12.01.20    Avyakt Bapdada     Kannada Murli     11.04.85     Om Shanti     Madhuban


"ಉದಾರತೆಯೇ ಆಧಾರ ಸ್ವರೂಪ ಸಂಘಟನೆಯ ವಿಶೇಷತೆಯಾಗಿದೆ"


ಇಂದು ವಿಶೇಷವಾಗಿ ವಿಶ್ವ ಪರಿವರ್ತನೆಯ ಆಧಾರ ಸ್ವರೂಪ, ವಿಶ್ವದ ಬೇಹದ್ದಿನ ಸೇವೆಯ ಆಧಾರ ಸ್ವರೂಪರು, ಶ್ರೇಷ್ಠ ಸ್ಮೃತಿ, ಬೇಹದ್ದಿನ ವೃತ್ತಿ, ಮಧುರ ಅಮೂಲ್ಯ ಮಾತನಾಡುವ ಆಧಾರದ ಮೂಲಕ ಅನ್ಯರಲ್ಲಿಯೂ ಇಂತಹ ಉಮ್ಮಂಗ-ಉತ್ಸಾಹವನ್ನು ತರಿಸುವ ಆಧಾರ ಸ್ವರೂಪ ನಿಮಿತ್ತ ಮತ್ತು ನಿರ್ಮಾಣ ಸ್ವರೂಪ, ಇಂತಹ ವಿಶೇಷ ಆತ್ಮರೊಂದಿಗೆ ಮಿಲನವಾಗಲು ಬಂದಿದ್ದೇವೆ. ಪ್ರತಿಯೊಬ್ಬರೂ ತಮ್ಮನ್ನು ಇಂತಹ ಆಧಾರ ಸ್ವರೂಪನೆಂದು ಅನುಭವ ಮಾಡುತ್ತೀರಾ? ಆಧಾರ ರೂಪ ಆತ್ಮರಿಗೆ ಈ ಸಂಘಟನೆಗಾಗಿ ಇಷ್ಟೂ ಬೇಹದ್ದಿನ ಜವಾಬ್ದಾರಿಯಿದೆ. ಆಧಾರ ರೂಪ ಅರ್ಥಾತ್ ಸದಾ ಸ್ವಯಂನ್ನು ಪ್ರತೀ ಸಮಯ, ಪ್ರತೀ ಸಂಕಲ್ಪ, ಪ್ರತೀ ಕರ್ಮದಲ್ಲಿ ಜವಾಬ್ದಾರನೆಂದು ತಿಳಿದು ನಡೆಯುವವರು. ಈ ಸಂಘಟನೆಯಲ್ಲಿ ಬರುವುದು ಅರ್ಥಾತ್ ಬೇಹದ್ದಿನ ಜವಾಬ್ದಾರಿಯ ಕಿರೀಟಧಾರಿ ಆಗುವುದಾಗಿದೆ. ಈ ಸಂಘಟನೆ, ಯಾವುದನ್ನು ಮೀಟಿಂಗ್ ಎಂದು ಹೇಳುವಿರಿ, ಮೀಟಿಂಗ್ನಲ್ಲಿ ಬರುವುದು ಅರ್ಥಾತ್ ಸದಾ ತಂದೆಯೊಂದಿಗೆ, ಸೇವೆಯೊಂದಿಗೆ, ಪರಿವಾರದೊಂದಿಗೆ, ಸ್ನೇಹದ ಶ್ರೇಷ್ಠ ಸಂಕಲ್ಪದ ಸೂತ್ರದಲ್ಲಿ ಬಂಧಿಸಿಕೊಳ್ಳುವುದು ಮತ್ತು ಬಂಧಿಸಲ್ಪಡುವುದು - ಇದಕ್ಕೆ ಆಧಾರ ರೂಪವಾಗಿದ್ದೀರಿ. ನಿಮಿತ್ತವಾಗಿರುವ ಈ ಸಂಘಟನೆಯಲ್ಲಿ ಬರುವುದು ಅರ್ಥಾತ್ ಸ್ವಯಂನ್ನು ಸರ್ವರ ಪ್ರತಿ ಉದಾಹರಣೆಯನ್ನಾಗಿ ಮಾಡುವುದಾಗಿದೆ. ಇದು ಮೀಟಿಂಗ್ ಅಲ್ಲ ಆದರೆ ಸದಾ ಮರ್ಯಾದಾ ಪುರುಷೋತ್ತಮರಾಗುವ ಶುಭ ಸಂಕಲ್ಪದ ಬಂಧನದಲ್ಲಿ ಬಂಧಿಸುವುದಾಗಿದೆ. ಇವೆಲ್ಲಾ ಮಾತುಗಳ ಆಧಾರ ಸ್ವರೂಪರಾಗುವುದಕ್ಕೆ ಆಧಾರ ಸ್ವರೂಪ ಸಂಘಟನೆಯೆಂದು ಹೇಳಲಾಗುತ್ತದೆ. ನಾಲ್ಕೂ ಕಡೆಯಲ್ಲಿಂದ ವಿಶೇಷವಾಗಿ ಆಯ್ಕೆಯಾಗಿರುವ ರತ್ನಗಳು ಒಟ್ಟಿಗೆ ಸೇರಿದ್ದೀರಿ. ಆಯ್ಕೆಯಾಗಿರುವ ಅರ್ಥಾತ್ ತಂದೆಯ ಸಮಾನರಾದಿರಿ. ಸೇವೆಯ ಆಧಾರ ಸ್ವರೂಪ ಅರ್ಥಾತ್ ಸ್ವ-ಉದ್ಧಾರ ಮತ್ತು ಸರ್ವರ ಉದ್ಧಾರ ಸ್ವರೂಪರು. ಸ್ವಯಂನ ಉದ್ಧಾರ ಸ್ವರೂಪರೆಷ್ಟು ಆಗುತೀರಿ, ಅಷ್ಟೇ ಸರ್ವರ ಉದ್ಧಾರ ಸ್ವರೂಪದಲ್ಲಿ ನಿಮಿತ್ತರಾಗುವಿರಿ. ಬಾಪ್ದಾದಾರವರು ಈ ಸಂಘಟನೆಯ ಆಧಾರ ರೂಪ ಮತ್ತು ಉದ್ಧಾರ ರೂಪವಾಗಿರುವ ಮಕ್ಕಳನ್ನು ನೋಡುತ್ತಿದ್ದರು ಮತ್ತು ವಿಶೇಷವಾಗಿ ಒಂದು ವಿಶೇಷತೆಯನ್ನು ನೋಡುತ್ತಿದ್ದರು- ಆಧಾರ ರೂಪರೂ ಆಗಿ ಬಿಟ್ಟಿದ್ದೀರಿ, ಉದ್ಧಾರ ರೂಪರೂ ಆಗಿದ್ದೀರಿ. ಇವೆರಡು ಮಾತುಗಳಲ್ಲಿ ಸಫಲತೆಯನ್ನು ಪಡೆಯುವುದಕ್ಕಾಗಿ ಮೂರನೆಯ ಯಾವ ಮಾತು ಬೇಕು? ಆಧಾರ ರೂಪರಾಗಿದ್ದೀರಿ ಆದ್ದರಿಂದಲೇ ನಿಮಂತ್ರಣದ ಮೇರೆಗೆ ಬಂದಿದ್ದೀರಲ್ಲವೆ ಮತ್ತು ಉದ್ಧಾರ ರೂಪವೂ ಆಗಿದ್ದೀರಿ. ಆದ್ದರಿಂದ ಯೋಜನೆಗಳನ್ನು ಹಮ್ಮಿಕೊಂಡಿದ್ದೀರಿ. ಉದ್ಧಾರ ಮಾಡುವುದು ಅರ್ಥಾತ್ ಸೇವೆ ಮಾಡುವುದು. ಮೂರನೆಯ ಮಾತನ್ನೇನು ನೋಡಿದರು? ವಿಶೇಷವಾದ ಸಂಘಟನೆಯೆಷ್ಟಿದೆಯೋ ಅಷ್ಟು ಉದಾರಚಿತ್ತರು. ಉದಾರ ಹೃದಯ ಅಥವಾ ಉದಾರ ಚಿತ್ತತೆಯ ಮಾತು, ಉದಾರ ಚಿತ್ತದ ಭಾವನೆಯು ಎಲ್ಲಿಯವರೆಗೆ ಇದೆ? ಏಕೆಂದರೆ ಉದಾರಚಿತ್ತ ಅರ್ಥಾತ್ ಸದಾ ಪ್ರತೀ ಕಾರ್ಯದಲ್ಲಿ ವಿಶಾಲ ಹೃದಯ, ಶ್ರೇಷ್ಠ ಹೃದಯದವರು. ಯಾವ ಮಾತಿನಲ್ಲಿ ವಿಶಾಲ ಹೃದಯಿ ಅಥವಾ ದೊಡ್ಡ ಹೃದಯಿಯಾಗಿದ್ದೀರಿ? ಸರ್ವರ ಪ್ರತಿ ಶುಭ ಭಾವನೆಯ ಮೂಲಕ ಮುಂದುವರೆಸುವುದರಲ್ಲಿ ವಿಶಾಲ ಹೃದಯಿ. ನಿನ್ನದೆಲ್ಲವೂ ನನ್ನದು, ನನ್ನದೆಲ್ಲವೂ ನಿನ್ನದು ಏಕೆಂದರೆ ಒಬ್ಬರೇ ತಂದೆಯವರಾಗಿದ್ದೇವೆ. ಈ ಬೇಹದ್ದಿನ ವೃತ್ತಿಯಲ್ಲಿ ವಿಶಾಲ ಹೃದಯಿ, ದೊಡ್ಡ ಹೃದಯಿಯಾಗಿದ್ದೀರಿ. ಉದಾರ ಹೃದಯಿ ಆಗಿದ್ದೀರಿ ಅರ್ಥಾತ್ ದಾತಾತನದ ಭಾವನೆಯ ಹೃದಯಿ. ತಮಗೆ ಪ್ರಾಪ್ತಿಯಾಗಿರುವ ಗುಣ, ಶಕ್ತಿಗಳು, ವಿಶೇಷತೆಗಳು - ಎಲ್ಲದರಲ್ಲಿ ಮಹಾದಾನಿಯಾಗುವುದರಲ್ಲಿ ವಿಶಾಲ ಹೃದಯಿ. ವಾಣಿಯ ಮೂಲಕ ಜ್ಞಾನ ಧನದ ದಾನ ಮಾಡುವುದು - ಇದೇನೂ ದೊಡ್ಡ ಮಾತಲ್ಲ. ಆದರೆ ಗುಣ ದಾನ ಅಥವಾ ಗುಣ ಕೊಡುವುದರ ಸಹಯೋಗಿಯಾಗಬೇಕು. ದಾನ ಎನ್ನುವ ಈ ಶಬ್ಧವು ಬ್ರಾಹ್ಮಣರಿಗಾಗಿ ಯೋಗ್ಯವಿಲ್ಲ. ತಮ್ಮ ಗುಣಗಳಿಂದ ಅನ್ಯರನ್ನು ಗುಣವಂತರನ್ನಾಗಿ, ವಿಶೇಷತೆಯನ್ನು ತುಂಬುವುದರಲ್ಲಿ ಸಹಯೋಗಿಯಾಗುವುದಕ್ಕೆ ಹೇಳಲಾಗುತ್ತದೆ - ಮಹಾದಾನಿ, ವಿಶಾಲ ಹೃದಯಿ. ಇಂತಹ ಉದಾರ ಚಿತ್ತರಾಗಬೇಕು, ಉದಾರ ಹೃದಯಿಯಾಗುವುದು - ಇದು ಬ್ರಹ್ಮಾ ತಂದೆಯನ್ನು ಫಾಲೋ ಮಾಡುವುದಾಗಿದೆ. ಇಂತಹ ಉದಾರಚಿತ್ತವುಳ್ಳವರ ಚಿಹ್ನೆ(ಲಕ್ಷಣ)ಯೇನಾಗಿರುತ್ತದೆ? ಮೂರು ಲಕ್ಷಣಗಳು ವಿಶೇಷವಾಗಿ ಇರುತ್ತವೆ. ಇಂತಹ ಆತ್ಮವು ಈರ್ಷ್ಯೆ, ತಿರಸ್ಕಾರ ಮತ್ತು ಟೀಕೆ ಮಾಡುವುದು - ಈ ಮೂರುಮಾತುಗಳಿಂದ ಸದಾ ಮುಕ್ತವಾಗಿರುತ್ತದೆ. ಇವರಿಗೆ ಹೇಳಲಾಗುತ್ತದೆ ಉದಾರಚಿತ್ತರು. ಈರ್ಷ್ಯೆಯು ಸ್ವಯಂನ್ನೂ ಬೇಸರ ಪಡಿಸುತ್ತದೆ, ಅನ್ಯರನ್ನೂ ಬೇಸರ ಮಾಡುತ್ತದೆ. ಹೇಗೆ ಕ್ರೋಧವನ್ನು ಅಗ್ನಿಯೆಂದು ಹೇಳಲಾಗುತ್ತದೆ, ಹಾಗೆಯೇ ಈರ್ಷ್ಯೆಯೂ ಸಹ ಅಗ್ನಿಯಂತೆಯೇ ಕೆಲಸ ಮಾಡುತ್ತದೆ. ಕ್ರೋಧವು ಮಹಾ ಅಗ್ನಿಯಾಗಿದೆ, ಈರ್ಷ್ಯೆಯು ಚಿಕ್ಕ ಅಗ್ನಿಯಾಗಿದೆ. ತಿರಸ್ಕಾರವೆಂದಿಗೂ ಸಹ ಶುಭಚಿಂತಕ, ಶುಭ ಚಿಂತನೆಯ ಸ್ಥಿತಿಯ ಅನುಭವವನ್ನು ಮಾಡಿಸುವುದಿಲ್ಲ. ತಿರಸ್ಕಾರ ಅರ್ಥಾತ್ ಸ್ವಯಂ ಸಹ ಬೀಳುವುದು ಮತ್ತು ಅನ್ಯರನ್ನೂ ಬೀಳಿಸುವುದು. ಹಾಗೆಯೇ ಟೀಕೆ ಮಡುವುದು, ಭಲೆ ತಮಾಷೆಯಲ್ಲಿಯೇ ಮಾಡಿ ಅಥವಾ ಸೀರಿಯಸ್ ಆಗಿದ್ದು ಮಾಡಿರಿ ಆದರೆ ಇದು ಆ ರೀತಿ ದುಃಖವನ್ನು ಕೊಡುತ್ತದೆ, ಹೇಗೆಂದರೆ ಯಾರೇ ನಡೆಯುತ್ತಿದ್ದಾರೆ ಅವರನ್ನು ತಳ್ಳಿ ಬೀಳಿಸುವುದು, ಪೆಟ್ಟು ಕೊಡುವುದಾಗಿದೆ. ಹೇಗೆ ಯಾರನ್ನೇ ಬೀಳಿಸಿದಾಗ ಚಿಕ್ಕದು ಅಥವಾ ದೊಡ್ಡ ಪೆಟ್ಟು ಬೀಳುವುದರಿಂದ ಸಾಹಸಹೀನರಾಗಿ ಬಿಡುತ್ತಾರೆ. ಅದೇ ಪೆಟ್ಟನ್ನೇ ಯೋಚಿಸುತ್ತಿರುತ್ತಾರೆ, ಎಲ್ಲಿಯವರೆಗೆ ಆ ಪೆಟ್ಟು(ನೋವು) ಇರುತ್ತದೆಯೋ ಅಲ್ಲಿಯವರೆಗೆ ಪೆಟ್ಟು ಕೊಟ್ಟಿರುವವರನ್ನು ಯಾವುದಾದರೊಂದು ರೂಪದಲ್ಲಿ ಅವಶ್ಯವಾಗಿ ನೆನಪು ಮಾಡುತ್ತಿರುತ್ತಾರೆ, ಇದು ಸಾಧಾರಣ ಮಾತಲ್ಲ. ಯಾರಿಗಾದರೂ ಹೇಳಿ ಬಿಡುವುದು ಬಹಳ ಸಹಜವಿದೆ. ಆದರೆ ತಮಾಷೆಯ ಪೆಟ್ಟೂ ಸಹ ದುಃಖ ರೂಪವಾಗಿ ಬಿಡುತ್ತದೆ. ಇದು ದುಃಖ ಕೊಡುವ ಲಿಸ್ಟ್ನಲ್ಲಿ ಬರುತ್ತದೆ. ಅಂದಮೇಲೆ ತಿಳಿಯಿತೆ! ಎಷ್ಟು ಆಧಾರ ಸ್ವರೂಪರಾಗಿದ್ದೀರಿ, ಅಷ್ಟೇ ಉದ್ಧಾರ ಸ್ವರೂಪರು, ಉದಾರ ಹೃದಯಿ, ಉದಾರ ಚಿತ್ತರಾಗಲು ನಿಮಿತ್ತ ಸ್ವರೂಪರು. ಲಕ್ಷಣಗಳನ್ನು ತಿಳಿದುಕೊಂಡಿರಲ್ಲವೆ. ಉದಾರಚಿತ್ತ ವಿಶಾಲಹೃದಯಿಗಳಾಗಿರುತ್ತಾರೆ.

ಸಂಘಟನೆಯಂತು ಬಹಳ ಚೆನ್ನಾಗಿದೆ. ಎಲ್ಲರೂ ಪ್ರಸಿದ್ಧವಾಗಿರುವವರು ಬಂದಿದ್ದಾರೆ. ಯೋಜನೆಗಳನ್ನೂ ಬಹಳ ಒಳ್ಳೊಳ್ಳೆಯ ಯೋಜನೆ ಮಾಡಿದ್ದಾರೆ. ಯೋಜನೆಗಳನ್ನು ಪ್ರತ್ಯಕ್ಷದಲ್ಲಿ ತರಲು ನಿಮಿತ್ತರಾಗಿದ್ದೀರಿ. ಎಷ್ಟು ಒಳ್ಳೆಯ ಯೋಜನೆಯನ್ನು ಮಾಡಿದ್ದೀರಿ, ಅಷ್ಟು ಸ್ವಯಂ ಸಹ ಒಳ್ಳೆಯವರಿದ್ದೀರಿ. ತಂದೆಗೆ ಇಷ್ಟವಾಗುತ್ತೀರಿ. ಸೇವೆಯ ಲಗನ್ ಬಹಳ ಚೆನ್ನಾಗಿದೆ. ಸೇವೆಯಲ್ಲಿ ಸದಾಕಾಲ ಸಫಲತೆಗೆ ಆಧಾರವು ಉದಾರತೆಯಾಗಿದೆ. ಎಲ್ಲರ ಲಕ್ಷ್ಯ, ಶುಭ ಸಂಕಲ್ಪವು ಬಹಳ ಚೆನ್ನಾಗಿದೆ ಮತ್ತು ಒಂದೇ ಇದೆ. ಕೇವಲ ಒಂದು ಶಬ್ಧವನ್ನು ಸೇರ್ಪಡೆ ಮಾಡಬೇಕು. ಒಬ್ಬ ತಂದೆಯನ್ನು ಪ್ರತ್ಯಕ್ಷ ಮಾಡುವುದು - ಒಂದಾಗಿದ್ದು ಒಬ್ಬರನ್ನು ಪ್ರತ್ಯಕ್ಷ ಮಾಡಬೇಕು. ಕೇವಲ ಈ ಸೇರ್ಪಡೆ ಮಾಡಬೇಕಾಗಿದೆ. ಒಬ್ಬ ತಂದೆಯ ಪರಿಚಯವನ್ನು ಕೊಡುವುದಕ್ಕಾಗಿ ಅಜ್ಞಾನಿ ಜನರೂ ಸಹ ಒಂದು ಬೆರಳಿನ ಸೂಚನೆ ಕೊಟ್ಟರು. ಎರಡು ಬೆರಳನ್ನು ತೋರಿಸಲಿಲ್ಲ. ಸಹಯೋಗಿಯಾಗುವ ಚಿಹ್ನೆಯಾಗಿಯೂ ಒಂದು ಬೆರಳನ್ನು ತೋರಿಸುತ್ತಾರೆ. ತಾವು ವಿಶೇಷ ಆತ್ಮರ ಇದೇ ವಿಶೇಷತೆಯ ಚಿಹ್ನೆಯು ನಡೆಯುತ್ತಾ ಬಂದಿದೆ. ಅಂದಮೇಲೆ ಈ ಗೋಲ್ಡನ್ ಜುಬಿಲಿಯನ್ನು ಆಚರಿಸುವುದಕ್ಕಾಗಿ ಅಥವಾ ಯೋಜನೆಯನ್ನು ಮಾಡುವುದಕ್ಕಾಗಿ ಸದಾ ಎರಡು ಮಾತುಗಳು ನೆನಪಿರಲಿ - "ಏಕತೆ ಮತ್ತು ಏಕಾಗ್ರತೆ". ಇವೆರಡೂ ಕಾರ್ಯ ಮಾಡುವ ಸಫಲತೆಯ ಶ್ರೇಷ್ಠವಾದ ಭುಜಗಳಾಗಿವೆ. ಏಕಾಗ್ರತೆ ಅರ್ಥಾತ್ ಸದಾ ನಿರ್ವ್ಯರ್ಥ ಸಂಕಲ್ಪ, ನಿರ್ವಿಕಲ್ಪ. ಎಲ್ಲಿ ಏಕತೆ ಮತ್ತು ಏಕಾಗ್ರತೆಯಿದೆಯೋ ಅಲ್ಲಿ ಸಫಲತೆಯು ಕೊರಳಿನ ಹಾರವಾಗಿದೆ. ಗೋಲ್ಡನ್ ಜುಬಿಲಿಯ ಕಾರ್ಯವನ್ನು ಈ ವಿಶೇಷವಾದ ಎರಡು ಭುಜಗಳಿಂದ ಮಾಡಿರಿ. ಎರಡು ಭುಜಗಳಂತು ಎಲ್ಲರಿಗೂ ಇದೆ. ಇವೆರಡನ್ನು ಸೇರಿಸುತ್ತೀರೆಂದರೆ ಚತುರ್ಭುಜವಾಗಿ ಬಿಡುತ್ತದೆ, ಸತ್ಯ ನಾರಾಯಣ ಮತ್ತು ಮಹಾಲಕ್ಷ್ಮಿಗೆ ನಾಲ್ಕು ಭುಜಗಳನ್ನು ತೋರಿಸಿದ್ದಾರೆ. ತಾವೆಲ್ಲರೂ ಸತ್ಯ ನಾರಾಯಣ, ಮಹಾಲಕ್ಷ್ಮಿಯಾಗಿದ್ದೀರಿ. ಚತುರ್ಭುಜಧಾರಿಗಳಾಗಿದ್ದು ಪ್ರತಿಯೊಂದು ಕಾರ್ಯವನ್ನು ಮಾಡುವುದು ಅರ್ಥಾತ್ ಸಾಕ್ಷಾತ್ಕಾರ ಸ್ವರೂಪರಾಗುವುದು. ಕೇವಲ ಎರಡು ಭುಜಗಳಿಂದ ಕಾರ್ಯವನ್ನು ಮಾಡದಿರಿ, ನಾಲ್ಕು ಭುಜಗಳಿಂದ ಮಾಡಿರಿ. ಈಗ ಗೋಲ್ಡನ್ ಜುಬಿಲಿಯ ಶ್ರೀ ಗಣೇಶನನ್ನು ಮಾಡಿದ್ದೀರಲ್ಲವೆ. ಗಣೇಶನಿಗೂ 4 ಭುಜಗಳನ್ನು ತೋರಿಸುತ್ತಾರೆ. ಬಾಪ್ದಾದಾರವರು ಪ್ರತಿನಿತ್ಯವೂ ಮೀಟಿಂಗ್ನಲ್ಲಿ ಬರುತ್ತಾರೆ. ಒಂದು ಪರಿಕ್ರಮಣದಲ್ಲಿಯೇ ಎಲ್ಲಾ ಸಮಾಚಾರಗಳು ತಿಳಿದು ಬಿಡುತ್ತದೆ. ಬಾಪ್ದಾದಾರವರು ಎಲ್ಲರ ಚಿತ್ರಗಳನ್ನೂ ಫೋಟೊ ತೆಗೆದುಕೊಳ್ಳುತ್ತಾರೆ. ಹೇಗೇಗೆ ಕುಳಿತಿದ್ದಾರೆ, ಶರೀರದ ರೂಪದಲ್ಲಲ್ಲ, ಮನಸ್ಸಿನ ಸ್ಥಿತಿಯ ಆಸನದ ಫೋಟೋ ತೆಗೆದುಕೊಳ್ಳುತ್ತಾರೆ. ಮುಖದಿಂದ ಯಾರೇನಾದರೂ ಹೇಳುತ್ತಿರಿ ಆದರೆ ಮನಸ್ಸಿನಿಂದ ಏನು ಹೇಳುತ್ತಿದ್ದಾರೆ, ಮನಸ್ಸಿನ ಆ ಮಾತನ್ನು ರೆಕಾರ್ಡ್ ಮಾಡುತ್ತಾರೆ. ಬಾಪ್ದಾದಾರವರ ಬಳಿಯೂ ಸಹ ಎಲ್ಲರ ರೆಕಾರ್ಡ್ ಮಾಡಿರುವ ಕ್ಯಾಸೆಟ್ಗಳು ಇವೆ. ಚಿತ್ರವು ಇದೆ, ಎರಡೂ ಇದೆ. ವಿಡಿಯೋ, ಟಿ.ವಿ., ಮುಂತಾದವು ಏನು ಬೇಕೋ ಅದಿದೆ. ತಮ್ಮೆಲ್ಲರ ಬಳಿಯಂತು ತಮ್ಮ ಕ್ಯಾಸೆಟ್ ಇದೆಯಲ್ಲವೆ. ಆದರೆ ಕೆಲಕೆಲವರಿಗೆ ತಮ್ಮ ಮನಸ್ಸಿನ ಧ್ವನಿ, ಸಂಕಲ್ಪವು ಗೊತ್ತಾಗುವುದಿಲ್ಲ. ಒಳ್ಳೆಯದು!

ಯೂಥ್(ಯುವ ವರ್ಗ) ಯೋಜನೆಯು ಎಲ್ಲರಿಗೂ ಇಷ್ಟವಾಗುತ್ತದೆ. ಇದೂ ಸಹ ಉಮ್ಮಂಗ-ಉತ್ಸಾಹದ ಮಾತಾಗಿದೆ. ಹಠದ ಮಾತಲ್ಲ. ಹೃದಯದ ಉಮ್ಮಂಗವೇನಿರುತ್ತದೆ, ಅದು ಸ್ವತಹವಾಗಿಯೇ ಅನ್ಯರಲ್ಲಿಯೂ ಉಮ್ಮಂಗದ ವಾತಾವರಣವನ್ನುಂಟು ಮಾಡುತ್ತದೆ. ಅಂದಮೇಲೆ ಇದು ಪಾದಯಾತ್ರೆಯಲ್ಲ. ಆದರೆ ಉಮ್ಮಂಗದ ಯಾತ್ರೆಯಾಗಿದೆ. ಇವರಂತು ನಿಮಿತ್ತವಾಗಿ ಇದ್ದಾರೆ. ಯಾರೆಲ್ಲರೂ ನಿಮಿತ್ತವಾಗಿ ಕಾರ್ಯವನ್ನು ಮಾಡುತ್ತೀರಿ, ಅವರಲ್ಲಿ ಉಮ್ಮಂಗ-ಉತ್ಸಾಹದ ವಿಶೇಷತೆಯಿರಲಿ. ಎಲ್ಲರಿಗೂ ಯೋಜನೆಯು ಇಷ್ಟವಾಗಿದೆ. ಮುಂಚೆಯೂ ಸಹ ಹೇಗೆ ನಾಲ್ಕು ಭುಜವುಳ್ಳವಾಗಿದ್ದು ಯೋಜನೆಯನ್ನು ಪ್ರತ್ಯಕ್ಷದಲ್ಲಿ ತರುತ್ತೀರೆಂದರೆ, ಇನ್ನೂ ಸೇರ್ಪಡೆಯಾಗುತ್ತಿರುತ್ತದೆ. ಬಾಪ್ದಾದಾರವರಿಗೆ ಬಹಳ ಒಳ್ಳೆಯ ಮಾತು ಇದೆನಿಸುತ್ತದೆ - ಎಲ್ಲರಿಗೂ ಗೋಲ್ಡನ್ ಜುಬಿಲಿಯನ್ನು ವಿಜೃಂಭಣೆಯಿಂದ ಆಚರಿಸುವ ಉಮ್ಮಂಗ-ಉತ್ಸಾಹವಿರುವ ಸಂಕಲ್ಪವೊಂದೇ ಇದೆ. ಈ ಬುನಾದಿಯು ಎಲ್ಲರ ಉಮ್ಮಂಗ-ಉತ್ಸಾಹದ ಸಂಕಲ್ಪದಲ್ಲಿ ಒಂದೇ ಇದೆ. ಇದೇ ಒಂದು ಶಬ್ಧವನ್ನು ಸದಾ ಅಂಡರ್ಲೈನ್ ಮಾಡಿಕೊಂಡು ಮುಂದುವರೆಯುತ್ತಿರಿ. ಒಬ್ಬರಿದ್ದಾರೆ, ಒಂದು ಕಾರ್ಯವಿದೆ. ಭಲೆ ಯಾವುದೇ ಮೂಲೆಯಲ್ಲಿಯೇ ಆಗುತ್ತಿದೆ, ಭಲೆ ದೇಶದಲ್ಲಿರಲಿ ಅಥವಾ ವಿದೇಶದಲ್ಲಿರಲಿ. ಭಲೆ ಯಾವುದೇ ಝೋನಿನಲ್ಲಿರಲಿ, ಪೂರ್ವದಲ್ಲಿರಲಿ ಅಥವಾ ಪಶ್ಚಿಮದಲ್ಲಿರಲಿ ಆದರೆ ಒಂದಾಗಿದ್ದೇವೆ, ಒಬ್ಬರ ಕಾರ್ಯವಾಗಿದೆ. ಎಲ್ಲರಲ್ಲಿ ಇದೇ ಸಂಕಲ್ಪವಿದೆಯಲ್ಲವೆ. ಮೊದಲು ಈ ಪ್ರತಿಜ್ಞೆಯನ್ನು ಮಾಡಿದಿರಲ್ಲವೆ. ಮುಖದ ಪ್ರತಿಜ್ಞೆಯಲ್ಲ, ಮನಸ್ಸಿನಲ್ಲಿ ಈ ಪ್ರತಿಜ್ಞೆ ಅರ್ಥಾತ್ ಅಟಲ ಸಂಕಲ್ಪ. ಏನೇ ಆಗಲಿ ಆದರೆ ಅದನ್ನು ಮುರಿಯಲು ಸಾಧ್ಯವಿಲ್ಲ, ಅಟಲವಾಗಿದೆ. ಇಂತಹ ಪ್ರತಿಜ್ಞೆಯು ಎಲ್ಲರೂ ಮಾಡಿದಿರಾ? ಹೇಗೆ ಯಾವುದೇ ಶುಭಕಾರ್ಯವನ್ನು ಮಾಡಲಾಗುತ್ತದೆಯೆಂದರೆ, ಪ್ರತಿಜ್ಞೆ ಮಾಡುವುದಕ್ಕಾಗಿ ಎಲ್ಲರಲ್ಲಿ ಮೊದಲು ಮನಸ್ಸಿನಲ್ಲಿ ಸಂಕಲ್ಪ ಮಾಡುವ ಚಿಹ್ನೆಯಾಗಿ ಕಂಕಣವನ್ನು ಕಟ್ಟುತ್ತಾರೆ. ಅಂದಮೇಲೆ ಇದು ಶ್ರೇಷ್ಠ ಸಂಕಲ್ಪದ ಕಂಕಣವಾಗಿದೆಯಲ್ಲವೆ ಮತ್ತು ಹೇಗೆ ಇಂದು ಎಲ್ಲರೂ ಭಂಡಾರಿಯಲ್ಲಿ ಬಹಳ ಉಮ್ಮಂಗ-ಉತ್ಸಾಹದಿಂದ ಶ್ರೀ ಗಣೇಶ ಮಾಡಿದ್ದೀರಿ. ಹಾಗೆಯೇ ಈಗ ಈ ಭಂಡಾರಿಯನ್ನಿಡಿ, ಅದರಲ್ಲಿ ಎಲ್ಲರ ಈ ಅಟಲ ಪ್ರತಿಜ್ಞೆಯೆಂದು ತಿಳಿಯಲಿ, ಇವರೂ ಸಹ ಈ ಪ್ರತಿಜ್ಞೆಯ ಚೀಟಿಯನ್ನು ಹಾಕಲಿ. ಎರಡೂ ಭಂಡಾರಿಯು ಜೊತೆ ಜೊತೆಗಿರುತ್ತದೆಯೆಂದರೆ ಸಫಲತೆಯಾಗುತ್ತದೆ ಮತ್ತು ಹೃದಯಪೂರ್ವಕವಾಗಿರಲಿ, ತೋರ್ಪಡಿಕೆಯಿಂದಲ್ಲ. ಇದೇ ಬುನಾದಿಯಾಗಿದೆ. ಗೋಲ್ಡನ್ ಆಗಿದ್ದು ಗೋಲ್ಡನ್ ಜುಬಿಲಿಯನ್ನಾಚರಿಸಲು ಇದು ಆಧಾರವಾಗಿದೆ. ಇದರಲ್ಲಿ ಕೇವಲ ಒಂದು ಸ್ಲೋಗನ್ ನೆನಪಿಟ್ಟುಕೊಳ್ಳಿರಿ - "ಸ್ವಯಂ ನಾವು ಸಮಸ್ಯೆಯಾಗುವುದಿಲ್ಲ, ಸಮಸ್ಯೆಯನ್ನು ನೋಡಿ ಏರುಪೇರಾಗುವುದಿಲ್ಲ", ಸ್ವಯಂ ಸಹ ಸಮಾಧಾನ ಸ್ವರೂಪರಾಗಿರುತ್ತೇವೆ ಮತ್ತು ಅನ್ಯರಿಗೂ ಸಮಾಧಾನ ಕೊಡುವವರಾಗಿರುತ್ತೇವೆ. ಈ ಸ್ಮೃತಿಯು ಸ್ವತಹವಾಗಿಯೇ ಗೋಲ್ಡನ್ ಜುಬಿಲಿಯನ್ನು ಸಫಲತಾ ಸ್ವರೂಪವನ್ನಾಗಿ ಮಾಡುತ್ತಿರುತ್ತದೆ. ಯಾವಾಗ ಫೈನಲ್ ಗೋಲ್ಡನ್ ಜುಬಿಲಿಯಾಗುತ್ತದೆ, ಆಗ ಎಲ್ಲರಿಗೂ ತಮ್ಮ ಗೋಲ್ಡನ್ ಸ್ವರೂಪದ ಅನುಭವವಾಗುತ್ತದೆ. ತಮ್ಮಲ್ಲಿ ಗೋಲ್ಡನ್ ಪ್ರಪಂಚವನ್ನು ನೋಡುವರು. ಗೋಲ್ಡನ್ ಪ್ರಪಂಚವು ಬರುತ್ತಿದೆ ಎಂದು ಕೇವಲ ಹೇಳುವುದಿಲ್ಲ, ಆದರೆ ಪ್ರತ್ಯಕ್ಷದಲ್ಲಿ ತೋರಿಸುತ್ತೇವೆ. ಹೇಗೆ ಜಾದೂಗಾರದು ತೋರಿಸುತ್ತಿರುತ್ತಾರೆ, ಇದನ್ನು ನೋಡಿ ಎಂದು ಹೇಳುತ್ತಿರುತ್ತಾರೆ....... ಅಂದಮೇಲೆ ತಮ್ಮ ಈ ಗೋಲ್ಡನ್ ಚಹರೆ, ಹೊಳೆಯುತ್ತಿರುವ ಮಸ್ತಕ, ಹೊಳೆಯುತ್ತಿರುವ ಕಣ್ಣುಗಳು, ಹೊಳೆಯುತ್ತಿರುವ ತುಟಿ ಇದೆಲ್ಲವೂ ಗೋಲ್ಡನ್ ಯುಗದ ಸಾಕ್ಷಾತ್ಕಾರ ಮಾಡಿಸಲಿ. ಹೇಗೆ ಚಿತ್ರವನ್ನು ಮಾಡುತ್ತಾರಲ್ಲವೆ - ಒಂದೇ ಚಿತ್ರದಲ್ಲಿ ಈಗೀಗ ಬ್ರಹ್ಮನನ್ನು ನೋಡಿ, ಈಗೀಗ ಕೃಷ್ಣನನ್ನು ನೋಡಿ, ವಿಷ್ಣುವನ್ನು ನೋಡಿ. ಹೀಗೆಯೇ ತಮ್ಮ ಸಾಕ್ಷಾತ್ಕಾರವಾಗಲಿ. ಈಗೀಗ ಫರಿಶ್ಥಾ, ಈಗೀಗ ವಿಶ್ವ ಮಹಾರಾಜಾ, ವಿಶ್ವ ಮಹಾರಾಣಿ ರೂಪ. ಈಗೀಗ ಸಾಧಾರಣ ಶ್ವೇತ ವಸ್ತ್ರಧಾರಿ. ಈ ಭಿನ್ನ-ಭಿನ್ನ ಸ್ವರೂಪವು ತಮ್ಮ ಗೋಲ್ಡನ್ ಮೂರ್ತಿಯಿಂದ ಕಾಣಿಸಲಿ. ತಿಳಿಯಿತೆ!

ಯಾವಾಗ ಇಷ್ಟೆಲ್ಲಾ ಆಯ್ಕೆಯಾಗಿರುವ ಆತ್ಮಿಕ ಗುಲಾಬಿಯ ಹೂ ಗುಚ್ಛವು ಒಟ್ಟಿಗೆ ಸೇರಿದೆ. ಒಂದು ಆತ್ಮಿಕ ಗುಲಾಬಿಯ ಸುಗಂಧವು ಎಷ್ಟೊಂದಿರುತ್ತದೆ, ಇದು ಇಷ್ಟು ದೊಡ್ಡ ಹೂ ಗುಚ್ಛವು ಎಷ್ಟು ಕಮಾಲ್ ಮಾಡಬಹುದು! ಮತ್ತು ಒಂದೊಂದು ನಕ್ಷತ್ರದಲ್ಲಿಯೂ ಪ್ರಪಂಚವಿದೆ. ತಾವು ಒಬ್ಬರಲ್ಲ, ಆ ನಕ್ಷತ್ರಗಳಲ್ಲಿ ಪ್ರಪಂಚವಿಲ್ಲ. ತಾವು ನಕ್ಷತ್ರಗಳಲ್ಲಂತು ಪ್ರಪಂಚವೇ ಇದೆಯಲ್ಲವೆ! ಕಮಾಲ್ ಆಗಲೇಬೇಕಾಗಿದೆ. ಆಗಿಯೇ ಇದೆ. ಕೇವಲ ಯಾರು ಮಾಡುವರು ಅವರು ಅರ್ಜುನ ಆಗಿದ್ದಾರೆ. ಬಾಕಿ ವಿಜಯವಂತು ಇದ್ದೇ ಇದೆ, ಅದು ಅಟಲವಾಗಿದೆ ಆದರೆ ಅರ್ಜುನನಾಗಬೇಕಾಗಿದೆ. ಅರ್ಜುನ ಅಂದರೆ ನಂಬರ್ವನ್. ಈಗ ಇದಕ್ಕಾಗಿ ಬಹುಮಾನ ಕೊಡಿ. ಇಡೀ ಗೋಲ್ಡನ್ ಜುಬಿಲಿಯಲ್ಲಿ ಸಮಸ್ಯೆಯಾಗಲಿಲ್ಲ, ಸಮಸ್ಯೆಯನ್ನು ನೋಡಲಿಲ್ಲ. ನಿರ್ವಿಘ್ನ, ನಿರ್ವಿಕಲ್ಪ, ನಿರ್ವಿಕಾರಿ ಮೂರೂ ವಿಶೇಷತೆಗಳಿರಲಿ. ಇಂತಹ ಗೋಲ್ಡನ್ ಸ್ಥಿತಿಯಲ್ಲಿರುವವರಿಗೆ ಬಹುಮಾನವನ್ನು ಕೊಡಿ. ಬಾಪ್ದಾದಾರವರಿಗೂ ಖುಷಿಯಿದೆ. ವಿಶಾಲ ಬುದ್ಧಿಯಿರುವ ಮಕ್ಕಳನ್ನು ನೋಡುತ್ತಾ ಖುಷಿಯಂತು ಆಗುತ್ತದೆಯಲ್ಲವೆ. ಹೇಗೆ ವಿಶಾಲ ಬುದ್ಧಿಯಿದೆ ಹಾಗೆಯೇ ವಿಶಾಲ ಹೃದಯವಿದೆ. ಎಲ್ಲರೂ ವಿಶಾಲ ಬುದ್ಧಿಯವರಾಗಿದ್ದೀರಿ, ಆದ್ದರಿಂದಲೇ ಯೋಜನೆ ಮಾಡುವುದಕ್ಕಾಗಿ ಬಂದಿದ್ದೀರಿ. ಒಳ್ಳೆಯದು!

ಸದಾ ಸ್ವಯಂನ್ನು ಆಧಾರ ಸ್ವರೂಪ, ಉದ್ಧಾರ ಮಾಡುವ ಸ್ವರೂಪರು, ಸದಾ ಉದಾರತೆಯಿರುವ ಉದಾರ ಹೃದಯ, ಉದಾರ ಚಿತ್ತ, ಸದಾ ಒಂದಾಗಿದ್ದೇವೆ, ಒಬ್ಬರದೇ ಕಾರ್ಯವಾಗಿದೆ. ಇಂತಹ ಏಕರಸ ಸ್ಥಿತಿಯಲ್ಲಿ ಸ್ಥಿತವಾಗಿರುವವರು, ಸದಾ ಏಕತೆ ಮತ್ತು ಏಕಾಗ್ರತೆಯಲ್ಲಿ ಸ್ಥಿತವಾಗಿರುವ, ಹೀಗೆ ವಿಶಾಲ ಬುದ್ಧಿ ವಿಶಾಲ ಹೃದಯ, ವಿಶಾಲ ಚಿತ್ತವಿರುವ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಮುಖ್ಯ ಸಹೋದರ-ಸಹೋದರಿಯರೊಂದಿಗೆ:-
ಎಲ್ಲರೂ ಮೀಟಿಂಗ್ ಮಾಡಿದಿರಾ. ಶ್ರೇಷ್ಠ ಸಂಕಲ್ಪಗಳ ಸಿದ್ಧಿಯು ಆಗಿಯೇ ಆಗುತ್ತದೆ. ಸದಾ ಉಮ್ಮಂಗ-ಉತ್ಸಾಹದಿಂದ ಮುಂದುವರೆಯುವುದೇ ವಿಶೇಷತೆಯಾಗಿದೆ. ಮನಸ್ಸಾ ಸೇವೆಯ ವಿಶೇಷ ಟ್ರಯಲ್ ಮಾಡಿರಿ. ಮನಸ್ಸಾ ಸೇವೆಯು ಹೇಗೆಂದರೆ ಒಂದು ಚುಂಬಕವಾಗಿದೆ. ಹೇಗೆ ಚುಂಬಕವೆಷ್ಟೇ ದೂರವಿದ್ದರೂ ಸೂಜಿಯನ್ನು ಸೆಳೆಯುತ್ತದೆ, ಹಾಗೆಯೇ ಮನಸ್ಸಾ ಸೇವೆಯ ಮೂಲಕ ಮನೆಯಲ್ಲಿ ಕುಳಿತುಕೊಂಡೇ ಸಮೀಪದಲ್ಲಿ ತಲುಪಿ ಬಿಡುತ್ತದೆ. ಈಗ ತಾವುಗಳು ಹೊರಗೆ ಹೆಚ್ಚು ವ್ಯಸ್ತರಾಗಿರುತ್ತೀರಿ, ಮನಸ್ಸಾ ಸೇವೆಯನ್ನು ಉಪಯೋಗ ಮಾಡಿರಿ. ಸ್ಥಾಪನೆಯಲ್ಲಿ ಏನೆಲ್ಲವೂ ದೊಡ್ಡ ಕಾರ್ಯಗಳಾಗಿವೆ, ಅದರ ಸಫಲತೆಯು ಮನಸ್ಸಾ ಸೇವೆಯಿಂದ ಆಗಿದೆ. ಹೇಗೆ ಅವರುಗಳು ರಾಮಲೀಲೆ ಅಥವಾ ಯಾವುದೇ ಕಾರ್ಯವನ್ನು ಮಾಡುತ್ತಾರೆಂದರೆ ಕಾರ್ಯಕ್ಕೆ ಮೊದಲು ತಮ್ಮ ಸ್ಥಿತಿಯನ್ನು, ಅದೇ ಕಾರ್ಯದನುಸಾರವಾಗಿ ವ್ರತದಲ್ಲಿಡುತ್ತಾರೆ. ಅಂದಮೇಲೆ ತಾವೆಲ್ಲರೂ ಸಹ ಮನಸ್ಸಾ ಸೇವೆಯ ವ್ರತವನ್ನು ತೆಗೆದುಕೊಳ್ಳಿರಿ. ವ್ರತ ಧಾರಣೆ ಮಾಡುವುದಿರುವುದರಿಂದ ಏರುಪೇರಿನಲ್ಲಿ ಹೆಚ್ಚಾಗಿರುತ್ತೀರಿ ಆದ್ದರಿಂದ ಫಲಿತಾಂಶದಲ್ಲಿ ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ಕಡಿಮೆ ಬರುತ್ತದೆ. ಮನಸ್ಸಾ ಸೇವೆಯ ಅಭ್ಯಾಸವು ಹೆಚ್ಚಾಗಿರಬೇಕು. ಮನಸ್ಸಾ ಸೇವೆಯನ್ನು ಮಾಡುವುದಕ್ಕಾಗಿ ಲೈಟ್ಹೌಸ್ ಮತ್ತು ಮೈಟ್ಹೌಸ್ ಸ್ಥಿತಿಯಿರಬೇಕಾಗಿದೆ. ಲೈಟ್ ಮತ್ತು ಮೈಟ್ ಎರಡೂ ಒಟ್ಟಿಗೆ ಇರಲಿ. ಮೈಕ್ ಮುಂದೆ ಮೈಟ್ ಆಗಿದ್ದು ಮಾತನಾಡಬೇಕಾಗಿದೆ. ಮೈಕ್ ಸಹ ಆಗಿರಬೇಕು, ಮೈಟ್ ಸಹ ಆಗಿರಬೇಕು, ಮುಖವೂ ಮೈಕ್ ಆಗಿದೆ.

ಅಂದಮೇಲೆ ಮೈಟ್ ಆಗಿದ್ದು ಮೈಕ್ನಿಂದ ಮಾತನಾಡಿರಿ. ಹೇಗೆ ಶಕ್ತಿಶಾಲಿ ಸ್ಥಿತಿಯಲ್ಲಿ ಮೇಲಿಂದ ಇಳಿದಿದ್ದೇನೆ, ಅವತಾರನಾಗಿದ್ದು ಎಲ್ಲರ ಪ್ರತಿ ಈ ಸಂದೇಶವನ್ನು ಕೊಡುತ್ತಿದ್ದೇನೆ. ಅವತಾರನಾಗಿದ್ದು ಮಾತನಾಡುತ್ತಿದ್ದೇನೆ. ಅವತರಿತನಾಗಿದ್ದೇನೆ. ಅವತಾರನ ಸ್ಥಿತಿಯು ಶಕ್ತಿಶಾಲಿಯಾಗಿರುತ್ತದೆಯಲ್ಲವೆ. ಮೇಲಿಂದ ಯಾರು ಇಳಿಯುತ್ತಾರೆ, ಅವರ ಗೋಲ್ಡನ್ ಸ್ಥಿತಿಯಾಗುತ್ತದೆಯಲ್ಲವೆ! ಅಂದಮೇಲೆ ಯಾವ ಸಮಯದಲ್ಲಿ ತಾವು ತಮ್ಮನ್ನು ಅವತಾರನೆಂದು ತಿಳಿಯುತ್ತೀರಿ, ಆಗ ಅದೇ ಶಕ್ತಿಶಾಲಿ ಸ್ಥಿತಿಯಿದೆ. ಒಳ್ಳೆಯದು.

ವರದಾನ:  
ಸಾಕ್ಷಿಯಾಗಿದ್ದು ಶ್ರೇಷ್ಠ ಸ್ಥಿತಿಯ ಮೂಲಕ ಸರ್ವ ಆತ್ಮರಿಗೆ ಸಕಾಶ ಕೊಡುವಂತಹ ತಂದೆಯ ಸಮಾನ ಅವ್ಯಕ್ತ ಫರಿಶ್ಥಾ ಭವ.

ನಡೆಯುತ್ತಾ-ಸುತ್ತಾಡುತ್ತಾ ಸದಾ ತಮ್ಮನ್ನು ನಿರಾಕಾರಿ ಆತ್ಮ ಮತ್ತು ಕರ್ಮವನ್ನು ಮಾಡುತ್ತಾ ಅವ್ಯಕ್ತ ಫರಿಶ್ಥಾ ಎಂದು ತಿಳಿಯುತ್ತೀರೆಂದರೆ ಸದಾ ಖುಷಿಯಲ್ಲಿ ಹಾರುತ್ತಿರುತ್ತೀರಿ. ಫರಿಶ್ತಾ ಅರ್ಥಾತ್ ಶ್ರೇಷ್ಠ ಸ್ಥಿತಿಯಲ್ಲಿ ಇರುವವರು. ಈ ದೇಹದ ಪ್ರಪಂಚದಲ್ಲಿ ಏನೇ ಆಗುತ್ತಿರಲಿ, ಆದರೆ ಸಾಕ್ಷಿಯಾಗಿದ್ದು ಎಲ್ಲರ ಪಾತ್ರವನ್ನು ನೋಡುತ್ತಿರಿ ಮತ್ತು ಸಕಾಶವನ್ನು ಕೊಡುತ್ತಿರಿ. ಸ್ಥಿತಿಯಿಂದ ಕೆಳಗಿಳಿದು ಸಕಾಶ ಕೊಡುವುದಿಲ್ಲ. ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿದ್ದು ವೃತ್ತಿ, ದೃಷ್ಟಿಯಿಂದ ಸಹಯೋಗದ, ಕಲ್ಯಾಣದ ಸಕಾಶವನ್ನು ಕೊಡಿ, ಮಿಕ್ಸ್ ಆಗಿದ್ದು ಕೊಡುವುದಲ್ಲ. ಆಗಲೇ ಯಾವುದೇ ಪ್ರಕಾರದ ವಾತಾವರಣದಿಂದ ಸುರಕ್ಷಿತವಾಗಿದ್ದು ತಂದೆಯ ಸಮಾನ ಅವ್ಯಕ್ತ ಫರಿಶ್ಥಾ ಭವದ ವರದಾನಿಯಾಗುವಿರಿ.

ಸ್ಲೋಗನ್:
ನೆನಪಿನ ಬಲದ ಮೂಲಕ ದುಃಖವನ್ನು ಸುಖದಲ್ಲಿ ಮತ್ತು ಅಶಾಂತಿಯನ್ನು ಶಾಂತಿಯಲ್ಲಿ ಪರಿವರ್ತನೆ ಮಾಡಿರಿ.


ಅವ್ಯಕ್ತ ಸ್ಥಿತಿಯ ಅನುಭವ ಮಾಡುವುದಕ್ಕಾಗಿ ವಿಶೇಷ ಹೋಮ್ವರ್ಕ್ -
ಬ್ರಹ್ಮಾ ತಂದೆಯೊಂದಿಗೆ ಪ್ರೀತಿಯಿದೆಯೆಂದರೆ ಪ್ರೀತಿಯ ಚಿಹ್ನೆಗಳು ಪ್ರತ್ಯಕ್ಷದಲ್ಲಿ ಕಾಣಿಸಬೇಕು. ಹೇಗೆ ಬ್ರಹ್ಮಾ ತಂದೆಯ ನಂಬರ್ವನ್ ಪ್ರೀತಿಯು ಮುರುಳಿಯೊಂದಿಗೆ ಇದ್ದಿತು, ಅದರಿಂದ ಮುರುಳೀಧರನಾದರು. ಅಂದಮೇಲೆ ಯಾವುದರೊಂದಿಗೆ ಬ್ರಹ್ಮಾ ತಂದೆಯ ಪ್ರೀತಿಯಿತ್ತು ಮತ್ತು ಈಗಲೂ ಇದೆ, ಅದರೊಂದಿಗೆ ಸದಾ ಪ್ರೀತಿಯು ಕಾಣಿಸಲಿ. ಪ್ರತೀ ಮುರುಳಿಯನ್ನು ಪ್ರೀತಿಯಿಂದ ಓದಿ, ಅದರ ಸ್ವರೂಪರಾಗಬೇಕು.