25.03.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಹೇಗೆ
ಸರ್ವರ ಕಲ್ಯಾಣ ಮಾಡುವುದು ತಂದೆಯ ಪಾತ್ರವಾಗಿದೆ ಹಾಗೆಯೇ ತಂದೆಯ ಸಮಾನ ಕಲ್ಯಾಣಕಾರಿಗಳಾಗಿ ತನ್ನ
ಮತ್ತು ಸರ್ವರ ಕಲ್ಯಾಣ ಮಾಡಿ”
ಪ್ರಶ್ನೆ:
ಮಕ್ಕಳ ಯಾವ ಒಂದು
ವಿಶೇಷತೆಯನ್ನು ನೋಡಿ ಬಾಪ್ದಾದಾ ಬಹಳ ಖುಷಿ ಪಡುತ್ತಾರೆ?
ಉತ್ತರ:
ಬಡ ಮಕ್ಕಳು
ತಂದೆಯ ಯಜ್ಞದಲ್ಲಿ ಎಂಟಾಣೆ, ಒಂದು ರೂಪಾಯಿಯನ್ನು ಕಳುಹಿಸುತ್ತಾರೆ ಮತ್ತು ಬಾಬಾ, ಇದಕ್ಕೆ ಬದಲಾಗಿ
ಮಹಲನ್ನು ಕೊಡಿ ಎಂದು ಹೇಳುತ್ತಾರೆ. ತಂದೆಯು ಹೇಳುತ್ತಾರೆ - ಮಕ್ಕಳೇ, ಈ ಒಂದು ರೂಪಾಯಿಯೂ ಸಹ ಶಿವ
ತಂದೆಯ ಖಜಾನೆಯಲ್ಲಿ ಜಮಾ ಆಯಿತು. ನಿಮಗೆ 21 ಜನ್ಮಗಳಿಗಾಗಿ ಮಹಲು ಸಿಗುವುದು. ಸುಧಾಮನ
ಉದಾಹರಣೆಯಿದೆಯಲ್ಲವೆ. ಕವಡೆಯೂ ಖರ್ಚಿಲ್ಲದೆ ನೀವು ಮಕ್ಕಳಿಗೆ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ.
ತಂದೆಯು ಬಡ ಮಕ್ಕಳ ಈ ವಿಶೇಷತೆಯನ್ನು ನೋಡಿ ಬಹಳ ಖುಷಿ ಪಡುತ್ತಾರೆ.
ಗೀತೆ:
ನಿಮ್ಮನ್ನು
ಪಡೆದ ನಾನು ಜಗತ್ತನ್ನೇ ಪಡೆದೆನು
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯಿಂದ ಈಗ ಬೇಹದ್ದಿನ ಆಸ್ತಿಯನ್ನು
ತೆಗೆದುಕೊಳ್ಳುತ್ತಿದ್ದೇವೆ ಎಂದು. ಮಕ್ಕಳು ಹೇಳುತ್ತೀರಿ - ಬಾಬಾ, ತಮ್ಮ ಶ್ರೀಮತದನುಸಾರ ನಾವು
ಪುನಃ ತಮ್ಮಿಂದ ಬೇಹದ್ದಿನ ಆಸ್ತಿಯನ್ನು ಪಡೆಯುತ್ತಿದ್ದೇವೆ. ಇದು ಹೊಸ ಮಾತಲ್ಲ. ಮಕ್ಕಳಿಗೆ ಜ್ಞಾನ
ಸಿಕ್ಕಿದೆ ಮತ್ತು ತಿಳಿದುಕೊಂಡಿದ್ದೀರಿ ನಾವು ಕಲ್ಪ-ಕಲ್ಪವೂ ಸುಖಧಾಮದ ಆಸ್ತಿಯನ್ನು ಕಲ್ಪ-ಕಲ್ಪವೂ
ಪಡೆಯುತ್ತಾ ಇರುತ್ತೇವೆ. ಕಲ್ಪ-ಕಲ್ಪವೂ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವಶ್ಯವಾಗಿ
ನಾವು ಬೇಹದ್ದಿನ ತಂದೆಯ ಮೂಲಕ 21 ಜನ್ಮಗಳ ಆಸ್ತಿಯನ್ನು ಪಡೆಯುತ್ತೇವೆ ಮತ್ತೆ ನಿಧಾನ-ನಿಧಾನವಾಗಿ
ಕಳೆದುಕೊಳ್ಳುತ್ತೇವೆ. ತಂದೆಯು ತಿಳಿಸಿದ್ದಾರೆ - ಇದು ಅನಾದಿ ಮಾಡಿ-ಮಾಡಲ್ಪಟ್ಟ ಆಟವಾಗಿದೆ. ನೀವು
ಮಕ್ಕಳಿಗಾಗಿ ಇದು ಬಹಳ ಒಳ್ಳೆಯದಾಗಿದೆ. ಇದನ್ನೂ ತಿಳಿದುಕೊಂಡಿದ್ದೀರಿ - ಡ್ರಾಮಾದಲ್ಲಿ ಬಹಳಷ್ಟು
ಸುಖವಿದೆ. ಅಂತಿಮದಲ್ಲಿ ಬಂದು ರಾವಣನ ಮೂಲಕ ದುಃಖವನ್ನು ಪಡೆಯುತ್ತೀರಿ. ಈಗಿನ್ನೂ ನೀವು ಕೆಲವರೇ
ಇದ್ದೀರಿ. ಮುಂದೆ ಹೋದಂತೆ ಬಹಳ ವೃದ್ಧಿಯಾಗುತ್ತಾ ಹೋಗುವುದು. ಮನುಷ್ಯರಿಂದ ದೇವತೆಗಳಾಗುತ್ತೀರಿ.
ಅವಶ್ಯವಾಗಿ ಹೃದಯದಲ್ಲಿ ಇದನ್ನು ತಿಳಿದುಕೊಳ್ಳುವಿರಿ - ನಾವು ಕಲ್ಪ-ಕಲ್ಪವೂ ತಂದೆಯಿಂದ
ಆಸ್ತಿಯನ್ನು ಪಡೆಯುತ್ತೇವೆ. ಯಾರು ಯಾರು ಬಂದು ಜ್ಞಾನವನ್ನು ತೆಗೆದುಕೊಳ್ಳುವರೋ ಅವರು
ತಿಳಿದುಕೊಳ್ಳುತ್ತಾರೆ - ಈಗ ಜ್ಞಾನ ಸಾಗರ ತಂದೆಯ ಮೂಲಕ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು
ಪಡೆದಿದ್ದೇವೆ. ತಂದೆಯು ಜ್ಞಾನ ಸಾಗರ, ಪತಿತರನ್ನು ಪಾವನ ಮಾಡುವವರಾಗಿದ್ದಾರೆ ಅರ್ಥಾತ್
ಮುಕ್ತಿ-ಜೀವನ್ಮುಕ್ತಿಯಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ. ಇದನ್ನೂ ಸಹ ನೀವು ಈಗಲೇ
ತಿಳಿದುಕೊಂಡಿದ್ದೀರಿ. ಅನೇಕರು ಗುರುಗಳನ್ನು ಮಾಡಿಕೊಂಡಿದ್ದಾರಲ್ಲವೆ. ಕೊನೆಗೆ ಗುರುಗಳನ್ನೂ ಸಹ
ಬಿಟ್ಟು ಬಂದು ಜ್ಞಾನವನ್ನು ತೆಗೆದುಕೊಳ್ಳುತ್ತಾರೆ. ನಿಮಗೂ ಸಹ ಈ ಜ್ಞಾನ ಈಗ ಸಿಕ್ಕಿದೆ. ನೀವು
ತಿಳಿದುಕೊಂಡಿದ್ದೀರಿ - ಇದಕ್ಕಿಂತ ಮೊದಲು ಅಜ್ಞಾನಿಗಳಾಗಿದ್ದೆವು, ಸೃಷ್ಟಿಚಕ್ರವು ಹೇಗೆ
ಸುತ್ತುತ್ತದೆ? ಶಿವ ತಂದೆ, ಬ್ರಹ್ಮಾ-ವಿಷ್ಣು-ಶಂಕರ ಯಾರೆಂಬುದನ್ನೂ ತಿಳಿದುಕೊಂಡಿರಲಿಲ್ಲ. ನಾವೇ
ವಿಶ್ವದ ಮಾಲೀಕರಾಗಿದ್ದೆವು ಎಂದು ಈಗ ಅರ್ಥವಾಗಿದೆ. ಅಂದಮೇಲೆ ನಿಮ್ಮ ಬುದ್ದಿಯಲ್ಲಿ ಬಹಳ ಒಳ್ಳೆಯ
ನಶೆಯಿರಬೇಕು. ತಂದೆ ಮತ್ತು ಸೃಷ್ಟಿಚಕ್ರವನ್ನು ನೆನಪು ಮಾಡುತ್ತಿರಬೇಕು. ತಂದೆ ಮತ್ತು ಆಸ್ತಿ.
ತಂದೆಯು ತಿಳಿಸುತ್ತಾರೆ - ಇದಕ್ಕಿಂತ ಮೊದಲು ನೀವು ಏನನ್ನೂ ತಿಳಿದುಕೊಂಡಿರಲಿಲ್ಲ. ತಂದೆಯನ್ನಾಗಲಿ,
ಅವರ ರಚನೆಯನ್ನಾಗಲಿ ಅರಿತುಕೊಂಡಿರಲಿಲ್ಲ. ಇಡೀ ಸೃಷ್ಟಿಯ ಮನುಷ್ಯ ಮಾತ್ರರು ತಂದೆಯನ್ನು, ರಚನೆಯ
ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ. ನೀವೀಗ ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ, ತಂದೆಯು
ಎಲ್ಲಾ ಮಕ್ಕಳೊಂದಿಗೆ ಮಾತನಾಡುತ್ತಿದ್ದಾರೆ. ಎಷ್ಟೊಂದುಮಂದಿ ಮಕ್ಕಳಿದ್ದಾರೆ! ಎಷ್ಟೊಂದು
ಸೇವಾಕೇಂದ್ರಗಳಿವೆ. ಇನ್ನೂ ಸೇವಾಕೇಂದ್ರಗಳು - ತೆರೆಯಲ್ಪಡುತ್ತವೆ ಅಂದಾಗ ತಂದೆಯು ತಿಳಿಸುತ್ತಾರೆ
- ಮೊದಲು ನೀವು ಏನನ್ನೂ ತಿಳಿದುಕೊಂಡಿರಲಿಲ್ಲ. ಈಗ ನಂಬರ್ ವಾರ್ ಪುರುಷಾರ್ಥದನುಸಾರ
ತಿಳಿದುಕೊಂಡಿದ್ದೀರಿ. ನಾವೀಗ ತಂದೆಯ ಮೂಲಕ ಪತಿತರಿಂದ ಪಾವನರಾಗುತ್ತಿದ್ದೇವೆ ಎಂಬುದನ್ನೂ
ತಿಳಿದುಕೊಂಡಿದ್ದೀರಿ. ಉಳಿದವರೆಲ್ಲರೂ ಕೂಗುತ್ತಿರುತ್ತಾರೆ. ನೀವು ಗುಪ್ತವಾಗಿದ್ದೀರಿ,
ಬ್ರಹ್ಮಾಕುಮಾರ-ಕುಮಾರಿಯರೆಂದು ಹೇಳುತ್ತಾರೆ ಆದರೆ ಇವರಿಗೆ ಓದಿಸುವವರು ಯಾರು ಎಂಬುದನ್ನು
ಅರಿತುಕೊಂಡಿಲ್ಲ. ಇದನ್ನು ಶಾಸ್ತ್ರಗಳಲ್ಲಿಯೂ ಬರೆದಿಲ್ಲ. ಗೀತೆಯ ಭಗವಂತ ಶಿವನೇ ಬಂದು ಮಕ್ಕಳಿಗೆ
ರಾಜಯೋಗವನ್ನು ಕಲಿಸಿದ್ದಾರೆ. ಇದು ನಿಮ್ಮ ಬುದ್ಧಿಯಲ್ಲಿ ಬರುತ್ತದೆಯಲ್ಲವೆ. ಗೀತೆಯನ್ನು ನೀವು
ಓದಿರುತ್ತೀರಿ, ಈಗ ನಿಮಗೆ ತಿಳಿದಿದೆ – ಜ್ಞಾನ ಮಾರ್ಗವೇ ಬೇರೆಯಾಗಿದೆ. ವಿದ್ವತ್ ಮಂಡಳಿಯಿಂದ ಯಾರು
ಶಾಸ್ತ್ರ ಇತ್ಯಾದಿಗಳನ್ನು ಓದಿ ಬಿರುದು ತೆಗೆದುಕೊಳ್ಳುವರೋ ಅವೆಲ್ಲವೂ ಭಕ್ತಿಮಾರ್ಗದ
ಶಾಸ್ತ್ರಗಳಾಗಿವೆ. ಈ ಜ್ಞಾನವು ಅವರಲಿಲ್ಲ. ತಂದೆಯೇ ಬಂದು ಈ ರಚನೆಯ ಆದಿ-ಮಧ್ಯ-ಅಂತ್ಯದ
ಜ್ಞಾನವನ್ನು ಕೊಡುತ್ತಾರೆ. ತಂದೆಯೇ ನಿಮ್ಮ ಬುದ್ಧಿಯ ಬೀಗವನ್ನು ತೆರೆದಿದ್ದಾರೆ.
ನೀವು ತಿಳಿದುಕೊಂಡಿದ್ದೀರಿ - ಮೊದಲು ನಾವು ಹೇಗಿದ್ದೆವು, ಈಗ ಏನಾಗಿದ್ದೇವೆ. ಬುದ್ಧಿಯಲ್ಲಿ ಇಡೀ
ಚಕ್ರದ ಜ್ಞಾನವು ಬಂದು ಬಿಟ್ಟಿದೆ. ಆರಂಭದಲ್ಲಿ ಇದನ್ನು ತಿಳಿದುಕೊಂಡಿರಲಿಲ್ಲ. ದಿನ-ಪ್ರತಿದಿನ
ಜ್ಞಾನದ ಮೂರನೇಯ ನೇತ್ರವು ಚೆನ್ನಾಗಿ ತೆರೆಯುತ್ತಾ ಹೋಗುತ್ತದೆ. ಭಗವಂತನು ಯಾವಾಗ ಬಂದರು, ಅವರು
ಯಾರಾಗಿದ್ದರು, ಯಾರು ಬಂದು ಗೀತಾ ಜ್ಞಾನವನ್ನು ತಿಳಿಸಿದರು ಎಂಬುದು ಯಾರಿಗೂ ಗೊತ್ತಿಲ್ಲ. ನೀವು
ಮಕ್ಕಳು ಅರಿತುಕೊಂಡಿದ್ದೀರಿ. ಬುದ್ಧಿಯಲ್ಲಿ ಇಡೀ ಚಕ್ರದ ಜ್ಞಾನವಿದೆ, ಯಾವಾಗಿನಿಂದ ನಾವು
ಸೋಲನ್ನನುಭವಿಸುತ್ತೇವೆ ಮತ್ತು ಹೇಗೆ ವಾಮಮಾರ್ಗದಲ್ಲಿ ಹೋಗುತ್ತೇವೆ, ಹೇಗೆ ಕೆಳಗಿಳಿಯುತ್ತೇವೆ
ಎಂದು. ಚಿತ್ರದಲ್ಲಿ ಇದನ್ನು ಎಷ್ಟು ಸಹಜವಾಗಿ ತಿಳಿಸಿದ್ದಾರೆ! ಇದು 84 ಜನ್ಮಗಳ ಏಣಿಯಾಗಿದೆ. ಹೇಗೆ
ಇಳಿಯುತ್ತಾರೆ ಮತ್ತೆ ಹತ್ತುತ್ತಾರೆ, ಪತಿತ-ಪಾವನ ಯಾರು? ಪತಿತರನ್ನಾಗಿ ಯಾರು ಮಾಡಿದರು? ಇದನ್ನು
ನೀವೀಗ ತಿಳಿದುಕೊಂಡಿದ್ದೀರಿ. ಅವರಂತೂ ಪತಿತ- ಪಾವನ ಎಂದು ಕೇವಲ ಹಾಡುತ್ತಿರುತ್ತಾರೆ ಆದರೆ ರಾವಣ
ರಾಜ್ಯವು ಯಾವಾಗಿನಿಂದ ಆರಂಭವಾಗುತ್ತದೆ, ಯಾವಾಗಿನಿಂದ ಪತಿತರಾದೆವು ಎಂಬುದೇನನ್ನೂ
ತಿಳಿದುಕೊಂಡಿಲ್ಲ. ಈ ಜ್ಞಾನವು ಆದಿ ಸನಾತನ ದೇವಿ-ದೇವತಾ ಧರ್ಮದವರಿಗಾಗಿಯೇ ಇದೆ. ತಂದೆಯು
ತಿಳಿಸುತ್ತಾರೆ - ನಾನೇ ಆದಿ ಸನಾತನ ದೇವಿ-ದೇವತಾ ಧರ್ಮ ಸ್ಥಾಪನೆ ಮಾಡಿದ್ದೇನೆ, ಈ ವಿಶ್ವದ
ಚರಿತ್ರೆ, ಭೂಗೋಳವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನಿಮಗೆ ಇದೊಂದು
ಕಥೆಯಾಗಿದೆ - ಹೇಗೆ ರಾಜ್ಯವನ್ನು ಪಡೆಯುತ್ತೇವೆ, ಹೇಗೆ ಕಳೆದುಕೊಳ್ಳುತ್ತೇವೆ. ಆ ಚರಿತ್ರೆ,
ಭೂಗೋಳವನ್ನು ನಾವು ಓದುತ್ತೇವೆ. ಇದು ಬೇಹದ್ದಿನ ಮಾತಾಗಿದೆ. ನಾವು 84 ಜನ್ಮಗಳ ಚಕ್ರವನ್ನು ಹೇಗೆ
ಸುತ್ತುತ್ತೇವೆ, ನಾವೇ ವಿಶ್ವದ ಮಾಲೀಕರಾಗಿದ್ದೆವು, ನಂತರ ರಾವಣನು ರಾಜ್ಯವನ್ನು ಕಸಿದುಕೊಂಡನು, ಈ
ಜ್ಞಾನವನ್ನು ತಂದೆಯೇ ಕೊಟ್ಟಿದ್ದಾರೆ. ಮನುಷ್ಯರು ದಸರಾ ಇತ್ಯಾದಿ ಹಬ್ಬಗಳನ್ನು ಆಚರಿಸುತ್ತಾರೆ
ಆದರೆ ಸ್ವಲ್ಪವೂ ಜ್ಞಾನವಿಲ್ಲ. ಹೇಗೆ ನಿಮಗೂ ಸಹ ಈ ಜ್ಞಾನವಿರಲಿಲ್ಲ, ಈಗ ಜ್ಞಾನವು ಸಿಗುತ್ತಿದೆ.
ಆದ್ದರಿಂದ ನೀವು ಖುಷಿಯಲ್ಲಿರುತ್ತೀರಿ. ಜ್ಞಾನವು ಖುಷಿ ಕೊಡುತ್ತದೆ. ಬೇಹದ್ದಿನ ಜ್ಞಾನವು
ಬುದ್ಧಿಯಲ್ಲಿದೆ. ತಂದೆಯು ನಿಮ್ಮ ಜೋಳಿಗೆಯನ್ನು ತುಂಬಿಸುತ್ತಿದ್ದಾರೆ. ಜೋಳಿಗೆಯನ್ನು ತುಂಬಿಸು
ಎಂದು ಹೇಳುತ್ತಾರಲ್ಲವೆ. ಯಾರಿಗೆ ಹೇಳುತ್ತಾರೆ? ಸಾಧು-ಸಂತ ಮೊದಲಾದವರಿಗೆ ಹೇಳುವುದಿಲ್ಲ. ಶಿವನಿಗೇ
ಭೋಲಾನಾಥನೆಂದು ಹೇಳುತ್ತಾರೆ. ಅವರಿಂದಲೇ ಭಿಕ್ಷೆಯನ್ನು ಬೇಡುತ್ತಾರೆ. ಈಗ ನಿಮ್ಮ ಖುಷಿಗೆ ಪಾರವೇ
ಇಲ್ಲ. ನಿಮಗೆ ಬಹಳ ಖುಷಿಯಿರಬೇಕು ಬುದ್ಧಿಯಲ್ಲಿ ಎಷ್ಟೊಂದು ಜ್ಞಾನವು ಬಂದು ಬಿಟ್ಟಿದೆ. ಬೇಹದ್ದಿನ
ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಅಂದಮೇಲೆ ಈಗ ತನ್ನ ಹಾಗೂ ಅನ್ಯರ ಕಲ್ಯಾಣವನ್ನೂ
ಮಾಡಬೇಕಾಗಿದೆ. ಎಲ್ಲರ ಕಲ್ಯಾಣ ಮಾಡಬೇಕಾಗಿದೆ. ಮೊದಲಂತು ಒಬ್ಬರು ಇನ್ನೊಬ್ಬರಿಗೆ ಅಕಲ್ಯಾಣವನ್ನೇ
ಮಾಡುತ್ತಿದ್ದೀರಿ ಏಕೆಂದರೆ ಆಸುರೀ ಮತವಿತ್ತು. ನೀವೀಗ ಶ್ರೀಮತದ ಮೇಲಿದ್ದೀರಿ, ಆದ್ದರಿಂದ ತನ್ನ
ಕಲ್ಯಾಣವನ್ನೂ ಮಾಡಿಕೊಳ್ಳಬೇಕಾಗಿದೆ. ಈ ಬೇಹದ್ದಿನ ವಿದ್ಯೆಯನ್ನು ಎಲ್ಲರೂ ಓದಲಿ, ಸೇವಾಕೇಂದ್ರಗಳು
ತೆರೆಯುತ್ತಾ ಹೋಗಲಿ ಎಂದು ನಿಮಗೆ ಮನಸ್ಸಾಗುತ್ತದೆ. ಬಾಬಾ, ಪ್ರದರ್ಶನಿ ಕೊಡಿ, ಪ್ರೊಜೆಕ್ಟರ್ ಕೊಡಿ,
ನಾವು ಸೇವಾಕೇಂದ್ರವನ್ನು ತೆರೆಯುತ್ತೇವೆ. ನಮಗೆ ಯಾವ ಜ್ಞಾನ ಸಿಕ್ಕಿದೆಯೋ ಯಾವುದರಿಂದ ಬೇಹದ್ದಿನ
ಖುಷಿಯ ನಶೆಯೇರಿದೆಯೋ ಅದನ್ನು ಅನ್ಯರಿಗೂ ಅನುಭವ ಮಾಡಿಸುತ್ತೇವೆಂದು ಹೇಳುತ್ತಾರೆ. ಡ್ರಾಮಾನುಸಾರ
ಈ ಪುರುಷಾರ್ಥವೂ ನಡೆಯುತ್ತಿರುತ್ತದೆ. ಭಾರತವನ್ನು ಪುನಃ ಸ್ವರ್ಗವನ್ನಾಗಿ ಮಾಡಲು ತಂದೆಯು
ಬಂದಿದ್ದಾರೆ. ನೀವು ತಿಳಿದುಕೊಂಡಿದ್ದೀರಿ - ನಾವು ಮೊದಲು ನರಕವಾಸಿಗಳಾಗಿದ್ದೆವು, ಈಗ
ಸ್ವರ್ಗವಾಸಿಗಳಾಗುತ್ತಿದ್ದೇವೆ. ಈ ಚಕ್ರವು ನಿಮ್ಮ ಬುದ್ಧಿಯಲ್ಲಿ ಸದಾ ತಿರುಗುತ್ತಿರಬೇಕು.
ಇದರಿಂದ ನೀವು ಸದಾ ಖುಷಿಯಲ್ಲಿರಿ. ಅನ್ಯರಿಗೆ ತಿಳಿಸುವುದಕ್ಕೂ ನಶೆಯಿರಲಿ. ನಾವು ತಂದೆಯಿಂದ
ಜ್ಞಾನವನ್ನು ಪಡೆಯುತ್ತಿದ್ದೇವೆ. ನಿಮ್ಮ ಅನ್ಯ ಸಹೋದರ-ಸಹೋದರಿಯರು ಯಾರು ತಿಳಿದುಕೊಂಡಿಲ್ಲವೋ
ಅವರಿಗೂ ಸಹ ಮಾರ್ಗವನ್ನು ತಿಳಿಸುವುದು ನಿಮ್ಮ ಧರ್ಮವಾಗಿದೆ. ಹೇಗೆ ಎಲ್ಲರ ಕಲ್ಯಾಣ ಮಾಡುವುದು
ತಂದೆಯ ಪಾತ್ರವಾಗಿದೆಯೋ ಹಾಗೆಯೇ ಎಲ್ಲರ ಕಲ್ಯಾಣಕಾರಿಗಳಾಗುವುದು ನಮ್ಮದೂ ಪಾತ್ರವಿದೆ. ತಂದೆಯು
ಕಲ್ಯಾಣಕಾರಿಗಳನ್ನಾಗಿ ಮಾಡಿದ್ದಾರೆ ಅಂದಮೇಲೆ ತನ್ನ ಹಾಗೂ ಅನ್ಯರ ಕಲ್ಯಾಣವನ್ನೂ ಮಾಡಬೇಕಾಗಿದೆ.
ತಂದೆಯು ತಿಳಿಸುತ್ತಾರೆ - ನೀವು ಇಂತಹ ಸೇವಾಕೇಂದ್ರಕ್ಕೆ ಹೋಗಿ ಅಲ್ಲಿ ಸರ್ವಿಸ್ ಮಾಡಿ. ಒಂದು
ಜಾಗದಲ್ಲಿ ಕುಳಿತು ಸರ್ವಿಸ್ ಮಾಡುವುದಲ್ಲ. ಯಾರೆಷ್ಟು ಬುದ್ಧಿವಂತರಾಗಿದ್ದಾರೆಯೋ ಅವರಿಗೆ ಅಷ್ಟು
ನಾವು ಹೋಗಿ ಸರ್ವಿಸ್ ಮಾಡಬೇಕು, ಇಂತಹ ಹೊಸ ಸೇವಾಕೇಂದ್ರವು ತೆರೆದಿದೆ ಎಂದು ಆಸಕ್ತಿಯಿರುತ್ತದೆ.
ಯಾರು ಯಾರು ಸೇವಾಧಾರಿಗಳಾಗಿದ್ದಾರೆ, ಯಾರು ಯಾರು ಆಜ್ಞಾಕಾರಿ, ಪ್ರಾಮಾಣಿಕರಾಗಿದ್ದಾರೆ ಎಂಬುದನ್ನು
ನೀವು ತಿಳಿದುಕೊಂಡಿದ್ದೀರಿ. ಅಜ್ಞಾನ ಕಾಲದಲ್ಲಿಯೂ ಕುಪುತ್ರರ ಮೇಲೆ ತಂದೆಯು ಬೇಸರ ಪಡುತ್ತಾರೆ.
ಇಲ್ಲಂತೂ ಬೇಹದ್ದಿನ ತಂದೆಯು ತಿಳಿಸುತ್ತಾರೆ - ನಾನು ಸಂಪೂರ್ಣ ಸಾಧಾರಣ ರೀತಿಯಿಂದ ತಿಳಿಸುತ್ತೇನೆ.
ಇದರಲ್ಲಿ ಯಾವುದೇ ಹೆದರುವ ಮಾತಿಲ್ಲ. ಇದನ್ನು ಯಾರು ಮಾಡುವರೋ ಅವರು ಪಡೆಯುವರು. ಶಾಪ ಅಥವಾ ಬೇಸರ
ಪಡುವ ಮಾತಿಲ್ಲ ಅಂದಮೇಲೆ ತಂದೆಯು ತಿಳಿಸುತ್ತಾರೆ - ಇಂತಹ ಒಳ್ಳೆಯ ಸೇವೆ ಮಾಡಿ ತನ್ನ ಮತ್ತು
ಅನ್ಯರ ಕಲ್ಯಾಣವನ್ನು ಏಕೆ ಮಾಡಬಾರದು! ಯಾರು ಅನೇಕರ ಕಲ್ಯಾಣ ಮಾಡುವರೋ ಅವರನ್ನು ನೋಡಿ ತಂದೆಯೂ ಸಹ
ಅಷ್ಟೇ ಖುಷಿ ಪಡುತ್ತಾರೆ. ಈ ಹೂವು ಎಷ್ಟು ಒಳ್ಳೆಯದಾಗಿದೆ! ಎಂದು ತಂದೆಯು ಉದ್ಯಾನ ವನದಲ್ಲಿ
ನೋಡುತ್ತಾರೆ. ಇದು ಉದ್ಯಾನ ವನವಾಗಿದೆ. ಉದ್ಯಾನ ವನವನ್ನು ನೋಡುವುದಕ್ಕಾಗಿ ಬಾಬಾ, ನಾವು
ಸೇವಾಕೇಂದ್ರಗಳನ್ನು ನೋಡಿಕೊಂಡು ಬರುತ್ತೇವೆ. ಎಂತೆಂತಹ ಹೂಗಳಿವೆ, ಹೇಗೆ ಸರ್ವಿಸ್
ಮಾಡುತ್ತಿದ್ದಾರೆ ಎಂಬುದನ್ನು ನೋಡಿ ಬರುತ್ತೇವೆ ಎಂದು ಹೇಳುತ್ತಾರೆ. ಹೋಗಿ ನೋಡುವುದರಿಂದ
ಅರ್ಥವಾಗುತ್ತದೆ, ಹೇಗೆ ಖುಷಿಯಲ್ಲಿ ನರ್ತಿಸುತ್ತಿರುತ್ತಾರೆ. ಬಾಬಾ, ನಾವು ಇಂತಹವರಿಗೆ ಈ ರೀತಿ
ತಿಳಿಸಿದೆವು. ಇಂದು ನನ್ನ ಪತಿಯನ್ನು ಸಹೋದರರನ್ನು ಕರೆದುಕೊಂಡು ಬಂದಿದ್ದೇನೆಂದು ತಂದೆಗೂ ಸಹ ಬಂದು
ತಿಳಿಸುತ್ತಿದ್ದರು. ಮಕ್ಕಳಿಗೆ ತಿಳಿಸಲಾಗಿದೆ - ತಂದೆಯು ಬಂದಿದ್ದಾರೆ, ಅವರು ಹೇಗೆ ವಜ್ರ ಸಮಾನ
ಜೀವನವನ್ನಾಗಿ ಮಾಡಿಕೊಳ್ಳುತ್ತಾರೆ ಎಂಬುದನ್ನು ಕೇಳಿದಾಗ ನಾವೂ ಸಹ ನೋಡಬೇಕೆಂದು ಇಚ್ಚಿಸುತ್ತಾರೆ.
ಆಗ ಮಕ್ಕಳಲ್ಲಿ ಉಮ್ಮಂಗ ಬರುತ್ತದೆ, ಕರೆ ತರುತ್ತಾರೆ. ವಿಶ್ವದ ಚರಿತ್ರೆ-ಭೂಗೋಳವನ್ನು
ಅರಿತುಕೊಳ್ಳಬೇಕು. ನೀವು ಪರಿಶೀಲನೆ ಮಾಡಿ, ಭಾರತವು ಇಡೀ ವಿಶ್ವದ ಮಾಲೀಕನಾಗಿತ್ತು, ಈಗ ಯಾವ
ಗತಿಯಾಗಿದೆ! ಸತ್ಯ-ತ್ರೇತಾಯುಗದಲ್ಲಿ ಎಷ್ಟೊಂದು ಸುಖವಿತ್ತು, ಈಗ ಪುನಃ ತಂದೆಯು ವಿಶ್ವದ
ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ಇದನ್ನೂ ತಿಳಿದುಕೊಂಡಿದ್ದೀರಿ - ಪ್ರಪಂಚದಲ್ಲಿ ಅಂತಿಮ
ಸಮಯದಲ್ಲಿ ಬಹಳ ಏರುಪೇರುಗಳಾಗಲಿವೆ. ಯುದ್ಧವೇನೂ ನಿಂತು ಹೋಗುವುದಿಲ್ಲ. ಒಂದಲ್ಲ ಒಂದು ಕಡೆ
ನಡೆಯುತ್ತಲೇ ಇರುತ್ತದೆ. ಎಲ್ಲಿ ನೋಡಿದರಲ್ಲಿ ಕಲಹಗಳೇ ಇವೆ, ಎಷ್ಟೊಂದು ಗಲಾಟೆಯಿದೆ, ವಿದೇಶದಲ್ಲಿ
ನೋಡಿ, ಏನೇನಾಗುತ್ತಿದೆ! ನಾವು ಏನು ಮಾಡುತ್ತಿದ್ದೇವೆ ಎಂಬುದನ್ನೂ ಸಹ ತಿಳಿದುಕೊಳ್ಳುವುದಿಲ್ಲ,
ಎಷ್ಟೊಂದು ಬಿರುಗಾಳಿಗಳು ಬರುತ್ತಿರುತ್ತವೆ, ಮನುಷ್ಯರು ಸಾಯುತ್ತಿರುತ್ತಾರೆ. ಎಷ್ಟು ದುಃಖದ
ಪ್ರಪಂಚವಾಗಿದೆ! ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಈ ದುಃಖದ ಪ್ರಪಂಚದಿಂದ ಹೋದೆವು
ಎಂದರೆ ಹೋದೆವು. ತಂದೆಯು ಧೈರ್ಯವನ್ನು ನೀಡುತ್ತಿದ್ದಾರೆ. ಇದು ಛೀ ಛೀ ಪ್ರಪಂಚವಾಗಿದೆ, ಇನ್ನು
ಸ್ವಲ್ಪವೇ ದಿನಗಳಲ್ಲಿ ನಾವು ವಿಶ್ವದಲ್ಲಿ ಶಾಂತಿಯಿಂದ ರಾಜ್ಯ ಮಾಡುತ್ತೇವೆ. ಇದರಲ್ಲಿ ಳ
ಖುಷಿಯಾಗಬೇಕಲ್ಲವೆ. ಸೇವಾಕೇಂದ್ರಗಳು ತೆರೆಯುತ್ತಿರುತ್ತವೆ. ಈಗ ನೋಡಿ, ಸೇವಾಕೇಂದ್ರಗಳು
ತೆರೆಯಲ್ಪಡುತ್ತವೆ. ಒಳೊಳ್ಳೆಯ ಮಕ್ಕಳು ಹೋಗಿ ಯಾರು ಹೃದಯವನ್ನು ಏರಿದ್ದಾರೆಯೋ ಅಂತಹವರ ಹೆಸರನ್ನೂ
ತಂದೆಯು ಬರೆಯುತ್ತಾರೆ. ಅನೇಕರ ಕಲ್ಯಾಣವಾಗುತ್ತದೆ. ಹೀಗೆ ಅನೇಕರು ಬರೆಯುತ್ತಾರೆ - ಬಾಬಾ, ನಾವಂತೂ
ಬಂಧನದಲ್ಲಿದ್ದೇವೆ. ಒಳ್ಳೆಯ ಸೇವಾಕೇಂದ್ರವನ್ನು ತೆರೆದರೆ ಅನೇಕರು ಬಂದು ಆಸ್ತಿಯನ್ನು ಪಡೆಯುವರು.
ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಇದೆಲ್ಲವೂ ವಿನಾಶವಾಗಲಿದೆ ಅಂದಮೇಲೆ ಅನೇಕರ ಕಲ್ಯಾಣಾರ್ಥವಾಗಿ
ಏಕೆ ತೊಡಗಿಸಬಾರದು! ಡ್ರಾಮಾದಲ್ಲಿ ಅವರ ಪಾತ್ರವೇ ಹೀಗಿದೆ. ಪ್ರತಿಯೊಬ್ಬರು ತಮ್ಮ ತಮ್ಮ
ಪಾತ್ರವನ್ನಭಿನಯಿಸುತ್ತಿದ್ದಾರೆ. ಅನ್ಯರನ್ನೂ ಬಂಧನ ಮುಕ್ತರನ್ನಾಗಿ ಮಾಡಲು ಸಹಯೋಗ ನೀಡೋಣ, ಅವರೂ
ಸಹ ಆಸ್ತಿಯನ್ನು ತೆಗೆದುಕೊಳ್ಳಲಿ ಎಂದು ದಯೆ ಬರುತ್ತದೆ. ತಂದೆಗೆ ಎಷ್ಟೊಂದು ಚಿಂತೆಯಿರುತ್ತದೆ,
ಎಲ್ಲರೂ ಕಾಮ ಚಿತೆಯನ್ನೇರಿ ಸುಟ್ಟು ಹೋಗಿದ್ದಾರೆ. ಎಲ್ಲವೂ ಸ್ಮಶಾನವಾಗಿ ಬಿಟ್ಟಿದೆ. ಅಲ್ಲಾಹ್
ಬಂದು ಸ್ಮಶಾನದಿಂದ ಏಳಿಸಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆಂದು ಹೇಳುತ್ತಾರೆ.
ರಾವಣನು ಹೇಗೆ ಸೋಲಿಸಿದ್ದಾನೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ, ಮೊದಲು
ತಿಳಿದುಕೊಂಡಿರಲಿಲ್ಲ. ನಾವು ವಜ್ರ ವ್ಯಾಪಾರಿ ಲಕ್ಷಾಧೀಶ್ವರರಾಗಿದ್ದೇವೆ, ಇಷ್ಟು ಮಂದಿ
ಮಕ್ಕಳಿದ್ದಾರೆ, ಎಂಬ ನಶೆಯಂತೂ ಇರುತ್ತದೆಯಲ್ಲವೆ. ಆದರೆ ಈಗ ಅರ್ಥವಾಗಿದೆ - ನಾವು ಪೂರ್ಣ
ಪತಿತರಾಗಿದ್ದೆವು, ಭಲೆ ಹಳೆಯ ಪ್ರಪಂಚದಲ್ಲಿ ಎಷ್ಟಾದರೂ ಲಕ್ಷಾಧೀಶ್ವರ, ಕೋಟ್ಯಾಧೀಶ್ವರ ಇರಬಹುದು
ಆದರೆ ಇದೆಲ್ಲವೂ ಕವಡೆಯ ಸಮಾನವಾಗಿದೆ. ಈಗ ಹೋಯಿತೆಂದರೆ ಹೋಯಿತು. ಮಾಯೆಯೂ ಸಹ ಎಷ್ಟು ಪ್ರಬಲವಾಗಿದೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸೇವಾಕೇಂದ್ರವನ್ನು ತೆರೆಯಿರಿ ಅದರಿಂದ ಅನೇಕರ
ಕಲ್ಯಾಣವಾಗುವುದು. ಬಡವರು ಬೇಗನೆ ಜಾಗೃತರಾಗುತ್ತಾರೆ, ಧನವಂತರು ಮೇಲೇಳುವುದು ಸ್ವಲ್ಪ
ಪರಿಶ್ರಮವಿದೆ. ಅವರು ತನ್ನದೇ ಖುಷಿಯಲ್ಲಿ ಮಸ್ತರಾಗಿರುತ್ತಾರೆ. ಮಾಯೆಯು ಒಮ್ಮೆಲೆ ತನ್ನ ವಶ
ಮಾಡಿಕೊಂಡಿದೆ. ತಿಳಿಸಿದಾಗ ಅವರಿಗೆ ಅರ್ಥವೂ ಆಗುತ್ತದೆ ಆದರೆ ಬಿಡುವುದು ಹೇಗೆ? ಇವರ ತರಹ
ಎಲ್ಲವನ್ನೂ ಬಿಡಬೇಕಾಗುವುದೇನೋ ಎಂಬ ಭಯವಿರುತ್ತದೆ. ಅದೃಷ್ಟದಲ್ಲಿಲ್ಲವೆಂದರೆ ಅವರು ನಡೆಯಲು
ಸಾಧ್ಯವಿಲ್ಲ, ಅವರು ಅದರಿಂದ ಮುಕ್ತರಾಗುವುದೇ ಕಷ್ಟವಾಗುತ್ತಿದೆ. ಕೇಳುವ ಸಮಯದಲ್ಲಿ ಇದು ಛೀ ಛೀ
ಪ್ರಪಂಚವೆಂದು ವೈರಾಗ್ಯ ಬರುತ್ತದೆ. ಆದರೆ ಹೊರಗೆ ಬಂದಮೇಲೆ ಅಲ್ಲಿಯದು ಅಲ್ಲಿಯೇ ಉಳಿಯುತ್ತದೆ.
ಕೋಟಿಯಲ್ಲಿ ಕೆಲವರೇ ಬರುತ್ತಾರೆ, ಬಾಂಬೆಯಲ್ಲಿ ಸಾವಿರಾರು ಮಂದಿ ಬರುತ್ತಾರೆ. ಕೆಲಕೆಲವರಿಗೆ
ಜ್ಞಾನದ ಬಣ್ಣವು ಅಂಟುತ್ತದೆ. ಭವಿಷ್ಯಕ್ಕಾಗಿ ಏನಾದರೂ ಭಾಗ್ಯ ಮಾಡಿಕೊಳ್ಳೋಣ, ಕವಡೆಯ ಬದಲು ನಮಗೆ
ವಜ್ರಗಳು ಸಿಗುವುದೆಂದು ತಿಳಿದುಕೊಳ್ಳುತ್ತಾರೆ. ನಿಮ್ಮದೆಲ್ಲವನ್ನೂ ಸ್ವರ್ಗಕ್ಕೆ ವರ್ಗಾವಣೆ ಮಾಡಿ
ಅಲ್ಲಿ 21 ಜನ್ಮಗಳಿಗಾಗಿ ನಿಮಗೆ ರಾಜ್ಯಭಾಗ್ಯ ಸಿಗುವುದೆಂದು ತಂದೆಯು ತಿಳಿಸುತ್ತಾರಲ್ಲವೆ. ಕೆಲವರು
ಒಂದು ರೂಪಾಯಿ ಅಥವಾ ಎಂಟಾಣಿಯನ್ನು ಕಳುಹಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನಿಮ್ಮ ಒಂದು
ರೂಪಾಯಿಯು ಸಹ ಶಿವ ತಂದೆಯ ಖಜಾನೆಯಲ್ಲಿ ಜಮಾ ಆಯಿತು, ನಿಮಗೆ 21 ಜನ್ಮಗಳಿಗಾಗಿ ಮಹಲು ಸಿಗುವುದು.
ಸುಧಾಮನ ಉದಾಹರಣೆಯಿದೆಯಲ್ಲವೆ. ಇಂತಿಂತಹವರನ್ನು ನೋಡಿ ತಂದೆಗೆ ಬಹಳ ಖುಷಿಯಾಗುತ್ತದೆ. ಕವಡೆಯೂ
ಖರ್ಚಿಲ್ಲದೆ ನೀವು ಮಕ್ಕಳಿಗೆ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ. ಇಲ್ಲಿ ಯುದ್ಧ ಇತ್ಯಾದಿಗಳೇನೂ
ಇಲ್ಲ, ಅವರು ತುಂಡು ಜಾಗಕ್ಕಾಗಿ ಎಷ್ಟೊಂದು ಹೊಡೆದಾಡುತ್ತಾರೆ. ತಂದೆಯು ನಿಮಗೆ ಕೇವಲ ಇಷ್ಟನ್ನೇ
ಹೇಳುತ್ತಾರೆ - ಮಕ್ಕಳೇ, ಮನ್ಮನಾಭವ. ಇಲ್ಲಿಯೇ ಕುಳಿತು ಬಿಡುವ ಅವಶ್ಯಕತೆಯಿಲ್ಲ. ನಡೆಯುತ್ತಾ -
ತಿರುಗಾಡುತ್ತಾ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಖುಷಿಯಲ್ಲಿರಿ, ಆಹಾರ-ಪಾನೀಯಗಳನ್ನೂ ಸಹ
ಶುದ್ಧವಾಗಿಟ್ಟುಕೊಳ್ಳಬೇಕು. ನಮ್ಮ ಆತ್ಮವು ಎಲ್ಲಿಯವರೆಗೆ ಪವಿತ್ರವಾಗಿದೆ, ಯಾವ ಆತ್ಮರು ಹೋಗಿ
ರಾಜಕುಮಾರರ ಜನ್ಮವನ್ನು ಪಡೆಯುತ್ತವೆ ಎಂದು ನೀವು ತಿಳಿದುಕೊಂಡಿದ್ದೀರಿ. ಮುಂದೆ ಹೋದಂತೆ ಪ್ರಪಂಚದ
ಸ್ಥಿತಿಯು ಇನ್ನೂ ಹದಗೆಡುವುದು, ತಿನ್ನಲು ಆಹಾರವು ಸಿಗುವುದಿಲ್ಲ, ಆಗ ಹುಲ್ಲು ತಿನ್ನತೊಡಗುತ್ತಾರೆ.
ಆಗ ಬೆಣ್ಣಿಯಿಲ್ಲದೆ ನಾವು ಇರುವುದಕ್ಕೆ ಆಗುವುದಿಲ್ಲವೆಂದು ಹೇಳಲು ಸಾಧ್ಯವೇ ! ಆ ಸಮಯದಲ್ಲಿ ಏನೂ
ಸಿಗುವುದಿಲ್ಲ. ಈಗಲೂ ಸಹ ಎಷ್ಟೊಂದು ಸ್ಥಳಗಳಲ್ಲಿ ಮನುಷ್ಯರು ಹುಲ್ಲನ್ನು ತಿಂದು ಜೀವನ
ಕಳೆಯುತ್ತಿದ್ದಾರೆ. ನೀವಂತೂ ತಂದೆಯ ಮನೆಯಲ್ಲಿ ಬಹಳ ಮೋಜಿನಲ್ಲಿ ಕುಳಿತಿದ್ದೀರಿ. ಮನೆಯಲ್ಲಿ
ತಂದೆಯು ಮೊದಲು ಮಕ್ಕಳಿಗೆ ತಿನ್ನಿಸುತ್ತಾರಲ್ಲವೆ. ಈಗಿನ ಸಮಯವು ಬಹಳ ಹದಗೆಟ್ಟಿದೆ. ಇಲ್ಲಿ ನೀವು
ಬಹಳ ಸುಖಿಯಾಗಿ ಕುಳಿತಿದ್ದೀರಿ. ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಾ ಇರಿ. ತನ್ನ
ಮತ್ತು ಅನ್ಯರ ಕಲ್ಯಾಣವನ್ನೂ ಮಾಡಬೇಕಾಗಿದೆ. ಮುಂದೆ ಹೋದಂತೆ ತಾವೇ ಬರುತ್ತಾರೆ. ಅದೃಷ್ಟವು
ಜಾಗೃತವಾಗುತ್ತದೆ, ಆಗಲೇಬೇಕಲ್ಲವೆ. ಬೇಹದ್ದಿನ ರಾಜಧಾನಿಯು ಸ್ಥಾಪನೆಯಾಗುವುದು. ಪ್ರತಿಯೊಬ್ಬರೂ
ಕಲ್ಪದ ಹಿಂದಿನ ತರಹ ಪುರುಷಾರ್ಥ ಮಾಡುತ್ತಾರೆ. ನೀವು ಮಕ್ಕಳಂತೂ ಬಹಳ ಖುಷಿಯಲ್ಲಿರಬೇಕು.
ಬಾಪ್ದಾದಾರವರ ಚಿತ್ರವಂತೂ ನೋಡುತ್ತಿದ್ದಂತೆಯೇ ಖುಷಿಯಲ್ಲಿ ರೋಮಾಂಚನವಾಗಿ ಬಿಡಬೇಕು ಮತ್ತು ಅಪಾರ
ಖುಷಿಯು ಸ್ಥಿರವಾಗಿರಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನವು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಸದಾ ಅಪಾರ
ಖುಷಿಯಲ್ಲಿರಲು ಬೇಹದ್ದಿನ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕಾಗಿದೆ. ಜ್ಞಾನ ರತ್ನಗಳಿಂದ
ತಮ್ಮ ಜೋಳಿಗೆಯನ್ನು ತುಂಬಿಸಿಕೊಂಡು ತನ್ನ ಹಾಗೂ ಸರ್ವರ ಕಲ್ಯಾಣ ಮಾಡಬೇಕಾಗಿದೆ. ಜ್ಞಾನದಲ್ಲಿ
ಬಹಳ-ಬಹಳ ಬುದ್ಧಿವಂತರಾಗಬೇಕಾಗಿದೆ.
2. ಭವಿಷ್ಯ 21 ಜನ್ಮಗಳ ರಾಜ್ಯಭಾಗ್ಯದ ಅಧಿಕಾರವನ್ನು ತೆಗೆದುಕೊಳ್ಳಲು ತನ್ನದೆಲ್ಲವನ್ನೂ ವರ್ಗಾವಣೆ
ಮಾಡಬೇಕಾಗಿದೆ. ಈ ಛೀ ಛೀ ಪ್ರಪಂಚದಿಂದ ಬಿಡುಗಡೆ ಹೊಂದುವ ಯುಕ್ತಿಯನ್ನು ರಚಿಸಬೇಕಾಗಿದೆ.
ವರದಾನ:
ಪ್ರತಿ ಕರ್ಮರೂಪಿ
ಬೀಜವನ್ನು ಫಲಧಾಯಿಯನ್ನಾಗಿ ಮಾಡುವಂತಹ ಯೋಗ್ಯ ಶಿಕ್ಷಕ ಭವ.
ಯಾರು ಸ್ವಯಂ
ಶಿಕ್ಷಾ ಸ್ವರೂಪರಾಗಿರುತ್ತಾರೆ, ಅವರಿಗೆ ಯೋಗ್ಯ ಶಿಕ್ಷಕ ಎಂದು ಹೇಳಲಾಗುವುದು - ಏಕೆಂದರೆ ಶಿಕ್ಷಣ
ಕೊಡುವುದು ಎಲ್ಲಕ್ಕಿಂತಲೂ ಸಹಜ ಸಾಧನವಾಗಿದೆ. ಸ್ವರೂಪದ ಮೂಲಕ ಶಿಕ್ಷಣವನ್ನು ಕೊಡುವುದು. ಅಂತಹವರು
ತಮ್ಮ ಪ್ರತಿಯೊಂದು ಹೆಜ್ಜೆಯ ಮೂಲಕ ಶಿಕ್ಷಣವನ್ನು ಕೊಡುತ್ತಾರೆ. ಅವರ ಪ್ರತಿಯೊಂದು ಮಾತು ಕೇವಲ
ವಾಕ್ಯವಲ್ಲ ಆದರೆ ಮಹಾವಾಕ್ಯ ಎಂದು ಹೇಳಲಾಗುತ್ತದೆ, ಅವರ ಪ್ರತಿ ಕರ್ಮರೂಪಿ ಬೀಜ
ಫಲದಾಯಕವಾಗಿರುತ್ತದೆ, ನಿಷ್ಪಲವಾಗುವುದಿಲ್ಲ. ಇಂತಹ ಯೋಗ್ಯ ಶಿಕ್ಷಕರ ಸಂಕಲ್ಪ ಆತ್ಮಗಳಿಗೆ ಹೊಸ
ಸೃಷ್ಟಿಯ ಅಧಿಕಾರಿಗಳನ್ನಾಗಿ ಮಾಡಿ ಬಿಡುತ್ತದೆ.
ಸ್ಲೋಗನ್:
ಮನ್ಮನಾಭವದ
ಸ್ಥಿತಿಯಲ್ಲಿದ್ದಾಗ ಅಲೌಕಿಕ ಸುಖ ಹಾಗೂ ಮನರಸದ ಸ್ಥಿತಿಯನ್ನು ಅನುಭವ ಮಾಡುವಿರಿ.