19.01.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಮಧುರ ತಂದೆಯನ್ನು ನೆನಪು ಮಾಡುವುದರಿಂದ ನೀವು ಸತೋಪ್ರಧಾನ ದೇವತೆಗಳಾಗುತ್ತೀರಿ, ಎಲ್ಲವೂ ನೆನಪಿನ ಯಾತ್ರೆಯ ಮೇಲೆ ಆಧಾರಿತವಾಗಿದೆ”

ಪ್ರಶ್ನೆ:
ಹೇಗೆ ತಂದೆಯ ಆಕರ್ಷಣೆಯು ಮಕ್ಕಳಿಗೆ ಆಗುತ್ತದೆ ಹಾಗೆಯೇ ಎಂತಹ ಮಕ್ಕಳ ಆಕರ್ಷಣೆ ಎಲ್ಲರಿಗೆ ಆಗುವುದು?

ಉತ್ತರ:
ಯಾರು ಹೂಗಳಾಗಿದ್ದಾರೆಯೋ ಅವರ ಆಕರ್ಷಣೆ ಎಲ್ಲರಿಗೆ ಆಗುವುದು. ಹೇಗೆ ಚಿಕ್ಕ ಮಕ್ಕಳು ಹೂವಾಗಿರುತ್ತಾರೆ, ಅವರಿಗೆ ವಿಕಾರಗಳ ಬಗ್ಗೆ ಗೊತ್ತೇ ಇರುವುದಿಲ್ಲ. ಆದ್ದರಿಂದ ಎಲ್ಲರನ್ನೂ ಅವರು ಆಕರ್ಷಿಸುತ್ತಾರಲ್ಲವೆ. ಹಾಗೆಯೇ ನೀವು ಮಕ್ಕಳೂ ಸಹ ಯಾವಾಗ ಹೂ ಅರ್ಥಾತ್ ಪವಿತ್ರರಾಗುವಿರೋ ಆಗ ಎಲ್ಲರಿಗೆ ಆಕರ್ಷಣೆಯಾಗುವುದು. ನಿಮ್ಮಲ್ಲಿ ಯಾವುದೇ ವಿಕಾರಗಳ ಮುಳ್ಳು ಇರಬಾರದು.

ಓಂ ಶಾಂತಿ.
ಆತ್ಮಿಕ ಮಕ್ಕಳಿಗೆ ತಿಳಿದಿದೆ - ಇದು ಪುರುಷೋತ್ತಮ ಸಂಗಮಯುಗವಾಗಿದೆ. ತಮ್ಮ ಭವಿಷ್ಯದ ಪುರುಷೋತ್ತಮ ಮುಖವನ್ನು ನೋಡುತ್ತೀರಾ? ಪುರುಷೋತ್ತಮ ಉಡುಪನ್ನು ನೋಡುತ್ತೀರಾ? ನಾವೇ ಮತ್ತೆ ಹೊಸ ಪ್ರಪಂಚ ಸತ್ಯಯುಗದಲ್ಲಿ ಈ ಲಕ್ಷ್ಮೀ-ನಾರಾಯಣರ ವಂಶಾವಳಿಯಲ್ಲಿ ಹೋಗುತ್ತೇವೆ ಅರ್ಥಾತ್ ಸುಖಧಾಮದಲ್ಲಿ ಹೋಗುತ್ತೇವೆ ಅಥವಾ ಪುರುಷೋತ್ತಮರಾಗುತ್ತೇವೆ ಎಂಬುದನ್ನು ಅನುಭವ ಮಾಡುತ್ತೀರಾ! ಕುಳಿತು-ಕುಳಿತಿದ್ದಂತೆಯೇ ಈ ವಿಚಾರಗಳು ಬರುತ್ತವೆಯೇ? ಓದುವ ವಿದ್ಯಾರ್ಥಿಗಳಿಗೆ ಯಾವ ದರ್ಜೆಯನ್ನು ಓದುವರೋ ಅದು ಅವಶ್ಯವಾಗಿ ನಾನು ಬ್ಯಾರಿಸ್ಟರ್ ಅಥವಾ ಇಂತಹ ಉದ್ಯೋಗಿಯಾಗುವೆನು ಎಂದು ಬುದ್ಧಿಯಲ್ಲಿರುತ್ತದೆ. ಹಾಗೆಯೇ ನೀವೂ ಸಹ ಇಲ್ಲಿ ಕುಳಿತುಕೊಂಡಾಗ ನಾವು ವಿಷ್ಣುವಿನ ರಾಜಧಾನಿಯಲ್ಲಿ ಹೋಗುತ್ತೇವೆ ಎಂಬುದನ್ನು ತಿಳಿದುಕೊಳ್ಳುತ್ತೀರಾ? ವಿಷ್ಣುವಿನ ಎರಡು ರೂಪಗಳಾಗಿದೆ - ಲಕ್ಷ್ಮೀ-ನಾರಾಯಣ, ದೇವಿ-ದೇವತಾ. ನಿಮ್ಮ ಬುದ್ಧಿಯು ಈಗ ಅಲೌಕಿಕವಾಗಿದೆ. ಮತ್ತ್ಯಾವ ಮನುಷ್ಯರ ಬುದ್ಧಿಯಲ್ಲಿ ಈ ಮಾತುಗಳ ಚಿಂತನೆ ನಡೆಯುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಇವೆಲ್ಲಾ ಮಾತುಗಳಿವೆ. ಇದೇನು ಸಾಮಾನ್ಯ ಸತ್ಸಂಗವಲ್ಲ. ಇಲ್ಲಿ ಕುಳಿತಿದ್ದೀರೆಂದರೆ ತಿಳಿದುಕೊಳ್ಳುತ್ತೀರಿ - ಸತ್ಯ ತಂದೆ ಯಾರಿಗೆ ಶಿವನೆಂದು ಹೇಳಲಾಗುತ್ತದೆಯೋ ಅವರ ಸಂಗದಲ್ಲಿ ಕುಳಿತಿದ್ದೇವೆ. ಶಿವ ತಂದೆಯು ರಚಯಿತನಾಗಿದ್ದಾರೆ, ಅವರೇ ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದಾರೆ ಮತ್ತು ಜ್ಞಾನವನ್ನು ಕೊಡುತ್ತಾರೆ. ಹೇಗೆ ಇದು ನೆನ್ನೆಯ ಮಾತು ಎಂಬಂತೆ ತಿಳಿಸುತ್ತಾರೆ. ಇಲ್ಲಿ ಕುಳಿತಿದ್ದೀರಿ ಅಂದಮೇಲೆ ಇದು ನೆನಪಿರಬೇಕಲ್ಲವೆ - ನಾವು ಪರಿವರ್ತನೆಯಾಗಲು ಅರ್ಥಾತ್ ಈ ಶರೀರವನ್ನು ಬದಲಾಯಿಸಿ ದೇವತಾ ಶರೀರವನ್ನು ಪಡೆಯಲು ಬಂದಿದ್ದೇವೆ. ನನ್ನದು ಇದು ತಮೋಪ್ರಧಾನ, ಹಳೆಯ ಶರೀರವಾಗಿದೆ. ಅದನ್ನು ಬದಲಾಯಿಸಿ ಈ ಲಕ್ಷ್ಮೀ-ನಾರಾಯಣರಂತೆ ಆಗಬೇಕೆಂದು ಆತ್ಮವು ಹೇಳುತ್ತದೆ. ಗುರಿ-ಧ್ಯೇಯವು ಎಷ್ಟು ಶ್ರೇಷ್ಠವಾಗಿದೆ. ಓದಿಸುವ ಶಿಕ್ಷಕರು ಖಂಡಿತವಾಗಿಯೂ ಓದುವ ವಿದ್ಯಾರ್ಥಿಗಳಿಗಿಂತ ಬುದ್ಧಿವಂತರಿರಬೇಕಲ್ಲವೆ. ಓದಿಸುತ್ತಾರೆ, ಒಳ್ಳೆಯ ಕರ್ಮವನ್ನು ಕಲಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಶ್ರೇಷ್ಠರಿರಬೇಕಲ್ಲವೆ. ನಮಗೆ ಎಲ್ಲರಿಗಿಂತ ಶ್ರೇಷ್ಠಾತಿ ಶ್ರೇಷ್ಠ ಭಗವಂತನು ಓದಿಸುತ್ತಾರೆ. ಭವಿಷ್ಯದಲ್ಲಿ ನಾವು ದೇವತೆಗಳಾಗುತ್ತೇವೆ. ನಾವು ಏನನ್ನು ಓದುತ್ತೇವೆಯೋ ಅದು ಭವಿಷ್ಯ ಹೊಸ ಪ್ರಪಂಚಕ್ಕಾಗಿ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ, ಮತ್ತ್ಯಾರಿಗೂ ಹೊಸ ಪ್ರಪಂಚದ ಬಗ್ಗೆ ತಿಳಿದೇ ಇಲ್ಲ. ನಿಮ್ಮ ಬುದ್ಧಿಯಲ್ಲಿ ಈಗ ಬರುತ್ತಿದೆ, ಈ ಲಕ್ಷ್ಮೀ-ನಾರಾಯಣರು ಹೊಸ ಪ್ರಪಂಚದ ಮಾಲೀಕರಾಗಿದ್ದರು ಅಂದಾಗ ಅವಶ್ಯವಾಗಿ ಮತ್ತೆ ಪುನರಾವರ್ತನೆಯಾಗುವುದು. ಆದ್ದರಿಂದ ನಿಮಗೆ ಓದಿಸಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ದೇವತೆಗಳಲ್ಲಿಯೂ ಅವಶ್ಯವಾಗಿ ನಂಬರ್ವಾರ್ ಇರುತ್ತಾರೆ. ದೈವೀ ರಾಜಧಾನಿಯಿರುತ್ತದೆಯಲ್ಲವೆ. ನಿಮಗೆ ಇಡೀ ದಿನ ಇದೇ ಚಿಂತನೆ ನಡೆಯುತ್ತಿರುವುದು - ನಾವಾತ್ಮರಾಗಿದ್ದೇವೆ, ನಾವಾತ್ಮರು ಯಾರು ಬಹಳ ಪತಿತರಾಗಿದ್ದೆವು, ಈಗ ಪಾವನರಾಗಲು ಪಾವನ ತಂದೆಯನ್ನು ನೆನಪು ಮಾಡುತ್ತೇವೆ. ನೆನಪಿನ ಅರ್ಥವನ್ನೂ ಸಹ ತಿಳಿದುಕೊಳ್ಳಬೇಕಾಗಿದೆ. ಆತ್ಮವು ತನ್ನ ಮಧುರ ತಂದೆಯನ್ನು ನೆನಪು ಮಾಡುತ್ತದೆ. ಸ್ವಯಂ ತಂದೆಯೇ ಹೇಳುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡುವುದರಿಂದ ನೀವು ಸತೋಪ್ರಧಾನ ದೇವತೆಗಳಾಗುವಿರಿ. ಎಲ್ಲವೂ ನೆನಪಿನ ಯಾತ್ರೆಯ ಮೇಲೆ ಅವಲಂಭಿಸಿದೆ. ಮಕ್ಕಳೇ, ಎಷ್ಟು ಸಮಯ ನೆನಪು ಮಾಡುತ್ತೀರಿ ಎಂದು ತಂದೆಯು ಅವಶ್ಯವಾಗಿ ಕೇಳುವರಲ್ಲವೆ. ನೆನಪು ಮಾಡುವುದರಲ್ಲಿಯೇ ಮಾಯೆಯ ಯುದ್ಧವಾಗುತ್ತದೆ. ನೀವೂ ಸಹ ತಿಳಿದುಕೊಳ್ಳುತ್ತೀರಿ, ಇದು ಯಾತ್ರೆಯಲ್ಲ ಆದರೆ ಹೇಗೆ ಯುದ್ಧವಾಗಿದೆ, ಇದರಲ್ಲಿ ಬಹಳ ವಿಘ್ನಗಳು ಬರುತ್ತವೆ. ನೆನಪಿನ ಯಾತ್ರೆಯಲ್ಲಿರುವುದರಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ ಅರ್ಥಾತ್ ನೆನಪನ್ನು ಮರೆಸಿ ಬಿಡುತ್ತದೆ. ಬಾಬಾ, ನಮಗೆ ತಮ್ಮ ನೆನಪಿನಲ್ಲಿರುವುದರಲ್ಲಿ ಬಹಳ ಮಾಯೆಯ ಬಿರುಗಾಳಿಗಳು ಬರುತ್ತವೆ ಎಂದು ಹೇಳುತ್ತಾರೆ. ಮೊಟ್ಟ ಮೊದಲನೆಯ ಬಿರುಗಾಳಿಯು ದೇಹಾಭಿಮಾನದ್ದಾಗಿದೆ. ನಂತರ ಕಾಮ, ಕ್ರೋಧ, ಲೋಭ, ಮೋಹ.... ಬಾಬಾ, ನಾವು ನೆನಪಿನಲ್ಲಿರುವುದರಲ್ಲಿಯೂ ಯಾವುದೇ ವಿಘ್ನಗಳು ಬರಬಾರದೆಂದು ಬಹಳ ಪ್ರಯತ್ನ ಪಡುತ್ತೇವೆ. ಆದರೂ ಸಹ ಬಿರುಗಾಳಿಗಳು ಬರುತ್ತವೆ. ಇಂದು ಕ್ರೋಧದ ಬಿರುಗಾಳಿ, ಇಂದು ಲೋಭದ ಬಿರುಗಾಳಿ ಬಂದಿತು. ಇಂದು ನಮ್ಮ ಸ್ಥಿತಿಯು ಚೆನ್ನಾಗಿತ್ತು, ಯಾವುದೇ ಬಿರುಗಾಳಿ ಬರಲಿಲ್ಲ. ಇಡೀ ದಿನ ನೆನಪಿನ ಯಾತ್ರೆಯಲ್ಲಿದ್ದೆವು, ಬಹಳ ಖುಷಿಯಿತ್ತು. ತಂದೆಯನ್ನು ಬಹಳ ನೆನಪು ಮಾಡಿದೆವು ಎಂದು ಮಕ್ಕಳು ಹೇಳುತ್ತಾರೆ. ನೆನಪಿನಲ್ಲಿ ಆನಂದ ಬಾಷ್ಫಗಳು ಬರುತ್ತಿರುತ್ತವೆ. ತಂದೆಯ ನೆನಪಿನಲ್ಲಿರುವುದರಿಂದಲೇ ನೀವು ಮಧುರರಾಗಿ ಬಿಡುತ್ತೀರಿ.

ನೀವು ಮಕ್ಕಳು ಇದನ್ನೂ ತಿಳಿದುಕೊಂಡಿದ್ದೀರಿ - ನಾವು ಮಾಯೆಯಿಂದ ಸೋಲನ್ನನುಭವಿಸುತ್ತಾ-ಅನುಭವಿಸುತ್ತಾ ಎಲ್ಲಿಗೆ ಬಂದು ತಲುಪಿದ್ದೇವೆ! ಮಕ್ಕಳು ಲೆಕ್ಕ ತೆಗೆಯುತ್ತಾರೆ. ಕಲ್ಪದಲ್ಲಿ ಎಷ್ಟು ತಿಂಗಳು, ಎಷ್ಟು ದಿನಗಳು.... ಇವೆ. ಬುದ್ಧಿಯಲ್ಲಿ ಬರುತ್ತದೆಯಲ್ಲವೆ. ಒಂದುವೇಳೆ ಯಾರಾದರೂ ಲಕ್ಷಾಂತರ ವರ್ಷಗಳು ಎಂದು ಹೇಳಿದ್ದೇ ಆದರೆ ಅದನ್ನು ಲೆಕ್ಕ ಮಾಡಲು ಸಾಧ್ಯವಾಗುವುದಿಲ್ಲ. ತಂದೆಯು ತಿಳಿಸುತ್ತಾರೆ - ಈ ಸೃಷ್ಟಿಚಕ್ರವು ಸುತ್ತುತ್ತಿರುತ್ತದೆ. ಇಡೀ ಚಕ್ರದಲ್ಲಿ ನಾವು ಎಷ್ಟು ಜನ್ಮಗಳನ್ನು ಪಡೆಯುತ್ತೇವೆ? ಹೇಗೆ ರಾಜಧಾನಿಯಲ್ಲಿ ಬರುತ್ತೇವೆ ಎಂಬುದನ್ನಂತೂ ತಿಳಿದುಕೊಂಡಿದ್ದೀರಲ್ಲವೆ. ಇವು ಸಂಪೂರ್ಣ ಹೊಸ ಮಾತುಗಳಾಗಿವೆ. ಹೊಸ ಪ್ರಪಂಚಕ್ಕಾಗಿ ಹೊಸ ಜ್ಞಾನವಾಗಿದೆ. ಹೊಸ ಪ್ರಪಂಚವೆಂದು ಸ್ವರ್ಗಕ್ಕೆ ಹೇಳಲಾಗುತ್ತದೆ, ನಾವೀಗ ಮನುಷ್ಯರಾಗಿದ್ದೇವೆ, ದೇವತೆಗಳಾಗುತ್ತಿದ್ದೇವೆಂದು ನೀವು ಹೇಳುತ್ತೀರಿ. ದೇವತಾ ಪದವಿಯು ಶ್ರೇಷ್ಠವಾಗಿದೆ. ನಾವು ಎಲ್ಲದಕ್ಕಿಂತ ಭಿನ್ನ ಜ್ಞಾನವನ್ನು ಪಡೆಯುತ್ತಿದ್ದೇವೆ. ನಮಗೆ ಓದಿಸುವವರೂ ಸಹ ಸಂಪೂರ್ಣ ಭಿನ್ನ, ವಿಚಿತ್ರನಾಗಿದ್ದಾರೆ. ಅವರಿಗೆ ಈ ಸಾಕಾರ ಚಿತ್ರವಿಲ್ಲ. ಅವರು ನಿರಾಕಾರನಾಗಿದ್ದಾರೆ ಅಂದಾಗ ಡ್ರಾಮಾದಲ್ಲಿ ನೋಡಿ, ಎಷ್ಟು ಒಳ್ಳೆಯ ಪಾತ್ರವನ್ನಿಡಲಾಗಿದೆ! ತಂದೆಯು ಓದಿಸುವುದಾದರೂ ಹೇಗೆ? ಆದ್ದರಿಂದ ಸ್ವಯಂ ತಿಳಿಸುತ್ತಾರೆ - ನಾನು ಇಂತಹವರ ತನುವಿನಲ್ಲಿ ಬರುತ್ತೇನೆ. ಯಾವ ತನುವಿನಲ್ಲಿ ಬರುತ್ತೇನೆ ಎಂಬುದನ್ನೂ ಸಹ ತಿಳಿಸುತ್ತಾರೆ. ಏನು ಇದೊಂದೇ ತನುವಿನಲ್ಲಿ ಬರುವರೇ? ಎಂದು ಮನುಷ್ಯರು ತಬ್ಬಿಬ್ಬಾಗುತ್ತಾರೆ. ಆದರೆ ಇದಂತೂ ನಾಟಕವಲ್ಲವೆ. ಇದರಲ್ಲಿ ಸ್ವಲ್ಪವೂ ಬದಲಾಗಲು ಸಾಧ್ಯವಿಲ್ಲ. ಈ ಮಾತುಗಳನ್ನು ನೀವೇ ಕೇಳುತ್ತೀರಿ ಮತ್ತು ಧಾರಣೆ ಮಾಡುತ್ತೀರಿ. ಹೇಗೆ ನಮಗೆ ಶಿವ ತಂದೆಯು ಓದಿಸುತ್ತಾರೆಂದು ಅನ್ಯರಿಗೆ ತಿಳಿಸುತ್ತೀರಿ. ಆತ್ಮವೇ ಓದುತ್ತದೆ. ಆತ್ಮವೇ ಮತ್ತೆ ಅನ್ಯರಿಗೆ ಓದಿಸುತ್ತದೆ. ಆತ್ಮವೇ ಕಲಿಯುತ್ತದೆ, ಕಲಿಸುತ್ತದೆ. ಆತ್ಮವು ಬಹಳ ಅಮೂಲ್ಯವಾಗಿದೆ. ಆತ್ಮ ಅವಿನಾಶಿ ಅಮರನಾಗಿದೆ. ಕೇವಲ ಶರೀರವು ಸಮಾಪ್ತಿಯಾಗುತ್ತದೆ. ನಾವಾತ್ಮರು ಪರಮಪಿತ ಪರಮಾತ್ಮನಿಂದ ಜ್ಞಾನವನ್ನು ತೆಗೆದುಕೊಳ್ಳುತ್ತಿದ್ದೇವೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯ, 84 ಜನ್ಮಗಳ ಜ್ಞಾನವನ್ನು ಪಡೆಯುತ್ತಿದ್ದೇವೆ. ಜ್ಞಾನವನ್ನು ತೆಗೆದುಕೊಳ್ಳುವವರು ಯಾರು? ಆತ್ಮ. ಆತ್ಮ ಅವಿನಾಶಿಯಾಗಿದೆ. ಮೋಹವನ್ನೂ ಸಹ ಅವಿನಾಶಿ ವಸ್ತುವಿನಲ್ಲಿಡಬೇಕೇ ಹೊರತು ವಿನಾಶಿ ವಸ್ತುವಿನಲ್ಲಿ ಅಲ್ಲ. ಇಷ್ಟು ಸಮಯದಿಂದ ನೀವು ವಿನಾಶೀ ಶರೀರದಲ್ಲಿಯೇ ಮೋಹವನ್ನಿಡುತ್ತಾ ಬಂದಿದ್ದೀರಿ. ಈಗ ತಿಳಿದುಕೊಳ್ಳುತ್ತೀರಿ - ನಾವಾತ್ಮರಾಗಿದ್ದೇವೆ, ಶರೀರದ ಅಭಿಮಾನವನ್ನು ಬಿಡಬೇಕಾಗಿದೆ. ಕೆಲವು ಮಕ್ಕಳು ಈ ರೀತಿಯೂ ಬರೆಯುತ್ತಾರೆ - ನಾನಾತ್ಮ ಈ ಕಾರ್ಯ ಮಾಡಿದೆನು. ನಾನಾತ್ಮನು ಇಂದು ಈ ಭಾಷಣ ಮಾಡಿದೆನು. ನಾನಾತ್ಮನು ಇಂದು ತಂದೆಯನ್ನು ಬಹಳ ನೆನಪು ಮಾಡಿದೆನು. ತಂದೆಯು ಪರಮ ಆತ್ಮ, ಜ್ಞಾನ ಸಾಗರನಾಗಿದ್ದಾರೆ. ನೀವು ಮಕ್ಕಳಿಗೆ ಎಷ್ಟೊಂದು ಜ್ಞಾನವನ್ನು ಕೊಡುತ್ತಾರೆ! ನೀವು ಮೂಲವತನ, ಸೂಕ್ಷ್ಮವತನವನ್ನು ತಿಳಿದುಕೊಂಡಿದ್ದೀರಿ. ಮನುಷ್ಯರ ಬುದ್ಧಿಯಲ್ಲಂತೂ ಏನೂ ಇಲ್ಲ. ರಚಯಿತ ಯಾರೆಂದು ನಿಮ್ಮ ಬುದ್ಧಿಯಲ್ಲಿದೆ. ಈ ಮನುಷ್ಯ ಸೃಷ್ಟಿಯ ರಚಯಿತನೆಂದು ಗಾಯನವಿದೆ ಅಂದಮೇಲೆ ಅವಶ್ಯವಾಗಿ ಅವರು ಕರ್ತವ್ಯದಲ್ಲಿ ಬರುತ್ತಾರೆ.

ನೀವು ತಿಳಿದುಕೊಂಡಿದ್ದೀರಿ, ಆತ್ಮ ಮತ್ತು ಪರಮಾತ್ಮ ತಂದೆಯ ನೆನಪಿರುವ ಮನುಷ್ಯರು ಮತ್ತ್ಯಾರೂ ಇಲ್ಲ. ತಂದೆಯೇ ಜ್ಞಾನವನ್ನು ಕೊಡುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ, ನೀವು ತಮ್ಮನ್ನು ಶರೀರವೆಂದು ತಿಳಿದು ತಲೆ ಕೆಳಕಾಗಿ ನಿಂತಿದ್ದೀರಿ. ಆತ್ಮವು ಸತ್ಚಿತ್ ಆನಂದ ಸ್ವರೂಪನಾಗಿದೆ. ಆತ್ಮಕ್ಕೆ ಎಲ್ಲದಕ್ಕಿಂತ ಹೆಚ್ಚು ಮಹಿಮೆಯಿದೆ. ಒಬ್ಬ ತಂದೆಯ ಆತ್ಮಕ್ಕೆ ಎಷ್ಟೊಂದು ಮಹಿಮೆಯಿದೆ! ಅವರೇ ದುಃಖಹರ್ತ-ಸುಖಕರ್ತನಾಗಿದ್ದಾರೆ. ಸೊಳ್ಳೆ ಮೊದಲಾದುವುಗಳಿಗೆ ದುಃಖಹರ್ತ-ಸುಖಕರ್ತ, ಜ್ಞಾನ ಸಾಗರನೆಂದು ಮಹಿಮೆ ಮಾಡುವುದಿಲ್ಲ. ಇದು ತಂದೆಯ ಮಹಿಮೆಯಾಗಿದೆ. ನೀವೂ ಸಹ ಪ್ರತಿಯೊಬ್ಬರೂ ದುಃಖಹರ್ತ-ಸುಖಕರ್ತರಾಗಿದ್ದೀರಿ ಏಕೆಂದರೆ ಆ ತಂದೆಯ ಮಕ್ಕಳಾಗಿದ್ದೀರಲ್ಲವೆ, ಯಾರು ಎಲ್ಲರ ದುಃಖವನ್ನು ಹರಿಸಿ, ಸುಖವನ್ನು ಕೊಡುತ್ತಾರೆ ಅದೂ ಅರ್ಧಕಲ್ಪಕ್ಕಾಗಿ. ಈ ಜ್ಞಾನವು ಮತ್ತ್ಯಾರಲ್ಲಿಯೂ ಇಲ್ಲ. ಜ್ಞಾನಪೂರ್ಣನು ಒಬ್ಬರೇ ತಂದೆಯಾಗಿದ್ದಾರೆ. ನಮ್ಮಲ್ಲಿ ಜ್ಞಾನವಿಲ್ಲ. ಒಬ್ಬ ತಂದೆಯನ್ನೇ ತಿಳಿದುಕೊಂಡಿಲ್ಲ ಅಂದಮೇಲೆ ಇನ್ನ್ಯಾವ ಜ್ಞಾನವಿರುವುದು? ಈಗ ನೀವು ಅನುಭವ ಮಾಡುತ್ತೀರಿ - ನಾವು ಮೊದಲು ಜ್ಞಾನವನ್ನು ತೆಗೆದುಕೊಳ್ಳುತ್ತಿದ್ದೆವು, ಆದರೆ ಏನನ್ನೂ ತಿಳಿದುಕೊಂಡಿರಲಿಲ್ಲ. ಹೇಗೆ ಚಿಕ್ಕ ಮಕ್ಕಳಲ್ಲಿ ಜ್ಞಾನವು ಇರುವುದಿಲ್ಲ ಮತ್ತು ಯಾವುದೇ ಅವಗುಣಗಳೂ ಇರುವುದಿಲ್ಲ. ಆದ್ದರಿಂದ ಅವರಿಗೆ ಮಹಾತ್ಮರೆಂದು ಹೇಳಲಾಗುತ್ತದೆ ಏಕೆಂದರೆ ಪವಿತ್ರರಾಗಿದ್ದಾರೆ. ಎಷ್ಟು ಚಿಕ್ಕ ಮಗುವೋ ಅಷ್ಟು ನಂಬರ್ವನ್ ಹೂವಾಗಿದೆ. ಅಂತಹವರದು ಹೇಗೆ ಕರ್ಮಾತೀತ ಸ್ಥಿತಿಯಾಗಿದೆ ಏಕೆಂದರೆ ಕರ್ಮ, ವಿಕರ್ಮ ಏನೂ ಗೊತ್ತಿರುವುದಿಲ್ಲ. ಕೇವಲ ತನ್ನನ್ನೇ ತಿಳಿದುಕೊಂಡಿರುತ್ತಾರೆ. ಅವರು ಹೂವಾಗಿದ್ದಾರೆ ಆದ್ದರಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ಹೇಗೆ ಶಿವ ತಂದೆಯು ಆಕರ್ಷಿಸುತ್ತಾರಲ್ಲವೆ. ತಂದೆಯು ಬಂದಿರುವುದೇ ನಿಮ್ಮೆಲ್ಲರನ್ನೂ ಹೂಗಳನ್ನಾಗಿ ಮಾಡಲು. ನಿಮ್ಮಲ್ಲಿ ಕೆಲವರು ಬಹಳ ಕೆಟ್ಟ ಮುಳ್ಳುಗಳೂ ಇದ್ದಾರೆ. ಪಂಚ ವಿಕಾರಗಳೆಂಬ ಮುಳ್ಳುಗಳಿವೆಯಲ್ಲವೆ. ಈ ಸಮಯದಲ್ಲಿ ನಿಮಗೆ ಹೂಗಳು ಮತ್ತು ಮುಳ್ಳುಗಳ ಜ್ಞಾನವಿದೆ. ಮುಳ್ಳುಗಳ ಅಡವಿಯೂ ಇರುತ್ತದೆ. ಬಬುಲ್ನ ಮುಳ್ಳು ಎಲ್ಲದಕ್ಕಿಂತ ದೊಡ್ಡದಾಗಿರುತ್ತದೆ. ಆ ಮುಳ್ಳುಗಳಿಂದಲೂ ಬಹಳ ವಸ್ತುಗಳು ತಯಾರಾಗುತ್ತವೆ. ಮನುಷ್ಯರನ್ನು ಹೀಗೆ ಹೋಲಿಕೆ ಮಾಡಲಾಗುತ್ತದೆ. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ಬಹಳ ದುಃಖವನ್ನು ಕೊಡುವಂತಹ ಮನುಷ್ಯರು ಮುಳ್ಳುಗಳಾಗಿದ್ದಾರೆ. ಆದ್ದರಿಂದ ಇದಕ್ಕೆ ದುಃಖದ ಪ್ರಪಂಚವೆಂದು ಹೇಳಲಾಗುತ್ತದೆ. ತಂದೆಯು ಸುಖದಾತನೆಂದು ಹೇಳುತ್ತಾರೆ. ಮಾಯಾ ರಾವಣನು ದುಃಖದಾತನಾಗಿದ್ದಾನೆ ಮತ್ತೆ ಸತ್ಯಯುಗದಲ್ಲಿ ಮಾಯೆಯೇ ಇರುವುದಿಲ್ಲ. ಆದ್ದರಿಂದ ಈ ಮಾತುಗಳೂ ಇರುವುದಿಲ್ಲ. ಡ್ರಾಮಾದಲ್ಲಿ ಒಂದು ಪಾತ್ರವು ಎರಡು ಬಾರಿ ನಡೆಯಲು ಸಾಧ್ಯವಿಲ್ಲ. ಬುದ್ಧಿಯಲ್ಲಿದೆ - ಇಡೀ ಪ್ರಪಂಚದಲ್ಲಿ ಯಾವ ಪಾತ್ರವು ಅಭಿನಯಿಸಲ್ಪಡುವುದೋ ಅದೆಲ್ಲವೂ ಹೊಸದಾಗಿದೆ. ನೀವು ವಿಚಾರ ಮಾಡಿ, ಸತ್ಯಯುಗದಿಂದ ಹಿಡಿದು ಇಲ್ಲಿಯವರೆಗೆ ದಿನಗಳೂ ಬದಲಾಗುತ್ತಿದೆ. ಚಟುವಟಿಕೆಗಳೂ ಬದಲಾಗುತ್ತಿದೆ. ಆತ್ಮದಲ್ಲಿ ಪೂರ್ಣ 5000 ವರ್ಷಗಳ ಸಂಸ್ಕಾರವು ಅಡಕವಾಗಿದೆ. ಅದು ಬದಲಾಗಲು ಸಾಧ್ಯವಿಲ್ಲ. ಪ್ರತಿಯೊಂದು ಆತ್ಮನಲ್ಲಿ ತನ್ನ ಪಾತ್ರವು ತುಂಬಲ್ಪಟ್ಟಿದೆ. ಈ ಒಂದು ಮಾತನ್ನೂ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಈಗ ಆದಿ-ಮಧ್ಯ-ಅಂತ್ಯವನ್ನು ನೀವು ತಿಳಿದುಕೊಂಡಿದ್ದೀರಿ. ಇದು ಶಾಲೆಯಲ್ಲವೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳಬೇಕಾಗಿದೆ. ತಂದೆಯನ್ನು ನೆನಪು ಮಾಡಿ ಪವಿತ್ರರಾಗುವ ವಿದ್ಯೆಯಾಗಿದೆ. ಇದಕ್ಕೆ ಮೊದಲೇ ನಾವೇ ಈ ರೀತಿಯಾಗಬೇಕೆಂದು ತಿಳಿದುಕೊಂಡಿರಲಿಲ್ಲ. ತಂದೆಯು ಎಷ್ಟು ಸ್ಪಷ್ಟ ಮಾಡಿ ತಿಳಿಸುತ್ತಾರೆ! ನೀವು ಮೊದಲ ನಂಬರಿನಲ್ಲಿ ಈ ರೀತಿಯಿದ್ದಿರಿ, ನಂತರ ಕೆಳಗಿಳಿಯುತ್ತಾ-ಇಳಿಯುತ್ತಾ ಈಗ ಏನಾಗಿ ಬಿಟ್ಟಿದ್ದೀರಿ! ಪ್ರಪಂಚವನ್ನು ನೋಡಿ, ಏನಾಗಿ ಬಿಟ್ಟಿದೆ! ಎಷ್ಟೊಂದು ಜನಸಂಖ್ಯೆಯಿದೆ, ಈ ಲಕ್ಷ್ಮೀ-ನಾರಾಯಣರ ರಾಜಧಾನಿಯ ವಿಚಾರ ಮಾಡಿ, ಅಲ್ಲಿ ಹೇಗಿರುವುದು? ಇವರು ಎಲ್ಲಿರುವರೋ ಅಲ್ಲಿ ಹೇಗೆ ವಜ್ರ ರತ್ನಗಳ ಮಹಲುಗಳಿರುತ್ತವೆ. ಈಗ ಬುದ್ಧಿಯಲ್ಲಿ ಬರುತ್ತದೆ, ನಾವೀಗ ಸ್ವರ್ಗವಾಸಿಗಳಾಗುತ್ತಿದ್ದೇವೆ, ಅಲ್ಲಿ ನಾವು ನಮ್ಮ ಮನೆ ಇತ್ಯಾದಿಗಳನ್ನು ಕಟ್ಟುತ್ತೇವೆ. ಚಿನ್ನದ ದ್ವಾರಿಕೆ ಸಾಗರದಿಂದ ಹೊರ ಬರುತ್ತದೆಯೆಂದಲ್ಲ. ಇದನ್ನು ಶಾಸ್ತ್ರಗಳಲ್ಲಿ ತೋರಿಸಿದ್ದಾರೆ. ಶಾಸ್ತ್ರ ಎಂಬ ಹೆಸರೇ ನಡೆದು ಬರುತ್ತದೆ. ಮತ್ತ್ಯಾವುದೇ ಹೆಸರನ್ನಿಡುವುದಿಲ್ಲ. ಮತ್ತೆಲ್ಲವೂ ವಿದ್ಯೆಯ ಪುಸ್ತಕಗಳಾಗಿರುತ್ತವೆ, ಇನ್ನು ಕೆಲವು ಕಾದಂಬರಿಗಳಿರುತ್ತವೆ, ಬಾಕಿ ಇದಕ್ಕೆ ಮಾತ್ರ ಪುಸ್ತಕ ಅಥವಾ ಶಾಸ್ತ್ರವೆಂದು ಹೇಳುತ್ತಾರೆ. ಅದು ವಿದ್ಯೆಯ ಪುಸ್ತಕಗಳಾಗಿವೆ, ಶಾಸ್ತ್ರಗಳನ್ನು ಓದುವವರಿಗೆ ಭಕ್ತರೆಂದು ಹೇಳಲಾಗುತ್ತದೆ. ಭಕ್ತಿ ಮತ್ತು ಜ್ಞಾನ ಎರಡು ಮಾತುಗಳಿವೆ. ಈಗ ವೈರಾಗ್ಯ ಯಾವುದರ ಮೇಲೆ? ಭಕ್ತಿಯದೋ ಅಥವಾ ಜ್ಞಾನದ ವೈರಾಗ್ಯವೋ? ಅವಶ್ಯವಾಗಿ ಭಕ್ತಿಯ ವೈರಾಗ್ಯವೆಂದು ಹೇಳುತ್ತಾರೆ. ಈಗ ನಿಮಗೆ ಜ್ಞಾನ ಸಿಗುತ್ತಿದೆ, ಇದರಿಂದ ನೀವು ಎಷ್ಟು ಶ್ರೇಷ್ಠರಾಗುತ್ತೀರಿ! ಈಗ ತಂದೆಯು ನಿಮ್ಮನ್ನು ಸುಖದಾಯಿಯನ್ನಾಗಿ ಮಾಡುತ್ತಾರೆ, ಸುಖಧಾಮಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ನೀವು ಸುಖಧಾಮದಲ್ಲಿ ಹೋಗುವವರಿದ್ದೀರಿ ಆದ್ದರಿಂದ ನಿಮಗೇ ಓದಿಸುತ್ತಾರೆ. ಈ ಜ್ಞಾನವನ್ನೂ ಸಹ ನಿಮ್ಮ ಆತ್ಮವೇ ತಿಳಿದುಕೊಳ್ಳುತ್ತದೆ. ಆತ್ಮಕ್ಕೆ ಯಾವುದೇ ಧರ್ಮವಿಲ್ಲ, ಅದಂತೂ ಆತ್ಮವೇ ಆಗಿದೆ. ಮತ್ತೆ ಆ ಆತ್ಮವು ಶರೀರದಲ್ಲಿ ಬಂದಾಗ ಶರೀರದ ಧರ್ಮಗಳು ಬೇರೆ-ಬೇರೆಯಿರುತ್ತವೆ. ಆತ್ಮದ ಧರ್ಮ ಯಾವುದು? ಮೊದಲನೆಯದಾಗಿ ಆತ್ಮವು ಬಿಂದು ರೂಪವಾಗಿದೆ ಮತ್ತು ಶಾಂತ ಸ್ವರೂಪನಾಗಿದೆ. ಶಾಂತಿಧಾಮ, ಮುಕ್ತಿಧಾಮದಲ್ಲಿರುತ್ತದೆ. ಈಗ ತಂದೆಯು ತಿಳಿಸುತ್ತಾರೆ - ಎಲ್ಲಾ ಮಕ್ಕಳಿಗೆ ಅಧಿಕಾರವಿದೆ. ಅನೇಕ ಮಕ್ಕಳು ಅನ್ಯ ಧರ್ಮಗಳಲ್ಲಿ ಮತಾಂತರಗೊಂಡಿದ್ದಾರೆ. ಅವರು ಮತ್ತೆ ಬಂದು ತಮ್ಮ ಮೂಲ ಧರ್ಮವನ್ನು ಸೇರುತ್ತಾರೆ. ಯಾರು ದೇವಿ-ದೇವತಾ ಧರ್ಮವನ್ನು ಬಿಟ್ಟು ಅನ್ಯ ಧರ್ಮದಲ್ಲಿ ಹೋಗಿದ್ದಾರೆಯೋ ಆ ಎಲ್ಲಾ ಎಲೆಗಳು ಮತ್ತೆ ತಮ್ಮ ಜಾಗಕ್ಕೆ ಹಿಂತಿರುಗಿ ಬರುತ್ತಾರೆ. ಯಾರು ಹಿಂದೂಗಳಿಂದ ಮುಸಲ್ಮಾನರಾಗುವರೋ ಅವರಿಗೆ ಶೇಕ್ ಎಂದು ಹೇಳುತ್ತಾರೆ. ಹೇಗೆ ಶೇಕ್ ಮಹಮ್ಮದ್ ಇತ್ಯಾದಿ, ಇವೆಲ್ಲಾ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ, ಇದರಲ್ಲಿಯೇ ಎಲ್ಲರೂ ತಬ್ಬಿಬ್ಬಾಗಿದ್ದಾರೆ. ನಮಗೆ ಯಾರು ಓದಿಸುತ್ತಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನೀವು ಮಕ್ಕಳಿಗೆ ಸ್ವಯಂ ತಂದೆಯೇ ಓದಿಸುತ್ತಾರೆ. ಕೃಷ್ಣನಂತೂ ದೇಹಧಾರಿಯಾಗಿದ್ದಾನೆ. ಈ ಬ್ರಹ್ಮಾರವರಿಗೂ ದಾದಾ (ಸಹೋದರ) ಎಂದು ಹೇಳುತ್ತಾರೆ. ಎಲ್ಲರೂ ಸಹೋದರ-ಸಹೋದರರಲ್ಲವೆ. ಸ್ಥಾನದ ಮೇಲೆ ಆಧಾರಿತವಾಗಿದೆ. ಇದು ಸಹೋದರನ ಶರೀರ, ಇದು ಸಹೋದರಿಯ ಶರೀರವಾಗಿದೆ, ಇದನ್ನೂ ನೀವು ಈಗ ತಿಳಿದುಕೊಂಡಿದ್ದೀರಿ. ಆತ್ಮವಂತೂ ಒಂದು ಚಿಕ್ಕ ನಕ್ಷತ್ರ ಮಾದರಿಯಾಗಿದೆ. ಇಷ್ಟು ಚಿಕ್ಕ ನಕ್ಷತ್ರದಲ್ಲಿ ಎಷ್ಟು ದೊಡ್ಡ ಜ್ಞಾನವಿದೆ! ಈ ಆತ್ಮ ನಕ್ಷತ್ರ ಶರೀರವಿಲ್ಲದೆ ಮಾತನಾಡುವುದಕ್ಕೂ ಸಾಧ್ಯವಿಲ್ಲ. ಈ ನಕ್ಷತ್ರವು ಪಾತ್ರವನ್ನಭಿನಯಿಸಲು ಅಂಗಗಳೂ ಬೇಕು. ನಕ್ಷತ್ರಗಳ ಪ್ರಪಂಚವೇ ಬೇರೆಯಾಗಿದೆ ಮತ್ತೆ ಇಲ್ಲಿ ಬಂದು ಆತ್ಮ ನಕ್ಷತ್ರವು ಶರೀರ ಧಾರಣೆ ಮಾಡುತ್ತದೆ. ಅದು ಆತ್ಮಗಳ ಮನೆಯಾಗಿದೆ. ಆತ್ಮವು ಎಷ್ಟು ಚಿಕ್ಕ ಬಿಂದುವಾಗಿದೆ! ಶರೀರವು ದೊಡ್ಡ ವಸ್ತುವಾಗಿದೆ. ಆದ್ದರಿಂದ ಅದನ್ನು ಎಷ್ಟೊಂದು ನೆನಪು ಮಾಡುತ್ತಾರೆ! ನೀವೀಗ ಒಬ್ಬ ಪರಮಪಿತ ಪರಮಾತ್ಮನನ್ನು ನೆನಪು ಮಾಡಬೇಕಾಗಿದೆ. ಆತ್ಮರು ಮತ್ತು ಪರಮಾತ್ಮನ ಮೇಳವೇ ಸತ್ಯ ಮೇಳವಾಗಿದೆ. ಆತ್ಮರು ಪರಮಾತ್ಮನಿಂದ ಬಹುಕಾಲ ಅಗಲಿದ್ದರೆಂದು ಗಾಯನವಿದೆ. ನಾವು ತಂದೆಯಿಂದ ಅಗಲಿದ್ದೆವಲ್ಲವೆ. ಎಷ್ಟೊಂದು ಸಮಯ ಅಗಲಿ ಹೋಗಿದ್ದೆವು ಎಂದು ನೆನಪು ಬರುತ್ತದೆ. ತಂದೆಯು ಕಲ್ಪ-ಕಲ್ಪವೂ ಏನನ್ನು ತಿಳಿಸುತ್ತಾ ಬಂದಿದ್ದಾರೆ ಅದನ್ನೇ ಬಂದು ತಿಳಿಸುತ್ತಾರೆ. ಇದರಲ್ಲಿ ಸ್ವಲ್ಪವೂ ಅಂತರವಾಗಲು ಸಾಧ್ಯವಿಲ್ಲ. ಕ್ಷಣ-ಪ್ರತಿಕ್ಷಣ ನಡೆಯುತ್ತದೆಯೋ ಅದು ಹೊಸದಾಗಿದೆ. ಒಂದು ಕ್ಷಣವು ಕಳೆಯುತ್ತದೆ, ಒಂದು ನಿಮಿಷ ಕಳೆಯುತ್ತದೆ, ಅದನ್ನು ಹೇಗೆ ಬಿಡುತ್ತಾ ಹೋಗುತ್ತಾರೆ. ಎಲ್ಲವೂ ಕಳೆಯುತ್ತಾ ಹೋಗುತ್ತದೆ. ಆದ್ದರಿಂದಲೇ ಇಷ್ಟು ವರ್ಷಗಳು, ಇಷ್ಟು ದಿನಗಳು, ನಿಮಿಷಗಳು, ಇಷ್ಟು ಸೆಕೆಂಡುಗಳನ್ನು ಪಾರು ಮಾಡಿ ಬಂದಿದ್ದೇವೆಂದು ಹೇಳುತ್ತಾರೆ. ಪೂರ್ಣ 5000 ವರ್ಷಗಳಿದೆ. ಪುನಃ ಅದು ಒಂದರಿಂದ ಆರಂಭವಾಗುವುದು. ನಿಖರವಾದ ಲೆಕ್ಕವಲ್ಲವೆ. ಕ್ಷಣ, ನಿಮಿಷ ಎಲ್ಲವನ್ನೂ ಬರೆಯುತ್ತಾರೆ. ಈಗ ನಿಮ್ಮೊಂದಿಗೆ ಇವರು ಯಾವಾಗ ಜನ್ಮ ಪಡೆದಿದ್ದರೋ ಎಂದು ಯಾರಾದರೂ ಕೇಳಿದರೆ ನೀವು ಲೆಕ್ಕ ಮಾಡಿ ತಿಳಿಸುತ್ತೀರಿ. ಕೃಷ್ಣನು ಮೊದಲನೇ ನಂಬರಿನಲ್ಲಿ ಜನ್ಮ ಪಡೆದಿದ್ದಾನೆ. ಶಿವನ ಅವತರಣೆಯ ನಿಮಿಷ, ಕ್ಷಣ ಏನನ್ನೂ ನೀವು ಲೆಕ್ಕ ಮಾಡಲು ಸಾಧ್ಯವಿಲ್ಲ. ಕೃಷ್ಣನ ತಿಥಿ-ತಾರೀಖು ಎಲ್ಲವೂ ಬರೆಯಲ್ಪಟ್ಟಿದೆ. ಮನುಷ್ಯರ ಗಡಿಯಾರದಲ್ಲಿ ನಿಮಿಷ, ಸೆಕೆಂಡುಗಳ ಅಂತರವಾಗಲೂಬಹುದು. ಆದರೆ ಶಿವ ತಂದೆಯ ಅವತರಣೆಯಲ್ಲಿ ಏನೂ ಅಂತರವಾಗಲು ಸಾಧ್ಯವಿಲ್ಲ. ಯಾವಾಗ ಬಂದರು ಎಂಬುದು ತಿಳಿಯುವುದೂ ಇಲ್ಲ. ಸಾಕ್ಷಾತ್ಕಾರವಾಯಿತು ಆಗ ಬಂದರು ಎಂದಲ್ಲ. ಕೇವಲ ಅಂದಾಜಿನಿಂದ ಹೇಳಿ ಬಿಡುತ್ತಾರೆ ಆದರೆ ಆ ಸಮಯದಲ್ಲಿ ಪ್ರವೇಶವಾದರು ಎಂದಲ್ಲ. ನಾನೇ ಈ ರೀತಿಯಾಗುತ್ತೇನೆ ಎಂದು ಸಾಕ್ಷಾತ್ಕಾರವಾಯಿತು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸುಖಧಾಮದಲ್ಲಿ ಹೋಗಲು ಸುಖದಾಯಿಯಾಗಬೇಕಾಗಿದೆ. ಎಲ್ಲರ ದುಃಖವನ್ನು ದೂರ ಮಾಡಿ ಸುಖ ಕೊಡಬೇಕಾಗಿದೆ. ಎಂದೂ ದುಃಖದಾಯಿ ಮುಳ್ಳು ಆಗಬಾರದು.

2. ಈ ವಿನಾಶೀ ಶರೀರದಲ್ಲಿ ಆತ್ಮವೇ ಅತ್ಯಮೂಲ್ಯವಾಗಿದೆ. ಅದೇ ಅಮರ, ಅವಿನಾಶಿಯಾಗಿದೆ ಆದ್ದರಿಂದ ಅವಿನಾಶಿ ವಸ್ತುವಿನೊಂದಿಗೆ ಪ್ರೀತಿಯನ್ನಿಡಬೇಕಾಗಿದೆ. ದೇಹದ ಅಭಿಮಾನವನ್ನು ಕಳೆಯಬೇಕಾಗಿದೆ.

ವರದಾನ:
ಒಂದೇ ಬಲ ಒಂದೇ ಭರವಸೆಯ ಆಧಾರದ ಮೇಲೆ ಗುರಿಯನ್ನು ಸಮೀಪದ ಅನುಭವ ಮಾಡುವಂತಹ ಸಾಹಸವಂತ ಭವ.

ಉನ್ನತವಾದ ಗುರಿ ತಲುಪುವ ಮೊದಲು ಬಿರುಗಾಳಿ, ಚಂಡ ಮಾರುತ ಎಲ್ಲವೂ ತಗುಲುತ್ತದೆ, ಹಡಗು ಸಮುರ್ಧರನ್ನು ಪಾರು ಮಾಡಲು ಈ ರೀತಿ ಎಲ್ಲ ರೀತಿಯ ಸುಳಿಗಾಳಿಯನ್ನೂ ಪಾರು ಮಾಡಲೇಬೇಕಾಗುತ್ತದೆ. ಆದ್ದರಿಂದ ಆತುರದಲ್ಲಿ ಗಾಬರಿಯಾಗಬೇಡಿ, ಸುಸ್ತಾಗಬೇಡಿ, ನಿಲ್ಲಬೇಡಿ. ಜೊತೆಗಾರನನ್ನು ಜೊತೆಯಲ್ಲಿಟ್ಟುಕೊಳ್ಳಿ ಆಗ ಎಲ್ಲಾ ಕಷ್ಟಗಳೂ ಸಹಜವಾಗಿ ಬಿಡುವುದು, ಸಾಹಸವಂತರಾಗಿ ತಂದೆಯ ಸಹಯೋಗಕ್ಕೆ ಪಾತ್ರರಾಗಿ. ಒಂದೇ ಬಲ ಒಂದೇ ಭರವಸೆ - ಈ ಪಾಠವನ್ನು ಸದಾ ಪಕ್ಕಾ ಆಗಿಟ್ಟುಕೊಂಡಾಗ ಸುಳಿಗಾಳಿಯಿಂದ ಸಹಜವಾಗಿ ಹೊರ ಬರುವಿರಿ ಮತ್ತು ಗುರಿ ಸಮೀಪದ ಅನುಭವವಾಗುವುದು.

ಸ್ಲೋಗನ್:
ಯಾರು ಪ್ರಕೃತಿಯ ಸಹಿತ ಎಲ್ಲಾ ಆತ್ಮಗಳ ಪ್ರತಿ ಶುಭ ಭಾವನೆ ಇಡುತ್ತಾರೆ. ಅವರೇ ವಿಶ್ವ ಕಲ್ಯಾಣಕಾರಿಗಳು ಆಗಿದ್ದಾರೆ.


ಡಬ್ಬಲ್ಲೈಟ್ ಸ್ಥಿತಿಯ ಅನುಭವ:-
ಫರಿಶ್ತೆಯು ಧರಣಿಯ ಮೇಲೆ ಕಾಲಿಡುವುದಿಲ್ಲ. ಫರಿಶ್ತಾ ಅರ್ಥಾತ್ ಹಾರುವವರು, ಅವರಿಗೆ ಕೆಳಗಿನ ಆಕರ್ಷಣೆಯು ಸೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಯಾವುದೆಷ್ಟಾದರೂ ಸುಂದರವಾದ ಚಿನ್ನದ ಪಂಜರವೇ ಆಗಿರಬಹುದು, ಅದರಲ್ಲಿಯೂ ಸಿಕ್ಕಿಕೊಳ್ಳುವುದಿಲ್ಲ. ಸದಾ ಸ್ವತಂತ್ರ, ಬಂಧನ ಮುಕ್ತವಾಗಿದ್ದು ಅವ್ಯಕ್ತ ವತನದ ಪರಿಕ್ರಮಣ ಮಾಡಿರಿ.