16.01.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆಯಿರಿ, ಇಲ್ಲದಿದ್ದರೆ ಮಾಯೆಯು ದಿವಾಳಿಯನ್ನಾಗಿ ಮಾಡಿ ಬಿಡುವುದು, ಈ ಕಣ್ಣುಗಳು ಬಹಳ ಮೋಸಗೊಳಿಸುತ್ತವೆ, ಇವನ್ನು ಬಹಳ-ಬಹಳ ಸಂಭಾಲನೆ ಮಾಡಿಕೊಳ್ಳಿ”

ಪ್ರಶ್ನೆ:
ಯಾವ ಮಕ್ಕಳಿಂದ ಮಾಯೆಯು ಬಹಳ ವಿಕರ್ಮ ಮಾಡಿಸುತ್ತದೆ? ಯಜ್ಞದಲ್ಲಿ ವಿಘ್ನರೂಪ ಯಾರಾಗಿದ್ದಾರೆ?

ಉತ್ತರ:
ಯಾರಿಗೆ ತಮ್ಮ ಅಹಂಕಾರವಿರುವುದು, ಅವರಿಂದ ಮಾಯೆಯು ಬಹಳ ವಿಕರ್ಮಗಳನ್ನು ಮಾಡಿಸುತ್ತದೆ. ಇಂತಹ ಮಿಥ್ಯ ಅಹಂಕಾರ ಇರುವವರು ಮುರುಳಿಯನ್ನೂ ಓದುವುದಿಲ್ಲ, ಈ ರೀತಿ ಹುಡುಗಾಟಿಕೆ ಮಾಡುವುದರಿಂದ ಮಾಯೆಯು ಪೆಟ್ಟು ಕೊಟ್ಟು ಕಾಸಿಗೂ ಬೆಲೆಯಿಲ್ಲದವರನ್ನಾಗಿ ಮಾಡಿ ಬಿಡುತ್ತದೆ. ಯಾರ ಬುದ್ಧಿಯಲ್ಲಿ ಪರಚಿಂತನೆಯ ಮಾತುಗಳಿರುತ್ತವೆಯೋ ಅವರು ಯಜ್ಞದಲ್ಲಿ ವಿಘ್ನರೂಪವಾಗುತ್ತಾರೆ. ಇದು ಬಹಳ ಕೆಟ್ಟ ಹವ್ಯಾಸವಾಗಿದೆ.

ಓಂ ಶಾಂತಿ.
ಆತ್ಮಿಕ ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ, ಇಲ್ಲಿ ನೀವು ಮಕ್ಕಳು ಈ ವಿಚಾರದಿಂದ ಕುಳಿತುಕೊಳ್ಳಬೇಕಾಗುತ್ತದೆ - ಇವರು ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ ಮತ್ತು ಇದನ್ನೂ ಅನುಭವ ಮಾಡುತ್ತೀರಿ - ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಪವಿತ್ರರಾಗಿ ಹೋಗಿ ಪವಿತ್ರಧಾಮವನ್ನು ತಲುಪುತ್ತೇವೆ. ತಂದೆಯು ತಿಳಿಸಿದ್ದಾರೆ - ಪವಿತ್ರಧಾಮದಿಂದಲೇ ನೀವು ಕೆಳಗಿಳಿದಿದ್ದೀರಿ. ಮೊದಲು ನೀವು ಸತೋಪ್ರಧಾನರಾಗಿದ್ದಿರಿ ನಂತರ ಸತೋ, ರಜೋ, ತಮೋದಲ್ಲಿ ಬಂದಿರಿ. ನಾವೀಗ ಕೆಳಗಿಳಿದಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಭಲೆ ಸಂಗಮಯುಗದಲ್ಲಿದ್ದೀರಿ ಆದರೆ ಜ್ಞಾನದಿಂದ ತಿಳಿದುಕೊಳ್ಳುತ್ತೀರಿ - ನಾವು ಬಹಳ ದೂರ ಸರಿದಿದ್ದೇವೆ. ಒಂದುವೇಳೆ ನಾವು ಶಿವ ತಂದೆಯ ನೆನಪಿನಲ್ಲಿ ಇದ್ದಿದ್ದೇ ಆದರೆ ಶಿವಾಲಯವು ದೂರವಿಲ್ಲ. ಶಿವ ತಂದೆಯನ್ನು ನೆನಪು ಮಾಡದಿದ್ದರೆ ಶಿವಾಲಯವು ಬಹಳ ದೂರವಿದೆ. ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆಯಲ್ಲವೆ ಆದ್ದರಿಂದ ಬಹಳ ದೂರವಾಗಿ ಬಿಡುತ್ತದೆ. ತಂದೆಯು ಮಕ್ಕಳಿಗೆ ಯಾವುದೇ ಹೆಚ್ಚು ಕಷ್ಟವನ್ನು ಕೊಡುವುದಿಲ್ಲ. ಮೊದಲನೆಯದಾಗಿ - ಪದೇ ಪದೇ ಹೇಳುತ್ತಾರೆ - ಮನಸಾ-ವಾಚಾ-ಕರ್ಮಣಾ ಪವಿತ್ರರಾಗಬೇಕಾಗಿದೆ. ಈ ಕಣ್ಣುಗಳೂ ಸಹ ಬಹಳ ಮೋಸಗೊಳಿಸುತ್ತವೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ನಡೆಯಬೇಕಾಗಿದೆ.

ತಂದೆಯು ತಿಳಿಸಿದ್ದಾರೆ - ಧ್ಯಾನ ಮತ್ತು ಯೋಗ ಎರಡೂ ಬೇರೆ-ಬೇರೆಯಾಗಿದೆ. ಯೋಗ ಎಂದರೆ ನೆನಪು, ಕಣ್ಣುಗಳನ್ನು ತೆರೆದು ನೆನಪು ಮಾಡಬಹುದು. ಧ್ಯಾನಕ್ಕೆ ಯೋಗವೆಂದು ಹೇಳಲಾಗುವುದಿಲ್ಲ. ಧ್ಯಾನದಲ್ಲಿ ಹೋಗುತ್ತಾರೆಂದರೆ ಅದಕ್ಕೆ ಜ್ಞಾನವೆಂದಾಗಲೀ, ಯೋಗವೆಂದಾಗಲೀ ಹೇಳಲಾಗುವುದಿಲ್ಲ. ಧ್ಯಾನದಲ್ಲಿ ಹೋಗುವವರ ಮೇಲೆ ಮಾಯೆಯು ಬಹಳ ಯುದ್ಧಮಾಡುತ್ತದೆ. ಆದ್ದರಿಂದ ಇದರಲ್ಲಿ ಬಹಳ ಎಚ್ಚರಿಕೆಯಿಂದಿರಬೇಕಾಗಿದೆ. ತಂದೆಯ ಕಾಯಿದೆಯನುಸಾರ ನೆನಪಿರಬೇಕು - ಕಾಯಿದೆಗೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಿದರೆ ಮಾಯೆಯು ಒಮ್ಮೆಲೆ ಬೀಳಿಸಿ ಬಿಡುವುದು. ಧ್ಯಾನದ ಇಚ್ಛೆಯನ್ನು ಎಂದೂ ಇಟ್ಟುಕೊಳ್ಳಬಾರದು. ಇಚ್ಛಾ ಮಾತ್ರಂ ಅವಿದ್ಯಾ. ನಿಮಗೆ ಯಾವುದೇ ಇಚ್ಛೆಗಳಿರಬಾರದು. ತಂದೆಯು ನಿಮ್ಮ ಎಲ್ಲಾ ಕಾಮನೆಗಳನ್ನು ಕೇಳದೆಯೇ ಪೂರ್ಣ ಮಾಡಿ ಬಿಡುತ್ತಾರೆ. ಆದರೆ ತಂದೆಯ ಆಜ್ಞೆಯಂತೆ ನಡೆದಾಗ ಮಾತ್ರ.

ಒಂದುವೇಳೆ ತಂದೆಯ ಆಜ್ಞೆಯ ಉಲ್ಲಂಘನೆ ಮಾಡಿ ಉಲ್ಟಾ ಮಾರ್ಗವನ್ನು ಹಿಡಿದರೆ ಸ್ವರ್ಗಕ್ಕೆ ಹೋಗುವ ಬದಲು ನರಕದಲ್ಲಿಯೇ ಹೋಗುವರು. ಗಜವನ್ನು ಗ್ರಾಹವು ತಿಂದಿತು ಎಂದು ಗಾಯನವೂ ಇದೆ. ಅನೇಕರಿಗೆ ಜ್ಞಾನ ಕೊಡುವವರು ಭೋಗವನ್ನಿಡುವವರು ಇಂದು ಇಲ್ಲ ಏಕೆಂದರೆ ಕಾಯಿದೆಯ ಉಲ್ಲಂಘನೆ ಮಾಡುತ್ತಾರೆಂದರೆ ಪೂರ್ಣ ಮಾಯಾವಿಗಳಾಗಿ ಬಿಡುತ್ತಾರೆ. ದೇವತೆಗಳಾಗುತ್ತಾ-ಆಗುತ್ತಾ ಮತ್ತೆ ಅಸುರರಾಗಿ ಬಿಡುತ್ತಾರೆ. ಆದ್ದರಿಂದ ಈ ಮಾರ್ಗದಲ್ಲಿ ಬಹಳ ಎಚ್ಚರಿಕೆ ಇರಬೇಕು. ತಮ್ಮ ಮೇಲೆ ತಾವು ನಿಯಂತ್ರಣವನ್ನಿಟ್ಟುಕೊಳ್ಳಬೇಕು. ತಂದೆಯು ಮಕ್ಕಳಿಗೆ ಸಾವಧಾನ ನೀಡುತ್ತಾರೆ. ಶ್ರೀಮತದ ಉಲ್ಲಂಘನೆ ಮಾಡಬಾರದು. ಆಸುರೀ ಮತದಂತೆ ನಡೆಯುವುದರಿಂದಲೇ ನಿಮ್ಮದು ಇಳಿಯುವ ಕಲೆಯಾಗಿದೆ. ಎಲ್ಲಿದ್ದವರು ಎಲ್ಲಿಗೆ ಬಂದು ತಲುಪಿದ್ದೀರಿ! ಒಮ್ಮೆಲೆ ಕೆಳಗೆ ಬಂದು ಬಿಟ್ಟಿದ್ದೀರಿ. ಈಗಲೂ ಸಹ ಶ್ರೀಮತದಂತೆ ನಡೆಯದೇ ನಿರ್ಲಕ್ಷ್ಯವಾದರೆ ಪದವಿ ಭ್ರಷ್ಟರಾಗಿ ಬಿಡುತ್ತೀರಿ. ತಂದೆಯು ನೆನ್ನೆಯ ದಿನವೂ ತಿಳಿಸಿದ್ದರು - ಏನೆಲ್ಲವನ್ನು ಶ್ರೀಮತದ ಆಧಾರವಿಲ್ಲದೆ ಮಾಡುವರೋ ಅವರು ಸೇವಾಭಂಗ ಮಾಡುತ್ತಾರೆ. ಶ್ರೀಮತವಿಲ್ಲದೆ ಮಾಡಿದರೆ ಕೆಳಗೆ ಬೀಳುತ್ತಾರೆ. ತಂದೆಯು ಆರಂಭದಿಂದ ಮಾತೆಯರನ್ನು ನಿಮಿತ್ತರನ್ನಾಗಿ ಇಟ್ಟಿದ್ದಾರೆ ಏಕೆಂದರೆ ಕಳಶವೂ ಮಾತೆಯರಿಗೇ ಸಿಗುತ್ತದೆ. ವಂದೇ ಮಾತರಂ ಎಂದು ಗಾಯನವಿದೆ. ತಂದೆಯೂ ಸಹ ಮಾತೆಯರ ಒಂದು ಸಂಗವನ್ನು ಕಟ್ಟಿದರು, ಅವರಿಗೆ ತನ್ನದೆಲ್ಲವನ್ನೂ ಅರ್ಪಣೆ ಮಾಡಿ ಬಿಟ್ಟರು. ಕನ್ಯೆಯರು ವಿಶ್ವಾಸ ಪಾತ್ರರಾಗಿರುತ್ತಾರೆ. ಬಹುತೇಕವಾಗಿ ಪುರುಷರು ದಿವಾಳಿಯಾಗಬಹುದು. ಆದ್ದರಿಂದ ತಂದೆಯೂ ಸಹ ಮಾತೆಯರ ಮೇಲೆ ಕಳಶವನ್ನಿಡುತ್ತಾರೆ. ಈ ಜ್ಞಾನ ಮಾರ್ಗದಲ್ಲಿಯೂ ಮಾತೆಯರು ದಿವಾಳಿಯಾಗಬಹುದು. ಯಾರು ಪದಮಾಪದಮ ಭಾಗ್ಯಶಾಲಿಗಳು ಆಗುವವರಿದ್ದಾರೆಯೋ ಅವರೂ ಸಹ ಮಾಯೆಯಿಂದ ಸೋತು ದಿವಾಳಿಯಾಗಿ ಬಿಡುತ್ತಾರೆ. ಇಲ್ಲಿ ಸ್ತ್ರೀ-ಪುರುಷರಿಬ್ಬರೂ ದಿವಾಳಿಯಾಗುವ ಸಾಧ್ಯತೆಯಿದೆ. ಅಲ್ಲಾದರೆ ಕೇವಲ ಪುರುಷರು ದಿವಾಳಿಯಾಗಿರುತ್ತಾರೆ, ಇಲ್ಲಂತೂ ನೋಡಿ! ಎಷ್ಟೊಂದು ಮಂದಿ ಸೋಲನ್ನನುಭವಿಸಿ ಹೊರಟು ಹೋದರು ಅಂದರೆ ದಿವಾಳಿಯಾದರಲ್ಲವೆ. ತಂದೆಯು ಕುಳಿತು ತಿಳಿಸುತ್ತಾರೆ - ಭಾರತವಾಸಿಗಳು ಪೂರ್ಣ ದಿವಾಳಿಯಾಗಿದ್ದಾರೆ. ಮಾಯೆಯು ಎಷ್ಟು ಪ್ರಬಲವಾಗಿದೆ! ನಾವು ಹೇಗಿದ್ದೆವು ಎಂಬುದು ಅರ್ಥವಾಗುವುದೇ ಇಲ್ಲ. ಮೇಲಿಂದ ಕೆಳಗೆ ಒಮ್ಮೆಲೆ ಬೀಳುತ್ತಾರೆ. ಇಲ್ಲಿಯೂ ಸಹ ಶ್ರೇಷ್ಠ ವಿದ್ಯೆಯನ್ನು ಓದುತ್ತಾ-ಓದುತ್ತಾ ಮತ್ತೆ ಶ್ರೀಮತವನ್ನು ಮರೆತು ತನ್ನ ಮತದಂತೆ ನಡೆದರೆ ದಿವಾಳಿಯಾಗುತ್ತಾರೆ. ಅಂದಾಗ ಅಂತಹವರ ಸ್ಥಿತಿ ಏನಾಗಬಹುದು! ಆ ಮನುಷ್ಯರಂತೂ ದಿವಾಳಿಯಾದರೆ ಮತ್ತೆ 5-7 ವರ್ಷಗಳ ನಂತರ ಎದ್ದು ನಿಲ್ಲುತ್ತಾರೆ. ಆದರೆ ಇಲ್ಲಿ 21 ಜನ್ಮಗಳಿಗಾಗಿ ದಿವಾಳಿಯಾಗುತ್ತಾರೆ ಮತ್ತೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ, ದಿವಾಳಿಯಾಗುತ್ತಲೇ ಇರುತ್ತಾರೆ. ಎಷ್ಟೊಂದು ಮಹಾರಥಿಗಳು ಅನ್ಯರನ್ನು ಮೇಲೆತ್ತುತ್ತಿದ್ದರು ಆದರೆ ಅವರು ಇಂದು ಇಲ್ಲ. ಇಲ್ಲಿ ಶ್ರೇಷ್ಠ ಪದವಿಯಂತೂ ಬಹಳಷ್ಟಿದೆ ಆದರೆ ಎಚ್ಚರಿಕೆಯಿಂದ ಇರಲಿಲ್ಲವೆಂದರೆ ಮೇಲಿನಿಂದ ಕೆಳಗೆ ಬೀಳುತ್ತೀರಿ. ಮಾಯೆಯು ನುಂಗಿ ಬಿಡುತ್ತದೆ. ಮಕ್ಕಳು ಬಹಳ ಎಚ್ಚರಿಕೆಯಿಂದಿರಬೇಕಾಗಿದೆ. ತನ್ನ ಮತದಂತೆ ಸಂಗಗಳನ್ನು ಕಟ್ಟುವುದರಲ್ಲಿ ಏನೂ ಲಾಭವಿಲ್ಲ. ತಂದೆಯೊಂದಿಗೆ ಬುದ್ಧಿಯೋಗವನ್ನಿಡಿ, ಇದರಿಂದಲೇ ಸತೋಪ್ರಧಾನರಾಗಬೇಕಾಗಿದೆ. ತಂದೆಯವರಾಗಿಯೂ ತಂದೆಯೊಂದಿಗೆ ಯೋಗವನ್ನಿಡುವುದಿಲ್ಲ, ಶ್ರೀಮತದ ಉಲ್ಲಂಘನೆ ಮಾಡುತ್ತಾರೆಂದರೆ ಒಮ್ಮೆಲೆ ಕೆಳಗೆ ಬೀಳುತ್ತಾರೆ. ಸಂಬಂಧವೇ ತುಂಡಾಗುತ್ತದೆ. ಬುದ್ಧಿಯೋಗವು ತುಂಡಾದರೆ ಪರಿಶೀಲನೆ ಮಾಡಿಕೊಳ್ಳಬೇಕು - ನಮಗೆ ಮಾಯೆಯು ಇಷ್ಟೊಂದು ತೊಂದರೆಯನ್ನೇಕೆ ಮಾಡುತ್ತಿದೆ! ಪ್ರಯತ್ನ ಪಟ್ಟು ಮತ್ತೆ ತಂದೆಯ ಜೊತೆ ಬುದ್ಧಿಯೋಗವನ್ನು ಜೋಡಿಸಬೇಕು ಇಲ್ಲವೆಂದರೆ ಬ್ಯಾಟರಿಯು ಹೇಗೆ ಚಾರ್ಜ್ ಆಗುವುದು! ವಿಕರ್ಮಗಳನ್ನು ಮಾಡುವುದರಿಂದ ಬ್ಯಾಟರಿಯು ಡಿಸ್ಚಾರ್ಜ್ ಆಗಿ ಬಿಡುತ್ತದೆ. ಮೇಲೇರುತ್ತಾ-ಏರುತ್ತಾ ಕೆಳಗೆ ಬೀಳುತ್ತಾರೆ. ನಿಮಗೆ ತಿಳಿದಿದೆ, ಇಂತಹವರೂ ಕೆಲವರಿದ್ದಾರೆ ಆರಂಭದಲ್ಲಿ ಅನೇಕರು ಬಂದು ತಂದೆಯ ಮಕ್ಕಳಾದರು, ಭಟ್ಟಿಯಲ್ಲಿದ್ದರು ಆದರೆ ಇಂದು ಎಲ್ಲಿದ್ದಾರೆ! ಬಿದ್ದು ಹೋದರು. ಏಕೆಂದರೆ ಹಳೆಯ ಪ್ರಪಂಚವು ನೆನಪಿಗೆ ಬಂದಿತು, ಈಗ ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಬೇಹದ್ದಿನ ವೈರಾಗ್ಯವನ್ನು ತರಿಸುತ್ತಿದ್ದೇನೆ. ಈ ಹಳೆಯ ಪತಿತ ಪ್ರಪಂಚದೊಂದಿಗೆ ಮನಸ್ಸನ್ನಿಡಬೇಡಿ. ಸ್ವರ್ಗದೊಂದಿಗೆ ನಿಮ್ಮ ಮನಸ್ಸನ್ನಿಡಿ, ಇದರಲ್ಲಿ ಪರಿಶ್ರಮವಿದೆ. ಒಂದುವೇಳೆ ಈ ಲಕ್ಷ್ಮೀ-ನಾರಾಯಣರಂತೆ ಆಗಲು ಇಚ್ಛಿಸುತ್ತೀರೆಂದರೆ ಪರಿಶ್ರಮ ಪಡಬೇಕಾಗುವುದು. ಬುದ್ಧಿಯೋಗವು ಒಬ್ಬ ತಂದೆಯ ಜೊತೆಯಿರಲಿ. ಹಳೆಯ ಪ್ರಪಂಚದೊಂದಿಗೆ ವೈರಾಗ್ಯವಿರಲಿ. ಹಳೆಯ ಪ್ರಪಂಚವು ಮರೆತು ಹೋಗುವುದಂತೂ ಸರಿ ಆದರೆ ನಂತರ ಏನನ್ನು ನೆನಪು ಮಾಡುವುದು? ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡಿ. ಎಷ್ಟು ಸಾಧ್ಯವೋ ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿ. ಬೇಹದ್ದಿನ ಸುಖದ ಸ್ವರ್ಗವನ್ನು ನೆನಪು ಮಾಡಿ. ಇದಂತೂ ಬಹಳ ಸಹಜವಾಗಿದೆ. ಒಂದುವೇಳೆ ಇವೆರಡೂ ಆಸೆಗಳಿಗೆ ವಿರುದ್ಧವಾಗಿ ನಡೆಯುತ್ತೀರೆಂದರೆ ಪದವಿ ಭ್ರಷ್ಟರಾಗುವಿರಿ. ನೀವಿಲ್ಲಿಗೆ ಬಂದಿರುವುದೇ ನರನಿಂದ ನಾರಾಯಣರಾಗಲು. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು ಏಕೆಂದರೆ ಈಗ ಹಿಂತಿರುಗಿ ಹೋಗಬೇಕೆಂದು ಎಲ್ಲರಿಗೆ ಹೇಳುತ್ತೀರಿ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯೆಂದರೆ ಅರ್ಥ ನರಕದಿಂದ ಸ್ವರ್ಗ ಮತ್ತೆ ಸ್ವರ್ಗದಿಂದ ನರಕ. ಈ ಚಕ್ರವು ಸುತ್ತುತ್ತಲೇ ಇರುತ್ತದೆ. ತಂದೆಯು ಹೇಳಿದ್ದಾರೆ - ಇಲ್ಲಿ ಸ್ವದರ್ಶನ ಚಕ್ರಧಾರಿಯಾಗಿ ಕುಳಿತುಕೊಳ್ಳಿ. ಇದೇ ನೆನಪಿನಲ್ಲಿರಿ - ನಾನು ಎಷ್ಟು ಬಾರಿ ಚಕ್ರವನ್ನು ಸುತ್ತಿದ್ದೇನೆ? ನಾನು ಸ್ವದರ್ಶನ ಚಕ್ರಧಾರಿಯಾಗಿದ್ದೇನೆ ಈಗ ಪುನಃ ದೇವತೆಯಾಗುತ್ತೇನೆ. ಪ್ರಪಂಚದಲ್ಲಿ ಯಾರೂ ಈ ರಹಸ್ಯವನ್ನು ಅರಿತುಕೊಂಡಿಲ್ಲ. ಈ ಜ್ಞಾನವನ್ನಂತೂ ದೇವತೆಗಳಿಗೆ ತಿಳಿಸಬೇಕಾಗಿಲ್ಲ. ಅವರು ಮೊದಲೇ ಪವಿತ್ರರಾಗಿದ್ದಾರೆ. ಶಂಖವನ್ನು ಊದಲು ಅವರಲ್ಲಿ ಜ್ಞಾನವೇ ಇಲ್ಲ. ಪವಿತ್ರರೂ ಆಗಿದ್ದಾರೆ ಆದ್ದರಿಂದ ಅವರಿಗೆ ಈ ಶಂಖುವಿನ ಅಲಂಕಾರವನ್ನು ತೋರಿಸುವ ಅವಶ್ಯಕತೆಯೇ ಇಲ್ಲ. ಯಾವಾಗ ಇಬ್ಬರೂ ಒಟ್ಟಿಗೆ ಚತುರ್ಭುಜನಾಗುವರೋ ಆಗ ಈ ಅಲಂಕಾರವಿರುತ್ತದೆ. ನಿಮಗೂ ಸಹ ಇದನ್ನು ತೋರಿಸುವುದಿಲ್ಲ ಏಕೆಂದರೆ ನೀವು ಇಂದು ದೇವತೆಯಂತೆ ಇರುತ್ತೀರಿ ಮತ್ತೆ ನಾಳೆ ಕೆಳಗಿಳಿದು ಬಿಡುತ್ತೀರಿ. ಮಾಯೆಯು ಬೀಳಿಸಿ ಬಿಡುತ್ತದೆಯಲ್ಲವೆ. ತಂದೆಯು ದೇವತೆಗಳನ್ನಾಗಿ ಮಾಡುತ್ತಾರೆ ಮತ್ತೆ ಮಾಯೆಯು ಅಸುರರನ್ನಾಗಿ ಮಾಡಿಬಿಡುತ್ತದೆ. ಅನೇಕ ಪ್ರಕಾರದಿಂದ ಮಾಯೆಯು ಪರೀಕ್ಷೆ ತೆಗೆದುಕೊಳ್ಳುತ್ತದೆ. ಯಾವಾಗ ತಂದೆಯು ಬಂದು ತಿಳಿಸುವರೋ ಆಗ ಅರ್ಥವಾಗುತ್ತದೆ - ನಿಜವಾಗಿಯೂ ನಮ್ಮ ಸ್ಥಿತಿಯು ಕೆಳಗಿಳಿದಿದೆ ಎಂದು. ಪಾಪ! ಎಷ್ಟು ಬಾರಿ ತಮ್ಮದೆಲ್ಲವನ್ನೂ ಶಿವ ತಂದೆಯ ಖಜಾನೆಯಲ್ಲಿ ಜಮಾ ಮಾಡಿಸಿದರೂ ಸಹ ಮತ್ತೆ ಮಾಯೆಯಿಂದ ಸೋಲನ್ನನುಭವಿಸುತ್ತಾರೆ. ಶಿವ ತಂದೆಯ ಮಕ್ಕಳಾಗಿ ಬಿಟ್ಟಿರಿ ಮತ್ತೇಕೆ ಮರೆತು ಬಿಡುತ್ತೀರಿ! ಇದರಲ್ಲಿ ಯೋಗದ ಯಾತ್ರೆಯು ಮುಖ್ಯವಾಗಿದೆ. ಯೋಗದಿಂದಲೇ ಪವಿತ್ರರಾಗಬೇಕಾಗಿದೆ. ಜ್ಞಾನದ ಜೊತೆ ಜೊತೆಗೆ ಪವಿತ್ರತೆಯೂ ಬೇಕು. ಬಾಬಾ, ಬಂದು ನಮ್ಮನ್ನು ಪಾವನ ಮಾಡಿ, ನಾವು ಸ್ವರ್ಗದಲ್ಲಿ ಹೋಗಲು ಯೋಗ್ಯರಾಗಬೇಕು ಎಂದು ನೀವು ಕರೆಯುತ್ತೀರಿ. ಪಾವನರಾಗಿ ಶ್ರೇಷ್ಠ ಪದವಿಯನ್ನು ಪಡೆಯಲು ನೆನಪಿನ ಯಾತ್ರೆಯು ಮುಖ್ಯವಾಗಿದೆ. ಯಾರು ಬಿಟ್ಟು ಹೋದರೋ ಅವರೂ ಸಹ ಅಲ್ಪ-ಸ್ವಲ್ಪ ಕೇಳಿರುವ ಕಾರಣ ಶಿವಾಲಯದಲ್ಲಿ ಖಂಡಿತ ಬರುತ್ತಾರೆ. ನಂತರ ಭಲೆ ಪದವಿಯನ್ನು ಹೇಗಾದರೂ ಪಡೆಯಲಿ ಆದರೆ ಸತ್ಯಯುಗದಲ್ಲಂತೂ ಬರುತ್ತಾರೆ. ಒಂದು ಬಾರಿ ನೆನಪು ಮಾಡಿದರೂ ಸಹ ಸ್ವರ್ಗದಲ್ಲಿ ಬಂದು ಬಿಡುತ್ತಾರೆ ಆದರೆ ಶ್ರೇಷ್ಠ ಪದವಿಯಿಲ್ಲ. ಸ್ವರ್ಗದ ಹೆಸರನ್ನು ಕೇಳಿ ಖುಷಿಯಾಗಿ ಬಿಡಬಾರದು. ಅನುತ್ತೀರ್ಣರಾಗಿ ನಂತರ ಬಿಡಿಗಾಸಿನ ಪದವಿಯನ್ನು ಪಡೆಯುವುದರಲ್ಲಿ ಖುಷಿಯಾಗಿ ಬಿಡಬಾರದು. ಭಲೆ ಸ್ವರ್ಗವಿದೆ ಆದರೆ ಅದರಲ್ಲಿ ಪದವಿಗಳೂ ಬಹಳಷ್ಟಿವೆಯಲ್ಲವೆ. ನಾನು ನೌಕರನಾಗಿದ್ದೇನೆ, ನಾನು ಕೂಲಿ ಮಾಡುವವನಾಗಿದ್ದೇನೆ ಎಂಬುದಂತೂ ಭಾಸವಾಗುತ್ತದೆಯಲ್ಲವೆ. ಕೊನೆಯಲ್ಲಿ ನಾವು ಏನಾಗುವೆವು, ನಮ್ಮಿಂದ ಯಾವ ವಿಕರ್ಮವಾದ ಕಾರಣ ಈ ಗತಿಯುಂಟಾಗಿದೆ? ನಾನು ಮಹಾರಾಣಿ ಏಕಾಗಲಿಲ್ಲ? ಹೀಗೆ ಎಲ್ಲವೂ ನಿಮಗೆ ಸಾಕ್ಷಾತ್ಕಾರವಾಗುವುದು. ಹೆಜ್ಜೆ-ಹೆಜ್ಜೆಯಲ್ಲಿ ಎಚ್ಚರಿಕೆಯಿಂದ ನಡೆದಾಗ ನೀವು ಪದಮಾ ಪತಿಗಳಾಗಲು ಸಾಧ್ಯ. ಎಚ್ಚರಿಕೆಯಿಲ್ಲವೆಂದರೆ ಪದಮಾ ಪತಿಗಳಾಗಲು ಸಾಧ್ಯವಿಲ್ಲ. ಮಂದಿರಗಳಲ್ಲಿ ದೇವತೆಗಳಿಗೆ ಪದಮಾ ಪತಿಯ ಗುರುತನ್ನು ತೋರಿಸುತ್ತಾರೆ. ಅಂತರವನ್ನಂತೂ ತಿಳಿದುಕೊಳ್ಳಬಹುದಲ್ಲವೆ. ಪದವಿಗಳಲ್ಲಿ ಬಹಳ ಅಂತರವಿರುತ್ತದೆ. ಈಗಲೂ ನೋಡಿ, ಎಷ್ಟೊಂದು ದರ್ಜೆಗಳಿವೆ! ಭಲೆ ಅಲ್ಪಕಾಲದ ಸುಖವಾಗಿದೆ ಆದರೂ ಸಹ ಅವರಿಗೆ ಎಷ್ಟೊಂದು ಅಭಿಮಾನವಿರುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ ಎಂದು ಹೇಳಿದಾಗ ಇದಕ್ಕಾಗಿ ಎಲ್ಲರೂ ಕೈಯೆತ್ತುತ್ತಾರೆ. ಅಂದಮೇಲೆ ಅಷ್ಟು ಪುರುಷಾರ್ಥವನ್ನು ಮಾಡಬೇಕಾಗಿದೆ. ಕೈಯನ್ನೆತ್ತುವವರೇ ಸ್ವಯಂ ಕೆಳಗೆ ಬೀಳುತ್ತಾರೆ. ಆಗ ಅನ್ಯರು ಹೇಳುತ್ತಾರೆ - ಇವರು ದೇವತೆಯಾಗುವವರಿದ್ದರು, ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಸಮಾಪ್ತಿಯಾಗಿ ಬಿಟ್ಟರು. ಕೈಯೆತ್ತುವುದಂತೂ ಸಹಜವಾಗಿದೆ, ಅನೇಕರಿಗೆ ತಿಳಿಸುವುದೂ ಸಹಜವಾಗಿದೆ. ಮಹಾರಥಿಗಳು ಅನ್ಯರಿಗೆ ತಿಳಿಸುತ್ತಲೂ ತಾವೇ ಮಾಯವಾಗಿ ಬಿಡುತ್ತಾರೆ. ಅನ್ಯರ ಕಲ್ಯಾಣ ಮಾಡಿ ತಮಗೆ ಅಕಲ್ಯಾಣ ಮಾಡಿಕೊಂಡು ಕುಳಿತುಕೊಳ್ಳುತ್ತಾರೆ ಆದ್ದರಿಂದ ಬಹಳ ಎಚ್ಚರಿಕೆಯಿಂದಿರಿ ಎಂದು ತಂದೆಯು ತಿಳಿಸುತ್ತಾರೆ. ಅಂತರ್ಮುಖಿಯಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾವ ಪ್ರಕಾರದಿಂದ? ತಂದೆ ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ನಾವೀಗ ನಮ್ಮ ಮಧುರ ಮನೆಗೆ ಹೋಗುತ್ತಿದ್ದೇವೆ. ಇದೆಲ್ಲವೂ ಆಂತರ್ಯದಲ್ಲಿರಬೇಕಾಗಿದೆ. ತಂದೆಯಲ್ಲಿ ಜ್ಞಾನ ಮತ್ತು ಯೋಗ ಎರಡೂ ಇದೆ ಹಾಗೆಯೇ ನಿಮ್ಮಲ್ಲಿಯೂ ಇರಬೇಕು ಏಕೆಂದರೆ ನಿಮಗೆ ತಿಳಿದಿದೆ – ಶಿವ ತಂದೆಯು ಓದಿಸುತ್ತಾರೆಂದರೆ ಜ್ಞಾನವೂ ಆಯಿತು, ನೆನಪೂ ಆಯಿತು. ಜ್ಞಾನ ಮತ್ತು ಯೋಗ ಎರಡೂ ಒಟ್ಟಿಗೆ ನಡೆಯುತ್ತದೆ. ಯೋಗದಲ್ಲಿ ಕುಳಿತು ಶಿವ ತಂದೆಯನ್ನು ನೆನಪು ಮಾಡುತ್ತಿದ್ದರೆ ಜ್ಞಾನವನ್ನು ಮರೆತು ಹೋಗುವುದಲ್ಲ. ತಂದೆಯು ಯೋಗವನ್ನು ಕಲಿಸುತ್ತಾರೆಂದರೆ ಜ್ಞಾನವು ಮರೆತು ಹೋಗುತ್ತದೆಯೇ? ಇಡೀ ಜ್ಞಾನವು ಅವರಲ್ಲಿರುತ್ತದೆ. ನೀವು ಮಕ್ಕಳಿಗೆ ಈ ಜ್ಞಾನವಿರಬೇಕು, ಓದಬೇಕು. ಎಂತಹ ಕರ್ಮವನ್ನು ನಾನು ಮಾಡುವೆನೋ ನನ್ನನ್ನು ನೋಡಿ ಅನ್ಯರೂ ಮಾಡುತ್ತಾರೆ. ನಾನು ಮುರುಳಿ ಓದದಿದ್ದರೆ ಅನ್ಯರೂ ಓದುವುದಿಲ್ಲ. ನಾನು ದುರ್ಗತಿ ಪಡೆದರೆ ಅನ್ಯರೂ ದುರ್ಗತಿ ಪಡೆಯುವರು. ನಾನೇ ಅನ್ಯರನ್ನು ಬೀಳಿಸಲು ನಿಮಿತ್ತನಾಗುತ್ತೇನೆ. ಕೆಲವು ಮಕ್ಕಳು ಮುರುಳಿಯನ್ನು ಓದುವುದಿಲ್ಲ. ಮಿಥ್ಯ ಅಹಂಕಾರವು ಬಂದು ಬಿಡುತ್ತದೆ. ಮಾಯೆಯು ಕೂಡಲೇ ಹೋರಾಟ ನಡೆಸುತ್ತದೆ. ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತ ಬೇಕು ಇಲ್ಲವಾದರೆ ಒಂದಲ್ಲ ಒಂದು ವಿಕರ್ಮಗಳಾಗಿ ಬಿಡುತ್ತವೆ. ಅನೇಕ ಮಕ್ಕಳು ತಪ್ಪುಗಳನ್ನು ಮಾಡುತ್ತಾರೆ, ಇದರಿಂದ ಸತ್ಯನಾಶವಾಗಿ ಬಿಡುತ್ತದೆ. ತಪ್ಪುಗಳಾಗುವುದರಿಂದ ಮಾಯೆಯು ಪೆಟ್ಟು ಕೊಟ್ಟು ಕನಿಷ್ಟರನ್ನಾಗಿ ಮಾಡಿ ಬಿಡುತ್ತದೆ. ಇದರಲ್ಲಿ ಬಹಳ ತಿಳುವಳಿಕೆಯು ಬೇಕು. ಅಹಂಕಾರವು ಬಂದರೆ ಮಾಯೆಯು ಬಹಳ ವಿಕರ್ಮಗಳನ್ನು ಮಾಡಿಸುತ್ತದೆ. ಯಾವುದೇ ಸಂಘ ಮಾಡುತ್ತೀರೆಂದರೆ ಅದರಲ್ಲಿ ಒಬ್ಬರು ಅಥವಾ ಇಬ್ಬರು ಸ್ತ್ರೀಯರು ಖಂಡಿತ ಇರಬೇಕು. ಅವರ ಸಲಹೆಯಂತೆ ಕೆಲಸ ನಡೆಯುವಂತಿರಬೇಕು. ಕಳಶವನ್ನು ಲಕ್ಷ್ಮಿಯ ಮೇಲೆ ಇಡಲಾಗುತ್ತದೆಯಲ್ಲವೆ. ಗಾಯನವೂ ಇದೆ - ಅಮೃತವನ್ನು ಕುಡಿಸುವಾಗ ಅಸುರರೂ ಸಹ ಕುಳಿತು ಕುಡಿಯುತ್ತಿದ್ದರು, ಮತ್ತೆ ಕೆಲವು ಕಡೆ ಯಜ್ಞದಲ್ಲಿ ವಿಘ್ನಗಳನ್ನು ಹಾಕುತ್ತಾರೆ. ಅನೇಕ ಪ್ರಕಾರದ ವಿಘ್ನಗಳನ್ನು ಹಾಕುತ್ತಾರೆ. ಇಡೀ ದಿನ ಬುದ್ಧಿಯಲ್ಲಿ ಪರಚಿಂತನೆಯ ಮಾತುಗಳಿರುತ್ತವೆ. ಇದು ಬಹಳ ಕೆಟ್ಟದ್ದಾಗಿದೆ. ಯಾವುದೇ ಮಾತಿದ್ದರೆ ತಂದೆಗೆ ದೂರು ಕೊಡಿ. ಸುಧಾರಣೆ ಮಾಡುವವರು ತಂದೆಯೊಬ್ಬರೇ ಆಗಿದ್ದಾರೆ. ನೀವು ತಮ್ಮ ಕೈಯಲ್ಲಿ ಕಾನೂನು ತೆಗೆದುಕೊಳ್ಳಬೇಡಿ, ತಂದೆಯ ನೆನಪಿನಲ್ಲಿರಿ. ಎಲ್ಲರಿಗೆ ತಂದೆಯ ಪರಿಚಯವನ್ನು ಕೊಡಿ ಆಗ ಈ ರೀತಿಯಾಗುವಿರಿ. ಮಾಯೆಯು ಬಹಳ ಕಠಿಣವಾಗಿದೆ ಯಾರನ್ನೂ ಬಿಡುವುದಿಲ್ಲ. ಸದಾ ತಂದೆಗೆ ಸಮಾಚಾರವನ್ನು ಬರೆಯಬೇಕು. ಸಲಹೆಯನ್ನು ತೆಗೆದುಕೊಳ್ಳುತ್ತಾ ಇರಬೇಕು. ಹಾಗೆ ನೋಡಿದರೆ ತಂದೆಯು ಪ್ರತಿಯೊಂದು ಸಲಹೆಯನ್ನು ಕೊಡುತ್ತಲೇ ಇರುತ್ತಾರೆ. ಆದ್ದರಿಂದ ತಂದೆಯು ತಾವೇ ಈ ಮಾತಿನ ಬಗ್ಗೆ ತಿಳಿಸಿ ಬಿಟ್ಟರು ಅಂದಾಗ ಅಂತರ್ಯಾಮಿಯಾಗಿದ್ದಾರೆ ಎಂದು ಮಕ್ಕಳು ತಿಳಿದುಕೊಳ್ಳುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ಇಲ್ಲ. ನಾನಂತೂ ಜ್ಞಾನವನ್ನು ಓದಿಸುತ್ತೇನೆ, ಇದರಲ್ಲಿ ಅಂತರ್ಯಾಮಿಯ ಮಾತಿಲ್ಲ. ಹಾ! ಇದನ್ನು ತಿಳಿದುಕೊಂಡಿದ್ದೇನೆ - ಇವರೆಲ್ಲರೂ ನನ್ನ ಮಕ್ಕಳಾಗಿದ್ದಾರೆ. ಪ್ರತಿಯೊಬ್ಬರಲ್ಲಿರುವ ಆತ್ಮವು ನನ್ನ ಮಗುವಾಗಿದೆ ಬಾಕಿ ತಂದೆಯು ಎಲ್ಲರಲ್ಲಿ ವಿರಾಜಮಾನವಾಗಿದ್ದಾರೆ ಎಂದಲ್ಲ. ಮನುಷ್ಯರು ಇದನ್ನು ಉಲ್ಟಾ ತಿಳಿದುಕೊಳ್ಳುತ್ತಾರೆ.

ತಂದೆಯು ತಿಳಿಸುತ್ತಾರೆ - ನನಗೆ ಗೊತ್ತಿದೆ, ಎಲ್ಲರ ಸಿಂಹಾಸನದಲ್ಲಿ ಆತ್ಮವು ವಿರಾಜಮಾನವಾಗಿದೆ, ಇದು ಎಷ್ಟು ಸಹಜ ಮಾತಾಗಿದೆ ಆದರೂ ಸಹ ಮರೆತು ಹೋಗಿ ಪರಮಾತ್ಮನನ್ನು ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಇದು ಮೊಟ್ಟ ಮೊದಲನೆಯ ತಪ್ಪಾಗಿದೆ, ಇದರ ಕಾರಣದಿಂದಲೇ ಇಷ್ಟು ಕೆಳಗಿಳಿದಿದ್ದಾರೆ. ವಿಶ್ವದ ಮಾಲೀಕರನ್ನಾಗಿ ಮಾಡುವವರಿಗೇ ನೀವು ನಿಂದನೆ ಮಾಡುತ್ತೀರಿ. ಆದ್ದರಿಂದ ತಂದೆಯು ಹೇಳುತ್ತಾರೆ – ಯಧಾ ಯಧಾಹೀ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ...... ತಂದೆಯು ಇಲ್ಲಿ ಬರುತ್ತಾರೆ ಅಂದಮೇಲೆ ಮಕ್ಕಳು ಬಹಳ ಚೆನ್ನಾಗಿ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಜ್ಞಾನವನ್ನು ಬಹಳ ಮಂಥನ ಮಾಡಬೇಕು, ಸಮಯ ಕೊಡಬೇಕು ಆಗಲೇ ನೀವು ತಮ್ಮ ಕಲ್ಯಾಣ ಮಾಡಿಕೊಳ್ಳಲು ಸಾಧ್ಯ. ಇದರಲ್ಲಿ ಹಣ ಮೊದಲಾದುವುಗಳ ಮಾತಿಲ್ಲ. ಯಾರೂ ಹಸಿವಿನಿಂದಂತೂ ಸಾಯುವುದಿಲ್ಲ. ಯಾರೆಷ್ಟು ತಂದೆಯ ಬಳಿ ಜಮಾ ಮಾಡುವರೋ ಅಷ್ಟು ಜಮಾ ಆಗುತ್ತದೆ. ತಂದೆಯು ತಿಳಿಸುತ್ತಾರೆ - ಜ್ಞಾನ ಮತ್ತು ಭಕ್ತಿಯ ನಂತರ ವೈರಾಗ್ಯ ಬರುತ್ತದೆ. ವೈರಾಗ್ಯವೆಂದರೆ ಎಲ್ಲವನ್ನೂ ಮರೆಯಬೇಕಾಗುತ್ತದೆ. ತನ್ನನ್ನು ಭಿನ್ನ ಮಾಡಿಕೊಳ್ಳಬೇಕು. ಶರೀರದಿಂದ ನಾನಾತ್ಮ ಈಗ ಹೋಗುತ್ತಿದ್ದೇನೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತನ್ನ ಮೇಲೆ ಬಹಳ ನಿಯಂತ್ರಣವನ್ನಿಟ್ಟುಕೊಳ್ಳಬೇಕಾಗಿದೆ. ಶ್ರೀಮತದಲ್ಲಿ ಎಂದೂ ನಿರ್ಲಕ್ಷ್ಯ ತೋರಬಾರದು. ಬಹಳ-ಬಹಳ ಎಚ್ಚರಿಕೆಯಿಂದಿರಬೇಕಾಗಿದೆ, ಎಂದೂ ಯಾವುದೇ ಕಾಯಿದೆಯ ಉಲ್ಲಂಘನೆ ಮಾಡಬಾರದು.

2. ಅಂತರ್ಮುಖಿಯಾಗಿ ಒಬ್ಬ ತಂದೆಯೊಂದಿಗೆ ಬುದ್ಧಿಯೋಗವನ್ನು ಜೋಡಿಸಬೇಕಾಗಿದೆ. ಈ ಪತಿತ ಹಳೆಯ ಪ್ರಪಂಚದಿಂದ ಬೇಹದ್ದಿನ ವೈರಾಗ್ಯವನ್ನಿಡಬೇಕಾಗಿದೆ. ಬುದ್ಧಿಯಲ್ಲಿರಲಿ - ಯಾವ ಕರ್ಮವನ್ನು ನಾನು ಮಾಡುತ್ತೇನೆಯೋ ನನ್ನನ್ನು ನೋಡಿ ಎಲ್ಲರೂ ಮಾಡುತ್ತಾರೆ.

ವರದಾನ:
ಸ್ವಮಾನದ ಸೀಟ್ ಮೇಲೆ ಸ್ಥಿತರಾಗಿದ್ದು ಮಾಯೆಯನ್ನು ಶರಾಣಾಗತಿ (ಸರೆಂಡರ್) ಮಾಡಿಸುವಂತಹ ಶ್ರೇಷ್ಠ ಸೇವಾಧಾರಿ ಭವ.

ಸಂಗಮಯುಗದಲ್ಲಿ ಎಲ್ಲಕ್ಕಿಂತಲೂ ಶ್ರೇಷ್ಠ ಸ್ವಮಾನವಾಗಿದೆ ಮಾಸ್ಟರ್ ಸರ್ವ ಶಕ್ತಿವಾನ್ ನ ಸ್ಮೃತಿಯಲ್ಲಿರುವುದು. ಹೇಗೆ ಯಾರಾದರೂ ದೊಡ್ಡ ಆಫೀಸರ್ ಅಥವಾ ರಾಜಾ ಯಾವಾಗ ಸ್ವಮಾನದ ಸೀಟ್ ಮೇಲೆ ಸ್ಥಿತರಾಗುತ್ತಾರೆಂದರೆ ಅವರಿಗೆ ಬೇರೆಯವರೂ ಸಹ ಸ್ವಮಾನವನ್ನು ಕೊಡುತ್ತಾರೆ, ಒಂದುವೇಳೆ ಸ್ವಯಂ ಸೀಟ್ ಮೇಲೆ ಇಲ್ಲದೇ ಇದ್ದಾಗ ಅವರ ಆದೇಶವನ್ನು ಯಾರೂ ಮಾನ್ಯ ಮಾಡುವುದಿಲ್ಲ, ಹಾಗೆಯೆ ನೀವೂ ಸಹ ಸ್ವಮಾನದಾರಿಗಳಾಗಿ ತಮ್ಮ ಶ್ರೇಷ್ಠ ಸ್ವಮಾನದ ಸೀಟ್ ಮೇಲೆ ಸೆಟ್ ಆಗಿದ್ದಾಗ ಮಾಯೆ ನಿಮ್ಮ ಮುಂದೆ ಸರೆಂಡರ್ ಆಗಿ ಬಿಡುವುದು.

ಸ್ಲೋಗನ್:
ಸಾಕ್ಷಿತನದ ಸ್ಥಿತಿಯ ಮೇಲಿದ್ದು ಹೃದಯ ರಾಮನ ಜೊತೆಯ ಅನುಭವ ಮಾಡುವಂತಹವರೆ ಲವಲೀನ ಆತ್ಮರಾಗಿದ್ದಾರೆ.


ಡಬ್ಬಲ್ಲೈಟ್ ಸ್ಥಿತಿಯ ಅನುಭವ:-
ಕರ್ಮೇಂದ್ರಿಯಗಳ ಮಾಲೀಕರಾಗಿದ್ದು ಏನು ಬೇಕು, ಹೇಗೆ ಬೇಕು, ಎಷ್ಟು ಸಮಯವು ಬೇಕು, ಯಾವ ಸ್ಥಿತಿಯಲ್ಲಿ ಇರಬೇಕೆಂದು ಬಯಸುತ್ತೀರಿ, ಅಷ್ಟು ಸಮಯದಲ್ಲಿ ಅದೇ ಸ್ಥಿತಿಯ ಅನುಭವ ಮಾಡಿರಿ. ಇದಕ್ಕಾಗಿ ಎಲ್ಲಾ ಸಂಕಲ್ಪಗಳನ್ನು ಏಕಾಗ್ರ ಮಾಡುತ್ತಾ, ತಮ್ಮ ಲೈಟ್-ಮೈಟ್ ಜ್ಯೋತಿ ಸ್ವರೂಪದಲ್ಲಿ ಸ್ಥಿತರಾಗಿ ಬಿಡಬೇಕು.