03.03.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಸತ್ಯ ತಂದೆಯಿಂದ ಸತ್ಯ ಕಥೆಯನ್ನು ಕೇಳಿ ನರನಿಂದ ನಾರಾಯಣರಾಗುತ್ತೀರಿ, ನಿಮಗೆ 21 ಜನ್ಮಗಳಿಗಾಗಿ ಬೇಹದ್ದಿನ ತಂದೆಯಿಂದ ಆಸ್ತಿಯು ಸಿಗುತ್ತದೆ''

ಪ್ರಶ್ನೆ:
ತಂದೆಯ ಯಾವ ಆಜ್ಞೆಯನ್ನು ಪಾಲನೆ ಮಾಡುವಂತಹ ಮಕ್ಕಳು ಪಾರಸ ಬುದ್ಧಿಯವರಾಗುತ್ತಾರೆ?

ಉತ್ತರ:
ತಂದೆಯ ಆಜ್ಞೆಯಾಗಿದೆ - ದೇಹದ ಎಲ್ಲಾ ಸಂಬಂಧಗಳನ್ನು ಮರೆತು ತಂದೆ ಮತ್ತು ರಾಜಧಾನಿಯನ್ನು ನೆನಪು ಮಾಡಿ. ಇದೇ ಸದ್ಗತಿಗಾಗಿ ಸದ್ಗುರುವಿನ ಶ್ರೀಮತವಾಗಿದೆ. ಯಾರು ಈ ಶ್ರೀಮತವನ್ನು ಫಾಲೋ ಮಾಡುವರೋ ಅರ್ಥಾತ್ ದೇಹೀ-ಅಭಿಮಾನಿಯಾಗುವರೋ ಅವರೇ ಪಾರಸ ಬುದ್ಧಿಯವರಾಗುತ್ತಾರೆ.

ಗೀತೆ:
ಇಂದು ಅಂಧಕಾರದಲ್ಲಿದ್ದೇವೆ ನಾವು ಮಾನವರು.............

ಓಂ ಶಾಂತಿ.
ಇದು ಕಲಿಯುಗೀ ಪ್ರಪಂಚವಾಗಿದೆ. ಎಲ್ಲರೂ ಅಂಧಕಾರದಲ್ಲಿದ್ದಾರೆ, ಇದೇ ಭಾರತವು ಪ್ರಕಾಶತೆಯಲ್ಲಿತ್ತು, ಆಗ ಈ ಭಾರತವು ಸ್ವರ್ಗವಾಗಿತ್ತು. ಇದೇ ಭಾರತವಾಸಿಗಳು ಯಾರು ಈಗ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುವರೋ ಅವರು ಮೂಲತಃ ದೇವಿ-ದೇವತೆಗಳಾಗಿದ್ದರು. ಭಾರತವಾಸಿಗಳೇ ಸ್ವರ್ಗವಾಸಿಯಾಗಿದ್ದರು. ಆಗ ಯಾವುದೇ ಧರ್ಮವಿರಲಿಲ್ಲ, ಒಂದೇ ಧರ್ಮವಿತ್ತು, ಸ್ವರ್ಗ-ವೈಕುಂಠ-ಬಹಿಶ್ತ್-ಹೆವೆನ್ ಇವೆಲ್ಲವೂ ಭಾರತದ ಹೆಸರುಗಳಾಗಿತ್ತು. ಭಾರತವು ಪ್ರಾಚೀನ ಪವಿತ್ರ, ಬಹಳ-ಬಹಳ ಧನವಂತವಾಗಿತ್ತು. ಈಗಂತೂ ಭಾರತವು ಕಂಗಾಲಾಗಿದೆ ಏಕೆಂದರೆ ಈಗ ಕಲಿಯುಗಿಯಾಗಿದ್ದಾರೆ. ಅದು ಸತ್ಯಯುಗವಾಗಿತ್ತು, ನೀವೆಲ್ಲರೂ ಭಾರತವಾಸಿಗಳಿದ್ದೀರಿ, ನಿಮಗೆ ತಿಳಿದಿದೆ - ನಾವು ಅಂಧಕಾರದಲ್ಲಿದ್ದೇವೆ. ಸ್ವರ್ಗದಲ್ಲಿದ್ದಾಗ ಪ್ರಕಾಶತೆಯಲ್ಲಿದ್ದೇವು. ಸ್ವರ್ಗದ ರಾಜ ರಾಜೇಶ್ವರ-ರಾಜ ರಾಜೇಶ್ವರಿಯು ಲಕ್ಷ್ಮೀ-ನಾರಾಯಣರಾಗಿದ್ದರು, ಅದಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ಹೊಸ-ಹೊಸಬರು ಬರುತ್ತಾರೆ, ಆದ್ದರಿಂದ ತಂದೆಯು ಪುನಃ ತಿಳಿಸುತ್ತಾರೆ. ತಂದೆಯಿಂದಲೇ ನೀವು ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ, ಅದಕ್ಕೆ ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ. ಈಗ ಎಲ್ಲರು ಜೀವನ ಬಂಧನದಲ್ಲಿದ್ದಾರೆ. ಇಡೀ ಪ್ರಪಂಚ ಮತ್ತು ವಿಶೇಷವಾಗಿ ಭಾರತವು ರಾವಣನ ಶೋಕವಾಟಿಕೆಯಲ್ಲಿದೆ. ಕೇವಲ ರಾವಣನು ಲಂಕೆಯಲ್ಲಿದ್ದನು ಮತ್ತು ರಾಮನು ಭಾರತದಲ್ಲಿದ್ದನು, ರಾವಣನು ಬಂದು ಸೀತೆಯನ್ನು ಅಪಹರಿಸಿದನು ಎಂದಲ್ಲ. ಇವೆಲ್ಲವೂ ದಂತ ಕಥೆಗಳಾಗಿವೆ. ಗೀತೆಯು ಮುಖ್ಯವಾಗಿದೆ. ಸರ್ವಶಾಸ್ತ್ರಗಳಲ್ಲಿ ಶಿರೋಮಣಿಯು ಶ್ರೀಮತ ಅರ್ಥಾತ್ ಭಗವಂತನು ತಿಳಿಸಿರುವ ಗೀತೆಯಾಗಿದೆ. ಮನುಷ್ಯರು ಯಾರದೇ ಸದ್ಗತಿ ಮಾಡಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಜೀವನ್ಮುಕ್ತ ದೇವಿ-ದೇವತೆಗಳಿದ್ದರು, ಅವರು ಈ ಆಸ್ತಿಯನ್ನು ಕಲಿಯುಗದ ಅಂತ್ಯದಲ್ಲಿ ಪಡೆದಿದ್ದರು. ಭಾರತವಾಸಿಗಳಿಗೆ ಇದು ತಿಳಿದಿರಲಿಲ್ಲ ಅಥವಾ ಯಾವುದೇ ಶಾಸ್ತ್ರಗಳಲ್ಲಿಯೂ ಇಲ್ಲ. ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗಕ್ಕಾಗಿ. ಅದೆಲ್ಲವೂ ಭಕ್ತಿಮಾರ್ಗದ ಜ್ಞಾನವಾಗಿದೆ, ಸದ್ಗತಿ ಮಾರ್ಗದ ಜ್ಞಾನವು ಮನುಷ್ಯ ಮಾತ್ರರಲ್ಲಿ ಇಲ್ಲ. ತಂದೆಯು ತಿಳಿಸುತ್ತಾರೆ - ಮನುಷ್ಯರು ಮನುಷ್ಯರಿಗೇ ಗುರುಗಳಾಗಲು ಸಾಧ್ಯವಿಲ್ಲ, ಯಾವ ಗುರುವೂ ಸದ್ಗತಿ ನೀಡಲು ಸಾಧ್ಯವಿಲ್ಲ. ಆ ಗುರುವು ಭಕ್ತಿ ಮಾಡಿ, ದಾನ ಪುಣ್ಯ ಮಾಡಿ ಎಂದು ಹೇಳುತ್ತಾರೆ. ಭಕ್ತಿಯು ದ್ವಾಪರದಿಂದ ನಡೆದು ಬಂದಿದೆ. ಸತ್ಯ-ತ್ರೇತಾಯುಗದಲ್ಲಿ ಜ್ಞಾನದ ಪ್ರಾಲಬ್ಧವಿರುತ್ತದೆ ಅಂದರೆ ಅಲ್ಲಿ ಈ ಜ್ಞಾನವು ನಡೆದು ಬರುತ್ತದೆಯೆಂದಲ್ಲ. ಯಾವ ಆಸ್ತಿಯು ಭಾರತಕ್ಕೆ ಇತ್ತು ಅದು ತಂದೆಯಿಂದ ಅವರಿಗೆ ಸಂಗಮದಲ್ಲಿಯೇ ಸಿಕ್ಕಿತ್ತು. ಅದು ಪುನಃ ಈಗ ನಿಮಗೆ ಸಿಗುತ್ತಿದೆ. ಭಾರತವಾಸಿಗಳೇ ಯಾವಾಗ ನರಕವಾಸಿಗಳು, ಮಹಾನ್ ದುಃಖಿಯಾಗಿ ಬಿಡುವರೋ ಆಗ ಹೇ ಪತಿತ-ಪಾವನ, ದುಃಖಹರ್ತ-ಸುಖಕರ್ತನೆಂದು ಕರೆಯುತ್ತಾರೆ. ಯಾರ ದುಃಖಹರ್ತ? ಸರ್ವರ ದುಃಖಹರ್ತನಾಗಿದ್ದಾರೆ ಏಕೆಂದರೆ ಇಡೀ ಪ್ರಪಂಚ ವಿಶೇಷವಾಗಿ ಭಾರತದಲ್ಲಿ ಪಂಚ ವಿಕಾರಗಳಿವೆ. ತಂದೆಯು ಪತಿತ-ಪಾವನನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ ಮತ್ತು ಸರ್ವರ ಸದ್ಗತಿದಾತನಾಗುತ್ತೇನೆ. ಅಬಲೆಯರು, ಅಹಲ್ಯೆಯರು, ಗಣಿಕೆಯರು ಮತ್ತು ಗುರುಗಳು ಯಾರೆಲ್ಲರೂ ಇದ್ದಾರೆಯೋ ಅವರ ಉದ್ಧಾರವನ್ನೂ ಸಹ ನಾನೇ ಮಾಡಬೇಕಾಗಿದೆ ಏಕೆಂದರೆ ಇದು ಪತಿತ ಪ್ರಪಂಚವಾಗಿದೆ. ಸತ್ಯಯುಗಕ್ಕೆ ಪಾವನ ಪ್ರಪಂಚವೆಂದು ಹೇಳಲಾಗುತ್ತದೆ. ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇವರು ಸ್ವರ್ಗದ ಮಾಲೀಕರಾಗಿದ್ದರು ಎಂಬುದನ್ನು ಭಾರತವಾಸಿಗಳು ತಿಳಿದುಕೊಂಡಿಲ್ಲ. ಪತಿತ ಖಂಡವೆಂದರೆ ಅಸತ್ಯ ಖಂಡ, ಪಾವನ ಖಂಡವು ಸತ್ಯ ಖಂಡವಾಗಿದೆ. ಭಾರತವೇ ಪಾವನ ಖಂಡವಾಗಿತ್ತು. ಈ ಲಕ್ಷ್ಮೀ-ನಾರಾಯಣರ ಸೂರ್ಯವಂಶಿ ರಾಜಧಾನಿಯಿತ್ತು, ಈ ಭಾರತವು ಅವಿನಾಶಿ ಖಂಡವಾಗಿದೆ. ಇದೆಂದೂ ವಿನಾಶವಾಗುವುದಿಲ್ಲ. ಯಾವಾಗ ಇವರ ರಾಜ್ಯವಿತ್ತೋ ಆಗ ಮತ್ತೆಯಾವುದೇ ಖಂಡವಿರಲಿಲ್ಲ. ಅವೆಲ್ಲವೂ ನಂತರದಲ್ಲಿ ಬರುತ್ತವೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದು ಎಲ್ಲದಕ್ಕಿಂತ ದೊಡ್ಡ ತಪ್ಪು ಮಾಡಿದ್ದಾರೆ. ತಂದೆಯು ತಿಳಿಸುತ್ತಾರೆ - ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳಿರಲು ಸಾಧ್ಯವಿಲ್ಲ. ಸತ್ಯಯುಗವೂ ಸಹ ಲಕ್ಷಾಂತರ ವರ್ಷಗಳಿರಲು ಸಾಧ್ಯವಿಲ್ಲ. ಕಲ್ಪದ ಆಯಸ್ಸು ಕೇವಲ 5000 ವರ್ಷಗಳಾಗಿದೆ, ಇದಕ್ಕೆ ಮನುಷ್ಯರು 84 ಲಕ್ಷ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ಹೇಳಿ ಬಿಡುತ್ತಾರೆ. ಮನುಷ್ಯರನ್ನು ನಾಯಿ, ಬೆಕ್ಕು ಇತ್ಯಾದಿಗಳನ್ನಾಗಿ ಮಾಡಿ ಬಿಟ್ಟಿದ್ದಾರೆ ಆದರೆ ಅವುಗಳ ಜನ್ಮವೇ ಬೇರೆಯಾಗಿದೆ. 84 ಲಕ್ಷ ಪ್ರಕಾರದ ಜೀವ ಜಂತುಗಳಿವೆ. ಮನುಷ್ಯರ ಯೋನಿಯು ಒಂದೇ ಆಗಿದೆ, ಅವರದೇ 84 ಜನ್ಮಗಳಿವೆ.

ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಿರಿ, ಭಾರತವಾಸಿಗಳು ಡ್ರಾಮಾ ಪ್ಲಾನನುಸಾರ ತಮ್ಮ ಧರ್ಮ ಮರೆತು ಹೋಗಿದ್ದೀರಿ. ಕಲಿಯುಗದ ಅಂತ್ಯದಲ್ಲಿ ಸಂಪೂರ್ಣ ಪತಿತರಾಗಿ ಬಿಟ್ಟಿದ್ದೀರಿ. ಪುನಃ ತಂದೆಯು ಬಂದು ಸಂಗಮದಲ್ಲಿ ಪಾವನರನ್ನಾಗಿ ಮಾಡುತ್ತಾರೆ. ಇದಕ್ಕೆ ದುಃಖಧಾಮವೆಂದು ಹೇಳಲಾಗುತ್ತದೆ ನಂತರ ಪಾತ್ರವು ಸುಖಧಾಮದಲ್ಲಿರುವುದು. ತಂದೆಯು ತಿಳಿಸುತ್ತಾರೆ - ಹೇ ಮಕ್ಕಳೇ, ನೀವು ಭಾರತವಾಸಿಗಳೇ ಸ್ವರ್ಗವಾಸಿಯಾಗಿದ್ದಿರಿ. ನಂತರ ನೀವು 84 ಜನ್ಮಗಳ ಏಣಿಯನ್ನು ಇಳಿಯುತ್ತೀರಿ. ಸತೋದಿಂದ ರಜೋ, ತಮೋದಲ್ಲಿ ಖಂಡಿತ ಬರಬೇಕಾಗಿದೆ. ನೀವು ದೇವತೆಗಳಷ್ಟು ಧನವಂತರು, ಆರೋಗ್ಯವಂತರು, ಐಶ್ವರ್ಯವಂತರು ಮತ್ತ್ಯಾರೂ ಆಗಲು ಸಾಧ್ಯವಿಲ್ಲ. ಭಾರತವು ಎಷ್ಟು ಸಾಹುಕಾರವಾಗಿತ್ತು, ವಜ್ರ ರತ್ನಗಳಂತೂ ದೊಡ್ಡ-ದೊಡ್ಡ ಕಲ್ಲುಗಳ ತರಹ ಇದ್ದವು. ತಂದೆಯು ನೀವು ಮಕ್ಕಳಿಗೆ ಸ್ಮೃತಿ ತರಿಸುತ್ತಿದ್ದಾರೆ - ಮಕ್ಕಳೇ, ನಾನು ನಿಮ್ಮನ್ನು ಎಷ್ಟೊಂದು ಸಾಹುಕಾರರನ್ನಾಗಿ ಮಾಡಿದ್ದೆನು, ನೀವು ಸರ್ವ ಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗಿದ್ದಿರಿ, ಯಥಾ ರಾಜ-ರಾಣಿ ತಥಾ ಪ್ರಜಾ..... ಇವರಿಗೆ ಭಗವಾನ್-ಭಗವತಿಯೆಂದು ಹೇಳಬಹುದು. ಆದರೆ ತಂದೆಯು ತಿಳಿಸಿದ್ದಾರೆ - ಭಗವಂತನು ಒಬ್ಬರೇ ಆಗಿದ್ದಾರೆ. ಕೇವಲ ಈಶ್ವರ ಅಥವಾ ಪ್ರಭು ಎಂದು ಹೇಳಿದಾಗ ಅವರು ಎಲ್ಲಾ ಆತ್ಮರ ತಂದೆಯೆಂದು ನೆನಪು ಬರುವುದಿಲ್ಲ. ಇವರಂತೂ ಬೇಹದ್ದಿನ ತಂದೆಯಾಗಿದ್ದಾರೆ. ಅವರು ತಿಳಿಸುತ್ತಾರೆ - ನೀವು ಭಾರತವಾಸಿಗಳು ಜಯಂತಿಯನ್ನಾಚರಿಸುತ್ತೀರಿ. ಆದರೆ ಮೂಲತಃ ತಂದೆಯು ಯಾವಾಗ ಬಂದಿದ್ದರು ಎಂಬುದು ಯಾರಿಗೂ ಗೊತ್ತಿಲ್ಲ. ಈಗ ಇರುವುದೇ ಕಲಿಯುಗ, ಕಲ್ಲು ಬುದ್ಧಿಯವರು. ಪಾರಸ ನಾಥರಾಗಿದ್ದಿರಿ, ಈ ಸಮಯದಲ್ಲಿ ಕಲ್ಲು ಬುದ್ಧಿಯವರಾಗಿದ್ದಿರಿ. ನಾಥ ಎಂದು ಹೇಳುವುದಿಲ್ಲ ಏಕೆಂದರೆ ರಾಜ-ರಾಣಿಯಂತೂ ಇಲ್ಲ. ಮೊದಲು ಇಲ್ಲಿ ದೈವೀ ರಾಜಾಸ್ಥಾನವಿತ್ತು, ನಂತರ ಆಸುರೀ ರಾಜ್ಯವಾಗಿ ಬಿಡುತ್ತದೆ. ಇದು ಆಟವಾಗಿದೆ ಆದರೆ ಅದು ಹದ್ದಿನ ಡ್ರಾಮಾ, ಇದು ಬೇಹದ್ದಿನ ಡ್ರಾಮಾ ಆಗಿದೆ. ವಿಶ್ವದ ಚರಿತ್ರೆ, ಭೂಗೋಳವನ್ನು ಆದಿಯಿಂದ ಅಂತ್ಯದವರೆಗೆ ನೀವು ತಿಳಿದುಕೊಂಡಿದ್ದೀರಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ಭಾರತದಲ್ಲಿ ದೇವಿ-ದೇವತೆಗಳಿದ್ದಾಗ ಇಡೀ ಸೃಷ್ಟಿಯ ಮಾಲೀಕರಾಗಿದ್ದರು ಮತ್ತು ಭಾರತದಲ್ಲಿಯೇ ಇದ್ದರು. ತಂದೆಯು ಭಾರತವಾಸಿಗಳಿಗೆ ಸ್ಮೃತಿ ತರಿಸುತ್ತಾರೆ - ಸತ್ಯಯುಗದಲ್ಲಿ ಆದಿ ಸನಾತನ ದೇವಿ-ದೇವತೆಗಳ ಧರ್ಮ-ಕರ್ಮ ಶ್ರೇಷ್ಠವಾಗಿತ್ತು ನಂತರ 84 ಜನ್ಮಗಳಲ್ಲಿ ಇಳಿಯಬೇಕಾಯಿತು. ಇದನ್ನು ತಂದೆಯು ಕುಳಿತು ಕಥೆಯಂತೆ ತಿಳಿಸುತ್ತಾರೆ - ಈಗ ನಿಮ್ಮದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಕೇವಲ ಒಬ್ಬರ ಮಾತಲ್ಲ ಅಥವಾ ಯುದ್ಧದ ಮೈದಾನವೂ ಇಲ್ಲ. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತೆಂದೂ ಸಹ ಭಾರತವಾಸಿಗಳು ಮರೆತು ಹೋಗಿದ್ದಾರೆ. ಸತ್ಯಯುಗದ ಆಯಸ್ಸನ್ನು ಬಹಳ ಉದ್ದಗಲವಾಗಿ ಬರೆದಿರುವುದರಿಂದ ಬಹಳ ದೂರ ತೆಗೆದುಕೊಂಡು ಹೋಗಿದ್ದಾರೆ.

ತಂದೆಯು ತಿಳಿಸುತ್ತಾರೆ - ಮನುಷ್ಯರಿಗೆ ಭಗವಂತನೆಂದು ತಿಳಿಯಲು ಸಾಧ್ಯವಿಲ್ಲ. ಮನುಷ್ಯರು ಮನುಷ್ಯರ ಸದ್ಗತಿ ಮಾಡಲು ಸಾಧ್ಯವಿಲ್ಲ. ಸರ್ವರ ಸದ್ಗತಿದಾತ, ಪತಿತರಿಂದ ಪಾವನಕರ್ತ ಒಬ್ಬರೇ ಆಗಿದ್ದಾರೆಂದು ಗಾಯನವಿದೆ. ಇದು ಅಸತ್ಯ ಖಂಡವಾಗಿದೆ, ಸತ್ಯ ತಂದೆಯು ಸತ್ಯ ಖಂಡವನ್ನು ಸ್ಥಾಪನೆ ಮಾಡುವವರಾಗಿದ್ದಾರೆ. ಭಕ್ತರು ಪೂಜೆ ಮಾಡುತ್ತಾರೆ ಆದರೆ ಭಕ್ತಿಮಾರ್ಗದಲ್ಲಿ ಯಾರದೆಲ್ಲಾ ಪೂಜೆ ಮಾಡುತ್ತಾ ಬಂದಿರುವರೋ ಅವರಲ್ಲಿ ಒಬ್ಬರ ಚರಿತ್ರೆಯನ್ನೂ ಸಹ ತಿಳಿದುಕೊಂಡಿಲ್ಲ. ಶಿವ ಜಯಂತಿಯನ್ನಾಚರಿಸುತ್ತಾರೆ, ತಂದೆಯು ಹೊಸ ಪ್ರಪಂಚದ ರಚಯಿತ, ಪರಮಪಿತ ಪರಮಾತ್ಮ, ಬೇಹದ್ದಿನ ಸುಖ ಕೊಡುವವರಾಗಿದ್ದಾರೆ. ಸತ್ಯಯುಗದಲ್ಲಿ ಸುಖವಿತ್ತು, ಅದನ್ನು ಯಾರು ಮತ್ತು ಹೇಗೆ ಸ್ಥಾಪನೆ ಮಾಡಿದರು? ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಿದರು. ಭ್ರಷ್ಟಾಚಾರಿಗಳನ್ನು ಶ್ರೇಷ್ಠಾಚಾರಿ ದೇವತೆಗಳನ್ನಾಗಿ ಮಾಡಿದರು. ಇದಂತೂ ತಂದೆಯ ಕರ್ತವ್ಯವೇ ಆಗಿದೆ. ನೀವು ಮಕ್ಕಳನ್ನು ಪಾವನರನ್ನಾಗಿ ಮಾಡುತ್ತೇನೆ. ನೀವು ಸ್ವರ್ಗದ ಮಾಲೀಕರಾಗುತ್ತೀರಿ ಮತ್ತೆ ನಿಮ್ಮನ್ನು ಪತಿತರನ್ನಾಗಿ ಯಾರು ಮಾಡುತ್ತಾರೆ? ಈ ರಾವಣ. ಸುಖ-ದುಃಖವನ್ನು ಈಶ್ವರನೇ ಕೊಡುತ್ತಾರೆಂದು ಮನುಷ್ಯರು ಹೇಳಿ ಬಿಡುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ನಾನಂತೂ ಎಲ್ಲರಿಗೆ ಸುಖವನ್ನೇ ಕೊಡುತ್ತೇನೆ. ನಂತರ ಅರ್ಧಕಲ್ಪ ನೀವು ತಂದೆಯನ್ನೇ ಸ್ಮರಣೆ ಮಾಡುವುದಿಲ್ಲ. ಮತ್ತೆ ಯಾವಾಗ ರಾವಣ ರಾಜ್ಯವಾಗುವುದೋ ಆಗ ಎಲ್ಲರ ಪೂಜೆ ಮಾಡತೊಡಗುತ್ತೀರಿ. ನಿಮ್ಮದು ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಬಾಬಾ, ನಾವು ಎಷ್ಟು ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ನೀವು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ನೀವು 21 ಜನ್ಮಗಳಿಗಾಗಿ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಲು ಅರ್ಥಾತ್ ಸತ್ಯ-ಸತ್ಯ ತಂದೆಯಿಂದ ಸತ್ಯ ಕಥೆ, ನರನಿಂದ ನಾರಾಯಣನಾಗುವ ಕಥೆಯನ್ನು ಕೇಳುತ್ತೀರಿ. ಇದು ಜ್ಞಾನ, ಅದು ಭಕ್ತಿಯಾಗಿದೆ. ಈ ಆತ್ಮಿಕ ಜ್ಞಾನವನ್ನು ಪರಮಾತ್ಮನೇ ಬಂದು ಕೊಡುತ್ತಾರೆ. ಈಗ ಮಕ್ಕಳು ಆತ್ಮಾಭಿಮಾನಿಯಾಗಬೇಕಾಗಿದೆ. ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಂಡು ನನ್ನೊಬ್ಬನನ್ನೇ ನೆನಪು ಮಾಡಿ. ಶಿವ ತಂದೆಯಂತೂ ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಆತ್ಮಗಳೆಲ್ಲರೂ ಪರಮಧಾಮದಿಂದ ಪಾತ್ರವನ್ನಭಿನಯಿಸಲು ಶರೀರದಲ್ಲಿ ಬರುತ್ತೀರಿ, ಇದಕ್ಕೆ ಕರ್ಮ ಕ್ಷೇತ್ರವೆಂದು ಹೇಳಲಾಗುತ್ತದೆ. ಬಹಳ ದೊಡ್ಡ ಆಟವಾಗಿದೆ, ಆತ್ಮದಲ್ಲಿ ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವಿರುತ್ತದೆ, ಅದರನುಸಾರವೇ ಮನುಷ್ಯರಿಗೆ ಒಳ್ಳೆಯ ಅಥವಾ ಕೆಟ್ಟ ಜನ್ಮವು ಸಿಗುತ್ತದೆ. ಇವರು ಯಾರು ಪಾವನರಾಗಿದ್ದರೋ ಈಗ ಪತಿತರಾಗಿದ್ದಾರೆ. ತತ್ತ್ವಂ. ತಂದೆಯಾದ ನಾನು ಈ ಪರ ರಾವಣನ ಪ್ರಪಂಚ, ಪತಿ ತಶರೀರದಲ್ಲಿ ಬರಬೇಕಾಗುತ್ತದೆ ಮತ್ತು ಯಾರು ಮೊದಲ ನಂಬರಿನಲ್ಲಿ ಹೋಗಬೇಕಾಗಿದೆಯೋ ಅವರ ಶರೀರದಲ್ಲಿಯೇ ಬರುತ್ತೇನೆ. ಸೂರ್ಯವಂಶಿಗಳೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಇವರು ಬ್ರಹ್ಮಾ ಮತ್ತು ಬ್ರಾಹ್ಮಣರಾಗಿದ್ದಾರೆ. ತಂದೆಯು ನಿತ್ಯವೂ ತಿಳಿಸುತ್ತಾರೆ ಆದರೆ ಕಲ್ಲು ಬುದ್ಧಿಯವರನ್ನು ಪಾರಸ ಬುದ್ಧಿಯವರನ್ನಾಗಿ ಮಾಡುವುದು ಚಿಕ್ಕಮ್ಮನ ಮನೆಯಂತಲ್ಲ. ಹೇ ಆತ್ಮರೇ, ಈಗ ದೇಹೀ-ಅಭಿಮಾನಿಯಾಗಿರಿ. ಒಬ್ಬ ತಂದೆಯನ್ನು ನೆನಪು ಮಾಡಿ ಮತ್ತು ರಾಜಧಾನಿಯನ್ನು ನೆನಪು ಮಾಡಿ. ದೇಹದ ಸಂಬಂಧಗಳನ್ನು ಬಿಡಿ ಆಗ ಪಾರಸ ಬುದ್ಧಿಯವರಾಗಿ ಬಿಡುತ್ತೀರಿ. ಎಲ್ಲರೂ ಸಾಯಲೇಬೇಕಾಗಿದೆ. ಎಲ್ಲರದೂ ಈಗ ವಾನಪ್ರಸ್ಥ ಸ್ಥಿತಿಯಾಗಿದೆ. ಒಬ್ಬ ಸದ್ಗುರುವಿನ ವಿನಃ ಮತ್ತ್ಯಾರೂ ಸದ್ಗತಿದಾತನಾಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಹೇ ಭಾರತವಾಸಿ ಮಕ್ಕಳೇ, ನೀವು ಮೊದಲು ಪಾರಸ ಬುದ್ಧಿಯವರಾಗಿದ್ದಿರಿ, ಆತ್ಮರು ಪರಮಾತ್ಮನಿಂದ ಬಹಳ ಕಾಲ ಅಗಲಿದ್ದರು..... ಎಂದು ಗಾಯನವಿದೆ. ಅಂದಾಗ ಮೊಟ್ಟ ಮೊದಲನೇ ಭಾರತವಾಸಿ ದೇವಿ-ದೇವತಾ ಧರ್ಮದವರು ಬಂದಿದ್ದೀರಿ, ಅನ್ಯ ಧರ್ಮದವರು ಕೊನೆಯಲ್ಲಿ ಬಂದಿದ್ದಾರೆ. ಮತ್ತೆ ಅವರ ಜನ್ಮಗಳೂ ಕಡಿಮೆಯಿರುತ್ತವೆ. ಇಡೀ ಸೃಷ್ಟಿಯ ವೃಕ್ಷವು ಹೇಗೆ ಸುತ್ತುತ್ತದೆ ಎಂಬುದನ್ನು ತಂದೆಯು ತಿಳಿಸುತ್ತಾರೆ. ಯಾರು ಧಾರಣೆ ಮಾಡುವರೋ ಅವರಿಗಾಗಿ ಬಹಳ ಸಹಜವಾಗಿದೆ. ಆತ್ಮವು ಧಾರಣೆ ಮಾಡಿಕೊಳ್ಳುತ್ತದೆ, ಆತ್ಮವೇ ಪಾಪಾತ್ಮ, ಪುಣ್ಯಾತ್ಮನಾಗುತ್ತದೆ. ನಿಮ್ಮದು ಅಂತಿಮ 84ನೇ ಜನ್ಮವಾಗಿದೆ. ನೀವು ವಾನಪ್ರಸ್ಥ ಸ್ಥಿತಿಯಲ್ಲಿದ್ದೀರಿ. ವಾನಪ್ರಸ್ಥ ಸ್ಥಿತಿಯವರು ಮಂತ್ರಕ್ಕಾಗಿ ಗುರುಗಳನ್ನು ಮಾಡಿಕೊಳ್ಳುತ್ತಾರೆ. ನೀವೀಗ ಹೊರಗಿನ ಮನುಷ್ಯರನ್ನು ಗುರುಗಳನ್ನಾಗಿ ಮಾಡುವಂತಿಲ್ಲ. ನೀಮ್ಮೆಲ್ಲರ ತಂದೆ, ಶಿಕ್ಷಕ, ಸದ್ಗುರು ನಾನಾಗಿದ್ದೇನೆ. ಹೇ ಪತಿತ-ಪಾವನ ಶಿವ ತಂದೆಯೆಂದು ನನಗೇ ಹೇಳುತ್ತಾರೆ. ಈಗ ಸ್ಮೃತಿ ಬಂದಿದೆ - ಎಲ್ಲಾ ಆತ್ಮರಿಗೆ ಅವರು ತಂದೆಯಾಗಿದ್ದಾರೆ, ಆತ್ಮವು ಸತ್ಯ ಚೈತನ್ಯವಾಗಿದೆ ಏಕೆಂದರೆ ಅಮರನಾಗಿದೆ. ಎಲ್ಲಾ ಆತ್ಮರಲ್ಲಿ ಪಾತ್ರವು ತುಂಬಲ್ಪಟ್ಟಿದೆ. ತಂದೆಯೂ ಸಹ ಸತ್ಯ, ಚೈತನ್ಯವಾಗಿದ್ದಾರೆ. ಮನುಷ್ಯ ಸೃಷ್ಟಿಯ ಬೀಜ ರೂಪನಾಗಿರುವ ಕಾರಣ ನಾನು ಇಡೀ ವೃಕ್ಷದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇನೆ ಆದ್ದರಿಂದ ನನಗೆ ಜ್ಞಾನಪೂರ್ಣನೆಂದು ಹೇಳುತ್ತಾರೆ. ನಿಮಗೂ ಸಹ ಬೀಜದಿಂದ ಹೇಗೆ ವೃಕ್ಷವಾಗುತ್ತದೆ ಎಂಬುದರ ಸಂಪೂರ್ಣ ಜ್ಞಾನವಿದೆ. ವೃಕ್ಷವು ವೃದ್ಧಿಯಾಗುವುದರಲ್ಲಿ ಸಮಯ ಹಿಡಿಸುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಬೀಜ ರೂಪನಾಗಿದ್ದೇನೆ, ಅಂತಿಮದಲ್ಲಿ ಎಲ್ಲವೂ ಜಡಜಡೀಭೂತ ಸ್ಥಿತಿಯನ್ನು ಹೊಂದುತ್ತದೆ. ಈಗ ನೋಡಿ, ದೇವಿ-ದೇವತಾ ಧರ್ಮದ ಬುನಾದಿಯೇ ಇಲ್ಲ, ಪ್ರಾಯಲೋಪವಾಗಿದೆ. ಯಾವಾಗ ದೇವಿ-ದೇವತಾ ಧರ್ಮವು ಮರೆಯಾಗುವುದೋ ಆಗ ತಂದೆಯು ಬರಬೇಕಾಗುತ್ತದೆ. ಒಂದು ಧರ್ಮದ ಸ್ಥಾಪನೆ ಮಾಡಿ ಉಳಿದೆಲ್ಲದರ ವಿನಾಶ ಮಾಡಿಸುತ್ತಾರೆ. ಪ್ರಜಾಪಿತ ಬ್ರಹ್ಮನ ಮೂಲಕ ತಂದೆಯು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಿಸುತ್ತಿದ್ದಾರೆ. ನೀವು ಭ್ರಷ್ಟಾಚಾರಿಗಳಿಂದ ಶ್ರೇಷ್ಠಾಚಾರಿ ದೇವತೆಗಳಾಗಲು ಬಂದಿದ್ದೀರಿ. ಈ ನಾಟಕವು ಮಾಡಲ್ಪಟ್ಟಿದೆ. ಇದೆಂದೂ ಅಂತ್ಯವಾಗುವುದಿಲ್ಲ. ತಂದೆಯು ಬರುತ್ತಾರೆ ಆತ್ಮರೆಲ್ಲರೂ ಮೂಲವತನದ ನಿವಾಸಿಗಳು ಪರಸ್ಪರ ಸಹೋದರರಾಗಿದ್ದೀರಿ, ಆ ಒಬ್ಬ ತಂದೆಯನ್ನೇ ಎಲ್ಲರೂ ನೆನಪು ಮಾಡುತ್ತಾರೆ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು. ರಾವಣ ರಾಜ್ಯದಲ್ಲಿ ದುಃಖವಿದೆ. ಇಲ್ಲಿ ಸ್ಮರಣೆ ಮಾಡುತ್ತಾರೆ ಅಂದಾಗ ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ಅವರ ಮಹಿಮೆಯಿದೆ. ತಂದೆಯು ಬರದೇ ಇದ್ದರೆ ಪಾವನರನ್ನಾಗಿ ಯಾರು ಮಾಡುವರು? ಕ್ರಿಶ್ಚಿಯನ್, ಇಸ್ಲಾಮಿ, ಮೊದಲಾದ ಯಾರೆಲ್ಲಾ ಇದ್ದಾರೆಯೋ ಎಲ್ಲರೂ ಈ ಸಮಯದಲ್ಲಿ ತಮೋಪ್ರಧಾನರಾಗಿದ್ದಾರೆ. ಎಲ್ಲರೂ ಪುನರ್ಜನ್ಮವನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕಾಗಿದೆ. ಈಗ ಪುನರ್ಜನ್ಮವು ನರಕದಲ್ಲಿಯೇ ಸಿಗುತ್ತದೆ. ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆಂದಲ್ಲ. ಹೇಗೆ ಹಿಂದೂ ಧರ್ಮದವರು ಯಾರಾದರೂ ಶರೀರ ಬಿಟ್ಟರೆ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ. ಅಂದಮೇಲೆ ಅವಶ್ಯವಾಗಿ ನರಕದಲ್ಲಿದ್ದರಲ್ಲವೆ. ಈಗ ಸ್ವರ್ಗದಲ್ಲಿ ಹೋದರು ಅಂದಮೇಲೆ ನಿಮ್ಮ ಬಾಯಲ್ಲಿ ಗುಲಾಬ್ ಜಾಮೂನ್. ಯಾವಾಗ ಅವರು ಸ್ವರ್ಗವಾಸಿಯಾದರು ಅವರಿಗೆ ನರಕದ ಆಸುರೀ ವೈಭವವನ್ನು ಏಕೆ ತಿನ್ನಿಸುತ್ತೀರಿ? ಶ್ರಾದ್ಧ ಮಾಡುತ್ತಾರಲ್ಲವೆ. ಬಂಗಾಳದಲ್ಲಿ ಮೀನು, ಮೊಟ್ಟೆ ಇತ್ಯಾದಿಗಳೆಲ್ಲವನ್ನೂ ತಿನ್ನಿಸುತ್ತಾರೆ. ಅರೆ! ಅವರಿಗೆ ಇದೆಲ್ಲವನ್ನೂ ತಿನ್ನುವ ಅವಶ್ಯಕತೆಯಾದರೂ ಏನಿದೆ? ಯಾವಾಗ ಮೊದಲ ನಂಬರಿನವರೇ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಅಂದಮೇಲೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಈ ಜ್ಞಾನದಲ್ಲಿ ಯಾವುದೇ ಕಷ್ಟವಿಲ್ಲ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಪರಿಶ್ರಮವಿದೆ. ರಾಮ, ರಾಮ ಎಂದು ಜಪಿಸುತ್ತಾ ರೋಮಾಂಚನವಾಗಿ ನಿಂತು ಬಿಡುತ್ತಾರೆ. ಇದೆಲ್ಲವೂ ಭಕ್ತಿಮಾರ್ಗವಾಗಿದೆ. ಈ ಸೂರ್ಯ, ಚಂದ್ರ ಮೊದಲಾದ ಯಾವ ಪ್ರಕಾಶವನ್ನು ನೀಡುವವರಿದ್ದಾರೆ, ಇವರೇನೂ ದೇವತೆಗಳಲ್ಲ. ವಾಸ್ತವದಲ್ಲಿ ಜ್ಞಾನ ಸೂರ್ಯ, ಜ್ಞಾನ ಚಂದ್ರಮ ಮತ್ತು ಜ್ಞಾನ ನಕ್ಷತ್ರಗಳೆಂಬುದು ಇಲ್ಲಿನ ಮಹಿಮೆಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರ ತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಅಂತಿಮ 84ನೇ ಜನ್ಮದಲ್ಲಿ ಯಾವುದೇ ಪಾಪಕರ್ಮ (ವಿಕರ್ಮ) ಮಾಡಬಾರದು. ಪುಣ್ಯಾತ್ಮರಾಗುವ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ, ಸಂಪೂರ್ಣ ಪಾವನರಾಗಬೇಕಾಗಿದೆ.

2. ತನ್ನ ಬುದ್ಧಿಯನ್ನು ಪಾರಸವನ್ನಾಗಿ ಮಾಡಿಕೊಳ್ಳಲು ದೇಹದ ಎಲ್ಲಾ ಸಂಬಂಧಿಗಳನ್ನು ಮರೆತು ದೇಹೀ-ಅಭಿಮಾನಿಯಾಗುವ ಅಭ್ಯಾಸ ಮಾಡಬೇಕಾಗಿದೆ.

ವರದಾನ:
ಕಂಪನಿ(ಸಂಗ) ಮತ್ತು ಕಂಪ್ಯಾನಿಯನ್(ಸಂಗಾತಿ) ಅನ್ನು ಅರಿತು ಜೊತೆ ನಿಭಾಯಿಸುವಂತಹ ಶ್ರೇಷ್ಠ ಭಾಗ್ಯವಾನ್ ಭವ.

ಡ್ರಾಮದ ಭಾಗ್ಯದನುಸಾರ ನೀವು ಕೆಲವೇ ಆತ್ಮಗಳು ಯಾರಿಗೆ ಸರ್ವ ಪ್ರಾಪ್ತಿ ಮಾಡಿಸುವಂತಹ ಶ್ರೇಷ್ಠ ಬ್ರಾಹ್ಮಣರ ಕಂಪನಿ (ಸಂಗ) ಸಿಕ್ಕಿದೆ. ಸತ್ಯ ಬ್ರಾಹ್ಮಣರ ಕಂಪನಿ (ಸಂಗ) ಏರುವ ಕಲೆಯದಾಗಿರುತ್ತದೆ, ಅವರು ಎಂದೂ ಇಂತಹ ಕಂಪನಿ (ಸಂಗ) ಮಾಡುವುದಿಲ್ಲ ಯಾರು ನಿಲ್ಲುವ ಕಲೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಯಾರು ಸದಾ ಶ್ರೇಷ್ಠ ಸಂಗದಲ್ಲಿರುತ್ತಾ ಮತ್ತು ಒಬ್ಬ ತಂದೆಯನ್ನು ತನ್ನ ಸಂಗಾತಿ (ಕಂಪ್ಯಾನಿಯನ್) ಮಾಡಿಕೊಂಡು ಅವರಿಂದಲೇ ಪ್ರೀತಿಯ ರೀತಿಯನ್ನು ನಿಭಾಯಿಸುತ್ತಾರೆ, ಅವರೇ ಶ್ರೇಷ್ಠ ಭಾಗ್ಯವಂತರು.

ಸ್ಲೋಗನ್:
ಮನಸ್ಸು ಮತ್ತು ಬುದ್ದಿಯನ್ನು ಒಂದೇ ಶಕ್ತಿಶಾಲಿ ಸ್ಥಿತಿಯಲ್ಲಿ ಸ್ಥಿತ ಮಾಡುವುದು ಇದೇ ಏಕಾಂತವಾಸಿಗಳಾಗುವುದು.