18.01.21    Avyakt Bapdada     Kannada Murli    18.01.20     Om Shanti     Madhuban


18 ಜನವರಿ, ಪಿತಾಶ್ರೀ ಜೀಯವರ ಪುಣ್ಯ ಸ್ಮೃತಿ ದಿವಸದಂದು ಬೆಳಗಿನ ಕ್ಲಾಸ್ನಲ್ಲಿ ಓದಲು - ಬಾಪ್ ದಾದಾರವರ ಅಮೂಲ್ಯ ಮಹಾವಾಕ್ಯ


“ಮಧುರ ಮಕ್ಕಳೇ - ಒಬ್ಬ ತಂದೆಯ ನೆನಪಿನಿಂದ ನೀವು ಸುಪ್ರೀಮ್ ಆಗಬೇಕಾದರೆ ಅಪ್ಪಿ-ತಪ್ಪಿಯೂ ಸಹ ಬೇರೆ ಯಾರನ್ನೂ ನೆನಪು ಮಾಡಬಾರದು”

ಓಂ ಶಾಂತಿ.
ಬೇಹದ್ದಿನ ತಂದೆ ಕುಳಿತು ಮಕ್ಕಳಿಗೆ ತಿಳುವಳಿಕೆ ನೀಡುತ್ತಿದ್ದಾರೆ - ಮಧುರ ಮಕ್ಕಳೇ ನಿಮ್ಮನ್ನು ಆತ್ಮ ಎಂದು ತಿಳಿದು ನಾನು ತಂದೆಯನ್ನು ನೆನಪು ಮಾಡಿ ಮತ್ತು ನಿಮ್ಮ ಮನೆಯನ್ನು ನೆನಪು ಮಾಡಿ ಅದಕ್ಕೆ ಹೇಳಲಾಗುವುದು ಟವರ್ ಆಫ್ ಸೈಲೆನ್ಸ್ (ಶಾಂತಿ ಸ್ಥಂಭ). ಟವರ್ ಆಫ್ ಸುಖ. ಟವರ್ ಎಂದರೆ ಬಹಳ ಎತ್ತರದಲ್ಲಿರುತ್ತದೆ. ನೀವು ಅಲ್ಲಿ ಹೋಗಲು ಪುರುಷಾರ್ಥ ಮಾಡುತ್ತಿರುವಿರಿ. ಎತ್ತರದಲ್ಲಿ ಎತ್ತರ ಟವರ್ ಆಫ್ ಸೈಲೆನ್ಸ್ ಮೇಲೆ ನೀವು ಹೇಗೆ ಹೋಗಲು ಸಾಧ್ಯ, ಇಲ್ಲಿಯೂ ಸಹ ಟವರ್ನಲ್ಲಿ ವಾಸಿಸುವ ತಂದೆ ಕುಳಿತು ಕಲಿಸುತ್ತಿದ್ದಾರೆ. ಮಕ್ಕಳೇ, ನಿಮ್ಮನ್ನು ಆತ್ಮ ಎಂದು ತಿಳಿಯಿರಿ. ನಾವು ಆತ್ಮಗಳು ಶಾಂತಿಧಾಮದ ನಿವಾಸಿಗಳು. ಅದಾಗಿದೆ ತಂದೆಯ ಮನೆ. ಇದಕ್ಕೆ ನಡೆಯುತ್ತಾ ತಿರುಗಾಡುತ್ತಾ ಅಭ್ಯಾಸ ಮಾಡಬೇಕು. ನಿಮ್ಮನ್ನು ಆತ್ಮ ಎಂದು ತಿಳಿದುಕೊಳ್ಳಿ ಮತ್ತು ಶಾಂತಿಧಾಮ, ಸುಖಧಾಮವನ್ನು ಸೆನಪು ಮಾಡಿ. ತಂದೆಗೆ ಗೊತ್ತಿದೆ ಇದರಲ್ಲೇ ಪರಿಶ್ರಮವಿದೆ ಎಂದು. ಯಾರು ಆತ್ಮ ಅಭಿಮಾನಿಯಾಗಿರುತ್ತಾರೆ ಅವರಿಗೆ ಹೇಳಲಾಗುವುದು ಮಹಾವೀರ. ನೆನಪಿನಿಂದಲೇ ನೀವು ಮಹಾವೀರ, ಸುಪ್ರೀಮ್ ಆಗುವಿರಿ. ಸುಪ್ರೀಮ್ ಅರ್ಥಾತ್ ಶಕ್ತಿಶಾಲಿ.

ಮಕ್ಕಳಿಗೆ ಖುಷಿಯಾಗಬೇಕು - ಸ್ವರ್ಗದ ಮಾಲೀಕರನ್ನಾಗಿ ಮಾಡುವಂತಹ ಬಾಬಾ, ವಿಶ್ವದ ಮಾಲೀಕರನ್ನಾಗಿ ಮಾಡುವಂತಹ ಬಾಬಾ ನಮಗೆ ಓದಿಸುತ್ತಿದ್ದಾರೆ. ಆತ್ಮದ ಬುದ್ಧಿ ತಂದೆಯ ಕಡೆ ಹೋಗಿ ಬಿಡುವುದು. ಇದಾಗಿದೆ - ಆತ್ಮನ ಪ್ರೀತಿ ಒಬ್ಬ ತಂದೆಯ ಜೊತೆ. ಬೆಳ್ಳಿಗ್ಗೆ-ಬೆಳ್ಳಿಗ್ಗೆ ಎದ್ದು ಬಾಬಾರವರ ಜೊತೆ ಮಧುರ ವಾರ್ತಾಲಾಪ ಮಾಡಿ. ಬಾಬಾ ನಿಮ್ಮದು ಚಮತ್ಕಾರವಾಗಿದೆ, ನಮ್ಮ ಸ್ವಪ್ನದಲ್ಲೇ ಇರಲಿಲ್ಲ. ನೀವು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುವಿರೆಂದು. ಬಾಬಾ ನಾವು ನಿಮ್ಮ ಶಿಕ್ಷಣದ ಮೇಲೆ ಖಂಡಿತ ನಡೆಯುತ್ತೇವೆ. ಯಾವುದೇ ಪಾಪದ ಕೆಲಸ ಮಾಡುವುದಿಲ್ಲ. ಬಾಬಾನ ತರಹ ಪುರುಷಾರ್ಥ ಮಾಡುತ್ತೇವೆ, ಮಕ್ಕಳಿಗೂ ಸಹ ಹೇಳುತ್ತೇವೆ. ಶಿವಬಾಬಾನಿಗೆ ಎಷೋಂದು ಮಕ್ಕಳಿದ್ದಾರೆ, ಖಾಳಜಿಯಂತೂ ಇರುವುದಲ್ಲವೆ, ಎಷ್ಟು ಮಕ್ಕಳ ಸಂಭಾಲನೆಯಾಗುತ್ತದೆ, ಇಲ್ಲಿ ನೀವು ಈಶ್ವರೀಯ ಪರಿವಾರದಲ್ಲಿ ಕುಳಿತಿರುವಿರಿ. ತಂದೆ ಸಮ್ಮುಖದಲ್ಲಿ ಕುಳಿತಿದ್ದಾರೆ. ನಿಮ್ಮ ಜೊತೆಯಲ್ಲೇ ತಿನ್ನುವೆವು, ನಿಮ್ಮ ಜೊತೆಯಲ್ಲೇ ಕುಳಿತುಕೊಳ್ಳುವೆವು..... ನೀವು ತಿಳಿದಿರುವಿರಿ ಶಿವಬಾಬಾ ಇವರಲ್ಲಿ ಬಂದು ಹೇಳುತ್ತಾರೆ - ಮಧುರ ಮಕ್ಕಳೇ ಮಾಮೇಕಮ್ ಯಾದ್ ಕರೋ (ನನ್ನೊಬ್ಬನನ್ನೇ ನೆನಪು ಮಾಡಿ). ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನೂ ಮರೆತು ಬಿಡಿ. ಇದು ಅಂತಿಮ ಜನ್ಮವಾಗಿದೆ. ಈ ಹಳೆಯ ಜಗತ್ತು, ಹಳೆಯ ದೇಹ ಸಮಾಪ್ತಿಯಾಗುವುದಿದೆ. ಗಾದೆ ಮಾತೂ ಇದೆ ನೀವು ಸತ್ತರೆ ನಿಮ್ಮ ಪಾಲಿಗೆ ಜಗತ್ತೇ ಸತ್ತ ಹಾಗೆ ಎಂದು. ಪುರುಷಾರ್ಥಕ್ಕಾಗಿ ಸಂಗಮಯುಗದ ಸ್ವಲ್ಪವೇ ಸಮಯ ಬಾಕಿಯಿದೆ. ಮಕ್ಕಳು ಕೇಳುತ್ತಾರೆ ಈ ವಿದ್ಯೆ ಎಲ್ಲಿಯವರೆಗೆ ನಡೆಯುತ್ತೆ? ಎಂದು. ಎಲ್ಲಿಯವರೆಗೆ ದೈವಿ ರಾಜಧಾನಿ ಸ್ಥಾಪನೆಯಾಗುವುದು ಅಲ್ಲಿಯವರೆಗೆ ನಿಮಗೆ ಹೇಳುತ್ತಲೇ ಇರುವೆನು. ನಂತರ ಟ್ರಾನ್ಸ್ಫರ್ ಆಗುವುದು ಹೊಸ ಪ್ರಪಂಚಕ್ಕೆ. ಇದು ಹಳೆಯ ಶರೀರವಾಗಿದೆ, ಏನಾದರೂ ಒಂದು ಕರ್ಮ ಭೋಗ ನಡೆಯುತ್ತಾ ಇರುತ್ತದೆ. ಇದರಲ್ಲಿ ಬಾಬಾ ಸಹಾಯ ಮಾಡುತ್ತಾರೆ ಎನ್ನುವ ಭರವಸೆ ಇಟ್ಟುಕೊಳ್ಳಬೇಡಿ. ದೀವಾಳಿ ಆಯಿತು, ಖಾಯಿಲೆ ಆಯಿತು - ತಂದೆ ಹೇಳುತ್ತಾರೆ ಇದು ನಿಮ್ಮ ಲೆಕ್ಕಾಚಾರವಾಗಿದೆ. ಹಾ! ಆದರೂ ಯೋಗದಿಂದ ಆಯಸ್ಸು ವೃದ್ಧಿಯಾಗುವುದು. ನೀವು ನಿಮ್ಮ ಪರಿಶ್ರಮ ಪಡಿ, ಕೃಪೆ ಬೇಡ ಬೇಡಿ. ತಂದೆಯನ್ನು ಎಷ್ಟು ನೆನಪು ಮಾಡುವಿರಿ ಅದರಲ್ಲೆ ಕಲ್ಯಾಣವಿದೆ. ಎಷ್ಟು ಸಾಧ್ಯವೋ ಅಷ್ಟು ಯೋಗಬಲದಿಂದ ಕೆಲಸ ತೆಗೆದುಕೊಳ್ಳಿ. ಹಾಡುವಿರಲ್ಲವೆ - ನನ್ನನ್ನು ಕಣ್ಣಿನ ರೆಪ್ಪೆಗಳಲ್ಲಿ ಮುಚ್ಚಿಟ್ಟುಕೊಳ್ಳಿ..... ಪ್ರಿಯ ವಸ್ತುವನ್ನು ಕಣ್ಮಣಿ, ಪ್ರಾಣ ಪ್ರೀಯ ಎಂದು ಹೇಳುತ್ತಾರೆ. ಈ ತಂದೆಯಂತೂ ಬಹಳ ಪ್ರಿಯರಾಗಿದ್ದಾರೆ, ಆದರೆ ಗುಪ್ತ. ಅವರ ಮೇಲೆ ಪ್ರೀತಿ ಹೀಗೆ ಇರಬೇಕು ಅದರ ಮಾತೇ ಕೇಳಬೇಡಿ. ಮಕ್ಕಳಿಗಂತೂ ತಂದೆಯನ್ನು ಕಣ್ಣಿನ ರೆಪ್ಪೆಯಲ್ಲಿ ಮುಚ್ಚಿಕೊಳ್ಳಬೇಕು. ರೆಪ್ಪೆಗಳೆಂದರೆ ಈ ಕಣ್ಣುಗಳಲ್ಲ. ಅದಂತೂ ಬುದ್ಧಿಯಲ್ಲಿ ನೆನಪಿಡಬೇಕು. ಅತೀ ಪ್ರೀತಿಯ ನಿರಾಕಾರ ತಂದೆ ನಮಗೆ ಓದಿಸುತ್ತಿದ್ದಾರೆ. ಅವರು ಜ್ಞಾನ ಸಾಗರ, ಸುಖ ಸಾಗರ, ಪ್ರೀತಿಯ ಸಾಗರ ಆಗಿದ್ದಾರೆ. ಈ ರೀತಿಯ ಅತೀ ಪ್ರಿಯ ತಂದೆಯ ಜೊತೆ ಎಷ್ಟು ಪ್ರೀತಿಯಿಂದಿರಬೇಕು. ಮಕ್ಕಳಿಗೆ ಎಷ್ಟೊಂದು ಸ್ವಾರ್ಥ ರಹಿತ ಸೇವೆ ಮಾಡುತ್ತಾರೆ. ಪತಿತ ಶರೀರದಲ್ಲಿ ಬಂದು ಮಕ್ಕಳನ್ನು ವಜ್ರ ಸಮಾನ ಮಾಡುತ್ತಾರೆ. ಎಷ್ಟು ಮಧುರ ಬಾಬಾ ಆಗಿದ್ದಾರೆ. ಆದ್ದರಿಂದ ಮಕ್ಕಳೂ ಸಹ ಅಷ್ಟು ಮಧುರರಾಗಬೇಕು. ಬಾಬಾ ನೀವು ಎಷ್ಟು ನಿರಹಂಕಾರಿಯಾಗಿ ಮಕ್ಕಳ ಸೇವೆ ಮಾಡುವಿರಿ, ಆದ್ದರಿಂದ ನೀವು ಮಕ್ಕಳೂ ಸಹ ಅಷ್ಟು ಸೇವೆ ಮಾಡಬೇಕು. ಶ್ರೀಮತದ ಮೇಲೆ ನಡೆಯಬೇಕು. ಎಲ್ಲಾದರೂ ನಿಮ್ಮ ಮತದಂತೆ ನಡೆದರೆ ನಿಮ್ಮ ಅದೃಷ್ಟಕ್ಕೆ ಬರೆ ಎಳೆದುಕೊಂಡು ಬಿಡುವಿರಿ. ನೀವು ಬ್ರಾಹ್ಮಣರು ಈಶ್ವರೀಯ ಸಂತಾನರಾಗಿರುವಿರಿ. ಬ್ರಹ್ಮಾರವರ ಸಂತಾನ ಸಹೋದರ-ಸಹೋದರಿ ಆಗಿರುವಿರಿ. ಈಶ್ವರೀಯ ಮೊಮ್ಮಗ-ಮೊಮ್ಮಗಳು ಆಗಿರುವಿರಿ. ಅವರಿಂದ ಆಸ್ತಿ ಪಡೆಯುತ್ತಿರುವಿರಿ. ಎಷ್ಟು ಪುರುಷಾರ್ಥ ಮಾಡುವಿರಿ ಅಷ್ಟು ಪದವಿಯನ್ನು ಪಡೆಯುವಿರಿ. ಇದರಲ್ಲಿ ಸಾಕ್ಷಿಯಾಗಿರುವುದಕ್ಕೂ ಸಹ ಬಹಳ ಅಭ್ಯಾಸ ಬೇಕು. ಬಾಬಾ ಹೇಳುತ್ತಾರೆ, ಮಧುರ ಮಕ್ಕಳೇ, ಹೇ ಆತ್ಮರೇ ಮಾಮೇಕಮ್ ಯಾದ್ ಕರೊ (ನನ್ನೊಬ್ಬನನ್ನೇ ನೆನಪು ಮಾಡಿ). ಅಪ್ಪಿ ತಪ್ಪಿಯೂ ಸಹ ತಂದೆಯ ವಿನಹ ಬೇರೆ ಯಾರನ್ನೂ ನೆನಪು ಮಾಡಬೇಡಿ. ನಿಮ್ಮ ಪ್ರತಿಜ್ಞೆಯಾಗಿದೆ ಬಾಬಾ ನನಗಂತೂ ನೀವೊಬ್ಬರೇ ಆಗಿರುವಿರಿ. ನಾವು ಆತ್ಮ ಆಗಿದ್ದೇವೆ, ನೀವು ಪರಮಾತ್ಮ ಆಗಿರುವಿರಿ, ನಿಮ್ಮಿಂದಲೇ ಆಸ್ತಿಯನ್ನು ಪಡೆಯಬೇಕು. ನಿಮ್ಮಿಂದಲೇ ರಾಜಯೋಗವನ್ನು ಕಲಿಯುತ್ತಿದ್ದೇವೆ, ಯಾವುದರಿಂದ ರಾಜ್ಯ-ಭಾಗ್ಯ ಪಡೆಯುತ್ತೇವೆ.

ಮಧುರ ಮಕ್ಕಳೇ, ನೀವು ತಿಳಿದಿರುವಿರಿ ಇದು ಅನಾದಿ ಡ್ರಾಮ ಆಗಿದೆ. ಇದರಲ್ಲಿ ಸೋಲು ಗೆಲುವಿನ ಆಟ ನಡೆಯುತ್ತಿರುತ್ತದೆ. ಏನಾಗುತ್ತಿದೆ ಅದು ಸರಿಯಾಗಿದೆ. ರಚೈತನಿಗೆ ಡ್ರಾಮ ಖಂಡಿತ ಇಷ್ಟವಾಗಿರುವುದಲ್ಲವೇ, ಆದ್ದರಿಂದ ರಚೈತನ ಮಕ್ಕಳಿಗೂ ಸಹ ಇಷ್ಟವಾಗಬೇಕು. ಈ ಡ್ರಾಮದಲ್ಲಿ ತಂದೆ ಒಂದೇ ಬಾರಿ ಮಕ್ಕಳ ಬಳಿ ಮಕ್ಕಳಿಗೆ ಹೃದಯ ಪೂರ್ವಕವಾದ ಪ್ರೀತಿಯಿಂದ ಸೇವೆ ಮಾಡಲು ಬರುತ್ತಾರೆ. ತಂದೆಗಂತೂ ಎಲ್ಲಾ ಮಕ್ಕಳ ಮೇಲೆ ಪ್ರೀತಿಯಿದೆ. ನೀವು ತಿಳಿದಿರುವಿರಿ ಸತ್ಯಯುಗದಲ್ಲಿಯೂ ಸಹ ಎಲ್ಲರೂ ಒಬ್ಬರು ಇನ್ನೊಬ್ಬರನ್ನು ಬಹಳ ಪ್ರೀತಿ ಮಾಡುತ್ತಾರೆ. ಪ್ರಾಣಿಗಳಲ್ಲಿಯೂ ಸಹ ಪ್ರೀತಿಯಿರುತ್ತದೆ. ಈ ರೀತಿ ಯಾವುದೇ ಪ್ರಾಣಿಗಳಿರುವುದಿಲ್ಲ, ಯಾವುದು ಪ್ರೀತಿಯಿಂದ ಇಲ್ಲದೇ ಇರುವುದು. ಆದ್ದರಿಂದ ನೀವು ಮಕ್ಕಳು ಇಲ್ಲಿ ಮಾಸ್ಟರ್ ಪ್ರೀತಿಯ ಸಾಗರರಾಗಬೇಕು. ಇಲ್ಲಿ ಆದಾಗ ಅಲ್ಲಿ ಸಂಸ್ಕಾರ ಅವಿನಾಶಿಯಾಗಿ ಬಿಡುವುದು. ತಂದೆ ಹೇಳುತ್ತಾರೆ ಕಲ್ಪದ ಹಿಂದಿನಂತೆ ಪುನಃ ಪ್ರಿಯರನ್ನಾಗಿ ಮಾಡಲು ಬಂದಿರುವೆನು. ಎಂದಾದರೂ ಯಾವುದೇ ಮಕ್ಕಳು ಕೋಪದಿಂದ ಕೂಗಾಡುವುದನ್ನು ಕೇಳಿದರೆ ತಂದೆ ಶಿಕ್ಷಣ ಕೊಡುತ್ತಾರೆ ಮಗು, ಕೋಪ ಮಾಡಿಕೊಳ್ಳುವುದು ಒಳ್ಳೆಯದಲ್ಲ, ಇದರಿಂದ ನೀನು ದುಃಖಿಯಾಗುವೆ ಬೇರೆಯವರನ್ನೂ ಸಹ ದುಃಖಿಗಳನ್ನಾಗಿ ಮಾಡುವೆ. ತಂದೆ ಸದಾಕಾಲಕ್ಕೆ ಸುಖವನ್ನು ಕೊಡುವವರಾಗಿದ್ದಾರೆ. ಆದ್ದರಿಂದ ಮಕ್ಕಳಿಗೂ ಸಹ ತಂದೆ ಸಮಾನರಾಗಬೇಕು. ಒಬ್ಬರಿನ್ನೊಬ್ಬರಿಗೆ ಎಂದೂ ದುಃಖವನ್ನು ಕೊಡಬಾರದು.

ನೀವು ಮಕ್ಕಳು ತಿಳಿದುಕೊಂಡಿರುವಿರಿ, ಶಿವಬಾಬಾ ಆಗಿದ್ದಾರೆ ಬೆಳಗಿನ ಸ್ವಾಮಿ (ಸುಬೋ ಕ ಸಾಯಿ)..... ರಾತ್ರಿಯನ್ನು ಹಗಲು ಮಾಡುವಂತಹವರಾಗಿದ್ದಾರೆ. ಸಾಯಿ ಎಂದು ಬೇಹದ್ದಿನ ತಂದೆಗೆ ಹೇಳಲಾಗುವುದು. ಅವರೊಬ್ಬರೇ ಸಾಯಿಬಾಬಾ ಆಗಿದ್ದಾರೆ. ಹೆಸರೇ ಆಗಿದೆ ಭೋಲಾನಾಥ. ಭೋಲಿ-ಭೋಲಿ ಕನ್ಯೆಯರು, ಮಾತೆಯರ ಮೇಲೆ ಜ್ಞಾನದ ಕಳಸ ಇಡುತ್ತಾರೆ. ಅವರನ್ನೇ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಎಷ್ಟು ಸಹಜ ಉಪಾಯ ತಿಳಿಸುತ್ತಾರೆ. ಎಷ್ಟು ಪ್ರೀತಿಯಿಂದ ನಿಮ್ಮನ್ನು ಜ್ಞಾನದಿಂದ ಪಾಲನೆ ಮಾಡುತ್ತಾರೆ. ಆತ್ಮನನ್ನು ಪಾವನ ಮಾಡಲು ನೆನಪಿನ ಯಾತ್ರೆಯಲ್ಲಿರಿ. ಯೋಗದ ಸ್ನಾನ ಮಾಡಬೇಕು. ಜ್ಞಾನ ಆಗಿದೆ ವಿದ್ಯೆ, ಯೋಗ ಸ್ನಾನದಿಂದ ಪಾಪ ಭಸ್ಮ ಆಗುವುದು. ನಿಮ್ಮನ್ನು ಆತ್ಮ ಎಂದು ತಿಳಿಯುವ ಅಭ್ಯಾಸ ಮಾಡುತ್ತಿರಿ, ಆಗ ಈ ದೇಹದ ಅಹಂಕಾರ ಪೂರ್ತಿ ಮುರಿದು ಹೋಗುವುದು. ಯೋಗದಿಂದಲೇ ಪವಿತ್ರ ಸತೋಪ್ರಧಾನರಾಗಿ ಬಾಬಾರವರ ಬಳಿ ಹೋಗಬೇಕಾಗಿದೆ. ಕೆಲವು ಮಕ್ಕಳು ಈ ಮಾತುಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದಿಲ್ಲ. ಸತ್ಯ-ಸತ್ಯ ತಮ್ಮ ಚಾರ್ಟ್ ಹೇಳುವುದಿಲ್ಲ. ಅರ್ಧಕಲ್ಪ ಸುಳ್ಳಿನ ಪ್ರಪಂಚದಲ್ಲಿದ್ದಿರಿ ಆದ್ದರಿಂದ ಸುಳ್ಳು ಒಳಗೆ ಸೇರಿಕೊಂಡು ಬಿಟ್ಟಿದೆ. ಸತ್ಯತೆಯಿಂದ ನಿಮ್ಮ ಚಾರ್ಟ್ ತಂದೆಗೆ ಒಪ್ಪಿಸಬೇಕಾಗಿದೆ. ಚೆಕ್ ಮಾಡಿಕೊಳ್ಳಬೇಕು - ನಾವು ಮುಕ್ಕಾಲು ಘಂಟೆ ಕುಳಿತುಕೊಂಡರೆ ಅದರಲ್ಲಿ ಎಷ್ಟು ಸಮಯ ನಮ್ಮನ್ನು ಆತ್ಮ ಎಂದು ಅರ್ಥ ಮಾಡಿಕೊಂಡು ತಂದೆಯನ್ನು ನೆನಪು ಮಾಡಿದೆ! ಕೆಲವರಿಗೆ ಸತ್ಯ ಹೇಳಲು ನಾಚಿಕೆಯಾಗುತ್ತೆ. ಇದಂತು ತಕ್ಷಣ ಹೇಳುತ್ತಾರೆ ಇಷ್ಟು ಸೇವೆ ಮಾಡಿದೆ, ಇಷ್ಟು ಜನಕ್ಕೆ ಜ್ಞಾನ ತಿಳಿಸಿದೆ ಆದರೆ ನೆನಪಿನ ಚಾರ್ಟ್ ಎಷ್ಟಿತ್ತು, ಇದನ್ನು ಸತ್ಯವಾಗಿ ಹೇಳುವುದಿಲ್ಲ. ನೆನಪಿನಲ್ಲಿರದ ಕಾರಣವೇ ನಿಮ್ಮ ಬಾಣ ಯಾರಿಗೂ ನಾಟುವುದಿಲ್ಲ. ಜ್ಞಾನದ ಖಡ್ಗದಲ್ಲಿ ಹರಿತ ಇರುವುದಿಲ್ಲ. ಕೆಲವರು ಹೇಳುತ್ತಾರೆ ನಾನಂತೂ ನಿರಂತರ ನೆನಪಿನಲ್ಲಿರುತ್ತೇನೆ, ಬಾಬಾ ಹೇಳುತ್ತಾರೆ ಅವರು ಆ ಅವಸ್ಥೆಯಲ್ಲೇ ಇಲ್ಲ. ನಿರಂತರ ನೆನಪಿನಲ್ಲಿದ್ದಿದ್ದೇ ಆದರೆ ಕರ್ಮಾತೀತ ಅವಸ್ಥೆ ಆಗಿ ಬಿಡಬೇಕಿತ್ತು. ಜ್ಞಾನದ ಪರಾಕಾಷ್ಠ ಕಂಡು ಬರಬೇಕು, ಇದರಲ್ಲಿ ದೊಡ್ಡ ಪರಿಶ್ರಮವಿದೆ. ವಿಶ್ವದ ಮಾಲೀಕ ಹಾಗೆಯೇ ಸುಮ್ಮನೆ ಆಗಿ ಬಿಡುವುದಿಲ್ಲ. ಒಬ್ಬ ತಂದೆಯ ವಿನಹ ಬೇರೆ ಯಾರದೂ ನೆನಪಿರಬಾರದು. ಈ ದೇಹವೂ ಸಹ ನೆನಪಿಗೆ ಬರಬಾರದು. ಈ ಅವಸ್ಥೆ ನಿಮಗೆ ಅಂತ್ಯದಲ್ಲಿ ಆಗುವುದು. ನೆನಪಿನ ಯಾತ್ರೆಯಿಂದಲೇ ನಿಮ್ಮ ಸಂಪಾದನೆ ಆಗುತ್ತಿರುವುದು. ಒಂದುವೇಳೆ ಶರೀರ ಬಿಟ್ಟರೆ ಮತ್ತೆ ಸಂಪಾದನೆ ಮಾಡಲಾಗುವುದಿಲ್ಲ. ಭಲೆ ಆತ್ಮ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ ಆದರೆ ಟೀಚರ್ ಅಂತೂ ಬೇಕಲ್ಲವೇ ನಮಗೆ ಪುನಃ ಸ್ಮತಿ ತರಿಸಲು. ತಂದೆ ಘಳಿಗೆ-ಘಳಿಗೆ ಸ್ಮತಿ ತರಿಸುತ್ತಿರುತ್ತಾರೆ. ಈ ರೀತಿ ಬಹಳ ಮಕ್ಕಳಿದ್ದಾರೆ ಯಾರು ಗೃಹಸ್ಥ ವ್ಯವಹಾರದಲ್ಲಿರುತ್ತಾ, ನೌಕರಿ ಇತ್ಯಾದಿಯನ್ನೂ ಮಾಡುತ್ತಾ ಇನ್ನೂ ಉನ್ನತ ಪದವಿಯನ್ನು ಪಡೆಯಲು ಶ್ರೀಮತದಂತೆ ನಡೆದು ತಮ್ಮ ಭವಿಷ್ಯವನ್ನೂ ಸಹ ಜಮಾ ಮಾಡಿಕೊಳ್ಳುತ್ತಿರುತ್ತಾರೆ. ಬಾಬಾರವರಿಂದ ಸಲಹೆಯನ್ನು ಪಡೆಯುತ್ತಿರುತ್ತಾರೆ. ಹಣ ಇದೆ ಅದನ್ನು ಹೇಗೆ ಸಫಲ ಮಾಡಿಕೊಳ್ಳುವುದು., ಬಾಬಾ ಹೇಳುತ್ತಾರೆ ಸೆಂಟರ್ ತೆರೆಯಿರಿ, ಅದರಿಂದ ಬಹಳ ಜನರ ಕಲ್ಯಾಣವಾಗುವುದು. ಮನುಷ್ಯರು ದಾನ ಪುಣ್ಯ ಇತ್ಯಾದಿ ಮಾಡುತ್ತಾರೆ, ಮುಂದಿನ ಜನ್ಮದಲ್ಲಿ ಅದರ ಫಲ ಸಿಗುತ್ತದೆ. ನಿಮಗೂ ಸಹ ಭವಿಷ್ಯ 21 ಜನ್ಮಕ್ಕಾಗಿ ರಾಜ್ಯಭಾಗ್ಯ ಸಿಗುತ್ತದೆ. ಇದು ನಿಮ್ಮ ನಂಬರ್ಒನ್ ಬ್ಯಾಂಕ್ ಆಗಿದೆ, ಇದರಲ್ಲಿ 4 ಆಣೆ ಹಾಕಿದರೆ ಭವಿಷ್ಯದಲ್ಲಿ ಸಾವಿರ ಆಗಿ ಬಿಡುವುದು. ಕಲ್ಲಿನಿಂದ ಪಾರಸ ಆಗಿ ಬಿಡುವುದು. ನಿಮ್ಮ ಪ್ರತಿ ವಸ್ತು ಪಾರಸ ಆಗಿ ಬಿಡುವುದು. ಬಾಬಾ ಹೇಳುತ್ತಾರೆ - ಮಧುರ ಮಕ್ಕಳೇ ಉನ್ನತ ಪದವಿ ಪಡೆಯ ಬೇಕೆಂದರೆ ಮಾತ-ಪಿತಾರವರನ್ನು ಪೂರ್ತಿ ಫಾಲೋ ಮಾಡಿ ಮತ್ತು ನಿಮ್ಮ ಕರ್ಮೇಂದ್ರಿಯಗಳ ಮೇಲೆ ಕಂಟ್ರೋಲ್ ಇಟ್ಟುಕೊಳ್ಳಿ. ಒಂದುವೇಳೆ ಕರ್ಮೇಂದ್ರಿಯಗಳು ವಶದಲ್ಲಿಲ್ಲವೆಂದರೆ, ಚಲನೆ ಸರಿಯಾಗಿರುವುದಿಲ್ಲ. ಉನ್ನತ ಪದವಿಯಿಂದ ವಂಚಿತರಾಗಿ ಬಿಡುವಿರಿ. ನಿಮ್ಮ ಚಲನೆಯನ್ನು ಸುಧಾರಣೆ ಮಾಡಿಕೊಳ್ಳಿ ಜಾಸ್ತಿ ಇಚ್ಛೆಗಳನ್ನು ಇಟ್ಟುಕೊಳ್ಳಬೇಡಿ.

ಬಾಬಾ ನೀವು ಮಕ್ಕಳಿಗೆ ಎಷ್ಟು ಜ್ಞಾನದ ಶೃಂಗಾರ ಮಾಡಿ ಸತ್ಯಯುಗದ ಮಹಾರಾಜ ಮಹಾರಾಣಿಯನ್ನಾಗಿ ಮಾಡುತ್ತಾರೆ. ಇದರಲ್ಲಿ ಸಹನಶೀಲತೆಯ ಗುಣ ಬಹಳ ಚೆನ್ನಾಗಿ ಇರಬೇಕು. ದೇಹದ ಮೇಲೆ ತುಂಬಾ ಹೆಚ್ಚು ಮೋಹ ಇರಬಾರದು. ಯೋಗಬಲದಿಂದಲೇ ಕೆಲಸ ತೆಗೆದುಕೊಳ್ಳಬೇಕು. ಬಾಬಾನಿಗೆ ಎಷ್ಟೇ ಕೆಮ್ಮು ಧಮ್ಮ ಇರುತ್ತಿತ್ತು, ಆದರೂ ಸಹ ಸದಾ ಸೇವೆಯಲ್ಲಿ ತತ್ಪರರಾಗಿರುತ್ತಿದ್ದರು. ಜ್ಞಾನ ಯೋಗದಿಂದ ಶೃಂಗಾರ ಮಾಡಿ ಮಕ್ಕಳನ್ನು ಲಾಯಕ್ಕಾಗಿ ಮಾಡುತ್ತಾರೆ. ನೀವು ಈಗ ಈಶ್ವರೀಯ ಮಡಿಲಿನಲ್ಲಿ, ಮಾತಾಪಿತರ ಮಡಿಲಿನಲ್ಲಿ ಕುಳಿತಿರುವಿರಿ. ತಂದೆ ಬ್ರಹ್ಮಾ ಮುಖದಿಂದ ನೀವು ಮಕ್ಕಳಿಗೆ ಜನ್ಮ ಕೊಡುತ್ತಾರೆ ಅಂದಮೇಲೆ ಇವರು ತಾಯಿಯಾದರು. ಆದರೂ ನಿಮ್ಮ ಬುದ್ಧಿ ಶಿವಬಾಬಾರವರ ಕಡೆ ಹೋಗುತ್ತದೆ. ನೀವು ಮಾತಾಪಿತರು ನಾವು ನಿಮ್ಮ ಬಾಲಕರು.... ನೀವು ಸರ್ವಗುಣ ಸಂಪನ್ನ ಇಲ್ಲಿ ಆಗಬೇಕಿದೆ. ಘಳಿಗೆ-ಘಳಿಗೆ ಮಾಯೆಯಿಂದ ಸೋಲನುಭವಿಸಬೇಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಅವ್ಯಕ್ತ-ಮಹಾವಾಕ್ಯ :
ಎಲ್ಲರೂ ಯೋಗ-ಯುಕ್ತ ಮತ್ತು ಯುಕ್ತಿಯುಕ್ತ ಸ್ಥಿತಿಯಲ್ಲಿ ಸ್ಥಿತರಾಗಿರುತ್ತಾ ನಿಮ್ಮ ಕಾರ್ಯ ಮಾಡುತ್ತಿರುವಿರಾ? ಏಕೆಂದರೆ ವರ್ತಮಾನ ಸಮಯ-ಪ್ರಮಾಣ ಸಂಕಲ್ಪ, ಮಾತು ಮತ್ತು ಕರ್ಮ ಈ ಮೂರೂ ಸಹ ಯೋಗಯುಕ್ತವಾಗಿರಬೇಕು ಆಗಲೇ ಸಂಪನ್ನ ಹಾಗೂ ಸಂಪೂರ್ಣ ಆಗಲು ಸಾಧ್ಯ. ನಾಲ್ಕಾರು ಕಡೆಯ ವಾತಾವರಣ ಯೋಗ-ಯುಕ್ತ ಮತ್ತು ಯುಕ್ತಿಯುಕ್ತವಾಗಿರಲಿ. ಹೇಗೆ ಯುದ್ಧದ ಮೈದಾನದಲ್ಲಿ ಯಾವಾಗ ಯೋಧ ಯುದ್ಧಕ್ಕಾಗಿ ಶತೃವಿನ ಎದುರು ನಿಂತಿರುತ್ತಾನೆ. ಆಗ ಅವನಿಗೆ ಅವನ ಮೇಲೆ ಹಾಗೂ ಅವನಲ್ಲಿರುವ ಶಸ್ತ್ರಗಳ ಮೇಲೆ ಅರ್ಥಾತ್ ತನ್ನ ಶಕ್ತಿಗಳ ಮೇಲೆ ಎಷ್ಟು ಗಮನ ಇರುತ್ತದೆ. ಈಗಂತೂ ಸಮಯ ಸಮೀಪ ಬರುತ್ತಿದೆ, ಹೀಗೆ ತಿಳಿಯಿರಿ ಯುದ್ಧದ ಮೈದಾನದಲ್ಲಿ ಎದುರಿಗೆ ಬರುವಂತಹ ಸಮಯ. ಇಂತಹ ಸಮಯದಲ್ಲಿ ನಾಲ್ಕಾರು ಕಡೆ ಸರ್ವ-ಶಕ್ತಿಗಳ ಕಡೆ, ಸ್ವಯಂ ಕಡೆ ಗಮನ ಅವಶ್ಯಕವಿದೆ. ಒಂದುವೇಳೆ ಸ್ವಲ್ಪವಾದರೂ ಸಹ ಗಮನ ಕಡಿಮೆಯಾದರೆ ಹೇಗೆ-ಹೇಗೆ ಸಮಯ-ಪ್ರಮಾಣ ನಾಲ್ಕೂ ಕಡೆ ಒತ್ತಡ (ಟೆನ್ಷನ್)ದ ವಾತಾವರಣದ ಪ್ರಭಾವ, ಯುದ್ಧದಲ್ಲಿ ಉಪಸ್ಥಿತರಾಗಿರುವ ಪಾಂಡವ ಸೇನೆಯ ಮೇಲೆಯೂ ಸಹ ಬೀಳುವ ಸಾಧ್ಯತೆಯಿದೆ. ದಿನ-ಪ್ರತಿದಿನ ಹೇಗೆ ಸಂಪೂರ್ಣತೆಯ ಸಮಯ ಹತ್ತಿರ ಬರುತ್ತಾ ಇದೆ, ಪ್ರಪಂಚದಲ್ಲಿ ಒತ್ತಡ (ಟೆನ್ಷನ್) ಇನ್ನೂ ಹೆಚ್ಚಾಗುತ್ತದೆ, ಕಡಿಮೆಯಾಗುವುದಿಲ್ಲ, ಎಳೆದಾಡುವ ಜೀವನದ ಅನುಭವ ನಾಲ್ಕಾರು ಕಡೆ ಆಗುವುದು ಹೇಗೆಂದರೆ ನಾಲ್ಕೂ ಕಡೆ ಎಳೆದಾಡುವ ಹಾಗಿರುತ್ತದೆ. ಒಂದು ಕಡೆ ಪ್ರಕೃತಿಯ ಚಿಕ್ಕ-ಚಿಕ್ಕ ಆಪತ್ತುಗಳಿಂದ ನಷ್ಟದ ಒತ್ತಡ (ಟೆನ್ಷನ್). ಇನ್ನೊಂದು ಕಡೆ ಈ ಪ್ರಪಂಚದ ಸರ್ಕಾರದ ಕಠಿಣ ಕಾನೂನುಗಳ ಟೆನ್ಷನ್, ಮೂರನೆಯದು ವ್ಯವಹಾರದಲ್ಲಿ ಹಿನ್ನಡೆಯ ಟೆನ್ಷನ್, ಮತ್ತು ನಾಲ್ಕನೇ ಕಡೆ ಲೌಕಿಕ ಸಂಬಂಧಿಗಳು ಇತ್ಯಾದಿಗಳಿಂದ ಸ್ನೇಹ ಮತ್ತು ಸ್ವತಂತ್ರವಿರುವ ಕಾರಣ ಖುಷಿಯ ಅನುಭೂತಿ ಅಲ್ಪಕಾಲಕ್ಕಾಗಿ ಇರುವುದು, ಅದೂ ಕೂಡ ಸಮಾಪ್ತಿಯಾಗಿ ಭಯದ ಅನುಭೂತಿಯ ಟೆನ್ಷನ್ನಲ್ಲಿದ್ದಾರೆ. ನಾಲ್ಕೂ ಕಡೆಯ ಟೆನ್ಷನ್ ಜನರಲ್ಲಿ ಹೆಚ್ಚಾಗಲಿದೆ. ನಾಲ್ಕೂ ಕಡೆಯ ಟೆನ್ಷನ್ ನಿಂದ ಆತ್ಮಗಳು ಚಡಪಡಿಸುತ್ತವೆ. ಎಲ್ಲಿ ಹೋದರೆ ಅಲ್ಲಿ ಟೆನ್ಷನ್. ಹೇಗೆ ಶರೀರದಲ್ಲಿಯೂ ಸಹ ಒಂದು ನರ ಎಳೆದರೆ ಆಗ ಎಷ್ಟು ನೋವಾಗುತ್ತದೆ. ಬುದ್ಧಿ ಎಳೆದಂತಿರುತ್ತದೆ. ಹಾಗೆಯೇ ಇಲ್ಲಿ ವಾತಾವರಣ ಹೆಚ್ಚುತ್ತಾ ಹೋಗುತ್ತದೆ. ಹೇಗೆಂದರೆ ಏನೂ ಒಂದು ಜೀವನಾಧಾರ ಕಾಣುತ್ತಿಲ್ಲ ಏನು ಮಾಡುವುದು ? ಒಂದುವೇಳೆ ಹೌದು ಎಂದರೂ ಎಳೆದಾಟ – ಇಲ್ಲ ಎಂದರೂ ಎಳೆದಾಟ-ಸಂಪಾದನೆ ಮಾಡಿದರೂ ಕಷ್ಟ, ಮಾಡದೇ ಇದ್ದರೂ ಕಷ್ಟ, ಕೂಡಿಟ್ಟರೂ ಕಷ್ಟ, ಮಾಡಿಡದೇ ಇದ್ದರೂ ಕಷ್ಟ. ಇಂತಹ ವಾತಾವರಣವಾಗುತ್ತಾ ಹೋಗುವುದು. ಇಂತಹ ಸಮಯದಲ್ಲಿ ನಾಲ್ಕೂ ಕಡೆಯ ಟೆನ್ಷನ್ನ ಪ್ರಭಾವ ಆತ್ಮೀಯ ಪಾಂಡವ ಸೇನೆಯ ಮೇಲೆ ಆಗದೇ ಇರಬೇಕು. ಸ್ವಯಂಗೆ ಟೆನ್ಷನ್ನಲ್ಲಿ ಬರುವಂತಹ ಸಮಸ್ಯೆಗಳು ಇಲ್ಲದೆಯೂ ಇರಬಹುದು, ಆದರೆ ವಾತಾವರಣದ ಪ್ರಭಾವ ಬಲಹೀನ ಆತ್ಮಗಳ ಮೇಲೆ ಸಹಜವಾಗಿ ಆಗಿ ಬಿಡುವುದು. ಭಯದ ಯೋಚನೆಯೂ ಸಹ ಏನಾಗುವುದೊ? ಹೇಗೆ ಆಗುವುದೋ? ಈ ಮಾತುಗಳ ಪ್ರಬಾವ ಇರಬಾರದು - ಅದಕ್ಕಾಗಿ ಮಧ್ಯೆ-ಮಧ್ಯೆ ಯಾವುದಾದರೂ ಒಂದು ಈಶ್ವರೀಯ ನೆನಪಿನ ಯಾತ್ರೆಯ ವಿಶೇಷ ಕಾರ್ಯಕ್ರಮ ಮಧುಬನದ ಮುಖಾಂತರ ಅಧಿಕೃತವಾಗಿ ಹೊರಡುತ್ತಿರಬೇಕು. ಯಾವುದರಿಂದ ಆತ್ಮಗಳ ಕೋಟೆ ಶಕ್ತಿಶಾಲಿಯಾಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಸೇವೆಯೂ ಸಹ ವೃದ್ಧಿಯಾಗುತ್ತದೆ. ಆದರೆ ವೃದ್ಧಿಯ ಜೊತೆ-ಜೊತೆ ಯುಕ್ತಿ-ಯುಕ್ತ ಸಹ ಬಹಳ ಇರಬೇಕು. ಇತ್ತೀಚೆಗೆ ಸಂಬಂಧ ಸಂಪರ್ಕದಲ್ಲಿರುವಂತಹವರು ಹೆಚ್ಚು ಬರುತ್ತಾರೆ. ಸ್ವರೂಪರಾಗುವಂತಹವರು ಕಡಿಮೆ ಬರುತ್ತಾರೆ. ಎಲ್ಲರೂ ಒಂದೇ ರೀತಿಯವರು ಇರುವುದಿಲ್ಲ. ದಿನ-ಪ್ರತಿದಿನ ಕ್ವಾಲಿಟಿ ಸಹ ಬಲಹೀನ ಆತ್ಮಗಳು ಅರ್ಥಾತ್ ಪ್ರಜೆಗಳ ಸಂಖ್ಯೆ ಹೆಚ್ಚು ಬರುತ್ತಾರೆ, ಅವರಿಗೆ ಜ್ಞಾನದ ಒಂದೇ ಮಾತು ಚೆನ್ನಾಗಿದೆ ಎನ್ನಿಸುತ್ತದೆ. ಎಲ್ಲಾ ಮಾತುಗಳಲ್ಲಿ ನಿಶ್ಚಯ ಇರುವುದಿಲ್ಲ. ಆದ್ದರಿಂದ ಸಂಪರ್ಕದಲ್ಲಿ ಬರುವವರಿಗೂ ಸಹ, ಅವರಿಗೆ ಏನು ಬೇಕು - ಅದೇ ಪ್ರಮಾಣದಲ್ಲಿ ಅವರನ್ನು ಸಂಪರ್ಕದಲ್ಲಿ ಇಡುತ್ತಿರಬೇಕು. ಸಮಯ ಹೇಗೆ ನಾಜೂಕಾಗಿ ಬರುತ್ತಾ ಹೋಗುತ್ತದೆ, ಹಾಗೆಯೇ ಸಮಸ್ಯೆಯ ಪ್ರಮಾಣವೂ ಸಹ ಅವರಿಗೆ ನಿಯಮಿತವಾಗಿ ಬರುವ ವಿಧ್ಯಾರ್ಥಿಯಾಗುವುದು ಕಷ್ಟವಾಗುವುದು. ಆದರೆ ಸಂಪರ್ಕದಲ್ಲಿ ಹೆಚ್ಚು-ಹೆಚ್ಚು ಬರುತ್ತಾರೆ, ಏಕೆಂದರೆ ಅಂತಿಮ ಸಮಯವಾಗಿದೆಯಲ್ಲವೆ. ಆದ್ದರಿಂದ ಕೊನೆಯ ದೃಶ್ಯ ಹೇಗೆ ಇರುತ್ತದೆ? ಹೇಗೆ ಮೊದಲು ಕುಣಿದಾಟ, ಒಲವು, ಉತ್ಸಾಹ ಇರುತ್ತದೆ - ಅದು ವಿರಳವಾಗಿ ಕೆಲವರಲ್ಲಿ ಮಾತ್ರ ಇರುತ್ತದೆ. ಮೆಜಾರಿಟಿ ಸಂಬಂಧ ಸಂಪರ್ಕದಲ್ಲಿರುವವರು ಬರುತ್ತಾರೆ. ಆಗ ಇಲ್ಲಿ ಗಮನ ಇರಬೇಕು. ಹೀಗಲ್ಲ ಸಂಪರ್ಕದ ಆತ್ಮಗಳನ್ನು ಪರಿಶೀಲಿಸದೆ ಸಂಪರ್ಕದಿಂದಲೂ ಅವರನ್ನು ವಂಚಿತರನ್ನಾಗಿ ಮಾಡಬಾರದು. ಯಾರೂ ಖಾಲಿ ಕೈಯಿಂದ ಹೋಗುವ ಹಾಗಿಲ್ಲ. ನಿಯಮಗಳ ಮೇಲೆ ಭಲೆ ನಡೆಯಲು ಆಗುವುದಿಲ್ಲ, ಆದರೆ ಅವರು ಸ್ನೇಹದಲ್ಲಿರಲು ಬಯಸುತ್ತಾರೆ, ಆಗ ಇಂತಹ ಆತ್ಮಗಳದ್ದೂ ಸಹ ಅಟೆನ್ಷನ್ ಖಂಡಿತ ಇಡಬೇಕಾಗುತ್ತದೆ. ಅರ್ಥ ಮಾಡಿಕೊಳ್ಳಬೇಕು ಈ ಗ್ರೂಪ್ ಇದೇ ಪ್ರಮಾಣದಲ್ಲಿ ಮೂರನೇ ಸ್ಟೇಜ್ನಲ್ಲಿ ಬರುವವರು. ಆದ್ದರಿಂದ ಅವರಿಗೂ ಸಹ ಅದೇ ಪ್ರಮಾಣದ ಹ್ಯಾಂಡ್ಲಿಂಗ್(ಮೇಲ್ವಿಚಾರಣೆ) ಸಿಗಬೇಕಾಗಿದೆ. ಒಳ್ಳೆಯದು. ಓಂ ಶಾಂತಿ.

ವರದಾನ:  
ಸ್ನೇಹದ ಹಿಂದೆ ಸರ್ವ ಬಲಹೀನತೆಗಳನ್ನು ತ್ಯಾಗ ಮಾಡುವಂತಹ ಸಮರ್ಥಿ ಸ್ವರೂಪ ಭವ.

ಸ್ನೇಹದ ನಿಶಾನಿಯಾಗಿದೆ ತ್ಯಾಗ. ಸ್ನೆಹದ ಹಿಂದೆ ತ್ಯಾಗ ಮಾಡುವುದರಲ್ಲಿ ಯಾವುದೇ ಕಷ್ಟ ಅಥವಾ ಅಸಂಭವದ ಮಾತೂ ಸಹ ಸಂಭವ ಮತ್ತು ಸಹಜ ಅನುಭವವಾಗುವುದು. ಆದ್ದರಿಂದ ಸಮರ್ಥಿ ಸ್ವರೂಪದ ವರದಾನದ ಮುಖಾಂತರ ಸರ್ವ ಬಲಹೀನತೆಗಳನ್ನು ಅಸಹಾಯಕತೆಯಿಂದಲ್ಲ ಹೃದಯ ಪೂರ್ವಕವಾಗಿ ತ್ಯಾಗ ಮಾಡಿ ಏಕೆಂದರೆ ಸತ್ಯ ತಂದೆಯ ಬಳಿ ಸತ್ಯವೇ ಸ್ವೀಕಾರವಾಗುವುದು. ಆದ್ದರಿಂದ ಕೇವಲ ತಂದೆಯ ಸ್ನೇಹದ ಗೀತೆಯನ್ನು ಹಾಡಬೇಡಿ. ಆದರೆ ಸ್ವಯಂ ತಂದೆಯ ಸಮಾನ ಅವ್ಯಕ್ತ ಸ್ಥಿತಿ ಸ್ವರೂಪರಾಗಿ ಯಾವುದರಿಂದ ಎಲ್ಲರೂ ನಿಮ್ಮ ಗೀತೆಯನ್ನು ಹಾಡಬೇಕು.

ಸ್ಲೋಗನ್:
ಸಂಕಲ್ಪ ಅಥವಾ ಸ್ವಪ್ನದಲ್ಲಿಯೂ ಸಹ ಒಬ್ಬ ಹೃದಯರಾಮನ ನೆನಪಿದ್ದಾಗ ಹೇಳಲಾಗುವುದು ಸತ್ಯ ತಪಸ್ವಿ.


ಬ್ರಹ್ಮಾ ತಂದೆಯ ಸಮಾನ ಸಂಪನ್ನ ಸ್ಥಿತಿಯ ಅನುಭವ ಮಾಡಿರಿ:-
ಹೇಗೆ ಆದಿ ದೇವ ಬ್ರಹ್ಮಾ ಮತ್ತು ಆದಿ ಆತ್ಮ ಶ್ರೀ ಕೃಷ್ಣ - ಇಬ್ಬರ ಅಂತರವನ್ನು ತೋರಿಸುತ್ತಾ ಜೊತೆಯನ್ನು ತೋರಿಸುತ್ತಾರೆ. ಇದೇ ರೀತಿ ತಾವೆಲ್ಲರೂ ತಮ್ಮ ಬ್ರಾಹ್ಮಣ ಸ್ವರೂಪ ಮತ್ತು ದೇವತಾ ಸ್ವರೂಪವೆರಡನ್ನೂ ಮುಂದಿಟ್ಟುಕೊಂಡು ನೋಡಿರಿ - ಆದಿಯಿಂದ ಅಂತ್ಯದವರೆಗೆ ನಾವೆಷ್ಟು ಶ್ರೇಷ್ಠಾತ್ಮರಾಗಿದ್ದೇವೆ! ಇದೇ ನಶೆ ಮತ್ತು ಖುಷಿಯಲ್ಲಿದ್ದು ಸಂಪನ್ನ ಸ್ಥಿತಿಯ ಅನುಭವ ಮಾಡಿರಿ.