01.03.21         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನೀವು ಪರಸ್ಪರ ಬಹಳ-ಬಹಳ ಆತ್ಮೀಯ ಸ್ನೇಹದಿಂದ ಇರಬೇಕಾಗಿದೆ, ಎಂದೂ ಮತಭೇದದಲ್ಲಿ ಬರಬಾರದು"

ಪ್ರಶ್ನೆ:
ಪ್ರತಿಯೊಬ್ಬ ಬ್ರಾಹ್ಮಣ ಮಗು ಯಾವ ಮಾತನ್ನು ತನ್ನ ಹೃದಯದಿಂದ ಕೇಳಿಕೊಳ್ಳಬೇಕು?

ಉತ್ತರ:
1. ತಮ್ಮ ಹೃದಯದಿಂದ ಕೇಳಿಕೊಳ್ಳಿ - ನಾನು ಈಶ್ವರನ ಹೃದಯವನ್ನೇರಿದ್ದೇನೆಯೇ? 2. ನನ್ನಲ್ಲಿ ದೈವೀ ಗುಣಗಳ ಧಾರಣೆ ಎಷ್ಟಿದೆ? 3. ನಾನು ಬ್ರಾಹ್ಮಣ ಈಶ್ವರೀಯ ಸೇವೆಯಲ್ಲಿ ಅಡ್ಡಿ (ವಿಘ್ನ ರೂಪ) ಆಗುತ್ತಿಲ್ಲವೆ? 4. ಸದಾ ಕ್ಷೀ ರ ಖಂಡವಾಗಿರುತ್ತೇನೆಯೇ! ನಮ್ಮಲ್ಲಿ ಪರಸ್ಪರ ಏಕಮತವಿದೆಯೇ? 5. ನಾನು ಸದಾ ಶ್ರೀಮತದ ಪಾಲನೆ ಮಾಡುತ್ತೇನೆಯೇ?

ಗೀತೆ:
ಭೋಲಾನಾಥನಿಗಿಂತ ಭಿನ್ನ...........

ಓಂ ಶಾಂತಿ.
ನೀವು ಮಕ್ಕಳು ಈಶ್ವರೀಯ ಸಂಪ್ರದಾಯದವರಾಗಿದ್ದೀರಿ, ಮೊದಲು ಆಸುರೀ ಸಂಪ್ರದಾಯದವರಾಗಿದ್ದಿರಿ. ಯಾರಿಗೆ ಭೋಲಾನಾಥನೆಂದು ಹೇಳಲಾಗುತ್ತದೆ ಎಂಬುದು ಆಸುರೀ ಸಂಪ್ರದಾಯದವರಿಗೆ ತಿಳಿದೇ ಇಲ್ಲ ಮತ್ತು ಶಿವ-ಶಂಕರ ಬೇರೆ-ಬೇರೆಯಾಗಿದ್ದಾರೆ. ಶಂಕರ ದೇವತೆಯಾಗಿದ್ದಾನೆ, ಶಿವನು ತಂದೆಯಾಗಿದ್ದಾರೆ ಎಂಬುದನ್ನೂ ಸಹ ತಿಳಿದುಕೊಂಡಿಲ್ಲ. ನೀವೀಗ ಈಶ್ವರೀಯ ಸಂಪ್ರದಾಯ ಅಥವಾ ಈಶ್ವರೀಯ ಪರಿವಾರದವರಾಗಿದ್ದೀರಿ. ಅವರು ರಾವಣನ ಆಸುರೀ ಪರಿವಾರದವರಾಗಿದ್ದಾರೆ. ಎಷ್ಟೊಂದು ಅಂತರವಿದೆ! ನೀವೀಗ ಈಶ್ವರೀಯ ಪರಿವಾರದಲ್ಲಿ ಈಶ್ವರನ ಮೂಲಕ ಪರಸ್ಪರ ಹೇಗೆ ಆತ್ಮಿಕ ಪ್ರೀತಿಯಿರಬೇಕು ಎಂಬುದನ್ನು ಕಲಿಯುತ್ತಿದ್ದೀರಿ. ಬ್ರಾಹ್ಮಣ ಕುಲದಲ್ಲಿ ಪರಸ್ಪರ ಈ ಆತ್ಮಿಕ ಪ್ರೀತಿಯನ್ನು ಇಲ್ಲಿಂದಲೇ ತುಂಬಿಸಿಕೊಳ್ಳಬೇಕಾಗಿದೆ. ಯಾರಿಗೆ ಪೂರ್ಣ ಪ್ರೀತಿಯಿರುವುದಿಲ್ಲವೋ ಅವರು ಪೂರ್ಣ ಪದವಿಯನ್ನೂ ಪಡೆಯುವುದಿಲ್ಲ. ಅಲ್ಲಂತೂ ಒಂದು ಧರ್ಮ, ಒಂದು ರಾಜ್ಯವಿರುತ್ತದೆ. ಪರಸ್ಪರ ಯಾವುದೇ ಕಲಹವಿರುವುದಿಲ್ಲ. ಇಲ್ಲಾದರೆ ರಾಜ್ಯವೇ ಇಲ್ಲ. ಬ್ರಾಹ್ಮಣರಲ್ಲಿಯೂ ದೇಹಾಭಿಮಾನವಿರುವ ಕಾರಣ ಮತಭೇದದಲ್ಲಿ ಬಂದು ಬಿಡುತ್ತಾರೆ. ಇಂತಹ ಮತಭೇದದಲ್ಲಿ ಬರುವವರು ಶಿಕ್ಷೆಗಳನ್ನನುಭವಿಸಿ ನಂತರ ತೇರ್ಗಡೆಯಾಗುತ್ತಾರೆ ನಂತರ ಸತ್ಯಯುಗದಲ್ಲಿ ಒಂದು ಧರ್ಮದಲ್ಲಿರುತ್ತಾರೆ, ಆದ್ದರಿಂದ ಅಲ್ಲಿ ಶಾಂತಿಯಿರುತ್ತದೆ. ಒಂದು ಕಡೆ ಆಸುರೀ ಸಂಪ್ರದಾಯ ಅಥವಾ ಆಸುರೀ ಪರಿವಾರದವರಿದ್ದಾರೆ. ಇಲ್ಲಿ ಈಶ್ವರೀಯ ಪರಿವಾರವಿದೆ, ಭವಿಷ್ಯಕ್ಕಾಗಿ ದೈವೀ ಗುಣಗಳನ್ನು ಧಾರಣೆ ಮಾಡುತ್ತಿದ್ದೀರಿ. ತಂದೆಯು ಸರ್ವಗುಣ ಸಂಪನ್ನರನ್ನಾಗಿ ಮಾಡುತ್ತಾರೆ. ಎಲ್ಲರೂ ಆಗುವುದಿಲ್ಲ. ಯಾರು ಶ್ರೀಮತದಂತೆ ನಡೆಯುವರೋ ಅವರೇ ವಿಜಯ ಮಾಲೆಯ ಮಣಿಯಾಗುತ್ತಾರೆ. ಯಾರು ಆಗುವುದಿಲ್ಲವೋ ಅವರು ಪ್ರಜೆಗಳಲ್ಲಿ ಬಂದು ಬಿಡುತ್ತಾರೆ. ಅಲ್ಲಂತೂ ದೈವೀ ರಾಜಧಾನಿಯಿರುತ್ತದೆ. 100% ಸುಖ-ಶಾಂತಿ, ಪವಿತ್ರತೆಯಿರುತ್ತದೆ. ಈ ಬ್ರಾಹ್ಮಣ ಕುಲದಲ್ಲಿ ಈಗ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಕೆಲವರಂತೂ ಬಹಳ ಚೆನ್ನಾಗಿ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳುತ್ತಾ, ಅನ್ಯರಿಗೂ ಮಾಡಿಸುತ್ತಾ ಇರುತ್ತಾರೆ. ಯಾವಾಗ ದೇಹೀ-ಅಭಿಮಾನಿಯಾಗಿರುವರೋ ಆಗಲೇ ಈಶ್ವರೀಯ ಕುಲದಲ್ಲಿ ಪರಸ್ಪರ ಆತ್ಮಿಕ ಸ್ನೇಹವೂ ಇರುವುದು. ಆದ್ದರಿಂದ ಪುರುಷಾರ್ಥ ಮಾಡುತ್ತಾ ಇರುತ್ತಾರೆ, ಅಂತ್ಯದಲ್ಲಿಯೂ ಎಲ್ಲರ ಸ್ಥಿತಿಯು ಏಕರಸ, ಒಂದೇ ರೀತಿಯಿರಲು ಸಾಧ್ಯವಿಲ್ಲ. ನಂತರ ಶಿಕ್ಷೆಗಳನ್ನನುಭವಿಸಿ ಪದವಿ ಭ್ರಷ್ಟರಾಗಿ ಬಿಡುತ್ತಾರೆ, ಕಡಿಮೆ ಪದವಿಯನ್ನು ಪಡೆಯುತ್ತಾರೆ. ಬ್ರಾಹ್ಮಣರಲ್ಲಿಯೂ ಒಂದುವೇಳೆ ಯಾರಾದರೂ ಕ್ಷೀರ ಖಂಡವಾಗಿರುವುದಿಲ್ಲ, ಪರಸ್ಪರ ಉಪ್ಪು ನೀರಾಗಿ ವರ್ತಿಸುತ್ತಾರೆ, ದೈವೀ ಗುಣಗಳನ್ನು ಧಾರಣೆ ಮಾಡಲಿಲ್ಲವೋ ಅವರು ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುವರು? ಉಪ್ಪು ನೀರಾಗಿರುವ ಕಾರಣ ಇಲ್ಲಿ ಈಶ್ವರೀಯ ಸೇವೆಯಲ್ಲಿಯೂ ವಿಘ್ನ ರೂಪವಾಗುತ್ತಿರುತ್ತಾರೆ. ಅಂತಹವರ ಅದೃಷ್ಟವೇನಾಗುತ್ತದೆ? ಅವರು ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಒಂದು ಕಡೆ ಕ್ಷೀರ ಖಂಡವಾಗುವ ಪುರುಷಾರ್ಥ ಮಾಡುತ್ತಾರೆ. ಇನ್ನೊಂದು ಕಡೆ ಮಾಯೆಯು ಉಪ್ಪು ನೀರನ್ನಾಗಿ ಮಾಡಿ ಬಿಡುತ್ತದೆ, ಆ ಕಾರಣದಿಂದ ಸೇವೆಯ ಬದಲು ಸೇವಾ ಭಂಗ ಮಾಡುತ್ತಾರೆ. ತಂದೆಯು ಕುಳಿತು ತಿಳಿಸುತ್ತಾರೆ - ನೀವು ಈಶ್ವರೀಯ ಪರಿವಾರದವರಾಗಿದ್ದೀರಿ, ಈಶ್ವರನ ಜೊತೆಯಲ್ಲಿಯೇ ಇರುತ್ತೀರಿ. ಕೆಲವರು ಜೊತೆಯಿರುತ್ತಾರೆ, ಇನ್ನೂ ಕೆಲವರು ಬೇರೆ-ಬೇರೆ ಗ್ರಾಮಗಳಲ್ಲಿರುತ್ತಾರೆ ಆದರೆ ಒಟ್ಟಿಗೆ ಇದ್ದೀರಲ್ಲವೆ. ತಂದೆಯೂ ಸಹ ಭಾರತದಲ್ಲಿಯೇ ಬರುತ್ತಾರೆ. ಶಿವ ತಂದೆಯು ಯಾವಾಗ ಬರುತ್ತಾರೆ, ಬಂದು ಏನು ಮಾಡುತ್ತಾರೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ನಿಮಗೆ ತಂದೆಯ ಮೂಲಕ ಈಗ ಪರಿಚಯ ಸಿಕ್ಕಿದೆ, ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ನೀವೀಗ ತಿಳಿದುಕೊಂಡಿದ್ದೀರಿ. ಈ ಚಕ್ರವು ಹೇಗೆ ಸುತ್ತುತ್ತದೆ, ಈಗ ಯಾವ ಸಮಯವಾಗಿದೆ ಎಂದು ಪ್ರಪಂಚದವರಿಗೆ ತಿಳಿದಿಲ್ಲ, ಅವರು ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ.

ನೀವು ಮಕ್ಕಳಿಗೆ ರಚಯಿತ ತಂದೆಯು ಬಂದು ಪೂರ್ಣ ಸಮಾಚಾರವನ್ನು ತಿಳಿಸುತ್ತಾರೆ. ಜೊತೆ ಜೊತೆಯಲ್ಲಿ ಹೇ! ಸಾಲಿಗ್ರಾಮಗಳೇ ನನ್ನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಶಿವ ತಂದೆಯು ತಮ್ಮ ಮಕ್ಕಳಿಗೆ ಹೇಳುತ್ತಾರೆ. ನೀವು ಪಾವನರಾಗಲು ಇಷ್ಟ ಪಡುತ್ತೀರಲ್ಲವೆ, ಕರೆಯುತ್ತಾ ಬಂದಿರಿ. ಈಗ ನಾನು ಬಂದಿದ್ದೇನೆ. ಶಿವ ತಂದೆಯು ಭಾರತವನ್ನು ಪುನಃ ಶಿವಾಲಯವನ್ನಾಗಿ ಮಾಡುವುದಕ್ಕಾಗಿಯೇ ಬರುತ್ತಾರೆ, ರಾವಣನು ವೇಶ್ಯಾಲಯವನ್ನಾಗಿ ಮಾಡುತ್ತಾನೆ. ಸ್ವಯಂ ತಾವೇ ಹಾಡುತ್ತಾರೆ - ನಾವು ಪತಿತರಾಗಿದ್ದೇವೆ. ಭಾರತವು ಸತ್ಯಯುಗದಲ್ಲಿ ಸಂಪೂರ್ಣ ನಿರ್ವಿಕಾರಿಯಾಗಿತ್ತು, ನಿರ್ವಿಕಾರಿ ದೇವತೆಗಳಿಗೆ ವಿಕಾರಿ ಮನುಷ್ಯರು ಪೂಜಿಸುತ್ತಾರೆ ಪುನಃ ವಿಕಾರಿಗಳಾಗುತ್ತಾರೆ. ಆಗ ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ನಿರ್ವಿಕಾರಿಯನ್ನಾಗಿ ಮಾಡಿ ಎಂದು ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಅಂತಿಮ ಜನ್ಮದಲ್ಲಿ ನೀವು ಪವಿತ್ರರಾಗಿ, ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮ ಪಾಪಗಳು ತುಂಡಾಗುತ್ತವೆ ಮತ್ತು ನೀವು ತಮೋಪ್ರಧಾನರಿಂದ ಸತೋಪ್ರಧಾನ ದೇವತೆಗಳಾಗಿ ಬಿಡುತ್ತೀರಿ ನಂತರ ಚಂದ್ರವಂಶಿ, ಕ್ಷತ್ರಿಯ ಪರಿವಾರದಲ್ಲಿ ಬರುತ್ತೀರಿ. ಈ ಸಮಯದಲ್ಲಿ ಈಶ್ವರೀಯ ಪರಿವಾರದವರಾಗಿದ್ದೀರಿ ನಂತರ ದೈವೀ ಪರಿವಾರದಲ್ಲಿ 21 ಜನ್ಮಗಳವರೆಗೆ ಇರುತ್ತೀರಿ. ನೀವು ಈ ಅಂತಿಮ ಜನ್ಮವನ್ನು ಈ ಈಶ್ವರೀಯ ಪರಿವಾರದಲ್ಲಿ ಕಳೆಯುತ್ತೀರಿ. ಇದರಲ್ಲಿ ನೀವು ಪುರುಷಾರ್ಥ ಮಾಡಿ ಸರ್ವಗುಣ ಸಂಪನ್ನರಾಗಬೇಕಾಗಿದೆ. ನೀವು ಪೂಜ್ಯರಾಗಿದ್ದಿರಿ - ಅವಶ್ಯವಾಗಿ ರಾಜ್ಯವನ್ನು ಮಾಡುತ್ತಿದ್ದಿರಿ ನಂತರ ಪೂಜಾರಿಗಳಾದಿರಿ, ಇದನ್ನು ತಿಳಿಸಬೇಕಾಗುತ್ತದೆಯಲ್ಲವೆ. ಭಗವಂತ ತಂದೆಯಾಗಿದ್ದಾರೆ, ನಾವು ಅವರ ಮಕ್ಕಳಾಗಿದ್ದೇವೆ ಅಂದಾಗ ಪರಿವಾರವಾಯಿತಲ್ಲವೆ. ಗಾಯನವೂ ಇದೆ - ನೀವು ಮಾತಾಪಿತ ನಾವು ನಿಮ್ಮ ಬಾಲಕರು....... ಅಂದಾಗ ಪರಿವಾರವಾಯಿತಲ್ಲವೆ! ಈಗ ತಂದೆಯ ಅಪಾರ ಸುಖದ ಗಣಿಯೇ ಸಿಗುತ್ತಿದೆ. ತಂದೆಯು ತಿಳಿಸುತ್ತಾರೆ - ನಿಸ್ಸಂದೇಹವಾಗಿ ನೀವು ನಮ್ಮ ಪರಿವಾರದವರಾಗಿದ್ದೀರಿ. ಆದರೆ ಡ್ರಾಮಾ ಪ್ಲಾನನುಸಾರವಾಗಿ ರಾವಣ ರಾಜ್ಯದಲ್ಲಿ ಬಂದ ನಂತರ ಪುನಃ ನೀವು ದುಃಖದಲ್ಲಿ ಬರುತ್ತೀರಿ ಆಗ ಕೂಗುತ್ತೀರಿ. ಈ ಸಮಯದಲ್ಲಿ ನೀವು ಸತ್ಯವಾದ ಪರಿವಾರದವರಾಗಿದ್ದೀರಿ, ನಂತರ ನಿಮಗೆ ಭವಿಷ್ಯ 21 ಜನ್ಮಗಳಿಗಾಗಿ ಆಸ್ತಿಯನ್ನು ಕೊಡುತ್ತೇನೆ. ಈ ಆಸ್ತಿ ಪುನಃ ದೈವೀ ಪರಿವಾರದಲ್ಲಿ 21 ಜನ್ಮಗಳಿಗಾಗಿ ಖಾಯಂ ಆಗಿರುತ್ತದೆ. ದೈವೀ ಪರಿವಾರವು ಸತ್ಯ-ತ್ರೇತಾಯುಗದವರೆಗೂ ನಡೆಯುತ್ತದೆ ನಂತರ ರಾವಣ ರಾಜ್ಯವಾಗುವುದರಿಂದ ನಾವು ದೈವೀ ಪರಿವಾರದವರಾಗಿದ್ದೆವೆಂಬುದನ್ನು ಮರೆತು ಹೋಗುತ್ತೀರಿ. ವಾಮ ಮಾರ್ಗದಲ್ಲಿ ಹೋಗುವುದರಿಂದ ಅಸುರೀ ಪರಿವಾರದವರಾಗಿ ಬಿಡುತ್ತೀರಿ. 63 ಜನ್ಮಗಳು ಏಣಿಯನ್ನು ಇಳಿಯುತ್ತಾ ಬಂದಿರಿ. ಈ ಇಡೀ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ ಅಂದಾಗ ನೀವು ಯಾರಿಗಾದರೂ ತಿಳಿಸಬಲ್ಲಿರಿ. ಮೂಲತಃ ನೀವು ದೇವಿ-ದೇವತಾ ಧರ್ಮದವರಾಗಿದ್ದಿರಿ, ಸತ್ಯಯುಗಕ್ಕೆ ಮೊದಲು ಕಲಿಯುಗವಿತ್ತು. ಸಂಗಮಯುಗದಲ್ಲಿ ನಿಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲಾಗುತ್ತದೆ. ಮಧ್ಯದಲ್ಲಿ ಈ ಸಂಗಮವಿದೆ. ನಿಮ್ಮನ್ನು ಬ್ರಾಹ್ಮಣ ಧರ್ಮದಿಂದ ಪುನಃ ದೈವೀ ಧರ್ಮದಲ್ಲಿ ಕರೆ ತರುತ್ತಾರೆ. ಲಕ್ಷ್ಮೀ-ನಾರಾಯಣರು ಈ ರಾಜ್ಯವನ್ನು ಹೇಗೆ ಪಡೆದರೆಂಬುದನ್ನು ತಿಳಿಸುತ್ತಾರೆ. ಅದಕ್ಕೆ ಮೊದಲು ಆಸುರೀ ರಾಜ್ಯವಿತ್ತು ಅಂದಮೇಲೆ ಮತ್ತೆ ದೈವೀ ರಾಜ್ಯವು ಯಾವಾಗ ಮತ್ತು ಹೇಗೆ ಆಯಿತು! ತಂದೆಯು ತಿಳಿಸುತ್ತಾರೆ - ಕಲ್ಪ-ಕಲ್ಪವೂ ಸಂಗಮದಲ್ಲಿ ಬಂದು ನಿಮ್ಮನ್ನು ಬ್ರಾಹ್ಮಣ, ದೇವತಾ, ಕ್ಷತ್ರಿಯ ಧರ್ಮದಲ್ಲಿ ಕರೆದುಕೊಂಡು ಹೋಗುತ್ತೇನೆ. ಇದು ಭಗವಂತನ ಪರಿವಾರವಾಗಿದೆ. ಎಲ್ಲರೂ ಗಾಡ್ ಫಾದರ್ ಎಂದು ಹೇಳುತ್ತಾರೆ ಆದರೆ ತಂದೆಯನ್ನು ತಿಳಿಯದೇ ಇರುವ ಕಾರಣ ನಿರ್ಧನಿಕರಾಗಿದ್ದಾರೆ. ಆದ್ದರಿಂದ ತಂದೆಯು ಬಂದು ಘೋರ ಅಂಧಕಾರದಿಂದ ಪ್ರಕಾಶವನ್ನಾಗಿ ಮಾಡುತ್ತಾರೆ. ಈಗ ಸ್ವರ್ಗದ ಸ್ಥಾಪನೆಯಾಗುತ್ತಾ ಇದೆ, ನೀವು ಮಕ್ಕಳು ಓದುತ್ತಿದ್ದೀರಿ, ದೈವೀ ಗುಣಗಳನ್ನು ಧಾರಣೆ ಮಾಡುತ್ತೀರಿ. ಇದೂ ಸಹ ತಿಳಿದುಕೊಳ್ಳಬೇಕಾಗಿದೆ – ಶಿವ ಜಯಂತಿಯನ್ನು ಆಚರಿಸುತ್ತಾರೆ, ಶಿವ ಜಯಂತಿಯ ನಂತರ ಏನಾಗುತ್ತದೆ? ಅವಶ್ಯವಾಗಿ ದೈವೀ ರಾಜ್ಯದ ಜಯಂತಿ ಆಗುತ್ತದೆಯಲ್ಲವೆ. ಹೆವೆನ್ಲೀ ಗಾಡ್ಫಾದರ್ ಸ್ವರ್ಗವನ್ನು ಸ್ಥಾಪನೆ ಮಾಡಲು ಸ್ವರ್ಗದಲ್ಲಂತೂ ಬರುವುದಿಲ್ಲ. ನಾನು ನರಕ ಮತ್ತು ಸ್ವರ್ಗದ ಮಧ್ಯದ ಸಮಯದಲ್ಲಿ ಬರುತ್ತೇನೆಂದು ಹೇಳುತ್ತಾರೆ. ಶಿವರಾತ್ರಿ ಎಂದು ಹೇಳುತ್ತಾರಲ್ಲವೆ ಅಂದಾಗ ರಾತ್ರಿಯಲ್ಲಿ ನಾನು ಬರುತ್ತೇನೆ. ಇದನ್ನು ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ. ಯಾರು ತಿಳಿದುಕೊಳ್ಳುವರೋ ಅವರು ಅನ್ಯರಿಗೂ ಧಾರಣೆ ಮಾಡಿಸುತ್ತಾರೆ. ಯಾರು ಮನಸ್ಸಾ-ವಾಚಾ-ಕರ್ಮಣಾ ಸೇವೆಯಲ್ಲಿ ತತ್ಪರರಾಗಿರುತ್ತಾರೆಯೋ ಅವರು ಹೃದಯದಲ್ಲಿಯೂ ಇರುತ್ತಾರೆ. ಎಷ್ಟೆಷ್ಟು ಸೇವೆಯೋ ಅಷ್ಟು ಹೃದಯದಲ್ಲಿ ಏರುತ್ತಾರೆ. ಕೆಲವರು ಆಲ್ರೌಂಡ್ ವರ್ಕರ್ಸ್ ಇರುತ್ತಾರೆ. ನೀವೂ ಸಹ ಎಲ್ಲಾ ಸೇವೆಯನ್ನು ಕಲಿಯಬೇಕಾಗಿದೆ. ಅಡಿಗೆ ಮಾಡುವುದು, ರೊಟ್ಟಿ ಮಾಡುವುದು, ಪಾತ್ರೆ ತೊಳೆಯುವುದು...... ಇದೂ ಸಹ ಸೇವೆಯಲ್ಲವೆ. ಮೊದಲು ತಂದೆಯ ನೆನಪು ಇರಬೇಕು. ಅವರ ನೆನಪಿನಿಂದಲೇ ವಿಕರ್ಮ ವಿನಾಶವಾಗುತ್ತದೆ. ಇಲ್ಲಿ ಆಸ್ತಿಯು ಸಿಗುತ್ತದೆ. ಅಲ್ಲಿ ಸರ್ವಗುಣ ಸಂಪನ್ನರಾಗಿರುತ್ತೀರಿ. ಯಥಾ ರಾಜ-ರಾಣಿ ತಥಾ ಪ್ರಜಾ. ದುಃಖದ ಮಾತಿರುವುದಿಲ್ಲ. ಈ ಸಮಯದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ. ಎಲ್ಲರದೂ ಇಳಿಯುವ ಕಲೆಯಾಗಿದೆ. ಮತ್ತೆ ಈಗ ಏರುವ ಕಲೆಯಾಗುವುದು. ತಂದೆಯು ಎಲ್ಲರನ್ನೂ ದುಃಖದಿಂದ ಬಿಡಿಸಿ ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆ, ಆದ್ದರಿಂದ ತಂದೆಯನ್ನು ಮುಕ್ತಿದಾತ ಎಂದು ಕರೆಯಲಾಗುತ್ತದೆ. ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ಯೋಗ್ಯರಾಗುತ್ತಿದ್ದೇವೆಂದು ಇಲ್ಲಿ ನಿಮಗೆ ನಶೆಯಿರುತ್ತದೆ. ಯಾರು ಅನ್ಯರಿಗೂ ರಾಜ್ಯಪದವಿಯನ್ನು ಪಡೆಯಲು ಯೋಗ್ಯರನ್ನಾಗಿ ಮಾಡುತ್ತಾರೆಯೋ ಅವರನ್ನು ಯೋಗ್ಯರೆಂದು ಹೇಳಲಾಗುತ್ತದೆ. ಇದನ್ನೂ ಸಹ ತಂದೆಯು ತಿಳಿಸುತ್ತಾರೆ - ಓದುವವರು ಬಹಳ ಮಂದಿ ಬರುತ್ತಾರೆ ಆದರೆ 84 ಜನ್ಮಗಳನ್ನು ಎಲ್ಲರೂ ಪಡೆಯುತ್ತಾರೆ ಎಂದಲ್ಲ. ಯಾರು ಸ್ವಲ್ಪ ಓದುತ್ತಾರೆಯೋ ಅವರು ತಡವಾಗಿ ಬರುತ್ತಾರೆ ಅಂದಾಗ ಜನ್ಮಗಳೂ ಸಹ ಕಡಿಮೆಯಾಗುತ್ತವೆಯಲ್ಲವೆ. ಕೆಲವರು 80 ಜನ್ಮ, ಕೆಲವರದು 82 ಜನ್ಮ, ಯಾರು ಬೇಗ ಬರುತ್ತಾರೆ, ಯಾರು ಕೊನೆಯಲ್ಲಿ ಬರುತ್ತಾರೆ...... ಎಲ್ಲದಕ್ಕೂ ಆಧಾರ ವಿದ್ಯೆಯಾಗಿದೆ. ಸಾಧಾರಣ ಪ್ರಜೆಗಳು ಕೊನೆಯಲ್ಲಿ ಬರುತ್ತಾರೆ. ಅವರದು 84 ಜನ್ಮಗಳಾಗಲು ಸಾಧ್ಯವಿಲ್ಲ, ಅಂತ್ಯದಲ್ಲಿ ಬರುತ್ತಾರಲ್ಲವೆ. ಯಾರು ಸಂಪೂರ್ಣ ಕೊನೆಯಲ್ಲಿರುವರೋ ಅವರು ತ್ರೇತಾದ ಅಂತ್ಯದಲ್ಲಿ ಬಂದು ಜನ್ಮವನ್ನು ತೆಗೆದುಕೊಳ್ಳುತ್ತಾರೆ. ನಂತರ ವಾಮ ಮಾರ್ಗದಲ್ಲಿ ಹೋಗುತ್ತಾರೆ, ಇಳಿಯುವ ಕಲೆ ಪ್ರಾರಂಭವಾಗುತ್ತದೆ. ಭಾರತವಾಸಿಗಳು ಹೇಗೆ 84 ಜನ್ಮಗಳನ್ನು ತೆಗೆದುಕೊಂಡರು ಎಂಬುದಕ್ಕೆ ಈ ಏಣಿ ಚಿತ್ರವಿದೆ. ಡ್ರಾಮಾದ ರೂಪದಲ್ಲಿ ಈ ಗೋಲದ ಚಿತ್ರವಿದೆ. ಯಾರು ಪಾವನರಿದ್ದರು ಅವರೇ ಈಗ ಪತಿತರಾಗಿ ಬಿಟ್ಟಿದ್ದಾರೆ ಪುನಃ ಪಾವನ ದೇವತೆಗಳಾಗುತ್ತಾರೆ. ತಂದೆಯು ಬಂದಾಗ ಎಲ್ಲರ ಕಲ್ಯಾಣವಾಗುತ್ತದೆ ಆದ್ದರಿಂದ ಇದಕ್ಕೆ ಅಧಿಕ ಯುಗವೆಂದು ಹೇಳಲಾಗುತ್ತದೆ. ಬಲಿಹಾರಿಯು ತಂದೆಯದಾಗಿದೆ ಏಕೆಂದರೆ ಅವರು ಎಲ್ಲರ ಕಲ್ಯಾಣ ಮಾಡುತ್ತಾರೆ. ಸತ್ಯಯುಗದಲ್ಲಿ ಎಲ್ಲರ ಕಲ್ಯಾಣವಾಗಿತ್ತು, ಯಾವುದೇ ದುಃಖವಿರಲಿಲ್ಲ. ಇದನ್ನು ತಿಳಿಸಬೇಕಾಗಿದೆ - ನಾವು ಈಶ್ವರೀಯ ಪರಿವಾರದವರಾಗಿದ್ದೇವೆ, ಈಶ್ವರನು ಎಲ್ಲರ ತಂದೆಯಾಗಿದ್ದಾರೆ, ಇಲ್ಲಿಯೇ ನೀವು ಮಾತಾಪಿತಾ ಎಂದು ಹಾಡುತ್ತೀರಿ. ಅಲ್ಲಂತೂ ಕೇವಲ ತಂದೆಯೆಂದು ಹೇಳಲಾಗುತ್ತದೆ. ಇಲ್ಲಿ ನೀವು ಮಕ್ಕಳಿಗೆ ತಂದೆ-ತಾಯಿ ಸಿಗುತ್ತಾರೆ. ಇಲ್ಲಿ ನೀವು ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ. ರಚಯಿತ ತಂದೆಯಿದ್ದಾರೆಂದರೆ ತಾಯಿಯೂ ಇರುವರು. ಇಲ್ಲವೆಂದರೆ ರಚನೆಯು ಹೇಗಾಗುವುದು? ಸ್ವರ್ಗದ ರಚಯಿತ ತಂದೆಯು ಹೇಗೆ ಸ್ವರ್ಗ ಸ್ಥಾಪನೆ ಮಾಡುತ್ತಾರೆ ಎಂಬುದನ್ನು ಭಾರತವಾಸಿಗಳೇ ತಿಳಿದುಕೊಂಡಿಲ್ಲ ಮತ್ತು ವಿದೇಶದವರೂ ತಿಳಿದುಕೊಂಡಿಲ್ಲ. ಇಲ್ಲಿ ನಿಮಗೆ ತಿಳಿದಿದೆ – ಹೊಸ ಪ್ರಪಂಚದ ಸ್ಥಾಪನೆ ಮತ್ತು ಹಳೆಯ ಪ್ರಪಂಚದ ವಿನಾಶವು ಅವಶ್ಯವಾಗಿ ಸಂಗಮದಲ್ಲಿಯೇ ಆಗುವುದು. ನೀವೀಗ ಸಂಗಮದಲ್ಲಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ. ಆತ್ಮವು ಪರಮಪಿತ ಪರಮಾತ್ಮನನ್ನು ನೆನಪು ಮಾಡಬೇಕಾಗಿದೆ. ಆತ್ಮಗಳು ಮತ್ತು ಪರಮಾತ್ಮನು ಬಹಳ ಕಾಲ ಅಗಲಿದ್ದರು....... ಸುಂದರ ಮೇಳವು ಎಲ್ಲಿ ಆಗುವುದು! ಆ ಸುಂದರ ಮೇಳವು ಅವಶ್ಯವಾಗಿ ಇಲ್ಲಿಯೇ ಸೇರುವುದು. ಪರಮಾತ್ಮ ತಂದೆಯು ಇಲ್ಲಿಯೇ ಬರುತ್ತಾರೆ, ಇದಕ್ಕೇ ಕಲ್ಯಾಣಕಾರಿ ಸುಂದರ ಮೇಳವೆಂದು ಹೇಳಲಾಗುತ್ತದೆ. ಜೀವನ್ಮುಕ್ತಿಯ ಆಸ್ತಿಯನ್ನು ಎಲ್ಲರಿಗೆ ಕೊಡುತ್ತಾರೆ ಆಗ ಎಲ್ಲರೂ ಜೀವನ ಬಂಧನದಿಂದ ಮುಕ್ತರಾಗಿ ಬಿಡುತ್ತಾರೆ. ಎಲ್ಲರೂ ಶಾಂತಿಧಾಮಕ್ಕೆ ಹೋಗುತ್ತಾರೆ ಮತ್ತೆ ಬಂದಾಗ ಸತೋಪ್ರಧಾನರಿರುತ್ತಾರೆ. ಧರ್ಮ ಸ್ಥಾಪನಾರ್ಥವಾಗಿ ಧರ್ಮಾತ್ಮರು ಕೆಳಗಡೆ ಬಂದಾಗ ಅವರ ಸಂಖ್ಯೆಯು ಹೆಚ್ಚಿನದಾಗಿ ವೃದ್ಧಿಯಾದಾಗ ರಾಜ್ಯಭಾರಕ್ಕಾಗಿ ಪುರುಷಾರ್ಥ ಮಾಡುವರು. ಅಲ್ಲಿಯವರೆಗೆ ಯಾವುದೇ ಜಗಳ, ಕಲಹಗಳಿರುವುದಿಲ್ಲ. ಸತೋಪ್ರಧಾನರಿಂದ ಯಾವಾಗ ರಜೋದಲ್ಲಿ ಬರುವರೋ ಆಗ ಜಗಳ ಕಲಹಗಳನ್ನು ಆರಂಭಿಸುತ್ತಾರೆ. ಮೊದಲು ಸುಖ, ನಂತರ ದುಃಖ. ಈಗ ಸಂಪೂರ್ಣ ದುರ್ಗತಿಯನ್ನು ಹೊಂದಿದ್ದಾರೆ, ಈ ಕಲಿಯುಗೀ ಪ್ರಪಂಚದ ವಿನಾಶ ಮತ್ತು ಸತ್ಯಯುಗೀ ಪ್ರಪಂಚದ ಸ್ಥಾಪನೆಯಾಗಬೇಕಾಗಿದೆ. ತಂದೆಯು ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಿದ್ದಾರೆ, ನಂತರ ಯಾರು ಹೇಗೆ ಪುರುಷಾರ್ಥ ಮಾಡುವರೋ ಅದರನುಸಾರ ವಿಷ್ಣು ಪುರಿಯಲ್ಲಿ ಬಂದು ಪ್ರಾಲಬ್ಧವನ್ನು ಪಡೆಯುತ್ತಾರೆ. ಇವು ಬಹಳ-ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಸಮಯದಲ್ಲಿ ನಾವು ಈಶ್ವರನಿಂದ ಭವಿಷ್ಯ 21 ಜನ್ಮಗಳ ಆಸ್ತಿಯನ್ನು ಪಡೆಯುತ್ತಿದ್ದೇವೆ ಎಂದು ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ಯಾರೆಷ್ಟಾದರೂ ಪುರುಷಾರ್ಥ ಮಾಡಿ ಈಗ ತನ್ನನ್ನು ಆಕ್ಯುರೇಟ್ ಮಾಡಿಕೊಳ್ಳಬಹುದು....... ನೀವೀಗ ಅಕ್ಯುರೇಟ್ ಆಗಬೇಕಾಗಿದೆ. ಗಡಿಯಾರಗಳಲ್ಲಿಯೂ ಸಹ ಲಿವರ್ ಮತ್ತು ಸಲೆಂಡರ್ ಇರುತ್ತವೆ. ಲಿವರ್ ಗಡಿಯಾರವು ಬಹಳ ಅಕ್ಯುರೇಟ್ ಆಗಿರುತ್ತದೆ. ಮಕ್ಕಳಲ್ಲಿಯೂ ಕೆಲವರು ಅಕ್ಯುರೇಟ್ ಆಗಿ ಬಿಡುತ್ತಾರೆ, ಇನ್ನೂ ಕೆಲವರು ಅನ್ಅಕ್ಯುರೇಟ್ ಆಗಿ ಬಿಡುತ್ತಾರೆ ಅವರದು ಕಡಿಮೆ ಪದವಿಯಾಗುತ್ತದೆ. ಆದ್ದರಿಂದ ಪುರುಷಾರ್ಥ ಮಾಡಿ ಅಕ್ಯುರೇಟ್ ಆಗಬೇಕು. ಈಗ ಎಲ್ಲರೂ ಅಕ್ಯುರೇಟ್ ಆಗಿ ನಡೆಯುತ್ತಿಲ್ಲ. ಪುರುಷಾರ್ಥ ಮಾಡಿಸುವವರು ಒಬ್ಬರೇ ತಂದೆಯಾಗಿದ್ದಾರೆ. ಅದೃಷ್ಟವನ್ನು ರೂಪಿಸಿಕೊಳ್ಳುವ ಪುರುಷಾರ್ಥದಲ್ಲಿ ಕೊರತೆಯಿದೆ ಆದ್ದರಿಂದಲೇ ಕಡಿಮೆ ಪದವಿಯನ್ನು ಪಡೆಯುತ್ತಾರೆ. ಶ್ರೀಮತದಂತೆ ನಡೆಯದ ಕಾರಣ ಆಸುರೀ ಗುಣವನ್ನು ಬಿಡದೇ ಇರುವ ಕಾರಣ ಯೋಗದಲ್ಲಿ ಇಲ್ಲದಿರುವ ಕಾರಣವೇ ಇವೆಲ್ಲವೂ ಆಗುತ್ತದೆ. ಯೋಗದಲ್ಲಿ ಇಲ್ಲವೆಂದರೆ ಅಂತಹವರು ಪಂಡಿತರಿದ್ದಂತೆ. ಯೋಗವು ಕಡಿಮೆಯಿದೆ ಆದ್ದರಿಂದ ಶಿವ ತಂದೆಯ ಕಡೆ ಪ್ರೀತಿಯಿರುವುದಿಲ್ಲ, ಧಾರಣೆಯೂ ಕಡಿಮೆಯಾಗುತ್ತದೆ, ಆ ಖುಷಿಯಿರುವುದಿಲ್ಲ. ಚಹರೆಯೇ ಶವದಂತೆ ಬಾಡಿರುತ್ತದೆ. ನಿಮ್ಮ ಚಹರೆಯಂತೂ ದೇವತೆಗಳ ಚಹರೆಯಂತೆ ಸದಾ ಹರ್ಷಿತವಾಗಿರಬೇಕು. ತಂದೆಯು ನಿಮಗೆ ಎಷ್ಟೊಂದು ಆಸ್ತಿಯನ್ನು ಕೊಡುತ್ತಾರೆ. ಯಾರಾದರೂ ಬಡವರ ಮಗು ಸಾಹುಕಾರರ ಬಳಿ ಬಂದರೆ ಅವರಿಗೆ ಎಷ್ಟೊಂದು ಖುಷಿಯಿರುತ್ತದೆ. ನೀವೂ ಸಹ ಬಹಳ ಬಡವರಾಗಿದ್ದಿರಿ, ಈಗ ತಂದೆಯು ದತ್ತು ಮಾಡಿಕೊಂಡಿದ್ದಾರೆ ಅಂದಮೇಲೆ ಖುಷಿಯಿರಬೇಕು - ನಾವು ಈಶ್ವರೀಯ ಸಂಪ್ರದಾಯದವರಾಗಿದ್ದೇವೆ ಎಂದು, ಆದರೆ ಅದೃಷ್ಟದಲ್ಲಿಲ್ಲವೆಂದರೆ ಏನು ಮಾಡುವುದು! ಅಂತಹವರ ಪದವಿಯು ಭ್ರಷ್ಟವಾಗುತ್ತದೆ. ಪಟ್ಟದ ರಾಣಿಯರಾಗುವುದಿಲ್ಲ. ತಂದೆಯು ಪಟ್ಟದ ರಾಣಿಯರನ್ನಾಗಿ ಮಾಡುವುದಕ್ಕಾಗಿಯೇ ಬರುತ್ತಾರೆ. ನೀವು ಮಕ್ಕಳು ಯಾರಿಗಾದರೂ ಇದನ್ನು ತಿಳಿಸಬಹುದು - ಬ್ರಹ್ಮಾ, ವಿಷ್ಣು, ಶಂಕರ ಮೂವರು ಶಿವನ ಮಕ್ಕಳಾಗಿದ್ದಾರೆ. ತಂದೆಯು ಬ್ರಹ್ಮಾರವರ ಮೂಲಕ ಭಾರತವನ್ನು ಪುನಃ ಸ್ವರ್ಗವನ್ನಾಗಿ ಮಾಡುತ್ತಾರೆ, ಶಂಕರನ ಮೂಲಕ ಹಳೆಯ ಪ್ರಪಂಚದ ವಿನಾಶವಾಗುತ್ತದೆ. ಭಾರತದಲ್ಲಿಯೇ ಬಹಳ ಕೆಲವರು ಮಾತ್ರ ಉಳಿಯುತ್ತಾರೆ. ಪ್ರಳಯವಂತೂ ಆಗುವುದಿಲ್ಲ ಆದರೆ ಬಹಳ ಕಡಿಮೆ ಜನಸಂಖ್ಯೆ ಮಾತ್ರವೇ ಉಳಿಯುತ್ತದೆ. ಆದ್ದರಿಂದ ಅದು ಪ್ರಳಯವಾದ ಹಾಗೆ. ರಾತ್ರಿ-ಹಗಲಿನ ಅಂತರವಾಗಿ ಬಿಡುತ್ತದೆ, ಅವರೆಲ್ಲರೂ ಮುಕ್ತಿಧಾಮದಲ್ಲಿ ಹೊರಟು ಹೋಗುತ್ತಾರೆ. ಇದು ಪತಿತ-ಪಾವನ ತಂದೆಯದೇ ಕರ್ತವ್ಯವಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿಯಾಗಿರಿ ಇಲ್ಲದಿದ್ದರೆ ಹಳೆಯ ಸಂಬಂಧಿಗಳು ನೆನಪಿಗೆ ಬರುತ್ತಿರುತ್ತಾರೆ. ಎಲ್ಲವನ್ನೂ ಬಿಟ್ಟಿದ್ದೀರಿ ಆದರೂ ಸಹ ಬುದ್ಧಿಯು ಹೋಗುತ್ತಿರುತ್ತದೆ. ನಷ್ಟಮೋಹಿಯಾಗಿಲ್ಲ, ಆದ್ದರಿಂದ ಅದಕ್ಕೆ ವ್ಯಭಿಚಾರಿ ನೆನಪೆಂದು ಹೇಳಲಾಗುತ್ತದೆ. ಸದ್ಗತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಏಕೆಂದರೆ ದುರ್ಗತಿಯವರನ್ನೇ ನೆನಪು ಮಾಡುತ್ತಿರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬಾಪ್ದಾದಾರವರ ಹೃದಯವನ್ನೇರಲು ಮನಸ್ಸಾ-ವಾಚಾ-ಕರ್ಮಣಾ ಸೇವೆ ಮಾಡಬೇಕಾಗಿದೆ. ಆಕ್ಯುರೇಟ್ ಮತ್ತು ಆಲ್ರೌಂಡರ್ ಆಗಬೇಕಾಗಿದೆ.

2. ಯಾವುದೇ ಹಳೆಯ ಮಿತ್ರ ಸಂಬಂಧಿಗಳು ನೆನಪಿಗೆ ಬರಬಾರದು - ಈ ರೀತಿ ಆತ್ಮಾಭಿಮಾನಿಗಳಾಗಬೇಕು. ಪರಸ್ಪರ ಬಹಳ-ಬಹಳ ಆತ್ಮಿಕ ಪ್ರೀತಿಯಿಂದ ಇರಬೇಕಾಗಿದೆ, ಉಪ್ಪು-ನೀರಾಗಿ ವರ್ತಿಸಬಾರದು.

ವರದಾನ:
ಸದಾ ಜೊತೆಯ ಅನುಭವದ ಮುಖಾಂತರ ಪರಿಶ್ರಮದಿಂದ ಅವಿದ್ಯೆ ಆಗುವಂತಹ ಅತೀಂದ್ರೀಯ ಸುಖ ಮತ್ತು ಆನಂದ ಸ್ವರೂಪ ಭವ.

ಹೇಗೆ ಮಕ್ಕಳು ಒಂದುವೇಳೆ ತಂದೆಯ ಮಡಿಲಿನಲ್ಲಿದ್ದರೆ, ಅವರಿಗೆ ಆಯಾಸ ಆಗುವುದಿಲ್ಲ. ತನ್ನ ಕಾಲಿನ ಮೇಲೆ ನಡೆದಾಗ ಆಯಾಸ ಮತ್ತು ಅಳುವುದು. ಇಲ್ಲೂ ಸಹ ನೀವು ಮಕ್ಕಳು ತಂದೆಯ ಮಡಿಲಿನಲ್ಲಿ ಕುಳಿತು ನಡೆಯುತ್ತಿರುವಿರಿ. ಸ್ವಲ್ಪವೂ ಸಹ ಕಷ್ಟದ ಅನುಭವ ಇಲ್ಲ. ಸಂಗಮಯುಗದಲ್ಲಿ ಯಾರು ಈ ರೀತಿ ಸದಾ ಜೊತೆಯಲ್ಲಿರುವಂತಹ ಆತ್ಮಗಳಿದ್ದಾರೆ ಅವರಿಗೆ ಪರಿಶ್ರಮ ಅವಿದ್ಯೆ ಮಾತ್ರಂ ಆಗಿರುತ್ತದೆ. ಪುರುಷಾರ್ಥವೂ ಸಹ ಒಂದು ಸ್ವಾಭಾವಿಕ ಕರ್ಮವಾಗಿ ಬಿಡುವುದು, ಆದ್ದರಿಂದ ಸದಾ ಅತೀಂದ್ರಿಯ ಸುಖ ಹಾಗೂ ಆನಂದ ಸ್ವರೂಪ ಸ್ವತಃ ಆಗಿ ಬಿಡುವರು.

ಸ್ಲೋಗನ್:
ಆತ್ಮೀಯ ಗುಲಾಬಿಯಾಗಿ ತನ್ನ ಆತ್ಮೀಯ ವೃತ್ತಿಯಿಂದ ವಾಯುಮಂಡಲದಲ್ಲಿ ಆತ್ಮೀಯತೆಯ ಸುಗಂಧವನ್ನು ಹರಡಿ.