22.01.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ತಂದೆಯ ಬಳಿ ರಿಫ್ರೆಷ್ ಆಗಲು ಬಂದಿದ್ದೀರಿ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ಇದರಿಂದ ಸದಾ
ರಿಫ್ರೆಷ್ ಆಗಿರುತ್ತೀರಿ”
ಪ್ರಶ್ನೆ:
ಬುದ್ಧಿವಂತ
ಮಕ್ಕಳ ಮುಖ್ಯ ಲಕ್ಷಣಗಳೇನು?
ಉತ್ತರ:
ಬುದ್ಧಿವಂತ ಮಕ್ಕಳಿಗೆ ಅಪಾರ ಖುಷಿಯಿರುವುದು. ಒಂದುವೇಳೆ ಖುಷಿಯಿಲ್ಲವೆಂದರೆ ಅವರು ಬುದ್ಧೂ (ಮಂಧ
ಬುದ್ಧಿ) ಗಳಾಗಿದ್ದಾರೆ ಎಂದರ್ಥ. ಬುದ್ಧಿವಂತರು ಎಂದರೆ ಪಾರಸ ಬುದ್ಧಿಯಾಗುವವರು. ಅವರು ಅನ್ಯರನ್ನೂ
ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆ. ಆತ್ಮಿಕ ಸೇವೆಯಲ್ಲಿ ಬ್ಯುಜಿಯಾಗಿರುತ್ತಾರೆ. ತಂದೆಯ
ಪರಿಚಯ ಕೊಡದೇ ಇರಲು ಆಗುವುದೇ ಇಲ್ಲ.
ಓಂ ಶಾಂತಿ.
ತಂದೆಯು ಕುಳಿತು ತಿಳಿಸುತ್ತಾರೆ, ಈ ದಾದಾರವರೂ ಸಹ ತಿಳಿದುಕೊಳ್ಳುತ್ತಾರೆ, ಏಕೆಂದರೆ ತಂದೆಯು
ಕುಳಿತು ದಾದಾರವರ ಮೂಲಕ ತಿಳಿಸಿ ಕೊಡುತ್ತಾರೆ. ಹೇಗೆ ನೀವು ತಿಳಿದುಕೊಳ್ಳುತ್ತೀರೋ ಹಾಗೆಯೇ
ದಾದಾರವರೂ ತಿಳಿದುಕೊಳ್ಳುತ್ತಾರೆ. ದಾದಾರವರಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಇದು
ಭಗವಾನುವಾಚವಾಗಿದೆ. ತಂದೆಯು ಮುಖ್ಯವಾಗಿ ಇದನ್ನೇ ತಿಳಿಸುತ್ತಾರೆ, ದೇಹೀ-ಅಭಿಮಾನಿಯಾಗಿ. ಇದನ್ನು
ಏಕೆ ಹೇಳುತ್ತಾರೆ? ಏಕೆಂದರೆ ತಮ್ಮನ್ನು ಆತ್ಮನೆಂದು ತಿಳಿಯುವುದರಿಂದ ನಾವು ಪತಿತ-ಪಾವನ, ಪರಮಪಿತ
ಪರಮಾತ್ಮನಿಂದ ಪಾವನರಾಗುತ್ತೀರಿ. ಇದು ಬುದ್ಧಿಯಲ್ಲಿ ಜ್ಞಾನವಿದೆ. ಎಲ್ಲರಿಗೂ ತಿಳಿಸಬೇಕಾಗಿದೆ,
ನಾವು ಪತಿತರಾಗಿದ್ದೇವೆ ಎಂದು ಕರೆಯುತ್ತಾರೆ ಅಂದಮೇಲೆ ಹೊಸ ಪ್ರಪಂಚವು ಖಂಡಿತ ಪಾವನವಾಗಿರುವುದು.
ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ. ಅವರನ್ನೇ ಪತಿತ-ಪಾವನ ತಂದೆಯೆಂದು ಹೇಳಿ
ಕರೆಯುತ್ತಾರೆ. ಪತಿತ-ಪಾವನ, ಜೊತೆಯಲ್ಲಿ ಅವರಿಗೆ ತಂದೆಯೆಂದು ಹೇಳುತ್ತಾರೆ. ತಂದೆಯನ್ನು ಆತ್ಮರು
ಕರೆಯುತ್ತೀರಿ, ಶರೀರವು ಕರೆಯುವುದಿಲ್ಲ. ನಾವಾತ್ಮರ ತಂದೆಯು ಪಾರಲೌಕಿಕನಾಗಿದ್ದಾರೆ. ಅವರೇ
ಪತಿತ-ಪಾವನನಾಗಿದ್ದಾರೆ. ಇದಂತೂ ಚೆನ್ನಾಗಿ ನೆನಪಿರಬೇಕು. ಇದು ಹೊಸ ಪ್ರಪಂಚವೇ ಅಥವಾ ಹಳೆಯ
ಪ್ರಪಂಚವೇ ಎಂಬುದನ್ನಂತೂ ತಿಳಿದುಕೊಳ್ಳಬಹುದಲ್ಲವೆ. ಇಂತಹ ಮಂಧ ಬುದ್ಧಿಯವರೂ ಇದ್ದಾರೆ, ನಮಗೆ
ಇಲ್ಲಿಯೇ ಅಪಾರ ಸುಖವಿದೆ. ನಾವು ಸ್ವರ್ಗದಲ್ಲಿ ಕುಳಿತಿದ್ದೇವೆಂದು ತಿಳಿಯುತ್ತಾರೆ ಆದರೆ ಇದೂ ಸಹ
ತಿಳಿದುಕೊಳ್ಳುವ ಮಾತಾಗಿದೆ. ಕಲಿಯುಗಕ್ಕೆ ಸ್ವರ್ಗವೆಂದು ಹೇಳಲು ಸಾಧ್ಯವಿಲ್ಲ. ಹೆಸರೇ ಆಗಿದೆ -
ಕಲಿಯುಗ, ಹಳೆಯ ಪತಿತ ಪ್ರಪಂಚ. ಅಂತರವಿದೆಯಲ್ಲವೆ. ಮನುಷ್ಯರ ಬುದ್ಧಿಯಲ್ಲಿ ಇದೂ
ಕುಳಿತುಕೊಳ್ಳುವುದಿಲ್ಲ, ಸಂಪೂರ್ಣ ಜಡಜಡೀಭೂತ ಸ್ಥಿತಿಯಾಗಿದೆ. ಮಕ್ಕಳು ಓದದೇ ಇದ್ದರೆ ನೀವು ಕಲ್ಲು
ಬುದ್ಧಿಯವರಾಗಿದ್ದೀರಿ ಎಂದು ಹೇಳುತ್ತಾರಲ್ಲವೆ. ತಂದೆಯೂ ಸಹ ಬರೆಯುತ್ತಾರೆ - ನಿಮ್ಮ ಗ್ರಾಮದ
ನಿವಾಸಿಗಳು ಬಹಳ ಕಲ್ಲು ಬುದ್ಧಿಯವರಾಗಿದ್ದಾರೆ, ತಿಳಿದುಕೊಳ್ಳುವುದೇ ಇಲ್ಲ ಏಕೆಂದರೆ ಅನ್ಯರಿಗೆ
ತಿಳಿಸುವುದಿಲ್ಲ. ಸ್ವಯಂ ಪಾರಸ ಬುದ್ಧಿಯವರಾಗುತ್ತೀರೆಂದರೆ ಅನ್ಯರನ್ನೂ ಮಾಡಬೇಕು, ಪುರುಷಾರ್ಥ
ಮಾಡಬೇಕಾಗಿದೆ, ಇದರಲ್ಲಿ ನಾಚಿಕೆ ಮುಂತಾದ ಮಾತಿಲ್ಲ. ಆದರೆ ಮನುಷ್ಯರ ಬುದ್ಧಿಯಲ್ಲಿ ಅರ್ಧ
ಕಲ್ಪದಿಂದ ಉಲ್ಟಾ ಶಬ್ಧಗಳು ಬಿದ್ದಿರುವ ಕಾರಣ ಅದನ್ನು ಮರೆಯುತ್ತಿಲ್ಲ. ಹೇಗೆ ಮರೆಸುವುದು?
ಅದೆಲ್ಲವನ್ನೂ ಮರೆಸುವ ಶಕ್ತಿಯೂ ಸಹ ಒಬ್ಬ ತಂದೆಯ ಬಳಿಯೇ ಇದೆ. ತಂದೆಯ ವಿನಃ ಮತ್ತ್ಯಾರೂ ಈ ಜ್ಞಾನ
ಕೊಡಲು ಸಾಧ್ಯವಿಲ್ಲ ಅಂದಮೇಲೆ ಎಲ್ಲರೂ ಅಜ್ಞಾನಿಗಳಾದರು. ಅಂದಮೇಲೆ ಅವರಿಗೆ ಮತ್ತೆ
ಜ್ಞಾನವೆಲ್ಲಿಂದ ಬರುವುದು? ಎಲ್ಲಿಯವರೆಗೆ ಜ್ಞಾನ ಸಾಗರ ತಂದೆಯು ಬಂದು ತಿಳಿಸುವುದಿಲ್ಲವೋ
ಅಲ್ಲಿಯವರೆಗೂ ಜ್ಞಾನವು ಸಿಗುವುದಿಲ್ಲ. ತಮೋಪ್ರಧಾನರೆಂದರೆ ಅಜ್ಞಾನಿ ಪ್ರಪಂಚ, ಸತೋಪ್ರಧಾನರೆಂದರೆ
ದೈವೀ ಪ್ರಪಂಚ. ಅಂತರವಂತೂ ಇದೆಯಲ್ಲವೆ. ದೇವಿ-ದೇವತೆಗಳೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆ,
ಕಾಲ ಚಕ್ರವೂ ಸುತ್ತುತ್ತಿರುತ್ತದೆ. ಬುದ್ಧಿಯೂ ಸಹ ನಿರ್ಬಲವಾಗುತ್ತಾ ಹೋಗುತ್ತದೆ.
ಬುದ್ಧಿಯೋಗವನ್ನಿಡುವುದರಿಂದ ಯಾವ ಶಕ್ತಿಯು ಸಿಕ್ಕಿತೋ ಅದು ಮತ್ತೆ ಸಮಾಪ್ತಿಯಾಗಿ ಬಿಡುತ್ತದೆ.
ಈಗ ನಿಮಗೆ ತಂದೆಯು ತಿಳಿಸುತ್ತಾರೆ, ಆದ್ದರಿಂದ ನೀವು ಎಷ್ಟೊಂದು ರಿಫ್ರೆಷ್ ಆಗುತ್ತೀರಿ. ನೀವು
ರಿಫ್ರೆಷ್ ಆಗಿದ್ದಿರಿ ಮತ್ತು ವಿಶ್ರಾಂತಿಯಲ್ಲಿದ್ದಿರಿ. ತಂದೆಯೂ ಸಹ ಬರೆದು ಕಳುಹಿಸುತ್ತಾರಲ್ಲವೆ
- ಮಕ್ಕಳೇ, ಬಂದು ರಿಫ್ರೆಷ್ ಆಗಿ ಮತ್ತು ವಿಶ್ರಾಂತಿಯನ್ನು ಪಡೆಯಿರಿ. ರಿಫ್ರೆಷ್ ಆದ ನಂತರ ನೀವು
ಸತ್ಯಯುಗದಲ್ಲಿ ವಿಶ್ರಾಮ ಪುರಿಯಲ್ಲಿ ಹೋಗುತ್ತೀರಿ. ಅಲ್ಲಿ ನಿಮಗೆ ಬಹಳ ವಿಶ್ರಾಂತಿಯು ಸಿಗುತ್ತದೆ.
ಅಲ್ಲಿ ಸುಖ, ಶಾಂತಿ, ಸಂಪತ್ತು ಇತ್ಯಾದಿಗಳೆಲ್ಲವೂ ಸಿಗುತ್ತದೆ ಅಂದಾಗ ತಂದೆಯ ಬಳಿ ರಿಫ್ರೆಷ್ ಆಗಲು,
ವಿಶ್ರಾಂತಿ ಪಡೆಯಲು ಬರುತ್ತೀರಿ. ಶಿವ ತಂದೆಯು ನಿಮ್ಮನ್ನು ರಿಫ್ರೆಷ್ ಮಾಡುತ್ತಾರೆ. ತಂದೆಯ ಬಳಿ
ವಿಶ್ರಾಂತಿಯನ್ನೂ ಪಡೆಯುತ್ತೀರಿ. ವಿಶ್ರಾಂತಿಯೆಂದರೆ ಶಾಂತಿಯೆಂದರ್ಥ. ಸುಸ್ತಾಗಿ ವಿಶ್ರಾಂತಿ
ಪಡೆಯುತ್ತಾರಲ್ಲವೆ. ಕೆಲಕೆಲವರು ಕೆಲವೊಂದು ಕಡೆ ವಿಶ್ರಾಂತಿ ಪಡೆಯಲು ಹೋಗುತ್ತಾರೆ ಆದರೆ ಅದರಲ್ಲಿ
ವಿಶ್ರಾಂತಿಯ ಮಾತೇ ಇರುವುದಿಲ್ಲ. ಇಲ್ಲಿ ನಿಮಗೆ ತಂದೆಯು ಪ್ರತಿನಿತ್ಯವೂ ತಿಳಿಸುತ್ತಾರೆ,
ಆದ್ದರಿಂದ ನೀವಿಲ್ಲಿ ಬಂದು ರಿಫ್ರೆಷ್ ಆಗುತ್ತೀರಿ. ನೆನಪು ಮಾಡುವುದರಿಂದ ನೀವು ತಮೋಪ್ರಧಾನರಿಂದ
ಸತೋ ಪ್ರಧಾನರಾಗುತ್ತೀರಿ. ಸತೋ ಪ್ರಧಾನರಾಗುವುದಕ್ಕಾಗಿಯೇ ನೀವಿಲ್ಲಿಗೆ ಬರುತ್ತೀರಿ. ಅದಕ್ಕಾಗಿ
ಪುರುಷಾರ್ಥವೇನಾಗಿದೆ? ಮಧುರಾತಿ ಮಧುರ ಮಕ್ಕಳೇ, ತಂದೆಯನ್ನು ನೆನಪು ಮಾಡಿ. ತಂದೆಯು ಎಲ್ಲಾ
ಶಿಕ್ಷಣವನ್ನು ಕೊಟ್ಟು ಬಿಟ್ಟಿದ್ದಾರೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ನಿಮಗೆ
ವಿಶ್ರಾಂತಿಯು ಹೇಗೆ ಸಿಗುತ್ತದೆ. ಮತ್ತ್ಯಾರೂ ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಆದ್ದರಿಂದ
ಅವರಿಗೂ ತಿಳಿಸಿ ಕೊಡಬೇಕು ಆಗ ಅವರೂ ನಿಮ್ಮ ತರಹ ರಿಫ್ರೆಷ್ ಆಗಲಿ. ಎಲ್ಲರಿಗೆ ಸಂದೇಶ ಕೊಡುವುದೇ
ನಿಮ್ಮ ಕರ್ತವ್ಯವಾಗಿದೆ. ಅವಿನಾಶಿ ರಿಫ್ರೆಷ್ ಆಗಬೇಕಾಗಿದೆ. ಅವಿನಾಶಿ ವಿಶ್ರಾಂತಿಯನ್ನು
ಪಡೆಯಬೇಕಾಗಿದೆ. ಎಲ್ಲರಿಗೆ ಇದೇ ಸಂದೇಶ ಕೊಡಿ, ಇದೇ ನೆನಪನ್ನು ತರಿಸಿ - ತಂದೆ ಮತ್ತು ಆಸ್ತಿಯನ್ನು
ನೆನಪು ಮಾಡಿ. ಇದು ಬಹಳ ಸಹಜ ಮಾತಾಗಿದೆ. ಬೇಹದ್ದಿನ ತಂದೆಯು ಸ್ವರ್ಗವನ್ನು ರಚಿಸುತ್ತಾರೆ.
ಸ್ವರ್ಗದ ಆಸ್ತಿಯನ್ನೇ ಕೊಡುತ್ತಾರೆ. ನೀವೀಗ ಸಂಗಮಯುಗದಲ್ಲಿದ್ದೀರಿ. ಮಾಯೆಯ ಶಾಪ ಮತ್ತು ತಂದೆಯ
ಆಸ್ತಿಯನ್ನು ನೀವು ತಿಳಿದುಕೊಂಡಿದ್ದೀರಿ. ಯಾವಾಗ ಮಾಯಾ ರಾವಣನ ಶಾಪ ಸಿಗುವುದೋ ಆಗ ಪವಿತ್ರತೆಯೂ
ಸಮಾಪ್ತಿ, ಸುಖ-ಶಾಂತಿಯೂ ಸಮಾಪ್ತಿ, ಧನವೂ ಸಮಾಪ್ತಿಯಾಗಿ ಬಿಡುತ್ತದೆ. ಹೇಗೆ ಕ್ರಮೇಣವಾಗಿ
ಸಮಾಪ್ತಿಯಾಗುತ್ತದೆ ಎಂಬುದನ್ನೂ ಸಹ ತಂದೆಯು ತಿಳಿಸಿದ್ದಾರೆ. ಎಷ್ಟು ಜನ್ಮಗಳು ಹಿಡಿಸುತ್ತವೆ,
ದುಃಖಧಾಮದಲ್ಲಿ ಯಾವುದೇ ವಿಶ್ರಾಂತಿಯಿರುವುದಿಲ್ಲ, ಸುಖಧಾಮದಲ್ಲಿ ವಿಶ್ರಾಂತಿಯೇ
ವಿಶ್ರಾಂತಿಯಿರುವುದು. ಮನುಷ್ಯರನ್ನು ಭಕ್ತಿಯು ಎಷ್ಟೊಂದು ಸುಸ್ತು ಮಾಡಿ ಬಿಡುತ್ತದೆ.
ಜನ್ಮ-ಜನ್ಮಾಂತರ ಭಕ್ತಿಯು ಸುಸ್ತು ಮಾಡಿ ಬಿಡುತ್ತದೆ, ಕಂಗಾಲರನ್ನಾಗಿ ಮಾಡಿ ಬಿಡುತ್ತದೆ. ಇದನ್ನೂ
ಸಹ ಈಗ ನಿಮಗೆ ತಂದೆಯು ತಿಳಿಸುತ್ತಾರೆ – ಹೊಸ ಹೊಸಬರು ಬಂದರೆ ಎಷ್ಟೊಂದು ತಿಳಿಸಬೇಕಾಗಿದೆ!
ಪ್ರತಿಯೊಂದು ಮಾತಿನ ಮೇಲೆ ಮನುಷ್ಯರು ಬಹಳ ಆಲೋಚಿಸುತ್ತಾರೆ. ಎಲ್ಲಿಯೂ ಜಾದುವಾಗದಿರಲಿ ಎಂದು
ತಿಳಿಯುತ್ತಾರೆ. ಅರೆ! ನೀವು ಭಗವಂತನಿಗೆ ಜಾದೂಗಾರನೆಂದು ಹೇಳುತ್ತೀರಿ ಅಂದಾಗ ನಾನೂ ಸಹ
ಹೇಳುತ್ತೇನೆ - ಜಾದೂಗಾರನಾಗಿದ್ದೇನೆ ಆದರೆ ಇದು ಕುರಿ-ಮೇಕೆಯನ್ನಾಗಿ ಮಾಡಿ ಬಿಡುವ ಆ ಜಾದುವಲ್ಲ.
ಪ್ರಾಣಿಗಳಂತೂ ಅಲ್ಲ ಅಲ್ಲವೆ. ಸುರಮಂಡಲ ಸಂಗೀತದಿಂದ...... ಎಂದು ಗಾಯನವೂ ಇದೆ. ಈ ಸಮಯದಲ್ಲಿ
ಮನುಷ್ಯರು ಕುರಿಗಳಂತಾಗಿದ್ದಾರೆ. ಈ ಮಾತುಗಳು ಈ ಸಮಯಕ್ಕಾಗಿಯೇ ಸಲ್ಲುತ್ತವೆ. ಸತ್ಯಯುಗದಲ್ಲಿ
ಹಾಡುವುದಿಲ್ಲ, ಈ ಸಮಯದ್ದೇ ಗಾಯನವಿದೆ. ಚಂಡಿಕಾ ದೇವಿಯ ಎಷ್ಟೊಂದು ಮೇಳವಾಗುತ್ತದೆ. ಅವರು
ಯಾರಾಗಿದ್ದರು? ಎಂದು ಕೇಳಿರಿ ಆಗ ದೇವಿ ಎಂದು ಹೇಳುತ್ತಾರೆ. ಆದರೆ ಇಂತಹ ಹೆಸರುಗಳಂತೂ
ಸತ್ಯಯುಗದಲ್ಲಿರುವುದಿಲ್ಲ, ಸತ್ಯಯುಗದಲ್ಲಿ ಸದಾ ಶುಭ ಹೆಸರುಗಳಿರುತ್ತವೆ – ಶ್ರೀ ರಾಮ ಚಂದ್ರ,
ಶ್ರೀ ಕೃಷ್ಣ.... ಶ್ರೀ ಎಂದು ಶ್ರೇಷ್ಠರಿಗೇ ಹೇಳಲಾಗುವುದು. ಸತ್ಯಯುಗೀ ಸಂಪ್ರದಾಯಕ್ಕೆ ಶ್ರೇಷ್ಠ
ಎಂದು ಹೇಳಲಾಗುತ್ತದೆ. ಕಲಿಯುಗೀ ವಿಕಾರೀ ಸಂಪ್ರದಾಯದವರಿಗೆ ಶ್ರೇಷ್ಠರೆಂದು ಹೇಗೆ ಹೇಳುವರು! ಶ್ರೀ
ಎಂದರೆ ಶ್ರೇಷ್ಠ. ಈಗಿನ ಮನುಷ್ಯರಂತೂ ಶ್ರೇಷ್ಠರಲ್ಲ. ಮನುಷ್ಯರಿಂದ ದೇವತೆಯನ್ನಾಗಿ ಮಾಡಿದರು.....
ಎಂದು ಗಾಯನವಿದೆ. ಮತ್ತೆ ದೇವತೆಗಳಿಂದ ಮನುಷ್ಯರಾಗುತ್ತಾರೆ ಏಕೆಂದರೆ ಪಂಚ ವಿಕಾರಗಳಲ್ಲಿ
ಹೋಗುತ್ತಾರೆ. ರಾವಣ ರಾಜ್ಯದಲ್ಲಿ ಎಲ್ಲರೂ ಮನುಷ್ಯರೇ ಮನುಷ್ಯರಾಗಿದ್ದಾರೆ. ಸತ್ಯಯುಗದಲ್ಲಿ
ದೇವತೆಗಳಿರುತ್ತಾರೆ. ಅದಕ್ಕೆ ದೈವೀ ಪ್ರಪಂಚ, ಇದಕ್ಕೆ ಮಾನವ ಜಗತ್ತೆಂದು ಹೇಳಲಾಗುತ್ತದೆ. ದೈವೀ
ಜಗತ್ತಿಗೆ ದಿನವೆಂದು, ಮಾನವ ಜಗತ್ತಿಗೆ ರಾತ್ರಿಯೆಂದು ಹೇಳಲಾಗುತ್ತದೆ. ಪ್ರಕಾಶಕ್ಕೆ ದಿನವೆಂದು
ಹೇಳಲಾಗುವುದು. ಅಜ್ಞಾನ ಅಂಧಕಾರಕ್ಕೆ ರಾತ್ರಿಯೆಂದು ಹೇಳಲಾಗುತ್ತದೆ. ಈ ಅಂತರವನ್ನು ನೀವು
ತಿಳಿದುಕೊಂಡಿದ್ದೀರಿ. ನೀವು ತಿಳಿದುಕೊಳ್ಳುತ್ತೀರಿ - ಮೊದಲು ನಮಗೆ ಏನೂ ತಿಳಿದಿರಲಿಲ್ಲ, ಈಗ
ಎಲ್ಲಾ ಮಾತುಗಳು ಬುದ್ಧಿಯಲ್ಲಿದೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು
ತಿಳಿದುಕೊಂಡಿದ್ದೀರಾ ಎಂದು ಋಷಿ-ಮುನಿಗಳೊಂದಿಗೆ ಕೇಳಿದಾಗ ನೇತಿ-ನೇತಿ ಅರ್ಥಾತ್ ನಮಗೂ
ಗೊತ್ತಿಲ್ಲವೆಂದು ಹೇಳಿ ಹೋದರು. ನೀವೂ ಸಹ ಈಗ ತಿಳಿದುಕೊಳ್ಳುತ್ತೀರಿ - ನಾವು ಮೊದಲು
ನಾಸ್ತಿಕರಾಗಿದ್ದೆವು, ಬೇಹದ್ದಿನ ತಂದೆಯನ್ನು ತಿಳಿದುಕೊಂಡಿರಲಿಲ್ಲ. ಅವರು ಮೂಲತಃ ಅವಿನಾಶಿ ತಂದೆ,
ಆತ್ಮಗಳ ತಂದೆಯಾಗಿದ್ದಾರೆ. ನಾವು ಆ ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ ಯಾರು ಎಂದೂ
ಸುಡುವುದಿಲ್ಲ. ಇಲ್ಲಂತೂ ಎಲ್ಲರೂ ಸುಟ್ಟು ಹೋಗುತ್ತಾರೆ. ರಾವಣನನ್ನೂ ಸುಡುತ್ತಾರೆ.
ಶರೀರವಿದೆಯಲ್ಲವೆ. ಆತ್ಮವನ್ನಂತೂ ಎಂದೂ ಯಾರೂ ಸುಡಲು ಸಾಧ್ಯವಿಲ್ಲ ಅಂದಾಗ ತಂದೆಯು ಮಕ್ಕಳಿಗೆ ಈ
ಗುಪ್ತ ಜ್ಞಾನವನ್ನು ತಿಳಿಸುತ್ತಾರೆ, ಇದು ತಂದೆಯ ಬಳಿಯೇ ಇದೆ. ಈ ಆತ್ಮನಲ್ಲಿಯೂ ಗುಪ್ತ ಜ್ಞಾನವಿದೆ,
ಆತ್ಮವೂ ಗುಪ್ತವಾಗಿದೆ, ಈ ಬಾಯಿಯ ಮೂಲಕ ಮಾತನಾಡುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ -
ಮಕ್ಕಳೇ, ದೇಹಾಭಿಮಾನಿಗಳಾಗಬೇಡಿ, ಆತ್ಮಾಭಿಮಾನಿಯಾಗಿ. ಏಕೆ ತಲೆ ಕೆಳಗಾಗುತ್ತೀರಿ! ತಮ್ಮನ್ನು
ಆತ್ಮನೆಂಬುದೇ ಮರೆತು ಹೋಗುತ್ತೀರಿ. ಡ್ರಾಮಾದ ರಹಸ್ಯವನ್ನೂ ಸಹ ಬಹಳ ಚೆನ್ನಾಗಿ
ತಿಳಿದುಕೊಳ್ಳಬೇಕಾಗಿದೆ. ಡ್ರಾಮಾದಲ್ಲಿ ಯಾವುದು ನಿಗಧಿಯಾಗಿದೆಯೋ ಅದು ಚಾಚೂ ತಪ್ಪದೆ
ಪುನರಾವರ್ತನೆಯಾಗುತ್ತದೆ, ಇದು ಯಾರಿಗೂ ತಿಳಿದಿಲ್ಲ. ಡ್ರಾಮಾನುಸಾರ ಕ್ಷಣ-ಪ್ರತಿಕ್ಷಣ ಹೇಗೆ
ನಡೆಯುತ್ತಿರುತ್ತದೆ ಎಂಬ ಜ್ಞಾನವೂ ಸಹ ನಿಮ್ಮ ಬುದ್ಧಿಯಲ್ಲಿದೆ. ಆಕಾಶದ ಅಂತ್ಯವನ್ನು ಯಾರೂ
ಮುಟ್ಟಲು ಸಾಧ್ಯವಿಲ್ಲ. ಧರಣಿಯ ಅಂತ್ಯವನ್ನು ಪಡೆಯಬಹುದು, ಧರಣಿಯು ಸ್ಥೂಲವಾಗಿದೆ, ಆಕಾಶವು
ಸೂಕ್ಷ್ಮವಾಗಿದೆ. ಕೆಲವೊಂದು ವಸ್ತುಗಳ ಅಂತ್ಯವನ್ನು ಪಡೆಯಲು ಸಾಧ್ಯವಿಲ್ಲ. ಆಕಾಶವೇ ಆಕಾಶ,
ಪಾತಾಳವೇ ಪಾತಾಳವೆಂಬುದನ್ನು ಶಾಸ್ತ್ರಗಳಲ್ಲಿ ಕೇಳಿರುವ ಕಾರಣ ಮೇಲಕ್ಕೆ ಹೋಗಿಯೂ ನೋಡುತ್ತಾರೆ.
ಅಲ್ಲಿಯೂ ಜಗತ್ತನ್ನು ವಿಸ್ತರಿಸುವ ಪ್ರಯತ್ನ ಮಾಡುತ್ತಾರೆ. ವಿಶ್ವವನ್ನು ಬಹಳ ವಿಸ್ತಾರ
ಮಾಡಿದ್ದಾರಲ್ಲವೆ. ಭಾರತದಲ್ಲಿ ಕೇವಲ ಒಂದೇ ದೇವಿ-ದೇವತಾ ಧರ್ಮವಿತ್ತು, ಮತ್ತ್ಯಾವ ಖಂಡಗಳೂ
ಇರಲಿಲ್ಲ ನಂತರದಲ್ಲಿ ಎಷ್ಟೊಂದು ವೃದ್ಧಿ ಮಾಡಿದ್ದಾರೆ, ನೀವು ವಿಚಾರ ಮಾಡಿ. ಭಾರತದ ಎಷ್ಟು ಚಿಕ್ಕ
ಭಾಗದಲ್ಲಿ ದೇವತೆಗಳಿರುತ್ತಾರೆ. ಜಮುನಾ ನದಿಯ ತೀರವಿರುತ್ತದೆ. ದೆಹಲಿಯು ಪರಿಸ್ತಾನವಾಗಿತ್ತು, ಈಗ
ಇದಕ್ಕೆ ಸ್ಮಶಾನವೆಂದು ಹೇಳಲಾಗುತ್ತದೆ ಎಲ್ಲಿ ಅಕಾಲ ಮೃತ್ಯುಗಳಾಗುತ್ತಿರುತ್ತವೆ. ಅಮರ ಲೋಕಕ್ಕೆ
ಪರಿಸ್ತಾನವೆಂದು ಕರೆಯಲಾಗುವುದು. ಅಲ್ಲಿ ಬಹಳ ಸ್ವಾಭಾವಿಕ ಸೌಂದರ್ಯವಿರುತ್ತದೆ. ವಾಸ್ತವದಲ್ಲಿ
ಭಾರತಕ್ಕೆ ಪರಿಸ್ತಾನವೆಂದು ಹೇಳುತ್ತಿದ್ದರು. ಈ ಲಕ್ಷ್ಮೀ-ನಾರಾಯಣರು ಪರಿಸ್ತಾನದ ಮಾಲೀಕರಲ್ಲವೆ.
ಎಷ್ಟೊಂದು ಶೋಭಾಯಮಾನವಾಗಿದ್ದಾರೆ! ಸತೋಪ್ರಧಾನರಲ್ಲವೆ. ಸ್ವಾಭಾವಿಕ ಸೌಂದರ್ಯವಿತ್ತು, ಆತ್ಮವೂ ಸಹ
ಹೊಳೆಯುತ್ತಿರುತ್ತದೆ. ಕೃಷ್ಣನ ಜನ್ಮವು ಹೇಗಾಗುತ್ತದೆಯೆಂದು ಮಕ್ಕಳಿಗೆ ತೋರಿಸಲಾಗಿತ್ತು. ಕೃಷ್ಣನ
ಜನ್ಮವಾದಾಗ ಇಡೀ ಕೋಣೆಯಲ್ಲಿಯೇ ಚಮತ್ಕಾರವಾಗಿ ಬಿಡುತ್ತದೆ! ಅಂದಾಗ ತಂದೆಯು ಮಕ್ಕಳಿಗೆ
ತಿಳಿಸುತ್ತಾರೆ - ನೀವೀಗ ಪರಿಸ್ತಾನದಲ್ಲಿ ಹೋಗಲು ಪುರುಷಾರ್ಥ ಮಾಡುತ್ತಿದ್ದೀರಿ. ನಂಬರ್ವಾರಂತೂ
ಅವಶ್ಯವಾಗಿ ಬೇಕು. ಎಲ್ಲರೂ ಒಂದೇ ರೀತಿಯಾಗಲು ಸಾಧ್ಯವಿಲ್ಲ. ವಿಚಾರ ಮಾಡಿ, ಇಷ್ಟು ಚಿಕ್ಕ ಆತ್ಮವು
ಎಷ್ಟು ದೊಡ್ಡ ಪಾತ್ರವನ್ನಭಿನಯಿಸುತ್ತದೆ. ಆತ್ಮವು ಶರೀರದಿಂದ ಹೊರಗೆ ಹೋದಾಗ ಶರೀರದ
ಗತಿಯೇನಾಗುತ್ತದೆ! ಇಡೀ ಪ್ರಪಂಚದ ಪಾತ್ರಧಾರಿಗಳು ಅದೇ ಪಾತ್ರವನ್ನು ಅಭಿನಯಿಸುತ್ತಾರೆ ಯಾವುದು
ಅನಾದಿಯಾಗಿ ಮಾಡಲ್ಪಟ್ಟಿದೆ. ಈ ಸೃಷ್ಟಿಯೂ ಅನಾದಿಯಾಗಿದೆ, ಇದರಲ್ಲಿ ಪ್ರತಿಯೊಬ್ಬರ ಪಾತ್ರವೂ
ಅನಾದಿಯಾಗಿದೆ. ಯಾವಾಗ ಈ ಸೃಷ್ಟಿಯು ಒಂದು ವೃಕ್ಷವಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳುತ್ತೀರೋ
ಆಗ ಅದನ್ನು ನೀವು ಅದ್ಭುತವೆಂದು ಹೇಳುತ್ತೀರಿ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ!
ಡ್ರಾಮಾದಲ್ಲಿ ಯಾರಿಗಾಗಿ ಎಷ್ಟು ಸಮಯವಿದೆಯೋ ಅಷ್ಟನ್ನೇ ತಿಳಿದುಕೊಳ್ಳುವುದರಲ್ಲಿ ಸಮಯ ಕೊಡುತ್ತಾರೆ.
ಬುದ್ಧಿಯಲ್ಲಿಯೂ ಅಂತರವಿದೆಯಲ್ಲವೆ. ಆತ್ಮವು ಮನ-ಬುದ್ಧಿ ಸಹಿತವಾಗಿದೆ. ಅಂದಾಗ ಎಷ್ಟೊಂದು
ಅಂತರವಿರುತ್ತದೆ! ಮಕ್ಕಳಿಗೆ ಅರ್ಥವಾಗುತ್ತದೆ - ನಾವು ಸ್ಕಾಲರ್ಶಿಪ್ ತೆಗೆದುಕೊಳ್ಳಬೇಕಾಗಿದೆ.
ಅಂದಮೇಲೆ ಹೃದಯದಲ್ಲಿ ಖುಷಿಯಾಗುತ್ತದೆಯಲ್ಲವೆ. ಇಲ್ಲಿಗೆ ಬರುತ್ತಿದ್ದಂತೆಯೇ ಗುರಿ-ಧ್ಯೇಯವು
ಸನ್ಮುಖದಲ್ಲಿ ನೋಡಿದಾಗ ಖಂಡಿತ ಖುಷಿಯಾಗುವುದಲ್ಲವೆ. ನಾವು ಈ ರೀತಿಯಾಗುವುದಕ್ಕಾಗಿ ಇಲ್ಲಿಗೆ ಓದಲು
ಬಂದಿದ್ದೇವೆಂದು ನೀವೀಗ ತಿಳಿದುಕೊಂಡಿದ್ದೀರಿ. ಇಲ್ಲವೆಂದರೆ ಯಾರೂ ಇಲ್ಲಿಗೆ ಬರಲು ಸಾಧ್ಯವಿಲ್ಲ.
ಇದು ಗುರಿ-ಧ್ಯೇಯವಾಗಿದೆ. ಇನ್ನೊಂದು ಜನ್ಮದ ಗುರಿ-ಧ್ಯೇಯವನ್ನು ನೋಡುವಂತಹ ಈ ರೀತಿಯ ಶಾಲೆಯು
ಮತ್ತೆಲ್ಲಿಯೂ ಇರುವುದಿಲ್ಲ. ನೀವು ನೋಡುತ್ತಿದ್ದೀರಿ - ಇವರು ಸ್ವರ್ಗದ ಮಾಲೀಕರಾಗಿದ್ದಾರೆ, ನಾವೇ
ಈ ರೀತಿಯಾಗಲಿದ್ದೇವೆ. ನಾವೀಗ ಸಂಗಮಯುಗದಲ್ಲಿದ್ದೇವೆ. ಆ ರಾಜಧಾನಿಯವರೂ ಅಲ್ಲ, ಈ ರಾಜಧಾನಿಯವರೂ
ಅಲ್ಲ, ನಾವು ಮಧ್ಯದಲ್ಲಿದ್ದೇವೆ ಹೋಗುತ್ತಿದ್ದೇವೆ. ಅಂಬಿಗನು (ತಂದೆ) ನಿರಾಕಾರನಾಗಿದ್ದಾರೆ,
ದೋಣಿಯೂ (ಆತ್ಮ) ನಿರಾಕಾರಿಯಾಗಿದೆ. ದೋಣಿಯನ್ನು ಎಳೆದು ಪರಮಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ.
ನಿರಾಕಾರಿ ತಂದೆಯು ನಿರಾಕಾರಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ತಂದೆಯೇ ಮಕ್ಕಳನ್ನು ಜೊತೆ
ಕರೆದುಕೊಂಡು ಹೋಗುವರು. ಈ ಚಕ್ರವು ಪೂರ್ಣವಾಗುತ್ತದೆ ಮತ್ತೆ ಚಾಚೂ ತಪ್ಪದೆ ಪುನರಾವರ್ತನೆ
ಮಾಡಬೇಕಾಗಿದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೀರಿ. ಚಿಕ್ಕವರಾಗಿ
ಮತ್ತು ಬೆಳೆದು ದೊಡ್ಡವರಾಗುತ್ತೀರಿ. ಹೇಗೆ ಮಾವಿನ ಬೀಜವನ್ನು ಜಮೀನಿನಲ್ಲಿ ಹಾಕಿದಾಗ ಅದರಿಂದ
ಮತ್ತೆ ಮಾವು ಬರುತ್ತದೆ, ಅದು ಹದ್ದಿನ ವೃಕ್ಷವಾಗಿದೆ. ಇದು ಮನುಷ್ಯ ಸೃಷ್ಟಿರೂಪಿ ವೃಕ್ಷವಾಗಿದೆ,
ಇದಕ್ಕೆ ವಿಭಿನ್ನ ವೃಕ್ಷವೆಂದು ಹೇಳಲಾಗುತ್ತದೆ. ಸತ್ಯಯುಗದಿಂದ ಹಿಡಿದು ಕಲಿಯುಗದವರೆಗೆ ಎಲ್ಲರೂ
ಪಾತ್ರವನ್ನಭಿನಯಿಸುತ್ತಿರುತ್ತಾರೆ. ಅವಿನಾಶಿ ಆತ್ಮವು 84 ಜನ್ಮಗಳ ಚಕ್ರದ
ಪಾತ್ರವನ್ನಭಿನಯಿಸುತ್ತದೆ. ಲಕ್ಷ್ಮೀ-ನಾರಾಯಣರಿದ್ದರು, ಅವರು ಈಗಿಲ್ಲ. ಚಕ್ರವನ್ನು ಸುತ್ತಿ ಈಗ
ಪುನಃ ಆ ರೀತಿಯಾಗುತ್ತೀರಿ. ಮೊದಲು ಈ ಲಕ್ಷ್ಮೀ-ನಾರಾಯಣರಿದ್ದರು ಎಂದು ಹೇಳುತ್ತಾರೆ. ಅವರದು ಇದು
ಅಂತಿಮ ಜನ್ಮವಾಗಿದೆ. ಬ್ರಹ್ಮಾ-ಸರಸ್ವತಿ ಎಲ್ಲರೂ ಹಿಂತಿರುಗಿ ಅವಶ್ಯವಾಗಿ ಹೋಗಬೇಕಾಗಿದೆ.
ಸ್ವರ್ಗದಲ್ಲಂತೂ ಇಷ್ಟೊಂದು ಮನುಷ್ಯರಿರಲಿಲ್ಲ. ಇಸ್ಲಾಮಿಗಳಾಗಲಿ, ಬೌದ್ಧಿಯರಾಗಲಿ ಇರಲಿಲ್ಲ.
ದೇವಿ-ದೇವತೆಗಳ ಹೊರತು ಮತ್ತ್ಯಾವುದೇ ಧರ್ಮದ ಪಾತ್ರಧಾರಿಗಳಿರಲಿಲ್ಲ, ಈ ತಿಳುವಳಿಕೆಯು ಯಾರಲ್ಲಿಯೂ
ಇಲ್ಲ. ಬುದ್ಧಿವಂತರಿಗೆ ಬಿರುದು ಸಿಗಬೇಕಲ್ಲವೆ. ಯಾರೆಷ್ಟು ಓದುವರೋ ನಂಬರ್ವಾರ್ ಪುರುಷಾರ್ಥದಿಂದ
ಪದವಿಯನ್ನು ಪಡೆಯುತ್ತಾರೆ ಅಂದಾಗ ನೀವು ಮಕ್ಕಳಿಗೆ ಇಲ್ಲಿಗೆ ಬರುತ್ತಿದ್ದಂತೆಯೇ ಈ
ಗುರಿ-ಧ್ಯೇಯವನ್ನು ನೋಡಿ ಖುಷಿಯಾಗಬೇಕು. ಖುಷಿಗೆ ಪಾರವೇ ಇಲ್ಲ. ಪಾಠಶಾಲೆ ಅಥವಾ ಶಾಲೆಯಿದ್ದರೆ ಈ
ರೀತಿಯಿರಬೇಕು. ಎಷ್ಟು ಗುಪ್ತವಾಗಿದೆ ಆದರೆ ಎಷ್ಟು ದೊಡ್ಡ ಪಾಠಶಾಲೆಯಾಗಿದೆ. ಎಷ್ಟು ದೊಡ್ಡ
ವಿದ್ಯೆಯೋ ಅಷ್ಟು ದೊಡ್ಡ ಕಾಲೇಜು. ಅಲ್ಲಿ ಎಲ್ಲಾ ಸವಲತ್ತುಗಳಿರುತ್ತವೆ. ಆತ್ಮವಂತೂ ಓದಬೇಕಾಗಿದೆ,
ಅದು ಬೇಕೆಂದರೆ ಚಿನ್ನದ ಸಿಂಹಾಸನವನ್ನಾದರೂ ಏರಬಹುದು ಅಥವಾ ಕಟ್ಟಿಗೆಯ ಸಿಂಹಾಸನವನ್ನಾದರೂ ಏರಬಹುದು.
ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು ಏಕೆಂದರೆ ಶಿವ ಭಗವಾನುವಾಚ ಇದೆಯಲ್ಲವೆ. ಕೃಷ್ಣನು ಮೊದಲ
ನಂಬರಿನ ರಾಜಕುಮಾರನಾಗಿದ್ದಾನೆ, ಮಕ್ಕಳಿಗೆ ಈಗ ಅರ್ಥವಾಗಿದೆ - ಕಲ್ಪ-ಕಲ್ಪವೂ ತಂದೆಯೇ ಬಂದು ತಮ್ಮ
ಪರಿಚಯ ಕೊಡುತ್ತಾರೆ. ನಾನು ಇವರಲ್ಲಿ ಪ್ರವೇಶ ಮಾಡಿ ನೀವು ಮಕ್ಕಳಿಗೆ ಓದಿಸುತ್ತಿದ್ದೇನೆ.
ದೇವತೆಗಳಲ್ಲಿ ಈ ಜ್ಞಾನವಿರುವುದಿಲ್ಲ. ಜ್ಞಾನದಿಂದ ದೇವತೆಗಳಾದ ಮೇಲೆ ಮತ್ತೆ ವಿದ್ಯೆಯ
ಅವಶ್ಯಕತೆಯಿರುವುದಿಲ್ಲ. ಇದರಲ್ಲಿ ತಿಳಿದುಕೊಳ್ಳುವ ಬಹಳ ವಿಶಾಲ ಬುದ್ಧಿಯು ಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಬುದ್ಧಿಯಿಂದ
ಈ ಪತಿತ ಪ್ರಪಂಚದ ಸನ್ಯಾಸ ಮಾಡಿ ಹಳೆಯ ದೇಹ ಮತ್ತು ದೇಹದ ಸಂಬಂಧಗಳನ್ನು ಮರೆತು ತಮ್ಮ ಬುದ್ಧಿಯನ್ನು
ತಂದೆ ಮತ್ತು ಸ್ವರ್ಗದ ಕಡೆ ಇಡಬೇಕಾಗಿದೆ.
2. ಅವಿನಾಶಿ
ವಿಶ್ರಾಂತಿಯ ಅನುಭವ ಮಾಡಲು ತಂದೆ ಮತ್ತು ಆಸ್ತಿಯ ಸ್ಮೃತಿಯಲ್ಲಿರಬೇಕಾಗಿದೆ. ಎಲ್ಲರಿಗೆ ತಂದೆಯ
ಸಂದೇಶ ನೀಡಿ ರಿಫ್ರೆಷ್ ಮಾಡಬೇಕಾಗಿದೆ. ಆತ್ಮಿಕ ಸೇವೆಯಲ್ಲಿ ಸಂಕೋಚ ಪಡಬಾರದು.
ವರದಾನ:
ಸದಾ ತಂದೆಯ
ಸಮ್ಮಖದಲ್ಲಿರುತ್ತಾ ಖುಷಿಯ ಅನುಭವ ಮಾಡುವಂತಹವರೇ ನಿರಾಯಾಸರು ಮತ್ತು ಆಲಸ್ಯ ರಹಿತ ಭವ.
ಯಾವುದೇ ಪ್ರಕಾರದ
ಸಂಸ್ಕಾರ ಅಥವಾ ಸ್ವಭಾವವನ್ನು ಪರಿವರ್ತನೆ ಮಾಡುವುದರಲ್ಲಿ ಭರವಸೆ ಕಳೆದುಕೊಳ್ಳುವುದು ಅಥವಾ ತಿಳಿದು
ಹುಡುಗಾಟಿಕೆ ಆಡುವುದೂ ಸಹ ಆಯಾಸವಾಗುವುದಾಗಿದೆ, ಇದರಿಂದ ನಿರಾಯಾಸರಾಗಿ. ನಿರಾಯಾಸದ ಅರ್ಥವಾಗಿದೆ
ಯಾವುದರಲ್ಲಿ ಆಲಸ್ಯ ಇಲ್ಲದೇ ಇರುವುದು. ಯಾವ ಮಕ್ಕಳು ಈ ರೀತಿಯ ಆಲಸ್ಯ ರಹಿತರು ಸದಾ ತಂದೆಯ
ಸಮ್ಮುಖದಲ್ಲಿರುತ್ತಾರೆ ಮತ್ತು ಖುಷಿಯ ಅನುಭವ ಮಾಡುತ್ತಾರೆ. ಅವರ ಮನಸ್ಸಿನಲ್ಲಿ ಎಂದೂ ದುಃಖದ ಅಲೆ
ಬರಲು ಸಾಧ್ಯವಿಲ್ಲ. ಆದ್ದರಿಂದ ಸದಾ ಸಮ್ಮುಖದಲ್ಲಿರಿ ಮತ್ತು ಖುಷಿಯ ಅನುಭವ ಮಾಡಿ.
ಸ್ಲೋಗನ್:
ಸಿದ್ಧಿ ಸ್ವರೂಪರಾಗಲು
ಪ್ರತಿ ಸಂಕಲ್ಪದಲ್ಲಿ ಪುಣ್ಯ ಮತ್ತು ಮಾತಿನಲ್ಲಿ ಆರ್ಶೀವಾದವನ್ನು ಜಮಾ ಮಾಡುತ್ತಾ ಹೋಗಿ.
ಡಬ್ಬಲ್ಲೈಟ್ ಸ್ಥಿತಿಯ
ಅನುಭವ:-
ಬುದ್ಧಿಯಿಂದ
ಸಮರ್ಪಣೆಯಾಗಿ ಬಿಡಿ. ಎಲ್ಲವೂ ತಂದೆಯದಾಗಿದೆ, ಎಲ್ಲವೂ ತಂದೆಯಲ್ಲಿ ಇದೆಯೆಂದಾಗ ಮತ್ತೇನೂ
ಉಳಿದುಕೊಂಡಿಲ್ಲ. ಯಾವಾಗ ಉಳಿದುಕೊಂಡೇ ಇಲ್ಲವೆಂದಾಗ ಬುದ್ಧಿಯು ಎಲ್ಲಿಗೆ ಹೋಗುತ್ತದೆ. ಒಬ್ಬ ತಂದೆ,
ಒಬ್ಬರನ್ನು ನೆನಪು ಮಾಡುವ ಮಾರ್ಗ ಅಷ್ಟೇ, ಈ ಮಾರ್ಗದಿಂದ ಸಹಜವಾಗಿಯೇ ಗುರಿಗೆ ತಲುಪಿ ಬಿಡುತ್ತೀರಿ
ಅರ್ಥಾತ್ ಫರಿಶ್ತೆಯಾಗಿ ಬಿಡುತ್ತೀರಿ.