23.03.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಸತ್ಯವಾದ ರಕ್ಷಣಾ ಸೈನಿಕರಾಗಿ ಎಲ್ಲರನ್ನೂ ಈ ಪಾಪದ ಪ್ರಪಂಚದಿಂದ ಪುಣ್ಯದ ಪ್ರಪಂಚಕ್ಕೆ ಕರೆದುಕೊಂಡು
ಹೋಗಬೇಕಾಗಿದೆ, ಎಲ್ಲರ ಮುಳುಗಿರುವ ದೋಣಿಯನ್ನು ಪಾರು ಮಾಡಬೇಕಾಗಿದೆ”
ಪ್ರಶ್ನೆ:
ಯಾವ ನಿಶ್ಚಯವು
ಪ್ರತಿಯೊಬ್ಬ ಮಗುವಿನ ಬುದ್ಧಿಯಲ್ಲಿ ನಂಬರ್ವಾರ್ ಕುಳಿತುಕೊಳ್ಳುತ್ತದೆ?
ಉತ್ತರ:
ಪತಿತ-ಪಾವನ ನಮ್ಮ ಅತೀ ಪ್ರಿಯ ತಂದೆಯು ನಮಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಿದ್ದಾರೆ, ಈ
ನಿಶ್ಚಯವು ಪ್ರತಿಯೊಬ್ಬರ ಬುದ್ಧಿಯಲ್ಲಿ ನಂಬರ್ವಾರ್ ಕುಳಿತುಕೊಳ್ಳುತ್ತದೆ. ಒಂದುವೇಳೆ ಯಾರಿಗಾದರೂ
ಪೂಣ೯ ನಿಶ್ಚಯವಾಗಿ ಬಿಟ್ಟರೂ ಸಹ ಮಾಯೆಯು ಸನ್ಮುಖದಲ್ಲಿ ನಿಂತಿದೆ. ತಂದೆಯನ್ನು ಮರೆತು ಹೋಗುತ್ತಾರೆ,
ಅನುತ್ತೀರ್ಣರಾಗಿ ಬಿಡುತ್ತಾರೆ. ಯಾರಿಗೆ ನಿಶ್ಚಯವು ಕುಳಿತುಕೊಳ್ಳುವುದೋ ಅವರು ಪಾವನರಾಗುವ
ಪುರುಷಾರ್ಥದಲ್ಲಿ ತೊಡಗುತ್ತಾರೆ. ಈಗ ಮನೆಗೆ ಹೋಗಬೇಕೆಂದು ಬುದ್ದಿಯಲ್ಲಿರುತ್ತದೆ.
ಓಂ ಶಾಂತಿ.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಸುಪ್ರಭಾತ. ಮಕ್ಕಳು ಇದನ್ನಂತೂ
ತಿಳಿದುಕೊಂಡಿದ್ದೀರಿ - ಸತ್ಯಯುಗದಲ್ಲಿ ಸದಾ ಗುಡ್ ಮಾರ್ನಿಂಗ್, ಗುಡ್ ಡೇ, ಗುಡ್ ಎವರಿತಿಂಗ್,
ಗುಡ್ನೈಟ್, ಎಲ್ಲವೂ ಶುಭವೇ ಶುಭವಾಗಿರುತ್ತದೆ. ಇಲ್ಲಿ ಗುಡ್ ಮಾರ್ನಿಂಗ್, ಗುಡ್ನೈಟ್ ಯಾವುದೂ
ಇಲ್ಲ. ಎಲ್ಲದಕ್ಕಿಂತ ಅಶುಭವಾಗಿದೆ ರಾತ್ರಿ ಅಂದಮೇಲೆ ಎಲ್ಲದಕ್ಕಿಂತ ಒಳ್ಳೆಯದು ಯಾವುದು? ಮುಂಜಾನೆ.
ಇದಕ್ಕೆ ಅಮೃತವೇಳೆಯೆಂದೂ ಹೇಳಲಾಗುತ್ತದೆ. ನಿಮ್ಮದು ಪ್ರತೀ ಸಮಯ ಶುಭವೇ ಶುಭವಾಗಿದೆ. ಮಕ್ಕಳಿಗೆ
ತಿಳಿದಿದೆ - ಈ ಸಮಯದಲ್ಲಿ ನಾವು ಯೋಗ-ಯೋಗೇಶ್ವರ ಮತ್ತು ಯೋಗ-ಯೋಗೇಶ್ವರಿ ಆಗಿದ್ದೇವೆ. ಈಶ್ವರನು
ನಿಮ್ಮ ತಂದೆಯಾಗಿದ್ದಾರೆ, ಅವರೇ ಬಂದು ಯೋಗವನ್ನು ಕಲಿಸುತ್ತಾರೆ ಅರ್ಥಾತ್ ಒಬ್ಬ ಈಶ್ವರನೊಂದಿಗೆ
ನೀವು ಮಕ್ಕಳ ಯೋಗವಿದೆ. ನೀವು ಮಕ್ಕಳಿಗೆ ಯೋಗೇಶ್ವರನ ನಂತರ ಜ್ಞಾನ-ಜ್ಞಾನೇಶ್ವರನ ಬಗ್ಗೆ
ಅರ್ಥವಾಗಿದೆ. ಯೋಗ ಹಿಡಿಸಿತೆಂದರೆ ಮತ್ತೆ ತಂದೆಯು ನಿಮಗೆ ಇಡೀ ಚಕ್ರದ ಜ್ಞಾನವನ್ನು ತಿಳಿಸುತ್ತಾರೆ.
ಇದರಿಂದ ನೀವೂ ಸಹ ಜ್ಞಾನ-ಜ್ಞಾನೇಶ್ವರರಾಗುತ್ತೀರಿ. ಈಶ್ವರ ತಂದೆಯು ಬಂದು ಮಕ್ಕಳಿಗೆ ಜ್ಞಾನ ಮತ್ತು
ಯೋಗವನ್ನು ಕಲಿಸುತ್ತಾರೆ. ಯಾವ ಈಶ್ವರ? ನಿರಾಕಾರ ತಂದೆ. ಈಗ ಬುದ್ದಿಗೆ ಕೆಲಸ ಕೊಡಿ - ಗುರುಗಳದು
ಅನೇಕ ಮತಗಳಿವೆ, ಕೆಲವರು ಕೃಷ್ಣನೊಂದಿಗೆ ಯೋಗವನ್ನಿಡಿ ಎಂದು ಹೇಳಿ ಅವರ ಚಿತ್ರವನ್ನೂ ಕೊಡುತ್ತಾರೆ,
ಕೆಲವರು ಸಾಯಿಬಾಬಾ, ಕೆಲವರು ಮಹರ್ಷಿ ಬಾಬಾ, ಇನ್ನೂ ಕೆಲವರು ಮುಸಲ್ಮಾನರ ಮತ್ತು ಕೆಲವರು ಪಾರಸಿಗಳ,
ಹೀಗೆ ಎಲ್ಲರನ್ನೂ ಬಾಬಾ, ಬಾಬಾ ಎಂದು ಹೇಳುತ್ತಿರುತ್ತಾರೆ. ಎಲ್ಲರೂ ಭಗವಂತರೆ ಎಂದು ಹೇಳುತ್ತಾರೆ.
ಈಗ ನಿಮಗೆ ತಿಳಿದಿದೆ - ಮನುಷ್ಯರು ಭಗವಂತನಾಗಲು ಸಾಧ್ಯವಿಲ್ಲ. ವಾಸ್ತವದಲ್ಲಿ ಈ
ಲಕ್ಷ್ಮೀ-ನಾರಾಯಣರಿಗೂ ಸಹ ಭಗವಾನ್-ಭಗವತಿಯೆಂದು ಹೇಳಲು ಸಾಧ್ಯವಿಲ್ಲ. ಭಗವಂತನು ಒಬ್ಬ
ನಿರಾಕಾರನಾಗಿದ್ದಾರೆ. ಅವರು ನೀವೆಲ್ಲಾ ಆತ್ಮರ ತಂದೆಯಾಗಿದ್ದಾರೆ. ಅವರಿಗೆ ಶಿವ ತಂದೆಯೆಂದು
ಹೇಳಲಾಗುತ್ತದೆ. ನೀವೇ ಜನ್ಮ-ಜನ್ಮಾಂತರದಿಂದ ಸತ್ಸಂಗವನ್ನು ಮಾಡುತ್ತಾ ಬಂದಿದ್ದೀರಿ. ಯಾರಾದರೂ
ಸನ್ಯಾಸಿ, ಸಾಧು, ಪಂಡಿತ ಮೊದಲಾದವರು ಖಂಡಿತ ಇರುತ್ತಾರೆ. ಇವರು ನಮ್ಮ ಗುರುವಾಗಿದ್ದಾರೆ, ನಮಗೆ
ಕಥೆಯನ್ನು ಹೇಳುತ್ತಿದ್ದಾರೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಸತ್ಯಯುಗದಲ್ಲಿ ಕಥೆ
ಇತ್ಯಾದಿಗಳೇನೂ ಇರುವುದಿಲ್ಲ. ತಂದೆಯು ತಿಳಿಸುತ್ತಾರೆ - ಕೇವಲ ಭಗವಂತ ಅಥವಾ ಈಶ್ವರನೆಂದು
ಹೇಳಿದಾಗ ಆ ರಸವು ಬರುವುದಿಲ್ಲ, ಅವರು ತಂದೆಯಾಗಿದ್ದಾರೆ. ಆದ್ದರಿಂದ ಬಾಬಾ ಎಂದು ಹೇಳಿದಾಗ
ಸಂಬಂಧವು ಸ್ನೇಹಪೂರ್ಣವಾಗಿ ಬಿಡುತ್ತದೆ. ನೀವು ತಿಳಿದುಕೊಂಡಿದ್ದೀರಿ, ನಾವು ಮಮ್ಮಾ ಬಾಬಾರವರ
ಮಕ್ಕಳಾಗಿದ್ದೇವೆ. ಅವರಿಂದ ನಮಗೆ ಸ್ವರ್ಗದ ಸುಖ ಸಿಗುತ್ತದೆ. ನಾವು ಈ ಸತ್ಸಂಗದಿಂದ ಮನುಷ್ಯನಿಂದ
ದೇವತೆ, ನರಕವಾಸಿಗಳಿಂದ ಸ್ವರ್ಗವಾಸಿಗಳೆಂದು ತಿಳಿಯುವಂತಹ ಇಂತಹ ಸತ್ಸಂಗವು ಬೇರೆ ಯಾವುದೂ ಇರಲು
ಸಾಧ್ಯವಿಲ್ಲ. ಈಗ ನಿಮ್ಮದು ಸತ್ಯ ತಂದೆಯ ಜೊತೆ ಸಂಗವಿದೆ ಮತ್ತೆಲ್ಲರದೂ ಅಸತ್ಯವಂತರ ಜೊತೆ
ಸಂಗವೆಂದು ಹೇಳಲಾಗುತ್ತದೆ. ಸತ್ಸಂಗವು ಮೇಲೆತ್ತುವುದು, ಕೆಟ್ಟ ಸಂಗವು ಬೀಳಿಸುವುದೆಂದು ಗಾಯನವಿದೆ.
ಆದ್ದರಿಂದ ತಂದೆಯು ತಿಳಿಸುತ್ತಾರೆ -ಆತ್ಮಾಭಿಮಾನಿಯಾಗಿರಿ, ನಾನು ನೀವು ಮಕ್ಕಳು ಅರ್ಥಾತ್
ಆತ್ಮರಿಗೇ ಕಲಿಸುತ್ತೇನೆ. ಈ ಆತ್ಮಿಕ ಜ್ಞಾನವನ್ನು ಆತ್ಮಗಳ ಪ್ರತಿ ಪರಮಾತ್ಮನೇ ಬಂದು
ತಿಳಿಸುತ್ತಾರೆ. ಉಳಿದೆಲ್ಲವೂ ಭಕ್ತಿಮಾರ್ಗವಾಗಿದೆ. ಅದು ಜ್ಞಾನಮಾರ್ಗವಲ್ಲ. ತಂದೆಯು
ತಿಳಿಸುತ್ತಾರೆ - ನಾನು ಎಲ್ಲಾ ವೇದ ಶಾಸ್ತ್ರಗಳನ್ನು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು
ಅರಿತುಕೊಂಡಿದ್ದೇನೆ. ನಾನು ಅಥಾರಿಟಿಯಾಗಿದ್ದೇನೆ. ಆ ಮನುಷ್ಯರು ಭಕ್ತಿಮಾರ್ಗದ
ಅಥಾರಿಟಿಯಾಗಿದ್ದಾರೆ. ಅನೇಕ ಶಾಸ್ತ್ರ ಮೊದಲಾದುವುಗಳನ್ನು ಓದುತ್ತಾರೆ. ಆದ್ದರಿಂದ ಅವರಿಗೆ
ಶಾಸ್ತ್ರಗಳ ಅಥಾರಿಟಿಯೆಂದು ಹೇಳುತ್ತಾರೆ. ನಿಮಗೆ ತಂದೆಯು ಬಂದು ಸತ್ಯವನ್ನು ತಿಳಿಸುತ್ತಾರೆ.
ನೀವೀಗ ತಿಳಿದುಕೊಂಡಿದ್ದೀರಿ – ಸತ್ಯ ಸಂಗವು ಮೇಲೆತ್ತುವುದು, ಕೆಟ್ಟ ಸಂಗವು ಮುಳುಗಿಸುವುದು. ಈಗ
ತಂದೆಯು ನೀವು ಮಕ್ಕಳ ಮೂಲಕ ಭಾರತವನ್ನು ರಕ್ಷಣೆ ಮಾಡುತ್ತಿದ್ದಾರೆ. ನೀವು ಆತ್ಮೀಕ ರಕ್ಷಣಾ
ಸೈನಿಕರಾಗಿದ್ದೀರಿ. ತಂದೆಯು ತಿಳಿಸುತ್ತಾರೆ - ಯಾವ ಭಾರತವು ಸ್ವರ್ಗವಾಗಿತ್ತೋ ಅದು ಈಗ ನರಕವಾಗಿದೆ
ಅರ್ಥಾತ್ ಮುಳುಗಿದೆ ಅಂದರೆ ಅದೇನೂ ಸ್ಥೂಲವಾಗಿ ಸಾಗರದ ಕೆಳಗಡೆಯಿಲ್ಲ. ನೀವು ಸತೋಪ್ರಧಾನರಿಂದ
ತಮೋಪ್ರಧಾನರಾಗಿದ್ದೀರಿ. ಸತ್ಯ-ತ್ರೇತಾ ಯುಗವು ಸತೋಪ್ರಧಾನವಾಗಿದೆ. ಇದು ದೊಡ್ಡ ಹಡಗು(ಸ್ಟೀಮರ್)
ಆಗಿದೆ ನೀವೀಗ ಹಡಗಿನಲ್ಲಿ ಕುಳಿತಿದ್ದೀರಿ. ಇದು ಪಾಪದ ನಗರವಾಗಿದೆ ಏಕೆಂದರೆ ಇಲ್ಲಿ ಎಲ್ಲರೂ
ಪಾಪಾತ್ಮರಿದ್ದಾರೆ, ವಾಸ್ತವದಲ್ಲಿ ಗುರು ಒಬ್ಬರೇ ಆಗಿದ್ದಾರೆ, ಅವರನ್ನು ಯಾರೂ ತಿಳಿದುಕೊಂಡಿಲ್ಲ.
ಯಾವಾಗಲೂ ಓ ಗಾಡ್ ಫಾದರ್ ಎಂದು ಹೇಳುತ್ತಾರೆ. ಗಾಡ್ ಫಾದರ್ಕಮ್ ಪ್ರಿಸಪ್ಟರ್ ಹೇಳುವುದಿಲ್ಲ. ಕೇವಲ
ಫಾದರ್ ಎಂದು ಹೇಳುತ್ತಾರೆ. ಅವರು ಪತಿತ-ಪಾವನನಾಗಿದ್ದಾರೆ. ಅಂದಮೇಲೆ ಗುರುವೂ ಆದರು. ಸರ್ವರ
ಪತಿತ-ಪಾವನ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ಈ ಪತಿತ ಪ್ರಪಂಚದಲ್ಲಿ ಯಾವುದೆ ಮನುಷ್ಯರು
ಸದ್ಗತಿದಾತ ಅಥವಾ ಪತಿತ-ಪಾವನರಾಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಇಲ್ಲಿ ಎಷ್ಟೊಂದು
ಕಲುಷಿತ ಭ್ರಷ್ಟಾಚಾರವಿದೆ. ನಾನೀಗ ಕನ್ಯೆಯರು, ಮಾತೆಯರ ಮೂಲಕ ಎಲ್ಲರ ಉದ್ಧಾರ ಮಾಡಬೇಕಾಗಿದೆ.
ನೀವೆಲ್ಲಾ ಬ್ರಹ್ಮಾಕುಮಾರ-ಕುಮಾರಿಯರು ಸಹೋದರ-ಸಹೋದರಿಯರಾದಿರಿ. ಇಲ್ಲವೆಂದರೆ ತಾತನ ಆಸ್ತಿಯು ಹೇಗೆ
ಸಿಗುವುದು! ತಾತನಿಂದ 21 ಜನ್ಮಗಳ ಅರ್ಥಾತ್ ಸ್ವರ್ಗದ ರಾಜಧಾನಿಯ ಆಸ್ತಿಯು ಸಿಗುತ್ತದೆ. ಎಷ್ಟು
ದೊಡ್ಡ ಸಂಪಾದನೆಯಾಗಿದೆ! ಇದು ಸತ್ಯ ತಂದೆಯ ಮೂಲಕ ಸತ್ಯ ಸಂಪಾದನೆಯಾಗಿದೆ. ತಂದೆ ತಂದೆಯೂ
ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಪ್ರತ್ಯಕ್ಷದಲ್ಲಿ ಮಾಡಿ ತೋರಿಸುವವರಾಗಿದ್ದಾರೆ.
ಗುರುವು ಮರಣ ಹೊಂದಿದರೆ ಶಿಷ್ಯನಿಗೆ ಅವರ ಸಿಂಹಾಸನ ಸಿಗುವುದು ಎಂದಲ್ಲ. ಅವರಂತೂ ದೈಹಿಕ
ಗುರುಗಳಾದರು. ಇವರು ಆತ್ಮಿಕ ಗುರುವಾಗಿದ್ದಾರೆ. ಈ ಮಾತನ್ನು ಬಹಳ ಚೆನ್ನಾಗಿ
ತಿಳಿದುಕೊಳ್ಳಬೇಕಾಗಿದೆ, ಇವು ಹೊಸ ಮಾತುಗಳಾಗಿವೆ. ನೀವು ತಿಳಿದುಕೊಂಡಿದ್ದೀರಿ - ನಮಗೆ ಯಾವುದೇ
ಮನುಷ್ಯರು ಓದಿಸುವುದಿಲ್ಲ, ನಮಗೆ ಶಿವ ತಂದೆ, ಜ್ಞಾನ ಸಾಗರ, ಪತಿತ-ಪಾವನನು ಈ ಶರೀರದ ಮೂಲಕ
ಓದಿಸುತ್ತಾರೆ. ನಿಮ್ಮ ಬುದ್ದಿಯು ಶಿವ ತಂದೆಯ ಕಡೆ ಇದೆ. ಆ ಸತ್ಸಂಗಗಳಲ್ಲಿ ಬುದ್ಧಿಯು ಮನುಷ್ಯರ
ಕಡೆ ಹೋಗುತ್ತದೆ. ಅದೆಲ್ಲವೂ ಭಕ್ತಿಮಾರ್ಗವಾಗಿದೆ. ನೀವು ಮಾತಾಪಿತಾ ನಾನು ನಿಮ್ಮ ಬಾಲಕನೆಂದು ನೀವು
ಹಾಡುತ್ತೀರಿ. ಇಲ್ಲಂತೂ ಒಬ್ಬರೇ ತಂದೆಯಲ್ಲವೆ. ಆದರೆ ತಂದೆಯು ತಿಳಿಸುತ್ತಾರೆ - ನಾನು ಬಂದು
ನಿಮ್ಮನ್ನು ಹೇಗೆ ನನ್ನವರನ್ನಾಗಿ ಮಾಡಿಕೊಳ್ಳಲಿ! ನಾನು ನಿಮ್ಮ ಪಿತನಾಗಿದ್ದೇನೆ. ಆದ್ದರಿಂದ ಇವರ
ತನುವಿನ ಆಧಾರ ತೆಗೆದುಕೊಳ್ಳುತ್ತೇನೆ ಅಂದಾಗ ಇವರು (ಬ್ರಹ್ಮಾ) ನನ್ನ ಸ್ತ್ರೀಯೂ ಆಗಿದ್ದಾರೆ ಮತ್ತು
ಮಗನೂ ಆಗಿದ್ದಾರೆ. ಇವರ ಮೂಲಕ ಶಿವ ತಂದೆಯು ಮಕ್ಕಳನ್ನು ದತ್ತು ಮಾಡಿಕೊಳ್ಳುವ ಕಾರಣ ಇವರು ದೊಡ್ಡ
ತಾಯಿಯೂ ಆದರು, ಇವರಿಗೆ ಯಾರೂ ತಾಯಿಯಿಲ್ಲ, ಸರಸ್ವತಿಗೆ ಜಗದಂಬೆ ಎಂದು ಹೇಳಲಾಗುತ್ತದೆ. ನಿಮ್ಮ
ಪಾಲನೆಗಾಗಿ ಅವರನ್ನು ನಿಗಧಿ ಪಡಿಸಿದ್ದಾರೆ. ಸರಸ್ವತಿಯು ಜ್ಞಾನ ಜ್ಞಾನೇಶ್ವರಿಯಾಗಿದ್ದಾರೆ. ಇವರು
ಚಿಕ್ಕ ತಾಯಿಯಾಗಿದ್ದಾರೆ. ಇವು ಬಹಳ ಗುಹ್ಯ ಮಾತುಗಳಾಗಿವೆ. ನೀವೀಗ ಈ ಗುಹ್ಯ ವಿದ್ಯೆಯನ್ನು
ಓದುತ್ತಿದ್ದೀರಿ. ನೀವು ಗೌರವಪೂರ್ಣವಾಗಿ ತೇರ್ಗಡೆಯಾಗಬೇಕಾಗಿದೆ. ಈ ಲಕ್ಷ್ಮೀ-ನಾರಾಯಣರು
ಗೌರವಪೂರ್ಣವಾಗಿ ತೇರ್ಗಡೆಯಾಗಿದ್ದಾರೆ. ಅವರಿಗೆ ಎಲ್ಲರಿಗಿಂತ ದೊಡ್ಡ ಸ್ಕಾಲರ್ಶಿಪ್ ಸಿಕ್ಕಿದೆ,
ಯಾವುದೇ ಶಿಕ್ಷೆಯನ್ನು ಅನುಭವಿಸಬೇಕಾಗಲಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಎಷ್ಟು ಸಾಧ್ಯವೋ
ಅಷ್ಟು ನೆನಪು ಮಾಡಿ, ಇದಕ್ಕೆ ಭಾರತದ ಪ್ರಾಚೀನ ಯೋಗವೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ
- ನಿಮಗೆ ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ. ನಾನು ನಿಮಗೆ ರಾಜಯೋಗವನ್ನು
ಕಲಿಸಿದೆನು ಅದರಿಂದ ನೀವು ಪ್ರಾಲಬ್ದವನ್ನು ಪಡೆದಿರಿ ನಂತರ ಜ್ಞಾನವು ಸಮಾಪ್ತಿಯಾಯಿತು ಅಂದಮೇಲೆ
ಇದು ಪರಂಪರೆಯಿಂದ ನಡೆದು ಬರಲು ಹೇಗೆ ಸಾಧ್ಯ! ಸತ್ಯಯುಗದಲ್ಲಿ ಯಾವುದೇ ಶಾಸ್ತ್ರಗಳಿರುವುದಿಲ್ಲ.
ಅನ್ಯ ಧರ್ಮದವರಾದ ಇಸ್ಲಾಮಿಗಳು, ಬೌದ್ಧಿ ಮೊದಲಾದವರ ಜ್ಞಾನವು ಪ್ರಾಯಃಲೋಪವಾಗುವುದಿಲ್ಲ. ಅವರದೂ
ಪರಂಪರೆ ನಡೆಯುತ್ತದೆ. ಎಲ್ಲರಿಗೂ ತಿಳಿದಿದೆ ಆದರೆ ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಯಾವ
ಜ್ಞಾನವನ್ನು ತಿಳಿಸುತ್ತೇನೆಯೋ ಅದನ್ನು ಯಾರೂ ತಿಳಿದುಕೊಂಡಿಲ್ಲ. ಭಾರತವು ದುಃಖಿಯಾಗಿ ಬಿಡುತ್ತದೆ.
ನಾನು ಬಂದು ಅದನ್ನು ಸದಾ ಸುಖಿಯನ್ನಾಗಿ ಮಾಡುತ್ತೇನೆ.
ತಂದೆಯು ತಿಳಿಸುತ್ತಾರೆ
- ನಾನು ಸಾಧಾರಣ ತನುವಿನಲ್ಲಿ ಕುಳಿತಿದ್ದೇನೆ. ನಿಮ್ಮ ಬುದ್ಧಿಯೋಗವು ತಂದೆಯ ಜೊತೆಯಲ್ಲಿಯೇ ಇರಲಿ,
ಆತ್ಮಗಳ ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆ. ಅವರು ಸರ್ವ ಮಕ್ಕಳ ತಂದೆಯಾಗಿದ್ದಾರೆ, ಅಂದಮೇಲೆ
ಅವರಿಗೆ ಎಲ್ಲರೂ ಮಕ್ಕಳಾದರು. ಎಲ್ಲಾ ಆತ್ಮರು ಈ ಸಮಯದಲ್ಲಿ ಪತಿತರಾಗಿದ್ದಾರೆ, ನಾನೀಗ
ಪ್ರತ್ಯಕ್ಷವಾಗಿ ಬಂದಿದ್ದೇನೆ. ವಿನಾಶವು ಸಮ್ಮುಖದಲ್ಲಿ ನಿಂತಿದೆ. ನಿಮಗೆ ತಿಳಿದಿದೆ - ಇದಕ್ಕೆ
ಬೆಂಕಿ ಬೀಳುವುದು. ಎಲ್ಲರ ಶರೀರಗಳು ಸಮಾಪ್ತಿಯಾಗುತ್ತವೆ. ಎಲ್ಲಾ ಆತ್ಮರು ಹಿಂತಿರುಗಿ ಮನೆಗೆ
ಹೋಗಬೇಕಾಗಿದೆ. ಬ್ರಹ್ಮ್ ದಲ್ಲಿ ಲೀನವಾಗುತ್ತಾರೆ ಅಥವಾ ಜ್ಯೋತಿಯಲ್ಲಿ ಸಮಾವೇಶವಾಗುತ್ತಾರೆ
ಎಂದಲ್ಲ. ಬ್ರಹ್ಮ ಸಮಾಜಿಗಳು ಜ್ಯೋತಿಯನ್ನು ಬೆಳಗಿಸುತ್ತಾರೆ, ಅದಕ್ಕೆ ಬ್ರಹ್ಮ ಮಂದಿರವೆಂದು
ಹೇಳಲಾಗುತ್ತದೆ. ವಾಸ್ತವದಲ್ಲಿ ಬ್ರಹ್ಮ್ ಮಹಾತತ್ವವಾಗಿದೆ, ಅಲ್ಲಿ ಎಲ್ಲಾ ಆತ್ಮರು ಇರುತ್ತಾರೆ.
ನಮ್ಮ ಮೊದಲ ಮಂದಿರವು ಅದಾಗಿದೆ. ಅಲ್ಲಿ ಪವಿತ್ರ ಆತ್ಮರಿರುತ್ತಾರೆ, ಈ ಮಾತುಗಳನ್ನು ಯಾವುದೇ
ಮನುಷ್ಯರು ತಿಳಿದುಕೊಂಡಿಲ್ಲ. ಜ್ಞಾನಸಾಗರ ತಂದೆಯು ಕುಳಿತು ನೀವು ಮಕ್ಕಳಿಗೆ ತಿಳಿಸುತ್ತಾರೆ -
ನೀವೀಗ ಜ್ಞಾನ-ಜ್ಞಾನೇಶ್ವರರಾಗಿದ್ದೀರಿ ನಂತರ ರಾಜ-ರಾಜೇಶ್ವರರಾಗುತ್ತೀರಿ. ನಿಮ್ಮ ಬುದ್ಧಿಯಲ್ಲಿದೆ
- ಪತಿತ-ಪಾವನ ಅತೀ ಪ್ರಿಯ ತಂದೆಯು ಬಂದು ನಮಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಿದ್ದಾರೆ. ಕೆಲವರ
ಬುದ್ಧಿಯಲ್ಲಿ ಇದೂ ಸಹ ಕುಳಿತುಕೊಳ್ಳುವುದಿಲ್ಲ. ಎಷ್ಟೊಂದು ಮಂದಿ ಕುಳಿತ್ತಿದ್ದಾರೆ, ಇವರಲ್ಲಿ
ಯಾರು 100% ನಿಶ್ಚಯ ಬುದ್ದಿಯವರಿಲ್ಲ. ಕೆಲವರು 80%, ಕೆಲವರು 50% ಇದ್ದಾರೆ. ಕೆಲವರು ಅದೂ ಇಲ್ಲ.
ಅವರು ಸಂಪೂರ್ಣ ಕನಿಷ್ಟರಾದರು. ನಂಬರ್ವಾರ್ ಅವಶ್ಯವಾಗಿ ಇರುತ್ತಾರೆ. ಬಹಳ ಮಂದಿ ಮಕ್ಕಳಿಗೆ
ನಿಶ್ಚಯವಿಲ್ಲ, ನಿಶ್ಚಯವಾಗಬೇಕೆಂದು ಪ್ರಯತ್ನ ಪಡುತ್ತಾರೆ. ಒಂದುವೇಳೆ ನಿಶ್ಚಯವಾಗಲೂಬಹುದು ಆದರೆ
ಮಾಯೆಯು ಕಠಿಣವಾಗಿದೆ. ತಂದೆಯನ್ನು ಮರೆತು ಹೋಗುತ್ತಾರೆ, ಈ ಬ್ರಹ್ಮಾರವರೂ ಸಹ ಹೇಳುತ್ತಾರೆ - ನಾನು
ಪೂರ್ಣ ಭಕ್ತನಾಗಿದ್ದೆನು. 63 ಜನ್ಮಗಳವರೆಗೆ ಭಕ್ತಿ ಮಾಡಿದ್ದೇನೆ, ತತ್ ತ್ವಂ. ನೀವೂ ಸಹ 63
ಜನ್ಮಗಳು ಭಕ್ತಿ ಮಾಡಿದ್ದೀರಿ, 21 ಜನ್ಮಗಳವರೆಗೆ ಸುಖ ಪಡೆದಿರಿ ನಂತರ ಭಕ್ತರಾಗಿದ್ದೀರಿ. ಭಕ್ತಿಯ
ನಂತರ ವೈರಾಗ್ಯ, ಸನ್ಯಾಸಿಗಳೂ ಸಹ ಈ ಶಬ್ದವನ್ನು ಎಲ್ಲರೂ ಹೇಳುತ್ತಾರೆ - ಜ್ಞಾನ, ಭಕ್ತಿ ಮತ್ತು
ವೈರಾಗ್ಯ. ಅವರಿಗೆ ಗೃಹಸ್ಥದಿಂದ ವೈರಾಗ್ಯ ಬರುತ್ತದೆ, ಅದಕ್ಕೆ ಹದ್ದಿನ ವೈರಾಗ್ಯವೆಂದು
ಹೇಳಲಾಗುತ್ತದೆ, ನಿಮ್ಮದು ಬೇಹದ್ದಿನ ವೈರಾಗ್ಯವಾಗಿದೆ. ಸನ್ಯಾಸಿಗಳು ಮನೆ ಮಠವನ್ನು ಬಿಟ್ಟು
ಕಾಡಿಗೆ ಹೊರಟು ಹೋಗುತ್ತಿದ್ದರು, ಈಗಂತೂ ಯಾರೂ ಕಾಡಿನಲ್ಲಿಲ್ಲ. ಎಲ್ಲಾ ಕುಟೀರಗಳು ಖಾಲಿ ಬಿದ್ದಿವೆ.
ಏಕೆಂದರೆ ಮೊದಲು ಸತೋಪ್ರಧಾನರಾಗಿದ್ದರು, ಈಗ ಅವರು ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಈಗ ಅವರಲ್ಲಿ
ಯಾವುದೇ ಬಲವಿಲ್ಲ, ಲಕ್ಷ್ಮಿ - ನಾರಾಯಣರ ರಾಜಧಾನಿಯಲ್ಲಿ ಯಾವ ಬಲವಿತ್ತೋ ಅದು ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ನೋಡಿ, ಎಲ್ಲಿ ಬಂದು ತಲುಪಿದ್ದಾರೆ! ಏನೂ
ಶಕ್ತಿಯಿಲ್ಲ, ಇಲ್ಲಿಯ ಸರ್ಕಾರವೂ ಸಹ ಹೇಳುತ್ತದೆ - ನಾವು ಧರ್ಮವನ್ನು ನಂಬುವುದಿಲ್ಲ.
ಧರ್ಮದಲ್ಲಿಯೇ ಬಹಳ ನಷ್ಟವಿದೆ. ಹೊಡೆದಾಡುತ್ತಾ - ಜಗಳವಾಡುತ್ತಿರುತ್ತಾರೆ ಮತ್ತೆ ಎಲ್ಲಾ ಧರ್ಮದವರು
ಸೇರಿ ಒಂದಾಗಲಿ ಎಂದು ಸಮ್ಮೇಳನಗಳನ್ನು ಮಾಡುತ್ತಿರುತ್ತಾರೆ. ಆದರೆ ನೀವು ಕೇಳಿರಿ – ಎಲ್ಲರೂ ಸೇರಿ
ಒಂದಾಗಲು ಹೇಗೆ ಸಾಧ್ಯ! ಈಗಂತೂ ಎಲ್ಲರೂ ಹಿಂತಿರುಗಿ ಹೋಗುವವರಿದ್ದಾರೆ. ತಂದೆಯು ಬಂದಿದ್ದಾರೆ - ಈ
ಪ್ರಪಂಚವು ಈಗ ಸ್ಮಶಾನವಾಗಲಿದೆ. ಬಾಕಿ ಇದಂತೂ ವಿಭಿನ್ನ ವೃಕ್ಷವಾಗಿದೆ ಅಂದಮೇಲೆ ಇದು ಹೇಗೆ
ಒಂದಾಗುವುದು ಎಂಬುದೇನನ್ನೂ ತಿಳಿದುಕೊಂಡಿಲ್ಲ. ಭಾರತದಲ್ಲಿ ಒಂದು ಧರ್ಮವಿತ್ತು, ಅವರಿಗೆ ಅದ್ವೈತ
ಮತದ ದೇವತೆಗಳೆಂದು ಹೇಳಲಾಗುತ್ತಿತ್ತು. ದ್ವೈತ ಎಂದರೆ ದೈತ್ಯರು. ತಂದೆಯು ಹೇಳುತ್ತಾರೆ - ನಿಮ್ಮ
ಈ ಧರ್ಮವೇ ಬಹಳ ಸುಖ ಕೊಡುವಂತದ್ದಾಗಿದೆ. ನೀವು ತಿಳಿದುಕೊಂಡಿದ್ದೀರಿ - ಪುನರ್ಜನ್ಮವನ್ನು
ತೆಗೆದುಕೊಂಡು ನಾವು ಪುನಃ 84 ಜನ್ಮಗಳನ್ನು ಭೋಗಿಸಬೇಕಾಗಿದೆ. ಈ ನಿಶ್ಚಯವಿರಲಿ - ನಾವೇ 84
ಜನ್ಮಗಳನ್ನು ತೆಗೆದುಕೊಂಡಿದ್ದೇವೆ, ನಾವೇ ಹೋಗಬೇಕಾಗಿದೆ ಮತ್ತೆ ಬರಬೇಕಾಗಿದೆ. ತಂದೆಯು
ಭಾರತವಾಸಿಗಳಿಗೆ ತಿಳಿಸುತ್ತಾರೆ - ನೀವು 84 ಜನ್ಮಗಳನ್ನು ಪೂರ್ಣ ಮಾಡಿದ್ದೀರಿ. ಈಗ ನಿಮ್ಮದು ಇದು
ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಕೇವಲ ಒಬ್ಬರಿಗೇ ಹೇಳುತ್ತಿಲ್ಲ, ಪಾಂಡವ ಸೈನ್ಯಕ್ಕೆ
ತಿಳಿಸುತ್ತಾರೆ - ನೀವು ಪಂಡರಾಗಿದ್ದೀರಿ. ನೀವು ಆತ್ಮಿಕ ಯಾತ್ರೆಯನ್ನು ಕಲಿಸುತ್ತೀರಿ. ಆದ್ದರಿಂದ
ಪಾಂಡವ ಸೇನೆ ಎಂದು ಹೇಳಲಾಗುತ್ತದೆ. ಈಗ ರಾಜ್ಯವು ಕೌರವರಿಗೂ ಇಲ್ಲ, ಪಾಂಡವರಿಗೂ ಇಲ್ಲ. ಅವರೂ
ಪ್ರಜೆಗಳು, ನೀವೂ ಪ್ರಜೆಗಳಾಗಿದ್ದೀರಿ. ಕೌರವ, ಪಾಂಡವರು ಸಹೋದರ-ಸಹೋದರರಾಗಿದ್ದಾರೆ. ಪಾಂಡವರ ಕಡೆ
ಪರಮಪಿತ ಪರಮಾತ್ಮನಿದ್ದಾರೆಂದು ಹೇಳುತ್ತಾರೆ. ತಂದೆಯೇ ಬಂದು ಮಾಯೆಯ ಮೇಲೆ ಜಯ ಗಳಿಸುವುದನ್ನು
ಕಲಿಸುತ್ತಾರೆ. ನೀವು ಆದಿ ಸನಾತನ ದೇವಿ-ದೇವತಾ ಧರ್ಮದವರು ಅಹಿಂಸಕರಾಗಿದ್ದೀರಿ. ಅಹಿಂಸಾ ಪರಮೋ
ಧರ್ಮ. ಮುಖ್ಯ ಮಾತೇನೆಂದರೆ ಕಾಮ ಕಟಾರಿಯನ್ನು ನಡೆಸಬಾರದು. ಭಾರತವಾಸಿಗಳು ತಿಳಿಯುತ್ತಾರೆ -
ಗೋವಿನ ಹತ್ಯೆ ಮಾಡಬಾರದು. ಇದೇ ಅಹಿಂಸೆಯಾಗಿದೆ ಎಂದು ಆದರೆ ತಂದೆಯು ತಿಳಿಸುತ್ತಾರೆ -
ಕಾಮಕಟಾರಿಯನ್ನೂ ನಡೆಸಬೇಡಿ, ಇದಕ್ಕೆ ಅತಿದೊಡ್ಡ ಹಿಂಸೆಯೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ
ಕಾಮ ಕಟಾರಿಯಾಗಲಿ, ಜಗಳ-ಕಲಹಗಳಾಗಲಿ ನಡೆಯುವುದಿಲ್ಲ. ಇಲ್ಲಂತೂ ಎರಡೂ ಇದೆ. ಕಾಮ ಕಟಾರಿಯೇ
ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ನೀವು ಏಣಿಯನ್ನಿಳಿಯುತ್ತೀರಿ. ನೀವು ಭಾರತವಾಸಿಗಳೇ 84
ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈ ಲಕ್ಷ್ಮಿ-ನಾರಾಯಣರ ರಾಜ್ಯವಿತ್ತು ನಂತರ ಪುನರ್ಜನ್ಮವನ್ನು
ಎಂದು ತೆಗೆದುಕೊಳ್ಳುತ್ತೀರಿ. ಒಂದೊಂದು ಜನ್ಮವು ಒಂದೊಂದು ಮೆಟ್ಟಿಲು ಆಗಿದೆ. ಇಲ್ಲಿಂದ ನೀವು
ಒಮ್ಮೆಲೆ ಮೇಲೆ ಜಿಗಿಯುತ್ತೀರಿ, ಮೆಟ್ಟಿಲುಗಳನ್ನು ಇಳಿಯುವುದರಲ್ಲಿ ನಿಮಗೆ 5000 ವರ್ಷಗಳೂ
ಹಿಡಿಸುತ್ತವೆ ಮತ್ತೆ ಇಲ್ಲಿಂದ ಸೆಕೆಂಡಿನಲ್ಲಿ ಮೇಲೇರುತ್ತೀರಿ. ಸೆಕೆಂಡಿನಲ್ಲಿ
ಜೀವನ್ಮುಕ್ತಿಯನ್ನು ಯಾರು ಕೊಡುವರು? ತಂದೆ. ಈಗ ಎಲ್ಲರೂ ಒಮ್ಮೆಲೆ ನೆಲ ತಲುಪಿದ್ದಾರೆ. ಈಗ ತಂದೆಯು
ತಿಳಿಸುತ್ತಾರೆ - ಕೇವಲ ನನ್ನನ್ನು ನೆನಪು ಮಾಡಿ, ಇದನ್ನು ಬುದ್ದಿಯಲ್ಲಿ ನೆನಪಿಟ್ಟುಕೊಳ್ಳಿ - ಈಗ
ನಾಟಕವು ಪೂರ್ಣವಾಯಿತು, ನಾವು ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ನಾವು ನಮ್ಮ ಮನೆಯನ್ನೂ ಮತ್ತು
ತಂದೆಯನ್ನೂ ನೆನಪು ಮಾಡಬೇಕಾಗಿದೆ. ಮೊದಲು ತಂದೆಯನ್ನು ನೆನಪು ಮಾಡಿ, ಅವರೇ ನಿಮಗೆ ಮನೆಯ
ಮಾರ್ಗವನ್ನು ತಿಳಿಸುತ್ತಾರೆ. ತಂದೆಯ ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ.
ಬ್ರಹ್ಮತತ್ವವನ್ನು ನೆನಪು ಮಾಡುವುದರಿಂದ ಒಂದು ಪಾಪವೂ ಕಳೆಯುವುದಿಲ್ಲ. ಪತಿತ-ಪಾವನನು ಪರಮಾತ್ಮನೇ
ಆಗಿದ್ದಾರೆ. ಅವರು ಹೇಗೆ ಪಾವನರನ್ನಾಗಿ ಮಾಡುತ್ತಾರೆ ಎಂಬುದನ್ನು ಪ್ರಪಂಚದಲ್ಲಿ ಯಾರೂ
ತಿಳಿದುಕೊಂಡಿಲ್ಲ. ತಂದೆಯು ಬಂದು ಖಂಡಿತವಾಗಿಯೂ ಸ್ವರ್ಗದ ಸ್ಥಾಪನೆ ಮಾಡಬೇಕಾಗಿದೆ. ತಂದೆಯು
ಬಂದಿದ್ದಾರೆ ಆದ್ದರಿಂದಲೇ ನೀವು ಮಕ್ಕಳು ಜಯಂತಿಯನ್ನು ಆಚರಿಸುತ್ತೀರಿ. ಯಾವಾಗ ಬಂದರು, ಈ
ತಿಥಿ-ತಾರೀಖಿನಂದು ಬಂದರೆಂದು ಹೇಳಲು ಸಾಧ್ಯವಿಲ್ಲ. ಶಿವ ತಂದೆಯು ಯಾವಾಗ ಬಂದರೆಂದು ಹೇಗೆ ಹೇಳಲು
ಸಾಧ್ಯ? ಬಹಳ ಸಾಕ್ಷಾತ್ಕಾರಗಳಾಗುತ್ತವೆ. ಮೊದಲು ನಾವು ಸರ್ವವ್ಯಾಪಿಯೆಂದು ತಿಳಿಯುತ್ತಿದ್ದೆವು
ಅಥವಾ ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಿದ್ದೆವು. ಈಗ ಯಥಾರ್ಥವು ಅರ್ಥವಾಗಿದೆ. ತಂದೆಯು
ದಿನ-ಪ್ರತಿದಿನ ಗುಹ್ಯ ಮಾತುಗಳನ್ನು ತಿಳಿಸುತ್ತಾ ಇರುತ್ತಾರೆ. ನೀವು ಸಾಧಾರಣ ಮಕ್ಕಳು ಎಷ್ಟು
ದೊಡ್ಡ ಜ್ಞಾನವನ್ನು ಓದುತ್ತಿದ್ದೀರಿ, ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಗೌರವಪೂರ್ಣವಾಗಿ ತೇರ್ಗಡೆಯಾಗಲು ಶಿಕ್ಷೆಗಳಿಂದ ಮುಕ್ತರಾಗುವ ಪುರುಷಾರ್ಥ ಮಾಡಬೇಕಾಗಿದೆ.
ನೆನಪಿನಲ್ಲಿರುವುದರಿಂದಲೇ ಸ್ಕಾಲರ್ಶಿಪ್ ತೆಗೆದುಕೊಳ್ಳಲು ಅಧಿಕಾರಿಗಳಾಗುವಿರಿ.
2. ಸತ್ಯ-ಸತ್ಯ
ಪಾಂಡವರಾಗಿ ಎಲ್ಲರಿಗೆ ಆತ್ಮಿಕ ಯಾತ್ರೆಯನ್ನು ಮಾಡಿಸಬೇಕಾಗಿದೆ. ಯಾವುದೇ ಪ್ರಕಾರದ ಹಿಂಸೆ
ಮಾಡಬಾರದು.
ವರದಾನ:
ಮಾಸ್ಟರ್ ಸರ್ವ
ಶಕ್ತಿವಾನ್ ಎಂಬ ಸ್ಮೃತಿಯ ಮುಖಾಂತರ ಮಾಯಾಜೀತ್ ಸೋ ಜಗತ್ಜೀತ್, ವಿಜಯೀ ಭವ.
ಯಾವ ಮಕ್ಕಳು ಮಾಯೆ ಏಕೆ
ಬಂತು ಗೊತ್ತಿಲ್ಲ ಎಂದು ಬಹಳ ಯೋಚಿಸುತ್ತಾರೆ, ಆಗ ಮಾಯೆಯೂ ಸಹ ಗಾಬರಿಯಾಗಿರುವವರನ್ನು ನೋಡಿ ಇನ್ನೂ
ಯುದ್ಧ ಮಾಡುತ್ತದೆ. ಆದ್ದರಿಂದ ಯೋಚನೆ ಮಾಡುವ ಬದಲಾಗಿ ಸದಾ ಮಾಸ್ಟರ್ ಸರ್ವಶಕ್ತಿವಾನ್ ಎಂಬ
ಸ್ಮೃತಿಯಲ್ಲಿದ್ದಾಗ - ವಿಜಯಿಯಾಗಿ ಬಿಡುವಿರಿ. ವಿಜಯಿ ರತ್ನ ಮಾಡಲು ನಿಮಿತ್ತವೂ ಸಹ ಈ ಮಾಯೆಯ
ಸಣ್ಣ-ಪುಟ್ಟ ರೂಪವಾಗಿದೆ. ಆದ್ದರಿಂದ ಸ್ವಯಂನ್ನು ಮಾಯಾಜೀತ್, ಜಗತ್ ಜೀತ್ ಎಂದು ತಿಳಿದು ಮಾಯೆಯ
ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳಿ, ದುರ್ಬಲರಾಗಬೇಡಿ. ಸವಾಲು ಹಾಕುವವರಾಗಿ.
ಸ್ಲೋಗನ್:
ಪ್ರತಿಯೊಂದು ಆತ್ಮನಿಂದ
ಆಶೀರ್ವಾದವನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾದರೆ ಅಪರಿಮಿತವಾದ ಶುಭ ಭಾವನೆ ಮತ್ತು ಶುಭ ಕಾಮನೆಯಲ್ಲಿ
ಸ್ಥಿತರಾಗಿರಿ.