23.01.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆಯುತ್ತಾ ಇರಿ, ಇದು ಬ್ರಹ್ಮಾರವರ ಮತವೇ ಅಥವಾ ಶಿವ ತಂದೆಯದೇ - ಎಂಬುದರಲ್ಲಿ ತಬ್ಬಿಬ್ಬಾಗಬೇಡಿ”

ಪ್ರಶ್ನೆ:
ಒಳ್ಳೆಯ ಬುದ್ಧಿಯಿರುವ ಮಕ್ಕಳು ಯಾವ ಗುಹ್ಯ ಮಾತನ್ನು ಸಹಜವಾಗಿ ಅರಿತುಕೊಳ್ಳುತ್ತಾರೆ?

ಉತ್ತರ:
ಬ್ರಹ್ಮಾ ತಂದೆಯು ತಿಳಿಸುತ್ತಿದ್ದಾರೆಯೇ? ಅಥವಾ ಶಿವ ತಂದೆಯು ತಿಳಿಸುತ್ತಿದ್ದಾರೆಯೇ? ಎಂಬ ಮಾತನ್ನು ಒಳ್ಳೆಯ ಬುದ್ಧಿಯಿರುವ ಮಕ್ಕಳು ಸಹಜವಾಗಿಯೇ ತಿಳಿದುಕೊಳ್ಳುವರು. ಕೆಲವರಂತೂ ಇದರಲ್ಲಿಯೇ ತಬ್ಬಿಬ್ಬಾಗುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಬಾಪ್ದಾದಾ ಇಬ್ಬರೂ ಒಟ್ಟಿಗೇ ಇದ್ದೇವೆ, ಇದರಲ್ಲಿ ನೀವು ತಬ್ಬಿಬ್ಬಾಗಬೇಡಿ, ಶ್ರೀಮತವೆಂದು ತಿಳಿದು ನಡೆಯಿರಿ. ಬ್ರಹ್ಮನ ಮತಕ್ಕೂ ಸಹ ಶಿವ ತಂದೆಯು ಜವಾಬ್ದಾರನಾಗಿದ್ದಾರೆ.

ಓಂ ಶಾಂತಿ.
ಆತ್ಮಿಕ ತಂದೆಯು ಮಕ್ಕಳಿಗೆ ತಿಳಿಸುತ್ತಿದ್ದಾರೆ, ನೀವು ತಿಳಿದುಕೊಂಡಿದ್ದೀರಿ - ನಾವು ಬ್ರಾಹ್ಮಣರೇ ಆತ್ಮಿಕ ತಂದೆಯನ್ನು ಅರಿತಿದ್ದೇವೆ. ಪ್ರಪಂಚದಲ್ಲಿ ಯಾವುದೇ ಮನುಷ್ಯ ಮಾತ್ರರು ಆತ್ಮಿಕ ತಂದೆ ಯಾರನ್ನು ಗಾಡ್ಫಾದರ್ ಅಥವಾ ಪರಮಪಿತ ಪರಮಾತ್ಮನೆಂದು ಹೇಳುತ್ತಾರೆಯೋ ಅವರನ್ನೇ ಅರಿತುಕೊಂಡಿಲ್ಲ. ಯಾವಾಗ ಆ ಆತ್ಮಿಕ ತಂದೆ ಬರುವರೋ ಆಗಲೇ ಆತ್ಮಿಕ ಮಕ್ಕಳಿಗೆ ಪರಿಚಯ ಕೊಡುವರು. ಈ ಜ್ಞಾನವು ಸೃಷ್ಟಿಯ ಆದಿಯಲ್ಲಾಗಲಿ, ಅಂತ್ಯದಲ್ಲಾಗಲಿ ಇರುವುದಿಲ್ಲ. ಈಗಲೇ ನಿಮಗೆ ಈ ಜ್ಞಾನವು ಸಿಗುತ್ತಿದೆ. ಇದು ಸೃಷ್ಟಿಯ ಅಂತ್ಯ ಮತ್ತು ಆದಿಯ ಸಂಗಮಯುಗ ಆಗಿದೆ. ಈ ಸಂಗಮಯುಗವನ್ನೂ ತಿಳಿದುಕೊಂಡಿಲ್ಲ ಅಂದಮೇಲೆ ಈ ತಂದೆಯನ್ನು ಹೇಗೆ ತಿಳಿದುಕೊಳ್ಳುವರು! ಹೇ ಪತಿತ-ಪಾವನ ಬನ್ನಿ, ಬಂದು ಪಾವನ ಮಾಡಿ ಎಂದು ಹೇಳುತ್ತಾರೆ ಆದರೆ ಆ ಪತಿತ-ಪಾವನನು ಯಾರು ಮತ್ತು ಯಾವಾಗ ಬರುತ್ತಾರೆ ಎಂಬುದನ್ನೇ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಯಾರಾಗಿದ್ದೇನೆ, ಹೇಗಿದ್ದೇನೆಯೋ ಅದೇ ರೀತಿ ಯಾರೂ ನನ್ನನ್ನು ಅರಿತುಕೊಂಡಿಲ್ಲ. ಯಾವಾಗ ನಾನೇ ಬಂದು ನನ್ನ ಪರಿಚಯ ಕೊಡುವೆನೋ ಆಗಲೇ ನನ್ನನ್ನು ಅರಿತುಕೊಳ್ಳುವರು. ನಾನು ತನ್ನ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಪರಿಚಯವನ್ನು ಸಂಗಮಯುಗದಲ್ಲಿ ಒಂದೇ ಬಾರಿ ಬಂದು ಕೊಡುತ್ತೇನೆ. ಕಲ್ಪದ ನಂತರ ಪುನಃ ಬರುತ್ತೇನೆ. ನಿಮಗೆ ಏನನ್ನು ತಿಳಿಸುತ್ತೇನೆಯೋ ಅದು ಮತ್ತೆ ಪ್ರಾಯಃಲೋಪವಾಗಿ ಬಿಡುತ್ತದೆ. ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೆ ಯಾವುದೇ ಮನುಷ್ಯ ಮಾತ್ರರು ಪರಮಪಿತ ಪರಮಾತ್ಮನಾದ ನನ್ನನ್ನು ಅರಿತುಕೊಂಡಿಲ್ಲ. ಬ್ರಹ್ಮಾ-ವಿಷ್ಣು-ಶಂಕರರನ್ನಾಗಲಿ ತಿಳಿದುಕೊಂಡಿಲ್ಲ. ನನ್ನನ್ನು ಮನುಷ್ಯರೇ ಕರೆಯುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರರು ಕರೆಯುವುದಿಲ್ಲ. ಮನುಷ್ಯರು ದುಃಖಿಯಾದಾಗಲೇ ಕರೆಯುತ್ತಾರೆ. ಸೂಕ್ಷ್ಮವತನದ ಮಾತೇ ಇಲ್ಲ. ಆತ್ಮಿಕ ತಂದೆಯು ಬಂದು ತನ್ನ ಆತ್ಮಿಕ ಮಕ್ಕಳು ಅರ್ಥಾತ್ ಆತ್ಮಗಳಿಗೆ ಕುಳಿತು ತಿಳಿಸಿಕೊಡುತ್ತಾರೆ ಅಂದಮೇಲೆ ಆ ಆತ್ಮಿಕ ತಂದೆಯ ಹೆಸರೇನು? ಅವರಿಗೆ ಬಾಬಾ ಎಂದು ಹೇಳಲಾಗುತ್ತದೆ ಅಂದಮೇಲೆ ಅವಶ್ಯವಾಗಿ ಏನಾದರೂ ಹೆಸರಿರಬೇಕಲ್ಲವೆ! ಅವರ ಸತ್ಯವಾದ ಹೆಸರಿನದೇ ಗಾಯನವಿದೆ – ‘ಸದಾಶಿವ’ ಇದು ಪ್ರಸಿದ್ಧವಾಗಿದೆ, ಆದರೆ ಮನುಷ್ಯರು ಅನೇಕ ಹೆಸರುಗಳನ್ನಿಟ್ಟು ಬಿಟ್ಟಿದ್ದಾರೆ. ಭಕ್ತಿಮಾರ್ಗದಲ್ಲಿ ತನ್ನದೇ ಬುದ್ಧಿಯಿಂದ ಈ ಲಿಂಗ ರೂಪವನ್ನು ಮಾಡಿ ಬಿಟ್ಟಿದ್ದಾರೆ. ಆದರೂ ಸಹ ಹೆಸರು ಶಿವನೆಂದೇ ಇದೆ. ತಂದೆಯು ತಿಳಿಸುತ್ತಾರೆ - ನಾನು ಒಂದು ಬಾರಿ ಬರುತ್ತೇನೆ, ಬಂದು ಮುಕ್ತಿ-ಜೀವನ್ಮುಕ್ತಿಯ ಆಸ್ತಿಯನ್ನು ಕೊಡುತ್ತೇನೆ. ಮನುಷ್ಯರು ಭಲೆ ಮುಕ್ತಿಧಾಮ, ನಿರ್ವಾಣಧಾಮವೆಂದು ಹೆಸರು ತೆಗೆದುಕೊಳ್ಳುತ್ತಾರೆ ಆದರೆ ಅರಿತುಕೊಂಡಿಲ್ಲ. ತಂದೆಯನ್ನಾಗಲಿ, ದೇವತೆಗಳನ್ನಾಗಲಿ ಅರಿತಿಲ್ಲ. ತಂದೆಯು ಭಾರತದಲ್ಲಿ ಬಂದು ಹೇಗೆ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆಂದು ಯಾರಿಗೂ ತಿಳಿದಿಲ್ಲ. ಪರಮಪಿತ ಪರಮಾತ್ಮನು ಹೇಗೆ ಬಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆಂಬುದು ಶಾಸ್ತ್ರಗಳಲ್ಲಿಯೂ ಇಲ್ಲ. ಸತ್ಯಯುಗದಲ್ಲಿ ದೇವತೆಗಳಿಗೆ ಜ್ಞಾನವಿತ್ತು ಅದು ಪ್ರಾಯಃಲೋಪವಾಯಿತು ಎಂದಲ್ಲ. ಒಂದುವೇಳೆ ದೇವತೆಗಳಲ್ಲಿ ಈ ಜ್ಞಾನವು ಇದ್ದಿದ್ದೇ ಆದರೆ ಅದು ನಡೆದು ಬರುತ್ತಿತ್ತು. ಇಸ್ಲಾಮಿ, ಬೌದ್ಧಿ ಮೊದಲಾದ ಯಾರೆಲ್ಲರೂ ಇದ್ದಾರೆಯೋ ಅವರ ಜ್ಞಾನವು ನಡೆದು ಬರುತ್ತಿದೆ. ಈ ಜ್ಞಾನವು ಪ್ರಾಯಲೋಪವಾಗಿ ಬಿಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಯಾವಾಗ ಬರುತ್ತೇನೆಯೋ ಆಗ ಆತ್ಮರು ಪತಿತರಾಗಿ ರಾಜ್ಯವನ್ನು ಕಳೆದುಕೊಂಡು ಕುಳಿತಿದ್ದಾರೆ, ಅವರನ್ನೇ ಬಂದು ಮತ್ತೆ ಪಾವನರನ್ನಾಗಿ ಮಾಡುತ್ತೇನೆ. ಭಾರತದಲ್ಲಿ ರಾಜ್ಯವಿತ್ತು ಮತ್ತೆ ಹೇಗೆ ಕಳೆದುಕೊಂಡರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳದು ಎಷ್ಟೊಂದು ತುಚ್ಛ ಬುದ್ಧಿಯಾಗಿದೆ. ನಾನು ಮಕ್ಕಳಿಗೆ ಈ ಜ್ಞಾನವನ್ನು ನೀಡಿ ಪ್ರಾಲಬ್ಧವನ್ನು ಕೊಡುತ್ತೇನೆ ನಂತರ ಎಲ್ಲರೂ ಮರೆತು ಹೋಗುತ್ತಾರೆ. ತಂದೆಯು ಹೇಗೆ ಬಂದರು? ಹೇಗೆ ಮಕ್ಕಳಿಗೆ ಶಿಕ್ಷಣ ಕೊಟ್ಟರು? ಎಲ್ಲವನ್ನೂ ಮರೆತು ಬಿಡುತ್ತಾರೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಮಕ್ಕಳಿಗೆ ವಿಚಾರ ಸಾಗರ ಮಂಥನ ಮಾಡುವ ಬಹಳ ವಿಶಾಲ ಬುದ್ಧಿಯು ಬೇಕು. ತಂದೆಯು ತಿಳಿಸುತ್ತಾರೆ - ಯಾವ ಶಾಸ್ತ್ರ ಇತ್ಯಾದಿಗಳನ್ನು ನೀವು ಓದುತ್ತಾ ಬಂದಿದ್ದೀರೋ ಇವು ಸತ್ಯ-ತ್ರೇತಾಯುಗದಲ್ಲಿ ಓದುತ್ತಿರಲಿಲ್ಲ, ಅಲ್ಲಿ ಇರಲೇ ಇಲ್ಲ. ನೀವು ಈ ಜ್ಞಾನವನ್ನು ಮರೆತು ಹೋಗುತ್ತೀರಿ ಮತ್ತೆ ಗೀತೆ ಇತ್ಯಾದಿ ಶಾಸ್ತ್ರಗಳೆಲ್ಲವೂ ಎಲ್ಲಿಂದ ಬಂದವು? ಯಾರು ಈ ಗೀತೆಯನ್ನು ಕೇಳಿ ಈ ಪದವಿಯನ್ನು ಪಡೆದರೋ ಅವರಿಗೇ ಇದು ಗೊತ್ತಿಲ್ಲ ಅಂದಮೇಲೆ ಮತ್ತ್ಯಾರು ಹೇಗೆ ತಿಳಿದುಕೊಳ್ಳುವರು? ನಾವು ಹೇಗೆ ಮನುಷ್ಯರಿಂದ ದೇವತೆಗಳಾದೆವು ಎಂಬುದನ್ನು ದೇವತೆಗಳೂ ಸಹ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆ ಪುರುಷಾರ್ಥದ ಪಾತ್ರವೇ ನಿಂತು ಹೋಯಿತು. ನಿಮ್ಮ ಪ್ರಾಲಬ್ಧವು ಆರಂಭವಾಯಿತು ಅಂದಮೇಲೆ ಅಲ್ಲಿ ಈ ಜ್ಞಾನವಿರಲು ಹೇಗೆ ಸಾಧ್ಯ? ಈ ಜ್ಞಾನವು ನಿಮಗೆ ಕಲ್ಪದ ಮೊದಲಿನ ತರಹ ಪುನಃ ನಿಮಗೆ ಸಿಗುತ್ತಿದೆ. ನಿಮಗೆ ರಾಜಯೋಗವನ್ನು ಕಲಿಸಿ ಪ್ರಾಲಬ್ಧವನ್ನು ಕೊಡಲಾಗುತ್ತದೆ. ಅಲ್ಲಂತೂ ದುರ್ಗತಿಯಿರುವುದೇ ಇಲ್ಲ, ಆದ್ದರಿಂದ ಅಲ್ಲಿ ಜ್ಞಾನದ ಮಾತೂ ಬರುವುದಿಲ್ಲ. ವಾಸ್ತವದಲ್ಲಿ ಸದ್ಗತಿ ಪಡೆಯುವುದಕ್ಕಾಗಿ ಜ್ಞಾನವು ಬೇಕಾಗಿದೆ, ಅದನ್ನು ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ. ಸದ್ಗತಿ ಮತ್ತು ದುರ್ಗತಿಯ ಶಬ್ಧವು ಇಲ್ಲಿಯೇ ಬರುತ್ತದೆ. ಭಾರತವಾಸಿಗಳೇ ಸದ್ಗತಿಯನ್ನು ಪಡೆಯುತ್ತಾರೆ. ಸ್ವರ್ಗದ ರಚಯಿತನು ಸ್ವರ್ಗವನ್ನು ರಚಿಸಿದ್ದರು ಎಂದು ತಿಳಿಯುತ್ತಾರೆ ಆದರೆ ಯಾವಾಗ ರಚಿಸಿದರು? ಎಂಬುದೇನೂ ಗೊತ್ತಿಲ್ಲ. ಶಾಸ್ತ್ರಗಳಲ್ಲಿ ಲಕ್ಷಾಂತರ ವರ್ಷಗಳೆಂದು ಬರೆದು ಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಪುನಃ ಜ್ಞಾನವನ್ನು ಕೊಡುತ್ತೇನೆ, ಮತ್ತೆ ಈ ಜ್ಞಾನವು ಸಮಾಪ್ತಿಯಾಗುತ್ತದೆ, ಭಕ್ತಿಯು ಪ್ರಾರಂಭವಾಗುತ್ತದೆ. ಅರ್ಧಕಲ್ಪ ಜ್ಞಾನ, ಅರ್ಧಕಲ್ಪ ಭಕ್ತಿಯಾಗಿದೆ, ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಸತ್ಯಯುಗದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳಿದ್ದಾರೆ, ಅಂದಮೇಲೆ ಹೇಗೆ ಅರ್ಥವಾಗಬೇಕು! 5000 ವರ್ಷಗಳ ಮಾತನ್ನೂ ಸಹ ಮರೆತು ಹೋಗಿದ್ದಾರೆ ಅಂದಮೇಲೆ ಲಕ್ಷಾಂತರ ವರ್ಷಗಳ ಮಾತನ್ನು ಹೇಗೆ ತಿಳಿದುಕೊಳ್ಳಲು ಸಾಧ್ಯ! ಏನನ್ನೂ ತಿಳಿದುಕೊಂಡಿಲ್ಲ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ! ಕಲ್ಪದ ಆಯಸ್ಸು 5000 ವರ್ಷಗಳಾಗಿವೆ. ನಾಲ್ಕು ಯುಗಗಳ ಅವಧಿಯು ಸಮನಾಗಿ 1250 ವರ್ಷಗಳಾಗಿದೆ. ಬ್ರಾಹ್ಮಣರದು ಇದು ಅಧಿಕ ಯುಗವಾಗಿದೆ. ಆ ನಾಲ್ಕು ಯುಗಗಳಿಗಿಂತ ಬಹಳ ಚಿಕ್ಕದಾದ ಯುಗವಾಗಿದೆ ಅಂದಾಗ ತಂದೆಯು ಭಿನ್ನ-ಭಿನ್ನ ರೂಪದಿಂದ ಹೊಸ-ಹೊಸ ಮಾತುಗಳನ್ನು ಮಕ್ಕಳಿಗೆ ಸಹಜವಾಗಿ ತಿಳಿಸುತ್ತಿರುತ್ತಾರೆ. ನೀವೇ ಧಾರಣೆ ಮಾಡಿಕೊಳ್ಳಬೇಕಾಗಿದೆ. ನೀವೇ ಪರಿಶ್ರಮ ಪಡಬೇಕಾಗಿದೆ. ಡ್ರಾಮಾನುಸಾರ ಏನನ್ನು ತಿಳಿಸುತ್ತಾ ಬಂದಿದ್ದೇನೆಯೋ ಆ ಪಾತ್ರವು ನಡೆಯುತ್ತಾ ಬರುತ್ತದೆ. ಏನನ್ನು ತಿಳಿಸಬೇಕಿತ್ತೋ ಅದನ್ನೇ ಇಂದು ತಿಳಿಸುತ್ತಿದ್ದೇನೆ. ಸಮಯಕ್ಕನುಸಾರವಾಗಿ ಅದು ಇಮರ್ಜ್ ಆಗುತ್ತಾ ಇರುತ್ತದೆ. ನೀವು ಕೇಳುತ್ತಾ ಹೋಗುತ್ತೀರಿ. ನೀವೇ ಧಾರಣೆ ಮಾಡಬೇಕು ಮತ್ತು ಮಾಡಿಸಬೇಕಾಗಿದೆ. ನಾನಂತೂ ಧಾರಣೆ ಮಾಡಬೇಕಾಗಿಲ್ಲ. ನಿಮಗೆ ತಿಳಿಸುತ್ತೇನೆ, ಧಾರಣೆ ಮಾಡಿಸುತ್ತೇನೆ. ನಾನಾತ್ಮನಲ್ಲಿ ಪತಿತರನ್ನು ಪಾವನ ಮಾಡುವ ಪಾತ್ರವಿದೆ. ಕಲ್ಪದ ಹಿಂದೆ ಏನನ್ನು ತಿಳಿಸಿದ್ದೆನೋ ಅದೇ ಹೊರ ಬರುತ್ತಿರುತ್ತದೆ. ಏನನ್ನು ತಿಳಿಸಬೇಕೆಂದು ನಾನು ಮೊದಲೇ ವಿಚಾರ ಮಾಡುವುದಿಲ್ಲ. ಭಲೆ ಈ ಬ್ರಹ್ಮನ ಆತ್ಮವು ವಿಚಾರ ಸಾಗರ ಮಂಥನ ಮಾಡುತ್ತದೆ. ಇವರು ವಿಚಾರ ಸಾಗರ ಮಂಥನ ಮಾಡಿ ತಿಳಿಸುತ್ತಾರೆಯೇ ಅಥವಾ ತಂದೆಯು ತಿಳಿಸುತ್ತಾರೆಯೇ - ಇವು ಬಹಳ ಗುಹ್ಯ ಮಾತುಗಳಾಗಿವೆ. ಇದರಲ್ಲಿ ಬಹಳ ಒಳ್ಳೆಯ ಬುದ್ಧಿ ಬೇಕು. ಯಾರು ಸರ್ವೀಸಿನಲ್ಲಿ ತತ್ಪರರಾಗಿರುವರೋ ಅವರಿಗೇ ವಿಚಾರ ಸಾಗರ ಮಂಥನ ನಡೆಯುತ್ತಿರುವುದು.

ವಾಸ್ತವದಲ್ಲಿ ಕನ್ಯೆಯರು ಬಂಧನ ಮುಕ್ತರಾಗಿರುತ್ತಾರೆ. ಅವರು ಈ ಆತ್ಮಿಕ ವಿದ್ಯೆಯಲ್ಲಿ ತೊಡಗಬೇಕಾಗಿದೆ. ಬಂಧನವಂತೂ ಯಾವುದೂ ಇಲ್ಲ. ಕುಮಾರಿಯರು ಬಹಳ ಚೆನ್ನಾಗಿ ಅನ್ಯರನ್ನು ಮೇಲೆತ್ತಬಹುದು. ಅವರಿಗೆ ಇರುವುದೇ ಓದಿಸುವುದು ಮತ್ತು ಓದುವುದು. ಕುಮಾರಿಯರು ಸಂಪಾದನೆ ಮಾಡಬೇಕೆಂಬ ಅವಶ್ಯಕತೆಯಿಲ್ಲ. ಕುಮಾರಿಯು ಒಂದುವೇಳೆ ಬಹಳ ಚೆನ್ನಾಗಿ ಈ ಜ್ಞಾನವನ್ನು ಅರಿತುಕೊಂಡರೆ ಎಲ್ಲದಕ್ಕಿಂತ ಒಳ್ಳೆಯದು. ಬುದ್ಧಿವಂತರಾಗಿದ್ದರೆ ಈ ಆತ್ಮಿಕ ಸಂಪಾದನೆಯಲ್ಲಿಯೇ ತೊಡಗಿ ಬಿಡುವರು. ಕೆಲವರಂತೂ ಬಹಳ ಆಸಕ್ತಿಯಿಂದ ಲೌಕಿಕ ವಿದ್ಯೆಯನ್ನು ಓದುತ್ತಿರುತ್ತಾರೆ ಆದರೆ ತಿಳಿಸುವುದೇನೆಂದರೆ ಇದರಿಂದೇನೂ ಲಾಭವಿಲ್ಲ, ನೀವು ಈ ಆತ್ಮಿಕ ವಿದ್ಯೆಯನ್ನು ಓದಿ ಸರ್ವೀಸಿನಲ್ಲಿ ತೊಡಗಿರಿ. ಇದರ ಮುಂದೆ ಆ ವಿದ್ಯೆಯೇನೂ ಪ್ರಯೋಜನಕ್ಕಿಲ್ಲ. ಅದನ್ನು ಓದಿ ಮತ್ತೆ ಗೃಹಸ್ಥ ವ್ಯವಹಾರದಲ್ಲಿ ಹೊರಟು ಹೋಗುತ್ತಾರೆ, ಗೃಹಸ್ಥಿ ಮಾತೆಯರಾಗಿ ಬಿಡುತ್ತಾರೆ. ಕನ್ಯೆಯರಂತೂ ಈ ಜ್ಞಾನದಲ್ಲಿ ತೊಡಗಬೇಕು, ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆದು ಧಾರಣೆಯಲ್ಲಿ ತೊಡಗಬೇಕಾಗಿದೆ. ಮಮ್ಮಾರವರು ಆರಂಭದಲ್ಲಿಯೇ ಬಂದರು ಮತ್ತು ಈ ವಿದ್ಯೆಯಲ್ಲಿ ತೊಡಗಿ ಬಿಟ್ಟರು ಉಳಿದಂತೆ ಎಷ್ಟೊಂದು ಮಂದಿ ಕುಮಾರಿಯರು ಮಾಯವಾದರು. ಕುಮಾರಿಯರಿಗೆ ಬಹಳ ಒಳ್ಳೆಯ ಅವಕಾಶವಿದೆ, ಶ್ರೀಮತದಂತೆ ನಡೆದಿದ್ದೇ ಆದರೆ ಬಹಳ ಒಳ್ಳೆಯ ಪದವಿಯಿದೆ. ಇದು ಶ್ರೀಮತವೇ ಅಥವಾ ಬ್ರಹ್ಮಾರವರ ಮತವೇ ಎಂಬುದರಲ್ಲಿಯೇ ತಬ್ಬಿಬ್ಬಾಗುತ್ತಾರೆ. ಆದರೂ ಸಹ ಇದು ತಂದೆಯ ರಥವಲ್ಲವೆ. ಇವರಿಂದ ಏನಾದರೂ ತಪ್ಪಾದರೂ ಸಹ ನೀವು ಶ್ರೀಮತದಂತೆ ನಡೆಯುತ್ತಾ ಇದ್ದಿದ್ದೇ ಆದರೆ ಸ್ವಯಂ ತಂದೆಯೇ ಅದನ್ನು ಸರಿ ಪಡಿಸುತ್ತಾರೆ. ಶ್ರೀಮತವು ಸಿಗುವುದೇ ಇವರ ಮೂಲಕ ಅಂದಾಗ ಸದಾ ತಿಳಿದುಕೊಳ್ಳಿ - ಶ್ರೀಮತವೇ ಸಿಗಲಿ ಅಥವಾ ಮತ್ತೇನೆ ಇರಲಿ ಜವಾಬ್ದಾರನು ತಂದೆಯಾಗಿದ್ದಾರೆ. ಇವರಿಂದ ಏನಾದರೂ ಆದರೂ ಸಹ ಅದಕ್ಕೆ ನಾನು ಜವಾಬ್ದಾರನಾಗಿದ್ದೇನೆ ಎಂದು ಶಿವ ತಂದೆಯು ಹೇಳುತ್ತಾರೆ. ಡ್ರಾಮಾದಲ್ಲಿ ಈ ರಹಸ್ಯವು ನಿಗಧಿಯಾಗಿದೆ, ಇವರನ್ನೂ ಸಹ ಸುಧಾರಣೆ ಮಾಡುತ್ತಾರೆ. ಆದರೂ ತಂದೆಯಲ್ಲವೆ. ಬಾಪ್ದಾದಾ ಇಬ್ಬರೂ ಒಟ್ಟಿಗೆ ಇದ್ದೇವೆ. ಆದ್ದರಿಂದ ಅನೇಕರು ಇದನ್ನು ಶಿವ ತಂದೆಯು ಹೇಳುತ್ತಾರೆಯೇ ಅಥವಾ ಬ್ರಹ್ಮಾರವರು ಹೇಳುತ್ತಾರೆಯೇ ಎಂದು ತಬ್ಬಿಬ್ಬಾಗುತ್ತಾರೆ. ಒಂದುವೇಳೆ ಶಿವ ತಂದೆಯೇ ಮತ ಕೊಡುತ್ತಾರೆಂದು ತಿಳಿದುಕೊಳ್ಳುವುದಾದರೆ ಎಂದೂ ಅಲುಗಾಡುವುದಿಲ್ಲ. ಶಿವ ತಂದೆಯು ಏನು ತಿಳಿಸುವರೋ ಅದು ಸತ್ಯವೇ ಆಗಿದೆ. ಬಾಬಾ ತಾವೇ ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದೀರಿ ಎಂದು ನೀವು ಹೇಳುತ್ತೀರಿ ಅಂದಮೇಲೆ ಶ್ರೀಮತದಂತೆ ನಡೆಯಬೇಕಲ್ಲವೆ. ಏನು ಹೇಳಿದರೆ ಅದರಂತೆ ನಡೆಯಿರಿ. ಯಾವಾಗಲೂ ಶಿವ ತಂದೆಯು ಹೇಳುತ್ತಾರೆಂದೇ ತಿಳಿಯಿರಿ. ಅವರು ಕಲ್ಯಾಣಕಾರಿಯಾಗಿದ್ದಾರೆ, ಈ ಬ್ರಹ್ಮಾ ತಂದೆಯ ಜವಾಬ್ದಾರಿಯೂ ಸಹ ಅವರ ಮೇಲಿದೆ. ಅವರ ರಥವಲ್ಲವೆ. ಇದು ಬ್ರಹ್ಮಾರವರ ಆದೇಶವೋ ಅಥವಾ ಶಿವ ತಂದೆಯದೋ ಗೊತ್ತಿಲ್ಲ ಎಂದು ಏಕೆ ತಬ್ಬಿಬ್ಬಾಗುತ್ತೀರಿ? ಶಿವ ತಂದೆಯೇ ತಿಳಿಸುತ್ತಾರೆಂದು ನೀವು ಏಕೆ ತಿಳಿಯುವುದಿಲ್ಲ? ಶ್ರೀಮತವು ಏನು ಹೇಳಿದರೆ ಅದರಂತೆ ಮಾಡುತ್ತಾ ಇರಿ. ಅನ್ಯರ ಮತದಲ್ಲಿ ನೀವು ಬರುವುದಾದರೂ ಏಕೆ? ಶ್ರೀಮತದಂತೆ ನಡೆದಾಗ ಎಂದೂ ತೂಕಡಿಕೆ ಬರುವುದಿಲ್ಲ. ಆದರೆ ನಡೆಯುವುದಿಲ್ಲ, ಆದ್ದರಿಂದ ತಬ್ಬಿಬ್ಬಾಗುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಶ್ರೀಮತದ ಮೇಲೆ ನಿಶ್ಚಯವನ್ನಿಡಿ, ಆಗ ನಾನು ಜವಾಬ್ದಾರನಾಗಿದ್ದೇನೆ. ನೀವು ನಿಶ್ಚಯವನ್ನೇ ಇಡುವುದಿಲ್ಲವೆಂದರೆ ನಾನೂ ಜವಾಬ್ದಾರನಲ್ಲ. ಯಾವಾಗಲೂ ತಿಳಿದುಕೊಳ್ಳಿ - ಶ್ರೀಮತದಂತೆ ನಡೆಯಲೇಬೇಕಾಗಿದೆ. ಅವರು ಏನಾದರೂ ಹೇಳಲಿ, ಪ್ರೀತಿಯನ್ನಾದರೂ ಮಾಡಿ ಅಥವಾ ತಿರಸ್ಕಾರವನ್ನಾದರೂ ಮಾಡಿ, ನಾವು ನಿಮ್ಮ ಧರೆಯನ್ನು ಬಿಟ್ಟು ಹೋಗುವುದಿಲ್ಲ... ಇದು ತಂದೆಗಾಗಿಯೇ ಗಾಯನವಿದೆ. ಇದರಲ್ಲಿ ತಿರಸ್ಕಾರ ಮಾಡಿ ಒದೆಯುವ ಮಾತಂತೂ ಇಲ್ಲ. ಆದರೆ ಕೆಲವರಿಗೆ ನಿಶ್ಚಯ ಕುಳಿತುಕೊಳ್ಳುವುದೇ ಬಹಳ ಕಷ್ಟವಾಗುತ್ತದೆ. ಪೂರ್ಣನಿಶ್ಚಯವಾಗಿ ಬಿಟ್ಟರೆ ಕರ್ಮಾತೀತ ಸ್ಥಿತಿಯಾಗುವುದು. ಆದರೆ ಆ ಸ್ಥಿತಿಯು ಬರುವುದರಲ್ಲಿಯೂ ಸಮಯ ಬೇಕು. ಅದು ಅಂತ್ಯದಲ್ಲಿಯೇ ಆಗುವುದು. ಇದರಲ್ಲಿ ನಿಶ್ಚಯವು ಬಹಳ ಅಡೋಲವಾಗಿರಬೇಕು. ಶಿವ ತಂದೆಯಿಂದಂತೂ ಎಂದೂ ಯಾವುದೇ ತಪ್ಪಾಗಲು ಸಾಧ್ಯವಿಲ್ಲ. ಇವರಿಂದ ಆಗಬಹುದು, ಇವರಿಬ್ಬರೂ ಒಟ್ಟಿಗೆ ಇದ್ದಾರೆ ಆದರೆ ನೀವು ನಿಶ್ಚಯವನ್ನಿಡಬೇಕು – ಶಿವ ತಂದೆಯು ನಮಗೆ ತಿಳಿಸುತ್ತಾರೆ, ಅದರಂತೆ ನಾವು ನಡೆಯಬೇಕಾಗಿದೆ. ಹೀಗೆ ತಂದೆಯ ಶ್ರೀಮತವೆಂದು ತಿಳಿದು ನಡೆಯುತ್ತಾ ಇರಿ. ಆಗ ಉಲ್ಟಾ ಇರುವುದೂ ಸಹ ಸುಲ್ಟಾ ಆಗಿ ಬಿಡುವುದು. ಕೆಲವೊಮ್ಮೆ ತಪ್ಪು ತಿಳುವಳಿಕೆಯಾಗಿ ಬಿಡುತ್ತದೆ. ಶಿವ ತಂದೆ ಮತ್ತು ಬ್ರಹ್ಮಾ ತಂದೆಯ ಮುರುಳಿಯನ್ನೂ ಸಹ ಬಹಳ ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ಇದನ್ನು ತಂದೆಯು ಹೇಳಿದರೇ? ಅಥವಾ ಈ ಬ್ರಹ್ಮಾ ತಂದೆಯು ಹೇಳಿದರೇ ಎಂದು. ಈ ಬ್ರಹ್ಮಾರವರು ಮುರುಳಿಯ ಮಧ್ಯದಲ್ಲಿ ಮಾತನಾಡುವುದಿಲ್ಲ ಎಂದಲ್ಲ. ಆದರೆ ತಂದೆಯು ತಿಳಿಸಿದ್ದಾರೆ - ಭಲೆ ಈ ಬ್ರಹ್ಮಾರವರಿಗೆ ಏನೂ ಗೊತ್ತಿಲ್ಲವೆಂದೇ ತಿಳಿದುಕೊಳ್ಳಿ, ಶಿವ ತಂದೆಯೇ ಎಲ್ಲವನ್ನೂ ತಿಳಿಸುತ್ತಾರೆ. ಶಿವ ತಂದೆಯ ರಥಕ್ಕೆ ಸ್ನಾನ ಮಾಡಿಸುತ್ತೇನೆ, ಶಿವ ತಂದೆಯ ಭಂಡಾರದ ಸರ್ವೀಸ್ ಮಾಡುತ್ತೇನೆ. ಇಷ್ಟು ನೆನಪಿದ್ದರೂ ಸಹ ಬಹಳ ಒಳ್ಳೆಯದು. ಶಿವ ತಂದೆಯ ನೆನಪಿನಲ್ಲಿದ್ದು ಏನೇ ಮಾಡಿದರೂ ಸಹ ನೀವು ಅನೇಕರಿಗಿಂತ ಬಹಳ ತೀಕ್ಷ್ಣವಾಗಿ ಮುಂದೆ ಹೋಗಬಹುದು. ಮುಖ್ಯ ಮಾತು ಶಿವ ತಂದೆಯ ನೆನಪಾಗಿದೆ. ತಂದೆ ಮತ್ತು ಆಸ್ತಿ. ಉಳಿದೆಲ್ಲವೂ ವಿಸ್ತಾರವಾಗಿದೆ.

ತಂದೆಯು ಏನನ್ನು ತಿಳಿಸುತ್ತಾರೆಯೋ ಅದರಮೇಲೆ ಗಮನ ಕೊಡಬೇಕಾಗಿದೆ. ತಂದೆಯೇ ಪತಿತ-ಪಾವನ, ಜ್ಞಾನ ಸಾಗರನಾಗಿದ್ದಾರಲ್ಲವೆ. ಅವರೇ ಪತಿತ ಶೂದ್ರರನ್ನು ಬ್ರಾಹ್ಮಣರನ್ನಾಗಿ ಮಾಡುತ್ತಾರೆ, ಬ್ರಾಹ್ಮಣರನ್ನೇ ಪಾವನರನ್ನಾಗಿ ಮಾಡುತ್ತಾರೆ. ಶೂದ್ರರನ್ನು ಮಾಡುವುದಿಲ್ಲ. ಇವೆಲ್ಲಾ ಮಾತುಗಳು ಯಾವುದೇ ಭಾಗವತ ಮೊದಲಾದುವುಗಳಲ್ಲಿಲ್ಲ. ಕೆಲಕೆಲವು ಶಬ್ಧಗಳಿವೆ. ಈ ರಾಧೆ-ಕೃಷ್ಣರೇ ಲಕ್ಷ್ಮೀ-ನಾರಾಯಣರಾಗಿದ್ದಾರೆ ಎಂಬುದೂ ಸಹ ಮನುಷ್ಯರಿಗೆ ಗೊತ್ತಿಲ್ಲ, ಇದರಲ್ಲಿಯೇ ತಬ್ಬಿಬ್ಬಾಗುತ್ತಾರೆ. ದೇವತೆಗಳು ಸೂರ್ಯವಂಶಿ, ಚಂದ್ರವಂಶಿಯರಾಗಿದ್ದಾರೆ. ಲಕ್ಷ್ಮೀ-ನಾರಾಯಣರ ರಾಜಧಾನಿ, ರಾಮ-ಸೀತೆಯರ ರಾಜಧಾನಿ. ತಂದೆಯು ತಿಳಿಸುತ್ತಾರೆ - ಭಾರತವಾಸಿ ಮಧುರ ಮಕ್ಕಳೇ, ನೆನಪು ಮಾಡಿಕೊಳ್ಳಿ. ಲಕ್ಷಾಂತರ ವರ್ಷಗಳ ಮಾತಿಲ್ಲ, ಇದು ನೆನ್ನೆಯ ಮಾತಾಗಿದೆ. ನಿಮಗೆ ರಾಜ್ಯವನ್ನೂ ಕೊಟ್ಟಿದ್ದೆನು, ಇಷ್ಟು ಅಪಾರ ಧನ ಸಂಪತ್ತನ್ನು ಕೊಟ್ಟೆನು, ಇಡೀ ವಿಶ್ವದ ಮಾಲೀಕರನ್ನಾಗಿ ಮಾಡಿದೆನು, ಮತ್ತ್ಯಾವುದೇ ಖಂಡವಿರಲಿಲ್ಲ. ನಂತರ ನಿಮಗೆ ಏನಾಯಿತು! ವಿದ್ವಾಂಸ, ಆಚಾರ್ಯ, ಪಂಡಿತರೂ ಸಹ ಈ ಮಾತುಗಳನ್ನು ತಿಳಿದುಕೊಂಡಿಲ್ಲ. ತಂದೆಯೇ ತಿಳಿಸುತ್ತಾರೆ - ಅರೆ! ಭಾರತವಾಸಿಗಳೇ, ನಿಮಗೆ ರಾಜ್ಯಭಾಗ್ಯವನ್ನು ಕೊಟ್ಟಿದ್ದೆನು. ಎಷ್ಟೊಂದು ನಿಮಗೆ ಹಣವನ್ನು ಕೊಟ್ಟೆನು, ನೀವು ಎಲ್ಲಿ ಕಳೆದಿರಿ? ಎಂದು ಶಿವ ತಂದೆಯು ಕೇಳುತ್ತಾರೆಂಬುದನ್ನು ನೀವೂ ಸಹ ಹೇಳುತ್ತೀರಿ. ತಂದೆಯ ಆಸ್ತಿಯು ಎಷ್ಟು ಬಲವಾಗಿದೆ! ತಂದೆಯೇ ಕೇಳುತ್ತಾರಲ್ಲವೆ ಅಥವಾ ತಂದೆಯು ಹೊರಟು ಹೋದರೆ ಮಿತ್ರ ಸಂಬಂಧಿಗಳು ಕೇಳುತ್ತಾರೆ. ತಂದೆಯು ನಿಮಗೆ ಇಷ್ಟು ಹಣವನ್ನು ಕೊಟ್ಟರು, ನೀವು ಎಲ್ಲಿ ಕಳೆದಿರಿ ಎಂದು. ಇಲ್ಲಂತೂ ಬೇಹದ್ದಿನ ತಂದೆಯಾಗಿದ್ದಾರೆ, ತಂದೆಯು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡಿದರು, ಇಷ್ಟೊಂದು ರಾಜ್ಯವನ್ನು ಕೊಟ್ಟರು. ಆ ಹಣವೆಲ್ಲವೂ ಎಲ್ಲಿ ಹೋಯಿತು! ನೀವು ಏನು ಉತ್ತರ ನೀಡುವಿರಿ? ಯಾರಿಗೂ ಅರ್ಥವಾಗುವುದಿಲ್ಲ, ನೀವು ಹೇಗೆ ಇಷ್ಟೊಂದು ಕಂಗಾಲರಾದಿರಿ ಎಂದು ತಂದೆಯು ಕೇಳುವುದು ಸರಿಯಾಗಿದೆ ಎಂದು ನೀವು ತಿಳಿದುಕೊಳ್ಳುತ್ತೀರಿ. ಮೊದಲು ಎಲ್ಲವೂ ಸತೋಪ್ರಧಾನವಾಗಿತ್ತು, ನಂತರ ಕಲೆಗಳು ಕಡಿಮೆಯಾಗುತ್ತಾ ಹೋಯಿತು ಆದ್ದರಿಂದ ಎಲ್ಲವೂ ಕಡಿಮೆಯಾಗುತ್ತಾ ಹೋಯಿತು. ಸತ್ಯಯುಗದಲ್ಲಂತೂ ಸತೋಪ್ರಧಾನರಿದ್ದರು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ರಾಧೆ-ಕೃಷ್ಣರಿಗಿಂತಲೂ ಲಕ್ಷ್ಮೀ-ನಾರಾಯಣರ ಹೆಸರು ಹೆಚ್ಚು ಪ್ರಸಿದ್ಧವಾಗಿದೆ. ಅವರಿಗೆ ಯಾರೂ ನಿಂದನೆಯ ಮಾತನ್ನು ಬರೆದಿಲ್ಲ, ಮತ್ತೆಲ್ಲರ ಪ್ರತಿಯೂ ನಿಂದನೆಯನ್ನು ಬರೆದಿದ್ದಾರೆ. ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ದೈತ್ಯರಿದ್ದರು ಎಂಬ ಮಾತನ್ನು ಯಾರೂ ಹೇಳುವುದಿಲ್ಲ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ತಂದೆಯು ಜ್ಞಾನ ಧನದಿಂದ ಜೋಳಿಗೆಯನ್ನು ತುಂಬಿಸುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಮಾಯೆಯಿಂದ ಬಹಳ ಎಚ್ಚರಿಕೆಯಿಂದಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬುದ್ಧಿವಂತರಾಗಿ ಸತ್ಯ ಸೇವೆಯಲ್ಲಿ ತೊಡಗಬೇಕಾಗಿದೆ. ಜವಾಬ್ದಾರನು ಒಬ್ಬ ತಂದೆಯಾಗಿದ್ದಾರೆ ಆದ್ದರಿಂದ ಶ್ರೀಮತದಲ್ಲಿ ಸಂಶಯ ತರಬಾರದು. ನಿಶ್ಚಯದಲ್ಲಿ ಅಡೋಲರಾಗಿರಬೇಕಾಗಿದೆ.

2. ವಿಚಾರ ಸಾಗರ ಮಂಥನ ಮಾಡಿ ತಂದೆಯ ಪ್ರತೀ ತಿಳುವಳಿಕೆಯ ಮೇಲೆ ಗಮನ ಕೊಡಬೇಕಾಗಿದೆ. ಸ್ವಯಂ ಜ್ಞಾನ ಧಾರಣೆ ಮಾಡಿ ಅನ್ಯರಿಗೂ ತಿಳಿಸಬೇಕಾಗಿದೆ.

ವರದಾನ:
ತಮ್ಮ ಪ್ರತ್ಯಕ್ಷ ಪ್ರಮಾಣದ ಮುಖಾಂತರ ತಂದೆಯನ್ನು ಪ್ರತ್ಯಕ್ಷ ಮಾಡುವಂತಹವರು ಶ್ರೇಷ್ಠ ಭಾಗ್ಯಶಾಲಿ ಭವ.

ಯಾವುದೇ ಮಾತನ್ನು ಸ್ಪಷ್ಠ ಮಾಡುವುದಕ್ಕಾಗಿ ಅನೇಕ ಪ್ರಕಾರದ ಪ್ರಮಾಣ ಕೊಡಲಾಗುತ್ತದೆ. ಆದರೆ ಎಲ್ಲಕ್ಕಿಂತ ಶ್ರೇಷ್ಠ ಪ್ರಮಾಣ ಪ್ರತ್ಯಕ್ಷ ಪ್ರಮಾಣವಾಗಿದೆ. ಪ್ರತ್ಯಕ್ಷ ಪ್ರಮಾಣ ಅರ್ಥಾತ್ ಏನಾಗಿರುವಿರಿ, ಯಾರವರಾಗಿರುವಿರಿ ಅವರ ಸ್ಮತಿಯಲ್ಲಿರುವುದು. ಯಾವ ಮಕ್ಕಳು ತಮ್ಮ ಯಥಾರ್ಥ ಹಾಗೂ ಅನಾದಿ ಸ್ವರೂಪದಲ್ಲಿ ಸ್ಥಿತರಾಗಿರುತ್ತಾರೆ ಅವರೇ ತಂದೆಯನ್ನು ಪ್ರತ್ಯಕ್ಷ ಮಾಡಲು ನಿಮಿತ್ತರಾಗಿದ್ದಾರೆ. ಅವರ ಭಾಗ್ಯವನ್ನು ನೋಡಿ ಭಾಗ್ಯರೂಪಿಸಿದವರ ನೆನಪು ಸ್ವತಃವಾಗಿ ಬರುವುದು.

ಸ್ಲೋಗನ್:
ತಮ್ಮ ದಯಾ ದೃಷ್ಟಿಯಿಂದ ಎಲ್ಲಾ ಆತ್ಮರನ್ನು ಪರಿವರ್ತನೆ ಮಾಡುವವರೇ ಪುಣ್ಯ ಆತ್ಮರು.


ಡಬ್ಬಲ್ಲೈಟ್ ಸ್ಥಿತಿಯ ಅನುಭವ:-
ತಮ್ಮ ಅವ್ಯಕ್ತ ಸ್ಥಿತಿಯ ಮೂಲಕ ಅವ್ಯಕ್ತ ಆನಂದ, ಅವ್ಯಕ್ತ ಸ್ನೇಹ ಅಥವಾ ಅವ್ಯಕ್ತ ಶಕ್ತಿಯ ಅನುಭವವನ್ನು ಮಾಡಿರಿ. ಈ ಸ್ಥಿತಿಯವರೆಗೆ ತಲುಪುವುದಕ್ಕಾಗಿ ತಾವು ಹೇಳುವುದು, ಮಾಡುವುದು ಮತ್ತು ಇರುವುದನ್ನು ಸಮಾನ ಮಾಡಿಕೊಳ್ಳಬೇಕಾಗಿದೆ.