16.02.20 Avyakt Bapdada
Kannada
Murli
25.11.85 Om Shanti Madhuban
ನಿಶ್ಚಯಬುದ್ಧಿ ವಿಜಯಿ
ರತ್ನಗಳ ಲಕ್ಷಣಗಳು
ಇಂದು ಬಾಪ್ದಾದಾರವರು
ತನ್ನ ನಿಶ್ಚಯಬುದ್ಧಿ ವಿಜಯಿ ರತ್ನಗಳ ಮಾಲೆಯನ್ನು ನೋಡುತ್ತಿದ್ದಾರೆ. ಎಲ್ಲಾ ಮಕ್ಕಳು ತನ್ನನ್ನು
ತಿಳಿಯುತ್ತಾರೆ - ನಾನು ನಿಶ್ಚಯದಲ್ಲಿ ಪರಿಪಕ್ವನಿದ್ದೇನೆ. ಹೀಗಿರುವವರು ಕೆಲವರು ವಿರಳವಿರುತ್ತಾರೆ,
ಯಾರು ತನ್ನನ್ನು ನಿಶ್ಚಯಬುದ್ಧಿಯೆಂದು ಒಪ್ಪುವುದಿಲ್ಲ. ಯಾರೊಂದಿಗೇ ನಿಶ್ಚಯವಿದೆಯೇ ಎಂದು
ಕೇಳುತ್ತೀರಾ? ಆಗ ಇದನ್ನೇ ಹೇಳುತ್ತಾರೆ - ನಿಶ್ಚಯವಿಲ್ಲದಿದ್ದರೆ ಬ್ರಹ್ಮಾಕುಮಾರ,
ಬ್ರಹ್ಮಾಕುಮಾರಿಯಾಗಿ ಹೇಗೆ ಆಗುತ್ತಿದ್ದೆವು. ನಿಶ್ಚಯದ ಪ್ರಶ್ನೆಯಲ್ಲಿ ಎಲ್ಲರೂ ಹಾ ಎಂದು
ಹೇಳುತ್ತಾರೆ. ಎಲ್ಲರೂ ನಿಶ್ಚಯಬುದ್ಧಿಯವರೇ ಕುಳಿತಿದ್ದಾರೆ, ಹೀಗೆ ಹೇಳುವರಿಲ್ಲವೇ? ಇಲ್ಲವೆಂದರೆ
ಯಾರು ತಿಳಿಯುತ್ತೀರಿ - ಇನ್ನೂ ನಿಶ್ಚಯವಾಗುತ್ತಿದೆ ಎನ್ನುವವರು ಕೈಯೆತ್ತಿರಿ. ಎಲ್ಲರೂ
ನಿಶ್ಚಯಬುದ್ಧಿಯವರಿದ್ದಾರೆ. ಒಳ್ಳೆಯದು. ಯಾವಾಗ ಎಲ್ಲರೂ ಪರಿಪಕ್ವ
ನಿಶ್ಚಯಬುದ್ಧಿಯವರಾಗಿದ್ದಾರೆಂದರೆ ಮತ್ತೆ ವಿಜಯಮಾಲೆಯಲ್ಲಿ ನಂಬರ್ ಏಕಿದೆ? ನಿಶ್ಚಯದಲ್ಲಿ ಎಲ್ಲರದೂ
ಒಂದೇ ಉತ್ತರವಿದೆಯಲ್ಲವೆ! ಮತ್ತೆ ನಂಬರ್ ಏಕೆ? ಅಷ್ಟ ರತ್ನಗಳೆಲ್ಲಿ, 100 ರತ್ನಗಳೆಲ್ಲಿ ಮತ್ತು
16 ಸಾವಿರದವರೆಲ್ಲಿ! ಇದರ ಕಾರಣವೇನಾಗಿದೆ? ಅಷ್ಟ ದೇವನ ಪೂಜೆ, ಗಾಯನ ಮತ್ತು 16 ಸಾವಿರದ ಮಾಲೆಯ
ಗಾಯನ ಮತ್ತು ಪೂಜೆಯಲ್ಲಿ ಎಷ್ಟು ಅಂತರವಿದೆ? ತಂದೆಯು ಒಬ್ಬರಿದ್ದಾರೆ ಮತ್ತು ಒಬ್ಬರೇ ಆಗಿದ್ದಾರೆ,
ಈ ನಿಶ್ಚಯವಿದೆ ಮತ್ತೇ ಅಂತರವೇಕೆ? ನಿಶ್ಚಯಬುದ್ಧಿಯಲ್ಲಿ ಪರ್ಸೆಂಟೇಜ್ ಇದೆಯೇ? ನಿಶ್ಚಯದಲ್ಲೇನಾದರೂ
ಪರ್ಸೆಂಟೇಜ್ ಇದೆಯೆಂದರೆ ಅವರಿಗೆ ನಿಶ್ಚಯವುಳ್ಳವರೆಂದು ಹೇಳುವರೇ? 8 ರತ್ನಗಳೂ ಸಹ ನಿಶ್ಚಯಬುದ್ಧಿ,
16 ಸಾವಿರದವರೂ ಸಹ ನಿಶ್ಚಯಬುದ್ಧಿಯವರೆಂದು ಹೇಳುತ್ತಾರಲ್ಲವೆ!
ನಿಶ್ಚಯಬುದ್ಧಿಯವರ ಚಿಹ್ನೆಯು ವಿಜಯವಾಗಿದೆ. ಆದ್ದರಿಂದ ಗಾಯನವಿದೆ - ನಿಶ್ಚಯಬುದ್ಧಿ ವಿಜಯಂತಿ.
ಅಂದಮೇಲೆ ನಿಶ್ಚಯ ಆರ್ಥಾತ್ ವಿಜಯವಿದ್ದೇ ಇದೆ. ಕೆಲವೊಮ್ಮೆ ವಿಜಯವಾಗುವುದು, ಕೆಲವೊಮ್ಮೆ
ಆಗುವುದಿಲ್ಲ- ಹೀಗಾಗಲು ಸಾಧ್ಯವಿಲ್ಲ. ಸಂದರ್ಭವು ಭಲೆ ಹೇಗಾದರೂ ಇರಲಿ ಆದರೆ ನಿಶ್ಚಯಬುದ್ಧಿ
ಮಕ್ಕಳು ಸಂದರ್ಭದಲ್ಲಿ ತನ್ನ ಸ್ವ ಸ್ಥಿತಿಯ ಶಕ್ತಿಯಾಗಿ ಸದಾ ವಿಜಯದ ಅನುಭವವನ್ನು ಮಾಡುವರು, ಯಾರು
ವಿಜಯಿರತ್ನ ಅರ್ಥಾತ್ ವಿಜಯಮಾಲೆಯ ಮಣಿಯಾಗಿ ಬಿಟ್ಟರು, ಕೊರಳಿನ ಹಾರವಾಗಿ ಬಿಟ್ಟರು, ಅವರು
ಮಾಯೆಯಿಂದ ಎಂದಿಗೂ ಸೋಲನ್ನನುಭವಿಸಲು ಸಾಧ್ಯವಿಲ್ಲ. ಭಲೆ ಪ್ರಪಂಚದವರು ಅಥವಾ ಬ್ರಾಹ್ಮಣ ಪರಿವಾರದ
ಸಂಬಂಧ-ಸಂಪರ್ಕದಲ್ಲಿ ಅನ್ಯರು ತಿಳಿದುಕೊಳ್ಳಲಿ ಅಥವಾ ಹೇಳಲಿ - ಇವರು ಸೋತರು ಎಂದು. ಆದರೆ ಅದು
ಸೋಲಲ್ಲ, ಗೆಲುವಾಗಿದೆ ಏಕೆಂದರೆ ಕೆಲಕೆಲವರು ನೋಡುವ ಮತ್ತು ಮಾಡುವವರಲ್ಲಿ ಮಿಸ್ಅಂಡರ್ಸ್ಟಾಂಡಿಗ್
ಸಹ ಆಗಿ ಬಿಡುತ್ತದೆ. ನಮ್ರಚಿತ್ತ, ನಿರ್ಮಾಣ ಅಥವಾ ಹಾಂಜಿಯ ಪಾಠವನ್ನು ಓದುವಂತಹ ಆತ್ಮರ ಪ್ರತಿ,
ಅವರ ಸೋಲುಂಟಾಗಬಹುದು ಎಂದು ಎಂದಾದರೂ ಅನ್ಯರಿಗೆ ಸೋಲಿನ ರೂಪವಾಗಿ ಕಾಣಿಸಬಹುದು ಆದರೆ ವಾಸ್ತವದಲ್ಲಿ
ವಿಜಯವಾಗಿರುತ್ತದೆ. ಕೇವಲ ಆ ಸಮಯದಲ್ಲಿ ಅನ್ಯರ ಹೇಳುವ ಅಥವಾ ವಾಯುಮಂಡಲದಲ್ಲಿ ಸ್ವಯಂ
ನಿಶ್ಚಯಬುದ್ಧಿಗೆ ಬದಲಾಗಿ ಅನುಮಾನದ ರೂಪವಾಗಬಾರದು. ಉದಾ: ಗೊತ್ತಿಲ್ಲ ಸೋಲಾಗಿದೆಯೋ ಅಥವಾ ಗೆಲುವೋ.
ಈ ಸಂಶಯವನ್ನಿಡದೆ ತಮ್ಮ ನಿಶ್ಚಯದಲ್ಲಿ ಪರಿಪಕ್ವವಾಗಿರಿ. ಅಂದಮೇಲೆ ಯಾವುದನ್ನು ಇಂದು ಅನ್ಯ ಜನರು
ಸೋಲು ಎಂದು ಹೇಳುತ್ತಾರೆ, ನಾಳೆ ವಾಹ್! ವಾಹ್!ನ ಹೂವನ್ನಾಕುವರು.
ವಿಜಯಿ ಆತ್ಮರು ತನ್ನ ಮನಸ್ಸಿನಲ್ಲಿ, ತನ್ನ ಕರ್ಮದ ಪ್ರತಿ ಎಂದಿಗೂ ಸಹ, ನಾನು ರೈಟ್ ಇದ್ದೇನೆಯೇ
ಅಥವಾ ರಾಂಗ್ ಇದ್ದೇನೆಯೇ ಎಂದು ದ್ವಂದ್ವವಿರುವುದಿಲ್ಲ. ಅನ್ಯರು ಹೇಳುವುದು ಬೇರೆ ಮಾತಾಗಿದೆ.
ಅನ್ಯರಲ್ಲಿ ಕೆಲವರು ರೈಟ್ ಎಂದು ಹೇಳುವರು, ಕೆಲವರು ರಾಂಗ್ ಎಂದು ಹೇಳುವರು. ಆದರೆ ತನ್ನ ಮನಸ್ಸು
ನಿಶ್ಚಯಬುದ್ಧಿಯಾಗಿರಲಿ, ನಾನು ವಿಜಯಿಯಾಗಿದ್ದೇನೆ ಎಂದಿರಲಿ. ತಂದೆಯಲ್ಲಿ ನಿಶ್ಚಯದ ಜೊತೆ ಜೊತೆಗೆ
ಸ್ವಯಂನ ಪ್ರತಿಯೂ ನಿಶ್ಚಯವಾಗಬೇಕು. ನಿಶ್ಚಯಬುದ್ಧಿ ಅರ್ಥಾತ್ ವಿಜಯಿಯ ಮನಸ್ಸು ಅರ್ಥಾತ್ ಸಂಕಲ್ಪ
ಶಕ್ತಿಯು ಸದಾ ಸ್ವಚ್ಛವಾಗುವ ಕಾರಣದಿಂದ ಹಾ ಮತ್ತು ಇಲ್ಲ ಎನ್ನುವುದು ಸ್ವಯಂಗಾಗಿ ಇರಬಹುದು ಅಥವಾ
ಅನ್ಯರ ಪ್ರತಿ ನಿರ್ಣಯವನ್ನು ಸಹಜ, ಸತ್ಯ ಮತ್ತು ಸ್ಪಷ್ಟವಾಗಿರುತ್ತದೆ ಆದ್ದರಿಂದ ಗೊತ್ತಿಲ್ಲ ಎದು
ದ್ವಂದ್ವವಿರುವುದಿಲ್ಲ. ನಿಶ್ಚಯಬುದ್ಧಿ ವಿಜಯಿರತ್ನಗಳ ಚಿಹ್ನೆ- ಸತ್ಯ ನಿರ್ಣಯವಾಗಿರುವ ಕಾರಣದಿಂದ
ಮನಸ್ಸಿನಲ್ಲಿ ಸ್ವಲ್ಪವೂ ಗೊಂದಲವಾಗುವುದಿಲ್ಲ, ಸದಾ ಮೋಜಿರುತ್ತದೆ. ಖುಷಿಯ ಪ್ರಕಂಪನಗಳಿರುತ್ತದೆ.
ಭಲೆ ಸಂದರ್ಭವು ಬೆಂಕಿಯ ಸಮಾನವೇ ಇರಬಹುದು ಆದರೆ ಅದಕ್ಕಾಗಿ ಈ ಅಗ್ನಿ ಪರೀಕ್ಷೆಯು ವಿಜಯದ ಖುಷಿಯ
ಅನುಭವ ಮಾಡಿಸುತ್ತದೆ, ಏಕೆಂದರೆ ಪರೀಕ್ಷೆಯಲ್ಲಿ ವಿಜಯಿಯಾಗಿ ಬಿಡುತ್ತೀರಲ್ಲವೆ. ಈಗಲೂ ಲೌಕಿಕ
ರೀತಿಯಿಂದ ಯಾವುದೇ ಮಾತಿನಲ್ಲಿ ವಿಜಯವಾಗುತ್ತದೆಯೆಂದರೆ ಖುಷಿಯನ್ನಾಚರಿಸಲು ನಗುತ್ತಾ,
ನರ್ತಿಸುತ್ತಾ, ಚಪ್ಪಾಳೆಯನ್ನಾಕುತ್ತಾರೆ. ಇದು ಖುಷಿಯ ಚಿಹ್ನೆಯಾಗಿದೆ. ನಿಶ್ಚಯಬುದ್ಧಿಯವರೆಂದಿಗೂ
ಸಹ ಯಾವುದೇ ಕಾರ್ಯದಲ್ಲಿಯೂ ತನ್ನನ್ನು ಒಂಟಿಯೆಂದು ಅನುಭವ ಮಾಡುವುದಿಲ್ಲ. ಎಲ್ಲರೂ ಒಂದು
ಕಡೆಯಿದ್ದಾರೆ, ನಾನೊಬ್ಬನು ಇನ್ನೊಂದು ಕಡೆಯಿದ್ದೇನೆ, ಭಲೆ ಮೆಜಾರಿಟಿ ಇನ್ನೊಂದು ಕಡೆಯಿರಬಹುದು
ಮತ್ತು ವಿಜಯಿರತ್ನವು ಕೇವಲ ಒಬ್ಬರೇ ಇರಲಿ, ಆದರೂ ಅವರು ತಮ್ಮನ್ನು ಒಬ್ಬರೆಂದಲ್ಲ ಆದರೆ ತಂದೆಯು
ನನ್ನ ಜೊತೆಯಿದ್ದಾರೆ. ಆದ್ದರಿಂದ ತಂದೆಯ ಮುಂದೆ ಅಕ್ಷೋಣಿಯೂ ಏನೂ ಇಲ್ಲ. ಎಲ್ಲಿ ತಂದೆಯವರಿದ್ದಾರೆ
ಅಲ್ಲಿ ಇಡೀ ಪ್ರಪಂಚವೇ ತಂದೆಯವರಲ್ಲಿದೆ. ಬೀಜವಿದೆಯೆಂದಮೇಲೆ ವೃಕ್ಷವು ಅದರಲ್ಲಿದ್ದೇ ಇದೆ. ವಿಜಯಿ
ನಿಶ್ಚಯಬುದ್ಧಿ ಆತ್ಮನು ಸದಾ ತಮ್ಮನ್ನು ಆಶ್ರಯದಲ್ಲಿದ್ದೇನೆಂದು ತಿಳಿಯುತ್ತಾನೆ. ಆಶ್ರಯವನ್ನು
ಕೊಡುವ ದಾತಾ ನನ್ನ ಜೊತೆಯಿದ್ದಾರೆ, ಇದನ್ನು ಸ್ವಾಭಾವಿಕವಾಗಿ ಅನುಭವ ಮಾಡುತ್ತಾರೆ. ಈ ರೀತಿಯಲ್ಲ,
ಯಾವಾಗ ಸಮಸ್ಯೆಯು ಬರುತ್ತದೆಯೋ ಆ ಸಮಯದಲ್ಲಿ ತಂದೆಯ ಮುಂದೆ ಹೇಳುವರು - ಬಾಬಾ ತಾವಂತು ನನ್ನ
ಜೊತೆಯಿದ್ದೀರಲ್ಲವೆ. ತಾವೇ ಸಹಯೋಗಿಯಾಗಿದ್ದೀರಲ್ಲವೆ. ಈಗ ತಾವಷ್ಟೇ ಇದ್ದೀರಿ ಅಷ್ಟೇ. ಅಂದರೆ
ಆಶ್ರಯವನ್ನು ತೆಗೆದುಕೊಳ್ಳುವ್ದಿಲ್ಲ, ತಾವಿದ್ದೀರಲ್ಲವೆ, ಇದ್ದೀರಲ್ಲವೆ ಅಂದರೆ ಅರ್ಥವೇನಾಯಿತು?
ನಿಶ್ಚಯವಿದೆ ಎಂದಾಯಿತೆ? ತಂದೆಗೇ ನೆನಪು ತರಿಸುತ್ತಾರೆ - ತಾವು ಆಶ್ರಯವಾಗಿದ್ದೀರಿ.
ನಿಶ್ಚಯಬುದ್ಧಿಯವರೆಂದಿಗೂ ಸಹ ಇಂತಹ ಸಂಕಲ್ಪವನು ಮಾಡಲು ಸಾಧ್ಯವೇ ಇಲ್ಲ. ಅವರ ಮನಸ್ಸಿನಲ್ಲಿ
ಸ್ವಲ್ಪವೂ ಅನಾಶ್ರಯ ಅಥವಾ ಒಂಟಿತನದ ಸಂಕಲ್ಪವು ಅಂಶದಷ್ಟೂ ಅನುಭವವಾಗುವುದಿಲ್ಲ. ನಿಶ್ಚಯಬುದ್ಧಿ
ವಿಜಯಿಯಾಗಿರುವ ಕಾರಣದಿಂದ ಸದಾ ಖುಷಿಯಲ್ಲಿ ನರ್ತಿಸುತ್ತಿರುತ್ತಾರೆ. ಕೆಲವೊಮ್ಮೆ ಉದಾಸಿ ಅಥವಾ
ಅಲ್ಪಕಾಲದ ಹದ್ದಿನ ವೈರಾಗ್ಯ, ಇದೇ ಪ್ರಕಂಪನಗಳಲ್ಲಿಯೂ ಬರುವುದಿಲ್ಲ. ಕೆಲವೊಮ್ಮೆ ಯಾವಾಗ ಮಾಯೆಯ
ಯುದ್ಧವು ಜೋರಾಗಿ ಆಗುತ್ತದೆ, ಅಲ್ಪಕಾಲದ ವೈರಾಗ್ಯವೂ ಬರುತ್ತದೆ ಆದರೆ ಅದು ಅಲ್ಪಕಾಲದ
ವೈರಾಗ್ಯವಾಗಿರುತ್ತದೆ. ಬೇಹದ್ದಿನ ಸದಾಕಾಲದ್ದಾಗಿರುವುದಿಲ್ಲ. ವಿವಶತೆಯಿಂದ ವೈರಾಗ್ಯ ವೃತ್ತಿಯು
ಉತ್ಪನ್ನವಾಗುತ್ತದೆ. ಆದ್ದರಿಂದ ಆ ಸಮಯದಲ್ಲಿ ಹೇಳಿಬಿಡುತ್ತಾರೆ - ಇದಕ್ಕಿಂತ ಇದನ್ನು ಬಿಟ್ಟು
ಬಿಡೋಣ, ನನಗೆ ವೈರಾಗ್ಯವು ಬಂದು ಬಿಟ್ಟಿದೆ. ಸೇವೆಯನ್ನೂ ಬಿಟ್ಟು ಬಿಡೋಣ, ಇದನ್ನೂ ಬಿಟ್ಟು ಬಿಡೋಣ.
ವೈರಾಗ್ಯವು ಬರುತ್ತದೆ ಆದರೆ ಅದು ಬೇಹದ್ದಿನದಾಗಿರುವುದಿಲ್ಲ. ವಿಜಯಿರತ್ನಗಳು ಸದಾ ಸೋಲಿನಲ್ಲಿಯೂ
ಗೆಲುವು, ಗೆಲುವಿನಲ್ಲಿಯೂ ಗೆಲುವನ್ನು ಅನುಭವ ಮಾಡುತ್ತಾರೆ. ಅಲ್ಪಕಾಲದ ವೈರಾಗ್ಯಕ್ಕೆ ಹೇಳುತ್ತಾರೆ
- ದೂರ ಮಾಡುವುದು. ಹೆಸರು ವೈರಾಗ್ಯ ಎಂದು ಹೇಳುವುದು, ಆದರೆ ಆಗುವುದು ದೂರವಾಗಿರುವುದು. ಅಂದಮೇಲೆ
ವಿಜಯಿರತ್ನಗಳು ಯಾವುದೇ ಕಾರ್ಯದಿಂದ, ಸಮಸ್ಯೆಯಿಂದ, ವ್ಯಕ್ತಿಯಿಂದ ದೂರ ಮಾಡಿಕೊಳ್ಳುವುದಿಲ್ಲ.
ಆದರೆ ಎಲ್ಲಾ ಕರ್ಮವನ್ನು ಮಾಡುತ್ತಾ, ಎದುರಿಸುತ್ತಾ, ಸಹಯೋಗಿಯಾಗುತ್ತಾ ಬೇಹದ್ದಿನ ವೈರಾಗ್ಯ
ವೃತ್ತಿಯಲ್ಲಿರುತ್ತಾರೆ. ಅದು ಸದಾಕಾಲದ್ದಾಗಿದೆ. ನಿಶ್ಚಯಬುದ್ಧಿ ವಿಜಯಿಯೆಂದಿಗೂ ಸಹ ತನ್ನ ವಿಜಯದ
ನಿರ್ಣಯ ಮಾಡುವುದಿಲ್ಲ. ಅನ್ಯರಿಗೂ ದೂರು ಕೊಡುವುದಿಲ್ಲ. ನಾನು ರೈಟ್ ಇದ್ದೆನಲ್ಲವೆ ನೋಡಿ, ಈ ದೂರು
ಕೊಡುವುದು ಅಥವಾ ವರ್ಣನೆ ಮಾಡುವುದು, ಇದು ಖಾಲಿಯಾಗಿರುವ ಚಿಹ್ನೆಯಾಗಿದೆ. ಖಾಲಿ ವಸ್ತುವು ಹೆಚ್ಚು
ತುಳುಕು(ಶಬ್ಧ ಮಾಡುವುದು)ತ್ತದೆಯಲ್ಲವೆ. ಎಷ್ಟು ತುಂಬಿರುತ್ತದೆಯೋ ಅಷ್ಟು ತುಳುಕುವುದಿಲ್ಲ.
ವಿಜಯಿಯು ಸದಾ ಅನ್ಯರಿಗೂ ಸಾಹಸವನ್ನು ಹೆಚ್ಚಿಸುತ್ತಾರೆ. ಕನಿಷ್ಟತೆ ತೋರಿಸುವ ಪ್ರಯತ್ನವನ್ನೂ
ಮಾಡುವುದಿಲ್ಲ. ಏಕೆಂದರೆ ವಿಜಯಿರತ್ನಗಳು ತಂದೆಯ ಸಮಾನ ಮಾಸ್ಟರ್ ಆಶ್ರಯದಾತಾ ಆಗಿದ್ದಾರೆ.
ಕನಿಷ್ಟದಿಂದ ಶ್ರೇಷ್ಠಕ್ಕೆ ಮೇಲೆತ್ತುವವರಾಗಿದ್ದಾರೆ. ನಿಶ್ಚಯಬುದ್ಧಿಯವರು ವ್ಯರ್ಥದಿಂದ ಸದಾ
ದೂರವಿರುತ್ತಾರೆ. ಭಲೆ ವ್ಯರ್ಥ ಸಂಕಲ್ಪವಿರಲಿ, ಮಾತಿರಲಿ ಅಥವಾ ಕರ್ಮವಿರಲಿ. ವ್ಯರ್ಥದಿಂದ
ದೂರವಾಗುವುದು ಅರ್ಥಾತ್ ವಿಜಯಿಯಾಗುವುದು. ವ್ಯರ್ಥದ ಕಾರಣವೇ ಕೆಲವೊಮ್ಮೆ ಸೋಲು, ಕೆಲವೊಮ್ಮೆ
ಗೆಲುವಾಗುತ್ತದೆ. ವ್ಯರ್ಥವು ಸಮಾಪ್ತಿಯಾಯಿತೆಂದರೆ ಸೋಲು ಸಮಾಪ್ತಿ. ವ್ಯರ್ಥವು ಸಮಾಪ್ತಿಯಾಗುವುದು,
ಇದು ವಿಜಯಿರತ್ನದ ಚಿಹ್ನೆಯಾಗಿದೆ. ಈಗ ಇದನ್ನು ಪರಿಶೀಲಿಸಿರಿ - ನಿಶ್ಚಯಬುದ್ಧಿ ವಿಜಯಿರತ್ನಗಳ
ಚಿಹ್ನೆಗಳು ಅನುಭವವಾಗುತ್ತಿದೆಯೇ? ತಿಳಿಸಿದೆವಲ್ಲವೆ- ನಿಶ್ಚಯಬುದ್ಧಿಯವರಂತು ಹೌದು, ಸತ್ಯವನ್ನು
ಮಾತನಾಡುತ್ತೇವೆ. ಆದರೆ ನಿಶ್ಚಯಬುದ್ಧಿಯವರಲ್ಲಿ ಒಬ್ಬರಿದ್ದಾರೆ- ತಿಳಿಯುವವರೆಗೆ, ಒಪ್ಪುವವರೆಗೆ
ಮತ್ತು ಒಬ್ಬರಿದ್ದಾರೆ - ನಡೆಯುವವರೆಗೆ. ಹಾ ಭಗವಂತನು ಸಿಕ್ಕಿ ಬಿಟ್ಟರು, ಭಗವಂತನ ಮಕ್ಕಳಾದೆವು
ಎಂದು ಎಲ್ಲರೂ ಒಪ್ಪುತ್ತಾರೆ. ಒಪ್ಪುವುದು ಅಥವಾ ತಿಳಿಯುವುದು, ಒಂದೇ ಮಾತಾಯಿತು. ಆದರೆ
ನಡೆಯುವುದರಲ್ಲಿ ನಂಬರ್ವಾರ್ ಆಗಿ ಬಿಡುತ್ತಾರೆ. ಅಂದಮೇಲೆ ತಿಳಿದುಕೊಂಡಿದ್ದಾರೆ, ಒಪ್ಪುವುದೂ
ಒಪ್ಪುತ್ತಾರೆ, ಇದರಲ್ಲಿ ಸರಿಯಿದೆ ಆದರೆ ಮೂರನೆಯ ಸ್ಥಿತಿ - ಅದನ್ನು ಒಪ್ಪಿಕೊಂಡು ತಿಳಿದುಕೊಂಡು
ನಡೆಯುವುದು. ಪ್ರತೀ ಹೆಜ್ಜೆಯಲ್ಲಿ ನಿಶ್ಚಯದ ಅಥವಾ ವಿಜಯದ ಪ್ರತ್ಯಕ್ಷ ಚಿಹ್ನೆಗಳು ಕಾಣಿಸಲಿ.
ಇದರಲ್ಲಿ ಅಂತರವಿದೆ ಆದ್ದರಿಂದ ನಂಬರ್ವನ್ ಆಗಿಬಿಟ್ಟೆವು. ತಿಳಿಯಿತೆ - (ಬ್ರಹ್ಮಾಬಾಬಾ) ನಂಬರ್ವನ್
ಏಕೆ ಆದರು! ಎಂದು.
ಇದಕ್ಕೇ ಹೇಳಲಾಗುತ್ತದೆ - ನಷ್ಟಮೋಹ. ನಷ್ಟಮೋಹದ ಪರಿಭಾಷೆಯು ಬಹಳ ಗುಹ್ಯವಾದುದು. ಅದನ್ನೆಂದಾದರೂ
ತಿಳಿಸುತ್ತೇವೆ. ನಿಶ್ಚಯಬುದ್ಧಿಯು ನಷ್ಟಮೋಹ ಮೆಟ್ಟಿಲಾಗಿದೆ. ಒಳ್ಳೆಯದು. ಇಂದು ಇನ್ನೊಂದು ಗ್ರೂಪ್
ಬಂದಿದ್ದಾರೆ. ಮನೆಯ ಬಾಲಕರೇ ಮಾಲೀಕರಾಗಿದ್ದಾರೆ ಅಂದಮೇಲೆ ಮನೆಯ ಮಾಲೀಕರು ತನ್ನ ಮನೆಗೆ
ಬಂದಿದ್ದಾರೆ, ಹೀಗೆ ಹೇಳುವಿರಲ್ಲವೆ. ಮನೆಯಲ್ಲಿ ಬಂದಿದ್ದೀರಾ , ಅಥವಾ ಮನೆಯಿಂದ ಬಂದಿದ್ದೀರಾ?
ಒಂದುವೇಳೆ ಅದನ್ನು ಮನೆಯೆಂದು ತಿಳಿಯುತ್ತೀರೆಂದರೆ ಮಮತ್ವವುಂಟಾಗುತ್ತದೆ. ಆದರೆ ಅದು
ತತ್ಕಾಲಕ್ಕಾಗಿ ಸೇವಾಸ್ಥಾನವಾಗಿದೆ. ಮನೆಯಂತು ಎಲ್ಲರದೂ ಮಧುಬನವಲ್ಲವೆ. ಆತ್ಮದ ಲೆಕ್ಕದಿಂದ
ಪರಮಧಾಮವು ಮನೆಯಾಗಿದೆ, ಬ್ರಾಹ್ಮಣರ ಸಂಬಂಧದಲ್ಲಿ ಮಧುಬನ ಮನೆಯಾಗಿದೆ. ಯಾವಾಗ ಹೀಗೂ
ಹೇಳುತ್ತೀರಲ್ಲವೆ - ನಮ್ಮ ಹೆಡ್ ಆಫೀಸ್ ಮೌಂಟ್ಅಬು ಆಗಿದೆ, ಅಂದಮೇಲೆ ಎಲ್ಲಿರುತ್ತೀರಿ ಅದೇನಾಯಿತು?
ಆಫೀಸ್ ಆಯಿತಲ್ಲವೆ, ಆದ್ದರಿಂದ ಹೆಡ್ಆಫೀಸ್ ಎಂದು ಹೇಳುತ್ತೀರಿ. ಅಂದಾಗ ಮನೆಯಿಂದ ಬಂದಿಲ್ಲ ಆದರೆ
ಮನೆಯಲ್ಲಿ ಬಂದಿದ್ದೀರಿ. ಆಫೀಸಿನಿಂದ ಎಂದಾದರೂ ಯಾರನ್ನೇ ಆದರೂ ಬದಲಾಯಿಸಬಹುದು. ಮನೆಯಿಂದ
ಹೊರಹಾಕಲು ಸಾಧ್ಯವಿಲ್ಲ. ಆಫೀಸ್ನ್ನು ಬದಲಾಯಿಸಬಹುದು, ಮನೆಯೆಂದು ತಿಳಿಯುತ್ತೀರೆಂದರೆ
ನನ್ನದೆನ್ನುವುದಿರುತ್ತದೆ. ಸೇವಾಕೇಂದ್ರವನ್ನೂ ಮನೆಯನ್ನಾಗಿ ಮಾಡಿಕೊಂಡು ಬಿಡುತ್ತೀರಿ, ಆದ್ದರಿಂದ
ನನ್ನದು ಎನ್ನುವುದು ಬರುತ್ತದೆ. ಸೇವಾಕೇಂದ್ರವೆಂದು ತಿಳಿಯುತ್ತೀರೆಂದರೆ ನನ್ನದೆನ್ನುವುದು
ಇರುವುದಿಲ್ಲ. ಮನೆಯಾಗಿ ಬಿಡುತ್ತದೆ, ವಿಶ್ರಾಂತಿ ಸ್ಥಾನವಾಗಿ ಬಿಡುತ್ತದೆ. ಆದ್ದರಿಂದ
ನನ್ನದೆನ್ನುವುದಿರುತ್ತದೆ. ಅಂದಮೇಲೆ ತಮ್ಮ ಮನೆಯಲ್ಲಿ ಬಂದಿದ್ದೀರಿ. ತಮ್ಮ ಮನೆ ದಾತನ ಧರಣಿಯೆಂದು
ಯಾವ ಹೇಳಿಕೆಯಿದೆ. ಇದು ಯಾವ ಸ್ಥಾನಕ್ಕಾಗಿ ಗಾಯನವಿರುವುದಾಗಿದೆ? ವಾಸ್ತವಿಕವಾಗಿ ದಾತಾನ ಧರಣಿಯು
ತಮ್ಮ ಮನೆ, ಅಂದಮೇಲೆ ಮಧುಬನವಲ್ಲವೆ. ತಮ್ಮ ಮನೆಯಲ್ಲಿ ಅರ್ಥಾತ್ ದಾತಾನ ಮನೆಯಲ್ಲಿ ಬಂದಿದ್ದೀರಿ.
ಮನೆ ಅಥವಾ ಧರಣಿಯೆಂದಾದರೂ ಹೇಳಿ, ಮಾತು ಒಂದೇ ಆಯಿತು. ತಮ್ಮ ಮನೆಯಲ್ಲಿ ಬರುವುದರಿಂದ ವಿಶ್ರಾಂತಿ
ಸಿಗುತ್ತದೆಯಲ್ಲವೆ. ಮನಸ್ಸಿನ ವಿಶ್ರಾಂತಿ, ತನುವಿನದೂ ವಿಶ್ರಾಂತಿ, ಧನದ ವಿಶ್ರಾಂತಿಯೂ ಸಿಗುತ್ತದೆ.
ಸಂಪಾದನೆ ಮಾಡುವುದಕ್ಕಾಗಿ ಹೋಗಬೇಕಾಗುತ್ತದೆಯೇನು! ಅಡುಗೆ ತಯಾರು ಮಾಡಿದಾಗ ತಿನ್ನಬೇಕು- ಇದರಿಂದಲೂ
ವಿಶ್ರಾಂತಿ ಸಿಕ್ಕಿ ಬಿಡುತ್ತದೆ, ತಟ್ಟೆಯಲ್ಲಿ ಮಾಡಿ-ಮಾಡಲ್ಪಟ್ಟ ಭೋಜನವು ಸಿಗುತ್ತದೆ. ಇಲ್ಲಂತು
ರಾಜರಾಗಿ ಬಿಡುತ್ತೀರಿ. ಹೇಗೆ ರಾಜರು(ದೇವತೆಗಳ)ಗಳ ಮಂದಿರಗಳಲ್ಲಿ ಗಂಟೆಯನ್ನು ಹೊಡೆಯುತ್ತಾರಲ್ಲವೆ.
ದೇವತೆಯನ್ನು ಏಳಿಸಬೇಕಾಗುತ್ತದೆ, ಮಲಗಿಸಬೇಕಾಗುವುದೆಂದರೆ ಗಂಟೆ ಬಾರಿಸುತ್ತಾರೆ. ಭೋಗವನ್ನಿಟಾಗಲೂ
ಗಂಟೆಯನ್ನು ಬಾರಿಸುತ್ತಾರೆ. ತಮ್ಮದೂ ಸಹ ಗಂಟೆ ಹೊಡೆಯುತ್ತದೆಯಲ್ಲವೆ. ಇತ್ತೀಚೆಗೆ ಫ್ಯಾಷನೇಬಲ್
ಆಗಿದೆ ಆದ್ದರಿಂದ ಹಾಡನ್ನು ಹಾಕಿ ಬಿಡುತ್ತಾರೆ. ರೆಕಾರ್ಡ್ ಹಾಡುಗಳಿಂದ ಮಲಗಿಸುತ್ತೀರಿ, ಮತ್ತೆ
ಅದರಿಂದಲೇ ಏಳಿಸುತ್ತೀರೆಂದರೆ ರಾಜರಾಗಿ ಬಿಟ್ಟಿರಲ್ಲವೆ. ಇಲ್ಲಿಯದೇ ಮತ್ತೆ ಭಕ್ತಿಮಾರ್ಗದಲ್ಲಿ
ಕಾಪಿ ಮಾಡುತ್ತಾರೆ. ಇಲ್ಲಿಯೂ 3-4 ಬಾರಿ ಭೋಗವನ್ನಿಡಲಾಗುತ್ತದೆ. ಚೈತನ್ಯ ದೇವತೆಗಳಿಗೆ 4
ಗಂಟೆಯಿಂದ ಭೋಗವನ್ನಿಡುವುದು ಪ್ರಾರಂಭವಾಗಿ ಬಿಡುತ್ತದೆ. ಅಮೃತವೇಳೆಯಿಂದ ಭೋಗವು ಪ್ರಾರಂಭವಾಗಿ
ಬಿಡುತ್ತದೆ. ಚೈತನ್ಯ ಸ್ವರೂಪದಲ್ಲಿ ಭಗವಂತನು ಮಕ್ಕಳ ಸೇವೆಯನ್ನು ಮಾಡುತ್ತಿದ್ದಾರೆ. ಭಗವಂತನ
ಸೇವೆಯನ್ನಂತು ಎಲ್ಲರೂ ಮಾಡುತ್ತಾರೆ, ಆದರೆ ಇಲ್ಲಿ ಭಗವಂತನು ಸೇವೆ ಮಾಡುತ್ತಾರೆ. ಯಾರದು? ಚೈತನ್ಯ
ದೇವತೆಗಳ ಸೇವೆ. ಈ ನಿಶ್ಚಯವು ಸದಾಕಾಲವೇ ಖುಷಿಯಲ್ಲಿ ತೂಗಾಡಿಸುತ್ತಿರುತ್ತದೆ. ತಿಳಿಯಿತೆ - ಎಲ್ಲಾ
ಝೋನಿನವರು ಮುದ್ದಾದವರಿದ್ದಾರೆ. ಯಾವಾಗ ಯಾವ ಝೋನ್ ಬರುತ್ತದೆ ಅವರು ಮುದ್ದಾದ ಮಕ್ಕಳಾಗಿದ್ದಾರೆ.
ಮುದ್ದಾದ ಮಕ್ಕಳಂತು ಆಗಿದ್ದೀರಿ ಆದರೆ ಕೇವಲ ತಂದೆಗೆ ಮುದ್ದಾದ ಮಕ್ಕಳಾಗಿರಿ. ಮಾಯೆಗಲ್ಲ. ಮಾಯೆಗೆ
ಮುದ್ದಾದ ಮಕ್ಕಳಾಗುತ್ತೀರೆಂದರೆ ಮತ್ತೆ ಬಹಳ ಹೊಡೆದಾಟ ಮಾಡುತ್ತೀರಿ. ಯಾರೆಲ್ಲರೂ ಬಂದಿದ್ದಾರೆ,
ಭಾಗ್ಯವಂತರು ಭಗವಂತನ ಬಳಿ ಬಂದಿದ್ದೀರಿ. ಒಳ್ಳೆಯದು!
ಸದಾ ಪ್ರತೀ ಸಂಕಲ್ಪದಲ್ಲಿ ನಿಶ್ಚಯಬುದ್ಧಿ ವಿಜಯಿರತ್ನಗಳಾಗಿ ಸದಾ ಭಗವಂತ ಮತ್ತು ಭಾಗ್ಯದ ಸ್ಮೃತಿ
ಸ್ವರೂಪ ಆತ್ಮರಿಗೆ, ಸದಾ ಸೋಲು ಮತ್ತು ಗೆಲುವು ಎರಡರಲ್ಲಿಯೂ ವಿಜಯದ ಅನುಭವ ಮಾಡುವವರಿಗೆ, ಸದಾ
ಆಶ್ರಯ ಅರ್ಥಾತ್ ಸಹಯೋಗವನ್ನು ಕೊಡುವಂತಹ ಮಾಸ್ಟರ್ ಆಶ್ರಯದಾತಾ ಆತ್ಮರಿಗೆ, ಸದಾ ಸ್ವಯಂನ್ನು
ತಂದೆಯ ಜೊತೆಯ ಅನುಭವ ಮಾಡುವಂತಹ ಶ್ರೇಷ್ಠಾತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ
ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ -
1. ಎಲ್ಲರೂ ಒಂದು ಲಗನ್ನಿನಲ್ಲಿ ಮಗ್ನರಾಗಿರುವ ಶ್ರೇಷ್ಠಾತ್ಮರಾಗಿದ್ದೀರಾ? ಸಾಧಾರಣರಂತು ಅಲ್ಲವೇ.
ಸದಾ ಶ್ರೇಷ್ಠಾತ್ಮರು ಯಾವುದೇ ಕರ್ಮವನ್ನು ಮಾಡುವರು, ಅದು ಶ್ರೇಷ್ಠವಾಗಿರುತ್ತದೆ. ಯಾವಾಗ ಜನ್ಮವೇ
ಶ್ರೇಷ್ಠವಿದೆ ಅಂದಮೇಲೆ ಕರ್ಮವು ಸಾಧಾರಣವಾಗಿ ಹೇಗಾಗುತ್ತದೆ! ಯಾವಾಗ ಜನ್ಮವು ಬದಲಾಯಿತೆಂದಾಗ
ಕರ್ಮವೂ ಬದಲಾಗುತ್ತದೆ. ಹೆಸರು, ರೂಪ, ದೇಶ, ಕರ್ಮವೆಲ್ಲವೂ ಬದಲಾಗಿ ಬಿಡುತ್ತದೆ. ಅಂದಮೇಲೆ ಸದಾ
ಹೊಸ ಜನ್ಮ, ಹೊಸ ಜನ್ಮದ ನವೀನತೆಯ ಉಮ್ಮಂಗ-ಉತ್ಸಾಹದಲ್ಲಿರುತ್ತೀರಿ. ಯಾರು ಕೆಲಕೆಲವೊಮ್ಮೆ
ಇರುವವರಾಗಿದ್ದಾರೆ, ಅವರಿಗೆ ರಾಜ್ಯವೂ ಕೆಲಕೆಲವೊಮ್ಮೆ ಸಿಗುತ್ತದೆ.
ಯಾರು ನಿಮಿತ್ತರಾಗಿರುವ ಆತ್ಮರಾಗಿದ್ದಾರೆ, ಅವರು ನಿಮಿತ್ತರಾಗುವ ಫಲವು ಸಿಗುತ್ತಿರುತ್ತದೆ. ಮತ್ತು
ಫಲವನ್ನು ಅನುಭವಿಸುವ ಆತ್ಮರು ಶಕ್ತಿಶಾಲಿಯಾಗಿರುತ್ತಾರೆ. ಇದು ಪ್ರತ್ಯಕ್ಷ ಫಲವಾಗಿದೆ, ಶ್ರೇಷ್ಠ
ಯುಗದ ಫಲವಾಗಿದೆ. ಇದರ ಫಲವನ್ನನುಭವಿಸುವವರು ಸದಾ ಶಕ್ತಿಶಾಲಿಯಾಗಿರುತ್ತಾರೆ. ಇಂತಹ ಶಕ್ತಿಶಾಲಿ
ಆತ್ಮರು ಪರಿಸ್ಥಿತಿಗಳ ಮೇಲೆ ಸಹಜವಾಗಿ ವಿಜಯವನ್ನು ಪಡೆದುಕೊಳ್ಳುತ್ತಾರೆ. ಪರಿಸ್ಥಿತಿಯು ಕೆಳಗೆ
ಮತ್ತು ಅವರು ಮೇಲೆ. ಹೇಗೆ ಶ್ರೀಕೃಷ್ಣನನ್ನು ತೋರಿಸುತ್ತಾರೆ- ಅವನು ಸರ್ಪದ ಮೇಲೂ ವಿಜಯಿಯಾದನು.
ಅಂದಮೇಲೆ ಇದು ತಮ್ಮ ಚಿತ್ರವಾಗಿದೆ. ಎಷ್ಟೇ ವಿಷಪೂರಿತವಾದ ಸರ್ಪವಾಗಿರಲಿ ಆದರೆ ತಾವು ಅದರ ಮೇಲೂ
ವಿಜಯವನ್ನು ಪ್ರಾಪ್ತಿ ಮಾಡಿಕೊಂಡು ನರ್ತನ ಮಾಡಿಸುವವರಾಗಿದ್ದೀರಿ. ಇದೇ ಶ್ರೇಷ್ಠ ಶಕ್ತಿಶಾಲಿ
ಸ್ಮೃತಿಯು ಸರ್ವರನ್ನು ಸಮರ್ಥರನ್ನಾಗಿ ಮಾಡಿಬಿಡುತ್ತದೆ. ಮತ್ತು ಎಲ್ಲಿ ಸಮರ್ಥತೆಯಿರುತ್ತದೆ ಅಲ್ಲಿ
ವ್ಯರ್ಥವು ಸಮಾಪ್ತಿಯಾಗಿ ಬಿಡುತ್ತದೆ. ಸಮರ್ಥ ತಂದೆಯ ಜೊತೆಯಿದೆ, ಇದೇ ಸ್ಮೃತಿಯ ವರದಾನದಿಂದ ಸದಾ
ಮುಂದುವರೆಯುತ್ತಾ ಸಾಗಿರಿ.
2. ಎಲ್ಲರೂ ಅಮರ ತಂದೆಯ ಅಮರ ಆತ್ಮರಾಗಿದ್ದೀರಲ್ಲವೆ. ಅಮರರಾಗಿ ಬಿಟ್ಟಿರಲ್ಲವೇ? ಶರೀರವನ್ನು
ಬಿಡುತ್ತೀರೆಂದರೂ ಅಮರರಾಗಿದ್ದೀರಿ, ಏಕೆ? ಏಕೆಂದರೆ ಭಾಗ್ಯವನ್ನು ರೂಪಿಸಿಕೊಂಡು ಹೋಗುತ್ತೀರಿ. ಕೈ
ಖಾಲಿಯಾಗಿ ಹೋಗುವುದಿಲ್ಲ. ಆದ್ದರಿಂದ ಸಾಯುವುದಿಲ್ಲ. ಸಂಪನ್ನರಾಗಿ ಹೋಗಬೇಕಾಗಿದೆ. ಸಾಯುವುದು
ಅರ್ಥಾತ್ ಕೈ ಖಾಲಿಯಾಗಿ ಹೋಗುವುದು. ಸಂಪನ್ನರಾಗಿ ಹೋಗುವುದು ಎಂದರೆ ವಸ್ತ್ರವನ್ನು
ಬದಲಾಯಿಸಿಕೊಳ್ಳುವುದು. ಅಂದಮೇಲೆ ಅಮರರಾಗಿ ಬಿಟ್ಟಿರಲ್ಲವೆ. ಅಮರಭವದ ವರದಾನವು ಸಿಕ್ಕಿ ಬಿಟ್ಟಿತು,
ಇದರಲ್ಲಿ ಮೃತ್ಯುವಿನ ವಶರಾಗುವುದಿಲ್ಲ. ಹೋಗಬೇಕು ಎನ್ನುವುದೂ ಗೊತ್ತಿದೆ, ಮತ್ತೆ ಬರಲೂಬೇಕು
ಆದ್ದರಿಂದ ಅಮರರಾಗಿದ್ದೀರಿ. ಅಮರ ಕಥೆಯನ್ನು ಕೇಳಿ-ಕೇಳಿ ಅಮರರಾಗಿ ಬಿಟ್ಟಿರಿ. ಪ್ರತಿನಿತ್ಯವೂ
ಪ್ರೀತಿಯಿಂದ ಕಥೆಯನ್ನು ಕೇಳುತ್ತೀರಲ್ಲವೆ. ತಂದೆಯು ಅಮರ ಕಥೆಯನ್ನು ತಿಳಿಸಿ ಅಮರಭವದ ವರದಾನವನ್ನು
ಕೊಟ್ಟು ಬಿಡುತ್ತಾರೆ. ಸದಾ ಇದೇ ಖುಷಿಯಲ್ಲಿರಿ – ಅಮರರಾಗಿ ಬಿಟ್ಟೆವು, ಸಂಪನ್ನರಾಗಿ ಬಿಟ್ಟೆವು,
ಅಷ್ಟೆ. ಖಾಲಿಯಾಗಿದ್ದೆವು ಸಂಪನ್ನರಾಗಿ ಬಿಟ್ಟೆವು. ಈ ರೀತಿ ಸಂಪನ್ನರಾಗಿ ಬಿಟ್ಟೆವು, ಅದರಿಂದ
ಅನೇಕ ಜನ್ಮಗಳು ಖಾಲಿಯಾಗಲು ಸಾಧ್ಯವಿಲ್ಲ.
3. ಎಲ್ಲರೂ ನೆನಪಿನ ಯಾತ್ರೆಯಲ್ಲಿ ಮುಂದುವರೆಯುತ್ತಾ ಹೋಗುತ್ತಿದ್ದೀರಲ್ಲವೆ. ಈ ಆತ್ಮಿಕ ಯಾತ್ರೆಯು
ಸದಾಕಾಲವೂ ಸುಖದ ಅನುಭವವನ್ನು ಮಾಡಿಸುತ್ತದೆ. ಈ ಯಾತ್ರೆಯಿಂದ ಸದಾಕಾಲಕ್ಕಾಗಿ ಸರ್ವಯಾತ್ರೆಗಳು
ಸಂಪೂರ್ಣವಾಗಿ ಬಿಡುತ್ತದೆ. ಆತ್ಮಿಕ ಯಾತ್ರೆಯನ್ನು ಮಾಡಿದರೆ ಎಲ್ಲಾ ಯಾತ್ರೆಗಳು ಆಗಿ ಬಿಟ್ಟಿತು,
ಮತ್ತ್ಯಾವುದೇ ಯಾತ್ರೆಗಳನ್ನು ಮಾಡುವ ಅವಶ್ಯಕತೆಯೂ ಇರುವುದಿಲ್ಲ. ಏಕೆಂದರೆ ಮಹಾನ್
ಯಾತ್ರೆಯಾಗಿದೆಯಲ್ಲವೆ. ಮಹಾನ್ ಯಾತ್ರೆಯಲ್ಲಿ ಎಲ್ಲಾ ಯಾತ್ರೆಗಳು ಸಮಾವೇಶವಾಗಿದೆ. ಮುಂಚೆ
ಯಾತ್ರೆಗಳಲ್ಲಿ ಅಲೆದಾಡುತ್ತಿದ್ದೆವು, ಈಗ ಈ ಆತ್ಮಿಕ ಯಾತ್ರೆಯಿಂದ ನೆಲೆಯಲ್ಲಿ ತಲುಪಿ ಬಿಟ್ಟೆವು.
ಈಗ ಮನಸ್ಸಿಗೂ ನೆಲೆಯು ಸಿಕ್ಕಿತು, ತನುವಿಗೂ ನೆಲೆಯು ಸಿಕ್ಕಿದೆ. ಒಂದೇ ಯಾತ್ರೆಯಿಂದ ಅನೇಕ
ಪ್ರಕಾರದ ಅಲೆದಾಟಗಳು ಬಂಧ್ ಆಗಿ ಬಿಟ್ಟಿತು. ಹಾಗಾದರೆ ಸದಾ ಆತ್ಮಿಕ ಯಾತ್ರಿಯಾಗಿದ್ದೇವೆ ಎನ್ನುವ
ಸ್ಮೃತಿಯಲ್ಲಿರಿ, ಇದರಿಂದ ಸದಾ ಉಪರಾಂ ಆಗಿರುತ್ತೀರಿ, ಭಿನ್ನವಾಗಿರುತ್ತೀರಿ,
ನಿರ್ಮೋಹಿಯಾಗಿರುತ್ತೀರಿ. ಯಾರಲ್ಲಿಯೂ ಮೋಹವುಂಟಾಗುವುದಿಲ್ಲ. ಯಾತ್ರಿಗೆ ಯಾರಲ್ಲಿಯೂ
ಮೋಹವುಂಟಾಗುವುದಿಲ್ಲ. ಇಂತಹ ಸ್ಥಿತಿಯು ಸದಾ ಇರಲಿ.
ವಿದಾಯಿಯ ಸಮಯದಲ್ಲಿ:-
ಬಾಪ್ದಾದಾರವರು ದೇಶ-ವಿದೇಶದ ಎಲ್ಲಾಮಕ್ಕಳನ್ನು ನೋಡುತ್ತಾ ಖುಷಿಯಾಗುತ್ತಾರೆ
ಏಕೆಂದರೆ ಎಲ್ಲರೂ ಸಹಯೋಗಿ ಮಕ್ಕಳಾಗಿದ್ದಾರೆ. ಸಹಯೋಗಿ ಮಕ್ಕಳಿಗೆ ಬಾಪ್ದಾದಾರವರು ಸದಾ ಹೃದಯ
ಸಿಂಹಾಸನಾಧಿಕಾರಿ ಎಂದು ತಿಳಿದು ನೆನಪು ಮಾಡುತ್ತಾರೆ. ನಿಶ್ಚಯಬುದ್ಧಿ ಆತ್ಮರೆಲ್ಲರಿಗೂ ತಂದೆಯ
ಪ್ರೀತಿಯಿದೆ ಏಕೆಂದರೆ ಎಲ್ಲರೂ ಕೊರಳಿನ ಹಾರವಾಗಿ ಬಿಟ್ಟರು. ಒಳ್ಳೆಯದು – ಎಲ್ಲಾ ಮಕ್ಕಳು ಸೇವೆಯ
ವೃದ್ಧಿಯನ್ನು ಬಹಳ ಚೆನ್ನಾಗಿ ಪ್ರಾಪ್ತಿ ಮಾಡಿಸುತ್ತಿದ್ದಾರೆ. ಒಳ್ಳೆಯದು.
ವರದಾನ:
ಸತ್ಯ ಸೇವೆಯ ಮೂಲಕ ಅವಿನಾಶಿ, ಅಲೌಕಿಕ ಖುಷಿಯ ಸಾಗರದಲ್ಲಿ ತೇಲಾಡುವ ಅದೃಷ್ಟವಂತ ಆತ್ಮ ಭವ.
ಯಾವ ಮಕ್ಕಳು
ಸೇವೆಗಳಲ್ಲಿ ಬಾಪ್ದಾದಾ ಮತ್ತು ನಿಮಿತ್ತವಾಗಿರುವ ಹಿರಿಯ ಸ್ನೇಹದ ಆಶೀರ್ವಾದಗಳನ್ನು ಪ್ರಾಪ್ತಿ
ಮಾಡಿಕೊಳ್ಳುತ್ತಾರೆ, ಅವರಲ್ಲಿ ಅಲೌಕಿಕ, ಆತ್ಮಿಕ ಖುಷಿಯ ಅನುಭವವಾಗುತ್ತದೆ. ಅವರು ಸೇವೆಗಳ ಮೂಲಕ
ಆಂತರಿಕ ಖುಷಿ, ಆತ್ಮಿಕ ಮೋಜು, ಬೇಹದ್ದಿನ ಪ್ರಾಪ್ತಿಯ ಅನುಭವ ಮಾಡುತ್ತಾ, ಸದಾ ಖುಷಿಯ ಸಾಗರದಲ್ಲಿ
ತೇಲಾಡುತ್ತಿರುತ್ತಾರೆ. ಸತ್ಯ ಸೇವೆಯು ಸರ್ವರ ಸ್ನೇಹ, ಸರ್ವರ ಮೂಲಕ ಅವಿನಾಶಿ ಸಮ್ಮಾನ ಮತ್ತು
ಖುಷಿಯ ಆಶೀರ್ವಾದಗಳನ್ನು ಪ್ರಾಪ್ತಿ ಮಾಡಿಕೊಳ್ಳುವ ಅದೃಷ್ಟದ ಶ್ರೇಷ್ಠ ಭಾಗ್ಯದ ಅನುಭವ
ಮಾಡಿಸುತ್ತದೆ. ಯಾರು ಸದಾ ಖುಷಿಯಾಗಿದ್ದಾರೆ ಅವರೇ ಅದೃಷ್ಟವಂತರಾಗಿದ್ದಾರೆ.
ಸ್ಲೋಗನ್:
ಸದಾ ಹರ್ಷಿತ
ಅಥವಾ ಆಕರ್ಷಣಾ ಮೂರ್ತಿಯಾಗುವುದಕ್ಕಾಗಿ ಸಂತುಷ್ಟಮಣಿಯಾಗಿರಿ.
ಸೂಚನೆ:
ಇಂದು ಅಂತರಾಷ್ಟ್ರೀಯ
ಯೋಗ ದಿನ, ಮೂರನೇ ಭಾನುವಾರವಾಗಿದೆ. ಸಂಜೆ 6.30ರಿಂದ 7.30ರವರೆಗೆ ಎಲ್ಲಾ ಸಹೋದರ-ಸಹೋದರಿಯರು
ಸಂಘಟಿತ ರೂಪದಲ್ಲಿ ಒಂದು ಸ್ಥಾನದಲ್ಲಿ ಸೇರಿ ಯೋಗಾಭ್ಯಾಸದಲ್ಲಿ ಇದೇ ಶುಭ ಸಂಕಲ್ಪ ಮಾಡಿರಿ -
ನಾನಾತ್ಮನ ಮೂಲಕ ಪವಿತ್ರತೆಯ ಕಿರಣಗಳು ಹೊರ ಬಂದು ಇಡೀ ವಿಶ್ವವನ್ನು ಪಾವನಗೊಳಿಸುತ್ತಿದೆ. ನಾನು
ಮಾಸ್ಟರ್ ಪತಿತ-ಪಾವನಿ ಆತ್ಮನಾಗಿದ್ದೇನೆ.