"ಬೇಹದ್ದಿನ ವೈರಾಗಿಯೇ ಸತ್ಯವಾದ ರಾಜಋಷಿ”
ಇಂದು ಬಾಪ್ದಾದಾ ಸರ್ವ ರಾಜಋಷಿಗಳ ದರ್ಬಾರನ್ನು ನೋಡುತ್ತಿದ್ದಾರೆ. ಇಡೀ ಕಲ್ಪದಲ್ಲಿ ರಾಜರುಗಳ ದರ್ಬಾರು ಅನೇಕ ಬಾರಿ ಆಗುತ್ತದೆ. ಆದರೆ ಈ ರಾಜಋಷಿಗಳ ದರ್ಬಾರು ಸಂಗಮಯುಗದಲ್ಲಿಯೇ ಆಗುತ್ತದೆ. ರಾಜರೂ ಆಗಿದ್ದೀರಿ ಮತ್ತು ಋಷಿಗಳೂ ಆಗಿದ್ದೀರಿ. ಈ ವಿಶೇಷತೆಯು ಈ ಸಮಯದ ಈ ದರ್ಬಾರಿನ ಗಾಯನ ಮಾಡಲ್ಪಟ್ಟಿದೆ. ಒಂದು ಕಡೆ ದರ್ಬಾರು ಅರ್ಥಾತ್ ಸರ್ವ ಪ್ರಾಪ್ತಿಗಳ ಅಧಿಕಾರಿ ಮತ್ತು ಇನ್ನೊಂದು ಕಡೆ ಋಷಿ ಅರ್ಥಾತ್ ಬೇಹದ್ದಿನ ವೈರಾಗ್ಯ ವೃತ್ತಿಯವರು. ಒಂದು ಕಡೆ ಸರ್ವ ಪ್ರಾಪ್ತಿಗಳ ಅಧಿಕಾರಿ ಮತ್ತು ಇನ್ನೊಂದು ಕಡೆ ಋಷಿ ಅರ್ಥಾತ್ ಬೇಹದ್ದಿನ ವೈರಾಗ್ಯ ವೃತ್ತಿಯವರು. ಒಂದು ಕಡೆ ಸರ್ವ ಪ್ರಾಪ್ತಿಗಳ ಅಧಿಕಾರದ ನಶೆ ಮತ್ತು ಇನ್ನೊಂದು ಕಡೆ ಬೇಹದ್ದಿನ ವೈರಾಗ್ಯದ ಅಲೌಕಿಕ ನಶೆಯಾಗಿದೆ. ಎಷ್ಟು ಶ್ರೇಷ್ಠ ಭಾಗ್ಯವೋ ಅಷ್ಟು ಶ್ರೇಷ್ಠ ತ್ಯಾಗ, ಎರಡರ ಸಮತೋಲನೆಯಾಗಿದೆ. ಇದಕ್ಕೆ ರಾಜಋಷಿ ಎಂದು ಹೇಳಲಾಗುತ್ತದೆ. ಇಂತಹ ರಾಜಋಷಿ ಮಕ್ಕಳ ಸಮತೋಲನೆಯನ್ನು ನೋಡುತ್ತಿದ್ದೇವೆ. ಈಗೀಗ ಅಧಿಕಾರಿತನದ ನಶೆ ಮತ್ತು ಈಗೀಗ ವೈರಾಗ್ಯ ವೃತ್ತಿಯ ನಶೆ - ಈ ಅನುಭವದಲ್ಲಿ ಎಲ್ಲಿಯವರೆಗೆ ಸ್ಥಿತರಾಗಲು ಸಾಧ್ಯವಿದೆ ಅರ್ಥಾತ್ ಎರಡೂ ಸ್ಥಿತಿಯ ಸಮಾನತೆಯ ಅಭ್ಯಾಸವನ್ನು ಎಲ್ಲಿಯವರೆಗೆ ಮಾಡುತ್ತಿದ್ದೀರಿ? ಇದನ್ನು ಪರಿಶೀಲನೆ ಮಾಡುತ್ತಿದ್ದೇವೆ. ಎಲ್ಲಾ ಮಕ್ಕಳು ನಂಬರ್ವಾರ್ ಅಭ್ಯಾಸಿಗಳಂತೂ ಹೌದು ಆದರೆ ಸಮಯ ಪ್ರಮಾಣ ಇವೆರಡರ ಅಭ್ಯಾಸವನ್ನು ಇನ್ನೂ ಹೆಚ್ಚಿನದಾಗಿ ವೃದ್ದಿ ಮಾಡಿಕೊಳ್ಳುತ್ತಾ ನಡೆಯಿರಿ. ಬೇಹದ್ದಿನ ವೈರಾಗ್ಯ ವೃತ್ತಿಯ ಅರ್ಥವೇ ಆಗಿದೆ - ವೈರಾಗ್ಯ ಅರ್ಥಾತ್ ದೂರ ಮಾಡುವುದಲ್ಲ, ಆದರೆ ಸರ್ವ ಪ್ರಾಪ್ತಿಗಳಿದ್ದರೂ ಹದ್ದಿನ ಆಕರ್ಷಣೆ ಮನಸ್ಸನ್ನು ಮತ್ತು ಬುದ್ಧಿಯನ್ನು ಆಕರ್ಷಣೆಯಲ್ಲಿ ತರಬಾರದು. ಬೇಹದ್ದ್ ಅರ್ಥಾತ್ ಬೇಹದ್ದ್, ನಾನು ಸಂಪೂರ್ಣ ಸಂಪನ್ನ ಆತ್ಮ ತಂದೆಯ ಸಮಾನ ಸದಾ ಸರ್ವ ಕರ್ಮೇಂದ್ರಿಯಗಳ ರಾಜ್ಯಾಧಿಕಾರಿ. ಈ ಸೂಕ್ಷ್ಮ ಶಕ್ತಿಗಳ ಮನಸ್ಸು-ಬುದ್ಧಿ-ಸಂಸ್ಕಾರಕ್ಕೂ ಅಧಿಕಾರಿ. ಸಂಕಲ್ಪ ಮಾತ್ರದಲ್ಲಿಯೂ ಅಧೀನತೆ ಇರಬಾರದು. ಇದಕ್ಕೆ ರಾಜಋಷಿ ಅರ್ಥಾತ್ ಬೇಹದ್ದಿನ ವೈರಾಗ್ಯ ವೃತ್ತಿ ಎಂದು ಹೇಳಲಾಗುತ್ತದೆ. ಈ ಹಳೆಯ ದೇಹ ಮತ್ತು ದೇಹದ ಹಳೆಯ ಪ್ರಪಂಚ, ಅಥವಾ ವ್ಯಕ್ತ ಭಾವ, ವೈಭವದ ಭಾವ - ಇವೆಲ್ಲಾ ಆಕರ್ಷಣೆಗಳಿಂದ ಸದಾ ಮತ್ತು ಸಹಜವಾಗಿ ದೂರವಿರುವಂತಹವರು.
ಹೇಗೆ ವೈಜ್ಞಾನಿಕ ಶಕ್ತಿಯು ಧರಣಿಯ ಆಕರ್ಷಣೆಯಿಂದ ದೂರ ಮಾಡುತ್ತದೆ, ಹಾಗೆಯೇ ಶಾಂತಿಯ ಶಕ್ತಿಯು ಇವೆಲ್ಲಾ ಹದ್ದಿನ ಆಕರ್ಷಣೆಗಳಿಂದ ದೂರ ಕರೆದುಕೊಂಡು ಹೋಗುತ್ತದೆ. ಇದಕ್ಕೆ ಸಂಪೂರ್ಣ ಸಂಪನ್ನ ತಂದೆಯ ಸಮಾನ ಸ್ಥಿತಿಯೆಂದು ಹೇಳುತ್ತಾರೆ ಅಂದಾಗ ಈ ಸ್ಥಿತಿಯ ಅಭ್ಯಾಸಿ ಆಗಿದ್ದೀರಾ? ಸ್ಥೂಲ ಕರ್ಮೇಂದ್ರಿಯಗಳದಾದರೂ ಬಹಳ ಕಾಣುವ (ಸ್ಥೂಲ) ಮಾತಾಗಿದೆ, ಕರ್ಮೇಂದ್ರಿಯಾಜೀತರು ಆಗುವುದಾದರೂ ಸಹಜ ಮಾತಾಗಿದೆ. ಆದರೆ ಮನ-ಬುದ್ಧಿ-ಸಂಸ್ಕಾರ - ಈ ಸೂಕ್ಷ್ಮ ಶಕ್ತಿಗಳ ಮೇಲೆ ವಿಜಯಿಗಳಾಗುವುದು ಬಹಳ ಸೂಕ್ಷ್ಮ ಅಭ್ಯಾಸವಾಗಿದೆ. ಯಾವ ಸಮಯದಲ್ಲಿ ಯಾವ ಸಂಕಲ್ಪ, ಸಂಸ್ಕಾರವನ್ನು ಇಮರ್ಜ್ ಮಾಡಿಕೊಳ್ಳಬೇಕೋ ಅದೇ ಸಂಕಲ್ಪ, ಅದೇ ಸಂಸ್ಕಾರವನ್ನು ಸಹಜವಾಗಿ ಅಳವಡಿಸಿಕೊಳ್ಳಬೇಕು. ಇದಕ್ಕೆ ಸೂಕ್ಷ್ಮ ಶಕ್ತಿಗಳ ಮೇಲೆ ವಿಜಯ ಅರ್ಥಾತ್ ರಾಜಋಷಿಯೆಂದು ಹೇಳುತ್ತಾರೆ. ಹೇಗೆ ಸ್ಥೂಲ ಕರ್ಮೇಂದ್ರಿಯಗಳಿಗೆ ಇದನ್ನು ಮಾಡು, ಇದನ್ನು ಬೇಡವೆಂದು ಆಜ್ಞೆ ಮಾಡುತ್ತೀರಲ್ಲವೆ. ಒಂದುವೇಳೆ ಕೈಗಳಿಗೆ ಆಜ್ಞೆ ಮಾಡಿದರೆ ಮೇಲೆತ್ತಬೇಕೆಂದರೆ ಅಥವಾ ಕೆಳಗೆ ಇಳಿಸಬೇಕೆಂದರೆ ಅದೇ ರೀತಿ ಮಾಡುತ್ತವೆಯಲ್ಲವೆ. ಹಾಗೆಯೇ ಸಂಕಲ್ಪ ಮತ್ತು ಸಂಸ್ಕಾರ ಹಾಗೂ ನಿರ್ಣಯ ಶಕ್ತಿ ಅರ್ಥಾತ್ 'ಬುದ್ಧಿ' ಯು ಅದೇ ರೀತಿ ಆಜ್ಞೆಯ ಪ್ರಮಾಣ ನಡೆಯಲಿ. ಆತ್ಮ ಅರ್ಥಾತ್ ರಾಜನು ಮನಸ್ಸು ಅರ್ಥಾತ್ ಸಂಕಲ್ಪ ಶಕ್ತಿಗೆ ಈಗೀಗ ಏಕಾಗ್ರ ಚಿತ್ತ ಹಾಗೂ ಒಂದು ಸಂಕಲ್ಪದಲ್ಲಿ ಸ್ಥಿತವಾಗಿ ಬಿಡು ಎಂದು ಆಜ್ಞೆ ಮಾಡಿದರೆ ಕೂಡಲೆ ರಾಜನ ಆಜ್ಞೆಯನ್ನು ಅದೇ ಘಳಿಗೆ, ಅದೇ ಪ್ರಕಾರದಿಂದ ಪಾಲಿಸುವುದು ರಾಜ್ಯಾಧಿಕಾರಿಯ ಲಕ್ಷಣವಾಗಿದೆ. 3-4 ನಿಮಿಷಗಳ ಅಭ್ಯಾಸದ ನಂತರ ಮನಸ್ಸು ಆಜ್ಞೆಯನ್ನು ಪಾಲಿಸುವುದು ಅಥವಾ ಒಮ್ಮೆಲೆ ಏಕಾಗ್ರತೆಯ ಬದಲು ಸ್ವಲ್ಪ ಏರಿಳಿತವಾದ ಮೇಲೆ ಏಕಾಗ್ರವಾಗುವುದು, ಇದಕ್ಕೆ ಏನು ಹೇಳುವರು? ಅಧಿಕಾರಿ ಎಂದು ಹೇಳುವರೇ? ಆದ್ದರಿಂದ ಇಂತಹ ಪರಿಶೀಲನೆ ಮಾಡಿಕೊಳ್ಳಿ ಏಕೆಂದರೆ ಮೊದಲೇ ತಿಳಿಸಿದ್ದೇವೆ - ಅಂತಿಮ ಸಮಯದ ಅಂತಿಮ ಫಲಿತಾಂಶದ ಸಮಯವು ಒಂದು ಸೆಕೆಂಡಿನ ಒಂದೇ ಪ್ರಶ್ನೆಯಾಗಿರುವುದು. ಈ ಸೂಕ್ಷ್ಮ ಶಕ್ತಿಗಳ ಅಧಿಕಾರಿಗಳಾಗುವ ಅಭ್ಯಾಸವು ಒಂದುವೇಳೆ ಇಲ್ಲವೆಂದರೆ ಅರ್ಥಾತ್ ತಮ್ಮ ಮನಸ್ಸು, ತಾವು ರಾಜನ ಆಜ್ಞೆಯನ್ನು ಒಂದು ಕ್ಷಣದ ಬದಲು ಮೂರು ಕ್ಷಣಗಳು ಆದಮೇಲೆ ಪಾಲಿಸುತ್ತದೆ ಎಂದರೆ ರಾಜ್ಯಾಧಿಕಾರಿಗಳೆಂದು ಕರೆಸಿಕೊಳ್ಳುತ್ತೀರಾ? ಹಾಗೂ ಒಂದು ಸೆಕೆಂಡಿನ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತೀರಾ? ಎಷ್ಟು ಅಂಕಗಳು ಸಿಗಬಹುದು?
ಹಾಗೆಯೇ ಬುದ್ದಿ ಅರ್ಥಾತ್ ನಿರ್ಣಯ ಶಕ್ತಿಯ ಮೇಲೂ ಸಹ ಅಧಿಕಾರವಿರಲಿ ಅಂದರೆ ಯಾವ ಸಮಯದಲ್ಲಿ ಯಾವ ಪರಿಸ್ಥಿತಿಯಿದೆಯೋ ಅದೇ ಪ್ರಮಾಣ, ಅದೇ ಘಳಿಗೆಯಲ್ಲಿ ನಿರ್ಣಯ ಮಾಡುವುದಕ್ಕೇ ಬುದ್ಧಿಯ ಮೇಲೆ ಅಧಿಕಾರವೆಂದು ಹೇಳುತ್ತಾರೆ. ಪರಿಸ್ಥಿತಿ ಅಥವಾ ಸಮಯವು ಕಳೆದು ಹೋದ ಮೇಲೆ ಇದಾಗಬಾರದಿತ್ತು ಅಥವಾ ಈ ರೀತಿ ನಿರ್ಣಯ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುವುದಲ್ಲ. ಸಮಯದಲ್ಲಿ ಮತ್ತು ಯಥಾರ್ಥ ನಿರ್ಣಯ ತೆಗೆದುಕೊಳ್ಳುವುದು ರಾಜ್ಯಾಧಿಕಾರಿ ಆತ್ಮನ ಚಿಹ್ನೆಯಾಗಿದೆ ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ಇಡೀ ದಿನದಲ್ಲಿ ರಾಜ್ಯಾಧಿಕಾರಿ ಅರ್ಥಾತ್ ಈ ಸೂಕ್ಷ್ಮ ಶಕ್ತಿಗಳನ್ನೂ ಸಹ ಎಲ್ಲಿಯವರೆಗೆ ಆಜ್ಞೆಯ ಪ್ರಮಾಣ ನಡೆಸಿದೆನು? ನಿತ್ಯವೂ ತಮ್ಮ ಕರ್ಮಚಾರಿಗಳ ದರ್ಬಾರನ್ನು ನಡೆಸಿ ಪರಿಶೀಲನೆ ಮಾಡಿಕೊಳ್ಳಿ - ಸ್ಥೂಲ ಕರ್ಮೇಂದ್ರಿಯಗಳು ಹಾಗೂ ಸೂಕ್ಷ್ಮ ಶಕ್ತಿಗಳು - ಈ ಕರ್ಮಚಾರಿಗಳು ನಿಯಂತ್ರಣದಲ್ಲಿ ಇದ್ದರೆ ಅಥವಾ ಇಲ್ಲವೆ? ಈಗಿನಿಂದ ರಾಜ್ಯಾಧಿಕಾರಿಗಳಾಗುವ ಸಂಸ್ಕಾರವು ಅನೇಕ ಜನ್ಮಗಳವರೆಗೆ ರಾಜ್ಯಾಧಿಕಾರಿಗಳನ್ನಾಗಿ ಮಾಡುತ್ತದೆ. ತಿಳಿಯಿತೆ? ಅದೇ ಪ್ರಕಾರ ಸಂಸ್ಕಾರವು ಎಲ್ಲಿಯೂ ಮೋಸಗೊಳಿಸುತ್ತಿಲ್ಲವೆ? ಆದಿ, ಅನಾದಿ ಸಂಸ್ಕಾರವು ಅನಾದಿ ಶುದ್ಧ ಶ್ರೇಷ್ಠ ಪಾವನ ಸಂಸ್ಕಾರವಾಗಿದೆ, ಸರ್ವ ಗುಣ ಸ್ವರೂಪ ಸಂಸ್ಕಾರವಾಗಿದೆ ಮತ್ತು ಆದಿದೇವ ಆತ್ಮನ ರಾಜ್ಯಾಧಿಕಾರಿತನದ ಸಂಸ್ಕಾರವು ಸರ್ವ ಪ್ರಾಪ್ತಿ ಸ್ವರೂಪದ ಸಂಸ್ಕಾರವಾಗಿದೆ. ಸಂಪನ್ನ ಸಂಪೂರ್ಣತೆಯ ಸ್ವಾಭಾವಿಕ ಸಂಸ್ಕಾರವಾಗಿದೆ ಅಂದಾಗ ಸಂಸ್ಕಾರ ಶಕ್ತಿಯ ಮೇಲೆ ರಾಜ್ಯಾಧಿಕಾರಿಗಳು ಅರ್ಥಾತ್ ಸದಾ ಅನಾದಿ, ಆದಿ ಸಂಸ್ಕಾರವು ಸ್ಮೃತಿಯಲ್ಲಿ ಬರಲಿ, ಸ್ವಾಭಾವಿಕ ಸಂಸ್ಕಾರವಾಗಲಿ. ಮಧ್ಯ ಅರ್ಥಾತ್ ದ್ವಾಪರದಿಂದ ಪ್ರವೇಶವಾಗುವ ಸಂಸ್ಕಾರವು ತನ್ನ ಕಡೆ ಆಕರ್ಷಣೆ ಮಾಡದಿರಲಿ. ಸಂಸ್ಕಾರಗಳ ವಶರಾಗಿ ನಿರ್ಬಲರಾಗಬೇಡಿ. ಹೇಗೆ ಇದು ನನ್ನ ಹಳೆಯ ಸಂಸ್ಕಾರವೆಂದು ಹೇಳುತ್ತೀರಲ್ಲವೆ. ವಾಸ್ತವದಲ್ಲಿ ಅನಾದಿ ಹಾಗೂ ಆದಿ ಸಂಸ್ಕಾರವೇ ಹಳೆಯ ಸಂಸ್ಕಾರವಾಗಿದೆ. ಅವಗುಣಗಳ ಸಂಸ್ಕಾರವು ಮಧ್ಯ ಅಥವಾ ದ್ವಾಪರದಿಂದ ಬಂದ ಸಂಸ್ಕಾರವಾಗಿದೆ ಅಂದಮೇಲೆ ಹಳೆಯ ಸಂಸ್ಕಾರವು ಆದಿಯದಾಯಿತೋ ಅಥವಾ ಮಧ್ಯ ಕಾಲದ್ದಾಯಿತೋ? ಯಾವುದೇ ಹದ್ದಿನ ಆಕರ್ಷಣೆಯ ಸಂಸ್ಕಾರವು ಒಂದುವೇಳೆ ಆಕರ್ಷಣೆ ಮಾಡುತ್ತಿದೆಯೆಂದರೆ ಸಂಸ್ಕಾರಗಳ ಮೇಲೆ ರಾಜ್ಯಾಧಿಕಾರಿಗಳೆಂದು ಹೇಳುತ್ತಾರೆಯೇ? ರಾಜ್ಯದೊಳಗೆ ಒಂದು ಶಕ್ತಿ ಅಥವಾ ಒಂದು ಕರ್ಮಾಚಾರಿ 'ಕರ್ಮೇಂದಿಯ' ವೂ ಸಹ ಒಂದುವೇಳೆ ಆಜ್ಞೆಯ ಪ್ರಮಾಣ ನಡೆಯುತ್ತಿಲ್ಲವೆಂದರೆ ಅವರಿಗೆ ಸಂಪೂರ್ಣ ರಾಜ್ಯಾಧಿಕಾರಿಯೆಂದು ಹೇಳಲಾಗುತ್ತದೆಯೆ? ತಾವೆಲ್ಲಾ ಮಕ್ಕಳು ನಾವು ಒಂದು ರಾಜ್ಯ, ಒಂದು ಧರ್ಮ, ಒಂದು ಮತವನ್ನು ಸ್ಥಾಪನೆ ಮಾಡುವವರಾಗಿದ್ದೇವೆಂದು ಚಾಲೆಂಜ್ ಮಾಡುತ್ತಾರೆ. ಈ ಚಾಲೆಂಜ್ ನ್ನು ಎಲ್ಲಾ ಬ್ರಹ್ಮಾಕುಮಾರ - ಕುಮಾರಿಯರೆಲ್ಲರೂ ಮಾಡುತ್ತೀರಲ್ಲವೆ ಅಂದಾಗ ಅದು ಯಾವಾಗ ಸ್ಥಾಪನೆಯಾಗುವುದು? ಭವಿಷ್ಯದಲ್ಲಿ ಸ್ಥಾಪನೆಯಾಗುವುದೇ? ಸ್ಥಾಪನೆಗೆ ನಿಮಿತ್ತರು ಯಾರು? ಬಹ್ಮನೋ ಅಥವಾ ವಿಷ್ಣುವೋ? ಬ್ರಹ್ಮಾರವರ ಮೂಲಕವೇ ಸ್ಥಾಪನೆಯಾಗುತ್ತದೆಯಲ್ಲವೆ. ಎಲ್ಲಿ ಬ್ರಹ್ಮನಿದ್ದಾರೆಯೋ ಅಲ್ಲಿ ಬ್ರಾಹ್ಮಣರೂ ಸಹ ಜೊತೆಯಿದ್ದೀರಿ. ಬ್ರಹ್ಮಾರವರ ಮೂಲಕ ಅರ್ಥಾತ್ ಬ್ರಾಹ್ಮಣರ ಮೂಲಕ ಸ್ಥಾಪನೆಯು ಯಾವಾಗ ಆಗುವುದು? ಸಂಗಮಯುಗದಲ್ಲಿಯೋ ಅಥವಾ ಸತ್ಯಯುಗದಲ್ಲಿಯೋ? ಸತ್ಯಯುಗದಲ್ಲಂತೂ ಪಾಲನೆಯ ಕಾರ್ಯವು ನಡೆಯುವುದು. ಬ್ರಹ್ಮಾ ಹಾಗೂ ಬ್ರಾಹ್ಮಣರ ಮೂಲಕ ಸ್ಥಾಪನೆಯು ಈಗಲೇ ಆಗಬೇಕು ಅಂದಮೇಲೆ ಮೊದಲು ಸ್ವಯಂನ (ತನ್ನಲ್ಲಿ) ರಾಜ್ಯದಲ್ಲಿ ನೋಡಿಕೊಳ್ಳಿ - ಒಂದು ರಾಜ್ಯ, ಒಂದು ಧರ್ಮ(ಧಾರಣೆ), ಒಂದು (ಏಕ) ಮತವಿದೆಯೇ? ಒಂದುವೇಳೆ ಒಂದು ಕರ್ಮೇಂದ್ರಿಯವೂ ಸಹ ಮಾಯೆಯ ಅನ್ಯ ಮತದಂತೆ ನಡೆಯುತ್ತಿದ್ದರೆ ಅಲ್ಲಿ ಒಂದು ರಾಜ್ಯ, ಒಂದು ಮತವೆಂದು ಹೇಳುವುದಿಲ್ಲ. ಆದ್ದರಿಂದ ಮೊದಲು ಇದನ್ನು ನೋಡಿಕೊಳ್ಳಿ – ಒಂದು ರಾಜ್ಯ, ಒಂದು ಧರ್ಮವನ್ನು ಸ್ವಯಂನ ರಾಜ್ಯದಲ್ಲಿ ಸ್ಥಾಪನೆ ಮಾಡಿಕೊಂಡಿದ್ದೀರೋ ಅಥವಾ ಕೆಲವೊಮ್ಮೆ ಮಾಯೆಯು ಸಿಂಹಾಸನದ ಮೇಲೆ ಕುಳಿತು ಬಿಡುತ್ತದೆ, ಕೆಲವೊಮ್ಮೆ ತಾವು ಕುಳಿತು ಬಿಡುತ್ತೀರೋ? ಚಾಲೆಂಜನ್ನು ಕಾರ್ಯ ರೂಪದಲ್ಲಿ ತಂದಿದ್ದೇವೆಯೇ ಅಥವಾ ಇಲ್ಲವೆ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಿ. ಅನಾದಿ ಸಂಸ್ಕಾರವನ್ನು ತಾವು ಬಯಸಿದಾಗ ಮಧ್ಯದ ಸಂಸ್ಕಾರವು ಇಮರ್ಜ್ ಆಗಿ ಬಿಟ್ಟರೆ ಇದು ಅಧಿಕಾರಿತನವಾಗಲಿಲ್ಲ ಅಲ್ಲವೆ?
ರಾಜಋಷಿ ಅರ್ಥಾತ್ ಸರ್ವರ ರಾಜ್ಯಾಧಿಕಾರಿಗಳು. ಯಾವಾಗ ಋಷಿ ಅರ್ಥಾತ್ ಬೇಹದ್ದಿನ ವೈರಾಗ್ಯ ವೃತ್ತಿಯ ಅಭ್ಯಾಸಿಗಳಾಗುತ್ತೀರೋ ಆಗ ಸದಾ ಮತ್ತು ಸಹಜ ರಾಜ್ಯಾಧಿಕಾರಿಗಳಾಗುತ್ತೀರಿ. ವೈರಾಗ್ಯವೆಂದರೆ ಯಾವುದೇ ಸೆಳೆತವಿಲ್ಲ, ಸದಾ ತಂದೆಗೆ ಪ್ರಿಯರು. ಈ ಪ್ರಿಯವಾಗಿರುವುದೇ ಭಿನ್ನರನ್ನಾಗಿ ಮಾಡುತ್ತದೆ. ತಂದೆಗೆ ಪ್ರಿಯರಾಗಿ ನಂತರ ಭಿನ್ನರಾಗಿ ಕಾರ್ಯದಲ್ಲಿ ಬರುವವರಿಗೆ ಬೇಹದ್ದಿನ ವೈರಾಗಿಗಳೆಂದು ಹೇಳಲಾಗುವುದು. ತಂದೆಗೆ ಪ್ರಿಯರಾಗದಿದ್ದರೆ ಮತ್ತೆಲ್ಲದರಿಂದ ಭಿನ್ನರಾಗುವುದಕ್ಕೂ ಸಾಧ್ಯವಿಲ್ಲ, ಸೆಳೆತದಲ್ಲಿ ಬಂದು ಬಿಡುತ್ತೀರಿ. ತಂದೆಗೆ ಪ್ರಿಯರು ಮತ್ತ್ಯಾವುದೇ ವ್ಯಕ್ತಿ ಅಥವಾ ವೈಭವಕ್ಕೆ ಪ್ರಿಯರಾಗಲು ಸಾಧ್ಯವಿಲ್ಲ. ಅವರು ಸದಾ ಆಕರ್ಷಣೆಗಳಿಂದ ದೂರ ಅರ್ಥಾತ್ ಭಿನ್ನವಾಗಿರುತ್ತಾರೆ. ಇದಕ್ಕೆ ನಿರ್ಲೇಪ ಸ್ಥಿತಿಯೆಂದು ಹೇಳುತ್ತಾರೆ. ಯಾವುದೇ ಹದ್ದಿನ ಆಕರ್ಷಣೆಯ ಲೇಪದಲ್ಲಿ ಬರುವವರಲ್ಲ. ರಚನೆ ಅಥವಾ ಸಾಧನಗಳನ್ನು ನಿರ್ಲೆಪವಾಗಿ ಕಾರ್ಯದಲ್ಲಿ ತರುವವರು. ಇಂತಹ ಬೇಹದ್ದಿನ ವೈರಾಗಿ ಸತ್ಯವಾದ ರಾಜಋಷಿಗಳಾಗಿದ್ದೀರಾ? ಕೇವಲ ಒಂದು ಇಲ್ಲವೆ ಎರಡು ನಿರ್ಬಲತೆಗಳು ಮಾತ್ರ ಉಳಿದುಕೊಂಡಿವೆ. ಕೇವಲ ಒಂದು ಸೂಕ್ಷ್ಮ ಶಕ್ತಿ ಅಥವಾ ಕರ್ಮೇಂದ್ರಿಯವು ಕಡಿಮೆ ನಿಯಂತ್ರಣದಲ್ಲಿದೆ. ಉಳಿದೆಲ್ಲವೂ ಸರಿಯಾಗಿದೆ ಎಂದು ಯೋಚಿಸಬೇಡಿ. ಎಲ್ಲಿ ಒಂದು ನಿರ್ಬಲತೆಯಿದ್ದರೂ ಸಹ ಅದು ಮಾಯೆಯ ದ್ವಾರವಾಗಿದೆ. ದ್ವಾರವು ಭಲೆ ಚಿಕ್ಕದಿರಲಿ, ದೊಡ್ಡದಿರಲಿ ಆದರೆ ದ್ವಾರವೇ ಅಲ್ಲವೆ. ಒಂದುವೇಳೆ ದ್ವಾರವು ತೆರೆದಿದ್ದರೆ ಮಾಯಾಜೀತರು, ಜಗತ್ಜೀತರು ಹೇಗಾಗುತ್ತೀರಿ?
ಒಂದು ಕಡೆ ಒಂದು ರಾಜ್ಯ, ಒಂದು ಧರ್ಮದ ಸ್ವರ್ಣಿಮ ಪ್ರಪಂಚದ ಆಹ್ವಾನ ಮಾಡುತ್ತಿದ್ದೀರಿ ಮತ್ತು ಜೊತೆ ಜೊತೆಗೆ ಇನ್ನೊಂದು ಕಡೆ ನಿರ್ಬಲತೆ ಅರ್ಥಾತ್ ಮಾಯೆಯ ಆಹ್ವಾನವನ್ನೂ ಮಾಡುತ್ತಿದ್ದೀರೆಂದರೆ ಫಲಿತಾಂಶವು ಏನಾಗುವುದು? ದುವಿದೆ (ದ್ವಂದ್ದ) ಯಲ್ಲಿ ಉಳಿದು ಬಿಡುತ್ತೀರಿ ಆದ್ದರಿಂದ ಇದನ್ನು ಚಿಕ್ಕ ಮಾತೆಂದು ತಿಳಿಯಬೇಡಿ. ಇನ್ನೂ ಸಮಯವಿದೆ, ಮಾಡಿ ಬಿಡುತ್ತೇವೆ. ಅನ್ಯರಲ್ಲಿಯೂ ಇನ್ನೂ ಬಹಳಷ್ಟು ನಿರ್ಬಲತೆಗಳಿವೆ, ನನ್ನಲ್ಲಾದರೂ ಕೇವಲ ಒಂದೇ ಒಂದು ನಿರ್ಬಲತೆಯಿದೆ ಎಂದು ತಿಳಿಯಬೇಡಿ, ಅನ್ಯರನ್ನು ನೋಡುತ್ತಾ - ನೋಡುತ್ತಾ ತಾನು ಹಿಂದುಳಿಯದಿರಿ. 'ಬ್ರಹ್ಮಾ ತಂದೆಯನ್ನು ನೋಡಿ' ಎಂದು ಹೇಳಲಾಗಿದೆ. ಫಾಲೋ ಫಾದರ್ ಎಂದು ಹೇಳಲಾಗಿದೆ ಅಂದಾಗ ಸರ್ವರ ಸಹಯೋಗಿ ಸ್ನೇಹಿಗಳು ಅವಶ್ಯವಾಗಿ ಆಗಿ, ಗುಣಗ್ರಾಹಕರಾಗಿ. ತಂದೆಯನ್ನು ಅನುಸರಿಸಿ. ಬ್ರಹ್ಮಾ ತಂದೆಯ ಅಂತಿಮದ ರಾಜಋಷಿ ಸ್ಥಿತಿಯನ್ನು ನೋಡಿದಿರಿ. ಮಕ್ಕಳಿಗೆ ಇಷ್ಟೊಂದು ಪ್ರಿಯರಾಗಿದ್ದರೂ ಸಹ ಸನ್ಮುಖದಲ್ಲಿ ನೋಡುತ್ತಿದ್ದರೂ ಸಹ ಅವರಲ್ಲಿ ಭಿನ್ನತೆಯನ್ನೇ ನೋಡಿದಿರಲ್ಲವೆ. ಬೇಹದ್ದಿನ ವೈರಾಗ್ಯ, ಇದೇ ಸ್ಥಿತಿಯನ್ನು ಪ್ರತ್ಯಕ್ಷದಲ್ಲಿ ನೋಡಿದಿರಿ. ಕರ್ಮ ಭೋಗವಿದ್ದರೂ ಸಹ ಕರ್ಮೇಂದ್ರಿಯಗಳ ಮೇಲೆ ಅಧಿಕಾರಿಯಾಗಿ, ರಾಜಋಷಿಯಾಗಿ ಸಂಪೂರ್ಣ ಸ್ಥಿತಿಯ ಅನುಭವ ಮಾಡಿಸಿದರು ಆದ್ದರಿಂದ ಫಾಲೋ ಫಾದರ್ ಎಂದು ಹೇಳುತ್ತಾರೆ ಅಂದಮೇಲೆ ತಮ್ಮ ರಾಜ್ಯಾಧಿಕಾರಿಗಳು, ರಾಜ್ಯ ಕಾರ್ಯಕರ್ತರನ್ನು ಸದಾ ನೋಡಿಕೊಳ್ಳಿ. ಯಾವುದೇ ರಾಜ್ಯ ಕಾರ್ಯಕರ್ತನು ಎಲ್ಲಿಯೂ ಮೋಸಗೊಳಿಸದಿರಲಿ. ತಿಳಿಯಿತೆ? ಒಳ್ಳೆಯದು.
ಇಂದು ಭಿನ್ನ-ಭಿನ್ನ ಸ್ಥಾನಗಳಿಂದ ಒಂದು ಸ್ಥಾನದಲ್ಲಿ ಬಂದು ತಲುಪಿದ್ದೀರಿ, ಇದಕ್ಕೆ ಸಾಗರ ನದಿಗಳ ಮೇಳವೆಂದು ಹೇಳಲಾಗುತ್ತದೆ. ಮೇಳದಲ್ಲಿ ಮಿಲನವೂ ನಡೆಯುತ್ತದೆ ಮತ್ತು ಮಾಲು (ಸರಕು) ಸಿಗುತ್ತದೆ. ಆದ್ದರಿಂದ ಎಲ್ಲರೂ ಮೇಳದಲ್ಲಿ ಬಂದು ತಲುಪಿದ್ದೀರಿ. ಹೊಸ ಮಕ್ಕಳ ಸೀಜನ್ನಿನ ಇದು ಕೊನೆಯ ಗ್ರೂಪ್ ಆಗಿದೆ. ಹೊಸಬರ ಜೊತೆ ಹಳಬರಿಗೂ ಅವಕಾಶ ಸಿಕ್ಕಿ ಬಿಟ್ಟಿದೆ. ಪ್ರಕೃತಿಯೂ ಸಹ ಇಲ್ಲಿಯವರೆಗೂ ಸಹಯೋಗ ಕೊಡುತ್ತಿದೆ ಆದರೆ ಇದರ ದುರುಪಯೋಗ ಮಾಡಿಕೊಳ್ಳಬೇಡಿ. ಇಲ್ಲವಾದರೆ ಪ್ರಕೃತಿಯು ಬುದ್ಧಿವಂತನಾಗಿದೆ. ಒಳ್ಳೆಯದು.
ನಾಲ್ಕಾರು ಕಡೆಯ ಸದಾ ರಾಜಋಷಿ ಮಕ್ಕಳಿಗೆ, ಸದಾ ಸ್ವಯಂನ ಮೇಲೆ ರಾಜ್ಯ ಮಾಡುವಂತಹ ಸದಾ ವಿಜಯಿಯಾಗಿ ನಿರ್ವಿಘ್ನ ರಾಜ್ಯ ಕಾರೋಬಾರನ್ನು ನಡೆಸುವಂತಹ ರಾಜ್ಯಾಧಿಕಾರಿ ಮಕ್ಕಳಿಗೆ, ಸದಾ ಬೇಹದ್ದಿನ ವೈರಾಗ್ಯ ವೃತ್ತಿಯಲ್ಲಿರುವಂತಹ ಎಲ್ಲಾ ಋಷಿ ಕುಮಾರ-ಕುಮಾರಿಯರಿಗೆ ಸದಾ ತಂದೆಗೆ ಪ್ರಿಯರಾಗಿ ಎಲ್ಲದರಿಂದ ಭಿನ್ನರಾಗಿ ಕಾರ್ಯ ಮಾಡುವಂತಹ ಭಿನ್ನ ಮತ್ತು ಪ್ರಿಯ ಮಕ್ಕಳಿಗೆ, ಸದಾ ಬ್ರಹ್ಮಾ ತಂದೆಯನ್ನು ಅನುಸರಿಸುವಂತಹ ಪ್ರಾಮಾಣಿಕ ಮಕ್ಕಳಿಗೆ ಬಾಪ್ ದಾದಾ ರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ:
1. ಅನೇಕ ಬಾರಿ ವಿಜಯಿ ಆತ್ಮರಾಗಿದ್ದೇವೆ - ಇಂತಹ ಅನುಭವ ಮಾಡುತ್ತೀರಾ? ವಿಜಯಿ ಆಗುವುದು ಕಷ್ಟವೆನಿಸುತ್ತದೆಯೇ ಅಥವಾ ಸಹಜವೇ? ಏಕೆಂದರೆ ಯಾವುದು ಸಹಜ ಮಾತಾಗಿರುತ್ತದೆಯೋ ಅದು ಸದಾ ಆಗಲು ಸಾಧ್ಯವಿದೆ, ಕಷ್ಟದ ಮಾತು ಸದಾ ಇರುವುದಿಲ್ಲ. ಯಾವ ಕಾರ್ಯವನ್ನು ಅನೇಕ ಬಾರಿ ಮಾಡಲಾಗಿದೆಯೋ ಅದು ಸ್ವತಹವಾಗಿಯೇ ಸಹಜವಾಗಿ ಬಿಡುತ್ತದೆ. ಯಾವಾಗ ಯಾವುದೇ ಹೊಸ ಕಾರ್ಯವನ್ನು ಮಾಡಲಾಗುತ್ತದೆಯೆಂದರೆ ಅದು ಮೊದಲು ಕಷ್ಟವೆನಿಸುತ್ತದೆ ಆದರೆ ಯಾವಾಗ ಮಾಡಿ ಬಿಡುತ್ತೀರಿ, ಆಗ ಆ ಕಷ್ಟದ ಕಾರ್ಯವೇ ಸಹಜವೆನಿಸುತ್ತದೆ. ಅಂದಮೇಲೆ ತಾವೆಲ್ಲರೂ ಈ ಒಂದು ಬಾರಿ ವಿಜಯಿ ಆಗಿರುವುದಿಲ್ಲ, ಅನೇಕ ಬಾರಿಯ ವಿಜಯಿಗಳು ಆಗಿದ್ದೀರಿ. ಅನೇಕ ಬಾರಿಯ ವಿಜಯಿ ಅಥವಾ ಸದಾ ಸಹಜ ವಿಜಯದ ಅನುಭವ ಮಾಡುವವರು. ಯಾರು ಸಹಜ ವಿಜಯಿ ಆಗಿದ್ದಾರೆಯೋ ಅವರಿಗೆ ಪ್ರತೀ ಹೆಜ್ಜೆಯಲ್ಲಿ ಇದೇ ರೀತಿಯ ಅನುಭವವಾಗುತ್ತದೆ - ಇವೆಲ್ಲಾ ಕಾರ್ಯಗಳು ಆಗಿ ಬಿಟ್ಟಿದೆ, ಪ್ರತೀ ಹೆಜ್ಜೆಯಲ್ಲಿ ವಿಜಯವು ಆಗಿ ಬಿಟ್ಟಿದೆ. ಆಗುತ್ತದೆಯೋ ಇಲ್ಲವೋ ಎಂಬ ಸಂಕಲ್ಪವೂ ಸಹ ಉತ್ಪನ್ನವಾಗಲು ಸಾಧ್ಯವಿಲ್ಲ. ಯಾವಾಗ ಅನೇಕ ಬಾರಿ ವಿಜಯಿಗಳು ಆಗಿದ್ದೇವೆಂಬ ನಿಶ್ಚಯವಿದೆ ಅಂದಮೇಲೆ ಆಗುತ್ತದೆಯೋ ಇಲ್ಲವೋ ಎಂಬ ಪ್ರಶ್ನೆಯೇ ಇಲ್ಲ. ನಿಶ್ಚಯದ ಚಿಹ್ನೆಯಾಗಿದೆ - ನಶೆ ಮತ್ತು ನಶೆಯ ಚಿಹ್ನೆಯಾಗಿದೆ - ಖುಷಿ. ಯಾರಿಗೆ ನಶೆಯಿರುತ್ತದೆಯೋ ಅವರು ಸದಾ ಖುಷಿಯಾಗಿ ಇರುತ್ತಾರೆ. ಅಲ್ಪಕಾಲದ ವಿಜಯದಲ್ಲಿಯೂ ಎಷ್ಟೊಂದು ಖುಷಿಯಾಗುತ್ತದೆ! ಯಾವಾಗ ಎಲ್ಲಿ ವಿಜಯ ಪ್ರಾಪ್ತಿಯಾಗುತ್ತದೆ ಎಂದರೆ ವಾದ್ಯಗಳನ್ನು ಮೊಳಗಿಸುತ್ತಾರೆ ಅಲ್ಲವೆ! ಅಂದಮೇಲೆ ಯಾರಿಗೆ ನಿಶ್ಚಯ ಮತ್ತು ನಶೆಯಿರುತ್ತದೆಯೋ, ಅವರಿಗೆ ಅವಶ್ಯವಾಗಿ ಖುಷಿಯಿರುತ್ತದೆ. ಅವರು ಸದಾ ಖುಷಿಯಲ್ಲಿ ನರ್ತಿಸುತ್ತಾ ಇರುತ್ತಾರೆ. ಶರೀರದಿಂದ ಕೆಲವರು ನರ್ತಿಸಬಹುದು, ಕೆಲವರು ನರ್ತಿಸದೇ ಇರಬಹುದು ಆದರೆ ಮನಸ್ಸಿನಲ್ಲಿ ಖುಷಿಯ ನರ್ತನವನ್ನಂತು ಬೆಡ್ನಲ್ಲಿರುವ ರೋಗಿಗಳೂ ನರ್ತಿಸಬಹುದು. ಯಾರಿಗಾದರೂ ಸಹ ಈ ನರ್ತನವು ಬಹಳ ಸಹಜವಾಗಿದೆ ಏಕೆಂದರೆ ವಿಜಯಿ ಆಗುವುದು ಅರ್ಥಾತ್ ಸ್ವತಹವಾಗಿಯೇ ಖುಷಿಯ ವಾದ್ಯಗಳು ಮೊಳಗುವುದು. ವಾದ್ಯಗಳು ಮೊಳಗುತ್ತವೆಯೆಂದರೆ ಸ್ವತಹವಾಗಿಯೇ ಕಾಲುಗಳು ನರ್ತಿಸುತ್ತವೆ. ಯಾರಿಗೆ ನರ್ತಿಸುವುದು ಬರುವುದಿಲ್ಲವೋ ಅವರೂ ಸಹ ಕುಳಿತಿದ್ದ ಕಡೆಯಿಂದಲೇ ನರ್ತಿಸುತ್ತಾ ಇರುತ್ತಾರೆ. ಕಾಲುಗಳೂ ನರ್ತಿಸುತ್ತದೆ, ಕುತ್ತಿಗೆಯೂ ನರ್ತಿಸುತ್ತದೆ ಅಂದಮೇಲೆ ತಾವೆಲ್ಲರೂ ಅನೇಕ ಬಾರಿಯ ವಿಜಯಿ ಆಗಿದ್ದೀರಿ - ಇದೇ ಖುಷಿಯಲ್ಲಿ ಸದಾ ಮುಂದೆ ಸಾಗುತ್ತಾ ನಡೆಯಿರಿ. ಪ್ರಪಂಚದಲ್ಲಿ ಎಲ್ಲರಿಗೂ ಖುಷಿಯ ಅವಶ್ಯಕತೆಯೇ ಇದೆ. ಭಲೆ ಎಲ್ಲಾ ಪ್ರಾಪ್ತಿಗಳೂ ಇರಬಹುದು ಆದರೆ ಖುಷಿಯ ಪ್ರಾಪ್ತಿ ಇಲ್ಲ. ಅಂದಾಗ ಪ್ರಪಂಚದವರಿಗೆ ಯಾವ ಅವಿನಾಶಿ ಬುದ್ಧಿಯ ಅವಶ್ಯಕತೆಯೂ ಇದೆಯೋ ಆ ಖುಷಿಯನ್ನು ಸದಾ ಹಂಚುತ್ತಿರಿ.
2. ತಮ್ಮನ್ನು ಭಾಗ್ಯಶಾಲಿ ಎಂದು ತಿಳಿದುಕೊಂಡು ಪ್ರತೀ ಹೆಜ್ಜೆಯಲ್ಲಿ ಶ್ರೇಷ್ಠ ಭಾಗ್ಯದ ಅನುಭವ ಮಾಡುತ್ತೀರಾ? ಏಕೆಂದರೆ ಈ ಸಮಯದಲ್ಲಿ ತಂದೆಯು ಭಾಗ್ಯವಿದಾತನಾಗಿದ್ದು ಭಾಗ್ಯವನ್ನು ಕೊಡುವುದಕ್ಕಾಗಿ ಬಂದಿದ್ದಾರೆ. ಭಾಗ್ಯವಿದಾತನು ಭಾಗ್ಯವನ್ನು ಹಂಚುತ್ತಿದ್ದಾರೆ. ಹಂಚುವಂತಹ ಸಮಯದಲ್ಲಿ ಯಾರೆಷ್ಟು ಬೇಕಾದರೂ ತೆಗೆದುಕೊಳ್ಳಬಹುದು. ಇದರಲ್ಲಿ ಎಲ್ಲರಿಗೂ ಅಧಿಕಾರವಿದೆ. ಯಾರಿಗೆಷ್ಟು ಬೇಕು ಅಷ್ಟು ತೆಗೆದುಕೊಳ್ಳಿರಿ. ಅಂದಮೇಲೆ ಇಂತಹ ಸಮಯದಲ್ಲಿ ತಾವೆಷ್ಟು ಭಾಗ್ಯವನ್ನು ಮಾಡಿಕೊಂಡಿದ್ದೀರಿ - ಇದನ್ನು ಪರಿಶೀಲನೆ ಮಾಡಿಕೊಳ್ಳಿರಿ ಏಕೆಂದರೆ ಈಗಿಲ್ಲದಿದ್ದರೆ ಮತ್ತೆಂದಿಗೂ ಇಲ್ಲ ಆದ್ದರಿಂದ ಎಲ್ಲಾ ಮಕ್ಕಳಿಗೂ ತಂದೆಯವರು ಪ್ರತೀ ಹೆಜ್ಜೆಯಲ್ಲಿಯೂ ಭಾಗ್ಯದ ರೇಖೆಯನ್ನೆಳೆದುಕೊಳ್ಳುವ ಲೇಖನಿಯನ್ನೂ ಸಹ ಕೊಟ್ಟಿದ್ದಾರೆ. ಲೇಖನಿಯು ಕೈಯಲ್ಲಿದೆ ಮತ್ತು ಅನುಮತಿಯೂ ಇದೆ - ಯಾರೆಷ್ಟು ಬೇಕಾದರೂ ಎಳೆದುಕೊಳ್ಳಬಹುದು. ಇದೆಷ್ಟು ಶ್ರೇಷ್ಠವಾದ ಅವಕಾಶವಾಗಿದೆ! ಅಂದಮೇಲೆ ಸದಾ ಈ ಭಾಗ್ಯಶಾಲಿ ಸಮಯದ ಮಹತ್ವವನ್ನು ತಿಳಿದುಕೊಳ್ಳುತ್ತಾ, ಅಷ್ಟೂ ಜಮಾ ಮಾಡಿಕೊಳ್ಳುತ್ತೀರಿ ಅಲ್ಲವೇ? ಈ ಸಮಯದಲ್ಲಿ ಹೀಗಾಗಬಾರದು - ನಾವು ಬಹಳ ಬಯಸುತ್ತಿದ್ದೆವು ಆದರೆ ಮಾಡಲಾಗಲಿಲ್ಲ, ಮಾಡಬೇಕಾಗಿರುವುದು ಬಹಳಷ್ಟಿತ್ತು ಆದರೆ ಇಷ್ಟೇ ಮಾಡಿಕೊಂಡೆನು. ಇಂತಹ ದೂರುಗಳು ತಮ್ಮ ಪ್ರತಿ ಉಳಿದುಕೊಳ್ಳಬಾರದು. ತಿಳಿಯಿತೇ? ಅಂದಾಗ ಸದಾ ಭಾಗ್ಯದ ರೇಖೆಯನ್ನು ಶ್ರೇಷ್ಠವನ್ನಾಗಿ ಮಾಡಿಕೊಳ್ಳುತ್ತಾ ಸಾಗಿರಿ ಮತ್ತು ಅನ್ಯರಿಗೂ ಈ ಶ್ರೇಷ್ಠ ಭಾಗ್ಯದ ಪರಿಚಯವನ್ನು ಕೊಡುತ್ತಾ ಸಾಗಿರಿ. 'ವಾಹ್ ನನ್ನ ಶ್ರೇಷ್ಠ ಭಾಗ್ಯವೇ!' ಇದೇ ಖುಷಿಯ ಹಾಡನ್ನು ಸದಾ ಹಾಡುತ್ತಿರಿ.
3. ಸದಾ ತಮ್ಮನ್ನು ಸ್ವದರ್ಶನ ಚಕ್ರಧಾರಿ ಶ್ರೇಷ್ಠ ಆತ್ಮರೆಂದು ಅನುಭವ ಮಾಡುತ್ತೀರಾ? ಸ್ವದರ್ಶನ-ಚಕ್ರ ಅರ್ಥಾತ್ ಸದಾ ಮಾಯೆಯ ಅನೇಕ ಚಕ್ರಗಳಿಂದ ಮುಕ್ತರನ್ನಾಗಿಸುವುದು. ಸ್ವದರ್ಶನ ಚಕ್ರವು ಸದಾಕಾಲಕ್ಕಾಗಿ ಚಕ್ರವರ್ತಿ ರಾಜ್ಯ ಭಾಗ್ಯದ ಅಧಿಕಾರಿಯನ್ನಾಗಿ ಮಾಡಿ ಬಿಡುತ್ತದೆ. ಈ ಸ್ವದರ್ಶನ ಚಕ್ರದ ಜ್ಞಾನವು ಈ ಸಂಗಮಯುಗದಲ್ಲಿಯೇ ಪ್ರಾಪ್ತಿಯಾಗುತ್ತದೆ. ಬ್ರಾಹ್ಮಣ ಆತ್ಮರಾಗಿದ್ದೀರಿ ಆದ್ದರಿಂದ ಸ್ವದರ್ಶನ ಚಕ್ರಧಾರಿ ಆಗಿದ್ದೀರಿ. ಬ್ರಾಹ್ಮಣರನ್ನು ಸದಾ ಶಿಖೆಯಲ್ಲಿ ತೋರಿಸುತ್ತಾರೆ, ಶಿಖೆ ಎಂದರೆ ಶ್ರೇಷ್ಠ ಎಂದರ್ಥ. ಬ್ರಾಹ್ಮಣನೆಂದರೆ ಸದಾ ಶ್ರೇಷ್ಠ ಕರ್ಮವನ್ನು ಮಾಡುವವನು, ಸದಾ ಶ್ರೇಷ್ಠ ಕರ್ಮದಲ್ಲಿ ಇರುವವರು - ಇಂತಹ ಬ್ರಾಹ್ಮಣರಾಗಿದ್ದೀರಿ ಅಲ್ಲವೇ ಹೆಸರಿಗಷ್ಟೇ ಬ್ರಾಹ್ಮಣರಲ್ಲ, ಕಾರ್ಯವನ್ನು ಮಾಡುವಂತಹ ಬ್ರಾಹ್ಮಣರು ಏಕೆಂದರೆ ಈಗ ಅಂತ್ಯದಲ್ಲಿಯೂ ಸಹ ಬ್ರಾಹ್ಮಣರ ಹೆಸರೆಷ್ಟಿದೆ! ತಾವು ಸತ್ಯ ಬ್ರಾಹ್ಮಣರದೇ ನೆನಪಾರ್ಥವು ಈಗಿನವರೆಗೂ ನಡೆಯುತ್ತಾ ಇದೆ. ಯಾವುದೇ ಶ್ರೇಷ್ಠ ಕಾರ್ಯವಿದ್ದರೆ ಬ್ರಾಹ್ಮಣರನ್ನೇ ಕರೆಸುತ್ತಾರೆ ಏಕೆಂದರೆ ಬ್ರಾಹ್ಮಣರೇ ಅಷ್ಟು ಶ್ರೇಷ್ಠರಾಗಿದ್ದಾರೆ. ಅಂದಮೇಲೆ ಯಾವ ಸಮಯದಲ್ಲಿ ಇಷ್ಟು ಶ್ರೇಷ್ಠರಾಗಿದ್ದೀರಿ? ಈಗ ಆಗಿದ್ದೀರಿ. ಆದ್ದರಿಂದ ಈಗಿನವರೆಗೂ ಶ್ರೇಷ್ಠ ಕಾರ್ಯದ ನೆನಪಾರ್ಥವು ನಡೆಯುತ್ತಾ ಬಂದಿದೆ. ಪ್ರತೀ ಸಂಕಲ್ಪ, ಪ್ರತೀ ಮಾತು, ಪ್ರತೀ ಕರ್ಮವನ್ನು ಶ್ರೇಷ್ಠವನ್ನಾಗಿ ಮಾಡುವವರು - ಇಂತಹ ಸ್ವದರ್ಶನ ಚಕ್ರಧಾರಿ ಶ್ರೇಷ್ಠರಾಗಿದ್ದೇವೆ - ಈ ಸ್ಮೃತಿಯಲ್ಲಿಯೇ ಸದಾ ಇರಬೇಕು. ಒಳ್ಳೆಯದು.
ಪ್ರಶ್ನೆಗಳು:
1. ಈ ಸಮಯದ ಈ ರಾಜಋಷಿಯ ದರಬಾರ್(ಸಭೆಯ)ನ ವಿಶೇಷತೆ ಏನಾಗಿದೆ?
2. ರಾಜ್ಯ ಅಧಿಕಾರಿಯ ಸಂಕಲ್ಪದಲ್ಲಿ, ಸಂಸ್ಕಾರದಲ್ಲಿ ಮತ್ತು ಬುದ್ಧಿಯಲ್ಲಿ ಯಾವ ಲಕ್ಷಣವಿರುತ್ತದೆ?
3. ಈಗ ಸಮಯ ಪ್ರಮಾಣ ಯಾವ ಎರಡರ ಅಭ್ಯಾಸವನ್ನು ಇನ್ನೂ ತೀವ್ರವಾಗಿ ಹೆಚ್ಚಿಸಬೇಕು?
4. ವೈರಾಗ್ಯ ವೃತ್ತಿಯ ಅರ್ಥ ಏನಾಗಿದೆ?
5. ಸಂಪೂರ್ಣ ಸಂಪನ್ನ ತಂದೆಯ ಸಮಾನ ಸ್ಥಿತಿಯ ಅರ್ಥವೇನು?
6. ರಾಜಋಷಿಯ ಸ್ಥಿತಿ ಯಾವುದು?
7. ರಾಜಋಷಿಯ ಸೂಕ್ಷ್ಮ ಅಭ್ಯಾಸ ಯಾವುದು?
8. ಸಂಪನ್ನ, ಸಂಪೂರ್ಣ ಸ್ವಾಭಾವಿಕ ಸಂಸ್ಕಾರಗಳು ಯಾವುವು?
9. ಬೇಹದ್ದಿನ ವೈರಾಗ್ಯ ವೃತ್ತಿಯೆಂದರೇನು?
10. ನಿಶ್ಚಯನ ಲಕ್ಷಣವೇನು? ಲಕ್ಷಣದ ಲಕ್ಷಣ ಏನಾಗಿದೆ?