09.01.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಇದು
ಅನಾದಿ ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ, ಇದು ಬಹಳ ಚೆನ್ನಾಗಿ ಮಾಡಲ್ಪಟ್ಟಿದೆ, ಇದರ ಭೂತ,
ಭವಿಷ್ಯತ್ ಮತ್ತು ವರ್ತಮಾನವನ್ನು ನೀವು ಮಕ್ಕಳೇ ಚೆನ್ನಾಗಿ ಅರಿತುಕೊಂಡಿದ್ದೀರಿ”
ಪ್ರಶ್ನೆ:
ಯಾವ ಆಕರ್ಷಣೆಯ
ಆಧಾರದ ಮೇಲೆ ಎಲ್ಲಾ ಆತ್ಮಗಳು ನಿಮ್ಮ ಬಳಿ ಆಕರ್ಷಿತರಾಗುತ್ತಾ ಬರುತ್ತಾರೆ?
ಉತ್ತರ:
ಪವಿತ್ರತೆ ಮತ್ತು ಯೋಗದ ಆಧಾರದ ಮೇಲೆ. ಇದರಿಂದಲೇ ನಿಮ್ಮ ವೃದ್ಧಿಯಾಗುತ್ತಾ ಹೋಗುವುದು. ಮುಂದೆ
ಹೋದಂತೆ ತಂದೆಯನ್ನು ಬಹಳ ಬೇಗ ಅರಿತುಕೊಳ್ಳುತ್ತಾರೆ. ಇಷ್ಟೊಂದು ಮಂದಿ ಆಸ್ತಿಯನ್ನು
ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ನೋಡಿ ಅನೇಕರು ಬರುತ್ತಾರೆ. ಎಷ್ಟು ತಡವಾಗುವುದೋ ಅಷ್ಟು
ನಿಮ್ಮಲ್ಲಿ ಆಕರ್ಷಣೆಯಾಗುತ್ತಾ ಹೋಗುವುದು.
ಓಂ ಶಾಂತಿ.
ಆತ್ಮಿಕ ಮಕ್ಕಳು ಇದನ್ನು ತಿಳಿದುಕೊಂಡಿದ್ದೀರಿ - ನಾವಾತ್ಮಗಳು ಪರಮಧಾಮದಿಂದ ಬರುತ್ತೇವೆ. ಇದು
ಬುದ್ಧಿಯಲ್ಲಿದೆಯಲ್ಲವೆ. ಯಾವಾಗ ಎಲ್ಲಾ ಆತ್ಮಗಳು ಇಲ್ಲಿಗೆ ಬಂದು ಬಿಡುವರೋ ಇನ್ನು ಕೆಲವರೇ ಇರುವರು
ಆಗ ತಂದೆಯು ಬರುತ್ತಾರೆ. ಈಗ ನೀವು ಮಕ್ಕಳು ಯಾರಿಗಾದರೂ ತಿಳಿಸುವುದು ಬಹಳ ಸಹಜವಾಗಿದೆ. ದೂರ
ದೇಶದಲ್ಲಿರುವ ತಂದೆಯು ಎಲ್ಲರಿಗಿಂತ ಕೊನೆಯಲ್ಲಿ ಬರುತ್ತಾರೆ. ಪರಮಧಾಮದಲ್ಲಿ ಇನ್ನು ಕೆಲವು
ಆತ್ಮಗಳೇ ಇರುತ್ತಾರೆ. ಇಲ್ಲಿಯವರೆಗೂ ವೃದ್ಧಿಯಾಗುತ್ತಾ ಇದೆಯಲ್ಲವೆ. ಇದೂ ಸಹ ನಿಮಗೆ ತಿಳಿದಿದೆ,
ತಂದೆಯನ್ನು ಯಾರೂ ಅರಿತುಕೊಂಡಿಲ್ಲ. ಅಂದಮೇಲೆ ಅವರ ರಚನೆಯ ಆದಿ-ಮಧ್ಯ-ಅಂತ್ಯವನ್ನು ಹೇಗೆ
ಅರಿತುಕೊಳ್ಳುವರು! ಇದು ಬೇಹದ್ದಿನ ನಾಟಕವಾಗಿದೆಯಲ್ಲವೆ. ಅಂದಮೇಲೆ ನಾಟಕದ ಪಾತ್ರಧಾರಿಗಳಿಗೆ ಇದು
ತಿಳಿದಿರಬೇಕು. ಹೇಗೆ ಆ ನಾಟಕದ ಪಾತ್ರಧಾರಿಗಳಿಗೂ ಸಹ ಇಂತಿಂತಹವರಿಗೆ ಇಂತಹ ಪಾತ್ರವು ಸಿಕ್ಕಿದೆ
ಎಂದು ತಿಳಿದಿರುತ್ತದೆ ಯಾವುದು ಕಳೆದು ಹೋಗುವುದು ಅದನ್ನೇ ನಂತರ ಚಿಕ್ಕ ನಾಟಕವನ್ನಾಗಿ ಮಾಡುತ್ತಾರೆ.
ಭವಿಷ್ಯದ್ದಂತೂ ನಾಟಕವನ್ನು ರಚಿಸಲು ಸಾಧ್ಯವಿಲ್ಲ. ಯಾವುದು ಕಳೆದು ಹೋಗಿದೆಯೋ ಅದನ್ನು
ತೆಗೆದುಕೊಂಡು ಮತ್ತು ಅನ್ಯಕಥೆಗಳನ್ನೂ ರಚಿಸಿ ನಾಟಕವನ್ನಾಡುತ್ತಾರೆ ಮತ್ತೆ ಅದನ್ನೇ ಎಲ್ಲರಿಗೂ
ತೋರಿಸುತ್ತಾರೆ. ಭವಿಷ್ಯದ್ದಂತೂ ಯಾರೂ ಸಹ ತಿಳಿದುಕೊಂಡಿಲ್ಲ, ಈಗ ನೀವು ತಿಳಿದುಕೊಂಡಿದ್ದೀರಿ -
ತಂದೆಯು ಬಂದಿದ್ದಾರೆ, ಸ್ಥಾಪನೆಯೂ ಆಗುತ್ತಿದೆ, ನಾವು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ.
ಯಾರ್ಯಾರು ಬರುತ್ತಾ ಇರುವರೋ ಅವರಿಗೆ ನಾವು ದೇವಿ-ದೇವತಾ ಪದವಿಯನ್ನು ಪಡೆಯುವ ಮಾರ್ಗವನ್ನು
ತಿಳಿಸುತ್ತೇವೆ - ಈ ದೇವತೆಗಳು ಇಷ್ಟು ಶ್ರೇಷ್ಠರು ಹೇಗಾದರು? ಇದೂ ಸಹ ಯಾರಿಗೂ ತಿಳಿದಿಲ್ಲ.
ವಾಸ್ತವದಲ್ಲಿ ಆದಿ ಸನಾತನ ಧರ್ಮವು ದೇವಿ-ದೇವತಾ ಧರ್ಮವೇ ಆಗಿದೆ. ತಮ್ಮ ಧರ್ಮವನ್ನೇ ಮರೆತು
ಹೋಗುವುದರಿಂದ ನಮಗಾಗಿ ಎಲ್ಲಾ ಧರ್ಮಗಳು ಒಂದೇ ಎಂದು ಹೇಳಿ ಬಿಡುತ್ತಾರೆ.
ಈಗ ನಮಗೆ ತಂದೆಯು ಓದಿಸುತ್ತಾರೆ ಎಂದು ಮಕ್ಕಳಿಗೆ ತಿಳಿದಿದೆ. ತಂದೆಯ ಆದೇಶದಿಂದಲೇ ಚಿತ್ರ
ಮೊದಲಾದುವುಗಳನ್ನು ಮಾಡಿಸಲಾಗುತ್ತದೆ. ತಂದೆಯು ದಿವ್ಯ ದೃಷ್ಟಿಯಿಂದ ಚಿತ್ರಗಳನ್ನು
ಬರೆಸುತ್ತಿದ್ದರು. ಕೆಲವರು ತಮ್ಮ ಬುದ್ಧಿಯಿಂದ ರಚಿಸುತ್ತಾರೆ. ಮಕ್ಕಳಿಗೆ ಇದನ್ನೂ ಸಹ
ತಿಳಿಸಲಾಗಿದೆ, ಅವಶ್ಯವಾಗಿ ಇದನ್ನು ಬರೆಯಿರಿ - ಪಾತ್ರಧಾರಿಗಳಂತೂ ಇದ್ದಾರೆ ಆದರೆ ರಚಯಿತ ಮತ್ತು
ನಿರ್ದೇಶಕನನ್ನಂತೂ ಯಾರೂ ಅರಿತುಕೊಂಡಿಲ್ಲ. ತಂದೆಯು ಈಗ ಹೊಸ ಧರ್ಮದ ಸ್ಥಾಪನೆ ಮಾಡುತ್ತಿದ್ದಾರೆ.
ಹಳೆಯದರಿಂದ ಹೊಸ ಪ್ರಪಂಚವಾಗಲಿದೆ, ಇದೂ ಸಹ ಬುದ್ಧಿಯಲ್ಲಿರಬೇಕು - ತಂದೆಯು ಹಳೆಯ ಪ್ರಪಂಚದಲ್ಲಿಯೇ
ಬಂದು ನಿಮ್ಮನ್ನು ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ಬ್ರಾಹ್ಮಣರೇ ನಂತರ ದೇವತೆಗಳಾಗುವಿರಿ.
ಯುಕ್ತಿಯನ್ನು ನೋಡಿ, ಎಷ್ಟು ಚೆನ್ನಾಗಿದೆ! ಭಲೆ ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ ಆದರೆ
ಇದು ಬಹಳ ಚೆನ್ನಾಗಿ ಮಾಡಲ್ಪಟ್ಟಿದೆ. ನಾನು ನಿಮಗೆ ಪ್ರತಿನಿತ್ಯವೂ ಬಹಳ ಗುಹ್ಯ ಮಾತುಗಳನ್ನು
ತಿಳಿಸುತ್ತಾ ಇರುತ್ತೇನೆ. ಯಾವಾಗ ವಿನಾಶವು ಆರಂಭವಾಗುವುದೋ ಆಗ ನೀವು ಮಕ್ಕಳಿಗೆ ಭೂತಕಾಲದ ಎಲ್ಲಾ
ಚರಿತ್ರೆಯು ಅರ್ಥವಾಗುವುದು ನಂತರ ಸತ್ಯಯುಗದಲ್ಲಿ ಹೋದಾಗ ಭೂತಕಾಲದ ಚರಿತ್ರೆಯು ಏನೂ
ನೆನಪಿರುವುದಿಲ್ಲ. ಪ್ರತ್ಯಕ್ಷದಲ್ಲಿ ಪಾತ್ರವನ್ನಭಿನಯಿಸುತ್ತಾ ಇರುತ್ತೀರಿ. ಭೂತ ಕಾಲದ್ದನ್ನು
ಯಾರಿಗೆ ತಿಳಿಸುತ್ತೀರಿ? ಈ ಲಕ್ಷ್ಮಿ-ನಾರಾಯಣರು ಭೂತ ಕಾಲದ ಚರಿತ್ರೆಯನ್ನು ಅರಿತುಕೊಂಡೇ ಇಲ್ಲ.
ನಿಮ್ಮ ಬುದ್ಧಿಯಲ್ಲಿ ಹೇಗೆ ವಿನಾಶವಾಗುವುದು, ಹೇಗೆ ರಾಜ್ಯ ಸ್ಥಾಪನೆಯಾಗುವುದು, ಹೇಗೆ ಮಹಲುಗಳನ್ನು
ಮಾಡುತ್ತಾರೆ? ಇಲ್ಲಿ ಭೂತ, ಭವಿಷ್ಯತ್, ವರ್ತಮಾನ ಸಮಯದ ಸಂಪೂರ್ಣ ಜ್ಞಾನವಿದೆ. ಆಗುವುದಂತೂ ಖಂಡಿತ
ಅಲ್ಲವೆ. ಸ್ವರ್ಗದ ದೃಶ್ಯಗಳೇ ಬೇರೆಯಾಗಿದೆ. ಹೇಗೇಗೆ ಪಾತ್ರವನ್ನಭಿನಯಿಸುತ್ತಾ ಇರುತ್ತೀರಿ ಹಾಗೆಯೇ
ಎಲ್ಲವೂ ತಿಳಿಯುತ್ತಾ ಹೋಗುವುದು. ಇದಕ್ಕೆ ನಿರಪರಾಧಿಗಳ ಕೊಲೆಯ ಆಟವೆಂದು ಹೇಳಲಾಗುತ್ತದೆ.
ಭೂಕಂಪವಾಗುತ್ತದೆಯೆಂದರೆ ಎಷ್ಟೊಂದು ನಷ್ಟವುಂಟಾಗುತ್ತದೆ! ಬಾಂಬುಗಳನ್ನು ಎಸೆಯುತ್ತಾರೆ, ಇದು
ವ್ಯರ್ಥ ಅಪರಾಧವಾಯಿತಲ್ಲವೆ. ಯಾರೂ ಏನೂ ಮಾಡುವುದಿಲ್ಲ. ಯಾರು ವಿಶಾಲ ಬುದ್ಧಿಯವರಿದ್ದಾರೆಯೋ ಅವರ
ವಿನಾಶವು ಅವಶ್ಯವಾಗಿ ಆಗಿತ್ತು, ಯುದ್ಧವು ನಡೆದಿತ್ತು ಎಂಬುದನ್ನು ಅರಿತುಕೊಳ್ಳುತ್ತಾರೆ. ಇಂತಹ
ಆಟವನ್ನೂ ಸಹ ಆಡುತ್ತಾರೆ, ಇದನ್ನು ಅರಿತುಕೊಳ್ಳುವವರೂ ಕೂಡ ಕೆಲವೊಂದು ಸಮಯದಲ್ಲಿ ಕೆಲವರ
ಬುದ್ಧಿಯಲ್ಲಿ ಇದು ಹೊಳೆಯುತ್ತದೆ, ನೀವಂತೂ ಪ್ರತ್ಯಕ್ಷದಲ್ಲಿದ್ದೀರಿ. ನೀವು ಆ ರಾಜಧಾನಿಯ ಮಾಲೀಕರೂ
ಆಗುತ್ತೀರಿ. ನಿಮಗೆ ತಿಳಿದಿದೆ, ಆ ಹೊಸ ಪ್ರಪಂಚದಲ್ಲಿ ಅವಶ್ಯವಾಗಿ ಹೋಗಬೇಕಾಗಿದೆ. ಯಾರು
ಬ್ರಾಹ್ಮಣರಾಗುತ್ತಾರೆ, ಬ್ರಹ್ಮಾರವರ ಮೂಲಕ ಅಥವಾ ಬ್ರಹ್ಮಾಕುಮಾರ-ಕುಮಾರಿಯರ ಮೂಲಕ ಜ್ಞಾನವನ್ನು
ತೆಗೆದುಕೊಳ್ಳುತ್ತಾರೆ, ಅವರು ಸತ್ಯಯುಗದಲ್ಲಿ ಬಂದು ಬಿಡುತ್ತಾರೆ. ಇರುವುದಂತೂ ತಮ್ಮ
ಗೃಹಸ್ಥದಲ್ಲಿಯೇ ಆದರೆ ಇದನ್ನು ಅರಿತುಕೊಳ್ಳಬೇಕಾಗಿದೆ. ಸೇವಾಕೇಂದ್ರಗಳಲ್ಲಿ ಅನೇಕರು ಬರುತ್ತಾರೆ,
ಇಷ್ಟೊಂದು ಮಂದಿ ಕೆಲವೊಮ್ಮೆ ನೆನಪಿರುವುದಿಲ್ಲ. ಎಷ್ಟೊಂದು ಬ್ರಾಹ್ಮಣರಿದ್ದಾರೆ,
ವೃದ್ಧಿಯಾಗುತ್ತಾ-ಆಗುತ್ತಾ ಅಸಂಖ್ಯಾತ ಮಂದಿ ಆಗಿ ಬಿಡುತ್ತಾರೆ ಆಗ ನಿಖರವಾದ ಲೆಕ್ಕವನ್ನು ತೆಗೆಯಲು
ಆಗುವುದಿಲ್ಲ. ನಿಖರವಾಗಿ ನಮ್ಮ ಪ್ರಜೆಗಳು ಎಷ್ಟು ಮಂದಿ ಇರುತ್ತಾರೆಂದು ರಾಜನಿಗೆ
ತಿಳಿದಿರುತ್ತದೆಯೇ! ಭಲೆ ಜನಗಣತಿ ಮಾಡುತ್ತಾರೆ ಆದರೂ ಸಹ ಎಣಿಕೆಯಲ್ಲಿ ಅಂತರವಾಗಿ
ಬಿಡುತ್ತದೆಯಲ್ಲವೆ! ಈಗ ನೀವು ವಿದ್ಯಾರ್ಥಿಗಳು, ಇವರೂ ವಿದ್ಯಾರ್ಥಿಗಳಾಗಿದ್ದಾರೆ ಆದರೆ ಎಲ್ಲಾ
ಸಹೋದರರೂ ಸಹ ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಚಿಕ್ಕ ಮಕ್ಕಳಿದ್ದರೆ ಅವರಿಗೂ ಸಹ ಬಾಬಾ,
ಬಾಬಾ ಎಂದು ಹೇಳಿ ಎನ್ನುವುದನ್ನು ಕಲಿಸಿಕೊಡಬೇಕು. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ -
ಮುಂದೆ ಹೋದಂತೆ ತಂದೆಯನ್ನು ಬಹಳ ಬೇಗನೆ ಅರಿತುಕೊಳ್ಳುತ್ತಾರೆ. ಇಷ್ಟು ಮಂದಿ ತಂದೆಯಿಂದ
ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆಂಬುದನ್ನು ನೋಡಿದಾಗ ಅನೇಕರು ಬರುತ್ತಾಇರುತ್ತಾರೆ. ಎಷ್ಟು
ತಡವಾಗುವುದೋ ಅಷ್ಟು ನಿಮ್ಮಲ್ಲಿ ಆಕರ್ಷಣೆಯಾಗುತ್ತಾ ಇರುತ್ತದೆ. ಪವಿತ್ರರಾಗುವುದರಿಂದ
ಆಕರ್ಷಣೆಯಾಗುತ್ತದೆ. ಎಷ್ಟು ಯೋಗದಲ್ಲಿರುತ್ತೀರೋ ಅಷ್ಟು ನಿಮ್ಮಲ್ಲಿ ತೇಜಸ್ಸಿರುತ್ತದೆ ಆಗ
ಅನ್ಯರನ್ನೂ ಸಹ ತಂದೆಯ ಕಡೆ ಸೆಳೆಯುತ್ತೀರಿ, ತಂದೆಯೂ ಸಹ ಸೆಳೆಯುತ್ತಾರಲ್ಲವೆ. ಬಹಳಷ್ಟು
ವೃದ್ಧಿಯಾಗುತ್ತಿರುತ್ತದೆ. ಅದಕ್ಕಾಗಿ ಯುಕ್ತಿಗಳನ್ನೂ ಸಹ ರಚಿಸಲಾಗುತ್ತದೆ. ಗೀತೆಯ ಭಗವಂತ ಯಾರು?
ಕೃಷ್ಣನನ್ನು ನೆನಪು ಮಾಡುವುದು ಬಹಳ ಸಹಜವಾಗಿದೆ, ಕೃಷ್ಣನು ಸಾಕಾರ ರೂಪದಲ್ಲಿದ್ದಾನೆ. ಆದರೆ
ನಿರಾಕಾರ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ಈ ಮಾತಿನ ಮೇಲೆ ಎಲ್ಲವೂ
ಆಧಾರಿತವಾಗಿದೆ. ಆದುದರಿಂದ ತಂದೆಯು ತಿಳಿಸಿದ್ದರು - ಈ ಮಾತನ್ನು ಎಲ್ಲರಿಂದಲೂ ಬರೆಸುತ್ತಾ ಹೋಗಿ.
ಎಲ್ಲರ ಅಭಿಪ್ರಾಯದ ದೊಡ್ಡ-ದೊಡ್ಡ ಲಿಸ್ಟನ್ನು ಮಾಡಿಸಿದಾಗ ಮನುಷ್ಯರಿಗೆ ಇದರಿಂದ ತಿಳಿಯುತ್ತದೆ.
ನೀವು ಬ್ರಾಹ್ಮಣರು ಯಾವಾಗ ಪಕ್ಕಾ ನಿಶ್ಚಯ ಬುದ್ದಿಯವರಾಗುವಿರೋ ಆಗ ವೃಕ್ಷವೂ ವೃದ್ಧಿಯನ್ನು
ಹೊಂದುತ್ತಾ ಇರುವುದು, ಮಾಯೆಯ ಬಿರುಗಾಳಿಗಳೂ ಸಹ ಅಂತ್ಯದವರೆಗೂ ನಡೆಯುತ್ತಿರುತ್ತದೆ. ವಿಜಯ
ಮಾಲೆಯನ್ನು ಪಡೆದಿರೆಂದರೆ ಮತ್ತೆ ಪುರುಷಾರ್ಥವೂ ಮಾಡಬೇಕಾಗಿಲ್ಲ, ಮಾಯೆಯೂ ಇರುವುದಿಲ್ಲ. ಆದರೆ
ನೆನಪಿನಲ್ಲಿಯೇ ಅನೇಕರು ಸೋಲುತ್ತಾರೆ. ನೀವು ಯೋಗದಲ್ಲಿ ಎಷ್ಟು ಶಕ್ತಿಶಾಲಿಗಳಾಗುವಿರೋ ಅಷ್ಟು
ಮಾಯೆಯಿಂದ ಸೋಲುವುದಿಲ್ಲ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಾ ಇದೆ, ಮಕ್ಕಳಿಗೆ ಈ ನಿಶ್ಚಯವೂ ಇದೆ
- ನಮ್ಮ ರಾಜಧಾನಿಯಿರುವುದು ನಂತರ ನಾವು ವಜ್ರ ರತ್ನಗಳನ್ನು ಎಲ್ಲಿಂದ ತರುತ್ತೇವೆ! ಗಣಿಗಳು
ಎಲ್ಲಿಂದ ಬರುತ್ತವೆ! ಇವೆಲ್ಲವೂ ಮೊದಲೂ ಸಹ ಇತ್ತಲ್ಲವೆ. ಇದರಲ್ಲಿ ತಬ್ಬಿಬ್ಬಾಗುವ ಮಾತೇ ಇಲ್ಲ.
ಏನಾಗಬೇಕಾಗಿದೆಯೋ ಅದನ್ನು ಪ್ರತ್ಯಕ್ಷದಲ್ಲಿ ನೋಡುವಿರಿ. ಸ್ವರ್ಗವಂತೂ ಖಂಡಿತ ಸ್ಥಾಪನೆಯಾಗುತ್ತದೆ.
ಯಾರು ಚೆನ್ನಾಗಿ ಓದುವರೋ ಅವರಿಗೆ ನಾನು ಹೋಗಿ ಭವಿಷ್ಯದಲ್ಲಿ ರಾಜಕುಮಾರನಾಗುವೆನು,
ವಜ್ರ-ವೈಡೂರ್ಯಗಳ ಮಹಲುಗಳಲ್ಲಿರುತ್ತೇವೆ ಎಂದು ನಿಶ್ಚಯವಿರುತ್ತದೆ. ಈ ನಿಶ್ಚಯವೂ ಸಹ ಸೇವಾಧಾರಿ
ಮಕ್ಕಳಿಗೇ ಇರುವುದು. ಯಾರು ಕಡಿಮೆ ಪದವಿಯನ್ನು ಪಡೆಯುವವರಿದ್ದಾರೆಯೋ ಅವರಿಗೆ ನಾವು ಸತ್ಯಯುಗದಲ್ಲಿ
ಹೇಗೆ ಮಹಲುಗಳನ್ನು ನಿರ್ಮಿಸುತ್ತೇವೆಂಬ ವಿಚಾರವೂ ಸಹ ಬರುವುದಿಲ್ಲ. ಯಾರು ಬಹಳ ಸೇವೆ ಮಾಡುವರೋ
ಅವರೇ ಮಹಲುಗಳಲ್ಲಿ ಹೋಗಿ ಇರುತ್ತಾರಲ್ಲವೆ. ದಾಸ-ದಾಸಿಯರಂತೂ ತಯಾರಾಗಿರುವವರು ಸಹಜವಾಗಿ
ಸಿಗುತ್ತಾರೆ. ಸೇವಾಧಾರಿ ಮಕ್ಕಳಿಗೆ ಇಂತಹ ವಿಚಾರಗಳು ಬರುತ್ತಿರುತ್ತವೆ. ಮಕ್ಕಳೂ ಸಹ
ತಿಳಿದುಕೊಂಡಿರುತ್ತೀರಿ - ಯಾರ್ಯಾರು ಒಳ್ಳೆಯ ಸೇವೆ ಮಾಡುವವರಾಗಿದ್ದಾರೆ. ನಾವು ಪುರುಷಾರ್ಥ
ಮಾಡದಿದ್ದರೆ ವಿದ್ಯಾವಂತರ ಮುಂದೆ ಹೋಗಿ ತಲೆ ಬಾಗುತ್ತೇವೆ. ಹೇಗೆ ಈ ಬ್ರಹ್ಮಾ ತಂದೆಯಿದ್ದಾರೆ
ಇವರಿಗೆ ವಿಚಾರವಿರುತ್ತದೆಯಲ್ಲವೆ. ವೃದ್ಧರು ಮತ್ತು ಬಾಲಕರು ಸಮಾನರಾಗಿ ಬಿಟ್ಟರು, ಆದ್ದರಿಂದ ಇವರ
ಚಟುವಟಿಕೆಗಳೂ ಸಹ ಬಾಲ್ಯದತರಹ ಇದೆ. ತಂದೆಯದಂತೂ ಒಂದೇ ಚಟುವಟಿಕೆಯಾಗಿದೆ - ಮಕ್ಕಳಿಗೆ ಓದಿಸುವುದು,
ಕಲಿಸುವುದು. ವಿಜಯ ಮಾಲೆಯ ಮಣಿಯಾಗಬೇಕೆಂದರೆ ಬಹಳ ಪುರುಷಾರ್ಥವು ಬೇಕು. ಬಹಳ ಮಧುರರಾಗಬೇಕು.
ಶ್ರೀಮತದಂತೆ ನಡೆದಾಗಲೇ ಶ್ರೇಷ್ಠರಾಗುವಿರಿ, ಇದು ತಿಳುವಳಿಕೆಯ ಮಾತಾಗಿದೆಯಲ್ಲವೆ. ತಂದೆಯು
ತಿಳಿಸುತ್ತಾರೆ - ನಾವು ಏನನ್ನು ತಿಳಿಸುತ್ತೇವೆಯೋ ಅದರ ಮೇಲೆ ಮನನ ಮಾಡಿ. ಮುಂದೆ ಹೋದಂತೆ ಇನ್ನೂ
ನಿಮಗೆ ಸಾಕ್ಷಾತ್ಕಾರವಾಗುತ್ತದೆ. ಸಮೀಪವನ್ನು ತಲುಪುತ್ತೀರೆಂದರೆ ಎಲ್ಲವೂ ಸ್ಮೃತಿಗೆ ಬರುತ್ತಾ
ಇರುವುದು. ನಮ್ಮ ರಾಜಧಾನಿಯಿಂದ ಬಂದು 5000 ವರ್ಷಗಳಾಯಿತು, 84 ಜನ್ಮಗಳ ಚಕ್ರವನ್ನು
ಸುತ್ತಿಬಂದಿದ್ದೇವೆ. ಹೇಗೆ ವಾಸ್ಕೋಡಿಗಾಮನು ಇಡೀ ವಿಶ್ವವನ್ನು ಸುತ್ತಿದನು ಎಂದು ಹೇಳುತ್ತಾರೆ.
ನೀವಂತೂ ಈ ವಿಶ್ವದಲ್ಲಿ 84 ಜನ್ಮಗಳ ಚಕ್ರವನ್ನು ಸುತ್ತಿದ್ದೀರಿ. ಆ ವಾಸ್ಕೋಡಿಗಾಮ ಒಬ್ಬನೇ ಹೋದನು,
ಹಾಗೆಯೇ ಇವರೂ ಸಹ ಒಬ್ಬರೇ ಆಗಿದ್ದಾರೆ. ಆ ತಂದೆಯು ನಿಮಗೆ 84 ಜನ್ಮಗಳ ರಹಸ್ಯವನ್ನು ತಿಳಿಸುತ್ತಾರೆ.
ರಾಜಧಾನಿಯು ನಡೆಯುತ್ತದೆ, ಅಂದಾಗ ತಮ್ಮಲ್ಲಿ ನೋಡಿಕೊಳ್ಳಬೇಕು - ನನ್ನಲ್ಲಿ ಯಾವುದೇ
ದೇಹಾಭಿಮಾನವಿಲ್ಲವೆ? ಎಲ್ಲಿಯೂ ಮೂರ್ಚಿತವಾಗುತ್ತಿಲ್ಲವೆ? ಮುನಿಸಿಕೊಳ್ಳುತ್ತಿಲ್ಲವೆ?
ನೀವು ಯೋಗಬಲದಲ್ಲಿದ್ದು ಶಿವ ತಂದೆಯನ್ನು ನೆನಪು ಮಾಡುತ್ತಾ ಇದ್ದಿದ್ದೇ ಆದರೆ ನಿಮಗೆ ಯಾವುದೇ
ಪೆಟ್ಟು ಬೀಳಲು ಸಾಧ್ಯವಿಲ್ಲ. ಯೋಗಬಲವೇ ಸುರಕ್ಷಾ ಕವಚವಾಗಿದೆ. ಯಾರು ಏನು ಮಾಡಲು
ಸಾಧ್ಯವಾಗುವುದಿಲ್ಲ. ಒಂದುವೇಳೆ ಯಾರಾದರೂ ಪೆಟ್ಟು ತಿನ್ನುತ್ತಾರೆಂದರೆ ಅವಶ್ಯವಾಗಿ
ದೇಹಾಭಿಮಾನವಿದೆ. ದೇಹೀ-ಅಭಿಮಾನಿಗಳಿಗೆ ಯಾರೂ ಪೆಟ್ಟು ಕೊಡಲು ಸಾಧ್ಯವಿಲ್ಲ, ತನ್ನದೇ
ತಪ್ಪಿರುತ್ತದೆ. ವಿವೇಕವೂ ಸಹ ಹೀಗೆ ಹೇಳುತ್ತದೆ - ಆತ್ಮಾಭಿಮಾನಿಗಳಿಗೆ ಯಾರೂ ಏನೂ ಸಹ ಮಾಡಲು
ಸಾಧ್ಯವಿಲ್ಲ. ಆದ್ದರಿಂದ ಆತ್ಮಾಭಿಮಾನಿಯಾಗುವ ಪ್ರಯತ್ನ ಪಡಬೇಕಾಗಿದೆ. ಎಲ್ಲರಿಗೆ ಸಂದೇಶವನ್ನು
ಕೊಡಬೇಕಾಗಿದೆ. ಭಗವಾನುವಾಚ - ಮನ್ಮನಾಭವ. ಯಾವ ಭಗವಂತ? ಇದನ್ನೂ ಸಹ ನೀವು ಮಕ್ಕಳು ಸ್ಪಷ್ಟ
ಪಡಿಸಬೇಕಾಗಿದೆ. ಕೇವಲ ಈ ಒಂದೇ ಮಾತಿನಲ್ಲಿ ನಿಮ್ಮ ವಿಜಯವಾಗುವುದು. ಇಡೀ ಪ್ರಪಂಚದಲ್ಲಿ ಮನುಷ್ಯರ
ಬುದ್ಧಿಯಲ್ಲಿ ಕೃಷ್ಣ ಭಗವಾನುವಾಚ ಇದೆ. ಯಾವಾಗ ನೀವು ತಿಳಿಸುತ್ತೀರೋ ಆಗ ಈ ಮಾತು ಸರಿಯೆಂದು
ಹೇಳುತ್ತಾರೆ ಆದರೆ ಯಾವಾಗ ನಿಮ್ಮ ತರಹ ಅರ್ಥ ಮಾಡಿಕೊಳ್ಳುವರೋ ಆಗ ತಂದೆಯು ಏನು ಕಲಿಸುವರೋ ಅದೇ
ಸರಿಯೆಂದು ಹೇಳುತ್ತಾರೆ. ನಾನು ಈ ರೀತಿಯಿದ್ದೇನೆ, ನನ್ನನ್ನು ಯಾರೂ ಅರಿತುಕೊಳ್ಳಲು
ಸಾಧ್ಯವಿಲ್ಲವೆಂದು ಕೃಷ್ಣನು ಹೇಳಲು ಸಾಧ್ಯವೆ? ಕೃಷ್ಣನನ್ನಂತೂ ಎಲ್ಲರೂ ಅರಿತುಕೊಳ್ಳುವರು.
ಕೃಷ್ಣನ ತನುವಿನಿಂದ ಭಗವಂತನು ಹೇಳುತ್ತಾರೆಂದಲ್ಲ. ಕೃಷ್ಣನು ಸತ್ಯಯುಗದಲ್ಲಿರುತ್ತಾನೆ, ಅಂದಮೇಲೆ
ಅಲ್ಲಿ ಭಗವಂತನು ಹೇಗೆ ಬರುತ್ತಾರೆ? ಭಗವಂತನು ಪುರುಷೋತ್ತಮ ಸಂಗಮಯುಗದಲ್ಲಿಯೇ ಬರುತ್ತಾರೆ
ಆದ್ದರಿಂದ ನೀವು ಮಕ್ಕಳು ಅನೇಕರಿಂದ ಬರೆಸಿಕೊಳ್ಳುತ್ತಾ ಹೋಗಿ. ನಿಮ್ಮ ಬಳಿ ಎಲ್ಲರ ಅಭಿಪ್ರಾಯದ
ಪುಸ್ತಕವು ಮುದ್ರಿಸಲ್ಪಟ್ಟಿರಲಿ, ಅದರಲ್ಲಿ ಎಲ್ಲರ ಬರವಣಿಗೆಯಿರಲಿ. ಯಾವಾಗ ಇಷ್ಟೆಲ್ಲರೂ ಹೀಗೆ
ಬರೆದಿದ್ದಾರೆಂಬುದನ್ನು ಅನ್ಯರು ನೋಡಿದಾಗ ತಾವೂ ಬರೆಯುತ್ತಾರೆ. ಆಗ ನಿಮ್ಮ ಬಳಿ ಬಹಳ ಜನರ ಲೇಖನಗಳು
ಬರುತ್ತವೆ - ಗೀತೆಯ ಭಗವಂತ ಯಾರು? ಮೇಲ್ಪಂಕ್ತಿಯಲ್ಲೂ ಸಹ ಬರೆಯಲ್ಪಟ್ಟಿರಲಿ - ಶ್ರೇಷ್ಠಾತಿ
ಶ್ರೇಷ್ಠರಾದವರು ತಂದೆಯೇ ಆಗಿದ್ದಾರೆ, ಕೃಷ್ಣನಂತೂ ಶ್ರೇಷ್ಠಾತಿ ಶ್ರೇಷ್ಠ ಅಲ್ಲ ಎಂದು.
ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಕೃಷ್ಣನು ಹೇಳಲು ಸಾಧ್ಯವಿಲ್ಲ. ಬ್ರಹ್ಮಾರವರಿಗಿಂತಲೂ
ಶ್ರೇಷ್ಠರು ಭಗವಂತನಲ್ಲವೆ. ಮುಖ್ಯ ಮಾತೇ ಇದಾಗಿದೆ. ಇದರಲ್ಲಿ ಎಲ್ಲರ ದಿವಾಳಿತನವು ಹೊರಟು
ಹೋಗುತ್ತದೆ.
ಇಲ್ಲಿಯೇ ಕುಳಿತುಕೊಳ್ಳಿ ಎಂದು ತಂದೆಯು ಹೇಳುವುದಿಲ್ಲ. ಸದ್ಗುರುವನ್ನು ತನ್ನವರನ್ನಾಗಿ ಮಾಡಿಕೊಂಡ
ಮೇಲೆ ತಮ್ಮ ಮನೆಯಲ್ಲಿಯೇ ಇರಿ. ಆರಂಭದಲ್ಲಂತೂ ನಿಮ್ಮ ಭಟ್ಟಿಯಾಗಿತ್ತು, ಶಾಸ್ತ್ರಗಳಲ್ಲಿ ಭಟ್ಟಿಯ
ಮಾತಿದೆ ಆದರೆ ಯಾವುದಕ್ಕೆ ಭಟ್ಟಿಯೆಂದು ಹೇಳಲಾಗುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ.
ಭಟ್ಟಿಯು ಇಟ್ಟಿಗೆಗಳದಾಗಿರುತ್ತದೆ, ಇಟ್ಟಿಗೆಗಳ ಭಟ್ಟಿಯೂ ಇರುತ್ತದೆ. ಅದರಲ್ಲಿ ಕೆಲವು
ಇಟ್ಟಿಗೆಗಳು ಚೆನ್ನಾಗಿ ಸುಡುತ್ತವೆ, ಕೆಲವು ಹಸಿಯಾಗಿಯೇ ಉಳಿಯುತ್ತವೆ. ಇಲ್ಲಿಯೂ ಸಹ ನೋಡಿ,
ಚಿನ್ನವಂತೂ ಇಲ್ಲ. ಕಲ್ಲು ಮುಳ್ಳುಗಳಂತೆ ಇದೆ, ಹಳೆಯ ವಸ್ತುವಿಗೆ ಬಹಳ ಮಾನ್ಯತೆಯಿದೆ, ಶಿವ ತಂದೆ
ಮತ್ತು ದೇವತೆಗಳಿಗೂ ಮಾನ್ಯತೆಯಿದೆಯಲ್ಲವೆ. ಸತ್ಯಯುಗದಲ್ಲಿ ಮಾನ್ಯತೆಯ ಮಾತೇ ಇಲ್ಲ, ಅಲ್ಲಿ ಯಾವುದೇ
ಹಳೆಯ ವಸ್ತುಗಳನ್ನು ಅನ್ವೇಷಣೆ ಮಾಡುವುದಿಲ್ಲ. ಅಲ್ಲಿ ಹೊಟ್ಟೆಯು ತುಂಬಿರುತ್ತದೆ, ಹುಡುಕುವ
ಅವಶ್ಯಕತೆಯೇ ಇರುವುದಿಲ್ಲ. ನಿಮಗೆ ಅಲ್ಲಿ ಭೂಮಿಯನ್ನು ಅಗೆಯಬೇಕಾಗುವುದಿಲ್ಲ. ದ್ವಾಪರದ ನಂತರ
ಭೂಮಿಯನ್ನು ಅಗೆದು ಖನಿಜ ತೆಗೆಯುವುದನ್ನು ಪ್ರಾರಂಭಿಸುತ್ತಾರೆ, ಮನೆಗಳನ್ನು ಕಟ್ಟುತ್ತಾರೆ.
ಸ್ವಲ್ಪ ಸಿಕ್ಕಿತೆಂದರೆ ಕೆಳಗೆ ಇನ್ನೂ ಇದೆಯೆಂದು ತಿಳಿಯುತ್ತಾರೆ. ಸತ್ಯಯುಗದಲ್ಲಿ ನಿಮಗೆ ಯಾವುದರ
ಚಿಂತೆಯೂ ಇರುವುದಿಲ್ಲ ಅಲ್ಲಂತೂ ಚಿನ್ನವೇ ಚಿನ್ನವಿರುತ್ತದೆ. ಇಟ್ಟಿಗೆಗಳೇ ಚಿನ್ನದಿಂದ
ಕೂಡಿರುತ್ತದೆ. ಕಲ್ಪದ ಹಿಂದೆ ಏನಾಗಿದೆಯೋ ಅದು ನಿಗಧಿಯಾಗಿದೆ. ಅದೇ ಸಾಕ್ಷಾತ್ಕಾರವಾಗುತ್ತದೆ.
ಆತ್ಮಗಳನ್ನು ಕರೆಸಲಾಗುತ್ತದೆ, ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ, ಇದರಲ್ಲಿ ತಬ್ಬಿಬ್ಬಾಗುವ
ಮಾತಿಲ್ಲ. ಕ್ಷಣ-ಪ್ರತಿಕ್ಷಣ ಪಾತ್ರವು ಅಭಿನಯಿಸಲ್ಪಡುತ್ತದೆ ನಂತರ ಮರೆಯಾಗಿ ಬಿಡುತ್ತದೆ. ಇದು
ವಿದ್ಯೆಯಾಗಿದೆ, ಭಕ್ತಿಮಾರ್ಗದಲ್ಲಂತೂ ಅನೇಕ ಚಿತ್ರಗಳಿವೆ. ಈ ನಿಮ್ಮ ಚಿತ್ರಗಳೆಲ್ಲವೂ ಅರ್ಥ
ಸಹಿತವಾಗಿದೆ, ಅರ್ಥವಿಲ್ಲದ ಯಾವುದೇ ಚಿತ್ರವಿಲ್ಲ. ಎಲ್ಲಿಯವರೆಗೆ ನೀವು ಸ್ಪಷ್ಟವಾಗಿ
ತಿಳಿಸುವುದಿಲ್ಲವೋ ಅಲ್ಲಿಯವರೆಗೆ ಇದನ್ನು ಯಾರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ತಿಳಿಸುವವರು
ಬುದ್ಧಿವಂತ, ಜ್ಞಾನಪೂರ್ಣ ಒಬ್ಬರೇ ತಂದೆಯಾಗಿದ್ದಾರೆ. ಈಗ ನಿಮಗೆ ಈಶ್ವರೀಯ ಮತವು ಸಿಗುತ್ತದೆ. ಈಗ
ನೀವು ಈಶ್ವರೀಯ ಮನೆತನ ಅಥವಾ ಈಶ್ವರೀಯ ಕುಲದವರಾಗಿದ್ದೀರಿ. ಈಶ್ವರನು ಬಂದು ಮನೆತನವನ್ನು ಸ್ಥಾಪನೆ
ಮಾಡುತ್ತಾರೆ, ಈಗ ನಿಮಗೆ ರಾಜ್ಯವೇನೂ ಇಲ್ಲ. ರಾಜಧಾನಿಯಿತ್ತು ಆದರೆ ಈಗಿಲ್ಲ. ದೇವಿ-ದೇವತೆಗಳ
ಧರ್ಮವು ಖಂಡಿತವಾಗಿಯೂ ಇತ್ತು, ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯಿತ್ತಲ್ಲವೆ! ಗೀತೆಯಿಂದ
ಬ್ರಾಹ್ಮಣ ಕುಲವೂ ಆಗುತ್ತದೆ, ಸೂರ್ಯವಂಶಿ-ಚಂದ್ರವಂಶಿ ಕುಲವೂ ಆಗುತ್ತದೆ. ಬಾಕಿ ಮತ್ತ್ಯಾರೂ ಇರಲು
ಸಾಧ್ಯವಿಲ್ಲ. ನೀವು ಮಕ್ಕಳು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೀರಿ.
ಮಹಾಪ್ರಳಯವಾಗುತ್ತದೆ ಎಂದು ಮೊದಲು ತಿಳಿದುಕೊಂಡಿದ್ದಿರಿ, ಪ್ರಳಯದ ನಂತರ ಸಾಗರದಲ್ಲಿ ಆಲದ ಎಲೆಯ
ಮೇಲೆ ತೇಲಿ ಬರುತ್ತಾನೆಂದು ತೋರಿಸುತ್ತಾರೆ. ಮೊದಲಿಗನಾಗಿ ಶ್ರೀಕೃಷ್ಣನೇ ಬರುತ್ತಾನಲ್ಲವೆ.
ಉಳಿದಂತೆ ಯಾವುದೇ ಸಾಗರದ ಮೇಲೆ ಬರುವುದಿಲ್ಲ. ಈಗ ನೀವು ಮಕ್ಕಳಿಗೆ ಬಹಳ ಒಳ್ಳೆಯ ತಿಳುವಳಿಕೆಯು
ಬಂದಿದೆ. ಯಾರು ಆತ್ಮಿಕ ವಿದ್ಯೆಯನ್ನು ಬಹಳ ಚೆನ್ನಾಗಿ ಓದುವರೋ ಅವರಿಗೇ ಖುಷಿಯಿರುವುದು. ಯಾರು
ಚೆನ್ನಾಗಿ ಓದುವರೋ ಅವರೇ ಪಾಸ್-ವಿತ್-ಆನರ್ ಆಗುವರು. ಒಂದುವೇಳೆ ಯಾರೊಂದಿಗಾದರೂ ಮನಸ್ಸಿದ್ದರೆ
ವಿದ್ಯಾಭ್ಯಾಸದ ಸಮಯದಲ್ಲಿಯೂ ಅವರೇ ನೆನಪಿಗೆ ಬರುತ್ತಿರುವರು, ಬುದ್ಧಿಯೂ ಅಲ್ಲಿಗೇ ಹೊರಟು
ಹೋಗುವುದು. ಆದ್ದರಿಂದ ಯಾವಾಗಲೂ ಬ್ರಹ್ಮಚರ್ಯದಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಲಾಗುತ್ತದೆ. ಇಲ್ಲಿ
ನೀವು ಮಕ್ಕಳಿಗೆ ತಿಳಿಸಲಾಗುತ್ತದೆ - ಒಬ್ಬ ತಂದೆಯ ವಿನಃ ಮತ್ತೆಲ್ಲಿಯೂ ಬುದ್ಧಿಯು ಹೋಗಬಾರದು.
ಆದರೆ ತಂದೆಗೆ ಗೊತ್ತಿದೆ, ಅನೇಕರಿಗೆ ಹಳೆಯ ಪ್ರಪಂಚವೇ ನೆನಪಿಗೆ ಬರುತ್ತಿರುತ್ತದೆ ಮತ್ತು ಇಲ್ಲಿ
ಕುಳಿತಿದ್ದರೂ ಸಹ ಕೇಳುವುದೇ ಇಲ್ಲ. ಭಕ್ತಿಮಾರ್ಗದಲ್ಲಿಯೂ ಇಂತಹವರಿರುತ್ತಾರೆ, ಸತ್ಸಂಗದಲ್ಲಿದ್ದರೂ
ಸಹ ಬುದ್ಧಿಯು ಎಲ್ಲೆಲ್ಲಿಗೋ ಓಡುತ್ತಿರುತ್ತದೆ. ಇದಂತೂ ಬಹಳ ದೊಡ್ಡ ಪರೀಕ್ಷೆಯಾಗಿದೆ. ಕೆಲವರಂತೂ
ಇಲ್ಲೇ ಕುಳಿತಿದ್ದರೂ ಸಹ ಕೇಳಿಯೂ ಕೇಳದಂತಿರುತ್ತಾರೆ. ಇನ್ನೂ ಕೆಲವು ಮಕ್ಕಳಿಗೆ ಖುಷಿಯಾಗುತ್ತದೆ.
ಮುಂದೆ ಖುಷಿಯಲ್ಲಿ ತೂಗುತ್ತಿರುತ್ತಾರೆ, ಬುದ್ಧಿಯೋಗವು ತಂದೆಯ ಜೊತೆಯಿದ್ದರೆ ಅಂತ್ಮತಿ ಸೋ
ಗತಿಯಾಗುವುದು. ಇದಕ್ಕಾಗಿ ಬಹಳ ಒಳ್ಳೆಯ ಪುರುಷಾರ್ಥ ಮಾಡಬೇಕಾಗಿದೆ. ಇಲ್ಲಂತೂ ನಿಮಗೆ ಬಹಳ ಧನವು
ಸಿಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ವಿಜಯಮಾಲೆಯ
ಮಣಿಯಾಗಲು ಬಹಳ ಒಳ್ಳೆಯ ಪುರುಷಾರ್ಥ ಮಾಡಬೇಕಾಗಿದೆ, ಬಹಳ ಮಧುರರಾಗಬೇಕಾಗಿದೆ, ಶ್ರೀಮತದಂತೆ
ನಡೆಯಬೇಕಾಗಿದೆ.
2. ಯೋಗವೇ ಸುರಕ್ಷಾ ಕವಚವಾಗಿದೆ, ಆದ್ದರಿಂದ ಯೋಗಬಲವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ.
ಆತ್ಮಾಭಿಮಾನಿಯಾಗಲು ಸಂಪೂರ್ಣ ಪ್ರಯತ್ನ ಪಡಬೇಕಾಗಿದೆ.
ವರದಾನ:
ಪ್ರತಿ ಸಂಕಲ್ಪ,
ಮಾತು ಮತ್ತು ಕರ್ಮವನ್ನು ಫಲದಾಯಕವನ್ನಾಗಿ ಮಾಡುವಂತಹ ಆತ್ಮೀಯ ಪ್ರಭಾವಶಾಲಿ ಭವ.
ಯಾವಾಗಲಾದರೂ ಸಹ ಯಾರದೆ
ಸಂಪರ್ಕದಲ್ಲಿ ಬರುವಿರಾದರೆ ಅವರ ಪ್ರತಿ ಮನಸ್ಸಿನ ಭಾವನೆ ಸ್ನೇಹ, ಸಹಯೋಗ ಮತ್ತು ಕಲ್ಯಾಣದ
ಪ್ರಭಾವಶಾಲಿಯಾಗಿರಲಿ. ಪ್ರತಿ ಮಾತು ಯಾರಿಗೇ ಆದರೂ ಸಾಹಸ ಉಲ್ಲಾಸ ಕೊಡುವಂತಹ ಪ್ರಭಾವಶಾಲಿಯಾಗಿರಲಿ.
ಸಾಧಾರಣ ಮಾತು-ಕಥೆಯಲ್ಲಿ ಸಮಯ ಕಳೆಯದೇ ಇರಲಿ. ಅದೇ ರೀತಿ ಪ್ರತಿ ಕರ್ಮ ಫಲಧಾಯಕವಾಗಿರಲಿ - ಸ್ವಯಂನ
ಪ್ರತಿ ಇರಲಿ, ಇಲ್ಲಾ ಬೇರೆಯವರ ಪ್ರತಿ ಇರಲಿ. ಪರಸ್ಪರರಲ್ಲಿಯೂ ಸಹ ಎಲ್ಲಾ ರೂಪದಲ್ಲಿಯೂ
ಫ್ರಭಾವಶಾಲಿಗಳಾಗಿ. ಸೇವೆಯಲ್ಲಿ ಆತ್ಮೀಯ ಪ್ರಭಾವಶಾಲಿಗಳಾಗಿ ಆಗ ತಂದೆಯನ್ನು ಪ್ರತ್ಯಕ್ಷ ಮಾಡಲು
ನಿಮಿತ್ತರಾಗಲು ಸಾಧ್ಯ.
ಸ್ಲೋಗನ್:
ಈ ರೀತಿಯ ಶುಭಚಿಂತಕ
ಮಣಿಗಳಾಗಿ ಯಾವುದರಿಂದ ನಿಮ್ಮ ಕಿರಣಗಳು ವಿಶ್ವಕ್ಕೆ ಬೆಳಕು ನೀಡುತ್ತಿರಲಿ.
ಅವ್ಯಕ್ತ ಸ್ಥಿತಿಯ
ಅನುಭವ ಮಾಡವುದಕ್ಕಾಗಿ ವಿಶೇಷ ಹೋಮ್ ವರ್ಕ್ -
ಮನಸ್ಸಿನ ಏಕಾಗ್ರತೆಯೇ ಏಕರಸ ಸ್ಥಿತಿಯ ಅನುಭವವನ್ನು ಮಾಡಿಸುತ್ತದೆ. ಏಕಾಗ್ರತೆಯ ಶಕ್ತಿಯ ಮುಖಾಂತರ
ಅವ್ಯಕ್ತ ಫರಿಶ್ಥಾ ಸ್ಥಿತಿಯ ಸಹಜ ಅನುಭವ ಮಾಡಬಹುದು. ಏಕಾಗ್ರತೆ ಅರ್ಥಾತ್ ಮನಸ್ಸನ್ನು ಎಲ್ಲಿ ಬೇಕೊ,
ಹೇಗೆ ಬೇಕೊ, ಎಷ್ಟು ಸಮಯ ಬೇಕೊ ಅಷ್ಟು ಸಮಯ ಏಕಾಗ್ರ ಮಾಡುವುದು. ಮನಸ್ಸು ವಶದಲ್ಲಿ ಇರಬೇಕು.