22.03.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಗೆ
ಜ್ಞಾನಿ ಮಕ್ಕಳೇ ಪ್ರಿಯರಾಗಿದ್ದಾರೆ. ಆದ್ದರಿಂದ ತಂದೆಯ ಸಮಾನ ಮಾII ಜ್ಞಾನ ಸಾಗರರಾಗಿರಿ”
ಪ್ರಶ್ನೆ:
ಕಲ್ಯಾಣಕಾರಿ
ಯುಗದಲ್ಲಿ ತಂದೆಯು ಎಲ್ಲಾ ಮಕ್ಕಳಿಗೆ ಯಾವ ಸ್ಮೃತಿ ತರಿಸುತ್ತಾರೆ?
ಉತ್ತರ:
ಮಕ್ಕಳೇ, ನೀವು ತಮ್ಮ ಮನೆಯನ್ನು ಬಿಟ್ಟು 5000 ವರ್ಷಗಳಾಯಿತು. ನೀವು 5000 ವರ್ಷಗಳಲ್ಲಿ 84
ಜನ್ಮಗಳನ್ನು ತೆಗೆದುಕೊಂಡಿರಿ. ಈಗ ಇದು ಅಂತಿಮ ಜನ್ಮವಾಗಿದೆ. ವಾನಪ್ರಸ್ಥ ಸ್ಥಿತಿಯಾಗಿದೆ.
ಆದ್ದರಿಂದ ಈಗ ಮನೆಗೆ ಹೋಗುವ ತಯಾರಿ ಮಾಡಿಕೊಳ್ಳಿ ಮತ್ತೆ ಸುಖಧಾಮದಲ್ಲಿ ಬರುತ್ತೀರಿ. ಭಲೆ ಗೃಹಸ್ಥ
ವ್ಯವಹಾರದಲ್ಲಿರಿ, ಆದರೆ ಇದೊಂದು ಅಂತಿಮ ಜನ್ಮದಲ್ಲಿ ಪವಿತ್ರರಾಗಿ ತಂದೆಯನ್ನು ನೆನಪು ಮಾಡಿ.
ಗೀತೆ:
ಸಭೆಯಲ್ಲಿ ಜ್ಯೋತಿ ಬೆಳಗಿತು.......
ಓಂ ಶಾಂತಿ.
ಮಕ್ಕಳು ಇದನ್ನು ತಿಳಿದುಕೊಂಡಿದ್ದೀರಿ - ಗಾಡ್ ಈಜ್ ಒನ್. ಭಗವಂತನು ಒಬ್ಬರೇ ಆಗಿದ್ದಾರೆ. ಎಲ್ಲಾ
ಆತ್ಮರ ಪಿತನು ಒಬ್ಬರೇ ಆಗಿದ್ದಾರೆ, ಅವರಿಗೆ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ. ಸೃಷ್ಟಿಯ
ರಚಯಿತನೂ ಒಬ್ಬರೇ ಆಗಿದ್ದಾರೆ, ಅನೇಕರಾಗಿರಲು ಸಾಧ್ಯವಿಲ್ಲ. ಈ ಸಿದ್ಧಾಂತದನುಸಾರ ಮನುಷ್ಯರು
ತಮ್ಮನ್ನು ಭಗವಂತನೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನೀವೀಗ ಈಶ್ವರೀಯ ಸೇವೆಗೆ
ನಿಮಿತ್ತರಾಗಿದ್ದೀರಿ, ಈಶ್ವರನು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದಾರೆ, ಅದಕ್ಕೆ
ಸತ್ಯಯುಗವೆಂದು ಹೇಳಲಾಗುತ್ತದೆ. ಅದಕ್ಕಾಗಿ ನೀವು ಯೋಗ್ಯರಾಗುತ್ತಿದ್ದೀರಿ. ಸತ್ಯಯುಗದಲ್ಲಿ ಯಾರೂ
ಪತಿತರಿರುವುದಿಲ್ಲ. ನೀವೀಗ ಪಾವನರಾಗುತ್ತಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು
ಪತಿತ-ಪಾವನನಾಗಿದ್ದೇನೆ, ಮತ್ತು ನೀವು ಮಕ್ಕಳಿಗೆ ಶ್ರೇಷ್ಠ ಮತವನ್ನು ಕೊಡುತ್ತೇನೆ - ನಿರಾಕಾರ
ತಂದೆಯಾದ ನನ್ನನ್ನು ನೆನಪು ಮಾಡುವುದರಿಂದ ನೀವು ಪತಿತ, ತಮೋಪ್ರಧಾನರಿಂದ ಪಾವನ ಸತೋಪ್ರಧಾನರಾಗಿ
ಬಿಡುತ್ತೀರಿ. ನೆನಪು ಎಂಬ ಯೋಗಾಗ್ನಿಯಿಂದ ನಿಮ್ಮ ಪಾಪಗಳು ನಾಶವಾಗುತ್ತವೆ. ಸಾಧು ಮೊದಲಾದವರು
ಈಶ್ವರನು ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಒಂದು ಕಡೆ ಅವರು ಒಬ್ಬರೇ ಆಗಿದ್ದಾರೆಂದು
ಹೇಳುತ್ತಾರೆ. ಇಲ್ಲಂತೂ ಅನೇಕರು ತನ್ನನ್ನೇ ಭಗವಂತನೆಂದು ತಿಳಿದುಕೊಳ್ಳುತ್ತಾರೆ. ಶ್ರೀ ಶ್ರೀ 108
ಎಂದೂ ಕರೆಸಿಕೊಳ್ಳುತ್ತಾರೆ. ವಾಸ್ತವದಲ್ಲಿ ಜಗತ್ತಿನ ಗುರು ಒಬ್ಬರೇ ಆಗಿದ್ದಾರೆ. ಇಡೀ ಜಗತ್ತನ್ನು
ಪಾವನ ಮಾಡುವವರು ಒಬ್ಬರೇ ಪರಮಾತ್ಮ ಇಡೀ ಪ್ರಪಂಚವನ್ನು ದುಃಖದಿಂದ ಮುಕ್ತರನ್ನಾಗಿ ಮಾಡುತ್ತಾರೆ,
ಅವರೇ ದುಃಖಹರ್ತ-ಸುಖಕರ್ತನಾಗಿದ್ದಾರೆ. ಮನುಷ್ಯರಿಗೆ ಇದನ್ನು ಹೇಳಲು ಸಾಧ್ಯವಿಲ್ಲ. ಇದನ್ನೂ ಸಹ
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇದು ಪತಿತ ಪ್ರಪಂಚವಾಗಿದೆ, ಎಲ್ಲರೂ ಪತಿತರಾಗಿದ್ದಾರೆ.
ಪಾವನ ಪ್ರಪಂಚದಲ್ಲಿ ಯಥಾ ರಾಜ-ರಾಣಿ ತಥಾ ಪ್ರಜಾ ಆಗಿರುತ್ತಾರೆ. ಸತ್ಯಯುಗದಲ್ಲಿ ಪೂಜ್ಯ ಮಹಾರಾಜ,
ಮಹಾರಾಣಿಯರಾಗಿರುತ್ತೀರಿ ನಂತರ ಭಕ್ತಿಮಾರ್ಗದಲ್ಲಿ ಪೂಜಾರಿಗಳಾಗಿ ಬಿಡುತ್ತೀರಿ. ಸತ್ಯಯುಗದಲ್ಲಿ
ಯಾರು ಮಹಾರಾಜ, ಯಾರು ಮಹಾರಾಣಿಯಿದ್ದರೋ ಅವರಲ್ಲಿ ಎರಡು ಕಲೆಗಳು ಕಡಿಮೆಯಾದಾಗ ಕೇವಲ
ರಾಜ-ರಾಣಿಯೆಂದು ಹೇಳಲಾಗುತ್ತದೆ. ಇವು ಬಹಳ ವಿಸ್ತಾರದ ಮಾತುಗಳಾಗಿವೆ. ಇಲ್ಲವಾದರೆ ಒಂದು
ಸೆಕೆಂಡಿನಲ್ಲಿ ಜೀವನ್ಮುಕ್ತಿ ಎಂಬ ಗಾಯನವಿದೆ. ತಂದೆಯು ತಿಳಿಸುತ್ತಾರೆ - ಭಲೆ ಗೃಹಸ್ಥ
ವ್ಯವಹಾರದಲ್ಲಿರಿ ಆದರೆ ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಿರಿ. ಈಗ ವಾನಪ್ರಸ್ಥ ಸ್ಥಿತಿಯಾಗಿದೆ.
ವಾನಪ್ರಸ್ಥ ಅಥವಾ ಶಾಂತಿಧಾಮ ಒಂದೇ ಮಾತಾಗಿದೆ. ಅಲ್ಲಿ ಆತ್ಮರು ಬ್ರಹ್ಮ್ ತತ್ವದಲ್ಲಿರುತ್ತಾರೆ
ಅದಕ್ಕೆ ಬ್ರಹ್ಮಾಂಡವೆಂದು ಹೇಳುತ್ತಾರೆ. ವಾಸ್ತವದಲ್ಲಿ ಆತ್ಮಗಳು ಅಂಡಾಕಾರದಲ್ಲಿ ಇರುವುದಿಲ್ಲ
ಆತ್ಮವೂ ಬಿಂದುವಾಗಿದೆ. ತಂದೆಯು ತಿಳಿಸುತ್ತಾರೆ - ಯಾರೆಲ್ಲಾ ಆತ್ಮರಿದ್ದಾರೆಯೋ ಅವರೆಲ್ಲಾ ಈ
ಡ್ರಾಮಾದಲ್ಲಿ ಪಾತ್ರಧಾರಿಗಳು. ಹೇಗೆ ಪಾತ್ರಧಾರಿಗಳು ನಾಟಕದಲ್ಲಿ ವೇಷವನ್ನು ಬದಲಾಯಿಸುತ್ತಾರೆ,
ಭಿನ್ನ-ಭಿನ್ನ ಪಾತ್ರವನ್ನಭಿನಯಿಸುತ್ತಾರೆ, ಹಾಗೆಯೇ ಇದೂ ಸಹ ಬೇಹದ್ದಿನ ನಾಟಕವಾಗಿದೆ. ಆತ್ಮರು
ಸೃಷ್ಟಿಯಲ್ಲಿ ಪಂಚ ತತ್ವಗಳಿಂದಾದ ಶರೀರದಲ್ಲಿ ಪ್ರವೇಶ ಮಾಡಿ ಆದಿಯಿಂದ ಹಿಡಿದು
ಪಾತ್ರವನ್ನಭಿನಯಿಸುತ್ತಾರೆ. ಪರಮಾತ್ಮ ಮತ್ತು ಬ್ರಹ್ಮಾ, ವಿಷ್ಣು, ಶಂಕರ ಎಲ್ಲರೂ
ಪಾತ್ರಧಾರಿಗಳಾಗಿದ್ದಾರೆ. ನಾಟಕದಲ್ಲಿ ಪಾತ್ರವನ್ನಭಿನಯಿಸಲು ಭಿನ್ನ-ಭಿನ್ನ ಪ್ರಕಾರದ ಉಡುಪು
ಸಿಗುತ್ತದೆಯಲ್ಲವೆ. ಮನೆಯಲ್ಲಿ ಆತ್ಮರೆಲ್ಲರೂ ಅಶರೀರಿಯಾಗಿರುತ್ತಾರೆ. ನಂತರ ಯಾವಾಗ ಪಂಚ ತತ್ವಗಳ
ಶರೀರವು ತಯಾರಾಗುತ್ತದೆ ಆಗ ಅದರಲ್ಲಿ ಆತ್ಮವು ಪ್ರವೇಶ ಮಾಡುತ್ತದೆ. 84 ಶರೀರಗಳು ಸಿಗುತ್ತವೆ.
ಅದಕ್ಕೆ ಹೆಸರುಗಳೂ ಅಷ್ಟೇ ಬದಲಾಗುತ್ತದೆ. ಆತ್ಮದ ಹೆಸರು ಒಂದೇ ಆಗಿದೆ. ಶಿವ ತಂದೆಯಂತೂ
ಪತಿತ-ಪಾವನನಾಗಿದ್ದಾರೆ, ಅವರಿಗೆ ತಮ್ಮದೇ ಆದ ಶರೀರವಿಲ್ಲ. ಶರೀರದ ಆಧಾರವನ್ನು
ತೆಗೆದುಕೊಳ್ಳಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ - ನನ್ನ ಹೆಸರಾಗಿದೆ - ಶಿವ. ಭಲೆ ಹಳೆಯ
ಶರೀರದಲ್ಲಿ ಬರುತ್ತೇನೆ ಆದರೆ ಇವರ ಶರೀರದ ಹೆಸರೇ ಬೇರೆಯಾಗಿದೆ. ಅವರಿಗೆ ವ್ಯಕ್ತ ಹೆಸರಿದೆ ನಾನು
ಪ್ರವೇಶ ಮಾಡಿದ ನಂತರ ಅವ್ಯಕ್ತ ಹೆಸರು ಬಂದಿದೆ. ಹೇಗೆ ಒಂದು ಧರ್ಮದವರು ಇನ್ನೊಂದು ಧರ್ಮದಲ್ಲಿ
ಹೋದರೆ ಹೆಸರು ಬದಲಾಗುತ್ತದೆ. ನೀವೂ ಸಹ ಶೂದ್ರ ಧರ್ಮದಿಂದ ಬ್ರಾಹ್ಮಣ ಧರ್ಮದಲ್ಲಿ ಬಂದಿದ್ದೀರಿ
ಆದ್ದರಿಂದ ಹೆಸರು ಬದಲಾಗಿದೆ. ಬರೆಯುತ್ತೀರಿ ಶಿವಬಾಬಾ ಥ್ರೂ ಕೇರ್ ಆಫ್ ಬ್ರಹ್ಮಾ. ಶಿವ ತಂದೆಯು
ಪರಮಪಿತ ಪರಮಾತ್ಮನಾಗಿದ್ದಾರೆ. ಅವರಿಗೆ ಹೆಸರು ಬದಲಾಗುವುದಿಲ್ಲ. ಶಿವ ತಂದೆಯು ಬ್ರಹ್ಮಾರವರ ಮೂಲಕ
ಆದಿ ಸನಾತನ ದೇವಿ ದೇವತಾ ಧರ್ಮದ ಸ್ಥಾಪನೆ ಮಾಡಿಸುತ್ತಿದ್ದಾರೆ. ಯಾವ ಧರ್ಮವು ಈಗ ಪ್ರಾಯಲೋಪವಾಗಿ
ಬಿಟ್ಟಿದೆ. ಯಾರು ಪಾವನ ಪೂಜ್ಯರಾಗಿದ್ದರೋ ಅವರೇ ಪತಿತ ಪೂಜಾರಿಗಳಾಗಿದ್ದಾರೆ. 84 ಜನ್ಮಗಳನ್ನು
ಪೂರ್ಣ ಮಾಡಿದ್ದಾರೆ. ಈಗ ಪುನಃ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಪರಮಪಿತ ಪರಮಾತ್ಮನು
ಬಂದು ಬ್ರಹ್ಮಾರವರ ಮೂಲಕ ಪುನಃ ಸ್ಥಾಪನೆ ಮಾಡಿಸುತ್ತಾರೆಂದು ಗಾಯನವಿದೆ ಅಂದಮೇಲೆ ಬ್ರಾಹ್ಮಣರು
ಅವಶ್ಯವಾಗಿ ಬೇಕು. ಬ್ರಹ್ಮಾ ಮತ್ತು ಬ್ರಾಹ್ಮಣರು ಎಲ್ಲಿಂದ ಬಂದರು? ಶಿವ ತಂದೆಯು ಬಂದು
ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಳ್ಳುತ್ತಾರೆ. ನೀವು ನನ್ನವರಾಗಿದ್ದೀರಿ ಎಂದು ಹೇಳುತ್ತಾರೆ.
ಶಿವ ತಂದೆಯ ಮಕ್ಕಳಂತೂ ಆಗಿಯೇ ಇದ್ದೀರಿ ಮತ್ತು ಬ್ರಹ್ಮಾರವರ ಮೂಲಕ ನೋಡಿದಾಗ ನೀವು
ಮೊಮ್ಮಕ್ಕಳಾಗುತ್ತೀರಿ. ಎಲ್ಲಾ ಪ್ರಜೆಗಳಿಗೆ ಪಿತನು ಒಬ್ಬರೇ ಆಗಿದ್ದಾರೆ. ಎಷ್ಟೊಂದು ಮಂದಿ ಮಕ್ಕಳು
ಕುಮಾರ-ಕುಮಾರಿಯರಾಗಿದ್ದಾರೆ. ಅವರನ್ನು ಶಿವ ತಂದೆಯು ಬ್ರಹ್ಮಾರವರ ಮೂಲಕ ದತ್ತು
ಮಾಡಿಕೊಳ್ಳುತ್ತಾರೆ. ಮನುಷ್ಯರಿಗೆ ಇದು ಗೊತ್ತಿಲ್ಲ. ತಂದೆಯು ಬಂದು ಆದಿ ಸನಾತನ ದೇವಿ-ದೇವತಾ
ಧರ್ಮವನ್ನು ಸ್ಥಾಪನೆ ಮಾಡುತ್ತಾರೆ ಅಂದರೆ ಹೊಸದಾಗಿ ಬರುತ್ತಿರುತ್ತಾರೆ ಎಂದಲ್ಲ. ಹೇಗೆ
ಪ್ರಳಯವಾಯಿತು ನಂತರ ಸಾಗರದಲ್ಲಿ ಎಲೆಯ ಮೇಲೆ ಕೃಷ್ಣನು ತೇಲಿ ಬಂದನೆಂದು ತೋರಿಸುತ್ತಾರೆ, ಆದರೆ
ಇವೆಲ್ಲವೂ ಕಲ್ಪನೆಯ ಕಥೆಗಳಾಗಿವೆ. ಈ ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತಿರುತ್ತದೆ.
ಆತ್ಮವು ಅಮರವಾಗಿದೆ, ಅದರಲ್ಲಿ ಪಾತ್ರವೂ ಅಮರವಾಗಿದೆ. ಪಾತ್ರವೆಂದೂ ಸವೆಯುವುದಿಲ್ಲ.
ಸತ್ಯಯುಗದಲ್ಲಿ ಅದೇ ಲಕ್ಷ್ಮಿ - ನಾರಾಯಣರ ಸೂರ್ಯವಂಶಿ ರಾಜಧಾನಿಯು ನಡೆದು ಬರುತ್ತದೆ, ಅದೆಂದೂ
ಬದಲಾಗುವುದಿಲ್ಲ. ಪ್ರಪಂಚವು ಹೊಸದರಿಂದ ಹಳೆಯದು, ಹಳೆಯದರಿಂದ ಹೊಸದಾಗುತ್ತಿರುತ್ತದೆ.
ಪ್ರತಿಯೊಬ್ಬರಿಗೆ ಅವಿನಾಶಿ ಪಾತ್ರವು ಸಿಕ್ಕಿದೆ. ತಂದೆಯು ತಿಳಿಸುತ್ತಾರೆ - ಭಕ್ತಿಮಾರ್ಗದಲ್ಲಿ
ಭಕ್ತರು ಯಾವ-ಯಾವ ಭಾವನೆಯಿಂದ ಭಕ್ತಿ ಮಾಡುವರೋ ಅದರದನುಸಾರವೇ ಸಾಕ್ಷಾತ್ಕಾರ ಮಾಡಿಸುತ್ತೇನೆ.
ಕೆಲವರಿಗೆ ಹನುಮಂತನ, ಕೆಲವರಿಗೆ ಗಣೇಶನ ಸಾಕ್ಷಾತ್ಕಾರವನ್ನು ಮಾಡಿಸುತ್ತೇನೆ. ಅವರ ಆ ಶುಭ
ಭಾವನೆಯನ್ನು ಪೂರ್ಣಗೊಳಿಸುತ್ತೇನೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಭಗವಂತನು
ಎಲ್ಲರಲ್ಲಿದ್ದಾರೆಂದು ಮನುಷ್ಯರು ತಿಳಿದು ಅವರನ್ನು ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ.
ಭಕ್ತಮಾಲೆಯೂ ಇದೆ. ಪುರುಷರಲ್ಲಿ ಶಿರೋಮಣಿ ನಾರದನೆಂದು ಗಾಯನವಿದೆ, ಸ್ತ್ರೀಯರಲ್ಲಿ ಮೀರಾ
ಶಿರೋಮಣಿಯಾಗಿದ್ದಾಳೆ. ಭಕ್ತಮಾಲೆಯೇ ಬೇರೆ, ರುದ್ರ ಮಾಲೆಯೇ ಬೇರೆ, ಜ್ಞಾನದ ಮಾಲೆಯೇ ಬೇರೆಯಾಗಿದೆ.
ಭಕ್ತರ ಮಾಲೆಯನ್ನೆಂದೂ ಪೂಜಿಸುವುದಿಲ್ಲ, ರುದ್ರ ಮಾಲೆಯನ್ನು ಪೂಜಿಸಲಾಗುತ್ತದೆ. ಮೇಲೆ ಹೂ, ನಂತರ
ಜೋಡಿ ಮಣಿಗಳು.... ಅನಂತರ ನೀವು ಮಕ್ಕಳು ಯಾರು ರಾಜ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತೀರೋ ಅವರ
ಸೂಚಕವಾಗಿ ಮಣಿಗಳ ಮಾಲೆಯಿದೆ. ರುದ್ರ ಮಾಲೆಯೇ ವಿಷ್ಣುವಿನ ಮಾಲೆಯಾಗಿದೆ. ಭಕ್ತರ ಮಾಲೆಗೆ ಕೇವಲ
ಗಾಯನವಾಗುತ್ತದೆ. ಈ ರುದ್ರ ಮಾಲೆಯನ್ನು ಎಲ್ಲರೂ ತಿರುಗಿಸುತ್ತಾರೆ. ನೀವು ಭಕ್ತರಲ್ಲ,
ಜ್ಞಾನಿಗಳಾಗಿದ್ದೀರಿ, ತಂದೆಯು ತಿಳಿಸುತ್ತಾರೆ - ನನಗೆ ಜ್ಞಾನಿ ಆತ್ಮಗಳೇ ಪ್ರಿಯರಾಗಿದ್ದಾರೆ.
ತಂದೆಯೇ ಜ್ಞಾನ ಸಾಗರನಾಗಿದ್ದಾರೆ, ನೀವು ಮಕ್ಕಳಿಗೆ ಜ್ಞಾನವನ್ನು ಕೊಡುತ್ತಿದ್ದಾರೆ. ನಿಮ್ಮ
ಮಾಲೆಯು ಪೂಜೆ ಮಾಡಲ್ಪಡುತ್ತದೆ. 8 ರತ್ನಗಳಿಗೂ ಪೂಜೆಯಾಗುತ್ತದೆ. ಏಕೆಂದರೆ ಜ್ಞಾನಿ
ಆತ್ಮಗಳಾಗಿರುವುದರಿಂದ ಅವರ ಪೂಜೆ ನಡೆಯುತ್ತದೆ. ನವ ರತ್ನಗಳ ಉಂಗುರವನ್ನು ಮಾಡಿಸಿ ಧರಿಸುತ್ತಾರೆ
ಏಕೆಂದರೆ ಇವರು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ, ಪಾಸ್-ವಿತ್-ಆನರ್ ಆಗುತ್ತಾರೆ
ಆದ್ದರಿಂದ ಅವರ ಗಾಯನವಿದೆ. 9ನೇ ಮಣಿಯಾಗಿ ಮಧ್ಯದಲ್ಲಿ ಶಿವ ತಂದೆಯನ್ನಿಡುತ್ತಾರೆ, ಅದಕ್ಕೆ
ನವರತ್ನಗಳೆಂದು ಹೇಳುತ್ತಾರೆ. ಇದು ವಿವರವಾದ ಜ್ಞಾನವಾಗಿದೆ. ತಂದೆಯಂತೂ ಕೇವಲ ಇಷ್ಟನ್ನೇ
ಹೇಳುತ್ತಾರೆ - ಮಕ್ಕಳೇ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು
ವಿನಾಶವಾಗುತ್ತವೆ ಮತ್ತು ನೀವು ಹೊರಟು ಹೋಗುವಿರಿ. ಪತಿತ ಆತ್ಮರು ಪಾವನ ಪ್ರಪಂಚದಲ್ಲಿ ಹೋಗಲು
ಸಾಧ್ಯವಿಲ್ಲ, ಇಲ್ಲಿ ಎಲ್ಲರೂ ಪತಿತರಾಗಿದ್ದಾರೆ. ದೇವತೆಗಳ ಶರೀರವಂತೂ ಪವಿತ್ರ,
ನಿರ್ವಿಕಾರಿಯಾಗಿರುತ್ತದೆ. ಅವರು ಪೂಜ್ಯರಾಗಿದ್ದಾರೆ, ಯಥಾ ರಾಜ-ರಾಣಿ ತಥಾ ಪ್ರಜೆ. ಎಲ್ಲರೂ
ಪೂಜ್ಯರಾಗಿರುತ್ತಾರೆ, ಇಲ್ಲಿ ಎಲ್ಲರೂ ಪೂಜಾರಿಗಳಾಗಿದ್ದಾರೆ. ಅಲ್ಲಿ ದುಃಖದ ಮಾತಿರುವುದಿಲ್ಲ
ಅದಕ್ಕೆ ಸ್ವರ್ಗ, ಸುಖಧಾಮವೆಂದು ಹೇಳಲಾಗುತ್ತದೆ. ಅಲ್ಲಿ ಸುಖ, ಶಾಂತಿ, ಸಂಪತ್ತು ಎಲ್ಲವೂ ಇತ್ತು
ಈಗಂತೂ ಏನೂ ಇಲ್ಲ, ಆದ್ದರಿಂದ ಇದಕ್ಕೆ ನರಕ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ನಾವಾತ್ಮರು
ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಅಲ್ಲಿಂದ ಪಾತ್ರವನ್ನಭಿನಯಿಸಲು ಬರುತ್ತೇವೆ. ಪೂರ್ಣ 84
ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈಗ ದುಃಖಧಾಮವಾಗಿದೆ ನಂತರ ನಾವು ಶಾಂತಿಧಾಮಕ್ಕೆ ಹೋಗಿ
ಅಲ್ಲಿಂದ ಸುಖಧಾಮದಲ್ಲಿ ಬರುತ್ತೇವೆ. ತಂದೆಯು ಸುಖಧಾಮದ ಮಾಲೀಕರನ್ನಾಗಿ ಮಾಡಲು ಮನುಷ್ಯರಿಂದ
ದೇವತೆಗಳನ್ನಾಗಿ ಮಾಡಲು ಪುರುಷಾರ್ಥ ಮಾಡಿಸುತ್ತಿದ್ದಾರೆ. ನಿಮ್ಮದು ಇದು ಸಂಗಮಯುಗವಾಗಿದೆ. ತಂದೆಯು
ತಿಳಿಸುತ್ತಾರೆ, ನಾನು ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ, ಯುಗ ಯುಗಗಳಲ್ಲಿ ಅಲ್ಲ. ನಾನು
ಸಂಗಮಯುಗದಲ್ಲಿ ಒಂದೇ ಬಾರಿ ಸೃಷ್ಟಿಯನ್ನು ಪರಿವರ್ತನೆ ಮಾಡಲು ಬರುತ್ತೇನೆ. ಸತ್ಯಯುಗವಿತ್ತು, ಈಗ
ಕಲಿಯುಗವಾಗಿದೆ, ಪುನಃ ಸತ್ಯಯುಗ ಬರಬೇಕು. ಇದು ಕಲ್ಯಾಣಕಾರಿ ಸಂಗಮಯುಗವಾಗಿದೆ. ಎಲ್ಲರ
ಕಲ್ಯಾಣವಾಗಬೇಕಾಗಿದೆ. ಎಲ್ಲರನ್ನೂ ರಾವಣನ ಬಂಧನದಿಂದ ಬಿಡಿಸುತ್ತಾರೆ. ಆದ್ದರಿಂದ ಅವರಿಗೆ
ದುಃಖಹರ್ತ, ಸುಖಕರ್ತನೆಂದು ಹೇಳಲಾಗುತ್ತದೆ. ಇಲ್ಲಿ ಎಲ್ಲರೂ ದುಃಖಿಯಾಗಿದ್ದಾರೆ ನೀವು
ಸುಖಧಾಮದಲ್ಲಿ ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತೀರಿ. ಸುಖಧಾಮದಲ್ಲಿ ಹೋಗಬೇಕೆಂದರೆ ಮೊದಲು
ಶಾಂತಿಧಾಮದಲ್ಲಿ ಹೋಗಬೇಕಾಗಿದೆ. ನೀವು -ಪಾತ್ರವನ್ನಭಿನಯಿಸುತ್ತಾ - ಅಭಿನಯಿಸುತ್ತಾ 5000
ವರ್ಷಗಳಾಗಿದೆ. ತಂದೆಯು ತಿಳಿಸುತ್ತಾರೆ - ನೀವು ತಮ್ಮ ಮನೆಯನ್ನು ಬಿಟ್ಟು 5000 ವರ್ಷಗಳಾಯಿತು,
ಅದರಲ್ಲಿ ನೀವು ಭಾರತವಾಸಿಗಳು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈಗ ನಿಮ್ಮದು ಅಂತಿಮ
ಜನ್ಮವಾಗಿದೆ, ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ಎಲ್ಲರೂ ಹೋಗಬೇಕಾಗಿದೆ, ಜ್ಞಾನ ಸಾಗರ ಅಥವಾ
ರುದ್ರನೆಂದೂ ಗಾಯನವಿದೆ. ಇದು ಶಿವ ಜ್ಞಾನ ಯಜ್ಞವಾಗಿದೆ, ಪತಿತ-ಪಾವನನು ಶಿವನಾಗಿದ್ದಾರೆ,
ಪರಮಾತ್ಮನೂ ಶಿವನಾಗಿದ್ದಾರೆ. ರುದ್ರ ಎಂಬ ಹೆಸರನ್ನು ಭಕ್ತರು ಇಟ್ಟಿದ್ದಾರೆ, ಆದರೆ ಅವರ ಮೂಲ
ಹೆಸರು ಒಂದೇ ಆಗಿದೆ - ಶಿವ. ಶಿವ ತಂದೆಯು ಪ್ರಜಾಪಿತ ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡಿಸುತ್ತಾರೆ.
ಬ್ರಹ್ಮನು ಒಬ್ಬರೇ ಆಗಿದ್ದಾರೆ. ಇವರು ಪತಿತ, ಮತ್ತೆ ಇವರೇ ಪಾವನ ಬ್ರಹ್ಮನಾಗುತ್ತಾರೆ ಆಗ
ಫರಿಶ್ತೆಯಾಗುತ್ತಾರೆ. ಸೂಕ್ಷ್ಮ ವತನದಲ್ಲಿ ಯಾವ ಬ್ರಹ್ಮನನ್ನು ತೋರಿಸುತ್ತಾರೆಯೋ ಅವರು ಬೇರೆ
ಅಲ್ಲ, ಬ್ರಹ್ಮನು ಒಬ್ಬರೇ ಆಗಿದ್ದಾರೆ, ಇಲ್ಲಿದ್ದಾಗ ವ್ಯಕ್ತ ಬ್ರಹ್ಮಾ, ಫರಿಶ್ತೆಯಾದ ಮೇಲೆ
ಅವ್ಯಕ್ತ ಬ್ರಹ್ಮಾ, ಇವರು ಸಂಪೂರ್ಣ ಪಾವನರಾಗಿ ಬಿಟ್ಟರೆ ಸೂಕ್ಷ ವತನದಲ್ಲಿ ನೋಡುತ್ತೀರಿ, ಅಲ್ಲಿ
ಮೂಳೆ-ಮಾಂಸ ಏನೂ ಇರುವುದಿಲ್ಲ. ಹೇಗೆ ತಂದೆಯು ತಿಳಿಸಿದ್ದರು, ಯಾವ ಆತ್ಮಕ್ಕೆ ಶರೀರ
ಸಿಗುವುದಿಲ್ಲವೋ ಅಲ್ಲಿಯವರೆಗೆ ಅಲೆದಾಡುತ್ತಿರುತ್ತದೆ. ಅದಕ್ಕೆ ಭೂತವೆಂದು ಹೇಳುತ್ತಾರೆ. ಶರೀರವು
ಸಿಗುವವರೆಗೆ ಅಲೆದಾಡುತ್ತದೆ. ಕೆಲವು ಆತ್ಮಗಳು ಒಳ್ಳೆಯವರಿರುತ್ತಾರೆ, ಕೆಲವರು ಕೆಟ್ಟವರಿರುತ್ತಾರೆ.
ತಂದೆಯು ಪ್ರತಿಯೊಂದು ಮಾತಿನ ತಿಳುವಳಿಕೆ ನೀಡುತ್ತಾರೆ. ಅವರು ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ
ಅವಶ್ಯವಾಗಿ ತಿಳಿಸುತ್ತಾರಲ್ಲವೆ. ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯಿದೆ. ತಂದೆ ಮತ್ತು
ಆಸ್ತಿಯನ್ನು ನೆನಪು ಮಾಡಿದರೆ ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಆಸ್ತಿಯು ಸಿಗುವುದು. ಇದು ಎಷ್ಟು
ಸಹಜವಾಗಿದೆ ! ಹೆಸರೇ ಆಗಿದೆ - ಸಹಜ ರಾಜಯೋಗ. ಭಾರತದ ಯೋಗವು ಇದಾಗಿತ್ತು ಎಂದು ಅವರು
ತಿಳಿಯುತ್ತಾರೆ ಆದರೆ ಆ ಸನ್ಯಾಸಿಗಳು ಮಾಡುವುದು ಹಠಯೋಗವಾಗಿದೆ. ಈ ರಾಜಯೋಗವು ಬಹಳ ಸಹಜವಾಗಿದೆ.
ಯೋಗವೆಂದರೆ ನೆನಪು. ಅವರದು ಹಠಯೋಗವಾಗಿದೆ. ಇದು ಸಹಜ ಯೋಗವಾಗಿದೆ. ತಂದೆಯು ತಿಳಿಸುತ್ತಾರೆ -
ನನ್ನನ್ನು ಬಹಳ ಸಹಜ ರೀತಿಯಲ್ಲಿ ನೆನಪು ಮಾಡಿ. ಯಾವುದೇ ಲಾಕೆಟ್ ಇತ್ಯಾದಿಗಳನ್ನು ಧರಿಸುವ
ಅವಶ್ಯಕತೆಯೂ ಇಲ್ಲ. ನೀವಂತೂ ತಂದೆಯ ಮಕ್ಕಳಾಗಿದ್ದೀರಿ. ತಂದೆಯನ್ನು ಕೇವಲ ನೆನಪು ಮಾಡಿ. ನೀವಿಲ್ಲಿ
ಪಾತ್ರವನ್ನಭಿನಯಿಸಲು ಬಂದಿದ್ದೀರಿ. ಈಗ ಎಲ್ಲರೂ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಮತ್ತೆ ಅದೇ
ಪಾತ್ರವನ್ನಭಿನಯಿಸಬೇಕಾಗಿದೆ. ಭಾರತವಾಸಿಗಳೇ ಸೂರ್ಯವಂಶಿ, ಚಂದ್ರವಂಶಿ, ವೈಶ್ಯವಂಶಿ,
ಶೂದ್ರವಂಶಿಯರಾಗುತ್ತಾರೆ. ಈ ಮಧ್ಯದಲ್ಲಿ ಅನ್ಯ ಧರ್ಮದವರೂ ಬರುತ್ತಾರೆ. ನೀವು 84 ಜನ್ಮಗಳನ್ನು
ತೆಗೆದುಕೊಳ್ಳುತ್ತೀರಿ. ಮತ್ತೆ ನೀವೇ ಮೊಟ್ಟ ಮೊದಲಿಗೆ ಬರಬೇಕಾಗಿದೆ. ನೀವು ಸತ್ಯಯುಗದಲ್ಲಿ ಬಂದಾಗ
ಮತ್ತೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ಅನ್ಯ ಧರ್ಮದವರ ವರ್ಣಗಳಿಲ್ಲ, ಭಾರತದ್ದೇ ವರ್ಣಗಳಿವೆ.
ನೀವೇ ಸೂರ್ಯವಂಶಿ, ಚಂದ್ರವಂಶಿಯರಾಗಿದ್ದೀರಿ, ಈಗ ಬ್ರಾಹ್ಮಣ ವರ್ಣದಲ್ಲಿದ್ದೀರಿ. ಬ್ರಹ್ಮಾವಂಶಿ
ಬ್ರಾಹ್ಮಣರಾಗಿದ್ದೀರಿ. ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಯಾರ ಬುದ್ಧಿಯಲ್ಲಿ
ಧಾರಣೆಯಾಗುವುದಿಲ್ಲವೋ ಅವರಿಗೆ ಕೇವಲ ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಹೇಗೆ
ತಂದೆಯನ್ನು ಅರಿತುಕೊಳ್ಳುವುದರಿಂದ ಮಕ್ಕಳಿಗೆ ಇದು ತಂದೆಯ ಆಸ್ತಿಯೆಂಬುದು ಅರ್ಥವಾಗಿ ಬಿಡುತ್ತದೆ.
ಮಗಳಿಗಂತೂ ಆಸ್ತಿಯು ಸಿಗುವುದಿಲ್ಲ, ಇಲ್ಲಿ ನೀವು ಶಿವ ತಂದೆಯ ಮಕ್ಕಳಾಗಿದ್ದೀರಿ. ಎಲ್ಲರಿಗೂ
ಅಧಿಕಾರವಿದೆ. ಸ್ತ್ರೀ, ಪುರುಷರೆಲ್ಲರಿಗೂ ಹಕ್ಕಿದೆ. ಎಲ್ಲರಿಗೂ ಕಲಿಸಬೇಕಾಗಿದೆ – ಶಿವ ತಂದೆಯನ್ನು
ನೆನಪು ಮಾಡಿ. ಎಷ್ಟು ನೆನಪು ಮಾಡುತ್ತೀರೋ ಅಷ್ಟೇ ವಿಕರ್ಮಗಳು ವಿನಾಶವಾಗುತ್ತವೆ, ಪತಿತರಿಂದ
ಪಾವನರಾಗುತ್ತೀರಿ. ಆತ್ಮದಲ್ಲಿ ಯಾವ ತುಕ್ಕು ಹಿಡಿದಿದೆಯೋ ಅದು ಬಿಡುವುದು ಹೇಗೆ? ತಂದೆಯು
ತಿಳಿಸುತ್ತಾರೆ - ಯೋಗದಿಂದಲೇ ನಿಮ್ಮಲ್ಲಿರುವ ತುಕ್ಕು ಸಮಾಪ್ತಿಯಾಗುತ್ತದೆ. ಈ ಪತಿತ ಶರೀರವನ್ನಂತೂ
ಇಲ್ಲಿಯೇ ಬಿಡಬೇಕಾಗಿದೆ. ಆತ್ಮವು ಪವಿತ್ರವಾಗಿ ಬಿಡುತ್ತದೆ. ಎಲ್ಲರೂ ಸೊಳ್ಳೆಗಳೋಪಾದಿಯಲ್ಲಿ
ಹೋಗುತ್ತಾರೆ. ಬುದ್ದಿಯೂ ಹೇಳುತ್ತದೆ - ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ. ಈ
ವಿನಾಶದಲ್ಲಿ ಎಷ್ಟೊಂದು ಮಂದಿ ಸಾವನ್ನಪ್ಪುತ್ತಾರೆ, ಕೆಲವರೇ ಉಳಿಯುತ್ತಾರೆ. ರಾಜರಂತೂ ಕೆಲವರೇ
ಇರುತ್ತಾರೆ. ಬಾಕಿ 9 ಲಕ್ಷ ಮಂದಿ ಪ್ರಜೆಗಳು ಸತ್ಯಯುಗದಲ್ಲಿರುತ್ತಾರೆ. ಇದರಮೇಲೆ ಗೀತೆಯೂ
ಇದೆಯಲ್ಲವೆ - 9 ಲಕ್ಷ ನಕ್ಷತ್ರಗಳು...... ಅಂದರೆ ಪ್ರಜೆಗಳು. ಗಿಡವು ಮೊದಲು ಚಿಕ್ಕದಾಗಿರುತ್ತದೆ
ನಂತರ ವೃದ್ಧಿ ಹೊಂದುತ್ತದೆ. ಈಗಂತೂ ಎಷ್ಟೊಂದು ಮಂದಿ ಆತ್ಮರಿದ್ದಾರೆ, ತಂದೆಯು ಎಲ್ಲರಿಗೆ
ಮಾರ್ಗದರ್ಶಕನಾಗಿ ಕರೆದುಕೊಂಡು ಹೋಗುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಯೋಗಾಗ್ನಿಯಿಂದ ವಿಕರ್ಮಗಳ ತುಕ್ಕನ್ನು ಭಸ್ಮ ಮಾಡಿಕೊಂಡು ಪಾವನರಾಗಬೇಕಾಗಿದೆ. ಈಗ ವಾನಪ್ರಸ್ಥ
ಸ್ಥಿತಿಯಾಗಿದೆ, ಆದ್ದರಿಂದ ಹಿಂತಿರುಗಿ ಮನೆಗೆ ಹೋಗಲು ಸಂಪೂರ್ಣ ಸತೋಪ್ರಧಾನರಾಗಬೇಕಾಗಿದೆ.
2. ಈ ಕಲ್ಯಾಣಕಾರಿ ಯುಗದಲ್ಲಿ ತಂದೆಯ ಸಮಾನ ದುಃಖಹರ್ತ, ಸುಖಕರ್ತರಾಗಬೇಕಾಗಿದೆ.
ವರದಾನ:
ಸಾಧಾರಣತೆಯನ್ನು
ಸಮಾಪ್ತಿ ಮಾಡಿ ಮಹಾನತೆಯ ಅನುಭವ ಮಾಡುವಂತಹ ಶ್ರೇಷ್ಠ ಪುರುಷಾರ್ಥಿ ಭವ.
ಯಾರು ಶ್ರೇಷ್ಠ
ಪುರುಷಾರ್ಥಿ ಮಕ್ಕಳಿದ್ದಾರೆ ಅವರ ಪ್ರತಿಯೊಂದು ಸಂಕಲ್ಪ ಮಹಾನ್ ಆಗಿರುತ್ತದೆ ಏಕೆಂದರೆ ಅವರ
ಪ್ರತಿಯೊಂದು ಸಂಕಲ್ಪ, ಶ್ವಾಸದಲ್ಲಿ ಸ್ವತಃವಾಗಿ ತಂದೆಯ ನೆನಪು ಇರುವುದು. ಹೇಗೆ ಭಕ್ತಿಯಲ್ಲಿ
ಹೇಳುತ್ತಾರೆ ಅಪರಿಮಿತವಾದ ಶಬ್ಧ ಕೇಳಿ ಬರುತ್ತಿರಲಿ, ಅಜಪಾಜಪ (ನಿರಂತರ) ನಡೆಯುತ್ತಿರಲಿ, ಇಂತಹ
ಪುರುಷಾರ್ಥ ನಿರಂತರವಾಗಿರಬೇಕು ಇದಕ್ಕೆ ಹೇಳಲಾಗುವುದು ಶ್ರೇಷ್ಠ ಪುರುಷಾರ್ಥ, ನೆನಪು ಮಾಡುವುದಲ್ಲ,
ಸ್ವತಃ ನೆನಪು ಬರುತ್ತಿರಬೇಕು. ಆಗ ಸಾಧಾರಣತೆ ಸಮಾಪ್ತಿಯಾಗಿ ಬಿಡುವುದು ಮತ್ತು ಮಹಾನತೆ ಬರುತ್ತಾ
ಹೋಗುವುದು - ಇದೇ ಆಗಿದೆ ಮುಂದುವರೆಯುವವರ ಗುರುತು.
ಸ್ಲೋಗನ್:
ಮನನ ಶಕ್ತಿಯ ಮುಖಾಂತರ
ಸಾಗರದ ಆಳದಲ್ಲಿ ಹೋಗುವವರೇ ರತ್ನಗಳಿಗೆ ಅಧಿಕಾರಿಯಾಗುತ್ತಾರೆ.