26.01.20    Avyakt Bapdada     Kannada Murli     13.11.85     Om Shanti     Madhuban


"ಸಂಕಲ್ಪ, ಸಂಸ್ಕಾರ, ಸಂಬಂಧ, ಮಾತು ಮತ್ತು ಕರ್ಮದಲ್ಲಿ ನವೀನತೆ ತನ್ನಿರಿ"


ಇಂದು ಹೊಸ ಪ್ರಪಂಚದ ಹೊಸ ರಚನೆಯ ರಚೈತ ತಂದೆಯು ತನ್ನ ಹೊಸ ಪ್ರಪಂಚದ ಅಧಿಕಾರಿ ಮಕ್ಕಳನ್ನು ಅರ್ಥಾತ್ ಹೊಸ ರಚನೆಯನ್ನು ನೋಡುತ್ತಿದ್ದಾರೆ. ಹೊಸ ರಚನೆಯು ಸದಾಕಾಲವೂ ಪ್ರಿಯವೆನಿಸುತ್ತದೆ. ಪ್ರಪಂಚದ ಲೆಕ್ಕದಿಂದ ಹಳೆಯ ಯುಗದಲ್ಲಿ ಹೊಸ ವರ್ಷವನ್ನು ಆಚರಿಸುತ್ತೀರಿ. ಆದರೆ ತಾವು ಹೊಸ ರಚನೆಯ ಹೊಸ ಯುಗದ, ಹೊಸ ಜೀವನದ ಅನುಭೂತಿ ಮಾಡುತ್ತಿದ್ದೀರಿ. ಎಲ್ಲವೂ ಹೊಸದಾಗಿ ಬಿಟ್ಟಿತು. ಹಳೆಯದ್ಲೆಲವೂ ಸಮಾಪ್ತಿಯಾಗಿ ಹೊಸ ಜನ್ಮ ಹೊಸ ಜೀವನವು ಪ್ರಾರಂಭವಾಯಿತು. ಜನ್ಮವು ಹೊಸದಾಯಿತೆಂದರೆ ಜನ್ಮದಿಂದ ಜೀವನವು ಸ್ವತಹವಾಗಿಯೇ ಬದಲಾಗುತ್ತದೆ. ಜೀವನವು ಬದಲಾಗುವುದು ಅರ್ಥತ್ ಸಂಕಲ್ಪ, ಸಂಸ್ಕಾರ, ಸಂಬಂಧವೆಲ್ಲವೂ ಬದಲಾಯಿತು ಅರ್ಥಾತ್ ಹೊಸದಾಗಿಬಿಟ್ಟಿತು. ಧರ್ಮವು ಹೊಸದು, ಕರ್ಮವು ಹೊಸದು. ಅವರು ಕೇವಲ ವರ್ಷವನ್ನು ಹೊಸದೆಂದು ಹೇಳುತ್ತಾರೆ. ಆದರೆ ತಮ್ಮೆಲ್ಲರಿಗಾಗಿ ಎಲ್ಲವೂ ಹೊಸದಾಗಿಬಿಟ್ಟಿತು. ಇಂದಿನ ದಿನ ಅಮೃತವೇಳೆಯಿಂದ ಹೊಸ ವರ್ಷದ ಶುಭಾಶಯಗಳನ್ನಂತು ಕೊಟ್ಟಿರಿ, ಆದರೆ ಕೇವಲ ಮುಖದಿಂದ ಶುಭಾಶಯ ಕೊಟ್ಟಿದ್ದೀರಾ ಅಥವಾ ಮನಸ್ಸಿನಿಂದ ಕೊಟ್ಟಿದ್ದೀರಾ? ನವೀನತೆಯ ಸಂಕಲ್ಪವನ್ನು ತೆಗೆದುಕೊಂಡಿದ್ದೀರಾ? ಈ ವಿಶೇಷವಾದ ಮೂರು ಮಾತುಗಳ ನವೀನತೆಯ ಸಂಕಲ್ಪವನ್ನು ಮಾಡಿದಿರಾ? ಸಂಕಲ್ಪ, ಸಂಸ್ಕಾರ ಮತ್ತು ಸಂಬಂಧ. ಸಂಸ್ಕಾರ ಮತ್ತು ಸಂಕಲ್ಪವು ಹೊಸದು ಅರ್ಥಾತ್ ಶ್ರೇಷ್ಠವಾಯಿತು. ಹೊಸ ಜನ್ಮ, ಹೊಸ ಜೀವನವಾಗಿದ್ದರೂ, ಈಗಿನವರೆಗೂ ಹಳೆಯ ಜನ್ಮ ಅಥವಾ ಜೀವನದ ಸಂಕಲ್ಪ, ಸಂಸ್ಕಾರ ಹಾಗೂ ಸಂಬಂಧವಂತು ಉಳಿದಿಲ್ಲವೇ? ಒಂದುವೇಳೆ ಈ ಮಾತುಗಳೆಲ್ಲದರಿಂದ ಯಾವುದೇ ಮಾತಿನಲಿ ಅಂಶದಷ್ಟು ಉಳಿದುಕೊಂಡಿತೆಂದರೆ, ಈ ಅಂಶವೂ ಹೊಸ ಜೀವನದ ಹೊಸ ಯುಗದ, ಹೊಸ ಸಂಬಂಧದ, ಹೊಸ ಸಂಸ್ಕಾರದ ಸುಖ ಹಾಗೂ ಸರ್ವ ಪ್ರಾಪ್ತಿಯಿಂದ ವಂಚಿತನನ್ನಾಗಿ ಮಾಡಿ ಬಿಡುತ್ತದೆ. ಕೆಲವು ಮಕ್ಕಳು ಹೀಗೆ ಬಾಪ್ದಾದಾರವರ ಮುಂದೆ ತಮ್ಮ ಮನದ ಮಾತುಗಳನ್ನು ಆತ್ಮಿಕ ವಾರ್ತಾಲಾಪದಲ್ಲಿ ಹೇಳುತ್ತಿರುತ್ತಾರೆ. ಹೊರಗಿನಿಂದ ಹೇಳುವುದಿಲ್ಲ. ಹೊರಗಿನಿಂದ ಯಾರಾದರೂ ಕೇಳುತ್ತಾರೆ- ಹೇಗಿದ್ದೀರಿ? ಎಂದರೆ ಎಲ್ಲರೂ ಇದೇ ಹೇಳುತ್ತಾರೆ - ಬಹಳ ಚೆನ್ನಾಗಿದ್ದೇವೆ. ಏಕೆಂದರೆ ಗೊತ್ತಿದೆ - ಬಾಹರ್ಯಾಮಿ ಆತ್ಮರು ಆಂತರ್ಯವನ್ನೇನು ತಿಳಿಯುವರು! ಆದರೆ ತಂದೆಯೊಂದಿಗೆ ವಾರ್ತಾಲಾಪದಲ್ಲಿ ಬಚ್ಚಿಡಲು ಸಾಧ್ಯವಾಗುವುದಿಲ್ಲ. ತಮ್ಮ ಮನಸ್ಸಿನ ಮಾತುಗಳಲ್ಲಿ ಇದನ್ನು ಖಂಡಿತವಾಗಿ ಹೇಳುತ್ತಾರೆ - ಬ್ರಾಹ್ಮಣರಂತು ಆಗಿ ಬಿಟ್ಟೆವು, ಶೂದ್ರತ್ವದಿಂದ ದೂರ ಮಾಡಿ ಬಿಟ್ಟೆವು ಆದರೆ ಬ್ರಾಹ್ಮಣ ಜೀವನದ ಮಹಾನತೆಯೇನಿದೆ, ವಿಶೇಷತೆಯೇನಿದೆ- ಸರ್ವಶ್ರೇಷ್ಠ ಪ್ರಾಪ್ತಿಗಳ ಅಥವಾ ಅತೀಂದ್ರಿಯ ಸುಖದ, ಫರಿಶ್ಥಾ ಸ್ಥಿತಿಯ ಡಬಲ್ಲೈಟ್ ಜೀವನದ್ದೇನಿದೆ, ಇಂತಹ ವಿಶೇಷ ಅನುಭವವನ್ನೆಷ್ಟಾಗಬೇಕು, ಅಷ್ಟಾಗುವುದಿಲ್ಲ. ಈ ಶ್ರೇಷ್ಠ ಯುಗದ ಶ್ರೇಷ್ಠ ಜೀವನವಾಗಿದೆಯೆಂದು ಯಾವ ವರ್ಣನೆಯಿದೆ - ಇಂತಹ ಅನುಭವ, ಇಂತಹ ಸ್ಥಿತಿಯು ಬಹಳ ಕಡಿಮೆ ಸಮಯದ್ದಾಗುತ್ತದೆ. ಇದಕ್ಕೆ ಕಾರಣವೇನಾಗಿದೆ? ಯಾವಾಗ ಬ್ರಾಹ್ಮಣರಾದಿರಿ, ಆಗ ಬ್ರಾಹ್ಮಣ ಜೀವನದ ಅಧಿಕಾರದ ಅನುಭವವಾಗುವುದಿಲ್ಲ, ಏಕೆ? ಇರುವುದಂತು ರಾಜನ ಮಗುವಾಗಿ, ಆದರೆ ಸಂಸ್ಕಾರವು ಭಿಕಾರಿಯದ್ದಾಗಿದೆ, ಅವರಿಗೆ ಏನು ಹೇಳುವರು? ರಾಜಕುಮಾರ ಎಂದು ಹೇಳುವುದೇ? ಇಲ್ಲಿಯೂ ಹೊಸ ಜನ್ಮ, ಹೊಸ ಬ್ರಾಹ್ಮಣ ಜೀವನವಿದೆ, ಆದರೂ ಹಳೆಯ ಸಂಕಲ್ಪ ಅಥವಾ ಸಂಸ್ಕಾರವು ಇಮರ್ಜ್ ಆಗಿದೆ ಅಥವಾ ಕರ್ಮದಲ್ಲಿದೆಯೆಂದರೆ ಅವರಿಗೆ ಬ್ರಹ್ಮಾಕುಮಾರನೆಂದು ಹೇಳುವರೇ? ಅಥವಾ ಅರ್ಧ ಶೂದ್ರಕುಮಾರ ಮತ್ತು ಅರ್ಧ ಬ್ರಹ್ಮಾಕುಮಾರ ಎಂದು ಹೇಳುವುದೇ! ಡ್ರಾಮಾದಲ್ಲಿ ಒಂದು ಆಟವನ್ನು ತೋರಿಸುತ್ತೀರಲ್ಲವೆ - ಅರ್ಧ ಬಿಳಿ, ಅರ್ಧ ಕಪ್ಪು. ಸಂಗಮಯುಗವೆಂದರೆ ಇದೆಂದು ತಿಳಿಯಬಾರದು, ಸಂಗಮಯುಗ ಅರ್ಥಾತ್ ಹೊಸ ಯುಗ. ಹೊಸ ಯುಗವಾಗಿದೆಯೆಂದರೆ ಎಲ್ಲವೂ ಹೊಸದು.

ಬಾಪ್ದಾದಾರವರು ಇಂದು ಎಲ್ಲರ ಧ್ವನಿಯನ್ನು ಕೇಳಿಸಿಕೊಳ್ಳುತ್ತಿದ್ದರು - ಹೊಸ ವರ್ಷದ ಶುಭಾಶಯಗಳು. ಕಾರ್ಡುಗಳನ್ನೂ ಕಳುಹಿಸುತ್ತಾರೆ, ಪತ್ರಗಳನ್ನೂ ಬರೆಯುತ್ತಾರೆ ಆದರೆ ಹೇಳುವುದು ಮತ್ತು ಮಾಡುವುದು ಎರಡೂ ಒಂದೇ ಇದೆಯೇ? ಶುಭಾಶಯಗಳನ್ನಂತು ಕೊಟ್ಟಿರಿ, ಬಹಳ ಒಳ್ಳೆಯದನ್ನು ಮಾಡಿದಿರಿ. ಬಾಪ್ದಾದಾರವರೂ ಸಹ ಶುಭಾಶಯಗಳನ್ನು ಕೊಡುತ್ತಾರೆ. ಬಾಪ್ದಾದಾರವರೂ ಸಹ ಹೇಳುತ್ತಾರೆ- ಎಲ್ಲರ ಮುಖದ ಮಾತಿನಲ್ಲಿ ಅವಿನಾಶಿ ಭವದ ವರದಾನ. ತಾವು ಹೇಳುತ್ತೀರಲ್ಲವೆ - ಮುಖದಲ್ಲಿ(ಬಾಯಲ್ಲಿ) ಗುಲಾಬ್ ಜಾಮೂನ್, ಬಾಪ್ದಾದಾರವರು ಹೇಳುತ್ತಾರೆ - ಮುಖದ ಮಾತಿನಲ್ಲಿ ಅವಿನಾಶಿ ವರದಾನಗಳಿರಲಿ. ಇಂದಿನಿಂದ ಕೇವಲ ಒಂದು ಶಬ್ಧವನ್ನು ನೆನಪಿಟ್ಟುಕೊಳ್ಳಿರಿ - "ಹೊಸದು". ಯಾವುದೇ ಸಂಕಲ್ಪವನ್ನು ಮಾಡಿ, ಮಾತನಾಡಿರಿ, ಕರ್ಮವನ್ನು ಮಾಡಿರಿ, ಅದರಲ್ಲಿ ಇದನ್ನೇ ಪರಿಶೀಲನೆ ಮಾಡಿರಿ, ನೆನಪಿಟ್ಟುಕೊಳ್ಳಿರಿ - ಹೊಸದಿದೆಯೇ? ಇದೇ ಲೆಕ್ಕದ ಪುಸ್ತಕ, ರಿಜಿಸ್ಟರ್ನ್ನು ಇಂದಿನಿಂದ ಪ್ರಾರಂಭಗೊಳಿಸಿರಿ. ದೀಪಾವಳಿಯಲ್ಲಿ ಲೆಕ್ಕದ ಪುಸ್ತಕದಲ್ಲಿ ಏನು ಮಾಡುತ್ತಾರೆ? ಸ್ವಸ್ತಿಕವನ್ನು ಬಿಡಿಸುತ್ತಾರಲ್ಲವೆ. ಗಣೇಶ ಮತ್ತು ನಾಲ್ಕೂ ಯುಗದಲ್ಲಿ ಬಿಂದಿಯನ್ನು ಖಂಡಿತವಾಗಿ ಬಿಡಿಸುತ್ತಾರೆ. ಏಕೆ ಇಡುತ್ತಾರೆ? ಯಾವುದೇ ಕಾರ್ಯವನ್ನು ಪ್ರಾರಂಭಗೊಳಿಸುವ ಸಮಯದಲ್ಲಿ ಸ್ವಸ್ತಿಕ ಅಥವಾ ಗಣೇಶ ನಮಃ ಎಂದು ಅವಶ್ಯವಾಗಿ ಹೇಳುವರು. ಇದು ಯಾರ ನೆನಪಾರ್ಥವಾಗಿದೆ? ಸ್ವಸ್ತಿಕವನ್ನೂ ಸಹ ಗಣೇಶನೆಂದು ಏಕೆ ಹೇಳುವರು? ಸ್ವಸ್ತಿಕ ಸ್ವ ಸ್ಥಿತಿಯಲ್ಲಿ ಸ್ಥಿತರಾಗುವ ಮತ್ತು ಇಡೀ ರಚನೆಯ ಜ್ಞಾನದ ಸೂಚಕವಾಗಿದೆ. ಗಣೇಶ ಅರ್ಥಾತ್ ಜ್ಞಾನಪೂರ್ಣ. ಸ್ವಸ್ತಿಕದ ಒಂದು ಚಿತ್ರದಲ್ಲಿ ಪೂರ್ಣ ಜ್ಞಾನವೇ ಅಡಗಿದೆ. ಜ್ಞಾನಪೂರ್ಣತೆಯ ಸ್ಮೃತಿಯ ನೆನಪಾರ್ಥವಾಗಿ ಗಣೇಶ ಅಥವಾ ಸ್ವಸ್ತಿಕವನ್ನು ತೋರಿಸುತ್ತಾರೆ. ಇದರ ಅರ್ಥವೇನಾಯಿತು? ಯಾವುದೇ ಕಾರ್ಯದ ಸಫಲತೆಗೆ ಆಧಾರವಾಗಿದೆ - ಜ್ಞಾನಪೂರ್ಣ ಅರ್ಥಾತ್ ಬುದ್ಧಿವಂತ, ಜ್ಞಾನ ಸ್ವರೂಪರಾಗುವುದು. ಜ್ಞಾನ ಸ್ವರೂಪ ಬುದ್ಧಿವಂತರಾಗಿಬಿಟ್ಟಿರೆಂದರೆ, ಪ್ರತೀ ಕರ್ಮವೂ ಶ್ರೇಷ್ಠ ಮತ್ತು ಸಫಲವಾಗುತ್ತದೆಯಲ್ಲವೆ. ಅವರಂತು ಕೇವಲ ಕಾಗದದ ಮೇಲೆ ನೆನಪಾರ್ಥದ ಚಿಹ್ನೆಯನ್ನು ಬಿಡಿಸುತ್ತಾರೆ ಆದರೆ ತಾವು ಬ್ರಾಹ್ಮಣ ಆತ್ಮರು ಸ್ವಯಂ ಜ್ಞಾನಪೂರ್ಣರಾಗಿ ಪ್ರತೀ ಸಂಕಲ್ಪವನ್ನು ಮಾಡುತ್ತೀರೆಂದರೆ ಸಂಕಲ್ಪ ಮತ್ತು ಸಫಲತೆಯೆರಡೂ ಒಟ್ಟೊಟ್ಟಿಗೆ ಅನುಭವ ಮಾಡುವಿರಿ. ಅಂದಮೇಲೆ ಇವತ್ತಿನಿಂದ ಈ ಧೃಡಸಂಕಲ್ಪದ ರಂಗಿನ ಮೂಲಕ ತಮ್ಮ ಜೀವನದ ಪುಸ್ತಕದಲ್ಲಿ ಪ್ರತಿಯೊಂದು ಸಂಕಲ್ಪ-ಸಂಸ್ಕಾರವು ಹೊಸದೇ ಆಗಬೇಕು. ಆಗುತ್ತದೆ ಎನ್ನುವುದೂ ಅಲ್ಲ, ಆಗಲೇಬೇಕು. ಸ್ವ ಸ್ಥಿತಿಯಲ್ಲಿ ಸ್ಥಿತರಾಗಿದ್ದು ಈ ಶ್ರೀ ಗಣೇಶ ಅರ್ಥಾತ್ ಆರಂಭಗೊಳಿಸಿ. ಸ್ವಯಂ ಶ್ರೀ ಗಣೇಶನಾಗಿ ಮಾಡುತ್ತಾ ಆರಂಭಗೊಳಿಸಿ. ಹೀಗೆ ಯೋಚಿಸಬಾರದು - ಇದಂತು ಆಗುತ್ತಲೇ ಇರುತ್ತದೆ. ಸಂಕಲ್ಪವನ್ನಂತು ಬಹಳ ಬಾರಿ ಮಾಡುತ್ತೀರಿ ಆದರೆ ಧೃಡವಾಗಿರಲಿ. ಹೇಗೆ ಬುನಾದಿಯಲ್ಲಿ ಪರಿಪಕ್ವವಾಗಿ ಸಿಮೆಂಟ್ ಮುಂತಾದವುಗಳನ್ನು ಹಾಕಿ ಶಕ್ತಿಶಾಲಿಯನ್ನಾಗಿ ಮಾಡಲಾಗುತ್ತದೆಯಲ್ಲವೆ! ಒಂದುವೇಳೆ ಮರಳಿನ ಬುನಾದಿಯನ್ನಾಕಿದರೆ ಎಷ್ಟು ಸಮಯ ಇರಬಹುದು? ಹಾಗಾದರೆ ಯಾವ ಸಮಯದಲ್ಲಿ ಸಂಕಲ್ಪ ಮಾಡುತ್ತೀರಿ ಆ ಸಮಯದಲ್ಲಿ ಹೇಳುತ್ತೀರಿ - ನಾವು ಮಾಡಿ ತೋರಿಸುತ್ತೇವೆ, ಎಷ್ಟು ಸಾಧ್ಯವೋ ಮಾಡುತ್ತೇವೆ ಎಂದು. ಅನ್ಯರೂ ಸಹ ಹೀಗೆಯೇ ಮಾಡುತ್ತಾರೆ. ಈ ಮರಳನ್ನು ಸೇರಿಸಿ ಬಿಡುತ್ತೀರಿ ಆದ್ದರಿಂದ ಬುನಾದಿ ಅಥವಾ ತಳಪಾಯವು ಪರಿಪಕ್ವವಾಗುವುದಿಲ್ಲ. ಅನ್ಯರನ್ನು ನೋಡುವುದು ಸಹಜವೆನಿಸುತ್ತದೆ, ತಮ್ಮನ್ನು ನೋಡುವುದರಲ್ಲಿ ಕಷ್ಟವೆನಿಸುತ್ತದೆ. ಒಂದುವೇಳೆ ಅನ್ಯರನ್ನು ನೋಡಲು ಬಯಸುತ್ತೀರಿ, ಹವ್ಯಾಸದೊಂದಿಗೆ ವಿವಶರಾಗಿದ್ದೀರೆಂದರೆ ಬ್ರಹ್ಮಾ ತಂದೆಯನ್ನು ನೋಡಿರಿ. ಅವರೂ ಸಹ ಅನ್ಯರಾದರಲ್ಲವೆ, ಆದ್ದರಿಂದ ಬಾಪ್ದಾದಾರವರು ದೀಪಾವಳಿಯ ಲೆಕ್ಕವನ್ನು ನೋಡಿದರು. ಪುಸ್ತಕದಲ್ಲಿ ವಿಶೇಷ ಕಾರಣ, ಬ್ರಾಹ್ಮಣರಾಗಿದ್ದರೂ ಬ್ರಾಹ್ಮಣ ಜೀವನದ ಅನುಭೂತಿಯಾಗದಿರುವುದು. ಎಷ್ಟಾಗಬೇಕು ಅಷ್ಟಾಗುವುದಿಲ್ಲ. ಇದರ ವಿಶೇಷ ಕಾರಣವಾಗಿದೆ - ಪರದೃಷ್ಟಿ, ಪರಚಿಂತನೆ, ಪ್ರಪಂಚದಲ್ಲಿ ಹೋಗುವುದು. ಪರಿಸ್ಥಿತಿಗಳ ವರ್ಣನೆ ಮತ್ತು ಮನನದಲ್ಲಿ ಹೆಚ್ಚಿರುತ್ತಾರೆ, ಆದ್ದರಿಂದ ಸ್ವದರ್ಶನ ಚಕ್ರಧಾರಿಯಾಗಿರಿ. ಸ್ವ-ನಿಂದ ಪರ ಎನ್ನುವುದು ಸಮಾಪ್ತಿಯಾಗಿ ಬಿಡುತ್ತದೆ. ಹೇಗೆ ಇಂದು ಹೊಸ ವರ್ಷದಲ್ಲಿ ಎಲ್ಲರೂ ಸೇರಿ ಶುಭಾಶಯಗಳನ್ನು ಕೊಟ್ಟಿರಿ, ಹಾಗೆಯೇ ಪ್ರತಿ ನಿತ್ಯವೂ ಹೊಸ ದಿನ, ಹೊಸ ಜೀವನ, ಹೊಸ ಸಂಕಲ್ಪ, ಹೊಸ ಸಂಸ್ಕಾರ, ಸ್ವತಹವಾಗಿಯೇ ಅನುಭವ ಮಾಡುವಿರಿ. ಮತ್ತು ಮನಸ್ಸಿನಿಂದ ಪ್ರತೀ ಗಳಿಗೆಯೂ ತಂದೆಯ ಪ್ರತಿ, ಬ್ರಾಹ್ಮಣ ಪರಿವಾರದ ಪ್ರತಿ ಶುಭಾಶಯಗಳ ಶುಭ ಉಮ್ಮಂಗವು ಸ್ವತಹವಾಗಿಯೇ ಉತ್ಪನ್ನವಾಗುತ್ತಿರುತ್ತದೆ. ಎಲ್ಲರ ದೃಷ್ಟಿಯಲ್ಲಿ ಶುಭಾಶಯಗಳು, ಶುಭಾಶಯಗಳು, ಗ್ರೀಟಿಂಗ್ಸ್ನ ಪ್ರಕಂಪನಗಳಿರುತ್ತವೆ. ಅಂದಮೇಲೆ ಹೀಗೆ ಇಂದಿನ ಶುಭಾಶಯಗಳ ಶಬ್ಧವನ್ನು ಅವಿನಾಶಿಯನ್ನಾಗಿ ಮಾಡಿರಿ. ತಿಳಿಯಿತೆ. ಜನರು ಲೆಕ್ಕವನ್ನಿಡುತ್ತಾರೆ. ತಂದೆಯವರು ಲೆಕ್ಕವನ್ನು ನೋಡಿದರು. ಬಾಪ್ದಾದಾರವರಿಗೆ ಮಕ್ಕಳ ಮೇಲೆ ದಯೆ ಬರುತ್ತದೆ - ಎಲ್ಲವೂ ಸಿಗುತ್ತಿದ್ದರೂ ಸಹ ಅರ್ಧವನ್ನಷ್ಟೇ ತೆಗೆದುಕೊಳ್ಳುತ್ತೀರಿ ಏಕೆ? ಹೆಸರು ಹೊಸದು, ಬ್ರಹ್ಮಾಕುಮಾರ ಅಥವಾ ಕುಮಾರಿ ಮತ್ತು ಕಾರ್ಯವೇಕೆ ಮಿಕ್ಸ್ ಇರುತ್ತದೆ? ದಾತಾನ ಮಕ್ಕಳಿದ್ದೀರಿ, ವಿದಾತಾನ ಮಕ್ಕಳಿದ್ದೀರಿ, ವರದಾತಾನ ಮಕ್ಕಳಿದ್ದೀರಿ. ಅಂದಮೇಲೆ ಹೊಸ ವರ್ಷದಲ್ಲಿ ನೆನಪೇನು ಇಟ್ಟುಕೊಳ್ಳುವಿರಿ? ಎಲ್ಲವೂ ಹೊಸದನ್ನು ಮಾಡಬೇಕು ಅರ್ಥಾತ್ ಬ್ರಾಹ್ಮಣ ಜೀವನದ ಮರ್ಯಾದೆಗಳೆಲ್ಲವೂ ಹೊಸದು. ಹೊಸದರ ಅರ್ಥದಲ್ಲಿ ಯಾವುದನ್ನೂ ಮಿಕ್ಸ್ ಮಾಡಬಾರದು. ಬಹಳ ಚತುರರೂ ಆಗಿ ಬಿಟ್ಟಿದ್ದೀರಲ್ಲವೆ. ತಂದೆಯವರಿಗೂ ಓದಿಸುತ್ತಾರೆ. ಕೆಲವು ಮಕ್ಕಳು ಹೇಳುತ್ತಾರಲ್ಲವೆ - ಬಾಬಾರವರು ಹೇಳಿದ್ದರಲ್ಲವೆ, ಹೊಸದನ್ನು ಮಾಡಬೇಕು ಎಂದು. ಆದ್ದರಿಂದ ಈ ಹೊಸದನ್ನು ನಾವು ಮಾಡುತ್ತಿದ್ದೇವೆ. ಆದರೆ ಬ್ರಾಹ್ಮಣ ಜೀವನದ ಮರ್ಯಾದೆಗಳನುಸಾರ ಹೊಸದಾಗಿರಬಹುದು. ಮರ್ಯಾದೆಗಳ ಗೆರೆಯಂತು ಬ್ರಾಹ್ಮಣ ಜೀವನ, ಬ್ರಾಹ್ಮಣ ಜನ್ಮವಾಗುತ್ತಿದ್ದಂತೆಯೇ ಬಾಪ್ದಾದಾರವರು ಕೊಟ್ಟಿದ್ದಾರೆ. ಹೊಸ ವರ್ಷವನ್ನು ಹೇಗೆ ಆಚರಿಸಬೇಕೆಂದು ತಿಳಿಯಿತೆ! ತಿಳಿಸಿದೆವಲ್ಲವೆ - 18 ಅಧ್ಯಾಯಗಳು ಪ್ರಾರಂಭವಾಗುತ್ತಿದೆ.

ಗೋಲ್ಡನ್ ಜುಬಿಲಿಗೆ ಮೊದಲು ವಿಶ್ವ ವಿದ್ಯಾಲಯದ ಗೋಲ್ಡನ್ ಜುಬಿಲಿಯಾಗಿದೆ. ಹೀಗೆ ತಿಳಿಯಬಾರದು - ಕೇವಲ 50 ವರ್ಷಗಳಾಗಿರುವವರಿಗೆ ಗೋಲ್ಡನ್ ಜುಬಿಲಿಯಾಗಿದೆ. ಆದರೆ ಈ ಈಶ್ವರೀಯ ಕಾರ್ಯದ ಗೋಲ್ಡನ್ ಜುಬಿಲಿಯಾಗಿದೆ. ಸ್ಥಾಪನೆಯ ಕಾರ್ಯದಲ್ಲಿ ಯಾರೆಲ್ಲರೂ ಸಹಯೋಗಿಯಾಗಿದ್ದಿರಿ, ಭಲೆ ಎರಡು ವರ್ಷದವರಿರಬಹುದು, ಭಲೆ 50 ವರ್ಷದವರಿರಬಹುದು ಆದರೆ ಎರಡು ವರ್ಷದವರೂ ಸಹ ತನ್ನನ್ನು ಬ್ರಹ್ಮಾಕುಮಾರನೆಂದೇ ಹೇಳುತ್ತಾರಲ್ಲವೆ ಅಥವಾ ಮತ್ತ್ಯಾವುದಾದರೂ ಹೆಸರನ್ನೇಳುವರೇ! ಅಂದಮೇಲೆ ಈ ಬ್ರಹ್ಮನ ಮೂಲಕ ಬ್ರಾಹ್ಮಣರ ರಚನೆಯ ಗೋಲ್ಡನ್ ಜುಬಿಲಿಯಾಗಿದೆ, ಇದರಲ್ಲಿ ಎಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆ. ಗೋಲ್ಡನ್ ಜುಬಿಲಿಯವರೆಗೆ ತಮ್ಮಲ್ಲಿ ಗೋಲ್ಡನ್ ಏಜ್ಡ್ ಅರ್ಥಾತ್ ಸತೋಪ್ರಧಾನ ಸಂಕಲ್ಪ-ಸಂಕಲ್ಪವನ್ನು ಇಮರ್ಜ್ ಮಾಡಿಕೊಳ್ಳಬೇಕು. ಇಂತಹ ಗೋಲ್ಡನ್ ಜುಬಿಲಿಯನ್ನಾಚರಿಸಬೇಕು. ಇದಂತು ನಿಮಿತ್ತವಾಗಿ ರೀತಿ ಪದ್ಧತಿಯ ರೀತಿಯಿಂದ ಆಚರಿಸುತ್ತೀರಿ ಆದರೆ ವಾಸ್ತವಿಕ ಗೋಲ್ಡನ್ ಜುಬಿಲಿಯು ಗೋಲ್ಡನೇಜಡ್ ಆಗುವ ಜುಬಿಲಿಯಾಗಿದೆ. ಕಾರ್ಯವು ಸಫಲವಾಯಿತು ಅರ್ಥಾತ್ ಕಾರ್ಯಾರ್ಥವಾಗಿ ನಿಮಿತ್ತ ಆತ್ಮರು ಸಫಲತಾ ಸ್ವರೂಪರಾದರು. ಈಗಲೂ ಸಮಯವಿದೆ. ಈ ಮೂರು ತಿಂಗಳಿನೊಳಗೆ ಪ್ರಪಂಚದ ಸ್ಟೇಜಿನ ಮುಂದೆ ಭಿನ್ನವಾಗಿ ಗೋಲ್ಡನ್ ಜುಬಿಲಿಯನ್ನಾಚರಿಸಿ ತೋರಿಸಿರಿ. ಪ್ರಪಂಚದವರು ಸಮ್ಮಾನ ಕೊಡುತ್ತಾರೆ ಮತ್ತು ಇಲ್ಲಿ ಸಮಾನ ಸ್ಥಿತಿಯ ಪ್ರತ್ಯಕ್ಷತೆ ಮಾಡಬೇಕಾಗಿದೆ. ಸಮ್ಮಾನ(ಗೌರವ) ಕೊಡುವುದಕ್ಕಾಗಿ ಏನಾದರೂ ಮಾಡುತ್ತಿರಿ, ಇದಂತು ನಿಮಿತ್ತವಾಗಿ ಇದೆ. ವಾಸ್ತವಿಕ ಪ್ರಪಂಚದ ಮುಂದೆ ತೋರಿಸಬೇಕಾಗಿದೆ. ನಾವೆಲ್ಲರೂ ಒಂದು, ಒಬ್ಬ ತಂದೆಯ ಮಕ್ಕಳು, ಏಕರಸ ಸ್ಥಿತಿಯವರಿದ್ದೇವೆ. ಒಬ್ಬರ ಲಗನ್ನಿನಲ್ಲಿ ಮಗ್ನರಾಗಿದ್ದು ಒಬ್ಬರ ಹೆಸರನ್ನು ಪ್ರತ್ಯಕ್ಷಗೊಳಿಸುವವರಾಗಿದ್ದೇವೆ - ಇದು ಭಿನ್ನ ಹಾಗೂ ಪ್ರಿಯವಾದ ಗೋಲ್ಡನ್ ಸ್ಥಿತಿಯ ಧ್ವಜಾರೋಹಣ ಮಾಡಿರಿ. ಗೋಲ್ಡನ್ ಪ್ರಪಂಚದ ದೃಶ್ಯವು ತಮ್ಮ ನಯನಗಳ ಮೂಲಕ ಮಾತು ಮತ್ತು ಕರ್ಮದ ಮೂಲಕ ಸ್ಪಷ್ಟವಾಗಿ ಕಾಣಿಸಲಿ. ಇಂತಹ ಗೋಲ್ಡನ್ ಜುಬಿಲಿಯನ್ನಾಚರಿಸಿರಿ. ಒಳ್ಳೆಯದು.

ಇಂತಹ ಸದಾ ಅವಿನಾಶಿ ಶುಭಾಶಯಗಳ ಪಾತ್ರವಾದ ಶ್ರೇಷ್ಠ ಮಕ್ಕಳಿಗೆ, ತಮ್ಮ ಪ್ರತೀ ಸಂಕಲ್ಪ ಮತ್ತು ಕರ್ಮದ ಮೂಲಕ ಹೊಸ ಪ್ರಪಂಚದ ಸಾಕ್ಷಾತ್ಕಾರ ಮಾಡಿಸುವಂತಹ ಮಕ್ಕಳಿಗೆ, ತಮ್ಮ ಗೋಲ್ಡನೇಜ್ಡ್ ಸ್ಥಿತಿಯ ಮೂಲಕ ಗೋಲ್ಡನ್ ಪ್ರಪಂಚವು ಬಂದಿತೆಂದರೆ ಬಂದಿತು - ಇಂತಹ ಶುಭ ಆಶೆಯ ದೀಪವನ್ನು ವಿಶ್ವದ ಆತ್ಮರಲ್ಲಿ ಬೆಳಗಿಸುವ, ಸದಾ ಬೆಳಗುತ್ತಿರುವ ನಕ್ಷತ್ರಗಳಿಗೆ, ಸಫಲತೆಯ ದೀಪಗಳಿಗೆ ಧೃಡಸಂಕಲ್ಪದ ಮೂಲಕ ಹೊಸ ಜೀವನದ ದರ್ಶನ ಮಾಡಿಸುವಂತಹ ದರ್ಶನೀಯಮೂರ್ತಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ, ಅವಿನಾಶಿ ಶುಭಾಶಯಗಳು, ಅವಿನಾಶಿ ವರದಾನದ ಜೊತೆಗೆ ನಮಸ್ತೆ.

ಪಾದಯಾತ್ರಿಗಳು ಹಾಗೂ ಸೈಕಲ್ ಯಾತ್ರಿಕರೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ:-
ಯಾತ್ರೆಯ ಮೂಲಕ ಸೇವೆಯನ್ನಂತು ಎಲ್ಲರೂ ಮಾಡಿದಿರಿ. ಏನೆಲ್ಲಾ ಸೇವೆ ಮಾಡಿದಿರಿ, ಆ ಸೇವೆಯ ಪ್ರತ್ಯಕ್ಷ ಫಲವನ್ನೂ ಅನುಭವ ಮಾಡಿದಿರಿ. ಸೇವೆಯ ವಿಶೇಷ ಖುಷಿಯ ಅನುಭವವನ್ನು ಮಾಡಿದಿರಲ್ಲವೆ. ಪಾದಯಾತ್ರೆಯನ್ನಂತು ಮಾಡಿದಿರಿ, ಎಲ್ಲರೂ ತಮ್ಮ ಪಾದಯಾತ್ರಿಯ ರೂಪದಲ್ಲಿ ನೋಡಿದರು. ಈಗ ಆತ್ಮಿಕ ಯಾತ್ರಿಯ ರೂಪದಲ್ಲಿ ನೋಡಲಿ. ಸೇವೆಯ ರೂಪದಲ್ಲಂತು ನೋಡಿದರು ಆದರೆ ಈಗ ಇಷ್ಟು ಭಿನ್ನ ಯಾತ್ರೆಯನ್ನು ಮಾಡಿಸುವಂತಹ ಅಲೌಕಿಕ ಯಾತ್ರಿಯಾಗಿದ್ದೀರಿ ಎನ್ನುವ ಅನುಭವವಾಗಲಿ. ಹೇಗೆ ಈ ಸೇವೆಯಲ್ಲಿ ಲಗನ್ನಿನಿಂದ ಸಫಲತೆಯನ್ನು ಪಡೆದಿದ್ದೀರಲ್ಲವೆ. ಹಾಗೆಯೇ ಈಗ ಆತ್ಮಿಕ ಯಾತ್ರೆಯಲ್ಲಿ ಸಫಲರಾಗಬೇಕು. ಪರಿಶ್ರಮ ಪಡುತ್ತೀರಿ, ಬಹಳ ಚೆನ್ನಾಗಿ ಸೇವೆಯನ್ನು ಮಾಡುತ್ತೀರಿ, ತಿಳಿಸುವುದಂತು ಬಹಳ ಚೆನ್ನಾಗಿದೆ. ಇವರ ಜೀವನವಂತು ಬಹಳ ಚೆನ್ನಾಗಿದೆ ಎನ್ನುವುದಾಯಿತು. ಆದರೆ ಈಗ ಜೀವನವನ್ನು ರೂಪಿಸಿಲು ತೊಡಗಿಬಿಡಿ - ಅವರು ಇಂತಹ ಅನುಭವ ಮಾಡಲಿ- ಈ ಜೀವನವಲ್ಲದೆ ಮತ್ತ್ಯಾವುದೇ ಜೀವನವೇ ಇಲ್ಲ. ಅಂದಮೇಲೆ ಆತ್ಮಿಕ ಯಾತ್ರೆಯ ಲಕ್ಷ್ಯವನ್ನಿಟ್ಟು ಆತ್ಮಿಕ ಯಾತ್ರೆಯ ಅನುಭವ ಮಾಡಿಸಿರಿ. ಏನು ಮಾಡಬೇಕು ಎಂದು ತಿಳಿಯಿತೆ! ನಡೆಯುತ್ತಾ-ಸುತ್ತಾಡುತ್ತಾ ಹೀಗೆಯೇ ನೋಡಲಿ - ಇವರು ಸಾಧಾರಣರಲ್ಲ. ಇವರು ಆತ್ಮಿಕ ಯಾತ್ರಿಯಿದ್ದಾರೆ. ಅಂದಮೇಲೆ ಏನು ಮಾಡಬೇಕು! ಸ್ವಯಂ ಸಹ ಯಾತ್ರೆಯಲ್ಲಿರಿ ಮತ್ತು ಅನ್ಯರಿಗೂ ಯಾತ್ರೆಯ ಅನುಭವ ಮಾಡಿಸಿರಿ. ಪಾದಯಾತ್ರೆಯ ಅನುಭವ ಮಾಡಿಸಿದಿರಿ, ಈಗ ಫರಿಶ್ಥಾ ಸ್ಥಿತಿಯ ಅನುಭವ ಮಾಡಿಸಿರಿ. ಅವರು ಅನುಭವ ಮಾಡಲಿ - ಇವರು ಧರಣಿಯ ಮೇಲಿರುವವರಲ್ಲ, ಇವರು ಫರಿಶ್ಥೆಯಿದ್ದಾರೆ. ಇವರ ಕಾಲುಗಳು ಈ ಧರಣಿಯಲ್ಲಿರುವುದಿಲ್ಲ. ದಿನ ಕಳೆದಂತೆ ಹಾರುವ ಕಲೆಯ ಮೂಲಕ ಅನ್ಯರನ್ನೂ ಹಾರಿಸಿರಿ. ಈಗ ಹಾರಿಸುವ ಸಮಯವಾಗಿದೆ. ನಡೆಸುವ ಸಮಯವಲ್ಲ. ನಡೆಯುವುದರಲ್ಲಿ ಸಮಯವು ಹಿಡಿಸುತ್ತದೆ ಮತ್ತು ಹಾರುವುದರಲ್ಲಿ ಸಮಯವು ಹಿಡಿಸುವುದಿಲ್ಲ. ತಮ್ಮ ಹಾರುವ ಕಲೆಯ ಮೂಲಕ ಅನ್ಯರನ್ನೂ ಹಾರಿಸಿರಿ. ತಿಳಿಯಿತೆ! ಇಂತಹ ದೃಷ್ಟಿಯಿಂದ, ಸ್ಮೃತಿಯಿಂದ ಎಲ್ಲರನ್ನೂ ಸಂಪನ್ನ ಮಾಡುತ್ತಾ ಸಾಗಿರಿ. ಅವರೂ ತಿಳಿಯಲಿ - ನಮಗೆ ಸ್ವಲ್ಪ ಪ್ರಾಪ್ತಿಯಾಗಿದೆ. ಸಂಪನ್ನರಾದೆವು. ಖಾಲಿಯಿದ್ದೆವು ಆದರೆ ಸಂಪನ್ನರಾಗಿ ಬಿಟ್ಟೆವು. ಎಲ್ಲಿ ಪ್ರಾಪ್ತಿಯಾಗುತ್ತದೆ ಅಲ್ಲಿ ಸೆಕೆಂಡಿನಲ್ಲಿ ಬಲಿಹಾರಿಯಾಗುತ್ತಾರೆ. ತಾವುಗಳಿಗೆ ಪ್ರಾಪಿಯಾಯಿತು ಆದ್ದರಿಂದ ಬಿಟ್ಟಿರಲ್ಲವೆ. ಇಷ್ಟವಾಯಿತು, ಅನುಭವ ಮಾಡಿದಿರಿ ಆದ್ದರಿಂದ ಬಿಟ್ಟಿರಲ್ಲವೆ. ಹಾಗೆಯೇ ಬಿಡಲಿಲ್ಲ. ಅದೇರೀತಿ ಅನ್ಯರಿಗೂ ಪ್ರಾಪ್ತಿಯ ಅನುಭವ ಮಾಡಿಸಿರಿ. ತಿಳಿಯಿತೆ. ಉಳಿದಂತೆ ಚೆನ್ನಾಗಿದೆ! ಯಾರೆಲ್ಲರೂ ಸೇವೆಯಲ್ಲಿ ದಿನಗಳನ್ನು ಕಳೆದಿರಿ, ಅದು ತಮಗಾಗಿಯೂ, ಅನ್ಯರಿಗಾಗಿಯೂ ಶ್ರೇಷ್ಠವನ್ನಾಗಿ ಮಾಡಿದಿರಿ. ಉಮ್ಮಂಗ-ಉತ್ಸಾಹವು ಚೆನ್ನಾಗಿತ್ತು! ಫಲಿತಾಂಶವು ಚೆನ್ನಾಗಿದೆಯಲ್ಲವೆ. ಆತ್ಮಿಕ ಯಾತ್ರೆಯು ಸದಾ ಇರುತ್ತದೆಯೆಂದರೆ ಸಫಲತೆಯೂ ಸದಾ ಇರುತ್ತದೆ. ಪಾದಯಾತ್ರೆಯು ಪೂರ್ಣವಾಯಿತೆಂದರೆ ಸೇವೆಯು ಪೂರ್ಣವಾಯಿತೆಂದಲ್ಲ. ಮತ್ತೆ ಹೇಗಿದ್ದಿರಿ ಹಾಗೆಯೇ ಇರುವುದೂ ಅಲ್ಲ. ಸದಾ ಸೇವಾಕ್ಷೇತ್ರದಲ್ಲಿ ಸೇವೆಯಿಲ್ಲದೆ ಬ್ರಾಹ್ಮಣರಾಗಿರಲು ಸಾಧ್ಯವಿಲ್ಲ. ಕೇವಲ ಸೇವೆಯ ಪಾತ್ರವು ಬದಲಾಯಿತು. ಸೇವೆಯಂತು ಅಂತ್ಯದವರೆಗೂ ಮಾಡಬೇಕಾಗಿದೆ. ಇಂತಹ ಸೇವಾಧಾರಿಯಾಗಿದ್ದೀರಲ್ಲವೆ ಅಥವಾ ಮೂರು ತಿಂಗಳು ಎರಡು ತಿಂಗಳಿನ ಸೇವಾಧಾರಿಯಾಗಿದ್ದೀರಾ! ಸದಾಕಾಲದ ಸೇವಾಧಾರಿಗಳಲ್ಲಿ ಸದಾಕಾಲವೂ ಉಮ್ಮಂಗ-ಉತ್ಸಾಹವಿರಲಿ. ಒಳ್ಳೆಯದು. ಡ್ರಾಮಾದಲ್ಲಿ ಸೇವೆಯ ಯಾವುದೆಲ್ಲಾ ಪಾತ್ರವು ಸಿಗುತ್ತದೆ, ಅದರಲ್ಲಿ ವಿಶೇಷತೆಯು ಅಡಗಿದೆ. ಸಾಹಸದಿಂದ ಸಹಯೋಗದ ಅನುಭವ ಮಾಡಿದಿರಿ. ಒಳ್ಳೆಯದು. ಸ್ವಯಂನ ಮೂಲಕ ತಂದೆಯನ್ನು ಪ್ರತ್ಯಕ್ಷಗೊಳಿಸುವ ಶ್ರೇಷ್ಠ ಸಂಕಲ್ಪವಿದೆ ಏಕೆಂದರೆ ಯಾವಾಗ ತಂದೆಯನ್ನು ಪ್ರತ್ಯಕ್ಷಗೊಳಿಸುವಿರಿ, ಆಗಲೇ ಈ ಹಳೆಯ ಪ್ರಪಂಚದ ಸಮಾಪ್ತಿಯಾಗುತ್ತದೆ, ತಮ್ಮ ರಾಜ್ಯವು ಬರುತ್ತದೆ. ತಂದೆಯನ್ನು ಪ್ರತ್ಯಕ್ಷಗೊಳಿಸುವುದು ಅರ್ಥಾತ್ ತಮ್ಮ ರಾಜ್ಯವನ್ನು ತರುವುದಾಗಿದೆ. ತಮ್ಮ ರಾಜ್ಯವನ್ನು ತರಬೇಕು - ಈ ಉಮ್ಮಂಗ-ಉತ್ಸಾಹವು ಸದಾ ಇರುತ್ತದೆಯಲ್ಲವೆ! ಹೇಗೆ ವಿಶೇಷ ಕಾರ್ಯಕ್ರಮಗಳಲ್ಲಿ ಉಮ್ಮಂಗ-ಉತ್ಸಾಹವಿರುತ್ತದೆ, ಹಾಗೆಯೇ ಸದಾ ಈ ಸಂಕಲ್ಪದ ಉಮ್ಮಂಗ-ಉತ್ಸಾಹವಿರಲಿ. ತಿಳಿಯಿತೆ!

ಪಾರ್ಟಿಯೊಂದಿಗೆ:- ತಿಳಿಸುವುದಂತು ಬಹಳಷ್ಟಾಯಿತು! ಈಗ ಕೇಳಿರುವ ಆ ಮಾತುಗಳನ್ನು ಸಮಾವೇಶ ಮಾಡಿಕೊಳ್ಳಬೇಕು ಏಕೆಂದರೆ ಎಷ್ಟು ಸಮಾವೇಶ ಮಾಡಿಕೊಳ್ಳುತ್ತೀರಿ, ಅಷ್ಟು ತಂದೆಯ ಸಮಾನ ಶಕ್ತಿಶಾಲಿಯಾಗುವಿರಿ. ಮಾಸ್ಟರ್ ಆಗಿದ್ದೀರಲ್ಲವೆ. ಅಂದಮೇಲೆ ಹೇಗೆ ತಂದೆಯು ಸರ್ವಶಕ್ತಿವಂತನು ಹಾಗೆಯೇ ತಾವೆಲ್ಲರೂ ಸಹ ಮಾಸ್ಟರ್ ಸರ್ವಶಕ್ತಿವಂತ ಅರ್ಥಾತ್ ಸರ್ವಶಕ್ತಿಗಳನ್ನು ಸಮಾವೇಶ ಮಾಡಿಕೊಳ್ಳುವವರು, ತಂದೆಯ ಸಮಾನರಾಗುವವರಾಗಿದ್ದೀರಲ್ಲವೆ. ತಂದೆ ಮತ್ತು ಮಕ್ಕಳಲ್ಲಿ ಜೀವನ ಆಧಾರದಿಂದ ಅಂತರವು ಕಾಣಿಸಬಾರದು. ಹೇಗೆ ಬ್ರಹ್ಮ ತಂದೆಯ ಜೀವನವನ್ನು ನೋಡಿದಿರಿ, ಅಂದಮೇಲೆ ಬ್ರಹ್ಮ ತಂದೆ ಮತ್ತು ಮಕ್ಕಳು ಸಮಾನವಾಗಿ ಕಾಣಿಸಲಿ. ಸಾಕಾರದಲ್ಲಂತು ಬ್ರಹ್ಮ ತಂದೆಯು ಕರ್ಮವನ್ನು ಮಾಡಿತೋರಿಸಲು ನಿಮಿತ್ತವಾದರಲ್ಲವೆ. ಹಾಗೆಯೇ ಸಮಾನರಾಗುವುದು ಅರ್ಥಾತ್ ಮಾಸ್ಟರ್ ಸರ್ವಶಕ್ತಿವಂತರಾಗುವುದು. ಅಂದಮೇಲೆ ಸರ್ವಶಕ್ತಿಗಳಿವೆಯೇ? ಧಾರಣೆಯಂತು ಮಾಡಿದಿರಿ ಆದರೆ ಪರ್ಸಂಟೇಜ್ ಇದೆ. ಎಷ್ಟಾಗಬೇಕು ಅಷ್ಟಿಲ್ಲ. ಸಂಪನ್ನರಿಲ್ಲ. ಆಗುವುದಂತು ಸಂಪನ್ನವಾಗಿ ಅಲ್ಲವೆ! ಅಂದಮೇಲೆ ಪರ್ಸಂಟೇಜನ್ನು ಹೆಚ್ಚಿಸಿರಿ. ಶಕ್ತಿಗಳನ್ನು ಸಮಯದಲ್ಲಿ ಕಾರ್ಯದಲ್ಲಿ ತೊಡಗಿಸಿರಿ, ಇದರಲ್ಲಿಯೇ ಅಂಕಗಳು ಸಿಗುತ್ತವೆ. ಒಂದುವೇಳೆ ಸಮಯದಲ್ಲಿ ಕಾರ್ಯದಲ್ಲಿ ಬರುವುದಿಲ್ಲವೆಂದರೆ ಏನು ಹೇಳುವುದು? ಅವು ಇದ್ದರೂ ಅದಿಲ್ಲವೆಂದು ಹೇಳುವರು ಏಕೆಂದರೆ ಸಮಯದಲ್ಲಿ ಕಾರ್ಯದಲ್ಲಿ ಬರಲಿಲ್ಲ. ಅಂದಮೇಲೆ ಪರಿಶೀಲನೆ ಮಾಡಿರಿ - ಸಮಯ ಪ್ರಮಾಣ ಯಾವ ಶಕ್ತಿಯ ಅವಶ್ಯಕತೆಯಿದೆ, ಅದನ್ನು ಕಾರ್ಯದಲ್ಲಿ ತೊಡಗಿಸಬಲ್ಲಿರಾ? ಅಂದಮೇಲೆ ತಂದೆಯ ಸಮಾನ ಮಾಸ್ಟರ್ ಸರ್ವಶಕ್ತಿವಂತನ ಪ್ರತ್ಯಕ್ಷ ರೂಪದಲ್ಲಿ ವಿಶ್ವಕ್ಕೆ ತೋರಿಸಬೇಕಾಗಿದೆ. ಆಗಲೇ ವಿಶ್ವವೂ ಒಪ್ಪುತ್ತದೆ - ಹೌದು, ಸರ್ವಶಕ್ತಿವಂತನು ಪ್ರತ್ಯಕ್ಷವಾಗಿ ಬಿಟ್ಟಿದ್ದಾರೆ, ಇದೇ ಲಕ್ಷ್ಯವಿದೆಯಲ್ಲವೆ! ಈಗ ನೋಡುತ್ತೇವೆ - ಗೋಲ್ಡನ್ ಜುಬಿಲಿಯವರೆಗೆ ನಂಬರ್ ಯಾರು ತೆಗೆದುಕೊಳ್ಳುತ್ತಾರೆ ಎಂದು. ಒಳ್ಳೆಯದು!

ವರದಾನ:  
ವಿಶ್ವ ಕಲ್ಯಾಣದ ಭಾವನೆಯ ಮೂಲಕ ಪ್ರತಿಯೊಂದು ಆತ್ಮನ ಸುರಕ್ಷತೆಯ ಯೋಜನೆಯನ್ನು ಮಾಡುವಂತಹ ಸತ್ಯ ದಯಾಹೃದಯಿ ಭವ.

ವರ್ತಮಾನ ಸಮಯದಲ್ಲಿ ಕೆಲವು ಆತ್ಮರು ತಮಗೆ ತಾವೇ ಸ್ವಯಂನ ಅಕಲ್ಯಾಣಕ್ಕೆ ನಿಮಿತ್ತರಾಗಿದ್ದಾರೆ, ಅವರಿಗಾಗಿ ದಯಾಹೃದಯಿಗಳಾಗಿ ಏನಾದರೂ ಯೋಜನೆ ಮಾಡಿರಿ. ಯಾವುದೇ ಆತ್ಮನ ಪಾತ್ರವನ್ನು ನೋಡುತ್ತಾ ಸ್ವಯಂ ತಾವು ಏರುಪೇರಿನಲ್ಲಿ ಬರಬಾರದು ಆದರೆ ಅವರ ಸುರಕ್ಷತೆಯ ಸಾಧನವನ್ನು ಯೋಚಿಸಿರಿ, ಈ ರೀತಿಯಲ್ಲ, ಇದಂತು ಆಗುತ್ತಿರುತ್ತದೆ, ವೃಕ್ಷವಂತು ಬಿದ್ದು ಹೋಗಲೇಬೇಕು. ಅಲ್ಲ. ಬಂದಿರುವ ವಿಘ್ನಗಳನ್ನು ಸಮಾಪ್ತಿ ಮಾಡಿರಿ. ವಿಶ್ವ ಕಲ್ಯಾಣಕಾರಿ ಅಥವಾ ವಿಘ್ನ ವಿನಾಶಕನ ಟೈಟಲ್ ಏನಿದೆ- ಅದರನುಸಾರವಾಗಿ ಸಂಕಲ್ಪ, ವಾಣಿ ಮತ್ತು ಕರ್ಮದಲ್ಲಿ ದಯಾಹೃದಯಿಯಾಗಿ ವಾಯುಮಂಡಲವನ್ನು ಪರಿವರ್ತನೆ ಮಾಡುವುದರಲ್ಲಿ ಸಹಯೋಗಿಯಾಗಿರಿ.

ಸ್ಲೋಗನ್:
ಅವರೇ ಕರ್ಮಯೋಗಿಯಾಗಲು ಸಾಧ್ಯ, ಯಾರ ಬುದ್ಧಿಯ ಮೇಲೆ ಗಮನದ ಭದ್ರತೆಯನ್ನಿಡುತ್ತಾರೆ.


ಅವ್ಯಕ್ತ ಸ್ಥಿತಿಯ ಅನುಭವ ಮಾಡುವುದಕ್ಕಾಗಿ ವಿಶೇಷ ಹೋಮ್ವರ್ಕ್ -
ಒಂದುವೇಳೆ ಯಾವುದೇ ಪ್ರಕಾರದ ಹೊರೆಯಿದೆಯೆಂದರೆ ಆತ್ಮಿಕ ವ್ಯಾಯಾಮವನ್ನು ಮಾಡಿರಿ. ಈಗೀಗ ಕರ್ಮಯೋಗಿ ಅರ್ಥಾತ್ ಸಾಕಾರಿ ಸ್ವರೂಪಧಾರಿಯಾಗಿದ್ದು, ಸಾಕಾರ ಸೃಷ್ಟಿಯ ಪಾತ್ರವನ್ನಭಿನಯಿಸಿರಿ. ಈಗೀಗ ಆಕಾರಿ ಫರಿಶ್ತೆಯಾಗಿ ಆಕಾರಿ ವತನವಾಸಿ ಅವ್ಯಕ್ತರೂಪದ ಅನುಭವ ಮಾಡಿರಿ. ಈಗೀಗ ನಿರಾಕಾರಿಯಾಗಿ ಮೂಲವತನವಾಸಿಯ ಅನುಭವ ಮಾಡಿರಿ. ಈ ವ್ಯಾಯಾಮದಿಂದ ಹಗುರವಾಗಿ ಬಿಡುತ್ತೀರಿ, ಹೊರೆಯೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ.