27.01.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಎಂದೂ
ತಮ್ಮ ಕೈಯಲ್ಲಿ ಕಾನೂನು ತೆಗೆದುಕೊಳ್ಳಬೇಡಿ, ಒಂದುವೇಳೆ ಯಾರದೇ ತಪ್ಪಿದ್ದರೆ ತಂದೆಗೆ ದೂರು ಕೊಡಿ
ಆಗ ತಂದೆಯು ಸಾವಧಾನ ನೀಡುತ್ತಾರೆ”
ಪ್ರಶ್ನೆ:
ತಂದೆಯು ಯಾವ
ಕಾಂಟ್ರಾಕ್ಟ್ ತೆಗೆದುಕೊಂಡಿದ್ದಾರೆ?
ಉತ್ತರ:
ಮಕ್ಕಳ ಅವಗುಣಗಳನ್ನು ತೆಗೆಯುವ ಕಾಂಟ್ರಾಕ್ಟ್ನ್ನು ತಂದೆಯೊಬ್ಬರೇ ತೆಗೆದುಕೊಂಡಿದ್ದಾರೆ. ಮಕ್ಕಳ
ಕೊರತೆಗಳನ್ನು ತಂದೆಯು ಕೇಳುತ್ತಾರೆಂದರೆ ಅದನ್ನು ತೆಗೆಯಲು ಪ್ರೀತಿಯಿಂದ ತಿಳುವಳಿಕೆ ನೀಡುತ್ತಾರೆ.
ಒಂದುವೇಳೆ ನೀವು ಮಕ್ಕಳಿಗೆ ಯಾರದೇ ನಿರ್ಬಲತೆ ಕಂಡು ಬಂದರೂ ಸಹ ನೀವು ತಮ್ಮ ಕೈಯಲ್ಲಿ ಕಾನೂನು
ತೆಗೆದುಕೊಳ್ಳಬೇಡಿ. ಕಾನೂನು ತೆಗೆದುಕೊಳ್ಳುವುದೂ ಸಹ ತಪ್ಪಾಗಿದೆ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ತಂದೆಯಿಂದ ರಿಫ್ರೆಷ್ ಆಗಲು ಬರುತ್ತೀರಿ ಏಕೆಂದರೆ ಬೇಹದ್ದಿನ
ತಂದೆಯಿಂದ ಬೇಹದ್ದಿನ ರಾಜ್ಯಭಾಗ್ಯವನ್ನು ಪಡೆಯಬೇಕೆಂದು ನೀವು ಮಕ್ಕಳಿಗೆ ತಿಳಿದಿದೆ. ಇದನ್ನು ಎಂದೂ
ಮರೆಯಬಾರದು ಆದರೆ ಮರೆತು ಹೋಗುತ್ತೀರಿ. ಮಾಯೆಯು ಮರೆಸಿ ಬಿಡುತ್ತದೆ. ಒಂದುವೇಳೆ ಮರೆಸದಿದ್ದರೆ
ಬಹಳ ಖುಷಿಯಿರುವುದು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಬ್ಯಾಡ್ಜ್ನ್ನು ಪದೇ-ಪದೇ ನೋಡುತ್ತಾ
ಇರಿ, ಚಿತ್ರಗಳನ್ನೂ ನೋಡುತ್ತಾ ಇರಿ. ನಡೆಯುತ್ತಾ-ತಿರುಗಾಡುತ್ತಾ ಬ್ಯಾಡ್ಜ್ನ್ನು ನೋಡಿಕೊಳ್ಳುತ್ತಾ
ಇರಿ ಆಗ ತಂದೆಯ ಮೂಲಕ ತಂದೆಯ ನೆನಪಿನಿಂದ ನಾವು ಈ ರೀತಿಯಾಗುತ್ತಿದ್ದೇವೆ. ದೈವೀ ಗುಣಗಳನ್ನು ಧಾರಣೆ
ಮಾಡಬೇಕೆಂಬುದು ಅರ್ಥವಾಗುತ್ತದೆ. ಜ್ಞಾನವು ಸಿಗಲು ಇದೊಂದೇ ಸಮಯವಾಗಿದೆ. ತಂದೆಯು ತಿಳಿಸುತ್ತಾರೆ
- ಮಧುರಾತಿ ಮಧುರ ಮಕ್ಕಳೇ.... ಹಗಲು-ರಾತ್ರಿ ಮಧುರಾತಿ ಮಧುರ ಎಂದೇ ಹೇಳುತ್ತಿರುತ್ತಾರೆ. ಆದರೆ
ಮಧುರಾತಿ ಮಧುರ ಬಾಬಾ ಎಂದು ಮಕ್ಕಳು ಹೇಳುವುದಿಲ್ಲ. ವಾಸ್ತವದಲ್ಲಿ ಇಬ್ಬರಿಗೂ ಹೇಳಬೇಕು. ಇಬ್ಬರೂ
ಮಧುರರಲ್ಲವೆ, ಬೇಹದ್ದಿನ ಬಾಪ್ದಾದಾ. ಆದರೆ ಕೆಲವರು ದೇಹಾಭಿಮಾನಿಗಳು ಕೇವಲ ತಂದೆಗೆ ಮಾತ್ರ
ಮಧುರಾತಿ ಮಧುರ ಬಾಬಾ ಎಂದು ಹೇಳುತ್ತಾರೆ. ಕೆಲವು ಮಕ್ಕಳಂತೂ ಕ್ರೋಧದಲ್ಲಿ ಬಂದು ಕೆಲವೊಮ್ಮೆ
ಬಾಪ್ದಾದಾರವರಿಗೂ ಏನಾದರೂ ಹೇಳಿ ಬಿಡುತ್ತಾರೆ, ತಂದೆಗೆ ಹೇಳಿದರೆ ದಾದಾರವರಿಗೂ ಹೇಳಿದರೂ ಒಂದೇ
ಮಾತಾಗುತ್ತದೆ. ಕೆಲವೊಮ್ಮೆ ಬ್ರಾಹ್ಮಣಿಯರ ಮೇಲೆ ಕೆಲವೊಮ್ಮೆ ಪರಸ್ಪರ ಮುನಿಸಿಕೊಳ್ಳುತ್ತಾರೆ.
ಬೇಹದ್ದಿನ ತಂದೆಯು ಕುಳಿತು ಮಕ್ಕಳಿಗೆ ಶಿಕ್ಷಣ ಕೊಡುತ್ತಾರೆ. ಹಳ್ಳಿ-ಹಳ್ಳಿಯಲ್ಲಿ ಬಹಳ ಮಂದಿ
ಮಕ್ಕಳಿದ್ದಾರೆ, ಎಲ್ಲರಿಗೂ ಬರೆಯುತ್ತಿರುತ್ತಾರೆ. ನೀವು ಬಹಳ ಕೋಪ ಮಾಡಿಕೊಳ್ಳುತ್ತೀರೆಂದು ನಿಮ್ಮ
ಮೇಲೆ ದೂರು ಬರುತ್ತಿದೆ ಎಂದು ಹೇಳುತ್ತಾರೆ. ಬೇಹದ್ದಿನ ತಂದೆಯು ಇದಕ್ಕೆ ದೇಹಾಭಿಮಾನವೆಂದೇ
ಹೇಳುತ್ತಾರೆ. ತಂದೆಯು ಎಲ್ಲರಿಗೂ ಹೇಳುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿ ಭವ. ಎಲ್ಲಾ ಮಕ್ಕಳು
ಏರುಪೇರಾಗುತ್ತಿರುತ್ತಾರೆ, ಇದರಲ್ಲಿಯೂ ಮಾಯೆಯು ಯಾರನ್ನು ಸಮರ್ಥ ಶಕ್ತಿಶಾಲಿಗಳಾಗಿರುವುದನ್ನು
ನೋಡುತ್ತದೆಯೋ ಅವರೊಂದಿಗೇ ಯುದ್ಧ ಮಾಡುತ್ತದೆ. ಮಹಾವೀರ, ಹನುಮಂತನನ್ನು ತೋರಿಸಿದ್ದಾರಲ್ಲವೆ.
ಹನುಮಂತನನ್ನೂ ಸಹ ಅಲುಗಾಡಿಸಲು ಪ್ರಯತ್ನ ಪಟ್ಟಿತು. ಈ ಸಮಯದಲ್ಲಿಯೇ ಎಲ್ಲರ ಪರೀಕ್ಷೆ
ತೆಗೆದುಕೊಳ್ಳುತ್ತದೆ. ಮಾಯೆಯೊಂದಿಗೆ ಎಲ್ಲರ ಸೋಲು-ಗೆಲುವು ಆಗುತ್ತಿರುತ್ತದೆ. ಯುದ್ಧದಲ್ಲಿ
ಸ್ಮೃತಿ-ವಿಸ್ಮೃತಿ ಎಲ್ಲವೂ ಆಗುತ್ತಿರುತ್ತದೆ. ಯಾರೆಷ್ಟು ಸ್ಮೃತಿಯಲ್ಲಿರುವರೋ, ನಿರಂತರ
ತಂದೆಯನ್ನು ನೆನಪು ಮಾಡುವ ಪ್ರಯತ್ನ ಪಡುವರೋ ಅವರು ಒಳ್ಳೆಯ ಪದವಿಯನ್ನು ಪಡೆಯುತ್ತಾರೆ. ಮಕ್ಕಳಿಗೇ
ಓದಿಸುವುದಕ್ಕಾಗಿಯೇ ತಂದೆಯು ಬಂದಿದ್ದಾರೆ ಆದ್ದರಿಂದ ಓದಿಸುತ್ತಿರುತ್ತಾರೆ. ಮಕ್ಕಳು ಶ್ರೀಮತದಂತೆ
ನಡೆಯುತ್ತಿರಬೇಕು. ಶ್ರೀಮತದಂತೆ ನಡೆಯುವುದರಿಂದಲೇ ಶ್ರೇಷ್ಠರಾಗುವಿರಿ. ಇದರಲ್ಲಿ ಯಾರೊಂದಿಗೂ
ಮುನಿಸಿಕೊಳ್ಳುವ ಮಾತಿಲ್ಲ. ಮುನಿಸಿಕೊಳ್ಳುವುದು ಎಂದರೆ ಕ್ರೋಧ ಮಾಡುವುದು. ಯಾರದೇ ತಪ್ಪಾದರೆ
ತಂದೆಗೆ ದೂರು ಕೊಡಬೇಕು. ಅದನ್ನು ಬಿಟ್ಟು ಸ್ವಯಂ ಕೈಯಲ್ಲಿ ಕಾನೂನು ತೆಗೆದುಕೊಳ್ಳಬಾರದು. ತಾನೇ
ಏನಾದರೂ ಹೇಳಿ ಬಿಡುವುದು ಎಂದರೆ ಕೈಯಲ್ಲಿ ಕಾನೂನು ತೆಗೆದುಕೊಂಡಾತಾಯಿತು. ಸರ್ಕಾರವು ಎಂದೂ
ಕೈಯಲ್ಲಿ ಕಾನೂನನ್ನು ತೆಗೆದುಕೊಳ್ಳಲು ಬಿಡುವುದಿಲ್ಲ. ಯಾರಾದರೂ ಹೊಡೆದರೆ ಅವರನ್ನು
ಹೊಡೆಯುವುದಿಲ್ಲ, ದೂರು ಕೊಡುತ್ತಾರೆ ಆಗ ಅವರದು ಕೇಸ್ ಆಗುವುದು. ಇಲ್ಲಿಯೂ ಸಹ ನೀವು ಮಕ್ಕಳು ಎಂದೂ
ಪರಸ್ಪರ ಏನೂ ಹೇಳಬಾರದು. ತಂದೆಗೆ ದೂರು ಕೊಡಿ. ಎಲ್ಲರಿಗೆ ಸಾವಧಾನ ನೀಡುವವರು ಒಬ್ಬ
ತಂದೆಯಾಗಿದ್ದಾರೆ. ತಂದೆಯು ಬಹಳ ಮಧುರವಾಗಿ ಯುಕ್ತಿಗಳನ್ನು ತಿಳಿಸುತ್ತಾರೆ, ಮಧುರತೆಯಿಂದ ಶಿಕ್ಷಣ
ಕೊಡುತ್ತಾರೆ. ದೇಹಾಭಿಮಾನಿಗಳಾಗುವುದರಿಂದ ತಮ್ಮದೇ ಪದವಿಯನ್ನು ಕಡಿಮೆ ಮಾಡಿಕೊಳ್ಳುತ್ತೀರಿ,
ನಷ್ಟವನ್ನೇಕೆ ಮಾಡಿಕೊಳ್ಳಬೇಕು? ಎಷ್ಟು ಸಾಧ್ಯವೋ ತಂದೆಯನ್ನು ಪ್ರೀತಿಯಿಂದ ನೆನಪು ಮಾಡಿ. ಯಾವ
ತಂದೆಯು ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆಯೋ ಅಂತಹ ಬೇಹದ್ದಿನ ತಂದೆಯನ್ನು ಬಹಳ
ಪ್ರೀತಿಯಿಂದ ನೆನಪು ಮಾಡಿ. ಕೇವಲ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕು, ಯಾರದೇ ನಿಂದನೆ
ಮಾಡಬಾರದು. ದೇವತೆಗಳು ಯಾರದೇ ನಿಂದನೆ ಮಾಡುತ್ತಾರೆಯೇ? ಕೆಲವು ಮಕ್ಕಳಂತೂ ನಿಂದನೆ ಮಾಡದ ಹೊರತು
ಇರುವುದೇ ಇಲ್ಲ. ನೀವು ತಂದೆಗೆ ತಿಳಿಸಿ ಆಗ ತಂದೆಯು ಬಹಳ ಪ್ರೀತಿಯಿಂದ ತಿಳಿಸಿ ಕೊಡುತ್ತಾರೆ.
ಇಲ್ಲದಿದ್ದರೆ ಸಮಯವು ವ್ಯರ್ಥವಾಗುತ್ತದೆ. ನಿಂದನೆ ಮಾಡುವುದಕ್ಕಿಂತಲೂ ತಂದೆಯನ್ನು ನೆನಪು ಮಾಡಿರಿ
ಆಗ ಬಹಳ-ಬಹಳ ಲಾಭವಾಗುವುದು. ಯಾರೊಂದಿಗೂ ವಾದ-ವಿವಾದ ಮಾಡದಿರುವುದೇ ಬಹಳ ಒಳ್ಳೆಯದಾಗಿದೆ.
ನಾವು ಹೊಸ ಪ್ರಪಂಚದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ನೀವು ಮಕ್ಕಳು ಆಂತರ್ಯದಲ್ಲಿ
ತಿಳಿದುಕೊಳ್ಳುತ್ತೀರಿ. ನಿಮ್ಮಲ್ಲಿ ಎಷ್ಟೊಂದು ನಶೆಯಿರಬೇಕು! ಮುಖ್ಯವಾದುದು ನೆನಪು ಮತ್ತು ದೈವೀ
ಗುಣಗಳು. ಮಕ್ಕಳು ಚಕ್ರವನ್ನು ನೆನಪು ಮಾಡುತ್ತೀರಿ. ಅದಂತೂ ಸಹಜವಾಗಿ ನೆನಪಿಗೆ ಬರುತ್ತದೆ. 84
ಜನ್ಮಗಳ ಚಕ್ರವಲ್ಲವೆ. ನಿಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯ, ಕಾಲಾವಧಿಯ ಸ್ಪಷ್ಟ ಜ್ಞಾನವು ತಿಳಿದಿದೆ
ಅಂದಮೇಲೆ ಅನ್ಯರಿಗೂ ಬಹಳ ಪ್ರೀತಿಯಿಂದ ಪರಿಚಯ ಕೊಡಬೇಕಾಗಿದೆ. ಬೇಹದ್ದಿನ ತಂದೆಯು ನಮ್ಮನ್ನು
ವಿಶ್ವದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ, ರಾಜಯೋಗವನ್ನು ಕಲಿಸುತ್ತಿದ್ದಾರೆ, ವಿನಾಶವೂ
ಸನ್ಮುಖದಲ್ಲಿದೆ. ಇದು ಸಂಗಮಯುಗವಾಗಿದೆ, ಈಗ ಹೊಸ ಪ್ರಪಂಚವು ಸ್ಥಾಪನೆಯಾಗುತ್ತದೆ ಮತ್ತು ಹಳೆಯ
ಪ್ರಪಂಚವು ಸಮಾಪ್ತಿಯಾಗಲಿದೆ. ತಂದೆಯು ಮಕ್ಕಳಿಗೆ ಸಾವಧಾನ ನೀಡುತ್ತಿರುತ್ತಾರೆ. ಮಕ್ಕಳೇ, ಸ್ಮರಣೆ
ಮಾಡಿ-ಮಾಡಿ ಸುಖ ಪಡೆಯಿರಿ ಆಗ ತನುವಿನ ಎಲ್ಲಾ ಕಲಹ-ಕ್ಲೇಷಗಳು ಕಳೆಯುವವು.... ಅರ್ಧ ಕಲ್ಪಕ್ಕಾಗಿ
ಎಲ್ಲವೂ ದೂರವಾಗುತ್ತದೆ. ತಂದೆಯು ಸುಖಧಾಮವನ್ನು ಸ್ಥಾಪನೆ ಮಾಡುತ್ತಾರೆ ಮತ್ತೆ ರಾವಣನು
ದುಃಖಧಾಮವನ್ನು ಸ್ಥಾಪನೆ ಮಾಡುತ್ತಾನೆ. ಇದನ್ನೂ ಸಹ ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ
ತಿಳಿದುಕೊಂಡಿದ್ದೀರಿ. ತಂದೆಗೆ ಮಕ್ಕಳಲ್ಲಿ ಎಷ್ಟೊಂದು ಪ್ರೀತಿಯಿರುತ್ತದೆ. ಆದಿಯಿಂದ ತಂದೆಗೆ
ಪ್ರೀತಿಯಿದೆ, ಮಕ್ಕಳಿಗೂ ಗೊತ್ತಿದೆ ಮತ್ತು ನನಗೂ ತಿಳಿದಿದೆ - ಯಾವ ಮಕ್ಕಳು ಕಾಮ ಚಿತೆಯನ್ನೇರಿ
ಕಪ್ಪಾಗಿ ಬಿಟ್ಟಿದ್ದಾರೆಯೋ ಅವರನ್ನು ಸುಂದರರನ್ನಾಗಿ ಮಾಡಲು ಹೋಗುತ್ತೇನೆ. ತಂದೆಯಂತೂ
ಜ್ಞಾನಪೂರ್ಣನಾಗಿದ್ದಾರೆ. ಮಕ್ಕಳೂ ಸಹ ನಿಧಾನ-ನಿಧಾನವಾಗಿ ಜ್ಞಾನವನ್ನು ತೆಗೆದುಕೊಳ್ಳುತ್ತೀರಿ.
ಮಾಯೆಯು ಮತ್ತೆ ಮರೆಸಿ ಬಿಡುತ್ತದೆ. ಆ ಖುಷಿಯಿರಲು ಬಿಡುವುದಿಲ್ಲ. ನೀವು ಮಕ್ಕಳಿಗಂತೂ
ದಿನ-ಪ್ರತಿದಿನ ಖುಷಿಯ ನಶೆಯೇರಿರಬೇಕು. ಸತ್ಯಯುಗದಲ್ಲಿ ಆ ಖುಷಿಯಿತ್ತು, ಈಗ ಮತ್ತೆ ನೆನಪಿನ
ಯಾತ್ರೆಯಿಂದ ಅದನ್ನು ತಂದುಕೊಳ್ಳಬೇಕಾಗಿದೆ. ಅದು ನಿಧಾನ-ನಿಧಾನವಾಗಿ ಏರುವುದು. ಸೋಲು-ಗೆಲುವು
ಆಗುತ್ತಾ-ಆಗುತ್ತಾ ಮತ್ತೆ ನಂಬರ್ವಾರ್ ಪುರುಷಾರ್ಥದನುಸಾರ ಕಲ್ಪದ ಹಿಂದಿನ ತರಹ ತಮ್ಮ ಪದವಿಯನ್ನು
ಪಡೆದುಕೊಳ್ಳುತ್ತೀರಿ. ಬಾಕಿ ಕಲ್ಪ-ಕಲ್ಪವೂ ಎಷ್ಟು ಸಮಯ ಹಿಡಿಸಿತ್ತೋ ಅಷ್ಟೇ ಸಮಯ ಹಿಡಿಸುತ್ತದೆ.
ಯಾರು ಕಲ್ಪ-ಕಲ್ಪವೂ ತೇರ್ಗಡೆಯಾಗಿರುವರೋ ಅವರೇ ಆಗುವರು. ಬಾಪ್ದಾದಾ ಸಾಕ್ಷಿಯಾಗಿ ಮಕ್ಕಳ
ಸ್ಥಿತಿಯನ್ನು ನೋಡುತ್ತೇವೆ ಮತ್ತು ತಿಳುವಳಿಕೆ ನೀಡುತ್ತಿರುತ್ತೇವೆ. ಹೊರಗಿನ
ಸೇವಾಕೇಂದ್ರಗಳಲ್ಲಿದ್ದಾಗ ಇಷ್ಟು ರಿಫ್ರೆಷ್ ಆಗಿರುವುದಿಲ್ಲ. ಸೇವಾಕೇಂದ್ರದಿಂದ ಹೊರಗಿನ
ವಾಯುಮಂಡಲದಲ್ಲಿ ಹೋಗುತ್ತಾರೆ ಆದ್ದರಿಂದ ಇಲ್ಲಿಗೆ ಮಕ್ಕಳು ರಿಫ್ರೆಷ್ ಆಗುವುದಕ್ಕಾಗಿಯೇ
ಬರುತ್ತೀರಿ. ಪರಿವಾರ ಸಹಿತ ಎಲ್ಲರಿಗೆ ನೆನಪು-ಪ್ರೀತಿಯನ್ನು ತಿಳಿಸಿ ಎಂದು ತಂದೆಯು ಬರೆಯುತ್ತಾರೆ.
ಅವರು ಹದ್ದಿನ ತಂದೆ, ಇವರು ಬೇಹದ್ದಿನ ತಂದೆಯಾಗಿದ್ದಾರೆ. ತಂದೆ ಮತ್ತು ದಾದಾ ಇಬ್ಬರಿಗೂ ಬಹಳಷ್ಟು
ಪ್ರೀತಿಯಿದೆ! ಏಕೆಂದರೆ ಕಲ್ಪ-ಕಲ್ಪವೂ ಬಹಳ ಪ್ರಿಯವಾದ ಸರ್ವೀಸ್ ಮಾಡುತ್ತೀರಿ ಮತ್ತು ಬಹಳ
ಪ್ರೀತಿಯಿಂದ ಮಾಡುತ್ತೀರೆಂದು ಆಂತರ್ಯದಲ್ಲಿ ದಯೆ ಬರುತ್ತದೆ. ಮಕ್ಕಳು ಓದುವುದಿಲ್ಲ ಅಥವಾ ಚಲನೆಯು
ಸರಿಯಿಲ್ಲ, ಶ್ರೀಮತದಂತೆ ನಡೆಯುವುದಿಲ್ಲವೆಂದರೆ ಇವರು ಕಡಿಮೆ ಪದವಿಯನ್ನು ಪಡೆಯುವರೆಂದು ದಯೆ
ಬರುತ್ತದೆ. ಆದರೆ ತಂದೆಯು ಏನು ಮಾಡಲು ಸಾಧ್ಯ! ಹೊರಗಡೆಯಿರುವುದರಲ್ಲಿ ಮತ್ತು ಇಲ್ಲಿರುವುದರಲ್ಲಿ
ಬಹಳ ವ್ಯತ್ಯಾಸವಿದೆ ಆದರೆ ಎಲ್ಲರೂ ಇಲ್ಲಿಯೇ ಇರಲು ಸಾಧ್ಯವಿಲ್ಲ. ಮಕ್ಕಳು ವೃದ್ಧಿ
ಹೊಂದುತ್ತಿರುತ್ತಾರೆ. ಪ್ರಬಂಧಗಳನ್ನೂ ಮಾಡುತ್ತಿರುತ್ತೀರಿ. ಇದನ್ನೂ ತಂದೆಯು ತಿಳಿಸಿದ್ದಾರೆ - ಈ
ಅಬು ಪರ್ವತವೂ ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ. ತಂದೆಯು ತಿಳಿಸುತ್ತಾರೆ - ನಾನು
ಇಲ್ಲಿಯೇ ಬಂದು ಇಡೀ ಸೃಷ್ಟಿಯನ್ನು, ಪಂಚ ತತ್ವಗಳ ಸಹಿತ ಎಲ್ಲರನ್ನೂ ಪವಿತ್ರ ಮಾಡುತ್ತೇನೆ.
ಎಷ್ಟೊಂದು ಸೇವೆಯಿದೆ! ತಂದೆಯೊಬ್ಬರೇ ಬಂದು ಸರ್ವರ ಸದ್ಗತಿ ಮಾಡುತ್ತಾರೆ. ಅನೇಕ ಬಾರಿ ಮಾಡಿದ್ದಾರೆ
ಇದು ತಿಳಿದಿದ್ದರೂ ಸಹ ಮತ್ತೆ ಮರೆತು ಹೋಗುತ್ತಾರೆ. ಆದ್ದರಿಂದ ತಂದೆಯು ಹೇಳುತ್ತಾರೆ – ಮಾಯೆಯು
ಬಹಳ ಶಕ್ತಿಶಾಲಿಯಾಗಿದೆ. ಅರ್ಧಕಲ್ಪ ಇದರ ರಾಜ್ಯವು ನಡೆಯುತ್ತದೆ. ಮಾಯೆಯು ಸೋಲಿಸುತ್ತದೆ ಮತ್ತೆ
ತಂದೆಯು ಎದ್ದು ನಿಲ್ಲಿಸುತ್ತಾರೆ. ಬಾಬಾ, ನಾವು ಕೆಳಗೆ ಬಿದ್ದೆವು ಎಂದು ಅನೇಕರು ಬರೆಯುತ್ತಾರೆ.
ಒಳ್ಳೆಯದು - ಮತ್ತೆಂದೂ ಬೀಳಬೇಡಿ ಎಂದು ತಂದೆಯು ಹೇಳುತ್ತಾರೆ ಆದರೂ ಸಹ ಮತ್ತೆ ಬೀಳುತ್ತಾರೆ.
ಬೀಳುತ್ತಾರೆಂದರೆ ಮತ್ತೆ ಏಳುವುದನ್ನೇ ಬಿಟ್ಟು ಬಿಡುತ್ತಾರೆ. ಎಷ್ಟೊಂದು ಪೆಟ್ಟು ಬೀಳುತ್ತದೆ!
ಎಲ್ಲರಿಗೂ ಬೀಳುತ್ತದೆ. ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ವಿದ್ಯೆಯಲ್ಲಿ ಯೋಗವು ಇದ್ದೇ ಇದೆ
- ಇಂತಹವರು ನನಗೆ ಇದನ್ನು ಓದಿಸುತ್ತಿದ್ದಾರೆ ಎಂದು ಓದಿಸುವವರ ನೆನಪು ಬರುತ್ತದೆ. ನೀವೀಗ
ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ಓದಿಸುತ್ತಿದ್ದಾರೆ, ಇಲ್ಲಿ ನೀವು ಬಹಳ ರಿಫ್ರೆಷ್
ಆಗುತ್ತಿದ್ದೀರಿ. ಯಾರು ನಮ್ಮ ನಿಂದನೆ ಮಾಡುವರೋ ಅವರೇ ನಮ್ಮ ಮಿತ್ರರು. ಭಗವಾನುವಾಚ - ನನಗೆ
ಎಷ್ಟೊಂದು ನಿಂದನೆ ಮಾಡುತ್ತಾರೆ ಆದರೆ ಪುನಃ ನಾನು ಮಿತ್ರನಾಗುತ್ತೇನೆ. ನನಗೆ ಎಷ್ಟೇ ನಿಂದನೆ
ಮಾಡಿದರೂ ಸಹ ಇವರೆಲ್ಲರೂ ನನ್ನ ಮಕ್ಕಳೇ ಆಗಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ. ಇವರ ಜೊತೆ ನನಗೆ
ಎಷ್ಟೊಂದು ಪ್ರೀತಿಯಿದೆ. ನಿಂದನೆ ಮಾಡುವುದು ಒಳ್ಳೆಯದಲ್ಲ. ಈ ಸಮಯದಲ್ಲಿ ಬಹಳ ಎಚ್ಚರಿಕೆಯಿರಬೇಕು.
ಭಿನ್ನ-ಭಿನ್ನ ಸ್ಥಿತಿಯನ್ನು ಹೊಂದಿದ ಮಕ್ಕಳಿದ್ದಾರೆ, ಎಲ್ಲರೂ ಪುರುಷಾರ್ಥ ಮಾಡುತ್ತಿರುತ್ತಾರೆ.
ಯಾವುದೇ ತಪ್ಪಾದರೂ ಸಹ ಪುರುಷಾರ್ಥ ಮಾಡಿ ಮತ್ತೆ ಸರಿಪಡಿಸಿಕೊಳ್ಳಬೇಕು. ಮಾಯೆಯು ಎಲ್ಲರಿಂದ
ತಪ್ಪುಗಳನ್ನು ಮಾಡಿಸುತ್ತದೆ, ಇದು ಮಲ್ಲ ಯುದ್ಧವಲ್ಲವೆ. ಕೆಲವೊಮ್ಮೆ ಇಂತಹ ಪೆಟ್ಟು ಬೀಳುತ್ತದೆ,
ಒಮ್ಮೆಲೆ ಬೀಳಿಸಿ ಬಿಡುತ್ತದೆ. ತಂದೆಯು ಸಾವಧಾನ ನೀಡುತ್ತಾರೆ - ಮಕ್ಕಳೇ, ಹೀಗೆ ಸೋಲುತ್ತಿದ್ದರೆ
ಮಾಡಿಕೊಂಡಿರುವ ಸಂಪಾದನೆಯೆಲ್ಲವೂ ಸಮಾಪ್ತಿಯಾಗುವುದು, ಐದನೇ ಅಂತಸ್ತಿನಿಂದ ಕೆಳಗೆ ಬೀಳುತ್ತೀರಿ.
ಬಾಬಾ, ಇಂತಹ ತಪ್ಪನ್ನು ಮತ್ತೆಂದೂ ಮಾಡುವುದಿಲ್ಲ, ಈಗ ಕ್ಷಮಿಸಿ ಎಂದು ಹೇಳುತ್ತಾರೆ. ಆದರೆ
ತಂದೆಯೇನು ಕ್ಷಮೆ ಮಾಡುವರು! ತಂದೆಯು ಪುರುಷಾರ್ಥ ಮಾಡಿ ಎಂದು ಹೇಳುತ್ತಾರೆ. ತಂದೆಗೆ ಗೊತ್ತಿದೆ,
ಮಾಯೆಯು ಬಹಳ ಪ್ರಬಲವಾಗಿದೆ, ಅನೇಕರನ್ನು ಸೋಲಿಸುತ್ತದೆ. ಶಿಕ್ಷಕರ ಕರ್ತವ್ಯವಾಗಿದೆ, ಶಿಕ್ಷಣ
ಕೊಟ್ಟು ತಪ್ಪನ್ನು ಸರಿ ಪಡಿಸುವುದು. ಯಾರಾದರೂ ತಪ್ಪು ಮಾಡಿದರೆ ಯಾವಾಗಲೂ ಅವರು ಅದನ್ನೇ
ಮಾಡುತ್ತಿರುತ್ತಾರೆ ಎಂದಲ್ಲ. ಒಳ್ಳೆಯ ಗುಣಗಳನ್ನೇ ಗಾಯನ ಮಾಡಲಾಗುತ್ತದೆ, ತಪ್ಪುಗಳ
ಗಾಯನವಾಗುವುದಿಲ್ಲ. ಅವಿನಾಶಿ ವೈದ್ಯರಂತೂ ಒಬ್ಬರೇ ತಂದೆಯಾಗಿದ್ದಾರೆ. ಅವರು ಔಷಧಿ ನೀಡುತ್ತಾರೆ.
ನೀವು ಮಕ್ಕಳು ತಮ್ಮ ಕೈಯಲ್ಲಿ ಏಕೆ ಕಾನೂನು ತೆಗೆದುಕೊಳ್ಳುತ್ತೀರಿ! ಯಾರಲ್ಲಿ ಕ್ರೋಧದ
ಅಂಶವಿರುವುದೋ ಅವರು ನಿಂದನೆಯನ್ನೇ ಮಾಡುತ್ತಿರುತ್ತಾರೆ. ಸುಧಾರಣೆ ಮಾಡುವುದು ತಂದೆಯ
ಕರ್ತವ್ಯವಾಗಿದೆ. ಸುಧಾರಣೆ ಮಾಡುವವರು ನೀವಲ್ಲ, ಯಾರಲ್ಲಾದರೂ ಕ್ರೋಧದ ಭೂತವಿದೆ, ಅವರು ಅನ್ಯರ
ನಿಂದನೆ ಮಾಡುತ್ತಾರೆಂದರೆ ತಮ್ಮ ಕೈಯಲ್ಲಿ ಕಾನೂನನ್ನು ತೆಗೆದುಕೊಳ್ಳುವುದರಿಂದ ಅವರು
ಸುಧಾರಣೆಯಾಗುವುದಿಲ್ಲ. ಅವರು ಇನ್ನೂ ಆಗದಂತಾಗಿ ಬಿಡುತ್ತಾರೆ, ಉಪ್ಪು ನೀರಾಗಿ ಬಿಡುತ್ತಾರೆ.
ಎಲ್ಲಾ ಮಕ್ಕಳಿಗೋಸ್ಕರ ಒಬ್ಬ ತಂದೆಯು ಕುಳಿತಿದ್ದಾರೆ. ತನ್ನ ಕೈಯಲ್ಲಿ ಕಾನೂನನ್ನು ತೆಗೆದುಕೊಂಡು
ಯಾರದೇ ನಿಂದನೆ ಮಾಡುವುದು ಬಹಳ ದೊಡ್ಡ ತಪ್ಪಾಗಿದೆ. ಎಲ್ಲರಲ್ಲಿ ಯಾವುದಾದರೊಂದು ಬಲಹೀನತೆಯಂತೂ
ಇದ್ದೇ ಇರುತ್ತದೆ. ಎಲ್ಲರೂ ಸಂಪೂರ್ಣರಾಗಿಲ್ಲ. ಒಬ್ಬೊಬ್ಬರಲ್ಲಿಯೂ ಒಂದೊಂದು ಅವಗುಣವಿರುತ್ತದೆ,
ಅವೆಲ್ಲವನ್ನೂ ತೆಗೆಯುವ ಕಾಂಟ್ರಾಕ್ಟ್ ಒಬ್ಬ ತಂದೆಯೇ ತೆಗೆದುಕೊಂಡಿದ್ದಾರೆ, ಇದು ನಿಮ್ಮ
ಕೆಲಸವಲ್ಲ, ಮಕ್ಕಳ ನಿರ್ಬಲತೆಗಳನ್ನು ತಂದೆಯು ಕೇಳಿದಾಗ ಅದನ್ನು ತೆಗೆಯಲು ಪ್ರೀತಿಯಿಂದ ತಿಳುವಳಿಕೆ
ನೀಡುತ್ತಾರೆ. ಇಲ್ಲಿಯವರೆಗೂ ಯಾರೂ ಸಂಪೂರ್ಣರಾಗಿಲ್ಲ, ಎಲ್ಲರೂ ಶ್ರೀಮತದಂತೆ
ಸಂಪೂರ್ಣರಾಗುತ್ತಿದ್ದಾರೆ, ಅಂತಿಮದಲ್ಲಿಯೇ ಸಂಪೂರ್ಣರಾಗಬೇಕಾಗಿದೆ. ಈ ಸಮಯದಲ್ಲಿ ಎಲ್ಲರೂ
ಪುರುಷಾರ್ಥಿಗಳಾಗಿದ್ದಾರೆ, ತಂದೆಯು ಸದಾ ಅಡೋಲರಾಗಿರುತ್ತಾರೆ, ಮಕ್ಕಳಿಗೆ ಪ್ರೀತಿಯಿಂದ ಶಿಕ್ಷಣ
ಕೊಡುತ್ತಿರುತ್ತಾರೆ. ಶಿಕ್ಷಣ ಕೊಡುವುದು ತಂದೆಯ ಕರ್ತವ್ಯವಾಗಿದೆ. ಅದರಂತೆ ನಡೆಯುವುದು, ನಡೆಯದೆ
ಇರುವುದು ಅವರ ಅದೃಷ್ಟದ ಮೇಲಿದೆ. ಎಷ್ಟು ಕಡಿಮೆ ಪದವಿಯಾಗಿ ಬಿಡುತ್ತದೆ! ಶ್ರೀಮತದಂತೆ ನಡೆಯದೇ
ಇರುವ ಕಾರಣ ಏನಾದರೂ ಅಂತಹದನ್ನು ಮಾಡಿದರೆ ಪದವಿ ಭ್ರಷ್ಟವಾಗುವುದು. ನಾನು ಇಂತಹ ತಪ್ಪನ್ನು
ಮಾಡಿದೆನು, ನಾವು ಬಹಳ ಪರಿಶ್ರಮ ಪಡಬೇಕಾಗುವುದು ಎಂದು ಮನಸ್ಸು ತಿನ್ನುತ್ತದೆ, ಯಾರದೇ
ಅವಗುಣವಿದ್ದರೆ ಅದನ್ನು ತಂದೆಗೆ ತಿಳಿಸಬೇಕಾಗಿದೆ. ಅಲ್ಲಿ-ಇಲ್ಲಿ ತಿಳಿಸುವುದು ದೇಹಾಭಿಮಾನವಾಗಿದೆ.
ತಂದೆಯನ್ನು ನೆನಪು ಮಾಡುವುದಿಲ್ಲ. ಅವ್ಯಭಿಚಾರಿಯಾಗಬೇಕಲ್ಲವೆ. ಒಬ್ಬರಿಗೆ ತಿಳಿಸುತ್ತೀರೆಂದರೆ
ಅವರು ಕೂಡಲೇ ಸುಧಾರಣೆಯಾಗುವರು. ಸುಧಾರಣೆ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ, ಉಳಿದೆಲ್ಲರೂ
ಸುಧಾರಣೆಯಾಗದಿರುವವರೇ ಆಗಿದ್ದಾರೆ. ಆದರೆ ಮಾಯೆಯು ತಲೆಯನ್ನೇ ತಿರುಗಿಸಿ ಬಿಡುತ್ತದೆ. ತಂದೆಯು
ಮುಖವನ್ನು ಒಂದು ಕಡೆ ತಿರುಗಿಸುತ್ತಾರೆ ಮತ್ತೆ ಮಾಯೆಯು ಮತ್ತೆ ತನ್ನ ಕಡೆ ತಿರುಗಿಸಿಕೊಳ್ಳುತ್ತದೆ.
ಸುಧಾರಣೆ ಮಾಡಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವುದಕ್ಕಾಗಿಯೇ ತಂದೆಯು ಬಂದಿದ್ದಾರೆ. ಅಂದಮೇಲೆ
ಎಲ್ಲೆಂದರಲ್ಲಿ ಅನ್ಯರ ಹೆಸರನ್ನು ಹಾಳು ಮಾಡುವುದು ನಿಯಮಕ್ಕೆ ವಿರುದ್ಧವಾಗಿದೆ. ನೀವು ಶಿವ
ತಂದೆಯನ್ನು ನೆನಪು ಮಾಡಿ, ಅವರ ಬಳಿಯೇ ತೀರ್ಮಾನವಿದೆಯಲ್ಲವೆ. ಕರ್ಮಗಳ ಫಲವನ್ನು ತಂದೆಯೇ
ಕೊಡುತ್ತಾರೆ. ಭಲೆ ಡ್ರಾಮಾದಲ್ಲಿದೆ ಆದರೆ ಯಾರದಾದರೂ ಹೆಸರನ್ನು ತೆಗೆದುಕೊಳ್ಳಲಾಗುತ್ತದೆಯಲ್ಲವೆ.
ತಂದೆಯಂತೂ ಮಕ್ಕಳಿಗೆ ಎಲ್ಲಾ ಮಾತುಗಳನ್ನು ತಿಳಿಸುತ್ತಿರುತ್ತಾರೆ. ನೀವು ಎಷ್ಟು
ಭಾಗ್ಯಶಾಲಿಗಳಾಗಿದ್ದೀರಿ, ಎಷ್ಟೊಂದುಮಂದಿ ಅತಿಥಿಗಳು ಬರುತ್ತಾರೆ. ಯಾರಬಳಿ ಬಹಳಮಂದಿ ಅತಿಥಿಗಳು
ಬರುವರೋ ಅವರು ಖುಷಿಯಾಗುತ್ತಾರೆ ಅಂದಾಗ ಇವರು ಮಕ್ಕಳೂ ಆಗಿದ್ದಾರೆ, ಅತಿಥಿಗಳೂ ಆಗಿದ್ದಾರೆ. ನಾನು
ಮಕ್ಕಳನ್ನು ದೇವತೆಗಳ ತರಹ ಸರ್ವಗುಣ ಸಂಪನ್ನರನ್ನಾಗಿ ಮಾಡಬೇಕೆಂಬುದೇ ಶಿಕ್ಷಕರ
ಬುದ್ಧಿಯಲ್ಲಿರುತ್ತದೆ. ಡ್ರಾಮಾ ಪ್ಲಾನನುಸಾರ ಈ ಕಾಂಟ್ರಾಕ್ಟ್ನ್ನು ತಂದೆಯೇ ತೆಗೆದುಕೊಂಡಿದ್ದಾರೆ.
ಮಕ್ಕಳು ಮುರುಳಿಯನ್ನೆಂದೂ ತಪ್ಪಿಸಬಾರದು, ಮುರುಳಿಯದೇ ಗಾಯನವಿದೆಯಲ್ಲವೆ. ಒಂದು ಮುರುಳಿಯನ್ನು
ತಪ್ಪಿಸಿದರೂ ಸಹ ಶಾಲೆಯಲ್ಲಿ ಗೈರು ಹಾಜರಿಯಾದಂತೆ. ಇದು ಬೇಹದ್ದಿನ ತಂದೆಯ ಶಾಲೆಯಾಗಿದೆ, ಇಲ್ಲಂತೂ
ಒಂದು ದಿನವೂ ತಪ್ಪಿಸಬಾರದು. ತಂದೆಯೇ ಬಂದು ಓದಿಸುತ್ತಾರೆ, ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ.
ಸ್ವರ್ಗದ ಸ್ಥಾಪನೆ ಹೇಗಾಗುತ್ತದೆ ಎಂಬುದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ನೀವು ಎಲ್ಲವನ್ನೂ
ತಿಳಿದುಕೊಂಡಿದ್ದೀರಿ. ಈ ವಿದ್ಯೆಯು ಬಹಳ-ಬಹಳ ಸಂಪಾದನೆ ಮಾಡಿಕೊಳ್ಳಲು ಮೂಲವಾಗಿದೆ. ಈ ವಿದ್ಯೆಯ
ಫಲವು ಜನ್ಮ-ಜನ್ಮಾಂತರಕ್ಕಾಗಿ ಸಿಗುತ್ತದೆ. ಎಲ್ಲಾ ವಿನಾಶದ ಸಂಬಂಧವು ನಿಮ್ಮ ವಿದ್ಯೆಯೊಂದಿಗಿದೆ.
ನಿಮ್ಮ ವಿದ್ಯೆಯು ಮುಕ್ತಾಯವಾದಾಗ ಈ ಯುದ್ಧವು ಆರಂಭವಾಗುವುದು. ಓದುತ್ತಾ-ಓದುತ್ತಾ ತಂದೆಯನ್ನು
ನೆನಪು ಮಾಡುತ್ತಾ ಯಾವಾಗ ಅಂಕಗಳು ಪೂರ್ಣವಾಗುವುದೋ, ಪರೀಕ್ಷೆಯು ಮುಕ್ತಾಯವಾಗುವುದೋ ಆಗ
ಮುಕ್ತಾಯವಾಗುತ್ತದೆ. ನಿಮ್ಮ ವಿದ್ಯೆಯು ಮುಗಿಯಿತೆಂದರೆ ಯುದ್ಧ ಆರಂಭವಾಗುವುದು. ಹೊಸ
ಪ್ರಪಂಚಕ್ಕಾಗಿ ಇದು ಹೊಸ ಜ್ಞಾನವಾಗಿದೆ ಆದ್ದರಿಂದ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಾರದೇ
ಅವಗುಣವನ್ನು ನೋಡಿ ಅವರ ನಿಂದನೆ ಮಾಡಬಾರದು. ಎಲ್ಲೆಂದರಲ್ಲಿ ಅವರ ಅವಗುಣವನ್ನು ಹೇಳಬಾರದು. ತನ್ನ
ಮಧುರತೆಯನ್ನು ಬಿಡಬಾರದು. ಕ್ರೋಧದಲ್ಲಿ ಬಂದು ಯಾರನ್ನು ಎದುರಿಸಬಾರದು.
2. ಎಲ್ಲರನ್ನೂ ಸುಧಾರಣೆ ಮಾಡುವವರು ಒಬ್ಬ ತಂದೆಯಾಗಿದ್ದಾರೆ ಆದ್ದರಿಂದ ಒಬ್ಬ ತಂದೆಗೇ ಎಲ್ಲವನ್ನೂ
ತಿಳಿಸಬೇಕಾಗಿದೆ. ಅವ್ಯಭಿಚಾರಿಯಾಗಬೇಕಾಗಿದೆ. ಮುರುಳಿಯನ್ನೆಂದೂ ತಪ್ಪಿಸಬಾರದು.
ವರದಾನ:
ದೇಹ-ಅಭಿಮಾನದ
ನನ್ನತನದ ಸಂಪೂರ್ಣ ಆಹುತಿ ಮಾಡುವಂತಹವರು ಧಾರಣಾ ಸ್ವರೂಪ ಭವ.
ಯಾವಾಗ ಸಂಕಲ್ಪ ಮತ್ತು
ಸ್ವಪ್ನದಲ್ಲೂ ದೇಹಾಭಿಮಾನದ ನನ್ನತನ ಇರುವುದಿಲ್ಲ, ಅನಾದಿ ಆತ್ಮೀಕ ಸ್ವರೂಪದ ಸ್ಮೃತಿ ಇರುತ್ತದೆ.
ಬಾಬಾ-ಬಾಬಾ ಎನ್ನುವ ನಿರಂತರ ಶಬ್ಧ ಹೊರಡುತ್ತಿರುತ್ತದೆ ಆಗ ಹೇಳಲಾಗುವುದು ಧಾರಣಾ ಸ್ವರೂಪ, ಸತ್ಯ
ಬ್ರಾಹ್ಮಣ. ನನ್ನತನ ಅರ್ಥಾತ್ ಹಳೆಯ ಸ್ವಭಾವ, ಸಂಸ್ಕಾರರೂಪಿ ಸೃಷ್ಟಿಯನ್ನು ಯಾವಾಗ ನೀವು
ಬ್ರಾಹ್ಮಣರು ಈ ಮಹಾ ಯಜ್ಞದಲ್ಲಿ ಸ್ವಾಹ ಮಾಡುವಿರಿ ಆಗ ಈ ಹಳೆಯ ಸೃಷ್ಟಿಯ ಆಹುತಿಯಾಗುತ್ತದೆ.
ಆದ್ದರಿಂದ ಹೇಗೆ ಯಜ್ಞ ರಚಿಸಲು ನಿಮಿತ್ತರಾದಿರಿ, ಹಾಗೆಯೇ ಈಗ ಅಂತಿಮ ಆಹುತಿಯನ್ನು ಹಾಕಿ
ಸಮಾಪ್ತಿಗೆ ಸಹ ನಿಮಿತ್ತರಾಗಿ.
ಸ್ಲೋಗನ್:
ಸ್ವಯಂ ನಿಂದ, ಸೇವೆಯಿಂದ
ಮತ್ತು ಸರ್ವರಿಂದ ಸಂತುಷ್ಠತೆಯ ರ್ಸಟಿಫಿಕೆಟ್ ತೆಗೆದುಕೊಳ್ಳುವುದೇ ಸಿದ್ಧಿ ಸ್ವರೂಪರಾಗುವುದು.
ಡಬ್ಬಲ್ಲೈಟ್ ಸ್ಥಿತಿಯ
ಅನುಭವ:-
ಬಹಳ
ಯೋಚಿಸುವುದರಿಂದಲೂ ಸೇವೆಯ ವೃದ್ಧಿಯು ಆಗುವುದಿಲ್ಲ. ಯೋಚಿಸದೇ ಇರುವವರಾಗಿದ್ದು ಬುದ್ಧಿಯನ್ನು
ಫ್ರೀಯಾಗಿ ಇಟ್ಟುಕೊಳ್ಳುತ್ತೀರೆಂದರೆ, ತಂದೆಯ ಶಕ್ತಿಯು ಸಹಯೋಗದ ರೂಪದಲ್ಲಿ ಅನುಭವವಾಗುತ್ತದೆ.
ಇದರಿಂದ ಸ್ವತಹವಾಗಿಯೇ ಸೇವೆಯ ವೃದ್ಧಿಯಾಗುತ್ತದೆ. ಬಾಬಾರವರು ಮಾಡಿಸುವವರಾಗಿದ್ದಾರೆ, ಮಾಡುವಂತಹ
ನಿಮಿತ್ತನು ನಾನಾತ್ಮನಾಗಿದ್ದೇನೆ.... ಈ ಸ್ಮೃತಿಯು ಯೋಚನೆ ಮಾಡದಿರುವವರನ್ನಾಗಿ ಮಾಡಿ ಬಿಡುತ್ತದೆ.
ಎಲ್ಲಿ ಯೋಚನೆ ಇಲ್ಲದಿರುವಂತಹ ಸ್ಥಿತಿಯಿರುತ್ತದೆಯೋ, ಅಲ್ಲಿ ಸ್ವತಹವಾಗಿಯೇ ಡಬ್ಬಲ್ಲೈಟ್ ಆಗಿ
ಬಿಡುತ್ತೀರಿ.