30.01.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮ್ಮ
ನೆನಪಿನ ಯಾತ್ರೆಯು ಬಹಳ ಗುಪ್ತವಾಗಿದೆ, ನೀವು ಮಕ್ಕಳು ಈಗ ಮುಕ್ತಿಧಾಮಕ್ಕೆ ಹೋಗುವ ಯಾತ್ರೆ
ಮಾಡುತ್ತಿದ್ದೀರಿ”
ಪ್ರಶ್ನೆ:
ಸ್ಥೂಲ
ವತನವಾಸಿಯಿಂದ ಸೂಕ್ಷ್ಮ ವತನವಾಸಿ ಫರಿಶ್ತೆಗಳಾಗುವ ಪುರುಷಾರ್ಥವೇನಾಗಿದೆ?
ಉತ್ತರ:
ಸೂಕ್ಷ್ಮವತನವಾಸಿ ಫರಿಶ್ತೆಯಾಗಬೇಕೆಂದರೆ ಆತ್ಮಿಕ ಸೇವೆಯಲ್ಲಿ ಮೂಳೆ-ಮೂಳೆಯನ್ನು ಸ್ವಾಹಾ ಮಾಡಿ.
ಮೂಳೆಗಳನ್ನು ಸ್ವಾಹಾ ಮಾಡದೇ ಫರಿಶ್ತೆಗಳಾಗಲು ಸಾಧ್ಯವಿಲ್ಲ ಏಕೆಂದರೆ ಫರಿಶ್ತೆಗಳಿಗೆ
ಮೂಳೆ-ಮಾಂಸಗಳಿರುವುದಿಲ್ಲ. ಈ ಬೇಹದ್ದಿನ ಸೇವೆಯಲ್ಲಿ ದಧೀಚಿ ಋಷಿಯ ತರಹ ಮೂಳೆ-ಮೂಳೆಯನ್ನು
ಸವೆಸಬೇಕಾಗಿದೆ ಆಗ ವ್ಯಕ್ತದಿಂದ ಅವ್ಯಕ್ತರಾಗುವಿರಿ.
ಗೀತೆ:
ಧೈರ್ಯ ತಾಳು ಮಾನವನೇ....
ಓಂ ಶಾಂತಿ.
ಮಕ್ಕಳಿಗೆ ಈ ಗೀತೆಯಿಂದ ಧೈರ್ಯ ತಾಳಿ ಎಂದು ಸೂಚನೆ ಸಿಕ್ಕಿತು. ಮಕ್ಕಳಿಗೆ ತಿಳಿದಿದೆ - ನಾವು
ಶ್ರೀಮತದಂತೆ ಪುರುಷಾರ್ಥ ಮಾಡುತ್ತಿದ್ದೇವೆ ಮತ್ತು ನಾವು ಈ ಗುಪ್ತ ಯೋಗದ ಯಾತ್ರೆಯಲ್ಲಿದ್ದೇವೆ. ಆ
ಯಾತ್ರೆಯಂತೂ ತನ್ನ ಸಮಯದಲ್ಲಿ ಮುಕ್ತಾಯವಾಗಬೇಕಾಗಿದೆ. ಮುಖ್ಯವಾದುದು ಈ ಯಾತ್ರೆಯಾಗಿದೆ. ಇದನ್ನು
ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ಯಾತ್ರೆಗೆ ಖಂಡಿತ ಹೋಗಬೇಕಾಗಿದೆ ಮತ್ತು ಕರೆದುಕೊಂಡು
ಹೋಗುವ ಮಾರ್ಗದರ್ಶಕರೂ ಬೇಕು. ಇದಕ್ಕೆ ಪಾಂಡವ ಸೇನೆಯೆಂದು ಹೆಸರನ್ನಿಡಲಾಗಿದೆ. ಈಗ
ಯಾತ್ರೆಯಲ್ಲಿದ್ದೀರಿ, ಸ್ಥೂಲ ಯುದ್ಧದ ಮಾತಿಲ್ಲ. ಪ್ರತಿಯೊಂದು ಮಾತು ಗುಪ್ತವಾಗಿದೆ, ಯಾತ್ರೆಯೂ
ಬಹಳ ಗುಪ್ತವಾಗಿದೆ. ಶಾಸ್ತ್ರಗಳಲ್ಲಿಯೂ ಇದೆ - ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು
ಮಾಡಿದರೆ ನನ್ನಬಳಿ ಬಂದು ಬಿಡುವಿರಿ. ಇದು ಯಾತ್ರೆಯಾಯಿತಲ್ಲವೆ. ತಂದೆಯು ಎಲ್ಲಾ ಶಾಸ್ತ್ರಗಳ
ಸಾರವನ್ನು ತಿಳಿಸುತ್ತಾರೆ. ಪ್ರತ್ಯಕ್ಷದಲ್ಲಿ ಕಾರ್ಯದಲ್ಲಿ ತೆಗೆದುಕೊಂಡು ಬರುತ್ತಾರೆ. ನಾವಾತ್ಮರು
ನಮ್ಮ ನಿರ್ವಾಣಧಾಮಕ್ಕೆ ಯಾತ್ರೆ ಮಾಡಬೇಕಾಗಿದೆ. ವಿಚಾರ ಮಾಡಿದಾಗ ಅರ್ಥ ಮಾಡಿಕೊಳ್ಳಬಹುದು. ಇದು
ಮುಕ್ತಿಧಾಮದ ಸತ್ಯ ಯಾತ್ರೆಯಾಗಿದೆ. ನಾವು ಮುಕ್ತಿಧಾಮಕ್ಕೆ ಹೋಗಬೇಕು, ಈ ಯಾತ್ರೆಯನ್ನು ಮಾಡಲು
ಯಾರಾದರೂ ಮುಕ್ತಿಧಾಮದ ಮಾರ್ಗವನ್ನು ತಿಳಿಸಲಿ ಎಂದು ಎಲ್ಲರೂ ಬಯಸುತ್ತಾರೆ ಆದರೆ ತಂದೆಯಂತೂ ತಾವೇ
ತಮ್ಮ ಸಮಯದಲ್ಲಿ ಬರುತ್ತಾರೆ ಯಾವ ಸಮಯವನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಬಂದು ತಿಳಿಸಿದಾಗ
ಮಕ್ಕಳಿಗೆ ನಿಶ್ಚಯವಾಗುತ್ತದೆ. ಅವಶ್ಯವಾಗಿ ಇದು ಸತ್ಯ ಯಾತ್ರೆಯಾಗಿದೆ. ಇದರ ಗಾಯನವಿದೆ. ಭಗವಂತನು
ಈ ಯಾತ್ರೆಯನ್ನು ಕಲಿಸಿದ್ದರು - ಮನ್ಮನಾಭವ, ಮಧ್ಯಾಜೀಭವ. ಈ ಶಬ್ಧಗಳೂ ಸಹ ನಿಮಗೆ ಬಹಳ ಉಪಯೋಗಕ್ಕೆ
ಬರುತ್ತವೆ, ಕೇವಲ ಯಾರು ಹೇಳಿದರು ಎಂಬುದನ್ನು ತಪ್ಪು ಮಾಡಿ ಬಿಟ್ಟಿದ್ದಾರೆ. ದೇಹ ಸಹಿತ ದೇಹದ
ಎಲ್ಲಾ ಸಂಬಂಧಗಳನ್ನು ಮರೆಯಿರಿ ಎಂದು ಹೇಳುತ್ತಾರೆ. ಇವರಿಗೂ (ಬ್ರಹ್ಮಾ) ದೇಹವಿದೆ, ಇವರಿಗೂ ಸಹ
ತಿಳಿಸುವವರು ಇನ್ನೊಬ್ಬರಿದ್ದಾರೆ. ಅವರಿಗೆ ತನ್ನದೇ ಆದ ದೇಹವಿಲ್ಲ, ಅವರು ವಿಚಿತ್ರ
ತಂದೆಯಾಗಿದ್ದಾರೆ. ಅವರಿಗೆ ಯಾವುದೇ ಚಿತ್ರವಿಲ್ಲ. ಮತ್ತೆಲ್ಲರಿಗೂ ಚಿತ್ರವಿದೆ, ಇಡೀ ಪ್ರಪಂಚವು
ಚಿತ್ರ ಶಾಲೆಯಾಗಿದೆ. ವಿಚಿತ್ರ ಮತ್ತು ಚಿತ್ರ ಅರ್ಥಾತ್ ಜೀವ ಮತ್ತು ಆತ್ಮನ ಈ ಮನುಷ್ಯ ಸ್ವರೂಪವು
ಮಾಡಲ್ಪಟ್ಟಿದೆ. ಆ ತಂದೆಯು ವಿಚಿತ್ರನಾಗಿದ್ದಾರೆ. ತಿಳಿಸುತ್ತಾರೆ, ನಾನು ಈ ಚಿತ್ರ (ಶರೀರ) ದ
ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಶಾಸ್ತ್ರಗಳಲ್ಲಿದೆ - ಭಗವಂತನು ತಿಳಿಸಿದ್ದರು, ಯಾವಾಗ
ಮಹಾಭಾರತ ಯುದ್ಧವೂ ಆಗಿತ್ತು, ರಾಜಯೋಗವನ್ನೂ ಕಲಿಸುತ್ತಿದ್ದರು, ಅವಶ್ಯವಾಗಿ ರಾಜಧಾನಿಯೂ
ಸ್ಥಾಪನೆಯಾಗಿತ್ತು. ಈಗಂತೂ ರಾಜಧಾನಿಯಿಲ್ಲ, ರಾಜಯೋಗವನ್ನು ಹೊಸ ಪ್ರಪಂಚಕ್ಕಾಗಿ ಭಗವಂತನು
ಕಲಿಸಿದ್ದರು ಏಕೆಂದರೆ ವಿನಾಶವು ಸಮ್ಮುಖದಲ್ಲಿತ್ತು. ಈ ರೀತಿಯಾಗಿತ್ತು ಯಾವಾಗ ಸ್ವರ್ಗದ
ಸ್ಥಾಪನೆಯಾಗಿತ್ತು. ಲಕ್ಷ್ಮೀ-ನಾರಾಯಣರ ರಾಜ್ಯ ಸ್ಥಾಪನೆಯಾಗಿತ್ತು ಎಂದು ತಿಳಿಸಲಾಗುತ್ತದೆ. ಈಗ
ನಿಮ್ಮ ಬುದ್ಧಿಯಲ್ಲಿದೆ - ಸತ್ಯಯುಗವಿತ್ತು, ಈಗ ಕಲಿಯುಗವಾಗಿದೆ ಮತ್ತೆ ತಂದೆಯು ಅದೇ ಮಾತುಗಳನ್ನು
ತಿಳಿಸುತ್ತಾರೆ. ನಿಮ್ಮನ್ನು ಹಿಂತಿರುಗಿ ಕರೆದುಕೊಂಡು ಹೋಗಲು ನಾನು ಪರಮಧಾಮದಿಂದ ಬರುತ್ತೇನೆಂದು
ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಪರಮಪಿತ ಪರಮಾತ್ಮನೇ ಬ್ರಹ್ಮಾರವರ ಮೂಲಕ ಹೇಳಬಲ್ಲರು, ಮತ್ತ್ಯಾರ
ಮೂಲಕವೂ ಹೇಳಲು ಸಾಧ್ಯವಿಲ್ಲ. ಸೂಕ್ಷ್ಮವತನದಲ್ಲಿ ಬ್ರಹ್ಮಾ-ವಿಷ್ಣು-ಶಂಕರರಿದ್ದಾರೆ. ಬ್ರಹ್ಮನ
ಬಗ್ಗೆಯೂ ತಿಳಿಸಲಾಗಿದೆ - ಸೂಕ್ಷ್ಮವತನದಲ್ಲಿ ಅವ್ಯಕ್ತಬ್ರಹ್ಮನಿದ್ದಾರೆ ಮತ್ತು ಇಲ್ಲಿದ್ದಾಗ
ವ್ಯಕ್ತ ಬ್ರಹ್ಮನಾಗಿದ್ದಾರೆ. ನೀವೀಗ ಫರಿಶ್ತೆಗಳಾಗುತ್ತೀರಿ. ಫರಿಶ್ತೆಗಳು
ಸ್ಥೂಲವತನದಲ್ಲಿರುವುದಿಲ್ಲ, ಫರಿಶ್ತೆಗಳಿಗೆ ಮೂಳೆ-ಮಾಂಸವಿರುವುದಿಲ್ಲ. ಇಲ್ಲಿ ಈ ಆತ್ಮಿಕ
ಸೇವೆಯಲ್ಲಿ ತಮ್ಮ ಮೂಳೆಗಳನ್ನೂ ಸ್ವಾಹ ಮಾಡಿ ನಂತರ ಫರಿಶ್ತೆಗಳಾಗಿ ಬಿಡುತ್ತೀರಿ. ಈಗಂತೂ
ಮೂಳೆಗಳಿದೆಯಲ್ಲವೆ. ತನ್ನ ಮೂಳೆಗಳನ್ನೂ ಸಹ ಸೇವೆಗಾಗಿ ಕೊಟ್ಟು ಬಿಟ್ಟರೆಂದು ಬರೆಯಲ್ಪಟ್ಟಿದೆ
ಅಂದರೆ ತಮ್ಮ ಮೂಳೆಗಳನ್ನು ಸೇವೆಯಲ್ಲಿ ಸಮಾಪ್ತಿ ಮಾಡುತ್ತೀರಿ. ಸ್ಥೂಲವತನದಿಂದ
ಸೂಕ್ಷ್ಮವತನವಾಸಿಗಳಾಗಬೇಕಾಗಿದೆ ಎಲ್ಲಿ ನಾವು ಮೂಳೆಗಳನ್ನು ಸ್ವಾಹಾ ಮಾಡಿ ಸೂಕ್ಷ್ಮ ಆಗಿ
ಬಿಡುತ್ತೇವೆ. ಈ ಸರ್ವೀಸಿನಲ್ಲಿ ಎಲ್ಲವನ್ನೂ ಸ್ವಾಹ ಮಾಡಬೇಕಾಗಿದೆ. ನೆನಪಿನಲ್ಲಿರುತ್ತಾ-ಇರುತ್ತಾ
ನಾವು ಫರಿಶ್ತೆಗಳಾಗುತ್ತೇವೆ. ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂದು ಗಾಯನವಿದೆ.
ಫರಿಶ್ತೆಗಳನ್ನು ಬೆಕ್ಕಿಗೆ ಹೋಲಿಸಿ ಹೇಳಲಾಗುತ್ತದೆ. ನೀವು ಮನುಷ್ಯರಿಂದ ಫರಿಶ್ತೆಗಳಾಗುತ್ತೀರಿ,
ನಿಮಗೆ ದೇವತೆಗಳೆಂದು ಹೇಳಲು ಸಾಧ್ಯವಿಲ್ಲ. ಇಲ್ಲಂತೂ ನಿಮಗೆ ಶರೀರವಿದೆಯಲ್ಲವೆ. ಸೂಕ್ಷ್ಮವತನದ
ವರ್ಣನೆಯನ್ನೂ ಸಹ ಈ ಸಮಯದಲ್ಲಿಯೇ ಮಾಡಲಾಗುತ್ತದೆ. ಯೋಗದಲ್ಲಿದ್ದು ಮತ್ತೆ ಫರಿಶ್ತೆಗಳಾಗಿ
ಬಿಡುತ್ತೀರಿ. ಅಂತಿಮದಲ್ಲಿ ನೀವು ಫರಿಶ್ತೆಗಳಾಗಿ ಬಿಡುವಿರಿ. ನಿಮಗೆ ಎಲ್ಲವೂ
ಸಾಕ್ಷಾತ್ಕಾರವಾಗುವುದು ಮತ್ತು ಖುಷಿಯಿರುವುದು. ಮನುಷ್ಯರೆಲ್ಲರೂ ಕಾಲದ ಬೇಟೆಗೆ ಸಿಕ್ಕಿ
ಬೀಳುತ್ತಾರೆ. ನಿಮ್ಮಲ್ಲಿ ಯಾರು ಮಹಾವೀರರಿದ್ದಾರೆಯೋ ಅವರು ಅಡೋಲರಾಗಿರುತ್ತಾರೆ. ಉಳಿದಂತೆ ಏನೇನೋ
ಆಗುತ್ತಿರುವುದು! ವಿನಾಶದ ದೃಶ್ಯವೂ ಸಹ ಆಗಬೇಕಲ್ಲವೆ. ಅರ್ಜುನನಿಗೆ ವಿನಾಶದ ಸಾಕ್ಷಾತ್ಕಾರವಾಯಿತು,
ಇದು ಒಬ್ಬ ಅರ್ಜುನನ ಮಾತಲ್ಲ. ನೀವು ಮಕ್ಕಳಿಗೆ ವಿನಾಶ ಮತ್ತು ಸ್ಥಾಪನೆಯ ಸಾಕ್ಷಾತ್ಕಾರವಾಗುತ್ತದೆ.
ಮೊಟ್ಟ ಮೊದಲು ಬ್ರಹ್ಮಾ ತಂದೆಗೂ ವಿನಾಶದ ಸಾಕ್ಷಾತ್ಕಾರವಾಯಿತು, ಆ ಸಮಯದಲ್ಲಿ ಜ್ಞಾನವೇನೂ
ಇರಲಿಲ್ಲ. ಸೃಷ್ಟಿಯ ವಿನಾಶವಾಗುತ್ತಿರುವುದನ್ನು ನೋಡಿದರು ಮತ್ತು ಚತುರ್ಭುಜನ ಸಾಕ್ಷಾತ್ಕಾರವಾಯಿತು.
ಆಗ ಇದಂತೂ ಚೆನ್ನಾಗಿದೆ ಎಂದು ತಿಳಿದುಕೊಂಡರು. ವಿನಾಶದ ನಂತರ ನಾನು ವಿಶ್ವದ ಮಾಲೀಕನಾಗುತ್ತೇನೆ
ಎಂದು ಖುಷಿ ಬಂದು ಬಿಟ್ಟಿತು. ಈ ವಿನಾಶವು ಒಳ್ಳೆಯದೇ ಆಗಿದೆ ಎಂಬುದು ಈ ಪ್ರಪಂಚದವರಿಗೆ
ಗೊತ್ತಿಲ್ಲ. ಶಾಂತಿಗಾಗಿ ಪ್ರಯತ್ನ ಪಡುತ್ತಾರೆ ಆದರೆ ಕೊನೆಗೆ ವಿನಾಶವಂತೂ ಆಗಲೇಬೇಕಾಗಿದೆ.
ಪತಿತ-ಪಾವನ ಬನ್ನಿ ಎಂದು ನೆನಪು ಮಾಡುತ್ತಾರೆ ಅಂದಮೇಲೆ ತಂದೆಯು ಖಂಡಿತ ಬಂದು ಪಾವನ ಪ್ರಪಂಚದ
ಸ್ಥಾಪನೆ ಮಾಡುತ್ತಾರೆ ಅದರಲ್ಲಿ ನಾವು ಬಂದು ರಾಜ್ಯಭಾರ ಮಾಡುತ್ತೇವೆ. ಇದಂತೂ ಒಳ್ಳೆಯದಲ್ಲವೆ.
ಪತಿತ-ಪಾವನನನ್ನು ಏಕೆ ನೆನಪು ಮಾಡುತ್ತಾರೆ? ಏಕೆಂದರೆ ದುಃಖವಿದೆ. ಪಾವನ ಪ್ರಪಂಚದಲ್ಲಿ
ದೇವತೆಗಳಿರುತ್ತಾರೆ, ಪತಿತ ಪ್ರಪಂಚದಲ್ಲಂತೂ ದೇವತೆಗಳು ಹೆಜ್ಜೆಯನ್ನಿಡಲೂ ಸಾಧ್ಯವಿಲ್ಲ.
ಆದ್ದರಿಂದ ಖಂಡಿತವಾಗಿಯೂ ಪತಿತ ಪ್ರಪಂಚದ ವಿನಾಶವಾಗಬೇಕು. ಮಹಾ ವಿನಾಶವಾಯಿತೆಂದು ಗಾಯನವಿದೆ. ಅದರ
ನಂತರ ಏನಾಗುತ್ತದೆ? ಒಂದು ಧರ್ಮದ ಸ್ಥಾಪನೆ ಅಂದಮೇಲೆ ಇದೇ ರೀತಿ ಆಗುತ್ತದೆಯಲ್ಲವೆ. ಇಲ್ಲಿಂದಲೇ
ರಾಜಯೋಗವನ್ನು ಕಲಿಯುತ್ತಾರೆ. ವಿನಾಶವಾಗುವುದು ಬಾಕಿ ಭಾರತದಲ್ಲಿ ಯಾರು ಉಳಿಯುವರು? ಯಾರು
ರಾಜಯೋಗವನ್ನು ಕಲಿಯುವರೋ, ಜ್ಞಾನವನ್ನು ಕೊಡುವರೋ ಅವರೇ ಉಳಿಯುತ್ತಾರೆ. ಎಲ್ಲದರ
ವಿನಾಶವಾಗಬೇಕಾಗಿದೆ. ಇದರಲ್ಲಿ ಹೆದರುವ ಮಾತಿಲ್ಲ. ಪತಿತ-ಪಾವನನ್ನು ಕರೆಯುತ್ತಾರೆ, ಅವರು
ಬರುತ್ತಾರೆಂದಮೇಲೆ ಖುಷಿಯಾಗಬೇಕಲ್ಲವೆ. ತಂದೆಯು ತಿಳಿಸುತ್ತಾರೆ - ವಿಕಾರದಲ್ಲಿ ಹೋಗಬೇಡಿ, ಈ
ವಿಕಾರದ ಮೇಲೆ ಜಯ ಗಳಿಸಿ ಅಥವಾ ದಾನ ಕೊಟ್ಟರೆ ಗ್ರಹಣವು ಬಿಡುವುದು. ಭಾರತದ ಗ್ರಹಣವು ಖಂಡಿತ
ಬಿಡುಗಡೆಯಾಗುವುದು. ಎಲ್ಲರೂ ಶ್ಯಾಮನಿಂದ ಸುಂದರರಾಗಬೇಕಾಗಿದೆ. ಸತ್ಯಯುಗದಲ್ಲಿ ಪವಿತ್ರ
ದೇವತೆಗಳಿದ್ದರು ಅಂದಮೇಲೆ ಅವರು ಅವಶ್ಯವಾಗಿ ಇಲ್ಲಿಂದಲೇ ಆಗಿರುವರು.
ಶ್ರೀಮತದಿಂದ ನಾವು ನಿರ್ವಿಕಾರಿಗಳಾಗುತ್ತೇವೆ ಎಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ.
ಭಗವಾನುವಾಚ - ಇದು ಗುಪ್ತವಾಗಿದೆ. ಶ್ರೀಮತದಂತೆ ನಡೆದು ನೀವು ರಾಜ್ಯಭಾಗ್ಯವನ್ನು ಪಡೆಯುತ್ತೀರಿ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ನರನಿಂದ ನಾರಾಯಣರಾಗುತ್ತೀರಿ, ಸೆಕೆಂಡಿನಲ್ಲಿ
ರಾಜ್ಯಭಾಗ್ಯ ಸಿಗುತ್ತದೆ. ಆದಿಯಲ್ಲಿ ಕನ್ಯೆಯರು ನಾಲ್ಕೈದು ದಿನಗಳಾದರೂ ವೈಕುಂಠದಲ್ಲಿ ಇದ್ದು
ಬಿಡುತ್ತಿದ್ದರು. ಶಿವ ತಂದೆಯು ಬಂದು ಮಕ್ಕಳಿಗೆ ವೈಕುಂಠದ ಸಾಕ್ಷಾತ್ಕಾರ ಮಾಡಿಸುತ್ತಿದ್ದರು.
ದೇವತೆಗಳು ಎಷ್ಟು ಘನತೆಯಿಂದ ಬರುತ್ತಿದ್ದರು. ಆದ್ದರಿಂದ ಮಕ್ಕಳಿಗೆ ಹೃದಯಕ್ಕೆ ನಾಟುತ್ತದೆ
ಅವಶ್ಯವಾಗಿ ಗುಪ್ತ ವೇಷದಲ್ಲಿ ಬರುವಂತಹ ತಂದೆಯು ನಮಗೆ ತಿಳಿಸುತ್ತಿದ್ದಾರೆ. ಬ್ರಹ್ಮಾರವರ
ತನುವಿನಲ್ಲಿ ಬರುತ್ತಾರೆ, ಬ್ರಹ್ಮಾರವರ ಶರೀರವು ಇಲ್ಲಿಯೇ ಬೇಕಲ್ಲವೆ. ಪ್ರಜಾಪಿತ ಬ್ರಹ್ಮಾನ ಮೂಲಕ
ಸ್ಥಾಪನೆ. ತಂದೆಯು ತಿಳಿಸಿದ್ದಾರೆ - ಯಾರೇ ಬಂದರೂ ಸಹ ಅವರೊಂದಿಗೆ ಕೇಳಿ, ನೀವು ಯಾರಬಳಿ
ಬರುತ್ತೀರಿ? ಬ್ರಹ್ಮಾಕುಮಾರಿಯರ ಬಳಿ ಎಂದು ಹೇಳುತ್ತಾರೆ. ಆಗ ಒಳ್ಳೆಯದು, ಬ್ರಹ್ಮನ
ಹೆಸರನ್ನೆಂದಾದರೂ ಕೇಳಿದ್ದೀರಾ? ಎಂದು ಪ್ರಶ್ನಿಸಿ. ಪ್ರಜಾಪಿತನಂತೂ ಇದ್ದಾರಲ್ಲವೆ. ನಾವೆಲ್ಲರೂ
ಅವರ ಮಕ್ಕಳಾಗಿದ್ದೇವೆ. ಮೊದಲೂ ಸಹ ಆಗಿದ್ದೆವು, ಬ್ರಹ್ಮಾರವರ ಮೂಲಕ ಸ್ಥಾಪನೆಯೆಂದರೆ ಜೊತೆಯಲ್ಲಿ
ಬ್ರಾಹ್ಮಣರೂ ಬೇಕಲ್ಲವೆ. ತಂದೆಯು ಬ್ರಹ್ಮಾರವರ ಮೂಲಕ ಯಾರಿಗೆ ತಿಳಿಸುತ್ತಾರೆ? ಶೂದ್ರರಿಗಂತೂ
ತಿಳಿಸುವುದಿಲ್ಲ. ಇವರು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗಿದ್ದಾರೆ. ಶಿವ ತಂದೆಯು ಬ್ರಹ್ಮಾರವರ
ಮೂಲಕ ಬಂದು ತನ್ನ ಮಕ್ಕಳನ್ನಾಗಿ ಮಾಡಿಕೊಂಡಿದ್ದಾರೆ. ಬ್ರಹ್ಮಾಕುಮಾರ-ಕುಮಾರಿಯರು ಎಷ್ಟೊಂದು ಮಂದಿ
ಇದ್ದಾರೆ! ಎಷ್ಟೊಂದು ಸೇವಾಕೇಂದ್ರಗಳಿವೆ! ಎಲ್ಲಾ ಸೇವಾಕೇಂದ್ರಗಳಲ್ಲಿ ಬ್ರಹ್ಮಾಕುಮಾರಿಯರು
ಓದಿಸುತ್ತಾರೆ. ಇಲ್ಲಿ ನಮಗೆ ತಾತನ ಆಸ್ತಿಯು ಸಿಗುತ್ತದೆ. ಭಗವಾನುವಾಚ - ನಿಮಗೆ ರಾಜಯೋಗವನ್ನು
ಕಲಿಸುತ್ತೇನೆ. ತಂದೆಯು ನಿರಾಕಾರನಾಗಿರುವ ಕಾರಣ ಇವರ ಶರೀರವನ್ನು ಆಧಾರವನ್ನಾಗಿ ತೆಗೆದುಕೊಂಡು
ನಮಗೆ ಜ್ಞಾನವನ್ನು ತಿಳಿಸುತ್ತಾರೆ. ಪ್ರಜಾಪಿತನಿಗೆ ಎಲ್ಲರೂ ಮಕ್ಕಳಾಗಿರಬೇಕಲ್ಲವೆ! ನಾವು
ಪ್ರಜಾಪಿತ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರಾಗಿದ್ದೇವೆ, ಶಿವ ತಂದೆಯು ತಾತನಾಗಿದ್ದಾರೆ. ಅವರು
ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ. ಬ್ರಹ್ಮಾರವರ ಮೂಲಕ ನಾವು ತಾತನಿಂದ ಓದುತ್ತಿದ್ದೇವೆಂದು
ನಿಮಗೆ ತಿಳಿದಿದೆ. ಈ ಲಕ್ಷ್ಮೀ-ನಾರಾಯಣ ಇಬ್ಬರೂ ಸ್ವರ್ಗದ ಮಾಲೀಕರಲ್ಲವೆ. ಭಗವಂತನು ಒಬ್ಬರೇ
ಶ್ರೇಷ್ಠಾತಿ ಶ್ರೇಷ್ಠ ನಿರಾಕಾರನಾಗಿದ್ದಾರೆ. ಮಕ್ಕಳಿಗೆ ಧಾರಣೆಯೂ ಬಹಳ ಚೆನ್ನಾಗಿರಬೇಕು. ಮೊಟ್ಟ
ಮೊದಲಿಗೆ ತಿಳಿಸಿ, ಭಕ್ತಿಮಾರ್ಗದಲ್ಲಿ ಇಬ್ಬರು ತಂದೆಯರಿರುತ್ತಾರೆ. ಸ್ವರ್ಗದಲ್ಲಿ ಒಬ್ಬರೇ
ತಂದೆಯಿರುತ್ತಾರೆ. ಈಗ ಪಾರಲೌಕಿಕ ತಂದೆಯ ಮೂಲಕ ಆಸ್ತಿಯು ಸಿಕ್ಕಿದನಂತರ ಮತ್ತೆ ಸತ್ಯಯುಗದಲ್ಲಿ
ನೆನಪೇಕೆ ಮಾಡುತ್ತೀರಿ! ಅವರನ್ನು ನೆನಪು ಮಾಡಲು ಅಲ್ಲಿ ದುಃಖವೇ ಇರುವುದಿಲ್ಲ. ದುಃಖಹರ್ತ,
ಸುಖಕರ್ತನೆಂದು ಹಾಡುತ್ತಾರೆ. ಅದು ಈಗಿನ ಮಾತಾಗಿದೆ. ಯಾವುದು ಕಳೆದು ಹೋಗುವುದೋ ನಂತರ ಅದರ
ಗಾಯನವಾಗುತ್ತದೆ. ಮಹಿಮೆಯು ಒಬ್ಬರದೇ ಆಗಿದೆ. ಆ ಒಬ್ಬ ತಂದೆಯೇ ಬಂದು ಪತಿತರನ್ನು ಪಾವನ
ಮಾಡುತ್ತಾರೆ. ಮನುಷ್ಯರು ಇದನ್ನು ತಿಳಿದುಕೊಂಡಿಲ್ಲ. ಅವರು ಕಳೆದು ಹೋದ ಕಥೆಯನ್ನು ಬರೆಯುತ್ತಾರೆ.
ನೀವೀಗ ತಿಳಿದುಕೊಳ್ಳುತ್ತೀರಿ - ಅವಶ್ಯವಾಗಿ ತಂದೆಯು ರಾಜಯೋಗವನ್ನು ಕಲಿಸಿದರು ಯಾವುದರಿಂದ
ರಾಜ್ಯಭಾಗ್ಯ ಸಿಕ್ಕಿತು. ನಂತರ 84 ಜನ್ಮಗಳ ಚಕ್ರವನ್ನು ಸುತ್ತಿದೆವು ಈಗ ಪುನಃ ನಾವು
ಓದುತ್ತಿದ್ದೇವೆ ನಂತರ 21 ಜನ್ಮಗಳವರೆಗೆ ರಾಜ್ಯಭಾರ ಮಾಡುತ್ತೇವೆ. ಇಂತಹ ದೇವತೆಗಳಾಗುತ್ತೇವೆ.
ಕಲ್ಪದ ಮೊದಲೂ ಸಹ ಈ ರೀತಿ ಆಗಿದ್ದೆವು, ನಾವು ಪೂರ್ಣ 84 ಜನ್ಮಗಳ ಚಕ್ರವನ್ನು ಸುತ್ತಿದೆವು ಎಂದು
ನೀವು ತಿಳಿದುಕೊಳ್ಳುತ್ತೀರಿ, ಈಗ ಮತ್ತೆ ಸತ್ಯ-ತ್ರೇತಾಯುಗದಲ್ಲಿ ಹೋಗುತ್ತೀರಿ. ಆದ್ದರಿಂದಲೇ
ತಂದೆಯು ಹೇಳುತ್ತಾರೆ - ಮಕ್ಕಳೇ, ಮೊದಲು ಎಂದಾದರೂ ಮಿಲನ ಮಾಡಿದ್ದಿರಾ? ಇದು ಪ್ರತ್ಯಕ್ಷದ
ಮಾತಲ್ಲವೆ. ಯಾರಾದರೂ ಹೊಸಬರು ಕೇಳಿದರೆ 84 ಜನ್ಮಗಳ ಚಕ್ರವಂತೂ ಸರಿಯಾಗಿದೆ ಎಂಬುದನ್ನು
ತಿಳಿದುಕೊಳ್ಳುತ್ತಾರೆ. ಯಾರು ಮೊದಲಿನವರಿದ್ದಾರೆಯೋ ಅವರದೇ ಚಕ್ರವು ಪೂರ್ಣವಾಗಿದೆ. ಬುದ್ಧಿಯಿಂದ
ಕೆಲಸ ತೆಗೆದುಕೊಳ್ಳಬೇಕು. ಈ ಮನೆಯಲ್ಲಿ ಇದೇ ಉಡುಪಿನಲ್ಲಿ ಬಾಬಾ, ನಾವು ತಮ್ಮೊಂದಿಗೆ ಅನೇಕ ಬಾರಿ
ಮಿಲನ ಮಾಡಿದ್ದೇವೆ ಮತ್ತು ಮಾಡುತ್ತಾ ಇರುತ್ತೇವೆ. ಪತಿತರಿಂದ ಪಾವನ, ಪಾವನರಿಂದ ಪತಿತರಾಗುತ್ತಲೇ
ಬಂದಿದ್ದೀರಿ. ಯಾವುದೇ ವಸ್ತು ಸದಾ ಹೊಸದಾಗಿರಲು ಸಾಧ್ಯವಿಲ್ಲ. ಅದು ಖಂಡಿತ ಹಳೆಯದಾಗುತ್ತದೆ.
ಪ್ರತೀ ವಸ್ತು ಸತೋ, ರಜೋ, ತಮೋದಲ್ಲಿ ಬರುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ – ಹೊಸ ಪ್ರಪಂಚ
ಬರುತ್ತಿದೆ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಇದು ನರಕವಾಗಿದೆ. ಅದು ಪಾವನ ಪ್ರಪಂಚವಾಗಿದೆ.
ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿ ಎಂದು ಬಹಳ ಮಂದಿ ಕರೆಯುತ್ತಾರೆ ಏಕೆಂದರೆ ದುಃಖವು
ಅತಿಯಾಗುತ್ತಾ ಹೋಗುತ್ತಿದೆಯಲ್ಲವೆ ಆದರೆ ನಾವೇ ಪೂಜ್ಯರಾಗಿದ್ದೆವು, ನಂತರ ಪೂಜಾರಿಗಳಾಗಿದ್ದೇವೆ.
ದ್ವಾಪರದಲ್ಲಿ ಪೂಜಾರಿಗಳಾದೆವು. ಅನೇಕ ಧರ್ಮಗಳಾಗುತ್ತಾ ಹೋಯಿತು ಎಂಬುದನ್ನು ತಿಳಿದುಕೊಂಡಿಲ್ಲ.
ಅವಶ್ಯವಾಗಿ ಪತಿತರಿಂದ ಪಾವನ, ಪಾವನರಿಂದ ಪತಿತರಾಗುತ್ತಾ ಬಂದಿದ್ದೀರಿ. ಎಲ್ಲಾ ಆಟವು ಭಾರತದ
ಮೇಲಿದೆ.
ಈಗ ನೀವು ಮಕ್ಕಳಿಗೆ ಸ್ಮೃತಿ ಬಂದಿದೆ - ನೀವೀಗ ಶಿವ ಜಯಂತಿಯನ್ನಾಚರಿಸುತ್ತೀರಿ. ಮತ್ಯ್ತಾರೂ
ಶಿವನನ್ನು ಅರಿತುಕೊಂಡಿಲ್ಲ, ನಾವು ಅರಿತುಕೊಂಡಿದ್ದೇವೆ. ಅವಶ್ಯವಾಗಿ ನಮಗೆ ರಾಜಯೋಗವನ್ನು
ಕಲಿಸುತ್ತಾರೆ, ಬ್ರಹ್ಮಾರವರ ಮೂಲಕ ಸ್ವರ್ಗದ ಸ್ಥಾಪನೆಯಾಗುತ್ತಿದೆ. ಅವಶ್ಯವಾಗಿ ಯಾರು ಯೋಗವನ್ನು
ಕಲಿಯುವರೋ, ಸ್ಥಾಪನೆ ಮಾಡುವರೋ ಅವರೇ ಮತ್ತೆ ರಾಜ್ಯಭಾಗ್ಯವನ್ನು ಪಡೆಯುತ್ತಾರೆ. ನಾವು ಹೇಳುತ್ತೇವೆ,
ನಾವು ಕಲ್ಪ-ಕಲ್ಪವೂ ತಂದೆಯಿಂದ ಈ ರಾಜಯೋಗವನ್ನು ಕಲಿತಿದ್ದೇವೆ. ತಂದೆಯು ತಿಳಿಸಿದ್ದಾರೆ - ಈಗ ಈ
84 ಜನ್ಮಗಳ ಚಕ್ರವು ಪೂರ್ಣವಾಗುತ್ತದೆ. ಮತ್ತೆ ಹೊಸದಾಗಿ ಚಕ್ರವನ್ನು ಸುತ್ತಬೇಕಾಗಿದೆ.
ಚಕ್ರವನ್ನಂತೂ ತಿಳಿದುಕೊಳ್ಳಬೇಕಲ್ಲವೆ. ಭಲೆ ಈ ಚಿತ್ರಗಳಿಲ್ಲದಿದ್ದರೂ ಸಹ ನೀವು ಅನ್ಯರಿಗೆ
ತಿಳಿಸಬಲ್ಲಿರಿ. ಇದು ಬಹಳ ಸಹಜ ಮಾತಾಗಿದೆ. ಅವಶ್ಯವಾಗಿ ಭಾರತವು ಸ್ವರ್ಗವಾಗಿತ್ತು, ಈಗ ನರಕವಾಗಿದೆ.
ಕಲಿಯುಗವು ಇನ್ನೂ ಮಗುವಾಗಿದೆ ಎಂದು ಅವರು ತಿಳಿಯುತ್ತಾರೆ ಆದರೆ ಇದಂತೂ ಕಲಿಯುಗದ ಅಂತ್ಯವಾಗಿದೆ.
ಚಕ್ರವು ಈಗ ಪೂರ್ಣವಾಗುತ್ತದೆಯೆಂದು ನೀವು ಹೇಳುತ್ತೀರಿ. ತಂದೆಯೂ ತಿಳಿಸುತ್ತಾರೆ - ನಾನು ಪತಿತ
ಪ್ರಪಂಚವನ್ನು ಪಾವನ ಮಾಡಲು ಬರುತ್ತೇನೆ. ನಿಮಗೆ ತಿಳಿದಿದೆ - ನಾವು ಪಾವನ ಪ್ರಪಂಚದಲ್ಲಿ
ಹೋಗಬೇಕಾಗಿದೆ. ನೀವು ಮುಕ್ತಿ-ಜೀವನ್ಮುಕ್ತಿಧಾಮ, ಶಾಂತಿಧಾಮ, ಸುಖಧಾಮ ಮತ್ತು ದುಃಖಧಾಮವನ್ನೂ
ತಿಳಿದುಕೊಂಡಿದ್ದೀರಿ ಆದರೆ ಯಾರ ಅದೃಷ್ಟದಲ್ಲಿಲ್ಲವೋ ಅವರಿಗೆ ನಾವು ಸ್ವರ್ಗದಲ್ಲಿ ಹೋಗಬೇಕೆಂಬ
ವಿಚಾರವೇ ಬರುವುದಿಲ್ಲ. ಅವಶ್ಯವಾಗಿ ನಾವಾತ್ಮರ ಮನೆಯು ಆ ಶಾಂತಿಧಾಮವಾಗಿದೆ. ಅಲ್ಲಿ ಆತ್ಮಕ್ಕೆ
ಕರ್ಮೇಂದ್ರಿಯಗಳೂ ಇಲ್ಲದ ಕಾರಣ ಏನನ್ನೂ ಮಾತನಾಡುವುದಿಲ್ಲ. ಅಲ್ಲಿ ಎಲ್ಲರಿಗೆ ಶಾಂತಿ ಸಿಗುತ್ತದೆ
ಮತ್ತೆ ಸತ್ಯಯುಗದಲ್ಲಿ ಒಂದು ಧರ್ಮವಿರುತ್ತದೆ. ಇದು ಅನಾದಿ ಅವಿನಾಶಿ, ವಿಶ್ವ ನಾಟಕವಾಗಿದೆ. ಈ
ಚಕ್ರವು ಸುತ್ತುತ್ತಲೇ ಇರುತ್ತದೆ. ಆತ್ಮವೆಂದೂ ವಿನಾಶವಾಗುವುದಿಲ್ಲ. ಶಾಂತಿಧಾಮದಲ್ಲಿ ಸ್ವಲ್ಪ
ಸಮಯ ಇರಲೇಬೇಕಾಗುವುದು. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಕಲಿಯುಗವು ದುಃಖಧಾಮವಾಗಿದೆ.
ಅನೇಕ ಧರ್ಮಗಳಿವೆ, ಎಷ್ಟೊಂದು ಹೊಡೆದಾಟಗಳಿವೆ. ಯಾವಾಗ ಸಂಪೂರ್ಣ ದುಃಖಧಾಮವಾಗುವುದೋ ಆಗಲೇ ತಂದೆಯು
ಬರುತ್ತಾರೆ, ದುಃಖಧಾಮದ ನಂತರ ಪೂರ್ಣ ಸುಖಧಾಮವಾಗುವುದು. ನಾವು ಶಾಂತಿಧಾಮದಿಂದ ಸುಖಧಾಮಕ್ಕೆ
ಬರುತ್ತೇವೆ ನಂತರ ದುಃಖಧಾಮವಾಗುತ್ತದೆ. ಸತ್ಯಯುಗದಲ್ಲಿ ಸಂಪೂರ್ಣ ನಿರ್ವಿಕಾರಿಗಳಿರುತ್ತಾರೆ,
ಇಲ್ಲಿ ಸಂಪೂರ್ಣ ವಿಕಾರಿಗಳಿದ್ದಾರೆ. ಇದನ್ನು ತಿಳಿಸುವುದು ಬಹಳ ಸಹಜವಲ್ಲವೆ. ಇದರಲ್ಲಿಯೂ
ಧೈರ್ಯಬೇಕು. ಎಲ್ಲಿಬೇಕಾದರೂ ಹೋಗಿ ತಿಳಿಸಿ. ಇದೂ ಸಹ ಬರೆಯಲ್ಪಟ್ಟಿದೆ - ಹನುಮಂತನು ಸತ್ಸಂಗದಲ್ಲಿ
ಹಿಂದೆ ಪಾದರಕ್ಷೆಯ ಬಳಿ ಕುಳಿತು ಕೇಳುತ್ತಿದ್ದನು ಅಂದಾಗ ಯಾರು ಮಹಾವೀರರಾಗಿರುವರೋ ಅವರು ಎಲ್ಲಿ
ಬೇಕಾದರೂ ಹೋಗಿ ಯುಕ್ತಿಯಿಂದ ಅವರು ಏನು ಹೇಳುತ್ತಾರೆ ಎಂದು ಕೇಳಿಸಿಕೊಳ್ಳುತ್ತಾರೆ. ನೀವು ವೇಷ
ಬದಲಾಯಿಸಿಕೊಂಡು ಎಲ್ಲಿ ಬೇಕಾದರೂ ಹೋಗಿ ಅವರ ಕಲ್ಯಾಣ ಮಾಡಬಹುದು. ತಂದೆಯೂ ಸಹ ಗುಪ್ತ ವೇಷದಲ್ಲಿ
ನಿಮ್ಮ ಕಲ್ಯಾಣ ಮಾಡುತ್ತಿದ್ದಾರಲ್ಲವೆ. ಮಂದಿರಗಳಲ್ಲಿ ಎಲ್ಲಿಗೇ ನಿಮಂತ್ರಣ ಸಿಕ್ಕಿದರೆ ಹೋಗಿ
ತಿಳಿಸಬೇಕಾಗಿದೆ. ದಿನ-ಪ್ರತಿದಿನ ನೀವು ಬುದ್ಧಿವಂತರಾಗುತ್ತಾ ಹೋಗುತ್ತೀರಿ. ಅಂದಮೇಲೆ ಎಲ್ಲರಿಗೆ
ತಂದೆಯ ಪರಿಚಯ ಕೊಡಲೇಬೇಕಾಗಿದೆ, ಪ್ರಯತ್ನ ಪಡಬೇಕಾಗಿದೆ. ಇದೂ ಗಾಯನವಿದೆ, ಕೊನೆಯಲ್ಲಿ ಸನ್ಯಾಸಿಗಳು,
ರಾಜರು, ಮೊದಲಾದವರು ಬಂದರು. ರಾಜ ಜನಕನಿಗೆ ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಕ್ಕಿತು ಮತ್ತೆ ಅವರು
ಹೋಗಿ ತ್ರೇತಾಯುಗದಲ್ಲಿ ಅನುಜನಕನಾದರು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಅಂತಿಮ
ವಿನಾಶದ ದೃಶ್ಯವನ್ನು ನೋಡಲು ತಮ್ಮ ಸ್ಥಿತಿಯನ್ನು ಮಹಾವೀರನ ತರಹ ನಿರ್ಭಯ, ಅಡೋಲ
ಮಾಡಿಕೊಳ್ಳಬೇಕಾಗಿದೆ. ಗುಪ್ತ ನೆನಪಿನ ಯಾತ್ರೆಯಲ್ಲಿರಬೇಕಾಗಿದೆ.
2. ಅವ್ಯಕ್ತ ವತನವಾಸಿ ಫರಿಶ್ತೆಗಳಾಗಲು ಬೇಹದ್ದಿನ ಸೇವೆಯಲ್ಲಿ ದಧೀಚಿ ಋಷಿಯ ಸಮಾನ ತಮ್ಮ
ಮೂಳೆ-ಮೂಳೆಯನ್ನು ಸ್ವಾಹಾ ಮಾಡಬೇಕಾಗಿದೆ.
ವರದಾನ:
ಏಕಾಂತ ಮತ್ತು
ಅಂತರ್ಮುಖತೆಯ ಅಭ್ಯಾಸದ ಮುಖಾಂತರ ಸ್ವಯಂನ್ನು ಅನುಭವಗಳಿಂದ ಸಂಪನ್ನ ಮಾಡಿಕೊಳ್ಳುವಂತಹ ಮಾಯಾಜೀತ್
ಭವ.
ಜ್ಞಾನ ಪೂರ್ಣರ ಜೊತೆ
ಶಕ್ತಿಶಾಲಿ ಅರ್ಥಾತ್ ಅನುಭವಿ ಮೂರ್ತಿಗಳಾಗಲು ಏಕಾಂತವಾಸಿ ಮತ್ತು ಅಂತರ್ಮುಖಿಗಳಾಗಿ. ಏರುಪೇರಾಗುವ
ಕಾರಣವಾಗಿದೆ ಅನುಭವದಲ್ಲಿ ಕೊರತೆ ಆದ್ದರಿಂದ ಕೇವಲ ತಿಳಿದುಕೊಳ್ಳುವ, ತಿಳಿಸಿ ಹೇಳುವ ಅಥವಾ ಮನನ
ಮೂರ್ತಿಗಳಾಗಬೇಡಿ, ಏಕಾಂತವಾಸಿಗಳಾಗಿ ಪ್ರತಿ ಪಾಯಿಂಟ್ಸ್ನ ಅನುಭವಿಗಳಾಗಿ. ಆಗ ಯಾವುದೇ ಪ್ರಕಾರದ
ಮೋಸದಿಂದ ,ದುಃಖ ಅಥವಾ ಗೊಂದಲಗಳಿಂದ ಸುರಕ್ಷಿಸಲ್ಪಡುವಿರಿ. ಯಾರ ಮಗುವಾಗಿದ್ದೇನೆ, ಏನು
ಪ್ರಾಪ್ತಿಯಾಗಿದೆ - ಈ ಮೊದಲ ಪಾಠದ ಅನುಭವ ಮಾಡಿದಿರೆಂದರೆ ಮಾಯಾಜೀತ್ ಸಹಜವಾಗಿ ಆಗಿ ಬಿಡುವಿರಿ.
ಸ್ಲೋಗನ್:
ಜವಾಬ್ದಾರಿಯನ್ನು
ಸಂಭಾಲನೆ ಮಾಡುತ್ತಾ ಡಬ್ಬಲ್ ಲೈಟ್ ಆಗಿರುವಂತಹವರೇ ತಂದೆಯ ಸಮೀಪ ರತ್ನಗಳು.
ಬ್ರಹ್ಮಾ ತಂದೆಯ ಸಮಾನ
ಸಂಪನ್ನ ಸ್ಥಿತಿಯ ಅನುಭವ ಮಾಡಿರಿ:-
ಹೇಗೆ ಬ್ರಹ್ಮಾ ತಂದೆಯು ನಿರಂತರ ಸಾಕ್ಷಿ ಸ್ಥಿತಿಯ ಸ್ಥಿತಿಯಲ್ಲಿ ಸ್ಥಿತರಾಗಿದ್ದು, ತನ್ನ ಆತ್ಮಿಕ
ನಶೆಯಲ್ಲಿದ್ದರು. ಅನೇಕ ವಿಘ್ನಗಳ ಮಧ್ಯದಲ್ಲಿಯೂ ಸದಾ ಅಚಲವಾಗಿದ್ದರು. ಕೆಲವೊಮ್ಮೆ ಏಕೆ, ಏನು,
ಹೇಗೆ ಎನ್ನುವ ಸಂಕಲ್ಪವೂ ಉದ್ಭವವಾಗಲಿಲ್ಲ. ಸದಾ ಕಲ್ಯಾಣಕಾರಿ ತಂದೆಯ ಜೊತೆ ಹಾಗೂ ಕೈ (ಹಾಥ್ ಮತ್ತು
ಸಾಥ್) ಅನುಭವ ಮಾಡಿದರು. ಇದೇ ರೀತಿ ಫಾಲೋ ಫಾದರ್ ಮಾಡಿರಿ.