21.01.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಾವು ಇಲ್ಲಿಗೆ ಸರ್ವಶಕ್ತಿವಂತ ತಂದೆಯಿಂದ ಶಕ್ತಿಯನ್ನು ಪಡೆಯಲು ಅರ್ಥಾತ್ ಜ್ಯೋತಿಯಲ್ಲಿ ಜ್ಞಾನದ ಎಣ್ಣೆಯನ್ನು ಹಾಕಲು ಬಂದಿದ್ದೀರಿ”

ಪ್ರಶ್ನೆ:
ಶಿವನ ದಿಬ್ಬಣದ ಗಾಯನ ಏಕೆ ಇದೆ?

ಉತ್ತರ:
ಏಕೆಂದರೆ ಶಿವ ತಂದೆಯು ಯಾವಾಗ ಹಿಂತಿರುಗಿ ಹೋಗುವರೋ ಆಗ ಎಲ್ಲಾ ಆತ್ಮಗಳ ಸಮೂಹವು ಹಿಂದೆ-ಹಿಂದೆ ಓಡಿ ಹೋಗುತ್ತದೆ, ಮೂಲವತನದಲ್ಲಿ ಆತ್ಮಗಳ ಗೂಡು ಏರ್ಪಡುತ್ತದೆ. ನೀವು ಪವಿತ್ರರಾಗುವ ಮಕ್ಕಳು ತಂದೆಯ ಜೊತೆ ಜೊತೆಯಲ್ಲಿ ಹೋಗುತ್ತೀರಿ, ಜೊತೆಯ ಕಾರಣವೇ ಶಿವನ ಮೆರವಣಿಗೆ ಅರ್ಥಾತ್ ದಿಬ್ಬಣದ ಗಾಯನವಿದೆ.

ಓಂ ಶಾಂತಿ.
ಮಕ್ಕಳು ಮೊಟ್ಟ ಮೊದಲಿಗೆ ಒಂದೇ ಮಾತನ್ನು ತಿಳಿದುಕೊಳ್ಳಬೇಕಾಗಿದೆ - ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ ಮತ್ತು ಅವರು ಎಲ್ಲರ ತಂದೆಯಾಗಿದ್ದಾರೆ. ಅವರಿಗೆ ಸರ್ವಶಕ್ತಿವಂತನೆಂದು ಹೇಳಲಾಗುತ್ತದೆ. ನಿಮ್ಮಲ್ಲಿಯೂ ಸರ್ವಶಕ್ತಿಗಳಿತ್ತು, ನೀವು ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದಿರಿ. ಭಾರತದಲ್ಲಿಯೇ ಈ ದೇವಿ-ದೇವತೆಗಳ ರಾಜ್ಯವಿತ್ತು ಅಂದರೆ ನೀವು ಮಕ್ಕಳ ರಾಜ್ಯವಿತ್ತು, ನೀವು ಪವಿತ್ರ ದೇವಿ-ದೇವತೆಗಳಾಗಿದ್ದಿರಿ, ನಿಮ್ಮ ಕುಲ ಅಥವಾ ರಾಜಧಾನಿಯಿತ್ತು, ಎಲ್ಲರೂ ನಿರ್ವಿಕಾರಿಗಳಾಗಿದ್ದರು. ಯಾರು ನಿರ್ವಿಕಾರಿಯಾಗಿದ್ದರು? ಆತ್ಮರು. ಈಗ ಪುನಃ ನೀವು ನಿರ್ವಿಕಾರಿಗಳಾಗುತ್ತಿದ್ದೀರಿ. ಸರ್ವಶಕ್ತಿವಂತ ತಂದೆಯನ್ನು ನೆನಪು ಮಾಡಿ ಅವರಿಂದ ಶಕ್ತಿಯನ್ನು ಪಡೆಯುತ್ತಿದ್ದೀರಿ. ತಂದೆಯೇ ತಿಳಿಸಿದ್ದಾರೆ - ಆತ್ಮವೇ 84 ಜನ್ಮಗಳ ಪಾತ್ರವನ್ನಭಿನಯಿಸುತ್ತದೆ, ಅದರಲ್ಲಿ ಯಾವ ಸತೋಪ್ರಧಾನ ಶಕ್ತಿಯಿತ್ತೋ ಅದು ದಿನ-ಪ್ರತಿದಿನ ಕಡಿಮೆಯಾಗುತ್ತಾ ಹೋಗುತ್ತದೆ. ಆಗ ಸತೋಪ್ರಧಾನರಿಂದ ತಮೋಪ್ರಧಾನರಾಗುವರು. ಹೇಗೆ ಬ್ಯಾಟರಿಯ ಶಕ್ತಿಯು ಕಡಿಮೆಯಾಗುತ್ತಾ ಹೋದಂತೆ ವಾಹನವು ನಿಂತು ಹೋಗುತ್ತದೆ, ಬ್ಯಾಟರಿಯು ಡಿಸ್‍ಚಾರ್ಜ್ ಆಗುತ್ತದೆ. ಆತ್ಮದ ಬ್ಯಾಟರಿಯು ಫುಲ್ ಡಿಸ್‍ಚಾರ್ಜ್ ಆಗುವುದಿಲ್ಲ, ಅಲ್ಪಸ್ವಲ್ಪ ಶಕ್ತಿಯು ಉಳಿದಿರುತ್ತದೆ. ಹೇಗೆ ಯಾರಾದರೂ ಮರಣ ಹೊಂದಿದಾಗ ದೀಪ ಬೆಳಗಿಸುತ್ತಾರೆ, ಜ್ಯೋತಿಯು ನಂದಿ ಹೋಗದಿರಲೆಂದು ಅದರಲ್ಲಿ ಎಣ್ಣೆಯನ್ನು ಹಾಕುತ್ತಾ ಇರುತ್ತಾರೆ. ಬ್ಯಾಟರಿಯ ಶಕ್ತಿಯು ಕಡಿಮೆಯಾದಾಗ ಮತ್ತೆ ಚಾರ್ಜ್ ಮಾಡಲು ಇಡುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನೀವಾತ್ಮರು ಸರ್ವಶಕ್ತಿವಂತರಾಗಿದ್ದಿರಿ, ಈಗ ಮತ್ತೆ ನೀವು ಸರ್ವಶಕ್ತಿವಂತ ತಂದೆಯೊಂದಿಗೆ ತಮ್ಮ ಬುದ್ಧಿಯೋಗವನ್ನಿಡುತ್ತೀರಿ. ಅದರಿಂದ ತಂದೆಯ ಶಕ್ತಿಯು ನಮ್ಮಲ್ಲಿ ಬಂದು ಬಿಡಲಿ ಎಂದು, ಏಕೆಂದರೆ ಶಕ್ತಿಯು ಕಡಿಮೆಯಾಗಿ ಬಿಟ್ಟಿದೆ. ಅವಶ್ಯವಾಗಿ ಅಲ್ಪಸ್ವಲ್ಪ ಉಳಿದಿರುತ್ತದೆ ಅದು ಸಂಪೂರ್ಣ ಸಮಾಪ್ತಿಯಾಗಿ ಬಿಟ್ಟರೆ ಮತ್ತೆ ಶರೀರವೇ ಇರುವುದಿಲ್ಲ. ಆತ್ಮವು ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಈಗ ಸಂಪೂರ್ಣ ಪವಿತ್ರವಾಗಿ ಬಿಡುತ್ತದೆ. ಸತ್ಯಯುಗದಲ್ಲಿ ನಿಮ್ಮ ಬ್ಯಾಟರಿಯು ಪೂರ್ಣ ಚಾರ್ಜ್ ಆಗುತ್ತದೆ. ಮತ್ತೆ ಸ್ವಲ್ಪ-ಸ್ವಲ್ಪವಾಗಿಯೇ ಕಡಿಮೆಯಾಗುತ್ತಾ ಹೋಗುತ್ತದೆ. ತ್ರೇತಾಯುಗಕ್ಕೆ ಬರುವಷ್ಟರಲ್ಲಿ ಮೀಟರ್ ಕಡಿಮೆಯಾಗುತ್ತದೆ, ಅದಕ್ಕೆ ಕಲೆಗಳು ಎಂದು ಹೇಳಲಾಗುತ್ತದೆ. ಆತ್ಮ ಯಾವುದು ಸತೋಪ್ರಧಾನವಾಗಿತ್ತು ಅದು ಸತೋ ಆಯಿತು ಎಂದು ಹೇಳುತ್ತಾರೆ. ಅದರಲ್ಲಿನ ಶಕ್ತಿಯು ಕಡಿಮೆಯಾಗಿ ಬಿಡುತ್ತದೆ. ನೀವು ತಿಳಿದುಕೊಂಡಿದ್ದೀರಿ - ಸತ್ಯಯುಗದಲ್ಲಿ ನಾವು ಮನುಷ್ಯರಿಂದ ದೇವತೆಗಳಾಗಿ ಬಿಡುತ್ತೇವೆ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುವಿರಿ. ನೀವೀಗ ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಆದ್ದರಿಂದ ಶಕ್ತಿಯೆಲ್ಲವೂ ಕಳೆದು ಹೋಗಿದೆ ಮತ್ತೆ ತಂದೆಯನ್ನು ನೆನಪು ಮಾಡುವುದರಿಂದ ಪೂರ್ಣ ಶಕ್ತಿಯು ಬರುವುದು ಏಕೆಂದರೆ ನಿಮಗೆ ತಿಳಿದಿದೆ – ದೇಹ ಸಹಿತ ದೇಹದ ಯಾವುದೆಲ್ಲಾ ಸಂಬಂಧಗಳಿವೆಯೋ ಅವೆಲ್ಲವೂ ಸಮಾಪ್ತಿಯಾಗಲಿವೆ ನಂತರ ನಿಮಗೆ ಬೇಹದ್ದಿನ ರಾಜ್ಯವು ಸಿಗುತ್ತದೆ. ಬೇಹದ್ದಿನ ತಂದೆಯಾಗಿದ್ದಾರೆ ಆದ್ದರಿಂದ ಬೇಹದ್ದಿನ ಆಸ್ತಿಯನ್ನೇ ಕೊಡುತ್ತಾರೆ. ನೀವೀಗ ಪತಿತರಾಗಿದ್ದೀರಿ, ನಿಮ್ಮ ಶಕ್ತಿಯು ಸಂಪೂರ್ಣ ಕಡಿಮೆಯಾಗಿ ಬಿಟ್ಟಿದೆ. ಹೇ ಮಕ್ಕಳೇ, ಈಗ ನನ್ನನ್ನು ನೆನಪು ಮಾಡಿ, ನಾನು ಸರ್ವಶಕ್ತಿವಂತನಾಗಿದ್ದೇನೆ. ನನ್ನ ಮೂಲಕ ಸರ್ವಶಕ್ತಿವಂತ ರಾಜ್ಯವು ಸಿಗುತ್ತದೆ. ಸತ್ಯಯುಗದಲ್ಲಿ ದೇವಿ-ದೇವತೆಗಳು ಇಡೀ ವಿಶ್ವದ ಮಾಲೀಕರಾಗಿದ್ದರು, ಪವಿತ್ರರಾಗಿದ್ದರು, ದೈವೀ ಗುಣವಂತರಾಗಿದ್ದರು. ಈಗ ಆ ದೈವೀ ಗುಣಗಳಿಲ್ಲ. ಎಲ್ಲರ ಬ್ಯಾಟರಿಯು ಪೂರ್ಣ ಡಿಸ್‍ಚಾರ್ಜ್ ಆಗತೊಡಗಿದೆ. ಈಗ ಮತ್ತೆ ಬ್ಯಾಟರಿಯನ್ನು ತುಂಬಿಸಲಾಗುತ್ತದೆ. ಪರಮಪಿತ ಪರಮಾತ್ಮನ ಜೊತೆ ಬುದ್ಧಿಯೋಗವನ್ನಿಡದ ಹೊರತು ಬ್ಯಾಟರಿಯು ಚಾರ್ಜ್ ಆಗಲು ಸಾಧ್ಯವಿಲ್ಲ. ಆ ತಂದೆಯೇ ಸದಾ ಪಾವನನಾಗಿದ್ದಾರೆ. ಇಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಯಾವಾಗ ಪವಿತ್ರರಾಗಿರುವರೋ ಆಗ ಬ್ಯಾಟರಿಯು ಚಾರ್ಜ್ ಆಗಿರುತ್ತದೆ. ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ಒಬ್ಬರನ್ನೇ ನೆನಪು ಮಾಡಬೇಕಾಗಿದೆ. ಶ್ರೇಷ್ಠಾತಿ ಶ್ರೇಷ್ಠನು ಭಗವಂತನಾಗಿದ್ದಾರೆ, ಉಳಿದೆಲ್ಲವೂ ರಚನೆಯಾಗಿದೆ. ರಚನೆಯಿಂದ ರಚನೆಗೆ ಎಂದೂ ಆಸ್ತಿಯು ಸಿಗುವುದಿಲ್ಲ. ರಚಯಿತನು ಒಬ್ಬರೇ ಆಗಿದ್ದಾರೆ. ಅವರು ಬೇಹದ್ದಿನ ತಂದೆಯಾಗಿದ್ದಾರೆ. ಉಳಿದೆಲ್ಲರೂ ಅಲ್ಪಕಾಲದ ತಂದೆಯರಾಗಿದ್ದಾರೆ. ಬೇಹದ್ದಿನ ತಂದೆಯನ್ನು ನೆನಪು ಮಾಡುವುದರಿಂದ ಬೇಹದ್ದಿನ ರಾಜ್ಯಭಾಗ್ಯವು ಸಿಗುತ್ತದೆ ಅಂದಾಗ ಮಕ್ಕಳು ಆಂತರ್ಯದಲ್ಲಿ ತಿಳಿದುಕೊಳ್ಳಬೇಕು - ನಮಗಾಗಿ ತಂದೆಯು ಹೊಸ ಪ್ರಪಂಚ ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ಡ್ರಾಮಾ ಪ್ಲಾನನುಸಾರ ಸ್ವರ್ಗದ ಸ್ಥಾಪನೆಯಾಗುತ್ತಿದೆ. ನಿಮಗೆ ತಿಳಿದಿದೆ - ಸತ್ಯಯುಗ ಬರಲಿದೆ, ಸತ್ಯಯುಗದಲ್ಲಿ ಸದಾ ಸುಖವಿರುತ್ತದೆ. ಅದು ಹೇಗೆ ಸಿಗುತ್ತದೆ? ಅದಕ್ಕಾಗಿ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ನಾನು ಸದಾ ಪಾವನನಾಗಿದ್ದೇನೆ. ನಾನೆಂದೂ ಮನುಷ್ಯ ತನುವನ್ನು ತೆಗೆದುಕೊಳ್ಳುವುದಿಲ್ಲ. ದೈವೀ ಶರೀರವನ್ನಾಗಲಿ, ಮಾನವ ಶರೀರವನ್ನಾಗಲಿ ತೆಗೆದುಕೊಳ್ಳುವುದಿಲ್ಲ ಅರ್ಥಾತ್ ನಾನು ಜನನ-ಮರಣದಲ್ಲಿ ಬರುವುದಿಲ್ಲ, ಕೇವಲ ನೀವು ಮಕ್ಕಳಿಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡಲು ಇವರ 60 ವರ್ಷದ ವಾನಪ್ರಸ್ಥ ಸ್ಥಿತಿಯಲ್ಲಿ ಇವರ ತನುವಿನಲ್ಲಿ ಬರುತ್ತೇನೆ. ಇವರೇ ಪೂರ್ಣ ಸತೋಪ್ರಧಾನರಿಂದ ತಮೋಪ್ರಧಾನನಾಗಿದ್ದಾರೆ. ನಂಬರ್‍ವನ್ ಸರ್ವಶ್ರೇಷ್ಠನು ಭಗವಂತನಾಗಿದ್ದಾರೆ, ಅವರ ನಂತರ ಸೂಕ್ಷ್ಮವತನವಾಸಿ ಬ್ರಹ್ಮಾ, ವಿಷ್ಣು, ಶಂಕರನಿದ್ದಾರೆ. ಇವರ ಸಾಕ್ಷಾತ್ಕಾರವಾಗುತ್ತದೆ. ಸೂಕ್ಷ್ಮವತನವು ಮಧ್ಯದಲ್ಲಿದೆಯಲ್ಲವೆ. ಅಲ್ಲಿ ಶರೀರವಿರಲು ಸಾಧ್ಯವಿಲ್ಲ, ಸೂಕ್ಷ್ಮ ಶರೀರವನ್ನು ಕೇವಲ ದಿವ್ಯ ದೃಷ್ಟಿಯಿಂದ ನೋಡಲಾಗುತ್ತದೆ. ಮನುಷ್ಯ ಸೃಷ್ಟಿಯು ಇಲ್ಲಿದೆ, ಉಳಿದಂತೆ ಅವರು ಕೇವಲ ಸಾಕ್ಷಾತ್ಕಾರಕ್ಕಾಗಿ ಫರಿಶ್ತೆಗಳಿದ್ದಾರೆ. ನೀವು ಮಕ್ಕಳೂ ಸಹ ಅಂತಿಮದಲ್ಲಿ ಸಂಪೂರ್ಣ ಪವಿತ್ರರಾದಾಗ ನಿಮ್ಮದೂ ಸಾಕ್ಷಾತ್ಕಾರವಾಗುತ್ತದೆ. ಇಂತಹ ಫರಿಶ್ತೆಗಳಾಗಿ ನಂತರ ಸತ್ಯಯುಗದಲ್ಲಿ ಇಲ್ಲಿಗೇ ಬಂದು ಸ್ವರ್ಗದ ಮಾಲೀಕರಾಗುತ್ತೀರಿ. ಈ ಬ್ರಹ್ಮಾರವರೂ ಯಾವುದೇ ವಿಷ್ಣುವನ್ನು ನೆನಪು ಮಾಡುವುದಿಲ್ಲ. ಇವರೂ ಸಹ ಶಿವ ತಂದೆಯನ್ನು ನೆನಪು ಮಾಡುತ್ತಾರೆ ಮತ್ತು ನಂತರ ಈ ವಿಷ್ಣುವಾಗುತ್ತಾರೆ. ಇವರು ಹೇಗೆ ರಾಜ್ಯ ಪಡೆದರು ಎಂಬುದನ್ನು ತಿಳಿದುಕೊಳ್ಳಬೇಕಲ್ಲವೆ. ರಾಜ್ಯಕ್ಕಾಗಿ ಯಾವುದೇ ಯುದ್ಧ ಇತ್ಯಾದಿಗಳಂತೂ ಆಗುವುದಿಲ್ಲ. ದೇವತೆಗಳು ಹಿಂಸೆಯನ್ನು ಹೇಗೆ ಮಾಡುವರು!

ಈಗ ನೀವು ಮಕ್ಕಳು ತಂದೆಯನ್ನು ನೆನಪು ಮಾಡಿ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ. ಯಾರಾದರೂ ನಂಬಲಿ, ನಂಬದಿರಲಿ. ಗೀತೆಯಲ್ಲಿಯೂ ಇದೇ ಇದೆ - ಹೇ ಮಕ್ಕಳೇ, ದೇಹ ಸಹಿತ ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ. ಮಮತೆಯನ್ನಿಟ್ಟುಕೊಳ್ಳಲು ಅವರಿಗಂತೂ ದೇಹವೇ ಇಲ್ಲ. ಸ್ವಲ್ಪ ಸಮಯಕ್ಕಾಗಿ ನಾನು ಇವರ ಶರೀರದ ಆಧಾರವನ್ನು ತೆಗೆದುಕೊಳ್ಳುತ್ತೇನೆ. ಇಲ್ಲವೆಂದರೆ ಜ್ಞಾನವನ್ನು ಹೇಗೆ ಕೊಡಲಿ! ನಾನು ಬೀಜ ರೂಪನಲ್ಲವೆ, ಇಡೀ ವೃಕ್ಷದ ಜ್ಞಾನವು ನನ್ನ ಬಳಿ ಇದೆ, ಮತ್ತ್ಯಾರಿಗೂ ಗೊತ್ತಿಲ್ಲ. ಸೃಷ್ಟಿಯ ಆಯಸ್ಸು ಎಷ್ಟಾಗಿದೆ? ಹೇಗೆ ಇದರ ಸ್ಥಾಪನೆ, ಪಾಲನೆ, ವಿನಾಶವಾಗುತ್ತದೆ? ಇದು ಮನುಷ್ಯರಿಗೆ ತಿಳಿದಿರಬೇಕಲ್ಲವೆ. ಮನುಷ್ಯರೇ ಓದುತ್ತಾರೆ, ಪ್ರಾಣಿಗಳಂತೂ ಓದುವುದಿಲ್ಲ ಅಲ್ಲವೆ. ಅವರು ಲೌಕಿಕ ವಿದ್ಯೆಯನ್ನು ಓದುತ್ತಾರೆ. ಇಲ್ಲಿ ತಂದೆಯು ನಿಮಗೆ ಪಾರಲೌಕಿಕ ವಿದ್ಯೆಯನ್ನು ಓದಿಸುತ್ತಾರೆ, ಇದರಿಂದ ನಿಮ್ಮನ್ನು ಬೇಹದ್ದಿನ ಮಾಲೀಕರನ್ನಾಗಿ ಮಾಡುತ್ತಾರೆ ಅಂದಾಗ ಇದನ್ನು ತಿಳಿಸಬೇಕು - ಯಾವುದೇ ಮನುಷ್ಯರಿಗೆ ಅಥವಾ ದೇಹಧಾರಿಗಳಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಬ್ರಹ್ಮಾ-ವಿಷ್ಣು-ಶಂಕರರಿಗೂ ಸಹ ಸೂಕ್ಷ್ಮ ದೇಹವಿದೆಯಲ್ಲವೆ. ಇವರ ಹೆಸರೇ ಬೇರೆಯಾಗಿದೆ, ಇವರಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಈ ಶರೀರವಂತೂ ಈ ದಾದಾರವರ ಆತ್ಮದ ಸಿಂಹಾಸನವಾಗಿತ್ತು, ಅಕಾಲ ಸಿಂಹಾಸನವಲ್ಲವೆ. ಹಿರಿಯ ವ್ಯಕ್ತಿಗಳು ಅಲ್ಲಿ ಅಕಾಲ ಸಿಂಹಾಸನದ ಮೇಲೆ ಹೋಗಿ ಕುಳಿತುಕೊಳ್ಳುತ್ತಾರೆ. ವಾಸ್ತವದಲ್ಲಿ ತಂದೆಯು ತಿಳಿಸುತ್ತಾರೆ - ಇವೆಲ್ಲಾ ಶರೀರಗಳು ಅಕಾಲ ಆತ್ಮರ ಸಿಂಹಾಸನಗಳಾಗಿವೆ. ಅಕಾಲ ಆತ್ಮನನ್ನು ಕಾಲವು ಕಬಳಿಸಲು ಸಾಧ್ಯವಿಲ್ಲ, ಆ ಸಿಂಹಾಸನಗಳಂತೂ ಬದಲಾಗುತ್ತಿರುತ್ತವೆ. ಅಕಾಲ ಮೂರ್ತಿ ಆತ್ಮವು ಈ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತದೆ. ಮೊದಲು ಚಿಕ್ಕ ಸಿಂಹಾಸನವಿರುತ್ತದೆ ನಂತರ ಬೆಳವಣಿಗೆಯಾಗುತ್ತಾ ದೊಡ್ಡದಾಗುತ್ತದೆ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಆತ್ಮವು ಅಕಾಲನಾಗಿದೆ, ಬಾಕಿ ಅದರಲ್ಲಿ ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವಿರುತ್ತದೆ. ಆದ್ದರಿಂದಲೇ ಇದು ಕರ್ಮಗಳ ಫಲವೆಂದು ಹೇಳುತ್ತಾರೆ. ಆತ್ಮವೆಂದೂ ವಿನಾಶವಾಗುವುದಿಲ್ಲ. ಆತ್ಮದ ತಂದೆಯು ಒಬ್ಬರೇ ಆಗಿದ್ದಾರೆ, ಇದನ್ನು ತಿಳಿದುಕೊಳ್ಳಬೇಕಲ್ಲವೆ. ಈ ತಂದೆಯು ಯಾವುದೇ ಶಾಸ್ತ್ರಗಳ ಮಾತನ್ನು ತಿಳಿಸುತ್ತಾರೆಯೇ? ಶಾಸ್ತ್ರ ಇತ್ಯಾದಿಗಳನ್ನು ಓದುವುದರಿಂದ ಹಿಂತಿರುಗಿ ಯಾರೂ ಹೋಗಲು ಸಾಧ್ಯವಿಲ್ಲ. ಅಂತ್ಯದಲ್ಲಿ ಎಲ್ಲರೂ ಹೋಗುವರು. ಹೇಗೆ ಹಕ್ಕಿಗಳ ಅಥವಾ ಜೇನು ನೊಣಗಳ ಹಿಂಡು ಹೋಗುತ್ತದೆಯಲ್ಲವೆ. ಜೇನು ನೊಣಗಳಲ್ಲಿಯೂ ರಾಣಿ ನೊಣವಿರುತ್ತದೆ, ಅದರ ಹಿಂದೆ ಎಲ್ಲವೂ ಹೋಗುತ್ತವೆ. ಅಂತಿಮದಲ್ಲಿ ತಂದೆಯು ಹೋದಾಗಲೂ ಸಹ ಅವರ ಹಿಂದೆ ಎಲ್ಲಾ ಆತ್ಮರು ಹೋಗುವರು. ಅಲ್ಲಿ ಮೂಲವತನದಲ್ಲಿ ಎಲ್ಲಾ ಆತ್ಮರ ಹೇಗೆ ಗೂಡು ತಯಾರಾಗಿ ಬಿಡುತ್ತದೆ. ಇಲ್ಲಿ ಮನುಷ್ಯರ ಸಮೂಹವಾಗಿದೆ ಅಂದಾಗ ಈ ಸಮೂಹವೂ ಸಹ ಒಂದು ದಿನ ತಂದೆಯ ಹಿಂದೆ ಓಡುವುದು. ತಂದೆಯು ಬಂದು ಎಲ್ಲಾ ಆತ್ಮರನ್ನು ಕರೆದುಕೊಂಡು ಹೋಗುತ್ತಾರೆ. ಶಿವನ ದಿಬ್ಬಣ ಎಂದು ಹೇಳಲಾಗುತ್ತದೆ. ಮಕ್ಕಳೆಂದಾದರೂ ಹೇಳಿ, ಅಥವಾ ಪ್ರಿಯತಮೆಯರೆಂದಾದರೂ ಹೇಳಿ. ತಂದೆಯು ಬಂದು ಮಕ್ಕಳಿಗೆ ಓದಿಸಿ ನೆನಪಿನ ಯಾತ್ರೆಯನ್ನು ಕಲಿಸುತ್ತಾರೆ. ಪವಿತ್ರರಾಗದೇ ಆತ್ಮವು ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಯಾವಾಗ ಪವಿತ್ರವಾಗಿ ಬಿಡುವುದೋ ಆಗ ಮೊಟ್ಟ ಮೊದಲು ಶಾಂತಿಧಾಮಕ್ಕೆ ಹೋಗುವುದು, ಅಲ್ಲಿ ಹೋಗಿ ಎಲ್ಲರೂ ನಿವಾಸ ಮಾಡುತ್ತೀರಿ. ಅಲ್ಲಿಂದ ಮತ್ತೆ ದಿನ ಕಳೆದಂತೆ ಬರುತ್ತಾ ಇರುತ್ತಾರೆ, ವೃದ್ಧಿಯಾಗುತ್ತಿರುತ್ತದೆ. ನೀವೇ ಮೊಟ್ಟ ಮೊದಲು ತಂದೆಯ ಹಿಂದೆ ಓಡುವಿರಿ. ನಿಮ್ಮದು ತಂದೆಯ ಜೊತೆ ಅಥವಾ ಪ್ರಿಯತಮೆಯರಿಗೆ ಪ್ರಿಯತಮನ ಜೊತೆ ಯೋಗವಿದೆ, ರಾಜಧಾನಿಯಾಗಬೇಕಾಗಿದೆಯಲ್ಲವೆ. ಎಲ್ಲರೂ ಒಟ್ಟಿಗೆ ಬರುವುದಿಲ್ಲ. ಅಲ್ಲಿ ಎಲ್ಲಾ ಆತ್ಮರ ಪ್ರಪಂಚವಾಗಿದೆ. ಅಲ್ಲಿಂದ ಎಲ್ಲಾ ಆತ್ಮರು ನಂಬರ್‍ವಾರ್ ಆಗಿ ಬರುತ್ತಾರೆ. ವೃಕ್ಷವು ನಿಧಾನ-ನಿಧಾನವಾಗಿ ವೃದ್ಧಿ ಹೊಂದುತ್ತದೆ. ಮೊಟ್ಟ ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮವಿರುತ್ತದೆ ಅದನ್ನು ತಂದೆಯು ಸ್ಥಾಪನೆ ಮಾಡುತ್ತಾರೆ. ಮೊಟ್ಟ ಮೊದಲು ನಮ್ಮನ್ನು ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ಪ್ರಜಾಪಿತ ಬ್ರಹ್ಮನಲ್ಲವೆ. ಪ್ರಜೆಗಳೆಲ್ಲರೂ ಸಹೋದರ-ಸಹೋದರಿಯರಾಗುತ್ತೀರಿ. ಬ್ರಹ್ಮಾಕುಮಾರ-ಕುಮಾರಿಯರು ಅನೇಕರಿದ್ದಾರೆ ಅಂದಮೇಲೆ ನಿಶ್ಚಯ ಬುದ್ಧಿಯವರಾಗಿರುವ ಕಾರಣವೇ ಇಷ್ಟೊಂದು ಮಂದಿ ಆಗಿದ್ದಾರೆ. ಬ್ರಾಹ್ಮಣರು ಎಷ್ಟು ಮಂದಿ ಇರಬಹುದು? ಪಕ್ಕಾ ಇದ್ದಾರೆಯೇ ಅಥವಾ ಕಚ್ಚಾ ಇದ್ದಾರೆಯೇ? ಕೆಲವರು 99 ಅಂಕಗಳನ್ನು ತೆಗೆದುಕೊಳ್ಳುತ್ತಾರೆ, ಕೆಲವರು 10 ಅಂಕಗಳನ್ನೂ ತೆಗೆದುಕೊಳ್ಳುತ್ತಾರೆ ಅಂದಮೇಲೆ ಇವರು ಕಚ್ಚಾ ಆದರಲ್ಲವೆ. ನಿಮ್ಮಲ್ಲಿಯೂ ಯಾರು ಪಕ್ಕಾ ಇದ್ದಾರೆಯೋ ಅವರು ಅವಶ್ಯವಾಗಿ ಮೊದಲು ಬರುತ್ತಾರೆ. ಕಚ್ಚಾ ಇರುವವರು ಕೊನೆಯಲ್ಲಿ ಬರುತ್ತಾರೆ. ಇದು ಪಾತ್ರಧಾರಿಗಳ ಪ್ರಪಂಚವಾಗಿದೆ, ಸುತ್ತುತ್ತಿರುತ್ತದೆ. ಸತ್ಯಯುಗ, ತ್ರೇತಾ, ದ್ವಾಪರ..... ಇದು ಪುರುಷೋತ್ತಮ ಸಂಗಮಯುಗವಾಗಿದೆ. ಇದನ್ನು ಈಗ ತಂದೆಯು ತಿಳಿಸಿದ್ದಾರೆ - ಮೊದಲು ನಾವೂ ಸಹ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಉಲ್ಟಾ ತಿಳಿದುಕೊಳ್ಳುತ್ತಾ ಬಂದೆವು, ಈಗ ತಂದೆಯು ತಿಳಿಸಿದ್ದಾರೆ - ಇದು ಪೂರ್ಣ 5000 ವರ್ಷಗಳ ಚಕ್ರವಾಗಿದೆ. ಅರ್ಧಕಲ್ಪ ರಾಮ ರಾಜ್ಯ, ಅರ್ಧಕಲ್ಪ ರಾವಣ ರಾಜ್ಯವಾಗಿದೆ. ಲಕ್ಷಾಂತರ ವರ್ಷಗಳ ಕಲ್ಪವಾಗಿದ್ದರೆ ಅರ್ಧ-ಅರ್ಧವಾಗಿ ವಿಂಗಡಿಸಲು ಸಾಧ್ಯವಿಲ್ಲ. ದುಃಖ ಮತ್ತು ಸುಖದ ಈ ಪ್ರಪಂಚವು ಮಾಡಲ್ಪಟ್ಟಿದೆ, ಬೇಹದ್ದಿನ ಈ ಜ್ಞಾನವು ಬೇಹದ್ದಿನ ತಂದೆಯಿಂದ ಸಿಗುತ್ತದೆ. ಶಿವ ತಂದೆಯ ಶರೀರದ ಯಾವುದೇ ಹೆಸರಿಲ್ಲ. ಈ ಶರೀರವು ದಾದಾರವರದಾಗಿದೆ. ತಂದೆಯು ಎಲ್ಲಿದ್ದಾರೆ? ಸ್ವಲ್ಪ ಸಮಯಕ್ಕಾಗಿ ಶರೀರವನ್ನು ಲೋನ್ ಆಗಿ ತೆಗೆದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ - ನನಗೆ ಮುಖವಂತೂ ಬೇಕಲ್ಲವೆ. ಇಲ್ಲಿಯೂ ಗೋಮುಖವನ್ನು ಮಾಡಿದ್ದಾರೆ. ಪರ್ವತಗಳಿಂದ ಎಲ್ಲೆಲ್ಲಿಯೋ ನೀರು ಬರುತ್ತದೆ. ಇಲ್ಲಿ ಅದನ್ನು ಗೋಮುಖವನ್ನಾಗಿ ಮಾಡಿದ್ದಾರೆ ಅದರಿಂದ ನೀರು ಬರುತ್ತದೆ, ಅದನ್ನು ಗಂಗಾ ಜಲವೆಂದು ತಿಳಿದು ತೆಗೆದುಕೊಳ್ಳುತ್ತಾರೆ ಅಂದಮೇಲೆ ಗಂಗೆಯು ಎಲ್ಲಿಂದ ಬಂದಿತು? ಇದೆಲ್ಲವೂ ಸುಳ್ಳಾಗಿದೆ. ಸುಳ್ಳು ಕಾಯ, ಸುಳ್ಳು ಮಾಯೆ ಎಲ್ಲವೂ ಸುಳ್ಳು ಪ್ರಪಂಚವಾಗಿದೆ. ಭಾರತವು ಸ್ವರ್ಗವಾಗಿದ್ದಾಗ ಸತ್ಯ ಖಂಡವೆಂದು ಹೇಳಲಾಗುತ್ತದೆ ಮತ್ತೆ ಭಾರತವೇ ಹಳೆಯದಾದಾಗ ಸುಳ್ಳು ಖಂಡವೆಂದು ಹೇಳಲಾಗುತ್ತದೆ. ಈ ಸುಳ್ಳು ಖಂಡದಲ್ಲಿ ಯಾವಾಗ ಎಲ್ಲರೂ ಪತಿತರಾಗಿ ಬಿಡುವರೋ ಆಗ ಬಾಬಾ, ನಮ್ಮನ್ನು ಪಾವನ ಮಾಡಿ, ಈ ಹಳೆಯ ಪ್ರಪಂಚದಿಂದ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನ ಮಕ್ಕಳೆಲ್ಲರೂ ಕಾಮ ಚಿತೆಯನ್ನೇರಿ ಕಪ್ಪಾಗಿ ಬಿಟ್ಟಿದ್ದಾರೆ. ತಂದೆಯು ಮಕ್ಕಳಿಗೇ ಕುಳಿತು ಹೇಳುತ್ತಾರೆ - ಮಕ್ಕಳೇ, ನೀವು ಸ್ವರ್ಗದ ಮಾಲೀಕರಾಗಿದ್ದಿರಲ್ಲವೆ, ಸ್ಮೃತಿ ಬಂದಿತಲ್ಲವೆ! ತಂದೆಯು ಇಡೀ ಪ್ರಪಂಚಕ್ಕೆ ತಿಳಿಸುವುದಿಲ್ಲ, ನೀವು ಮಕ್ಕಳಿಗೆ ತಿಳಿಸುತ್ತಾರೆ. ಇದರಿಂದ ನಮ್ಮ ತಂದೆಯು ಯಾರು ಎಂಬುದು ಅರ್ಥವಾಗಲಿ ಎಂದು.

ಈ ಪ್ರಪಂಚಕ್ಕೆ ಮುಳ್ಳಿನ ಕಾಡೆಂದು ಹೇಳಲಾಗುತ್ತದೆ. ಎಲ್ಲದಕ್ಕಿಂತ ದೊಡ್ಡದು ಕಾಮದ ಮುಳ್ಳನ್ನು ಚುಚ್ಚುತ್ತಾರೆ, ಭಲೆ ಇಲ್ಲಿ ಅನೇಕ ಭಕ್ತರೂ ಇದ್ದಾರೆ, ಸಸ್ಯಹಾರಿಗಳಿದ್ದಾರೆ ಆದರೆ ಅವರು ವಿಕಾರದಲ್ಲಿ ಹೋಗುವುದಿಲ್ಲವೆಂದಲ್ಲ. ಹಾಗೆ ಅನೇಕರು ಬಾಲ ಬ್ರಹ್ಮಚಾರಿಗಳೂ ಇರುತ್ತಾರೆ, ಬಾಲ್ಯದಿಂದಲೇ ಎಲ್ಲಾ ಛೀ ಛೀ ಪದಾರ್ಥಗಳನ್ನು ತಿನ್ನುವುದನ್ನು ತ್ಯಜಿಸುತ್ತಾರೆ. ನಿರ್ವಿಕಾರಿಗಳಾಗಿ ಎಂದು ಸನ್ಯಾಸಿಗಳೂ ಹೇಳುತ್ತಾರೆ. ಆ ಅಲ್ಪಕಾಲದ ಸನ್ಯಾಸವನ್ನು ಮನುಷ್ಯರೇ ಮಾಡಿಸುತ್ತಾರೆ ಮತ್ತೆ ಇನ್ನೊಂದು ಜನ್ಮದಲ್ಲಿ ಗೃಹಸ್ಥಿಗಳ ಬಳಿಯೇ ಜನ್ಮ ಪಡೆದು ನಂತರ ಗೃಹಸ್ಥವನ್ನು ಬಿಟ್ಟು ಹೊರಟು ಹೋಗುತ್ತಾರೆ. ಸತ್ಯಯುಗದಲ್ಲಿ ಈ ಕೃಷ್ಣ ಮುಂತಾದ ದೇವತೆಗಳು ಎಂದಾದರೂ ಗೃಹಸ್ಥವನ್ನು ಬಿಡುತ್ತಾರೆಯೇ? ಇಲ್ಲ. ಅಂದಾಗ ಇಲ್ಲಿ ಮನುಷ್ಯರದು ಅಲ್ಪಕಾಲದ ಸನ್ಯಾಸವಾಗಿದೆ, ನಿಮ್ಮದು ಬೇಹದ್ದಿನ ಸನ್ಯಾಸವಾಗಿದೆ. ಇಡೀ ಪ್ರಪಂಚ, ಸಂಬಂಧ ಮೊದಲಾದುದರ ಸನ್ಯಾಸ ಮಾಡುತ್ತೀರಿ. ನಿಮಗಾಗಿ ಈಗ ಸ್ವರ್ಗದ ಸ್ಥಾಪನೆಯಾಗುತ್ತಿದೆ. ನಿಮ್ಮ ಬುದ್ಧಿಯು ಸ್ವರ್ಗದ ಕಡೆಯೇ ಹೋಗುವುದು, ಆದ್ದರಿಂದ ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ, ಮನ್ಮನಾಭವ, ಮಧ್ಯಾಜೀಭವ. ಆಗ ನೀವು ದೇವತೆಗಳಾಗಿ ಬಿಡುತ್ತೀರಿ. ಇದು ಅದೇ ಗೀತಾ ಭಾಗವಾಗಿದೆ. ಸಂಗಮಯುಗವೂ ಆಗಿದೆ. ನಾನು ಸಂಗಮದಲ್ಲಿಯೇ ತಿಳಿಸುತ್ತೇನೆ. ರಾಜಯೋಗವನ್ನು ಅವಶ್ಯವಾಗಿ ಮೊದಲ ಜನ್ಮದಲ್ಲಿ ಅಂದರೆ ಸಂಗಮದಲ್ಲಿಯೇ ಇವರು ಕಲಿತಿರಬೇಕು. ಈ ಸೃಷ್ಟಿಯು ಬದಲಾಗುತ್ತದೆಯಲ್ಲವೆ. ನೀವು ಪತಿತರಿಂದ ಪಾವನರಾಗಿ ಬಿಡುತ್ತೀರಿ. ಈಗ ಇದು ಪುರುಷೋತ್ತಮ ಸಂಗಮಯುಗವಾಗಿದೆ. ಯಾವಾಗ ನಾವು ಇಂತಹ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೇವೆ. ಪ್ರತಿಯೊಂದು ಮಾತನ್ನು ಚೆನ್ನಾಗಿ ತಿಳಿದುಕೊಂಡು ನಿಶ್ಚಯ ಮಾಡಿಕೊಳ್ಳಬೇಕು. ಇದನ್ನು ಯಾವುದೇ ಮನುಷ್ಯರು ಹೇಳುತ್ತಿಲ್ಲ, ಇದು ಶ್ರೀಮತ ಅರ್ಥಾತ್ ಭಗವಂತನ ಶ್ರೇಷ್ಠಾತಿ ಶ್ರೇಷ್ಠ ಮತವಾಗಿದೆ, ಉಳಿದೆಲ್ಲವೂ ಮನುಷ್ಯ ಮತವಾಗಿದೆ. ಮನುಷ್ಯ ಮತದಿಂದ ಇಳಿಯುತ್ತಲೇ ಬರುತ್ತೀರಿ, ಈಗ ಶ್ರೀಮತದಿಂದ ನೀವು ಮೇಲೇರುತ್ತೀರಿ. ಈಗ ತಂದೆಯು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿ ಬಿಡುತ್ತಾರೆ. ದೈವೀ ಮತವು ಸ್ವರ್ಗವಾಸಿಗಳದಾಗಿದೆ ಮತ್ತು ಇದು ನರಕವಾಸಿ ಮನುಷ್ಯರ ಮತವಾಗಿದೆ ಯಾವುದಕ್ಕೆ ರಾವಣನ ಮತವೆಂದು ಹೇಳಲಾಗುತ್ತದೆ. ರಾವಣ ರಾಜ್ಯವೂ ಸಹ ಕಡಿಮೆಯಿಲ್ಲ. ಇಡೀ ಪ್ರಪಂಚದಲ್ಲಿ ರಾವಣನ ರಾಜ್ಯವಿದೆ. ಇದು ಬೇಹದ್ದಿನ ಲಂಕೆಯಾಗಿದೆ, ಯಾವುದರಲ್ಲಿ ರಾವಣನ ರಾಜ್ಯವಿದೆ ನಂತರ ದೇವತೆಗಳ ಪವಿತ್ರ ರಾಜ್ಯವಿರುವುದು. ಅಲ್ಲಿ ಬಹಳ ಸುಖವಿರುತ್ತದೆ. ಸ್ವರ್ಗದ ಎಷ್ಟೊಂದು ಮಹಿಮೆಯಿದೆ! ಸ್ವರ್ಗಸ್ಥರಾದರೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ನರಕದಲ್ಲಿದ್ದರಲ್ಲವೆ. ನರಕದಿಂದ ಹೋದರೆಂದರೆ ಅವಶ್ಯವಾಗಿ ನಂತರ ನರಕದಲ್ಲಿಯೇ ಬರುವರಲ್ಲವೆ. ಈಗ ಸ್ವರ್ಗವೆಲ್ಲಿದೆ? ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ಈಗ ತಂದೆಯು ನಿಮಗೆ ಸಂಪೂರ್ಣ ಜ್ಞಾನವನ್ನು ಕೊಡುತ್ತಾರೆ, ಬ್ಯಾಟರಿಯು ತುಂಬುತ್ತದೆ. ಮಾಯೆಯು ಮತ್ತೆ ಬುದ್ಧಿಯೋಗವನ್ನು ತುಂಡರಿಸುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮನ-ವಚನ-ಕರ್ಮದಿಂದ ಪವಿತ್ರರಾಗಿ ಆತ್ಮ ರೂಪಿ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಬೇಕಾಗಿದೆ. ಪಕ್ಕಾ ಬ್ರಾಹ್ಮಣರಾಗಬೇಕಾಗಿದೆ.

2. ಮನ ಮತ ಹಾಗೂ ಮನುಷ್ಯ ಮತವನ್ನು ಬಿಟ್ಟು ಒಬ್ಬ ತಂದೆಯ ಶ್ರೀಮತದಂತೆ ನಡೆದು ಸ್ವಯಂನ್ನು ಶ್ರೇಷ್ಠ ಮಾಡಿಕೊಳ್ಳಬೇಕಾಗಿದೆ. ಸತೋಪ್ರಧಾನರಾಗಿ ತಂದೆಯ ಜೊತೆ ಹಾರಿ ಹೋಗಬೇಕಾಗಿದೆ.

ವರದಾನ:
ಶ್ರೀಮತದ ಆಧಾರದ ಮೇಲೆ ಖುಷಿ, ಶಕ್ತಿ ಮತ್ತು ಸಫಲತೆಯ ಅನುಭವ ಮಾಡುವಂತಹ ಸರ್ವ ಪ್ರಾಪ್ತಿ ಸಂಪನ್ನ ಭವ.

ಯಾವ ಮಕ್ಕಳು ಸ್ವಯಂನ್ನು ಟ್ರಸ್ಟಿ ಎಂದು ತಿಳಿದು ಶ್ರೀಮತದ ಪ್ರಮಾಣ ನಡೆಯುತ್ತಾರೆ, ಶ್ರೀಮತದಲ್ಲಿ ಸ್ವಲ್ಪವೂ ಸಹ ಮನ ಮತ ಅಥವಾ ಪರ ಮತ ಮಿಕ್ಸ್ ಮಾಡುವುದಿಲ್ಲ, ಅವರಿಗೆ ನಿರಂತರ ಖುಷಿ, ಶಕ್ತಿ ಮತ್ತು ಸಫಲತೆಯ ಅನುಭೂತಿ ಆಗುತ್ತಿರುತ್ತದೆ. ಪುರುಷಾರ್ಥ ಅಥವಾ ಪರಿಶ್ರಮ ಕಡಿಮೆ ಇದ್ದರೂ ಪ್ರಾಪ್ತಿ ಹೆಚ್ಚು ಇದ್ದಾಗ ಹೇಳಲಾಗುತ್ತದೆ ಯರ್ಥಾಥ ಶ್ರೀಮತದ ಮೇಲೆ ನಡೆಯುವವರು ಎಂದು. ಆದರೆ ಮಾಯೆ, ಈಶ್ವರೀಯ ಮತದಲ್ಲಿ ಮನ ಮತ ಅಥವಾ ಪರ ಮತವನ್ನು ರಾಯಲ್ ರೂಪದಲ್ಲಿ ಮಿಕ್ಸ್ ಮಾಡಿ ಬಿಡುತ್ತದೆ. ಆದ್ದರಿಂದ ಸರ್ವ ಪ್ರಾಪ್ತಿಗಳ ಅನುಭವ ಆಗುವುದಿಲ್ಲ. ಇದಕ್ಕಾಗಿ ಪರಿಶೀಲನೆ ಮಾಡುವ ಮತ್ತು ನಿರ್ಣಯ ಮಾಡುವ ಶಕ್ತಿಯನ್ನು ಧಾರಣೆ ಮಾಡಿಕೊಂಡಾಗ ಮೋಸ ಹೋಗುವುದಿಲ್ಲ.

ಸ್ಲೋಗನ್:
ಬಾಲಕನಿಂದ ಮಾಲಿಕರು ಯಾರೆಂದರೆ ಯಾರು ತಪಸ್ಯದ ಬಲದಿಂದ ಭಾಗ್ಯ ವಿಧಾತ ತಂದೆಯನ್ನು ತನ್ನವರನ್ನಾಗಿ ಮಾಡಿಕೊಂಡು ಬಿಡುತ್ತಾರೆ.


ಡಬ್ಬಲ್ ಲೈಟ್ ಸ್ಥಿತಿಯ ಅನುಭವ:-
ಈಗ ಯೋಗವನ್ನು ಜ್ವಾಲಾ ರೂಪವನ್ನು ಮಾಡಿಕೊಳ್ಳಿರಿ. ಆ ಯೋಗದ ಅಗ್ನಿಯಲ್ಲಿ ತಮ್ಮ ಹಳೆಯದ ಖಾತೆಯನ್ನು ಭಸ್ಮಗೊಳಿಸಿ ಹಾರುವ ಕಲೆಯ ಅನುಭವ ಮಾಡಿರಿ. ಇದಕ್ಕಾಗಿ ಎಲ್ಲವನ್ನೂ ತಂದೆಯವರಿಗೆ ಅರ್ಪಣೆ ಮಾಡುತ್ತಾ, ಡಬ್ಬಲ್ ಲೈಟ್ ಫರಿಶ್ತಾ ಆಗಿರಿ, ಬುದ್ಧಿಯಲ್ಲಿ ಯಾವುದೇ ಪ್ರಕಾರದ ಹೊರೆಯಿರಬಾರದು.