16.03.21 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ಶಿವ
ಬಾಬಾರವರಿಂದ ರಚಿಸಿರುವ ಈ ರುದ್ರ ಜ್ಞಾನ ಯಜ್ಞವನ್ನು ನೀವು ಬಹಳ - ಬಹಳ ಸಂಭಾಲನೆ ಮಾಡಬೇಕಾಗಿದೆ,
ಇದು ಸ್ವರಾಜ್ಯವನ್ನು ಪಡೆಯುವುದಕ್ಕಾಗಿ ಬೆಹದ್ದಿನ ಯಜ್ಞವಾಗಿದೆ"
ಪ್ರಶ್ನೆ:
ಈ ರುದ್ರ ಯಜ್ಞದ
ಪ್ರತಿ ಯಾವ ಮಕ್ಕಳಿಗೆ ಗೌರವವಿರುತ್ತದೆ?
ಉತ್ತರ:
ಯಾರು ಇದರ ವಿಶೇಷತೆಗಳನ್ನು ತಿಳಿದುಕೊಂಡಿರುವರೋ ಅವರಿಗೆ ಇದರ ಪ್ರತಿ ಗೌರವವಿರುತ್ತದೆ. ನಿಮಗೆ
ತಿಳಿದಿದೆ - ಈ ರುದ್ರ ಯಜ್ಞದಿಂದ ನಾವು ಕವಡೆಯಿಂದ ವಜ್ರ ಸಮಾನರಾಗುತ್ತೇವೆ. ಇದರಲ್ಲಿ ಇಡೀ ಹಳೆಯ
ಪ್ರಪಂಚವು ಸ್ವಾಹಾ ಆಗುತ್ತದೆ. ಈ ಹಳೆಯ ಶರೀರವನ್ನೂ ಸಹ ಸ್ವಾಹಾ ಮಾಡಬೇಕಾಗಿದೆ. ಯಜ್ಞದಲ್ಲಿ
ವಿಘ್ನವಾಗುವಂತಹ ಯಾವುದೇ ನಿಯಮಕ್ಕೆ ವಿರುದ್ಧವಾದ ಕರ್ಮ ಮಾಡಬಾರದು. ಯಾವಾಗ ಇದರ ಪ್ರತಿ
ಗಮನವಿರುವುದೋ ಆಗಲೇ ಗೌರವವನ್ನಿಡಲು ಸಾಧ್ಯ.
ಗೀತೆ:
ಮಾತೇ ಓ ಮಾತೇ ನೀನೇ ಎಲ್ಲರ ಭಾಗ್ಯವಿದಾತೆ....
ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ, ಯಾರು ಇದನ್ನು ರಚಿಸಿದ್ದಾರೆಯೋ ಅವರಂತೂ ಈ ತಾಯಿಯ ಬಗ್ಗೆ
ತಿಳದುಕೊಂಡೇ ಇಲ್ಲ. ಜಗದಂಬೆ ಎಂಬ ಹೆಸರನ್ನು ಕೇಳಿದ್ದಾರೆ ಆದರೆ ಅವರು ಯಾರಾಗಿದ್ದರು. ಏನು ಮಾಡಿ
ಹೋದರು ಎಂಬುದು ನೀವು ಮಕ್ಕಳ ವಿನಃ ಯಾರಿಗೂ ತಿಳಿದಿಲ್ಲ. ಜಗದಂಬೆ ಇದ್ದಾರೆ ಅಂದಮೇಲೆ ಅವಶ್ಯವಾಗಿ
ತಂದೆಯೂ ಇದ್ದಾರೆ. ಮಕ್ಕಳೂ ಇದ್ದಾರೆ. ಯಾರು ಜಗದಂಬೆಯ ಬಳಿ ಹೋಗುವರೋ ಅವರ ಬುದ್ಧಿಯಲ್ಲಿ ಈ
ತಿಳುವಳಿಕೆಯಿಲ್ಲ. ಕೇವಲ ಮೂರ್ತಿಯ ಪೂಜಾರಿಗಳಾಗಿದ್ದಾರೆ. ದೇವಿಯ ಮುಂದೆ ಹೋಗಿ ಬೇಡುತ್ತಾರೆ. ಈಗ
ಇದು ರಾಜಸ್ವ ಅಶ್ವಮೇಧ ಅವಿನಾಶಿ ರುದ್ರ ಜ್ಞಾನ ಯಜ್ಞವಾಗಿದೆ. ಇದರ ರಚಯಿತರೂ ಮಾತಾಪಿತರಾಗಿದ್ದಾರೆ.
ತತ್ತ್ವಂ. ನೀವೂ ಸಹ ಯಜ್ಞದ ರಚಾಯಿತರಾಗಿದ್ದೀರಿ. 'ನಿವೇಲ್ಲರೂ, ಈ ಯಜ್ಞದ ಸಂಭಾಲನೆ ಮಾಡಬೇಕಾಗಿದೆ.
ಯಜ್ಞದ ಪ್ರತಿ ಬಹಳ ಗೌರವವಿರಬೇಕು. ಯಜ್ಞದ ಪೂರ್ಣ ಸಂಭಾಲನೆ ಮಾಡಬೇಕಾಗಿದೆ. ಇದು ಪ್ರಧಾನ
ಕೇಂದ್ರವಾಗಿದೆ. ಇನ್ನೂ ಶಾಖೆಗಳಿವೆ. ಮಮ್ಮಾ, ಬಾಬಾ ಮತ್ತು ನೀವು ಮಕ್ಕಳು. ನೀವೆಲ್ಲರೂ ಈ ಯಜ್ಞದ
ಮೂಲಕ ಭವಿಷ್ಯದಲ್ಲಿ ವಜ್ರ ಸಮಾನರಾಗುತ್ತಿದ್ದೀರಿ ಅಂದಮೇಲೆ ಇಂತಹ ಯಜ್ಞವನ್ನು ಎಷ್ಟು ಸಂಭಾಲನೆ
ಮಾಡಬೇಕು ಮತ್ತು ಗೌರವವಿಡಬೇಕು? ಎಷ್ಟೊಂದು ಪ್ರೀತಿಯಿರಬೇಕು! ಇದು ನಮ್ಮ ತಾಯಿಯಾದ ಜಗದಂಬಾರವರ
ಯಜ್ಞವಾಗಿದೆ. ಮಮ್ಮಾ-ಬಾಬಾರವರ ಯಜ್ಞವೆಂದರೆ ನಮ್ಮ ಯಜ್ಞವೂ ಆಗಿದೆ. ಯಜ್ಞದ ವೃದ್ಧಿ ಮಾಡಬೇಕಾಗಿದೆ
– ಯಜ್ಞದಲ್ಲಿ ಅನೇಕ ಮಕ್ಕಳು ಬಂದು ತಮ್ಮ ತಂದೆಯಿಂದ ಆಸ್ತಿಯನ್ನು ಪಡೆಯಲು ಭಲೇ ತಾನು
ತೆಗೆದುಕೊಳ್ಳಲು ಸಾಧ್ಯವಿಲ್ಲ, ಬಿಡುವಿಲ್ಲವೆಂದರೆ ಅನ್ಯರಿಗಾದರೂ ನಿಮಂತ್ರಣ ಕೊಡಬೇಕು. ಇದರ ಹೆಸರೇ
ಆಗಿದೆ ರಾಜಸ್ವ ಅಶ್ವಮೇಧ ಜ್ಞಾನ ಯಜ್ಞ. ಇದರಿಂದ ಸ್ವರಾಜ್ಯ ಸಿಗುತ್ತದೆ. ಈ ಯಜ್ಞದಲ್ಲಿ ಹಳೆಯ
ಶರೀರವನ್ನೂ ಸಹ ಸ್ವಾಹಾ ಮಾಡಲಾಗುತ್ತದೆ. ಬಲಹಾರಿಯಾಗಬೇಕಾಗಿದೆ. ಯಜ್ಞವೆಂದರೆ ಯಾವುದೇ ಮನೆಯಲ್ಲ,
ಇದು ಬೇಹದ್ದಿನ ಮಾತಾಗಿದೆ ಯಾವ ಯಜ್ಞದಲ್ಲಿ ಇಡೀ ವಿಶ್ವವೇ ಸ್ವಾಹಾ ಆಗುವುದು. ಮುಂದೆ ಹೋದಂತೆ ನೀವು
ನೋಡುವಿರಿ - ಈ ಯಜ್ಞಕ್ಕೆ ಎಷ್ಟೊಂದು ಗೌರವ ಕೊಡುತ್ತಾರೆ!. ಇಲ್ಲಿ ಅನೇಕರಿಗೆ ಇದರ ಪ್ರತಿ ಗೌರವವೇ
ಇಲ್ಲ. ಇಷ್ಟೊಂದು ಮಂದಿ ಯಜ್ಞದ ಮಕ್ಕಳಿದ್ದಾರೆ. ಹೊಸ-ಹೊಸ ಮಕ್ಕಳು ಜನ್ಮ ಪಡೆಯುತ್ತಿರುತ್ತಾರೆ
ಅಂದಮೇಲೆ ಈ ಯಜ್ಞದ ಪ್ರತಿ ಎಷ್ಟೊಂದು ಗೌರವಿಡಬೇಕು! ಆದರೆ ಅನೇಕರಿಗೆ ಇದರ ಪ್ರತಿ ಬೆಲೆಯೇ ಇಲ್ಲ.
ಇದು ಇಷ್ಟು ದೊಡ್ಡ ಯಜ್ಞವಾಗಿದೆ! ಯಾವುದರಿಂದ ಮನುಷ್ಯರು ಕವಡೆಯಿಂದ ವಜ್ರ ಸಮಾನ,
ಭ್ರಷ್ಟಾಚಾರಿಯಿಂದ ಶ್ರೇಷ್ಠಾಚಾರಿಯಾಗುತ್ತಾರೆ. ಆದ್ದರಿಂದ ತಂದೆಯ ತಿಳಿಸುತ್ತಾರೆ – ಭಲೆ
ಯಜ್ಞವನ್ನು ರಚಿಸುತ್ತಾ ಇರಿ, ಅದರಲ್ಲಿ ಒಬ್ಬರು ಶ್ರೇಷ್ಠಾಚಾರಿಯಾದರೂ ಸಹ ಅಹೋ ಸೌಭಾಗ್ಯ.
ಎಷ್ಟೊಂದು ಲಕ್ಷಾಂತರ ಮಂದಿರಗಳಿವೆ ಆದರೆ ಅಲ್ಲಿ ಯಾರು ಶ್ರೇಷ್ಠಾಚಾರಿಯಾಗುವುದಿಲ್ಲ. ಇಲ್ಲಾದರೆ
ಕೇವಲ ಮೂರು ಹೆಜ್ಜೆಗಳಷ್ಟು ಭೂಮಿ ಬೇಕು. ಯಾರೇ ಬಂದರೂ ಸಹ ಒಮ್ಮೇಲೆ ಅವರ ಜೀವನವು ಸುಧಾರಣೆಯಾಗಲಿ.
ಯಜ್ಞದ ಪ್ರತಿ ಎಷ್ಟೊಂದು ಗೌರವವಿರಬೇಕು! ಬಾಬಾ, ನಾವು ನಮ್ಮ ಮನೆಯಲ್ಲಿ ಸೇವಾಕೇಂದ್ರವನ್ನು
ತೆರೆಯುವುದೇ ಎಂದು ಅನೇಕ ಮಕ್ಕಳು ತಂದೆಗೆ ಪತ್ರ ಬರೆಯುತ್ತಾರೆ. ತಂದೆಯು ತಿಳಿಸುತ್ತಾರೆ -
ಒಳ್ಳೆಯದು ಮಕ್ಕಳೇ ಭಲೆ ಯಜ್ಞ ಭೂಮಿಯನ್ನು ಮಾಡಿ. ಕೆಲವರ ಕಲ್ಯಾಣವಾದರೂ ಆಗುವುದು. ಈ ಯಜ್ಞದ
ಮಹಿಮೆಯು ಬಹಳ ಭಾರಿಯಾಗಿದೆ, ಯಜ್ಞದ ಭೂಮಿಯಾಗಿದೆ. ಇಲ್ಲಿ ಮಕ್ಕಳು ಅನ್ಯರ ಕಲ್ಯಾಣ
ಮಾಡುತ್ತಿರುತ್ತಾರೆ. ಇಂತಹ ಯಜ್ಞಕ್ಕೆ ಬಹಳ ಮಾನ್ಯತೆ ಬೇಕು ಆದರೆ ಪೂರ್ಣ ಜ್ಞಾನವಿಲ್ಲದ ಕಾರಣ
ಇಷ್ಟೊಂದು ಗೌರವವನ್ನಿಡುವುದಿಲ್ಲ. ಯಜ್ಞದಲ್ಲಿ ವಿಘ್ನಗಳನ್ನು ಹಾಕುವವರು ಅನೇಕರಿದ್ದಾರೆ. ಇದು
ಶಿವ ತಂದೆಯ ಯಜ್ಞವಾಗಿದೆ ಅಂದಮೇಲೆ ಮಾತಾಪಿತರು ಒಟ್ಟಿಗೆ ಇದ್ದಾರೆ. ಈ ಮಮ್ಮಾ - ಬಾಬಾರವರಿಂದ ಏನೂ
ಸಿಗುವುದಿಲ್ಲ. ಎಲ್ಲವೂ ಬೇಹದ್ದಿನ ತಂದೆಯಿಂದಲೇ ಸಿಗುತ್ತದೆ. ಅವರು ಒಬ್ಬರೇ ಆಗಿದ್ದಾರೆ,
ಶರೀರಧಾರಿಗಳಿಗೆ ಮಮ್ಮಾ-ಬಾಬಾ ಎಂದು ಹೇಳಲಾಗುತ್ತದೆ. ನಿರಾಕಾರನಿಗಂತೂ ಶರೀರವಿಲ್ಲ ಆದ್ದರಿಂದ
ತಂದೆಯು ತಿಳಿಸುತ್ತಾರೆ - ಈ ಸಾಕಾರಿ ತಂದೆಯನ್ನೂ ನೀವು ನೋಡಬೇಡಿ, ನನ್ನೊಬ್ಬನನ್ನೇ ನೆನಪು ಮಾಡಿ.
ಈ ಬ್ರಹ್ಮಾರವರೂ ಸಹ ನನ್ನನ್ನೇ ನೆನಪು ಮಾಡುತ್ತಾರೆ, ಚಿತ್ರಗಳಲ್ಲಿ ತೋರಿಸುತ್ತಾರೆ – ರಾಮ,
ಕೃಷ್ಣ, ಬ್ರಹ್ಮಾ ಮೊದಲಾದವರೆಲ್ಲರೂ ಭಗವಂತನನ್ನೇ ನೆನಪು ಮಾಡುತ್ತಾರೆ, ವಾಸ್ತವದಲ್ಲಿ ಅಲ್ಲಿ ಯಾರೂ
ನೆನಪು ಮಾಡುವುದಿಲ್ಲ. ಅವರಿಗೆ ಪ್ರಲಾಬ್ದ ಸಿಕ್ಕಿರುತ್ತದೆ ಅಂದಮೇಲೆ ಭಗವಂತನನ್ನು ನೆನಪು ಮಾಡುವ
ಅವಶ್ಯಕತೆಯೇನಿದೆ? ನಾವು ಪತಿತರಾಗಿದ್ದೇವೆ ಆದ್ದರಿಂದ ಪಾವನರಾಗುವುದಕ್ಕಾಗಿ ನಾವೇ ತಂದೆಯನ್ನು
ನೆನಪು ಮಾಡಬೇಕಾಗಿದೆ. ಮಹಿಮೆಯೂ ಸಹ ಅವರೊಬ್ಬರದೇ ಆಗಿದೆ. ಅವರ ಕಾರಣ ಇವರಿಗೆ (ಬ್ರಹ್ಮಾ)
ಮಾನ್ಯತೆಯಿದೆ. ಈಗಂತೂ ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ದೇಹಧಾರಿಯಿಂದ ಅವರ ಪರಿಚಯ
ಸಿಗುತ್ತದೆ ಆದರೆ ನೆನಪು ಮಾತ್ರ ಶಿವ ತಂದೆಯನ್ನೇ ಮಾಡಬೇಕಾಗಿದೆ. ಈ ಬ್ರಹ್ಮನೂ
ದೇಹಧಾರಿಯಾಗಿದ್ದಾರೆ. ಎಲ್ಲರೂ ಪರಿಚಯ ಕೊಡುತ್ತಾರೆ ಆದರೆ ಇಂತಹ ತಿಳುವಳಿಕೆ ಹೀನ ಮಕ್ಕಳು
ಅನೇಕರಿದ್ದಾರೆ, ಅವರು ನೇರವಾಗಿ ಶಿವ ತಂದೆಯ ಪ್ರೇರಣೆಯಿಂದ ನಾವು ಜ್ಞಾನವನ್ನು
ತೆಗೆದುಕೊಳ್ಳುತ್ತೇವೆಂದು ಹೇಳುತ್ತಾರೆ. ಒಂದುವೇಳೆ ಆ ರೀತಿ ಇದ್ದಿದ್ದರೆ ಈ ರಥದಲ್ಲಿ ತಂದೆಯು
ಬರುವ ಅವಶ್ಯಕತೆಯಾದರೂ ಏನು? ಈ ಸಾಕಾರಿ ತಂದೆಯೊಂದಿಗೆ ನಮಗೇನು ಕೆಲಸ ಎಂದು ತಿಳಿದುಕೊಳ್ಳುವವರೂ
ಇದ್ದಾರೆ ಆದರೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ. ನನ್ನನ್ನು ನೆನಪು ಮಾಡಿ ಆದರೆ
ನಾನೂ ಸಹ ಇವರ ಮೂಲಕವೇ ತಿಳಿಸುತ್ತೇನಲ್ಲವೆ ಅಂದಮೇಲೆ ಇವರಿಗೂ ಗೌರವ ಕೊಡಬೇಕು. ಯಾರು ನಂಬರ್ವಾರ್
ಸಿಂಹಾಸನದ ಮೇಲೆ ಕುಳಿತುಕೊಳ್ಳುವವರಿದ್ದಾರೆಯೋ ಅವರೇ ಗೌರವ ಕೊಡುತ್ತಾರೆ. ಮಮ್ಮಾ-ಬಾಬಾರವರು ಮೊದಲು
ರಾಜ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೆ ಮತ್ತೆ ಅವರನ್ನು ಫಾಲೋ ಮಾಡಬೇಕಾಗಿದೆ. ಬಹಳ
ಪ್ರಜೆಗಳನ್ನು ತಯಾರು ಮಾಡಬೇಕಾಗಿದೆ ಪದವಿಯು ಬಹಳ ಉನ್ನತವಾಗಿದೆ. ಯಾವುದೇ ಹೆದರುವ ಮಾತಿಲ್ಲ.
ವಿಮಾನದಲ್ಲಿ ಯಾರಾದರು ಹೊಸಬರು ಕುಳಿತುಕೊಂಡರೆ ಹೆದರುತ್ತಾರೆ, ಇನ್ನೂ ಕೆಲವರು ನೋಡಿ ಚಂದ್ರ
ಗ್ರಹದವರೆಗೂ ಹೋಗುತ್ತಿರುತ್ತಾರೆ. ಎಲ್ಲವೂ ಅಭ್ಯಾಸದ ಮಾತಲ್ಲವೆ ಆದರೆ ಅದರಿಂದೇನೂ
ಲಾಭವಾಗುವುದಿಲ್ಲ, ಇದನ್ನೂ ನೀವು ತಿಳಿದುಕೊಂಡಿದ್ದಿರಿ. ಚಂದ್ರ ಗ್ರಹದಲ್ಲಿಯೂ ನಾವು
ರಾಜಧಾನಿಯನ್ನು ಕಟ್ಟುತ್ತೇವೆಂದು ಅವರು ತಿಳಿಯುತ್ತಾರೆ ಆದರೆ ಎದೇನು ಆಗುವುದಿಲ್ಲ. ಇದು ಅವನತಿ
ಅಲ್ಲವೇ. ಉತ್ಥಾನ ಮತ್ತು ಪತನವನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ. ಈ ಲಕ್ಷಿ - ನಾರಾಯಣರು
ರಾಜ್ಯಭಾರ ಮಾಡುತ್ತಿದ್ದರೆಂದು ಚಿತ್ರಗಳೂ ಇವೆ.
ಇತ್ತೀಚೆಗಂತೂ ನೋಡಿ, ಭಾರತವು ಎಷ್ಟು ಬಡದೇಶವಾಗಿದೆ! ಇದು ಸತ್ಯ ಮಾತಾಗಿದೆ. ಅವರೂ ಸಹ ಇದನ್ನು
ಸ್ಪಷ್ಟವಾಗಿ ಬರೆದಿದ್ದಾರೆ ಅಂದಮೇಲೆ ಏಣಿ ಚಿತ್ರದಲ್ಲಿ ತೋರಿಸಬೇಕು. ಸತ್ಯಯುಗದಲ್ಲಿ
ವಜ್ರ-ವೈಡೂರ್ಯಗಳ ಮಹಲುಗಳು ಹೊಳೆಯುತ್ತವೆ. ಇಲ್ಲಿ ಕವಡೆಗಳು ಎಂಬುದನ್ನು ತೋರಿಸಬೇಕು. ಮೊದಲು
ಕವಡೆಗಳು ಚಲಾವಣೆಯಲ್ಲಿತ್ತು, ಗುರು ದ್ವಾರದಲ್ಲಿ ಕವಡೆಗಳನ್ನು ಇಡುತ್ತಿದ್ದರು. ಈಗಂತೂ ಯಾರೂ
ಹಣವನ್ನೂ ಸಹ ಇಡುವುದಿಲ್ಲ. ಏಣಿಯ ಚಿತ್ರವು ಬಹಳ ಚೆನ್ನಾಗಿದೆ. ಇದರಲ್ಲಿ ನೀವು ಬಹಳಷ್ಟು
ಬರೆಯಬಹುದು. ಮಮ್ಮಾ-ಬಾಬಾರವರ ಜೊತೆ ಮಕ್ಕಳ ಚಿತ್ರವೂ ಇರಲಿ ಮತ್ತು ಮೇಲ್ಭಾಗದಲ್ಲಿ ಆತ್ಮಗಳ
ವೃಕ್ಷವನ್ನು ತೋರಿಸಿ. ಹೊಸ-ಹೊಸ ಚಿತ್ರಗಳು ತಯಾರಾಗುತ್ತಾ ಹೋಗುತ್ತವೆ. ಇದರಿಂದ ತಿಳಿಸುವುದಕ್ಕೂ
ಸಹಜವಾಗುವುದು. ಹೇಗೆ ಉತ್ಥಾನ ಮತ್ತು ಪಥನವಾಗುತ್ತದೆ, ನಾವು ನಿರಾಕಾರಿ ಪ್ರಪಂಚದಲ್ಲಿ ಹೋಗಿ ಮತ್ತೆ
ಸಾಕಾರಿ ಪ್ರಪಂಚದಲ್ಲಿ ಬರುತ್ತೇವೆ ಮತ್ತೆ ತಿಳಿಸಲು ಬಹಳ ಸಹಜವಾಗುತ್ತದೆ. ಒಂದುವೇಳೆ
ಅರ್ಥವಾಗಲಿಲ್ಲವೆಂದರೆ ಅವರ ಅದೃಷ್ಟದಲ್ಲಿಲ್ಲವೆಂದು ತಿಳಿಯಿರಿ, ನಾಟಕವನ್ನು ಸಾಕ್ಷಿಯಾಗಿದ್ದು
ನೋಡಬೇಕಾಗಿದೆ. ಮಕ್ಕಳಿಗೆ ಯಜ್ಞದ ಪ್ರತಿ ಬಹಳ ಗೌರವವಿರಬೇಕು. ಯಜ್ಞದ ಒಂದು ಪೈಸೆಯನ್ನೂ ಸಹ
ಅನುಮತಿಯಿಲ್ಲದೆ ತೆಗೆದುಕೊಳ್ಳಬಾರದು. ಮಾತಾಪಿತರ ಅನುಮತಿಯಿಲ್ಲದೆ ಅನ್ಯರಿಗೆ ಕೊಡುವುದು ಮಹಾನ್
ಪಾಪವಾಗಿದೆ. ನೀವಂತೂ ಮಕ್ಕಳಾಗಿದ್ದೀರಿ ಅಂದಮೇಲೆ ಯಾವ ಸಮಯದಲ್ಲಿ ಏನು ಬೇಕಾದರೂ ಸಿಗುತ್ತದೆ
ಆದ್ದರಿಂದ ಹೆಚ್ಚಿಗೆ ತೆಗೆದುಕೊಂಡು ಇಟ್ಟುಕೊಳ್ಳುವುದೇಕೆ? ಸಿಗುತ್ತದೆಯೋ, ಇಲ್ಲವೋ ಎಂದು
ಆಲೋಚಿಸುತ್ತಾರೆ ಆದರೆ ಹೀಗೆ ತಿಳಿದು ಇಟ್ಟುಕೊಳ್ಳುವುದರಿಂದ ಮತ್ತೆ ಮನಸ್ಸು ತಿನ್ನುತ್ತದೆ
ಏಕೆಂದರೆ ಇದು ನಿಯಮಕ್ಕೆ ವಿರುದ್ಧವಾದ ಕೆಲಸವಲ್ಲವೆ. ನಿಮಗೆ ಯಾವಾಗ ಏನು ಬೇಕಾದರೂ ಯಜ್ಞದಿಂದ
ಸಿಗುತ್ತದೆ. ತಂದೆಯು ತಿಳಿಸಿದ್ದಾರೆ – ಅಂತ್ಯ ಕಾಲದಲ್ಲಿ ಯಾರು ಬೇಕಾದರೂ ಸಾವನ್ನಪ್ಪುತ್ತಾರೆ
ಆದ್ದರಿಂದ ಅಂತ್ಯ ಸಮಯದಲ್ಲಿ ಯಾರು ಪಾಪ ಮಾಡಿರುತ್ತಾರೆಯೋ ಅವರಿಗೆ ಆ ಕೆಟ್ಟದ್ದೆಲ್ಲವೂ
ಸನ್ಮುಖದಲ್ಲಿ ನೆನಪು ಬರುತ್ತಿರುತ್ತದೆ ಆದ್ದರಿಂದ ತಂದೆಯು ಯಾವಾಗಲೂ ತಿಳಿಸುತ್ತಾರೆ - ಮಕ್ಕಳೇ,
ಒಳಗೆ ಯಾವುದೇ ದ್ವಂದ್ವವಿರಬಾರದು. ಹೃದಯವು ಸ್ವಚ್ಛವಾಗಿದ್ದರೆ ಅಂತಿಮ ಕ್ಷಣದಲ್ಲಿ ಏನೂ ಮುಂದೆ
ಬರುವುದಿಲ್ಲ. ಯಜ್ಞದಿಂದ ಎಲ್ಲವೂ ಸಿಗುತ್ತಿರುತ್ತದೆ. ಅನೇಕ ಮಕ್ಕಳಿದ್ದಾರೆ, ಯಾರ ಬಳಿ ಬಹಳಷ್ಟು
ಹಣವಿದೆ, ಅವರಿಗೆ ತಂದೆಯು ಹೇಳುತ್ತಾರೆ – ಅವಶ್ಯಕತೆಯಿದ್ದಾಗ ಕೇಳಿ ತರಿಸಿಕೊಳ್ಳುತ್ತೇವೆ. ಬಾಬಾ,
ಅವಶ್ಯಕತೆ ಬಿದ್ದಾಗ ತಿಳಿಸಿ, ನಾವು ಕುಳಿತಿದ್ದೇವೆ ಎಂದು ಹೇಳುತ್ತಾರೆ. ಭಲೆ
ಪವಿತ್ರರಾ’ಗಿರುವುದ್ದಿಲ್ಲ, ಆಹಾರ ಪಾನೀಯ ಪಥ್ಯವನ್ನೂ ಇಡುವುದಿಲ್ಲ ಆದರೆ ಈ ಪ್ರತಿಜ್ಞೆ
ಮಾಡುತ್ತಾರೆ - ಬಾಬಾ, ನಮ್ಮ ಬಳಿ ಬಹಳಷ್ಟು ಹಣವಿದೆ, ಅದು ಹಾಗೆಯೇ ಸಮಾಪ್ತಿಯಾಗುತ್ತದೆ,
ಮಧ್ಯದಲ್ಲಿ ಯಾರಾದರೂ ತಿಂದು ಬಿಡುತ್ತಾರೆ. ಆದ್ದರಿಂದ ತಮಗೆ ಯಾವಾಗ ಬೇಕೋ ಆಗ ಕೇಳಿ ಪಡೆಯಿರಿ ಎಂದು
ಹೇಳುತ್ತಾರೆ. ಅದಕ್ಕೆ ತಂದೆಯು ಹೇಳುತ್ತಾರೆ – ತೆಗೆದುಕೊಂಡು ನಾವಾದರೂ ಏನು ಮಾಡುವುದು? ಮನೆ
ಕಟ್ಟಿಸಬೇಕಾದರೆ ಹಣವು ತಾನಾಗಿಯೇ ಬರುತ್ತದೆ. ಮನೆಯಲ್ಲಿ ಅನೇಕ ಮಕ್ಕಳು ಕುಳಿತಿದ್ದಾರೆ ಅಂದಮೇಲೆ
ಅಂತಹ ಮಕ್ಕಳೂ ಸಹ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಪ್ರಜೆಗಳಲ್ಲಿಯೂ ಸಹ ಯಾವುದೇ ಕಡಿಮೆ
ಪದವಿಯಿಲ್ಲ. ರಾಜರಿಗಿಂತಲೂ ಕೆಲವರು ಸಾಹುಕಾರರು ಬಹಳ ಧನವಂತರಾಗಿರುತ್ತಾರೆ ಆದ್ದರಿಂದ ಒಳಗೆ
ಯಾವುದೇ ಇಂತಹ ವಿಚಾರ ಮಾಡಬಾರದು. ನಿಮ್ಮ ಪ್ರತಿಜ್ಞೆಯಾಗಿದೆ - ಬಾಬಾ ತಾವು ಏನನ್ನು
ತಿನ್ನಿಸುತ್ತೀರೋ ಅದನ್ನೇ ತಿನ್ನುವೆವು... ಈ ರೀತಿ ಹೇಳಿದ ನಂತರ ಅದರಂತೆ ನಡೆಯಲಿಲ್ಲವೆಂದರೆ
ದುರ್ಗತಿಯಾಗಿ ಬಿಡುತ್ತದೆ. ತಂದೆಯು ಸದ್ಗತಿ ನೀಡಲು ಬಂದಿದ್ದಾರೆ. ಒಂದುವೇಳೆ ಶ್ರೇಷ್ಠ ಪದವಿಯನ್ನು
ಪಡೆಯಲಿಲ್ಲವೆಂದರೆ ದುರ್ಗತಿಯಂದೆ ಹೇಳಲಾಗುತ್ತದೆಯಲ್ಲವೆ. ಸತ್ಯಯುಗದಲ್ಲಿಯೂ ಸಹ ಬಹಳ ಸಾಹುಕಾರರು
ಕೆಲವರು ಕಡಿಮೆ ಪದವಿಯವರು, ಕೆಲವರು ಉನ್ನತ ಪದವಿಯವರು ಇರುತ್ತಾರಲ್ಲವೆ. ನೀವು ಮಕ್ಕಳು
ಶ್ರೀಮತದಂತೆ ಪುರುಷಾರ್ಥ ಮಾಡಬೇಕಾಗಿದೆ. ತನ್ನ ಮತದಂತೆ ನಡೆದರೆ ತಮಗೆ ಮೋಸ ಮಾಡಿಕೊಳ್ಳುತ್ತೀರಿ,
ಇದು ಶಿವ ತಂದೆಯು ರಚಿಸಿರುವ ಜ್ಞಾನ ಯಜ್ಞವಾಗಿದೆ. ಇದರ ಹೆಸರೇ ಆಗಿದೆ – ರಾಜಸ್ವ ಅಸ್ವಮೇಧ
ಅವಿನಾಶಿ ರುದ್ರ ಜ್ಞಾನ ಯಜ್ಞ, ಶಿವ ತಂದೆಯು ಬಂದು ಸ್ವರಾಜ್ಯವನ್ನು ಕೊಡುತ್ತಾರೆ. ಯಾರ
ಅದೃಷ್ಟದಲ್ಲಿಲ್ಲವೋ, ಹೆಸರು ಪ್ರಸಿದ್ಧವಾಗುವುದಿಲ್ಲವೋ ಅಂತಹವರ ಬಾಯಿಂದ ಒಳ್ಳೊಳ್ಳೆಯ ವಿಚಾರಗಳು
ಹೊರ ಬರುವುದಿಲ್ಲ. ಯಾರಿಗೂ ತಿಳಿಸುವುದೂ ಇಲ್ಲ. ಹೆಸರು ಪ್ರತ್ಯಕ್ಷವಾಗಲು ಇನ್ನೂ ಸಮಯವಿದೆ, ಆ
ಕಾರಣ ತಿಳಿಸುವ ಸಮಯದಲ್ಲಿ ಮುಖ್ಯ-ಮುಖ್ಯ ಮಾತುಗಳು ಮರೆತು ಹೋಗುತ್ತವೆ. ಇದನ್ನೂ ಸಹ ತಿಳಿಸಬೇಕು -
ಸ್ವರಾಜ್ಯವನ್ನು ಪಡೆಯುವುದಕ್ಕಾಗಿ ಇದು ರಾಜಸ್ವ ಅಶ್ವಮೇಧ ಅವಿನಾಶಿ ರುದ್ರ ಜ್ಞಾನ ಯಜ್ಞವಾಗಿದೆ.
ಇದನ್ನು ಬೋರ್ಡಿನ ಮೇಲೂ ಬರೆಯುರಿ. ಈ ಯಜ್ಞದಲ್ಲಿ ಹಳೆಯ ಪ್ರಪಂಚವೆಲ್ಲವೂ ಸ್ವಾಹಾ ಆಗಿ ಬಿಡುತ್ತದೆ.
ಇದಕ್ಕಾಗಿಯೇ ಈ ಮಹಾಭಾರತ ಯುದ್ಧವು ನಿಂತಿದೆ. ವಿನಾಶಕ್ಕೆ ಮೊದಲು ಈ ಸ್ವರಾಜ್ಯದ ಪದವಿಯನ್ನು
ಪಡೆದುಕೊಳ್ಳಬೇಕೆಂದರೆ ಬಂದು ಪಡೆದುಕೊಳ್ಳಿ. ಬೋರ್ಡಿನ ಮೇಲಂತೂ ನೀವು ಬಹಳಷ್ಟು ಬರೆಯಬಹುದು,
ಅದರಲ್ಲಿ ಗುರಿ-ಧ್ಯೆಯವೂ ಸಹ ಬಂದು ಬಿಡಬೇಕು. ಕೆಳಭಾಗದಲ್ಲಿ ಬರೆಯಿರಿ - ಸ್ವರಾಜ್ಯ ಪದವಿ
ಸಿಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಸ್ಪಷ್ಟ ಬರವಣಿಗೆಯಿರಲಿ ಯಾವುದನ್ನು ಯಾರೇ ಓದಿದರೂ ಸಹ
ಅರ್ಥವಾಗುವಂತಿರಲಿ. ಹೀಗೀಗೆ ಬೋರ್ಡನ್ನು ಮಾಡಿಸಿ. ಈ ಶಬ್ದಗಳನ್ನು ಅವಶ್ಯವಾಗಿ ಬರೆಯಿರಿ ಎಂದು
ತಂದೆಯು ಆದೇಶ ನೀಡುತ್ತಾರೆ. ಮುಂದೆ ಹೋದಂತೆ ಬಹಳಷ್ಟು ಈ ಯಜ್ಞದ ಪ್ರಭಾವ ಬೀರುವುದು.
ಬಿರುಗಾಳಿಗಳಂತೂ ಬಹಳ ಬರುತ್ತವೆ. ಸತ್ಯದ ದೋಣಿಯು ಅಲುಗಾಡುವುದೇ ಹೊರತು ಮುಳುಗುವುದಿಲ್ಲವೆಂದು
ಹೇಳುತ್ತಾರೆ ಅಂದಾಗ ಈಗ ಕ್ಷೀರ ಸಾಗರದ ಕಡೆ ಹೋಗಬೇಕಾಗಿದೆ. ಆದ್ದರಿಂದ ವಿಷಯ ಸಾಗರದ ಕಡೆ
ಮನಸ್ಸಿರಬಾರದು. ಯಾರು ಜ್ಞಾನವನ್ನು ತೆಗೆದುಕೊಳ್ಳುವುದಿಲ್ಲವೋ ಅವರ ಹಿಂದೆ ಬಿದ್ದು ತನ್ನ
ಸಮಯವನ್ನು ವ್ಯರ್ಥ ಮಾಡಬಾರದು. ತಿಳುವಳಿಕೆಯಂತೂ ಬಹಳ-ಬಹಳ ಸಹಜವಾಗಿದೆ.
ನೀವೇ ಪೂಜ್ಯ ದೇವಿ-ದೇವತೆಗಳಾಗಿದ್ದಿರಿ, ಈಗ ಪೂಜಾರಿಗಳಾಗಿದ್ದೀರಿ. ಪುನಃ ತಂದೆಯು ತಿಳಿಸುತ್ತಾರೆ
- ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ತುಕ್ಕು ಬಿಟ್ಟು ಹೋಗುವುದು. ನಿಮ್ಮ ಪಾಪಗಳು ಭಸ್ಮವಾಗುವವು,
ಮತ್ತ್ಯಾವುದೇ ಉಪಾಯವಿಲ್ಲ. ಇದೇ ಸತ್ಯ-ಸತ್ಯವಾದ ಉಪಾಯವಾಗಿದೆ ಆದರೆ ಮಕ್ಕಳು ಯೋಗದಲ್ಲಿರುವುದಿಲ್ಲ.
ಬಹಳ ದೇಹಾಭಿಮಾನವಿದೆ. ದೇಹಾಭಿಮಾನವು ಕಳೆದಾಗಲೇ ಯೋಗದಲ್ಲಿರಲು ಸಾಧ್ಯ ಮತ್ತೆ ಕರ್ಮಾತೀತ
ಸ್ಥಿತಿಯಾಗುವುದು. ಅಂತಿಮದಲ್ಲಿ ಯಾವುದೇ ವಸ್ತು ನೆನಪಿಗೆ ಬರಬಾರದು. ಕೆಲವು ಮಕ್ಕಳಿಗಂತೂ
ಕೆಲವೊಂದು ವಸ್ತುಗಳಲ್ಲಿ ಇಷ್ಟೊಂದು ಮೋಹವುಂಟಾಗಿ ಬಿಡುತ್ತದೆ ಅದರ ಮಾತೇ ಕೇಳಬೇಡಿ. ಶಿವ
ತಂದೆಯನ್ನು ಎಂದೂ ನೆನೆಪು ಮಾಡುವುದಿಲ್ಲ. ವಾಸ್ತವದಲ್ಲಿ ಇಂತಹ ತಂದೆಯನ್ನು ಬಹಳ ವಿಶೇಷವಾಗಿ ನೆನಪು
ಮಾಡಬೇಕಾಗಿದೆ ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯ ನೆನಪು ಮಾಡಲಿ ಎಂದು ಹೇಳಲಾಗುತ್ತದೆ
ಆದರೆ ಈ ರೀತಿ ನೆನಪಿರುವವರು ಬಹಳ ವಿರಳ. ನಡವಳಿಕೆಯಿಂದಲೇ ಅರ್ಥವಾಗುತ್ತದೆ - ಯಜ್ಞದ ಪ್ರತಿ
ಗೌರವವಿರುವುದಿಲ್ಲ, ಈ ಯಜ್ಞವನ್ನು ಬಹಳ ಸಂಭಾಲನೆ ಮಾಡಬೇಕು. ಸಂಭಾಲನೆ ಮಾಡಿದಿರಿ ಎಂದರೆ
ತಂದೆಯನ್ನು ಖುಷಿ ಪಡಿಸಿದಿರಿ ಎಂದರ್ಥ. ಪ್ರತಿಯೊಂದು ಮಾತಿನಲ್ಲಿ ಎಚ್ಚರ ವಹಿಸಬೇಕು. ಬಡವರ
ಒಂದೊಂದು ಪೈಸೆಯೂ ಈ ಯಜ್ಞದಲ್ಲಿ ಬೀಳುತ್ತದೆ ಆದ್ದರಿಂದ ಅವರು ಪದಮಾಪತಿಗಳಾಗುತ್ತಾರೆ. ಮಾತೆಯರು
ಯಾರ ಬಳಿ ಏನೂ ಇರುವುದಿಲ್ಲವೋ ಅವರೂ ಸಹಾ ಒಂದೆರಡು ರೂಪಾಯಿ, ಎಂಟಾಣಿಯನ್ನು ಈ ಯಜ್ಞದಲ್ಲಿ
ಕೊಡುತ್ತಾರೆ, ಇದರಿಂದ ಅವರು ಪದಮಾಪತಿಗಳಾಗಿ ಬಿಡುತ್ತಾರೆ ಏಕೆಂದರೆ ಬಹಳ ಭಾವನೆಯಿಂದ, ಖುಷಿಯಿಂದ
ತರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಬಡವರ ಬಂಧುವಾಗಿದ್ದೇನೆ, ನೀವು ಮಕ್ಕಳಿಗಾಗಿಯೇ
ಬಂದಿದ್ದೇನೆ. ಕೆಲವರು ಎಂಟಾಣಿಯನ್ನು ತೆಗೆದುಕೊಂಡು ಬರುತ್ತಾರೆ. ಬಾಬಾ, ಮನೆ ಕಟ್ಟಿಸುವುದರಲ್ಲಿ
ಈ ಒಂದು ಇಟ್ಟಿಗೆಯನ್ನು ಹಾಕಿ ಎಂದು ಹೇಳುತ್ತಾರೆ. ಕೆಲವೊಮ್ಮೆ ಎರಡು ಹಿಡಿ ಧಾನ್ಯಗಳನ್ನೂ
ತರುತ್ತಾರೆ. ಅವರ ಭಾವನೆಯ ಕಾರಣ ಅದು ಬಹಳಷ್ಟಾಗಿ ಬಿಡುತ್ತದೆ. ಒಂದೊಂದು ಕಣವೂ ಸಹ. ಕಣಜದಷ್ಟಾಗಿ
ಬಿಡುತ್ತದೆ. ನೀವು ಕುಳಿತು ಬಡವರಿಗೆ ದಾನ ಮಾಡಬೇಕೆಂದಲ್ಲ. ಬಡವರಿಗಂತೂ ಮನುಷ್ಯರು ದಾನ
ಮಾಡುತ್ತಾರೆ. ಪ್ರಪಂಚದಲ್ಲಿ ಹೀಗೆ ಅನೇಕರು ಬಡವರಿದ್ದಾರೆ. ಎಲ್ಲರೂ ಬಂದು ಇಲ್ಲಿ ಕುಳಿತು ಬಿಟ್ಟರೆ
ತಲೆಯೇ ಕೆಡಿಸಿ ಬಿಡುವರು. ನಾವು ಯಜ್ಞದಲ್ಲಿ ಸಮರ್ಪಣೆಯಾಗುತ್ತೇವೆ ಎಂದು ಅನೇಕರು ಹೇಳುತ್ತಾರೆ
ಆದರೆ ಬಹಳ ಸಂಭಾಲನೆಯಿಂದ ಇಟ್ಟುಕೊಳ್ಳಬೇಕಾಗುತ್ತದೆ. ಯಜ್ಞದಲ್ಲಿ ಬಂದು ಏರುಪೇರು ಮಾಡುವಂತಾಗಬಾರದು.
ಈ ಯಜ್ಞದಲ್ಲಂತೂ ಬಹಳ ಪುಣ್ಯಾತ್ಮರಾಗಬೇಕು. ಬಹಳ ಸಂಭಾಲನೆ ಮಾಡಬೇಕು. ಪ್ರಶಸ್ತಿ ಯಜ್ಞದ ಪ್ರತಿ
ಗೌರವವಿರಬೇಕು. ಯಾವ ಈಶ್ವರೀಯ ಯಜ್ಞದಿಂದ ನಾವು ನಮ್ಮ ಶರೀರ ನಿರ್ವಹಣೆ ಮಾಡುತ್ತೇವೆ, ಆದ್ದರಿಂದ
ಯಜ್ಞದ ಹಣವನ್ನು ಯಾರಿಗಾದರೂ ಕೊಡುವುದು ಬಹಳ ಪಾಪವಾಗಿದೆ. ಯಾರು ಕವಡೆಯಿಂದ ವಜ್ರ ಸಮಾನರಾಗುವರೋ
ಈಶ್ವರೀಯ ಸೇವೆಯಲ್ಲಿರುವರೋ ಅವರಿಗಾಗಿ ಈ ಹಣವಿದೆ. ಬಾಕಿ ಬಡವರು ಅಥವಾ ಯಾರೆಂದರೆ ಅವರಿಗೆ ಕೊಡುವ
ಈ ದಾನ-ಪುಣ್ಯವನ್ನಂತೂ ನೀವು ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದೀರಿ.
ಇಳಿಯುತ್ತಾ-ಇಳಿಯುತ್ತಾ ಪಾಪಾತ್ಮರೇ ಆಗತೊಡಗಿದಿರಿ.
ನೀವು ಮಕ್ಕಳು ಎಲ್ಲರಿಗೆ ತಂದೆಯ ಪರಿಚಯವನ್ನು ಕೊಡುವುದಕ್ಕಾಗಿ ಚಿಕ್ಕ-ಚಿಕ್ಕ ಗ್ರಾಮಗಳಲ್ಲಿಯೂ
ಪ್ರದರ್ಶನ ಮಾಡುತ್ತಾ ಇರಿ. ಒಬ್ಬರು ಬಡವರು ಬಂದು ಜ್ಞಾನಿಯಾದರೂ ಸಹ ಒಳ್ಳೆಯದೇ. ಇದರಲ್ಲೇನೂ ಖರ್ಚು
ಇಲ್ಲ, ಲಕ್ಷ್ಮಿ-ನಾರಾಯಣರು ಈ ರಾಜ್ಯವನ್ನು ಪಡೆದರು, ಅವರು ಏನು ಖರ್ಚು ಮಾಡಿದರು? ಏನೂ ಇಲ್ಲ.
ವಿಶ್ವದ ರಾಜ್ಯವನ್ನು ಪಡೆಯಲು ಏನೂ ಖರ್ಚು ಮಾಡಲಿಲ್ಲ. ಆ ಮನುಷ್ಯರಾದರೆ ಪರಸ್ಪರ ಎಷ್ಟೊಂದು
ಹೊಡೆದಾಡುತ್ತಾರೆ. ಸಿಡಿ ಮದ್ದಿಗಾಗಿ ಎಷ್ಟೊಂದು ಖರ್ಚು ಮಾಡುತ್ತಾರೆ ಆದರೆ ಇಲ್ಲಿ ಯಾವುದೇ
ಖರ್ಚಿನ ಮಾತಿಲ್ಲ. ಕವಡೆಯೂ ಖರ್ಚಿಲ್ಲದೆ ಸೆಕೆಂಡಿನಲ್ಲಿ ವಿಶ್ವದ ರಾಜ್ಯಭಾಗ್ಯವನ್ನು ಪಡೆದುಕೊಳ್ಳಿ,
ತಂದೆಯನ್ನು ನೆನಪು ಮಾಡಿ ಆಗ ಅವರ ಆಸ್ತಿಯು ಇದ್ದೇ ಇದೆ. ಎಷ್ಟು ಸಾಧ್ಯವೋ ಅಷ್ಟು ಸತ್ಯ ಹೃದಯದಿಂದ
ಸತ್ಯ ಸಾಹೇಬನನ್ನು ರಾಜಿ ಮಾಡಿಕೊಳ್ಳಿ ಆಗ ಸತ್ಯ ಖಂಡದ ಮಾಲೀಕರಾಗುವಿರಿ. ಇಲ್ಲಿ ಸುಳ್ಳು
ನಡೆಯುವುದಿಲ್ಲ, ನೆನಪು ಮಾಡಬೇಕಾಗಿದೆ. ನಾವಂತೂ ಮಕ್ಕಳಾಗಿಯೇ ಇದ್ದೇವೆ ಎಂದಲ್ಲ. ನೆನಪು
ಮಾಡುವುದರಲ್ಲಿ ಬಹಳ ಪರಿಶ್ರಮವಿದೆ. ಯಾವುದೇ ವಿಕರ್ಮ ಮಾಡಿದರೆ ಬಹಳ ಗೊಂದಲದಲ್ಲಿ ಬಂದು ಬಿಡುವಿರಿ,
ಬುದ್ಧಿಯು ಸ್ಥಿರವಾಗುವುದಿಲ್ಲ, ತಂದೆಯಂತೂ ಅನುಭವಿಯಲ್ಲವೆ. ಎಲ್ಲವನ್ನೂ ತಿಳಿಸುತ್ತಿರುತ್ತಾರೆ.
ಕೆಲವು ಮಕ್ಕಳು ತನ್ನನ್ನು ಎಲ್ಲಾ ಬಲ್ಲವನೆಂದು ತಿಳಿದುಕೊಳ್ಳುತ್ತಾರೆ ಆದರೆ ತಂದೆಯು
ತಿಳಿಸುತ್ತಾರೆ - ಬಹಳ ಪರಿಶ್ರಮವಿದೆ, ಮಾಯೆಯು ಬಹಳ ವಿಘ್ನಗಳನ್ನು ಹಾಕುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಈ
ರುದ್ರ ಯಜ್ಞದ ಪ್ರತಿ ಬಹಳ-ಬಹಳ ಗೌರವವನ್ನಿಡಬೇಕು. ಯಜ್ಞದ ವಾತಾವರಣವನ್ನು ಬಹಳ ಶುದ್ಧ,
ಶಕ್ತಿಶಾಲಿಯನ್ನಾಗಿ ಮಾಡುವುದರಲ್ಲಿ ಸಹಯೋಗಿಗಳಾಗಬೇಕಾಗಿದೆ. ಇದನ್ನು ಪ್ರೀತಿಯಿಂದ ಸಂಭಾಲನೆ
ಮಾಡಬೇಕಾಗಿದೆ.
2. ತನ್ನ ಬಳಿ ಏನನ್ನೂ ಮುಚ್ಚಿಟ್ಟುಕೊಂಡಿರಬಾರದು. ಹೃದಯ ಸ್ವಚ್ಛವಾಗಿದ್ದರೆ ಎಲ್ಲಾ ಬಯಕೆಗಳು
ಈಡೇರುವವು. ಈ ಯಜ್ಞದ ಒಂದೊಂದು ಕವಡೆಯೂ ಸಹ ಅಮೂಲ್ಯವಾಗಿದೆ, ಆದ್ದರಿಂದ ಒಂದು ಕವಡೆಯನ್ನೂ ಸಹ
ವ್ಯರ್ಥವಾಗಿ ಕಳೆಯಬಾರದು. ಯಜ್ಞದ ವೃದ್ಧಿಯಲ್ಲಿ ಸಹಯೋಗ ನೀಡಬೇಕಾಗಿದೆ.
ವರದಾನ:
ಕಾರಣವನ್ನು
ನಿವಾರಣೆಯಲ್ಲಿ ಪರಿವರ್ತನೆ ಮಾಡಿ ಸದಾ ಮುಂದುವರೆಯುವಂತಹ ಸಮರ್ಥಿ ಸ್ವರೂಪ ಭವ.
ಜ್ಞಾನ ಮಾರ್ಗದಲ್ಲಿ
ಎಷ್ಟೆಷ್ಟು ಮುಂದುವರೆಯುವಿರಿ ಅಷ್ಟೇ ಮಾಯೆ ಭಿನ್ನ-ಭಿನ್ನ ರೂಪದಲ್ಲಿ ಪರೀಕ್ಷೆ ತೆಗೆದುಕೊಳ್ಳಲು
ಬರುವುದು, ಏಕೆಂದರೆ ಈ ಪರೀಕ್ಷೆಗಳು ಮುಂದುವರೆಸಲು ಸಾಧನವಾಗಿವೆಯೇ ವಿನಹ ಬೀಳಿಸುವುದಕ್ಕಾಗಿ ಅಲ್ಲ.
ಆದರೆ ನಿವಾರಣೆಯ ಬದಲಾಗಿ ಕಾರಣವನ್ನು ಯೋಚಿಸುವಿರೆಂದರೆ ಸಮಯ ಮತ್ತು ಶಕ್ತಿ ವ್ಯರ್ಥವಾಗಿ ಹೋಗುವುದು.
ಕಾರಣಕ್ಕೆ ಬದಲು ನಿವಾರಣೆಯನ್ನು ಯೋಚಿಸಿ ಮತ್ತು ಒಬ್ಬ ತಂದೆಯ ನೆನಪಿನ ಲಗನ್ನಲ್ಲಿ
ಮಗ್ನರಾಗಿದ್ದಾಗ ಸಮರ್ಥಿ ಸ್ವರೂಪರಾಗಿ ನಿರ್ವಿಘ್ನರಾಗಿ ಬಿಡುವಿರಿ.
ಸ್ಲೋಗನ್:
ಮಹಾದಾನಿ ಇವರೇ
ಆಗಿದ್ದಾರೆ ಯಾರು ತಮ್ಮ ದೃಷ್ಟಿ, ವೃತ್ತಿ ಮತ್ತು ಸ್ಮೃತಿಯ ಶಕ್ತಿಯಿಂದ ಶಾಂತಿಯ ಅನುಭವ
ಮಾಡುತ್ತಾರೆ.