17.01.21    Avyakt Bapdada     Kannada Murli    14.10.87     Om Shanti     Madhuban


ಬ್ರಾಹ್ಮಣ ಜೀವನ - ತಂದೆಯೊಂದಿಗೆ ಸರ್ವ ಸಂಬಂಧಗಳ ಅನುಭವ ಮಾಡುವ ಜೀವನ


ಇಂದು ಬಾಪ್ದಾದಾರವರು ತನ್ನ ಅನೇಕ ಬಾರಿ ಮಿಲನವಾಗಿರುವ, ಅನೇಕ ಕಲ್ಪಗಳಲ್ಲಿ ಮಿಲನವಾಗಿರುವ ಮಕ್ಕಳೊಂದಿಗೆ, ಪುನಃ ಮಿಲನವಾಗಲು ಬಂದಿದ್ದಾರೆ. ಈ ಅಲೌಕಿಕ, ಅವ್ಯಕ್ತ ಮಿಲನವು ಭವಿಷ್ಯದ ಸ್ವರ್ಣೀಮ ಯುಗದಲ್ಲಿಯೂ ಆಗಲು ಸಾಧ್ಯವಿಲ್ಲ. ತಂದೆ ಮತ್ತು ಮಕ್ಕಳ ಮಿಲನದ ವಿಶೇಷ ವರದಾನವು ಕೇವಲ ಈ ಸಮಯ ಹಾಗೂ ಈ ಯುಗಕ್ಕಷ್ಟೇ ಇದೆ. ಆದ್ದರಿಂದ ಈ ಯುಗದ ಹೆಸರೇ ಸಂಗಮಯುಗ ಅರ್ಥಾತ್ ಮಿಲನವನ್ನಾಚರಿಸುವ ಯುಗವಾಗಿದೆ. ಇಂತಹ ಯುಗದಲ್ಲಿ ಇಂತಹ ಶ್ರೇಷ್ಠ ಮಿಲನವನ್ನಾಚರಿಸುವ ತಾವಾತ್ಮರು ವಿಶೇಷ ಪಾತ್ರಧಾರಿಗಳಾಗಿದ್ದೀರಿ. ಬಾಪ್ದಾದಾರವರೂ ಸಹ ಕೋಟಿಯಲ್ಲಿ ಕೆಲವು ಇಂತಹ ಶ್ರೇಷ್ಠ ಭಾಗ್ಯಶಾಲಿ ಆತ್ಮರನ್ನು ನೋಡುತ್ತಾ ಹರ್ಷಿತವಾಗುತ್ತಾರೆ ಮತ್ತು ಸ್ಮೃತಿ ತರಿಸುತ್ತಾರೆ. ಆದಿಯಿಂದ ಅಂತ್ಯದವರೆಗಿನ ಎಷ್ಟು ಸ್ಮೃತಿಗಳನ್ನು ನೆನಪಿಸಿದ್ದೇವೆ? ನೆನಪು ಮಾಡುತ್ತೀರೆಂದರೆ ಉದ್ದವಾದ ಪಟ್ಟಿಯಾಗಿ ಬಿಡುತ್ತದೆ. ಅಷ್ಟೂ ಸ್ಮೃತಿಗಳನ್ನು ತರಿಸಿದ್ದೇವೆ, ಅದರಿಂದ ತಾವೆಲ್ಲರೂ ಸ್ಮೃತಿ ಸ್ವರೂಪರಾಗಿ ಬಿಟ್ಟಿರಿ. ಭಕ್ತರೂ ಸಹ ಭಕ್ತಿಯಲ್ಲಿ ತಾವು ಸ್ಮೃತಿ ಸ್ವರೂಪ ಆತ್ಮರ ನೆನಪಾರ್ಥ ರೂಪದಲ್ಲಿ ಸ್ಮರಣೆ ಮಾಡುತ್ತಿರುತ್ತಾರೆ. ತಾವು ಸ್ಮೃತಿ ಸ್ವರೂಪವ ಆತ್ಮರ ಪ್ರತೀ ಕರ್ಮದ ವಿಶೇಷತೆಯನ್ನೂ ಸ್ಮರಣೆ ಮಾಡುತ್ತಿರುತ್ತಾರೆ. ಭಕ್ತಿಯ ವಿಶೇಷತೆಯೇ ಸ್ಮರಣೆಯಾಗಿದೆ ಅರ್ಥಾತ್ ಕೀರ್ತನೆ ಮಾಡುವುದಾಗಿದೆ. ಸ್ಮರಣೆ ಮಾಡುತ್ತಾ-ಮಾಡುತ್ತಾ ಎಷ್ಟೊಂದು ಮಸ್ತಿಯಲ್ಲಿ ಮಗ್ನರಾಗಿ ಬಿಡುತ್ತಾರೆ! ಅವರಿಗೆ ಅಲ್ಪಕ್ಕಾಲಕ್ಕಾದರೂ ಏನೂ ನೆನಪಿರುವುದಿಲ್ಲ. ಸ್ಮರಣೆಯನ್ನು ಮಾಡುತ್ತಾ-ಮಾಡುತ್ತಾ ಅದರಲ್ಲಿಯೇ ಮುಳುಗಿ ಬಿಡುತ್ತಾರೆ ಅರ್ಥಾತ್ ಲವಲೀನರಾಗಿ ಬಿಡುತ್ತಾರೆ, ಈ ಅಲ್ಪಕಾಲದ ಅನುಭವವು ಆ ಆತ್ಮರಿಗಾಗಿ ಎಷ್ಟೊಂದು ಭಿನ್ನ ಹಾಗೂ ಪ್ರಿಯವಾಗಿರುತ್ತದೆ! ಹೀಗೇಕೆ ಆಗುತ್ತದೆ? ಏಕೆಂದರೆ ಯಾವ ಆತ್ಮರ ಸ್ಮರಣೆ ಮಾಡುತ್ತಾರೆಯೋ, ಆ ಆತ್ಮರೂ ಸಹ ಸದಾ ತಂದೆಯ ಸ್ನೇಹದಲ್ಲಿ ಲವಲೀನರಾಗಿದ್ದರು, ಸದಾ ತಂದೆಯ ಸರ್ವ ಪ್ರಾಪ್ತಿಗಳಲ್ಲಿ ಮಗ್ನರಾಗಿರುವವರಾಗಿದ್ದರು. ಆದ್ದರಿಂದ ಇಂತಹ ಆತ್ಮರ ಸ್ಮರಣೆಯನ್ನು ಮಾಡುವುದರಿಂದ, ಆ ಭಕ್ತರಿಗೆ ತಾವು ವರದಾನಿ ಆತ್ಮರ ಮೂಲಕ ಅಲ್ಪಕಾಲಕ್ಕಾದರೂ ಅಂಚಲಿಯ ರೂಪದಲ್ಲಿ ಅನುಭೂತಿಯ ಪ್ರಾಪ್ತಿಯಾಗುತ್ತದೆ. ಅಂದಾಗ ಯೋಚಿಸಿರಿ - ಸ್ಮರಣೆ ಮಾಡುವಂತಹ ಭಕ್ತಾತ್ಮರಿಗೂ ಸಹ ಇಷ್ಟು ಅಲೌಕಿಕ ಅನುಭವವಾಗುತ್ತದೆಯೆಂದರೆ, ತಾವು ಸ್ಮೃತಿ ಸ್ವರೂಪರು, ವರದಾತಾ, ವಿದಾತಾ ಆತ್ಮರ ಪ್ರತ್ಯಕ್ಷ ಜೀವನದಲ್ಲೆಷ್ಟು ಅನುಭವದ ಪ್ರಾಪ್ತಿಯಾಗುತ್ತದೆ! ಸದಾ ಇದೇ ಅನುಭೂತಿಗಳಲ್ಲಿ ವೃದ್ಧಿ ಹೊಂದುತ್ತಾ ಸಾಗಿರಿ.

ಪ್ರತೀ ಹೆಜ್ಜೆಯಲ್ಲಿ ಭಿನ್ನ-ಭಿನ್ನ ಸ್ಮೃತಿ ಸ್ವರೂಪದ ಅನುಭವ ಮಾಡುತ್ತಾ ಸಾಗಿರಿ. ಸಮಯದನುಸಾರ ಕರ್ಮವಾಗಲಿ ಮತ್ತು ಅಂತಹ ಸ್ಮೃತಿ ಸ್ವರೂಪದ ಸ್ಮೃತಿಯನ್ನು ಪ್ರತ್ಯಕ್ಷ ರೂಪದಲ್ಲಿ ಅನುಭವ ಮಾಡಿರಿ. ಉದಾ: ಅಮೃತವೇಳೆ ದಿನದ ಆರಂಭವಾಗುತ್ತಿದ್ದಂತೆಯೆ, ತಂದೆಯೊಂದಿಗೆ ಮಿಲನ ಮಾಡುತ್ತಾ - ಮಾಸ್ಟರ್ ವರದಾತರಾಗಿ ವರದಾತನಿಂದ ವರದಾನವನ್ನು ತೆಗೆದುಕೊಳ್ಳುವಂತಹ ಶ್ರೇಷ್ಠ ಆತ್ಮನಾಗಿದ್ದೇನೆ, ಡೈರೆಕ್ಟ್ ವಿದಾತನ ಮೂಲಕ ಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಪದಮಾಪದಮ ಭಾಗ್ಯಶಾಲಿ ಆತ್ಮನಾಗಿದ್ದೇನೆ ಎಂಬ ಶ್ರೇಷ್ಠ ಸ್ವರೂಪವನ್ನು ಸ್ಮೃತಿಯಲ್ಲಿ ತಂದುಕೊಳ್ಳಿರಿ. ಅಮೃತವೇಳೆಯು ವರದಾನಿ ಸಮಯವಾಗಿದೆ, ವರದಾತಾ ವಿದಾತನು ಜೊತೆಯಲ್ಲಿದ್ದಾರೆ. ಮಾಸ್ಟರ್ ವರದಾನಿಯಾಗಿದ್ದು ಸ್ವಯಂ ಸಹ ಸಂಪನ್ನರಾಗುತ್ತಿದ್ದೇವೆ ಮತ್ತು ಅನ್ಯ ಆತ್ಮರಿಗಾಗಿಯೂ ವರದಾನವನ್ನು ಕೊಡಿಸುವ ವರದಾನಿ ಆತ್ಮರಾಗಿದ್ದೀರೆಂಬ ಸ್ಮೃತಿ ಸ್ವರೂಪವು ಪ್ರತ್ಯಕ್ಷ ಸ್ವರೂಪದಲ್ಲಿರಲಿ. ನಾನಂತು ಈ ರೀತಿಯಾಗಿಯೇ ಇದ್ದೇನೆ ಎನ್ನುವುದಿರಬಾರದು. ಆದರೆ ಸಮಯದನುಸಾರವಾಗಿ ಭಿನ್ನ-ಭಿನ್ನ ಸ್ಮೃತಿ ಸ್ವರೂಪಗಳನ್ನು ಅನುಭವ ಮಾಡುತ್ತೀರೆಂದರೆ, ಬಹಳ ವಿಚಿತ್ರವಾದ ಖುಷಿ, ವಿಚಿತ್ರ ಪ್ರಾಪ್ತಿಗಳ ಭಂಡಾರವಾಗಿ ಬಿಡುತ್ತೀರಿ ಮತ್ತು ಹೃದಯದಿಂದ ಸದಾ ಸ್ವತಹವಾಗಿಯೇ ಪ್ರಾಪ್ತಿಗಳ ಬೇಹದ್ದಿನ ಶಬ್ಧಗಳ ರೂಪದಲ್ಲಿ ಹಾಡು ಬರುತ್ತಿರುತ್ತದೆ- ``ಪಡೆಯಬೇಕಾದುದನ್ನು ಪಡೆದು ಬಿಟ್ಟೆನು.....''. ಇದೇ ಪ್ರಕಾರವಾಗಿ ಭಿನ್ನ-ಭಿನ್ನ ಸಮಯದಲ್ಲಿ ಹಾಗೂ ಭಿನ್ನ-ಭಿನ್ನ ಕರ್ಮದನುಸಾರವಾಗಿ ಸ್ಮೃತಿ ಸ್ವರೂಪದ ಅನುಭವ ಮಾಡುತ್ತಿರಿ. ಮುರುಳಿಯನ್ನು ಕೇಳುವಾಗ ಈ ಸ್ಮೃತಿಯಿರಲಿ - ನಾನು ಈಶ್ವರೀಯ ವಿದ್ಯಾರ್ಥಿ ಜೀವನ ಅರ್ಥಾತ್ ಭಗವಂತನ ವಿದ್ಯಾರ್ಥಿಯಾಗಿದ್ದೇನೆ, ನನಗೆ ಓದಿಸುವುದಕ್ಕಾಗಿ ಸ್ವಯಂ ಭಗವಂತನೇ ಪರಮಧಾಮದಿಂದ ಬಂದಿದ್ದಾರೆ, ಸ್ವಯಂ ಭಗವಂತನೇ ಓದಿಸುವುದಕ್ಕಾಗಿ ಬರುತ್ತಾರೆನ್ನುವುದೇ ವಿಶೇಷ ಪ್ರಾಪ್ತಿಯಾಗಿದೆ. ಯಾವಾಗ ಇದೇ ಸ್ಮೃತಿಯಿಂದ ಮುರುಳಿಯನ್ನು ಕೇಳಿಸಿಕೊಳ್ಳುತ್ತೀರಿ, ಆಗ ಎಷ್ಟೊಂದು ನಶೆಯಿರುತ್ತದೆ! ಒಂದುವೇಳೆ ಸಾಧಾರಣ ರೀತಿಯಿಂದ, ನಿಯಮದನುಸಾರವಾಗಿ ತಿಳಿಸುವವರು ತಿಳಿಸುತ್ತಿದ್ದಾರೆ ಮತ್ತು ಕೇಳಿಸಿಕೊಳ್ಳುವವರು ಕೇಳುತ್ತಿದ್ದಾರೆಂದರೆ, ಅಷ್ಟೊಂದು ನಶೆಯ ಅನುಭವವಾಗುವುದಿಲ್ಲ. ಆದರೆ ನಾವು ಭಗವಂತನ ವಿದ್ಯಾರ್ಥಿಯಾಗಿದ್ದೇವೆ ಎಂಬ ಸ್ಮೃತಿಯನ್ನು ಸ್ವರೂಪದಲ್ಲಿ ತಂದುಕೊಳ್ಳುತ್ತಾ ಕೇಳಿಸಿಕೊಂಡಾಗ, ಅಲೌಕಿಕ ನಶೆಯ ಅನುಭವವಾಗುವುದು. ತಿಳಿಯಿತೆ?

ಭಿನ್ನ-ಭಿನ್ನ ಸಮಯದ ಭಿನ್ನ-ಭಿನ್ನ ಸ್ಮೃತಿ ಸ್ವರೂಪದ ಅನುಭವಗಳಲ್ಲಿ ಎಷ್ಟೊಂದು ನಶೆಯಿರುತ್ತದೆ! ಇದೇ ರೀತಿ ಇಡೀ ದಿನದ ಪ್ರತಿಯೊಂದು ಕರ್ಮದಲ್ಲಿ ತಂದೆಯ ಜೊತೆ ಸ್ಮೃತಿ ಸ್ವರೂಪರಾಗುತ್ತಾ ನಡೆಯಿರಿ - ಹೇಗೆಂದರೆ, ಕೆಲವೊಮ್ಮೆ ಭಗವಂತನ ಸಖನಾಗಿ ಅಥವಾ ಜೊತೆಗಾರನಾಗಿ, ಕೆಲವೊಮ್ಮೆ ಜೀವನದ ಸಂಗಾತಿಯ ರೂಪದಲ್ಲಿ, ಕೆಲವೊಮ್ಮೆ ಭಗವಂತನು ನನ್ನ ಮುದ್ದಾದ ಮಗುವಾಗಿದ್ದಾನೆ ಅರ್ಥಾತ್ ಮೊಟ್ಟ ಮೊದಲ ಹಕ್ಕುದಾರ, ಮೊದಲ ವಾರಸುಧಾರ ಆಗಿದ್ದಾನೆ. ಯಾವುದೇ ಮಗು ಅಷ್ಟು ಸುಂದರ ಮತ್ತು ಬಹಳ ಯೋಗ್ಯವಾದ ಮಗುವಾಗಿರುತ್ತದೆಯೆಂದರೆ, ಮಾತಾಪಿತರಿಗೆ ಎಷ್ಟೊಂದು ನಶೆಯಿರುತ್ತದೆ - ನನ್ನ ಮಗು ಕುಲ ದೀಪಕನಾಗಿದ್ದಾನೆ ಅಥವಾ ಕುಲದ ಹೆಸರನ್ನು ಬೆಳಗಿಸುವವನಾಗಿದ್ದಾನೆ! ಯಾರಿಗೆ ಭಗವಂತನೇ ಮಗುವಾಗಿ ಬಿಡುತ್ತಾರೆ, ಅವರ ಹೆಸರಿನ್ನೆಷ್ಟು ಪ್ರಸಿದ್ಧವಾಗುತ್ತದೆ! ಅವರಿಂದ ಎಷ್ಟು ಕುಲಗಳ ಕಲ್ಯಾಣವಾಗಬಹುದು!! ಅಂದಮೇಲೆ ಯಾವಾಗ ಕೆಲವೊಮ್ಮೆ ಪ್ರಪಂಚದ ವಾತಾವರಣದಿಂದ ಅಥವಾ ಭಿನ್ನ-ಭಿನ್ನ ಸಮಸ್ಯೆಗಳಿಂದಲೂ ಸಹ ಸ್ವಲ್ಪವೇನಾದರೂ ಸ್ವಯಂನ್ನು ಒಂಟಿ ಅಥವಾ ಉದಾಸತೆಯ ಅನುಭವವಾಗುತ್ತದೆಯೆಂದರೆ, ಇಂತಹ ಸುಂದರವಾದ ಮಗುವಿನ ರೂಪದಿಂದ ಆಟವಾಡಿರಿ, ಸಖನ ರೂಪದಲ್ಲಿ ಆಟವಾಡಿರಿ. ಕೆಲವೊಮ್ಮೆ ಸುಸ್ತಾಗಿ ಬಿಡುತ್ತೀರೆಂದರೆ ತಾಯಿಯ ರೂಪದಲ್ಲಿ ಮಡಿಲಿನಲ್ಲಿ ಮಲಗಿ ಬಿಡಿ, ಸಮಾವೇಶವಾಗಿ ಬಿಡಿ. ಕೆಲವೊಮ್ಮೆ ಹೃದಯ ವಿಧೀರ್ಣರಾಗುತ್ತೀರೆಂದರೆ ಸರ್ವಶಕ್ತಿವಂತನ ಸ್ವರೂಪದಿಂದ ಮಾಸ್ಟರ್ ಸರ್ವಶಕ್ತಿವಂತನ ಸ್ಮೃತಿ ಸ್ವರೂಪವನ್ನು ಅನುಭವ ಮಾಡಿರಿ, ಅದರಿಂದ ದಿಲ್ಖುಷ್ ಆಗಿ ಬಿಡುತ್ತೀರಿ. ಭಿನ್ನ-ಭಿನ್ನ ಸಮಯಗಳಲ್ಲಿ ಭಿನ್ನ-ಭಿನ್ನ ಸಂಬಂಧಗಳಿಂದ, ತಮ್ಮ ಭಿನ್ನ-ಭಿನ್ನ ಸ್ವರೂಪದ ಸ್ಮೃತಿಗಳನ್ನು ಪ್ರತ್ಯಕ್ಷ ರೂಪದಲ್ಲಿ ಅನುಭವ ಮಾಡುತ್ತೀರೆಂದರೆ, ಸದಾ ಸ್ವತಹವಾಗಿಯೇ ತಂದೆಯ ಜೊತೆಯ ಅನುಭವ ಮಾಡುವಿರಿ ಮತ್ತು ಸದಾ ಈ ಸಂಗಮಯುಗದ ಬ್ರಾಹ್ಮಣ ಜೀವನವು ಅಮೂಲ್ಯವಾದುದೆಂದು ಅನುಭವ ಆಗುತ್ತಿರುತ್ತದೆ.

ಮತ್ತೊಂದು ಮತು - ಇಷ್ಟೆಲ್ಲಾ ಸರ್ವ ಸಂಬಂಧಗಳನ್ನು ನಿಭಾಯಿಸುವುದರಲ್ಲಿ ಅಷ್ಟು ನಿರತರಾಗುತ್ತೀರೆಂದರೆ, ಮಾಯೆಯು ಬರುವುದಕ್ಕೂ ಸಹ ಸಮಯ ಸಿಗುವುದಿಲ್ಲ. ಹೇಗೆ ಲೌಕಿಕದ ದೊಡ್ಡ ಪ್ರವೃತ್ತಿಯವರು ಸದಾ ಇದನ್ನೇ ಹೇಳುತ್ತಾರೆ - ಪ್ರವೃತ್ತಿಯನ್ನು ಸಂಭಾಲನೆ ಮಾಡುವುದರಲ್ಲಿ ಇಷ್ಟೂ ನಿರತರಾಗಿರುತ್ತೇವೆ, ಅದರಿಂದ ಮತ್ತ್ಯಾವುದೇ ಮಾತುಗಳೂ ನೆನಪಿರುವುದಿಲ್ಲ. ಏಕೆಂದರೆ ಬಹಳ ದೊಡ್ಡ ಪ್ರವೃತ್ತಿಯಿದೆ. ಅಂದಾಗ ತಾವು ಬ್ರಾಹ್ಮಣ ಆತ್ಮರು ಪ್ರಭುವಿನೊಂದಿಗೆ ಪ್ರೀತಿಯನ್ನು ನಿಭಾಯಿಸುವ ಪ್ರಭು-ಪ್ರವೃತ್ತಿಯೆಷ್ಟು ದೊಡ್ಡದಾಗಿದೆ! (ಶ್ರೇಷ್ಠವಾಗಿದೆ) ತಮ್ಮ ಪ್ರಭು ಪ್ರೀತಿಯ ಪ್ರವೃತ್ತಿಯು ಮಲಗುವಾಗಲೂ ನಡೆಯುತ್ತದೆ! ಒಂದುವೇಳೆ ಯೋಗ ನಿದ್ರೆಯಲ್ಲಿರುತ್ತೀರೆಂದರೆ ಅದು ನಿದ್ರೆಯಲ್ಲ ಆದರೆ ಯೋಗ ನಿದ್ರೆಯಾಗಿದೆ. ನಿದ್ರೆ ಮಾಡುವಾಗಲೂ ಸಹ ಪ್ರಭು ಮಿಲನ ಮಾಡಬಹುದು. ಯೋಗದ ಅರ್ಥವೇ ಆಗಿದೆ - ಮಿಲನ ಮಾಡುವುದು. ಯೋಗ ನಿದ್ರೆ ಅರ್ಥಾತ್ ಅಶರೀರಿ ಸ್ಥಿತಿಯ ಅನುಭೂತಿ. ಅಂದಮೇಲೆ ಇದೂ ಸಹ ಪ್ರಭು ಪ್ರೀತಿಯಾಗಿದೆ. ಹಾಗಾದರೆ ತಮ್ಮಂತಹ ದೊಡ್ಡ ಪ್ರವೃತ್ತಿಯವರು ಮತ್ತ್ಯಾರೂ ಇಲ್ಲ! ತಮಗೆ ಒಂದು ಸೆಕೆಂಡಿನ ಬಿಡುವಿನ ಸಮಯವೂ ಇಲ್ಲ. ಏಕೆಂದರೆ ಭಕ್ತಿಯಲ್ಲಿ ಭಕ್ತನ ರೂಪದಲ್ಲಿಯೂ ಹಾಡನ್ನಾಡುತ್ತಿದ್ದಿರಿ - ಪ್ರಭು, ತಾವು ಬಹಳ ದಿನಗಳ ನಂತರ ಸಿಕ್ಕಿದ್ದೀರಿ, ಅಂದಮೇಲೆ ಕ್ಷಣ-ಕ್ಷಣದ ಲೆಕ್ಕವನ್ನು ತೆಗೆದುಕೊಳ್ಳುತ್ತೇವೆ. ಅಂದಾಗ ಒಂದೊಂದು ಸೆಕೆಂಡಿನ ಲೆಕ್ಕ ತೆಗೆದುಕೊಳ್ಳುವವರಾಗಿದ್ದೀರಿ. ಇಡೀ ಕಲ್ಪದ ಮಿಲನದ ಲೆಕ್ಕವು, ಈ ಚಿಕ್ಕದಾದ ಒಂದು ಜನ್ಮದಲ್ಲಿಯೇ ಪೂರ್ಣಗೊಳಿಸುತ್ತೀರಿ. 5000 ವರ್ಷಗಳ ಲೆಕ್ಕದಲ್ಲಿ ಇದು ಚಿಕ್ಕದಾದ ಜನ್ಮವು ಸ್ವಲ್ಪ ದಿನಗಳ ಲೆಕ್ಕವಾಯಿತಲ್ಲವೆ. ಅಂದಾಗ ಸ್ವಲ್ಪದಿನಗಳಲ್ಲಿಯೇ ಇಷ್ಟು ದೊಡ್ಡ ಸಮಯದ ಲೆಕ್ಕವನ್ನು ಪೂರ್ಣಗೊಳಿಸಬೇಕಾಗಿದೆ. ಆದ್ದರಿಂದ ಹೇಳುತ್ತಾರೆ - ಶ್ವಾಸ-ಶ್ವಾಸದಲ್ಲಿಯೂ ಸ್ಮರಣೆ ಮಾಡಿರಿ. ಭಕ್ತರು ಸ್ಮರಣೆ ಮಾಡುತ್ತಾರೆ, ತಾವು ಸ್ಮೃತಿ ಸ್ವರೂಪರಾಗುತ್ತೀರಿ. ಹಾಗಾದರೆ ತಮಗೆ ಸೆಕೆಂಡಿಗಾದರೂ ಬಿಡುವಿನ ಸಮಯವಿದೆಯೇ? ಎಷ್ಟೊಂದು ದೊಡ್ಡ ಪ್ರವೃತ್ತಿಯಾಯಿತು! ಈ ಪ್ರವೃತ್ತಿಯ ಮುಂದೆ ಆ ಚಿಕ್ಕದಾದ ಪ್ರವೃತ್ತಿಯು ಆಕರ್ಷಣೆ ಮಾಡುವುದಿಲ್ಲ ಮತ್ತು ಸಹಜ ಸ್ವತಹವಾಗಿಯೇ ದೇಹ ಸಹಿತ, ದೇಹದ ಸಂಬಂಧ ಮತ್ತು ದೇಹದ ಪದಾರ್ಥ ಅಥವಾ ಪ್ರಾಪ್ತಿಗಳಿಂದ ನಷ್ಟಮೋಹ ಸ್ಮೃತಿ ಸ್ವರೂಪರಾಗಿ ಬಿಡುತ್ತೀರಿ. ಈ ಅಂತಿಮ ಪರೀಕ್ಷೆಯಿಂದಲೇ ಮಾಲೆಯ ನಂಬರ್ವಾರ್ ಮಣಿಯನ್ನಾಗಿ ಮಾಡುತ್ತದೆ.

ಹೇಗೆ ಅಮೃತವೇಳೆಯಿಂದ ಯೋಗ ನಿದ್ರೆಯವರೆಗೂ ಭಿನ್ನ-ಭಿನ್ನ ಸ್ಮೃತಿ ಸ್ವರೂಪದ ಅನುಭವಿ ಆಗಿ ಬಿಡುತ್ತೀರೆಂದರೆ, ಬಹಳ ಕಾಲದ ಸ್ಮೃತಿ ಸ್ವರೂಪದ ಅನುಭವವು, ಅಂತ್ಯದಲ್ಲಿ ಸ್ಮೃತಿ ಸ್ವರೂಪದ ಪ್ರಶ್ನೆಗಳಲ್ಲಿ ಪಾಸ್-ವಿತ್-ಆನರ್ (ಗೌರವಾನ್ವಿತವಾಗಿ ತೇರ್ಗಡೆಯಾಗುವುದು) ಮಾಡಿ ಬಿಡುತ್ತದೆ. ಬಹಳ ರಮಣೀಕ ಜೀವನದ ಅನುಭವ ಮಾಡುತ್ತೀರಿ ಏಕೆಂದರೆ ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯಾತ್ಮನ ಇಚ್ಛೆಯು ‘ವಿಭಿನ್ನ'ವಾಗಿರುವುದನ್ನೇ ಬಯಸುತ್ತಾರೆ. ಅಂದಾಗ ಇಡೀ ದಿನದಲ್ಲಿ ಈ ಭಿನ್ನ-ಭಿನ್ನ ಸಂಬಂಧ, ಭಿನ್ನ-ಭಿನ್ನ ಸ್ವರೂಪದ ವಿಭಿನ್ನತೆಯ ಅನುಭವ ಮಾಡಿರಿ. ಪ್ರಪಂಚದವರೂ ಹೇಳುತ್ತಾರಲ್ಲವೆ - ತಂದೆಯಂತು ಅವಶ್ಯವಾಗಿ ಇರಬೇಕು. ಆದರೆ ತಂದೆಯ ಜೊತೆಗೆ ಜೀವನದ ಸಂಗಾತಿಯ ಅನುಭವವಿಲ್ಲದಿದ್ದರೆ, ಜೀವನವು ಅಪೂರ್ಣವೆಂದು ತಿಳಿಯುತ್ತಾರೆ. ಮಗುವಿರದಿದ್ದರೂ ಅಪೂರ್ಣವೆಂದು ತಿಳಿಯುತ್ತಾರೆ. ಪ್ರತಿಯೊಂದು ಸಂಬಂಧವನ್ನೂ ಸಂಪನ್ನ ಜೀವನವೆಂದು ತಿಳಿಯುತ್ತಾರೆ ಅಂದಾಗ ಈ ಬ್ರಾಹ್ಮಣ ಜೀವನವು ಭಗವಂತನೊಂದಿಗೆ ಸರ್ವ ಸಂಬಂಧಗಳ ಅನುಭವ ಮಾಡುವಂತಹ ಸಂಪನ್ನ ಜೀವನವಾಗಿದೆ! ಸರ್ವ ಸಂಬಂಧಗಳಲ್ಲಿ ಒಂದು ಸಂಬಂಧದ ಕೊರತೆಯೂ ಆಗಬಾರದು. ಭಗವಂತನೊಂದಿಗಿನ ಒಂದು ಸಂಬಂಧವು ಕೊರತೆಯಾಯಿತೆಂದರೆ, ಆ ಸಂಬಂಧದಿಂದ ಒಂದಲ್ಲ ಒಂದು ಆತ್ಮವು ತನ್ನ ಕಡೆಗೆ ಸೆಳೆಯುತ್ತದೆ. ಹೇಗೆ ಕೆಲವು ಮಕ್ಕಳು ಕೆಲವೊಮ್ಮೆ ಹೇಳುತ್ತಾರೆ - ತಂದೆಯ ರೂಪದಲ್ಲಂತು ಇರುತ್ತಾರೆ. ಆದರೆ ಸಖ ಅಥವಾ ಸಖಿ ಅಥವಾ ಮಿತ್ರನು ಚಿಕ್ಕ ರೂಪವಾಗಿದೆಯಲ್ಲವೆ, ಅದಕ್ಕಾಗಿ ಆತ್ಮರಂತು ಇರಬೇಕು ಏಕೆಂದರೆ ತಂದೆಯಂತು ದೊಡ್ಡವರಲ್ಲವೆ. ಆದರೆ ಪರಮಾತ್ಮನ ಸಂಬಂಧ ಮಧ್ಯೆ, ಯಾವುದೇ ಚಿಕ್ಕ ಅಥವಾ ಸಾಧಾರಣ ಆತ್ಮನ ಸಂಬಂಧವು ಸೇರ್ಪಡೆಯಾಗುತ್ತದೆಯೆಂದರೆ ‘ಸರ್ವ’ ಶಬ್ಧದ ಸಮಾಪ್ತಿಯಾಗಿ ಬಿಡುತ್ತದೆ. ಮತ್ತು ಯಥಾ ಶಕ್ತಿಯವರ ಲೈನ್ನಲ್ಲಿ ಬಂದು ಬಿಡುತ್ತೀರಿ. ಬ್ರಾಹ್ಮಣ ಭಾಷೆಯಲ್ಲಿ ಸದಾ ಪ್ರತೀ ಮಾತಿನಲ್ಲಿಯೂ ‘ಸರ್ವ’ ಶಬ್ಧವು ಬರುತ್ತದೆ, ಎಲ್ಲಿ ‘ಸರ್ವ’ ಶಬ್ಧವಿದೆಯೋ ಅಲ್ಲಿಯೇ ಸಂಪನ್ನತೆಯೂ ಇರುತ್ತದೆ. ಒಂದುವೇಳೆ ಎರಡು ಕಲೆಯು ಕಡಿಮೆಯಾಯಿತೆಂದರೂ ಎರಡನೇ ಮಾಲೆಯ ಮಣಿಯಾಗಿ ಬಿಡುತ್ತೀರಿ. ಆದ್ದರಿಂದ ಸರ್ವ ಸಂಬಂಧಗಳ ಸರ್ವ ಸ್ಮೃತಿ ಸ್ವರೂಪರಾಗಿರಿ. ತಿಳಿಯಿತೆ? ಯಾವಾಗ ಭಗವಂತನೇ ಸ್ವಯಂ ಸರ್ವ ಸಂಬಂಧಗಳ ಅನುಭವ ಮಾಡಿಸುವ ಅವಕಾಶ ಕೊಡುತ್ತಿದ್ದಾರೆ, ಅಂದಮೇಲೆ ಪ್ರಾಪ್ತಿ ಮಾಡಿಕೊಳ್ಳಬೇಕಲ್ಲವೆ. ಇಂತಹ ಗೋಲ್ಡನ್ ಚಾನ್ಸ್ನ್ನು ಭಗವಂತನಲ್ಲದೇ ಮತ್ತು ಈ ಸಮಯದಲ್ಲ ಮಾಡಿಕೊಳ್ಳದಿದ್ದರೆ ಮತ್ತೆಂದಿಗೂ ಹಾಗೂ ಮತ್ತ್ಯಾರೂ ಸಹ ಅನುಭವ ಮಾಡಿಸಲು ಸಾಧ್ಯವಿಲ್ಲ. ಯಾರೇ ತಂದೆಯಾಗಬಹುದು ಅಥವಾ ಮಗನಾಗಬಹುದು - ಈ ರೀತಿಯಾಗಲು ಸಾಧ್ಯವಿದೆಯೇ? ಇದಂತು ಒಬ್ಬರದೇ ಮಹಿಮೆಯಾಗಿದೆ, ಒಬ್ಬರದೇ ಮಹಾನತೆಯಾಗಿದೆ ಆದ್ದರಿಂದ ಸರ್ವ ಸಂಬಂಧಗಳಿಂದ ಸ್ಮೃತಿ ಸ್ವರೂಪರು ಆಗಬೇಕಾಗಿದೆ. ಇದರಲ್ಲಿ ಮಜಾ ಇದೆಯಲ್ಲವೆ? ಯಾವುದಕ್ಕಾಗಿ ಬ್ರಾಹ್ಮಣ ಜೀವನವಿದೆ? ಮಜಾದಲ್ಲಿ ಅಥವಾ ಮೋಜಿನಲ್ಲಿರುವುದಕ್ಕಾಗಿ ಇದೆ. ಅಂದಮೇಲೆ ಈ ಅಲೌಕಿಕ ಮೋಜನ್ನಾಚರಿಸಿರಿ. ಮಜಾದ (ಅಲೌಕಿಕ ಸುಖ) ಜೀವನದ ಅನುಭವ ಮಾಡಿರಿ. ಒಳ್ಳೆಯದು.

ಇಂದು ದೆಹಲಿಯ ಸಭೆಯವರಿದ್ದಾರೆ. ರಾಜ್ಯ ಸಭೆಯವರು ಆಗಿದ್ದೀರಾ ಅಥವಾ ಸಭೆಯಲ್ಲಿ ಕೇವಲ ನೋಡುವವರಾಗಿದ್ದೀರಾ? ಸಭೆಯಲ್ಲಿ ರಾಜ್ಯಾಡಳಿತ ಮಾಡುವವರು ಮತ್ತು ನೋಡುವವರು - ಇಬ್ಬರೂ ಕುಳಿತಿದ್ದಾರೆ. ತಾವೆಲ್ಲರೂ ಯಾರಾಗಿದ್ದೀರಿ? ದೆಹಲಿಯ ಎರಡು ವಿಶೇಷತೆಗಳಿವೆ, 1. ದೆಹಲಿಯು ಹೃದಯರಾಮನ ಹೃದಯವಾಗಿದೆ. 2. ಸಿಂಹಾಸನದ ಸ್ಥಾನವಾಗಿದೆ. ದೆಹಲಿಯು ಹೃದಯವಾಗಿದೆಯೆಂದರೆ, ಹೃದಯದಲ್ಲಿ ಯಾರಿದ್ದಾರೆ? ಹೃದಯರಾಮ. ಅಂದಮೇಲೆ ದೆಹಲಿ ನಿವಾಸಿಗಳು ಅರ್ಥಾತ್ ಹೃದಯದಲ್ಲಿ ಸದಾ ಹೃದಯರಾಮನನ್ನು ಇಟ್ಟುಕೊಳ್ಳುವವರು. ಇಂತಹ ಅನುಭವಿ ಆತ್ಮರಾಗಿದ್ದೀರಿ ಮತ್ತು ಈಗಿನಿಂದ ಸ್ವರಾಜ್ಯ ಅಧಿಕಾರಿಯಿಂದ ಭವಿಷ್ಯದಲ್ಲಿ ವಿಶ್ವ ರಾಜ್ಯ ಅಧಿಕಾರಿ ಆಗಿದ್ದೀರಿ. ಹೃದಯದಲ್ಲಿ ಹೃದಯರಾಮನು ಇದ್ದಾರೆಂದರೆ ರಾಜ್ಯಾಧಿಕಾರಿಯಾಗಿ ಈಗಲೂ ಇದ್ದೀರಿ ಮತ್ತು ಸದಾ ಇರುತ್ತೀರಿ. ಅಂದಾಗ ಸದಾ ತಮ್ಮ ಜೀವನದಲ್ಲಿ ಇವೆರಡು ವಿಶೇಷತೆಗಳಿವೆಯೇ? ಎಂದು ನೋಡಿಕೊಳ್ಳಿರಿ. ಹೃದಯದಲ್ಲಿ ಹೃದಯರಾಮ ಮತ್ತು ಅಧಿಕಾರಿಯೂ ಆಗಿರಬೇಕು. ಇಂತಹ ಸುವರ್ಣಾವಕಾಶ (ಗೋಲ್ಡನ್ ಚಾನ್ಸ್)! ಗೋಲ್ಡನ್ಗಿಂತಲೂ ಡೈಮಂಡ್ ಚಾನ್ಸ್ನ್ನು ತೆಗೆದುಕೊಳ್ಳುವವರೆಷ್ಟು ಭಾಗ್ಯಶಾಲಿಯಾಗಿದ್ದೀರಿ! ಒಳ್ಳೆಯದು.

ಈಗಂತು ದೇಶದಲ್ಲಾಗಲಿ ಅಥವಾ ವಿದೇಶದಲ್ಲಿಯೂ ಬೇಹದ್ದಿನ ಸೇವೆಗಾಗಿ ಬಹಳ ಒಳ್ಳೆಯ ಸಾಧನಗಳು ಸಿಕ್ಕಿವೆ. "ಸರ್ವರ ಸ್ನೇಹ, ಸಹಯೋಗದಿಂದ ಸುಖಮಯ ಪ್ರಪಂಚ"- ಹೆಸರಿನಂತೆಯೇ ಸುಂದರವಾದ ಕಾರ್ಯವಾಗಿದೆ, ಹೆಸರನ್ನು ಕೇಳುತ್ತಿದ್ದಂತೆಯೇ ಎಲ್ಲರಲ್ಲಿಯೂ ಉಮ್ಮಂಗ ಬರುತ್ತದೆ. ಇದಂತು ಬಹಳ ದೊಡ್ಡ ಕಾರ್ಯವಾಗಿದೆ, ಒಂದು ವರ್ಷಕ್ಕೂ ಹೆಚ್ಚು ಸಮಯದ ಕಾರ್ಯವಾಗಿದೆ. ಅಂದಮೇಲೆ ಹೇಗೆ ಕಾರ್ಯದ ಹೆಸರನ್ನು ಕೇಳುತ್ತಿದ್ದಂತೆಯೇ ಎಲ್ಲರಿಗೂ ಉಮ್ಮಂಗ ಬರುತ್ತದೆಯೋ ಹಾಗೆಯೇ ಕಾರ್ಯವನ್ನೂ ಉಮ್ಮಂಗದಿಂದ ಮಾಡಬೇಕು. ಈ ಕಾರ್ಯದ ಸುಂದರ ಹೆಸರಿನಿಂದಲೇ ಖುಷಿಯಾಗುತ್ತಿದೆ, ಹಾಗೆಯೇ ಕಾರ್ಯವನ್ನು ಮಾಡುತ್ತಿರುವಾಗಲೂ ಸದಾ ಖುಷಿಯಾಗಿ ಬಿಡುತ್ತೀರಿ. ಇದೂ ಸಹ ಪ್ರತ್ಯಕ್ಷತೆಯ ಪರದೆಯನ್ನು ತೆರೆಯಲು ಆಧಾರವಾಗಿದೆ ಮತ್ತು ಇಂತಹ ಕಾರ್ಯಗಳು ಆಗುತ್ತಿರುತ್ತವೆ ಎಂದು ತಿಳಿಸಿದ್ದೇವಲ್ಲವೆ. ಸರ್ವರ ಸಹಯೋಗಿ - ಕಾರ್ಯದ ಹೆಸರು ಹೇಗಿದೆಯೋ ಹಾಗೆಯೇ ತಾವು ಸ್ವರೂಪರಾಗಿದ್ದು ಕಾರ್ಯವನ್ನು ಸಹಜವಾಗಿ ಮಾಡುತ್ತಿದ್ದರೆ, ಪರಿಶ್ರಮವು ನಿಮಿತ್ತವಷ್ಟೆ ಮತ್ತು ಅದರ ಸಫಲತೆಯು ಪದಮದಷ್ಟು ಅನುಭವ ಮಾಡುತ್ತೀರಿ. ಈ ರೀತಿಯಲ್ಲಿ ಅನುಭವ ಮಾಡುತ್ತೀರಿ ಹೇಗೆಂದರೆ, ಮಾಡಿಸುವವರು ನಮ್ಮನ್ನು ನಿಮಿತ್ತ ಮಾಡಿ ಮಾಡಿಸುತ್ತಿದ್ದಾರೆ. ನಾನು ಮಾಡುತ್ತಿದ್ದೇನೆ ಎನ್ನುವುದಿರುವುದಿಲ್ಲ, ಇದರಿಂದ ಸಹಜಯೋಗಿಯೂ ಆಗುವುದಿಲ್ಲ, ಮಾಡಿಸುವವರು ಮಾಡಿಸುತ್ತಿದ್ದಾರೆ ಮತ್ತು ನಡೆಸುವವರು ಕಾರ್ಯವನ್ನು ನಡೆಸುತ್ತಿದ್ದಾರೆ. ತಮ್ಮೆಲ್ಲರ ಜಗದಂಬಾರವರ ಒಂದು ಸ್ಲೋಗನ್ ನೆನಪಿದೆಯೇ - ಆಜ್ಞೆ ಮಾಡುವವರೇ ನಮ್ಮನ್ನು ನಡೆಸುತ್ತಿದ್ದಾರೆ. ಈ ಸ್ಲೋಗನ್ನ್ನು ಸದಾ ಸ್ಮೃತಿ ಸ್ವರೂಪದಲ್ಲಿ ತಂದುಕೊಳ್ಳುತ್ತಾ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿರುತ್ತೀರಿ. ಉಳಿದಂತೆ ನಾಲ್ಕೂ ಕಡೆಯಲ್ಲಿನ ಉಮ್ಮಂಗ-ಉತ್ಸಾಹವು ಬಹಳ ಚೆನ್ನಾಗಿದೆ. ಎಲ್ಲಿ ಉಮ್ಮಂಗ-ಉತ್ಸಾಹವಿದೆಯೋ ಅಲ್ಲಿ ಸಫಲತೆಯು ತಾನಾಗಿಯೇ ಸಮೀಪಕ್ಕೆ ಬಂದು, ಕೊರಳಿನ ಮಾಲೆಯಾಗಿ ಬಿಡುತ್ತದೆ. ಈ ವಿಶಾಲ ಕಾರ್ಯದಲ್ಲಿ ಅನೇಕ ಆತ್ಮರನ್ನು ಸಹಯೋಗಿಯನ್ನಾಗಿ ಮಾಡುತ್ತಾ ಸಮೀಪಕ್ಕೆ ಕರೆ ತರುತ್ತದೆ ಏಕೆಂದರೆ ಈ ವಿಶಾಲ ಸ್ಟೇಜಿನ ಮೇಲೆ ಪ್ರತ್ಯಕ್ಷತೆಯ ಪರದೆಯು ತೆರೆದ ನಂತರ, ಪ್ರತಿಯೊಂದು ವರ್ಗದ ಪಾತ್ರಧಾರಿಗಳು ಪ್ರತ್ಯಕ್ಷವಾಗಬೇಕು. ಪ್ರತಿಯೊಂದು ವರ್ಗವೆಂದರೆ - ವಿಶ್ವದ ಸರ್ವ ಆತ್ಮರ ವೆರೈಟಿ ವೃಕ್ಷದ ಸಂಘಟನೆಯ ರೂಪ. ನಮಗಂತು ಸಂದೇಶವೇ ಸಿಗಲಿಲ್ಲ ಎಂಬ ದೂರು ಯಾರೂ ಕೊಡಬಾರದು, ಇಂತಹ ಯಾವುದೇ ವರ್ಗದವರೂ ಉಳಿದುಕೊಳ್ಳಬಾರದು. ಆದ್ದರಿಂದ ನೇತರಿಂದ ಹಿಡಿದು ಗುಡಿಸಿಲಿನಲ್ಲಿರುವವರೆಗೂ ವರ್ಗಗಳಿವೆ. ವಿದ್ಯಾವಂತರಲ್ಲಿ ಎಲ್ಲರಿಗಿಂತಲೂ ಮೇಲಿರುವವರೆಂದರೆ ವಿಜ್ಞಾನಿಗಳು ಮತ್ತು ಯಾರು ಅವಿದ್ಯಾವಂತರಿದ್ದಾರೆಯೋ, ಅವರಿಗೂ ಈ ಜ್ಞಾನದ ತಿಳುವಳಿಕೆಯನ್ನು ಕೊಡಿ, ಇದೂ ಸಹ ಸೇವೆಯಾಗಿದೆ. ಅಂದಮೇಲೆ ಎಲ್ಲಾ ವರ್ಗಗಳು ಅಂದರೆ ವಿಶ್ವದ ಪ್ರತಿಯೊಂದು ಆತ್ಮನಿಗೂ ಸಂದೇಶವನ್ನು ತಲುಪಿಸಬೇಕಾಗಿದೆ, ಇದೆಷ್ಟು ದೊಡ್ಡ ಕಾರ್ಯವಾಗಿದೆ! ಇದರಿಂದ ಯಾರೂ ಸಹ ನಮಗೆ ಸೇವೆಯ ಅವಕಾಶವೇ ಸಿಗಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಭಲೆ ಯಾವುದೇ ಖಾಯಿಲೆಯಿರಬಹುದು, ಅಂದಾಗ ರೋಗಿಯು ರೋಗಿಯ ಸೇವೆ ಮಾಡಿರಿ, ಅವಿದ್ಯಾವಂತರು ಅವಿದ್ಯಾವಂತರ ಸೇವೆ ಮಾಡಿರಿ. ಯಾವ ಸೇವೆಯನ್ನು ಮಾಡಬಲ್ಲಿರಿ, ಅದರ ಅವಕಾಶವಿದೆ. ಒಳ್ಳೆಯದು - ಹೇಳುವುದಕ್ಕೆ ಸಾಧ್ಯವಿಲ್ಲವೆಂದರೆ ಮನಸ್ಸಾ ವಾಯುಮಂಡಲದಿಂದ ಸುಖದ ವೃತ್ತಿ, ಸುಖಮಯ ಸ್ಥಿತಿಯಿಂದ ಸುಖಮಯ ಪ್ರಪಂಚವನ್ನಾಗಿ ಮಾಡಿರಿ. ನಾನು ಮಾಡಲು ಸಾಧ್ಯವಿಲ್ಲ, ನನಗೆ ಸಮಯವಿಲ್ಲ ಎಂಬ ಯಾವುದೇ ನೆಪ ಅಥವಾ ಕಾರಣಗಳನ್ನು ಕೊಡಲು ಸಾಧ್ಯವಿಲ್ಲ. ಏಳುತ್ತಾ-ಕುಳಿತುಕೊಳ್ಳುತ್ತಾ 10-10 ನಿಮಿಷದಲ್ಲಿ ಸೇವೆ ಮಾಡಿರಿ. ಸಹಯೋಗದ ಬೆರಳನ್ನು ಕೊಡುತ್ತೀರಲ್ಲವೆ? ತಪ್ಪಿಸಿಕೊಳಲು ಸಾಧ್ಯವಿಲ್ಲ, ಆರೋಗ್ಯವು ಸರಿಯಿಲ್ಲದಿದ್ದರೆ ಮನೆಯಲ್ಲಿ ಕುಳಿತುಕೊಂಡು ಸೇವೆ ಮಾಡಿರಿ. ಆದರೆ ಅವಶ್ಯವಾಗಿ ಸಹಯೋಗಿಗಳಾಗಬೇಕು. ಇದರಿಂದ ಸರ್ವರ ಸಹಯೋಗವು ಸಿಗುತ್ತದೆ. ಒಳ್ಳೆಯದು.

ಉಮ್ಮಂಗ-ಉತ್ಸಾಹವನ್ನು ನೋಡುತ್ತಾ ಬಾಪ್ದಾದಾರವರೂ ಖುಷಿಯಾಗುತ್ತಾರೆ. ಎಲ್ಲರ ಮನಸ್ಸಿನ ಲಗನ್ ಇದೆ - ಈಗ ಪ್ರತ್ಯಕ್ಷತೆಯ ಪರದೆಯನ್ನು ತೆರೆದು ತೋರಿಸೋಣ ಎಂದು. ಇದರ ಆರಂಭವಂತು ಆಯಿತಲ್ಲವೆ ಅಂದಮೇಲೆ ನಂತರದಲ್ಲಿ ಸಹಜವಾಗುತ್ತದೆ. ವಿದೇಶದಲ್ಲಿರುವ ಮಕ್ಕಳ ಯೋಜನೆಗಳೂ ಸಹ ಬಾಪ್ದಾದಾರವರೆಗೆ ತಲುಪುತ್ತಿರುತ್ತದೆ. ಸ್ವಯಂ ಸಹ ಉಮ್ಮಂಗದಲ್ಲಿದ್ದಾರೆ ಮತ್ತು ಸಹಯೋಗವೂ ಸಹ ಉಮ್ಮಂಗ-ಉತ್ಸಾಹದಿಂದ ಸಿಗುತ್ತಿರುತ್ತದೆ. ಉಮ್ಮಂಗಕ್ಕೆ ಉಮ್ಮಂಗ, ಉತ್ಸಾಹಕ್ಕೆ ಉತ್ಸಾಹವೇ ರಿಟರ್ನ್ ಸಿಗುತ್ತಿರುತ್ತದೆ, ಇದೂ ಸಹ ಮಿಲನವಾಗುತ್ತಿದೆ ಆದ್ದರಿಂದ ಈ ಕಾರ್ಯವು ವಿಜೃಂಭಣೆಯಿಂದ ಮುಂದುವರೆಸಿರಿ. ಉಮ್ಮಂಗ-ಉತ್ಸಾಹದಿಂದ ಏನೆಲ್ಲವನ್ನೂ ಮಾಡಿದ್ದೀರಿ, ಅದಕ್ಕೆ ಇನ್ನಷ್ಟು ತಂದೆಯಿಂದ, ಸರ್ವ ಬ್ರಾಹ್ಮಣ ಸಹಯೋಗದಿಂದ, ಶುಭ ಕಾಮನೆಗಳು – ಶುಭ ಭಾವನೆಗಳಿಂದ ಮುಂದುವರೆಯುತ್ತಾ ಇರುತ್ತೀರಿ. ಒಳ್ಳೆಯದು.

ನಾಲ್ಕೂ ಕಡೆಯಲ್ಲಿನ ಸದಾ ನೆನಪು ಮತ್ತು ಸೇವೆಯ ಉಮ್ಮಂಗ-ಉತ್ಸಾಹವಿರುವ ಶ್ರೇಷ್ಠ ಮಕ್ಕಳಿಗೆ, ಸದಾ ಪ್ರತಿಯೊಂದು ಕರ್ಮದಲ್ಲಿ ಸ್ಮೃತಿ ಸ್ವರೂಪದ ಅನುಭೂತಿ ಮಾಡುವಂತಹ ಅನುಭವೀ ಆತ್ಮರಿಗೆ, ಸದಾ ಪ್ರತಿಯೊಂದು ಕರ್ಮದಲ್ಲಿ ತಂದೆಯ ಸರ್ವ ಸಂಬಂಧಗಳ ಅನುಭವ ಮಾಡುವಂತಹ ಶ್ರೇಷ್ಠಾತ್ಮರಿಗೆ, ಸದಾ ಬ್ರಾಹ್ಮಣ ಜೀವನದ ಮಜಾ ಜೀವನವನ್ನಾಗಿ ಉಪಯೋಗಿಸುವಂತಹ ಮಹಾನ್ ಆತ್ಮರಿಗೆ ಬಾಪ್ದಾದಾರವರ ಅತಿ ಸ್ನೇಹ-ಸಂಪನ್ನ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ.

ವರದಾನ:  
ಸಂಗಮಯುಗದಲ್ಲಿ ಒಂದಕ್ಕೆ ನೂರು ಪಟ್ಟು ಪ್ರತ್ಯಕ್ಷ ಫಲದ ಪ್ರಾಪ್ತಿ ಮಾಡಿಕೊಳ್ಳುವಂತಹ ಪದಮಾಪದಮ ಭಾಗ್ಯಶಾಲಿ ಭವ.

ಸಂಗಮಯುಗವೇ ಒಂದಕ್ಕೆ ನೂರು ಪಟ್ಟು ಪ್ರತ್ಯಕ್ಷ ಫಲವನ್ನು ಕೊಡುವಂತದ್ದಾಗಿದೆ, ನಾನು ತಂದೆಯ ಮಗುವಾಗಿದ್ದೇನೆ, ನಾನು ಮಾಸ್ಟರ್ ಸರ್ವಶಕ್ತಿವಂತನು ಆಗಿದ್ದೇನೆಂದು ಒಂದು ಬಾರಿಯಷ್ಟೇ ಸಂಕಲ್ಪ ಮಾಡುತ್ತಿರೆಂದರೂ, ಮಾಯಾಜೀತರಾಗುವ ಮತ್ತು ವಿಜಯಿಯಾಗುವ ನಶೆಯ ಅನುಭವವಾಗುತ್ತದೆ. ಶ್ರೇಷ್ಠ ಸಂಕಲ್ಪವನ್ನು ಮಾಡುವುದೇ ಬೀಜವಾಗಿದೆ. ಅದರ ಅತ್ಯಂತ ಶ್ರೇಷ್ಠ ಫಲವಾಗಿ ಸ್ವಯಂ ಪರಮಾತ್ಮ ತಂದೆಯೂ ಸಹ ಸಾಕಾರ ಮನುಷ್ಯನ ರೂಪದಲ್ಲಿ ಮಿಲನವಾಗಲು ಬರುತ್ತಾರೆ, ಈ ಫಲದಲ್ಲಿ ಎಲ್ಲಾ ಫಲಗಳೂ (ಪ್ರಾಪ್ತಿ) ಫಲಿಸುತ್ತವೆ.

ಸ್ಲೋಗನ್:
ಯಾರ ಚಹರೆ ಮತ್ತು ಲಕ್ಷಣದಲ್ಲಿ ಪವಿತ್ರತೆಯ ವ್ಯಕ್ತಿತ್ವ ಅಥವಾ ಘನತೆಯ ಅನುಭವವಿದೆಯೋ, ಅವರೇ ಸತ್ಯ ಬ್ರಾಹ್ಮಣರು ಆಗಿದ್ದಾರೆ.

ಸೂಚನೆ:-
ಇಂದು ತಿಂಗಳಿನ ಮೂರನೇ ರವಿವಾರ ಅಂತರಾಷ್ಟ್ರೀಯ ಯೋಗ ದಿನವಾಗಿದೆ, ಸಂಜೆ 6.30ರಿಂದ 7.30ರ ಗಂಟೆಯವರೆಗೆ, ಎಲ್ಲಾ ಸಹೋದರ-ಸಹೋದರಿಯರು ವಿಶೇಷವಾಗಿ ಯೋಗ ತಪಸ್ಸನ್ನು ಮಾಡುತ್ತಾ, ತಮ್ಮ ಶುಭ ಭಾವನೆಗಳಿಂದ ಕೂಡಿದ ಸಂಕಲ್ಪಗಳ ಮೂಲಕ ಪ್ರಕೃತಿ ಸಹಿತವಾಗಿ, ವಿಶ್ವದ ಸರ್ವ ಆತ್ಮರಿಗೂ ಶಾಂತಿ ಮತ್ತು ಶಕ್ತಿಯ ವೈಬ್ರೇಷನ್ ಕೊಡುವ ಸೇವೆಯನ್ನು ಮಾಡಿರಿ.


14-10-87 ಅವ್ಯಕ್ತ ಮುರಳಿಯಿಂದ ಸ್ವ-ಉನ್ನತಿಗಾಗಿ ಪ್ರಶ್ನಾವಳಿ -

1. ಭಕ್ತಿಯ ವಿಶೇಷತೆ ಏನಾಗಿದೆ?

2. ಪ್ರತಿ ಹಜ್ಜೆಯಲ್ಲಿ ಎಂತಹ ಸ್ಮೃತಿಯ ಅನುಭವ ಮಾಡಬೇಕು?

3. ಅಮೃತವೇಳೆಯಲ್ಲಿ ಎಂತಹ ಸ್ವರೂಪದ ಸ್ಮೃತಿಯನ್ನು ತಂದುಕೊಳ್ಳಬೇಕು?

4. ಮುರುಳಿಯನ್ನು ಯಾವ ಸ್ಮೃತಿಯಿಂದ ಕೇಳಿದಾಗ ನಶೆಯೇರುವುದು?

5. ನಾವು ಯಾರ ಜೊತೆಯಲ್ಲಿ ಆಟವಾಡಬೇಕು?

6. ನಾವು ಸುಸ್ತಾದಾಗ ಯಾರ ಮಡಿಲಲ್ಲಿ ಮಲಗಬೇಕು?

7. ನಾವು ಹೃದಯವಿಧಿರ್ಣರಾದಾಗ ಯಾವ ಸ್ಮೃತಿಯಲ್ಲಿದ್ದರೆ ಖುಷಿಯಾಗುತ್ತೇವೆ?

8. ಜಗದಂಬೆಯ ಸ್ಲೋಗನ್ ಏನಾಗಿತ್ತು ಯಾವ ಸ್ಮೃತಿಯಿಂದ ನಾವು ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳಬಹುದು?

9. ಸತ್ಯವಾದ ಬ್ರಾಹ್ಮಣರು ಯಾರಾಗಿದ್ದಾರೆ?

10. ವಿದ್ಯಾವಂತರಲ್ಲಿ ಎಲ್ಲರಿಗಿಂತಲೂ ಮೇಲಿರುವವರೆಂದರೆ ವಿಜ್ಞಾನಿಗಳು ಮತ್ತು ಯಾರು ಅವಿದ್ಯಾವಂತರಿದ್ದಾರೆಯೋ, ಅವರಿಗೂ ಈ ಜ್ಞಾನದ ತಿಳುವಳಿಕೆಯನ್ನು ಕೊಡಿ, ಇದೂ ಸಹ ___________ಆಗಿದೆ.