09.03.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಮೌನವಾಗಿರುವುದೂ ಸಹ ಬಹಳ ದೊಡ್ಡ ಗುಣವಾಗಿದೆ, ನೀವು ಮೌನವಾಗಿದ್ದು ತಂದೆಯನ್ನು ನೆನಪು ಮಾಡುತ್ತಾ ಇರಿ ಆಗ ಬಹಳ ಸಂಪಾದನೆಯನ್ನು ಜಮಾ ಮಾಡಿಕೊಳ್ಳುವಿರಿ''

ಪ್ರಶ್ನೆ:
ರಾಜಧಾನಿಯು ಯಾವಾಗ ತಯಾರಾಗುವುದು? ನಿಮ್ಮ ಪುರುಷಾರ್ಥದ ಆಧಾರವೇನಾಗಿದೆ?

ಉತ್ತರ:
ಯಾವಾಗ ನೀವು ತಯಾರಾಗಿ ಬಿಡುತ್ತೀರೋ ಆಗ ರಾಜಧಾನಿಯು ತಯಾರಾಗುವುದು. ಪುರುಷಾರ್ಥದ ಆಧಾರವು ಪದವಿಯಾಗಿದೆ. ಕಲ್ಪ-ಕಲ್ಪವೂ ನೀವು ಯಾವ ಪದವಿಯನ್ನು ಪಡೆದಿದ್ದೀರೋ ಅದರನುಸಾರವೇ ನಿಮ್ಮ ಪದವಿಯು ನಡೆಯುತ್ತಿರುತ್ತದೆ. ಆದರೆ ಯಾವಾಗಲೂ ಪುರುಷಾರ್ಥವನ್ನೇ ಮುಂದಿಡಲಾಗುತ್ತದೆ. ಪುರುಷಾರ್ಥವಿಲ್ಲದೆ ಪ್ರಾಲಬ್ಧವು ಸಿಗಲು ಸಾಧ್ಯವಿಲ್ಲ, ಆದ್ದರಿಂದ ಪುರುಷಾರ್ಥ ಮಾಡುತ್ತಾ ಇರಿ.

ಓಂ ಶಾಂತಿ.
ಮೊಟ್ಟ ಮೊದಲು ಮಕ್ಕಳಿಗೆ ಸಾವಧಾನ ಸಿಗುತ್ತದೆ - ತಂದೆಯನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ. ಮನ್ಮನಾಭವ. ಈ ಶಬ್ಧವನ್ನೂ ಸಹ ವ್ಯಾಸರು ಬರೆದಿದ್ದಾರೆ. ಸಂಸ್ಕೃತದಲ್ಲಂತೂ ತಂದೆಯು ತಿಳಿಸಲಿಲ್ಲ. ತಂದೆಯು ಹಿಂದಿ ಭಾಷೆಯಲ್ಲಿಯೇ ತಿಳಿಸುತ್ತಾರೆ. ಮಕ್ಕಳೇ, ತಂದೆಯನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ. ಹೇ ಮಕ್ಕಳೇ, ತಂದೆಯಾದ ನನ್ನನ್ನು ನೆನಪು ಮಾಡಿ ಎಂಬುದು ಎಷ್ಟು ಸಹಜವಾದ ಶಬ್ಧವಾಗಿದೆ. ಲೌಕಿಕ ತಂದೆಯು ಹೇ ಮಕ್ಕಳೇ, ನನ್ನನ್ನು ನೆನಪು ಮಾಡಿ ಎಂದು ಹೇಳುವುದಿಲ್ಲ. ಇದು ಹೊಸ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನಿರಾಕಾರ ತಂದೆಯನ್ನು ನೆನಪು ಮಾಡಿ. ಇದೂ ಸಹ ಮಕ್ಕಳಿಗೆ ತಿಳಿದಿದೆ, ಆತ್ಮಿಕ ತಂದೆಯು ನಾವು ಆತ್ಮಗಳೊಂದಿಗೆ ಮಾತನಾಡುತ್ತಾರೆ. ಪದೇ-ಪದೇ ಮಕ್ಕಳಿಗೆ ತಂದೆಯನ್ನು ನೆನಪು ಮಾಡಿ ಎಂದು ಹೇಳುವುದು ಶೋಭಿಸುವುದಿಲ್ಲ, ಏಕೆಂದರೆ ಮಕ್ಕಳಿಗೆ ಇದು ತಿಳಿದಿದೆ – ಆತ್ಮಿಕ ತಂದೆಯನ್ನು ನೆನಪು ಮಾಡುವುದು ನಮ್ಮ ಕರ್ತವ್ಯವಾಗಿದೆ ಆಗಲೇ ವಿಕರ್ಮಗಳು ವಿನಾಶವಾಗುತ್ತವೆ. ಮಕ್ಕಳು ನಿರಂತರ ನೆನಪು ಮಾಡುವ ಪ್ರಯತ್ನ ಪಡಬೇಕಾಗಿದೆ. ಈ ಸಮಯದಲ್ಲಿ ಯಾರೂ ನಿರಂತರ ನೆನಪು ಮಾಡಲು ಸಾಧ್ಯವಿಲ್ಲ. ಸಮಯ ಹಿಡಿಸುತ್ತದೆ. ಈ ತಂದೆಯು ತಿಳಿಸುತ್ತಾರೆ - ನಾನೂ ಸಹ ನಿರಂತರ ನೆನಪು ಮಾಡುವುದಿಲ್ಲ, ಆ ಸ್ಥಿತಿಯು ಕೊನೆಯಲ್ಲಿಯೇ ಬರುವುದು. ನೀವು ಮಕ್ಕಳು ಮೊಟ್ಟ ಮೊದಲನೆಯದಾಗಿ ತಂದೆಯನ್ನು ನೆನಪು ಮಾಡುವ ಪುರುಷಾರ್ಥವನ್ನೇ ಮಾಡಬೇಕಾಗಿದೆ. ಶಿವ ತಂದೆಯಿಂದ ಆಸ್ತಿಯು ಸಿಗುತ್ತದೆ. ಇದು ಭಾರತವಾಸಿಗಳದೇ ಮಾತಾಗಿದೆ. ಇಲ್ಲಿ ದೈವೀ ರಾಜಧಾನಿಯು ಸ್ಥಾಪನೆಯಾಗುತ್ತದೆ. ಅನ್ಯ ಧರ್ಮದವರಾದರೆ ಧರ್ಮ ಸ್ಥಾಪನೆ ಮಾಡುವುದರಲ್ಲಿ ಅವರಿಗೆ ಕಷ್ಟವಾಗುವುದಿಲ್ಲ. ಅವರು ಬಂದ ಕೂಡಲೇ ಆ ಧರ್ಮದ ಆತ್ಮಗಳು ಬರತೊಡಗುತ್ತಾರೆ. ಇಲ್ಲಿ ಯಾರು ದೇವಿ-ದೇವತಾ ಧರ್ಮದವರು ಇದ್ದಾರೆಯೋ ಅವರನ್ನು ಜ್ಞಾನದಿಂದ ಮೇಲೆತ್ತಬೇಕಾಗುತ್ತದೆ, ಪರಿಶ್ರಮವಾಗುತ್ತದೆ. ತಂದೆಯು ಸಂಗಮದಲ್ಲಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ ಎಂಬುದು ಗೀತಾ, ಭಾಗವತ ಶಾಸ್ತ್ರಗಳಲ್ಲಿಲ್ಲ. ಪಾಂಡವರು ಪರ್ವತಗಳ ಮೇಲೆ ಹೋಗಿ ಕರಗಿ ಹೋದರು, ಪ್ರಳಯವಾಯಿತು ಇತ್ಯಾದಿ, ಇತ್ಯಾದಿ.... ಎಂದು ಗೀತೆಯಲ್ಲಿ ಬರೆದಿದ್ದಾರೆ. ವಾಸ್ತವದಲ್ಲಿ ಈ ಮಾತಿಲ್ಲ. ನೀವೀಗ ಭವಿಷ್ಯ 21 ಜನ್ಮಗಳಿಗಾಗಿ ಓದುತ್ತಿದ್ದೀರಿ. ಅನ್ಯ ಶಾಲೆಗಳಲ್ಲಿ ಇಲ್ಲಿಗಾಗಿಯೇ ಓದಿಸುತ್ತಾರೆ. ಸಾಧು-ಸಂತ ಮೊದಲಾದವರು ಭವಿಷ್ಯಕ್ಕಾಗಿ ಓದಿಸುತ್ತಾರೆ ಏಕೆಂದರೆ ಅವರು ತಿಳಿದುಕೊಳ್ಳುತ್ತಾರೆ. ನಾವು ಶರೀರವನ್ನು ಬಿಟ್ಟು ಮುಕ್ತಿಧಾಮಕ್ಕೆ ಹೊರಟು ಹೋಗುತ್ತೇವೆ, ಬ್ರಹ್ಮ್ತತ್ವದಲ್ಲಿ ಲೀನವಾಗುತ್ತೇವೆ. ಆತ್ಮವು ಪರಮಾತ್ಮನಲ್ಲಿ ಸೇರಿ ಹೋಗುವುದು ಎಂದು ತಿಳಿಯುತ್ತಾರೆ, ಆದ್ದರಿಂದ ಅವರದೂ ಸಹ ಭವಿಷ್ಯಕ್ಕಾಗಿ ಆಯಿತು ಆದರೆ ಭವಿಷ್ಯಕ್ಕಾಗಿ ಓದಿಸುವವರು ಒಬ್ಬರೇ ಆತ್ಮಿಕ ತಂದೆಯಾಗಿದ್ದಾರೆ, ಬೇರೆ ಯಾರೂ ಇಲ್ಲ. ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ ಗಾಯನವೂ ಇದೆ ಆದರೆ ಅದೆಲ್ಲವೂ ಆಯಥಾರ್ಥವಾಗಿ ಬಿಡುತ್ತದೆ. ಯಥಾರ್ಥವಾಗಿ ತಂದೆಯೇ ಬಂದು ತಿಳಿಸುತ್ತಾರೆ. ಅವರೂ ಸಹ ಬ್ರಹ್ಮ್ದಲ್ಲಿ ಲೀನವಾಗುವ ಸಾಧನೆ ಮಾಡುತ್ತಿರುತ್ತಾರೆ ಆದರೆ ಇದು ಅಯಥಾರ್ಥ ಸಾಧನೆಯಾಗಿದೆ. ಯಾರೂ ಲೀನವಾಗುವುದಿಲ್ಲ. ಬ್ರಹ್ಮ್ ಮಹಾತತ್ವವು ಭಗವಂತನಲ್ಲ, ಇದೆಲ್ಲವೂ ತಪ್ಪಾಗಿದೆ. ಅಸತ್ಯ ಖಂಡದಲ್ಲಿ ಎಲ್ಲರೂ ಅಸತ್ಯ ಹೇಳುವವರಿದ್ದಾರೆ, ಸತ್ಯ ಖಂಡದಲ್ಲಿ ಎಲ್ಲರೂ ಸತ್ಯ ಹೇಳುವವರಿರುತ್ತಾರೆ. ನಿಮಗೆ ತಿಳಿದಿದೆ – ಸತ್ಯ ಖಂಡವು ಭಾರತದಲ್ಲಿತ್ತು, ಈಗ ಅಸತ್ಯ ಖಂಡವಾಗಿದೆ. ತಂದೆಯೂ ಸಹ ಭಾರತದಲ್ಲಿಯೇ ಬರುತ್ತಾರೆ. ಶಿವ ಜಯಂತಿಯನ್ನಾಚರಿಸುತ್ತಾರೆ ಆದರೆ ಶಿವನೇ ಬಂದು ಭಾರತವನ್ನು ಸತ್ಯ ಖಂಡವನ್ನಾಗಿ ಮಾಡಿದ್ದಾರೆಂಬುದು ಅವರಿಗೆ ತಿಳಿದಿದೆಯೇ! ಅವರು ಬರುವುದೇ ಇಲ್ಲ, ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಅವರು ತಿಳಿದುಕೊಳ್ಳುತ್ತಾರೆ. ಕೇವಲ ಪತಿತ-ಪಾವನ, ಜ್ಞಾನ ಸಾಗರ ಎಂದು ಯಾವ ಮಹಿಮೆ ಹಾಡುತ್ತಾರೆಯೋ ಅದು ಕೇವಲ ಗಿಳಿ ಪಾಠದಂತೆ ಹೇಳಿ ಬಿಡುತ್ತಾರೆ. ತಂದೆಯೇ ಬಂದು ತಿಳಿಸುತ್ತಾರೆ, ಕೃಷ್ಣ ಜಯಂತಿಯನ್ನಾಚರಿಸುತ್ತಾರೆ, ಗೀತಾ ಜಯಂತಿಯೂ ಇದೆ. ಕೃಷ್ಣನು ಬಂದು ಗೀತೆಯನ್ನು ತಿಳಿಸಿದರೆಂದು ಹೇಳುತ್ತಾರೆ, ಆದರೆ ಶಿವ ಜಯಂತಿಯ ಬಗ್ಗೆ ಶಿವನು ಬಂದು ಏನು ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಹೇಳುತ್ತಾರೆ ಅಂದಮೇಲೆ ಅವರು ಬರುವುದಾದರೂ ಹೇಗೆ? ತಂದೆಯು ತಿಳಿಸುತ್ತಾರೆ - ನಾನೇ ಕುಳಿತು ಮಕ್ಕಳಿಗೆ ತಿಳಿಸಿ ಕೊಡುತ್ತೇನೆ ನಂತರ ಈ ಜ್ಞಾನವು ಪ್ರಾಯಃಲೋಪವಾಗಿ ಬಿಡುತ್ತದೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ಬಂದು ಭಾರತವನ್ನು ಪುನಃ ಸ್ವರ್ಗವನ್ನಾಗಿ ಮಾಡುತ್ತೇನೆ. ಯಾರಾದರೂ ಪತಿತ-ಪಾವನನಿರಬೇಕಲ್ಲವೆ. ಮುಖ್ಯವಾಗಿ ಇದು ಭಾರತದ ಮಾತಾಗಿದೆ. ಭಾರತವೇ ಪತಿತವಾಗಿದೆ, ಪತಿತ-ಪಾವನನನ್ನೂ ಸಹ ಭಾರತದಲ್ಲಿಯೇ ಕರೆಯುತ್ತಾರೆ ಮತ್ತು ವಿಶ್ವದಲ್ಲಿ ರಾವಣ ರಾಜ್ಯ ನಡೆಯುತ್ತಿದೆ, ಬಾಂಬು ಇತ್ಯಾದಿಗಳನ್ನು ತಯಾರಿಸುತ್ತಾರೆ, ಇದರಿಂದ ವಿನಾಶವಾಗುತ್ತದೆ ಎಂಬುದನ್ನೂ ಹೇಳುತ್ತಾರೆ. ತಯಾರಿಗಳೆಲ್ಲವನ್ನೂ ಮಾಡುತ್ತಿದ್ದಾರೆ. ಹೇಗೆ ಅವರಿಗೆ ರಾವಣನು ಪ್ರೇರಕನಾಗಿದ್ದಾನೆ. ರಾವಣ ರಾಜ್ಯವು ಯಾವಾಗ ಸಮಾಪ್ತಿಯಾಗುವುದು? ಕೃಷ್ಣನು ಬಂದಾಗ ಎಂದು ಭಾರತವಾಸಿಗಳು ಹೇಳುತ್ತಾರೆ. ನೀವು ತಿಳಿಸುತ್ತೀರಿ – ಶಿವ ತಂದೆಯು ಬಂದಿದ್ದಾರೆ, ಅವರೇ ಸರ್ವರ ಸದ್ಗತಿದಾತನಾಗಿದ್ದಾರೆ. ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ, ಈ ಶಬ್ಧವನ್ನು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ತಂದೆಯೇ ಹೇಳುತ್ತಾರೆ - ನನ್ನನ್ನು ನೆನಪು ಮಾಡಿದರೆ ತುಕ್ಕು ಬಿಟ್ಟು ಹೋಗುವುದು. ನೀವು ಸತೋಪ್ರಧಾನರಾಗಿದ್ದಿರಿ, ಈಗ ನಿಮ್ಮ ಆತ್ಮದಲ್ಲಿ ತುಕ್ಕು ಹಿಡಿದಿದೆ. ಅದು ನೆನಪಿನಿಂದಲೇ ಬಿಡುವುದು, ಇದಕ್ಕೆ ನೆನಪಿನ ಯಾತ್ರೆಯೆಂದು ಹೇಳಲಾಗುತ್ತದೆ. ನಾನೇ ಪತಿತ-ಪಾವನನಾಗಿದ್ದೇನೆ. ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ, ಇದಕ್ಕೆ ಯೋಗಾಗ್ನಿಯೆಂದು ಹೇಳಲಾಗುತ್ತದೆ. ಚಿನ್ನವನ್ನು ಬೆಂಕಿಯಲ್ಲಿ ಹಾಕಿ ಅದರಲ್ಲಿನ ಲೋಹವನ್ನು ತೆಗೆಯುತ್ತಾರೆ. ಮತ್ತೆ ಚಿನ್ನದಲ್ಲಿ ಲೋಹವನ್ನು ಬೆರೆಸುವುದಕ್ಕಾಗಿಯೇ ಬೆಂಕಿಯಲ್ಲಿ ಹಾಕುತ್ತಾರೆ. ತಂದೆಯು ತಿಳಿಸುತ್ತಾರೆ - ಅದು ಕಾಮ ಚಿತೆಯಾಗಿದೆ, ಇದು ಜ್ಞಾನದ ಚಿತೆಯಾಗಿದೆ. ಈ ಯೋಗಾಗ್ನಿಯಿಂದ ತುಕ್ಕು ಬಿಟ್ಟು ಹೋಗುವುದು ಮತ್ತು ನೀವು ಕೃಷ್ಣ ಪುರಿಯಲ್ಲಿ ಹೋಗಲು ಯೋಗ್ಯರಾಗುತ್ತೀರಿ. ಕೃಷ್ಣ ಜಯಂತಿಯಂದು ಕೃಷ್ಣನನ್ನು ಆಹ್ವಾನ ಮಾಡುತ್ತೀರಿ. ನೀವು ತಿಳಿದುಕೊಂಡಿದ್ದೀರಿ - ಕೃಷ್ಣನಿಗೂ ಸಹ ತಂದೆಯಿಂದ ಆಸ್ತಿಯು ಸಿಗುತ್ತದೆ. ಕೃಷ್ಣನು ಸ್ವರ್ಗದ ಮಾಲೀಕನಾಗಿದ್ದನು. ತಂದೆಯು ಕೃಷ್ಣನಿಗೆ ಈ ಪದವಿಯನ್ನು ಕೊಟ್ಟರು. ರಾಧೆ-ಕೃಷ್ಣರು ಮತ್ತೆ ಲಕ್ಷ್ಮೀ-ನಾರಾಯಣರಾಗುತ್ತಾರೆ. ರಾಧೆ-ಕೃಷ್ಣರ ಜನ್ಮ ದಿನವನ್ನಾಚರಿಸುತ್ತಾರೆ. ಲಕ್ಷ್ಮೀ-ನಾರಾಯಣರ ಬಗ್ಗೆ ಯಾರಿಗೂ ತಿಳಿದಿಲ್ಲ. ಮನುಷ್ಯರು ಬಹಳ ತಬ್ಬಿಬ್ಬಾಗುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಅಂದಮೇಲೆ ಅನ್ಯರಿಗೂ ತಿಳಿಸಬೇಕಾಗಿದೆ. ಮೊಟ್ಟ ಮೊದಲು ಕೇಳಿರಿ - ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಗೀತೆಯಲ್ಲಿ ಯಾವ ಮಾತನ್ನು ಹೇಳಿದ್ದಾರೆಯೋ ಇದನ್ನು ಯಾರು ಹೇಳಿದ್ದಾರೆ? ಕೃಷ್ಣನು ಹೇಳಿದ್ದಾರೆಂದು ಅವರು ತಿಳಿದುಕೊಳ್ಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಭಗವಂತನು ನಿರಾಕಾರನಾಗಿದ್ದಾರೆ, ಅವರಿಂದಲೇ ಶ್ರೇಷ್ಠ ಮತ ಸಿಗುತ್ತದೆ. ಶ್ರೇಷ್ಠಾತಿ ಶ್ರೇಷ್ಠ ಪರಮಪಿತ ಪರಮಾತ್ಮನೇ ಆಗಿದ್ದಾರೆ. ಅವರದೇ ಅವಶ್ಯವಾಗಿ ಶ್ರೇಷ್ಠಾತಿ ಶ್ರೇಷ್ಠ ಮತವಾಯಿತು. ಅವರೊಬ್ಬರ ಶ್ರೀಮತದಿಂದಲೇ ಸರ್ವರ ಸದ್ಗತಿಯಾಗುತ್ತದೆ. ಬ್ರಹ್ಮಾ-ವಿಷ್ಣು-ಶಂಕರರಿಗೂ ಗೀತೆಯ ಭಗವಂತನೆಂದು ಹೇಳಲು ಸಾಧ್ಯವಿಲ್ಲ ಅಂದಮೇಲೆ ಇವರು ಶರೀರಧಾರಿ ಶ್ರೀಕೃಷ್ಣನಿಗೆ ಭಗವಂತನೆಂದು ಹೇಳಿ ಬಿಡುತ್ತಾರೆ, ಇದರಿಂದಲೇ ಖಂಡಿತವಾಗಿ ಎಲ್ಲಿಯೋ ತಪ್ಪಾಗಿದೆ ಎಂಬುದು ಸಿದ್ಧವಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ಮನುಷ್ಯರದು ದೊಡ್ಡ ತಪ್ಪಾಗಿದೆ, ರಾಜಯೋಗವನ್ನು ತಂದೆಯು ಕಲಿಸಿದ್ದಾರೆ, ಅವರೇ ಪತಿತ-ಪಾವನನಾಗಿದ್ದಾರೆ. ಯಾವ ದೊಡ್ಡ-ದೊಡ್ಡ ತಪ್ಪುಗಳಾಗಿವೆಯೋ ಅದರಮೇಲೆ ಒತ್ತುಕೊಟ್ಟು ಹೇಳಬೇಕಾಗಿದೆ. ಮೊದಲನೆಯದು - ಈಶ್ವರನನ್ನು ಸರ್ವವ್ಯಾಪಿ ಎಂದು ಹೇಳಿರುವುದು, ಎರಡನೆಯದು - ಕೃಷ್ಣನಿಗೆ ಗೀತೆಯ ಭಗವಂತನೆಂದು ಹೇಳಿರುವುದು, ಮೂರನೆಯದು - ಕಲ್ಪವನ್ನು ಲಕ್ಷಾಂತರ ವರ್ಷಗಳೆಂದು ಹೇಳುವುದು, ಇವು ಬಹಳ ದೊಡ್ಡ ತಪ್ಪಾಗಿದೆ. ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳಿರಲು ಸಾಧ್ಯವಿಲ್ಲ. ಪರಮಾತ್ಮನು ಸರ್ವವ್ಯಾಪಿಯಾಗುವುದಕ್ಕೂ ಸಾಧ್ಯವಿಲ್ಲ. ಅವರು ಪ್ರೇರಣೆಯಿಂದ ಎಲ್ಲವನ್ನೂ ಮಾಡುತ್ತಾರೆಂದು ಹೇಳುತ್ತಾರೆ ಆದರೆ ಇಲ್ಲ. ಪ್ರೇರಣೆಯಿಂದ ಪಾವನರನ್ನಾಗಿ ಮಾಡಿಬಿಡುವರೇ! ಇಲ್ಲಂತೂ ತಂದೆಯು ಸನ್ಮುಖದಲ್ಲಿ ಕುಳಿತು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ಪ್ರೇರಣೆ ಶಬ್ಧವು ತಪ್ಪಾಗಿದೆ. ಭಲೆ ಶಂಕರನ ಪ್ರೇರಣೆಯಿಂದ ಬಾಂಬುಗಳನ್ನು ತಯಾರಿಸುತ್ತಾರೆಂದು ಹೇಳಲಾಗುತ್ತದೆ ಆದರೆ ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಈ ಯಜ್ಞದಿಂದಲೇ ವಿನಾಶ ಜ್ವಾಲೆಯು ಹೊರಟಿದೆ. ಪ್ರೇರಣೆಯ ಮಾತಿಲ್ಲ. ಇವೆಲ್ಲವೂ ವಿನಾಶಾರ್ಥವಾಗಿ ನಿಮಿತ್ತವಾಗಿದೆ. ಡ್ರಾಮಾದಲ್ಲಿ ನಿಗಧಿಯಾಗಿದೆ. ಎಲ್ಲವೂ ಶಿವ ತಂದೆಯದೇ ಪಾತ್ರವಾಗಿದೆ. ಅವರ ನಂತರ ಬ್ರಹ್ಮಾ-ವಿಷ್ಣು-ಶಂಕರನ ಪಾತ್ರವಿದೆ. ಬ್ರಹ್ಮನು ಬ್ರಾಹ್ಮಣರನ್ನು ರಚಿಸುತ್ತಾರೆ ಅವರೇ ಮತ್ತೆ ವಿಷ್ಣು ಪುರಿಯ ಮಾಲೀಕನಾಗುತ್ತಾರೆ. ನಂತರ 84 ಜನ್ಮಗಳ ಚಕ್ರವನ್ನು ಸುತ್ತಿ ನೀವು ಬಂದು ಬ್ರಹ್ಮಾವಂಶಿಯಾಗಿದ್ದೀರಿ. ಲಕ್ಷ್ಮೀ-ನಾರಾಯಣರೇ ಮತ್ತೆ ಬ್ರಹ್ಮಾ-ಸರಸ್ವತಿಯಾಗಿದ್ದಾರೆ. ಇದನ್ನೂ ತಿಳಿಸಿದ್ದಾರೆ - ಇವರ ಮೂಲಕವೇ ದತ್ತು ಮಾಡಿಕೊಳ್ಳುತ್ತಾರೆ. ಆದ್ದರಿಂದ ಇವರಿಗೆ (ಬ್ರಹ್ಮಾ) ದೊಡ್ಡ ತಾಯಿಯೆಂದು ಹೇಳುತ್ತಾರೆ. ಎಲ್ಲರ ಪಾಲನೆಗಾಗಿ ಮಮ್ಮಾರವರು ನಿಮಿತ್ತರಾಗಿದ್ದಾರೆ. ಕಳಶವನ್ನು ಮಾತೆಯರಿಗೇ ಕೊಡಲಾಗುತ್ತದೆ. ಎಲ್ಲದಕ್ಕಿಂತ ದೊಡ್ಡ ವೀಣೆಯನ್ನು ಸರಸ್ವತಿಗೆ ತೋರಿಸಿದ್ದಾರೆ ಏಕೆಂದರೆ ಎಲ್ಲರಿಗಿಂತ ತೀಕ್ಷ್ಣವಾಗಿದ್ದಾರೆ ಆದರೆ ಸ್ಥೂಲವಾಗಿ ಯಾವುದು ವೀಣೆ ಅಥವಾ ವಾದ್ಯಗಳೇನೂ ಇಲ್ಲ. ವಾಸ್ತವದಲ್ಲಿ ಸರಸ್ವತಿಯ ಜ್ಞಾನ ಮುರುಳಿಯು ಚೆನ್ನಾಗಿರುತ್ತಿತ್ತು. ಅವರ ಮಹಿಮೆಯು ಚೆನ್ನಾಗಿತ್ತು. ಹೆಸರುಗಳಂತೂ ಬಹಳ ಇಟ್ಟು ಬಿಟ್ಟಿದ್ದಾರೆ. ದೇವಿಯರಿಗೆ ಪೂಜೆಯಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ - ನಾವೇ ಇಲ್ಲಿ ಪೂಜ್ಯರಾಗುತ್ತೇವೆ ಮತ್ತೆ ಪೂಜಾರಿಗಳಾಗಿ ನಮ್ಮದೇ ಪೂಜೆ ಮಾಡಿಕೊಳ್ಳುತ್ತೇವೆ. ನಾವೀಗ ಬ್ರಾಹ್ಮಣರಾಗಿದ್ದೇವೆ ಮತ್ತೆ ನಾವೇ ಯಥಾ ರಾಜ-ರಾಣಿ ತಥಾ ಪ್ರಜಾ ಪೂಜ್ಯ ದೇವಿ-ದೇವತೆಗಳಾಗುತ್ತೇವೆ. ದೇವಿಯರಲ್ಲಿ ಯಾರು ಶ್ರೇಷ್ಠ ಪದವಿಯನ್ನು ಪಡೆಯುವರೋ ಅವರಿಗೆ ಬಹಳಷ್ಟು ಮಂದಿರಗಳಾಗುತ್ತವೆ. ಯಾರು ಚೆನ್ನಾಗಿ ಓದಿ-ಓದಿಸುವರೋ ಅವರ ಹೆಸರು ಪ್ರಸಿದ್ಧವಾಗುತ್ತದೆ ಅಂದಾಗ ಈಗ ನಿಮಗೆ ತಿಳಿದಿದೆ - ನಾವೇ ಪೂಜ್ಯ-ಪೂಜಾರಿಗಳಾಗುತ್ತೇವೆ. ಶಿವ ತಂದೆಯಂತೂ ಸದಾ ಪೂಜ್ಯನಾಗಿದ್ದಾರೆ. ಸೂರ್ಯವಂಶಿ ದೇವಿ-ದೇವತೆಗಳು, ಮತ್ತೆ ಪೂಜಾರಿ ಭಕ್ತರಾಗುತ್ತಾರೆ. ತಾವೇ ಪೂಜ್ಯ, ತಾವೇ ಪೂಜಾರಿಯ ಏಣಿಯನ್ನು ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ. ನೀವು ಚಿತ್ರವಿಲ್ಲದೆಯೂ ಅನ್ಯರಿಗೆ ತಿಳಿಸಬಹುದು. ಯಾರು ಇಲ್ಲಿ ಕಲಿತು ಹೋಗುವರೋ ಅವರ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿರುತ್ತದೆ. 84 ಜನ್ಮಗಳ ಏಣಿಯನ್ನು ಭಾರತವಾಸಿಗಳೇ ಹತ್ತುತ್ತಾರೆ ಮತ್ತು ಇಳಿಯುತ್ತಾರೆ. ಅವರದೇ 84 ಜನ್ಮಗಳಿವೆ. ಪೂಜ್ಯರಾಗಿದ್ದೆವು ಮತ್ತೆ ನಾವೇ ಪೂಜಾರಿಗಳಾದೆವು. ಹಮ್ ಸೋ, ಸೋ ಹಮ್ನ ಅರ್ಥವನ್ನು ನೀವು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ. ಆತ್ಮವೇ ಪರಮಾತ್ಮನಾಗಲು ಸಾಧ್ಯವಿಲ್ಲ. ತಂದೆಯು ಹಮ್ ಸೋ ಸೋ ಹಮ್ನ ಅರ್ಥವನ್ನು ತಿಳಿಸಿದ್ದಾರೆ. ನಾವೇ ದೇವತೆ, ನಾವೇ ಕ್ಷತ್ರಿಯ...... ಆದೆವು. ಹಮ್ ಸೋ, ಸೋ ಹಮ್ ಎಂಬುದಕ್ಕೆ ಮತ್ತ್ಯಾವುದೇ ಅರ್ಥವಿಲ್ಲ. ಭಾರತವಾಸಿಗಳೇ ಪೂಜ್ಯ-ಪೂಜಾರಿಗಳಾಗುತ್ತಾರೆ. ಅನ್ಯ ಧರ್ಮದಲ್ಲಿ ಯಾರೂ ಪೂಜ್ಯ-ಪೂಜಾರಿಗಳಾಗುವುದಿಲ್ಲ. ನೀವೇ ಸೂರ್ಯವಂಶಿ-ಚಂದ್ರವಂಶಿಯರಾಗುತ್ತೀರಿ. ಎಷ್ಟು ಒಳ್ಳೆಯ ತಿಳುವಳಿಕೆ ಸಿಕ್ಕಿದೆ - ನಾವೇ ದೇವಿ-ದೇವತೆಗಳಾಗಿದ್ದೆವು. ನಾವಾತ್ಮರು ನಿರ್ವಾಣಧಾಮದ ನಿವಾಸಿಗಳಾಗಿದ್ದೇವೆ. ಈ ಚಕ್ರವು ಸುತ್ತುತ್ತಿರುತ್ತದೆ. ಯಾವಾಗ ದುಃಖವಾಗುತ್ತದೆಯೋ ಆಗ ತಂದೆಯನ್ನು ನೆನಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ದುಃಖದ ಸಮಯದಲ್ಲಿಯೇ ಬಂದು ಸೃಷ್ಟಿಯನ್ನು ಪರಿವರ್ತನೆ ಮಾಡುತ್ತೇನೆ, ಹೊಸ ಸೃಷ್ಟಿಯನ್ನು ರಚಿಸುತ್ತೇನೆ ಎಂದಲ್ಲ. ಹಳೆಯದನ್ನು ಹೊಸದನ್ನಾಗಿ ಮಾಡಲು ಬರುತ್ತೇನೆ. ತಂದೆಯು ಸಂಗಮದಲ್ಲಿಯೇ ಬರುತ್ತಾರೆ. ಈಗ ಹೊಸ ಪ್ರಪಂಚವಾಗುತ್ತಿದೆ, ಹಳೆಯದು ಸಮಾಪ್ತಿಯಾಗಲಿದೆ. ಇದು ಬೇಹದ್ದಿನ ಮಾತಾಗಿದೆ.

ನೀವು ತಯಾರಾಗಿ ಬಿಟ್ಟರೆ ಇಡೀ ರಾಜಧಾನಿಯೇ ತಯಾರಾಗಿ ಬಿಡುವುದು. ಕಲ್ಪ-ಕಲ್ಪವೂ ಯಾರು ಯಾವ ಪದವಿಯನ್ನು ಪಡೆಯುತ್ತಾರೆಯೋ ಅದರನುಸಾರ ಪುರುಷಾರ್ಥ ನಡೆಯುತ್ತಿರುತ್ತದೆ. ಡ್ರಾಮಾದಲ್ಲಿ ಯಾವ ಪುರುಷಾರ್ಥ ಮಾಡಿದ್ದೆವೋ ಅದೇ ನಡೆಯುವುದು ಎಂದಲ್ಲ. ಪುರುಷಾರ್ಥ ಮಾಡಬೇಕಾಗಿದೆ. ಮಾಡಿದ ನಂತರ ಕಲ್ಪದ ಮೊದಲೂ ಇದೇ ರೀತಿ ಪುರುಷಾರ್ಥ ಮಾಡಿದ್ದೆವು ಎಂದು ಹೇಳಲಾಗುತ್ತದೆ. ಯಾವಾಗಲೂ ಪುರುಷಾರ್ಥವನ್ನು ಮೇಲಿಡಲಾಗುತ್ತದೆ. ಪ್ರಾಲಬ್ಧವೆಂದು ತಿಳಿದು ಕುಳಿತು ಬಿಡಬಾರದು. ಪುರುಷಾರ್ಥವಿಲ್ಲದೆ ಪ್ರಾಲಬ್ಧ ಸಿಗಲು ಸಾಧ್ಯವಿಲ್ಲ. ಪುರುಷಾರ್ಥ ಮಾಡದೇ ನೀರು ಕುಡಿಯುವುದಕ್ಕೂ ಸಾಧ್ಯವಿಲ್ಲ. ಕರ್ಮ ಸನ್ಯಾಸ ಎಂಬ ಶಬ್ಧವು ತಪ್ಪಾಗಿದೆ. ತಂದೆಯು ತಿಳಿಸುತ್ತಾರೆ – ಗೃಹಸ್ಥ ವ್ಯವಹಾರದಲ್ಲಿಯೂ ಇರಿ. ತಂದೆಯು ಎಲ್ಲರನ್ನೂ ಇಲ್ಲಿಯೇ ಇಟ್ಟುಕೊಳ್ಳುವುದಿಲ್ಲ. ಶರಣಾಗತಿ ಎಂದು ಗಾಯನವಿದೆ. ಯಜ್ಞದ ಆದಿಯಲ್ಲಿ ಭಟ್ಟಿಯು ನಡೆಯಬೇಕಿತ್ತು ಏಕೆಂದರೆ ಅವರಿಗೆ ಬಹಳ ತೊಂದರೆ ಕೊಟ್ಟರು ಆಗ ಬಂದು ತಂದೆಯ ಬಳಿ ಆಶ್ರಯ ಪಡೆದರು. ಒಬ್ಬ ಪರಮಪಿತ ಪರಮಾತ್ಮನ ಆಶ್ರಯವನ್ನು ತೆಗೆದುಕೊಳ್ಳಲಾಗುತ್ತದೆ. ಯಾವುದೇ ಗುರು ಮೊದಲಾದವರಿಂದಲ್ಲ. ಯಾವಾಗ ಬಹಳ ದುಃಖವಾಗುವುದೋ ಆಗ ಬೇಸರವಾಗಿ ಬಂದು ಆಶ್ರಯ (ಶರಣು) ಪಡೆಯುತ್ತಾರೆ. ಗುರುಗಳ ಬಳಿ ಯಾರೂ ಬೇಸರವಾಗಿ ಹೋಗುವುದಿಲ್ಲ. ಅಲ್ಲಂತೂ ಹಾಗೆಯೇ ಹೋಗುತ್ತಾರೆ. ನೀವು ರಾವಣನಿಂದ ಬಹಳ ಬೇಸತ್ತು ಹೋಗಿದ್ದೀರಿ. ಈಗ ರಾವಣನಿಂದ ಬಿಡಿಸಲು ರಾಮನು ಬಂದಿದ್ದಾರೆ. ಅವರು ನಿಮ್ಮನ್ನು ತನ್ನ ಮಡಿಲಿಗೆ ತೆಗೆದುಕೊಳ್ಳುತ್ತಾರೆ. ಬಾಬಾ, ನಾವು ನಿಮ್ಮವರಾಗಿದ್ದೇವೆ ಎಂದು ನೀವು ಹೇಳುತ್ತೀರಿ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಶಿವ ತಂದೆಯ ಮಡಿಲನ್ನು ತೆಗೆದುಕೊಂಡಿದ್ದೇವೆ. ಬಾಬಾ, ನಾವು ತಮ್ಮ ಮತವನ್ನೇ ತೆಗೆದುಕೊಳ್ಳುತ್ತೇವೆ.

ತಂದೆಯು ಶ್ರೀಮತ ಕೊಡುತ್ತಾರೆ – ಗೃಹಸ್ಥ ವ್ಯವಹಾರದಲ್ಲಿರುತ್ತಾ ನನ್ನನ್ನು ನೆನಪು ಮಾಡಿ, ಮತ್ತೆಲ್ಲರ ನೆನಪನ್ನು ಬಿಟ್ಟು ಬಿಡಿ. ನನ್ನ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಕೇವಲ ಶರಣು ಪಡೆಯುವ ಮಾತಿಲ್ಲ. ಎಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ತಂದೆಯ ವಿನಃ ಮತ್ತ್ಯಾರೂ ಈ ರೀತಿ ತಿಳಿಸಿಕೊಡಲು ಸಾಧ್ಯವಿಲ್ಲ. ಮಕ್ಕಳಿಗೆ ತಿಳಿದಿದೆ - ತಂದೆಯ ಬಳಿ ಇಷ್ಟೊಂದು ಲಕ್ಷ ಮಂದಿ ಮಕ್ಕಳು ಬಂದು ಎಲ್ಲಿರುವುದು! ಪ್ರಜೆಗಳೂ ಸಹ ತಮ್ಮ-ತಮ್ಮ ಮನೆಯಲ್ಲಿಯೇ ಇರುತ್ತಾರೆ ವಿನಃ ರಾಜನ ಬಳಿ ಇರುತ್ತಾರೇನು. ಅಂದಾಗ ನಿಮಗೆ ಇಷ್ಟನ್ನೇ ಹೇಳಲಾಗುತ್ತದೆ - ಒಬ್ಬ ತಂದೆಯನ್ನು ನೆನಪು ಮಾಡಿ. ಬಾಬಾ, ನಾವು ತಮ್ಮವರಾಗಿದ್ದೇವೆ, ತಾವೇ ಸೆಕೆಂಡಿನಲ್ಲಿ ಸದ್ಗತಿಯ ಆಸ್ತಿಯನ್ನು ಕೊಡುವವರಾಗಿದ್ದೀರಿ. ರಾಜಯೋಗವನ್ನು ಕಲಿಸಿ ರಾಜರಿಗೂ ರಾಜರನ್ನಾಗಿ ಮಾಡುತ್ತೀರಿ. ತಂದೆಯು ತಿಳಿಸುತ್ತಾರೆ - ಯಾರು ಕಲ್ಪದ ಮೊದಲು ತಂದೆಯಿಂದ ಆಸ್ತಿಯನ್ನು ತೆಗೆದುಕೊಂಡಿದ್ದರೋ ಅವರೇ ಬಂದು ತೆಗೆದುಕೊಳ್ಳುತ್ತಾರೆ. ಅಂತಿಮ ಸಮಯದೊಳಗೆ ಎಲ್ಲರೂ ಬಂದು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಈಗ ನೀವು ಪತಿತರಾಗಿರುವ ಕಾರಣ ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ತಂದೆಯು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ನನ್ನ ಕಣ್ಮಣಿಗಳೇ, ಯಾವಾಗ ನೀವು ಸತ್ಯಯುಗದಲ್ಲಿ ಬರುತ್ತೀರೋ ಆಗ 01-01-01ರಿಂದ ರಾಜ್ಯಭಾರ ಮಾಡಲಾರಂಭಿಸುತ್ತೀರಿ. ಅನ್ಯ ಧರ್ಮದವರಂತೂ ಯಾವಾಗ ಅವರದು ಲಕ್ಷಾಂತರ ಅಂದಾಜಿನಲ್ಲಿ ಸಂಖ್ಯೆ ವೃದ್ಧಿಯಾಗುವುದೋ ಆಗ ರಾಜ್ಯಭಾರ ನಡೆಯುವುದು. ನೀವಂತೂ ಯುದ್ಧ ಮಾಡುವ ಅವಶ್ಯಕತೆಯಿಲ್ಲ. ನೀವು ಯೋಗಬಲದಿಂದ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಕೇವಲ ಮೌನವಾಗಿದ್ದು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಅಂತಿಮದಲ್ಲಿ ನೀವು ಮೌನದಲ್ಲಿರುತ್ತೀರಿ ಆಗ ಈ ಚಿತ್ರ ಇತ್ಯಾದಿಗಳೇನೂ ಕೆಲಸಕ್ಕೆ ಬರುವುದಿಲ್ಲ, ನೀವು ಬುದ್ಧಿವಂತರಾಗಿ ಬಿಡುತ್ತೀರಿ. ತಂದೆಯು ತಿಳಿಸುತ್ತಾರೆ - ಕೇವಲ ನನ್ನನ್ನು ನೆನಪು ಮಾಡಿರಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಈಗ ಮಾಡಿ ಅಥವಾ ಬಿಡಿ ಅದು ನಿಮ್ಮಿಷ್ಟ. ಯಾವುದೇ ದೇಹಧಾರಿಯ ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ತಂದೆಯನ್ನು ನೆನಪು ಮಾಡಿ ಆಗ ಅಂತಿಮ ಗತಿ ಸೋ ಗತಿಯಾಗುವುದು. ನೀವು ನನ್ನ ಬಳಿ ಬಂದು ಬಿಡುತ್ತೀರಿ. ಪೂರ್ಣ ತೇರ್ಗಡೆಯಾಗುವವರಿಗೆ ರಾಜ್ಯಭಾರ ಸಿಗುವುದು. ಎಲ್ಲವೂ ನೆನಪಿನ ಯಾತ್ರೆಯ ಮೇಲೆ ಆಧಾರಿತವಾಗಿದೆ. ಮುಂದೆ ಹೋದಂತೆ ಹೊಸಬರೂ ಸಹ ಬಹಳ ತೀಕ್ಷ್ಣವಾಗಿ ಮುಂದೆ ಬರ ತೊಡಗುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾವುದೇ ದೇಹಧಾರಿಯ ನಾಮ-ರೂಪದಲ್ಲಿ ಸಿಕ್ಕಿ ಹಾಕಿಕೊಳ್ಳಬಾರದು. ಒಬ್ಬ ತಂದೆಯ ಶ್ರೀಮತದಂತೆ ನಡೆದು ಸದ್ಗತಿಯನ್ನು ಪಡೆಯಬೇಕಾಗಿದೆ. ಮೌನವಾಗಿರಬೇಕಾಗಿದೆ.

2. ಭವಿಷ್ಯ 21 ಜನ್ಮಗಳಿಗಾಗಿ ಚೆನ್ನಾಗಿ ಓದಬೇಕು ಮತ್ತು ಅನ್ಯರಿಗೂ ಓದಿಸಬೇಕಾಗಿದೆ. ಓದುವ ಮತ್ತು ಓದಿಸುವುದರಿಂದಲೇ ಹೆಸರು ಪ್ರಸಿದ್ಧವಾಗುವುದು.

ವರದಾನ:
ತನ್ನ ಸ್ವ-ಸ್ವರೂಪ ಮತ್ತು ಸ್ವ ದೇಶದ ಸ್ವಮಾನದಲ್ಲಿ ಸ್ಥಿತರಾಗಿರುವಂತಹ ಮಾಸ್ಟರ್ ಲಿಬರೆಟರ್(ಮುಕ್ತಿದಾತ) ಭವ.

ಇತ್ತೀಚೆಗಿನ ವಾತಾವರಣದಲ್ಲಿ ಪ್ರತಿ ಆತ್ಮ ಯಾವುದಾದರೂ ಒಂದು ಮಾತಿಗೆ ಬಂಧನ ವಶವಾಗಿದೆ. ಕೆಲವರು ತನುವಿನ ದುಃಖಕ್ಕೆ ವಶೀಭೂತರಾಗಿದ್ದಾರೆ, ಕೆಲವರು ಸಂಬಂಧದ, ಕೆಲವರು ಇಚ್ಛೆಗಳ, ಕೆಲವರು ತಮ್ಮ ದುಃಖಧಾಯಿ ಸಂಸ್ಕಾರ-ಸ್ವಭಾವದ, ಕೆಲವರು ಫ್ರಭು ಪ್ರಾಪ್ತಿ ಆಗದೆ ಇರುವ ಕಾರಣದಿಂದ, ಕೂಗುವ, ಚೀರಾಡುವ ದುಃಖಕ್ಕೆ ವಶೀಭೂತ..... ಹೀಗೆ ದುಃಖ ಅಶಾಂತಿಗೆ ವಶರಾಗಿರುವ ಆತ್ಮರು ತಮ್ಮನ್ನು ಮುಕ್ತ ಮಾಡಿಕೊಳ್ಳಲು ಇಚ್ಛೆ ಪಡುತ್ತಾರೆ. ಆದ್ದರಿಂದ ಅವರಿಗೆ ದುಃಖಮಯ ಜೀವನದಿಂದ ಮುಕ್ತರಾಗುವುದಕ್ಕಾಗಿ ತಮ್ಮ ಸ್ವ-ಸ್ವರೂಪ ಮತ್ತು ಸ್ವ ದೇಶದ ಸ್ವಮಾನದಲ್ಲಿ ಸ್ಥಿತರಾಗಿದ್ದು, ದಯಾಹೃದಯಿಯಾಗಿ ಮಾಸ್ಟರ್ ಮುಕ್ತಿದಾತ (ಲಿಬರೇಟರ್) ಆಗಿ.

ಸ್ಲೋಗನ್:
ಸದಾ ಅಚಲ ಅಡೋಲರಾಗಿರಲು ಏಕರಸ ಸ್ಥಿತಿಯ ಆಸನದ ಮೇಲೆ ವಿರಾಜಮಾನರಾಗಿರಿ.