04.01.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೆನಪಿನ ಚಾರ್ಟ್ ಇಡಿ, ಎಷ್ಟೆಷ್ಟು ನೆನಪಿನಲ್ಲಿರುವ ಹವ್ಯಾಸವಾಗುತ್ತಾ ಹೋಗುತ್ತದೆಯೋ ಅಷ್ಟು ಪಾಪಗಳು ತುಂಡಾಗುತ್ತಾ ಹೋಗುತ್ತವೆ, ಕರ್ಮಾತೀತ ಸ್ಥಿತಿಯು ಸಮೀಪ ಬರುತ್ತಾ ಹೋಗುವುದು”

ಪ್ರಶ್ನೆ:
ಚಾರ್ಟನ್ನು ಸರಿಯಾಗಿ ಬರೆದಿದ್ದಾರೆಯೇ ಅಥವಾ ಇಲ್ಲವೆ ಎಂದು ಯಾವ ನಾಲ್ಕು ಮಾತುಗಳಿಂದ ಗುರುತಿಸಲಾಗುತ್ತದೆ?

ಉತ್ತರ:
1. ವ್ಯಕ್ತಿ 2. ಚಲನೆ 3. ಸರ್ವೀಸ್ 4. ಖುಷಿ. ಬಾಪ್ದಾದಾ ಈ ನಾಲ್ಕು ಮಾತುಗಳನ್ನು ನೋಡಿ ಇವರ ಚಾರ್ಟ್ ಸರಿಯಿದೆಯೇ ಅಥವಾ ಇಲ್ಲವೆ ಎಂದು ತಿಳಿಸುತ್ತಾರೆ. ಯಾವ ಮಕ್ಕಳು ಮ್ಯೂಸಿಯಂ ಅಥವಾ ಪ್ರದರ್ಶನಿಯ ಸರ್ವೀಸಿನಲ್ಲಿರುತ್ತಾರೆ, ಯಾರ ಚಲನೆಯು ಘನತೆಯಿಂದಿರುತ್ತದೆ, ಅಪಾರ ಖುಷಿಯಲ್ಲಿರುತ್ತಾರೆಯೋ ಅವರ ಚಾರ್ಟ್ ಸರಿಯಾಗಿರುವುದು.

ಗೀತೆ:
ಮುಖವನ್ನು ನೋಡಿಕೋ ಪ್ರಾಣಿ.............

ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ, ಇದರ ಅರ್ಥವನ್ನೂ ಸಹ ಅರಿತುಕೊಳ್ಳಬೇಕು - ನನ್ನಲ್ಲಿ ಇನ್ನು ಪಾಪವು ಎಷ್ಟು ಉಳಿದಿದೆ, ಪುಣ್ಯದ ಖಾತೆಯು ಎಷ್ಟಿದೆ, ಆತ್ಮವು ಸತೋಪ್ರಧಾನವಾಗುವುದರಲ್ಲಿ ಇನ್ನೂ ಎಷ್ಟು ಸಮಯವಿದೆ? ಈಗ ಎಲ್ಲಿಯವರೆಗೆ ಪಾವನರಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು ಆಗುತ್ತದೆಯಲ್ಲವೆ? ನಾವು ಎರಡು-ಮೂರು ಗಂಟೆ ನೆನಪಿನಲ್ಲಿದ್ದೆವು ಎಂದು. ಇನ್ನೂ ಕೆಲವರು ಒಂದು ಗಂಟೆ ನೆನಪಿನಲ್ಲಿದ್ದೆವು ಎಂದು ಚಾರ್ಟ್ನಲ್ಲಿ ಬರೆಯುತ್ತಾರೆ, ಆದರೆ ಇದು ಬಹಳ ಕಡಿಮೆಯಾಯಿತು. ಕಡಿಮೆ ನೆನಪು ಮಾಡಿದರೆ ಪಾಪಗಳು ಕಡಿಮೆ ತುಂಡಾಗುತ್ತವೆ. ಈಗಂತೂ ಬಹಳಷ್ಟು ಪಾಪವಿದೆಯಲ್ಲವೆ, ಅದು ಇನ್ನೂ ಕಳೆದಿಲ್ಲ. ಆತ್ಮವನ್ನೇ ಪ್ರಾಣಿ ಎಂದು ಹೇಳಲಾಗುತ್ತದೆ ಅಂದಾಗ ತಂದೆಯು ತಿಳಿಸುತ್ತಾರೆ - ಹೇ ಆತ್ಮ, ತನ್ನೊಂದಿಗೆ ಕೇಳಿಕೊ, ಈ ಲೆಕ್ಕದಿಂದ ಎಷ್ಟು ಪಾಪಗಳು ಕಳೆದಿರಬಹುದು, ನಾವು ಎಷ್ಟು ಪುಣ್ಯಾತ್ಮರಾಗಿದ್ದೇವೆ ಎಂಬುದು ಚಾರ್ಟ್ನಿಂದಲೇ ಅರ್ಥವಾಗುವುದು. ಇದನ್ನಂತೂ ತಂದೆಯು ತಿಳಿಸಿದ್ದಾರೆ, ಕರ್ಮಾತೀತ ಸ್ಥಿತಿಯು ಅಂತ್ಯದಲ್ಲಿಯೇ ಆಗುವುದು. ನೆನಪು ಮಾಡುವುದು ಹವ್ಯಾಸವಾಗಿ ಬಿಡುತ್ತದೆಂದರೆ ಹೆಚ್ಚಿನ ಪಾಪಗಳು ತುಂಡಾಗುತ್ತವೆ. ನಾವು ಎಷ್ಟು ಸಮಯ ತಂದೆಯ ನೆನಪಿನಲ್ಲಿರುತ್ತೇವೆಂದು ಪರಿಶೀಲನೆ ಮಾಡಿಕೊಳ್ಳಬೇಕು. ಇದರಲ್ಲಿ ಸುಳ್ಳು ಹೇಳುವ ಮಾತಿಲ್ಲ. ಇಲ್ಲಿ ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ. ತಂದೆಗೆ ತಮ್ಮ ಚಾರ್ಟನ್ನು ಬರೆದು ಕೊಟ್ಟರೆ ಈ ಚಾರ್ಟ್ ಸರಿಯಿದೆಯೇ ಅಥವಾ ಇಲ್ಲವೆ ಎಂಬುದನ್ನು ತಂದೆಯು ಬಹು ಬೇಗನೆ ತಿಳಿಸಬಲ್ಲರು. ವ್ಯಕ್ತಿ, ಚಲನೆ, ಸರ್ವೀಸ್ ಮತ್ತು ಖುಷಿಯನ್ನು ನೋಡಿ ತಂದೆಯು ಇವರ ಚಾರ್ಟ್ ಹೇಗಿದೆ ಎಂಬುದನ್ನು ತಕ್ಷಣ ತಿಳಿದುಕೊಳ್ಳುತ್ತಾರೆ. ನಿರಂತರ ನೆನಪು ಯಾರಿಗಿರಬಹುದು? ಯಾರು ಮ್ಯೂಸಿಯಂ ಅಥವಾ ಪ್ರದರ್ಶನಿಯ ಸರ್ವೀಸಿನಲ್ಲಿರುವವರಿಗೆ. ಮ್ಯೂಸಿಯಂನಲ್ಲಂತೂ ಇಡೀ ದಿನ ಬರುತ್ತಾ ಹೋಗುತ್ತಿರುತ್ತಾರೆ. ದೆಹಲಿಯಲ್ಲಂತೂ ಅನೇಕರು ಬರುತ್ತಿರುತ್ತಾರೆ, ಪದೇ-ಪದೇ ತಂದೆಯ ಪರಿಚಯ ಕೊಡಬೇಕಾಗುತ್ತದೆ. ತಿಳಿದುಕೊಳ್ಳಿ - ವಿನಾಶಕ್ಕೆ ಇನ್ನು ಕೆಲವೇ ವರ್ಷಗಳಿವೆ ಎಂದು ನೀವು ಯಾರಿಗಾದರೂ ಹೇಳುತ್ತೀರಿ. ಇದು ಹೇಗೆ ಸಾಧ್ಯವಿದೆ ಎಂದು ಕೇಳುತ್ತಾರೆ ಆಗ ತಕ್ಷಣ ಹೇಳಬೇಕು, ಇದನ್ನು ನಾವು ತಿಳಿಸುತ್ತೇವೆಯೇ! ಭಗವಾನುವಾಚವಿದೆಯಲ್ಲವೆ. ಭಗವಾನುವಾಚವು ಅವಶ್ಯವಾಗಿ ಸತ್ಯವೇ ಇರುವುದಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ, ಮತ್ತೆ-ಮತ್ತೆ ತಿಳಿಸಿ, ಇದು ಶಿವ ತಂದೆಯ ಶ್ರೀ ಮತವಾಗಿದೆ ನಾವು ಹೇಳುತ್ತಿಲ್ಲ, ಇದು ಅವರ ಶ್ರೀ ಮತವಾಗಿದೆ. ಭಗವಂತನು ಸತ್ಯವಾಗಿದ್ದಾರೆ, ಅವರಿಗೆ ಮೊಟ್ಟ ಮೊದಲು ತಂದೆಯ ಪರಿಚಯವನ್ನು ಅವಶ್ಯವಾಗಿ ಕೊಡಬೇಕಾಗುತ್ತದೆ. ಆದ್ದರಿಂದಲೇ ತಂದೆಯು ತಿಳಿಸಿದ್ದಾರೆ - ಪ್ರತಿಯೊಂದು ಚಿತ್ರದಲ್ಲಿ ಶಿವ ಭಗವಾನುವಾಚ ಎಂದು ಬರೆಯಿರಿ. ತಂದೆಯಂತೂ ನಿಖರವಾಗಿಯೇ ತಿಳಿಸುತ್ತಾರೆ. ನಾವೇನು ಇದನ್ನು ತಿಳಿದುಕೊಂಡಿರಲಿಲ್ಲ, ತಂದೆಯು ತಿಳಿಸಿದ್ದಾರೆ. ಆದ್ದರಿಂದ ನಾವು ತಮಗೆ ಹೇಳುತ್ತೇವೆ. ಕೆಲಕೆಲವೊಮ್ಮೆ ಇಂತಹವರು ಭವಿಷ್ಯ ವಾಣಿಯನ್ನು ತಿಳಿಸಿದ್ದಾರೆ - ವಿನಾಶವು ಬೇಗನೆ ಆಗುವುದೆಂದು ಪತ್ರಿಕೆಗಳಲ್ಲಿಯೂ ಹಾಕುತ್ತಾರೆ.

ಈಗ ನೀವಂತೂ ಬೇಹದ್ದಿನ ಮಕ್ಕಳಾಗಿದ್ದೀರಿ. ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರೆಂದರೆ ಬೇಹದ್ದಿನ ತಂದೆಯ ಮಕ್ಕಳಲ್ಲವೆ! ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ, ಅವರೇ ಪತಿತ-ಪಾವನ ಜ್ಞಾನ ಸಾಗರನಾಗಿದ್ದಾರೆಂದು ತಿಳಿಸುತ್ತೀರಿ. ಮೊದಲಿಗೆ ಈ ಮಾತನ್ನು ತಿಳಿಸಿ ನಿಶ್ಚಯ ಮಾಡಿಸಿ ನಂತರ ಮುಂದುವರೆಯಬೇಕು. ಶಿವ ತಂದೆಯು ಇದನ್ನೇ ಹೇಳಿದ್ದಾರೆ, ಯಾದವರು-ಕೌರವರು ಮೊದಲಾದವರು ವಿನಾಶಕಾಲೇ ವಿಪರೀತ ಬುದ್ಧಿಯವರು. ಶಿವ ತಂದೆಯ ಹೆಸರನ್ನು ತೆಗೆದುಕೊಳ್ಳುತ್ತಿದ್ದರೆ ಇದರಲ್ಲಿ ಮಕ್ಕಳದೂ ಕಲ್ಯಾಣವಿದೆ. ಶಿವ ತಂದೆಯನ್ನೇ ನೆನಪು ಮಾಡುತ್ತಾ ಇರುತ್ತೀರಿ. ತಂದೆಯು ನಿಮಗೆ ಏನನ್ನು ತಿಳಿಸಿದ್ದಾರೆಯೋ ಅದನ್ನು ಅನ್ಯರಿಗೂ ತಿಳಿಸುತ್ತಾ ಇರಿ. ಅಂದಾಗ ಸರ್ವೀಸ್ ಮಾಡುವವರ ಚಾರ್ಟ್ ಚೆನ್ನಾಗಿರುತ್ತದೆ. ಇಡೀ ದಿನದಲ್ಲಿ 8 ಗಂಟೆಗಳ ಸಮಯ ಸರ್ವೀಸಿನಲ್ಲಿ ತತ್ಫರರಾಗಿರುತ್ತಾರೆ. ಹೆಚ್ಚೆಂದರೆ ಒಂದು ಗಂಟೆ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ. ಆದರೂ ಸಹ ಇನ್ನು 7 ಗಂಟೆಗಳ ಸಮಯ ಸರ್ವೀಸಿನಲ್ಲಿರುತ್ತಾರಲ್ಲವೆ ಅಂದಾಗ ತಿಳಿಯಬೇಕು - ಅವರ ವಿಕರ್ಮಗಳು ಬಹಳ ವಿನಾಶವಾಗುತ್ತವೆ. ಅನೇಕರಿಗೆ ಪದೇ-ಪದೇ ತಂದೆಯ ಪರಿಚಯ ಕೊಡುತ್ತಾರೆಂದರೆ ಅವಶ್ಯವಾಗಿ ಅಂತಹ ಸೇವಾಧಾರಿ ಮಕ್ಕಳು ತಂದೆಗೂ ಪ್ರಿಯರಾಗುತ್ತಾರೆ. ತಂದೆಯು ನೋಡುತ್ತಾರೆ - ಇವರು ಅನೇಕರ ಕಲ್ಯಾಣ ಮಾಡುತ್ತಾರೆ. ರಾತ್ರಿ-ಹಗಲು ಇವರಿಗೆ ನಾವು ಅನೇಕರ ಕಲ್ಯಾಣ ಮಾಡಬೇಕೆಂಬ ಚಿಂತನೆಯೇ ಇದೆ. ಅನೇಕರ ಕಲ್ಯಾಣ ಮಾಡುವುದೆಂದರೆ ತಮ್ಮ ಕಲ್ಯಾಣ ಮಾಡಿಕೊಳ್ಳುತ್ತಾರೆ. ಯಾರು ಅನೇಕರ ಕಲ್ಯಾಣ ಮಾಡುವರೋ ಅವರಿಗೇ ವಿದ್ಯಾರ್ಥಿ ವೇತನವು ಸಿಗುತ್ತದೆ. ಮಕ್ಕಳ ಕರ್ತವ್ಯವೇ ಆಗಿದೆ - ಶಿಕ್ಷಕರಾಗಿ ಅನೇಕರಿಗೆ ಮಾರ್ಗವನ್ನು ತಿಳಿಸಬೇಕು. ಮೊದಲು ಈ ಜ್ಞಾನವನ್ನು ಪೂರ್ಣ ಧಾರಣೆ ಮಾಡಬೇಕು. ಅನ್ಯರ ಕಲ್ಯಾಣ ಮಾಡಲಿಲ್ಲವೆಂದರೆ ಇವರ ಅದೃಷ್ಟದಲ್ಲಿಲ್ಲವೆಂದು ತಿಳಿಯಲಾಗುತ್ತದೆ. ಬಾಬಾ, ನಮ್ಮನ್ನು ನೌಕರಿಯಿಂದ ಬಿಡಿಸಿ ನಾವು ಈ ಸೇವೆಯಲ್ಲಿ ತೊಡಗಬೇಕೆಂದು ಮಕ್ಕಳು ಹೇಳುತ್ತಾರೆ. ತಂದೆಯೂ ಸಹ ನೋಡುತ್ತಾರೆ, ಅವಶ್ಯವಾಗಿ ಸೇವೆಗೆ ಯೋಗ್ಯರು ಮತ್ತು ಬಂಧನಮುಕ್ತರಾಗಿದ್ದರೆ ಭಲೆ 500-1000 ರೂ.ಗಳನ್ನು ಸಂಪಾದಿಸುವುದಕ್ಕಿಂತ ಈ ಸೇವೆಯಲ್ಲಿ ತೊಡಗಿ ಅನೇಕರ ಕಲ್ಯಾಣ ಮಾಡಿ ಎಂದು ಹೇಳುತ್ತಾರೆ. ಆದರೆ ಬಂಧನ ಮುಕ್ತರಾಗಿದ್ದರೆ ಮಾತ್ರ. ಅದರಲ್ಲಿಯೂ ತಂದೆಯು ಸೇವಾಧಾರಿಗಳನ್ನು ನೋಡಿ ಸಲಹೆ ನೀಡುತ್ತಾರೆ. ಸೇವಾಧಾರಿ ಮಕ್ಕಳನ್ನಂತೂ ಸೇವೆಯಿದ್ದಲ್ಲಿ ಕರೆಯುತ್ತಿರುತ್ತಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಓದುತ್ತಾರಲ್ಲವೆ. ಇದೂ ಸಹ ವಿದ್ಯೆಯಾಗಿದೆ. ಇದು ಯಾವುದೇ ಸಾಮಾನ್ಯ ಮತವಲ್ಲ. ಸತ್ ಎಂದರೆ ಸತ್ಯವನ್ನೇ ಹೇಳುವವರು. ನಾವು ಶ್ರೀಮತದನುಸಾರ ತಮಗೆ ಇದನ್ನು ತಿಳಿಸುತ್ತೇವೆ. ಈಗಲೇ ನಿಮಗೆ ಈಶ್ವರನ ಮತವು ಸಿಗುತ್ತದೆ.

ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಹಿಂತಿರುಗಿ ಹೋಗಬೇಕಾಗಿದೆ. ಈಗ ಬೇಹದ್ದಿನ ಸುಖದ ಆಸ್ತಿಯನ್ನು ತೆಗೆದುಕೊಳ್ಳಿ. ಕಲ್ಪ-ಕಲ್ಪವೂ ನಿಮಗೆ ಆಸ್ತಿಯು ಸಿಗುತ್ತಾ ಬಂದಿದೆ ಏಕೆಂದರೆ ಸ್ವರ್ಗದ ಸ್ಥಾಪನೆಯಂತೂ ಕಲ್ಪ-ಕಲ್ಪವೂ ಆಗುತ್ತದೆಯಲ್ಲವೆ. ಇದು 5000 ವರ್ಷಗಳ ಸೃಷ್ಟಿಚಕ್ರವೆಂದು ಯಾರಿಗೂ ತಿಳಿದಿಲ್ಲ. ಮನುಷ್ಯರು ಸಂಪೂರ್ಣ ಅಂಧಕಾರದಲ್ಲಿದ್ದಾರೆ ಆದರೆ ನೀವೀಗ ಬೆಳಕಿನಲ್ಲಿ ಕುಳಿತಿದ್ದೀರಿ. ತಂದೆಯೇ ಸ್ವರ್ಗದ ಸ್ಥಾಪನೆಯನ್ನು ಮಾಡುತ್ತಾರೆ. ಗಾಯನವೂ ಇದೆ - ಬಿದಿರಿನ ಕಾಡಿಗೆ ಬೆಂಕಿಯು ಬಿದ್ದಾಗ ಅಜ್ಞಾನ ನಿದ್ರೆಯಲ್ಲಿ ಮಲಗಿದ್ದರೆಂದು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಬೇಹದ್ದಿನ ತಂದೆಯು ಜ್ಞಾನ ಸಾಗರನಾಗಿದ್ದಾರೆ, ಸರ್ವ ಶ್ರೇಷ್ಠ ತಂದೆಯ ಕರ್ತವ್ಯವೂ ಶ್ರೇಷ್ಠವಾಗಿದೆ ಅಂದರೆ ಈಶ್ವರನು ಸಮರ್ಥನಾಗಿದ್ದಾರೆ, ಏನನ್ನು ಬೇಕಾದರೂ ಮಾಡಬಲ್ಲರು ಎಂದಲ್ಲ. ಈ ನಾಟಕವು ಅನಾದಿಯಾಗಿ ಮಾಡಲ್ಪಟ್ಟಿದೆ, ಇದರಲ್ಲಿ ಎಲ್ಲವೂ ನಾಟಕದನುಸಾರವೇ ನಡೆಯುತ್ತದೆ. ಯುದ್ಧಗಳಲ್ಲಿ ಅನೇಕರು ಸಾವನ್ನಪ್ಪುತ್ತಾರೆ. ಇದೂ ಸಹ ನಾಟಕದಲ್ಲಿ ಪೂರ್ವ ನಿಶ್ಚಿತವಾಗಿದೆ, ಇದರ ಮೇಲೆ ಭಗವಂತನೇನು ಮಾಡಲು ಸಾಧ್ಯ! ಭೂಕಂಪವಾದರೆ ಹೇ ಭಗವಂತ ಎಂದು ಎಷ್ಟೊಂದು ಚೀರಾಡುತ್ತಾರೆ. ಆದರೆ ಇದಕ್ಕೆ ಭಗವಂತ ಏನು ಮಾಡಬಲ್ಲರು! ಬಂದು ಹಳೆಯ ಪ್ರಪಂಚದ ವಿನಾಶ ಮಾಡಿ ಎಂದು ನೀವೇ ಭಗವಂತನನ್ನು ಕರೆದಿದ್ದೀರಿ. ಹೊಸ ಪ್ರಪಂಚದ ಸ್ಥಾಪನೆ ಮಾಡಿ ಪತಿತ ಪ್ರಪಂಚವನ್ನು ಸಮಾಪ್ತಿ ಮಾಡಿ ಎಂದು ಪತಿತ ಪ್ರಪಂಚದಲ್ಲಿಯೇ ಕರೆದಿರಿ. ನಾನು ವಿನಾಶ ಮಾಡುವುದಿಲ್ಲ, ಆದರೆ ಇದು ನಾಟಕದಲ್ಲಿ ಮೊದಲೇ ನಿಗಧಿಯಾಗಿದೆ. ಇಲ್ಲಿ ರಕ್ತದೋಕುಳಿಯ ಆಟವಾಗುತ್ತದೆ. ಇದರಲ್ಲಿ ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ಪಾವನ ಪ್ರಪಂಚವನ್ನಾಗಿ ಮಾಡಿ ಎಂದು ನೀವು ಮಕ್ಕಳೇ ಹೇಳುತ್ತೀರಿ ಅಂದಾಗ ಅವಶ್ಯವಾಗಿ ಪತಿತ ಆತ್ಮಗಳು ಹೋಗಬೇಕಲ್ಲವೆ. ಆದರೆ ಈ ರಹಸ್ಯವನ್ನು ಯಾರೂ ತಿಳಿದುಕೊಂಡಿಲ್ಲ. ಭಗವಂತನು ಯಾರು, ಶ್ರೀಮತದ ಅರ್ಥವೇನೆಂಬುದನ್ನೂ ಅರಿತುಕೊಂಡಿಲ್ಲ. ಯಾರ ಮಕ್ಕಳಾದರೂ ಸರಿಯಾಗಿ ಓದಲಿಲ್ಲವೆಂದರೆ ನೀವು ಕಲ್ಲು ಬುದ್ಧಿಯವರು ಎಂದು ತಂದೆ-ತಾಯಿಯು ಹೇಳುತ್ತಾರೆ. ಸತ್ಯಯುಗದಲ್ಲಿ ಈ ರೀತಿ ಹೇಳುವುದಿಲ್ಲ. ಕಲಿಯುಗದಲ್ಲಿಯೇ ಕಲ್ಲು ಬುದ್ಧಿಯವರಾಗಿದ್ದಾರೆ. ಇಲ್ಲಿ ಯಾರೂ ಸಹ ಪಾರಸ ಬುದ್ಧಿಯವರು ಇರಲು ಸಾಧ್ಯವಿಲ್ಲ. ಈಗ ನೋಡಿ, ಮನುಷ್ಯರು ಏನೇನನ್ನೋ ಮಾಡುತ್ತಿರುತ್ತಾರೆ, ಒಂದು ಹೃದಯವನ್ನು ತೆಗೆದು ಇನ್ನೊಂದು ಹಾಕುತ್ತಾರೆ. ಭಲೆ ಇಷ್ಟು ಪರಿಶ್ರಮ ಪಟ್ಟು ಮಾಡಿದರು, ಆದರೆ ಇದರಿಂದೇನು ಪ್ರಯೋಜನ? ಹೆಚ್ಚೆಂದರೆ ಕೆಲವೊಂದು ದಿನಗಳವರೆಗೆ ಬದುಕಿರಬಹುದಷ್ಟೆ. ಅನೇಕರು ರಿದ್ಧಿ ಸಿದ್ಧಿಯನ್ನು ಕಲಿತು ಬರುತ್ತಾರೆ ಅದರಿಂದಲೂ ಪ್ರಯೋಜನವಿಲ್ಲ. ಬಂದು ನಮ್ಮನ್ನು ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡಿ, ನಾವು ಪತಿತ ಪ್ರಪಂಚದಲ್ಲಿದ್ದು ಬಹಳ ದುಃಖಿಯಾಗಿದ್ದೇವೆ ಎಂದೇ ಭಗವಂತನನ್ನು ನೆನಪು ಮಾಡುತ್ತಾರೆ. ಸತ್ಯಯುಗದಲ್ಲಿ ಯಾವುದೇ ರೋಗ-ಶೋಕದ ಮಾತಿಲ್ಲ. ಈಗ ತಂದೆಯ ಮೂಲಕ ನೀವು ಎಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಇಲ್ಲಿಯೂ ಸಹ ಮನುಷ್ಯರು ವಿದ್ಯೆಯ ಆಧಾರದಿಂದಲೇ ಉತ್ತಮ ಪದವಿಯನ್ನು ಪಡೆಯುತ್ತಾರೆ, ಬಹಳ ಖುಷಿಯಲ್ಲಿರುತ್ತಾರೆ. ಆದರೆ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಎಲ್ಲರೂ ಇಲ್ಲಿ ಇನ್ನು ಸ್ವಲ್ಪ ದಿನಗಳೇ ಜೀವಿಸುತ್ತಾರೆ. ಎಲ್ಲರ ತಲೆಯ ಮೇಲೆ ಬಹಳಷ್ಟು ಪಾಪದ ಹೊರೆಯಿದೆ, ಬಹಳ ಶಿಕ್ಷೆಗಳನ್ನನುಭವಿಸುತ್ತಾರೆ. ತಮ್ಮನ್ನು ಪತಿತರೆಂದಂತೂ ಹೇಳುತ್ತಾರಲ್ಲವೆ. ಆದರೆ ವಿಕಾರದಲ್ಲಿ ಹೋಗುವುದು ಪಾಪವೆಂದು ತಿಳಿಯುವುದಿಲ್ಲ. ಇದರಿಂದ ಪಾಪಾತ್ಮರೇ ಆಗುತ್ತಾರೆ. ಗೃಹಸ್ಥಾಶ್ರಮವಂತೂ ಅನಾದಿಯಿಂದಲೇ ನಡೆಯುತ್ತಾ ಬಂದಿದೆ ಎಂದು ಹೇಳುತ್ತಾರೆ. ಆದ್ದರಿಂದ ಅವರಿಗೆ ತಿಳಿಸಬೇಕು - ಸತ್ಯ-ತ್ರೇತಾಯುಗದಲ್ಲಿ ಪವಿತ್ರ ಗೃಹಸ್ಥಾಶ್ರಮವಿತ್ತು, ಪಾಪಾತ್ಮರಿರಲಿಲ್ಲ. ಇಲ್ಲಿ ಪಾಪಾತ್ಮರಿದ್ದಾರೆ, ಆದ್ದರಿಂದಲೇ ಬಹಳ ದುಃಖಿಯಾಗಿದ್ದಾರೆ ಮತ್ತು ಇಲ್ಲಿ ಅಲ್ಪಕಾಲದ ಸುಖವಿದೆ. ರೋಗವು ಬಂದಿತೆಂದರೆ ಶರೀರವನ್ನು ಬಿಡುತ್ತಾರೆ. ಮೃತ್ಯುವಂತೂ ಬಾಯಿ ತೆರೆದು ನಿಂತಿದೆ. ಆಕಸ್ಮಿಕವಾಗಿ ಹೃದಯಾಘಾತಕ್ಕೊಳಗಾಗುತ್ತಾರೆ, ಇಲ್ಲಿಯ ಸುಖವೇ ಕಾಗವಿಷ್ಟ ಸಮಾನವಾಗಿದೆ. ಸತ್ಯಯುಗದಲ್ಲಿ ನಿಮಗೆ ಅಪಾರ ಸುಖವಿರುತ್ತದೆ, ನೀವು ಇಡೀ ವಿಶ್ವದ ಮಾಲೀಕರಾಗುತ್ತೀರಿ. ಅಲ್ಲಿ ಯಾವುದೇ ಪ್ರಕಾರದ ದುಃಖವಿರುವುದಿಲ್ಲ. ಹೆಚ್ಚಿನ ಬಿಸಿಲಾಗಲಿ, ಚಳಿಯಾಗಲಿ ಇರುವುದಿಲ್ಲ. ಸದಾ ವಸಂತ ಋತುವಿರುತ್ತದೆ. ಅಲ್ಲಿನ ತತ್ವಗಳೂ ಸಹ ನಿಮ್ಮ ಆದೇಶದಂತೆ ನಡೆಯುತ್ತದೆ. ಸ್ವರ್ಗವಂತೂ ಸ್ವರ್ಗವೇ ಆಗಿದೆ. ಅಲ್ಲಿಗೂ ಮತ್ತು ಇಲ್ಲಿನದಕ್ಕೂ ರಾತ್ರಿ-ಹಗಲಿನ ಅಂತರವಿದೆ. ನೀವು ಸ್ವರ್ಗದ ಸ್ಥಾಪನೆ ಮಾಡುವುದಕ್ಕಾಗಿಯೇ ತಂದೆಯನ್ನು ಕರೆಯುತ್ತೀರಿ - ತಂದೆಯೇ ಬಂದು ಪಾವನ ಪ್ರಪಂಚವನ್ನು ಸ್ಥಾಪನೆ ಮಾಡಿ ನಮ್ಮನ್ನು ಪಾವನರನ್ನಾಗಿ ಮಾಡಿ.

ಪ್ರತಿಯೊಂದು ಚಿತ್ರದ ಮೇಲೆ ‘ಶಿವ ಭಗವಾನುವಾಚ’ ಎಂದು ಬರೆದಿರಲಿ, ಇದರಿಂದ ಪದೇ-ಪದೇ ಶಿವ ತಂದೆಯ ನೆನಪು ಬರುವುದು. ಜ್ಞಾನವನ್ನು ತಿಳಿಸುತ್ತಾ ಇರುತ್ತೀರಿ, ಮ್ಯೂಸಿಯಂ ಅಥವಾ ಪ್ರದರ್ಶನಿಯ ಸರ್ವೀಸಿನಲ್ಲಿ ಜ್ಞಾನ ಮತ್ತು ಯೋಗವೆರಡೂ ಒಟ್ಟಿಗೆ ನಡೆಯುತ್ತದೆ. ನೆನಪಿನಲ್ಲಿದ್ದರೆ ನಶೆಯೇರುತ್ತದೆ. ನೀವೀಗ ಪಾವನರಾಗಿ ಇಡೀ ವಿಶ್ವವನ್ನು ಪಾವನವನ್ನಾಗಿ ಮಾಡುತ್ತೀರಿ. ನೀವು ಪಾವನರಾಗುತ್ತೀರೆಂದರೆ ಅವಶ್ಯವಾಗಿ ಪಾವನ ಸೃಷ್ಟಿಯೇ ಬೇಕು. ಕೊನೆಯಲ್ಲಿ ಅಂತಿಮ ಸಮಯವಾಗಿರುವ ಕಾರಣ ಎಲ್ಲರ ಲೆಕ್ಕಾಚಾರಗಳು ಸಮಾಪ್ತಿಯಾಗುತ್ತವೆ. ನಿಮಗಾಗಿ ನಾನು ಹೊಸ ಸೃಷ್ಟಿಯ ಉದ್ಘಾಟನೆ ಮಾಡಬೇಕಾಗುತ್ತದೆ. ಮತ್ತೆ ಅನೇಕ ಸೇವಾಕೇಂದ್ರಗಳನ್ನು ತೆರೆಯುತ್ತೀರಿ, ಪವಿತ್ರರನ್ನಾಗಿ ಮಾಡಲು ಹೊಸ ಪ್ರಪಂಚ ಸತ್ಯಯುಗದ ಬುನಾದಿಯನ್ನು ತಂದೆಯ ವಿನಃ ಮತ್ತ್ಯಾರೂ ಹಾಕಲು ಸಾಧ್ಯವಿಲ್ಲ. ಅಂದಮೇಲೆ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕು! ನೀವು ಮ್ಯೂಸಿಯಂ ಮುಂತಾದವುಗಳ ಉದ್ಘಾಟನೆಯನ್ನು ಗಣ್ಯ ವ್ಯಕ್ತಿಗಳಿಂದ ಮಾಡಿಸುತ್ತೀರೆಂದರೆ ಹೆಚ್ಚಿನ ಸೇವೆಯಾಗುವುದು. ಇವರೂ ಸಹ ಇಲ್ಲಿ ಬರುತ್ತಾರೆ ಎಂದು ಮನುಷ್ಯರು ತಿಳಿಯುತ್ತಾರೆ. ನೀವು ಬರೆದು ಕೊಡಿ ನಾವು ಮಾತನಾಡುತ್ತೇವೆಂದು ಕೆಲವರು ಹೇಳುತ್ತಾರೆ ಆದರೆ ಅದೂ ಸಹ ತಪ್ಪಾಯಿತು. ಅವರೂ ಸಹ ಚೆನ್ನಾಗಿ ಅರಿತುಕೊಂಡು ಮಾತನಾಡಿದರೆ ಬಹಳ ಒಳ್ಳೆಯದು. ಕೆಲವರಂತೂ ಬರೆದಿರುವುದನ್ನು ಓದಿ ತಿಳಿಸುತ್ತಾರೆ, ಆದರೆ ನೀವು ಮಕ್ಕಳು ಅದನ್ನು ಯಥಾರ್ಥವಾಗಿ ಅರಿತುಕೊಂಡು ಹಾಗೆಯೇ ತಿಳಿಸಬೇಕು. ನೀವಾತ್ಮಗಳಲ್ಲಿ ಸಂಪೂರ್ಣ ಜ್ಞಾನವಿದೆಯಲ್ಲವೆ ಮತ್ತೆ ನೀವು ಅನ್ಯರಿಗೂ ತಿಳಿಸುತ್ತೀರಿ. ಪ್ರಜೆಗಳು ವೃದ್ಧಿಯನ್ನು ಹೊಂದುತ್ತಿರುತ್ತಾರೆ, ಜನಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತದೆ. ಎಲ್ಲಾ ವಸ್ತುಗಳು ಹೆಚ್ಚುತ್ತವೆ, ಈಗ ಇಡೀ ವೃಕ್ಷವೇ ಜಡಜಡೀಭೂತ ಸ್ಥಿತಿಯನ್ನು ಹೊಂದಿದೆ. ಯಾರು ತಮ್ಮ ಧರ್ಮದವರಾಗಿರುವರೋ ಅವರು ಮರಳಿ ಬರುವರು. ನಂಬರ್ವಾರಂತೂ ಇದ್ದಾರಲ್ಲವೆ, ಎಲ್ಲರೂ ಏಕರಸವಾಗಿ ಹೋಗುವುದಿಲ್ಲ. ಕೆಲವರು 100ಕ್ಕೆ 1 ಅಂಕವನ್ನೂ ತೆಗೆಯುವವರಿರುತ್ತಾರೆ. ಸ್ವಲ್ಪವಾದರೂ ಕೇಳಿ ಒಂದು ಅಂಕವಾದರೂ ಸಿಕ್ಕಿದರೂ ಅವರು ಸ್ವರ್ಗದಲ್ಲಿ ಬಂದು ಬಿಡುತ್ತಾರೆ. ಇದು ಬೇಹದ್ದಿನ ವಿದ್ಯೆಯಾಗಿದೆ, ಇದನ್ನು ಬೇಹದ್ದಿನ ತಂದೆಯೇ ಓದಿಸುತ್ತಾರೆ. ಯಾರು ಈ ಧರ್ಮದವರಾಗಿರುವರೋ ಅವರು ಪುನಃ ಬರುತ್ತಾರೆ ಅಂದಾಗ ಮೊಟ್ಟ ಮೊದಲು ಎಲ್ಲರೂ ತಮ್ಮ ಮನೆಯಾದ ಮುಕ್ತಿಧಾಮಕ್ಕೆ ಹೋಗಬೇಕಾಗಿದೆ ನಂತರ ಕ್ರಮೇಣವಾಗಿ ಕೆಳಗೆ ಬರುತ್ತಾರೆ. ಕೆಲವರು ತ್ರೇತಾಯುಗದ ಅಂತ್ಯದವರೆಗೂ ಬರುತ್ತಾ ಇರುತ್ತಾರೆ. ಭಲೆ ಬ್ರಾಹ್ಮಣರಾಗುತ್ತಾರೆ ಆದರೆ ಎಲ್ಲಾ ಬ್ರಾಹ್ಮಣರು ಸತ್ಯಯುಗದಲ್ಲಿ ಬರುವುದಿಲ್ಲ, ತ್ರೇತಾದ ಅಂತ್ಯದವರೆವಿಗೂ ಬರುತ್ತಾರೆ. ಇವು ಅರಿತುಕೊಳ್ಳುವ ಮಾತುಗಳಾಗಿವೆ. ತಂದೆಗೆ ಗೊತ್ತಿದೆ, ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಅಂದಮೇಲೆ ಎಲ್ಲರೂ ಏಕರಸವಾಗಿರುವುದಿಲ್ಲ, ರಾಜಧಾನಿಯಲ್ಲಿ ಎಲ್ಲಾ ಪ್ರಕಾರದವರೂ ಬೇಕಲ್ಲವೆ. ಪ್ರಜೆಗಳನ್ನು ಹೊರಗಿನವರೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ಅಲ್ಲಿ ಮಂತ್ರಿ ಮೊದಲಾದವರ ಅವಶ್ಯಕತೆಯಿರುವುದಿಲ್ಲ, ಅವರಿಗೆ ಇಲ್ಲಿಯೇ ಶ್ರೀಮತವು ಸಿಕ್ಕಿದೆ, ಇದರಿಂದ ಅಲ್ಲಿ ಪದವಿಯನ್ನು ಪಡೆಯುತ್ತಾರೆ ಅಂದಾಗ ಮಂತ್ರಿಗಳಿಂದ ಸಲಹೆಯನ್ನು ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಆದ್ದರಿಂದ ಅಲ್ಲಿ ಮಂತ್ರಿಗಳಿರುವುದಿಲ್ಲ ನಂತರ ಅವರೇ ಪತಿತರಾದಾಗ ಒಬ್ಬ ರಾಜ-ರಾಣಿಯ ಜೊತೆಗೆ ಒಬ್ಬ ಮಂತ್ರಿಯಿರುತ್ತಾರೆ. ಈಗಂತೂ ಮಂತ್ರಿಗಳು ಎಷ್ಟೊಂದು ಮಂದಿಯಿದ್ದಾರೆ! ಇಲ್ಲಿ ಪಂಚಾಯಿತಿ ರಾಜ್ಯವಾಗಿದೆಯಲ್ಲವೆ. ಒಬ್ಬರ ಮತವು ಇನ್ನೊಬ್ಬರಿಗೆ ಹೋಲುವುದಿಲ್ಲ. ಒಬ್ಬರೊಂದಿಗೆ ಗೆಳೆತನವನ್ನಿಟ್ಟುಕೊಂಡು ತಿಳಿಸಿದರೆ ಅವರು ಕೆಲಸ ಮಾಡಿಕೊಡುತ್ತಾರೆ, ಆದರೆ ಅದಕ್ಕೆ ಬದಲಾಗಿ ಇನ್ನೊಬ್ಬರು ಬಂದರು. ಅವರಿಗೆ ಗಮನಕ್ಕೆ ಬರಲಿಲ್ಲವೆಂದರೆ ಇನ್ನೂ ಆ ಕೆಲಸವನ್ನು ಕೆಡಿಸಿ ಬಿಡುತ್ತಾರೆ. ಒಬ್ಬರ ಬುದ್ಧಿಯು ಇನ್ನೊಬ್ಬರಿಗೆ ಹೋಲುವುದಿಲ್ಲ. ಸತ್ಯಯುಗದಲ್ಲಿ ನಿಮ್ಮ ಎಲ್ಲಾ ಕಾಮನೆಗಳು ಈಡೇರುತ್ತವೆ. ನೀವು ಎಷ್ಟೊಂದು ದುಃಖವನ್ನು ಪಡೆದಿದ್ದೀರಿ, ಇದರ ಹೆಸರೇ ದುಃಖಧಾಮವಾಗಿದೆ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಪೆಟ್ಟು ತಿಂದಿದ್ದೀರಿ. ಇದೂ ಸಹ ನಾಟಕದಲ್ಲಿದೆ. ಯಾವಾಗ ಬಹಳ ದುಃಖಿಯಾಗುವರೋ ಆಗ ತಂದೆಯು ಬಂದು ಸುಖದ ಆಸ್ತಿಯನ್ನು ಕೊಡುತ್ತಾರೆ. ತಂದೆಯು ನಿಮ್ಮ ಬುದ್ಧಿಯ ಬೀಗವನ್ನು ತೆರೆದಿದ್ದಾರೆ. ಸಾಹುಕಾರರಿಗಾಗಿ ಇದು ಸ್ವರ್ಗವಾಗಿದೆ, ಬಡವರು ನರಕದಲ್ಲಿದ್ದಾರೆ ಎಂದು ಮನುಷ್ಯರು ಹೇಳುತ್ತಾರೆ. ಆದರೆ ಸ್ವರ್ಗವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು ನೀವೇ ಯಥಾರ್ಥವಾಗಿ ಅರಿತುಕೊಂಡಿದ್ದೀರಿ. ಸತ್ಯಯುಗದಲ್ಲಿ ಯಾರನ್ನೂ ದಯಾಮಯಿ ಎಂದು ಕರೆಯುವುದಿಲ್ಲ. ದಯೆ ತೋರಿಸಿ, ನಮ್ಮನ್ನು ಮುಕ್ತ ಮಾಡಿ ಎಂದು ಇಲ್ಲಿಯೇ ಕರೆಯುತ್ತಾರೆ. ಆದ್ದರಿಂದ ತಂದೆಯೇ ಎಲ್ಲರನ್ನೂ ಶಾಂತಿಧಾಮ, ಸುಖಧಾಮದಲ್ಲಿ ಕರೆದುಕೊಂಡು ಹೋಗುತ್ತಾರೆ. ಅಜ್ಞಾನ ಕಾಲದಲ್ಲಿ ನೀವೂ ಸಹ ಏನನ್ನೂ ತಿಳಿದುಕೊಂಡಿರುವುದಿಲ್ಲ. ಯಾರು ನಂಬರ್ವನ್ ತಮೋಪ್ರಧಾನರೋ ಅವರೇ ಮತ್ತೆ ನಂಬರ್ವನ್ ಸತೋಪ್ರಧಾನರಾಗುವರು. ಇವರು ತಮ್ಮನ್ನು ಮಹಿಮೆ ಮಾಡಿಕೊಳ್ಳುತ್ತಿಲ್ಲ. ಮಹಿಮೆಯೆಲ್ಲವೂ ಒಬ್ಬ ತಂದೆಯದೇ ಆಗಿದೆ. ಲಕ್ಷ್ಮಿ-ನಾರಾಯಣರನ್ನೂ ಸಹ ಇಷ್ಟು ಶ್ರೇಷ್ಠರನ್ನಾಗಿ ಮಾಡುವವರು ತಂದೆಯಾಗಿದ್ದಾರಲ್ಲವೆ! ಭಗವಂತನು ಸರ್ವ ಶ್ರೇಷ್ಠನಾಗಿದ್ದಾರೆ, ಅವರು ನಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತಾರೆ ಆದರೆ ತಂದೆಗೆ ತಿಳಿದಿದೆ - ಎಲ್ಲರೂ ಶ್ರೇಷ್ಠರಾಗುವುದಿಲ್ಲ, ಆದರೂ ಪುರುಷಾರ್ಥ ಮಾಡಬೇಕಾಗಿದೆ. ನೀವಿಲ್ಲಿ ನರನಿಂದ ನಾರಾಯಣರಾಗುವುದಕ್ಕಾಗಿ ಬಂದಿದ್ದೀರಿ. ಬಾಬಾ, ನಾವು ಸ್ವರ್ಗದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ನಾವು ಸತ್ಯ ನಾರಾಯಣನ ಸತ್ಯ ಕಥೆಯನ್ನು ಕೇಳಲು ಬಂದಿದ್ದೇವೆ ಎಂದು ಮಕ್ಕಳು ಹೇಳುತ್ತಾರೆ. ಅದಕ್ಕೆ ತಂದೆಯು ಹೇಳುತ್ತಾರೆ - ಒಳ್ಳೆಯದು ಮಕ್ಕಳೇ ನಿಮ್ಮ ಬಾಯಲ್ಲಿ ಗುಲಾಬ್ ಜಾಮೂನ್. ಅದಕ್ಕಾಗಿ ಪರಿಶ್ರಮ ಪಡಿ, ಎಲ್ಲರೂ ಲಕ್ಷ್ಮಿ-ನಾರಾಯಣನಾಗುವುದಿಲ್ಲ. ನಿಮ್ಮ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಅಂದಮೇಲೆ ರಾಜ ಮನೆತನದಲ್ಲಿ ಮತ್ತು ಪ್ರಜೆಗಳ ಮನೆತನದಲ್ಲಿ ಅನೇಕರು ಬೇಕಲ್ಲವೆ. ಆಶ್ಚರ್ಯವಾಗಿ ಜ್ಞಾನವನ್ನು ಕೇಳಿ ನಡೆಯುತ್ತಾ ಮತ್ತೆ ವಿಚ್ಛೇದನವನ್ನು ಕೊಡುತ್ತಾರೆ. ಯಾವ ಮಕ್ಕಳು? ಯಾರು ತಮ್ಮ ಉನ್ನತಿ ಮಾಡಿಕೊಳ್ಳುವರೋ ಅವರು ಮೇಲೇರುತ್ತಾರೆ. ಇದರಲ್ಲಿ ಬಡವರೇ ಸಮರ್ಪಣೆಯಾಗುತ್ತಾರೆ. ದೇಹ ಸಹಿತವಾಗಿ ಮತ್ತೇನೂ ನೆನಪಿಗೆ ಬರಬಾರದು. ಇದು ಉನ್ನತ ಗುರಿಯಾಗಿದೆ. ಒಂದುವೇಳೆ ಸಂಬಂಧವಿದ್ದರೆ ಅದು ಅವಶ್ಯವಾಗಿ ನೆನಪಿಗೆ ಬರುವುದು. ತಂದೆಗೆ ಏನು ನೆನಪಿರುತ್ತದೆ? ಇಡೀ ದಿನ ಬೇಹದ್ದಿನಲ್ಲಿಯೇ ಬುದ್ಧಿಯಿರುತ್ತದೆ, ಎಷ್ಟು ಪರಿಶ್ರಮ ಪಡಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ - ನನ್ನ ಮಕ್ಕಳಲ್ಲಿಯೂ ಸಹ ಉತ್ತಮರು, ಮಧ್ಯಮರು, ಕನಿಷ್ಟರು ಇರುತ್ತಾರೆ. ಅನ್ಯರು ಯಾರೇ ಬಂದರೂ ಸಹ ಇವರು ಪತಿತ ಪ್ರಪಂಚದವರೆಂದು ತಿಳಿಯುತ್ತಾರೆ. ಆದರೂ ಯಜ್ಞ ಸೇವೆ ಮಾಡುತ್ತಾರೆಂದರೆ ಅವರಿಗೆ ಗೌರವ ಕೊಡಬೇಕಾಗುತ್ತದೆ. ತಂದೆಯು ಯುಕ್ತಿಗಾರನಾಗಿದ್ದಾರಲ್ಲವೆ! ಇಲ್ಲವೆಂದರೆ ಇವರು ಶಾಂತಿಯ ಶಿಖರ, ಪವಿತ್ರತೆಯ ಶಿಖರವಾಗಿದ್ದಾರೆ. ಇಲ್ಲಿ ಪರಮ ಪವಿತ್ರ ತಂದೆಯು ಇಡೀ ವಿಶ್ವವನ್ನು ಪವಿತ್ರವನ್ನಾಗಿ ಮಾಡುತ್ತಾರೆ. ಇಲ್ಲಿ ಪತಿತರ್ಯಾರೂ ಬರಲು ಸಾಧ್ಯವಿಲ್ಲ. ಆದರೆ ತಂದೆಯು ತಿಳಿಸುತ್ತಾರೆ - ನಾನು ಎಲ್ಲಾ ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ಬಂದಿದ್ದೇನೆ, ಈ ಆಟದಲ್ಲಿ ನನ್ನ ಪಾತ್ರವೂ ಇದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಚಾರ್ಟನ್ನು ನೋಡಿಕೊಳ್ಳುತ್ತಾ ಪರಿಶೀಲನೆ ಮಾಡಿಕೊಳ್ಳಬೇಕು - ಪುಣ್ಯದ ಖಾತೆಯು ಎಷ್ಟು ಜಮಾ ಆಗಿದೆ? ಆತ್ಮವು ಎಷ್ಟು ಸತೋಪ್ರಧಾನವಾಗಿದೆ? ನೆನಪಿನಲ್ಲಿದ್ದು ಎಲ್ಲಾ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ.

2. ವಿದ್ಯಾರ್ಥಿ ವೇತನವನ್ನು ಪಡೆಯಲು ಸೇವಾಧಾರಿಗಳಾಗಿ ಅನೇಕರ ಕಲ್ಯಾಣ ಮಾಡಬೇಕಾಗಿದೆ. ತಂದೆಗೆ ಪ್ರಿಯರಾಗಬೇಕಾಗಿದೆ. ಶಿಕ್ಷಕರಾಗಿ ಅನೇಕರಿಗೆ ಮಾರ್ಗವನ್ನು ತೋರಿಸಬೇಕಾಗಿದೆ.

ವರದಾನ:
ಮಧುರತೆಯ ದ ಮೂಲಕ ಸದಾ ಮುಂದುವರೆಯುವಂತಹವರು ಶ್ರೇಷ್ಠ ಆತ್ಮ ಭವ.

ಮಧುರತೆ ಇಂತಹ ವಿಶೇಷ ಧಾರಣೆಯಾಗಿದೆ, ಯಾವುದು ಕಠಿಣ ಧರಣಿಯನ್ನೂ ಸಹ ಮಧುರವನ್ನಾಗಿ ಮಾಡಿ ಬಿಡುವುದು. ಯಾರಿಗೇ ಆಗಲಿ ಎರಡು ಘಳಿಗೆ ಮಧುರ ದೃಷ್ಠಿ ಕೊಡಿ, ಮಧರ ಮಾತು, ಮಾತನಾಡಿದರೆ ಯಾವುದೇ ಆತ್ಮವನ್ನು ಸದಾಕಾಲಕ್ಕಾಗಿ ಸಂಪನ್ನರನ್ನಾಗಿ ಮಾಡಿ ಬಿಡುವುದು. ಎರಡು ಘಳಿಗೆಯ ಮಧುರ ದೃಷ್ಟಿ ಅಥವಾ ಮಾತು ಆ ಆತ್ಮದ ಸೃಷ್ಟಿಯನ್ನು ಬದಲಾಯಿಸಿ ಬಿಡುವುದು. ತಮ್ಮ ಎರಡು ಮಧುರ ಮಾತು ಸಹ ಸದಾಕಾಲಕ್ಕಾಗಿ ಅವರನ್ನು ಬದಲಾಯಿಸಲು ನಿಮಿತ್ತವಾಗಿ ಬಿಡುವುದು. ಆದ್ದರಿಂದ ಮಧುರತೆಯ ವರದಾನವನ್ನು ಸದಾ ಜೊತೆಯಲ್ಲಿಟ್ಟುಕೊಳ್ಳಿ. ಸದಾ ಮಧುರವಾಗಿರಬೇಕು ಮತ್ತು ಸರ್ವರನ್ನು ಮಧುರರನ್ನಾಗಿ ಮಾಡಬೇಕು.

ಸ್ಲೋಗನ್:
ಎಲ್ಲಾ ಪರಿಸ್ಥಿತಿಯಲ್ಲೂ ರಾಜಿಯಾಗಿರಿ ಆಗ ರಹಸ್ಯಯುಕ್ತರಾಗಿ ಬಿಡುವಿರಿ.


ಅವ್ಯಕ್ತ ಸ್ಥಿತಿಯ ಅನುಭವ ಮಾಡವುದಕ್ಕಾಗಿ ವಿಶೇಷ ಹೋಮ್ ವರ್ಕ್ -
ತಾವು ಆತ್ಮೀಯ ರಾಯಲ್ ಆತ್ಮರಾಗಿರುವಿರಿ, ಆದ್ದರಿಂದ ಮುಖದಿಂದ ಎಂದೂ ವ್ಯರ್ಥ ಅಥವಾ ಸಾಧಾರಣ ಮಾತು ಹೊರ ಬರದಿರಲಿ. ಪ್ರತಿ ಮಾತು ಯುಕ್ತಿ ಯುಕ್ತವಾಗಿರಲಿ, ವ್ಯರ್ಥ ಭಾವದಿಂದ ದೂರ ಅವ್ಯಕ್ತ ಭಾವವುಳ್ಳವರೇ ಅವ್ಯಕ್ತ ಸ್ಥಿತಿಯ ಅನುಭವ ಮಾಡಲು ಸಾಧ್ಯ.