29.01.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ ಅರ್ಥಾತ್ ಸರ್ವ ಧರ್ಮ ಪಿತರಿಗೂ ಆದಿ ಪಿತನು ಪ್ರಜಾಪಿತ ಬ್ರಹ್ಮನಾಗಿದ್ದಾರೆ, ಇವರ ಕರ್ತವ್ಯವನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ”

ಪ್ರಶ್ನೆ:
ಕರ್ಮಗಳನ್ನು ಶ್ರೇಷ್ಠ ಮಾಡಿಕೊಳ್ಳುವ ಯುಕ್ತಿ ಏನಾಗಿದೆ?

ಉತ್ತರ:
ಈ ಜನ್ಮದ ಯಾವುದೇ ವಿಕರ್ಮವನ್ನು ತಂದೆಯಿಂದ ಮುಚ್ಚಿಡಬೇಡಿ, ಶ್ರೀಮತದನುಸಾರ ಕರ್ಮ ಮಾಡಿ ಆಗ ಪ್ರತೀ ಕರ್ಮ ಶ್ರೇಷ್ಠವಾಗುವುದು. ಎಲ್ಲವೂ ಕರ್ಮಗಳ ಮೇಲೆ ಅವಲಂಭಿತವಾಗಿದೆ. ಒಂದುವೇಳೆ ಯಾವುದೇ ಪಾಪಕರ್ಮ ಮಾಡಿ ಅದನ್ನು ಮುಚ್ಚಿಟ್ಟರೆ ಅದಕ್ಕೆ ನೂರರಷ್ಟು ಶಿಕ್ಷೆಯಾಗುವುದು. ಪಾಪವು ವೃದ್ಧಿಯಾಗುತ್ತಾ ಇರುತ್ತದೆ, ತಂದೆಯೊಂದಿಗೆ ಬುದ್ಧಿಯೋಗವು ತುಂಡಾಗುತ್ತದೆ. ಈ ರೀತಿ ಮುಚ್ಚಿಡುವವರ ಸತ್ಯನಾಶವಾಗಿ ಬಿಡುತ್ತದೆ. ಆದ್ದರಿಂದ ಸತ್ಯ ತಂದೆಯ ಜೊತೆ ಸತ್ಯವಾಗಿರಿ.

ಓಂ ಶಾಂತಿ.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಇದನ್ನು ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚದಲ್ಲಿ ನಾವು ಇನ್ನು ಸ್ವಲ್ಪ ದಿನಗಳ ಯಾತ್ರಿಕರಾಗಿದ್ದೇವೆ. ಇನ್ನೂ 40 ಸಾವಿರ ವರ್ಷಗಳು ನಾವು ಇಲ್ಲಿರುತ್ತೇವೆಂದು ಪ್ರಪಂಚದ ಮನುಷ್ಯರು ತಿಳಿದುಕೊಳ್ಳುತ್ತಾರೆ. ನೀವು ಮಕ್ಕಳಿಗಂತೂ ನಿಶ್ಚಯವಿದೆಯಲ್ಲವೆ. ಈ ಮಾತುಗಳನ್ನು ಮರೆಯಬೇಡಿ. ಇಲ್ಲಿ ಕುಳಿತಿದ್ದೀರಿ ಆದರೂ ಸಹ ನೀವು ಮಕ್ಕಳಿಗೆ ಒಳಗೆ ಬಹಳ ಗದ್ಗದಿತವಾಗಬೇಕು. ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಇದು ವಿನಾಶವಾಗಲಿದೆ, ಆತ್ಮವು ಅವಿನಾಶಿಯಾಗಿದೆ. ಇದೂ ಸಹ ಬುದ್ಧಿಯಲ್ಲಿದೆ - ನಾವಾತ್ಮರು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ, ಈಗ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ಯಾವಾಗ ಹಳೆಯ ಪ್ರಪಂಚವು ಮುಕ್ತಾಯವಾಗುವುದೋ ಆಗ ಹೊಸ ಪ್ರಪಂಚವನ್ನಾಗಿ ಮಾಡಲು ತಂದೆಯು ಬರುತ್ತಾರೆ. ಹೊಸ ಪ್ರಪಂಚದಿಂದ ಹಳೆಯದು, ಮತ್ತೆ ಹಳೆಯದರಿಂದ ಹೊಸ ಪ್ರಪಂಚ, ಈ ಚಕ್ರದ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ನಾವು ಅನೇಕ ಬಾರಿ ಈ ಚಕ್ರವನ್ನು ಸುತ್ತಿದ್ದೇವೆ, ಈಗ ಈ ಚಕ್ರವು ಪೂರ್ಣವಾಗುತ್ತದೆ, ಮತ್ತೆ ಹೊಸ ಪ್ರಪಂಚದಲ್ಲಿ ನಾವು ಕೆಲವರೇ ದೇವತೆಗಳಿರುತ್ತೇವೆ, ಮನುಷ್ಯರಿರುವುದಿಲ್ಲ. ನಾವೀಗ ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆ. ಇದಂತೂ ಪಕ್ಕಾ ನಿಶ್ಚಯವಿದೆಯಲ್ಲವೆ. ಬಾಕಿ ಎಲ್ಲವೂ ಕರ್ಮಗಳ ಮೇಲೆ ಅವಲಂಭಿಸಿದೆ. ಮನುಷ್ಯರು ಉಲ್ಟಾ ಕರ್ಮ ಮಾಡಿದರೆ ಅದು ಒಳಗೆ ಅವಶ್ಯವಾಗಿ ತಿನ್ನುತ್ತದೆ. ಆದ್ದರಿಂದ ತಂದೆಯು ಕೇಳುತ್ತಾರೆ - ಈ ಜನ್ಮದಲ್ಲಿ ಅಂತಹ ಯಾವುದೇ ಪಾಪವನ್ನಂತೂ ಮಾಡಿಲ್ಲವೆ. ಇದು ಛೀ ಛೀ ರಾವಣ ರಾಜ್ಯವಾಗಿದೆ, ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ರಾವಣ ಯಾವ ವಸ್ತುವಿನ ಹೆಸರಾಗಿದೆ ಎಂಬುದು ಪ್ರಪಂಚಕ್ಕೆ ಗೊತ್ತಿಲ್ಲ. ರಾಮ ರಾಜ್ಯ ಬೇಕೆಂದು ಬಾಪೂಜಿಯು ಹೇಳುತ್ತಿದ್ದರು ಆದರೆ ಅರ್ಥವನ್ನು ತಿಳಿದುಕೊಂಡಿರಲಿಲ್ಲ. ರಾಮ ರಾಜ್ಯವು ಯಾವ ಪ್ರಕಾರದಲ್ಲಿರುತ್ತದೆ ಎಂಬುದನ್ನು ಈಗ ಬೇಹದ್ದಿನ ತಂದೆಯು ತಿಳಿಸುತ್ತಾರೆ. ಇದಂತೂ ಕಗ್ಗತ್ತಲೆಯ ಪ್ರಪಂಚವಾಗಿದೆ. ಈಗ ಬೇಹದ್ದಿನ ತಂದೆಯು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಿದ್ದಾರೆ, ನೀವೀಗ ಭಕ್ತಿ ಮಾಡುವುದಿಲ್ಲ. ಈಗ ತಂದೆಯ ಕೈ ಸಿಕ್ಕಿದೆ, ತಂದೆಯ ಆಶ್ರಯವಿಲ್ಲದೆ ನೀವು ವಿಷಯ ವೈತರಣೀ ನದಿಯಲ್ಲಿ ಮುಳುಗುತ್ತಿದ್ದಿರಿ, ಅರ್ಧಕಲ್ಪ ಭಕ್ತಿಯಿರುತ್ತದೆ. ಜ್ಞಾನವು ಸಿಕ್ಕಿದಾಗ ನೀವು ಹೊಸ ಪ್ರಪಂಚ, ಸತ್ಯಯುಗದಲ್ಲಿ ಹೊರಟು ಹೋಗುತ್ತೀರಿ. ನೀವು ಮಕ್ಕಳಿಗೆ ಈ ನಿಶ್ಚಯವಿದೆ - ನಾವು ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಪವಿತ್ರರಾಗಿ ಬಿಡುತ್ತೇವೆ ಮತ್ತು ಪವಿತ್ರ ಪ್ರಪಂಚದಲ್ಲಿ ಬರುತ್ತೇವೆ. ಈ ಜ್ಞಾನವೂ ಸಹ ಈಗ ಪುರುಷೋತ್ತಮ ಸಂಗಮಯುಗದಲ್ಲಿ ನಿಮಗೆ ಸಿಗುತ್ತದೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ. ನೀವೀಗ ಪತಿತರಿಂದ ಪಾವನರು, ಮುಳ್ಳುಗಳಿಂದ ಹೂಗಳಾಗುತ್ತಿದ್ದೀರಿ. ಯಾರು ಮಾಡುತ್ತಿದ್ದಾರೆ? ತಂದೆ. ತಂದೆಯನ್ನು ಅರಿತಿದ್ದೀರಿ. ಅವರು ನಾವಾತ್ಮರ ಬೇಹದ್ದಿನ ತಂದೆಯಾಗಿದ್ದಾರೆ. ಲೌಕಿಕ ತಂದೆಗೆ ಬೇಹದ್ದಿನ ತಂದೆಯೆಂದು ಹೇಳುವುದಿಲ್ಲ. ಪಾರಲೌಕಿಕ ತಂದೆಯು ಆತ್ಮಗಳ ಲೆಕ್ಕದಿಂದ ಎಲ್ಲರ ತಂದೆಯಾಗಿದ್ದಾರೆ. ಮತ್ತೆ ಬ್ರಹ್ಮಾರವರ ಪರಿಚಯವೂ ಬೇಕಲ್ಲವೆ. ನೀವು ಮಕ್ಕಳೀಗ ಎಲ್ಲರ ಕರ್ತವ್ಯವನ್ನು ಅರಿತುಕೊಂಡಿದ್ದೀರಿ. ವಿಷ್ಣುವಿನ ಕರ್ತವ್ಯವನ್ನೂ ಅರಿತಿದ್ದೀರಿ. ವಿಷ್ಣು ಎಷ್ಟು ಶೃಂಗರಿಸಲ್ಪಟ್ಟಿದ್ದಾನೆ, ಸ್ವರ್ಗದ ಮಾಲೀಕನಲ್ಲವೆ. ಈ ಶೃಂಗಾರವು ಸಂಗಮಯುಗದ್ದು ಎಂದೇ ಹೇಳಬಹುದು. ಮೂಲವತನ, ಸೂಕ್ಷ್ಮವತನ, ಸ್ಥೂಲ ವತನ ಇವೆಲ್ಲವೂ ಸಂಗಮದಲ್ಲಿಯೇ ಬರುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ – ಹಳೆಯ ಪ್ರಪಂಚ ಮತ್ತು ಹೊಸ ಪ್ರಪಂಚದ ನಡುವಿನ ಇದು ಸಂಗಮಯುಗವಾಗಿದೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಪಾವನ ಪ್ರಪಂಚವು ಹೊಸ ಪ್ರಪಂಚ ಮತ್ತು ಪತಿತ ಪ್ರಪಂಚವು ಹಳೆಯ ಪ್ರಪಂಚವಾಗಿದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ. ಬೇಹದ್ದಿನ ತಂದೆಯದೂ ಸಹ ಈಗ ಪಾತ್ರವಿದೆ, ರಚಯಿತ, ನಿರ್ದೇಶಕನಾಗಿದ್ದಾರಲ್ಲವೆ. ಎಲ್ಲರೂ ಅವರನ್ನು ನಂಬುತ್ತಾರೆ ಅಂದಮೇಲೆ ಅವಶ್ಯವಾಗಿ ಅವರದೂ ಏನೋ ಕರ್ತವ್ಯವಿರಬೇಕಲ್ಲವೆ. ಅವರಿಗೆ ವ್ಯಕ್ತಿಯೆಂದು ಹೇಳಲಾಗುವುದಿಲ್ಲ ಏಕೆಂದರೆ ಅವರಿಗೆ ಶರೀರವಿಲ್ಲ. ಉಳಿದೆಲ್ಲರಿಗೆ ಮನುಷ್ಯರು ಅಥವಾ ದೇವತೆಗಳೆಂದು ಹೇಳುತ್ತಾರೆ. ಶಿವ ತಂದೆಗೆ ಮನುಷ್ಯನೆಂದಾಗಲಿ, ದೇವತೆಯೆಂದಾಗಲಿ ಹೇಳುವುದಿಲ್ಲ ಏಕೆಂದರೆ ಅವರಿಗೆ ಶರೀರವೇ ಇಲ್ಲ. ಇದನ್ನು ಸ್ವಲ್ಪ ಸಮಯಕ್ಕಾಗಿ ತೆಗೆದುಕೊಂಡಿದ್ದಾರೆ. ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನಾನು ಶರೀರವಿಲ್ಲದೆ ರಾಜಯೋಗವನ್ನು ಹೇಗೆ ಕಲಿಸಲಿ! ನನ್ನನ್ನು ಮನುಷ್ಯರು ಕಲ್ಲು, ಮುಳ್ಳಿನಲ್ಲಿದ್ದಾರೆಂದು ಹೇಳಿ ಬಿಟ್ಟಿದ್ದಾರೆ. ಆದರೆ ಈಗಂತೂ ನೀವು ಮಕ್ಕಳು ನಾನು ಹೇಗೆ ಬರುತ್ತೇನೆ ಎಂಬುದನ್ನು ತಿಳಿದುಕೊಂಡಿದ್ದೀರಿ. ನೀವೀಗ ರಾಜಯೋಗವನ್ನು ಕಲಿಯುತ್ತಿದ್ದೀರಿ. ಯಾವುದೇ ಮನುಷ್ಯರು ಇದನ್ನು ಕಲಿಸಲು ಸಾಧ್ಯವಿಲ್ಲ. ದೇವತೆಗಳು ರಾಜಯೋಗಿಗಳಾಗಿದ್ದಾರೆ. ಇವರು ಹೇಗಾದರು? ಅವಶ್ಯವಾಗಿ ಪುರುಷೋತ್ತಮ ಸಂಗಮಯುಗದಲ್ಲಿ ರಾಜಯೋಗವನ್ನು ಕಲಿತಿರಬೇಕು ಅಂದಾಗ ಇದನ್ನು ಸ್ಮರಣೆ ಮಾಡಿ. ಈಗ ನೀವು ಮಕ್ಕಳಿಗೆ ಅಪಾರ ಖುಷಿಯಾಗಬೇಕು, ನಾವೀಗ 84 ಜನ್ಮಗಳ ಚಕ್ರವನ್ನು ಪೂರ್ಣ ಮಾಡಿದ್ದೇವೆ, ತಂದೆಯು ಕಲ್ಪ-ಕಲ್ಪವೂ ಬರುತ್ತಾರೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ಇವರದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಯಾವ ಶ್ರೀಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದನೋ ಅವರೇ ಮತ್ತೆ 84 ಜನ್ಮಗಳ ಚಕ್ರವನ್ನು ಸುತ್ತುತ್ತಾರೆ. ನೀವು ಶಿವನಿಗೆ 84 ಜನ್ಮಗಳೆಂದು ಹೇಳುವುದಿಲ್ಲ. ನಿಮ್ಮಲ್ಲಿಯೂ ಇದು ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದಾರೆ. ಮಾಯೆಯು ಬಹಳ ಕಠಿಣವಾಗಿದೆ, ಯಾರನ್ನೂ ಬಿಡುವುದಿಲ್ಲ. ಇದನ್ನು ತಂದೆಯು ಚೆನ್ನಾಗಿ ತಿಳಿದುಕೊಂಡಿದ್ದಾರೆ. ತಂದೆಯು ಅಂತರ್ಯಾಮಿ ಎಂದು ತಿಳಿದುಕೊಳ್ಳಬೇಡಿ. ಅವರಿಗೆ ಎಲ್ಲರ ಚಲನೆಯಿಂದಲೇ ಅರ್ಥವಾಗುತ್ತದೆ. ಸಮಾಚಾರವು ಬರುತ್ತದೆ, ಮಾಯೆಯು ಒಮ್ಮೆಲೆ ಹಸಿಯಾಗಿಯೇ ಹೊಟ್ಟೆಯಲ್ಲಿ ಹಾಕಿಕೊಳ್ಳುತ್ತದೆ. ಇಂತಹ ಬಹಳ ಮಾತುಗಳು ನೀವು ಮಕ್ಕಳಿಗೆ ತಿಳಿಯುವುದೇ ಇಲ್ಲ. ತಂದೆಗೆ ಎಲ್ಲವೂ ಅರ್ಥವಾಗುತ್ತದೆ ಆದ್ದರಿಂದ ತಂದೆಯು ಅಂತರ್ಯಾಮಿಯಾಗಿದ್ದಾರೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಅಂತರ್ಯಾಮಿಯಲ್ಲ, ಪ್ರತಿಯೊಬ್ಬರ ಚಲನೆಯಿಂದಲೇ ಎಲ್ಲವೂ ಅರ್ಥವಾಗುತ್ತದೆ. ಬಹಳ ಛೀ ಛೀ ಚಲನೆಯಲ್ಲಿ ನಡೆಯುತ್ತಾರೆ. ತಂದೆಯು ಮಕ್ಕಳಿಗೆ ಎಚ್ಚರಿಕೆ ನೀಡುತ್ತಾರೆ - ಮಕ್ಕಳೇ, ಮಾಯೆಯಿಂದ ಸಂಭಾಲನೆ ಮಾಡಿಕೊಳ್ಳಿ, ಮಾಯೆಯ ಯಾವುದಾದರೊಂದು ರೂಪದಲ್ಲಿ ನುಂಗಿ ಬಿಡುತ್ತದೆ. ಭಲೆ ತಂದೆಯು ತಿಳಿಸುತ್ತಾರೆ ಆದರೂ ಸಹ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ ಆದ್ದರಿಂದ ಮಕ್ಕಳು ಬಹಳ ಎಚ್ಚರಿಕೆಯಿಂದಿರಬೇಕಾಗಿದೆ. ಕಾಮ ಮಹಾಶತ್ರುವಾಗಿದೆ, ನಾವು ವಿಕಾರದಲ್ಲಿ ಹೋಗಿದ್ದೇವೆ ಎಂಬುದೂ ಸಹ ಗೊತ್ತಾಗುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಯಾವುದೇ ತಪ್ಪುಗಳಾಗುತ್ತವೆಯೆಂದರೆ ಮುಚ್ಚಿಡಬೇಡಿ, ಸ್ಪಷ್ಟವಾಗಿ ತಿಳಿಸಿ. ಇಲ್ಲದಿದ್ದರೆ ನೂರರಷ್ಟು ಪಾಪವಾಗಿ ಬಿಡುವುದು. ಮನಸ್ಸು ತಿನ್ನುತ್ತಿರುವುದು. ಒಮ್ಮೆಲೆ ಬಿದ್ದು ಹೋಗುವಿರಿ. ಸತ್ಯ ತಂದೆಯ ಜೊತೆ ಬಹಳ ಸತ್ಯವಾಗಿರಬೇಕು ಇಲ್ಲವಾದರೆ ಬಹಳ-ಬಹಳ ನಷ್ಟವಾಗುತ್ತದೆ. ಮಾಯೆಯು ಈ ಸಮಯದಲ್ಲಿ ಬಹಳ ಕಠಿಣವಾಗಿದೆ, ಇದು ರಾವಣನ ಪ್ರಪಂಚವಾಗಿದೆ. ನಾವು ಈ ಹಳೆಯ ಪ್ರಪಂಚವನ್ನೇಕೆ ನೆನಪು ಮಾಡುವುದು! ನಾವಂತೂ ಹೊಸ ಪ್ರಪಂಚವನ್ನು ನೆನಪು ಮಾಡಬೇಕು ಎಲ್ಲಿಗೆ ಈಗ ಹೋಗುತ್ತಿದ್ದೇವೆ! ತಂದೆಯು ಹೊಸ ಮನೆಯನ್ನು ಕಟ್ಟಿಸಿದಾಗ ನಮಗಾಗಿ ಮನೆಯು ತಯಾರಾಗುತ್ತಿದೆ ಎಂದು ಮಕ್ಕಳು ತಿಳಿದುಕೊಳ್ಳುತ್ತಾರಲ್ಲವೆ. ಖುಷಿಯಿರುತ್ತದೆ ಹಾಗೆಯೇ ಇದು ಬೇಹದ್ದಿನ ಮಾತಾಗಿದೆ. ನಮಗಾಗಿ ಹೊಸ ಪ್ರಪಂಚ ಸ್ವರ್ಗವಾಗುತ್ತಿದೆ, ಸ್ವರ್ಗದಲ್ಲಿ ಇರುವುದಕ್ಕಾಗಿ ಅವಶ್ಯವಾಗಿ ಮನೆಗಳೂ ಇರುತ್ತವೆ. ನಾವೀಗ ಹೊಸ ಪ್ರಪಂಚದಲ್ಲಿ ಹೋಗಲಿದ್ದೇವೆ. ಎಷ್ಟು ತಂದೆಯನ್ನು ನೆನಪು ಮಾಡುವೆವೋ ಅಷ್ಟು ಹೂಗಳಾಗುತ್ತೇವೆ. ನಾವು ವಿಕಾರಗಳಿಗೆ ವಶವಾಗಿ ಮುಳ್ಳುಗಳಾಗಿ ಬಿಟ್ಟಿದ್ದೇವೆ. ತಂದೆಗೆ ಗೊತ್ತಿದೆ, ಮಾಯೆಯು ಅರ್ಧಂಬರ್ಧ ಇರುವವರನ್ನು ಒಮ್ಮೆಲೆ ತಿಂದು ಬಿಡುತ್ತದೆ. ನಿಮಗೂ ತಿಳಿದಿದೇ - ಯಾರು ಬರುವುದಿಲ್ಲವೋ ಅವರು ಮಾಯೆಗೆ ವಶವಾಗಿ ಬಿಟ್ಟರಲ್ಲವೆ. ತಂದೆಯ ಬಳಿ ಬರುವುದೇ ಇಲ್ಲ. ಹೀಗೆ ಮಾಯೆಯು ಅನೇಕರನ್ನು ನುಂಗಿ ಬಿಡುತ್ತದೆ. ಬಹಳ ಒಳ್ಳೆಯದು, ಒಳ್ಳೆಯದು ಎಂದು ಹೇಳಿ ಹೋಗುತ್ತಾರೆ - ನಾವು ಹೀಗೆ ಮಾಡುತ್ತೇವೆ, ಹಾಗೆ ಮಾಡುತ್ತೇವೆ. ನಾವಂತೂ ಯಜ್ಞಕ್ಕಾಗಿ ಪ್ರಾಣ ಕೊಡುವುದಕ್ಕೂ ತಯಾರಿದ್ದೇವೆ ಎಂದು ಹೇಳುತ್ತಾರೆ ಆದರೆ ಅವರು ಇಂದು ಇಲ್ಲ. ನಿಮ್ಮ ಯುದ್ಧವು ಮಾಯೆಯ ಜೊತೆಯಿದೆ. ಮಾಯೆಯ ಜೊತೆ ಹೇಗೆ ಯುದ್ಧವಾಗುತ್ತದೆ ಎಂಬುದನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳಿಗೆ ತಂದೆಯು ಜ್ಞಾನದ ಮೂರನೆಯ ನೇತ್ರವನ್ನು ಕೊಟ್ಟಿದ್ದಾರೆ. ಇದರಿಂದ ನೀವು ಅಂಧಕಾರದಿಂದ ಬೆಳಕಿನೆಡೆಗೆ ಬಂದು ಬಿಟ್ಟಿದ್ದೀರಿ. ಆತ್ಮಕ್ಕೇ ಈ ಜ್ಞಾನದ ನೇತ್ರವನ್ನು ಕೊಡುತ್ತಾರೆ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ನೀವು ತಮ್ಮನ್ನು ಆತ್ಮನೆಂದು ತಿಳಿಯಿರಿ. ಬೇಹದ್ದಿನ ತಂದೆಯನ್ನು ನೆನಪು ಮಾಡಿ. ಭಕ್ತಿಯಲ್ಲಿ ನೀವು ನೆನಪು ಮಾಡುತ್ತಿದ್ದಿರಲ್ಲವೆ. ಬಾಬಾ, ತಾವು ಬಂದರೆ ಬಲಿಹಾರಿಯಾಗುತ್ತೇವೆಂದು ಹೇಳುತ್ತಿದ್ದಿರಿ. ಹೇಗೆ ಬಲಿಹಾರಿಯಾಗುವುದು? ಎಂಬುದನ್ನು ತಿಳಿದುಕೊಂಡಿರಲಿಲ್ಲ. ಈಗ ನಿಮಗೆ ಅರ್ಥವಾಗಿದೆ, ಹೇಗೆ ನಾವಾತ್ಮರಿದ್ದೇವೆಯೋ ಅದೇರೀತಿ ತಂದೆಯೂ ಇದ್ದಾರೆ. ತಂದೆಯದು ಅಲೌಕಿಕ ಜನ್ಮವಾಗಿದೆ. ನೀವು ಮಕ್ಕಳಿಗೆ ಎಷ್ಟು ಚೆನ್ನಾಗಿ ಓದಿಸುತ್ತಾರೆ! ನೀವೂ ಸಹ ಹೇಳುತ್ತೀರಿ - ಇವರು ಅದೇ ತಂದೆಯಾಗಿದ್ದಾರೆ ಯಾರು ಕಲ್ಪ-ಕಲ್ಪವೂ ನಮ್ಮ ತಂದೆಯಾಗುತ್ತಾರೆ. ನಾವೂ ಸಹ ಬಾಬಾ, ಬಾಬಾ ಎಂದು ಹೇಳುತ್ತೇವೆ, ತಂದೆಯೂ ಮಕ್ಕಳೇ, ಮಕ್ಕಳೇ ಎಂದು ಹೇಳುತ್ತಾರೆ. ಅವರೇ ಶಿಕ್ಷಕನ ರೂಪದಲ್ಲಿ ರಾಜಯೋಗವನ್ನು ಕಲಿಸುತ್ತಾರೆ. ಮತ್ತ್ಯಾರೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ಇಂತಹ ತಂದೆಗೆ ಮಕ್ಕಳಾಗಿ ಮತ್ತೆ ಅದೇ ಶಿಕ್ಷಕರ ಶಿಕ್ಷಣವನ್ನೂ ಪಡೆಯಬೇಕಲ್ಲವೆ. ಗದ್ಗದಿತರಾಗಬೇಕು. ಒಂದುವೇಳೆ ಪತಿತರಾದರೆ ಮತ್ತೆ ಆ ಖುಷಿಯಿರುವುದಿಲ್ಲ. ಭಲೆ ಎಷ್ಟಾದರೂ ತಲೆ ಕೆಡಿಸಿಕೊಳ್ಳಲಿ, ಹೇಗೆ ಅವರು ನಮ್ಮ ಕುಲದವರು ಅಲ್ಲವೇ ಅಲ್ಲ. ಇಲ್ಲಿ ಮನುಷ್ಯರಿಗೆ ಎಷ್ಟೊಂದು ಉಪನಾಮಗಳಿರುತ್ತವೆ. ನಿಮ್ಮ ಉಪನಾಮವು ನೋಡಿ, ಎಷ್ಟು ದೊಡ್ಡದಾಗಿದೆ! ಇವರು ಅತಿ ದೊಡ್ಡ ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ ಬ್ರಹ್ಮಾ ಆಗಿದ್ದಾರೆ. ಅವರನ್ನು ಯಾರೂ ತಿಳಿದುಕೊಂಡಿಲ್ಲ. ಶಿವ ತಂದೆಗಂತೂ ಸರ್ವವ್ಯಾಪಿ ಎಂದು ಹೇಳಿ ಬಿಟ್ಟಿದ್ದಾರೆ. ಬ್ರಹ್ಮನ ಬಗ್ಗೆಯೂ ಯಾರಿಗೂ ಅರ್ಥವಾಗುವುದಿಲ್ಲ. ಬ್ರಹ್ಮಾ-ವಿಷ್ಣು-ಶಂಕರನ ಚಿತ್ರವೂ ಇದೆ. ಬ್ರಹ್ಮನನ್ನು ಸೂಕ್ಷ್ಮವತನದಲ್ಲಿ ತೋರಿಸಿದ್ದಾರೆ. ಚರಿತ್ರೆಯನ್ನೇನೂ ತಿಳಿದುಕೊಂಡಿಲ್ಲ. ಸೂಕ್ಷ್ಮವತನದಲ್ಲಿ ಬ್ರಹ್ಮನನ್ನು ತೋರಿಸುತ್ತಾರೆ ಅಂದಮೇಲೆ ಪ್ರಜಾಪಿತ ಬ್ರಹ್ಮನೆಲ್ಲಿಂದ ಬರುವರು! ಅಲ್ಲಿ ಮಕ್ಕಳನ್ನು ದತ್ತು ಮಾಡಿಕೊಳ್ಳುವರೆ! ಯಾರಿಗೂ ತಿಳಿದಿಲ್ಲ. ಪ್ರಜಾಪಿತ ಬ್ರಹ್ಮನೆಂದು ಹೇಳುತ್ತಾರೆ ಆದರೆ ಅವರ ಚರಿತ್ರೆಯನ್ನು ತಿಳಿದುಕೊಂಡಿಲ್ಲ. ತಂದೆಯು ತಿಳಿಸಿದ್ದಾರೆ - ಇದು ನನ್ನ ರಥವಾಗಿದೆ. ಬಹಳ ಜನ್ಮಗಳ ಅಂತಿಮದಲ್ಲಿ ನಾನು ಇವರನ್ನು ಆಧಾರವಾಗಿ ತೆಗೆದುಕೊಂಡಿದ್ದೇನೆ. ಇದು ಪುರುಷೋತ್ತಮ ಸಂಗಮಯುಗ, ಗೀತಾ ಭಾಗವಾಗಿದೆ, ಈಗ ಪವಿತ್ರತೆಯು ಮುಖ್ಯವಾಗಿದೆ. ಪತಿತರಿಂದ ಹೇಗೆ ಪಾವನರಾಗಬೇಕು ಎಂದು ಈ ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಸಾಧು-ಸಂತ ಮೊದಲಾದವರು ಇಂದಿಗೂ ಕೂಡ ದೇಹ ಸಹಿತವಾಗಿ ಎಲ್ಲವನ್ನೂ ಮರೆಯಿರಿ, ಒಬ್ಬ ತಂದೆಯನ್ನು ನೆನಪು ಮಾಡಿದರೆ ಮಾಯೆಯ ಎಲ್ಲಾ ಪಾಪಕರ್ಮಗಳು ಭಸ್ಮವಾಗುತ್ತದೆ ಎಂಬುದನ್ನು ಹೇಳುವುದಿಲ್ಲ. ಯಾವುದೇ ಗುರು ಈ ರೀತಿ ಎಂದೂ ಹೇಳುವುದಿಲ್ಲ.

ತಂದೆಯು ತಿಳಿಸುತ್ತಾರೆ - ಈ ಬ್ರಹ್ಮನು ಹೇಗಾಗುತ್ತಾರೆ? ಬಾಲ್ಯದಲ್ಲಿ ಹಳ್ಳಿಯ ಹುಡುಗನಾಗಿದ್ದರು, 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ. ಮೊದಲಿನಿಂದ ಹಿಡಿದು ಅಂತ್ಯದವರೆಗೆ ಅಂದಾಗ ಹೊಸ ಪ್ರಪಂಚವೇ ಮತ್ತೆ ಹಳೆಯದಾಗಿ ಬಿಡುತ್ತದೆ. ಈಗ ನೀವು ಮಕ್ಕಳ ಬುದ್ಧಿಯ ಬೀಗವು ತೆರೆದಿದೆ. ನೀವು ಇದನ್ನು ತಿಳಿದುಕೊಳ್ಳಬಹುದು, ಧಾರಣೆಯನ್ನೂ ಮಾಡಬಹುದು, ನೀವೀಗ ಬುದ್ಧಿವಂತರಾಗಿದ್ದೀರಿ ಮೊದಲು ಬುದ್ಧಿಹೀನರಾಗಿದ್ದಿರಿ. ಈ ಲಕ್ಷ್ಮೀ-ನಾರಾಯಣರು ಬುದ್ಧಿವಂತರಾಗಿದ್ದಾರೆ ಮತ್ತು ಇಲ್ಲಿನವರು ಬುದ್ಧಿಹೀನರಾಗಿದ್ದಾರೆ. ಮುಂದೆ ನೋಡಿ, ಇವರು ಸ್ವರ್ಗದ ಮಾಲೀಕರಲ್ಲವೆ. ಕೃಷ್ಣನು ಸ್ವರ್ಗದ ಮಾಲೀನಾಗಿದ್ದನು ಮತ್ತೆ ಈಗ ಅಂತಿಮ ಜನ್ಮದಲ್ಲಿ ಸಾಧಾರಣ ವ್ಯಕ್ತಿಯಾಗಿದ್ದಾರೆ. ನೀವು ಮಕ್ಕಳು ಇದನ್ನು ಧಾರಣೆ ಮಾಡಿ ಖಂಡಿತ ಪವಿತ್ರರಾಗಬೇಕಾಗಿದೆ. ಮುಖ್ಯವಾದುದು ಪವಿತ್ರತೆಯ ಮಾತಾಗಿದೆ. ಬಾಬಾ, ಮಾಯೆಯು ನಮ್ಮನ್ನು ಬೀಳಿಸಿ ಬಿಟ್ಟಿತು, ಕುದೃಷ್ಟಿಯಾಯಿತೆಂದು ಬರೆಯುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ, ನಾವೀಗ ಮನೆಗೆ ಹೋಗಬೇಕಾಗಿದೆ. ತಂದೆಯನ್ನು ನೆನಪು ಮಾಡಬೇಕಾಗಿದೆ. ಸ್ವಲ್ಪ ಸಮಯಕ್ಕಾಗಿ ಶರೀರ ನಿರ್ವಹಣೆಗಾಗಿ ಕರ್ಮ ಮಾಡಿ ಮತ್ತೆ ನಾವು ಹೊರಟು ಹೋಗುತ್ತೇವೆ. ಇವು ಹಳೆಯ ಪ್ರಪಂಚದ ವಿನಾಶಕ್ಕಾಗಿಯೇ ಯುದ್ಧವಾಗುತ್ತದೆ. ಅದು ಹೇಗಾಗುತ್ತದೆ ಎಂಬುದನ್ನೂ ಸಹ ನೀವು ನೋಡುವಿರಿ. ಬುದ್ಧಿಯಿಂದ ತಿಳಿದುಕೊಳ್ಳುತ್ತೀರಿ. ನಾವು ದೇವತೆಗಳಾಗುತ್ತೇವೆಂದರೆ ನಮಗೆ ಹೊಸ ಪ್ರಪಂಚವು ಬೇಕು ಆದ್ದರಿಂದ ವಿನಾಶ ಖಂಡಿತ ಆಗುವುದು. ನಾವು ಶ್ರೀಮತದನುಸಾರ ನಮ್ಮ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದೇವೆ.

ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ಸೇವೆಯಲ್ಲಿ ಉಪಸ್ಥಿತನಾಗುತ್ತೇನೆ. ನೀವೇ ಒತ್ತಾಯ ಮಾಡಿದಿರಿ - ನಾವು ಪತಿತರನ್ನು ಪಾವನ ಮಾಡಲು ಬನ್ನಿ ಎಂದು. ಈಗ ನಿಮ್ಮ ಕೂಗಿಗೆ ಓಗೊಟ್ಟು ಬಂದಿದ್ದೇನೆ. ನಿಮಗೆ ಬಹಳ ಸಹಜ ಮಾರ್ಗವನ್ನು ತಿಳಿಸುತ್ತೇನೆ - ಮನ್ಮನಾಭವ. ಭಗವಾನುವಾಚ ಇದೆಯಲ್ಲವೆ ಆದರೆ ಅದರಲ್ಲಿ ಕೇವಲ ಕೃಷ್ಣನ ಹೆಸರನ್ನು ಹಾಕಿದ್ದಾರೆ. ತಂದೆಯ ನಂತರ ಕೃಷ್ಣನಾಗಿದ್ದಾನೆ. ಇವರು ಪರಮಧಾಮದ ಮಾಲೀಕರು, ಕೃಷ್ಣನು ವಿಶ್ವದ ಮಾಲೀಕನಾಗಿದ್ದಾನೆ. ಸೂಕ್ಷ್ಮವತನದಲ್ಲಂತೂ ಏನೂ ಆಗುವುದಿಲ್ಲ. ಎಲ್ಲರಿಗಿಂತ ನಂಬರ್ವನ್ ಶ್ರೀಕೃಷ್ಣನಾಗಿದ್ದಾನೆ, ಅವನನ್ನು ಬಹಳ ಪ್ರೀತಿ ಮಾಡುತ್ತಾರೆ. ಉಳಿದವರಂತೂ ನಂತರದಲ್ಲಿ ಬಂದಿದ್ದಾರೆ. ಎಲ್ಲರೂ ಸ್ವರ್ಗದಲ್ಲಿ ಹೋಗಲು ಸಾಧ್ಯವಿಲ್ಲ. ಮಧುರಾತಿ ಮಧುರ ಮಕ್ಕಳಿಗೆ ಅಪಾರ ಖುಷಿಯಿರಬೇಕು. ಇಲ್ಲಿ ಕೃತಕ ಖುಷಿಯು ನಡೆಯುವುದಿಲ್ಲ, ಹೊರಗಿನಿಂದ ಭಿನ್ನ-ಭಿನ್ನ ಪ್ರಕಾರದ ಮಕ್ಕಳು ಬರುತ್ತಿದ್ದರು. ಎಂದೂ ಪವಿತ್ರರಾಗಿರುವುದೇ ಇಲ್ಲ. ತಂದೆಯು ತಿಳಿಸುತ್ತಿದ್ದರು - ವಿಕಾರದಲ್ಲಿ ಹೋಗುತ್ತೀರೆಂದರೆ ಮತ್ತೇಕೆ ಬರುತ್ತೀರಿ? ಎಂದು ಅದಕ್ಕೆ ಅವರು ಏನು ಮಾಡುವುದು? ನನಗೆ ಇರಲು ಆಗುವುದಿಲ್ಲ. ಪ್ರತಿನಿತ್ಯವೂ ಬರುತ್ತೇನೆ, ಬಹುಶಃ ಯಾವಾಗಲಾದರೂ ಅಂಥಹ ಬಾಣವು ನಾಟಿ ಬಿಡುವುದೇನು ತಾವಲ್ಲದೆ ಇನ್ನ್ಯಾರು ಸದ್ಗತಿ ಮಾಡುತ್ತಾರೆಂದು ಹೇಳುತ್ತಿದ್ದರು. ಬಂದು ಕುಳಿತು ಬಿಡುತ್ತಿದ್ದರು. ಮಾಯೆಯು ಬಹಳ ಪ್ರಬಲವಾಗಿದೆ, ತಂದೆಯು ನಮ್ಮನ್ನು ಪತಿತರಿಂದ ಪಾವನ ಹೂಗಳನ್ನಾಗಿ ಮಾಡುತ್ತಾರೆಂಬುದು ನಿಶ್ಚಯವೂ ಇದೆ ಆದರೆ ಏನು ಮಾಡುವುದು? ಸತ್ಯವನ್ನೂ ಹೇಳುತ್ತಿದ್ದರು - ಈಗ ಅವರು ಸುಧಾರಣೆಯಾಗಿರಬೇಕು. ಇವರ ಮೂಲಕವೇ ನಾನು ಸುಧಾರಣೆಯಾಗುತ್ತೇನೆಂದು ಅವರಿಗೆ ಈ ನಿಶ್ಚಯವೂ ಇತ್ತು.

ಈ ಸಮಯದಲ್ಲಿ ಎಷ್ಟೊಂದು ಮಂದಿ ಪಾತ್ರಧಾರಿಗಳಿದ್ದಾರೆ, ಒಬ್ಬರ ಮುಖ ಲಕ್ಷಣಗಳು ಇನ್ನೊಬ್ಬರಿಗೆ ಹೋಲುವುದಿಲ್ಲ. ಮತ್ತೆ ಕಲ್ಪದ ನಂತರ ಅದೇ ಮುಖ ಲಕ್ಷಣಗಳಿಂದ ಪಾತ್ರವನ್ನು ಪುನರಾವರ್ತಿಸುತ್ತೀರಿ. ಆತ್ಮಗಳೆಲ್ಲರೂ ನಿಗಧಿತವಾಗಿದ್ದಾರಲ್ಲವೆ. ಎಲ್ಲಾ ಪಾತ್ರಧಾರಿಗಳು ಬಹಳ ನಿಖರವಾಗಿ ಪಾತ್ರವನ್ನು ಅಭಿನಯಿಸುತ್ತಾ ಇರುತ್ತಾರೆ, ಸ್ವಲ್ಪವೂ ಅಂತರವಾಗಲು ಸಾಧ್ಯವಿಲ್ಲ. ಎಲ್ಲಾ ಆತ್ಮರು ಅವಿನಾಶಿಯಾಗಿದ್ದೀರಿ. ಅವರಲ್ಲಿ ಅವಿನಾಶಿ ಪಾತ್ರವೂ ನಿಗಧಿಯಾಗಿದೆ. ಎಷ್ಟೊಂದು ತಿಳಿಸುವ ಮಾತುಗಳಾಗಿವೆ. ಮಕ್ಕಳಿಗೆ ಎಷ್ಟೊಂದು ತಿಳಿಸುತ್ತೇನೆ ಆದರೂ ಮರೆತು ಹೋಗುತ್ತಾರೆ ಮತ್ತೆ ಅನ್ಯರಿಗೆ ತಿಳಿಸಲು ಆಗುವುದಿಲ್ಲ. ಇದೂ ಸಹ ಡ್ರಾಮಾದಲ್ಲಿ ಆಗುವುದಿದೆ. ಪ್ರತೀಕಲ್ಪ ರಾಜಧಾನಿಯಂತೂ ಸ್ಥಾಪನೆಯಾಗಲೇಬೇಕಾಗಿದೆ. ಸತ್ಯಯುಗದಲ್ಲಿ ಕೆಲವರೇ ಬರುತ್ತಾರೆ ಅದರಲ್ಲಿಯೂ ನಂಬರ್ವಾರ್. ಇಲ್ಲಿಯೂ ನಂಬರ್ವಾರ್ ಇದ್ದೀರಲ್ಲವೆ. ಒಬ್ಬರ ಪಾತ್ರವು ಒಬ್ಬರಿಗೇ ಗೊತ್ತು ಮತ್ತ್ಯಾರಿಗೂ ತಿಳಿಯುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸತ್ಯ ತಂದೆಯ ಜೊತೆ ಸದಾ ಸತ್ಯವಾಗಿರಬೇಕಾಗಿದೆ. ತಂದೆಯ ಮೇಲೆ ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ.

2. ಜ್ಞಾನವನ್ನು ಧಾರಣೆ ಮಾಡಿ ಬುದ್ಧಿವಂತರಾಗಬೇಕು. ಅಂತರಾಳದಿಂದ ಜಿಗರೀ ಖುಷಿಯಲ್ಲಿರಬೇಕಾಗಿದೆ. ಶ್ರೀಮತಕ್ಕೆ ವಿರುದ್ಧವಾಗಿ ಯಾವುದೇ ಕೆಲಸವನ್ನು ಮಾಡಿ ಖುಷಿಯನ್ನು ಕಳೆದುಕೊಳ್ಳಬಾರದು.

ವರದಾನ:
ಜ್ಞಾನದ ಗುಹ್ಯ ಮಾತುಗಳನ್ನು ಕೇಳಿ ಅವುಗಳನ್ನು ಸ್ವರೂಪದಲ್ಲಿ ತರುವಂತಹ ಜ್ಞಾನಿತ್ವ ಆತ್ಮ ಭವ.

ಜ್ಞಾನಿತ್ವ ಆತ್ಮರು ಪ್ರತಿ ಮಾತಿನ ಸ್ವರೂಪದ ಅನುಭವ ಮಾಡುತ್ತಾರೆ. ಹೇಗೆ ಕೇಳುವುದು ಚೆನ್ನಾಗಿದೆ ಎನ್ನಿಸುತ್ತದೆ, ಗುಹ್ಯ ಎಂದೂ ಅನ್ನಿಸುತ್ತದೆ ಆದರೆ ಕೇಳುವುದರ ಜೊತೆ-ಜೊತೆ ಅಳವಡಿಸಿಕೊಳ್ಳುವುದು ಅರ್ಥಾತ್ ಸ್ವರೂಪರಾಗುವುದು-ಇದರ ಅಭ್ಯಾಸ ಕೂಡ ಆಗಬೇಕು. ನಾನು ಆತ್ಮ ನಿರಾಕಾರನಾಗಿದ್ದೇನೆ-ಇದು ಪದೇ-ಪದೇ ಕೇಳುವಿರಿ ಆದರೆ ನಿರಾಕಾರ ಸ್ಥಿತಿಯ ಅನುಭವಿಯಾಗಿ ಕೇಳಿ. ಎಂತಹ ಪಾಯಿಂಟ್ ಅಂತಹ ಅನುಭವ. ಇದರಿಂದ ಶುದ್ಧ ಸಂಕಲ್ಪಗಳ ಖಜಾನೆ ಜಮಾ ಆಗುತ್ತಾ ಹೋಗುವುದು ಮತ್ತು ಬುದ್ಧಿ ಇದರಲ್ಲೇ ಯಾಗಿರುವುದು ಆಗ ವ್ಯರ್ಥ ಸಂಕಲ್ಪಗಳಿಂದ ಸಹಜವಾಗಿ ದೂರ ಹೋಗಿ ಬಿಡುವುದು.

ಸ್ಲೋಗನ್:
ಜ್ಞಾನ ಮತ್ತು ಅನುಭವದ ಡಬ್ಬಲ್ ಅಥಾರಿಟಿಯುಳ್ಳವರು ಮಸ್ತ್ ಫಕೀರ್ ರಮತಾ ಯೋಗಿಗಳಾಗಿದ್ದಾರೆ.


ಬ್ರಹ್ಮಾ ತಂದೆಯ ಸಮಾನ ಸಂಪನ್ನ ಸ್ಥಿತಿಯ ಅನುಭವ ಮಾಡಿರಿ:-
ಹೇಗೆ ಬ್ರಹ್ಮಾ ತಂದೆಯು ಉಪರಾಂ ಮತ್ತು ದೃಷ್ಟಾಂತ ಆಗಿರುತ್ತಾ ಸಂಪೂರ್ಣತೆಯನ್ನು ಸಾಕಾರದಲ್ಲಿ ತಂದರು, ಸಂಪೂರ್ಣ ಮತ್ತು ಸಾಕಾರವನ್ನು ಬೇರೆಯೆಂದು ಕಾಣಿಸುತ್ತಿರಲಿಲ್ಲ. ಇದೇ ರೀತಿ ಫಾಲೋ ಫಾದರ್ ಮಾಡಿರಿ. ಮೊದಲು ದೇಹದಿಂದ ಉಪರಾಂ ಅರ್ಥಾತ್ ಭಿನ್ನರಾಗಿರಿ, ನಂತರ ದೇಹದ ಸಂಬಂಧದ ಜೊತೆ ಜೊತೆಗೆ ತಮ್ಮ ಬುದ್ಧಿ ಹಾಗೂ ಸಂಸ್ಕಾರಗಳಿಂದ ಉಪರಾಂ ಆಗಿರಿ.