19.02.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ನಡೆಯುತ್ತಾ-ತಿರುಗಾಡುತ್ತಾ ನೆನಪಿನಲ್ಲಿರುವ ಅಭ್ಯಾಸ ಮಾಡಬೇಕಾಗಿದೆ, ಜ್ಞಾನ ಮತ್ತು ಯೋಗ - ಇವೆರಡೇ ಮುಖ್ಯ ಮಾತುಗಳಾಗಿವೆ, ಯೋಗವೆಂದರೆ ನೆನಪು”

ಪ್ರಶ್ನೆ:
ಬುದ್ಧಿವಂತ ಮಕ್ಕಳು ಯಾವ ಮಾತನ್ನು ಬಾಯಿಂದ ಹೇಳುವುದಿಲ್ಲ?

ಉತ್ತರ:
ನಮಗೆ ಯೋಗವನ್ನು ಕಲಿಸಿ ಎಂಬ ಮಾತನ್ನು ಬುದ್ಧಿವಂತ ಮಕ್ಕಳು ಎಂದೂ ಹೇಳುವುದಿಲ್ಲ. ತಂದೆಯನ್ನು ನೆನಪು ಮಾಡುವುದನ್ನು ಕಲಿಯಬೇಕಾಗುತ್ತದೆಯೇ! ಈ ಪಾಠಶಾಲೆಯು ಓದಲು ಮತ್ತು ಓದಿಸುವುದಕ್ಕೋಸ್ಕರವೇ ಇದೆ. ನೆನಪು ಮಾಡಲು ವಿಶೇಷವಾಗಿ ಕುಳಿತುಕೊಳ್ಳಬೇಕೆಂದಲ್ಲ. ನೀವು ಕರ್ಮ ಮಾಡುತ್ತಾ ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ.

ಓಂ ಶಾಂತಿ.
ಈಗ ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ. ಮಕ್ಕಳಿಗೂ ತಿಳಿದಿದೆ - ಆತ್ಮಿಕ ತಂದೆಯು ಈ ರಥ (ಬ್ರಹ್ಮಾ) ದ ಮೂಲಕ ತಿಳಿಸುತ್ತಾರೆ. ಅವರ ಮಕ್ಕಳಾಗಿದ್ದೀರೆಂದಮೇಲೆ ತಂದೆ ಅಥವಾ ಯಾವುದೇ ಸಹೋದರ-ಸಹೋದರಿಯರಿಗೆ ನನಗೆ ತಂದೆಯ ನೆನಪು ಮಾಡುವುದನ್ನು ಕಲಿಸಿ ಎಂದು ಹೇಳುವುದು ತಪ್ಪಾಗುತ್ತದೆ. ನೀವೇನು ಚಿಕ್ಕ ಮಕ್ಕಳಲ್ಲ ಅಲ್ಲವೆ! ಇದಂತೂ ನಿಮಗೆ ತಿಳಿದಿದೆ - ಮುಖ್ಯವಾದುದು ಆತ್ಮವಾಗಿದೆ. ಅದು ಅವಿನಾಶಿಯಾಗಿದೆ, ಶರೀರವು ವಿನಾಶಿಯಾಗಿದೆ. ಆತ್ಮವೇ ದೊಡ್ಡದಾಯಿತಲ್ಲವೆ. ನಾವು ಆತ್ಮಗಳಾಗಿದ್ದೇವೆ, ಶರೀರದ ಮೂಲಕ ಮಾತನಾಡುತ್ತೇವೆಂಬುದು ಅಜ್ಞಾನ ಕಾಲದಲ್ಲಿ ಯಾರಿಗೂ ತಿಳಿದಿರುವುದಿಲ್ಲ. ನಾನು ಇದನ್ನು ಮಾಡುತ್ತೇನೆಂದು ದೇಹದಭಾನದಲ್ಲಿ ಬಂದೇ ಮಾತನಾಡುತ್ತಾರೆ. ಈಗ ನೀವು ಆತ್ಮಾಭಿಮಾನಿಗಳಾಗುತ್ತೀರಿ. ನಿಮಗೆ ತಿಳಿದಿದೆ, ನಾನು ಈ ಶರೀರದ ಮೂಲಕ ಮಾತನಾಡುತ್ತೇನೆ, ಕರ್ಮ ಮಾಡುತ್ತೇನೆಂದು ಆತ್ಮವೇ ಹೇಳುತ್ತದೆ. ಆತ್ಮವು ಪುರುಷನಾಗಿದೆ - ಈ ಮಾತನ್ನು ಬಹಳಷ್ಟು ಕೇಳಿಯೂ ಇದ್ದೀರಿ. ನಮ್ಮನ್ನು ಯೋಗದಲ್ಲಿ ಕುಳ್ಳಿರಿಸಿ ಎಂದು ಹೇಳುತ್ತಾರೆ. ಸನ್ಮುಖದಲ್ಲಿ ಒಬ್ಬರು ಕುಳಿತುಕೊಳ್ಳುವರು ಏತಕ್ಕೆಂದರೆ ನಾವೂ ತಂದೆಯ ನೆನಪಿನಲ್ಲಿ ಕುಳಿತುಕೊಳ್ಳುವೆವು, ಇವರೂ ಸಹ ಕುಳಿತುಕೊಳ್ಳಲಿ ಎಂದು. ಪಾಠಶಾಲೆಯೇನು ಇದಕ್ಕೋಸ್ಕರವಲ್ಲ. ಓದುವುದಕ್ಕಾಗಿ ಈ ಪಾಠಶಾಲೆಯಿದೆ. ಇಲ್ಲಿ ಕುಳಿತೇ ನೀವು ನೆನಪು ಮಾಡಬೇಕೆಂದಲ್ಲ. ತಂದೆಯು ತಿಳಿಸುತ್ತಾರೆ - ನಡೆಯುತ್ತಾ-ತಿರುಗಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನು ನೆನಪು ಮಾಡಿ. ಇದಕ್ಕಾಗಿ ವಿಶೇಷವಾಗಿ ಕುಳಿತುಕೊಳ್ಳುವ ಅವಶ್ಯಕತೆಯೂ ಇಲ್ಲ. ಹೇಗೆ ರಾಮ-ರಾಮ ಎಂದು ಹೇಳಿ ಎಂದು ಕೆಲವರು ತಿಳಿಸುತ್ತಾರೆ, ರಾಮ-ರಾಮ ಎಂದು ಹೇಳದೇ ನೆನಪು ಮಾಡಲು ಸಾಧ್ಯವಿಲ್ಲವೆ? ನೆನಪಂತೂ ನಡೆದಾಡುತ್ತಾ-ತಿರುಗಾಡುತ್ತಲೂ ಮಾಡಬೇಕಾಗಿದೆ. ನೀವು ಕರ್ಮ ಮಾಡುತ್ತಾ ತಂದೆಯನ್ನು ನೆನಪು ಮಾಡಬೇಕಾಗಿದೆ. ಪ್ರಿಯತಮ-ಪ್ರಿಯತಮೆಯರು ವಿಶೇಷವಾಗಿ ಕುಳಿತು ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುವುದಿಲ್ಲ. ಕೆಲಸ ಕಾರ್ಯ, ಉದ್ಯೋಗ ಇತ್ಯಾದಿ ಎಲ್ಲವನ್ನೂ ಮಾಡಬೇಕಾಗಿದೆ, ಎಲ್ಲವನ್ನೂ ಮಾಡುತ್ತಾ ತಮ್ಮ ಪ್ರಿಯತಮನನ್ನು ನೆನಪು ಮಾಡುತ್ತಾ ಇರಿ. ಅವರನ್ನು ನೆನಪು ಮಾಡಲು ವಿಶೇಷವಾಗಿ ಎಲ್ಲಿಯಾದರೂ ಹೋಗಿ ಕುಳಿತುಕೊಳ್ಳಬೇಕೆಂದಿಲ್ಲ.

ನೀವು ಮಕ್ಕಳು ಗೀತೆ ಅಥವಾ ಕವಿತೆ ಇತ್ಯಾದಿಗಳನ್ನು ತಿಳಿಸುತ್ತೀರೆಂದರೆ ತಂದೆಯು ಹೇಳುತ್ತಾರೆ - ಇದು ಭಕ್ತಿಮಾರ್ಗದ್ದಾಗಿದೆ. ಶಾಂತಿದೇವ ಎಂದೂ ಹೇಳುತ್ತಾರೆ ಅಂದಮೇಲೆ ಪರಮಾತ್ಮನನ್ನೇ ನೆನಪು ಮಾಡುತ್ತಾರೆ, ಕೃಷ್ಣನನ್ನಲ್ಲ. ನಾಟಕದನುಸಾರ ಆತ್ಮವು ಅಶಾಂತವಾಗಿ ಬಿಟ್ಟಿದೆ. ಆದ್ದರಿಂದ ತಂದೆಯನ್ನು ಕರೆಯುತ್ತದೆ ಏಕೆಂದರೆ ಅವರೇ ಶಾಂತಿ, ಸುಖ, ಜ್ಞಾನದ ಸಾಗರನಾಗಿದ್ದಾರೆ. ಜ್ಞಾನ ಮತ್ತು ಯೋಗ ಮುಖ್ಯವಾಗಿ ಎರಡು ಮಾತುಗಳಿವೆ, ಯೋಗವೆಂದರೆ ನೆನಪು. ಅವರ ಹಠಯೋಗವು ಸಂಪೂರ್ಣ ಬೇರೆಯಾಗಿದೆ, ನಿಮ್ಮದು ರಾಜಯೋಗವಾಗಿದೆ. ಕೇವಲ ತಂದೆಯನ್ನು ನೆನಪು ಮಾಡಬೇಕು. ತಂದೆಯ ಮೂಲಕ ನೀವು ತಂದೆಯನ್ನು ಅರಿತುಕೊಂಡಿರುವುದರಿಂದ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೀರಿ. ನಿಮಗೆ ಎಲ್ಲದಕ್ಕಿಂತ ದೊಡ್ಡ ಖುಷಿಯೆಂದರೆ ಇದಾಗಿದೆ, ನಮಗೆ ಭಗವಂತನು ಓದಿಸುತ್ತಾರೆ. ಮೊಟ್ಟ ಮೊದಲಿಗೆ ಭಗವಂತನ ಪೂರ್ಣ ಪರಿಚಯವೂ ಇರಬೇಕು. ಹೇಗೆ ಆತ್ಮವು ನಕ್ಷತ್ರ ಮಾದರಿಯಾಗಿದೆ. ಹಾಗೆಯೇ ಭಗವಂತನೂ ನಕ್ಷತ್ರವಾಗಿದ್ದಾರೆ ಎಂಬ ಮಾತನ್ನು ಎಂದೂ ಅರಿತುಕೊಂಡಿರಲಿಲ್ಲ. ಅವರೂ ಆತ್ಮನಾಗಿದ್ದಾರೆ ಆದರೆ ಅವರಿಗೆ ಪರಮ ಆತ್ಮ, ಸುಪ್ರೀಂ ಸೌಲ್ ಎಂದು ಹೇಳಲಾಗುತ್ತದೆ. ಅವರೆಂದೂ ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ಅವರು ಜನನ-ಮರಣದಲ್ಲಿ ಬರುವುದಿಲ್ಲ. ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ತಾವೇ ಬಂದು ನಾನು ಹೇಗೆ ಬರುತ್ತೇನೆಂದು ತಿಳಿಸುತ್ತಾರೆ. ತ್ರಿಮೂರ್ತಿಯ ಗಾಯನವೂ ಸಹ ಭಾರತದಲ್ಲಿಯೇ ಇದೆ. ತ್ರಿಮೂರ್ತಿ ಬ್ರಹ್ಮಾ-ವಿಷ್ಣು-ಶಂಕರನ ಚಿತ್ರವನ್ನು ತೋರಿಸುತ್ತಾರೆ. ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರಲ್ಲವೆ. ಆ ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ಮರೆತು ಹೋಗಿದ್ದಾರೆ, ಕೇವಲ ತ್ರಿಮೂರ್ತಿಯ ಚಿತ್ರವನ್ನಿಟ್ಟುಬಿಟ್ಟಿದ್ದಾರೆ. ತ್ರಿಮೂರ್ತಿಯ ಮೇಲೆ ಅವಶ್ಯವಾಗಿ ಶಿವನಿರಬೇಕು, ಇದರಿಂದ ತ್ರಿಮೂರ್ತಿಗಳ ರಚಯಿತನು ಶಿವನಾಗಿದ್ದಾರೆಂದು ಅರ್ಥವಾಗಬೇಕು. ರಚನೆಯಿಂದ ಎಂದೂ ಆಸ್ತಿಯು ಸಿಗುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ಬ್ರಹ್ಮನಿಂದ ಏನೂ ಆಸ್ತಿಯು ಸಿಗುವುದಿಲ್ಲ. ವಿಷ್ಣುವಿಗಂತೂ ವಜ್ರ ವೈಡೂರ್ಯಗಳ ಕಿರೀಟವಿದೆಯಲ್ಲವೆ. ಶಿವ ತಂದೆಯ ಮೂಲಕ ಇಷ್ಟು ಶ್ರೇಷ್ಠರಾಗಿದ್ದಾರೆ, ಶಿವನ ಚಿತ್ರವು ಇಲ್ಲದೇ ಇರುವ ಕಾರಣ ಎಲ್ಲವೂ ಖಂಡನೆಯಾಗಿ ಬಿಡುತ್ತದೆ. ಪರಮಪಿತ ಪರಮಾತ್ಮನು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ. ಇದು ಅವರ ರಚನೆಯಾಗಿದೆ. ಈಗ ನೀವು ಮಕ್ಕಳಿಗೆ ತಂದೆಯಿಂದ 21 ಜನ್ಮಗಳಿಗಾಗಿ ಸ್ವರ್ಗದ ಆಸ್ತಿಯು ಸಿಗುತ್ತದೆ. ಭಲೇ ಅಲ್ಲಿ ಲೌಕಿಕ ತಂದೆಯಿಂದ ಆಸ್ತಿಯು ಸಿಕ್ಕಿದೆ ಎಂದು ತಿಳಿಯುತ್ತಾರೆ. ಇದು ಬೇಹದ್ದಿನ ತಂದೆಯಿಂದ ಪಡೆದಿರುವ ಪ್ರಾಲಬ್ಧವೆಂದು ಅಲ್ಲಿ ತಿಳಿದಿರುವುದಿಲ್ಲ. ಇದು ನಿಮಗೆ ಈಗ ತಿಳಿದಿದೆ. ಇಲ್ಲಿನ ಸಂಪಾದನೆಯು ಅಲ್ಲಿ 21 ಜನ್ಮಗಳವರೆಗೆ ನಡೆಯುತ್ತದೆ. ಈ ಜ್ಞಾನವು ಸ್ವಲ್ಪವೂ ತಿಳಿದಿರುವುದಿಲ್ಲ, ಈ ಜ್ಞಾನವು ದೇವತೆಗಳಲ್ಲಾಗಲಿ, ಶೂದ್ರರಲ್ಲಾಗಲಿ ಇರುವುದಿಲ್ಲ. ಇದು ನೀವು ಬ್ರಾಹ್ಮಣರಲ್ಲಿಯೇ ಇದೆ. ಆತ್ಮಿಕ ಜ್ಞಾನವಾಗಿದೆ, ಆಧ್ಯಾತ್ಮಿಕತೆಯ ಅರ್ಥವನ್ನೂ ಸಹ ತಿಳಿದುಕೊಂಡಿಲ್ಲ. ಡಾಕ್ಟರ್ ಆಫ್ ಫಿಲಾಸಫಿ ಎಂದು ಹೇಳುತ್ತಾರೆ. ಡಾಕ್ಟರ್ ಆಫ್ ಸ್ಪಿರಿಚ್ಯುಯಲ್ ನಾಲೆಡ್ಜ್ ಒಬ್ಬರೇ ತಂದೆ ಆಗಿದ್ದಾರೆ. ತಂದೆಗೆ ವೈದ್ಯರೆಂದೂ ಹೇಳಲಾಗುತ್ತದೆಯಲ್ಲವೆ. ಭಲೆ ಬಿರುದನ್ನೂ ಕೊಡುತ್ತಾರೆ ಆದರೆ ವಾಸ್ತವದಲ್ಲಿ ಒಬ್ಬ ತಂದೆಯೇ ಆತ್ಮಿಕ ವೈದ್ಯನಾಗಿದ್ದಾರೆ, ಅವರು ಆತ್ಮಕ್ಕೆ ಇಂಜೆಕ್ಷನ್ ಕೊಡುತ್ತಾರೆ. ಅದು ಭಕ್ತಿಯಾಗಿದೆ, ಅವರಿಗೆ ಡಾಕ್ಟರ್ ಆಫ್ ಭಕ್ತಿಯೆಂದು ಹೇಳಬೇಕು. ಅದರಿಂದ ಲಾಭವೇನೂ ಆಗುವುದಿಲ್ಲ. ಅಂದಮೇಲೆ ಅವರನ್ನು ವೈದ್ಯರೆಂದು ಹೇಗೆ ಹೇಳುವುದು. ವೈದ್ಯರಂತೂ ಲಾಭವನ್ನು ಕೊಡಿಸುತ್ತಾರೆ. ಈ ತಂದೆಯು ಅವಿನಾಶಿ ಜ್ಞಾನಸರ್ಜನ್ರಾಗಿದ್ದಾರೆ, ವೈದ್ಯರಿಂದ ನೀವು ಸದಾ ಆರೋಗ್ಯವಂತರಾಗುತ್ತೀರಿ. ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಹೊರಗಿನವರಿಗೇನು ಗೊತ್ತು! ತಂದೆಗೆ ಅವಿನಾಶಿ ಸರ್ಜನ್ರೆಂದು ಹೇಳಲಾಗುತ್ತದೆ. ಆತ್ಮಗಳಲ್ಲಿ ಯಾವ ವಿಕಾರದ ತುಕ್ಕು ಹಿಡಿದಿದೆ ಅದನ್ನು ತೆಗೆಯುವುದು, ಪತಿತರನ್ನು ಪಾವನ ಮಾಡಿ ಸದ್ಗತಿ ಕೊಡುವ ಶಕ್ತಿಯು ತಂದೆಯಲ್ಲಿದೆ. ಸರ್ವಶಕ್ತಿವಂತ, ಪತಿತ-ಪಾವನ ಒಬ್ಬರೇ ತಂದೆಯಾಗಿದ್ದಾರೆ. ಸರ್ವಶಕ್ತಿವಂತನೆಂದು ಯಾವ ಮನುಷ್ಯನಿಗೂ ಹೇಳಲು ಸಾಧ್ಯವಿಲ್ಲ. ಅಂದಾಗ ತಂದೆಯು ಯಾವ ಶಕ್ತಿಯನ್ನು ತೋರಿಸುತ್ತಾರೆ? ಸರ್ವರಿಗೆ ತಮ್ಮ ಶಕ್ತಿಯಿಂದ ಸದ್ಗತಿಯನ್ನು ಕೊಡುತ್ತಾರೆ, ಅವರಿಗೆ ಆತ್ಮಿಕ ಜ್ಞಾನ ವೈದ್ಯರೆಂದು ಹೇಳಲಾಗುತ್ತದೆ. ತತ್ವಜ್ಞಾನಿಗಳಂತೂ ಅನೇಕಾನೇಕರಿದ್ದಾರೆ, ಆದರೆ ಆತ್ಮಿಕ ವೈದ್ಯರು ಒಬ್ಬರೇ ಆಗಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ತನ್ನನ್ನು ಆತ್ಮವೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ ಮತ್ತು ಪವಿತ್ರರಾಗಿ. ನಾನು ಪವಿತ್ರ ಪ್ರಪಂಚವನ್ನು ಸ್ಥಾಪನೆ ಮಾಡುವುದಕ್ಕಾಗಿಯೇ ಬಂದಿದ್ದೇನೆ ಅಂದಮೇಲೆ ಮತ್ತೆ ನೀವು ಏಕೆ ಪತಿತರಾಗುತ್ತೀರಿ? ಪಾವನರಾಗಿ, ಪತಿತರಾಗಬೇಡಿ. ಎಲ್ಲಾ ಆತ್ಮಗಳಿಗೆ ತಂದೆಯ ಆದೇಶವಾಗಿದೆ – ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನ ಪವಿತ್ರರಾಗಿರಿ. ಬಾಲಬ್ರಹ್ಮಾಚಾರಿಗಳಾಗಿ ಆಗ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ.ಇಷ್ಟು ಜನ್ಮಗಳವರೆಗೆ ಯಾವ ಪಾಪ ಮಾಡಿದ್ದೀರಿ, ಆ ಪಾಪಗಳು ಈಗ ನನ್ನನ್ನು ನೆನಪು ಮಾಡುವುದರಿಂದ ಭಸ್ಮವಾಗುತ್ತವೆ. ಮೂಲವತನದಲ್ಲಿ ಪವಿತ್ರ ಆತ್ಮಗಳೇ ಇರುತ್ತಾರೆ. ಪತಿತರು ಯಾರೂ ಹೋಗಲು ಸಾಧ್ಯವಿಲ್ಲ. ತಂದೆಯು ನಮಗೆ ಓದಿಸುತ್ತಾರೆ ಎಂಬುದು ಬುದ್ಧಿಯಲ್ಲಿ ನೆನಪಿರಲೇಬೇಕಾಗಿದೆ. ನಿಮಗೆ ಶಿಕ್ಷಕರ ನೆನಪನ್ನು ಕಲಿಸಿಕೊಡಿ ಎಂದು ವಿದ್ಯಾರ್ಥಿಗಳು ಹೇಳುತ್ತಾರೆಯೇ? ನೆನಪನ್ನು ಕಲಿಸಿಕೊಡುವ ಅವಶ್ಯಕತೆಯೇನಿದೆ? ಇಲ್ಲಿ ಗದ್ದುಗೆಯ ಮೇಲೆ ಯಾರು ಕುಳಿತುಕೊಳ್ಳದಿದ್ದರೂ ಸಹ ಪರವಾಗಿಲ್ಲ, ತಮ್ಮ ತಂದೆಯನ್ನು ಹಾಗೆಯೇ ನೆನಪು ಮಾಡಬೇಕಾಗಿದೆ. ನೀವು ಇಡೀ ದಿನ ಉದ್ಯೋಗ ವ್ಯವಹಾರಗಳಲ್ಲಿರುತ್ತೀರಿ ಮರೆತು ಹೋಗುತ್ತೀರಿ. ಆಗ ಈ 10-15 ನಿಮಿಷಗಳಾದರೂ ನೆನಪು ಮಾಡಲಿ ಎಂದು ಇಲ್ಲಿ ಕುಳ್ಳರಿಸಲಾಗುತ್ತದೆ. ನೀವು ಮಕ್ಕಳು ಕೆಲಸ ಕಾರ್ಯಗಳನ್ನು ಮಾಡುತ್ತಾ ನೆನಪಿನಲ್ಲಿರುವ ಹವ್ಯಾಸವನ್ನಿಟ್ಟುಕೊಳ್ಳಬೇಕಾಗಿದೆ. ಅರ್ಧಕಲ್ಪದ ನಂತರ ಪ್ರಿಯತಮನು ಸಿಗುತ್ತಾರೆ. ಈಗ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ಆತ್ಮರಲ್ಲಿನ ತುಕ್ಕು ಬಿಟ್ಟು ಹೋಗುವುದು ಮತ್ತು ನೀವು ವಿಶ್ವದ ಮಾಲೀಕರಾಗಿ ಬಿಡುತ್ತೀರಿ ಅಂದಮೇಲೆ ಏಕೆ ನೆನಪು ಮಾಡಬಾರದು? ಸ್ತ್ರೀಗೆ ಕಂಕಣವನ್ನು ಕಟ್ಟಿದಾಗ ಪತಿಯೇ ನಿಮ್ಮ ಗುರು ಈಶ್ವರ, ಸರ್ವಸ್ವವೂ ಸಹ ಎಂದು ಹೇಳುತ್ತಾರೆ ಆದರೆ ಅವರು ಮತ್ತೆ ಮಿತ್ರ ಸಂಬಂಧಿ, ಗುರು ಮೊದಲಾದ ಅನೇಕರನ್ನು ನೆನಪು ಮಾಡುತ್ತಾರೆ. ಅದಂತೂ ದೇಹಧಾರಿಯ ನೆನಪಾಯಿತು. ಇವರಂತೂ ಪತಿಯರ ಪತಿಯಾಗಿದ್ದಾರೆ, ಅವರನ್ನು ನೆನಪು ಮಾಡಬೇಕಾಗಿದೆ. ನಮ್ಮನ್ನು ಧ್ಯಾನದಲ್ಲಿ ಕುಳ್ಳರಿಸಿ ಎಂದು ಕೆಲವರು ಹೇಳುತ್ತಾರೆ. ಆದರೆ ಇದರಿಂದೇನಾಗುವುದು? 10 ನಿಮಿಷಗಳ ಸಮಯ ಇಲ್ಲಿ ಕುಳಿತುಕೊಳ್ಳುತ್ತೀರೆಂದರೂ ಸಹ ಏಕರಸವಾಗಿ ಕುಳಿತುಕೊಳ್ಳುತ್ತೇವೆಂದು ತಿಳಿಯಬೇಡಿ. ಭಕ್ತಿಮಾರ್ಗದಲ್ಲಿಯೂ ಸಹ ಯಾರ ಪೂಜೆಯಾದರೂ ಮಾಡಲು ಕುಳಿತುಕೊಳ್ಳುತ್ತಾರೆಂದರೆ ಬುದ್ಧಿಯು ಬಹಳ ಅಲೆದಾಡುತ್ತಿರುತ್ತದೆ. ನೌಧಾಭಕ್ತಿ ಮಾಡುವವರಿಗೆ ನಮಗೆ ಸಾಕ್ಷಾತ್ಕಾರವಾಗಬೇಕೆಂಬ ಚಿಂತೆಯೇ ಇರುತ್ತದೆ. ಅದೇ ಆಸೆಯನ್ನಿಟ್ಟುಕೊಂಡು ಕುಳಿತಿರುತ್ತಾರೆ. ಒಬ್ಬರ ಪ್ರೀತಿಯಲ್ಲಿ ಲವಲೀನರಾಗಿರುತ್ತಾರೆ ಆಗ ಸಾಕ್ಷಾತ್ಕಾರವಾಗುತ್ತದೆ ಅದಕ್ಕೆ ನೌಧಾಭಕ್ತಿಯೆಂದು ಹೇಳಲಾಗುತ್ತದೆ. ಆ ಭಕ್ತಿ ಹೇಗೆ ಪ್ರಿಯತಮ-ಪ್ರಿಯತಮೆಯರ ನೆನಪಿನಂತೆ. ತಿನ್ನುತ್ತಾ-ಕುಡಿಯುತ್ತಾ ಬುದ್ಧಿಯಲ್ಲಿ ನೆನಪಿರುತ್ತದೆ. ಅದರಲ್ಲಿ ವಿಕಾರದ ಮಾತೇ ಇಲ್ಲ, ಕೇವಲ ಶರೀರದ ಮೇಲೆ ಪ್ರೀತಿಯುಂಟಾಗಿ ಬಿಡುತ್ತದೆ. ಒಬ್ಬರು ಇನ್ನೊಬ್ಬರನ್ನು ನೋಡದೇ ಇರಲು ಸಾಧ್ಯವಿಲ್ಲ.

ಈಗ ನೀವು ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ - ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಹೇಗೆ ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಬೀಜವನ್ನು ನೆನಪು ಮಾಡುವುದರಿಂದ ಇಡೀ ವೃಕ್ಷವು ನೆನಪಿಗೆ ಬಂದು ಬಿಡುತ್ತದೆ. ಇದು ವಿಭಿನ್ನ ಧರ್ಮಗಳ ವೃಕ್ಷವಾಗಿದೆಯಲ್ಲವೆ. ಭಾರತವು ಸತ್ಯಯುಗದಲ್ಲಿತ್ತು, ಈಗ ಕಲಿಯುಗದಲ್ಲಿದೆ, ಇದು ಕೇವಲ ನಿಮ್ಮ ಬುದ್ಧಿಯಲ್ಲಿದೆ. ಇದು ಆಂಗ್ಲ ಭಾಷೆಯಲ್ಲಿ ಬಹಳ ಚೆನ್ನಾಗಿದೆ, ಬಹಳ ಒಳ್ಳೆಯ ಅರ್ಥವು ಬರುತ್ತದೆ. ಆತ್ಮವು ಸತ್ಯ ಚಿನ್ನವಾಗಿರುತ್ತದೆ ನಂತರ ಅದರಲ್ಲಿ ತುಕ್ಕು ಬೀಳುತ್ತದೆ. ಈಗಂತೂ ಸಂಪೂರ್ಣ ನಕಲಿಯಾಗಿ ಬಿಟ್ಟಿದೆ, ಇದಕ್ಕೆ ಕಬ್ಬಿಣದ ಸಮಾನವೆಂದು ಹೇಳಲಾಗುತ್ತದೆ. ಆತ್ಮವು ಕಬ್ಬಿಣದ ಸಮಾನವಾಗಿರುವುದರಿಂದ ಆಭರಣಗಳು (ಶರೀರ) ಸಹ ಅದೇ ರೀತಿಯಾಗಿ ಬಿಟ್ಟಿದೆ. ಈಗ ತಂದೆಯು ತಿಳಿಸುತ್ತಾರೆ - ನಾನು ಪತಿತ-ಪಾವನನಾಗಿದ್ದೇನೆ, ನನ್ನೊಬ್ಬನನ್ನೇ ನೆನಪು ಮಾಡಿ. ಹೇ ಪತಿತ-ಪಾವನ ಬನ್ನಿ ಎಂದು ನನ್ನನು ಕರೆಯುತ್ತೀರಿ. ನಾನು ಕಲ್ಪ-ಕಲ್ಪವೂ ಬಂದು ನಿಮಗೆ ಈ ಯುಕ್ತಿಯನ್ನು ತಿಳಿಸುತ್ತೇನೆ. ಮನ್ಮನಾಭವ, ಮಧ್ಯಾಜೀಭವ ಅರ್ಥಾತ್ ಸ್ವರ್ಗದ ಮಾಲೀಕರಾಗಿ. ನಮಗೆ ಯೋಗದಲ್ಲಿ ಬಹಳ ಮಜಾ ಎನಿಸುತ್ತದೆ, ಜ್ಞಾನದಲ್ಲಿ ಅಷ್ಟೊಂದಿಲ್ಲ ಎಂದು ಕೆಲವರು ಹೇಳುತ್ತಾರೆ. ಯೋಗ ಮಾಡಿ ಓಡಿ ಹೋಗುತ್ತಾರೆ. ಯೋಗವೇ ಇಷ್ಟವಾಗುತ್ತದೆ, ನಮಗೆ ಶಾಂತಿಯು ಬೇಕೆಂದು ಹೇಳುತ್ತಾರೆ. ಭಲೆ ತಂದೆಯನ್ನು ಎಲ್ಲಿಯಾದರೂ ಕುಳಿತು ನೆನಪು ಮಾಡಿ. ನೆನಪು ಮಾಡುತ್ತಾ-ಮಾಡುತ್ತಾ ನೀವು ಶಾಂತಿಧಾಮದಲ್ಲಿ ಹೊರಟು ಹೋಗುತ್ತೀರಿ. ಇದರಲ್ಲಿ ಯೋಗವನ್ನು ಕಲಿಸಿಕೊಡುವ ಮಾತೇ ಇಲ್ಲ. ತಂದೆಯನ್ನು ನೆನಪು ಮಾಡಬೇಕಾಗಿದೆ. ಹೀಗೆ ಅನೇಕರಿದ್ದಾರೆ ಸೇವಾಕೇಂದ್ರಗಳಲ್ಲಿ ಹೋಗಿ ಅರ್ಧ-ಮುಕ್ಕಾಲು ಗಂಟೆ ಕುಳಿತುಕೊಳ್ಳುತ್ತಾರೆ. ನಮಗೆ ಧ್ಯಾನ ಮಾಡಿಸಿ ಎಂದು ಹೇಳುತ್ತಾರೆ. ಇಲ್ಲಿ ತಂದೆಯು ತಿಳಿಸುತ್ತಾರೆ - ನಡೆಯುತ್ತಾ-ತಿರುಗಾಡುತ್ತಾ ನೆನಪಿನಲ್ಲಿರಿ. ಮಾಡದೇ ಇರುವುದಕ್ಕಿಂತ ಸುಮ್ಮನೆ ಕುಳಿತುಕೊಂಡು ಮಾಡುವುದಾದರೂ ಒಳ್ಳೆಯದಾಗಿದೆ, ತಂದೆಯು ನಿರಾಕರಿಸುವುದಿಲ್ಲ. ಭಲೆ ಇಡೀ ರಾತ್ರಿ ಕುಳಿತುಕೊಳ್ಳಿ. ಆದರೆ ರಾತ್ರಿಯಲ್ಲಿಯೇ ನೆನಪು ಮಾಡಬೇಕೆಂಬ ಹವ್ಯಾಸವನ್ನಿಟ್ಟುಕೊಳ್ಳಬಾರದಾಗಿದೆ. ಕೆಲಸ ಕಾರ್ಯಗಳನ್ನು ಮಾಡುತ್ತಲೇ ನೆನಪು ಮಾಡುವ ಹವ್ಯಾಸವನ್ನಿಟ್ಟುಕೊಳ್ಳಬೇಕಾಗಿದೆ. ಇದರಲ್ಲಿ ಬಹಳ ಪರಿಶ್ರಮವಿದೆ. ಬುದ್ಧಿಯು ಪದೇ-ಪದೇ ಬೇರೆಯ ಕಡೆ ಓಡಿ ಹೋಗುತ್ತದೆ. ಭಕ್ತಿಮಾರ್ಗದಲ್ಲಿಯೂ ಸಹ ಬುದ್ಧಿಯು ಓಡುತ್ತದೆ ಮತ್ತೆ ತಮ್ಮನ್ನು ಜಿಗುಟಿಕೊಳ್ಳುತ್ತಾರೆ. ಸತ್ಯ ಭಕ್ತರ ಮಾತನ್ನು ತಿಳಿಸುತ್ತೇವೆ ಅಂದಾಗ ಇಲ್ಲಿಯೂ ಸಹ ತನ್ನ ಜೊತೆ ಹೀಗೀಗೆ ಮಾತನಾಡಿಕೊಳ್ಳಬೇಕು - ತಂದೆಯನ್ನು ಏಕೆ ನೆನಪು ಮಾಡಲಿಲ್ಲ? ನೆನಪು ಮಾಡದಿದ್ದರೆ ಹೇಗೆ ವಿಶ್ವದ ಮಾಲೀಕರಾಗುತ್ತೇವೆ? ಪ್ರಿಯತಮ-ಪ್ರಿಯತಮೆಯರಂತೂ ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ. ಇಲ್ಲಿ ನೀವು ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತೀರಿ. ನಾವಾತ್ಮಗಳು ಈ ಶರೀರದಿಂದ ಭಿನ್ನವಾಗಿದ್ದೇವೆ. ಶರೀರದಲ್ಲಿ ಬಂದಾಗಲೇ ಕರ್ಮ ಮಾಡಲಾಗುತ್ತದೆ. ಅನೇಕರು ಇಂತಹವರೂ ಇದ್ದಾರೆ, ನಾವು ಸಾಕ್ಷಾತ್ಕಾರ ಮಾಡಬೇಕೆಂದು ಹೇಳುತ್ತಾರೆ. ಈಗ ಸಾಕ್ಷಾತ್ಕಾರವನ್ನೇನು ನೋಡುತ್ತೀರಿ! ತಂದೆಯಂತೂ ಬಿಂದುವಾಗಿದ್ದಾರಲ್ಲವೆ. ಇನ್ನೂ ಕೆಲವರು ಕೃಷ್ಣನ ಸಾಕ್ಷಾತ್ಕಾರವಾಗಲೆಂದು ಬಯಸುತ್ತಾರೆ. ಕೃಷ್ಣನದಂತೂ ಚಿತ್ರವೇ ಇದೆಯಲ್ಲವೆ. ಯಾವುದು ಜಡವಿದೆಯೋ ಅದನ್ನು ಚೈತನ್ಯದಲ್ಲಿ ನೋಡುತ್ತೀರಿ, ಅದರಿಂದೇನು ಲಾಭ? ಸಾಕ್ಷಾತ್ಕಾರದಿಂದ ಲಾಭವಾಗುವುದೆ! ನೀವು ತಂದೆಯನ್ನು ನೆನಪು ಮಾಡುವುದರಿಂದ ಆತ್ಮವು ಪವಿತ್ರವಾಗುವುದು. ನಾರಾಯಣನ ಸಾಕ್ಷಾತ್ಕಾರವಾಗುವುದರಿಂದ ನಾರಾಯಣನಾಗಿ ಬಿಡುತ್ತಾರೆಯೇ?

ನೀವು ತಿಳಿದುಕೊಂಡಿದ್ದೀರಿ - ನಮ್ಮ ಗುರಿ-ಧ್ಯೇಯವೇ ಲಕ್ಷ್ಮೀ-ನಾರಾಯಣನಾಗುವುದಾಗಿದೆ. ಆದರೆ ಓದದ ವಿನಃ ಆಗಲು ಸಾಧ್ಯವಿಲ್ಲ. ಓದಿ ಬುದ್ಧಿವಂತರಾಗಿ, ಪ್ರಜೆಗಳನ್ನು ತಯಾರು ಮಾಡಿ ಆಗ ಲಕ್ಷ್ಮೀ-ನಾರಾಯಣರಾಗಿ ಬಿಡುತ್ತೀರಿ. ಪರಿಶ್ರಮವಿದೆ. ಪಾಸ್-ವಿತ್-ಆನರ್ ಆಗಬೇಕು, ಅದರಿಂದ ಧರ್ಮರಾಜನ ಶಿಕ್ಷೆಯು ಸಿಗಬಾರದು. ಈ ಅನನ್ಯ ಮಗು (ಬ್ರಹ್ಮಾ) ವೂ ಜೊತೆಯಿದ್ದಾರೆ. ಇವರೂ ಹೇಳುತ್ತಾರೆ, ನೀವು ತೀಕ್ಷ್ಣವಾಗಿ ಹೋಗಬಲ್ಲಿರಿ. ಬಾಬಾರವರ ಮೇಲೆ ಎಷ್ಟೊಂದು ಜವಾಬ್ದಾರಿಯಿದೆ. ಇಡೀ ದಿನ ಎಷ್ಟೊಂದು ಆಲೋಚಿಸಬೇಕಾಗಿದೆ. ಅಂದಾಗ ನಾವು ಅಷ್ಟೊಂದು ನೆನಪು ಮಾಡಲು ಸಾಧ್ಯವಿಲ್ಲ. ಭೋಜನದ ಸಮಯದಲ್ಲಿಯೂ ಸಹ ಸ್ವಲ್ಪ ನೆನಪಿರುತ್ತದೆ ಮತ್ತೆ ಮರೆತು ಹೋಗುತ್ತೇನೆ. ಬಾಬಾ ಮತ್ತು ನಾನು ಇಬ್ಬರೂ ಸುತ್ತಾಡೋಣವೆಂದು ತಿಳಿಯುತ್ತೇನೆ. ತಿರುಗಾಡುತ್ತಾ-ತಿರುಗಾಡುತ್ತಾ ತಂದೆಯನ್ನು ಮರೆತೇ ಹೋಗುತ್ತೇನೆ. ತಂದೆಯ ನೆನಪು ಜಾರುವಂತಹ ವಸ್ತುವಾಗಿದೆಯಲ್ಲವೆ. ಪದೇ-ಪದೇ ತಂದೆಯ ನೆನಪು ಜಾರಿ ಹೋಗುತ್ತದೆ ಅರ್ಥಾತ್ ಮರೆತು ಹೋಗುತ್ತದೆ. ಇದರಲ್ಲಿ ಬಹಳ ಪರಿಶ್ರಮವಿದೆ. ನೆನಪಿಂದಲೇ ಪರಿಶ್ರಮವು ಸಮಾಪ್ತಿಯಾಗಲಿದೆ. ಅನೇಕರಿಗೆ ಓದಿಸುತ್ತೀರೆಂದರೆ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಯಾರು ಚೆನ್ನಾಗಿ ಓದುವರೋ ಅವರು ಒಳ್ಳೆಯ ಪದವಿಯನ್ನು ಪಡೆಯುತ್ತಾರೆ. ಪ್ರದರ್ಶನಿಯಲ್ಲಿ ಎಷ್ಟೊಂದು ಪ್ರಜೆಗಳಾಗುತ್ತಾರೆ! ನೀವು ಒಬ್ಬೊಬ್ಬರು ಲಕ್ಷಾಂತರ ಮಂದಿಯ ಸೇವೆ ಮಾಡುತ್ತೀರಿ ಅಂದಮೇಲೆ ತಮ್ಮ ಸ್ಥಿತಿಯೂ ಸಹ ಆ ರೀತಿಯಿರಬೇಕು. ಕರ್ಮಾತೀತ ಸ್ಥಿತಿಯಾಗಿ ಬಿಡುವುದು ಮತ್ತೆ ಈ ಶರೀರವೂ ಇರುವುದಿಲ್ಲ. ಮುಂದೆ ಹೋದಂತೆ ನೀವು ತಿಳಿದುಕೊಳ್ಳುತ್ತೀರಿ - ಈಗ ಬಹಳ ಜೋರಾಗಿ ಯುದ್ಧವಾಗುವುದು ಎಂದು, ಆಗ ನಿಮ್ಮ ಬಳಿ ಅನೇಕರು ಬರುತ್ತಾರೆ. ಮಹಿಮೆಯು ಹೆಚ್ಚುತ್ತಾ ಹೋಗುವುದು. ಅಂತಿಮದಲ್ಲಿ ಸನ್ಯಾಸಿಗಳೂ ಸಹ ಬರುತ್ತಾರೆ, ತಂದೆಯನ್ನು ನೆನಪು ಮಾಡತೊಡಗುತ್ತಾರೆ. ಅವರ ಪಾತ್ರವೇ ಮುಕ್ತಿಧಾಮದಲ್ಲಿ ಹೋಗುವುದಾಗಿದೆ. ಜ್ಞಾನವನ್ನಂತೂ ತೆಗೆದುಕೊಳ್ಳುವುದಿಲ್ಲ. ನಿಮ್ಮ ಸಂದೇಶವು ಎಲ್ಲಾ ಆತ್ಮಗಳವರೆಗೆ ತಲುಪಬೇಕಾಗಿದೆ. ಪತ್ರಿಕೆಗಳ ಮೂಲಕ ಅನೇಕರು ಕೇಳುತ್ತಾರೆ. ಎಷ್ಟೊಂದು ಗ್ರಾಮಗಳಿವೆ, ಎಲ್ಲರಿಗೆ ಸಂದೇಶ ಕೊಡಬೇಕಾಗಿದೆ. ಸಂದೇಶ ಪುತ್ರರು ನೀವೇ ಆಗಿದ್ದೀರಿ, ಒಬ್ಬ ತಂದೆಯ ವಿನಃ ಪತಿತರಿಂದ ಪಾವನ ಮಾಡುವವರು ಇನ್ನ್ಯಾರೂ ಇಲ್ಲ. ಧರ್ಮ ಸ್ಥಾಪಕರು ಯಾರನ್ನಾದರೂ ಪಾವನ ಮಾಡುತ್ತಾರೆಂದಲ್ಲ. ಅವರ ಧರ್ಮವಂತೂ ವೃದ್ಧಿ ಹೊಂದಬೇಕಾಗಿದೆ, ಅವರು ಹಿಂತಿರುಗಿ ಹೋಗುವ ಮಾರ್ಗವನ್ನು ಹೇಗೆ ತಿಳಿಸುತ್ತಾರೆ? ಸರ್ವರ ಸದ್ಗತಿದಾತನು ಒಬ್ಬರಾಗಿದ್ದಾರೆ. ಅಂದಾಗ ನೀವು ಮಕ್ಕಳೀಗ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಅನೇಕರಿದ್ದಾರೆ ಅವರು ಪವಿತ್ರರಾಗಿರುವುದಿಲ್ಲ, ಕಾಮ ಮಹಾಶತ್ರುವಾಗಿದೆಯಲ್ಲವೆ. ಒಳ್ಳೊಳ್ಳೆಯ ಮಕ್ಕಳೂ ಸಹ ಕೆಳಗೆ ಬೀಳುತ್ತಾರೆ, ಕುದೃಷ್ಟಿಯು ಕಾಮದ ಅಂಶವೇ ಆಗಿದೆ, ಇದು ಬಹಳ ದೊಡ್ಡ ಶತ್ರುವಾಗಿದೆ. ತಂದೆಯು ತಿಳಿಸುತ್ತಾರೆ - ಇದರ ಮೇಲೆ ಜಯ ಗಳಿಸಿದರೆ ಜಗಜ್ಜೀತರಾಗಿ ಬಿಡುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಕೆಲಸ ಕಾರ್ಯಗಳನ್ನು ಮಾಡುತ್ತಾ ನೆನಪಿನಲ್ಲಿರುವ ಹವ್ಯಾಸವನ್ನಿಟ್ಟುಕೊಳ್ಳಬೇಕಾಗಿದೆ. ತಂದೆಯ ಜೊತೆ ಹೋಗಲು ಮತ್ತು ಪಾವನ ಹೊಸ ಪ್ರಪಂಚದ ಮಾಲೀಕರಾಗಲು ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.

2. ಶ್ರೇಷ್ಠ ಪದವಿಯನ್ನು ಪಡೆಯಲು ಅನೇಕರ ಸೇವೆ ಮಾಡಬೇಕಾಗಿದೆ. ಅನೇಕರಿಗೆ ಓದಿಸಬೇಕಾಗಿದೆ. ಸಂದೇಶವಾಹಕರಾಗಿ ಈ ಸಂದೇಶವನ್ನು ಎಲ್ಲರಿಗೆ ತಲುಪಿಸಬೇಕಾಗಿದೆ.

ವರದಾನ:
ನನ್ನತನದ ಸೂಕ್ಷ್ಮ ಸ್ವರೂಪವನ್ನೂ ಸಹ ತ್ಯಾಗ ಮಾಡುವಂತಹ ಸದಾ ನಿರ್ಭಯ, ನಿಶ್ಚಿಂತ ಚಕ್ರವರ್ತಿ ಭವ.

ಇಂದಿನ ಜಗತ್ತಿನಲ್ಲಿ ಧನವೂ ಸಹ ಇದೆ ಮತ್ತು ಭಯವೂ ಸಹ ಇದೆ. ಎಷ್ಟು ಧನ ಅಷ್ಟು ಭಯದಲ್ಲಿಯೆ ತಿನ್ನುತ್ತಾರೆ, ಭಯದಲ್ಲಿಯೇ ಮಲಗುತ್ತಾರೆ, ಎಲ್ಲಿ ನನ್ನತನ ಇದೆ ಅಲ್ಲಿ ಖಂಡಿತ ಭಯ ಇರುವುದು. ಯಾವುದೇ ಚಿನ್ನದ ಜಿಂಕೆ ಒಂದುವೇಳೆ ನನ್ನದಾಗಿದ್ದರೆ ಭಯ ಇರುತ್ತದೆ. ಆದರೆ ಒಂದುವೇಳೆ ನನ್ನವರು ಒಬ್ಬರೇ ಶಿವಬಾಬಾ ಇದ್ದಾಗ ನಿರ್ಭಯರಾಗಿ ಬಿಡುವಿರಿ. ಆದ್ದರಿಂದ ಸೂಕ್ಷ್ಮ ರೂಪದಿಂದ ಸಹ ನನ್ನದು-ನನ್ನದು ಎನ್ನುವುದನ್ನು ಚೆಕ್ ಮಾಡಿಕೊಂಡು ಅದರ ತ್ಯಾಗವನ್ನು ಮಾಡಿದಾಗ ನಿರ್ಭಯ, ನಿಶ್ಚಿಂತ ಚಕ್ರವರ್ತಿಯಾಗಿರುವ ವರದಾನ ಸಿಕ್ಕಿ ಬಿಡುವುದು.

ಸ್ಲೋಗನ್:
ಬೇರೆಯವರ ವಿಚಾರಗಳಿಗೆ ಸನ್ಮಾನ ಕೊಡಿ - ಆಗ ನಿಮಗೆ ಸನ್ಮಾನ ಪ್ರಾಪ್ತಿಯಾಗುವುದು.