28.01.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಎಂದೂ ಮಿಥ್ಯ ಅಹಂಕಾರದಲ್ಲಿ ಬರಬೇಡಿ, ಈ ರಥಕ್ಕೂ (ಬ್ರಹ್ಮಾ) ಪೂರ್ಣ ಗೌರವ ಕೊಡಿ”

ಪ್ರಶ್ನೆ:
ನೀವು ಮಕ್ಕಳಲ್ಲಿ ಪದಮಾಪದಮ ಭಾಗ್ಯಶಾಲಿಗಳು ಯಾರು ಮತ್ತು ದೌರ್ಭಾಗ್ಯಶಾಲಿಗಳು ಯಾರು?

ಉತ್ತರ:
ಯಾರ ಚಲನೆ ದೇವತೆಗಳ ತರಹ ಇದೆಯೋ, ಯಾರು ಎಲ್ಲರಿಗೂ ಸುಖವನ್ನು ಕೊಡುವರೋ ಅವರು ಪದಮಾಪದಮ ಭಾಗ್ಯಶಾಲಿಗಳಾಗಿದ್ದಾರೆ ಮತ್ತು ಯಾರು ಅನುತ್ತೀರ್ಣರಾಗುವರೋ ಅವರಿಗೆ ದೌರ್ಭಾಗ್ಯಶಾಲಿಗಳೆಂದು ಹೇಳುತ್ತಾರೆ. ಕೆಲವರು ಮಹಾನ್ ದೌರ್ಭಾಗ್ಯಶಾಲಿಗಳಾಗಿ ಬಿಡುತ್ತಾರೆ, ಅವರು ಎಲ್ಲರಿಗೆ ದುಃಖ ಕೊಡುತ್ತಿರುತ್ತಾರೆ. ಸುಖ ಕೊಡುವುದು ಅವರಿಗೆ ಗೊತ್ತೇ ಇಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಮ್ಮನ್ನು ಚೆನ್ನಾಗಿ ಸಂಭಾಲನೆ ಮಾಡಿಕೊಳ್ಳಿ, ಎಲ್ಲರಿಗೂ ಸುಖ ಕೊಡಿ, ಯೋಗ್ಯರಾಗಿ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ನೀವು ಈ ಪಾಠಶಾಲೆಯಲ್ಲಿ ಕುಳಿತು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಆಂತರ್ಯದಲ್ಲಿ ತಿಳಿದುಕೊಳ್ಳುತ್ತೀರಿ, ನಾವು ಬಹಳ ಶ್ರೇಷ್ಠಾತಿ ಶ್ರೇಷ್ಠ ಸ್ವರ್ಗದ ಪದವಿಯನ್ನು ಪಡೆಯುತ್ತೇವೆ. ಇಂತಹ ಮಕ್ಕಳಿಗಂತೂ ಬಹಳ ಖುಷಿಯಿರಬೇಕು. ಒಂದುವೇಳೆ ಎಲ್ಲರಿಗೆ ನಿಶ್ಚಯವಿದ್ದರೆ ಎಲ್ಲರೂ ಒಂದೇ ರೀತಿ ಆಗಲು ಸಾಧ್ಯವಿಲ್ಲ. ಮೊದಲಿನಿಂದ ಕೊನೆಯ ನಂಬರಿನವರೆಗೆ ಇದ್ದೇ ಇರುತ್ತಾರೆ. ಪತ್ರಿಕೆಗಳಲ್ಲಿಯೂ ಮೊದಲಿನಿಂದ ಕೊನೆಯ ನಂಬರಿನವರೆಗೆ ಸಂಖ್ಯೆಗಳಿರುತ್ತವೆ. ಕೆಲವರು ಅನುತ್ತೀರ್ಣರಾಗುತ್ತಾರೆ, ಕೆಲವರು ಉತ್ತೀರ್ಣರಾಗುತ್ತಾರೆ ಅಂದಾಗ ಪ್ರತಿಯೊಬ್ಬರೂ ತಮ್ಮ ಹೃದಯದೊಂದಿಗೆ ಕೇಳಿಕೊಳ್ಳಿ - ತಂದೆಯು ನಮ್ಮನ್ನು ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ ಅಂದಾಗ ನಾನು ಎಲ್ಲಿಯವರೆಗೆ ಯೋಗ್ಯನಾಗಿದ್ದೇನೆ? ಅನ್ಯರಿಗಿಂತ ಚೆನ್ನಾಗಿದ್ದೇನೆಯೇ ಅಥವಾ ಕಡಿಮೆಯಿದ್ದೇನೆಯೇ? ಇದು ವಿದ್ಯೆಯಲ್ಲವೆ. ಇದೂ ಸಹ ಕಾಣುತ್ತದೆ, ಯಾರು ಯಾವುದೇ ಸಬ್ಜೆಕ್ಟ್ನಲ್ಲಿ ನಿರ್ಬಲರಾಗಿದ್ದರೆ ಅವರು ಕೆಳಗೆ ಹೊರಟು ಹೋಗುತ್ತಾರೆ. ಭಲೆ ಮಾನೀಟರ್ ಆಗಿರಬಹುದು ಆದರೆ ಯಾವುದೇ ಸಬ್ಜೆಕ್ಟ್ನಲ್ಲಿ ಕಡಿಮೆಯಿದ್ದರೆ ಅವರು ಕೆಳಗಿಳಿಯುವರು. ಕೆಲವರೇ ವಿರಳ ಸ್ಕಾಲರ್ಶಿಪ್ ತೆಗೆದುಕೊಳ್ಳುತ್ತಾರೆ. ಇದೂ ಸಹ ಶಾಲೆಯಾಗಿದೆ. ನೀವು ತಿಳಿದುಕೊಂಡಿದ್ದೀರಿ, ನಾವೆಲ್ಲರೂ ಓದುತ್ತಿದ್ದೇವೆ, ಇದರಲ್ಲಿ ಮೊಟ್ಟ ಮೊದಲನೆಯ ಮಾತು ಪವಿತ್ರತೆಯಾಗಿದೆ. ಪವಿತ್ರರಾಗುವುದಕ್ಕಾಗಿಯೇ ತಂದೆಯನ್ನು ಕರೆದಿರಲ್ಲವೆ. ಒಂದುವೇಳೆ ವಿಕಾರೀ ದೃಷ್ಟಿಯು ಕೆಲಸ ಮಾಡುತ್ತಿದ್ದರೆ ನಿಮಗೂ ಅದು ಪಶ್ಚಾತ್ತಾಪವಾಗುತ್ತದೆ. ಬಾಬಾ, ನಾವು ಈ ಸಬ್ಜೆಕ್ಟ್ನಲ್ಲಿ ನಿರ್ಬಲರಾಗಿದ್ದೇವೆ ಎಂದು ತಂದೆಗೆ ಬರೆಯುತ್ತಾರೆ. ನಾನು ಇಂತಹ ಸಬ್ಜೆಕ್ಟ್ನಲ್ಲಿ ಬಹಳ ನಿರ್ಬಲನಾಗಿದ್ದೇನೆ ಎಂದು ವಿದ್ಯಾರ್ಥಿಯ ಬುದ್ಧಿಯಲ್ಲಿರುತ್ತದೆ. ನಾನು ಅನುತ್ತೀರ್ಣನಾಗುತ್ತೇನೆಂದು ಕೆಲವರಿಗೆ ತಾನಾಗಿಯೇ ಅರ್ಥವಾಗುತ್ತದೆ. ಇದರಲ್ಲಿ ಮೊದಲನೆಯ ಸಬ್ಜೆಕ್ಟ್ ಪವಿತ್ರತೆಯಾಗಿದೆ. ಬಾಬಾ, ನಾವು ಸೋತು ಹೋದೆವು ಎಂದು ಅನೇಕರು ಹೇಳುತ್ತಾರೆ ಅಂದಾಗ ಅಂತಹವರಿಗೆ ಏನು ಹೇಳುವುದು? ನಾನಿನ್ನು ಏರಲು ಸಾಧ್ಯವಿಲ್ಲವೆಂದು ಅವರಿಗೆ ಸಂಕಲ್ಪ ಬರುತ್ತದೆಯಲ್ಲವೆ. ನೀವು ಪವಿತ್ರ ಪ್ರಪಂಚವನ್ನು ಸ್ಥಾಪನೆ ಮಾಡುತ್ತೀರಿ, ನಿಮ್ಮ ಗುರಿ-ಧ್ಯೇಯವೇ ಇದಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಮತ್ತು ಪವಿತ್ರರಾಗಿ ಆಗ ಈ ಲಕ್ಷ್ಮೀ-ನಾರಾಯಣರ ಮನೆತನದಲ್ಲಿ ಹೋಗುವಿರಿ. ಇವರು ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯುವರೇ ಅಥವಾ ಇಲ್ಲವೇ ಎಂಬುದನ್ನು ಶಿಕ್ಷಕರು ತಿಳಿದುಕೊಂಡಿರುತ್ತಾರೆ. ಇವರಂತು ಪರಮ ಶಿಕ್ಷಕನಾಗಿದ್ದಾರೆ. ಈ ದಾದಾರವರೂ ಸಹ ಶಾಲೆಯಲ್ಲಿ ಓದಿದ್ದಾರಲ್ಲವೆ. ಕೆಲವರು ಹುಡುಗರು ಇಂತಹ ಕೆಟ್ಟ ಕೆಲಸಗಳನ್ನು ಮಾಡುತ್ತಾರೆ. ಕೊನೆಗೆ ಶಿಕ್ಷಕರು ಶಿಕ್ಷೆಯನ್ನು ಕೊಡಲೇಬೇಕಾಗುತ್ತದೆ. ಮೊದಲು ಬಹಳ ಜೋರಾಗಿ ಶಿಕ್ಷೆಯನ್ನು ವಿಧಿಸುತ್ತಿದ್ದರು. ಈಗ ಶಿಕ್ಷೆಯನ್ನು ಕಡಿಮೆ ಮಾಡಿರುವ ಕಾರಣ ವಿದ್ಯಾರ್ಥಿಗಳು ಇನ್ನೂ ಹೆಚ್ಚು ಕೆಟ್ಟು ಹೋಗುತ್ತಾರೆ. ಇತ್ತೀಚೆಗೆ ವಿದ್ಯಾರ್ಥಿಗಳು ಎಷ್ಟೊಂದು ಹೆಚ್ಚು ಕಡಿಮೆಗಳನ್ನು ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಬಿಸಿ ರಕ್ತವೆಂದು ಹೇಳುತ್ತಾರಲ್ಲವೆ. ನೋಡಿ, ಏನೇನು ಮಾಡುತ್ತಾರೆ! ಬೆಂಕಿಯನ್ನಿಡುತ್ತಾರೆ, ತಮ್ಮ ಯೌವ್ವನವನ್ನು ತೋರಿಸಿಕೊಳ್ಳುತ್ತಾರೆ. ಇದು ಆಸುರೀ ಪ್ರಪಂಚವಾಗಿದೆ. ಯುವಕರೇ ಬಹಳ ಕೆಟ್ಟಿರುತ್ತಾರೆ. ಅವರ ದೃಷ್ಟಿಯೇ ವಿಕಾರಿಯಾಗಿರುತ್ತದೆ. ನೋಡಲು ಬಹಳ ಚೆನ್ನಾಗಿ ಕಾಣುತ್ತಾರೆ, ಹೇಗೆ ಈಶ್ವರನ ಅಂತ್ಯವನ್ನು ಪಡೆಯಲು ಸಾಧ್ಯವಿಲ್ಲವೆಂದು ಹೇಳುತ್ತಾರಲ್ಲವೆ. ಹಾಗೆಯೇ ಇವರು ಯಾವ ಪ್ರಕಾರದ ಮನುಷ್ಯರೆಂಬುದನ್ನು ತಿಳಿಯುವುದೂ ಸಹ ಕಷ್ಟವಾಗುತ್ತದೆ. ಹಾ! ಜ್ಞಾನದ ಬುದ್ಧಿಯಿಂದ ಇವರು ಹೇಗೆ ಓದುತ್ತಾರೆ, ಇವರ ನಡವಳಿಕೆ ಹೇಗಿದೆ ಎಂಬುದು ಅರ್ಥವಾಗುತ್ತದೆ. ಕೆಲವರಂತೂ ಹೇಗೆ ಬಾಯಿಂದ ಹೂಗಳು ಸುರಿದಂತೆ ಮಾತನಾಡುತ್ತಾರೆ. ಕೆಲವರಂತೂ ಕಲ್ಲೆಸೆದಂತೆ ಮಾತನಾಡುತ್ತಾರೆ. ನೋಡಲು ಬಹಳ ಚೆನ್ನಾಗಿ ಕಾಣುತ್ತಾರೆ, ಒಳ್ಳೊಳ್ಳೆಯ ಜ್ಞಾನ ಬಿಂದುಗಳನ್ನು ಬರೆದುಕೊಳ್ಳುತ್ತಾರೆ. ಆದರೆ ಕಲ್ಲು ಬುದ್ಧಿಯವರಾಗಿದ್ದಾರೆ. ಹೊರಗಿನ ಆಡಂಬರವಿದೆ. ಮಾಯೆಯು ಬಹಳ ಪ್ರಬಲವಾಗಿದೆ ಆದ್ದರಿಂದ ಗಾಯನವಿದೆ - ಆಶ್ಚರ್ಯವೆನಿಸುವಂತೆ ಕೇಳುತ್ತಾರೆ, ತಮ್ಮನ್ನು ಶಿವ ತಂದೆಯ ಸಂತಾನನೆಂದು ಕರೆಸಿಕೊಳ್ಳುತ್ತಾರೆ, ಅನ್ಯರಿಗೂ ತಿಳಿಸುತ್ತಾರೆ ಮತ್ತೆ ಓಡಿ ಹೋಗಿ ವಿರೋಧಿಗಳಾಗುತ್ತಾರೆ. ಬುದ್ಧಿವಂತರು ವಿರೋಧಿಗಳಾಗುವುದಿಲ್ಲ ಎಂದಲ್ಲ. ಒಳ್ಳೊಳ್ಳೆಯ ಬುದ್ಧಿವಂತರೂ ಸಹ ವಿರೋಧಿಗಳಾಗಿ ಬಿಡುತ್ತಾರೆ, ಆ ಸೇನೆಯಲ್ಲಿಯೂ ಇದೇರೀತಿ ಆಗುತ್ತದೆ. ವಿಮಾನ ಸಹಿತವಾಗಿಯೇ ಇನ್ನೊಂದು ದೇಶಕ್ಕೆ ಹೊರಟು ಹೋಗುತ್ತಾರೆ. ಇಲ್ಲಿಯೂ ಅದೇರೀತಿ ಆಗುತ್ತದೆ. ಸ್ಥಾಪನೆಯಲ್ಲಿ ಬಹಳ ಪರಿಶ್ರಮವಾಗುತ್ತಿದೆ. ಮಕ್ಕಳಿಗೂ ವಿದ್ಯಾಭ್ಯಾಸದಲ್ಲಿ ಪರಿಶ್ರಮ, ಶಿಕ್ಷಕರಿಗೂ ಓದಿಸುವುದರಲ್ಲಿ ಪರಿಶ್ರಮವಾಗುತ್ತದೆ. ಇವರು ಎಲ್ಲರಿಗೆ ತೊಂದರೆ ಕೊಡುತ್ತಾರೆ, ಓದುವುದಿಲ್ಲವೆಂಬುದನ್ನು ನೋಡಿದಾಗ ಶಾಲೆಗಳಲ್ಲಿ ಕಾವಲಿಡುತ್ತಾರೆ. ಇವರಂತೂ ತಂದೆಯಾಗಿದ್ದಾರೆ, ತಂದೆಯು ಏನೂ ಹೇಳುವುದಿಲ್ಲ. ತಂದೆಯ ಬಳಿ ಈ ಕಾನೂನು ಇಲ್ಲ. ಇಲ್ಲಂತೂ ಬಹಳ ಶಾಂತವಾಗಿರಬೇಕಾಗುತ್ತದೆ. ತಂದೆಯು ಸುಖದಾತ, ಪ್ರೀತಿಯ ಸಾಗರನಾಗಿದ್ದಾರೆ ಅಂದಮೇಲೆ ಮಕ್ಕಳ ಚಲನೆಯೂ ಸಹ ದೇವತೆಗಳ ತರಹ ಇರಬೇಕಲ್ಲವೆ. ನೀವು ಮಕ್ಕಳಿಗೆ ತಂದೆಯು ಸದಾ ಹೇಳುತ್ತಾರೆ - ನೀವು ಪದಮಾಪದಮಾ ಭಾಗ್ಯಶಾಲಿಗಳಾಗಿದ್ದೀರಿ ಆದರೆ ಕೆಲವರು ಪದಮಾಪದಮಾ ದೌರ್ಭಾಗ್ಯಶಾಲಿಗಳೂ ಆಗುತ್ತಾರೆ. ಯಾರು ಅನುತ್ತೀರ್ಣರಾಗುವರೋ ಅವರಿಗೆ ದೌರ್ಭಾಗ್ಯಶಾಲಿಗಳೆಂದೇ ಹೇಳಲಾಗುತ್ತದೆಯಲ್ಲವೆ. ತಂದೆಗೆ ಗೊತ್ತಿದೆ, ಕೊನೆಯವರೆಗೆ ಇದೆಲ್ಲವೂ ಆಗುತ್ತಲೇ ಇರುತ್ತದೆ. ಯಾರಾದರೂ ಮಹಾನ್ ದೌರ್ಭಾಗ್ಯಶಾಲಿಗಳು ಆಗಿಯೇ ಆಗುತ್ತಾರೆ, ಅವರ ಚಲನೆಯಿಂದಲೂ ಅವರು ನಿಲ್ಲುವುದಿಲ್ಲವೆಂದು ಅರ್ಥವಾಗುತ್ತದೆ. ಇವರು ಇಷ್ಟು ಶ್ರೇಷ್ಠರಾಗಲು ಯೋಗ್ಯರಲ್ಲ, ಎಲ್ಲರಿಗೂ ದುಃಖ ಕೊಡುತ್ತಿರುತ್ತಾರೆ. ಸುಖ ಕೊಡುವುದನ್ನು ತಿಳಿದುಕೊಂಡೇ ಇಲ್ಲ ಅಂದಮೇಲೆ ಅವರ ಗತಿ ಏನಾಗುವುದು? ತಂದೆಯು ಸದಾ ಹೇಳುತ್ತಾರೆ - ಮಕ್ಕಳೇ, ತಮ್ಮನ್ನು ಚೆನ್ನಾಗಿ ಸಂಭಾಲನೆ ಮಾಡಿಕೊಳ್ಳಿ, ಇದೂ ಸಹ ಡ್ರಾಮಾನುಸಾರ ಆಗಬೇಕಾಗಿದೆ. ಇನ್ನೂ ಕಬ್ಬಿಣಕ್ಕಿಂತಲೂ ಕನಿಷ್ಟರಾಗಿ ಬಿಡುತ್ತಾರೆ. ಅದರಲ್ಲಿಯೂ ಒಳ್ಳೊಳ್ಳೆಯವರೂ ಸಹ ಪತ್ರಗಳನ್ನು ಬರೆಯುವುದಿಲ್ಲ. ಪಾಪ! ಅಂತಹವರ ಗತಿಯೇನಾಗುವುದು.

ತಂದೆಯು ತಿಳಿಸುತ್ತಾರೆ - ನಾನು ಸರ್ವರ ಕಲ್ಯಾಣ ಮಾಡಲು ಬಂದಿದ್ದೇನೆ. ಇಂದು ಸರ್ವರ ಸದ್ಗತಿ ಮಾಡುತ್ತೇನೆ, ನಾಳೆ ಮತ್ತೆ ದುರ್ಗತಿಯಾಗಿ ಬಿಡುತ್ತದೆ. ನೀವು ಹೇಳುತ್ತೀರಿ - ನಾವು ನೆನ್ನೆಯ ದಿನ ವಿಶ್ವದ ಮಾಲೀಕರಾಗಿದ್ದೆವು, ಇಂದು ಗುಲಾಮರಾಗಿ ಬಿಟ್ಟಿದ್ದೇವೆ. ಈಗ ಇಡೀ ವೃಕ್ಷದ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಇದು ಅದ್ಭುತವಾದ ವೃಕ್ಷವಾಗಿದೆ. ಮನುಷ್ಯರಿಗೆ ಇದೂ ಸಹ ತಿಳಿದಿಲ್ಲ, ನೀವು ತಿಳಿದುಕೊಂಡಿದ್ದೀರಿ, ಕಲ್ಪವೆಂದರೆ ಪೂರ್ಣ 5000 ವರ್ಷಗಳ ನಿಖರವಾದ ವೃಕ್ಷವಾಗಿದೆ. ಒಂದು ಕ್ಷಣವೂ ಸಹ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಈ ಬೇಹದ್ದಿನ ವೃಕ್ಷದ ಜ್ಞಾನವು ನೀವು ಮಕ್ಕಳಿಗೆ ಈಗ ಸಿಗುತ್ತಿದೆ, ಜ್ಞಾನವನ್ನು ಕೊಡುವವರು ವೃಕ್ಷಪತಿಯಾಗಿದ್ದಾರೆ. ಬೀಜವು ಎಷ್ಟು ಚಿಕ್ಕದಾಗಿರುತ್ತದೆ, ಅದರಿಂದ ಫಲವು ನೋಡಿ ಎಷ್ಟು ದೊಡ್ಡದಾಗಿ ಬರುತ್ತದೆ! ಇದು ಬಹಳ ವಿಚಿತ್ರವಾದ ವೃಕ್ಷವಾಗಿದೆ. ಇದರ ಬೀಜವು ಬಹಳ ಚಿಕ್ಕದಾಗಿದೆ ಅಂದರೆ ಆತ್ಮವು ಎಷ್ಟು ಚಿಕ್ಕದಾಗಿದೆ! ತಂದೆಯೂ ಸಹ ಬಹಳ ಸೂಕ್ಷ್ಮವಾಗಿದ್ದಾರೆ. ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಭಲೆ ವಿವೇಕಾನಂದರ ಉದಾಹರಣೆಯನ್ನು ತಿಳಿಸುತ್ತಾರೆ - ಗುರುಗಳಿಂದ ಒಂದು ಜ್ಯೋತಿಯು ಹೊರಟು ಬಂದು ನನ್ನಲ್ಲಿ ಸಮಾವೇಶವಾಯಿತೆಂದು ಅವರು ಹೇಳಿದರು ಆದರೆ ಈ ರೀತಿಯಾಗಿ ಜ್ಯೋತಿಯು ಸಮಾವೇಶವಾಗಲು ಸಾಧ್ಯವಿಲ್ಲ. ಏನು ಹೊರ ಬಂದಿತು ಎಂಬುದನ್ನು ತಿಳಿದುಕೊಂಡಿಲ್ಲ. ಹೀಗೆ ಬಹಳಷ್ಟು ಸಾಕ್ಷಾತ್ಕಾರಗಳಾಗುತ್ತವೆ ಆದರೆ ಅವರು ನಂಬಿ ಬಿಡುತ್ತಾರೆ ಮತ್ತು ಮಹಿಮೆಯನ್ನೂ ಮಾಡುತ್ತಾರೆ. ಆದರೆ ಭಗವಾನುವಾಚ - ಯಾವುದೇ ಮನುಷ್ಯರಿಗೆ ಮಹಿಮೆಯಿಲ್ಲ. ಕೇವಲ ದೇವತೆಗಳಿಗೆ ಮಹಿಮೆಯಿದೆ ಮತ್ತು ಯಾರು ಈ ರೀತಿ ದೇವತೆಗಳನ್ನಾಗಿ ಮಾಡುವವರಿದ್ದಾರೆಯೋ ಅವರ ಮಹಿಮೆಯಿದೆ. ತಂದೆಯು ಬಹಳ ಚೆನ್ನಾಗಿ ಕಾರ್ಡುಗಳನ್ನು ಮಾಡಿಸಿದ್ದರು. ಜಯಂತಿಯನ್ನು ಆಚರಿಸುವುದಾದರೆ ಒಬ್ಬ ಶಿವ ತಂದೆಯದನ್ನು ಆಚರಿಸಿ. ಈ ಲಕ್ಷ್ಮೀ-ನಾರಾಯಣಯರನ್ನೂ ಸಹ ಈ ರೀತಿ ಮಾಡುವವರು ತಂದೆಯಲ್ಲವೆ. ಅವರೊಬ್ಬರಿಗೇ ಮಹಿಮೆಯಿದೆ, ಅವರನ್ನು ನೆನಪು ಮಾಡಿ. ಇವರೂ (ಬ್ರಹ್ಮಾ) ಸಹ ಹೇಳುತ್ತಾರೆ - ನಾನು ಶ್ರೇಷ್ಠಾತಿ ಶ್ರೇಷ್ಠನಾಗುತ್ತೇನೆ ಮತ್ತು ಕೆಳಗೂ ಇಳಿಯುತ್ತೇನೆ. ಶ್ರೇಷ್ಠಾತಿ ಶ್ರೇಷ್ಠ ಲಕ್ಷ್ಮೀ-ನಾರಾಯಣರು ಮತ್ತೆ 84 ಜನ್ಮಗಳ ನಂತರ ಕೆಳಗಿಳಿಯುತ್ತಾರೆ, ತತ್ತ್ವಂ ಎಂಬುದು ಯಾರಿಗೂ ತಿಳಿದಿಲ್ಲ. ನೀವೇ ವಿಶ್ವದ ಮಾಲೀಕರಾಗಿದ್ದಿರಿ, ನಂತರ ಏನಾಗಿ ಬಿಟ್ಟಿರಿ! ಸತ್ಯಯುಗದಲ್ಲಿ ಯಾರಿದ್ದರು? ನಂಬರ್ವಾರ್ ಪುರುಷಾರ್ಥದನುಸಾರ ನೀವೇ ಇದ್ದಿರಿ. ರಾಜಾ-ರಾಣಿಯೂ ಇದ್ದರು, ಸೂರ್ಯವಂಶಿ-ಚಂದ್ರವಂಶಿ ರಾಜಧಾನಿಯವರೂ ಇದ್ದರು. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ನಡೆಯುತ್ತಾ-ತಿರುಗಾಡುತ್ತಾ ಈ ಸೃಷ್ಟಿಚಕ್ರದ ಜ್ಞಾನವು ನೀವು ಮಕ್ಕಳ ಬುದ್ಧಿಯಲ್ಲಿರಬೇಕು. ನೀವು ಚೈತನ್ಯ ಲೈಟ್ಹೌಸ್ ಆಗಿದ್ದೀರಿ, ಇಡೀ ವಿದ್ಯೆಯು ಬುದ್ಧಿಯಲ್ಲಿರಬೇಕು ಆದರೆ ಆ ಸ್ಥಿತಿ ಇನ್ನೂ ಆಗಿಲ್ಲ, ಆಗುವುದಿದೆ. ಯಾರು ಪಾಸ್-ವಿತ್-ಆನರ್ ಆಗುವರೋ ಅವರದು ಈ ಸ್ಥಿತಿಯಿರುವುದು, ಇಡೀ ಜ್ಞಾನವು ಬುದ್ಧಿಯಲ್ಲಿರುವುದು ಆಗಲೇ ತಂದೆಯ ಮುದ್ದಾದ ಮಕ್ಕಳು ಪ್ರಿಯ ಮಕ್ಕಳೆಂದು ಕರೆಸಿಕೊಳ್ಳುವರು. ಇಂತಹ ಮಕ್ಕಳ ಮೇಲೆ ತಂದೆಯು ಸ್ವರ್ಗದ ರಾಜ್ಯಭಾಗ್ಯವನ್ನು ಬಲಿಹಾರಿ ಮಾಡುತ್ತಾರೆ. ತಿಳಿಸುತ್ತಾರೆ - ನಾನು ರಾಜ್ಯಭಾರ ಮಾಡುವುದಿಲ್ಲ, ನಿಮಗೇ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಇದಕ್ಕೆ ನಿಷ್ಕಾಮ ಸೇವೆಯೆಂದು ಹೇಳಲಾಗುತ್ತದೆ. ಮಕ್ಕಳಿಗೆ ಗೊತ್ತಿದೆ - ತಂದೆಯು ನಮ್ಮನ್ನು ತಲೆಯ ಮೇಲೆ ಕೂರಿಸಿಕೊಳ್ಳುತ್ತಾರೆ ಅಂದಮೇಲೆ ಇಂತಹ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕು! ಇದೂ ಸಹ ಡ್ರಾಮಾದಲ್ಲಿ ಮಾಡಲ್ಪಟ್ಟಿದೆ. ತಂದೆಯು ಸಂಗಮಯುಗದಲ್ಲಿ ಬಂದು ಎಲ್ಲರಿಗೂ ಸದ್ಗತಿಯನ್ನು ಕೊಡುತ್ತಾರೆ ನಂಬರ್ವಾರ್ ಪುರುಷಾರ್ಥದನುಸಾರ. ನಂಬರ್ವನ್ ಅತೀ ಪವಿತ್ರರೇ ಕೊನೆಯಲ್ಲಿ ಅತೀ ಅಪವಿತ್ರರಾಗುವರು. ನೆನಪು-ಪ್ರೀತಿಯಂತೂ ತಂದೆಯು ಎಲ್ಲರಿಗೂ ಕೊಡುತ್ತಾರೆ.

ತಂದೆಯು ಎಷ್ಟು ಚೆನ್ನಾಗಿ ತಿಳಿಸಿಕೊಡುತ್ತಾರೆ, ಎಂದೂ ಮಿಥ್ಯ ಅಹಂಕಾರವು ಬರಬಾರದು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಎಚ್ಚರಿಕೆಯಿಂದಿರಿ. ಈ ರಥಕ್ಕೂ ಗೌರವ ಕೊಡಬೇಕು. ಇವರ ಮೂಲಕವೇ ನಾನು ತಿಳಿಸುತ್ತೇನೆ ಅಲ್ಲವೆ. ಮೊದಲು ಇವರು ಎಂದೂ ನಿಂದನೆಗೊಳಗಾಗಿರಲಿಲ್ಲ, ಎಲ್ಲರೂ ಪ್ರೀತಿ ಮಾಡುತ್ತಿದ್ದರು. ಈಗಂತೂ ನೋಡಿ, ಎಷ್ಟೊಂದು ನಿಂದನೆಯನ್ನು ಅನುಭವಿಸುತ್ತಾರೆ! ಕೆಲವರು ವಿರೋಧಿಗಳಾಗಿ ಹೊರಟು ಹೋದರು ಅಂದಮೇಲೆ ಅವರ ಗತಿಯೇನಾಗುವುದು, ಅನುತ್ತೀರ್ಣರಾಗುತ್ತಾರಲ್ಲವೆ. ತಂದೆಯು ತಿಳಿಸುತ್ತಾರೆ – ಮಾಯೆಯು ಈ ರೀತಿಯಿದೆ ಆದ್ದರಿಂದ ಬಹಳ ಎಚ್ಚರಿಕೆ ವಹಿಸಿ. ಮಾಯೆಯು ಯಾರನ್ನೂ ಬಿಡುವುದಿಲ್ಲ. ಎಲ್ಲಾ ಪ್ರಕಾರದ ಬೆಂಕಿಯನ್ನಿಡುತ್ತದೆ. ನನ್ನ ಮಕ್ಕಳೆಲ್ಲರೂ ಕಾಮ ಚಿತೆಯನ್ನೇರಿ ಕಪ್ಪು ಕಲ್ಲಿದ್ದಲಿನಂತೆ ಆಗಿ ಬಿಟ್ಟಿದ್ದಾರೆ. ಎಲ್ಲರೂ ಒಂದೇ ರೀತಿ ಇರುವುದಿಲ್ಲ ಅಥವಾ ಎಲ್ಲರ ಪಾತ್ರವೂ ಒಂದೇರೀತಿ ಇಲ್ಲ. ಇದರ ಹೆಸರೇ ಆಗಿದೆ - ವೇಶ್ಯಾಲಯ, ಎಷ್ಟೊಂದು ಬಾರಿ ಕಾಮ ಚಿತೆಯನ್ನೇರಿರುತ್ತೀರಿ. ರಾವಣನು ಎಷ್ಟು ಪ್ರಬಲವಾಗಿದ್ದಾನೆ, ಬುದ್ಧಿಯನ್ನೇ ಪತಿತ ಮಾಡಿ ಬಿಡುತ್ತಾನೆ. ಇಲ್ಲಿ ಬಂದು ತಂದೆಯಿಂದ ಶಿಕ್ಷಣವನ್ನು ಪಡೆಯುವವರೂ ಸಹ ಈ ರೀತಿ ಆಗಿ ಬಿಡುತ್ತಾರೆ. ತಂದೆಯ ನೆನಪಿನ ವಿನಃ ಕುದೃಷ್ಟಿಯೆಂದೂ ಬದಲಾಗುವುದಿಲ್ಲ. ಆದ್ದರಿಂದ ಸೂರ ದಾಸರ ಕಥೆಯಿದೆ. ಭಲೆ ಇದು ಕಟ್ಟಿರುವ ಮಾತಾಗಿದೆ, ದೃಷ್ಟಾಂತವನ್ನೂ ಕೊಡುತ್ತಾರೆ. ಈಗ ನೀವು ಮಕ್ಕಳಿಗೆ ಜ್ಞಾನದ ಮೂರನೆಯ ನೇತ್ರ ಸಿಕ್ಕಿದೆ, ಅಜ್ಞಾನವೆಂದರೆ ಅಂಧಕಾರವಾಗಿದೆ. ನೀನಂತೂ ಅಂಧ, ಅಜ್ಞಾನಿಯಾಗಿದ್ದೀಯಾ ಎಂದು ಹೇಳುತ್ತಾರಲ್ಲವೆ. ಜ್ಞಾನವು ಗುಪ್ತವಾಗಿದೆ, ಇದರಲ್ಲಿ ಏನನ್ನೂ ಮಾತನಾಡುವ ಅವಶ್ಯಕತೆಯಿಲ್ಲ. ಒಂದು ಸೆಕೆಂಡಿನಲ್ಲಿ ಇಡೀ ಜ್ಞಾನವು ಬಂದು ಬಿಡುತ್ತದೆ. ಎಲ್ಲದಕ್ಕಿಂತ ಸಹಜ ಜ್ಞಾನವಾಗಿದೆ, ಆದರೂ ಸಹ ಮಾಯೆಯು ಅಂತ್ಯದವರೆಗೆ ಪರೀಕ್ಷೆ ತೆಗೆದುಕೊಳ್ಳುತ್ತಿರುತ್ತದೆ. ಈ ಸಮಯದಲ್ಲಂತೂ ಬಿರುಗಾಳಿಯ ಮಧ್ಯದಲ್ಲಿದ್ದೀರಿ, ಪಕ್ಕಾ ಆಗಿ ಬಿಟ್ಟರೆ ಮತ್ತೆ ಇಷ್ಟೊಂದು ಬಿರುಗಾಳಿಗಳು ಬರುವುದಿಲ್ಲ, ಬೀಳುವುದಿಲ್ಲ. ಮತ್ತೆ ನೋಡಿ, ನಿಮ್ಮ ವೃಕ್ಷವು ಎಷ್ಟು ವೃದ್ಧಿಯಾಗುತ್ತದೆ! ಪ್ರಸಿದ್ಧವಾಗಲೇಬೇಕಾಗಿದೆ. ಸ್ವಲ್ಪ ವಿನಾಶವಾಗಲಿ ಆಗ ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆ ಮತ್ತೆ ತಂದೆಯ ನೆನಪಿನಲ್ಲಿ ಒಮ್ಮೆಲೆ ಹಿಡಿದುಕೊಂಡು ಬಿಡುತ್ತಾರೆ. ಇನ್ನು ಸ್ವಲ್ಪವೇ ಸಮಯವಿದೆ ಎಂಬುದು ಅರ್ಥವಾಗುತ್ತದೆ. ತಂದೆಯಂತೂ ಬಹಳ ಚೆನ್ನಾಗಿ ತಿಳಿಸುತ್ತಾರೆ - ಮಕ್ಕಳೇ, ಪರಸ್ಪರ ಬಹಳ ಪ್ರೀತಿಯಿಂದ ನಡೆಯಿರಿ, ಕಣ್ಣು ಬಿಡಬೇಡಿ ಅರ್ಥಾತ್ ರೋಷದಿಂದ ನೋಡಬೇಡಿ. ಕ್ರೋಧದ ಭೂತವು ಬರುತ್ತಿದ್ದಂತೆಯೇ ಚಹರೆಯೇ ಬದಲಾಗಿ ಬಿಡುತ್ತದೆ. ನೀವಂತೂ ಈ ಲಕ್ಷ್ಮೀ-ನಾರಾಯಣರಂತಹ ಚಹರೆಯುಳ್ಳವರಾಗಬೇಕಾಗಿದೆ. ಗುರಿ-ಧ್ಯೇಯವು ಸನ್ಮುಖದಲ್ಲಿದೆ. ಯಾವಾಗ ವರ್ಗಾವಣೆ ಆಗುವಿರೋ ಆಗ ಕೊನೆಯಲ್ಲಿ ಸಾಕ್ಷಾತ್ಕಾರವಾಗುತ್ತದೆ. ಹೇಗೆ ಆರಂಭದಲ್ಲಿ ಸಾಕ್ಷಾತ್ಕಾರವಾಯಿತೋ ಹಾಗೆಯೇ ಅಂತ್ಯದ ಸಮಯದಲ್ಲಿ ಬಹಳ ಪಾತ್ರವನ್ನು ನೋಡುತ್ತೀರಿ, ನೀವು ಬಹಳ ಖುಷಿಯಾಗುತ್ತೀರಿ. ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣ ಸಂಕಟ..... ಅಂತಿಮದಲ್ಲಿ ಬಹಳ ದೃಶ್ಯಗಳನ್ನು ನೋಡಬೇಕಾಗಿದೆ. ಆಗ ನಾವು ಇದನ್ನು ಮಾಡಿ ಬಿಟ್ಟೆವು ಎಂದು ಬಹಳ ಪಶ್ಚಾತ್ತಾಪ ಪಡುತ್ತಾರೆ ಮತ್ತೆ ಅದಕ್ಕೆ ಬಹಳ ಕಠಿಣ ಶಿಕ್ಷೆಯು ಸಿಗುತ್ತದೆ. ತಂದೆಯು ಬಂದು ಓದಿಸುತ್ತಾರೆ, ಅವರ ಪ್ರತಿ ಗೌರವವನ್ನಿಡುವುದಿಲ್ಲವೆಂದರೆ ಶಿಕ್ಷೆಯು ಸಿಗುವುದು. ಯಾರು ವಿಕಾರದಲ್ಲಿ ಹೋಗುವರೋ ಅಥವಾ ಶಿವ ತಂದೆಗೆ ನಿಂದನೆ ಮಾಡಿಸಲು ನಿಮಿತ್ತರಾಗುವರೋ ಅವರಿಗೆ ಎಲ್ಲರಿಗಿಂತ ಕಠಿಣ ಶಿಕ್ಷೆಯು ಸಿಗುವುದು. ಮಾಯೆಯು ಶಕ್ತಿಶಾಲಿಯಾಗಿದೆ, ಸ್ಥಾಪನೆಯಲ್ಲಿ ಏನೇನಾಗುತ್ತದೆ! ನೀವಂತೂ ಈಗ ದೇವತೆಗಳಾಗುತ್ತೀರಲ್ಲವೆ. ಸತ್ಯಯುಗದಲ್ಲಿ ಅಸುರರಿರುವುದಿಲ್ಲ, ಇದು ಸಂಗಮದ ಮಾತಾಗಿದೆ. ಇಲ್ಲಿ ವಿಕಾರೀ ಮನುಷ್ಯರು ಎಷ್ಟೊಂದು ದುಃಖ ಕೊಡುತ್ತಾರೆ! ಕನ್ಯೆಯರನ್ನು ವಿವಾಹ ಮಾಡಿಕೊಳ್ಳಿ ಎಂದು ಹೊಡೆಯುತ್ತಾರೆ, ಸ್ತ್ರೀಯನ್ನು ವಿಕಾರಕ್ಕಾಗಿ ಎಷ್ಟೊಂದು ಎದುರಿಸುತ್ತಾರೆ. ಸನ್ಯಾಸಿಗಳೂ ಸಹ ಇರಲು ಸಾಧ್ಯವಾಗಲಿಲ್ಲ ಅಂದಮೇಲೆ ಇವರ್ಯಾರು ಪವಿತ್ರರಾಗಿದ್ದು ತೋರಿಸುತ್ತಾರೆ! ಎಂದು ಹೇಳುತ್ತಾರೆ. ಮುಂದೆ ಹೋದಂತೆ ಖಂಡಿತ ತಿಳಿದುಕೊಳ್ಳುವರು. ಪವಿತ್ರತೆಯಿಲ್ಲದೆ ದೇವತೆಗಳಾಗಲು ಸಾಧ್ಯವಿಲ್ಲ. ನೀವು ತಿಳಿಸುತ್ತೀರಿ - ನಮಗೆ ಇಷ್ಟೊಂದು ಪ್ರಾಪ್ತಿಯಾಗುತ್ತದೆ ಆದ್ದರಿಂದ ಬಿಟ್ಟಿದ್ದೇವೆ. ಭಗವಾನುವಾಚ – ಕಾಮ ಜೀತರೇ ಜಗತ್ಜೀತರು. ಇಂತಹ ಲಕ್ಷ್ಮೀ-ನಾರಾಯಣರಾಗುತ್ತೀರೆಂದರೆ ಏಕೆ ಪವಿತ್ರರಾಗಬಾರದು. ಮಾಯೆಯು ಬಹಳ ಸತಾಯಿಸುತ್ತದೆ, ಉನ್ನತ ವಿದ್ಯೆಯಲ್ಲವೆ. ತಂದೆಯು ಬಂದು ಓದಿಸುತ್ತಾರೆ - ಇದನ್ನು ಮಕ್ಕಳು ಚೆನ್ನಾಗಿ ಸ್ಮರಣೆ ಮಾಡುವುದಿಲ್ಲ. ಆದ್ದರಿಂದ ಮತ್ತೆ ಮಾಯೆಯು ಪೆಟ್ಟು ಕೊಡುತ್ತದೆ. ಮಾಯೆಯು ಬಹಳ ಉಲ್ಲಂಘನೆ ಮಾಡಿಸುತ್ತದೆ ಅಂತಹವರ ಗತಿಯೇನಾಗುವುದು! ಮಾಯೆಯು ಎಷ್ಟು ನಿರ್ಲಕ್ಷ್ಯರನ್ನಾಗಿ ಮಾಡಿ ಬಿಡುತ್ತದೆ, ಅಹಂಕಾರದಲ್ಲಿ ತೆಗೆದುಕೊಂಡು ಬರುತ್ತದೆ ಮಾತೇ ಕೇಳಬೇಡಿ. ನಂಬರ್ವಾರ್ ರಾಜಧಾನಿಯಾಗುತ್ತದೆ ಅಂದಮೇಲೆ ಯಾವುದೋ ಕಾರಣದಿಂದಲೇ ಆಗುತ್ತದೆಯಲ್ಲವೆ. ಈಗ ನಿಮಗೆ ಭೂತ, ಭವಿಷ್ಯತ್, ವರ್ತಮಾನದ ಜ್ಞಾನವು ಸಿಗುತ್ತದೆ ಅಂದಮೇಲೆ ಎಷ್ಟು ಚೆನ್ನಾಗಿ ಗಮನ ಕೊಡಬೇಕಾಗಿದೆ. ಅಹಂಕಾರವು ಬಂದರೆ ಅವರು ಸತ್ತರು. ಮಾಯೆಯು ಒಮ್ಮೆಲೆ ಕನಿಷ್ಠರನ್ನಾಗಿ ಮಾಡಿ ಬಿಡುತ್ತದೆ. ತಂದೆಯ ಉಲ್ಲಂಘನೆಯಾಯಿತೆಂದರೆ ಮತ್ತೆ ತಂದೆಯನ್ನು ನೆನಪು ಮಾಡಲು ಸಾಧ್ಯವಾಗುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಪರಸ್ಪರ ಬಹಳ ಪ್ರೀತಿಯಿಂದ ನಡೆದುಕೊಳ್ಳಬೇಕಾಗಿದೆ, ಎಂದೂ ಕ್ರೋಧದಲ್ಲಿ ಬಂದು ಒಬ್ಬರು ಇನ್ನೊಬ್ಬರನ್ನು ರೋಷದಿಂದ ನೋಡಬಾರದು. ತಂದೆಯ ಉಲ್ಲಂಘನೆ ಮಾಡಬಾರದು.

2. ಪಾಸ್-ವಿತ್-ಆನರ್ ಆಗಲು ವಿದ್ಯೆಯನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕು. ಚೈತನ್ಯ ಲೈಟ್ಹೌಸ್ ಆಗಬೇಕಾಗಿದೆ. ದಿನ-ರಾತ್ರಿ ಬುದ್ಧಿಯಲ್ಲಿ ಜ್ಞಾನವು ಸುತ್ತುತ್ತಿರಲಿ.

ವರದಾನ:
ಸದಾ ತಮ್ಮ ಶ್ರೇಷ್ಠ ಭಾಗ್ಯದ ನಶೆ ಮತ್ತು ಖುಷಿಯಲ್ಲಿರುವವರು ಪದಮಾಪದಮ ಭಾಗ್ಯಶಾಲಿ ಭವ.

ಇಡೀ ವಿಶ್ವದಲ್ಲಿ ಯಾರೆಲ್ಲಾ ಧರ್ಮಪಿತರು ಹಾಗು ಜಗದ್ಗುರು ಎಂದು ಹೇಳಿಕೊಳ್ಳುವವರು ಇದ್ದಾರೆ ಆದರೂ ಯಾರಿಗೂ ಮಾತಾ-ಪಿತರ ಸಂಬಂಧದಿಂದ ಅಲೌಕಿಕ ಜನ್ಮ ಮತ್ತು ಪಾಲನೆ ಪ್ರಾಪ್ತಿಯಾಗುವುದಿಲ್ಲ. ಅವರು ಅಲೌಕಿಕ ತಂದೆ-ತಾಯಿಯ ಅನುಭವ ಸ್ವಪ್ನದಲ್ಲೂ ಮಾಡಲು ಸಾಧ್ಯವಿಲ್ಲ ಮತ್ತು ತಾವು ಪದಮಾಪತಿ ಶ್ರೇಷ್ಠ ಆತ್ಮರು ಪ್ರತಿ ದಿನ ಮಾತಾ-ಪಿತರ ಹಾಗೂ ಸರ್ವ ಸಂಬಂಧಗಳ ನೆನಪು ಪ್ರೀತಿ ತೆಗೆದುಕೊಳ್ಳಲು ಪಾತ್ರರಾಗಿರುವಿರಿ. ಸ್ವಯಂ ಸರ್ವ ಶಕ್ತಿವಂತ ತಂದೆ ನೀವು ಮಕ್ಕಳ ಸೇವಕರಾಗಿ ಪ್ರತಿ ಹೆಜ್ಜೆಯಲ್ಲಿ ಜೊತೆ ನಿಭಾಯಿಸುತ್ತಾರೆ - ಆದ್ದರಿಂದ ಇದೇ ಶ್ರೇಷ್ಠ ಭಾಗ್ಯದ ನಶೆ ಮತ್ತು ಖುಷಿಯಲ್ಲಿರಿ.

ಸ್ಲೋಗನ್:
ಶರೀರ ಮತ್ತು ಮನಸ್ಸನ್ನು ಸದಾ ಖುಷಿಯಾಗಿಡಲು ಖುಷಿಯದೇ ಸಮರ್ಥ ಸಂಕಲ್ಪ ಮಾಡಿ.


ಡಬ್ಬಲ್ಲೈಟ್ ಸ್ಥಿತಿಯ ಅನುಭವ:-
ಬಾಪ್ದಾದಾರವರ ಹೃದಯ ಸಿಂಹಾಸನವು ನಾವು ಮಕ್ಕಳಿಗಾಗಿ ಸರ್ವ ಶ್ರೇಷ್ಠವಾದ ಸ್ಥಾನವಾಗಿದೆ. ಸದಾ ಹೃದಯ ಸಿಂಹಾಸನಾಧಿಕಾರಿಯಾಗಿ ಇರುತ್ತೀರೆಂದರೆ, ಸದಾ ನಿರ್ಭಯ ಮತ್ತು ನಿಶ್ಚಿಂತವಾಗಿರುತ್ತೀರಿ. ಈಗ ಇಂತಹ ನಿಶ್ಚಿಂತ ಚಕ್ರವರ್ತಿಯ ಸ್ಥಿತಿಯ ಅನುಭವ ಮಾಡಿರಿ.