಪೂರ್ವಜ
ಆತ್ಮರ ಆಧಾರದ ಮೇಲೆಯೆ ಸೃಷ್ಟಿಯ ಸಮಯ ಮತ್ತು ಸ್ಥಿತಿಯು ಆಧಾರವಾಗಿದೆ.
ಸ್ಲೋಗನ್:
ಯಾರು ಸರ್ವ ಶಕ್ತಿಗಳ
ರೂಪದ ಕಿರಣಗಳು ನಾಲ್ಕಾರು ಕಡೆ ಹರಡುತ್ತದೆ ಅವರೇ ಮಾಸ್ಟರ್ ಜ್ಞಾನ ಸೂರ್ಯರಾಗಿದ್ದಾರೆ.
ಅವ್ಯಕ್ತ ಸ್ಥಿತಿಯ
ಅನುಭವ ಮಾಡವುದಕ್ಕಾಗಿ ವಿಶೇಷ ಹೋಮ್ ವರ್ಕ್ –
ಮಧ್ಯ-ಮಧ್ಯದಲ್ಲಿ ಸಂಕಲ್ಪಗಳ ಟ್ರಾಫಿಕ್ ಅನ್ನು ಸ್ಟಾಪ್ ಮಾಡುವ ಅಭ್ಯಾಸ ಮಾಡಿ. ಒಂದು ನಿಮಿಷಕ್ಕಾಗಿ
ಸಂಕಲ್ಪಗಳನ್ನು, ಹಾಗೂ ಶರೀರದ ಮುಖಾಂತರ ನಡೆಯುತ್ತಿರುವ ಕರ್ಮವನ್ನು ನಿಲ್ಲಿಸಿ ಬಿಂದು ರೂಪದ
ಪ್ರಾಕ್ಟೀಸ್ ಮಾಡಿ. ಈ ಒಂದು ಸೆಕೆಂಡಿನ ಅನುಭವ ಇಡೀ ದಿನ ಅವ್ಯಕ್ತ ಸ್ಥಿತಿ ಮಾಡಿಕೊಳ್ಳಲು ಸಹಾಯ
ಮಾಡುತ್ತದೆ.