08.01.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮಗೆ
ನಶೆಯಿರಬೇಕು, ನಾವು ಬ್ರಾಹ್ಮಣರೇ ದೇವತೆಗಳಾಗುತ್ತೇವೆ, ನಾವು ಬ್ರಾಹ್ಮಣರಿಗೇ ತಂದೆಯ ಶ್ರೇಷ್ಠ ಮತ
ಸಿಗುತ್ತದೆ”
ಪ್ರಶ್ನೆ:
ಯಾರದು
ಬಿಸಿರಕ್ತ ಯೌವ್ವನವಾಗಿದೆಯೋ ಅವರಿಗೆ ಯಾವ ಉಮ್ಮಂಗ ಮತ್ತು ಯಾವ ನಶೆಯಿರಬೇಕು?
ಉತ್ತರ:
ಈ ಪ್ರಪಂಚ ಯಾವುದು ಹಳೆಯ ಕಬ್ಬಿಣದ ಯುಗವಾಗಿ ಬಿಟ್ಟಿದೆಯೋ ಅದನ್ನು ಹೊಸ ಸ್ವರ್ಣೀಮ ಯುಗವನ್ನಾಗಿ
ಮಾಡುವ ಹಳೆಯದರಿಂದ ಹೊಸದನ್ನಾಗಿ ಮಾಡುವ ಉಮ್ಮಂಗವಿರಬೇಕು. ಕನ್ಯೆಯರದು ಬಿಸಿರಕ್ತವಾಗಿದೆ ಅಂದಮೇಲೆ
ತಮ್ಮ ಜೊತೆಗಾರರನ್ನು ಮೇಲೆತ್ತಬೇಕು. ನಶೆಯು ಸ್ಥಿರವಾಗಿರಲಿ, ಭಾಷಣ ಮಾಡುವುದರಲ್ಲಿಯೂ ಬಹಳ
ಮಸ್ತಿಯಿರಬೇಕು.
ಗೀತೆ:
ರಾತ್ರಿಯ
ಪ್ರಯಾಣಿಕನೇ ಸುಸ್ತಾಗಬೇಡ........
ಓಂ ಶಾಂತಿ.
ಮಕ್ಕಳು ಈ ಗೀತೆಯ ಅರ್ಥವನ್ನಂತೂ ತಿಳಿದುಕೊಂಡಿರಿ. ಈಗ ಭಕ್ತಿಮಾರ್ಗದ ಘೋರ ಅಂಧಕಾರ ರಾತ್ರಿಯಂತೂ
ಮುಕ್ತಾಯವಾಗುತ್ತಿದೆ. ಮಕ್ಕಳಿಗೆ ಗೊತ್ತಿದೆ, ನಮಗೆ ಈಗ ಕಿರೀಟ ಸಿಗಲಿದೆ. ಇಲ್ಲಿ ಕುಳಿತಿದ್ದೀರಿ,
ಮನುಷ್ಯರಿಂದ ದೇವತೆಗಳಾಗುವ ಗುರಿ-ಧ್ಯೇಯವಿದೆ. ಹೇಗೆ ನೀವು ತಮ್ಮನ್ನು ಕೋಣವೆಂದು ತಿಳಿಯಿರಿ ಆಗ ಆ
ರೂಪವಾಗಿ ಬಿಡುತ್ತೀರೆಂದು ಸನ್ಯಾಸಿಗಳು ತಿಳಿಸುತ್ತಾರೆ, ಅದು ಭಕ್ತಿಮಾರ್ಗದ ದೃಷ್ಟಾಂತವಾಗಿದೆ.
ಹೇಗೆ ಈ ದೃಷ್ಟಾಂತವೂ ಇದೆ, ರಾಮನು ವಾನರ ಸೈನ್ಯವನ್ನು ಸಹಾಯಕ್ಕೆ ತೆಗೆದುಕೊಂಡನು. ಅಂದಾಗ
ನೀವಿಲ್ಲಿ ಕುಳಿತಿದ್ದೀರಿ, ನಿಮಗೆ ತಿಳಿದಿದೆ, ನಾವೇ ದೇವಿ-ದೇವತೆಗಳು, ಡಬ್ಬಲ್
ಕಿರೀಟಧಾರಿಗಳಾಗುತ್ತೇವೆ. ಹೇಗೆ ಶಾಲೆಯಲ್ಲಿ ಓದುತ್ತಾರೆಂದರೆ ನಾನು ಇದನ್ನು ಓದಿ ಡಾಕ್ಟರ್
ಆಗುವೆನು, ಇಂಜಿನಿಯರ್ ಆಗುವೆನೆಂದು ಹೇಳುತ್ತಾರೆ. ಹಾಗೆಯೇ ನೀವೂ ಸಹ ತಿಳಿದುಕೊಂಡಿದ್ದೀರಿ - ಈ
ವಿದ್ಯೆಯಿಂದ ನಾವೇ ದೇವಿ-ದೇವತೆಗಳಾಗುತ್ತಿದ್ದೇವೆ. ಈ ಶರೀರವನ್ನು ಬಿಡುತ್ತೇವೆ ಮತ್ತು ನಂತರದ
ಜನ್ಮದಲ್ಲಿ ನಮಗೆ ಕಿರೀಟ ಸಿಕ್ಕಿ ಬಿಡುತ್ತದೆ. ಇದಂತೂ ಬಹಳ ಕೊಳಕು, ಛೀ ಛೀ ಪ್ರಪಂಚವಲ್ಲವೆ. ಹೊಸ
ಪ್ರಪಂಚವು ಸುಂದರ ಪ್ರಪಂಚವಾಗಿದೆ, ಹಳೆಯ ಪ್ರಪಂಚವು ಸಂಪೂರ್ಣ ಕನಿಷ್ಟ ಪ್ರಪಂಚವಾಗಿದೆ. ಇದಂತೂ
ಸಮಾಪ್ತಿಯಾಗುವುದಿದೆ. ಹೊಸ ಪ್ರಪಂಚದ ಮಾಲೀಕರನ್ನಾಗಿ ಮಾಡುವವರು ಅವಶ್ಯವಾಗಿ ವಿಶ್ವದ ರಚಯಿತನೇ
ಆಗಿರುವರು ಮತ್ತ್ಯಾರೂ ಓದಿಸಲು ಸಾಧ್ಯವಿಲ್ಲ. ಶಿವ ತಂದೆಯೇ ನಿಮಗೆ ಓದಿಸಿ ಕಲಿಸಿ ಕೊಡುತ್ತಾರೆ.
ತಂದೆಯು ತಿಳಿಸಿದ್ದಾರೆ - ಪೂರ್ಣ ಆತ್ಮಾಭಿಮಾನಿಯಾಗಿ ಬಿಟ್ಟರೆ ಮತ್ತೇನು ಬೇಕು! ನೀವು
ಬ್ರಾಹ್ಮಣರಂತೂ ಆಗಿಯೇ ಇದ್ದೀರಿ, ನಾವು ದೇವತೆಗಳಾಗುತ್ತಿದ್ದೇವೆ ಎಂಬುದು ನಿಮಗೆ ಗೊತ್ತಿದೆ.
ದೇವತೆಗಳು ಎಷ್ಟೊಂದು ಪವಿತ್ರರಾಗಿದ್ದರು! ಇಲ್ಲಿ ಎಷ್ಟು ಪತಿತ ಮನುಷ್ಯರಿದ್ದಾರೆ. ಭಲೆ ಚಹರೆಯು
ಮನುಷ್ಯರದಾಗಿದೆ ಆದರೆ ಗುಣಗಳು ನೋಡಿ, ಹೇಗಿವೆ! ಯಾರು ದೇವತೆಗಳ ಪೂಜಾರಿಯಾಗಿದ್ದಾರೆಯೋ ಅವರೂ ಸಹ
ತಾವು ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗಿದ್ದೀರಿ.... ನಾವು ವಿಕಾರಿ, ಪಾಪಿಗಳಾಗಿದ್ದೇವೆ
ಎಂದು ದೇವತೆಗಳ ಮುಂದೆ ಮಹಿಮೆ ಮಾಡುತ್ತಾರೆ. ಭಲೆ ಅವರದೂ ಸಹ ಮನುಷ್ಯರ ಚಹರೆಯೇ ಆಗಿದೆ ಆದರೆ ಅವರ
ಬಳಿ ಹೋಗಿ ಅವರ ಮಹಿಮೆ ಮಾಡುತ್ತಾರೆ, ತಮ್ಮನ್ನು ಕೊಳಕು ವಿಕಾರಿಗಳೆಂದು ಹೇಳುತ್ತಾರೆ. ನಮ್ಮಲ್ಲಿ
ಯಾವುದೇ ಗುಣವಿಲ್ಲ. ಮನುಷ್ಯರೆಂದರೆ ಮನುಷ್ಯರೇ. ನೀವೀಗ ತಿಳಿದುಕೊಳ್ಳುತ್ತೀರಿ - ನಾವಂತೂ ಈಗ
ಪರಿವರ್ತನೆಯಾಗಿ ಹೋಗಿ ದೇವತೆಗಳಾಗುತ್ತೇವೆ. ಕೃಷ್ಣ ಪುರಿಯಲ್ಲಿ ಹೋಗಬೇಕೆಂದು ಕೃಷ್ಣನ ಪೂಜೆ
ಮಾಡುತ್ತಾರೆ. ಆದರೆ ಯಾವಾಗ ಬರುತ್ತಾರೆಂದು ತಿಳಿದುಕೊಂಡಿಲ್ಲ. ಭಗವಂತನು ಬಂದು ಭಕ್ತಿಯ ಫಲ
ಕೊಡುವರೆಂದು ಭಕ್ತಿ ಮಾಡುತ್ತಿರುತ್ತಾರೆ. ಮೊದಲಂತೂ ನಿಮಗೆ ಈ ನಿಶ್ಚಯವಿರಬೇಕು - ನಮಗೆ ಯಾರು
ಓದಿಸುತ್ತಾರೆ! ಇದು ಶ್ರೀ ಶ್ರೀ ಶಿವ ತಂದೆಯ ಮತವಾಗಿದೆ, ಶಿವ ತಂದೆಯೇ ನಿಮಗೆ ಶ್ರೀಮತವನ್ನು
ಕೊಡುತ್ತಿದ್ದಾರೆ, ಯಾರಿಗೆ ಇದು ಗೊತ್ತಿಲ್ಲವೋ ಅವರು ಶ್ರೇಷ್ಠರಾಗಲು ಹೇಗೆ ಸಾಧ್ಯ. ಇಷ್ಟೊಂದು
ಮಂದಿ ಬ್ರಾಹ್ಮಣರು ಶ್ರೀ ಶ್ರೀ ಶಿವ ತಂದೆಯ ಮತದಂತೆ ನಡೆಯುತ್ತಾರೆ. ಪರಮಾತ್ಮನ ಮತವೇ
ಶ್ರೇಷ್ಠರನ್ನಾಗಿ ಮಾಡುತ್ತದೆ. ಯಾರ ಅದೃಷ್ಟದಲ್ಲಿದೆಯೋ ಅವರ ಬುದ್ಧಿಯಲ್ಲಿಯೇ ಕುಳಿತುಕೊಳ್ಳುವುದು.
ಇಲ್ಲದಿದ್ದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಯಾವಾಗ ಅರ್ಥ ಮಾಡಿಕೊಳ್ಳುವರೋ ಆಗ ಖುಷಿಯಾಗಿ
ಸಹಯೋಗ ನೀಡತೊಡಗುತ್ತಾರೆ. ಕೆಲವರಂತೂ ತಿಳಿದುಕೊಂಡೇ ಇಲ್ಲ, ಇವರು ಯಾರು ಎಂಬುದು ಅವರಿಗೇನು
ಗೊತ್ತಿದೆ. ಆದ್ದರಿಂದ ತಂದೆಯು ಯಾರೊಂದಿಗೂ ಮಿಲನ ಮಾಡುವುದೂ ಇಲ್ಲ. ಆ ಮನುಷ್ಯರಂತು ಇನ್ನೂ ತಮ್ಮ
ಮತವನ್ನೇ ಕೊಡತೊಡಗುತ್ತಾರೆ. ಶ್ರೀಮತವನ್ನು ಅರಿತುಕೊಳ್ಳದ ಕಾರಣ ಅವರಿಗೂ ಸಹ ತಮ್ಮ ಮತವನ್ನು
ಕೊಡಲಾರಂಭಿಸುತ್ತಾರೆ. ತಂದೆಯು ನೀವು ಮಕ್ಕಳನ್ನು ಶ್ರೇಷ್ಠರನ್ನಾಗಿ ಮಾಡುವುದಕ್ಕಾಗಿಯೇ
ಬಂದಿದ್ದಾರೆ. ಮಕ್ಕಳಿಗೆ ತಿಳಿದಿದೆ - 5000 ವರ್ಷಗಳ ಮೊದಲಿನ ತರಹ ತಂದೆಯು ಬಂದು ತಮ್ಮೊಂದಿಗೆ
ಮಿಲನ ಮಾಡಿದ್ದಾರೆ. ಯಾರಿಗೆ ತಿಳಿದಿಲ್ಲವೋ ಅವರು ಹೇಗೆ ಪ್ರತ್ಯುತ್ತರ ನೀಡುವರು! ಮಕ್ಕಳಿಗೆ
ವಿದ್ಯೆಯ ಬಹಳ ನಶೆಯಿರಬೇಕು, ಇದು ಬಹಳ ಶ್ರೇಷ್ಠ ವಿದ್ಯೆಯಾಗಿದೆ. ಆದರೆ ಮಾಯೆಯೂ ಸಹ ವಿರೋಧಿಯಾಗಿದೆ.
ನಿಮಗೆ ತಿಳಿದಿದೆ - ನಾವು ಇಂತಹ ವಿದ್ಯೆಯನ್ನು ಓದುತ್ತೇವೆ ಯಾವುದರಿಂದ ನಮಗೆ ಡಬ್ಬಲ್ ಕಿರೀಟವು
ಸಿಗುವುದು. ಭವಿಷ್ಯ ಜನ್ಮ-ಜನ್ಮಾಂತರಕ್ಕಾಗಿ ಡಬ್ಬಲ್ ಕಿರೀಟಧಾರಿಗಳಾಗುತ್ತೇವೆ ಅಂದಮೇಲೆ ಇದಕ್ಕಾಗಿ
ಪೂರ್ಣ ಪುರುಷಾರ್ಥ ಮಾಡಬೇಕಲ್ಲವೆ. ಇದಕ್ಕೆ ರಾಜಯೋಗವೆಂದು ಹೇಳಲಾಗುತ್ತದೆ. ಎಷ್ಟು ಅದ್ಭುತವಾಗಿದೆ!
ತಂದೆಯು ಯಾವಾಗಲೂ ತಿಳಿಸುತ್ತಾರೆ - ಲಕ್ಷ್ಮೀ-ನಾರಾಯಣರ ಮಂದಿರದಲ್ಲಿ ಹೋಗಿ ಪೂಜಾರಿಗಳಿಗೂ ಸಹ ನೀವು
ತಿಳಿಸಿ - ಪೂಜಾರಿಗಳೂ ಸಹ ಮತ್ತೆ ಅನ್ಯರಿಗೆ ತಿಳಿಸಲಿ - ಈ ಲಕ್ಷ್ಮೀ-ನಾರಾಯಣರಿಗೂ ಈ ಪದವಿ ಹೇಗೆ
ಸಿಕ್ಕಿತು? ಇವರು ವಿಶ್ವದ ಮಾಲೀಕರು ಹೇಗಾದರು? ಹೀಗೆ ತಿಳಿಸುವುದರಿಂದ ಪೂಜಾರಿಗಳಿಗೂ ಮಾನ್ಯತೆ
ಸಿಗುವುದು. ನೀವು ಹೇಳಿರಿ - ನಾವು ಈ ಲಕ್ಷ್ಮೀ-ನಾರಾಯಣರಿಗೆ ಈ ರಾಜ್ಯವು ಹೇಗೆ ಸಿಕ್ಕಿತು
ಎಂಬುದನ್ನು ನಿಮಗೆ ತಿಳಿಸುತ್ತೇವೆ. ಗೀತೆಯಲ್ಲಿಯೂ ಭಗವಾನುವಾಚ ಇದೆಯಲ್ಲವೆ - ನಾನು ನಿಮಗೆ
ರಾಜಯೋಗವನ್ನು ಕಲಿಸಿ ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ನೀವು ಸ್ವರ್ಗವಾಸಿಗಳಾಗುತ್ತೀರಲ್ಲವೆ
ಅಂದಮೇಲೆ ನಾವೇ ಈ ರೀತಿಯಾಗುತ್ತೇವೆಂದು ನೀವು ಮಕ್ಕಳಿಗೆ ಎಷ್ಟೊಂದು ನಶೆಯಿರಬೇಕು! ತಮ್ಮ ಚಿತ್ರ
ಹಾಗೂ ರಾಜಧಾನಿಯ ಚಿತ್ರ, ಇದರ ಜೊತೆಯಲ್ಲಿ ತೆಗೆಯಿರಿ. ಕೆಳಗೆ ನಿಮ್ಮ ಚಿತ್ರ, ಮೇಲೆ ರಾಜಧಾನಿಯ
ಚಿತ್ರವಿರಲಿ. ಇದರಲ್ಲಿ ಖರ್ಚೇನೂ ಇಲ್ಲ. ರಾಜನ ಪೋಷಾಕ್ ಕೂಡಲೇ ಮಾಡಿಸಬಹುದು.
ದೇವತೆಗಳಾಗುತ್ತಿದ್ದೇವೆ ಎಂಬುದು ಪದೇ-ಪದೇ ನೆನಪಿರುತ್ತದೆ. ಭಲೆ ಮೇಲ್ಭಾಗದಲ್ಲಿ ಶಿವ ತಂದೆಯ
ಚಿತ್ರವೂ ಇರಲಿ. ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ, ಈ ಶರೀರವನ್ನು ಬಿಟ್ಟು ಹೋಗಿ
ದೇವತೆಗಳಾಗುತ್ತೀರಿ ಏಕೆಂದರೆ ಈ ರಾಜಯೋಗವನ್ನು ಕಲಿಯುತ್ತಿದ್ದೀರಿ. ಈ ಚಿತ್ರವೂ ಸಹ ನಿಮಗೆ ಬಹಳ
ಸಹಯೋಗ ಕೊಡುತ್ತದೆ. ಮೇಲೆ ಶಿವ ಕೆಳಗಡೆ ರಾಜಧಾನಿಯ ಚಿತ್ರ. ಕೆಳಗಡೆ ನಿಮ್ಮ ಸಾಧಾರಣ ಚಿತ್ರವಿರಲಿ,
ಶಿವ ತಂದೆಯಿಂದ ರಾಜಯೋಗವನ್ನು ಕಲಿತು ನಾವೇ ದೇವತೆಗಳು, ಡಬ್ಬಲ್ ಕಿರೀಟಧಾರಿಗಳಾಗುತ್ತಿದ್ದೇವೆ
ಎಂದು ಬರೆಯಲ್ಪಟ್ಟಿರಲಿ. ಈ ಚಿತ್ರವಿದ್ದಾಗ ಯಾರೇ ಕೇಳಿದರೂ ನಮಗೆ ಕಲಿಸುವವರು ಈ ಶಿವ
ತಂದೆಯಾಗಿದ್ದಾರೆ ಎಂಬುದನ್ನು ನಾವು ತಿಳಿಸಿಕೊಡಬಹುದು. ಚಿತ್ರವನ್ನು ನೋಡುತ್ತಿದ್ದಂತೆಯೇ
ಮಕ್ಕಳಿಗೆ ನಶೆಯೇರುವುದು. ಭಲೆ ಅಂಗಡಿಯಲ್ಲಿಯೂ ಈ ಚಿತ್ರವನ್ನಿಡಿ. ಭಕ್ತಿಮಾರ್ಗದಲ್ಲಿ ಬ್ರಹ್ಮಾ
ತಂದೆಯು ನಾರಾಯಣನ ಚಿತ್ರವನ್ನು ಇಟ್ಟುಕೊಳ್ಳುತ್ತಿದ್ದರು. ಜೇಬಿನಲ್ಲಿಯೂ ಇರುತ್ತಿತ್ತು, ನೀವೂ ಸಹ
ತಮ್ಮ ಚಿತ್ರವನ್ನಿಟ್ಟುಕೊಳ್ಳಿ ಆಗ ನಾವೇ ದೇವಿ-ದೇವತೆಗಳಾಗುತ್ತಿದ್ದೇವೆ ಎಂಬುದು ನೆನಪಿರುವುದು.
ತಂದೆಯನ್ನು ನೆನಪು ಮಾಡುವ ಉಪಾಯವನ್ನು ಹುಡುಕಬೇಕು. ತಂದೆಯನ್ನು ಮರೆಯುವುದರಿಂದಲೇ
ಕೆಳಗಿಳಿಯುತ್ತೇವೆ. ವಿಕಾರದಲ್ಲಿ ಬೀಳುವುದರಿಂದ ನಾಚಿಕೆಯಾಗುತ್ತದೆ - ಈಗಂತೂ ನಾವು ಈ
ದೇವತೆಗಳಾಗಲು ಸಾಧ್ಯವಿಲ್ಲವೆಂದು ಹೃದಯ ವಿಧೀರ್ಣವಾಗುವುದು. ನಾವೀಗ ಹೇಗೆ ದೇವತೆಗಳಾಗುವೆವು?
ತಂದೆಯು ತಿಳಿಸುತ್ತಾರೆ - ವಿಕಾರದಲ್ಲಿ ಬೀಳುವವರ ಚಿತ್ರವನ್ನು ತೆಗೆದು ಹಾಕಿ. ತಿಳಿಸಿ - ನೀವು
ಸ್ವರ್ಗದಲ್ಲಿ ಹೋಗಲು ಯೋಗ್ಯರಲ್ಲ, ನಿಮ್ಮ ಪಾಸ್ಪೋರ್ಟ್ ಸಮಾಪ್ತಿ. ನಾವು ಕೆಳಗೆ ಬಿದ್ದೆವು, ಈಗ
ನಾವು ಸ್ವರ್ಗದಲ್ಲಿ ಹೇಗೆ ಹೋಗಲು ಸಾಧ್ಯ ಎಂಬುದನ್ನು ಅವರೂ ಸಹ ಆಲೋಚಿಸುತ್ತಾರೆ. ಹೇಗೆ ನಾರದನ
ಉದಾಹರಣೆ ಕೊಡುತ್ತಾರೆ. ನೀನು ನಿನ್ನ ಮುಖವನ್ನು ನೋಡಿಕೊ, ನೀನು ಲಕ್ಷ್ಮಿಯನ್ನು ವರಿಸಲು
ಯೋಗ್ಯನಾಗಿದ್ದೀಯಾ ಎಂದು ನಾರದನಿಗೆ ಹೇಳಿದರು. ಮುಖ ನೋಡಿಕೊಂಡಾಗ ಅದು ಕೋತಿಯ ತರಹ ಕಂಡು ಬಂದಿತು.
ಹಾಗೆಯೇ ಮನುಷ್ಯರಿಗೂ ಸಹ ನಮ್ಮಲ್ಲಿ ಈ ವಿಕಾರವಿದೆ, ಅಂದಮೇಲೆ ನಾವು ಶ್ರೀ ನಾರಾಯಣ ಅಥವಾ
ಲಕ್ಷ್ಮಿಯನ್ನು ಹೇಗೆ ವರಿಸಲು ಸಾಧ್ಯ ಎಂದು ನಾಚಿಕೆ ಬರುವುದು. ತಂದೆಯು ಎಲ್ಲಾ ಯುಕ್ತಿಗಳನ್ನು
ತಿಳಿಸುತ್ತಾರೆ ಆದರೆ ವಿಶ್ವಾಸವನ್ನಿಡಬೇಕಲ್ಲವೆ. ವಿಕಾರದ ನಶೆಯು ಬರುತ್ತಿದ್ದರೆ ಈ ಲೆಕ್ಕದಿಂದ
ನಾವು ರಾಜಾಧಿರಾಜ ಡಬ್ಬಲ್ ಕಿರೀಟಧಾರಿಗಳು ಹೇಗಾಗಲು ಸಾಧ್ಯ ಎಂಬುದನ್ನು ತಿಳಿದುಕೊಳ್ಳುವರು.
ಪುರುಷಾರ್ಥವನ್ನಂತೂ ಮಾಡಬೇಕಲ್ಲವೆ. ಇಂತಿಂತಹ ಯುಕ್ತಿಗಳನ್ನು ರಚಿಸಿ ಎಲ್ಲರಿಗೂ ತಿಳಿಸುತ್ತಾ ಇರಿ
ಎಂದು ತಂದೆಯು ಸಲಹೆ ನೀಡುತ್ತಿರುತ್ತಾರೆ. ಈ ರಾಜಧಾನಿಯ ಸ್ಥಾಪನೆಯಾಗುತ್ತಿದೆ, ವಿನಾಶವು
ಸನ್ಮುಖದಲ್ಲಿ ನಿಂತಿದೆ. ದಿನ-ಪ್ರತಿದಿನ ಬಿರುಗಾಳಿಗಳು ಜೋರಾಗುತ್ತಾ ಹೋಗುತ್ತವೆ. ಬಾಂಬು
ಇತ್ಯಾದಿಗಳೂ ಸಹ ತಯಾರಾಗುತ್ತಿವೆ. ನೀವು ಭವಿಷ್ಯ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿಯೇ ಈ
ವಿದ್ಯೆಯನ್ನು ಓದುತ್ತೀರಿ. ನೀವು ಒಂದೇ ಬಾರಿ ಪತಿತರಿಂದ ಪಾವನರಾಗುತ್ತೀರಿ. ನಾವು
ನರಕವಾಸಿಗಳಾಗಿದ್ದೇವೆ ಎಂಬುದನ್ನು ಮನುಷ್ಯರು ತಿಳಿದುಕೊಳ್ಳುವುದಿಲ್ಲ ಏಕೆಂದರೆ ಕಲ್ಲು
ಬುದ್ಧಿಯವರಾಗಿದ್ದಾರೆ. ನೀವೀಗ ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರಾಗುತ್ತಿದ್ದೀರಿ.
ಅದೃಷ್ಟದಲ್ಲಿದ್ದರೆ ಕೂಡಲೇ ತಿಳಿದುಕೊಳ್ಳುವರು, ಇಲ್ಲವೆಂದರೆ ನೀವು ಎಷ್ಟಾದರೂ ತಲೆ ಕೆಡಿಸಿಕೊಳ್ಳಿ,
ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ತಂದೆಯನ್ನೇ ತಿಳಿದುಕೊಳ್ಳದಿದ್ದರೆ ಅವರು
ನಾಸ್ತಿಕರಾಗಿದ್ದಾರೆ ಅರ್ಥಾತ್ ಧನಿಕರಲ್ಲ ಅಂದಮೇಲೆ ಅವರನ್ನು ಧಣಿಕರನ್ನಾಗಿ ಮಾಡಬೇಕಲ್ಲವೆ.
ಯಾವಾಗ ಶಿವ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಇಲ್ಲಿ ಯಾರಿಗೆ ಜ್ಞಾನವಿದೆಯೋ ಅವರು ತಮ್ಮ
ಮಕ್ಕಳನ್ನು ವಿಕಾರಗಳಿಂದ ರಕ್ಷಿಸುತ್ತಿರುತ್ತಾರೆ. ಅಜ್ಞಾನಿಗಳು ತಮ್ಮಂತೆ ಮಕ್ಕಳನ್ನೂ ವಿಕಾರದಲ್ಲಿ
ಸಿಲುಕಿಸುತ್ತಾರೆ. ನಿಮಗೆ ತಿಳಿದಿದೆ - ಇಲ್ಲಿ ವಿಕಾರದಿಂದ ಪಾರು ಮಾಡಲಾಗುತ್ತದೆ. ಮೊದಲಂತು
ಕನ್ಯೆಯರನ್ನು ಪಾರು ಮಾಡಬೇಕು. ತಂದೆ-ತಾಯಿಗಳು ಹೇಗೆ ಮಕ್ಕಳನ್ನು ವಿಕಾರದಲ್ಲಿ ಬೀಳಿಸುವ ಪೆಟ್ಟು
ಕೊಡುತ್ತಾರೆ. ನಿಮಗೆ ತಿಳಿದಿದೆ, ಇದು ಭ್ರಷ್ಟಾಚಾರಿ ಪ್ರಪಂಚವಾಗಿದೆ. ಶ್ರೇಷ್ಠಾಚಾರಿ
ಪ್ರಪಂಚವನ್ನು ಬಯಸುತ್ತಾರೆ. ಭಗವಾನುವಾಚ - ನಾನು ಶ್ರೇಷ್ಠಾಚಾರಿಗಳನ್ನಾಗಿ ಮಾಡಲು ಬರುತ್ತೇನೆ
ಅಂದಮೇಲೆ ಈಗ ಎಲ್ಲರೂ ಭ್ರಷ್ಟಾಚಾರಿಗಳಾಗಿದ್ದಾರೆ. ನಾನು ಎಲ್ಲರ ಉದ್ಧಾರ ಮಾಡುತ್ತೇನೆ. ಭಗವಂತನೇ
ಸಾಧು-ಸಂತ ಮೊದಲಾದವರೆಲ್ಲರೂ ಉದ್ಧಾರ ಮಾಡಲು ಬರಬೇಕಾಗಿದೆ ಎಂದು ಗೀತೆಯಲ್ಲಿಯೂ ಬರೆಯಲ್ಪಟ್ಟಿದೆ.
ಒಬ್ಬ ಭಗವಂತ ತಂದೆಯೇ ಬಂದು ಎಲ್ಲರ ಉದ್ಧಾರ ಮಾಡುತ್ತಾರೆ. ನೀವೀಗ ಆಶ್ಚರ್ಯ ಪಡುತ್ತೀರಿ -
ಮನುಷ್ಯರು ಎಷ್ಟೊಂದು ಕಲ್ಲು ಬುದ್ಧಿಯವರಾಗಿದ್ದಾರೆ! ಈ ಸಮಯದಲ್ಲಿ ದೊಡ್ಡ-ದೊಡ್ಡವರಿಗೆ ಒಂದುವೇಳೆ
ಗೀತೆಯ ಭಗವಂತನು ಶಿವನಾಗಿದ್ದಾರೆ ಎಂಬುದು ಅರ್ಥವಾಗಿ ಬಿಟ್ಟರೆ ಏನಾಗುವುದೋ ಗೊತ್ತಿಲ್ಲ.
ಹಾಹಾಕಾರವು ಏಳುತ್ತದೆ. ಆದರೆ ಇನ್ನೂ ತಡವಿದೆ. ಇಲ್ಲದಿದ್ದರೆ ಎಲ್ಲರ ಸಿಂಹಾಸನಗಳು ಒಮ್ಮೆಲೆ
ಅಲುಗಾಡುತ್ತಿದ್ದವು. ಅನೇಕರ ಸಿಂಹಾಸನಗಳು ಅಲುಗಾಡುತ್ತವೆಯಲ್ಲವೆ. ಯುದ್ಧವು ಆರಂಭವಾದಾಗ
ಅರ್ಥವಾಗುತ್ತದೆ, ಇವರ ಸಿಂಹಾಸನವು ಅಲುಗಾಡುತ್ತಿದೆ, ಈಗ ಇಳಿಯುವವರಿದ್ದಾರೆ ಎಂದು. ಒಂದುವೇಳೆ
ಈಗಲೇ ಎಲ್ಲರ ಸಿಂಹಾಸನಗಳು ಅಲುಗಾಡಿದರೆ ಬಹಳ ಏರುಪೇರಾಗಿ ಬಿಡುವುದು. ಇದು ಮುಂದೆ ನಡೆಯಲಿದೆ.
ಪತಿತ-ಪಾವನ, ಸರ್ವರ ಸದ್ಗತಿದಾತನೇ ಹೇಳುತ್ತಾರೆ - ನಾನು ಬ್ರಹ್ಮಾರವರ ತನುವಿನಿಂದ ಸ್ಥಾಪನೆ
ಮಾಡುತ್ತಿದ್ದೇನೆ. ಸರ್ವರ ಸದ್ಗತಿ ಅರ್ಥಾತ್ ಉದ್ಧಾರ ಮಾಡುತ್ತಿದ್ದೇನೆ. ಭಗವಾನುವಾಚ - ಇದು ಪತಿತ
ಪ್ರಪಂಚವಾಗಿದೆ, ನಾನು ಇವರೆಲ್ಲರ ಉದ್ಧಾರ ಮಾಡಬೇಕಾಗಿದೆ. ಈಗ ಎಲ್ಲರೂ ಪತಿತರಾಗಿದ್ದಾರೆ, ಅಂದಮೇಲೆ
ಪತಿತರು ಅನ್ಯರನ್ನು ಹೇಗೆ ಪಾವನ ಮಾಡುವರು? ಮೊದಲು ಸ್ವಯಂ ಪಾವನನಾದಾಗ ಮತ್ತೆ ತನ್ನ
ಅನುಯಾಯಿಗಳನ್ನು ಪಾವನ ಮಾಡಬಹುದು. ನಿಮಗೆ ಭಾಷಣ ಮಾಡುವುದರಲ್ಲಿ ಬಹಳ ಮಸ್ತಿಯಿರಬೇಕು. ಕನ್ಯೆಯರದು
ಬಿಸಿರಕ್ತವಾಗಿದೆ. ನೀವು ಹಳೆಯದರಿಂದ ಹೊಸದನ್ನಾಗಿ ಮಾಡುತ್ತಿದ್ದೀರಿ. ನಿಮ್ಮ ಆತ್ಮವು ಯಾವುದು
ಹಳೆಯ ಕಬ್ಬಿಣದ ಸಮಾನವಾಗಿರುವುದೋ ಅದು ಹೊಸ ಸ್ವರ್ಣೀಮದಂತೆ ಆಗುತ್ತದೆ. ತುಕ್ಕು ಬಿಡುತ್ತಾ
ಹೋಗುತ್ತದೆ ಅಂದಾಗ ಮಕ್ಕಳಿಗೆ ಬಹಳ ಉಮ್ಮಂಗವಿರಬೇಕು. ನಶೆಯು ಸ್ಥಿರವಾಗಿರಬೇಕು. ತಮ್ಮ
ಜೊತೆಗಾರರನ್ನೂ ಮೇಲೆತ್ತಬೇಕಾಗಿದೆ. ತಾಯಿ ಗುರು ಎಂದು ಗಾಯನವಿದೆ. ತಾಯಿಯು ಯಾವಾಗ
ಗುರುವಾಗುತ್ತಾಳೆ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಜಗದಂಬೆಯೇ ಮತ್ತೆ ರಾಜ
ರಾಜೇಶ್ವರಿಯಾಗುತ್ತಾರೆ ಮತ್ತೆ ಅಲ್ಲಿ ಯಾವುದೇ ಗುರು ಇರುವುದೇ ಇಲ್ಲ. ಗುರುವಿನ ಗೊಂದಲ ಈಗ
ನಡೆಯುತ್ತದೆ. ತಂದೆಯು ಬಂದು ಮಾತೆಯರ ಮೇಲೆ ಜ್ಞಾನಾಮೃತದ ಕಳಸವನ್ನಿಡುತ್ತಾರೆ, ಆರಂಭದಿಂದ ಇದೇ
ರೀತಿಯಾಗುತ್ತದೆ. ಸೇವಾಕೇಂದ್ರಗಳಿಗಾಗಿಯೂ ಬ್ರಹ್ಮಾಕುಮಾರಿಯರು ಬೇಕೆಂದೇ ಹೇಳುತ್ತಾರೆ. ತಾವೇ
ನಡೆಸಿ, ತಮಗೆ ಧೈರ್ಯವಿಲ್ಲವೆ ಎಂದು ತಂದೆಯು ಹೇಳುತ್ತಾರೆ ಅದಕ್ಕೆ ಇಲ್ಲ ಬಾಬಾ ನಮಗೆ ಶಿಕ್ಷಕಿ
ಸಹೋದರಿ ಬೇಕೆಂದು ಹೇಳುತ್ತಾರೆ. ಇದೂ ಸರಿಯಾಗಿದೆ, ಗೌರವ ಕೊಡುತ್ತಾರೆ.
ಇತ್ತೀಚಿನ ಪ್ರಪಂಚದಲ್ಲಿ ಒಬ್ಬರು ಇನ್ನೊಬ್ಬರಿಗೆ ತೋರ್ಪಡಿಕೆಯ ಮಾನ್ಯತೆಯನ್ನು ನೀಡುತ್ತಾರೆ. ಇಂದು
ಪ್ರಧಾನ ಮಂತ್ರಿಯಾಗಿದ್ದರು, ನಾಳೆ ಅವರನ್ನು ಸ್ಥಾನದಿಂದ ಇಳಿಸಿ ಬಿಡುತ್ತಾರೆ. ಸ್ಥಿರವಾದ ಪದವಿಯು
ಯಾರಿಗೂ ಸಿಗುವುದಿಲ್ಲ. ಈ ಸಮಯದಲ್ಲಿ ನೀವು ಮಕ್ಕಳಿಗೆ ಶಾಶ್ವತ ರಾಜ್ಯಭಾಗ್ಯವು ಸಿಗುತ್ತದೆ.
ತಂದೆಯು ನಿಮಗೆ ಎಷ್ಟು ಪ್ರಕಾರದಿಂದ ತಿಳಿಸುತ್ತಾರೆ. ತಮ್ಮನ್ನು ಸದಾ ಹರ್ಷಿತವಾಗಿಟ್ಟುಕೊಳ್ಳಲು
ಬಹಳ ಒಳ್ಳೊಳ್ಳೆಯ ಯುಕ್ತಿಯನ್ನು ತಿಳಿಸುತ್ತಾರೆ. ಶುಭ ಭಾವನೆಯನ್ನಿಡಬೇಕಲ್ಲವೆ. ಓಹೋ! ನಾವು ಈ
ಲಕ್ಷ್ಮೀ-ನಾರಾಯಣರಾಗುತ್ತೇವೆ! ಮತ್ತೆ ಒಂದುವೇಳೆ ಯಾರ ಅದೃಷ್ಟದಲ್ಲಿಲ್ಲವೋ ಅವರು ಪುರುಷಾರ್ಥವೇನು
ಮಾಡುವರು! ತಂದೆಯಂತೂ ಪುರುಷಾರ್ಥದ ಸಲಹೆ ಕೊಡುತ್ತಾರಲ್ಲವೆ. ಪುರುಷಾರ್ಥವು ವ್ಯರ್ಥವಾಗಿ
ಹೋಗುವುದಿಲ್ಲ, ಇದಂತೂ ಸಫಲವಾಗುತ್ತಾ ಹೋಗುವುದು. ರಾಜಧಾನಿಯು ಸ್ಥಾಪನೆಯಾಗಿಯೇ ಆಗುವುದು.
ಮಹಾಭಾರತದ ಯುದ್ಧದ ಮೂಲಕ ವಿನಾಶವೂ ಆಗಲೇಬೇಕಾಗಿದೆ. ಮುಂದೆ ಹೋದಂತೆ ನೀವು ಇದರಲ್ಲಿ ಒತ್ತುಕೊಟ್ಟು
ಹೇಳುತ್ತೀರೆಂದರೆ ಇವರೆಲ್ಲರೂ ಬರುತ್ತಾರೆ. ಈಗಿನ್ನೂ ತಿಳಿದುಕೊಳ್ಳುತ್ತಿಲ್ಲ, ಆದರೆ ಕೊನೆಯಲ್ಲಿ
ಇವರ ಪದವಿಗಳೆಲ್ಲವೂ ಹಾರಿ ಹೋಗುವುದು. ಎಷ್ಟೊಂದು ಮಂದಿ ಗುರುಗಳಿದ್ದಾರೆ, ಗುರುವಿಗೆ
ಅನುಯಾಯಿಗಳಲ್ಲದ ಮನುಷ್ಯರು ಯಾರೂ ಇಲ್ಲ. ಇಲ್ಲಿ ನಿಮಗೆ ಸದ್ಗತಿ ಕೊಡುವಂತಹ ಒಬ್ಬ ಸದ್ಗುರು
ಸಿಕ್ಕಿದ್ದಾರೆ. ಚಿತ್ರಗಳೂ ಬಹಳ ಚೆನ್ನಾಗಿವೆ, ಅದು ಸದ್ಗತಿ ಅರ್ಥಾತ್ ಸುಖಧಾಮ ಇನ್ನೊಂದು
ಮುಕ್ತಿಧಾಮವಾಗಿದೆ. ಬುದ್ಧಿಯೂ ಸಹ ಹೇಳುತ್ತದೆ - ನಾವೆಲ್ಲಾ ಆತ್ಮರು ನಿರ್ವಾಣಧಾಮದಲ್ಲಿರುತ್ತೇವೆ,
ಅಲ್ಲಿಂದ ಮತ್ತೆ ಶಬ್ಧದಲ್ಲಿ ಬರುತ್ತೇವೆ. ನಾವು ಅಲ್ಲಿನ ನಿವಾಸಿಗಳಾಗಿದ್ದೇವೆ, ಈ ಆಟವೇ ಭಾರತದ
ಮೇಲೆ ಮಾಡಲ್ಪಟ್ಟಿದೆ. ಶಿವ ಜಯಂತಿಯನ್ನು ಇಲ್ಲಿಯೇ ಆಚರಿಸುತ್ತಾರೆ. ತಂದೆಯು ತಿಳಿಸುತ್ತಾರೆ -
ನಾನು ಬಂದಿದ್ದೇನೆ, ಕಲ್ಪದ ನಂತರ ಪುನಃ ಬರುತ್ತೇನೆ. ಪ್ರತೀ 5000 ವರ್ಷಗಳ ನಂತರ ತಂದೆಯು
ಬರುತ್ತಿದ್ದಂತೆಯೇ ಈ ಭೂಮಿಯು ಸ್ವರ್ಗವಾಗಿ ಬಿಡುತ್ತದೆ. ಕ್ರಿಸ್ತನಿಗಿಂತ ಇಷ್ಟು ವರ್ಷಗಳ ಮೊದಲು
ಸ್ವರ್ಗವಿತ್ತು ಎಂಬುದನ್ನೂ ಹೇಳುತ್ತಾರೆ. ಈಗ ಇಲ್ಲ ಮತ್ತೆ ಬರುವುದು. ಅಂದಮೇಲೆ ಅವಶ್ಯವಾಗಿ
ನರಕವಾಸಿಗಳ ವಿನಾಶ, ಸ್ವರ್ಗವಾಸಿಗಳ ಸ್ಥಾಪನೆಯಾಗಬೇಕು. ನೀವು ಸ್ವರ್ಗವಾಸಿಗಳಾಗುತ್ತಿದ್ದೀರಿ,
ನರಕವಾಸಿಗಳೆಲ್ಲರೂ ವಿನಾಶವಾಗಿ ಬಿಡುತ್ತಾರೆ. ಅವರಂತೂ ಇನ್ನೂ ಲಕ್ಷಾಂತರ ವರ್ಷಗಳಿದೆ, ಮಕ್ಕಳು
ದೊಡ್ಡವರಾದರೆ ವಿವಾಹ ಮಾಡಿಸೋಣ..... ಎಂದು ತಿಳಿಯುತ್ತಾರೆ. ಆದರೆ ನೀವು ಈ ರೀತಿ ಹೇಳುವುದಿಲ್ಲ.
ಒಂದುವೇಳೆ ಮಕ್ಕಳು ಸಲಹೆಯಂತೆ ನಡೆಯಲಿಲ್ಲವೆಂದರೆ ಶ್ರೀಮತ ತೆಗೆದುಕೊಳ್ಳಬೇಕು -
ಸ್ವರ್ಗವಾಸಿಯಾಗುತ್ತಿಲ್ಲ ಅಂದಾಗ ಏನು ಮಾಡಬೇಕು ಎಂದು. ಆಗ ತಂದೆಯು ತಿಳಿಸುತ್ತಾರೆ - ಒಂದುವೇಳೆ
ಆಜ್ಞಾಕಾರಿಗಳಲ್ಲವೆಂದರೆ ಹೋಗಲಿ ಬಿಟ್ಟು ಬಿಡಿ, ಆದರೆ ಇದರಲ್ಲಿ ಬಹಳ ಪಕ್ಕಾ ನಷ್ಟಮೋಹ ಸ್ಥಿತಿ
ಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಶ್ರೀ ಶ್ರೀ
ಶಿವ ತಂದೆಯ ಶ್ರೇಷ್ಠ ಮತದಂತೆ ನಡೆದು ಸ್ವಯಂನ್ನು ಶ್ರೇಷ್ಠ ಮಾಡಿಕೊಳ್ಳಬೇಕಾಗಿದೆ. ಶ್ರೀಮತದಲ್ಲಿ
ಮನಮತವನ್ನು ಬೆರಕೆ ಮಾಡಬಾರದು. ಈಶ್ವರೀಯ ವಿದ್ಯೆಯ ನಶೆಯಲ್ಲಿರಬೇಕಾಗಿದೆ.
2. ತಮ್ಮ ಜೊತೆಗಾರರ ಕಲ್ಯಾಣದ ಯುಕ್ತಿಗಳನ್ನು ರಚಿಸಬೇಕಾಗಿದೆ. ಎಲ್ಲರ ಪ್ರತಿ ಶುಭ
ಭಾವನೆಯನ್ನಿಡುತ್ತಾ ಒಬ್ಬರು ಇನ್ನೊಬ್ಬರಿಗೆ ಸತ್ಯ-ಸತ್ಯವಾದ ಗೌರವವನ್ನು ಕೊಡಬೇಕಾಗಿದೆ.
ತೋರ್ಪಡಿಕೆಯ ಗೌರವ ಅಲ್ಲ.
ವರದಾನ:
ಆತ್ಮೀಯ
ಎಕ್ರ್ಸಸೈಸ್ ಮತ್ತು ಸ್ವಯಂ ನಿಯಂತ್ರಣದ ಮುಖಾಂತರ ಸೂಕ್ಷ್ಮತೆಯ ಅನುಭವ ಮಾಡುವಂತಹ ಸೂಕ್ಷ್ಮ ದೇವತಾ
ಭವ.
ಬುದ್ಧಿಯ ಸೂಕ್ಷ್ಮತೆ
ಹಾಗೂ ಹಗುರತೆ ಬ್ರಾಹ್ಮಣ ಜೀವನದ ವ್ಯಕ್ತಿತ್ವ ಆಗಿದೆ. ಸೂಕ್ಷ್ಮತೆಯೇ ಮಹಾನತೆಯಾಗಿದೆ. ಆದರೆ
ಇದಕ್ಕಾಗಿ ಪ್ರತಿದಿನ ಅಮೃತವೇಳೆ ಅಶರೀರಿತನದ ಆತ್ಮೀಯ ಎಕ್ರ್ಸಸೈಸ್ ಮಾಡಿ ಮತ್ತು ವ್ಯರ್ಥ
ಸಂಕಲ್ಪಗಳ ಭೋಜನದ ಪಥ್ಯೆ ಇಡಿ. ಪಥ್ಯೆಕ್ಕಾಗಿ ಸ್ವಯಂ ನಿಯಂತ್ರಣ ಇರಲಿ. ಯಾವ ಸಮಯ ಯಾವ ಸಂಕಲ್ಪರೂಪಿ
ಭೋಜನ ಸ್ವೀಕಾರ ಮಾಡಬೇಕು. ಆ ಸಮಯದಲ್ಲಿ ಅದೇ ಮಾಡಿ. ವ್ಯರ್ಥ ಸಂಕಲ್ಪದ ಎಕ್ಸ್ಟ್ರಾ ಭೋಜನವನ್ನು
ಮಾಡಬೇಡಿ ಆಗ ಸೂಕ್ಷ್ಮ ಬುದ್ಧಿಯಾಗಿ ಸೂಕ್ಷ್ಮ ದೇವತಾ ಸ್ವರೂಪದ ಲಕ್ಷ್ಯವನ್ನು ಪ್ರಾಪ್ತಿ
ಮಾಡಿಕೊಳ್ಳಲು ಸಾಧ್ಯ.
ಸ್ಲೋಗನ್:
ಯಾರು ಪ್ರತಿ ಸೆಕೆಂಡ್,
ಪ್ರತಿ ಹೆಜ್ಜೆ ಶ್ರೀಮತದ ಪ್ರಮಾಣ ನಿಖರವಾಗಿ (ಆಕ್ಯುರೇಟ್) ನಡೆಯುತ್ತಾರೆ, ಅವರು ಮಹಾನ್ ಆತ್ಮರು.
ಬ್ರಹ್ಮಾ ತಂದೆಯ ಸಮಾನ
ಸಂಪನ್ನ ಸ್ಥಿತಿಯ ಅನುಭವ ಮಾಡಿರಿ:-
ಮನಸ್ಸು-ಬುದ್ಧಿಯನ್ನು ಧೃಡತೆಯಿಂದ ಏಕಾಗ್ರವನ್ನಾಗಿ ಮಾಡುತ್ತಾ, ಬಲಹೀನತೆಗಳನ್ನು ಭಸ್ಮಗೊಳಿಸಿ
ಬ್ರಹ್ಮಾ ತಂದೆಯ ಸಮಾನವಾಗಿ ಬಿಡಿ. ಪರಮಾತ್ಮನ ಪ್ರೀತಿಯ ಮೂಲಕ ಜೀವನದಲ್ಲಿ ಸದಾ ಅತೀಂದ್ರಿಯ ಸುಖ
ಹಾಗೂ ಆನಂದ ಅನುಭೂತಿಯನ್ನು ಮಾಡಿಸಿರಿ.