05.01.20       Avyakt Bapdada      Kannada Murli      30.03.85      Om Shanti     Madhuban


ಮೂರು-ಮೂರು ಮಾತುಗಳ ಪಾಠ


ಇಂದು ಬಾಪ್ದಾದಾರವರು ತಮ್ಮ ಸದಾಕಾಲದ ಜೊತೆಗಾರ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ತಂದೆಯ ಸದಾಕಾಲದ ಜೊತೆಗಾರರು ಮಕ್ಕಳೇ ಆಗಿದ್ದಾರೆ, ಸಹಯೋಗಿಯಾಗಿದ್ದಾರೆ ಏಕೆಂದರೆ ಅತಿ ಸ್ನೇಹಿಯಾಗಿದ್ದಾರೆ. ಎಲ್ಲಿ ಸ್ನೇಹವಿರುತ್ತದೆ, ಅವರೊಂದಿಗೆ ಸದಾ ಸಹಯೋಗಿ ಜೊತೆಗಾರರಾಗುತ್ತಾರೆ. ಅಂದಮೇಲೆ ಸ್ನೇಹಿ ಮಕ್ಕಳಾಗಿರುವ ಕಾರಣದಿಂದ ತಂದೆಯು ಮಕ್ಕಳಿಲ್ಲದೆ ಯಾವುದೇ ಕಾರ್ಯವನ್ನೂ ಮಾಡಲು ಸಾಧ್ಯವಿಲ್ಲ. ಮತ್ತು ಮಕ್ಕಳು ತಂದೆಯಿಲ್ಲದೆ ಯಾವುದೇ ಕಾರ್ಯವನ್ನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸ್ಥಾಪನೆಯ ಆದಿಯಿಂದ ತಂದೆಯು ಬ್ರಹ್ಮಾರವರೊಂದಿಗೆ ಬ್ರಾಹ್ಮಣ ಮಕ್ಕಳನ್ನು ರಚಿಸಿದರು. ಒಬ್ಬ ಬ್ರಹ್ಮಾರವರಲ್ಲ, ಬ್ರಹ್ಮಾರವರ ಜೊತೆಗೆ ಬ್ರಾಹ್ಮಣ ಮಕ್ಕಳದೂ ಜನ್ಮವಾಯಿತು. ಏಕೆ? ಮಕ್ಕಳು ಸಹಯೋಗಿ, ಜೊತೆಗಾರರಿದ್ದಾರೆ ಆದ್ದರಿಂದ ಯಾವಾಗ ತಂದೆಯ ಜಯಂತಿಯನ್ನಾಚರಿಸುತ್ತೀರಿ, ಜೊತೆಯಲ್ಲಿ ಏನು ಹೇಳುತ್ತೀರಿ? ಶಿವ ಜಯಂತಿ ಸೊ ಬ್ರಹ್ಮಾ ಜಯಂತಿ, ಬ್ರಾಹ್ಮಣರ ಜಯಂತಿ. ಅಂದಮೇಲೆ ಜೊತೆ ಜೊತೆಗೆ ಬಾಪ್ದಾದಾ ಮತ್ತು ಮಕ್ಕಳು, ಎಲ್ಲರ ಆದಿ ರಚನೆಯಾಯಿತು ಮತ್ತು ಆದಿಯಿಂದಲೇ ತಂದೆಯ ಸಹಯೋಗಿ ಜೊತೆಗಾರರಾದಿರಿ. ಅಂದಮೇಲೆ ತಂದೆಯು ತನ್ನ ಸಹಯೋಗಿ ಜೊತೆಗಾರರೊಂದಿಗೆ ಮಿಲನವಾಗುತ್ತಿದ್ದಾರೆ. ಜೊತೆಗಾರರು ಅರ್ಥಾತ್ ಪ್ರತೀ ಹೆಜ್ಜೆಯಲ್ಲಿ, ಪ್ರತೀ ಸಂಕಲ್ಪದಲ್ಲಿ, ಮಾತಿನಲ್ಲಿ ಜೊತೆ ನಿಭಾಯಿಸುವವರು. ಫಾಲೋ ಮಾಡುವುದು ಅರ್ಥಾತ್ ಜೊತೆ ನಿಭಾಯಿಸುವುದು. ಹೀಗೆ ಪ್ರತೀ ಹೆಜ್ಜೆಯಲ್ಲಿ ಜೊತೆ ನಿಭಾಯಿಸುವವರು ಅರ್ಥಾತ್ ಫಾಲೋ ಮಾಡುವವರು ಸತ್ಯ ಜೊತೆಗಾರರಾಗಿದ್ದಾರೆ. ಅವಿನಾಶಿ ಜೊತೆಗಾರರಾಗಿದ್ದಾರೆ. ಯಾರು ಸತ್ಯ ಜೊತೆಗಾರರಾಗಿರುತ್ತಾರೆಯೋ ಅವರ ಪ್ರತೀ ಹೆಜ್ಜೆಯು ಸ್ವತಹವಾಗಿಯೇ ತಂದೆಯ ಸಮಾನ ನಡೆಯುತ್ತಿರುತ್ತದೆ. ಇಲ್ಲಿ-ಅಲ್ಲಿ ಆಗಲು ಸಾಧ್ಯವಿಲ್ಲ. ಸತ್ಯ ಜೊತೆಗಾರರು ಪರಿಶ್ರಮ ಪಡಬೇಕಾಗಿರುವುದಿಲ್ಲ. ಈ ಹೆಜ್ಜೆಯನ್ನು ಹೀಗೆ ಇಡುವುದೇ ಅಥವಾ ಹಾಗೆ ಇಡುವುದೇ ಎನ್ನುವ ಪರಿಶ್ರಮವಿರುವುದಿಲ್ಲ, ಸ್ವತಹವಾಗಿಯೇ ತಂದೆಯ ಹೆಜ್ಜೆಯಲ್ಲಿ ಹೆಜ್ಜೆಯನ್ನಿಡದೆ ಅಂಶದಷ್ಟು ಹಾಗೀಗೆ ಆಗಲು ಸಾಧ್ಯವಿಲ್ಲ. ಇಂತಹ ಸತ್ಯ ಜೊತೆಗಾರ ಮಕ್ಕಳ ಮನಸ್ಸಿನಲ್ಲಿ, ಬುದ್ಧಿಯಲ್ಲಿ, ಹೃದಯದಲ್ಲಿ ಏನು ಸಮಾವೇಶವಾಗಿರುತ್ತದೆ? ನಾನು ತಂದೆಯವನು, ತಂದೆಯು ನನ್ನವರು. ಬುದ್ಧಿಯಲ್ಲಿದೆ - ತಂದೆಯ ಬೇಹದ್ದಿನ ಖಜಾನೆಯ ಆಸ್ತಿಯೇನಿದೆಯೋ ಅದು ನನ್ನದು. ಹೃದಯದಲ್ಲಿ ಹೃದಯರಾಮ ಮತ್ತು ಹೃದಯವು ಮತ್ತೇನೂ ಆಗಲು ಸಾಧ್ಯವಿಲ್ಲ. ಅಂದಮೇಲೆ ಯಾವಾಗ ತಂದೆಯೇ ನೆನಪಿನ ರೂಪದಲ್ಲಿ ಸಮಾವೇಶವಾಗಿದ್ದಾರೆ ಅಂದಮೇಲೆ ಎಂತಹ ಸ್ಮೃತಿಯೋ ಅಂತಹ ಸ್ಥಿತಿ ಮತ್ತು ಅಂತಹ ಕರ್ಮವು ಸ್ವತಹವಾಗಿಯೇ ಆಗುತ್ತದೆ. ಹೇಗೆ ಭಕ್ತಿಮಾರ್ಗದಲ್ಲಿಯೂ ಭಕ್ತರು ನಿಶ್ಚಯವನ್ನು ತೋರಿಸುವುದಕ್ಕಾಗಿ ಇದನ್ನೇ ಹೇಳುತ್ತಾರೆ - ನಮ್ಮ ಹೃದಯದಲ್ಲಿ ಯಾರಿದ್ದಾರೆ ಎಂದು ನೋಡಿರಿ! ತಾವು ಹೇಳುವುದಿಲ್ಲ. ಆದರೆ ಸ್ವತಹವಾಗಿಯೇ ತಮ್ಮ ಹೃದಯದಿಂದ ಹೃದಯರಾಮನದೇ ಅನುಭವವು ಎಲ್ಲರಿಗೂ ಆಗುತ್ತದೆ ಅರ್ಥಾತ್ ಕಾಣಿಸುತ್ತದೆ. ಅಂದಮೇಲೆ ಸತ್ಯ ಜೊತೆಗಾರರು ಪ್ರತೀ ಹೆಜ್ಜೆಯಲ್ಲಿ ತಂದೆಯ ಸಮಾನ ಮಾಸ್ಟರ್ ಸರ್ವಶಕ್ತಿವಂತನಿದ್ದಾರೆ.

ಇಂದು ಬಾಪ್ದಾದಾರವರು ಮಕ್ಕಳಿಗೆ ಶುಭಾಷಯಗಳನ್ನು ಕೊಡುವುದಕ್ಕಾಗಿ ಬಂದಿದ್ದಾರೆ. ಸಹಯೋಗಿ, ಜೊತೆಗಾರ ಮಕ್ಕಳೆಲ್ಲರೂ ತಮ್ಮ-ತಮ್ಮ ಉಮ್ಮಂಗ-ಉತ್ಸಾಹದಿಂದ ನೆನಪಿನಲ್ಲಿ, ಸೇವೆಯಲ್ಲಿ ಮುಂದುವರೆಯುತ್ತಾ ಸಾಗುತ್ತಿದ್ದಾರೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಒಂದೇ ಧೃಡ ಸಂಕಲ್ಪವಿದೆ - ವಿಜಯದ ಧ್ವಜಾರೋಹಣ ಮಾಡಲೇಬೇಕು. ಇಡೀ ವಿಶ್ವದಲ್ಲಿ ಒಬ್ಬ ಆತ್ಮಿಕ ತಂದೆಯ ಪ್ರತ್ಯಕ್ಷತೆಯ ಧ್ವಜಾರೋಹಣ ಮಾಡಲೇಬೇಕು. ಇದೇ ಶ್ರೇಷ್ಠ ಧ್ವಜದ ಕೆಳಗೆ ಇಡೀ ವಿಶ್ವದ ಆತ್ಮರು ಈ ಗೀತೆಯನ್ನು ಹಾಡುತ್ತಾರೆ - ಒಬ್ಬ ತಂದೆಯು ಬಂದು ಬಿಟ್ಟರು. ಹೇಗೆ ಈಗ ತಾವುಗಳು ಧ್ವಜಾರೋಹಣ ಮಾಡುತ್ತೀರಿ, ಎಲ್ಲರೂ ಧ್ವಜದ ಕೆಳಗೆ ಗೀತೆಯನ್ನಾಡುತ್ತೀರಿ ಮತ್ತೇನಾಗುತ್ತದೆ? ಧ್ವಜಾರೋಹಣವಾಗುವುದರಿಂದ ಎಲ್ಲರ ಮೇಲೆ ಹೂಗಳ ಮಳೆ ಸುರಿಯುತ್ತದೆ. ಹೀಗೆ ಎಲ್ಲರ ಹೃದಯದಿಂದ ಈ ಗೀತೆಯು ಸ್ವತಹವಾಗಿ ಬರುತ್ತದೆ - ಸರ್ವರಿಗೂ ಒಬ್ಬ ತಂದೆ. ಗತಿ-ಸದ್ಗತಿ ದಾತಾ ಒಬ್ಬ ತಂದೆಯಾಗಿದ್ದಾರೆ, ಇಂತಹ ಗೀತೆಯನ್ನು ಹಾಡುತ್ತಿದ್ದಂತೆಯೇ ಅವಿನಾಶಿ ಸುಖ-ಶಾಂತಿಯ ಆಸ್ತಿ, ಮಳೆಯ ಸಮಾನ ಹೂಗಳ ಸುರಿಮಳೆಯ ಅನುಭವ ಮಾಡುವಿರಿ. ಬಾಬಾ ಎಂದು ಹೇಳಿದಿರಿ ಮತ್ತು ಆಸ್ತಿಯ ಅನುಭವ ಮಾಡಿದಿರಿ. ಅಂದಮೇಲೆ ಎಲ್ಲರ ಮನಸ್ಸಿನಲ್ಲಿ ಇದೊಂದೇ ಉಮ್ಮಂಗ-ಉತ್ಸಾಹವಿದೆ. ಆದ್ದರಿಂದ ಬಾಪ್ದಾದಾರವರು ಮಕ್ಕಳ ಉಮ್ಮಂಗ-ಉತ್ಸಾಹದಲ್ಲಿ ಶುಭಾಷಯಗಳನ್ನು ಕೊಡುತ್ತಾರೆ. ವಿದಾಯಿಯಂತು ಕೊಡುವುದಿಲ್ಲ ಅಲ್ಲವೆ. ಶುಭಾಷಯಗಳು. ಸಂಗಮಯುಗದ ಪ್ರತೀ ಸಮಯವು ಶುಭಾಷಯಗಳ ಸಮಯವಾಗಿದೆ. ಅಂದಮೇಲೆ ಮನಸ್ಸಿನ ಲಗನ್ನಿನಲ್ಲಿ, ಸೇವೆಯ ಲಗನ್ನಿನಲ್ಲಿ ಬಾಪ್ದಾದಾರವರು ಎಲ್ಲಾ ಮಕ್ಕಳಿಗೆ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಸೇವೆಯಲ್ಲಿ ಸದಾ ಮುಂದುವರೆಯುವ ಉಮ್ಮಂಗವು ಎಲ್ಲರಲ್ಲಿಯೂ ಇದೆ. ಈ ರೀತಿಯಂತು ಯಾರೂ ಇಲ್ಲ, ಯಾರಿಗೆ ಸೇವೆಯಲ್ಲಿ ಮುಂದುವರೆಯುವ ಉಮ್ಮಂಗವಿಲ್ಲ ಎನ್ನುವಂತೆ. ಒಂದುವೇಳೆ ಉಮ್ಮಂಗವಿಲ್ಲದಿದ್ದರೆ ಇಲ್ಲಿಗೆ ಹೇಗೆ ಬರುತ್ತಾರೆ! ಇದೂ ಸಹ ಉಮ್ಮಂಗ ಚಿಹ್ನೆಯಾಗಿದೆಯಲ್ಲವೆ! ಉಮ್ಮಂಗ-ಉತ್ಸಾಹವಿದೆ ಮತ್ತು ಸದಾ ಇರುತ್ತದೆ. ಜೊತೆ ಜೊತೆಗೆ ಉಮ್ಮಂಗ-ಉತ್ಸಾಹದಿಂದ ಮುಂದುವರೆಯುತ್ತಾ ಸೇವೆಯಲ್ಲಿ ಸದಾ ನಿರ್ವಿಘ್ನವಾಗಿದ್ದೀರಾ? ಉಮ್ಮಂಗ-ಉತ್ಸಾಹವಂತು ಬಹಳ ಚೆನ್ನಾಗಿದೆ, ಆದರೆ ನಿರ್ವಿಘ್ನ ಸೇವೆ ಮತ್ತು ವಿಘ್ನಗಳನ್ನು ಪಾರು ಮಾಡುತ್ತಾ-ಮಾಡುತ್ತಾ ಸೇವೆಯನ್ನು ಮಾಡುವುದು- ಇದರಲ್ಲಿ ಅಂತರವಿದೆ. ನಿರ್ವಿಘ್ನ ಅರ್ಥಾತ್ ಯಾರಿಗಾಗಿಯೂ ವಿಘ್ನ ರೂಪವಾಗುವುದಿಲ್ಲ ಮತ್ತು ಯಾವುದೇ ವಿಘ್ನ ಸ್ವರೂಪದಿಂದ ಗಾಬರಿಯಾಗುವುದಿಲ್ಲ. ಈ ವಿಶೇಷತೆಯ ಉಮ್ಮಂಗ-ಉತ್ಸಾಹದ ಜೊತೆ ಜೊತೆಗೆ ಅನುಭವ ಮಾಡುತ್ತೀರಾ? ಅಥವಾ ವಿಘ್ನವು ಬರುತ್ತದೆಯೇ? ಒಂದಿದೆ - ವಿಘ್ನವು ಪಾಠ ಕಲಿಸಲು ಬರುತ್ತದೆ, ಇನ್ನೊಂದು- ವಿಘ್ನವು ತಮ್ಮನ್ನು ಅಲುಗಾಡಿಸುವುದಕ್ಕಾಗಿ ಬರುತ್ತದೆ. ಒಂದುವೇಳೆ ಪಾಠವನ್ನು ಕಲಿತು ಪರಿಪಕ್ವವಾಗಿ ಬಿಡುತ್ತಾರೆಂದರೆ, ಆ ವಿಘ್ನವು ಲಗನ್ನಿನಲ್ಲಿ ಪರಿವರ್ತನೆಯಾಗಿ ಬಿಡುತ್ತದೆ. ಒಂದುವೇಳೆ ವಿಘ್ನದಲ್ಲಿ ಗಾಬರಿಯಾಗುತ್ತೀರೆಂದರೆ, ರಿಜಿಸ್ಟರ್ನಲ್ಲಿ ಮಚ್ಚೆ(ರಿಮಾರ್ಕ್) ಆಗಿ ಬಿಡುತ್ತದೆ. ಅಂತರವಾಯಿತಲ್ಲವೆ.

ಬ್ರಾಹ್ಮಣರಾಗುವುದು ಅಂದರೆ ಮಾಯೆಗೆ ಚಾಲೆಂಜ್ ಮಾಡುವುದು - ಹೇಗೆಂದರೆ ವಿಘ್ನವೇ ಭಲೆ ಬಾ, ನಾವು ವಿಜಯಿಯಾಗಿದ್ದೇವೆ. ನೀನೇನೂ ಮಾಡಲು ಸಾಧ್ಯವಿಲ್ಲ. ಮುಂಚೆ ಮಾಯೆಗೆ ಸ್ನೇಹಿತರಾಗಿದ್ದಿರಿ, ಈಗ ಚಾಲೆಂಜ್ ಮಾಡುತ್ತೀರಿ - ಮಾಯಾಜೀತರಾಗುತ್ತೇವೆ. ಚಾಲೆಂಜ್ ಮಾಡುತ್ತೀರಲ್ಲವೆ. ಇಲ್ಲವೆಂದರೆ ಯಾರ ಮೇಲೆ ವಿಜಯಿಯಾಗುತ್ತೀರಿ? ತಮ್ಮ ಮೇಲೆಯೇ? ವಿಜಯಿ ರತ್ನವಾಗುತ್ತೀರೆಂದರೆ ವಿಜಯವನ್ನು ಮಾಯೆಯ ಮೇಲೆಯೇ ಪ್ರಾಪ್ತಿ ಮಾಡಿಕೊಳ್ಳುತ್ತೀರಲ್ಲವೆ! ವಿಜಯ ಮಾಲೆಯಲ್ಲಿ ಪೋಣಿಸಲ್ಪಡುತ್ತೀರಿ, ಪೂಜ್ಯರಾಗುತ್ತೀರಿ. ಅಂದಮೇಲೆ ಮಾಯಾಜೀತರಾಗುವುದು ಅರ್ಥಾತ್ ವಿಜಯಿಯಾಗುವುದು. ಬ್ರಾಹ್ಮಣರಾಗುವುದು ಅರ್ಥಾತ್ ಮಾಯೆಗೆ ಚಾಲೆಂಜ್ ಮಾಡುವುದು. ಚಾಲೆಂಜ್ ಮಾಡುವವರು ಆಟವಾಡುತ್ತಾರೆ. ಬಂದಿತು ಮತ್ತು ಹೋಯಿತು. ದೂರದಿಂದಲೇ ತಿಳಿದು ಬಿಡುತ್ತಾರೆ, ದೂರದಿಂದಲೇ ಓಡಿಸಿ ಬಿಡುತ್ತಾರೆ. ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಸೇವೆಯಲ್ಲಂತು ಎಲ್ಲರೂ ಬಹಳ ಚೆನ್ನಾಗಿದ್ದೀರಿ. ಸೇವೆಯ ಜೊತೆ ಜೊತೆಗೆ ನಿರ್ವಿಘ್ನ ಸೇವೆಯ ರೆಕಾರ್ಡ್ ಇರಲಿ. ಹೇಗೆ ಪವಿತ್ರತೆಯ ರೆಕಾರ್ಡ್ ಆದಿಯಿಂದಲೇ ಇಡುತ್ತೀರಲ್ಲವೆ. ಇಂತಹವರು ಯಾರಿದ್ದಾರೆ, ಯಾರ ಸಂಕಲ್ಪದಲ್ಲಿಯೂ ಆದಿಯಿಂದ ಈಗಿನವರೆಗೂ ಅಪವಿತ್ರವಾಗಿಲ್ಲ. ಅಂದಮೇಲೆ ಈ ವಿಶೇಷತೆಯನ್ನು ನೋಡುತ್ತೀರಲ್ಲವೆ. ಕೇವಲ ಈ ಒಂದು ಪವಿತ್ರತೆಯ ಮಾತಿನಿಂದ ಪಾಸ್-ವಿತ್-ಆನರ್ ಆಗುವುದಿಲ್ಲ. ಆದರೆ ಸೇವೆಯಲ್ಲಿ, ಸ್ವ ಸ್ಥಿತಿಯಲ್ಲಿ, ಸಂಪರ್ಕ, ಸಂಬಂಧದಲ್ಲಿ, ನೆನಪಿನಲ್ಲಿ, ಎಲ್ಲದರಲ್ಲಿಯೂ ಯಾರು ಆದಿಯಿಂದ ಈಗಿನವರೆಗೂ ಅಚಲರಿದ್ದಾರೆ, ಏರುಪೇರಿನಲ್ಲಿ ಬರುವುದಿಲ್ಲ, ವಿಘ್ನಗಳಿಗೆ ವಶೀಭೂತರಾಗುವುದಿಲ್ಲ. ತಿಳಿಸಿದೆವಲ್ಲವೆ - ವಿಘ್ನಗಳಿಗೆ ವಶರಾಗಬಾರದು, ಸ್ವಯಂ ತಾವು ಯಾರ ಮುಂದೆಯೂ ವಿಘ್ನ ರೂಪವಾಗಬಾರದು. ಇದಕ್ಕೂ ಸಹ ಅಂಕಗಳು ಜಮಾ ಆಗುತ್ತದೆ. ಒಂದು ಪವಿತ್ರತೆ, ಇನ್ನೊಂದು ಅವ್ಯಭಿಚಾರಿ ನೆನಪು. ನೆನಪಿನ ಮಧ್ಯೆ ಸ್ವಲ್ಪವೂ ವಿಘ್ನವಾಗಬಾರದು. ಇದೇ ರೀತಿ ಸೇವೆಯಲ್ಲಿ ಸದಾ ನಿರ್ವಿಘ್ನವಾಗಿರಿ ಮತ್ತು ಗುಣಗಳಲ್ಲಿ ಸದಾ ಸಂತುಷ್ಟವಾಗಿರಿ ಮತ್ತು ಸಂತುಷ್ಟಗೊಳಿಸುವವರಾಗಿರಿ. ಸಂತುಷ್ಟತೆಯ ಗುಣವು ಎಲ್ಲಾ ಗುಣಗಳ ಧಾರಣೆಯ ದರ್ಪಣವಾಗಿದೆ. ಅಂದಮೇಲೆ ಗುಣಗಳಲ್ಲಿ ಸಂತುಷ್ಟತೆಯು ಸ್ವಯಂ ಪ್ರತಿ ಮತ್ತು ಅನ್ಯರಿಂದಲೂ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾಗುತ್ತದೆ. ಇದು ಪಾಸ್-ವಿತ್-ಆನರ್ ಆಗುವ ಚಿಹ್ನೆಯಾಗಿದೆ, ಅಷ್ಟ ರತ್ನಗಳಲ್ಲಿ ಬರುವ ಚಿಹ್ನೆಯಾಗಿದೆ. ಎಲ್ಲದರಲ್ಲಿಯೂ ಅಂಕಗಳನ್ನು ತೆಗೆದುಕೊಳ್ಳುವವರಲ್ಲವೆ, ಅಥವಾ ಒಂದರಲ್ಲಿಯೇ ಎಲ್ಲವೂ ಇದೆ ಎನ್ನುವವರೇ! ಸೇವೆಯಲ್ಲಿ ಚೆನ್ನಾಗಿ ಮಾಡುತ್ತಿದ್ದೇನೆ ಅಷ್ಟೇ! ಎನ್ನುವಿರಾ. ಶುಭಾಷಯಗಳನ್ನಂತು ಬಾಪ್ದಾದಾರವರು ಕೊಡುತ್ತಿದ್ದಾರೆ. ಅಷ್ಟ ರತ್ನವಾಗಬೇಕು, ಇಷ್ಟ ದೇವ/ದೇವಿ ಆಗಬೇಕಾಗಿದೆ. ಅಷ್ಟ ರತ್ನವಾಗುತ್ತೀರೆಂದರೆ ಇಷ್ಟದೇವನೂ ಸಹ ಅಷ್ಟೇ ಮಹಾನರಾಗುತ್ತಾರೆ. ಅದಕ್ಕಾಗಿ ಮೂರು ಮಾತುಗಳನ್ನು ಇಡೀ ವರ್ಷಕ್ಕಾಗಿ ನೆನಪಿಟ್ಟುಕೊಳ್ಳಬೇಕು ಮತ್ತು ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ ಮತ್ತು ಈ ಮೂರು ಮಾತುಗಳೇನಾದರೂ ಸ್ವಲ್ಪ ಸಂಕಲ್ಪದಲ್ಲಿದ್ದರೂ ವಿದಾಯಿ(ಬೀಳ್ಕೊಡುಗೆ) ಕೊಟ್ಟು ಬಿಡಬೇಕಾಗಿದೆ. ಇಂದು ಶುಭಾಷಯಗಳ ದಿನವಾಗಿದೆಯಲ್ಲವೆ. ಯಾವಾಗ ಅದಕ್ಕೆ ವಿದಾಯಿ ಕೊಡುತ್ತೀರೆಂದರೆ ವಿದಾಯಿಯಲ್ಲಿ ಏನು ಮಾಡುತ್ತೀರಿ? (ಕಲ್ಲು ಸಕ್ಕರೆ, ಬಾದಾಮಿ, ಏಲಕ್ಕಿ ಕೊಡುತ್ತಾರೆ) ಅದರಲ್ಲಿಯೂ ಮೂರು ವಸ್ತುಗಳಿರುತ್ತದೆ. ಅಂದಮೇಲೆ ಬಾಪ್ದಾದಾರವರಿಗೂ ಮೂರು ವಸ್ತುಗಳನ್ನು ಕೊಡುತ್ತೀರಲ್ಲವೆ. ವಿದಾಯಿಯಲ್ಲ, ಶುಭಾಷಯಗಳಿದೆ. ಆದ್ದರಿಂದಲೇ ಮುಖ ಮಧುರ ಮಾಡಿಸುತ್ತೀರಿ. ಅಂದಮೇಲೆ ಹೇಗೆ ಇಲ್ಲಿ ಮೂರು ವಸ್ತುಗಳನ್ನು ಏತಕ್ಕಾಗಿ ಕೊಡುತ್ತೀರಿ? ನಂತರ ಬೇಗ ಬರುವ ನೆನಪು ಬರುತ್ತದೆ. ಬಾಪ್ದಾದಾರವರೂ ಸಹ ಇಂದು ಮೂರು ಮಾತುಗಳನ್ನು ತಿಳಿಸುತ್ತಿದ್ದಾರೆ, ಅದು ಸೇವೆಯಲ್ಲಿ ಕೆಲವೊಮ್ಮೆ ವಿಘ್ನ ರೂಪವೂ ಆಗಿ ಬಿಡುತ್ತದೆ. ಆದ್ದರಿಂದ ಬಾಪ್ದಾದಾರವರು ಮೂರು ಮಾತುಗಳ ಬಗ್ಗೆ ವಿಶೇಷವಾಗಿ ಮತ್ತೆ ಗಮನ ತರಿಸುತ್ತಿದ್ದಾರೆ, ಆ ಗಮನದಿಂದ ಸ್ವತಹವಾಗಿಯೇ ಪಾಸ್-ವಿತ್-ಆನರ್ ಆಗಿ ಬಿಡುತ್ತೀರಿ.

ಒಂದು ಮಾತು - ಯಾವುದೇ ಪ್ರಕಾರದ ಅಲ್ಪಕಾಲದ ಸೆಳೆತವಿರಬಾರದು. ತಂದೆಯ ಸೆಳೆತವು ಬೇರೆ ಮಾತಾಗಿದೆ ಆದರೆ ಅಲ್ಪಕಾಲದರ ಸೆಳೆತವಿರಬಾರದು. ಇನ್ನೊಂದು - ಯಾವುದೇ ಪ್ರಕಾರದಲ್ಲಿ ಸ್ವಯಂನದು ಸ್ವಯಂನೊಂದಿಗೆ ಅಥವಾ ಮತ್ತ್ಯಾರೊಂದಿಗೂ ಒತ್ತಡ ಅರ್ಥಾತ್ ಆಕರ್ಷಣೆಯಿರಬಾರದು. ಸೆಳೆತವಿರಬಾರದು, ಮಾಯೆಯೊಂದಿಗೆ ಯುದ್ಧಕ್ಕೆ ಬದಲು ಪರಸ್ಪರದಲ್ಲಿ ಆಕರ್ಷಣೆಯಾಗಬಾರದು. ಮೂರನೆಯದು - ಯಾವುದೇ ಪ್ರಕಾರದ ಬಲಹೀನ ಸ್ವಭಾವವಿರಬಾರದು. ಸೆಳೆತ, ಒತ್ತಡ ಮತ್ತು ಬಲಹೀನ ಸ್ವಭಾವ. ವಾಸ್ತವದಲ್ಲಿ ಸ್ವಭಾವ ಶಬ್ಧವು ಬಹಳ ಚೆನ್ನಾಗಿದೆ. ಸ್ವಭಾವ ಅರ್ಥಾತ್ ಸ್ವಯಂನ ಭಾವ. ಸ್ವ ಎಂದು ಶ್ರೇಷ್ಠಕ್ಕೆ ಹೇಳಲಾಗುತ್ತದೆ. ಶ್ರೇಷ್ಠ ಭಾವವಿದೆ, ಸ್ವಯಂನ ಭಾವವಿದೆ, ಆತ್ಮಾಭಿಮಾನವಿದೆ. ಆದರೆ ಭಾವ-ಸ್ವಭಾವ, ಭಾವ-ಸ್ವಭಾವ ಶಬ್ಧವನ್ನು ಬಹಳಷ್ಟು ಹೇಳುತ್ತೀರಲ್ಲವೆ. ಅಂದಮೇಲೆ ಇದು ಬಲಹೀನ ಸ್ವಭಾವವಾಗಿದೆ. ಅದು ಸಮಯ-ಸಮಯದಲ್ಲಿ ಹಾರುವ ಕಲೆಯಲ್ಲಿ ವಿಘ್ನರೂಪವಾಗಿ ಬಿಡುತ್ತದೆ. ಅದಕ್ಕೆ ತಾವುಗಳು ರಾಯಲ್ ರೂಪದಲ್ಲಿ ಹೇಳುತ್ತೀರಿ - ನನ್ನ ಸ್ವಭಾವವೇ ಹೀಗಿದೆ. ಸ್ವಭಾವವು ಶ್ರೇಷ್ಠವಿದೆಯೆಂದರೆ ತಂದೆಯ ಸಮಾನ ಇದ್ದೀರಿ. ವಿಘ್ನ ರೂಪವಾಗುತ್ತದೆಯೆಂದರೆ ಬಲಹೀನ ಸ್ವಭಾವವಿದೆ. ಅಂದಮೇಲೆ ಮೂರು ಶಬ್ಧಗಳ ಅರ್ಥವನ್ನು ತಿಳಿದಿದ್ದೀರಲ್ಲವೆ. ಕೆಲವು ಪ್ರಕಾರದ ಒತ್ತಡವಿದೆ, ಒತ್ತಡಕ್ಕೆ ಕಾರಣವಾಗಿದೆ - "ನಾನು ಎನ್ನುವುದು", ಇದು ದೇಹಾಭಿಮಾನದ್ದಾಗಿದೆ. ಒಂದಿದೆ - ನಾನು ಶ್ರೇಷ್ಠ ಆತ್ಮನಿದ್ದೇನೆ ಮತ್ತು ಒಂದಿದೆ- ನಾನು ಇಂತಹವನಿದ್ದೇನೆ, ನಾನು ಬುದ್ಧಿವಂತನಿದ್ದೇನೆ, ನಾನು ಯೋಗಿಯಿದ್ದೇನೆ, ನಾನು ಜ್ಞಾನಿಯಿದ್ದೇನೆ. ನಾನು ಸೇವೆಯಲ್ಲಿ ಮೊದಲ ನಂಬರಿನಲ್ಲಿದ್ದೇನೆ. ಈ ನಾನು ಎನ್ನುವುದು ಒತ್ತಡವನ್ನುಂಟು ಮಾಡುತ್ತದೆ. ಇದೇ ಕಾರಣದಿಂದ ಸೇವೆಯಲ್ಲಿ ಎಲ್ಲೆಲ್ಲಿ ತೀವ್ರ ಗತಿಯೇನಾಗಬೇಕು, ಅದು ತೀವ್ರ ಗತಿಗೆ ಬದಲು ನಿಧಾನದ ಗತಿಯಾಗಿ ಬಿಡುತ್ತದೆ. ನಡೆಯುತ್ತಿರುತ್ತಾರೆ ಆದರೆ ತೀವ್ರವಾಗಲು ಸಾಧ್ಯವಿಲ್ಲ. ಗತಿಯನ್ನು ತೀವ್ರ ಮಾಡಲು ಆಧಾರವಾಗಿದೆ - ಇನ್ನೊಬ್ಬರು ಮುಂದುವರೆಯುವುದನ್ನು ನೋಡಿ, ಸದಾ ಅನ್ಯರನ್ನು ಮುಂದುವರೆಸುವುದೇ ಸ್ವಯಂ ಮುಂದುವರೆಯುವುದಾಗಿದೆ. ಸೇವೆಯಲ್ಲಿ ನಾನು ಎನ್ನುವುದೇನು ಬರುತ್ತದೆಯೆಂದರೆ ತಿಳಿಯುತ್ತೀರಲ್ಲವೆ? ಈ ನಾನು ಎನ್ನುವುದೇ ತೀವ್ರ ಗತಿಯನ್ನು ಸಮಾಪ್ತಿ ಮಾಡಿ ಬಿಡುತ್ತದೆ. ತಿಳಿಯಿತೆ!

ಈ ಮೂರು ಮಾತುಗಳನ್ನಂತು ಕೊಡುತ್ತೀರಲ್ಲವೆ ಅಥವಾ ಮತ್ತೆ ಜೊತೆಯಲ್ಲಿ ತೆಗೆದುಕೊಂಡು ಹೋಗುವಿರಾ! ಇದಕ್ಕೆ ಹೇಳಲಾಗುತ್ತದೆ - ತ್ಯಾಗದಿಂದ ಸಿಕ್ಕಿರುವ ಭಾಗ್ಯ. ಸದಾ ಹಂಚಿ ತಿನ್ನಿರಿ ಮತ್ತು ವೃದ್ಧಿ ಮಾಡಿರಿ. ಈ ತ್ಯಾಗದ ಭಾಗ್ಯವು ಸಿಕ್ಕಿದೆ. ಸೇವೆಯ ಸಾಧನವು - ಈ ತ್ಯಾಗದ ಭಾಗ್ಯವಾಗಿದೆ. ಆದರೆ ಈ ಭಾಗ್ಯವನ್ನು ನನ್ನದರಲ್ಲಿ ಸೀಮಿತವಾಗಿಡುತ್ತೀರೆಂದರೆ ಹೆಚ್ಚಾಗುವುದಿಲ್ಲ. ಸದಾ ತ್ಯಾಗದ ಭಾಗ್ಯದ ಫಲವನ್ನು, ಅನ್ಯರನ್ನೂ ಸಹಯೋಗಿಯನ್ನಾಗಿ ಮಾಡುತ್ತಾ, ಹಂಚುತ್ತಾ ಮುಂದುವರೆಯಿರಿ. ಕೇವಲ ನಾನು, ನಾನು ಎನ್ನಬಾರದು, ತಾವೂ ತಿನ್ನಿರಿ. ಅದನ್ನು ಹಂಚುತ್ತಾ ಒಬ್ಬರಿನ್ನೊಬ್ಬರಲ್ಲಿ ಕೈ ಸೇರಿಸುತ್ತಾ ಮುಂದುವರೆಯಿರಿ (ಸಹಯೋಗ ಕೊಡಿ). ಈಗ ಸೇವೆಯ ಮಧ್ಯದಲ್ಲಿ ಈ ಪ್ರಕಂಪನಗಳು ಕಾಣಿಸುತ್ತದೆ. ಅಂದಮೇಲೆ ಇದರಲ್ಲಿ ವಿಶಾಲ ಹೃದಯಿಯಾಗಿ ಬಿಡಿ. ಇವರಿಗೇ ಹೇಳಲಾಗುತ್ತದೆ - ಓಟೇ ಸೋ ಅರ್ಜುನ್(ಮಾಡುವವರು ಮೊದಲು) ಒಬ್ಬರು ಇನ್ನೊಬ್ಬರನ್ನು ನೋಡಬೇಡಿ. ಇವರೂ ಸಹ ಹೀಗೆ ಮಾಡುತ್ತಾರಲ್ಲವೆ! ಇದಂತು ಆಗುತ್ತಲೇ ಇರುತ್ತದೆ, ಆದರೆ ನಾನು ವಿಶೇಷತೆಯನ್ನು ತೋರಿಸುವುದಕ್ಕಾಗಿ ನಿಮಿತ್ತರಾಗಿ ಬಿಡಿ. ಬ್ರಹ್ಮಾ ತಂದೆಯ ವಿಶೇಷತೆಯೇನಿತ್ತು! ಸದಾ ಮಕ್ಕಳನ್ನು ಮುಂದಿಟ್ಟರು. ನನಗಿಂತಲೂ ಮಕ್ಕಳು ಬುದ್ಧಿವಂತರಿದ್ದಾರೆ, ಮಕ್ಕಳು ಮಾಡುವರು! ಇಲ್ಲಿಯವರೆಗೆ ತ್ಯಾಗದ, ಭಾಗ್ಯದ ತ್ಯಾಗವನ್ನೂ ಮಾಡಿದರು. ಒಂದುವೇಳೆ ಕೆಲವರು ಪ್ರೀತಿಯ ಕಾರಣ, ಪ್ರಾಪ್ತಿಯ ಕಾರಣ ಬ್ರಹ್ಮನ ಮಹಿಮೆಯನ್ನು ಮಾಡುತ್ತಿದ್ದರು, ಆಗ ಅವರಿಗೂ ಬಾಬಾರರವರ ನೆನಪು ತರಿಸುತ್ತಿದ್ದರು. ಬ್ರಹ್ಮನಿಂದ ಆಸ್ತಿಯು ಸಿಗುವುದಿಲ್ಲ. ಬ್ರಹ್ಮನ ಫೋಟೋ ಇಟ್ಟುಕೊಳ್ಳಬೇಡಿ. ಎಲ್ಲವೂ ಬ್ರಹ್ಮನೇ ಆಗಿದ್ದಾರೆ ತಿಳಿಯಬೇಡಿ. ಇದಕ್ಕೆ ಹೇಳಲಾಗುವುದು - ತ್ಯಾಗದ ಭಾಗ್ಯವನ್ನೂ ತ್ಯಾಗ ಮಾಡಿ ಸೇವೆಯಲ್ಲಿ ತೊಡಗಿ ಬಿಡುವುದು. ಇದರಲ್ಲಿ ಡಬಲ್ ಮಹಾದಾನಿಯಾಗಿ ಬಿಡುವಿರಿ. ಅನ್ಯರು ಆಫರ್ ಮಾಡಲಿ, ಸ್ವಯಂ ತನ್ನ ಕಡೆ ಸೆಳೆಯಬಾರದು. ಒಂದುವೇಳೆ ಸ್ವಯಂ ತನ್ನ ಮಹಿಮೆಯನ್ನು ಮಾಡುತ್ತಾರೆ, ತನ್ನ ಕಡೆ ಸೆಳೆಯುತ್ತಾರೆಂದರೆ, ಅದಕ್ಕೆ ಯಾವ ಶಬ್ಧಗಳನ್ನು ಹೇಳುತ್ತಾರೆ! ಮುರುಳಿಗಳಲ್ಲಿ ಕೇಳಿದ್ದೀರಲ್ಲವೆ. ಹಾಗಾಗಬಾರದು, ಯಾವುದನ್ನು ಸ್ವಯಂ ತನ್ನ ಕಡೆಗೆ ಸೆಳೆಯುವ ಸೆಳೆತವನ್ನೆಂದಿಗೂ ಮಾಡದಿರಿ. ಸಹಜವಾಗಿ ಸಿಕ್ಕಿತು - ಅದು ಶ್ರೇಷ್ಠ ಭಾಗ್ಯವಾಗಿದೆ. ಅದನ್ನು ಎಳೆದು ತೆಗೆದುಕೊಳ್ಳುವುದಕ್ಕೆ ಶ್ರೇಷ್ಠ ಭಾಗ್ಯವೆಂದು ಹೇಳುವುದಿಲ್ಲ. ಅದರಲ್ಲಿ ಸಿದ್ಧಿಯಾಗುವುದಿಲ್ಲ. ಪರಿಶ್ರಮ ಹೆಚ್ಚು, ಸಫಲತೆ ಕಡಿಮೆ ಏಕೆಂದರೆ ಎಲ್ಲರ ಆಶೀರ್ವಾದ ಸಿಗುವುದಿಲ್ಲ. ಸಹಜವಾಗಿ ಏನು ಸಿಗುತ್ತದೆಯೋ ಅದರಲ್ಲಿ ಎಲ್ಲರ ಆಶೀರ್ವಾದಗಳಿರುತ್ತದೆ. ತಿಳಿಯಿತೆ!

ಒತ್ತಡವೆಂದರೆ ಏನು! ಸೆಳೆತವನ್ನಂತು ಆ ದಿನದಂದು ಸ್ಪಷ್ಟಗೊಳಿಸಿದ್ದೆವು. ಯಾವುದೇ ಬಲಹೀನ ಸ್ವಭಾವವಿರಬಾರದು. ಹೀಗೂ ತಿಳಿಯದಿರಿ, ನಾನಂತು ಈ ದೇಶದಲ್ಲಿ ಇರುವವನಾಗಿದ್ದೇನೆ. ಆದ್ದರಿಂದ ನನ್ನ ಸ್ವಭಾವ, ನನ್ನ ಚಲನೆ, ನಾನಿರುವುದು ಹೀಗೆ ಇರುತ್ತೇನೆ, ಹೀಗೆ ಅಲ್ಲ. ದೇಶದ ಕಾರಣ, ಧರ್ಮದ ಕಾರಣ, ಸಂಗದ ಕಾರಣ ಹೀಗೆ ನನ್ನ ಸ್ವಭಾವವಿದೆ - ಇದಲ್ಲ. ತಾವು ಯಾವ ದೇಶದವರಾಗಿದ್ದೀರಿ! ಇದಂತು ಸೇವೆಗಾಗಿ ನಿಮಿತ್ತ ಸ್ಥಾನವು ಸಿಕ್ಕಿರುವುದಾಗಿದೆ. ಯಾರೂ ವಿದೇಶದವರಲ್ಲ, ಈ ನಶೆಯೂ ಇರಬಾರದು - ನಾನು ಭಾರತವಾಸಿಯಾಗಿದ್ದೇನೆ. ಎಲ್ಲರೂ ಒಬ್ಬ ತಂದೆಯವರಾಗಿದ್ದೀರಿ. ಭಾರತವಾಸಿಗಳೂ ಸಹ ಬ್ರಾಹ್ಮಣ ಆತ್ಮರಾಗಿದ್ದಾರೆ. ವಿದೇಶದಲ್ಲಿರುವವರೂ ಸಹ ಬ್ರಾಹ್ಮಣ ಆತ್ಮರಾಗಿದ್ದಾರೆ, ಅಂತರವಿಲ್ಲ. ಹೀಗೂ ಅಲ್ಲ - ಭಾರತವಾಸಿಗಳು ಹೀಗಿದ್ದಾರೆ, ವಿದೇಶಿಗಳು ಹೀಗಿದ್ದಾರೆ. ಈ ಶಬ್ಧವನ್ನೆಂದಿಗೂ ಹೇಳಬಾರದು. ಎಲ್ಲರೂ ಬ್ರಾಹ್ಮಣ ಆತ್ಮರಾಗಿದ್ದಾರೆ. ಇದಂತು ಸೇವೆಗಾಗಿ ಸ್ಥಾನವಿದೆ. ತಿಳಿಸಿದ್ದೇವಲ್ಲವೆ - ತಾವು ವಿದೇಶದಲ್ಲೇಕೆ ತಲುಪಿದ್ದೀರಿ? ಅಲ್ಲಿ ಜನ್ಮವನ್ನೇಕೆ ತೆಗೆದುಕೊಂಡಿದ್ದೀರಿ? ಭಾರತದಲ್ಲೇಕೆ ತೆಗೆದುಕೊಂಡಿಲ್ಲ? ಅಲ್ಲಿ ಸೇವಾಸ್ಥಾನವನ್ನು ತೆರೆಯುವುದಕ್ಕಾಗಿ ಹೋಗಿದ್ದೀರಿ. ಇಲ್ಲವೆಂದರೆ ಭಾರತವಾಸಿಗಳಿಗೆ ವೀಸಾಗಾಗಿ ಎಷ್ಟೊಂದು ಸಮಸ್ಯೆಯಾಗುತ್ತದೆ. ತಾವೆಲ್ಲರಂತು ಸಹಜವಾಗಿ ಅಲ್ಲಿದ್ದೀರಿ. ಎಷ್ಟೊಂದು ದೇಶಗಳಲ್ಲಿ ಸೇವೆಯಾಗುತ್ತಿದೆ! ಅಂದಮೇಲೆ ಸೇವೆಗಾಗಿ ವಿದೇಶಕ್ಕೆ ಹೋಗಿದ್ದೀರಿ. ಬಾಕಿ ಎಲ್ಲರೂ ಬ್ರಾಹ್ಮಣ ಆತ್ಮರೇ ಇರುವುದು. ಆದ್ದರಿಂದ ಯಾರೇ ಯಾವುದೇ ಆಧಾರದಲ್ಲಿ ಸ್ವಭಾವವನ್ನು ಮಾಡಿಕೊಳ್ಳಬಾರದು. ಬಾಬಾರವರ ಸ್ವಭಾವವೇನಿದೆ, ಅದು ಮಕ್ಕಳ ಸ್ವಭಾವವಾಗಿದೆ. ಬಾಬಾರವರ ಸ್ವಭಾವವೇನಾಗಿದೆ? ಸದಾ ಪ್ರತಿಯೊಂದು ಆತ್ಮನ ಪ್ರತಿ ಕಲ್ಯಾಣ ಅಥವಾ ದಯಾ ಭಾವನೆಯ ಸ್ವಭಾವ. ಪ್ರತಿಯೊಬ್ಬರನ್ನೂ ಶ್ರೇಷ್ಠ ಮಟ್ಟಕ್ಕೆ ತರುವ ಸ್ವಭಾವ, ಮಧುರತೆಯ ಸ್ವಭಾವ, ನಿರ್ಮಾಣತೆಯ ಸ್ವಭಾವವಿದೆ. ನನ್ನ ಸ್ವಭಾವವು ಇಂತಹದ್ದಾಗಿದೆ - ಇದನ್ನೆಂದಿಗೂ ಹೇಳದಿರಿ. ನನ್ನದು ಎಲ್ಲಿಂದ ಬಂದಿತು. ನನ್ನದು ಜೋರಾಗಿ ಮಾತನಾಡುವ ಸ್ವಭಾವವಿದೆ, ನನ್ನಲ್ಲಿ ಆವೇಶದಲ್ಲಿ ಬರುವ ಸ್ವಭಾವವಿದೆ. ಸ್ವಭಾವದ ಕಾರಣ ಆಗಿ ಬಿಡುತ್ತದೆ, ಇದು ಮಾಯೆಯಾಗಿದೆ. ಕೆಲವರಲ್ಲಿ ಅಭಿಮಾನದ ಸ್ವಭಾವ, ಈರ್ಷ್ಯೆಯ, ಆವೇಶದಲ್ಲಿ ಬರುವ ಸ್ವಭಾವವಿರುತ್ತದೆ, ಹೃದಯ ವಿಧೀರ್ಣರಾಗುವ ಸ್ವಭಾವವಿರುತ್ತದೆ. ಒಳ್ಳೆಯವರಾಗಿದ್ದರೂ ತನ್ನನ್ನು ಒಳ್ಳೆಯವನೆಂದು ತಿಳಿಯುವುದಿಲ್ಲ. ಸದಾ ತಮ್ಮನ್ನು ಬಲಹೀನರೆಂದೇ ತಿಳಿಯುವರು. ನಾನು ಮುಂದೆ ಹೋಗಲು ಸಾಧ್ಯವಿಲ್ಲ, ಮಾಡಲು ಸಾಧ್ಯವಿಲ್ಲ. ಈ ಹೃದಯ ವಿಧೀರ್ಣರಾಗುವ ಸ್ವಭಾವವೂ ಸಹ ರಾಂಗ್ ಆಗಿದೆ. ಅಭಿಮಾನದಲ್ಲಿ ಬರಬಾರದು. ಆದರೆ ಸ್ವಮಾನದಲ್ಲಿರಿ. ಈ ಪ್ರಕಾರದ ಸ್ವಭಾವಕ್ಕೆ ಬಲಹೀನ ಸ್ವಭಾವವೆಂದು ಹೇಳಲಾಗುತ್ತದೆ. ಈ ಮೂರು ಮಾತುಗಳ ಗಮನವನ್ನು ಇಡೀ ವರ್ಷದಲ್ಲಿ ಇಟ್ಟುಕೊಳ್ಳಿರಿ. ಈ ಮೂರು ಮಾತುಗಳಿಂದ ಸುರಕ್ಷಿತವಾಗಿರಿ. ಕಷ್ಟವೇನೂ ಆಗುತ್ತಿಲ್ಲವಲ್ಲವೆ. ಜೊತೆಗಾರರು ಆದಿಯಿಂದ ಅಂತ್ಯದವರೆಗೂ ಸಹಯೋಗಿ ಜೊತೆಗಾರರಿದ್ದರೆ. ಜೊತೆಗಾರರಂತು ಸಮಾನರಿರಬೇಕಲ್ಲವೆ. ಒಂದುವೇಳೆ ಜೊತೆಗಾರರಲ್ಲಿ ಸಮಾನತೆಯಿಲ್ಲವೆಂದರೆ, ಜೊತೆಗಾರರು ಪ್ರೀತಿಯ ರೀತಿಯನ್ನು ನಿಭಾಯಿಸಲು ಸಾಧ್ಯವಿಲ್ಲ. ಒಳ್ಳೆಯದು - ಇದಂತು ಮೂರು ಮಾತುಗಳ ಗಮನದಲ್ಲಿಟ್ಟುಕೊಳ್ಳಿರಿ. ಆದರೆ ಈ ಮೂರು ಮಾತುಗಳಿಂದ ಸದಾ ದೂರವಾಗಿರಲು ಮತ್ತು ಮೂರು ಮಾತುಗಳನ್ನು ನೆನಪಿಟ್ಟುಕೊಳ್ಳಲು ಇರುವುದಾಗಿದೆ. ಇಂದು ಮೂರರ ಪಾಠವನ್ನು ಓದಿಸುತ್ತಿದ್ದೇವೆ. ಸದಾ ತಮ್ಮ ಜೀವನದಲ್ಲಿ ಒಂದು ಸಮತೋಲನವನ್ನಿಟ್ಟುಕೊಳ್ಳಿರಿ. ಎಲ್ಲಾ ಮಾತುಗಳಲ್ಲಿ ಬ್ಯಾಲೆನ್ಸ್ ಇರಲಿ. ನೆನಪು ಮತ್ತು ಸೇವೆಯಲ್ಲಿ ಬ್ಯಾಲೆನ್ಸ್. ಸ್ವಮಾನ, ಅಭಿಮಾನವನ್ನು ಸಮಾಪ್ತಿ ಮಾಡುತ್ತದೆ. ಸ್ವಮಾನದಲ್ಲಿ ಸ್ಥಿತರಾಗಿರಿ. ಇವೆಲ್ಲಾ ಮಾತುಗಳು ಸ್ಮೃತಿಯಲ್ಲಿರಲಿ. ಹೆಚ್ಚು ರಮಣೀಕವೂ ಬೇಡ, ಹೆಚ್ಚು ಗಂಭೀರತೆಯೂ ಬೇಡ, ಎರಡರ ಬ್ಯಾಲೆನ್ಸ್ ಇರಲಿ. ಸಮಯದಲ್ಲಿ ರಮಣೀಕ, ಸಮಯದಲ್ಲಿ ಗಂಭೀರತೆ. ಅಂದಮೇಲೆ ಒಂದಿದೆ - ಬ್ಯಾಲೆನ್ಸ್, ಇನ್ನೊಂದು - ಸದಾ ಅಮೃತವೇಳೆಯಲ್ಲಿ ತಂದೆಯೊಂದಿಗೆ ವಿಶೇಷವಾಗಿ ಬ್ಲೆಸ್ಸಿಂಗ್ ತೆಗೆದುಕೊಳ್ಳಬೇಕು! ಪ್ರತಿನಿತ್ಯವೂ ಅಮೃತವೇಳೆಯಲ್ಲಿ ಬಾಪ್ದಾದಾರವರು ಮಕ್ಕಳ ಪ್ರತಿ ಬ್ಲೆಸ್ಸಿಂಗ್ನ ಜೋಳಿಗೆಯನ್ನು ತೆರೆಯುತ್ತಾರೆ. ಅದರಿಂದ ಹೆಚ್ಚು ತೆಗೆದುಕೊಳ್ಳಬೇಕೆಂದರೆ ತೆಗೆದುಕೊಳ್ಳಬೇಕು. ಹಾಗಾದರೆ ಬ್ಯಾಲೆನ್ಸ್, ಬ್ಲೆಸ್ಸಿಂಗ್, ಮೂರನೆಯದು - ಬ್ಲಿಸ್ಫುಲ್ ಲೈಫ್. ಮೂರು ಮಾತುಗಳು ಸ್ಮೃತಿಯಲ್ಲಿರುವುದರಿಂದ, ಆ ಮೂರು ಮಾತುಗಳು ಯಾವುದರಲ್ಲಿ ಗಮನ ಕೊಡಬೇಕಾಗಿದೆ, ಅದು ಸ್ವತಹವಾಗಿಯೇ ಸಮಾಪ್ತಿಯಾಗಿ ಬಿಡುತ್ತದೆ. ತಿಳಿಯಿತೆ! ಒಳ್ಳೆಯದು. ಇನ್ನೂ ಮೂರು ಮಾತುಗಳನ್ನು ಕೇಳಿರಿ!

ಲಕ್ಷ್ಯ ರೂಪದಲ್ಲಿ ಅಥವಾ ಧಾರಣೆಯ ರೂಪದಲ್ಲಿ ವಿಶೇಷವಾಗಿ ಮೂರು ಮಾತುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದನ್ನು ಬಿಡಬೇಕು ಮತ್ತು ಅದನ್ನು ಧಾರಣೆ ಮಾಡಿಕೊಳ್ಳಬೇಕು. ಬಿಡುವುದನ್ನಂತು ಬಿಟ್ಟಿರಲ್ಲವೆ ಸದಾಕಾಲಕ್ಕಾಗಿ, ಅದನ್ನು ನೆನಪು ಮಾಡುವ ಅವಶ್ಯಕತೆಯಿರುವುದಿಲ್ಲ. ಆದರೆ ಈ ಮೂರು ಮಾತುಗಳನ್ನೇನು ತಿಳಿಸಿದೆವು, ಇದನ್ನು ಸ್ಮೃತಿಯಲ್ಲಿಟ್ಟುಕೊಳ್ಳಿರಿ ಮತ್ತು ಧಾರಣಾ ಸ್ವರೂಪದಲ್ಲಿ ವಿಶೇಷ ನೆನಪಿಟ್ಟುಕೊಳ್ಳಿರಿ. ಒಂದು - ಎಲ್ಲಾ ಮಾತುಗಳಲ್ಲಿ ರಿಯಾಲಿಟಿ ಇರಲಿ, ಮಿಕ್ಸ್ ಆಗುವುದು ಬೇಡ. ಇದಕ್ಕೆ ಹೇಳಲಾಗುತ್ತದೆ - ರಿಯಾಲಿಟಿ. ಸಂಕಲ್ಪದಲ್ಲಿ, ಮಾತಿನಲ್ಲಿ, ಎಲ್ಲಾ ಮಾತುಗಳಲ್ಲಿ ರಿಯಲ್. ಸತ್ಯ ಹೃದಯದವರ ಮೇಲೆ ಪ್ರಭು ಪ್ರಸನ್ನವಾಗುವರು. ಸತ್ಯವಾಗಿರುವುದರ ಚಿಹ್ನೆಯೇನಾಗಿರುತ್ತದೆ? ಸತ್ಯವಾಗಿದ್ದರೆ ನರ್ತಿಸುತ್ತಿರುತ್ತಾರೆ. ಯಾರು ಸತ್ಯವಾಗಿರುತ್ತಾರೆ ಅವರು ಸದಾ ಖುಷಿಯಲ್ಲಿ ನರ್ತಿಸುತ್ತಿರುತ್ತಾರೆ. ಅಂದಮೇಲೆ ಒಂದು ರಿಯಾಲಿಟಿ, ಇನ್ನೊಂದು ರಾಯಲ್ಟಿ. ಚಿಕ್ಕ-ಚಿಕ್ಕ ಮಾತುಗಳಲ್ಲಿ ಎಂದಿಗೂ ಸಹ ಬುದ್ಧಿಯು ಬಾಗುವುದರಲ್ಲಿ ಬರಬಾರದು. ಹೇಗೆ ರಾಯಲ್ ಮಕ್ಕಳಿರುತ್ತಾರೆ, ಅವರೆಂದಿಗೂ ಚಿಕ್ಕದಾಗಿರುವ ವಸ್ತುಗಳಲ್ಲಿ ಕಣ್ಣು ಹೋಗುವುದಿಲ್ಲ. ಒಂದುವೇಳೆ ದೃಷ್ಟಿ ಹೋಯಿತೆಂದರೆ, ರಾಯಲ್ ಎಂದು ಹೇಳುವುದಿಲ್ಲ. ಯಾವುದೇ ಚಿಕ್ಕ-ಚಿಕ್ಕ ಮಾತುಗಳಲ್ಲಿ ಬುದ್ಧಿಯ ಬಾಗುವಿಕೆಯಾಯಿತೆಂದರೆ, ಅದಕ್ಕೆ ರಾಯಲ್ಟಿ ಎಂದು ಹೇಳುವುದಿಲ್ಲ. ಯಾರು ರಾಯಲ್ ಆಗಿರುತ್ತಾರೆ ಅವರು ಸದಾ ಪ್ರಾಪ್ತಿ ಸ್ವರೂಪರಾಗಿರುತ್ತಾರೆ. ಎಲ್ಲಿಯೂ ಕಣ್ಣು ಅಥವಾ ಬುದ್ಧಿಯು ಹೋಗುವುದಿಲ್ಲ - ಇದಕ್ಕೆ ಆತ್ಮಿಕ ರಾಯಲ್ಟಿ ಎಂದು ಹೇಳಲಾಗುತ್ತದೆ. ಬಟ್ಟೆಗಳ ರಾಯಲ್ಟಿ ಅಲ್ಲ. ರಿಯಾಲಿಟಿ, ರಾಯಲ್ಟಿ ಮತ್ತು ಮೂರನೆಯದು - ಯುನಿಟಿ. ಪ್ರತೀ ಮಾತಿನಲ್ಲಿ, ಸಂಕಲ್ಪದಲ್ಲಿ, ಮಾತಿನಲ್ಲಿ, ಕರ್ಮದಲ್ಲಿಯೂ ಸದಾ ಒಬ್ಬರಿನ್ನೊಬ್ಬರಲ್ಲಿ ಯುನಿಟಿ(ಏಕತೆ) ಕಾಣಿಸಲಿ. ಬ್ರಾಹ್ಮಣನೆಂದರೇ ಒಂದು. ಲಕ್ಷಾಂತರವಲ್ಲ. ಇದಕ್ಕೆ ಯುನಿಟಿ ಎಂದು ಹೇಳಲಾಗುತ್ತದೆ. ಇನ್ನೊಬ್ಬರನ್ನು ನೋಡಬಾರದು. ನಾವು ಬಯಸುತ್ತೇವೆ - ಯುನಿಟಿ ಮಾಡಲಿ ಆದರೆ ಇದನ್ನು ಮಾಡುವುದಿಲ್ಲ. ಒಂದುವೇಳೆ ತಾವು ಮಾಡುತ್ತೀರೆಂದರೆ, ಅವರಿಗೆ ಡಿಸ್ ಯುನಿಟಿಯ ಅವಕಾಶವೇ ಸಿಗುವುದಿಲ್ಲ. ಯಾರೇ ಕೈಯನ್ನು ಹೀಗೆ (ಮೇಲೆತ್ತಿರುವುದು), ಇನ್ನೊಬ್ಬರು ಮಾಡುವುದಿಲ್ಲವೆಂದರೆ ಶಬ್ಧವಾಗುವುದಿಲ್ಲ. ಒಂದುವೇಳೆ ಯಾರೇ ಡಿಸ್ ಯುನಿಟಿಯ ಕಾರ್ಯವನ್ನು ಮಾಡುತ್ತಾರೆ, ತಾವು ಯುನಿಟಿಯಲ್ಲಿರುತ್ತೀರೆಂದರೆ ಡಿಸ್ ಯುನಿಟಿಯವರೆಂದಿಗೂ ಸಹ ಡಿಸ್ ಯುನಿಟಿಯ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಯುನಿಟಿಯಲ್ಲಿ ಬರಲೇಬೇಕಾಗುತ್ತದೆ. ಆದ್ದರಿಂದ ಮೂರು ಮಾತುಗಳು - ರಿಯಾಲಿಟಿ, ರಾಯಲ್ಟಿ ಮತ್ತು ಯುನಿಟಿ. ಈ ಮೂರು ಮಾತುಗಳೇ ಸದಾ ತಂದೆಯ ಸಮಾನರಾಗುವುದರಲ್ಲಿ ಸಹಯೋಗಿಯಾಗುತ್ತಾರೆ. ತಿಳಿಯಿತೆ - ಇಂದು ಮೂರರ ಪಾಠವನ್ನು ಓದಿದಿರಲ್ಲವೆ. ಬಾಬಾರವರಿಗಂತು ಮಕ್ಕಳ ಮೇಲೆ ಹೆಮ್ಮೆಯಿದೆ. ಇಷ್ಟೂ ಯೋಗ್ಯ ಮಕ್ಕಳು ಮತ್ತು ಯೋಗಿ ಮಕ್ಕಳು, ಮತ್ತ್ಯಾವುದೇ ತಂದೆಗಿರಲು ಸಾಧ್ಯವಿಲ್ಲ. ಯೋಗ್ಯರೂ ಆಗಿರುವವರು, ಯೋಗಿಯೂ ಆಗಿರುವವರು ಮತ್ತು ಒಬ್ಬೊಬ್ಬರೂ ಪದಮಾಪದಮ ಭಾಗ್ಯಶಾಲಿಯಾಗಿರುವವರಿದ್ದೀರಿ. ಇಡೀ ಕಲ್ಪದಲ್ಲಿ ಇಷ್ಟು ಮತ್ತು ಇಂತಹ ಮಕ್ಕಳಿರಲು ಸಾಧ್ಯವಿಲ್ಲ. ಆದ್ದರಿಂದ ವಿಶೇಷವಾಗಿ ಅಮೃತವೇಳೆಯ ಸಮಯವನ್ನು ಬಾಪ್ದಾದಾರವರು ಬ್ರಾಹ್ಮಣ ಮಕ್ಕಳಿಗಾಗಿ ಏಕಿಟ್ಟಿದ್ದಾರೆ? ಏಕೆಂದರೆ ವಿಶೇಷವಾಗಿ ಬಾಪ್ದಾದಾರವರು ಪ್ರತಿಯೊಂದು ಮಕ್ಕಳ ವಿಶೇಷತೆಯನ್ನು, ಸೇವೆಯನ್ನು, ಗುಣಗಳನ್ನು ಸದಾ ತಮ್ಮ ಮುಂದೆ ತರುತ್ತಾರೆ. ಮತ್ತೇನು ಮಾಡುತ್ತಾರೆ? ಪ್ರತಿಯೊಂದು ಮಕ್ಕಳ ವಿಶೇಷತೆಯೇನಿದೆ, ಗುಣವೇನಿದೆ, ಸೇವೆಯೇನಿದೆ, ಅವರಿಗೆ ವಿಶೇಷ ವರದಾನದಿಂದ ಅವಿನಾಶಿಯನ್ನಾಗಿ ಮಾಡುತ್ತಾರೆ. ಆದ್ದರಿಂದ ವಿಶೇಷವಾಗಿ ಈ ಸಮಯದಲ್ಲಿ ಮಕ್ಕಳಿಗಾಗಿ ಇಟ್ಟಿದ್ದಾರೆ. ಅಮೃತವೇಳೆ ವಿಶೇಷ ಪಾಲನೆಯಿದೆ. ಪ್ರತಿಯೊಬ್ಬರಿಗೂ ಬಾಪ್ದಾದಾರವರು ಸ್ನೇಹದ ಸಹಯೋಗದ, ವರದಾನದ ಪಾಲನೆಯನ್ನು ಕೊಡುತ್ತಾರೆ. ತಿಳಿಯಿತೆ - ಏನು ಮಾಡುತ್ತಾರೆ ಮತ್ತು ತಾವುಗಳೇನು ಮಾಡುತ್ತೀರಿ? ಶಿವ ತಂದೆಯು ಸುಖದಾತನಾಗಿದ್ದಾರೆ, ಶಾಂತಿ ದಾತನಾಗಿದ್ದಾರೆ...... ಹೀಗೆ ಹೇಳುವಿರಲ್ಲವೆ ಮತ್ತು ತಂದೆಯವರು ಪಾಲನೆ ಕೊಡುತ್ತಾರೆ. ಹೇಗೆ ತಾಯಿ-ತಂದೆಯು ಮಕ್ಕಳನ್ನು ಬೆಳಗ್ಗೆ ತಯಾರು ಮಾಡುತ್ತಾರೆ, ಶುಭ್ರವಾಗಿ ತಯಾರು ಮಾಡಿ ಹೇಳುತ್ತಾರೆ - ಈಗ ಇಡೀ ದಿನ ತಿನ್ನಿ, ಕುಡಿಯಿರಿ, ಓದಿರಿ. ಬಾಪ್ದಾದಾರವರೂ ಸಹ ಅಮೃತವೇಳೆಯಲ್ಲಿ ಈ ಪಾಲನೆ ಕೊಡುತ್ತಾರೆ ಅರ್ಥಾತ್ ಇಡೀ ದಿನಕ್ಕಾಗಿ ಶಕ್ತಿಯನ್ನು ತುಂಬಿ ಬಿಡುತ್ತಾರೆ. ವಿಶೇಷ ಪಾಲನೆಯ ಸಮಯವು ಇದಾಗಿದೆ. ಇದು ವಿಶೇಷ ವರದಾನದ, ಪಾಲನೆಯ ಸಮಯವಾಗಿದೆ. ಅಮೃತವೇಳೆಯಲ್ಲಿ ವರದಾನಗಳ ಜೋಳಿಗೆಯು ತೆರೆಯುತ್ತದೆ. ಯಾರೆಷ್ಟು ವರದಾನವನ್ನು ತೆಗೆದುಕೊಳ್ಳಬೇಕೆಂದು ಬಯಸುತ್ತಾರೆ, ಅಷ್ಟು ಸತ್ಯ ಹೃದಯದಿಂದ ತೆಗೆದುಕೊಳ್ಳಬಹುದು, ತೋರ್ಪಡಿಕೆಯಿಂದಲ್ಲ. ಯಾವಾಗ ತೋರ್ಪಡಿಕೆಯದಾಗಿರುತ್ತದೆ ಆಗ ಹೇಳುವರು - ನಮಗೆ ಇದನ್ನು ಕೊಡಿ, ಯಾರು ತೋರ್ಪಡಿಕೆಯಿಂದ ಬೇಡುತ್ತಾರೆ. ಆಗ ಬಾಪ್ದಾದಾರವರು ಏನು ಮಾಡುವರು! ಅವರ ತೋರ್ಪಡಿಕೆಯನ್ನು ಸಿದ್ಧ ಮಾಡುವುದಕ್ಕಾಗಿ ಅಷ್ಟೇ ಶಕ್ತಿಯನ್ನು ಕೊಡುತ್ತಾರೆ, ಆ ಸಮಯವು ಪೂರ್ಣವಾಯಿತು ಮತ್ತು ಸಮಾಪ್ತಿ. ಆದರೂ ಮಕ್ಕಳಲ್ಲವೆ, ಇಲ್ಲ ಎನ್ನಬಾರದು. ಆದರೆ ಸದಾಕಾಲ ವರದಾನಗಳಿಂದ ಬೆಳೆಯುತ್ತಿರಿ, ನಡೆಯುತ್ತಿರಿ, ಹಾರುತ್ತಿರಿ, ಅದಕ್ಕಾಗಿ ಅಮೃತವೇಳೆಯನ್ನು ಎಷ್ಟು ಶಕ್ತಿಶಾಲಿ ಮಾಡಿಕೊಳ್ಳುತ್ತೀರಿ, ಅಷ್ಟೂ ಇಡೀ ದಿನದಲ್ಲಿ ಸಹಜವಾಗುತ್ತದೆ. ತಿಳಿಯಿತೆ.

ಸದಾ ಸ್ವಯಂನ್ನು ಪಾಸ್-ವಿತ್-ಆನರ್ ಆಗುವ ಲಕ್ಷ್ಯ ಮತ್ತು ಲಕ್ಷಣದಲ್ಲಿ ನಡೆಸುವವರು, ಸದಾ ಸ್ವಯಂನ್ನು ಬ್ರಹ್ಮಾ ತಂದೆಯ ಸಮಾನ ತ್ಯಾಗದ ಭಾಗ್ಯವನ್ನು ಹಂಚುವವರು, ನಂಬರ್ವನ್ ತ್ಯಾಗಿ ಶ್ರೇಷ್ಠ ಭಾಗ್ಯವನ್ನು ರೂಪಿಸಿಕೊಳ್ಳುವವರು, ಸದಾ ಸಹಜ ಪ್ರಾಪ್ತಿಯ ಅಧಿಕಾರಿಯಾಗಿದ್ದು ಸ್ವ-ಉನ್ನತಿ ಮತ್ತು ಸೇವೆಯ ಉನ್ನತಿಯನ್ನು ಮಾಡಿಕೊಳ್ಳುವವರು, ಸದಾ ಪ್ರತೀ ಹೆಜ್ಜೆಯಲ್ಲಿ ಸಹಯೋಗಿ, ಜೊತೆಗಾರರಾಗಿದ್ದು ಮುಂದುವರೆಯುವವರು, ಸ್ಮೃತಿ-ಸ್ಥಿತಿಯನ್ನು ಶಕ್ತಿಶಾಲಿ ಮಾಡಿಕೊಳ್ಳುವುದರಿಂದ ಸದಾ ತಂದೆಯನ್ನು ಫಾಲೋ ಮಾಡುವವರು, ಇಂತಹ ಸದಾ ಸಹಜಯೋಗಿ ಜೊತೆಗಾರರು, ಆದೇಶ ಪಾಲಕರು, ಆಜ್ಞಾಕಾರಿ, ಸಂತುಷ್ಟವಾಗಿರುವವರು, ಸರ್ವರನ್ನು ಖುಷಿ ಪಡಿಸುವ ರಹಸ್ಯವನ್ನು ತಿಳಿಯುವವರು, ಇಂತಹ ಶ್ರೇಷ್ಠಾತ್ಮರಿಗೆ, ಮಹಾನ್ ಪುಣ್ಯಾತ್ಮರಿಗೆ, ಡಬಲ್ ಮಹಾದಾನಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.


ವರದಾನ:
ಮನಸ್ಸಾ ಬಂಧನಗಳಿಂದ ಮುಕ್ತ, ಅತೀಂದ್ರಿಯ ಸುಖದ ಅನುಭೂತಿ ಮಾಡುವಂತಹ ಮುಕ್ತಿದಾತಾ ಭವ.

ಅತೀಂದ್ರಿಯ ಸುಖದಲ್ಲಿ ತೂಗುವುದು - ಇದು ಸಂಗಮಯುಗೀ ಬ್ರಾಹ್ಮಣ ವಿಶೇಷತೆಯಾಗಿದೆ. ಆದರೆ ಮನಸ್ಸಾ ಸಂಕಲ್ಪಗಳ ಬಂಧನವು ಆಂತರಿಕ ಖುಷಿ ಹಾಗೂ ಅತೀಂದ್ರಿಯ ಸುಖದ ಅನುಭವವನ್ನು ಮಾಡುವುದಕ್ಕೆ ಬಿಡುವುದಿಲ್ಲ. ವ್ಯರ್ಥ ಸಂಕಲ್ಪಗಳಲ್ಲಿ, ಈರ್ಷ್ಯೆ, ಹುಡುಗಾಟಿಕೆ ಅಥವಾ ಆಲಸ್ಯದ ಸಂಕಲ್ಪಗಳ ಬಂಧನದಲ್ಲಿ ಬಂಧಿಸುವುದೇ ಮನಸ್ಸಾ ಬಂಧನವಾಗಿದೆ. ಇಂತಹ ಆತ್ಮವು ಅಭಿಮಾನಕ್ಕೆ ವಶವಾಗಿ ಅನ್ಯರದೇ ದೋಷವನ್ನು ಯೋಚಿಸುತ್ತಿರುತ್ತಾರೆ, ಅವರಲ್ಲಿ ಅನುಭೂತಿಯ ಶಕ್ತಿಯು ಸಮಾಪ್ತಿಯಾಗಿ ಬಿಡುತ್ತದೆ. ಆದ್ದರಿಂದ ಈ ಸೂಕ್ಷ್ಮ ಬಂಧನಗಳಿಂದ ಮುಕ್ತವಾದಾಗಲೇ ಮುಕ್ತಿದಾತಾ ಆಗಲು ಸಾಧ್ಯವಾಗುವುದು.

ಸ್ಲೋಗನ್:
ಹೀಗೆ ಖುಷಿಗಳ ಗಣಿಯಿಂದ ಸಂಪನ್ನವಾಗಿರಿ, ಅದರಿಂದ ತಮ್ಮ ಬಳಿ ದುಃಖದ ಪ್ರಕಂಪನಗಳೂ ಸಹ ಬರಬಾರದು.
 


ಅವ್ಯಕ್ತ ಸ್ಥಿತಿಯ ಅನುಭವ ಮಾಡುವುದಕ್ಕಾಗಿ ವಿಶೇಷ ಹೋಮ್ವರ್ಕ್

ತಮ್ಮ ಎದುರಿಗೆ ಯಾರು ಎಷ್ಟೇ ವ್ಯರ್ಥ ಮಾತನಾಡಲಿ ಆದರೆ ತಾವು ವ್ಯರ್ಥವನ್ನು ಸಮರ್ಥತೆಯಲ್ಲಿ ಪರಿವರ್ತನೆ ಮಾಡಿಬಿಡಿ. ವ್ಯರ್ಥವನ್ನು ತಮ್ಮ ಬುದ್ಧಿಯಿಂದ ಸ್ವೀಕಾರ ಮಾಡಬೇಡಿ. ಒಂದುವೇಳೆ ಒಂದಾದರೂ ವ್ಯರ್ಥ ಮಾತನ್ನು ಸ್ವೀಕಾರ ಮಾಡಿ ಬಿಟ್ಟರೆ ಒಂದು ವ್ಯರ್ಥ ಅನೇಕ ವ್ಯರ್ಥಕ್ಕೆ ಜನ್ಮ ಕೊಡುತ್ತದೆ. ತಮ್ಮ ಮಾತಿನ ಮೇಲೂ ಪೂರ್ತಿ ಗಮನ ಕೊಡಿ, “ಕಡಿಮೆ ಮಾತನಾಡಿ, ನಿಧಾನಕ್ಕೆ ಮಾತನಾಡಿ ಮತ್ತು ಮಧುರವಾಗಿ ಮಾತನಾಡಿ” ಆಗ ಅವ್ಯಕ್ತ ಸ್ಥಿತಿ ಸಹಜವಾಗಿ ಆಗಿ ಬಿಡುತ್ತದೆ.