24.01.21 Avyakt Bapdada
Kannada
Murli 17.10.87 Om Shanti Madhuban
ಬ್ರಾಹ್ಮಣ ಜೀವನದ
ಶೃಂಗಾರ- “ಪವಿತ್ರತೆ”
ಬಾಪ್ದಾದಾರವರು ಇಂದು
ನಾಲ್ಕೂ ಕಡೆಯಲ್ಲಿರುವ ತನ್ನ ವಿಶೇಷ ಪೂಜ್ಯಾತ್ಮರಾಗುವ ಮಕ್ಕಳನ್ನು ನೋಡುತ್ತಿದ್ದಾರೆ. ಇಡೀ
ಕಲ್ಪದಲ್ಲಿರುವ ಎಲ್ಲಾ ಮಕ್ಕಳಿಂದ ಎಷ್ಟು ಸ್ವಲ್ಪವೇ ಅಮೂಲ್ಯ ರತ್ನಗಳು ಪೂಜ್ಯರಾಗಿದ್ದಾರೆ, ಇಡೀ
ವಿಶ್ವಕ್ಕಾಗಿ ಪೂಜ್ಯನೀಯ ಆತ್ಮರೇ ವಿಶೇಷವಾದ ಜಗತ್ತಿನ ಕಣ್ಮಣಿ ಆಗಿ ಬಿಡುತ್ತಾರೆ. ಹೇಗೆ ಈ
ಶರೀರದಲ್ಲಿ ಕಣ್ಣಿಲ್ಲದಿದ್ದರೆ ಜಗತ್ತೇ ಇಲ್ಲದಂತೆ, ಅದೇರೀತಿ ವಿಶ್ವದಲ್ಲಿ ಪೂಜ್ಯನೀಯ ಜಗತ್ತಿನ
ಕಣ್ಮಣಿಗಳಾದ ತಾವು ಶ್ರೇಷ್ಠಾತ್ಮರಾಗದಿದ್ದರೆ ವಿಶ್ವದ ಮಹತ್ವವೂ ಇರುವುದಿಲ್ಲ. ತಾವು ವಿಶೇಷ
ಆತ್ಮರಿಂದಲೇ ಸ್ವರ್ಣೀಮ ಯುಗ ಅಥವಾ ಆದಿ ಯುಗ ಅಥವಾ ಸತೋಪ್ರಧಾನ ಯುಗ, ಹೊಸ ಪ್ರಪಂಚದ
ಆರಂಭವಾಗುತ್ತದೆ. ಹೊಸ ವಿಶ್ವದ ಆಧಾರ ಮೂರ್ತಿಗಳು, ಪೂಜ್ಯನೀಯ ಆತ್ಮರೂ ತಾವಾಗಿದ್ದೀರಿ ಅಂದಮೇಲೆ
ತಾವಾತ್ಮರ ಮಹತ್ವಿಕೆ ಎಷ್ಟೊಂದಿದೆ! ತಾವು ಪೂಜ್ಯಾತ್ಮರು ಇಡೀ ಪ್ರಪಂಚಕ್ಕಾಗಿ ಹೊಸ ಬೆಳಕಾಗಿದ್ದೀರಿ,
ತಮ್ಮ ಏರುವ ಕಲೆಯು ವಿಶ್ವವನ್ನೇ ಶ್ರೇಷ್ಠ ಕಲೆಯಲ್ಲಿ ತರುವುದಕ್ಕಾಗಿ ನಿಮಿತ್ತವಾಗುತ್ತದೆ. ತಾವು
ಬೀಳುವ ಕಲೆಯಲ್ಲಿ ಬರುತ್ತೀರೆಂದರೆ ಪ್ರಪಂಚವೂ ಬೀಳುವ ಕಲೆಯಾಗುತ್ತದೆ. ತಾವು
ಪರಿವರ್ತನೆಯಾಗುತ್ತೀರೆಂದರೆ ವಿಶ್ವವೂ ಪರಿವರ್ತನೆಯಾಗುತ್ತದೆ - ತಾವು ಇಷ್ಟು ಮಹಾನ್ ಹಾಗೂ
ಮಹತ್ವವಿರುವ ಆತ್ಮರಾಗಿದ್ದೀರಿ!
ಇಂದು ಬಾಪ್ದಾದಾರವರು ಸರ್ವ ಮಕ್ಕಳನ್ನು ನೋಡುತ್ತಿದ್ದರು. ಬ್ರಾಹ್ಮಣರಾಗುವುದು ಅರ್ಥಾತ್
ಪೂಜ್ಯಾರಾಗುವುದಾಗಿದೆ ಏಕೆಂದರೆ ಬ್ರಾಹ್ಮಣರಿಂದ ದೇವತೆಯಾಗುತ್ತಾರೆ ಮತ್ತು ದೇವತೆಗಳು ಅರ್ಥಾತ್
ಪೂಜ್ಯನೀಯರು. ಎಲ್ಲಾ ದೇವತೆಗಳು ಅವಶ್ಯವಾಗಿ ಪೂಜ್ಯನೀಯರಾಗುತ್ತಾರೆ, ಆದರೂ ಸಹ ಅವಶ್ಯವಾಗಿ
ನಂಬರ್ವಾರ್ ಆಗಿರುತ್ತಾರೆ. ಕೆಲವು ದೇವತೆಗಳ ಪೂಜೆಯು ವಿಧಿಪೂರ್ವಕವಾಗಿ ಮತ್ತು ನಿಯಮಿತ
ರೂಪದಲ್ಲಾಗುತ್ತದೆ, ಮತ್ತೆ ಕೆಲವು ದೇವತೆಗಳ ಪೂಜ್ಯೆಯು ವಿಧಿಪೂರ್ವಕ ಹಾಗೂ ನಿಯಮಿತವಾಗಿ
ಆಗುವುದಿಲ್ಲ. ಕೆಲವು ದೇವತೆಗಳ ಪೂಜೆಯು ಪ್ರತೀ ಕರ್ಮದಲ್ಲಿಯೂ ಆಗುತ್ತದೆ, ಇನ್ನೂ ಕೆಲವರ ಪ್ರತೀ
ಕರ್ಮದ ಪೂಜೆಯಾಗುವುದಿಲ್ಲ. ಕೆಲವರದು ವಿಧಿಪೂರ್ವಕವಾಗಿ ಪ್ರತಿನಿತ್ಯವೂ ಶೃಂಗಾರವಾಗುತ್ತದೆ, ಇನ್ನೂ
ಕೆಲವು ದೇವತೆಗಳ ಶೃಂಗಾರವು ನಿತ್ಯವೂ ಆಗುವುದಿಲ್ಲ, ಮೇಲ್ಮೇಲೆ ಅಲ್ಪ ಸ್ವಲ್ಪ ಶೃಂಗರಿಸಿ
ಬಿಡುತ್ತಾರೆ ಆದರೆ ವಿಧಿಪೂರ್ವಕವಾಗಿ ಮಾಡುವುದಿಲ್ಲ. ಕೆಲವು ದೇವತೆಗಳ ಮುಂದೆ ಇಡೀ ಸಮಯದಲ್ಲಿಯೂ
ಕೀರ್ತನೆಯಾಗುತ್ತದೆ ಮತ್ತೆ ಕೆಲವು ದೇವತೆಗಳ ಮುಂದೆ ಕೆಲಕೆಲವೊಮ್ಮೆ ಕೀರ್ತನೆ ಆಗುತ್ತದೆ. ಈ
ರೀತಿಯಾಗಲು ಕಾರಣವೇನು? ಬ್ರಾಹ್ಮಣರೆಂದು ಎಲ್ಲರೂ ಹೇಳಿಕೊಳ್ಳುತ್ತಾರೆ, ಜ್ಞಾನ-ಯೋಗದ ವಿದ್ಯೆಯನ್ನೂ
ಸಹ ಎಲ್ಲರೂ ಮಾಡುತ್ತಾರೆ, ಆದರೂ ಇಷ್ಟು ಅಂತರವೇಕೆ ಆಗುತ್ತದೆ? ಧಾರಣೆ ಮಾಡುವುದರಲ್ಲಿ ಅಂತರವಿದೆ.
ಇಷ್ಟಾದರೂ ಯಾವ ವಿಶೇಷ ಧಾರಣೆಗಳ ಆಧಾರದಿಂದ ನಂಬರ್ವಾರ್ ಆಗುತ್ತಾರೆ ಎಂಬುದು ಗೊತ್ತಿದೆಯೇ?
ಪೂಜ್ಯನೀಯರಾಗುವ ವಿಶೇಷ ಆಧಾರವು ಪವಿತ್ರತೆಯೇ ಮೇಲೆ ಆಧಾರಿತವಾಗಿದೆ. ಸರ್ವ ಪ್ರಕಾರ
ಪವಿತ್ರತೆಯನ್ನೆಷ್ಟು ಧಾರಣೆ ಮಾಡುತ್ತೀರಿ, ಅಷ್ಟು ಸರ್ವ ಪ್ರಕಾರದ ಪೂಜ್ಯನೀಯರೂ ಆಗುತ್ತೀರಿ ಮತ್ತು
ಯಾರು ನಿರಂತರ ವಿಧಿಪೂರ್ವಕವಾಗಿ ಆದಿ, ಅನಾದಿ ವಿಶೇಷ ಗುಣದ ರೂಪದಿಂದ, ಪವಿತ್ರತೆಯನ್ನು ಸಹಜವಾಗಿಯೇ
ಧಾರಣೆ ಮಾಡಿಕೊಳ್ಳುತ್ತಾರೆಯೋ, ಅವರೇ ವಿಧಿಪೂರ್ವಕ ಪೂಜ್ಯರಾಗುತ್ತಾರೆ. ಸರ್ವ ಪ್ರಕಾರದ
ಪವಿತ್ರತೆಯೆಂದರೆ ಏನು? ಯಾವ ಆತ್ಮರು ಸಹಜ, ಸ್ವತಹವಾಗಿಯೇ ಪ್ರತೀ ಸಂಕಲ್ಪದಲ್ಲಿ, ಪ್ರತೀ
ಮಾತಿನಲ್ಲಿ, ಕರ್ಮದಲ್ಲಿ ಸರ್ವ ಅಂದರೆ ಜ್ಞಾನಿ ಮತ್ತು ಅಜ್ಞಾನಿ ಆತ್ಮರು, ಸರ್ವರ ಸಂಪರ್ಕದಲ್ಲಿಯೂ
ಸದಾ ಪವಿತ್ರ ವೃತ್ತಿ, ದೃಷ್ಟಿ, ವೈಬ್ರೇಷನ್ನಿಂದ ಯಥಾರ್ಥವಾದ ಸಂಬಂಧ-ಸಂಪರ್ಕವನ್ನು
ನಿಭಾಯಿಸುತ್ತಾರೆ - ಇದಕ್ಕೇ ಸರ್ವ ಪ್ರಕಾರದ ಪವಿತ್ರತೆಯೆಂದು ಹೇಳಲಾಗುತ್ತದೆ. ಸ್ವಯಂನ ಬಗ್ಗೆ
ಅಥವಾ ಅನ್ಯ ಯಾವುದೇ ಆತ್ಮನ ಪ್ರತಿ ಸ್ವಪ್ನದಲ್ಲಿಯೂ ಸಹ, ಸರ್ವ ಪ್ರಕಾರದ ಪವಿತ್ರತೆಯಲ್ಲಿ ಯಾವುದೇ
ಕೊರತೆಯೂ ಆಗಬಾರದು. ಸ್ವಪ್ನದಲ್ಲೇನಾದರೂ ಬ್ರಹ್ಮಚರ್ಯದ ಪಾಲನೆಯು ಖಂಡಿತವಾಯಿತು ಅಥವಾ ಯಾವುದಾದರೂ
ಆತ್ಮನ ಪ್ರತಿ, ಯಾವುದೇ ಪ್ರಕಾರದ ಈರ್ಷ್ಯೆಯಿರಬಹುದು ಅಥವಾ ಆವೇಶಕ್ಕೆ ವಶರಾಗಿದ್ದು
ಕರ್ಮವಾಗುತ್ತದೆ ಅಥವಾ ಮಾತನಾಡಲಾಗುತ್ತದೆ, ಕ್ರೋಧದ ಅಂಶ ರೂಪದಲ್ಲಾದರೂ ವ್ಯವಹಾರ ಮಾಡುತ್ತೀರೆಂದರೂ
ಸಹ ಪವಿತ್ರತೆಯ ಖಂಡನೆಯೆಂದು ತಿಳಿದುಕೊಳ್ಳಲಾಗುತ್ತದೆ. ವಿಚಾರ ಮಾಡಿ - ಯಾವಾಗ ಸ್ವಪ್ನದ ಪ್ರಭಾವವೂ
ಬೀರುತ್ತದೆಯೆಂದರೆ, ಸಾಕಾರದಲ್ಲಿ ಮಾಡಿರುವಂತಹ ಕರ್ಮದ ಪ್ರಭಾವವಿನ್ನೆಷ್ಟು ಬಿರಬಹುದು! ಆದರಿಂದ
ಖಂಡನೆಯಾಗಿರುವ ಮೂರ್ತಿಯನ್ನೆಂದಿಗೂ ಪೂಜ್ಯನೀಯವಾಗುವುದಿಲ್ಲ. ಮಂದಿರಗಳಲ್ಲಿ ಖಂಡಿತ
ಮೂರ್ತಿಗಳೆಂದಿಗೂ ಇರುವುದಿಲ್ಲ, ಇತ್ತೀಚೆಗೆ ಇರುವಂತಹ ಮ್ಯೂಜಿಯಂನಲ್ಲಿ ಇರುತ್ತವೆ ಆದರೆ ಅಲ್ಲಿ
ಭಕ್ತರು ಬರುವುದಿಲ್ಲ, ಇವು ಬಹಳ ಮೂರ್ತಿಗಳಾಗಿವೆ ಎಂದು ಗಾಯನವಾಗುತ್ತದೆ ಅಷ್ಟೇ. ಅವರುಗಳು ಸ್ಥೂಲ
ಅಂಗಗಳ ಖಂಡಿತವಾಗಿರುವುದನ್ನು ಖಂಡಿತ ಮೂರ್ತಿ ಎಂದು ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಯಾವುದೇ
ಪ್ರಕಾರದ ಪವಿತ್ರತೆಯು ಖಂಡನೆಯಾಗುತ್ತದೆಯೆಂದರೆ, ಅವರು ಪೂಜ್ಯ ಪದವಿಯಿಂದ ಖಂಡಿತವಾಗಿ ಬಿಡುತ್ತಾರೆ.
ಈ ರೀತಿಯಾಗಿ ನಾಲ್ಕೂ ಪ್ರಕಾರದಲ್ಲಿಯ ಪವಿತ್ರತೆಯು ವಿಧಿ ಪೂರ್ವಕವಾಗಿ ಇದೆಯೆಂದರೆ, ಪೂಜೆಯೂ ಸಹ
ವಿಧಿ ಪೂರ್ವಕವಾಗಿ ಆಗುತ್ತದೆ.
ಮನ, ವಾಣಿ, ಕರ್ಮ (ಕರ್ಮದಲ್ಲಿ ಸಂಬಂಧ-ಸಂಪರ್ಕವೂ ಬರುತ್ತದೆ) ಮತ್ತು ಸ್ವಪ್ನದಲ್ಲಿಯೂ ಪವಿತ್ರತೆ
ಇರುವುದಕ್ಕೆ ಹೇಳಲಾಗುತ್ತದೆ - ಸಂಪೂರ್ಣ ಪವಿತ್ರತೆ. ಕೆಲವು ಮಕ್ಕಳು ಹುಡುಗಾಟಿಕೆಯಲ್ಲಿ ಬರುವ
ಕಾರಣದಿಂದ, ಭಲೆ ಕಿರಿಯರಿರಬಹುದು ಅಥವಾ ಹಿರಿಯರಿರಬಹುದು, ಅವರು ನನ್ನ ಸ್ವಭಾವವು ಬಹಳ ಚೆನ್ನಾಗಿದೆ
ಎನ್ನುವ ಮಾತಿನಲ್ಲಿ ನಡೆಸಲು ಪ್ರಯತ್ನಿಸುತ್ತಾರೆ. ಆದರೆ ಮಾತು ಹೊರ ಬಂದಿತು ಅಥವಾ ನನ್ನಲ್ಲಿ
ಅಂತಹ ಲಕ್ಷ್ಯವಿರಲಿಲ್ಲ, ಆದರೆ ಆಗಿ ಬಿಟ್ಟಿತು ಅಥವಾ ತಮಾಷೆಯಲ್ಲಿ ಹೇಳಿದಿರಿ ಅಥವಾ ಮಾಡಿ
ಬಿಟ್ಟೆವು ಎಂದು ಹೇಳುತ್ತಾರೆ. ಇದೂ ಸಹ ಚಲಾಯಿಸುವುದಾಗಿದೆ ಆದ್ದರಿಂದ ಪೂಜೆಯೂ ಸಹ ಅದೇ ರೀತಿಯಲ್ಲಿ
ಆಗುತ್ತದೆ, ಈ ಹುಡುಗಾಟಿಕೆಯು ತಮ್ಮ ಸಂಪೂರ್ಣ ಪೂಜ್ಯ ಸ್ಥಿತಿಯನ್ನು ನಂಬರ್ವಾರ್ನಲ್ಲಿ
ತೆಗೆದುಕೊಂಡು ಬರುತ್ತದೆ. ಇದೂ ಸಹ ಅಪವಿತ್ರತೆಯ ಖಾತೆಯಲ್ಲಿ ಜಮಾ ಆಗಿ ಬಿಡುತ್ತದೆ. ಬಾಪ್ದಾದಾರವರು
ಮುಂಚೆಯೇ ತಿಳಿಸಿದ್ದಾರಲ್ಲವೆ - ಪೂಜ್ಯ, ಪವಿತ್ರ ಆತ್ಮರ ಚಿಹ್ನೆಯಾಗಿ ಇದೇ ಇರುತ್ತದೆ, ಅವರು
ನಾಲ್ಕೂ ಪ್ರಕಾರದ ಪವಿತ್ರತೆಯಲ್ಲಿ ಸ್ವಾಭಾವಿಕ, ಸಹಜ ಮತ್ತು ಸದಾ ಇರುತ್ತಾರೆ. ಅದರ ಬಗ್ಗೆ
ಯೋಚಿಸಬೇಕಾಗಿರುವುದಿಲ್ಲ. ಆದರೆ ಪವಿತ್ರತೆಯ ಧಾರಣೆಯು ಸ್ವತಹವಾಗಿಯೇ ಯಥಾರ್ಥ ಸಂಕಲ್ಪ, ಮಾತು,
ಕರ್ಮ ಮತ್ತು ಸ್ವಪ್ನವನ್ನು ತರುತ್ತದೆ. ಯಥಾರ್ಥ ಅರ್ಥಾತ್ ಒಂದಂತು ಯುಕ್ತಿ ಯುಕ್ತ, ಇನ್ನೊಂದು
ಅರ್ಥ - ಪ್ರತೀ ಸಂಕಲ್ಪದಲ್ಲಿ ಅರ್ಥವಿರುತ್ತದೆ, ಅನರ್ಥವಾಗಿರುವುದಿಲ್ಲ. ಹೇಳುತ್ತಾರಲ್ಲವೆ -
ಹಾಗೆಯೇ ಮಾತು ಬಂದಿತು, ಮಾತನಾಡಿ ಬಿಟ್ಟೆನು, ಮಾಡಿ ಬಿಟ್ಟೆನು, ಆಗಿ ಬಿಟ್ಟಿತು. ಪವಿತ್ರ ಆತ್ಮರು
ಸದಾ ಪ್ರತೀ ಕರ್ಮದಲ್ಲಿಯೂ ಅರ್ಥಾತ್ ದಿನಚರಿಯಲ್ಲಿ ಯಥಾರ್ಥ ಯುಕ್ತಿಯುಕ್ತವಾಗಿ ಇರುತ್ತಾರೆ
ಆದ್ದರಿಂದ ಅವರ ಪ್ರತೀ ಕರ್ಮದ ಪೂಜೆಯಾಗುತ್ತದೆ ಅರ್ಥಾತ್ ಇಡೀ ದಿನಚರಿಯ ಪೂಜೆಯಾಗುತ್ತದೆ.
ಏಳುವುದರಿಂದ ಮಲಗುವವರೆಗೂ ಭಿನ-ಭಿನ್ನ ಕರ್ಮಗಳ ದರ್ಶನವಾಗುತ್ತದೆ.
ಒಂದುವೇಳೆ ಯಾವುದೇ ಕರ್ಮವು ಬ್ರಾಹ್ಮಣ ಜೀವನದ ದಿನಚರಿ ಅನುಸಾರ ಯಥಾರ್ಥ ಅಥವಾ ನಿರಂತರವಾಗಿ
ಮಾಡುತ್ತಿಲ್ಲವೆಂದರೆ, ಆ ದಿನಚರಿಯ ಅಂತರದ ಕಾರಣದಿಂದ ಪೂಜೆಯಲ್ಲಿಯೂ ಅಂತರವಾಗಿ ಬಿಡುತ್ತದೆ. ಉದಾ:
ಯಾರಾದರೂ ಅಮೃತವೇಳೆ ಏಳುವ ದಿನಚರಿಯಲ್ಲಿ ವಿಧಿಪೂರ್ವಕವಾಗಿ ನಡೆಯುವುದಿಲ್ಲವೆಂದರೆ, ಪೂಜೆಯಲ್ಲಿಯೂ
ಅವರ ಪೂಜಾರಿಯೂ ಸಹ ಅಂತಹ ವಿಧಿಯಲ್ಲಿಯೇ ಏರುಪೇರು ಮಾಡುತ್ತಾರೆ ಅರ್ಥಾತ್ ಪೂಜಾರಿಯೂ ಸಹ
ಸಮಯದಲ್ಲೆದ್ದು ಪೂಜೆ ಮಾಡುವುದಿಲ್ಲ, ಯಾವಾಗ ಬರುತ್ತಾರೆಯೋ ಆಗಲೇ ಪೂಜೆ ಮಾಡಿ ಬಿಡುತ್ತಾರೆ ಅಥವಾ
ಅಮೃತವೇಳೆಯಲ್ಲಿ ಜಾಗೃತ ಸ್ಥಿತಿಯಲ್ಲಿದ್ದು ಅನುಭವ ಮಾಡಲಿಲ್ಲ, ವಿವಶತೆಯಿಂದ ಅಥವಾ ಕೆಲವೊಮ್ಮೆ
ಸುಸ್ತಿ, ಕೆಲವೊಮ್ಮೆ ಜಾಗೃತ ರೂಪದಿಂದ ಕುಳಿತುಕೊಳ್ಳುತ್ತಾರೆಂದರೆ, ಪೂಜಾರಿಯೂ ಸಹ ವಿವಶತೆಯಿಂದ
ಅಥವಾ ಸುಸ್ತಿಯಿಂದ ಪೂಜೆ ಮಾಡುತ್ತಾರೆ ಆದರೆ ವಿಧಿಪೂರ್ವಕ ಪೂಜೆ ಮಾಡುವುದಿಲ್ಲ. ಅದೇರೀತಿ
ದಿನಚರಿಯ ಪ್ರತಿಯೊಂದು ಕರ್ಮದ ಪ್ರಭಾವವು ಪೂಜ್ಯನೀಯರಾಗುವುದರಲ್ಲಿ ಪ್ರಭಾವವುಂಟಾಗುತ್ತದೆ ಏಕೆಂದರೆ
ಆಲಸ್ಯ ಮತ್ತು ಹುಡುಗಾಟಿಕೆಯೂ ಸಹ ವಿಕಾರವಾಗಿದೆ. ಯಾವುದು ಯಥಾರ್ಥವಾದ ಕರ್ಮವಲ್ಲವೋ ಅದು
ವಿಕಾರವಾಗಿದೆ, ಅಂದಮೇಲೆ ಅಪವಿತ್ರತೆಯ ಅಂಶವಾಯಿತಲ್ಲವೆ. ಇದರ ಕಾರಣದಿಂದ ಪೂಜ್ಯ ಪದವಿಯಲ್ಲಿ
ನಂಬರ್ವಾರ್ ಆಗಿಬಿಡುತ್ತಾರೆ. ಅಂದಾಗ ಫೌಂಡೇಷನ್ ಏನಾಯಿತು? ಪವಿತ್ರತೆ.
ಪವಿತ್ರತೆಯ ಧಾರಣೆಯು ಬಹಳ ಸೂಕ್ಷ್ಮವಾಗಿದೆ. ಪವಿತ್ರತೆಯ ಆಧಾರದಿಂದಲೇ ಕರ್ಮದ ವಿಧಿ ಮತ್ತು ಗತಿಯ
ಆಧಾರವಾಗಿದೆ. ಪವಿತ್ರತೆಯು ಕೇವಲ ಚಿಕ್ಕ ಮಾತಲ್ಲ. ಬ್ರಹ್ಮಚಾರಿಯಾಗಿರುವುದು ಅಥವಾ
ನಿರ್ಮೋಹಿಯಾಗುವುದಕ್ಕೇ ಪವಿತ್ರತೆಯೆಂದು ಹೇಳುವುದಿಲ್ಲ. ಪವಿತ್ರತೆಯು ಬ್ರಾಹ್ಮಣ ಜೀವನದ
ಶೃಂಗಾರವಾಗಿದೆ. ಅಂದಮೇಲೆ ಅದು ಪ್ರತೀ ಸಮಯದಲ್ಲಿಯೂ ಚಹರೆ ಮತ್ತು ಚಲನೆಯಿಂದ ಅನ್ಯರಿಗೂ
ಪವಿತ್ರತೆಯ ಶೃಂಗಾರದ ಅನುಭೂತಿಯಾಗಲಿ. ದೃಷ್ಟಿಯಲ್ಲಿ, ಮುಖದಲ್ಲಿ, ಕೈಗಳಲ್ಲಿ, ಪಾದಗಳಲ್ಲಿಯೂ ಸದಾ
ಪವಿತ್ರತೆಯ ಶೃಂಗಾರವು ಪ್ರತ್ಯಕ್ಷವಾಗಲಿ, ಚಹರೆಯ ಕಡೆ ಯಾರೇ ನೋಡಿದರೂ ಸಹ, ಲಕ್ಷಣದಿಂದ
ಪವಿತ್ರತೆಯ ಅನುಭವವಾಗಲಿ. ಹೇಗೆ ಅನ್ಯ ಪ್ರಕಾರದ ಲಕ್ಷಣಗಳ ಬಗ್ಗೆ ವರ್ಣನೆ ಮಾಡುತ್ತಾರೆ, ಅದೇ
ರೀತಿಯಲ್ಲಿ ಇದರ ವರ್ಣನೆ ಮಾಡಲಿ - ಇವರ ಲಕ್ಷಣಗಳಿಂದ ಪವಿತ್ರತೆಯು ಕಾಣಿಸುತ್ತದೆ, ನಯನಗಳಲ್ಲಿ
ಪವಿತ್ರತೆಯ ಹೊಳಪಿದೆ, ಮುಖದಲ್ಲಿ ಪವಿತ್ರತೆಯ ಮುಗುಳ್ನಗು ಇದೆ, ಇದರ ಹೊರತು ಮತ್ತ್ಯಾವುದೇ
ದೃಷ್ಟಿಯಾಗಬಾರದು. ಇದಕ್ಕೇ ಹೇಳಲಾಗುತ್ತದೆ - ಪವಿತ್ರತೆಯ ಶೃಂಗಾರದಿಂದ ಶೃಂಗಾರಿತವಾಗಿರುವ ಮೂರ್ತಿ.
ತಿಳಿಯಿತೆ? ಪವಿತ್ರತೆಯ ಬಗ್ಗೆ ಇನ್ನೂ ಬಹಳ ಆಳವಾದ ರಹಸ್ಯವಿದೆ, ಅದನ್ನು ನಂತರದಲ್ಲಿ
ತಿಳಿಸುತ್ತಿರುತ್ತೇವೆ. ಕರ್ಮಗಳ ಗತಿಯು ಹೇಗೆ ಗುಹ್ಯವಾಗಿದೆಯೋ ಹಾಗೆಯೇ ಪವಿತ್ರತೆಯ
ಪರಿಭಾಷೆಯಲ್ಲಿಯೂ ಬಹಳ ಗುಹ್ಯತೆಯಿದೆ ಮತ್ತು ಪವಿತ್ರತೆಯೇ ಆಧಾರವೂ ಆಗಿದೆ. ಒಳ್ಳೆಯದು.
ಇಂದು ಗುಜರಾತಿನವರು ಬಂದಿದ್ದಾರೆ. ಗುಜರಾತಿನವರು ಸದಾ ಹಗುರವಾಗಿದ್ದು ನರ್ತಿಸುತ್ತಾರೆ ಮತ್ತು
ಹಾಡುತ್ತಾರೆ. ಭಲೆ ಶರೀರವೆಷ್ಟಾದರೂ ಭಾರಿಯಾಗಿರಲಿ ಆದರೂ ಹಗುರವಾಗಿ ನರ್ತಿಸುತ್ತಾರೆ. ಸದಾ
ಹಗುರವಾಗಿರುವ, ಸದಾ ಖುಷಿಯಲ್ಲಿ ನರ್ತಿಸುವ ಮತ್ತು ತಂದೆಯ ಅಥವಾ ತನ್ನ ಪ್ರಾಪ್ತಿಗಳ ಗುಣ ಗಾನ
ಮಾಡುತ್ತಿರುವುದು ಗುಜರಾತಿನವರ ವಿಶೇಷತೆಯಾಗಿದೆ. ಬಾಲ್ಯದಿಂದಲೂ ನರ್ತಿಸುತ್ತಾ-ಹಾಡುತ್ತಾ
ಇರುತ್ತಾರೆ. ಬ್ರಾಹ್ಮಣ ಜೀವನದಲ್ಲೇನು ಮಾಡುತ್ತೀರಿ? ಬ್ರಾಹ್ಮಣ ಜೀವನವೆಂದರೆ ಮೋಜಿನ ಜೀವನವಾಗಿದೆ.
ಗರ್ಬಾರಾಸ್ ಮಾಡುತ್ತೀರೆಂದರೆ ಮೋಜಿನಲ್ಲಿ ಬಂದು ಬಿಡುತ್ತೀರಲ್ಲವೆ. ಒಂದುವೇಳೆ ಮೋಜಿನಲ್ಲಿ
ಬರದಿದ್ದರೆ ಹೆಚ್ಚಾಗಿ ಮಾಡಲು ಸಾಧ್ಯವಾಗುವುದಿಲ್ಲ. ಮೋಜು-ಮಸ್ತಿಯಲ್ಲಿ ಸುಸ್ತಾಗುವುದಿಲ್ಲ,
ಅವಿಶ್ರಾಂತರಾಗಿ ಬಿಡುತ್ತಾರೆ. ಅಂದಾಗ ಬ್ರಾಹ್ಮಣ ಜೀವನವೆಂದರೆ ಸದಾ ಮೋಜಿನಲ್ಲಿರುವ ಜೀವನ. ಅದು
ಸ್ಥೂಲ ಮೋಜಿನ ಜೀವನವಾಗಿದೆ ಮತ್ತು ಬ್ರಾಹ್ಮಣ ಜೀವನವು ಮನಸ್ಸಿನ ಮೋಜಿನ ಜೀವನವಾಗಿದೆ. ಸದಾ
ಮನಸ್ಸಿನ ಮೋಜಿನಲ್ಲಿ ನರ್ತಿಸುತ್ತಾ ಮತ್ತು ಹಾಡುತ್ತಿರಿ. ಅವರುಗಳು ಹಗುರವಾಗಿದ್ದು ನರ್ತಿಸುವ
ಮತ್ತು ಹಾಡುವ ಅಭ್ಯಾಸಿಯಾಗಿದ್ದಾರೆ, ಅಂದಾಗ ಇವರುಗಳು (ಗುಜರಾತಿನವರು) ಬ್ರಾಹ್ಮಣ ಜೀವನದಲ್ಲಿಯೂ
ಡಬಲ್ಲೈಟ್ ಆಗುವುದರಲ್ಲಿ ಕಷ್ಟವೆನಿಸುವುದಿಲ್ಲ. ಗುಜರಾತ್ ಅರ್ಥಾತ್ ಸದಾ ಹಗುರವಾಗಿರುವ ಅಭ್ಯಾಸಿ
ಅಥವಾ ವರದಾನಿಯೆಂದು ಹೇಳಬಹುದು. ಇಡೀ ಗುಜರಾತಿಗೇ ಡಬಲ್ಲೈಟ್ ಆಗಿರುವ ವರದಾನವು ಸಿಕ್ಕಿ ಬಿಟ್ಟಿತು.
ವರದಾನವಂತು ಮುರುಳಿಯ ಮೂಲಕವೂ ಸಿಗುತ್ತದೆಯಲ್ಲವೆ.
ತಮ್ಮ ಈ ಪ್ರಪಂಚದಲ್ಲಿ ಯಥಾ ಶಕ್ತಿ, ಯಥಾ ಸಮಯವೇ ಇರುತ್ತದೆ ಎಂದು ತಿಳಿಸಿದ್ದೇವಲ್ಲವೆ. ಮತ್ತು
ವತನದಲ್ಲಂತು ಯಥಾ-ತಥಾ ಎಂಬ ಭಾಷೆಯೇ ಇರುವುದಿಲ್ಲ. ಇಲ್ಲಂತು ದಿನವನ್ನೂ ನೋಡಬೇಕಾಗುತ್ತದೆ,
ರಾತ್ರಿಯನ್ನೂ ನೋಡಬೇಕಾಗುತ್ತದೆ. ವತನದಲ್ಲಿ ದಿನ ಅಥವಾ ರಾತ್ರಿಯೂ ಆಗುವುದಿಲ್ಲ, ಸೂರ್ಯೋದಯವೂ
ಇಲ್ಲ, ಚಂದ್ರಮನೂ ಇಲ್ಲ, ಇವೆರಡರಿಂದಲೂ ಆಚೆಯಿದೆ. ತಾವು ಬರಬೇಕಾಗಿರುವುದೂ ಸಹ ಅಲ್ಲಿಗೆ
ಬರಬೇಕಲ್ಲವೆ. ಮಕ್ಕಳು ವಾರ್ತಾಲಾಪದಲ್ಲಿ ಹೇಳುತ್ತಿದ್ದಿರಲ್ಲವೆ - ಬಾಬಾ ಇದು ಎಲ್ಲಿಯವರೆಗೆ?
ಬಾಪ್ದಾದಾರವರು ಹೇಳುತ್ತಾರೆ - ನಾವು ತಯಾರಾಗಿದ್ದೇವೆ ತಾವೆಲ್ಲರೂ ಹೇಳುತ್ತೀರೆಂದರೆ ‘ಈಗಲೇ’ ಮಾಡಿ
ಬಿಡುತ್ತೇವೆ. ನಂತರ ಯಾವಾಗ ಎಂಬ ಪ್ರಶ್ನೆಯೇ ಇರುವುದಿಲ್ಲ. ಎಲ್ಲಿಯವರೆಗೆ ಮಾಲೆಯು ಸಂಪೂರ್ಣವಾಗಿ
ತಯಾರಾಗುವುದಿಲ್ಲವೋ ಅಲ್ಲಿಯವರೆಗೆ `ಯಾವಾಗ' ಎನ್ನುವುದಿರುತ್ತದೆ. ಈಗಲೂ ಹೆಸರುಗಳನ್ನು ತೆಗೆಯಲು
ಕುಳಿತುಕೊಳ್ಳುತ್ತೀರೆಂದರೆ, 108ರಲ್ಲಿ ಈ ಹೆಸರನ್ನು ಹಾಕುವುದೇ ಅಥವಾ ಬೇಡವೇ? ಎನ್ನುವುದನ್ನೇ
ಯೋಚಿಸುತ್ತೀರಿ. ಈಗ ಎಲ್ಲರೂ ಈ 108ರ ಮಾಲೆಯಲ್ಲಿಯೂ ಅದೇ 108 ಹೆಸರುಗಳನ್ನು ಹೇಳಲಿ, ಇದಾಗದೇ
ಅಂತರವಾಗಿ ಬಿಡುತ್ತದೆ. ಬಾಪ್ದಾದಾರವರು ಈ ಕ್ಷಣದಲ್ಲಿಯೇ ಚಪ್ಪಾಳೆ ಹಾಕಿದರೆ, ತಕ್ಷಣದಲ್ಲಿಯೇ ಒಂದು
ಕಡೆ ಪ್ರಕೃತಿ, ಒಂದು ಕಡೆ ವ್ಯಕ್ತಿಗಳು ಎಲ್ಲವೂ ಪ್ರಾರಂಭಿಸಿ ಬಿಡುತ್ತದೆ, ಇದರಲ್ಲಿ
ತಡವೇನಾಗುತ್ತದೆ! ಆದರೆ ಬಾಬಾರವರಿಗೆ ಎಲ್ಲಾ ಮಕ್ಕಳಲ್ಲಿ ಸ್ನೇಹವಿದೆ, ಕೈಯನ್ನು ಹಿಡಿದುಕೊಂಡಾಗಲೇ
ಜೊತೆಯಲ್ಲಿ ಹೊರಡುತ್ತೇವೆ. ಕೈಯಲ್ಲಿ ಕೈ ಸೇರಿಸುವುದು ಅರ್ಥಾತ್ ಸಮಾನರಾಗುವುದು. ಅದಕ್ಕೆ ತಾವು
ಹೇಳುತ್ತೀರಿ - ಎಲ್ಲರೂ ಸಮಾನರು ಅಥವಾ ಎಲ್ಲರೂ ಸಹ ನಂಬರ್ವನ್ ಆಗುವುದಿಲ್ಲ. ಆದರೆ ನಂಬರ್ವನ್
ಹಿಂದೆ ನಂಬರ್ಟು ಆಗುವರಲ್ಲವೆ, ಅವರು ತಂದೆಯ ಸಮಾನರಾಗಲಿಲ್ಲ ಆದರೆ ಯಾರು ನಂಬರ್ವನ್ ಮಣಿಯಾಗುವರು
ಅವರು ಸಮಾನರಾಗುವರು, ಮೂರನೆಯವರು ಎರಡನೇ ಮಣಿಯ ಸಮಾನವಾಗಲಿ. ನಾಲ್ಕನೆಯವರು ಮೂರನೆಯವರ ಸಮಾನರಾಗಲಿ
- ಹೀಗಂತು ಸಮಾನರಾದಾಗಲೇ ಒಬ್ಬರಿನ್ನೊಬ್ಬರ ಸಮೀಪವಾಗುತ್ತಾ ಮಾಲೆಯು ತಯಾರಾಗಲಿ. ಇಂತಹ
ಸ್ಥಿತಿಯವರೆಗೆ ತಲುಪುವುದು ಅರ್ಥಾತ್ ಸಮಾನರಾಗುವುದಾಗಿದೆ. 108ನೇ ಮಣಿಯು 107ನೇ ಮಣಿಯೊಂದಿಗೆ
ಮಿಲನವಾಗುತ್ತದೆಯಲ್ಲವೆ, ಅವರಂತಹ ವಿಶೇಷತೆಯೂ ಬಂದು ಬಿಡುತ್ತದೆಯೆಂದರೆ ಮಾಲೆಯೂ ಸಹ ತಯಾರಾಗಿ
ಬಿಡುತ್ತದೆ. ಅವಶ್ಯವಾಗಿ ನಂಬರ್ವಾರ್ ಆಗಲೇಬೇಕು, ತಿಳಿಯಿತೆ? ತಂದೆಯವರು ಹೇಳುತ್ತಾರೆ - ಈಗಲೂ ಸಹ
ಆಯಿತು ಮಾಡುತ್ತೇವೆಂದು ಗ್ಯಾರಂಟಿ ಕೊಡುವವರೇನಾದರೂ ಇದ್ದೀರಾ, ಎಲ್ಲರೂ ತಯಾರಿದ್ದೀರಾ?
ಬಾಪ್ದಾದಾರವರಿಗಂತು ಸೆಕೆಂಡಿನ ಸಮಯವಷ್ಟೇ ಹಿಡಿಸುತ್ತದೆ. ಚಪ್ಪಾಳೆ ಹಾಕಿದರು ಮತ್ತು ಫರಿಶ್ತೆಗಳು
ಬಂದು ಬಿಟ್ಟರು ಎಂಬ ದೃಶ್ಯವನ್ನು ತೋರಿಸುತ್ತಿದ್ದಿರಲ್ಲವೆ. ಒಳ್ಳೆಯದು.
ನಾಲ್ಕೂ ಕಡೆಯಲ್ಲಿನ ಪರಮ ಪೂಜ್ಯ ಶ್ರೇಷ್ಠಾತ್ಮರಿಗೆ, ಸರ್ವ ಸಂಪೂರ್ಣ ಪವಿತ್ರತೆಯ ಲಕ್ಷ್ಯದವರೆಗೆ
ತಲುಪುವಂತಹ ತೀವ್ರ ಪುರುಷಾರ್ಥಿ ಆತ್ಮರಿಗೆ, ಪ್ರತೀ ಕರ್ಮದಲ್ಲಿಯೂ ಸದಾ ವಿಧಿಪೂರ್ವಕ ಕರ್ಮವನ್ನು
ಮಾಡುವಂತಹ ಸಿದ್ಧಿ ಸ್ವರೂಪ ಆತ್ಮರಿಗೆ, ಸದಾ ಪ್ರತೀ ಸಮಯದಲ್ಲಿಯೂ ಪವಿತ್ರತೆಯ ಶೃಂಗಾರದಿಂದ
ಶೃಂಗಾರಿತರಾಗಿರುವ ವಿಶೇಷ ಆತ್ಮರಿಗೆ ಬಾಪ್ದಾದಾರವರ ಸ್ನೇಹ ಸಂಪನ್ನ ನೆನಪು-ಪ್ರೀತಿಗಳನ್ನು
ಸ್ವೀಕಾರ ಮಾಡಿರಿ.
ಪಾರ್ಟಿಗಳೊಂದಿಗೆ
ವಾರ್ತಾಲಾಪ:-
1. ಇಡೀ ವಿಶ್ವದಲ್ಲಿ ತಮ್ಮನ್ನು ಅತಿ ಹೆಚ್ಚು ಶ್ರೇಷ್ಠ ಭಾಗ್ಯಶಾಲಿಗಳೆಂದು ತಿಳಿಯುತ್ತೀರಾ? ಯಾವ
ಶ್ರೇಷ್ಠ ಭಾಗ್ಯಕ್ಕಾಗಿ ಇಡೀ ವಿಶ್ವವೇ ಕೂಗುತ್ತಿದೆ - ನಮ್ಮ ಭಾಗ್ಯವು ತೆರೆಯಲಿ.... ತಮ್ಮ
ಭಾಗ್ಯವಂತು ತೆರೆದು ಬಿಟ್ಟಿದೆ, ಅಂದಾಗ ಇದಕ್ಕಿಂತ ದೊಡ್ಡ ಖುಷಿಯ ಮಾತು ಮತ್ತೇನಾಗುವುದು! ಭಾಗ್ಯ
ವಿಧಾತನೇ ನಮ್ಮ ತಂದೆಯಾದರು ಎನ್ನುವ ನಶೆಯಿದೆಯಲ್ಲವೆ! ಯಾರ ಹೆಸರೇ ಭಾಗ್ಯ ವಿಧಾತಾ ಎನ್ನುವುದಿದೆ,
ಅವರ ಭಾಗ್ಯವೇನಾಗಿರುತ್ತದೆ! ಇದಕ್ಕಿಂತ ದೊಡ್ಡ ಭಾಗ್ಯವೇನಾದರೂ ಆಗಲು ಸಾಧ್ಯವಿದೆಯೇ? ಅಂದಾಗ ಸದಾ
ಈ ಖುಷಿಯಿರಲಿ - ಭಾಗ್ಯವಂತು ನಮ್ಮ ಜನ್ಮ ಸಿದ್ಧ ಅಧಿಕಾರವಾಯಿತು. ತಂದೆಯ ಬಳಿ ಎಷ್ಟೆಲ್ಲಾ
ಆಸ್ತಿಯಿರುತ್ತದೆಯೋ, ಅದಕ್ಕೆ ಮಕ್ಕಳು ಅಧಿಕಾರಿಯಾಗಿರುತ್ತಾರೆ. ಅಂದಮೇಲೆ ಭಾಗ್ಯ ವಿಧಾತನ ಬಳಿ
ಏನಿದೇ? ಭಾಗ್ಯದ ಖಜಾನೆ. ಆ ಖಜಾನೆಯ ಮೇಲೆ ತಮ್ಮ ಅಧಿಕಾರವಾಯಿತೆಂದಾಗ ಸದ `ವಾಹ್ ನನ್ನ ಭಾಗ್ಯವೇ
ಮತ್ತು ಭಾಗ್ಯವಿದಾತ ತಂದೆ'! - ಇದೇ ಹಾಡನ್ನಾಡುತ್ತಾ ಖುಷಿಯಲ್ಲಿ ಹಾರುತ್ತಿರಿ. ಇಷ್ಟು ಶ್ರೇಷ್ಠ
ಭಾಗ್ಯವು ಯಾರದಾಯಿತು, ಅವರಿಗಿನ್ನೇನು ಬೇಕಾಗಿದೆ? ಭಾಗ್ಯದಲ್ಲಿಯೇ ಎಲ್ಲವೂ ಬಂದು ಬಿಟ್ಟಿತು,
ಭಾಗ್ಯವಂತನ ಬಳಿ ತನು-ಮನ-ಧನ ಎಲ್ಲವೂ ಇರುತ್ತದೆ, ಶೇಷ್ಠ ಭಾಗ್ಯವೆಂದರೆ ಯಾವುದೇ ಅಪ್ರಾಪ್ತಿಯ
ವಸ್ತುವೇ ಇಲ್ಲ. ಏನಾದರೂ ಅಪ್ರಾಪ್ತಿಯಿದೆಯೇ? ಒಳ್ಳೆಯ ಮನೆ ಬೇಕಾಗಿದೆಯೇ, ಕಾರು ಬೇಕಾಗಿದೆಯೇ...
ಇಲ್ಲ. ಯಾರಿಗೆ ಮನಸ್ಸಿನ ಖುಷಿ ಸಿಕ್ಕಿತು, ಅವರಿಗೆ ಸರ್ವ ಪ್ರಾಪ್ತಿಗಳೂ ಪ್ರಾಪ್ತವಾದವು! ಕೇವಲ
ಕಾರೇನು, ಆದರೆ ಕುಬೇರನ ಖಜಾನೆಯೇ ಸಿಕ್ಕಿ ಬಿಟ್ಟಿತು! ಅದರಲ್ಲಿ ಯಾವುದೇ ಅಪ್ರಾಪ್ತಿಯೆಂಬ ವಸ್ತುವೇ
ಇಲ್ಲ, ಇಂತಹ ಭಾಗ್ಯವಂತರಾಗಿದ್ದೀರಿ! ಯಾವುದು ಇಂದು ಇರುತ್ತದೆ, ನಾಳೆಯಿರುವುದೇ ಇಲ್ಲ ಅಂತಹ
ಇಚ್ಛೆಯನ್ನೇಕೆ ಇಟ್ಟುಕೊಳ್ಳುವಿರಿ, ಆದ್ದರಿಂದ ಸದಾ ಅವಿನಾಶಿ ಖಜಾನೆಗಳ ಖುಷಿಗಳಲ್ಲಿರಿ. ಆ
ಖಜಾನೆಯೂ ಈಗಲೂ ಇದೆ ಮತ್ತು ತಮ್ಮ ಜೊತೆಯಲ್ಲಿಯೇ ನಡೆಯುತ್ತದೆ. ಈ ಮನೆ, ಕಾರು ಅಥವಾ ಹಣ ಇವೆಲ್ಲವೂ
ತಮ್ಮ ಜೊತೆ ಬರುವುದಿಲ್ಲ, ಆದರೆ ಈ ಅವಿನಾಶಿ ಖಜಾನೆಯು ತಮ್ಮ ಅನೇಕ ಜನ್ಮಗಳ ಜೊತೆಯಿರುತ್ತದೆ.
ಇದನ್ನು ಯಾರೂ ಸಹ ಕಸಿದುಕೊಳ್ಳಲೂ ಸಾಧ್ಯವಿಲ್ಲ, ಲೂಟಿ ಮಾಡಲೂ ಸಾಧ್ಯವಿಲ್ಲ. ಸ್ವಯಂ ತಾವೂ ಸಹ
ಅಮರರಾದಿರಿ ಮತ್ತು ಅವಿನಾಶಿ ಖಜಾನೆಯೇ ಸಿಕ್ಕಿ ಬಿಟ್ಟಿತು! ಜನ್ಮ-ಜನ್ಮಾಂತರವೂ ಈ ಶ್ರೇಷ್ಠ
ಪ್ರಾಲಬ್ಧವು ಜೊತೆಯಿರುತ್ತದೆ. ಎಲ್ಲಿ ಯಾವುದೇ ಇಚ್ಛೆಯೇ ಇರುವುದಿಲ್ಲ, ಇಚ್ಛಾ ಮಾತ್ರಂ ಅವಿದ್ಯಾ
ಸ್ಥಿತಿಯಿರುತ್ತದೆಯೆಂದಾಗ ಎಷ್ಟೊಂದು ಶ್ರೇಷ್ಠವಾದ ಭಾಗ್ಯವಾಯಿತು! ಇಂತಹ ಶ್ರೇಷ್ಠ ಭಾಗ್ಯವು
ಭಾಗ್ಯ ವಿಧಾತಾ ತಂದೆಯ ಮೂಲಕವೇ ಪ್ರಾಪ್ತಿಯಾಯಿತು.
2. ತಮ್ಮನ್ನು ತಂದೆಯ ಸಮೀಪವಿರುವ ಶ್ರೇಷ್ಠಾತ್ಮರೆಂದು ಅನುಭವ ಮಾಡುತ್ತೀರಾ? ದುಃಖದ ಪ್ರಪಂಚದಿಂದ
ಹೊರಬಂದು ಸುಖದ ಪ್ರಪಂಚದಲ್ಲಿ ಬಂದು ಬಿಟ್ಟೆವು, ತಂದೆಯ ಮಕ್ಕಳಾದೆವು ಎಂಬ ಖುಷಿಯು ಸದಾ
ಇರುತ್ತದೆಯೇ? ಪ್ರಪಂಚದವರು ದುಃಖದಲ್ಲಿ ಚೀರಾಡುತ್ತಿದ್ದಾರೆ ಮತ್ತು ತಾವು ಸುಖದ ಪ್ರಪಂಚದಲ್ಲಿ,
ಸುಖದ ಉಯ್ಯಾಲೆಯಲ್ಲಿ ಖುಷಿಯಲ್ಲಿರುತ್ತೀರಿ, ಇಬ್ಬರಲ್ಲಿ ಎಷ್ಟೊಂದು ಅಂತರವಾಯಿತು! ಪ್ರಪಂಚದವರು
ಹುಡುಕಾಡುತ್ತಿದ್ದಾರೆ ಮತ್ತು ತಾವು ಮಿಲನ ಮಾಡುತ್ತಿದ್ದೀರಿ ಅಂದಾಗ ಸದಾ ತಮ್ಮ ಸರ್ವ
ಪ್ರಾಪ್ತಿಗಳನ್ನು ನೋಡುತ್ತಾ ಹರ್ಷಿತವಾಗಿರಿ. ಸರ್ವ ಪ್ರಾಪ್ತಿಗಳಲ್ಲಿ ಏನೇನಿವೆ ಎಂದು ಪಟ್ಟಿಯನ್ನು
ಮಾಡುತ್ತೀರೆಂದರೆ, ಬಹಳ ದೊಡ್ಡದಾದ ಪಟ್ಟಿಯಾಗಿ ಬಿಡುತ್ತದೆ. ತಮಗೆ ಏನೇನು ಸಿಕ್ಕಿವೆ? ಮನಸ್ಸಿಗೆ
ಖುಷಿಯಿದ್ದಾಗ ತನುವಿನ ಆರೋಗ್ಯವಿದೆ, ಮನಸ್ಸಿನಲ್ಲಿ ಶಾಂತಿ ಸಿಕ್ಕಿತು, ಶಾಂತಿ ಮನಸ್ಸಿನ
ವಿಶೇಷತೆಯಾಗಿದೆ ಮತ್ತು ಧನದಲ್ಲಿ ಇಷ್ಟೂ ಶಕ್ತಿ ಬಂದಿದೆ, ಅದರಿಂದ ದಾಲ್ ರೋಟಿ (ಸಾಧಾರಣ ಊಟ), 36
ಪ್ರಕಾರದ ಮೃಷ್ಟಾನ್ನ ಭೋಜನದ ಸಮಾನವೆಂಬ ಅನುಭವವಾಗಲಿ. ಈಶ್ವರನ ನೆನಪಿನಲ್ಲಿ ದಾಲ್-ರೋಟಿಯೂ ಸಹ
ಬಹಳ ಶ್ರೇಷ್ಠವೆನಿಸುತ್ತದೆ! ಪ್ರಪಂಚದ 36 ಪ್ರಕಾರ ಭೋಜನವೂ ಇರಲಿ ಮತ್ತು ತಮ್ಮ ದಾಲ್-ರೋಟಿಯೂ ಇರಲಿ,
ಯಾವುದು ಶ್ರೇಷ್ಠವೆನಿಸುತ್ತದೆ? ದಾಲ್-ರೋಟಿ ಚೆನ್ನಾಗಿದೆಯಲ್ಲವೆ ಏಕೆಂದರೆ ಪ್ರಸಾದವಲ್ಲವೆ.
ಯಾವಾಗ ಭೋಜನವನ್ನು ತಯಾರಿ ಮಾಡುತ್ತೀರಿ, ಆಗ ನೆನಪಿನಲ್ಲಿದ್ದು ಮಾಡುತ್ತೀರಿ ಮತ್ತು
ನೆನಪಿನಲ್ಲಿದ್ದು ಸ್ವೀಕರಿಸುತ್ತೀರೆಂದರೆ ಪ್ರಸಾದವಾಯಿತು, ಪ್ರಸಾದದ ಮಹತ್ವಿಕೆಯಿರುತ್ತದೆ.
ತಾವೆಲ್ಲರೂ ಪ್ರತಿ ನಿತ್ಯವೂ ಪ್ರಸಾದವನ್ನು ತಿನ್ನುತ್ತೀರಿ, ಪ್ರಸಾದದಲ್ಲಿ ಬಹಳ ಶಕ್ತಿಯಿರುತ್ತದೆ.
ಅದರಿಂದ ತನು-ಮನ-ಧನ ಎಲ್ಲದರಲ್ಲಿಯೂ ಶಕ್ತಿ ಬಂದು ಬಿಟ್ಟಿದೆ. ಆದ್ದರಿಂದ ಹೇಳುತ್ತಾರೆ -
ಬ್ರಾಹ್ಮಣರ ಖಜಾನೆಯಲ್ಲಿ ಅಪ್ರಾಪ್ತ ವಸ್ತುವೇ ಇಲ್ಲ. ಅಂದಾಗ ಸದಾ ತಮ್ಮ ಮುಂದೆ ಈ ಪ್ರಾಪ್ತಿಗಳನ್ನು
ಇಟ್ಟುಕೊಂಡು ಖುಷಿಯಾಗಿರಿ, ಹರ್ಷಿತವಾಗಿರಿ. ಒಳ್ಳೆಯದು.
ವರದಾನ:
ಕರ್ಮದ ಮೂಲಕ ಗುಣಗಳ ದಾನ ಮಾಡುವಂತಹ ಡಬಲ್ಲೈಟ್ ಫರಿಶ್ತಾ ಭವ.
ಯಾವ ಮಕ್ಕಳು ಕರ್ಮಣಾ
ಸೇವೆಯ ಮೂಲಕ ಗುಣಗಳ ದಾನವನ್ನು ಮಾಡುತ್ತಾರೆಯೋ, ಅವರ ಚಲನೆ ಮತ್ತು ಚಹರೆಯೆರಡೂ ಫರಿಶ್ತೆಗಳಂತೆ
ಕಂಡು ಬರುತ್ತದೆ. ಅವರು ಡಬಲ್ಲೈಟ್ ಅರ್ಥಾತ್ ಪ್ರಕಾಶಮಯ ಮತ್ತು ಹಗುರತೆಯ ಅನುಭೂತಿಯನ್ನು
ಮಾಡುತ್ತಾರೆ, ಹೊರೆಯ ಯಾವುದೇ ಅನುಭೂತಿಯಾಗುವುದಿಲ್ಲ. ಪ್ರತಿಯೊಂದು ಕರ್ಮದಲ್ಲಿಯೂ ಯಾವುದೋ
ಶಕ್ತಿಯು ನಡೆಸುತ್ತಿದೆಯೆಂಬಂತೆ ಸಹಯೋಗದ ಅನುಭೂತಿಯಾಗುತ್ತದೆ. ಅವರು ಪ್ರತಿಯೊಂದು ಕರ್ಮದ ಮೂಲಕ
ಮಹಾದಾನಿಯಾಗುವ ಕಾರಣದಿಂದ, ಸರ್ವರ ಆಶೀರ್ವಾದ ಅಥವಾ ಸರ್ವರ ವರದಾನಗಳು ಪ್ರಾಪ್ತಿಯಾಗುವ
ಅನುಭವವಾಗುತ್ತದೆ.
ಸ್ಲೋಗನ್:
ಸೇವೆಯಲ್ಲಿ ಸಫಲತೆಯ ನಕ್ಷತ್ರಗಳಾಗಿರಿ, ಬಲಹೀನರಲ್ಲ.
24-01-21 ಬ್ರಾಹ್ಮಣ
ಜೀವನದ ಶೃಂಗಾರ - ಪವಿತ್ರತೆ ರಿವೈಜ್: 17-10-87
1. ಪೂಜನೀಯ ಆತ್ಮಗಳು
ಎಂತಹ ಕಣ್ಮಣಿಗಳಾಗುವವರು?
2. ಬ್ರಾಹ್ಮಣ ಜೀವನ ಎಂದರೇನು?
3. ಪೂಜನೀಯರಾಗಲು ವಿಶೇಷವಾದ ಆಧಾರ ಏನಾಗಿದೆ?
4. ಸರ್ವ ಪ್ರಕಾರದ ಪವಿತ್ರತೆ ಎಂದು ಹೇಳಲಾಗುತ್ತದೆ?
5. ಖಂಡಿತ ಮೂರ್ತಿಯನ್ನು ಏಕೆ ಪೂಜಿಸಲಾಗುವುದಿಲ್ಲ?
6. ಪವಿತ್ರ ಆತ್ಮಗಳು ಸದಾ ಹೇಗಿರುತ್ತಾರೆ?
7. ಪವಿತ್ರತೆಯ ಆಧಾರ ಏನಾಗಿದೆ?
8. ಪವಿತ್ರತೆಯ ಶೃಂಗಾರವೆಂದು ಯಾವುದಕ್ಕೆ ಹೇಳಲಾಗುತ್ತದೆ?
9. 'ಯಾವಾಗ' ಎನ್ನುವ ಶಬ್ದವು ಏಕೆ ಮತ್ತು ಎಲ್ಲಿಯವರೆಗೆ ಇರುತ್ತದೆ?
10. ಬ್ರಾಹ್ಮಣ ಜೀವನದಲ್ಲಿ ಏನಾಗುವುದು ಕಷ್ಟವಾಗುವುದಿಲ್ಲ?