12.02.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮಗೆ
ಸಂಪಾದನೆಯ ಬಹಳ ಆಸಕ್ತಿಯಿರಬೇಕು, ಈ ವಿದ್ಯೆಯಲ್ಲಿಯೇ ಸಂಪಾದನೆಯಿದೆ.”
ಪ್ರಶ್ನೆ:
ಜ್ಞಾನವಿಲ್ಲದಿದ್ದರೆ ಯಾವ ಖುಷಿಯ ಮಾತೂ ಸಹ ವಿಘ್ನ ರೂಪವಾಗಿ ಬಿಡುತ್ತದೆ?
ಉತ್ತರ:
ಸಾಕ್ಷಾತ್ಕಾರವಾಗುವುದಂತೂ ಖುಷಿಯ ಮಾತಾಗಿದೆ, ಆದರೆ ಒಂದುವೇಳೆ ಯಥಾರ್ಥ ರೂಪದಿಂದ
ಜ್ಞಾನವಿಲ್ಲದಿದ್ದರೆ ಅದರಲ್ಲಿ ಇನ್ನೂ ತಬ್ಬಿಬ್ಬಾಗುತ್ತಾರೆ. ತಿಳಿದುಕೊಳ್ಳಿ - ಯಾರಿಗಾದರೂ
ತಂದೆಯ ಸಾಕ್ಷಾತ್ಕಾರವಾಯಿತು, ಬಿಂದುವನ್ನು ನೋಡಿದರೆ ಏನು ತಿಳಿದುಕೊಳ್ಳುವರು? ಇನ್ನೂ
ತಬ್ಬಿಬ್ಬಾಗುತ್ತಾರೆ. ಆದ್ದರಿಂದ ಜ್ಞಾನವಿಲ್ಲದ ಸಾಕ್ಷಾತ್ಕಾರದಿಂದ ಯಾವುದೇ ಲಾಭವಿಲ್ಲ. ಇದರಲ್ಲಿ
ಇನ್ನೂ ಮಾಯೆಯ ವಿಘ್ನಗಳು ಬರತೊಡಗುತ್ತವೆ. ಕೆಲವರಿಗೆ ಸಾಕ್ಷಾತ್ಕಾರದ ಉಲ್ಟಾ ನಶೆಯೂ ಏರಿ
ಬಿಡುತ್ತದೆ.
ಗೀತೆ:
ಅದೃಷ್ಟವನ್ನು
ಬೆಳಗಿಸಿಕೊಂಡು ಬಂದಿದ್ದೇನೆ....
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಹೊಸಬರೂ ಕೇಳಿದಿರಿ, ಹಳಬರೂ ಕೇಳಿದಿರಿ,
ಕುಮಾರರೂ ಕೇಳಿದಿರಿ - ಇದು ಪಾಠಶಾಲೆಯಾಗಿದೆ. ಪಾಠಶಾಲೆಯಲ್ಲಿ ಒಂದಲ್ಲ ಒಂದು ಅದೃಷ್ಟವನ್ನು
ರೂಪಿಸಲಾಗುತ್ತದೆ. ಅಲ್ಲಂತೂ ಅನೇಕ ಪ್ರಕಾರದ ಅದೃಷ್ಟಗಳಿರುತ್ತವೆ, ಕೆಲವರು ಸರ್ಜನ್ ಆಗುವ, ಕೆಲವರು
ವಕೀಲರಾಗುವ ಅದೃಷ್ಟವನ್ನು ರೂಪಿಸಿಕೊಳ್ಳುತ್ತಾರೆ. ಅದೃಷ್ಟಕ್ಕೆ ಗುರಿ-ಧ್ಯೇಯವೆಂದು ಹೇಳಲಾಗುತ್ತದೆ.
ಅದೃಷ್ಟ ಮಾಡಿಕೊಳ್ಳದೆ ಏನು ಓದುವರು? ಈಗ ಇಲ್ಲಿ ಮಕ್ಕಳು ತಿಳಿದುಕೊಂಡಿದ್ದೀರಿ, ನಾವೂ ಸಹ
ಅದೃಷ್ಟವನ್ನು ರೂಪಿಸಿಕೊಂಡು ಬಂದಿದ್ದೇವೆ. ಹೊಸ ಪ್ರಪಂಚಕ್ಕಾಗಿ ತಮ್ಮ ರಾಜ್ಯಭಾಗ್ಯವನ್ನು
ತೆಗೆದುಕೊಳ್ಳಲು ಬಂದಿದ್ದೇವೆ. ಇದು ಹೊಸ ಪ್ರಪಂಚಕ್ಕಾಗಿ ರಾಜಯೋಗವಾಗಿದೆ, ಅದು ಹಳೆಯ
ಪ್ರಪಂಚಕ್ಕಾಗಿ ವಿದ್ಯೆಯಾಗಿದೆ. ಅವರು ಹಳೆಯ ಪ್ರಪಂಚದ ಬ್ಯಾರಿಸ್ಟರ್, ಇಂಜಿಯನಿಯರ್, ಸರ್ಜನ್
ಇತ್ಯಾದಿ ಆಗುತ್ತಾರೆ. ಅವರು ಆಗುತ್ತಾ-ಆಗುತ್ತಾ ಈಗ ಹಳೆಯ ಪ್ರಪಂಚದಲ್ಲಿ ಇನ್ನು ಸ್ವಲ್ಪವೇ ಸಮಯ
ಉಳಿದಿದೆ. ಅಂದಾಗ ಅವರು ಸಮಾಪ್ತಿಯಾಗಿ ಬಿಡುತ್ತಾರೆ. ಆ ಅದೃಷ್ಟವು ಈ ಮೃತ್ಯುಲೋಕಕ್ಕಾಗಿ ಅಂದರೆ ಈ
ಜನ್ಮಕ್ಕಾಗಿ ಇದೆ. ನಿಮ್ಮದು ಹೊಸ ಪ್ರಪಂಚಕ್ಕಾಗಿ ಈ ವಿದ್ಯೆಯಾಗಿದೆ. ಹೊಸ ಪ್ರಪಂಚಕ್ಕಾಗಿ
ಅದೃಷ್ಟವನ್ನು ರೂಪಿಸಿಕೊಂಡು ಬಂದಿದ್ದೀರಿ. ಹೊಸ ಪ್ರಪಂಚದಲ್ಲಿ ನಿಮಗೆ ರಾಜ್ಯಭಾಗ್ಯವು ಸಿಗುವುದು.
ಯಾರು ಓದಿಸುತ್ತಾರೆ? ಬೇಹದ್ದಿನ ತಂದೆ, ಅವರಿಂದಲೇ ಆಸ್ತಿಯನ್ನು ಪಡೆಯಬೇಕಾಗಿದೆ. ಹೇಗೆ
ವೈದ್ಯರಿಂದ ವೈದ್ಯಕೀಯ ಆಸ್ತಿಯನ್ನು ಪಡೆಯುತ್ತಾರೆ. ಅದಂತೂ ಈ ಜನ್ಮದ ಆಸ್ತಿಯಾಗಿದೆ. ಒಂದು
ಆಸ್ತಿಯು ತಂದೆಯಿಂದ ಸಿಗುತ್ತದೆ, ಇನ್ನೊಂದು ಆಸ್ತಿಯು ತನ್ನ ವಿದ್ಯಾಭ್ಯಾಸದಿಂದ ಸಿಗುತ್ತದೆ ನಂತರ
ವೃದ್ಧರಾದಾಗ ಗುರುವಿನ ಬಳಿ ಹೋಗುತ್ತಾರೆ. ಏನನ್ನು ಬಯಸುತ್ತಾರೆ? ನಮಗೆ ಶಾಂತಿಧಾಮಕ್ಕೆ ಹೋಗುವ
ಶಿಕ್ಷಣ ಕೊಡಿ, ನಮಗೆ ಸದ್ಗತಿ ಕೊಡಿ, ಇಲ್ಲಿಂದ ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ ಎಂದು
ಹೇಳುತ್ತಾರೆ. ಈಗ ತಂದೆಯಿಂದ ಆಸ್ತಿಯು ಸಿಗುತ್ತದೆ. ಶಿಕ್ಷಕರಿಂದಲೂ ಈ ಜನ್ಮಕ್ಕಾಗಿ ಆಸ್ತಿಯು
ಸಿಗುತ್ತದೆ. ಆದರೆ ಗುರುಗಳಿಂದ ಏನೂ ಸಿಗುವುದಿಲ್ಲ. ಶಿಕ್ಷಕರಿಂದ ಓದಿ ಯಾವುದಾದರೊಂದು ಆಸ್ತಿಯನ್ನು
ಪಡೆಯುತ್ತಾರೆ. ಶಿಕ್ಷಕರಾಗಬಹುದು ಅಥವಾ ಹೊಲಿಗೆ ಶಿಕ್ಷಕರಾಗಬಹುದು ಏಕೆಂದರೆ ಜೀವನೋಪಾಯ ಬೇಕಲ್ಲವೆ.
ತಂದೆಯ ಆಸ್ತಿಯಿದ್ದರೂ ಸಹ ನಾವು ನಮ್ಮ ಸಂಪಾದನೆ ಮಾಡಬೇಕೆಂದು ಓದುತ್ತಾರೆ. ಗುರುಗಳಿಂದ ಏನೂ
ಸಂಪಾದನೆ ಆಗುವುದಿಲ್ಲ. ಹಾ! ಕೆಲಕೆಲವರು ಗೀತೆಯನ್ನು ಚೆನ್ನಾಗಿ ಓದಿ ಮತ್ತೆ ಗೀತೆಯ ಮೇಲೆ ಭಾಷಣ
ಮಾಡಿ ಓದುತ್ತಾರೆ. ಇದೆಲ್ಲವೂ ಅಲ್ಪಕಾಲದ ಸುಖಕ್ಕಾಗಿ ಇದೆ. ಈಗಂತೂ ಈ ಮೃತ್ಯುಲೋಕದಲ್ಲಿ ಇನ್ನು
ಸ್ವಲ್ಪವೇ ಸಮಯವಿದೆ, ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ನಾವು ಹೊಸ ಪ್ರಪಂಚದ ಅದೃಷ್ಟವನ್ನು
ರೂಪಿಸಿಕೊಳ್ಳಲು ಬಂದಿದ್ದೇವೆಂದು ನಿಮಗೆ ತಿಳಿದಿದೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗುವುದು.
ತಂದೆಯ ಹಾಗೂ ತನ್ನ ಸಂಪತ್ತೆಲ್ಲವೂ ಸಮಾಪ್ತಿಯಾಗಿ ಬಿಡುವುದು, ಕೈಗಳು ಖಾಲಿಯಾಗಿ ಬಿಡುತ್ತದೆ.
ಈಗಂತೂ ಹೊಸ ಪ್ರಪಂಚಕ್ಕಾಗಿ ಸಂಪಾದನೆ ಬೇಕಾಗಿದೆ. ಹಳೆಯ ಪ್ರಪಂಚದ ಮನುಷ್ಯರಂತೂ ಈ ಸಂಪಾದನೆ
ಮಾಡಿಸಲು ಸಾಧ್ಯವಿಲ್ಲ. ಹೊಸ ಪ್ರಪಂಚಕ್ಕಾಗಿ ಸಂಪಾದನೆ ಮಾಡಿಸುವವರು ಶಿವ ತಂದೆಯಾಗಿದ್ದಾರೆ. ಇಲ್ಲಿ
ನೀವು ಹೊಸ ಪ್ರಪಂಚಕ್ಕಾಗಿ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ, ಆ ತಂದೆಯೇ ನಿಮ್ಮ ತಂದೆಯೂ
ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ ಮತ್ತೆ ಅವರು ಸಂಗಮದಲ್ಲಿಯೇ ಬರುತ್ತಾರೆ.
ಭವಿಷ್ಯಕ್ಕಾಗಿ ಸಂಪಾದನೆ ಮಾಡಿಕೊಳ್ಳುವುದನ್ನು ಕಲಿಸುತ್ತಾರೆ. ಈಗ ಈ ಹಳೆಯ ಪ್ರಪಂಚದಲ್ಲಿ ಇನ್ನು
ಕೆಲವೇ ದಿನಗಳಿವೆ. ಇದನ್ನು ಪ್ರಪಂಚದ ಮನುಷ್ಯರು ತಿಳಿದುಕೊಂಡಿಲ್ಲ. ಹೊಸ ಪ್ರಪಂಚವು ಮತ್ತೆ ಯಾವಾಗ
ಬರುವುದು, ಇವರು ಸುಳ್ಳು ಹೇಳುತ್ತಾರೆಂದು ತಿಳಿಯುತ್ತಾರೆ. ಹೀಗೆ ತಿಳಿದುಕೊಳ್ಳುವವರು
ಅನೇಕರಿದ್ದಾರೆ. ಹೊಸ ಪ್ರಪಂಚದ ಸ್ಥಾಪನೆಯಾಗುವುದೆಂದು ತಂದೆಯು ಹೇಳಿದರೆ ಇದು ಸುಳ್ಳು ಎಂದು ಮಗನು
ಹೇಳುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಹೊಸ ಪ್ರಪಂಚಕ್ಕಾಗಿ ಇವರು ನಮ್ಮ ತಂದೆ,
ಶಿಕ್ಷಕ, ಸದ್ಗುರುವಾಗಿದ್ದಾರೆ. ತಂದೆಯು ಶಾಂತಿಧಾಮ, ಸುಖಧಾಮದಲ್ಲಿ ಕರೆದುಕೊಂಡು ಹೋಗುವುದಕ್ಕಾಗಿ
ಬರುತ್ತಾರೆ. ಯಾರು ಅದೃಷ್ಟವನ್ನು ರೂಪಿಸಿಕೊಳ್ಳುವುದಿಲ್ಲವೋ ಅವರು ಏನನ್ನೂ
ತಿಳಿದುಕೊಂಡಿಲ್ಲವೆಂದರ್ಥ. ಒಂದೇ ಮನೆಯಲ್ಲಿ ಸ್ತ್ರೀ ಓದುತ್ತಾಳೆ, ಪುರುಷನು ಓದುವುದಿಲ್ಲ. ಮಕ್ಕಳು
ಓದುತ್ತಾರೆ, ತಂದೆ-ತಾಯಿ ಓದುವುದಿಲ್ಲ - ಈ ರೀತಿ ಆಗುತ್ತಿರುತ್ತದೆ. ಯಜ್ಞದ ಆದಿಯಲ್ಲಿ
ಪರಿವಾರಕ್ಕೆ ಪರಿವಾರವೇ ಬಂದು ಬಿಟ್ಟರು. ಆದರೆ ಮಾಯೆಯ ಬಿರುಗಾಳಿಗಳು ಬಂದಾಗ ಆಶ್ಚರ್ಯವೆನಿಸುವಂತೆ
ತಂದೆಯನ್ನು ಬಿಟ್ಟು ಹೊರಟು ಹೋದರು. ಗಾಯನವಿದೆ - ಆಶ್ಚರ್ಯವೆನಿಸುವಂತೆ ಕೇಳುವರು, ತಂದೆಯ
ಮಕ್ಕಳಾಗುವರು, ವಿದ್ಯೆಯನ್ನೂ ಓದುವರು ಆದರೂ ಸಹ.... ಇದು ಸೃಷ್ಟಿಯ ಲೀಲೆಯಾಗಿದೆ. ಸ್ವಯಂ ತಂದೆಯೇ
ಹೇಳುತ್ತಾರೆ - ಅಯ್ಯೋ ಡ್ರಾಮಾ, ಅಯ್ಯೋ ಮಾಯೆ.... ಇದು ಡ್ರಾಮಾದ ಮಾತಾಗಿದೆಯಲ್ಲವೆ.
ಸ್ತ್ರೀ-ಪುರುಷ ಒಬ್ಬರು ಇನ್ನೊಬ್ಬರಿಗೆ ವಿಚ್ಛೇದನ ಕೊಡುತ್ತಾರೆ, ತಂದೆಗೆ ಮಕ್ಕಳು ವಿಚ್ಛೇದನ
ಕೊಡುತ್ತಾರೆ. ಇಲ್ಲಂತೂ ಅದು ಇಲ್ಲ. ಇಲ್ಲಿ ವಿಚ್ಛೇದನ ಕೊಡಲು ಸಾಧ್ಯವಿಲ್ಲ. ತಂದೆಯಂತೂ ಮಕ್ಕಳಿಗೆ
ಸತ್ಯ ಸಂಪಾದನೆ ಮಾಡಿಸುವುದಕ್ಕಾಗಿಯೇ ಬಂದಿದ್ದಾರೆ ಅಂದಮೇಲೆ ತಂದೆಯು ಮಕ್ಕಳನ್ನು ಗುಣಿಗೆ ತಳ್ಳಿ
ಬಿಡುವರೇ? ತಂದೆಯಂತೂ ಪತಿತ-ಪಾವನ, ದಯಾ ಹೃದಯಿಯಾಗಿದ್ದಾರೆ. ತಂದೆಯು ಬಂದು ದುಃಖದಿಂದ
ಮುಕ್ತರನ್ನಾಗಿ ಮಾಡುತ್ತಾರೆ ಮತ್ತು ಮಾರ್ಗದರ್ಶಕನಾಗಿ ಜೊತೆ ಕರೆದುಕೊಂಡು ಹೋಗುತ್ತಾರೆ. ನಾನು
ನಿಮ್ಮನ್ನು ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳುವಂತಹ ಮತ್ತ್ಯಾವ ಗುರುಗಳೂ ಇಲ್ಲ.
ಇಂತಹ ಗುರುಗಳನ್ನು ಎಂದಾದರೂ ನೋಡಿದ್ದೀರಾ? ಎಂದಾದರೂ ಕೇಳಿದ್ದೀರಾ? ನೀವು ಗುರುಗಳೊಂದಿಗೆ ಕೇಳಿರಿ
- ನಿಮಗೆ ಇಷ್ಟೊಂದು ಮಂದಿ ಅನುಯಾಯಿಗಳಿದ್ದಾರೆ, ನೀವು ಶರೀರವನ್ನು ಬಿಟ್ಟು ಹೋದಾಗ ತಮ್ಮ
ಅನುಯಾಯಿಗಳನ್ನೂ ಸಹ ಜೊತೆ ಕರೆದುಕೊಂಡು ಹೋಗುತ್ತೀರಾ? ನಾನು ಅನುಯಾಯಿಗಳನ್ನು ಜೊತೆ ಕರೆದುಕೊಂಡು
ಹೋಗುತ್ತೇನೆಂದು ಎಂದೂ ಯಾರೂ ಹೇಳುವುದೇ ಇಲ್ಲ, ಇದು ಸಾಧ್ಯವೇ ಇಲ್ಲ. ನಾನು ನಿಮ್ಮೆಲ್ಲರನ್ನೂ
ನಿರ್ವಾಣಧಾಮ ಅಥವಾ ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ ಎಂಬ ಮಾತನ್ನು ಯಾರೂ ಹೇಳಲು
ಸಾಧ್ಯವಿಲ್ಲ. ನಮ್ಮನ್ನು ತಾವು ಜೊತೆ ಕರೆದುಕೊಂಡು ಹೋಗುತ್ತೀರಾ ಎಂಬ ಪ್ರಶ್ನೆಯನ್ನು ಯಾರೂ
ಕೇಳುವುದಕ್ಕೂ ಸಾಧ್ಯವಿಲ್ಲ. ಶಾಸ್ತ್ರಗಳಲ್ಲಿದೆ, ಭಗವಾನುವಾಚ - ನಾನು ನಿಮ್ಮನ್ನು ಕರೆದುಕೊಂಡು
ಹೋಗುತ್ತೇನೆ, ಎಲ್ಲರೂ ಸೊಳ್ಳೆಗಳೋಪಾದಿಯಲ್ಲಿ ಹೋಗುತ್ತಾರೆ. ಸತ್ಯಯುಗದಲ್ಲಿ ಕೆಲವರೇ
ಮನುಷ್ಯರಿರುತ್ತಾರೆ. ಕಲಿಯುಗದಲ್ಲಿ ಅನೇಕ ಮನುಷ್ಯರಿದ್ದಾರೆ. ಶರೀರವನ್ನು ಬಿಟ್ಟು ಆತ್ಮಗಳು ಎಲ್ಲಾ
ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹೊರಟು ಹೋಗುವರು. ಇಷ್ಟೊಂದು ಜನಸಂಖ್ಯೆಯಿರಲು ಸಾಧ್ಯವಿಲ್ಲ
ಅಂದಮೇಲೆ ಇವರೆಲ್ಲರೂ ಖಂಡಿತ ಹೋಗಬೇಕಾಗಿದೆ. ನೀವು ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ -
ನಾವೀಗ ಮನೆಗೆ ಹೋಗಬೇಕಾಗಿದೆ, ಈ ಶರೀರವನ್ನು ಬಿಡಬೇಕಾಗಿದೆ. ತಾನು ಸತ್ತರೆ ತನ್ನ ಪಾಲಿಗೆ ಜಗತ್ತೇ
ಸತ್ತಂತೆ. ಕೇವಲ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಈ ಹಳೆಯ
ಶರೀರವನ್ನಂತೂ ಬಿಡಲೇಬೇಕಾಗಿದೆ. ಈ ಪ್ರಪಂಚವೂ ಹಳೆಯದಾಗಿದೆ, ಹೇಗೆ ಹಳೆಯ ಮನೆಯಲ್ಲಿ ಕುಳಿತುಕೊಂಡು
ಹೊಸ ಮನೆಯ ಸಮ್ಮುಖದಲ್ಲಿ ತಯಾರಾಗುತ್ತಿದ್ದರೆ ಇದು ನಮಗಾಗಿ ತಯಾರಾಗುತ್ತಿದೆ ಎಂದು
ತಿಳಿದುಕೊಳ್ಳುತ್ತಾರೆ. ಇದರಲ್ಲಿ ಇದನ್ನು ಮಾಡಿಸಿ, ಇದನ್ನು ಮಾಡಿ ಎಂದು ಬುದ್ಧಿಯು ಹೊಸ ಮನೆಯ ಕಡೆ
ಹೋಗುತ್ತದೆ. ಮಮತೆಯೆಲ್ಲವೂ ಈ ಹಳೆಯ ಪ್ರಪಂಚದಿಂದ ಕಳೆದು ಹೊಸದರೊಂದಿಗೆ ಜೋಡಣೆಯಾಗುತ್ತದೆ. ಅದಂತೂ
ಹದ್ದಿನ ಮಾತಾಯಿತು, ಇದು ಬೇಹದ್ದಿನ ಪ್ರಪಂಚದ ಮಾತಾಗಿದೆ, ಹಳೆಯ ಪ್ರಪಂಚದಿಂದ ಮಮತ್ವವನ್ನು
ಕಳೆಯಬೇಕಾಗಿದೆ ಮತ್ತು ಹೊಸ ಪ್ರಪಂಚದೊಂದಿಗೆ ಜೋಡಿಸಬೇಕಾಗಿದೆ. ಈ ಹಳೆಯ ಪ್ರಪಂಚವಂತೂ
ಸಮಾಪ್ತಿಯಾಗಲಿದೆ ಎಂದು ಗೊತ್ತಿದೆ. ಹೊಸ ಪ್ರಪಂಚವು ಸ್ವರ್ಗವಾಗಿದೆ ಅದರಲ್ಲಿ ನಾವು ರಾಜ್ಯ
ಪದವಿಯನ್ನು ಪಡೆಯುತ್ತೇವೆ. ಎಷ್ಟು ಯೋಗದಲ್ಲಿರುತ್ತೀರೋ, ಜ್ಞಾನದ ಧಾರಣೆ ಮಾಡುತ್ತೀರೋ, ಅನ್ಯರಿಗೆ
ತಿಳಿಸುತ್ತೀರೊ ಅಷ್ಟು ಖುಷಿಯ ನಶೆಯೇರುವುದು. ಬಹಳ ದೊಡ್ಡ ಪರೀಕ್ಷೆಯಾಗಿದೆ. ನಾವು ಸ್ವರ್ಗದ 21
ಜನ್ಮಗಳಿಗಾಗಿ ಆಸ್ತಿಯನ್ನು ಪಡೆಯುತ್ತಿದ್ದೇವೆ. ಸಾಹುಕಾರರಾಗುವುದು ಒಳ್ಳೆಯದಲ್ಲವೆ. ಧೀರ್ಘಾಯಸ್ಸು
ಸಿಕ್ಕಿದರೆ ಒಳ್ಳೆಯದೇ ಅಲ್ಲವೆ. ಸೃಷ್ಟಿಚಕ್ರವನ್ನು ನೆನಪು ಮಾಡುತ್ತೀರಿ, ಯಾರೆಷ್ಟು ತಮ್ಮ
ಸಮಾನರನ್ನಾಗಿ ಮಾಡುವರೋ ಅಷ್ಟು ಲಾಭವಿದೆ. ರಾಜರಾಗಬೇಕೆಂದರೆ ಪ್ರಜೆಗಳನ್ನೂ ತಯಾರು ಮಾಡಬೇಕಾಗಿದೆ.
ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಬರುತ್ತಾರೆ. ಅವರೆಲ್ಲರೂ ಪ್ರಜೆಗಳಾಗುತ್ತಾ ಹೋಗುವರು ಏಕೆಂದರೆ
ಈ ಅವಿನಾಶಿ ಜ್ಞಾನದ ವಿನಾಶವಂತು ಆಗುವುದಿಲ್ಲ. ನಾವು ಪವಿತ್ರರಾಗಿ ಪವಿತ್ರ ಪ್ರಪಂಚದ
ಮಾಲೀಕರಾಗಬೇಕೆಂದು ಬುದ್ಧಿಯಲ್ಲಿ ಬಂದು ಬಿಡುವುದು. ಹೆಚ್ಚು ಪುರುಷಾರ್ಥ ಮಾಡಿದರೆ ಶ್ರೇಷ್ಠ
ಪದವಿಯನ್ನು ಪಡೆಯುವಿರಿ. ಇಲ್ಲದಿದ್ದರೆ ಪ್ರಜೆಗಳಲ್ಲಿಯೂ ಕಡಿಮೆ ಪದವಿಯಾಗುವುದು. ನಂಬರ್ವಾರಂತೂ
ಇರುತ್ತಾರಲ್ಲವೆ. ರಾಮ ರಾಜ್ಯದ ಸ್ಥಾಪನೆಯಾಗುತ್ತಿದೆ, ರಾವಣ ರಾಜ್ಯದ ವಿನಾಶವಾಗಿ ಬಿಡುವುದು.
ಸತ್ಯಯುಗದಲ್ಲಿ ದೇವತೆಗಳೇ ಇರುತ್ತಾರೆ. ತಂದೆಯು ತಿಳಿಸಿದ್ದಾರೆ - ನೆನಪಿನ ಯಾತ್ರೆಯಿಂದ ನೀವು
ಸತೋಪ್ರಧಾನ ಪ್ರಪಂಚದ ಮಾಲೀಕರಾಗುತ್ತೀರಿ. ರಾಜಾ, ಪ್ರಜೆಯೆಲ್ಲರೂ ಮಾಲೀಕರಾಗಿರುತ್ತಾರೆ. ನಮ್ಮ
ಭಾರತವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ ಎಂದು ಪ್ರಜೆಗಳು ಹೇಳುವರು. ಅವಶ್ಯವಾಗಿ ಭಾರತವು
ಶ್ರೇಷ್ಠವಾಗಿತ್ತು, ಈಗ ಆ ರೀತಿಯಿದೆಯೇ? ಮೊದಲು ಅವಶ್ಯವಾಗಿ ಶ್ರೇಷ್ಠವಾಗಿತ್ತು, ಈಗಂತೂ ಬಹಳ ಬಡ
ಭಾರತವಾಗಿ ಬಿಟ್ಟಿದೆ. ಪ್ರಾಚೀನ ಭಾರತವು ಎಲ್ಲದಕ್ಕಿಂತ ಸಾಹುಕಾರನಾಗಿತ್ತು, ನಿಮಗೆ ತಿಳಿದಿದೆ -
ಅವಶ್ಯವಾಗಿ ಭಾರತವಾಸಿಗಳು ಎಲ್ಲರಿಗಿಂತ ಶ್ರೇಷ್ಠ ದೇವಿ-ದೇವತಾ ಕುಲದವರಾಗಿದ್ದಿರಿ, ಮತ್ತ್ಯಾರಿಗೂ
ದೇವತೆಗಳೆಂದು ಹೇಳಲಾಗುವುದಿಲ್ಲ. ಈಗ ನೀವು ಮಕ್ಕಳು ಇದನ್ನು ಓದುತ್ತೀರಿ ಮತ್ತು ಇದನ್ನು ಅನ್ಯರಿಗೂ
ತಿಳಿಸಬೇಕಾಗಿದೆ. ಮನುಷ್ಯನಿಗೆ ತಿಳಿಸಬೇಕಲ್ಲವೆ. ನಿಮ್ಮ ಬಳಿ ಚಿತ್ರಗಳೂ ಇವೆ, ನೀವು ಸಿದ್ಧ ಮಾಡಿ
ತಿಳಿಸಿ - ಇವರು ಈ ಪದವಿಯನ್ನು ಹೇಗೆ ಪಡೆದರು? ತಿಥಿ, ತಾರೀಖು ಎಲ್ಲದರ ಸಹಿತವಾಗಿ ನೀವು ಸಿದ್ಧ
ಮಾಡಬಹುದು. ಈಗ ಶಿವ ತಂದೆಯಿಂದ ಪುನಃ ಈ ಪದವಿಯನ್ನು ಪಡೆಯುತ್ತಿದ್ದೀರಿ. ಅವರ ಚಿತ್ರವೂ ಇದೆ,
ಶಿವನು ಪರಮಪಿತ ಪರಮಾತ್ಮನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಬ್ರಹ್ಮಾರವರ ಮೂಲಕ ನಿಮಗೆ ಯೋಗ
ಬಲದಿಂದ 21 ಜನ್ಮಗಳ ಆಸ್ತಿಯು ಸಿಗುತ್ತದೆ. ನೀವು ಸೂರ್ಯವಂಶಿ ದೇವಿ-ದೇವತೆಗಳು ವಿಷ್ಣು ಪುರಿಯ
ಮಾಲೀಕರಾಗುತ್ತೀರಿ. ಶಿವ ತಂದೆಯು ದಾದಾ ಬ್ರಹ್ಮಾರವರ ಮೂಲಕ ಈ ಆಸ್ತಿಯನ್ನು ಕೊಡುತ್ತಿದ್ದಾರೆ.
ಮೊದಲು ಇವರ ಆತ್ಮವು ಕೇಳಿಸಿಕೊಳ್ಳುತ್ತದೆ, ಆತ್ಮವೇ ಧಾರಣೆ ಮಾಡುತ್ತದೆ, ಮೂಲ ಮಾತೇ ಇದಾಗಿದೆ.
ಶಿವನ ಚಿತ್ರವನ್ನು ತೋರಿಸುತ್ತಾರೆ, ಈ ಚಿತ್ರವು ಪರಮಪಿತ ಪರಮಾತ್ಮ ಶಿವನದಾಗಿದೆ. ಬ್ರಹ್ಮಾ,
ವಿಷ್ಣು, ಶಂಕರರು ಸೂಕ್ಷ್ಮವತನದ ದೇವತೆಗಳಾಗಿದ್ದಾರೆ. ಪ್ರಜಾಪಿತ ಬ್ರಹ್ಮನು ಅವಶ್ಯವಾಗಿ ಇಲ್ಲಿಯೇ
ಬೇಕಲ್ಲವೆ. ಪ್ರಜಾಪಿತ ಬ್ರಹ್ಮನ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರು ಅನೇಕರಿದ್ದಾರೆ.
ಎಲ್ಲಿಯವರೆಗೆ ಬ್ರಹ್ಮನ ಮಕ್ಕಳಾಗುವುದಿಲ್ಲವೋ ಅಲ್ಲಿಯವರೆಗೆ ಬ್ರಾಹ್ಮಣರಾಗುವುದಿಲ್ಲ. ಅಂದಮೇಲೆ
ಶಿವ ತಂದೆಯಿಂದ ಆಸ್ತಿಯನ್ನು ಹೇಗೆ ತೆಗೆದುಕೊಳ್ಳುವರು? ಕುಖವಂಶಾವಳಿಯಂತೂ ಆಗಲು ಸಾಧ್ಯವಿಲ್ಲ.
ಮುಖವಂಶಾವಳಿಯೆಂದು ಗಾಯನವೂ ಇದೆ. ನಾವು ಪ್ರಜಾಪಿತ ಬ್ರಹ್ಮನ ಮುಖವಂಶಾವಳಿ ಆಗಿದ್ದೇವೆಂದು ನೀವು
ಹೇಳುತ್ತೀರಿ. ಆ ಗುರುಗಳಿಗೆ ಅನುಯಾಯಿಗಳಿರುತ್ತಾರೆ. ಇಲ್ಲಿ ನೀವು ಒಬ್ಬರಿಗೇ ತಂದೆ, ಶಿಕ್ಷಕ,
ಸದ್ಗುರುವೆಂದು ಹೇಳುತ್ತೀರಿ. ನೀವು ಇವರಿಗೂ ಸಹ ಹೇಳುವುದಿಲ್ಲ. ನಿರಾಕಾರ ಶಿವ ತಂದೆಯಾಗಿದ್ದಾರೆ.
ಜ್ಞಾನ ಸಾಗರನಾಗಿದ್ದಾರೆ, ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಶಿಕ್ಷಕನೂ
ಸಹ ಆ ನಿರಾಕಾರನಾಗಿದ್ದಾರೆ. ಸಾಕಾರದ ಮೂಲಕ ಜ್ಞಾನವನ್ನು ತಿಳಿಸುತ್ತಾರೆ. ಆತ್ಮವೇ ಮಾತನಾಡುತ್ತದೆ,
ನನ್ನ ಶರೀರಕ್ಕೆ ತೊಂದರೆ ಕೊಡಬೇಡಿ ಎಂದು ಆತ್ಮವೇ ಹೇಳುತ್ತದೆ. ಆತ್ಮವು ದುಃಖಿಯಾದಾಗ ತಿಳುವಳಿಕೆ
ಕೊಡಲಾಗುತ್ತದೆ ಆಗ ವಿನಾಶವು ಸಮ್ಮುಖದಲ್ಲಿ ನಿಂತಿರುತ್ತದೆ. ಪಾರಲೌಕಿಕ ತಂದೆಯು ಅಂತ್ಯದಲ್ಲಿ
ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗಲು ಬರುತ್ತಾರೆ. ಬಾಕಿ ಏನೆಲ್ಲವೂ ಇದೆಯೋ ಅದೆಲ್ಲವೂ
ವಿನಾಶವಾಗಲಿದೆ, ಇದಕ್ಕೆ ಮೃತ್ಯುಲೋಕವೆಂದು ಹೇಳಲಾಗುತ್ತದೆ. ಸ್ವರ್ಗವಂತೂ ಈ ಪೃಥ್ವಿಯ ಮೇಲೆಯೇ
ಇರುತ್ತದೆ. ದಿಲ್ವಾಡಾ ಮಂದಿರವು ಮಾಡಲ್ಪಟ್ಟಿದೆ, ಅದರಲ್ಲಿ ಕೆಳಗೆ ತಪಸ್ಸು ಮಾಡುತ್ತಿದ್ದಾರೆ,
ಮೇಲೆ ಸ್ವರ್ಗವಿದೆ. ಇಲ್ಲವೆಂದರೆ ಇನ್ನೆಲ್ಲಿ ತೋರಿಸುವುದು! ಮೇಲೆ ದೇವತೆಗಳ ಚಿತ್ರವನ್ನು
ತೋರಿಸುತ್ತಾರೆ ಅಂದರೆ ಸ್ವರ್ಗವು ಮೇಲೆರುತ್ತದೆ ಎಂದಲ್ಲ. ಅವರು ಇಲ್ಲಿಯೇ ಇರುವರಲ್ಲವೆ. ತಿಳಿಸುವ
ಬಹಳ ಯುಕ್ತಿ ಬೇಕು. ಮಂದಿರಗಳಲ್ಲಿ ಹೋಗಿ ತಿಳಿಸಿ - ಇದು ಶಿವ ತಂದೆಯ ನೆನಪಾರ್ಥವಾಗಿದೆ. ಆ ಶಿವ
ತಂದೆಯೇ ನಮಗೆ ಓದಿಸುತ್ತಿದ್ದಾರೆ. ಶಿವನು ವಾಸ್ತವದಲ್ಲಿ ಬಿಂದುವಾಗಿದ್ದಾರೆ ಆದರೆ ಬಿಂದುವಿಗೆ
ಪೂಜೆ ಮಾಡುವುದು ಹೇಗೆ, ಹೂ-ಹಣ್ಣುಗಳನ್ನು ಅರ್ಪಿಸುವುದು ಹೇಗೆ? ಆದ್ದರಿಂದ ದೊಡ್ಡ ರೂಪವನ್ನಾಗಿ
ಮಾಡಿ ಬಿಟ್ಟಿದ್ದಾರೆ. ಆದರೆ ಶಿವನು ಇಷ್ಟು ದೊಡ್ಡ ಗಾತ್ರದಲ್ಲಿಲ್ಲ. ಭೃಕುಟಿಯ ಮಧ್ಯದಲ್ಲಿ
ಹೊಳೆಯುತ್ತಿರುವ ನಕ್ಷತ್ರವೆಂದು ಗಾಯನವಿದೆ. ಅವರು ಇರುವುದೇ ಅತಿ ಸೂಕ್ಷ್ಮ ಬಿಂದುವಾಗಿದ್ದಾರೆ.
ಆತ್ಮವು ದೊಡ್ಡ ವಸ್ತುವಾಗಿದ್ದರೆ ವಿಜ್ಞಾನಿ ಮೊದಲಾದವರು ಕೂಡಲೇ ಅದನ್ನು ಹಿಡಿದುಕೊಂಡು
ಬಿಡುತ್ತಿದ್ದರು. ತಂದೆಯು ಅಷ್ಟು ಕೋಟಿ ಸೂರ್ಯ ತೇಜೋಮಯನೂ ಆಗಿಲ್ಲ. ಕೆಲವರು ಭಕ್ತರೂ ಸಹ ಇಲ್ಲಿಗೆ
ಬರುತ್ತಾರೆ, ನಮಗೆ ಕೇವಲ ಈ ಚಹರೆಯಷ್ಟೆ ಕಾಣುತ್ತಾರೆ, ಆಗ ತಂದೆಯು ತಿಳಿಸುತ್ತಾರೆ - ಇವರಿಗೆ
ಪರಮಪಿತ ಪರಮಾತ್ಮನು ಪೂರ್ಣ ಪರಿಚಯ ಸಿಕ್ಕಿಲ್ಲ, ಇನ್ನೂ ಇವರ ಅದೃಷ್ಟವೇ ತೆರೆದಿಲ್ಲ. ಎಲ್ಲಿಯವರೆಗೆ
ತಂದೆಯನ್ನು ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವಾತ್ಮರು ಬಿಂದು ಸಮಾನರಾಗಿದ್ದೇವೆ, ಶಿವ
ತಂದೆಯೂ ಬಿಂದುವಾಗಿದ್ದಾರೆ, ಅವರನ್ನು ನೆನಪು ಮಾಡಬೇಕೆಂಬುದು ಅರ್ಥವಾಗುವುದಿಲ್ಲ. ಇದನ್ನು ಅರ್ಥ
ಮಾಡಿಕೊಂಡು ಯಾವಾಗ ನೆನಪು ಮಾಡುವರೋ ಆಗ ವಿಕರ್ಮ ವಿನಾಶವಾಗುವುದು. ಇಲ್ಲವೆಂದರೆ ಇದಷ್ಟೇ ಕಂಡು
ಬರುತ್ತದೆ, ಹೀಗೆ ಕಾಣುತ್ತದೆ, ಹಾಗೆ ಕಾಣುತ್ತದೆ...... ಅದಕ್ಕೆ ಮಾಯೆಯ ವಿಘ್ನವೆಂದು
ಹೇಳಲಾಗುತ್ತದೆ. ಈಗಂತೂ ತಂದೆಯು ಸಿಕ್ಕಿದ್ದಾರೆ ಎಂಬ ಖುಷಿಯಲ್ಲಿದ್ದೀರಿ. ತಂದೆಯು ತಿಳಿಸುತ್ತಾರೆ
- ಕೃಷ್ಣನ ಸಾಕ್ಷಾತ್ಕಾರ ಮಾಡಿ ಬಹಳ ಖುಷಿಯಲ್ಲಿ ನರ್ತನ ಮಾಡುತ್ತಾರೆ ಅದರಿಂದ ಯಾವುದೇ
ಸದ್ಗತಿಯಾಗುವುದಿಲ್ಲ. ಈ ಸಾಕ್ಷಾತ್ಕಾರವಂತೂ ಬಹಳ ಸಹಜವಾಗಿ ಆಗಿ ಬಿಡುತ್ತದೆ. ಒಂದುವೇಳೆ ಚೆನ್ನಾಗಿ
ಓದಲಿಲ್ಲವೆಂದರೆ ಪ್ರಜೆಗಳಲ್ಲಿ ಹೊರಟು ಹೋಗುವರು. ಸಾಕ್ಷಾತ್ಕಾರದ ಲಾಭವು ಸಿಗಬೇಕಲ್ಲವೆ.
ಭಕ್ತಿಮಾರ್ಗದಲ್ಲಿ ಬಹಳ ಪರಿಶ್ರಮ ಪಟ್ಟಾಗ ಸಾಕ್ಷಾತ್ಕಾರವಾಗುತ್ತದೆ. ಇಲ್ಲಿ ಸ್ವಲ್ಪ ಪರಿಶ್ರಮ
ಪಟ್ಟರೂ ಸಾಕ್ಷಾತ್ಕಾರವಾಗುತ್ತದೆ ಆದರೆ ಸಾಕ್ಷಾತ್ಕಾರದಿಂದ ಲಾಭವೇನೂ ಇಲ್ಲ. ಕೃಷ್ಣ ಪುರಿಯಲ್ಲಿ
ಸಾಧಾರಣ ಪ್ರಜೆಯಾಗಿ ಜನ್ಮ ಪಡೆಯುತ್ತಾರೆ. ಈಗ ನೀವು ಮಕ್ಕಳೂ ತಿಳಿದುಕೊಂಡಿದ್ದೀರಿ – ಶಿವ ತಂದೆಯು
ನಮಗೆ ಈ ಜ್ಞಾನವನ್ನು ತಿಳಿಸುತ್ತಿದ್ದಾರೆ. ಖಂಡಿತ ಪವಿತ್ರರಾಗಬೇಕೆಂಬುದು ತಂದೆಯ ಆದೇಶವಾಗಿದೆ.
ಆದರೆ ಕೆಲವರು ಪವಿತ್ರರಾಗಿರುವುದಿಲ್ಲ. ಕೆಲವೊಮ್ಮೆ ಪತಿತರೂ ಸಹ ಮುಚ್ಚಿಟ್ಟುಕೊಂಡು ಇಲ್ಲಿಗೆ ಬಂದು
ಬಿಡುತ್ತಾರೆ. ಅಂತಹವರು ತಮ್ಮದೇ ನಷ್ಟವನ್ನುಂಟು ಮಾಡಿಕೊಳ್ಳುತ್ತಾರೆ, ತನಗೇ ಮೋಸ
ಮಾಡಿಕೊಳ್ಳುತ್ತಾರೆ. ತಂದೆಗೆ ಮೋಸ ಮಾಡುವ ಮಾತಿಲ್ಲ. ತಂದೆಯೊಂದಿಗೆ ಮೋಸ ಮಾಡಿ ಯಾವುದಾದರೂ ಹಣ
ತೆಗೆದುಕೊಳ್ಳಬೇಕೆ? ಶಿವ ತಂದೆಯ ಶ್ರೀಮತದಂತೆ ನಿಯಮಾನುಸಾರವಾಗಿ ನಡೆಯಲಿಲ್ಲವೆಂದರೆ ಅವರ
ಗತಿಯೇನಾಗುವುದು? ಅಂತಹವರ ಅದೃಷ್ಟದಲ್ಲಿಲ್ಲವೆಂದು ತಿಳಿಯಲಾಗುತ್ತದೆ. ಓದದಿದ್ದರೆ ಇನ್ನೂ
ಅನ್ಯರಿಗೆ ದುಃಖ ಕೊಡುತ್ತಿರುತ್ತಾರೆ ಅಂದಾಗ ಮೊದಲನೆಯದಾಗಿ ಬಹಳ ಶಿಕ್ಷೆಗಳನ್ನನುಭವಿಸಬೇಕಾಗುವುದು,
ಇನ್ನೊಂದು ಪದವಿಯೂ ಭ್ರಷ್ಟವಾಗುವುದು. ಆದ್ದರಿಂದ ಯಾವುದೇ ಕಾಯಿದೆಗೆ ವಿರುದ್ಧವಾದ ಕೆಲಸವನ್ನು
ಮಾಡಬಾರದು. ನಿಮ್ಮ ಚಲನೆ ಸರಿಯಿಲ್ಲವೆಂದು ತಂದೆಯಂತೂ ತಿಳಿಸುತ್ತಾರಲ್ಲವೆ. ತಂದೆಯು ಸಂಪಾದನೆ
ಮಾಡುವ ಮಾರ್ಗವನ್ನಂತೂ ತಿಳಿಸುತ್ತಾರೆ ಆದರೆ ಯಾರಾದರೂ ಮಾಡಲಿ, ಮಾಡದೇ ಇರಲಿ ಅದು ಅವರ ಅದೃಷ್ಟ.
ಶಿಕ್ಷೆಗಳನ್ನನುಭವಿಸಿ ಶಾಂತಿಧಾಮಕ್ಕೆ ಹೋಗಲೇಬೇಕಾಗಿದೆ. ಪದವಿಯೂ ಭ್ರಷ್ಟವಾಗುವುದು, ಏನೂ
ಸಿಗುವುದಿಲ್ಲ. ಅನೇಕರು ಬರುತ್ತಾರೆ ಆದರೆ ಇಲ್ಲಂತೂ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವ
ಮಾತಾಗಿದೆ. ಬಾಬಾ, ನಾವಂತೂ ಸ್ವರ್ಗದ ಸೂರ್ಯವಂಶಿ ರಾಜ್ಯ ಪದವಿಯನ್ನು ಪಡೆಯುತ್ತೇವೆಂದು ಮಕ್ಕಳು
ಹೇಳುತ್ತಾರೆ. ಇದು ರಾಜಯೋಗವಲ್ಲವೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರಲ್ಲವೆ.
ಉತ್ತೀರ್ಣರಾಗುವವರಿಗೆ ವಿದ್ಯಾರ್ಥಿ ವೇತನ ಸಿಗುತ್ತದೆ. ಯಾರು ವಿದ್ಯಾರ್ಥಿ ವೇತನ ಪಡೆದಿದ್ದಾರೆಯೋ
ಅವರದೇ ಈ ಮಾಲೆ ಮಾಡಲ್ಪಟ್ಟಿದೆ. ಯಾರು ಎಷ್ಟೆಷ್ಟು ತೇರ್ಗಡೆಯಾಗುವರೋ ಆ ರೀತಿಯಲ್ಲಿ ವಿದ್ಯಾರ್ಥಿ
ವೇತನ ಸಿಗುವುದು. ಈ ಮಾಲೆಯು ಮಾಡಲ್ಪಟ್ಟಿದೆ. ವಿದ್ಯಾರ್ಥಿ ವೇತನವನ್ನು ಪಡೆಯುವವರ
ವೃದ್ಧಿಯಾಗುತ್ತಾ ಆಗುತ್ತಾ ಸಾವಿರಾರು ಮಂದಿ ಆಗಿ ಬಿಡುತ್ತಾರೆ ರಾಜ್ಯ ಪದವಿಯೇ ವಿದ್ಯಾರ್ಥಿ
ವೇತನವಾಗಿದೆ. ಯಾರು ಚೆನ್ನಾಗಿ ವಿದ್ಯೆಯನ್ನು ಓದುವರೋ ಅವರು ಗುಪ್ತವಾಗಿರಲು ಸಾಧ್ಯವಿಲ್ಲ. ಅನೇಕ
ಹೊಸ-ಹೊಸ ಮಕ್ಕಳೂ ಸಹ ಹಳಬರಿಗಿಂತಲೂ ಮುಂದೆ ಹೊರಟು ಹೋಗುತ್ತಾರೆ. ಹೇಗೆ ನೋಡಿ, ಕೆಲವರು ಕನ್ಯೆಯರು
ಬರುತ್ತಾರೆ, ಹೇಳುತ್ತಾರೆ - ನಮಗೆ ಈ ಜ್ಞಾನವು ಬಹಳ ಇಷ್ಟವಾಗುತ್ತದೆ, ನಾವು ಪ್ರತಿಜ್ಞೆ
ಮಾಡುತ್ತೇವೆ, ಈ ಲೌಕಿಕ ವಿದ್ಯೆಯು ಮುಗಿದ ನಂತರ ಮತ್ತೆ ಈ ವಿದ್ಯೆಯಲ್ಲಿ ತೊಡಗುತ್ತೇವೆ. ನಮ್ಮ
ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳುತ್ತೇವೆ. ನಾವು ನಮ್ಮ ಸತ್ಯ ಸಂಪಾದನೆ ಮಾಡಿ 21 ಜನ್ಮಗಳಿಗಾಗಿ
ಆಸ್ತಿಯನ್ನು ಪಡೆಯುತ್ತೇವೆ. ಇದನ್ನು ಕೇಳಿ ಆಗ ಎಷ್ಟೊಂದು ಖುಷಿಯಾಗುತ್ತದೆ! ತಿಳಿದುಕೊಂಡಿದ್ದಾರೆ,
ಈ ಆಸ್ತಿಯನ್ನು ಈಗ ಪಡೆಯದಿದ್ದರೆ ಮತ್ತೆಂದಿಗೂ ಪಡೆಯಲು ಸಾಧ್ಯವಿಲ್ಲ. ವಿದ್ಯಾಭ್ಯಾಸದ
ಆಸಕ್ತಿಯಿರುತ್ತದೆಯಲ್ಲವೆ. ಕೆಲವರಿಗಂತೂ ತಿಳಿದುಕೊಳ್ಳುವ ಆಸಕ್ತಿಯೇ ಇರುವುದಿಲ್ಲ. ಹೊಸಬರಿಗೆ
ಎಷ್ಟು ಉತ್ಸಾಹವಿದೆಯೋ ಅಷ್ಟು ಹಳಬರಿಗೂ ಇಲ್ಲ, ಆಶ್ಚರ್ಯವಲ್ಲವೆ. ಅಂತಹವರಿಗೆ ಹೇಳಲಾಗುತ್ತದೆ -
ಡ್ರಾಮಾನುಸಾರ ಅವರ ಅದೃಷದಲ್ಲಿಲ್ಲವೆಂದರೆ ಭಗವಂತನಂತು ಏನು ಮಾಡುವರು! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತನ್ನ
ಬಲಹೀನತೆಗಳನ್ನು ಮುಚ್ಚಿಡುವುದೂ ಸಹ ಸ್ವಯಂಗೆ ಮೋಸ ಮಾಡಿಕೊಳ್ಳುವುದಾಗಿದೆ ಆದ್ದರಿಂದ ಎಂದೂ ತಮಗೆ
ತಾವು ಮೋಸ ಮಾಡಿಕೊಳ್ಳಬಾರದು.
2. ತನ್ನ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳಲು ನಿಯಮಕ್ಕೆ ವಿರುದ್ಧವಾಗಿ ಯಾವುದೇ ಕೆಲಸ
ಮಾಡಬಾರದು. ವಿದ್ಯೆಯ ಮೇಲೆ ಆಸಕ್ತಿಯನ್ನಿಟ್ಟುಕೊಳ್ಳಬೇಕು. ತನ್ನ ಸಮಾನರನ್ನಾಗಿ ಮಾಡುವ ಸೇವೆ
ಮಾಡಬೇಕಾಗಿದೆ.
ವರದಾನ:
ಪ್ರತಿ ಹೆಜ್ಜೆ
ಆಜ್ಞೆಯಂತೆ ನಡೆದು ಮಾಯೆಯನ್ನು ಬಲಿಹಾರಿ ಮಾಡುವಂತಹ ಸಹಜಯೋಗಿ ಭವ.
ಯಾವ ಮಕ್ಕಳು ಪ್ರತಿ
ಹೆಜ್ಜೆ ಆಜ್ಞೆಯನುಸಾರ ನಡೆಯುತ್ತಾರೆ ಅವರ ಮುಂದೆ ಇಡೀ ವಿಶ್ವ ಬಲಿಹಾರಿಯಾಗುವುದು, ಜೊತೆ-ಜೊತೆಗೆ
ಮಾಯೆಯೂ ಸಹ ತನ್ನ ವಂಶ ಸಹಿತ ಬಲಿಹಾರಿಯಗಿ ಬಿಡುವುದು. ಮೊದಲು ತಂದೆಯ ಮೇಲೆ ಬಲಿಹಾರಿಯಾಗಿ ಬಿಡಿ,
ಆಗ ಮಾಯೆ ನಿಮ್ಮ ಮೇಲೆ ಬಲಿಹಾರಿಯಾಗುವುದು ಮತ್ತು ತಮ್ಮ ಶ್ರೇಷ್ಠ ಸ್ವಮಾನದಲ್ಲಿರುತ್ತಾ ಎಲ್ಲಾ
ಆಜ್ಞೆಗಳ ಮೇಲೆ ನಡೆಯುತ್ತಿದ್ದಾಗ ಜನ್ಮ-ಜನ್ಮಾಂತರದ ಕಷ್ಟಗಳಿಂದ ಬಿಡಿಸಿಕೊಂಡು ಬಿಡುವಿರಿ. ಈಗ
ಸಹಜಯೋಗಿ ಮತ್ತು ಭವಿಷ್ಯದಲ್ಲಿ ಸಹಜ ಜೀವನವಾಗುವುದು. ಅಂದಾಗ ಇಂತಹ ಸಹಜ ಜೀವನವನ್ನು ಮಾಡಿಕೊಳ್ಳಿ.
ಸ್ಲೋಗನ್:
ಸ್ವಯಂನ ಪರಿವರ್ತನೆಯಿಂದ
ಅನ್ಯ ಆತ್ಮಗಳ ಪರಿವರ್ತನೆ ಮಾಡುವುದೇ ಜೀವದಾನ ನೀಡುವುದಾಗಿದೆ.