31.01.21    Avyakt Bapdada     Kannada Murli    25.10.87     Om Shanti     Madhuban


ನಾಲ್ಕು ಮಾತುಗಳಿಂದ ಭಿನ್ನವಾಗಿರಿ


ಬಾಪ್ದಾದಾರವರು ಇಂದು ತನ್ನ ಕಮಲ-ಆಸನಧಾರಿಗಳಾದ ಸರ್ವ ಶ್ರೇಷ್ಠ ಮಕ್ಕಳನ್ನು ನೋಡುತ್ತಿದ್ದಾರೆ. ಕಮಲ-ಆಸನವು ಬ್ರಾಹ್ಮಣ ಆತ್ಮರ ಶ್ರೇಷ್ಠ ಸ್ಥಿತಿಯ ಸಂಕೇತವಾಗಿದೆ, ಆಸನವು ಸ್ಥಿತರಾಗುವ/ಕುಳಿತುಕೊಳ್ಳುವ ಸಾಧನವಾಗಿದೆ. ಬ್ರಾಹ್ಮಣ ಆತ್ಮರು ಕಮಲ-ಸ್ಥಿತಿಯಲ್ಲಿ ಸ್ಥಿತರಾಗಿರುತ್ತಾರೆ ಆದ್ದರಿಂದ ಕಮಲ-ಆಸನಧಾರಿಗಳೆಂದು ಕರೆಸಿಕೊಳ್ಳುತ್ತಾರೆ. ಬ್ರಾಹ್ಮಣರಿಂದ ದೇವತೆಗಳು ಯಾವ ರೀತಿ ಆಗುತ್ತೀರಿ, ಹಾಗೆಯೇ ಆಸನಧಾರಿಗಳಿಂದ ಸಿಂಹಾಸನಾಧಾರಿಗಳು ಆಗುತ್ತೀರಿ. ಯಾರೆಷ್ಟು ಸಮಯದಲ್ಲಿನ ಅಂದರೆ ಬಹಳ ಕಾಲದ ಕಮಲಾಸನಾಧಾರಿ ಅಥವಾ ಅಲ್ಪಕಾಲದ ಕಮಲಾಸನಾಧಾರಿ ಆಗುತ್ತಾರೆಯೋ, ಅವರಷ್ಟೇ ಸಮಯದ ಸಿಂಹಾಸನಾಧಾರಿಯೂ ಆಗುವರು. ಕಮಲ-ಆಸನವು ವಿಶೇಷವಾಗಿ ಬ್ರಹ್ಮಾ ತಂದೆಯ ಸಮಾನ ಅತಿ ಭಿನ್ನ ಹಾಗೂ ಅತಿ ಪ್ರಿಯವಾದ ಸ್ಥಿತಿಯ ಸಂಕೇತವಾಗಿದೆ. ತಾವು ಬ್ರಾಹ್ಮಣ ಮಕ್ಕಳು ಫಾಲೋ ಫಾದರ್ ಮಾಡುವವರಾಗಿದ್ದೀರಿ. ಆದ್ದರಿಂದ ತಂದೆಯ ಸಮಾನ ಕಮಲ-ಆಸನಧಾರಿ ಆಗಿದ್ದೀರಿ. ಅತ್ಯಂತ ಭಿನ್ನವಾದ ಚಿಹ್ನೆಯಾಗಿದೆ - ಅಂತಹವರು ತಂದೆ ಹಾಗೂ ಇಡೀ ಪರಿವಾರಕ್ಕೆ ಅತಿ ಪ್ರಿಯರಾಗುತ್ತಾರೆ. ಭಿನ್ನತನ ಅರ್ಥಾತ್ ನಾಲ್ಕೂ ಕಡೆಗಳಿಂದ ಭಿನ್ನವಾಗುವುದು.

1. ತನ್ನ ದೇಹಭಾನದಿಂದ ಭಿನ್ನರಾಗುವುದು. ಸಾಧಾರಣ ಪ್ರಪಂಚದಲ್ಲಿರುವ ಆತ್ಮರಲ್ಲಿ ನಡೆಯುತ್ತಾ-ಸುತ್ತಾಡುತ್ತಾ, ಪ್ರತಿಯೊಂದು ಕರ್ಮವನ್ನು ಮಾಡುತ್ತಾ, ಯಾವ ರೀತಿ ಸ್ವತಹ ಹಾಗೂ ಸದಾಕಾಲ ದೇಹದ ಪರಿವೆಯು ಇದ್ದೇ ಇರುತ್ತದೆ. ನಾನು ದೇಹವಾಗಿದ್ದೇನೆ ಎಂಬುದು ಸಹಜ ಸ್ಮೃತಿಯಲ್ಲಿರುತ್ತದೆ, ಅದಕ್ಕಾಗಿ ಪರಿಶ್ರಮ ಪಡಬೇಕಾಗಿರುವುದಿಲ್ಲ, ಅದೇ ರೀತಿ ಈ ದೇಹಭಾನದಿಂದ ಕಮಲ-ಆಸನಧಾರಿ ಬ್ರಾಹ್ಮಣ ಆತ್ಮರೂ ಸಹ, ಸ್ವತಹವಾಗಿಯೇ ಇಷ್ಟೂ ಭಿನ್ನರಾಗಿರಬೇಕು, ಹೇಗೆಂದರೆ ಅಜ್ಞಾನಿಯು ಆತ್ಮಾಭಿಮಾನಿ ಸ್ಥಿತಿಯಿಂದ ಆಚೆಯಿರುತ್ತಾರೆ ಅಂದರೆ ಅದರ ತಿಳುವಳಿಕೆಯೇ ಇರುವುದಿಲ್ಲ. ತಾವುಗಳಿರುವುದೇ ಆತ್ಮಾಭಿಮಾನಿ ಸ್ಥಿತಿಯಲ್ಲಿ, ಶರೀರದ ಪರಿವೆಯು ತನ್ನ ಕಡೆ ಆಕರ್ಷಣೆ ಮಾಡದಿರಲಿ. ಬ್ರಹ್ಮಾ ತಂದೆಯು ನಡೆಯುತ್ತಾ-ಸುತ್ತಾಡುತ್ತಾ ಇರುವಾಗಲೂ ಫರಿಶ್ತಾ-ರೂಪ ಅಥವಾ ದೇವತಾ-ರೂಪದ ಸ್ಮೃತಿಯಲ್ಲಿ ಇರುತ್ತಿದ್ದರು ಎಂಬುದನ್ನು ನೋಡಿದಿರಿ, ಅದೇ ರೀತಿ ಸ್ವಾಭಾವಿಕವಾಗಿಯೇ ಸದಾ ದೇಹೀ-ಅಭಿಮಾನಿ ಸ್ಥಿತಿಯಿರಲಿ- ಇದಕ್ಕೇ ದೇಹಭಾನದಿಂದ ಭಿನ್ನರಾಗಿರುವುದು ಎಂದು ಹೇಳಲಾಗುತ್ತದೆ. ದೇಹಭಾನದಿಂದ ಭಿನ್ನರಾಗಿರುವವರೇ ಪರಮಾತ್ಮನ ಪ್ರಿಯರಾಗಿ ಬಿಡುತ್ತಾರೆ.

2. ಈ ದೇಹದ ಸರ್ವ ಸಂಬಂಧಗಳೇನಿವೆಯೋ, ಅವನ್ನು ದೃಷ್ಟಿಯಿಂದ ವೃತ್ತಿಯಿಂದ ಕೃತಿಯಿಂದ, ಅವೆಲ್ಲವುಗಳಿಂದಲೂ ಭಿನ್ನರಾಗುವುದು. ದೇಹದ ಸಂಬಂಧವನ್ನು ನೋಡುತ್ತಿದ್ದರೂ ಸ್ವತಹವಾಗಿಯೇ ಆತ್ಮಿಕ/ದೇಹಿ ಸಂಬಂಧದ ಸ್ಮೃತಿಯಲ್ಲಿರಿ, ಇದರ ನೆನಪಾರ್ಥವಾಗಿ ದೀಪಾವಳಿಯ ನಂತರ ಬೈಯಾದೂಜ್ ಹಬ್ಬವನ್ನು ಆಚರಿಸುತ್ತಾರಲ್ಲವೆ. ಯಾವಾಗ ಹೊಳೆಯುತ್ತಿರುವ ನಕ್ಷತ್ರ ಅಥವಾ ಬೆಳಗುತ್ತಿರುವ ಅವಿನಾಶಿ ದೀಪವಾಗಿ ಬಿಡುತ್ತೀರಿ, ಆಗ ಸಹೋದರ-ಸಹೋದರನ ಸಂಬಂಧವುಂಟಾಗುತ್ತದೆ. ಆತ್ಮನದ ಸಂಬಂಧದಲ್ಲಿ ಸಹೋದರ-ಸಹೋದರನ ಸಂಬಂಧ ಮತ್ತು ಸಾಕಾರ ಬ್ರಹ್ಮಾವಂಶಿ ಬ್ರಾಹ್ಮಣನ ಸಂಬಂಧದಿಂದ, ಸ್ವತಹವಾಗಿಯೇ ಸಹೋದರ-ಸಹೋದರಿಯ ಶ್ರೇಷ್ಠ ಶುದ್ಧ ಸಂಬಂಧವು ಸ್ಮೃತಿಯಲ್ಲಿರುತ್ತದೆ. ಹಾಗಾದರೆ ಭಿನ್ನ/ನಿರ್ಲಿಪ್ತತೆ ಅರ್ಥಾತ್ ದೇಹ ಮತ್ತು ದೇಹದ ಸಂಬಂಧದಿಂದ ಭಿನ್ನರಾಗಿರುವುದು.

3. ದೇಹದ ವಿನಾಶಿ ಪದಾರ್ಥಗಳಿಂದಲೂ ಭಿನ್ನ/ನಿರ್ಲಿಪ್ತರಾಗಿರುವುದು. ಒಂದುವೇಳೆ ಯಾವುದೇ ಪದಾರ್ಥವು ಯಾವುದೇ ಕರ್ಮೇಂದ್ರಿಯವನ್ನು ವಿಚಲಿತಗೊಳಿಸುತ್ತದೆ ಅರ್ಥಾತ್ ಆಸಕ್ತಿ ಭಾವವು ಉತ್ಪನ್ನವಾಗುತ್ತದೆಯೆಂದರೆ ನಿರ್ಲಿಪ್ತತೆಯಿರುವುದಿಲ್ಲ. ಸಂಬಂಧದಿಂದಲೂ ಸಹ ಸಹಜವಾಗಿಯೇ ಭಿನ್ನರಾಗಿ ಬಿಡಬಹುದು. ಆದರೆ ಸರ್ವ ಪದಾರ್ಥಗಳ ಆಸಕ್ತಿಯಿಂದ ಭಿನ್ನ, ಅನಾಸಕ್ತರಾಗುವುದರಲ್ಲಿ ರಾಯಲ್ ರೂಪದ ಆಸಕ್ತಿಯು ಉಳಿದುಕೊಂಡಿರುತ್ತದೆ. ಆಸಕ್ತಿಯ ಸ್ಪಷ್ಟ ರೂಪವು ಇಚ್ಛೆಯಾಗಿದೆ ಎಂದು ತಿಳಿಸಿದ್ದೇವಲ್ಲವೆ. ಈ ಇಚ್ಛೆಯ ಸೂಕ್ಷ್ಮ ರೂಪವಾಗಿದೆ - ಇಷ್ಟವಾಗುವುದು. ಇಚ್ಛೆಯಿಲ್ಲ ಆದರೆ ಇಷ್ಟವಾಗುತ್ತದೆ (ಚೆನ್ನಾಗಿದೆ ಎನಿಸುತ್ತದೆ) ಈ ಸೂಕ್ಷ್ಮ ರೂಪದ `ಚೆನ್ನಾಗಿದೆ' ಎನ್ನುವುದರ ಬದಲು `ಇಚ್ಛೆ'ಯ ರೂಪವನ್ನು ತೆಗೆದುಕೊಳ್ಳಬಹುದು. ಹಾಗಾದರೆ ಇದನ್ನು ಬಹಳ ಚೆನ್ನಾಗಿ ಪರಿಶೀಲನೆ ಮಾಡಿರಿ - ಈ ಪದಾರ್ಥ ಅಂದರೆ ಅಲ್ಪಕಾಲದ ಸುಖದ ಸಾಧನಗಳಂತು ಆಕರ್ಷಿಸುತ್ತಿಲ್ಲವೇ? ಸಮಯದಲ್ಲಿ ಯಾವುದೇ ಸಾಧನಗಳ ಪ್ರಾಪ್ತಿಯಾಗುವುದಿಲ್ಲವೆಂದರೆ ಸಹಜ ಸಾಧನೆ ಅರ್ಥಾತ್ ಸಹಜ ಯೋಗದ ಸ್ಥಿತಿಯು ಏರುಪೇರಿನ ಸ್ಥಿತಿಯಾಗುವುದಿಲ್ಲವೇ? ಯಾವುದಾದರೂ ಸಾಧನಗಳ ವಶರು, ಹವ್ಯಾಸಗಳೊಂದಿಗೆ ವಿವಶರಂತು ಆಗುವುದಿಲ್ಲವೇ? ಏಕೆಂದರೆ ಈ ಸರ್ವ ಪದಾರ್ಥಗಳು ಅಥವಾ ಸಾಧನಗಳು ಪ್ರಕೃತಿಯ ಸಾಧನಗಳಾಗಿವೆ. ತಾವು ಪ್ರಕೃತಿ ಪತಿ ಅಂದರೆ ಪ್ರಕೃತಿಯ ಆಧಾರದಿಂದಲೂ ಭಿನ್ನವಾಗಿರುವ ಕಮಲ-ಆಸನಧಾರಿ ಬ್ರಾಹ್ಮಣರಾಗಿದ್ದೀರಿ. ಮಾಯಾಜೀತರಾಗುವುದರ ಜೊತೆ ಜೊತೆಗೆ ಪ್ರಕೃತಿಜೀತರೂ ಆಗಿದ್ದೀರಿ. ಹೇಗಾದರೂ ಮಾಡಿ ಮಾಯಾಜೀತರಾಗುತ್ತೀರಿ, ಆದರೆ ಮಾಯೆಯು ಮತ್ತೆ-ಮತ್ತೆ ಭಿನ್ನ-ಭಿನ್ನ ರೂಪಗಳಲ್ಲಿ ಟ್ರಯಲ್ ಮಾಡುತ್ತಿರುತ್ತದೆ - ಹೇಗೆಂದರೆ, ನನ್ನ ಜೊತೆಗಾರರು ಮಾಯಾಜೀತರಾಗುತ್ತಿದ್ದಾರೆ. ಆದ್ದರಿಂದ ಭಿನ್ನ-ಭಿನ್ನ ಪ್ರಕಾರವಾಗಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತದೆ. ಪ್ರಕೃತಿಯ ಪರೀಕ್ಷೆಯಾಗಿದೆ - ತಮ್ಮೆಲ್ಲರನ್ನು ಸಾಧನಗಳ ಮೂಲಕ ಏರುಪೇರಿನಲ್ಲಿ ತರುವುದು, ಉದಾ: ನೀರು, ಇದರಲ್ಲಿ ಯಾವುದೇ ದೊಡ್ಡ ಪರೀಕ್ಷೆಯು ಬಂದಿಲ್ಲ. ಆದರೆ ನೀರಿನಿಂದ ಮಾಡಲ್ಪಟ್ಟಿರುವ ಸಾಧನಗಳು, ಅಗ್ನಿಯ ಮೂಲಕ ತಯಾರಾಗಿರುವ ಸಾಧನಗಳು, ಈ ರೀತಿ ಪ್ರಕೃತಿಯ ತತ್ವಗಳ ಮೂಲಕ ತಯಾರಾಗಿರುವ ಸಾಧನಗಳು, ಮನುಷ್ಯಾತ್ಮರ ಜೀವನ ಅಲ್ಪಕಾಲದ ಸುಖದ ಆಧಾರವಾಗಿದೆ. ಇವೆಲ್ಲಾ ತತ್ವಗಳಿಂದಲೂ ಪರೀಕ್ಷೆಯನ್ನು ತೆಗೆದುಕೊಳ್ಳುತ್ತದೆ, ಈಗಂತು ಕೇವಲ ನೀರಿನ ಕೊರತೆಯುಂಟಾಗಿದೆ ಆದರೆ ಯಾವಾಗ ನೀರಿನ ಮೂಲಕ ತಯಾರು ಮಾಡಿರುವ ಪದಾರ್ಥಗಳು ಪ್ರಾಪ್ತಿಯಾಗದಿದ್ದರೆ, ಆ ಸಮಯದಲ್ಲಿ ಸತ್ಯ ಪರೀಕ್ಷೆಯಾಗುತ್ತದೆ. ಪ್ರಕೃತಿಯ ಈ ಪರೀಕ್ಷೆಯೂ ಸಹ ಸಮಯದನುಸಾರ ಬರಲೇಬೇಕು. ಆದ್ದರಿಂದ ದೇಹದ ಪದಾರ್ಥಗಳ ಆಸಕ್ತಿ ಅಥವಾ ಆಧಾರದಿಂದಲೂ ನಿರಾಧಾರ ಅಂದರೆ ಅನಾಸಕ್ತರಾಗಬೇಕಾಗಿದೆ. ಈಗಂತು ಎಲ್ಲಾ ಸಾಧನಗಳು ಬಹಳ ಚೆನ್ನಾಗಿಯೇ ಪ್ರಾಪ್ತಿಯಾಗಿದೆ, ಯಾವುದರ ಕೊರತೆಯೂ ಇಲ್ಲ. ಆದರೆ ಸಾಧನಗಳಿದ್ದರೂ, ಅದನ್ನು ಪ್ರಯೋಗದಲ್ಲಿ ತರುತ್ತಿದ್ದರೂ, ಯೋಗದ ಸ್ಥಿತಿಯು ವಿಚಲಿತವಾಗದಿರಲಿ. ಇವೆಲ್ಲವನ್ನೂ ಯೋಗಿಯಾಗಿದ್ದು ಪ್ರಯೋಗ ಮಾಡುವುದಕ್ಕೆ ಹೇಳಲಾಗುತ್ತದೆ - ಭಿನ್ನರಾಗಿರುವುದು. ಯಾವುದೇ ಸಾಧನಗಳ ಪ್ರಾಪ್ತಿಯಿಲ್ಲದಿದ್ದರೆ, ಅವರಿಗೆ ಭಿನ್ನರಾಗಿದ್ದಾರೆಂದು ಹೇಳುವುದಿಲ್ಲ. ಎಲ್ಲವೂ ಪ್ರಾಪ್ತಿಯಾಗಿದ್ದರೂ ನಿಮಿತ್ತವಾಗಿದ್ದು, ಅನಾಸಕ್ತರಾಗಿ ಪ್ರಯೋಗ ಮಾಡುತ್ತಿದ್ದೇನೆಯೇ, ಇಚ್ಛೆ ಅಥವಾ ಅಚ್ಛಾ (ಇಷ್ಟ ಅಥವಾ ಚೆನ್ನಾಗಿದೆ) ಆಗಿರುವ ಕಾರಣದಿಂದ ಉಪಯೋಗಿಸುತ್ತಿಲ್ಲವೇ ಎಂಬುದನ್ನು ಅವಶ್ಯವಾಗಿ ಪರಿಶೀಲನೆ ಮಾಡಿರಿ. ಇಚ್ಛೆಯೆಲ್ಲಿರುತ್ತದೆಯೋ ಅಲ್ಲಿ ಭಲೆ ಎಷ್ಟಾದರೂ ಪರಿಶ್ರಮ ಪಡಬಹುದು ಆದರೆ ಇಚ್ಛೆಯು ಅಚ್ಛಾ (ಒಳ್ಳೆಯವರು) ಆಗಲು ಬಿಡುವುದಿಲ್ಲ. ಪರೀಕ್ಷೆಯ ಸಮಯದಲ್ಲಿ ಪರಿಶ್ರಮ ಪಡುವುದರಲ್ಲಿಯೇ ಸಮಯವು ಹೊರಟು ಹೋಗುತ್ತದೆ. ತಾವು ಸಾಧನೆ ಮಾಡುವುದಕ್ಕೆ ಪ್ರಯತ್ನಿಸುತ್ತೀರಿ ಮತ್ತು ಸಾಧನಗಳು ತನ್ನ ಕಡೆ ಆಕರ್ಷಿಸುತ್ತದೆ. ತಾವೇನಾದರೂ ಈ ಸಾಧನಗಳ ಆಕರ್ಷಣೆಯನ್ನು ಸಮಾಪ್ತಿಗೊಳಿಸಲು ಯುದ್ಧ ಮಾಡುತ್ತಾ, ಪರಿಶ್ರಮ ಪಡುವ ಪ್ರಯತ್ನ ಪಡುತ್ತಾ ಇರುತ್ತೀರೆಂದರೆ, ಪರೀಕ್ಷೆಯ ಸಮಯವು ಯುದ್ಧದ ಗೊಂದಲದಲ್ಲಿಯೇ ಕಳೆದು ಹೋಗುತ್ತದೆ. ಅದರಿಂದ ಫಲಿತಾಂಶವೇನಾಗುವುದು? ಸಾಧನಗಳನ್ನು ಪ್ರಯೋಗ ಮಾಡುವವರನ್ನು, ಅದೇ ಸಾಧನಗಳು ಸಹಜಯೋಗಿ ಸ್ಥಿತಿಯಿಂದ ಏರುಪೇರು ಮಾಡಿ ಬಿಟ್ಟಿತಲ್ಲವೆ. ಈಗಂತು ಬಹಳ ತೀವ್ರ ಗತಿಯಿಂದ ಪ್ರಕೃತಿಯು ಪರೀಕ್ಷೆಯನ್ನು ತೆಗೆದುಕೊಳ್ಳುವುದಕ್ಕೆ ಬರುವುದಿದೆ. ಆದ್ದರಿಂದ, ಇದಕ್ಕೆ ಮೊದಲೇ ಪದಾರ್ಥಗಳ ವಿಶೇಷ ಆಧಾರವು - ಅಂದರೆ ಆಹಾರ, ಪಾನೀಯ, ತೊಡುಗೆ, ಚಲನೆ, ಸಂಪರ್ಕದಲ್ಲಿ ಬರುವಂತಹ ಎಲ್ಲಾ ಪರಿಶೀಲನೆಗಳನ್ನು ಮಾಡಿಕೊಳ್ಳಿರಿ - ಇವೆಲ್ಲವುಗಳಲ್ಲಿ ಯಾವುದೇ ಮಾತಿನಲ್ಲಿಯೂ ಸೂಕ್ಷ್ಮ ರೂಪದಲ್ಲಿಯೂ ವಿಘ್ನ ರೂಪವಂತು ಆಗುತ್ತಿಲ್ಲವೇ? ಇದನ್ನು ಈಗಿನಿಂದಲೇ ಟ್ರಯಲ್ ಮಾಡಿರಿ. ಯಾವ ಸಮಯದಲ್ಲಿ ಪರೀಕ್ಷೆಯು ಬರುತ್ತದೆಯೋ, ಆ ಸಮಯದಲ್ಲಿ ಟ್ರಯಲ್ ಮಾಡುವುದಲ್ಲ. ಆ ಸಮಯದಲ್ಲೇನಾದರೂ ಟ್ರಯಲ್ ಮಾಡುತ್ತೀರೆಂದರೆ ಉತ್ತೀರ್ಣರಾಗುವುದಿಲ್ಲ, ಫೇಲ್ ಆಗುವ ಸಂಭವವಿದೆ.

ಯೋಗ-ಸ್ಥಿತಿ ಅರ್ಥಾತ್ ಎಲ್ಲವನ್ನೂ ಪ್ರಯೋಗ ಮಾಡುತ್ತಿದ್ದರೂ, ಅದರಿಂದ ಭಿನ್ನವಾಗಿರುವ ಸ್ಥಿತಿ. ಸಾಧನಗಳ ಮೇಲೆ ಅರ್ಥಾತ್ ಪ್ರಕೃತಿಯ ಮೇಲೆ ಸಹಜಯೋಗದ ಸಾಧನೆಯ ವಿಜಯಿಯಾಗಿದ್ದೀರಿ. ಸಾಧನಗಳಿಲ್ಲದೆ ಕಾರ್ಯವಾಗು ಸಾಧ್ಯವಿದೆ ಇವುಗಳಿಲ್ಲದೆ ನಾವಿರಲು ಸಾಧ್ಯವಿಲ್ಲ - ಈ ರೀತಿಯಾಗಬಾರದು. ಇದರಿಂದ ಏರುಪೇರಿನ ಸ್ಥಿತಿಯಾಗಿ ಬಿಡುತ್ತದೆ, ಆದ್ದರಿಂದ ಇದಕ್ಕೆ ಭಿನ್ನವಾಗಿರುವ ಜೀವನವೆಂದು ಹೇಳುವುದಿಲ್ಲ. ತಾವು ಇಂತಹ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಿರಿ, ಅದರಿಂದ ತಮ್ಮ ಸಿದ್ಧಿಯ ಮೂಲಕ ಅಪ್ರಾಪ್ತಿಯೂ ಸಹ ಪ್ರಾಪ್ತಿಯೆಂಬಂತೆ ಅನುಭವ ಮಾಡಿಸಲಿ. ಯಜ್ಞದ ಸ್ಥಾಪನೆಯ ಆರಂಭದಲ್ಲಿ ಈ ಕಾರ್ಯಕ್ರಮವನ್ನು ಇಡುತ್ತಿದ್ದೆವು - ಯಾವುದರಲ್ಲಾದರೂ ಆಸಕ್ತಿಯಿದೆಯೇ ಅಥವಾ ಇಲ್ಲವೆ ಎನ್ನುವುದು ತಿಳಿದಿದ್ದರೂ ಮಧ್ಯ-ಮಧ್ಯದಲ್ಲಿ ಟ್ರಯಲ್ ಮಾಡುವ ಕಾರ್ಯಕ್ರಮ ಇಡುತ್ತಿದ್ದೆವು. ಅದರಲ್ಲಿ - 15 ದಿನಗಳು ಕೇವಲ ಒಣ ರೊಟ್ಟಿ ಮತ್ತು ಮಜ್ಜಿಗೆಯನ್ನು ತಿನ್ನಿಸಲಾಯಿತು. ಯಾವುದೇ ರೋಗವಿರುವವರೂ ಸಹ ಇದೇ ದಿನಚರಿಯಲ್ಲಿ ನಡೆದರು, ಆದರೂ ಸಹ 15 ದಿನಗಳಲ್ಲಿ ರೋಗಿಯೇ ಆಗಲಿಲ್ಲ. ಅಸ್ತಮಾದಿಂದ ಬಳಲುತ್ತಿರುವವರೂ ಸಹ ಗುಣ ಮುಖರಾದರಲ್ಲವೆ. ಇದನ್ನು ಬಾಪ್ದಾದಾರವರು ದಿನಚರಿಯನ್ನು ಕೊಟ್ಟಿದ್ದಾರೆನ್ನುವ ನಶೆಯಿತ್ತು. ಹೇಗೆ ಭಕ್ತಿಯಲ್ಲಿಯೂ ಸಹ ಹೇಳುತ್ತಾರೆ - ವಿಷವೂ ಅಮೃತವಾಯಿತು, ಆದರೆ ಇಲ್ಲಂತು ಮಜ್ಜಿಗೆಯಿತ್ತು! ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಈ ನಿಶ್ಚಯ ಮತ್ತು ನಶೆಯು ವಿಜಯಿಯನ್ನಾಗಿ ಮಾಡಿ ಬಿಡುತ್ತದೆ. ಅಂದಮೇಲೆ ಒಣ ರೊಟ್ಟಿಯನ್ನೇ ತಿನ್ನಬೇಕಾಗುತ್ತದೆ, ಇಂತಹ ಪರೀಕ್ಷೆಯೂ ಬರುತ್ತದೆ, ಆ ಸಮಯದಲ್ಲಿ ನಮಗೆ ತಿನ್ನಲು ಹಲ್ಲು ಸಹಯೋಗ ಕೊಡುತ್ತಿಲ್ಲ, ಜೀರ್ಣವಾಗುವುದಿಲ್ಲ ಎಂದು ಹೇಳುತ್ತೀರಿ. ಆದರೆ ಆ ಸಮಯದಲ್ಲೇನು ಮಾಡುವಿರಿ? ಯಾವಾಗ ನಿಶ್ಚಯ, ನಶೆ, ಯೋಗದ ಸಿದ್ಧಿಯ ಶಕ್ತಿಯಿರುತ್ತದೆಯೆಂದರೆ, ಒಣ ರೊಟ್ಟಿಯೂ ಸಹ ಮೆದುವಾಗಿರುವ ರೊಟ್ಟಿಯಂತೆ ಕೆಲಸ ಮಾಡುತ್ತದೆ, ಕಷ್ಟ ಕೊಡುವುದಿಲ್ಲ. ಆದರೆ ಈಗಂತು ಸಾಧನಗಳಿವೆ, ತಾವು ಸಿದ್ಧಿ ಸ್ವರೂಪರ ಸ್ಥಿತಿಯಲ್ಲಿ ಸ್ಥಿತರಾಗಿರುತ್ತೀರೆಂದರೆ, ಮತ್ತ್ಯಾವುದೂ ಸಹ ಕಷ್ಟ ಕೊಡಲು ಸಾಧ್ಯವೇ ಇಲ್ಲ. ಯಾವಾಗ ಹಠಯೋಗಿಗಳ ಮುಂದೆ ಸಿಂಹವೂ ಸಹ ಬೆಕ್ಕಿನಂತಾಗಿ ಬಿಡುತ್ತದೆ, ಹಾವು ಆಟಿಕೆಯಂತಾಗುತ್ತದೆ ಅಂದಮೇಲೆ ತಾವು ಸಹಜ ರಾಜಯೋಗಿ, ಸಿದ್ಧಿ ಸ್ವರೂಪ ಆತ್ಮರಿಗಂತು ಇವೆಲ್ಲವೂ ದೊಡ್ಡ ಮಾತೆನಿಸುವುದಿಲ್ಲ. ಈಗ ಇದೆಯೆಂದಾಗ ಆರಾಮವಾಗಿ ಉಪಯೋಗಿಸಿ ಆದರೆ ಸಮಯದಲ್ಲಿ ಮೋಸಕ್ಕೊಳಗಾಗಬಾರದು. ಪರಿಸ್ಥಿತಿಯು ಸ್ಥಿತಿಯನ್ನು ಕೆಳಗೆ ತರಬಾರದು - ಇದನ್ನು ಪರಿಶೀಲನೆ ಮಾಡಿಕೊಳ್ಳಬೇಕು. ದೇಹದ ಸಂಬಂಧದಿಂದ ಭಿನ್ನರಾಗುವುದು ಸಹಜವಿದೆ ಆದರೆ ದೇಹದ ಪದಾರ್ಥಗಳಿಂದ ಭಿನ್ನರಾಗುವುದರಲ್ಲಿ ಬಹಳ ಗಮನವಿರಬೇಕು.

4. ಹಳೆಯ ಸ್ವಭಾವ, ಸಂಸ್ಕಾರದಿಂದ ಭಿನ್ನರಾಗಬೇಕು. ಹಳೆಯ ದೇಹದ ಸ್ವಭಾವ ಮತ್ತು ಸಂಸ್ಕಾರವೂ ಸಹ ಬಹಳ ಕಠಿಣವಾಗಿದೆ. ಮಾಯಾಜೀತರಾಗುವುದರಲ್ಲಿ ಇದೂ ಸಹ ಬಹಳ ದೊಡ್ಡ ವಿಘ್ನ ರೂಪವಾಗುತ್ತದೆ. ಕೆಲವೊಮ್ಮೆ ಹಳೆಯ ಸ್ವಭಾವ, ಸಂಸ್ಕಾರಗಳೆಂಬ ವಿಷಪೂರಿತ ಹಾವು ಸಮಾಪ್ತಿಯಾಗಿ ಬಿಡುತ್ತದೆ. ಆದರೆ ಗೆರೆಯಷ್ಟು ಉಳಿದುಕೊಂಡು ಬಿಡುತ್ತದೆ, ಅದು ಸಮಯ ಬಂದಾಗ ಮತ್ತೆ-ಮತ್ತೆ ಮೋಸ ಮಾಡಿ ಬಿಡುತ್ತದೆ, ಇದನ್ನು ಬಾಪ್ದಾದಾರವರು ನೋಡಿದ್ದಾರೆ. ಕೆಲವೊಮ್ಮೆ ಈ ಕಠಿಣ ಸ್ವಭಾವ ಮತ್ತು ಸಂಸ್ಕಾರವು ಮಾಯೆಗೆ ವಶ ಪಡಿಸಿ ಬಿಡುತ್ತದೆ, ಆ ಸಮಯದಲ್ಲಿ ತಪ್ಪನ್ನೂ ತಪ್ಪು ಕರ್ಮವೆಂದು ತಿಳಿಯುವುದೇ ಇಲ್ಲ, ಆ ಸಮಯದಲ್ಲಿ `ಅನುಭೂತಿಯ ಶಕ್ತಿ'ಯು ಸಮಾಪ್ತಿಯಾಗಿರುತ್ತದೆ. ಹಳೆಯ ಸ್ವಭಾವ-ಸಂಸ್ಕಾರಗಳಿಂದಲೂ ಭಿನ್ನರಾಗುವುದರ ಪರಿಶೀಲನೆಯನ್ನೂ ಬಹಳ ಚೆನ್ನಾಗಿ ಮಾಡಬೇಕು. ಅನುಭೂತಿಯ ಶಕ್ತಿಯು ಯಾವಾಗ ಸಮಾಪ್ತಿಯಾಗಿ ಬಿಡುತ್ತದೆಯೋ, ಆಗ ತನ್ನ ಮಾತುಗಳನ್ನು ಸಿದ್ಧ ಮಾಡುವುದಕ್ಕಾಗಿ ಒಂದು ಸುಳ್ಳಿನ ಹಿಂದೆ ಸಾವಿರಾರು ಸುಳ್ಳುಗಳನ್ನು ಹೇಳಬೇಕಾಗುವಂತಹ ರೀತಿಯಲ್ಲಿ ಪರವಶರಾಗಿ ಬಿಡುತ್ತಾರೆ! ತನ್ನ ಸತ್ಯವನ್ನು ಸಿದ್ಧ ಮಾಡುವುದೂ ಸಹ ಹಳೆಯ ಸಂಸ್ಕಾರಗಳಲ್ಲಿ ವಶರಾಗಿರುವ ಲಕ್ಷಣವಾಗಿದೆ. ಒಂದು - ಯಥಾರ್ಥ ಮಾತನ್ನು ಸಿದ್ಧ ಮಾಡುವುದು, ಇನ್ನೊಂದು-ತನ್ನನ್ನು ಹಠದಿಂದ ಸಿದ್ಧ ಮಾಡುವುದು. ಈ ಹಠದಿಂದ ಸಿದ್ಧ ಮಾಡುವವರೆಂದಿಗೂ ಸಹ ಸಿದ್ಧಿ ಸ್ವರೂಪರಾಗಲು ಸಾಧ್ಯವಿಲ್ಲ. ಇದನ್ನೂ ಪರಿಶೀಲನೆ ಮಾಡಿರಿ - ಯಾವುದೇ ಹಳೆಯ ಸ್ವಭಾವ, ಸಂಸ್ಕಾರಗಳ ಅಂಶಮಾತ್ರವೂ ಸಹ ಗುಪ್ತ ರೂಪದಲ್ಲಂತು ಇಲ್ಲವೇ? ತಿಳಿಯಿತೆ?

ಯಾರು ಈ ನಾಲ್ಕೂ ಪ್ರಕಾರದ ಮಾತುಗಳಿಂದ ಭಿನ್ನರಾಗಿರುತ್ತಾರೆಯೋ, ಅವರಿಗೆ ತಂದೆಯ ಪ್ರಿಯ, ಪರಿವಾರದ ಪ್ರಿಯರೆಂದು ಹೇಳುತ್ತೇವೆ. ಇಂತಹ ಕಮಲ-ಆಸನಧಾರಿಗಳಾಗಿದ್ದೀರಾ? ಇದನ್ನೇ ಫಾಲೋ ಫಾದರ್ ಎಂದು ಹೇಳಲಾಗುತ್ತದೆ. ಬ್ರಹ್ಮಾ ತಂದೆಯೂ ಸಹ ಕಮಲ-ಆಸನಧಾರಿಯಾದಾಗಲೇ ನಂಬರ್ವನ್ ತಂದೆಯ ಪ್ರಿಯನಾದರು, ಬ್ರಾಹ್ಮಣರ ಪ್ರಿಯರಾದರು, ಅದು ಭಲೆ ವ್ಯಕ್ತ ರೂಪದಲ್ಲಾಗಿರಬಹುದು, ಈಗ ಅವ್ಯಕ್ತ ರೂಪದಲ್ಲಾಗಿರಬಹುದು ಎರಡರಲ್ಲಿಯೂ ಪ್ರಿಯರಾದರು. ಈಗಲೂ ಸಹ ಪ್ರತಿಯೊಬ್ಬ ಬ್ರಾಹ್ಮಣನ ಹೃದಯದಿಂದ ಯಾವ ಶಬ್ಧ ಬರುತ್ತದೆ? ನಮ್ಮ ಬ್ರಹ್ಮಾ ಬಾಬಾ. ನಾವಂತು ಸಾಕಾರನನ್ನು ನೋಡಿಲ್ಲವೆಂಬ ಅನುಭವ ಮಾಡುವುದಿಲ್ಲ. ಆದರೆ ನಯನಗಳಿಂದ ನೋಡಿಲ್ಲ ಆದರೆ ಹೃದಯದಿಂದ ಮತ್ತು ಬುದ್ಧಿಯ ದಿವ್ಯ ನೇತ್ರಗಳಿಂದ ನೋಡಿದ್ದೇವೆ ಹಾಗೂ ಅನುಭವವನ್ನೂ ಮಾಡಿದ್ದೇವೆ. ಆದ್ದರಿಂದ ಪ್ರತಿಯೊಬ್ಬ ಬ್ರಾಹ್ಮಣನೂ ಹೃದಯದಿಂದ ಹೇಳುತ್ತಾರೆ- ``ನಮ್ಮ ಬ್ರಹ್ಮಾಬಾಬಾ'' ಎಂದು. ಇದು ಭಿನ್ನವಾಗುವುದರ ಚಿಹ್ನೆಯಾಗಿದೆ. ನಾಲ್ಕೂ ಕಡೆಯಲ್ಲಿಯ ಭಿನ್ನ ಸ್ಥಿತಿಯು ವಿಶ್ವದ ಪ್ರಿಯರನ್ನಾಗಿ ಮಾಡಿ ಬಿಡುತ್ತದೆ. ಅಂದಾಗ ಈ ನಾಲ್ಕೂ ಕಡೆಯಿಂದ ಭಿನ್ನ ಹಾಗೂ ಸರ್ವರ ಪ್ರಿಯರಾಗಿರಿ. ತಿಳಿಯಿತೆ?

ಗುಜರಾತ್ ಸಮೀಪವಿರುತ್ತದೆ ಅಂದಮೇಲೆ ಫಾಲೋ ಮಾಡುವುದರಲ್ಲಿಯೂ ಸಮೀಪವಿದೆ. ಸ್ಥಾನ ಮತ್ತು ಸ್ಥಿತಿ ಎರಡರಲ್ಲಿಯೂ ಸಮೀಪರಾಗಿರಿ - ಇದೇ ವಿಶೇಷತೆಯಾಗಿದೆ. ಬಾಪ್ದಾದಾರವರಂತು ಸದಾ ಮಕ್ಕಳನ್ನು ನೋಡುತ್ತಾ ಹರ್ಷಿತವಾಗುತ್ತಾರೆ. ಒಳ್ಳೆಯದು.

ನಾಲ್ಕೂ ಕಡೆಯ ಕಮಲ-ಆಸನಧಾರಿ, ಭಿನ್ನ ಹಾಗೂ ತಂದೆಯ ಪ್ರಿಯವಾದ ಮಕ್ಕಳಿಗೆ, ಸದಾ ಮಾಯಾಜೀತ, ಪ್ರಕೃತಿಜೀತ ವಿಶೇಷ ಆತ್ಮರಿಗೆ, ಸದಾ ಫಾಲೋ ಫಾದರ್ ಮಾಡುವಂತಹ ಆಜ್ಞಾಕಾರಿ ಮಕ್ಕಳಿಗೆ, ಬಾಪ್ದಾದಾರವರ ಸ್ನೇಹ ಸಂಪನ್ನ ನೆನಪು-ಪ್ರೀತಿ ಹಾಗೂ ನಮಸ್ತೆ.

ಮಧುಬನದಲ್ಲಿ ಬಂದಿರುವ ಸೇವಾಧಾರಿ ಸಹೋದರ-ಸಹೋದರಿಯರೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ:-

ಮಧುಬನಲ್ಲಿ ಸೇವೆಯನ್ನು ಎಷ್ಟು ಸಮಯ ಮಾಡಿದಿರಿ, ಅಷ್ಟೂ ಸಮಯದಲ್ಲಿ ನಿರಂತರ ಯೋಗದ ಅನುಭವ ಮಾಡಿದಿರಾ? ಯೋಗವು ಕಟ್ ಆಗಲಿಲ್ಲವೇ? ಮಧುಬನದಲ್ಲಿ ಸೇವಾಧಾರಿಯಾಗುವುದು ಅರ್ಥಾತ್ ನಿರಂತರ ಯೋಗಿ, ಸಹಜಯೋಗಿಯ ಅನುಭವಿಯಾಗುವುದು. ಈ ಸ್ವಲ್ಪ ಸಮಯದಲ್ಲಿನ ಅನುಭವವೂ ಸಹ ಸದಾಕಾಲ ನೆನಪಿರುತ್ತದೆ. ಯಾವಾಗ ಯಾವುದೇ ಪರಿಸ್ಥಿತಿ ಬಂದಿತೆಂದರೆ, ಮನಸ್ಸಿನಿಂದ ಮಧುಬನದಲ್ಲಿ ತಲುಪಿ ಬಿಡಿ, ಮಧುಬನ ನಿವಾಸಿಯಾಗುವುದರಿಂದ ಪರಿಸ್ಥಿತಿ ಅಥವಾ ಸಮಸ್ಯೆಗಳು ಸಮಾಪ್ತಿಯಾಗಿ ಬಿಡುತ್ತವೆ ಮತ್ತು ತಾವು ಸಹಜಯೋಗಿ ಆಗಿ ಬಿಡುತ್ತೀರಿ. ತಮ್ಮ ಈ ಅನುಭವವನ್ನು ಸದಾ ಜೊತೆಯಿಟ್ಟುಕೊಳ್ಳಿರಿ, ಅನುಭವವನ್ನು ನೆನಪು ಮಾಡುವುದರಿಂದ ಶಕ್ತಿಯು ಬರುತ್ತದೆ. ಸೇವೆಯ ಫಲವಂತು ಅವಿನಾಶಿಯಾಗಿದೆ. ಒಳ್ಳೆಯದು - ಈ ಅವಕಾಶ ಸಿಗುವುದೂ ಸಹ ಕಡಿಮೆಯೇನಲ್ಲ, ಬಹಳ ದೊಡ್ಡ ಅವಕಾಶವೇ ಸಿಕ್ಕಿದೆ.

ಸೇವಾಧಾರಿ ಅರ್ಥಾತ್ ಸದಾ ತಂದೆಯ ಸಮಾನ ನಿಮಿತ್ತರಾಗುವವರು, ನಿರಹಂಕಾರಿ ಆಗಿರುವವರು. ನಿರಹಂಕಾರಿ ಗುಣವೇ ಸಫಲತೆಯ ಬಹಳ ಶ್ರೇಷ್ಠವಾದ ಸಾಧನವಾಗಿದೆ. ಯಾವುದೇ ಸೇವೆಯಲ್ಲಿ ಸಫಲತೆಯ ಸಾಧನವು ನಮ್ರತಾ ಭಾವವಾಗಿದೆ, ನಿಮಿತ್ತಭಾವವಾಗಿದೆ. ಅಂದಮೇಲೆ ಈ ವಿಶೇಷತೆಗಳಿಂದಲೇ ಸೇವೆ ಮಾಡಿದಿರಾ? ಇಂತಹ ಸೇವೆಯಲ್ಲಿ ಸದಾ ಸಫಲತೆಯೂ ಇರುತ್ತದೆ ಮತ್ತು ಸದಾ ಮೋಜಿರುತ್ತದೆ. ಸಂಗಮಯುಗದ ಮೋಜನ್ನಾಚರಿಸಿದಿರಿ ಆದ್ದರಿಂದ ಸೇವೆಯು ಸೇವೆಯೆನಿಸುವುದಿಲ್ಲ. ಹೇಗೆ ಯಾರೇ ಮಲ್ಲ ಯುದ್ಧ ಮಾಡುತ್ತಾರೆಂದರೆ ತನ್ನ ಮೋಜಿನಿಂದ ಆಟವೆಂದು ತಿಳಿದುಕೊಂಡು ಮಾಡುತ್ತಾರೆ, ಅದರಲ್ಲಿ ಸುಸ್ತು ಅಥವಾ ನೋವಾಗುವುದಿಲ್ಲ ಏಕೆಂದರೆ ಮನೋರಂಜನೆಯೆಂದು ತಿಳಿದು ಮಾಡುತ್ತಾರೆ, ಮೋಜನ್ನಾಚರಿಸಲು ಮಾಡುತ್ತಾರೆ. ಇದೇ ವಿಶೇಷತೆಯಲ್ಲೇನಾದರೂ ತಾವು ಸತ್ಯ ಸೇವಾಧಾರಿಗಳು ಸೇವೆ ಮಾಡುತ್ತೀರೆಂದರೆ ಎಂದಿಗೂ ಸಹ ಸುಸ್ತಾಗಲು ಸಾಧ್ಯವಿಲ್ಲ. ತಿಳಿಯಿತೆ? ಸದಾ ಈ ರೀತಿ ಅನುಭವವಾಗುತ್ತದೆ- ಇದು ಸೇವೆಯಲ್ಲ ಆದರೆ ಆಟವಾಡುತ್ತಿದ್ದೇವೆ. ಅಂದಮೇಲೆ ಯಾವುದಾದರೂ ಸೇವೆ ಸಿಗಲಿ, ಇವೆರಡು ವಿಶೇಷತೆಗಳಿಂದ ಸಫಲತೆಯನ್ನು ಪಡೆಯುತ್ತಿರಿ, ಇದರಿಂದ ಸದಾ ಸಫಲತಾ-ಸ್ವರೂಪರಾಗುತ್ತೀರಿ. ಒಳ್ಳೆಯದು.

2. ಸತ್ಯ ತಪಸ್ಸು ಸದಾ ಕಾಲಕ್ಕಾಗಿ ಸತ್ಯ ಚಿನ್ನವನ್ನಾಗಿ ಮಾಡಿ ಬಿಡುತ್ತದೆ. ಇದರಲ್ಲಿ ಸ್ವಲ್ಪವೂ ಸೇರ್ಪಡೆಯಿರಬಾರದು. ತಪಸ್ಸು ಪ್ರತಿಯೊಬ್ಬರನ್ನೂ ಸದಾ ಇಂತಹ ಯೋಗ್ಯರನ್ನಾಗಿ ಮಾಡಿ ಬಿಡುತ್ತದೆ, ಅದು ಪ್ರವೃತ್ತಿಯಲ್ಲಿಯೂ ಸಫಲತೆ ಮತ್ತು ಪ್ರಾಲಬ್ಧವನ್ನು ಪ್ರಾಪ್ತಿ ಮಾಡಿಕೊಳ್ಳುವುದರಲ್ಲಿಯೂ ಸಫಲರನ್ನಾಗಿ ಮಾಡುತ್ತದೆ. ಇಂತಹ ತಪಸ್ವಗಳಾಗಿದ್ದೀರಾ? ತಪಸ್ಸು ಮಾಡುವವರಿಗೆ ರಾಜಯೋಗಿಗಳೆಂದು ಹೇಳಲಾಗುತ್ತದೆ. ಹಾಗಾದರೆ ತಾವೆಲ್ಲರೂ ರಾಜಯೋಗಿಯಾಗಿದ್ದೀರಿ. ಕೆಲವೊಮ್ಮೆ ಯಾವುದೇ ಪರಿಸ್ಥಿತಿಯಿಂದ ವಿಚಲಿತರಾಗುವವರಂತು ಅಲ್ಲವೇ? ಹಾಗಾದರೆ ತಮ್ಮನ್ನು ಸದಾ ಇದೇ ರೀತಿಯಲ್ಲಿ ಪರಿಶೀಲನೆ ಮಾಡಿಕೊಳ್ಳಿರಿ ಮತ್ತು ಪರಿಶೀಲನೆಯ ನಂತರ ಪರಿವರ್ತನೆ ಮಾಡಿರಿ. ಕೇವಲ ಪರಿಶೀಲನೆಯಿಂದಲೂ ಬೇಸರವಾಗಿ ಬಿಡುತ್ತೀರಿ, ಆ ನಂತರ ಯೋಚಿಸುತ್ತೀರಿ - ನಮ್ಮಲ್ಲಿ ಈ ಕೊರತೆಯೂ ಇದೆ, ಇದೂ ಇದೆ, ಇದು ಸರಿಯಾಗುತ್ತದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಆದ್ದರಿಂದ ಪರಿಶೀಲನೆಯನ್ನೂ ಮಾಡಿರಿ ಮತ್ತು ಪರಿವರ್ತನೆಯನ್ನೂ ಮಾಡಿರಿ. ತಿಳಿಯಿತೆ. ಭಲೆ ಬಲಹೀನರಾದಿರಿ, ಸಮಯವು ಕಳೆದು ಹೋಯಿತೆಂದು ತಿಳಿದುಕೊಳ್ಳಿ, ಆದರೆ ಸಮಯದನುಸಾರ ಕರ್ತವ್ಯ ಮಾಡುವುದರಿಂದ ಸದಾ ವಿಜಯವಿರುತ್ತದೆ. ಅಂದಮೇಲೆ ಎಲ್ಲರೂ ಸದಾ ವಿಜಯಿ, ಶ್ರೇಷ್ಠಾತ್ಮರಾಗಿದ್ದೀರಾ? ಎಲ್ಲರೂ ಶ್ರೇಷ್ಠರೇ ಅಥವಾ ನಂಬರ್ವಾರ್ ಆಗಿದ್ದೀರಾ? ಒಂದುವೇಳೆ ತಾವು ಯಾವ ನಂಬರಿನವರೆಂದು ಕೇಳಿದರೆ, ಎಲ್ಲರೂ ನಂಬರ್ವನ್ ಎಂದು ಹೇಳುವಿರಿ. ಆದರೆ ಆ ನಂಬರ್ ಸಹ ಎಷ್ಟು ಮಂದಿ ಆಗುವರು? ಒಬ್ಬರಾಗುವರೇ ಅಥವಾ ಅನೇಕರಾಗುವರೇ? ಎಲ್ಲರೂ ನಂಬರ್ವನ್ನವರಂತು ಆಗುವುದಿಲ್ಲ ಆದರೆ ಮೊದಲ ದರ್ಜೆಯಲ್ಲಂತು ಬರಬಹುದು. ಮೊದಲ ನಂಬರಿನಲ್ಲಿ ಒಬ್ಬರಿರುತ್ತಾರೆ ಆದರೆ ಮೊದಲ ದರ್ಜೆಯಲ್ಲಂತು ಬಹಳಷ್ಟು ಬರುವರು ಆದ್ದರಿಂದ ಮೊದಲ ನಂಬರಾಗಲು ಸಾಧ್ಯವಿದೆ. ರಾಜ ಗದ್ದುಗೆಯಲ್ಲಿ ಒಬ್ಬರೇ ಕುಳಿತುಕೊಳ್ಳುವರು ಆದರೆ ಇನ್ನಷ್ಟು ಜೊತೆಗಾರರಂತು ಇರುವರಲ್ಲವೆ. ಅಂದಮೇಲೆ ರಾಯಲ್ ಫ್ಯಾಮಿಲಿಯಲ್ಲಿ ಬರುವುದೂ ಸಹ ರಾಜ್ಯಧಿಕಾರಿಯಾಗುವುದೇ ಆಗಿದೆ. ಮೊದಲ ದರ್ಜೆ ಅರ್ಥಾತ್ ನಂಬರ್ವನ್ನಲ್ಲಿ ಬರುವ ಪುರುಷಾರ್ಥವನ್ನು ಮಾಡಿರಿ. ಈಗಿನವರೆಗೂ ಸಹ ಎರಡನೆಯ-ಮೂರನೆಯ ಸೀಟ್ನ ಹೊರತು ಮತ್ತ್ಯಾವುದೂ ಫಿಕ್ಸ್ ಆಗಿಲ್ಲ. ಈಗ ಯಾರೆಷ್ಟು ಪುರುಷಾರ್ಥ ಮಾಡಬೇಕೆಂದು ಬಯಸುತ್ತೀರೋ ಮಾಡಬಹುದು. ವಿನ್ ಆಗುತ್ತಾ ವನ್ನಲ್ಲಿ ಬರುವ ಅವಕಾಶವಿದೆ. ಅಂದಮೇಲೆ ಸದಾ ಉಮ್ಮಂಗ-ಉತ್ಸಾಹದಲ್ಲಿರಿ. ತಾವು ಈ ರೀತಿ ತಿಳಿದುಕೊಳ್ಳಬಾರದು - ಭಲೆ ಯಾರಾದರೂ ನಂಬರ್ವನ್ನಲ್ಲಿ ಬರಲಿ, ನಾನು ನಂಬರ್ಟು..ನಲ್ಲಿ ಬಂದರೂ ಸರಿ. ಇದಕ್ಕೆ ಬಲಹೀನ ಪುರುಷಾರ್ಥವೆಂದು ಹೇಳುತ್ತೇವೆ. ತಾವೆಲ್ಲರೂ ತೀವ್ರ ಪುರುಷಾರ್ಥಿಗಳಾಗಿದ್ದೀರಿ ಅಲ್ಲವೆ? ಒಳ್ಳೆಯದು.

ವರದಾನ:  
ಬುದ್ಧಿವಂತರಾಗಿ ಮೂರು ಪ್ರಕಾರದ ಸೇವೆಯನ್ನು ಜೊತೆ ಜೊತೆಗೆ ಮಾಡುವಂತಹ ಸಫಲತಾಮೂರ್ತಿ ಭವ.

ವರ್ತಮಾನ ಸಮಯದನುಸಾರವಾಗಿ ಮನಸ್ಸಾ-ವಾಚಾ ಮತ್ತು ಕರ್ಮಣಾ ಮೂರೂ ಪ್ರಕಾರದ ಸೇವೆಗಳೂ ಜೊತೆ ಜೊತೆಗಿರಬೇಕು. ವಾಣಿ ಮತ್ತು ಕರ್ಮದ ಜೊತೆಗೆ ಮನಸ್ಸಾ ಶುಭ ಸಂಕಲ್ಪ ಅಥವಾ ಶ್ರೇಷ್ಠ ವೃತ್ತಿಯ ಮೂಲಕ ಸೇವೆಯನ್ನು ಮಾಡುತ್ತೀರೆಂದರೆ, ಆ ಫಲವು ಫಲಿಸುತ್ತದೆ ಏಕೆಂದರೆ ತಾವು ಯಾವಾಗ ಮನಸ್ಸಾ ಶಕ್ತಿಶಾಲಿ ಆಗಿರುತ್ತೀರಿ ಆಗಲೇ ವಾಣಿಯಲ್ಲಿ ಶಕ್ತಿ ಬರುತ್ತದೆ, ಇಲ್ಲದಿದ್ದರೆ ಪಂಡಿತರಂತೆ ಹೇಳುವವರಾಗುತ್ತೀರಿ ಏಕೆಂದರೆ ಗಿಳಿಯಂತೆ ಓದಿಕೊಂಡು ರಿಪೀಟ್ ಮಾಡುತ್ತೀರಿ. ಜ್ಞಾನಿ ಅರ್ಥಾತ್ ಬುದ್ಧಿವಂತರು, ಮೂರು ಪ್ರಕಾರದ ಸೇವೆಯನ್ನೂ ಒಟ್ಟೊಟ್ಟೊಗೆ ಮಾಡುತ್ತಾರೆ ಮತ್ತು ಸಫಲತೆಯ ವರದಾನವು ಪ್ರಾಪ್ತಿಯಾಗಿ ಬಿಡುತ್ತದೆ.

ಸ್ಲೋಗನ್:
ತಮ್ಮ ಮಾತು, ಕರ್ಮ ಮತ್ತು ದೃಷ್ಟಿಯಿಂದ ಶಾಂತಿ, ಶಕ್ತಿ ಹಾಗೂ ಖುಷಿಯ ಅನುಭವ ಮಾಡಿಸುವುದೇ ಮಹಾನ್ ಆತ್ಮರ ಮಹಾನತೆಯಾಗಿದೆ.


25-10-87 ಅವ್ಯಕ್ತ ಮುರಳಿಯಿಂದ ಸ್ವ-ಉನ್ನತಿಗಾಗಿ ಪ್ರಶ್ನಾವಳಿ -

1. ಯಾವ ನಾಲ್ಕು ಮಾತುಗಳಿಂದ ನಾವು ಭಿನ್ನರಾಗಬೇಕು?

2. ಕಮಲ ಆಸನ ಯಾವುದರ ಚಿನ್ಹೆಯಾಗಿದೆ?

3. ದೇಹಭಾನದಿಂದ ಭಿನ್ನವೆಂದು ಯಾವುದಕ್ಕೆ ಹೇಳಲಾಗುತ್ತದೆ?

4. ಆಸಕ್ತಿಯ ಸ್ಪಷ್ಟ ರೂಪ ಯಾವುದಾಗಿದೆ?

5. ನಾವು ಯಾವುದರಿಂದ ನಿರಾಧಾರ, ಅನಾಸಕ್ತರಾಗಬೇಕು?

6. ನಮ್ಮ ಸಿದ್ಧಿಯಿಂದ ಯಾವುದರ ಅನುಭವ ಮಾಡಿಸಬೇಕು?

7. ಯಾವ ಮಾತುಗಳು ನಮ್ಮನ್ನು ಪ್ರತಿ ಪರಿಸ್ಥಿತಿಯಲ್ಲಿ ವಿಜಯಿಯನ್ನಾಗಿ ಮಾಡುತ್ತವೆ?

8. ಮಾಯಾಜೀತ್ ಆಗುವುದರಲ್ಲಿ ದೊಡ್ಡ ವಿಘ್ನ ಯಾವುದು?

9. ಹಳೆಯ ಸ್ವಭಾವ, ಸಂಸ್ಕಾರಗಳು ನಮ್ಮಲ್ಲಿ ಯಾವ ಶಕ್ತಿಯನ್ನು ಸಮಾಪ್ತಿ ಮಾಡಿ ಬಿಡುತ್ತದೆ?

10. ಯಾವ ಕಾರಣದಿಂದ ನಾವು ಸಿದ್ಧಿ ಸ್ವರೂಪರಾಗಲು ಸಾಧ್ಯವಾಗುವುದಿಲ್ಲ?