29.03.20    Avyakt Bapdada     Kannada Murli     16.12.85     Om Shanti     Madhuban


ರೈಟ್ ಹ್ಯಾಂಡ್ ಆಗುವುದು ಹೇಗೆ?


ಇಂದು ಬಾಪ್ದಾದಾರವರು ತನ್ನ ಅನೇಕ ಭುಜಗಳನ್ನು ನೋಡುತ್ತಿದ್ದಾರೆ. 1. ಭುಜಗಳು ಸದಾ ಪ್ರತ್ಯಕ್ಷ ಕರ್ಮವನ್ನು ಮಾಡುವ ಆಧಾರವಾಗಿದೆ. ಪ್ರತಿಯೊಂದು ಆತ್ಮವು ತನ್ನ ಭುಜಗಳ ಮೂಲಕವೇ ಕರ್ಮವನ್ನು ಮಾಡುತ್ತದೆ. 2. ಭುಜಗಳು ಸಹಯೋಗದ ಚಿಹ್ನೆಯೆಂದೂ ಹೇಳಲಾಗುತ್ತದೆ. ಸಹಯೋಗಿ ಆತ್ಮರಿಗೆ ರೈಟ್ಹ್ಯಾಂಡ್(ಬಲಭುಜ) ಎಂದು ಹೇಳಲಾಗುತ್ತದೆ. 3. ಭುಜಗಳನ್ನು ಶಕ್ತಿರೂಪದಲ್ಲಿಯೂ ತೋರಿಸಲಾಗುತ್ತದೆ. ಆದ್ದರಿಂದ ಬಾಹುಬಲ ಎಂದು ಹೇಳಲಾಗುತ್ತದೆ. ಭುಜಗಳದು ಇನ್ನೂ ವಿಶೇಷತೆಗಳಿದೆ. 4. ಭುಜ ಅರ್ಥಾತ್ ಕೈ, ಸ್ನೇಹದ ಚಿಹ್ನೆಯಾಗಿದೆ. ಆದ್ದರಿಂದ ಯಾವಾಗ ಸ್ನೇಹದಿಂದ ಮಿಲನವಾಗುತ್ತಾರೆ ಆಗ ಪರಸ್ಪರದಲ್ಲಿ ಕೈ ಸೇರಿಸುತ್ತಾರೆ. ಭುಜಗಳ ವಿಶೇಷತೆಯನ್ನು ಮೊದಲು ತಿಳಿಸಿದೆವು - ಸಂಕಲ್ಪವನ್ನು ಕರ್ಮದಲ್ಲಿ ಪ್ರತ್ಯಕ್ಷ ಮಾಡುವುದು. ತಾವೆಲ್ಲರೂ ತಂದೆಯ ಭುಜಗಳಾಗಿದ್ದೀರಿ. ಅಂದಮೇಲೆ ಈ ನಾಲ್ಕೂ ವಿಶೇಷತೆಗಳು ತಮ್ಮಲ್ಲಿ ಕಂಡು ಬರುತ್ತದೆಯೇ? ಈ ನಾಲ್ಕೂ ವಿಶೇಷತೆಗಳ ಮೂಲಕ ತಾವು ತಮ್ಮನ್ನು ತಿಳಿಯಬಹುದು - ನಾನು ಯಾವ ಭುಜವಾಗಿದ್ದೇನೆ? ಭುಜವಂತು ಎಲ್ಲರೂ ಆಗಿದ್ದೀರಿ ಆದರೆ ಅದು ಬಲ ಭುಜವೇ ಅಥವಾ ಎಡ ಭುಜವೇ - ಇದನ್ನು ಈ ವಿಶೇಷತೆಗಳಿಂದ ಪರಿಶೀಲನೆ ಮಾಡಿರಿ.

ಮೊದಲ ಮಾತು - ತಂದೆಯ ಪ್ರತಿಯೊಂದು ಶ್ರೇಷ್ಠ ಸಂಕಲ್ಪವನ್ನು, ಮಾತನ್ನು, ಕರ್ಮದಲ್ಲಿ ಅರ್ಥಾತ್ ಪ್ರತ್ಯಕ್ಷ ಜೀವನದಲ್ಲಿ ಎಲ್ಲಿಯವರೆಗೆ ತರಲಾಗಿದೆ? ಕರ್ಮವು ಎಲ್ಲರೂ ಪ್ರತ್ಯಕ್ಷವಾಗಿ ನೋಡುವ ಸಹಜ ವಸ್ತುವಾಗಿದೆ ಕರ್ಮವನ್ನು ಎಲ್ಲರೂ ನೋಡಬಲ್ಲರು ಮತ್ತು ಸಹಜವಾಗಿ ತಿಳಿಯಬಹುದು ಅಥವಾ ಕರ್ಮದ ಮೂಲಕ ಅನುಭವ ಮಾಡಬಹುದು. ಆದ್ದರಿಂದ ಎಲ್ಲಾ ಜನರೂ ಇದನ್ನೇ ಹೇಳುತ್ತಾರೆ - ಹೇಳುವುದಂತು ಎಲ್ಲರೂ ಹೇಳುತ್ತಾರೆ ಅದರೆ ಮಾಡಿ ತೋರಿಸಿರಿ. ಪ್ರತ್ಯಕ್ಷ ಕರ್ಮದಲ್ಲಿ ನೋಡಿದಾಗ ಒಪ್ಪುತ್ತಾರೆ - ಇವರೇನು ಹೇಳುತ್ತಾರೆ ಅದು ಸತ್ಯವಿದೆ. ಅಂದಮೇಲೆ ಕರ್ಮ, ಸಂಕಲ್ಪದ ಜೊತೆಗೆ ಮಾತನ್ನೂ ಪ್ರತ್ಯಕ್ಷ ಪ್ರಮಾಣದ ರೂಪದಲ್ಲಿ ಸ್ಪಷ್ಟಗೊಳಿಸುವಂತದ್ದಾಗಿದೆ. ಅದೇ ರೀತಿಯಲ್ಲಿ ಬಲ ಭುಜ ಅಥವಾ ರೈಟ್ಹ್ಯಾಂಡ್ ಪ್ರತಿಯೊಂದು ಕರ್ಮದ ಮೂಲಕ ತಂದೆಯನ್ನು ಪ್ರತ್ಯಕ್ಷ ಮಾಡುತ್ತಿದ್ದೀರಾ? ರೈಟ್ಹ್ಯಾಂಡ್ನ ವಿಶೇಷತೆಯಾಗಿದೆ - ಅವರಿಂದ ಸದಾ ಶುಭ ಮತ್ತು ಶ್ರೇಷ್ಠ ಕರ್ಮವಾಗುತ್ತದೆ. ರೈಟ್ಹ್ಯಾಂಡ್ ಕರ್ಮದ ಗತಿಯು ಲೆಫ್ಟ್(ಎಡಭುಜ)ಗಿಂತಲೂ ತೀವ್ರವಾಗಿರುತ್ತದೆ. ಅಂದಮೇಲೆ ಇದೇ ರೀತಿ ಪರಿಶೀಲಿಸಿರಿ. ಸದಾ ಶುಭ ಮತ್ತು ಶ್ರೇಷ್ಠ ಕರ್ಮವು ತೀವ್ರ ಗತಿಯಿಂದ ಸಾಗುತ್ತಿದೆಯೇ? ಶ್ರೇಷ್ಠ ಕರ್ಮವುಳ್ಳ ಬಲಭುಜವಾಗಿದ್ದೀರಾ? ಒಂದುವೇಳೆ ಈ ವಿಶೇಷತೆಗಳಿಲ್ಲವೆಂದರೆ, ಸ್ವತಹವಾಗಿಯೇ ಎಡ ಭುಜವಾಗಿ ಬಿಟ್ಟಿರಿ ಏಕೆಂದರೆ ಸರ್ವ ಶ್ರೇಷ್ಠ ತಂದೆಯನ್ನು ಪ್ರತ್ಯಕ್ಷಗೊಳಿಸಲು ನಿಮಿತ್ತವಾಗಿರುವುದು ಸರ್ವಶ್ರೇಷ್ಠ ಕರ್ಮವಾಗಿದೆ. ಭಲೆ ಆತ್ಮಿಕ ದೃಷ್ಟಿಯ ಮೂಲಕ, ಭಲೆ ತಮ್ಮ ಖುಷಿಯ ಆತ್ಮೀಯತೆಯ ಚಹರೆಯ ಮೂಲಕ ತಂದೆಯನ್ನು ಪ್ರತ್ಯಕ್ಷಗೊಳಿಸುತ್ತೀರಿ. ಇದೂ ಸಹ ಕರ್ಮವೇ ಆಗಿದೆ. ಅಂದಮೇಲೆ ಇಂತಹ ಶ್ರೇಷ್ಠ ಕರ್ಮವುಳ್ಳವರು ಆಗಿದ್ದೀರಾ?

ಇದೇ ರೀತಿಯಲ್ಲಿ ಭುಜಗಳು ಅರ್ಥಾತ್ ಸಹಯೋಗದ ಚಿಹ್ನೆ. ಅಂದಾಗ ಪರಿಶೀಲನೆ ಮಾಡಿರಿ - ಪ್ರತೀ ಸಮಯದಲ್ಲಿ ತಂದೆಯ ಕರ್ತವ್ಯದಲ್ಲಿ ಸಹಯೋಗಿಯಾಗಿದ್ದೇವೆಯೇ? ತನು-ಮನ-ಧನ ಮೂರರಿಂದಲೂ ಸದಾ ಸಹಯೋಗಿಯಾಗಿದ್ದೇವೆಯೇ? ಅಥವಾ ಕೆಲವೊಮ್ಮೆಗೆ ಸಹಯೋಗಿ ಆಗಿದ್ದೇವೆಯೇ? ಹೇಗೆ ಲೌಕಿಕ ಕಾರ್ಯದಲ್ಲಿ ಯಾರೇ ಫುಲ್ಟೈಮ್ ಕೆಲಸ ಮಾಡುವವರಾಗಿದ್ದಾರೆ, ಕೆಲವರು ಸ್ವಲ್ಪ ಸಮಯ ಕೆಲಸ ಮಾಡುವವರಾಗಿದ್ದಾರೆ. ಅದರಲ್ಲಿ ಅಂತರವಾಗುತ್ತದೆಯಲ್ಲವೆ. ಅಂದಾಗ ಯಾರು ಕೆಲವೊಮ್ಮೆ ಸಹಯೋಗಿಯಿರುತ್ತಾರೆ ಅವರ ಪ್ರಾಪ್ತಿ ಮತ್ತು ಸದಾಕಾಲದ ಸಹಯೋಗದ ಪ್ರಾಪ್ತಿಯಲ್ಲಿ ಅಂತರವಾಗಿ ಬಿಡುತ್ತದೆ. ಯಾವಾಗ ಸಮಯ ಸಿಗುತ್ತದೆ, ಯಾವಾಗ ಉಮ್ಮಂಗ ಬರುತ್ತದೆ ಅಥವಾ ಯಾವಾಗ ಮೂಡ್ ತಯಾರಾಗುತ್ತದೆಯೋ ಆಗ ಸಹಯೋಗಿಯಾಗುತ್ತೀರಾ! ಇಲ್ಲವೆಂದರೆ ಸಹಯೋಗಿಗೆ ಬದಲಾಗಿ ವಿಯೋಗಿಯಾಗಿ ಬಿಡುತ್ತೀರಿ. ಅಂದಾಗ ಪರಿಶೀಲನೆ ಮಾಡಿಕೊಳ್ಳಿರಿ – ಮೂರೂ ರೂಪದಿಂದ ಅರ್ಥಾತ್ ತನು-ಮನ-ಧನ ಎಲ್ಲಾ ರೂಪದಿಂದ ಪೂರ್ಣ ಸಹಯೋಗಿಯಾಗಿದ್ದೀರಾ ಅಥವಾ ಅರ್ಧವೇ? ದೇಹ ಮತ್ತು ದೇಹದ ಸಂಬಂಧ, ಅದರಲ್ಲಿ ಹೆಚ್ಚು ತನು-ಮನ-ಧನವನ್ನು ಉಪಯೋಗಿಸುತ್ತೀರಾ ಅಥವಾ ತಂದೆಯ ಶ್ರೇಷ್ಠ ಕಾರ್ಯದಲ್ಲಿ ಉಪಯೋಗಿಸುತ್ತೀರಾ? ದೇಹದ ಸಂಬಂಧಗಳ ಪ್ರವೃತ್ತಿಯೆಷ್ಟಿದೆ, ಅಷ್ಟೇ ತನ್ನ ದೇಹದ ಪ್ರವೃತ್ತಿಯೂ ಉದ್ದಗಲವಾಗಿದೆ. ಕೆಲವು ಮಕ್ಕಳು ಸಂಬಂಧ ಪ್ರವೃತ್ತಿಯಿಂದ ದೂರವಾಗಿ ಬಿಟ್ಟಿದ್ದಾರೆ ಆದರೆ ದೇಹದ ಪ್ರವೃತ್ತಿಯಲ್ಲಿ ಸಮಯ, ಸಂಕಲ್ಪ, ಧನವನ್ನು ಈಶ್ವರನ ಕಾರ್ಯದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ತನ್ನ ದೇಹದ ಪ್ರವೃತ್ತಿಯ ಗೃಹಸ್ಥಿಯೂ ದೊಡ್ಡ ಜಾಲವಾಗಿದೆ. ಈ ಜಾಲದಿಂದ ದೂರವಿರುವುದಕ್ಕೆ ಹೇಳಲಾಗುತ್ತದೆ - ರೈಟ್ಹ್ಯಾಂಡ್. ಕೇವಲ ಬ್ರಾಹ್ಮಣರಾಗಿ ಬಿಟ್ಟೆವು, ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯೆಂದು ಹೇಳುವುದಕ್ಕೆ ಅಧಿಕಾರಿಯಾಗಿ ಬಿಟ್ಟರೆ, ಅವರಿಗೆ ಸದಾಕಾಲದ ಸಹಯೋಗಿ ಎಂದು ಹೇಳುವುದಿಲ್ಲ. ಆದರೆ ಎರಡೂ ಪ್ರವೃತ್ತಿಗಳಿಂದ ಭಿನ್ನ ಮತ್ತು ತಂದೆಯ ಕಾರ್ಯದಲ್ಲಿ ಪ್ರಿಯರು. ದೇಹದ ಪ್ರವೃತ್ತಿಯ ಪರಿಭಾಷೆಯು ಬಹಳ ವಿಸ್ತಾರವಾದುದು. ಇದರ ಬಗ್ಗೆಯೂ ಮತ್ತೆಂದಾದರೂ ಸ್ಪಷ್ಟಗೊಳಿಸುತ್ತೇವೆ. ಆದರೆ ಎಲ್ಲಿಯವರೆಗೆ ಸಹಯೋಗಿಯಾಗಿದ್ದೇವೆ - ಇದರಲ್ಲಿ ತಮ್ಮನ್ನು ಪರಿಶೀಲಿಸಿರಿ.

ಮೂರನೇ ಮಾತು - ಭುಜವು ಸ್ನೇಹದ ಚಿಹ್ನೆಯಾಗಿದೆ. ಸ್ನೇಹ ಅರ್ಥಾತ್ ಮಿಲನ. ಹೇಗೆ ದೇಹಧಾರಿ ಆತ್ಮರ ದೇಹದ ಮಿಲನವು ಕೈಯಲ್ಲಿ ಕೈ ಸೇರಿಸುವುದಾಗಿರುತ್ತದೆ. ಹಾಗೆಯೇ ಯಾರು ರೈಟ್ಹ್ಯಾಂಡ್ ಅಥವಾ ಬಲ ಭುಜವಾಗಿದ್ದಾರೆಂದರೆ, ಅವರ ಗುರುತಾಗಿದೆ - ಸಂಕಲ್ಪದಲ್ಲಿ ಮಿಲನ, ಮಾತಿನಲ್ಲಿ ಮಿಲನ ಮತ್ತು ಸಂಸ್ಕಾರದಲ್ಲಿ ಮಿಲನ. ತಂದೆಯ ಸಂಕಲ್ಪವೇನಿರುತ್ತದೆಯೋ ಅದು ರೈಟ್ಹ್ಯಾಂಡ್ನ ಸಂಕಲ್ಪವಾಗಿರುತ್ತದೆ. ತಂದೆಯದು ವ್ಯರ್ಥ ಸಂಕಲ್ಪವಾಗುವುದಿಲ್ಲ. ಸದಾ ಸಮರ್ಥ ಸಂಕಲ್ಪ - ಇದು ಗುರುತಾಗಿದೆ. ತಂದೆಯ ಮಾತು, ಸದಾ ಸುಖ ಕೊಡುವ ಮಾತು, ಸದಾ ಮಧುರ ಮಾತು, ಸದಾ ಮಹಾವಾಕ್ಯವಿರುತ್ತದೆ, ಸಾಧಾರಣ ಮಾತಿರುವುದಿಲ್ಲ. ಸದಾ ಅವ್ಯಕ್ತ ಭಾವವಿರಲಿ, ಆತ್ಮಿಕ ಭಾವವಿರಲಿ. ವ್ಯಕ್ತ ಭಾವದ ಮಾತಲ್ಲ. ಇದಕ್ಕೆ ಸ್ನೇಹ ಅರ್ಥಾತ್ ಮಿಲನ ಎಂದು ಹೇಳಲಾಗುತ್ತದೆ. ಹಾಗೆಯೇ ಸಂಸ್ಕಾರ ಮಿಲನ. ತಂದೆಯ ಸಂಸ್ಕಾರವೇನಿದೆ, ಸದಾ ಉಧಾರಚಿತ್ತ, ಕಲ್ಯಾಣಕಾರಿ, ನಿಸ್ವಾರ್ಥ, ಅದೇ ರೀತಿಯಲ್ಲಿ ಬಹಳ ವಿಸ್ತಾರವಿದೆ. ಸಾರ ರೂಪದಲ್ಲಿ ತಂದೆಯ ಸಂಸ್ಕಾರವೇನಿದೆ, ಅದು ರೈಟ್ಹ್ಯಾಂಡ್ನ ಸಂಸ್ಕಾರವಾಗಿರುತ್ತದೆ. ಹಾಗಾದರೆ ಪರಿಶೀಲನೆ ಮಾಡಿಕೊಳ್ಳಿರಿ - ಹೀಗೆ ಸಮಾನರಾಗುವುದು ಅರ್ಥಾತ್ ಸ್ನೇಹಿಯಾಗುವುದು. ಇದು ಎಲ್ಲಿಯವರೆಗೆ ಆಗಿದ್ದೇವೆ?

ನಾಲ್ಕನೇ ಮಾತು - ಭುಜ ಅರ್ಥಾತ್ ಶಕ್ತಿ. ಇದನ್ನೂ ಪರಿಶೀಲನೆ ಮಾಡಿರಿ - ಎಲ್ಲಿಯವರೆಗೆ ಶಕ್ತಿಶಾಲಿಯಾಗಿದ್ದೇವೆ? ಸಂಕಲ್ಪವು ಶಕ್ತಿಶಾಲಿ, ದೃಷ್ಟಿ, ವೃತ್ತಿಯು ಎಲ್ಲಿಯವರೆಗೆ ಶಕ್ತಿಶಾಲಿಯಾಗಿದೆ? ಶಕ್ತಿಶಾಲಿ ಸಂಕಲ್ಪ, ದೃಷ್ಠಿ ಹಾಗೂ ವೃತ್ತಿಯ ಚಿಹ್ನೆಯಾಗಿದೆ - ಅವರು ಶಕ್ತಿಶಾಲಿಯಾಗಿರುವ ಕಾರಣದಿಂದ ಯಾರನ್ನಾದರೂ ಪರಿವರ್ತನೆ ಮಾಡಬಲ್ಲರು. ಸಂಕಲ್ಪದಿಂದ ಶ್ರೇಷ್ಠ ಸೃಷ್ಟಿಯ ರಚನೆಯನ್ನು ಮಾಡುವರು. ವೃತ್ತಿಯಿಂದ ವಾಯುಮಂಡಲವನ್ನು ಪರಿವರ್ತನೆ ಮಾಡುತ್ತಾರೆ. ದೃಷ್ಟಿಯಿಂದ ಅಶರೀರಿ ಆತ್ಮನ ಸ್ವರೂಪದ ಅನುಭವ ಮಾಡಿಸುತ್ತದೆ. ಅಂದಮೇಲೆ ಇದೇರೀತಿ ಶಕ್ತಿಶಾಲಿಯಾದ ಭುಜಗಳಾಗಿದ್ದೀರಾ! ಅಥವಾ ಬಲಹೀನರಾಗಿದ್ದೀರಾ? ಒಂದುವೇಳೆ ಬಲಹೀನರಾಗಿದ್ದರೆ ಎಡ ಭುಜವಾದಿರಿ. ಈಗ ತಿಳಿಯಿತೇ - ರೈಟ್ಹ್ಯಾಂಡ್ ಎಂದು ಯಾರಿಗೆ ಹೇಳಲಾಗುತ್ತದೆ. ಭುಜಗಳಂತು ಎಲ್ಲರೂ ಆಗಿದ್ದೀರಿ. ಆದರೆ ಯಾವ ಭುಜವಾಗಿದ್ದೀರಿ? ಅದನ್ನು ಈ ವಿಶೇಷತೆಗಳಿಂದ ಸ್ವಯಂನ್ನು ತಿಳಿದುಕೊಳ್ಳಿರಿ. ಒಂದುವೇಳೆ ಅನ್ಯರ್ಯಾರಾದರೂ ಹೇಳುತ್ತಾರೆ - ನೀವು ಬಲಭುಜವಲ್ಲ ಎಂದು, ಆಗ ಸಿದ್ಧವೂ ಮಾಡುತ್ತೀರಿ ಮತ್ತು ಜಿದ್ದು ಸಹ ಮಾಡುತ್ತೀರಿ. ಆದರೆ ತಮ್ಮನ್ನು ತಾವು ನಾನು ಯಾರಾಗಿದ್ದೇನೆ, ಹೇಗಿದ್ದೇನೆ, ಹಾಗೆಯೇ ತಿಳಿಯಿರಿ. ಏಕೆಂದರೆ ಈಗಲಾದರೂ ಸ್ವಯಂನ್ನು ಪರಿವರ್ತನೆ ಮಾಡಿಕೊಳ್ಳಲು ಸ್ವಲ್ಪ ಸಮಯವಿದೆ. ಹುಡುಗಾಟಿಕೆಯಲ್ಲಿ ಬಂದು ನಡೆಸಿ ಬಿಡಬಾರದು - ನಾನೂ ಸಹ ಸರಿಯಿದ್ದೇನೆ. ಮನಸ್ಸು ತಿನ್ನುತ್ತಿರುತ್ತದೆ (ಸರಿಯಿಲ್ಲವೆನಿಸುತ್ತದೆ) ಆದರೆ ಅಭಿಮಾನ ಹಾಗೂ ಹುಡುಗಾಟಿಕೆಯನ್ನು ಪರಿವರ್ತನೆ ಮಾಡಿಸಿ, ಮುಂದುವರೆಸುವುದಿಲ್ಲ. ಆದ್ದರಿಂದ ಇದರಿಂದ ಮುಕ್ತರಾಗಿ ಬಿಡಿ. ಯಥಾರ್ಥವಾಗಿ ತಮ್ಮನ್ನು ಪರಿಶೀಲಿಸಿರಿ. ಇದರಲ್ಲಿಯೇ ಕಲ್ಯಾಣವು ಅಡಗಿದೆ. ತಿಳಿಯಿತೆ. ಒಳ್ಳೆಯದು.

ಸದಾ ಸ್ವ-ಪರಿವರ್ತನೆಯಲ್ಲಿ, ಸ್ವ-ಚಿಂತನೆಯಲ್ಲಿ ಇರುವಂತಹ, ಸದಾ ಸ್ವಯಂನಲ್ಲಿ ಸರ್ವ ವಿಶೇಷತೆಗಳನ್ನು ಪರಿಶೀಲನೆ ಮಾಡುತ್ತಾ ಸಂಪನ್ನ ಮಾಡುವಂತಹ, ಸದಾ ಎರಡೂ ಪ್ರವೃತ್ತಿಗಳಿಂದ ಭಿನ್ನ, ತಂದೆ ಹಾಗೂ ತಂದೆಯ ಕಾರ್ಯದಲ್ಲಿ ಪ್ರಿಯರಾಗಿರುವಂತಹ, ಅಭಿಮಾನ ಮತ್ತು ಹುಡುಗಾಟಿಕೆಯಿಂದ ಸದಾ ಮುಕ್ತರಾಗಿರುವ, ಇಂತಹ ತೀವ್ರ ಪುರುಷಾರ್ಥಿ ಶ್ರೇಷ್ಠಾತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ:-

1. ಸದಾ ತಮ್ಮನ್ನು ಸ್ವದರ್ಶನ ಚಕ್ರಧಾರಿಯೆಂದು ಅನುಭವ ಮಾಡುತ್ತೀರಾ? ಸ್ವದರ್ಶನ ಚಕ್ರವು ಅನೇಕ ಪ್ರಕಾರದ ಮಾಯೆಯ ಚಕ್ರಗಳನ್ನು ಸಮಾಪ್ತಿ ಮಾಡುವಂತದ್ದಾಗಿದೆ. ಮಾಯೆಯ ಅನೇಕ ಚಕ್ರಗಳಿದೆ ಮತ್ತು ತಂದೆಯ ಚಕ್ರಗಳಿಂದ ಬಿಡಿಸಿ ವಿಜಯಿಯನ್ನಾಗಿ ಮಾಡಿ ಬಿಡುತ್ತಾರೆ. ಸ್ವದರ್ಶನ ಚಕ್ರದ ಮುಂದೆ ಮಾಯೆಯು ನಿಲ್ಲಲು ಸಾಧ್ಯವಿಲ್ಲ - ಇಂತಹ ಅನುಭವಿ ಆಗಿದ್ದೀರಾ? ಬಾಪ್ದಾದಾರವರು ಪ್ರತಿನಿತ್ಯವೂ ಇದೇ ಟೈಟಲ್ನಿಂದ ನೆನಪು-ಪ್ರೀತಿಯನ್ನೂ ಕೊಡುತ್ತಾರೆ. ಇದೇ ಸ್ಮೃತಿಯಿಂದ ಸದಾ ಸಮರ್ಥರಾಗಿರಿ. ಸದಾ ಸ್ವಯಂನ ದರ್ಶನದಲ್ಲಿರುತ್ತೀರೆಂದರೆ ಶಕ್ತಿಶಾಲಿ ಆಗಿ ಬಿಡುತ್ತೀರಿ. ಕಲ್ಪ-ಕಲ್ಪದ ಶ್ರೇಷ್ಠಾತ್ಮರಾಗಿದ್ದಿರಿ ಮತ್ತು ಇದ್ದೀರಿ - ಇದು ನೆನಪಿದ್ದರೆ ಮಾಯಾಜೀತರಾಗಿಯೇ ಇದ್ದೀರಿ. ಸದಾ ಜ್ಞಾನವನ್ನು ಸ್ಮೃತಿಯಲ್ಲಿಟ್ಟುಕೊಂಡು, ಅದರ ಖುಷಿಯಲ್ಲಿರಿ. ಖುಷಿಯು ಅನೇಕ ಪ್ರಕಾರದ ದುಃಖವನ್ನು ಮರೆಸುವಂತದ್ದಾಗಿದೆ. ಪ್ರಪಂಚವು ದುಃಖಧಾಮದಲ್ಲಿದೆ ಮತ್ತು ತಾವೆಲ್ಲರೂ ಸಂಗಮಯುಗಿಯಾಗಿ ಬಿಟ್ಟಿರಿ. ಇದೂ ಸಹ ಭಾಗ್ಯವಾಗಿದೆ.

2. ಸದಾ ಪವಿತ್ರತೆಯ ಶಕ್ತಿಯಿಂದ ಸ್ವಯಂನ್ನು ಪಾವನ ಮಾಡಿಕೊಂಡು, ಅನ್ಯರನ್ನೂ ಪಾವನರಾಗುವ ಪ್ರೇರಣೆಯನ್ನು ಕೊಡುವವರಾಗಿದ್ದೀರಲ್ಲವೇ? ಮನೆ-ಗೃಹಸ್ಥದಲ್ಲಿದ್ದು ಪವಿತ್ರ ಆತ್ಮರಾಗುವುದು, ಈ ವಿಶೇಷತೆಯನ್ನು ಪ್ರಪಂಚದ ಮುಂದೆ ಪ್ರತ್ಯಕ್ಷಗೊಳಿಸಬೇಕಾಗಿದೆ. ಇಂತಹ ಬಹದ್ದೂರರಾಗಿದ್ದೀರಾ! ಪಾವನ ಆತ್ಮರಾಗಿದ್ದೇವೆ - ಇದೇ ಸ್ಮೃತಿಯಿಂದ ಸ್ವಯಂನ್ನೂ ಪರಿಪಕ್ವ ಮತ್ತು ಪ್ರಪಂಚಕ್ಕೂ ಇದೇ ಪ್ರತ್ಯಕ್ಷ ಪ್ರಮಾಣವನ್ನು ತೋರಿಸುತ್ತಾ ಸಾಗಿರಿ. ಎಂತಹ ಆತ್ಮರಾಗಿದ್ದೀರಿ? ಅಸಂಭವವನ್ನು ಸಂಭವ ಮಾಡಿ ತೋರಿಸಲು ನಿಮಿತ್ತ, ಪವಿತ್ರತೆಯ ಶಕ್ತಿಯನ್ನು ಹರಡಿಸುವ ಆತ್ಮನಾಗಿದ್ದೇನೆ, ಇದನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿರಿ.

3. ಕುಮಾರರು ಸದಾ ತಮ್ಮನ್ನು ಮಾಯಾಜೀತ ಕುಮಾರನೆಂದು ತಿಳಿಯುತ್ತೀರಾ? ಮಾಯೆಯಿಂದ ಸೋಲನ್ನನುಭವಿಸುವವರಲ್ಲ ಆದರೆ ಸದಾ ಮಾಯೆಗೆ ಸೋಲನ್ನು ಅನುಭವಿಸುವಂತೆ ಮಾಡುವವರು. ಇಂತಹ ಶಕ್ತಿಶಾಲಿ ಬಹದ್ದೂರರಾಗಿದ್ದೀರಲ್ಲವೇ! ಯಾರು ಬಹದ್ದೂರರಾಗಿರುತ್ತಾರೆ, ಅವರಿಂದ ಮಾಯೆಯೂ ಸ್ವಯಂ ತಾನೇ ಗಾಬರಿಯಾಗುತ್ತದೆ. ಬಹದ್ದೂರರ ಮುಂದೆ ಮಾಯೆಯೆಂದಿಗೂ ಸಾಹಸವನ್ನಿಡುವುದಿಲ್ಲ. ಯಾವಾಗ ಯಾವುದೇ ಪ್ರಕಾರದ ಬಲಹೀನತೆಯನ್ನು ನೋಡುತ್ತೀರಿ, ಆಗಲೇ ಮಾಯೆಯು ಬರುತ್ತದೆ. ಬಹದ್ದೂರ್ ಅರ್ಥಾತ್ ಸದಾ ಮಾಯಾಜೀತ. ಸದಾ ಬರಲು ಸಾಧ್ಯವಿಲ್ಲ, ಇಂತಹ ಚಾಲೆಂಜ್ ಮಾಡುವವರಲ್ಲವೇ! ಎಲ್ಲರೂ ಮುಂದುವರೆಯುವವರು ಆಗಿದ್ದೀರಲ್ಲವೇ! ಎಲ್ಲರೂ ಸ್ವಯಂನ್ನು ಸೇವೆಗೆ ನಿಮಿತ್ತರು ಅರ್ಥಾತ್ ಸದಾ ವಿಶ್ವ ಕಲ್ಯಾಣಕಾರಿಯೆಂದು ತಿಳಿದು ಮುಂದುವರೆಯುವವರಾಗಿದ್ದೀರಾ! ವಿಶ್ವ ಕಲ್ಯಾಣಕಾರಿಗಳು ಬೇಹದ್ದಿನಲ್ಲಿರುತ್ತಾರೆ, ಹದ್ದಿನಲ್ಲಿ ಬರುವುದಿಲ್ಲ. ಹದ್ದಿನಲ್ಲಿ(ಅಲ್ಪಕಾಲದರಲ್ಲಿ) ಬರುವುದು ಅರ್ಥಾತ್ ಸತ್ಯ ಸೇವಾಧಾರಿ ಅಲ್ಲ. ಬೇಹದ್ದಿನಲ್ಲಿರುವುದು ಅರ್ಥಾತ್ ತಂದೆಯಂತೆ ಮಕ್ಕಳು. ತಂದೆಯನ್ನು ಫಾಲೋ ಮಾಡುವ ಶ್ರೇಷ್ಠ ಕುಮಾರರಾಗಿದ್ದೇವೆ - ಸದಾ ಇದೇ ಸ್ಮೃತಿಯಲ್ಲಿರಿ. ಹೇಗೆ ತಂದೆಯು ಸಂಪನ್ನ ಇದ್ದಾರೆ, ಬೇಹದ್ದಿನವರಾಗಿದ್ದಾರೆ ಹಾಗೆಯೇ ತಂದೆಯ ಸಮಾನ ಸಂಪನ್ನ, ಸರ್ವ ಖಜಾನೆಗಳಿಂದ ಸಂಪನ್ನ ಆತ್ಮನಾಗಿದ್ದೇನೆ - ಈ ಸ್ಮೃತಿಯಿಂದ ವ್ಯರ್ಥವು ಸಮಾಪ್ತಿಯಾಗಿ ಬಿಡುತ್ತದೆ. ಸಮರ್ಥರಾಗಿ ಬಿಡುತ್ತೀರಿ. ಒಳ್ಳೆಯದು.

ಅವ್ಯಕ್ತ ಮುರುಳಿಗಳಿಂದ ಆಯ್ಕೆ ಮಾಡಿರುವ ಪ್ರಶ್ನೋತ್ತರ :

ಪ್ರಶ್ನೆ:-
ಯಾವ ವಿಶೇಷ ಗುಣವು ಸಂಪೂರ್ಣ ಸ್ಥಿತಿಯನ್ನು ಪ್ರತ್ಯಕ್ಷ ಮಾಡುತ್ತದೆ? ಯಾವಾಗ ಆತ್ಮನ ಸಂಪೂರ್ಣ ಸ್ಥಿತಿಯಾಗಿ ಬಿಡುತ್ತದೆ. ಆಗ ಅದರ ಪ್ರತ್ಯಕ್ಷ ಕರ್ಮದಲ್ಲಿ ಯಾವ ಗಾಯನವಾಗುತ್ತದೆ?

ಉತ್ತರ:-
ಸಮಾನತೆಯ. ನಿಂದಾ-ಸ್ತುತಿ, ಜಯ-ಪರಾಜಯ, ಸುಖ-ದುಃಖ ಎಲ್ಲದರಲ್ಲಿಯೂ ಸಮಾನತೆಯಿರಲಿ - ಇದಕ್ಕೆ ಸಂಪೂರ್ಣ ಸ್ಥಿತಿಯೆಂದು ಹೇಳಲಾಗುತ್ತದೆ. ದುಃಖದಲ್ಲಿಯೂ ಚಹರೆ ಮತ್ತು ಮಸ್ತಕದಲ್ಲಿ ದುಃಖದ ಪ್ರಕಂಪನಗಳಿಲ್ಲದೆ ಸುಖ ಹಾಗೂ ಹರ್ಷದ ಪ್ರಕಂಪನಗಳು ಕಾಣಿಸಲಿ. ನಿಂದನೆ ಮಾಡುವವರ ಬಗ್ಗೆ ಸ್ವಲ್ಪವೂ ದೃಷ್ಟಿ-ವೃತ್ತಿಯಲ್ಲಿ ಅಂತರವು ಬರಬಾರದು. ಸದಾ ಕಲ್ಯಾಣಕಾರಿ ದೃಷ್ಟಿ, ಶುಭಚಿಂತಕ ವೃತ್ತಿಯಿರಲಿ. ಇದೇ ಸಮಾನತೆ ಆಗಿದೆ.

ಪ್ರಶ್ನೆ:-
ಸ್ವಯಂನ ಮೇಲೆ ಆಶೀರ್ವಾದ ಮಾಡುವ ಹಾಗೂ ಬಾಪ್ದಾದಾರವರಿಂದ ಆಶೀರ್ವಾದವನ್ನು ತೆಗೆದುಕೊಳ್ಳುವ ಸಾಧನವೇನಾಗಿದೆ?

ಉತ್ತರ:-
ಸದಾ ಬ್ಯಾಲೆನ್ಸ್ ಸರಿಯಾಗಿರಲಿ ಆಗ ತಂದೆಯ ಆಶೀರ್ವಾದಗಳು ಸಿಗುತ್ತಿರುತ್ತದೆ. ಮಹಿಮೆ ಕೇಳುತ್ತಾ ಮಹಿಮೆಯ ನಶೆಯೂ ಏರಬಾರದು ಮತ್ತು ಗ್ಲಾನಿ ಕೇಳಿ ತಿರಸ್ಕಾರದ ಭಾವವೂ ಉತ್ಪನ್ನವಾಗಬಾರದು. ಯಾವಾಗ ಎರಡರಲ್ಲಿಯೂ ಬ್ಯಾಲೆನ್ಸ್ ಸರಿಯಿರುತ್ತದೆ ಆಗ ಕಮಾಲ್ ಹಾಗೂ ತಾವು ತಮ್ಮಿಂದ ಸಂತುಷ್ಟತೆಯ ಅನುಭವ ಮಾಡುತ್ತೀರಿ.

ಪ್ರಶ್ನೆ:-
ನಿಮ್ಮದು ಪ್ರವೃತ್ತಿ ಮಾರ್ಗವಾಗಿದೆ ಆದ್ದರಿಂದ ಯಾವ ಎರಡೆರಡು ಮಾತುಗಳಲ್ಲಿ ಬ್ಯಾಲೆನ್ಸ್ ಇಡುವುದು ಅವಶ್ಯಕವಿದೆ?

ಉತ್ತರ:-
ಹೇಗೆ ಆತ್ಮ ಮತ್ತು ಶರೀರ ಎರಡಿದೆ, ಬಾಪ್ ಮತ್ತು ದಾದಾ - ಎರಡಿದೆ. ಇಬ್ಬರ ಕರ್ತವ್ಯದಿಂದ ವಿಶ್ವ ಪರಿವರ್ತನೆಯಾಗುತ್ತದೆ. ಹಾಗೆಯೇ ಎರಡೆರಡು ಮಾತುಗಳ ಬ್ಯಾಲೆನ್ಸ್ ಇಡುತ್ತೀರೆಂದರೆ ಶ್ರೇಷ್ಠ ಪ್ರಾಪ್ತಿಯನ್ನು ಮಾಡಿಕೊಳ್ಳಬಹುದು - 1. ಭಿನ್ನ ಹಾಗೂ ಪ್ರಿಯ 2. ಮಹಿಮೆ ಮತ್ತು ಗ್ಲಾನಿ 3. ಸ್ನೇಹ ಮತ್ತು ಶಕ್ತಿ. 4. ಧರ್ಮ ಮತ್ತು ಕರ್ಮ 5. ಏಕಾಂತವಾಸಿ ಮತ್ತು ರಮಣೀಕ 6. ಗಂಭೀರ ಮತ್ತು ಮಿಲನಸಾರ.... ಹೀಗೆ ಅನೇಕ ಪ್ರಕಾರದ ಬ್ಯಾಲೆನ್ಸ್ ಯಾವಾಗ ಸಮಾನವಿರುತ್ತದೆಯೋ ಆಗ ಸಂಪೂರ್ಣತೆಗೆ ಸಮೀಪದಲ್ಲಿ ಬರಬಹುದು. ಒಂದು ಮರ್ಜ್ ಆಗುತ್ತದೆ, ಇನ್ನೊಂದು ಇಮರ್ಜ್ ಆಗುತ್ತದೆ ಎನ್ನುವುದಾಗಬಾರದು. ಇದರ ಪ್ರಭಾವವೂ ಬೀರುವುದಿಲ್ಲ.

ಪ್ರಶ್ನೆ:-
ಯಾವ ಮಾತಿನಲ್ಲಿ ಸಮಾನತೆಯನ್ನು ತರಬೇಕು, ಯಾವ ಮಾತಿನಲ್ಲಲ್ಲ?

ಉತ್ತರ:-
ಶ್ರೇಷ್ಠತೆಯಲ್ಲಿ ಸಮಾನತೆಯನ್ನು ತರಬೇಕಾಗಿದೆ, ಸಾಧಾರಣತೆಯಲ್ಲಿ ಅಲ್ಲ. ಹೇಗೆ ಕರ್ಮವು ಶ್ರೇಷ್ಠವೋ ಹಾಗೆಯೇ ಧಾರಣೆಯೂ ಶ್ರೇಷ್ಠವಾಗಿರಲಿ. ಧಾರಣೆಯು ಕರ್ಮವನ್ನು ಮರ್ಜ್ ಮಾಡಿಸಬಾರದು. ಧರ್ಮ ಮತ್ತು ಕರ್ಮವೆರಡೂ ಶ್ರೇಷ್ಠತೆಯಲ್ಲಿ ಸಮಾನವಾಗಿದ್ದರೆ ಧರ್ಮಾತ್ಮ ಎಂದು ಹೇಳಲಾಗುತ್ತದೆ. ಅಂದಮೇಲೆ ತಾವು ತಮ್ಮೊಂದಿಗೆ ಕೇಳಿಕೊಳ್ಳಿರಿ - ಇಂತಹ ಧರ್ಮಾತ್ಮನಾಗಿದ್ದೇನೆಯೇ? ಇಂತಹ ಕರ್ಮಯೋಗಿ ಆಗಿದ್ದೇನೆಯೇ? ಇಂತಹ ಆನಂದಪೂರ್ಣನಾಗಿದ್ದೇನೆಯೇ?

ಪ್ರಶ್ನೆ:-
ಬುದ್ಧಿಯಲ್ಲೇನಾದರೂ ಯಾವುದೇ ಪ್ರಕಾರದ ಏರುಪೇರಾಗುತ್ತದೆಯೆಂದರೆ ಅದರ ಕಾರಣವು ಏನಾಗಿದೆ?

ಉತ್ತರ:-
ಅದರ ಕಾರಣವಾಗಿದೆ - ಸಂಪನ್ನತೆಯಲ್ಲಿ ಕೊರತೆ. ಯಾವುದೇ ವಸ್ತುವು ಒಂದುವೇಳೆ ಫುಲ್ ಆಗಿರುತ್ತದೆಯೆಂದರೆ, ಅದರ ಮಧ್ಯದಲ್ಲೆಂದಿಗೂ ಏರುಪೇರಾಗಲು ಸಾಧ್ಯವಿಲ್ಲ. ಅಂದಮೇಲೆ ತಮ್ಮನ್ನು ತಾವು ಯಾವುದೇ ಏರುಪೇರಿನಿಂದ ಪಾರು ಮಾಡಿಕೊಳ್ಳುವುದಕ್ಕಾಗಿ ಸಂಪನ್ನರಾಗುತ್ತಾ ಹೋಗುತ್ತೀರೆಂದರೆ, ಸಂಪೂರ್ಣರಾಗಿ ಬಿಡುತ್ತೀರಿ. ಯಾವಾಗ ಯಾವುದೇ ವಸ್ತುವು ಸಂಪನ್ನವಾಗಿರುತ್ತದೆಯೆಂದರೆ ತನಗೆ ತಾನೇ ಆಕರ್ಷಿಸುತ್ತದೆ. ಸಂಪೂರ್ಣತೆಯಲ್ಲಿ ಪ್ರಭಾವದ ಶಕ್ತಿಯಿರುತ್ತದೆ. ಅಂದಮೇಲೆ ತಮ್ಮಲ್ಲಿ ಸಂಪೂರ್ಣತೆಯು ಎಷ್ಟಿರುತ್ತದೆ ಅಷ್ಟೇ ಅನೇಕ ಆತ್ಮರು ಸ್ವತಹವಾಗಿ ಆಕರ್ಷಿತರಾಗುತ್ತಾರೆ.

ಪ್ರಶ್ನೆ:-
ದೇಹೀ-ಅಭಿಮಾನಿಯ ಸೂಕ್ಷ್ಮ ಸ್ಥಿತಿಯೇನಾಗಿರುತ್ತದೆ?

ಉತ್ತರ:-
ಯಾರು ದೇಹೀ-ಅಭಿಮಾನಿಯಾಗಿದ್ದಾರೆ, ಅವರಿಗೆ ಯಾವುದೇ ಮಾತಿನ ಸೂಚನೆಯೇನಾದರೂ ಸಿಗುತ್ತದೆಯೆಂದರೆ, ಸೂಚನೆಯನ್ನು ವರ್ತಮಾನ ಹಾಗೂ ಭವಿಷ್ಯವೆರಡರಲ್ಲಿಯೂ ಉನ್ನತಿಯ ಸಾಧನವೆಂದು ತಿಳಿದು, ಆ ಸೂಚನೆಯನ್ನು ಸಮಾವೇಶ ಮಾಡಿಕೊಳ್ಳುತ್ತಾರೆ ಹಾಗೂ ಸಹನೆ ಮಾಡಿ ಬಿಡುತ್ತಾರೆ. ಸೂಕ್ಷ್ಮದಲ್ಲಿಯೂ ಅವರ ದೃಷ್ಟಿ-ವೃತ್ತಿಯು ಏಕೆ ಹೇಗೆ ಎನ್ನುವ ಏರುಪೇರುಗಳೂ ಉತ್ಪನ್ನವಾಗಲು ಸಾಧ್ಯವಿಲ್ಲ. ಹೇಗೆ ಮಹಿಮೆಯನ್ನು ಕೇಳುವ ಸಮಯದಲ್ಲಿ, ಆ ಆತ್ಮನ ಬಗ್ಗೆ ಸ್ನೇಹದ ಭಾವನೆಯಿರುತ್ತದೆ, ಹಾಗೆಯೇ ಒಂದುವೇಳೆ ಯಾವುದೇ ಶಿಕ್ಷಣ ಅಥವಾ ಸೂಚನೆಯನ್ನು ಕೊಡುತ್ತಾರೆಂದರೂ, ಅವರ ಪ್ರತಿ ಸ್ನೇಹದ ಶುಭಚಿಂತಕನ ಭಾವನೆಯಿರಲಿ. ಒಳ್ಳೆಯದು. ಓಂ ಶಾಂತಿ.

ವರದಾನ:  
ವರದಾನ: ಸದಾ ಖುಷಿ ಹಾಗೂ ಮೋಜಿನ ಸ್ಥಿತಿಯಲ್ಲಿರುವ ಕಂಬೈಂಡ್ ಸ್ವರೂಪದ ಅನುಭವಿ ಭವ.

ಬಾಪ್ದಾದಾರವರು ಮಕ್ಕಳಿಗೆ ಸದಾ ಹೇಳುತ್ತಾರೆ - ಮಕ್ಕಳೇ, ತಂದೆಯ ಕೈಯಲ್ಲಿ ಕೈಕೊಟ್ಟು ನಡೆಯಿರಿ, ಒಂಟಿಯಾಗಿ ನಡೆಯದಿರಿ. ಒಂಟಿಯಾಗಿ ನಡೆಯುವುದರಿಂದ ಕೆಲವೊಮ್ಮೆ ಬೋರ್ ಆಗಿ ಬಿಡುತ್ತೀರಿ, ಕೆಲವೊಮ್ಮೆ ಯಾರದಾದರೂ ದೃಷ್ಟಿ ಬೀಳುತ್ತದೆ. ತಂದೆಯ ಜೊತೆ ಕಂಬೈಂಡ್ ಆಗಿದ್ದೇನೆ - ಈ ಸ್ವರೂಪದ ಅನುಭವ ಮಾಡುತ್ತಿರುತ್ತೀರೆಂದರೆ, ಎಂದಿಗೂ ಮಾಯೆಯ ಕಣ್ಣು ಬೀಳುವುದಿಲ್ಲ ಮತ್ತು ಜೊತೆಯ ಅನುಭವವಾಗಿರುವ ಕಾರಣದಿಂದ ಖುಷಿಯ ಮೋಜಿನಲ್ಲಿ ತಿನ್ನುತ್ತಾ, ನಡೆಯುತ್ತಾ ಮೋಜನ್ನಾಚರಿಸುತ್ತಿರುತ್ತೀರಿ. ಮೋಸ ಹಾಗೂ ದುಃಖ ಕೊಡುವ ಸಂಬಂಧಗಳಲ್ಲಿ ಸಿಲುಕುವುದರಿಂದಲೂ ಪಾರಾಗಿ ಬಿಡುತ್ತೀರಿ.

ಸ್ಲೋಗನ್:
ಯೋಗವೆಂಬ ಕವಚವನ್ನು ಧರಿಸಿರುತ್ತೀರೆಂದರೆ ಮಾಯೆಯೆಂಬ ಶತ್ರುವಿನ ಯುದ್ಧವಾಗುವುದಿಲ್ಲ.


ಸ್ವ-ಪರಿವರ್ತನೆ, ಸ್ವ-ಉನ್ನತಿಗಾಗಿ ಸ್ವಯಂನ್ನು ಪರಿಶೀಲನೆ ಮಾಡಿಕೊಳ್ಳಲು ಅವ್ಯಕ್ತ ವಾಣಿಯಿಂದ ಪ್ರಶ್ನೆಗಳು:

1. ಭುಜಗಳ ಮೊದಲನೇ ಸ್ವರೂಪ ಯಾವುದು?

ಅ. ಸಂಕಲ್ಪ ಆ. ಸಹಯೋಗ ಇ. ಶಕ್ತಿ ಸ್ವರೂಪ

2. ಎಲ್ಲದರಲ್ಲಿ ಪ್ರತ್ಯಕ್ಷ ರೂಪದಲ್ಲಿ ನೋಡುವಂತಹ ಸಹಜ ವಸ್ತು ಯಾವುದಾಗಿದೆ?

ಅ. ಮುಖ ಆ. ಕರ್ಮ ಇ. ಮಾತು

3. ಶ್ರೇಷ್ಠಾತಿ ಶ್ರೇಷ್ಠ ತಂದೆಯ ಪ್ರತ್ಯಕ್ಷ ಮಾಡುವ ನಿಮಿತ್ತ ಏನಾಗಿದೆ?

ಅ. ಶ್ರೇಷ್ಠಾತಿ ಶ್ರೇಷ್ಠ ಸಂಕಲ್ಪ ಆ. ಶ್ರೇಷ್ಠಾತಿ ಶ್ರೇಷ್ಠ ಕರ್ಮ ಇ. ಶ್ರೇಷ್ಠಾತಿ ಶ್ರೇಷ್ಠ ಮಾತು

4. ಎಲ್ಲದಕ್ಕಿಂತ ದೊಡ್ಡ ಜಾಲ ಏನಾಗಿದೆ?

ಅ. ಹುಡುಗಾಟಿಕೆ ಆ. ಉದಾಸಿತನ ಇ. ದೇಹದ ಪ್ರವೃತಿಯ ಗೃಹಸ್ಥಿತನ

5. ಸ್ವ ಕಲ್ಯಾಣ ಯಾವುದರಿಂದ ತುಂಬಿದೆ?

ಅ. ಯಥಾರ್ಥ ರೀತಿಯಿಂದ ತಮ್ಮನ್ನು ಚೆಕ್ ಮಾಡಿಕೊಳ್ಳುವುದು.

ಆ. ಯಥಾರ್ಥ ರೀತಿಯಿಂದ ಇನ್ನೊಬ್ಬರನ್ನು ಚೆಕ್ ಮಾಡುವುದು.

ಇ. ಯಥಾರ್ಥ ರೀತಿಯಿಂದ ಇನ್ನೊಬ್ಬರಿಂದ ತಮ್ಮನ್ನು ಚೆಕ್ ಮಾಡಿಕೊಳ್ಳುವುದು.

6. ಶಕ್ತಿಶಾಲಿ ಸಂಕಲ್ಪ, ದೃಷ್ಠಿ, ವೃತ್ತಿಯ ಲಕ್ಷಣವೇನು?

ಅ. ಸ್ನೇಹಿಯಾಗುವುದು ಆ. ಸಹಜಯೋಗಿಯಾಗುವುದು ಇ. ಯಾರನ್ನಾದರು ಪರಿವರ್ತನೆ ಮಾಡುವುದು.

7. ರೈಟ್ ಹಾಂಡ್ (ಬಲಗೈ) ಯಾಗುವುದಕ್ಕೆ ಯಾವುದರಿಂದ ಮುಕ್ತರಾಗಬೇಕು?

ಅ. ಅಭಿಮಾನ ಅಥವಾ ಹುಡುಗಾಟಿಕೆಯಿಂದ ಆ. ವ್ಯರ್ಥ ಸಂಕಲ್ಪದಿಂದ ಇ. ಬಲಹೀನತೆಗಳಿಂದ

8. ತಮ್ಮ ದೃಷಿಯಿಂದ ಎಲ್ಲರಿಗೆ ಯಾವ ಅನುಭವ ಮಾಡಿಸಬೇಕು?

ಅ. ಶ್ರೇಷ್ಠ ಸೃಷ್ಟಿ, ಆ. ಅಶರೀರಿ ಆತ್ಮ ಸ್ವರೂಪ ಇ. ಶ್ರೇಷ್ಠ ವಾಯುಮಂಡಲ

9. ರೈಟ್ ಹಾಂಡ್ (ಬಲಗೈ)ನ ಸಂಕಲ್ಪ, ಮಾತು, ಸಂಸ್ಕಾರ ಹೇಗಿರಬೇಕು?

ಅ. ಶುದ್ಧ ಸಂಕಲ್ಪ, ಶ್ರೇಷ್ಠ ಭಾವ, ತಂದೆಯ ಸಂಸ್ಕಾರ

ಆ. ವ್ಯರ್ಥ ಸಂಕಲ್ಪ, ವ್ಯಕ್ತ ಶ್ರೇಷ್ಠ ಭಾವ, ಬಲಹೀನ ಸಂಸ್ಕಾರ

ಇ. ಸಮರ್ಥ ಸಂಕಲ್ಪ, ಅವ್ಯಕ್ತ ಭಾವ, ತಂದೆಯ ಸಂಸ್ಕಾರ

10. ಜೋಡಿಸಿ ಬರೆಯಿರಿ

ಸ್ನೇಹ ಸಹಯೋಗದ ಲಕ್ಷಣ

ಭುಜಗಳ ಎಡಗೈ

ರೈಟ್ ಹಾಂಡ್ (ಬಲಗೈ) ಸಮಾನರಾಗುವುದು

ಶಕ್ತಿರೂಪ ಮಾಯೆಯ ಚಕ್ರಗಳಿಂದ ಮುಕ್ತ

ಸ್ನೇಹಿಯಾಗುವುದು ವಾಯುಮಂಡಲದ ಪರಿವರ್ತನೆ

ಸಂಕಲ್ಪ ಮಿಲನ

ಬಲಹೀನ ಬಾಹುಬಲ

ನಡೆಸುವುದು ಶ್ರೇಷ್ಠ ಸೃಷ್ಟಿ

ವೃತ್ತಿಯಿಂದ ಹುಡುಗಾಟಿಕೆ

ಸ್ವದರ್ಶನ ಚಕ್ರ ಸಹಯೋಗಿ ಆತ್ಮ