18.01.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮ್ಮ
ಚಲನೆ ಬಹಳ ರಾಯಲ್ ಆಗಿರಬೇಕಿದೆ, ನೀವು ದೇವತೆಗಳಾಗುತ್ತಿರುವಿರಿ. ಆದ್ದರಿಂದ ಲಕ್ಷ್ಯ ಮತ್ತು
ಲಕ್ಷಣ, ಕಥನಿ(ಹೇಳುವುದು) ಮತ್ತು ಕರನಿ(ಮಾಡುವುದು) ಸಮಾನ ಮಾಡಿಕೊಳ್ಳಿ”
ಗೀತೆ:
ತುಮೆಃ ಪಾಕೆ ಹಮ್ನೆ ಜಹಾನ್ ಪಾಲಿಯ ಹೈ.....
ಓಂ ಶಾಂತಿ.
ಮಧುರಾತಿ ಮಧುರ ಆತ್ಮೀಯ ಮಕ್ಕಳು ಗೀತೆಯನ್ನು ಕೇಳಿದಿರಲ್ಲ. ಈಗಂತೂ ಸ್ವಲ್ಪ ಮಕ್ಕಳಿದ್ದಾರೆ ಆಮೇಲೆ
ಅನೇಕ ಮಕ್ಕಳಾಗುವರು. ಪ್ರಜಾಪಿತ ಬ್ರಹ್ಮಾರನ್ನು ಎಲ್ಲರೂ ತಿಳಿಯಬೇಕಲ್ಲವೆ. ಎಲ್ಲಾ ಧರ್ಮದವರೂ
ಒಪ್ಪುತ್ತಾರೆ. ಬಾಬಾ ತಿಳಿಸಿದ್ದಾರೆ ಅಲ್ಲಿ ಲೌಕಿಕ ತಂದೆಯೂ ಸಹಾ ಹದ್ಧಿನ ಬ್ರಹ್ಮಾ ಆಗಿದ್ದಾರೆ.
ಅವರ ಅಡ್ಡ ಹೆಸರಿನಿಂದ ವಂಶಾವಳಿ ನಡೆಯುತ್ತದೆ. ಇದಂತೂ ಬೇಹದ್ಧಿನದಾಗಿದೆ. ಹೆಸರೇ ಆಗಿದೆ
ಪ್ರಜಾಪಿತ ಬ್ರಹ್ಮಾ. ಅಲ್ಲಿ ಹದ್ದಿನ ಬ್ರಹ್ಮಾ ಪ್ರಜೆಯನ್ನು ರಚಿಸುತ್ತಾರೆ, ಸೀಮಿತ. ಅಲ್ಲಿ
ಎರಡೋ-ನಾಲ್ಕೋ ರಚಿಸುತ್ತಾರೆ, ಕೆಲವರು ರಚಿಸುವುದೇ ಇಲ್ಲ. ಇವರಿಗಂತೂ ಇದನ್ನು ಹೇಳಲಾಗುವುದಿಲ್ಲ
ಸಂತಾನ ಇಲ್ಲ ಎಂದು. ಇವರ ಸಂತಾನವಂತೂ ಇಡೀ ಪ್ರಪಂಚವಾಗಿದೆ. ಬೇಹದ್ಧಿನ ಬಾಪ್ದಾದಾ ಇಬ್ಬರಿಗೂ
ಮಧುರಾತಿ-ಮಧುರ ಮಕ್ಕಳಲ್ಲಿ ಬಹಳ ಆತ್ಮೀಯ ಪ್ರೀತಿಯಿದೆ. ಮಕ್ಕಳಿಗೆ ಎಷ್ಟು ಪ್ರೀತಿಯಿಂದ
ಓದಿಸುತ್ತಾರೆ ಮತ್ತು ಏನಾಗಿರುವವರನ್ನು ಏನಾಗಿ ಮಾಡುತ್ತಾರೆ! ಅದಕ್ಕಾಗಿ ಮಕ್ಕಳಿಗೆ ಇಷ್ಟು ಖುಶಿಯ
ಪಾರ ಏರಿರಬೇಕು. ಖುಶಿಯ ಪಾರ ಯಾವಾಗ ಏರಿರುವುದೆಂದರೆ ಯಾವಾಗ ತಂದೆಯನ್ನು ನಿರಂತರವಾಗಿ ನೆನಪು
ಮಾಡುತ್ತಿರುವಿರಿ ಆಗ. ತಂದೆ ಕಲ್ಪ-ಕಲ್ಪ ಬಹಳ ಪ್ರೀತಿಯಿಂದ ಮಕ್ಕಳನ್ನು ಪಾವನರನ್ನಾಗಿ ಮಾಡುವ ಸೇವೆ
ಮಾಡುತ್ತಾರೆ. 5 ತತ್ವಗಳ ಸಹಿತ ಎಲ್ಲರನ್ನೂ ಪಾವನರನ್ನಾಗಿ ಮಾಡುತ್ತಾರೆ. ಕವಡೆಯಿಂದ ವಜ್ರ ಸಮಾನ
ಮಾಡುತ್ತಾರೆ. ಎಷ್ಟು ದೊಡ್ಡ ಬೇಹದ್ಧಿನ ಸೇವೆಯಾಗಿದೆ. ತಂದೆ ಮಕ್ಕಳಿಗೆ ಬಹಳ ಪ್ರೀತಿಯಿಂದ
ಶಿಕ್ಷಣವನ್ನೂ ಕೊಡುತ್ತಿರುತ್ತಾರೆ ಏಕೆಂದರೆ ಮಕ್ಕಳನ್ನು ಸುಧಾರಣೆ ಮಾಡುವುದು ತಂದೆ ಅಥವಾ ಟೀಚರ್
ನ ಕೆಲಸವಾಗಿದೆ. ತಂದೆಯ ಶ್ರೀಮತದಿಂದಲೆ ನೀವು ಶ್ರೇಷ್ಠರಾಗುವಿರಿ ಇದೂ ಸಹಾ ಮಕ್ಕಳು ಚಾರ್ಟ್ನಲ್ಲಿ
ನೋಡಬೇಕಾಗುತ್ತದೆ ನಾನು ಶ್ರೀಮತದಂತೆ ನಡೆಯುತ್ತಿರುವೆನಾ ಅಥವಾ ಮನ್ಮತದಂತೆಯೊ? ಶ್ರೀಮತದಿಂದಲೇ
ನೀವು ಆಕ್ಯುರೇಟ್ ಆಗುವಿರಿ. ಎಷ್ಟು ತಂದೆಯ ಜೊತೆ ಪ್ರೀತಿ ಬುದ್ಧಿ ಇರುವುದು. ಅಷ್ಟು ಗುಪ್ತ
ಖುಷಿಯಿಂದ ಸಂಪನ್ನರಾಗಿರುವಿರಿ. ತಮ್ಮ ಹೃದಯದಿಂದ ಕೇಳಿಕೊಳ್ಳಿ, ನನಲ್ಲಿ ಅಷ್ಟು ಕಾಪಾರಿ ಖುಷಿ
ಇದೆಯಾ? ಅವ್ಯಭಿಚಾರಿ ನೆನಪಿದೆಯಾ? ಯಾವುದೇ ಇಚ್ಛೆಗಳಿಲ್ಲತಾನೆ? ಒಬ್ಬ ತಂದೆಯ ನೆನಪಿದೆಯಾ?
ಸ್ವದರ್ಶನ ಚಕ್ರ ತಿರುಗುತ್ತಿರಲಿ ಆಗ ತನುವಿನಿಂದ ಪ್ರಾಣ ಹೋಗಬೇಕು. ಒಬ್ಬ ಶಿವಬಾಬಾನ ಹೊರತು ಬೇರೆ
ಇನ್ನೊಬ್ಬರು ಇಲ್ಲ. ಇದೇ ಅಂತಿಮ ಮಂತ್ರವಾಗಿದೆ.
ತಂದೆ ಆತ್ಮೀಯ ಮಕ್ಕಳೊಂದಿಗ ಕೇಳುತ್ತಾರೆ ಮಧುರ ಮಕ್ಕಳೇ, ಯಾವಾಗ ಬಾಪ್ದಾದಾರವರನ್ನು ಎದುರಿಗೆ
ನೋಡಿದಿರಿ ಎಂದಾಗ ಬುದ್ಧಿಯಲ್ಲಿ ಬರುವುದೆ ನಮ್ಮ ಬಾಬಾ, ತಂದೆಯೂ ಆಗಿದ್ದಾರೆ, ಶಿಕ್ಷಕರು
ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ತಂದೆ ನಮ್ಮನ್ನು ಈ ಹಳೆಯ ಪ್ರಪಂಚದಿಂದ ಹೊಸ ಪ್ರಪಂಚಕ್ಕೆ
ಕರೆದುಕೊಂಡು ಹೋಗುತ್ತಾರೆ. ಈ ಹಳೆಯ ಪ್ರಪಂಚವಂತು ಈಗ ಸಮಾಪ್ತಿಯಾಗುವುದೆಂದರೆ ಆಗುವುದು. ಇದಂತು
ಯಾವುದೇ ಕೆಲಸಕ್ಕೆ ಬರುವುದಿಲ್ಲ್ಲ. ತಂದೆ ಕಲ್ಪ-ಕಲ್ಪ ಹೊಸ ಪ್ರಪಂಚ ಮಾಡುತ್ತಾರೆ. ನಾವು
ಕಲ್ಪ-ಕಲ್ಪ ನರನಿಂದ ನಾರಾಯಣ ಆಗುತ್ತೇವೆ. ಮಕ್ಕಳು ಈ ಸ್ಮರಣೆ ಮಾಡುತ್ತಾ ಎಷ್ಟು
ಉಲ್ಲಾಸದಿಂದಿರಬೇಕು. ಮಕ್ಕಳೇ ಸಮಯ ಬಹಳ ಕಡಿಮೆಯಿದೆ. ಇಂದು ಏನಾಗಿದೆ ನಾಳೆ ಏನಾಗುವುದು. ಇಂದು
ಮತ್ತು ನಾಳೆಯ ಆಟವಾಗಿದೆ, ಆದ್ದರಿಂದ ಮಕ್ಕಳು ಅಜಾಗರೂಕತೆ ಮಾಡಬಾರದಾಗಿದೆ. ನೀವು ಮಕ್ಕಳ ಚಲನೆ
ಬಹಳ ರಾಯಲ್ ಆಗಿರಬೇಕಿದೆ. ನಿಮಗೆ ನೀವೇ ನೋಡಿಕೊಳ್ಳಬೇಕಿದೆ, ದೇವತೆಗಳಂತೆ ನನ್ನ ಚಲನೆ ಇದೆಯಾ?
ದೇವತೆಗಳತರಹ ಬುದ್ಧಿ ಇದೆಯಾ? ಯಾರಿಗೆ ಲಕ್ಷ್ಯ ಇದೆ ಅವರು ಆಗುತ್ತಲೂ ಇದ್ದಾರೆಯೋ ಅಥವಾ ಕೇವಲ
ಹೇಳುತ್ತಿರುವರೋ? ಏನು ಜ್ಞಾನ ಸಿಕ್ಕಿದೆ ಅದರಲ್ಲಿ ಮಸ್ತಾಗಿರಬೇಕು. ಎಷ್ಟು ಅಂತರ್ಮುಖಿಗಳಾಗಿ ಈ
ಮಾತುಗಳ ಬಗ್ಗೆ ವಿಚಾರ ಮಾಡುತ್ತಿರುವಿರಿ ಅಷ್ಟೂ ಬಹಳ ಖುಷಿ ಇರುವುದು. ಇದೂ ಸಹ ನೀವು ಮಕ್ಕಳು
ತಿಳಿದುಕೊಂಡಿರುವಿರಿ ಈ ಪ್ರಪಂಚದಿಂದ ಆ ಪ್ರಪಂಚಕ್ಕೆ ಹೋಗಲು ಬಾಕಿ ಸ್ವಲ್ಪವೇ ಸಮಯ ಉಳಿದಿದೆ.
ಯಾವಾಗ ಆ ಪ್ರಪಂಚವನ್ನು ಬಿಟ್ಟಿರುವಿರಿ ಮತ್ತೆ ಹಿಂದೆ ಏಕೆ ನೋಡುವಿರಿ! ಬುದ್ಧಿಯೋಗ ಆ ಕಡೆ ಏಕೆ
ಹೋಗುತ್ತದೆ? ಇದನ್ನೂ ಸಹಾ ಬುದ್ಧಿಗೆ ಕೆಲಸ ಕೊಡಬೇಕು. ಯಾವಾಗ ಪಾರಾಗಿ ಬಂದಿರಿ ಮತ್ತೆ ಬುದ್ಧಿ ಏಕೆ
ಆ ಕಡೆ ಹೋಗುತ್ತದೆ? ಕಳೆದು ಹೋದ ಮಾತುಗಳ ಬಗ್ಗೆ ಚಿಂತೆ ಮಾಡಬೇಡಿ. ಈ ಹಳೆಯ ಪ್ರಪಂಚದ ಜೊತೆ ಯಾವುದೇ
ಆಸೆಗಳೂ ಸಹಾ ಇರಬಾರದು. ಈಗ ಒಂದೇ ಶ್ರೇಷ್ಠ ಆಸೆ ಇಟ್ಟುಕೊಳ್ಳಬೇಕು - ನಾವಂತೂ ಸುಖಧಾಮಕ್ಕೆ
ಹೋಗುತ್ತಿದ್ದೇವೆ. ಎಲ್ಲೂ ಸಹ ನಿಂತುಕೊಳ್ಳಬಾರದು, ನೋಡಬಾರದು. ಮುಂದುವರೆಯುತ್ತಾ ಹೋಗಬೇಕು. ಒಂದೇ
ಕಡೆ ನೋಡುತ್ತಿರಿ ಆಗ ಮಾತ್ರ ಅಚಲ-ಅಡೋಲ ಸ್ಥಿರ ಅವಸ್ಥೆ ಇರುವುದು. ಸಮಯ ಬಹಳ ನಾಜೂಕಾಗುತ್ತಾ
ಹೋಗುತ್ತಿದೆ, ಈ ಹಳೆಯ ಪ್ರಪಂಚದ ಪರಿಸ್ಥಿತಿಗಳು ಬಹಳ ಕೆಡುತ್ತಲೇ ಹೋಗುತ್ತವೆ. ಇದರ ಜೊತೆ
ನಿಮ್ಮದೇನೂ ಸಂಬಂಧವಿಲ್ಲ. ನಿಮ್ಮ ಸಂಬಂಧವೇನಿದ್ದರೂ ಹೊಸ ಪ್ರಪಂಚದೊಂದಿಗೆ, ಯಾವುದರ ಸ್ಥಾಪನೆ ಈಗ
ಆಗುತ್ತಿದೆ. ತಂದೆ ತಿಳಿಸಿದ್ದಾರೆ, ಈಗ 84ರ ಚಕ್ರ ಪೂರ್ತಿಯಾಯಿತು. ಈಗ ಈ ಪ್ರಪಂಚ
ಸಮಾಪ್ತಿಯಾಗಲೇಬೇಕು, ಇದರ ಸ್ಥಿತಿ ಬಹಳ ಗಂಭೀರವಾಗಿದೆ. ಈ ಸಮಯದಲ್ಲಿ ಎಲ್ಲಕ್ಕಿಂತ ಹೆಚ್ಚು ಕೋಪ
ಪ್ರಕೃತಿಗೆ ಬರುತ್ತದೆ ಆದ್ದರಿಂದ ಎಲ್ಲವನ್ನೂ ಸಮಾಪ್ತಿ ಮಾಡಿ ಬಿಡುತ್ತೆ. ಈಗ ನೀವು ತಿಳಿದಿರುವಿರಿ,
ಈ ಪ್ರಕೃತಿ ತನ್ನ ಕೋಪವನ್ನು ಬಹಳ ಜೋರಾಗಿ ತೋರಿಸುತ್ತಿದೆ - ಇಡೀ ಹಳೆಯ ಪ್ರಪಂಚವನ್ನು ಮುಳುಗಿಸಿ
ಬಿಡುವುದು. ಪ್ರವಾಹವಾಗುವುದು. ಬೆಂಕಿ ಹತ್ತುವುದು, ಮನುಷ್ಯ ಹಸಿವಿನಿಂದ ಸಾಯುತ್ತಾನೆ.
ಭೂಕಂಪದಿಂದ ಮನೆಗಳು ಉರುಳಿ ಬೀಳುತ್ತವೆ. ಈ ಎಲ್ಲಾ ಪರಿಸ್ಥಿತಿಗಳು ಇಡಿ ಪ್ರಪಂಚಕ್ಕೇ ಬರುವುದಿದೆ.
ಅನೇಕ ಪ್ರಕಾರದಿಂದ ಸಾವು ಸಂಭವಿಸುತ್ತದೆ. ಗ್ಯಾಸ್ ನ ಇಂತಿಂತಹ ಬಾಂಬ್ಸ್ ಹಾಕುತ್ತಾರೆ - ಅದರ
ದುರ್ಗಂಧದಿಂದಲೇ ಮನುಷ್ಯ ಸಾಯಬೇಕು. ಈ ಎಲ್ಲಾ ಡ್ರಾಮಾ ಪ್ಲಾನ್ ಮಾಡಲ್ಪಟ್ಟಿದೆ. ಇದರಲ್ಲಿ ದೊಷ
ಯಾರದೂ ಇಲ್ಲ. ವಿನಾಶವಂತೂ ಆಗಲೆಬೇಕಿದೆ. ಆದ್ದರಿಂದ ನೀವು ಈ ಹಳೆಯ ಪ್ರಪಂಚದಿಂದ ಬುದ್ಧಿಯ ಯೋಗ
ತೆಗೆದು ಬಿಡಬೇಕು. ಈಗ ನೀವು ಹೇಳುವಿರಿ ವ್ಹಾ ಸದ್ಗುರು.... ಯಾರು ನಮಗೆ ಈ ರಸ್ತೆಯನ್ನು
ತೋರಿಸಿದರು. ನಮ್ಮ ಸತ್ಯ-ಸತ್ಯ ಗುರು ಬಾಬಾ ಒಬ್ಬರೇ ಆಗಿದ್ದಾರೆ, ಅವರ ಹೆಸರು ಭಕ್ತಿಯಲ್ಲಿಯೂ ಸಹ
ನಡೆಯುತ್ತಾ ಬರುವುದು. ಅದರದೇ ವ್ಹಾ-ವ್ಹಾ ಎಂದು ಗಾಯನ ಮಾಡಲಾಗುವುದು. ನೀವು ಮಕ್ಕಳು ಹೇಳುವಿರಿ -
ವ್ಹಾ ಸದ್ಗುರು ವ್ಹಾ! ವ್ಹಾ ಅದೃಷ್ಟಾ ವ್ಹಾ! ವ್ಹಾ ಡ್ರಾಮಾ ವ್ಹಾ! ತಂದೆಯ ಜ್ಞಾನದಿಂದ ನಮಗೆ
ಸದ್ಗತಿ ಸಿಗುತ್ತಿದೆ.
ನೀವು ಮಕ್ಕಳು ವಿಶ್ವದಲ್ಲಿ ಶಾಂತಿಯನ್ನು ಸ್ಥಾಪನೆ ಮಾಡಲು ನಿಮಿತ್ತರಾಗಿರುವಿರಿ. ಆದ್ದರಿಂದ ನೀವು
ಈ ಸಮಾಚಾರವನ್ನು ಬಹಳ ಖುಷಿಯಿಂದ ಎಲ್ಲರಿಗೂ ಹೇಳಿ ಈಗ ಹೊಸ ಭಾರತ, ಹೊಸ ಪ್ರಪಂಚ ಯಾವುದರಲ್ಲಿ
ಲಕ್ಷ್ಮಿ-ನಾರಾಯಣರ ರಾಜ್ಯ ಇತ್ತು ಅದು ಪುನಃ ಸ್ಥಾಪನೆಯಾಗುತ್ತಿದೆ. ಈ ದುಃಖಧಾಮ ಬದಲಾಗಿ ಸುಖಧಾಮ
ಮಾಡಬೇಕಿದೆ. ಒಳಗೆ ಖುಷಿ ಇರಬೇಕಾಗಿದೆ ನಾವು ಸುಖಧಾಮದ ಮಾಲೀಕರಾಗುತ್ತಿದ್ದೇವೆ. ಅಲ್ಲಿ ಯಾರೂ ಈ
ರೀತಿ ಕೇಳುವುದಿಲ್ಲ ನೀವು ರಾಜಿ-ಖುಷಿಯಾಗಿರುವಿರಾ? ಆರೋಗ್ಯ ಸರಿಯಾಗಿದೆಯಾ? ಇದನ್ನು ಈ
ಪ್ರಪಂಚದವರನ್ನು ಕೇಳಲಾಗುತ್ತೆ ಏಕೆಂದರೆ ಇದು ದುಃಖದ ಪ್ರಪಂಚವಾಗಿದೆ. ನೀವು ಮಕ್ಕಳನ್ನೂ ಸಹಾ
ಇದನ್ನು ಯಾರೂ ಕೇಳಲು ಸಾಧ್ಯವಿಲ್ಲ. ನೀವು ಹೇಳುವಿರಿ ನಾವು ಈಶ್ವರನ ಮಕ್ಕಳು, ನೀವು ನಮ್ಮ ಬಳಿ
ಖುಷಿ ಆರೋಗ್ಯದ ಬಗ್ಗೆ ಏಕೆ ಕೇಳುವಿರಿ! ನಾವಂತೂ ಸದಾ ರಾಜಿ-ಖುಷಿಯಾಗಿದ್ದೇವೆ. ಸ್ವರ್ಗಕ್ಕಿಂತಲೂ
ಇಲ್ಲಿ ಹೆಚ್ಚು ಖುಷಿ ಇದೆ, ಏಕೆಂದರೆ ಸ್ವರ್ಗವನ್ನು ಸ್ಥಾಪನೆ ಮಾಡುವ ತಂದೆ ಸಿಕ್ಕಿದ್ದಾರೆ
ಎಂದಮೇಲೆ ಎಲ್ಲವೂ ಸಿಕ್ಕಿದೆ. ಪಾರಬ್ರಹ್ಮನಲ್ಲಿರುವ ತಂದೆಯ ಆರೈಕೆ ಪಡೆಯುವ ಇಚ್ಛೆ ಇತ್ತು ಈಗ ಆ
ತಂದೆಯೇ ಸಿಕ್ಕಿ ಬಿಟ್ಟಿದ್ದಾರೆ. ಬಾಕಿ ಯಾರ ಆರೈಕೆ ಬೇಕು! ಈ ನಶೆ ಸದಾ ಇರಬೇಕಿದೆ. ಬಹಳ ರಾಯಲ್,
ಮಧುರ ಆಗಬೇಕಿದೆ. ತಮ್ಮ ಅದೃಷ್ಠವನ್ನು ಶ್ರೇಷ್ಠ ಮಾಡಿಕೊಳ್ಳಲು ಇದೇ ಸಮಯ. ಪದಮಾಪಧಮ್ಪತಿಯಾಗಲು
ಮುಖ್ಯ ಸಾಧನವಾಗಿದೆ - ಹೆಜ್ಜೆ-ಹೆಜ್ಜೆಯಲ್ಲಿ ಬಹಳ ಎಚ್ಚರಿಕೆಯಿಂದ ನಡೆಯಬೇಕು. ಅಂತರ್ಮುಖಿಯಾಗಬೇಕು.
ಇದು ಸದಾ ಗಮನವಿರಬೇಕು - “ಎಂತಹ ಕರ್ಮ ನಾವು ಮಾಡುತ್ತೇವೆ ನಮ್ಮನ್ನು ನೋಡಿ ಬೇರೆಯವರು ಮಾಡುತ್ತಾರೆ”.
ದೇಹ ಅಹಂಕಾರಿ ಇತ್ಯಾದಿ ವಿಕಾರಗಳ ಬೀಜವಂತೂ ಅರ್ಧ ಕಲ್ಪದಿಂದ ಬಿತ್ತಿರುವುದಾಗಿದೆ. ಇಡೀ
ಪ್ರಪಂಚದಲ್ಲಿ ಈ ಬೀಜವಿದೆ. ಈಗ ಅದನ್ನು ಮರ್ಜ್ ಮಾಡಬೇಕು. ದೇಹ-ಅಭಿಮಾನದ ಬೀಜ ಬಿತ್ತಬಾರದು. ಈಗ
ದೇಹೀ ಅಭಿಮಾನದ ಬೀಜವನ್ನು ಬಿತ್ತಬೇಕು. ನಿಮ್ಮದು ಈಗ ವಾನಪ್ರಸ್ತ ಅವಸ್ಥೆಯಾಗಿದೆ. ಅತೀ ಪ್ರೀಯ
ತಂದೆ ಸಿಕ್ಕಿದ್ದಾರೆ ಅವರನ್ನೇ ನೆನಪು ಮಾಡಬೇಕು. ತಂದೆಗೆ ಬದಲಾಗಿ ದೇಹವನ್ನು ಅಥವಾ ದೇಹಧಾರಿಯನ್ನು
ನೆನಪು ಮಾಡುವುದು - ಇದೂ ಸಹಾ ತಪ್ಪಾಗಿದೆ. ನೀವು ಆತ್ಮ-ಅಭಿಮಾನಿಯಾಗಲು, ಶೀತಲರಾಗಲು ಬಹಳ
ಪರಿಶ್ರಮ ಪಡಬೇಕಿದೆ.
ಮಧುರ ಮಕ್ಕಳೆ, ನೀವು ನಿಮ್ಮ ಜೀವನದಿಂದ ಎಂದೂ ಬೆಸರಗೊಳ್ಳಬಾರದು. ಈ ಜೀವನ ಬಹಳ ಅಮೂಲ್ಯವೆಂದು
ಗಾಯನ ಮಾಡಲಾಗಿದೆ, ಇದರ ಸಂಭಾಲನೆ ಮಾಡಬೇಕು. ಜೊತೆ-ಜೊತೆ ಸಂಪಾದನೆಯನ್ನೂ ಸಹ ಮಾಡಬೇಕು. ಇಲ್ಲಿ
ಎಷ್ಟು ದಿನ ಇರುವಿರೋ, ತಂದೆಯನ್ನು ನೆನಪು ಮಾಡುತ್ತಾ ಅಪಾರ ಸಂಪಾದನೆ ಜಮಾ ಮಾಡುತ್ತಾ ಇರಿ.
ಲೆಕ್ಕಾಚಾರ ಚುಕ್ತು ಆಗುತ್ತಾ ಹೋಗುವುದು. ಆದ್ದರಿಂದ ಎಂದೂ ಸಹಾ ಬೇಸರಗೊಳ್ಳಬಾರದು. ಮಕ್ಕಳು
ಕೇಳುತ್ತಾರೆ, ಬಾಬಾ ಸತ್ಯಯುಗ ಯಾವಾಗ ಬರುವುದು? ಬಾಬಾ ಹೇಳುತ್ತಾರೆ ಮೊದಲು ನೀವು ಕರ್ಮಾತೀತ
ಅವಸ್ಥೆಯನ್ನು ಮಾಡಿಕೊಳ್ಳಿ. ಎಷ್ಟು ಸಮಯ ಸಿಗುವುದೋ ಅಷ್ಟು ಸಮಯ ಕರ್ಮಾತೀತವಾಗುವಂತ ಪುರುಷಾರ್ಥ
ಮಾಡಿ. ಮಕ್ಕಳಲ್ಲಿ ನಷ್ಠಮೋಹ ಆಗಲೂ ಸಹಾ ಬಹಳ ಧೈರ್ಯ ಬೇಕು. ಬೇಹದ್ಧಿನ ತಂದೆಯಿಂದ ಪೂರ್ತಿ
ಆಸ್ತಿಯನ್ನು ಪಡೆಯಬೇಕಾದರೆ ನಷ್ಠಮೋಹ ಆಗ ಬೇಕಾಗುವುದು. ತಮ್ಮ ಅವಸ್ಥೆಯನ್ನು ಬಹಳ ಶ್ರೇಷ್ಠ
ಮಾಡಿಕೊಳ್ಳಬೇಕು. ತಂದೆಗೆ ಮಕ್ಕಳಾದಿರಿ ಎಂದಮೇಲೆ ತಂದೆಯ ಅಲೌಕಿಕ ಸೇವೆಯಲ್ಲಿಯೇ ತಮ್ಮನ್ನು
ತೊಡಗಿಸಿಕೊಳ್ಳಬೇಕು. ಸ್ವಭಾವ ಬಹಳ ಮಧುರವಾಗಿರಬೇಕು, ಮನುಷ್ಯನಿಗೆ ಸ್ವಭಾವವೇ ಬಹಳ ತೊಂದರೆ
ನೀಡುತ್ತದೆ. ಜ್ಞಾನದ ಏನು ಮೂರನೆಯ ನೇತ್ರ ಸಿಕ್ಕಿದೆ, ಅದರಿಂದ ನಿಮ್ಮನ್ನು ಪರೀಕ್ಷೆ
ಮಾಡಿಕೊಳ್ಳುತ್ತಿರಿ. ಏನೇ ದೋಷ ಇದ್ದಲ್ಲಿ ಅದನ್ನು ತೆಗೆದು ಪರಿಶುದ್ಧ ಡೈಮೆಂಡ್ ಆಗಬೇಕು.
ಸ್ವಲ್ಪವಾದರೂ ದೋಷವಿದ್ದಲ್ಲಿ ಬೆಲೆ ಕಡಿಮೆಯಾಗಿ ಬಿಡುವುದು. ಆದ್ದರಿಂದ ಪರಿಶ್ರಮ ಪಟ್ಟು ತಮ್ಮನ್ನು
ಬೆಲೆ ಬಾಳುವ ವಜ್ರವನ್ನಾಗಿ ಮಾಡಿಕೊಳ್ಳಿ.
ನೀವು ಮಕ್ಕಳ ಜೊತೆ ತಂದೆ ಹೊಸ ಪ್ರಪಂಚದ ಸಂಬಂಧದ ಪುರುಷಾರ್ಥ ಮಾಡಿಸುತ್ತಾರೆ. ಮಧುರ ಮಕ್ಕಳೇ, ಈಗ
ಬೇಹದ್ಧಿನ ತಂದೆ ಮತ್ತು ಬೇಹದ್ ಸುಖದ ಆಸ್ತಿಯ ಜೊತೆ ಸಂಬಂಧ ಇಡಿ. ಒಬ್ಬರೇ ಬೇಹದ್ಧಿನ ತಂದೆ
ಆಗಿದ್ದಾರೆ ಯಾರು ಬಂಧನದಿಂದ ಬಿಡಿಸಿ ನಿಮ್ಮನ್ನು ಅಲೌಕಿಕ ಸಂಬಂಧದಲ್ಲಿ ತೆಗೆದುಕೊಂಡು ಹೋಗುವರು
ಸದಾ ಇದೇ ಸ್ಮತಿಯಿರಲಿ ನಾವು ಈಶ್ವರೀಯ ಸಂಬಂಧದವರಾಗಿದ್ದೇವೆ. ಈ ಈಶ್ವರೀಯ ಸಂಭಂದವೇ ಸದಾ
ಸುಖಧಾಯಿಯಾಗಿರುತ್ತೆ. ಒಳ್ಳೆಯದು !
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ, ಅತೀ ಸ್ನೆಹಿ ಮಕ್ಕಳಿಗೆ ಮಾತ-ಪಿತಾ ಬಾಪ್ದಾದಾರವರ
ತುಂಬು ಹೃದಯದ ಪ್ರೀತಿ, ಅತೀ ಪ್ರೇಮದ ನೆನಪು ಪ್ರೀತಿ ಮತ್ತು ಗುಡ್ಮಾರ್ನಿಂಗ್. ಆತ್ಮೀಯ ತಂದೆಯಿಂದ
ಆತ್ಮೀಯ ಮಕ್ಕಳಿಗೆ ನಮಸ್ತೆ.
ಅವ್ಯಕ್ತ
ಬಾಪ್ದಾದಾರವರ ಮಧುರ ಮಹಾವಾಕ್ಯ(ರಿವೈಸ್) -
ಸಫಲತ ಮೂರ್ತಿಗಳಾಗಲು ಮುಖ್ಯವಾಗಿ ಎರಡೇ ವಿಶೇಷತೆಗಳ ಅವಶ್ಯಕತೆಯಿದೆ - ಒಂದು ಪವಿತ್ರತೆ (ಪ್ಯೂರಿಟಿ),
ಎರಡನೆಯದು ಯೂನಿಟಿ (ಒಗ್ಗಟ್ಟು). ಒಂದುವೇಳೆ ಪ್ಯೂರಿಟಿಯಲ್ಲಿ ಕಡಿಮೆ ಇದ್ದಲ್ಲಿ ಯೂನಿಟಿಯಲ್ಲಿಯೂ
ಕೊರತೆ ಇರುವುದು. ಪ್ಯೂರಿಟಿ ಕೇವಲ ಬ್ರಹ್ಮಚರ್ಯ ವ್ರತಕ್ಕೆ ಹೇಳಲಾಗುವುದಿಲ್ಲ, ಸಂಕಲ್ಪ, ಸ್ವಭಾವ,
ಸಂಸ್ಕಾರದಲ್ಲಿಯೂ ಸಹಾ ಪ್ಯೂರಿಟಿ. ಈಗ ತಿಳಿಯಿರಿ ಒಬ್ಬರು - ಇನ್ನೊಬ್ಬರ ಪ್ರತಿ ಈಷ್ರ್ಯೆ ಅಥವಾ
ತಿರಸ್ಕಾರ ಸಂಕಲ್ಪ ಇದ್ದಲ್ಲಿ ಪ್ಯೂರಿಟಿ ಅಲ್ಲ, ಇಮ್ ಪ್ಯೂರಿಟಿ ಎಂದು ಹೇಳಲಾಗುವುದು. ಪ್ಯೂರಿಟಿಯ
ಪರಿಭಾಷೆಯಲ್ಲಿ ಸರ್ವ ವಿಕಾರಗಳ ಅಂಶ-ಮಾತ್ರದವರೆಗೂ ಇರಬಾರದಾಗಿದೆ. ಸಂಕಲ್ಪದಲ್ಲಿಯೂ ಸಹ ಯಾವುದೇ
ಪ್ರಕಾರದ ಇಮ್ಪ್ಯೂರಿಟಿ ಇರಬಾರದು. ಬಹಳ ಉನ್ನತವಾದ ಕಾರ್ಯವನ್ನು ಸಂಪನ್ನ ಮಾಡುವುದಕ್ಕೊಸ್ಕರ -
ನೀವು ಮಕ್ಕಳು ನಿಮಿತ್ತ ಆಗಿರುವಿರಿ. ನಿಮಿತ್ತರಂತೂ ಮಹಾರಥಿಗಳ ರೂಪದಲ್ಲಿ ಆಗಿರುವಿರಲ್ಲವೇ?
ಒಂದುವೇಳೆ ಲಿಸ್ಟ್ ತೆಗೆದರೆ ಲಿಸ್ಟ್ ನಲ್ಲಿಯೂ ಸಹ ಸೇವಾಧಾರಿ ಹಾಗೂ ಸೇವೆಗೆ ನಿಮಿತ್ತ ಆಗಿರುವ
ಬ್ರಹ್ಮಾ ವತ್ಸರೇ ಮಹಾರಥಿಯ ಲಿಸ್ಟ್ ನಲ್ಲಿ ಎಣಿಸಲಾಗುವುದು. ಮಹಾರಥಿಯ ವಿಶೇಷತೆ ಎಲ್ಲಿಯವರೆಗೆ
ಬಂದಿದೆ? ಇದು ಪ್ರತಿಯೊಬ್ಬರಿಗೂ ಸ್ವಯಂಗೆ ತಿಳಿದಿದೆ. ಮಹಾರಥಿ ಯಾರು ಲಿಸ್ಟ್ ನಲ್ಲಿ
ಎಣಿಸಲ್ಪಡುತ್ತಾರೆ ಅವರು ಮುಂದುವರೆದು ಮಹಾರಥಿಗಳಾಗುತ್ತಾರೆ ಅಥವಾ ವರ್ತಮಾನದ ಲಿಸ್ಟ್ ನಲ್ಲಿ
ಮಹಾರಥಿಯಾಗಿರುತ್ತಾರೆ. ಆದ್ದರಿಂದ ಈ ಎರಡೂ ಮಾತುಗಳ ಮೇಲೆ ಗಮನ ಇಡಬೇಕಿದೆ.
ಯೂನಿಟಿ ಅರ್ಥಾತ್ ಸಂಸ್ಕಾರ-ಸ್ವಭಾವಗಳ ಮಿಲನದ ಯೂನಿಟಿ. ಯಾರದೇ ಸಂಸ್ಕಾರ ಮತ್ತು ಸ್ವಭಾವ
ಹೊಂದಾಣಿಕೆ ಆಗದೇ ಹೋದರೂ ಸಹಾ ಪ್ರಯತ್ನ ಪಟ್ಟು ಸೇರಿಸಿ, ಇದಾಗಿದೆ ಯೂನಿಟಿ. ಕೇವಲ ಸಂಘಟನೆಗೆ
ಯೂನಿಟಿ ಎಂದು ಹೇಳಲಾಗುವುದಿಲ್ಲ. ಸೇವಾಧಾರಿ ನಿಮಿತ್ತರಾಗಿರುವ ಆತ್ಮರು ಈ ಎರಡು ಮಾತಿನ ವಿನಹ
ಬೇಹದ್ಧಿನ ಸೇವೆಗೆ ನಿಮಿತ್ತರಾಗಲು ಸಾಧ್ಯವಿಲ್ಲ. ಹದ್ಧಿನದಾಗುತ್ತೆ, ಬೇಹದ್ಧಿನ ಸೇವೆಗಾಗಿ ಈ ಎರಡು
ಮಾತಿನ ಅವಶ್ಯಕತೆಯಿದೆ. ಕೇಳಿರುವಿರಲ್ಲವೇ - ರಾಗದಲ್ಲಿ ತಾಳ ಸೇರಿದಾಗ ಮಾತ್ರ ವ್ಹಾ-ವ್ಹಾ
ಆಗುತ್ತದೆ. ಅದೇರೀತಿ ಇಲ್ಲೂ ಸಹ ತಾಳವನ್ನು ಸೇರಿಸುವುದು ಅರ್ಥಾತ್ ರಾಗವನ್ನು ಸೇರಿಸುವುದು. ಇಷ್ಟು
ಆತ್ಮಗಳು ಯಾರು ಜ್ಞಾನವನ್ನು ವರ್ಣನೆ ಮಾಡುತ್ತಾರೆ ಎಂದಾಗ ಎಲ್ಲರ ಮುಖದಲ್ಲಿ ಇದೇ ಹೊರಡುತ್ತೆ ಇವರು
ಒಂದೇ ಮಾತನ್ನಾಡುತ್ತಾರೆ, ಇವರದೆಲ್ಲಾ ಒಂದೇ ಟಾಪಿಕ್ ಆಗಿದೆ, ಒಂದೇ ಶಬ್ಧವಾಗಿದೆ, ಇದನ್ನು ಎಲ್ಲರೂ
ಹೇಳುತ್ತಾರಲ್ಲವೆ? ಇದೇ ಪ್ರಕಾರದಲ್ಲಿ ಎಲ್ಲರ ಸ್ವಭಾವ ಮತ್ತು ಸಂಸ್ಕಾರ ಒಬ್ಬರು-ಇನ್ನೊಬ್ಬರಲ್ಲಿ
ಕಾಣಬೇಕು ಆಗ ಹೇಳಲಾಗುವುದು ರಾಗ ಸೇರುವುದು. ಇದಕ್ಕೂ ಸಹಾ ಪ್ಲಾನ್ ಮಾಡಿ.
ಯಾವುದೇ ಬಲಹೀನತೆಯನ್ನು ಅಳಿಸಿ ಹಾಕಲು ವಿಶೇಷ ಮಹಾಕಾಳಿ ಸ್ವರೂಪ ಶಕ್ತಿಗಳ ಸಂಘಟನೆಯ ಅವಶ್ಯಕತೆಯಿದೆ
ಯಾವುದರಿಂದ ತಮ್ಮ ಯೋಗ-ಅಗ್ನಿಯ ಫ್ರಭಾವದಿಂದ ಬಲಹೀನ ವಾತಾವರಣವನ್ನು ಪರಿವರ್ತನೆ ಮಾಡಬೇಕು. ಈಗಂತೂ
ಡ್ರಾಮಾನುಸಾರ ಪ್ರತಿಯೊಂದು ಚಲನೆರೂಪಿ ದರ್ಪಣದಲ್ಲಿ ಅಂತಿಮ ರಿಸಲ್ಟ್ ಸ್ಪಷ್ಠವಾಗುವುದಿದೆ. ಮುಂದೆ
ಹೋದಂತೆ ಮಹಾರಥಿ ಮಕ್ಕಳು ತಮ್ಮ ಜ್ಞಾನದ ಶಕ್ತಿಯ ಮೂಲಕ ಪ್ರತಿಯೊಬ್ಬರ ಚೆಹರೆಯಿಂದ ಅವರ ಕರ್ಮದ
ಕಥೆಯನ್ನು ಸ್ಪಷ್ಟವಾಗಿ ನೋಡಲು ಸಾಧ್ಯ. ಹೇಗೆ ಅಶುದ್ಧ ಭೋಜನದ ದುರ್ಗಂಧ ಬುದ್ಧಿಯಲ್ಲಿ ಬಂದು
ಬಿಡುತ್ತದೆ, ಅದೇ ರೀತಿ ಅಶುದ್ಧ ಸಂಕಲ್ಪರೂಪಿ ಆಹಾರ ಸ್ವೀಕಾರ ಮಾಡಿದಂತಹ ಆತ್ಮಗಳ ವೈಭ್ರೇಷನ್
ನಿಂದ ಬುದ್ಧಿಯಲ್ಲಿ ಸ್ಪಷ್ಠ ಟಚ್ಚಿಂಗ್ ಆಗುವುದು, ಇದರ ಯಂತ್ರವಾಗಿದೆ ಬುದ್ಧಿಯ ಲೈನ್ ಕ್ಲಿಯರ್.
ಯಾರಲ್ಲಿ ಈ ಯಂತ್ರ ಶಕ್ತಿಶಾಲಿಯಾಗಿರುತ್ತದೆ ಅವರು ಸಹಜವಾಗಿ ತಿಳಿದುಕೊಳ್ಳಲು ಸಾಧ್ಯ.
ಶಕ್ತಿಯರ ಹಾಗೂ ದೇವತೆಗಳ ಜಡ ಚಿತ್ರಗಳಲ್ಲಿಯೂ ಸಹಾ ಈ ವಿಶೇಷತೆಯಿದೆ. ಅಲ್ಲಿ ಯಾವುದೇ ಪಾಪಾತ್ಮ ಸಹಾ
ತಮ್ಮ ಪಾಪವನ್ನು ಅವರ ಮುಂದೆ ಹೋಗಿ ಮುಚ್ಚಿಡಲು ಸಾಧ್ಯವಿಲ್ಲ. ನೀವೆ ಈ ವರ್ಣನೆ ಮಾಡುತ್ತಿರುವಿರಿ
ನಾವು ಹೀಗಿದ್ದೇವೆ ಎಂದು. ಅಂದರೆ ನಿಮ್ಮ ಜಡ ನೆನಪಾರ್ಥದಲ್ಲಿಯೂ ಸಹಾ ಈ ಅಂತ್ಯಕಾಲದವರೆಗೂ ಈ
ವಿಶೇಷತೆ ಕಂಡುಬರುತ್ತಿರುವುದು. ಚೈತನ್ಯ ರೂಪದಲ್ಲಿಯೂ ಸಹಾ ಶಕ್ತಿಯರ ಈ ವಿಶೇಷತೆ ಪ್ರಸಿದ್ದವಾಗಿದೆ
ಆ ಕಾರಣಕ್ಕಾಗಿ ನೆನಪಾರ್ಥದ ರೂಪದಲ್ಲಿಯೂ ಸಹಾ ಇದೆ. ಇದಾಗಿದೆ ಮಾಸ್ಟರ್ ಜಾನೀ ಜಾನನ್ ಹಾರ್ ನ
ಸ್ಟೇಜ್ ಅರ್ಥಾತ್ ಜ್ಞಾನಪೂರ್ಣರ ಸ್ಟೇಜ್. ಈ ಸ್ಟೇಜ್ ಕಾರ್ಯರೂಪದಲ್ಲಿ ಅನುಭವವಾಗುವುದು.
ಆಗುತ್ತಿರುವುದು ಮತ್ತು ಆಗುವುದೂ ಸಹಾ. ಇಂತಹ ಸಂಘಟನೆಯನ್ನು ಮಾಡಿರುವಿರಾ? ಆಗಲೇಬೇಕಿದೆ. ಈ
ರೀತಿಯ ಪತಂಗದ ಸ್ವರೂಪ ಸಂಘಟನೆ ಅವಶ್ಯಕತೆಯಿದೆ. ಯಾರ ಪ್ರತಿ ಹೆಜ್ಜೆಯಲ್ಲಿ ತಂದೆಯ
ಪ್ರತ್ಯಕ್ಷತೆಯಾಗಬೇಕು. ಒಳ್ಳೆಯದು.
ವರದಾನ:
ಸೇವೆ ಮಾಡುತ್ತಾ
ನೆನಪಿನ ಅನುಭವಗಳ ರೇಸ್ ಮಾಡುವಂತಹ ಸದಾ ಲವಲೀನ ಆತ್ಮ ಭವ.
ನೆನಪಿನಲ್ಲಿರುವಿರಿ,
ಆದರೆ ನೆನಪಿನ ಮೂಲಕ ಏನು ಪ್ರಾಪ್ತಿಯಾಗುವುದು, ಆ ಪ್ರಾಪ್ತಿಯ ಅನುಭೂತಿಯನ್ನು ಮುಂದುವರೆಸುತ್ತಾ
ಹೋಗಿ. ಇದಕ್ಕಾಗಿ ಈಗ ವಿಶೇಷ ಸಮಯ ಹಾಗೂ ಗಮನ ಕೊಡಿ ಇದರಿಂದ ಅರ್ಥವಾಗಲಿ ಈ ಅನುಭವಗಳ ಸಾಗರದಲ್ಲಿ
ಮುಳುಗಿ ಹೋಗಿರುವ ಲವಲೀನ ಆತ್ಮ ಎಂದು - ಈ ಅನುಭವವಾಗಲಿ. ಜ್ಞಾನದ ಫ್ರಭಾವವಿದೆ ಆದರೆ ಯೋಗದ ಸಿದ್ಧಿ
ಸ್ವರೂಪದ ಫ್ರಭಾವವಾಗಲಿ. ಸೇವೆ ಮಾಡುತ್ತಾ ನೆನಪಿನ ಅನುಭವಗಳಲ್ಲಿ ಮುಳುಗಿಹೊದಂತಿರಿ, ನೆನಪಿನ
ಯಾತ್ರೆಯ ಅನುಭವಗಳ ರೇಸ್ ಮಾಡಿ.
ಸ್ಲೋಗನ್:
ಸಿದ್ಧಿಯನ್ನು ಸ್ವೀಕಾರ
ಮಾಡುವುದು ಅರ್ಥಾತ್ ಭವಿಷ್ಯ ಪ್ರಾಲಬ್ಧವನ್ನು ಇಲ್ಲೇ ಸಮಾಪ್ತಿ ಮಾಡುವುದು.
ಅವ್ಯಕ್ತ ಸ್ಥಿತಿಯ
ಅನುಭವ ಮಾಡವುದಕ್ಕಾಗಿ ವಿಶೇಷ ಹೋಮ್ ವರ್ಕ್ -
ಹೇಗೆ ಬ್ರಹ್ಮಾ ತಂದೆಯು ನಿಶ್ಚಯದ ಆಧಾರದ ಮೇಲೆ, ಆತ್ಮೀಯ ನಶೆಯ ಆಧಾರದ ಮೇಲೆ, ನಿಶ್ಚಿತ ಭವಿಷ್ಯದ
ಜ್ಞಾನಿಯಾಗಿ ಸೆಕೆಂಡ್ನಲ್ಲಿ ಎಲ್ಲವನ್ನೂ ಸಫಲ ಮಾಡಿಕೊಂಡು ಬಿಟ್ಟರು. ತನಗಾಗಿ ಏನನ್ನು
ಇಟ್ಟುಕೊಳ್ಳಲಿಲ್ಲ. ಅಂದಾಗ ಸ್ನೇಹದ ಗುರುತಾಗಿದೆ ಎಲ್ಲವನ್ನೂ ಸಫಲ ಮಾಡಿಕೊಳ್ಳಿ. ಸಫಲ
ಮಾಡಿಕೊಳ್ಳುವುದರ ಅರ್ಥವೇ ಆಗಿದೆ ಶ್ರೇಷ್ಠದ ಕಡೆ ತೊಡಗಿಸುವುದು.