21.03.21 Avyakt Bapdada
Kannada
Murli 22.11.87 Om Shanti Madhuban
ಸಹಯೊಗದ ಸಾಗರನಿಂದ
ಪದಮಾಗುಣ ಸಹಯೋಗವನ್ನು ಪಡೆದುಕೊಳ್ಳುವ ವಿಧಿ
ಇಂದು ಬಾಪ್ದಾದಾ ತನ್ನ
ನಾಲ್ಕೂ ಕಡೆಯ ಸಾಹಸವಂತ ಮಕ್ಕಳನ್ನು ನೋಡುತ್ತಿದ್ದಾರೆ. ಆದಿಯಿಂದ ಇಲ್ಲಿಯ ತನಕ ಪ್ರತಿಯೊಬ್ಬ
ಬ್ರಾಹ್ಮಣ ಆತ್ಮನು ಧೈರ್ಯದ ಆಧಾರದಿಂದ ಬಾಪ್ದಾದಾರವರ ಸಹಯೋಗಕ್ಕೆ ಪಾತ್ರರಾಗಿದ್ದಾರೆ ಹಾಗೂ 'ಧೈರ್ಯ
ಮಕ್ಕಳದು, ಸಹಯೋಗ ತಂದೆಯದು' ಈ ವರದಾನದ ಪ್ರಮಾಣ ಪುರುಷಾರ್ಥದಲ್ಲಿ ನಂಬರ್ವಾರ್ ಆಗಿ
ಮುಂದುವರೆಯುತ್ತಿದ್ದಾರೆ. ಮಕ್ಕಳ ಒಂದು ಹೆಜ್ಜೆಯ ಧೈರ್ಯ ಹಾಗೂ ತಂದೆಯ ಪದಮದಷ್ಟು ಹೆಜ್ಜೆಗಳ
ಸಹಯೋಗ ಪ್ರತಿಯೊಬ್ಬ ಮಗುವಿಗೆ ಪ್ರಾಪ್ತಿಯಾಗಿದೆ ಏಕೆಂದರೆ ಇದು ಬಾಪ್ ದಾದಾರವರ
ಪ್ರತಿಜ್ಞೆಯೆಂದಾದರೂ ಹೇಳಿ, ಆಸ್ತಿಯೆಂದಾದರೂ ಹೇಳಿ, ಇದು ಎಲ್ಲಾ ಮಕ್ಕಳ ಪ್ರತಿ ಇದೆ ಹಾಗೂ ಈ
ಶ್ರೇಷ್ಠ ಸಹಜ ಪ್ರಾಪ್ತಿಗಳೇ 63 ಜನ್ಮಗಳ ನಿರ್ಬಲ ಆತ್ಮಗಳು ಶಕ್ತಿಶಾಲಿಯಾಗಿ
ಮುಂದುವರೆಯುತ್ತಿದ್ದಾರೆ. ಬ್ರಾಹ್ಮಣ ಜನ್ಮವು ಪಡೆದಾಕ್ಷಣವೇ ಮೊದಲನೆಯದಾಗಿ ಯಾವ ಧೈರ್ಯ
ಧಾರಣೆಯಾಗುವುದಾಗಿದೆ! ಮೊದಲ ಧೈರ್ಯ - ಪವಿತ್ರತೆಯ ವಿಶೇಷ ಧಾರಣೆಯಿಂದ ಅಸಂಭವವನ್ನು ಸಂಭವ ಮಾಡಿ
ತೋರಿಸಿದಿರಿ. ಧೈರ್ಯದಿಂದ ನಾವು ಪವಿತ್ರರಾಗಲೇಬೇಕೆಂದು ಧೃಡ ಸಂಕಲ್ಪ ಮಾಡಿದಿರಿ ಹಾಗೂ ತಂದೆಯು
ಪದಮಾಗುಣ ಸಹಯೋಗ ಕೊಟ್ಟಿದ್ದಾರೆ. ನೀವು ಆತ್ಮಗಳೇ ಅನಾದಿ, ಆದಿಯಲ್ಲಿ ಪವಿತ್ರರಾಗಿದ್ದಿರಿ. ಅನೇಕ
ಬಾರಿ ಪವಿತ್ರರಾಗಿದ್ದೀರಿ ಹಾಗೂ ಆಗುತ್ತಿರುತ್ತೀರಿ. ಇದೇನೂ ಹೊಸ ಮಾತಲ್ಲ. ಅನೇಕ ಬಾರಿಯ ಶ್ರೇಷ್ಠ
ಸ್ಥಿತಿಯನ್ನು ಮತ್ತೆ ಕೇವಲ ಪುನರಾವರ್ತಿಸುತ್ತಿದ್ದೀರಿ. ಈಗಲೂ ನೀವು ಪವಿತ್ರ ಆತ್ಮಗಳ ಭಕ್ತರು
ನಿಮ್ಮ ಜಡ ಮೂರ್ತಿಗಳ ಮುಂದೆ ಪವಿತ್ರತೆಯ ಶಕ್ತಿಯನ್ನು ಬೇಡುತ್ತಿರುತ್ತಾರೆ. ನಿಮ್ಮ ಪವಿತ್ರತೆಯ
ಗೀತೆಯನ್ನು ಹಾಡುತ್ತಾರೆ ಜೊತೆ ಜೊತೆಗೆ ನಿಮ್ಮ ಪವಿತ್ರತೆಯ ಗುರುತು ಪ್ರತಿಯೊಬ್ಬ ಪೂಜ್ಯಾತ್ಮನ
ಮೇಲೆ ಪ್ರಕಾಶದ ಕಿರೀಟವಿದೆ. ಇಂತಹ ಸ್ಮೃತಿಯ ಮುಖಾಂತರ ಸಮರ್ಥ ಮಾಡಿದ್ದಾರೆಂದರೆ ತಂದೆಯ
ಸಹಯೋಗದಿಂದ ತಾವು ನಿರ್ಬಲರಿಂದ ಬಲವಂತರಾಗಿದ್ದೀರಿ. ಇಷ್ಟು ಶಕ್ತಿಶಾಲಿಗಳಾಗಿದ್ದೀರಿ, ಏನೇ ಆಗಲಿ
ನಾವು ವಿಶ್ವವನ್ನು ಪಾವನವನ್ನಾಗಿ ಮಾಡಿಯೇ ತೋರಿಸುತ್ತೇವೆಂದು ಚಾಲೆಂಜ್ ಮಾಡಲು
ನಿಮಿತ್ತರಾಗಿದ್ದೀರಲ್ಲವೆ. ನಿರ್ಬಲರಿಂದ ಇಷ್ಟು ಶಕ್ತಿಶಾಲಿಗಳಾಗಿದ್ದೀರಿ ಯಾರು ದ್ವಾಪರ ಯುಗದ
ಹೆಸರುವಾಸಿ ಋಷಿ-ಮುನಿ, ಮಹಾತ್ಮರು ಯಾವ ಮಾತನ್ನು ಖಂಡಿತವೆಂದು ಹೇಳಿದ್ದರು, ಪ್ರವೃತ್ತಿಯಲ್ಲಿದ್ದು
ಪವಿತ್ರರಾಗುವುದು ಅಸಂಭವವೆಂದು ಹಾಗೂ ಸ್ವಯಂ ಇತ್ತೀಚಿನ ಸಮಯದ ಪ್ರಮಾಣ ತಮ್ಮ ಸಲುವಾಗಿ ಕಠಿಣವೆಂದು
ತಿಳಿದಿದ್ದರು ಆದರೆ ನೀವು ಅವರ ಮುಂದೆ ಸ್ವಾಭಾವಿಕ ರೂಪದಲ್ಲಿ ವರ್ಣನೆ ಮಾಡುತ್ತೀರಿ - ಇದು ನಾವು
ಆತ್ಮಗಳಿಗೆ ಅನಾದಿ, ಆದಿ ವಿಧಿಸ್ವರೂಪವಾಗಿದೆ. ಇದರಲ್ಲಿ ಕಷ್ಟವೇನಿದೆ? ಇದಕ್ಕೆ ಧೈರ್ಯ ಮಕ್ಕಳದು,
ಸಹಯೋಗ ತಂದೆಯದು ಎಂದು ಹೇಳಲಾಗುತ್ತದೆ. ಅಸಂಭವವನ್ನು ಸಹಜ ಅನುಭವ ಮಾಡಿದ್ದೀರಿ ಹಾಗೂ
ಮಾಡುತ್ತಿದ್ದೀರಿ. ಅವರು ಎಷ್ಟು ಅಸಂಭವವೆಂದು ಹೇಳಿದ್ದರೋ ಅಷ್ಟೇ ನಿಮಗೆ ಸಹಜವಾಗಿದೆ. ತಂದೆಯು
ಜ್ಞಾನದ ಶಕ್ತಿಯ ಸಹಯೋಗ ಹಾಗೂ ನೆನಪಿನ ಮುಖಾಂತರ ಆತ್ಮಕ್ಕೆ ಪಾವನ ಸ್ಥಿತಿಯ ಅನುಭೂತಿಯ ಶಕ್ತಿಯ
ಸಹಯೋಗದಿಂದ ಪರಿವರ್ತನೆ ಮಾಡಿದ್ದಾರೆ. ಇದು ಮೊದಲ ಹೆಜ್ಜೆಯ ಧೈರ್ಯಕ್ಕೆ ತಂದೆಯ ಪದಮಾಗುಣದ
ಸಹಯೋಗವಾಗಿದೆ.
ಇದೇ ರೀತಿ ಮಾಯಾಜೀತರಾಗುವುದಕ್ಕೆ ಯಾವುದೇ ಭಿನ್ನ-ಭಿನ್ನ ರೂಪದಿಂದ ಮಾಯೆಯು ದಾಳಿ ಮಾಡುವುದಕ್ಕೆ
ಆದಿಯಿಂದ ಇಲ್ಲಿಯವರೆಗೆ ಬರುತ್ತಿದೆ, ಕೆಲವೊಮ್ಮೆ ರಾಯಲ್ ರೂಪದಿಂದ, ಕೆಲವೊಮ್ಮೆ ಪ್ರತ್ಯಕ್ಷ
ರೂಪದಿಂದ, ಕೆಲವೊಮ್ಮೆ ಗುಪ್ತ ರೂಪದಿಂದ ಹಾಗೂ ಕೆಲವೊಮ್ಮೆ ಕೃತಕ ಈಶ್ವರೀಯ ರೂಪದಲ್ಲಿ ಬರುತ್ತದೆ.
63 ಜನ್ಮಗಳು ಮಾಯೆಗೆ ಜೊತೆಗಾರರಾಗಿದ್ದಿರಲ್ಲವೆ. ಇಂತಹ ಪಕ್ಕಾ ಜೊತೆಗಾರರನ್ನು ಬಿಟ್ಟು ಬಿಡುವುದು
ಕಷ್ಟವಾಗುತ್ತದೆ. ಆ ಕಾರಣವಾಗಿ ಭಿನ್ನ - ಭಿನ್ನ ರೂಪದಿಂದ ನಿಮ್ಮ ಮೇಲೆ ಯುದ್ದ ಮಾಡುವುದರಲ್ಲಿ ಅದು
ಶಕ್ತಿ ಹೀನವಾಗಿದೆ ಮತ್ತು ತಾವಿಲ್ಲಿ ಶಕ್ತಿಶಾಲಿಯಾಗಿದ್ದಿರಿ. ಇಷ್ಟೊಂದು ಯುದ್ಧ ಮಾಡುತ್ತಿದ್ದರೂ
ಯಾರು ಧೈರ್ಯವಂತ ಮಕ್ಕಳಿದ್ದಾರೆ ಹಾಗೂ ತಂದೆಯ ಪದಮಗುಣ ಸಹಯೋಗದ ಪಾತ್ರಧಾರಿ ಮಕ್ಕಳಿದ್ದಾರೆ,
ಸಹಯೋಗದ ಕಾರಣ ಮಾಯೆಯ ಯುದ್ಧದ ಪ್ರತಿ ಚಾಲೆಂಜ್ ಮಾಡುತ್ತಾರೆ - ನಿನ್ನ ಕೆಲಸ ಬರುವುದು, ನಮ್ಮ
ಕೆಲಸ ವಿಜಯ ಪ್ರಾಪ್ತಿ ಮಾಡಿಕೊಳ್ಳುವುದು. ಯುದ್ಧವನ್ನು ಆಟವೆಂದು ತಿಳಿಯುತ್ತಾರೆ. ಮಾಯೆಯ ಹುಲಿಯ
ರೂಪವನ್ನು ಇರುವೆಯೆಂದು ತಿಳಿಯುತ್ತಾರೆ. ಏಕೆಂದರೆ ಈ ಮಾಯೆಯ ರಾಜ್ಯವು ಈಗ ಸಮಾಪ್ತಿ ಆಗುತ್ತದೆ
ಮತ್ತು ಅನೇಕ ಬಾರಿ ವಿಜಯಿ ಅತ್ಮಗಳಿಗೆ ನಿಶ್ಚಯ 100% ನಿಶ್ಚಿತವಾಗಿದೆ ಎಂದು ತಿಳಿದಿದೆ.
ಆದ್ದರಿಂದ ಇದೇ 'ನಿಶ್ಚಿತ' ದ ನಶೆಯು ತಂದೆಯ ಪದಮಾಗುಣದ ಅಧಿಕಾರವನ್ನು ಪ್ರಾಪ್ತಿ ಮಾಡಿಸುತ್ತದೆ.
ಅಂದಾಗ ಧೈರ್ಯವಂತ ಮಕ್ಕಳಿಗೆ, ಸಹಯೋಗವು ಸರ್ವಶಕ್ತಿವಂತ ತಂದೆಯದಾಗಿರುತ್ತದೆ. ಅಲ್ಲಿ ಅಸಂಭವವನ್ನೂ
ಸಂಭವ ಮಾಡುವುದು ಮಾಯೆಗೆ, ವಿಶ್ವಕ್ಕೆ ಚಾಲೆಂಜ್ ಮಾಡುವುದು ದೊಡ್ಡ ಮಾತೇನಲ್ಲ - ಈ ರೀತಿ
ತಿಳಿಯುತ್ತೀರಲ್ಲವೆ?
ಬಾಪ್ದಾದಾರವರು ಈ ಫಲಿತಾಂಶವನ್ನು ನೋಡುತ್ತಿದ್ದಾರೆ - ಆದಿಯಿಂದ ಇಲ್ಲಿಯ ತನಕ ಪ್ರತಿಯೊಬ್ಬ ಮಗುವು
ಧೈರ್ಯದ ಆಧಾರದ ಮೇಲೆ ಸಹಯೋಗದ ಪಾತ್ರಧಾರಿಗಳಾಗಿ, ಎಲ್ಲಿಯ ತನಕ ಸಹಜ ಪುರುಷಾರ್ಥಿಗಳಾಗಿ
ಮುಂದುವರೆಯುತ್ತಿದ್ದಾರೆ, ಎಲ್ಲಿಯ ತನಕ ತಲುಪಿದ್ದಾರೆ. ಅಂದಾಗ ಏನನ್ನು ನೋಡಿರಬಹುದು? ತಂದೆಯ
ಸಹಯೋಗವೆಂದರೆ ದಾತನ ಕೊಡುಗೆಯಾಗಿದೆ. ವರದಾತನ ವರದಾನ ಸಾಗರಕ್ಕೆ ಸಮಾನವಾಗಿದೆ, ಆದರೆ ಸಾಗರನಿಂದ
ಪಡೆಯುವ ಕೆಲವು ಮಕ್ಕಳು ಸಾಗರನ ಸಮಾನ ಸಂಪನ್ನರಾಗಿ ಅನ್ಯರನ್ನೂ ಸಂಪನ್ನರನ್ನಾಗಿ ಮಾಡುತ್ತಿದ್ದಾರೆ
ಹಾಗೂ ಕೆಲವು ಮಕ್ಕಳು ಸಹಯೋಗದ ವಿಧಿಯನ್ನು ತಿಳಿಯದೇ ಇರುವುದರಿಂದ ಸಹಯೋಗವನ್ನು ಪಡೆಯುವುದಕ್ಕೆ
ಬದಲಾಗಿ ತಮ್ಮದೇ ಪರಿಶ್ರಮದಲ್ಲಿ, ಕೆಲವೊಮ್ಮೆ ತೀವ್ರ ಗತಿಯಲ್ಲಿ, ಕೆಲವೊಮ್ಮೆ ಹೃದಯ ವಿಧೀರ್ಣ
ಆಟದಲ್ಲಿ ಏರುಪೇರಾಗುತ್ತಿದ್ದಾರೆ ಹಾಗೂ ಕೆಲವು ಮಕ್ಕಳು ಕೆಲವೊಮ್ಮೆ ಸಹಯೋಗ, ಕೆಲವೊಮ್ಮೆ ಪರಿಶ್ರಮ
ಪಡುತ್ತಿದ್ದಾರೆ. ಬಹಳ ಸಮಯದ ಸಹಯೋಗವೂ ಇದೆ, ಆದರೆ ಅಲ್ಲಲ್ಲಿ ಹುಡುಗಾಟಿಕೆಯ ಕಾರಣ ಸಹಯೋಗದ
ವಿಧಿಯನ್ನು ಸಮಯದಲ್ಲಿ ಮರೆತು ಬಿಡುತ್ತಾರೆ ಮತ್ತು ಧೈರ್ಯವನ್ನು ಇಡುವುದಕ್ಕೆ ಬದಲಾಗಿ
ಹುಡುಗಾಟಿಕೆಯ ಕಾರಣ ಅಭಿಮಾನದಲ್ಲಿ ಬರುತ್ತಾರೆ. ನಾವಂತೂ ಸದಾ ಪವಿತ್ರವಾಗಿಯೇ ಇದ್ದೇವೆ, ತಂದೆಯು
ನಮಗೆ ಸಹಯೋಗ ಕೊಡದೆ ಇನ್ಯಾರಿಗೆ ಕೊಡುತ್ತಾರೆ! ತಂದೆಯು ಬಂಧಿತರಾಗಿದ್ದಾರೆ ಎಂಬ ಅಭಿಮಾನದ ಕಾರಣ
ಧೈರ್ಯದ ಮುಖಾಂತರ ಸಹಯೋಗದ ವಿಧಿಯನ್ನು ಮರೆತು ಬಿಡುತ್ತಾರೆ. ಹುಡುಗಾಟಿಕೆಯ ಅಭಿಮಾನ ಹಾಗೂ ಸ್ವಯಂ
ಪ್ರತಿ ಗಮನ ಕೊಡುವ ಅಭಿಮಾನವು ಸಹಯೋಗದಿಂದ ವಂಚಿತರನ್ನಾಗಿ ಮಾಡಿ ಬಿಡುತ್ತದೆ. ಈಗ ಬಹಳ ಯೋಗ ಮಾಡಿ
ಬಿಟ್ಟಿದ್ದೇವೆಂದು ತಿಳಿಯುತ್ತಾರೆ. ಜ್ಞಾನಿ ಆತ್ಮರೂ ಆಗಿ ಬಿಟ್ಟಿದ್ದೇವೆ, ಯೋಗಿ ಆತ್ಮಗಳೂ ಆಗಿ
ಬಿಟ್ಟಿದ್ದೇವೆ, ಸೇವೆಯಲ್ಲಿಯೂ ಹೆಸರು ಗಳಿಸಿದ್ದೇವೆ, ಸೇವಾಕೇಂದ್ರದ ಇಂಚಾರ್ಜ್ ಸಹ ಆಗಿ ಬಿಟ್ಟೆವು,
ಸೇವೆಯ ರಾಜಧಾನಿಯೂ ಆಗಿ ಬಿಟ್ಟಿತು, ಪ್ರಕೃತಿಯು ಸೇವೆಗೆ ಯೋಗ್ಯವಾಗಿ ಬಿಟ್ಟಿತು ಎಂದು ತಿಳಿದು
ಆರಾಮದಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಇದರ ಗಮನ ಕೊಡುವುದರಲ್ಲಿ ಹುಡುಗಾಟಿಕೆಯಾಗಿದೆ.
ಆದ್ದರಿಂದ ಎಲ್ಲಿಯ ತನಕ ಬದುಕಿರುತ್ತೇವೆಯೋ ಅಲ್ಲಿಯ ತನಕ ವಿದ್ಯಾಭ್ಯಾಸ ಹಾಗೂ ಸಂಪೂರ್ಣ ಆಗುವುದರ
ಕಡೆ, ಬೇಹದ್ದಿನ ವೈರಾಗ್ಯ ವೃತ್ತಿಯ ಕಡೆಗೆ ಗಮನ ಕೊಡುವುದನ್ನು ಮರೆತು ಬಿಡುತ್ತಾರೆ. ಬ್ರಹ್ಮಾ
ತಂದೆಯನ್ನು ನೋಡಿದ್ದಿರಲ್ಲವೆ, ಅಂತಿಮ ಸಂಪೂರ್ಣ ಕರ್ಮತೀತಾ ಸ್ಥಿತಿಯವರೆಗೆ ಸ್ವಯಂ ಪ್ರತೀ, ಸೇವೆಯ
ಪ್ರತಿ, ಬೇಹದ್ದಿನ ವೈರಾಗ್ಯ ವೃತ್ತಿಯ ಪ್ರತಿ ವಿದ್ಯಾರ್ಥಿ ಜೀವನದ ರೀತಿಯಿಂದ ಗಮನಕೊಟ್ಟು
ನಿಮಿತ್ತರಾಗಿ ಮಾಡಿ ತೋರಿಸಿದರು. ಆದ್ದರಿಂದ ಆದಿಯಿಂದ ಅಂತಿಮ ತನಕ ಧೈರ್ಯದಿಂದಿದ್ದು ಧೈರ್ಯ
ಕೊಡುವುದಕ್ಕೆ ನಿಮಿತ್ತರಾದರು. ತಂದೆಯ ನಂಬರ್ ವನ್ಸಹಯೋಗಕ್ಕೆ ಪಾತ್ರಧಾರರಾಗಿ ನಂಬರ್ವನ್
ಪ್ರಾಪ್ತಿಯನ್ನು ಪ್ರಾಪ್ತಿ ಮಾಡಿಕೊಂಡರು. ಭವಿಷ್ಯ ನಿಶ್ಚಿತವಾಗಿದ್ದರೂ ಹುಡುಗಾಟಿಕೆಯಲ್ಲಿ
ಬರಲಿಲ್ಲ. ಸದಾ ತನ್ನ ತೀವ್ರ ಪುರುಷಾರ್ಥದ ಅನುಭವವನ್ನು ಮಕ್ಕಳ ಮುಂದೆ ಅಂತಿಮದ ತನಕ
ಹೇಳುತ್ತಿದ್ದರು, ಸಹಯೋಗದ ಸಾಗರದಲ್ಲಿ ಈ ರೀತಿ ಸಮಾವೇಶವಾಗಿ ಈಗಲೂ ತಂದೆಯ ಸಮಾನ ಪ್ರತಿಯೊಬ್ಬ
ಮಗುವಿಗೂ ಅವ್ಯಕ್ತ ರೂಪದಿಂದಲೂ ಸಹಯೋಗ ಕೊಡುತ್ತಿದ್ದಾರೆ. ಇದಕ್ಕೆ ಒಂದು ಹೆಜ್ಜೆಯ ಧೈರ್ಯ ಹಾಗೂ
ಪದಮಾಗುಣ ಸಹಯೋಗಕ್ಕೆ ಪಾತ್ರರಾಗುವುದು ಎಂದು ಹೇಳಲಾಗುತ್ತದೆ.
ಬಾಪ್ದಾದಾ ನೋಡುತ್ತಿದ್ದರು - ಕೆಲವು ಮಕ್ಕಳು ಸಹಯೋಗಕ್ಕೆ ಪಾತ್ರರಾಗಿದ್ದರೂ ಸಹಯೋಗದಿಂದ
ವಂಚಿತರಾಗುತ್ತಾರೆ - ಏಕೆ? ಇದಕ್ಕೆ ಕಾರಣ ತಂದೆಯು ತಿಳಿಸಿದ್ದಾರೆ - ಧೈರ್ಯದ ವಿಧಿಯನ್ನು
ಮರೆತಿರುವುದು, ಅಭಿಮಾನ ಎಂದರೆ ಹುಡುಗಾಟಿಕೆ ಹಾಗೂ ಸ್ವಯಂ ಪ್ರತಿ ಗಮನದ ಕೊರತೆಯ ಕಾರಣದಿಂದಾಗಿದೆ.
ವಿಧಿಯಿಲ್ಲವೆಂದರೆ ವರದಾನದಿಂದ ವಂಚಿತರಾಗುತ್ತಾರೆ. ಸಾಗರನ ಮಕ್ಕಳಾಗಿದ್ದರೂ ಚಿಕ್ಕ-ಚಿಕ್ಕ
ಕೊಳಗಳಂತಾಗಿ ಬಿಡುತ್ತಾರೆ, ಹೇಗೆ ಕೊಳದ ನೀರು ನಿಂತಿರುತ್ತದೆ, ಹಾಗೆಯೇ ಪುರುಷಾರ್ಥದ ನಡುವೆ ನಿಂತು
ಬಿಡುತ್ತಾರೆ ಆದ್ದರಿಂದ ಒಮ್ಮೆ ಪರಿಶ್ರಮ ಪಡುವುದು, ಒಮ್ಮೆ ಮೋಜಿನಲ್ಲಿರುತ್ತಾರೆ. ಇಂದು ನೋಡಿದಾಗ
ಬಹಳ ಖುಷಿಯಲ್ಲಿ ಇರುತ್ತಾರೆ. ನಾಳೆ ನೋಡಿದರೆ ಚಿಕ್ಕ ಕಲ್ಲಿನ ಕಾರಣ ಅದನ್ನು ಪಕ್ಕಕ್ಕೆ
ಸರಿಸುವುದರಲ್ಲಿಯೇ ಪರಿಶ್ರಮ ಪಡುತ್ತಿರುತ್ತಾರೆ. ಬೆಟ್ಟವೇನಲ್ಲ. ಚಿಕ್ಕ ಕಲ್ಲಾಗಿರುತ್ತದೆಯಷ್ಟೆ.
ಮಹಾವೀರ ಪಾಂಡವ ಸೈನ್ಯ ಆಗಿದ್ದಾರೆ. ಆದರೆ ಚಿಕ್ಕ ಕವಡೆಯ ಸಮಾನ ಕಲ್ಲನ್ನು ಬೆಟ್ಟವನ್ನಾಗಿ
ಮಾಡಿಕೊಂಡು ಬಿಡುತ್ತಾರೆ. ಆ ಪರಿಶ್ರಮದಲ್ಲಿಯೇ ತೊಡಗಿರುತ್ತಾರೆ ಮತ್ತೆ ಬಹಳ ನಗಿಸುತ್ತಾರೆ.
ಒಂದುವೇಳೆ ಯಾರಾದರೂ ಇದು ಚಿಕ್ಕ ಕವಡೆಯಾಗಿದೆ ಎಂದು ಅವರಿಗೆ ಹೇಳುತ್ತಾರೆ ಆಗ ಹಾಸ್ಯದ ಮಾತು ಏನು
ಹೇಳುತ್ತಾರೆ? ನಿಮಗೇನು ಗೊತ್ತು, ನಿಮ್ಮ ಮುಂದೆ ಬಂದಿದ್ದರೆ ಗೊತ್ತಾಗುತ್ತಿತ್ತು. ಬಾಬಾ, ನೀವು
ನಿರಾಕಾರನಾಗಿದ್ದೀರಿ, ನಿಮಗೇನು ಗೊತ್ತು? ನಿಮಗಂತೂ ತಂದೆಯಿಂದ ಲಿಫ್ಟ್ ಸಿಕ್ಕಿದೆ ನಿಮಗೇನು
ಗೊತ್ತಾಗಬೇಕೆಂದು ಬ್ರಹ್ಮಾ ತಂದೆಗೂ ಹೇಳುತ್ತಾರೆ. ಹೀಗೆ ಬಹಳ ಒಳ್ಳೊಳ್ಳೆಯ ಮಾತುಗಳನ್ನು
ಆಡುತ್ತಾರೆ ಆದರೆ ಇದಕ್ಕೆ ಕಾರಣ ಚಿಕ್ಕ ತಪ್ಪಾಗಿದೆ. ಧೈರ್ಯ ಮಕ್ಕಳದು, ಸಹಯೋಗ ತಂದೆಯದು ಎಂಬ
ಮಾತನ್ನು ಮರೆತು ಬಿಡುತ್ತಾರೆ. ಇದು ಡ್ರಾಮಾದ ಒಂದು ಗುಹ್ಯ ಕರ್ಮದ ಗತಿಯಾಗಿದೆ. ಧೈರ್ಯ ಮಕ್ಕಳದು,
ಸಹಯೋಗ ತಂದೆಯದು. ಒಂದುವೇಳೆ ಈ ವಿಧಿ-ವಿಧಾನದಲ್ಲಿ ಬರಲಿಲ್ಲವೆಂದರೆ ಎಲ್ಲರೂ ವಿಶ್ವದ ಮೊದಲನೇ
ರಾಜನಾಗಿ ಬಿಡುತ್ತಿದ್ದರು. ಒಂದೇ ಸಮಯದಲ್ಲಿ ಎಲ್ಲರೂ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೇನು?
ನಂಬರ್ವಾರ್ ಆಗುವ ವಿಧಾನವು ಈ ವಿಧಿಯ ಕಾರಣದಿಂದಲೇ ಆಗುತ್ತದೆ. ಇಲ್ಲವೆಂದರೆ ಎಲ್ಲರೂ ತಂದೆಗೆ
ದೂರುತ್ತಾರೆ. ಬ್ರಹ್ಮಾ ತಂದೆಗೆ ಮೊದಲ ನಂಬರನ್ನು ಏಕೆ ಕೊಟ್ಟಿದ್ದಾರೆ? ನಮ್ಮನ್ನೂ ಮಾಡಬಹುದಲ್ಲವೆ?
ಆದ್ದರಿಂದ ಈ ಈಶ್ವರೀಯ ವಿಧಾನವು ನಿಯಮದ ಅನುಸಾರವಾಗಿ ಮಾಡಲ್ಪಟ್ಟಿದೆ. ನಿಮಿತ್ತ ಮಾತ್ರ ಈ ವಿಧಾನವು
ನಿಗಧಿತವಾಗಿದೆ - ಒಂದು ಹೆಜ್ಜೆ ಧೈರ್ಯದ್ದು, ಪದಮ ಹೆಜ್ಜೆ ಸಹಯೋಗದ್ದಾಗಿದೆ. ಸಹಯೋಗದ
ಸಾಗರನಿದ್ದರೂ ಈ ವಿಧಾನದ ವಿಧಿಯು ಡ್ರಾಮಾ ಅನುಸಾರ ನಿಗಧಿತಯಾಗಿದೆ. ಸಾಧ್ಯವಾದಷ್ಟು ಧೈರ್ಯವನ್ನಿಡಿ,
ಸಹಯೋಗವನ್ನು ಪಡೆಯಿರಿ. ಇದರಲ್ಲಿ ಕಡಿಮೆ ಮಾಡುವುದಿಲ್ಲ. ಒಂದು ವರ್ಷದ ಮಗುವಾಗಿರಬಹುದು, 50
ವರ್ಷದ ಮಗುವಾಗಿರಬಹುದು. ಸಮರ್ಪಿತ ಆಗಿರಬಹುದು, ಪ್ರವೃತ್ತಿಯಲ್ಲಿ ಇರುವವರಾಗಿರಬಹುದು, ಎಲ್ಲರಿಗೂ
ಅಧಿಕಾರವಂತೂ ಸಮಾನವಿದೆ ಆದರೆ ವಿಧಿಯಿಂದ ಪ್ರಾಪ್ತಿಯಿದೆ. ಈಶ್ವರೀಯ ವಿಧಾನವನ್ನು
ತಿಳಿದುಕೊಂಡಿರಲ್ಲವೆ?
ಧೈರ್ಯವನ್ನಂತೂ ಬಹಳ ಚೆನ್ನಾಗಿಟ್ಟಿದ್ದೀರಿ. ಇಲ್ಲಿಯ ತನಕ ತಲುಪಲು ಧೈರ್ಯವನ್ನೂ ಇಟ್ಟಿದ್ದೀರಿ,
ಆದ್ದರಿಂದಲೇ ತಲುಪಿದ್ದೀರಲ್ಲವೆ. ತಂದೆಯ ಮಕ್ಕಳಾಗುವುದರಲ್ಲಿಯೂ ಧೈರ್ಯವನ್ನು ಇಟ್ಟಿದ್ದೀರಿ
ಆದ್ದರಿಂದಲೇ ಆಗಿದ್ದೀರಿ. ಸದಾ ಧೈರ್ಯದ ವಿಧಿಯಿಂದ ಸಹಯೋಗಕ್ಕೆ ಪಾತ್ರರಾಗಿ ನಡೆಯುವುದು ಹಾಗೂ
ಕೆಲವೊಮ್ಮೆ ವಿಧಿಯಿಂದ ಸಿದ್ಧಿ ಪ್ರಾಪ್ತಿ ಮಾಡಿಕೊಳ್ಳುವುದರಲ್ಲಿ ಅಂತರ ಬಂದು ಬಿಡುತ್ತದೆ. ಸದಾ
ಪ್ರತಿಯೊಂದು ಹೆಜ್ಜೆಯಲ್ಲಿ ಧೈರ್ಯದಿಂದ ಸಹಯೋಗಕ್ಕೆ ಪಾತ್ರರಾಗಿ ನಂಬರ್ವನ್ ಬರುವಂತಹ ಲಕ್ಷ್ಯವನ್ನು
ಪ್ರಾಪ್ತಿ ಮಾಡಿಕೊಳ್ಳಿ. ನಂಬರ್ವನ್ ಒಬ್ಬ ಬ್ರಹ್ಮಾರವರಾದರು ಆದರೆ ಮೊದಲ ದರ್ಜೆಯಲ್ಲಿ ಇನ್ನೂ
ಸಂಖ್ಯೆಯಿದೆ, ಆದ್ದರಿಂದ ನಂಬರ್ವನ್ ಎಂದು ಹೇಳುತ್ತಾರೆ ತಿಳಿದುಕೊಂಡಿರಾ? ಮೊದಲ ದರ್ಜೆಯಲ್ಲಂತೂ
ಬರಬಹುದಲ್ಲವೆ. ಇದಕ್ಕೆ ನಂಬರ್ವನ್ ನಲ್ಲಿ ಬರುವುದು ಎಂದು ಹೇಳಲಾಗುತ್ತದೆ. ಇನ್ನೆಂದಾದರೂ ಮಕ್ಕಳ
ಹುಡುಗಾಟಿಕೆಯ ಲೀಲೆಯನ್ನು ತಿಳಿಸುತ್ತೇನೆ. ಬಹಳ ಚೆನ್ನಾಗಿ ಲೀಲೆಯನ್ನು ತೋರಿಸುತ್ತಾರೆ. ಬಾಪ್ದಾದಾ
ಸದಾ ಮಕ್ಕಳ ಲೀಲೆಯನ್ನು ನೋಡುತ್ತಲೇ ಇರುತ್ತಾರೆ. ಒಮ್ಮೆ ತೀವ್ರ ಪುರುಷಾರ್ಥದ ಲೀಲೆ ನೋಡಿದರೆ
ಇನ್ನೊಮ್ಮೆ ಹುಡುಗಾಟಿಕೆಯ ಲೀಲೆಯನ್ನು ನೋಡುತ್ತಾರೆ.
ಕರ್ನಾಟಕದವರ ವಿಶೇಷತೆ ಏನಾಗಿದೆ? ಪ್ರತಿಯೊಂದು ಜೋನಿನದೂ ತನ್ನದೇ ಆದ ವಿಶೇಷತೆ ಇರುತ್ತದೆ.
ಕರ್ನಾಟಕದವರದು ಬಹಳ ಒಳ್ಳೆಯ ಭಾಷೆ ಇದಾಗಿದೆ - ಭಾವನೆಯ ಭಾಷೆಯಲ್ಲಿ ಬುದ್ಧಿವಂತರಾಗಿದ್ದಾರೆ. ಹಾಗೆ
ನೋಡಿದರೆ ಹಿಂದಿಯನ್ನು ಕಡಿಮೆ ಅರ್ಥ ಮಾಡಿಕೊಳ್ಳುತ್ತಾರೆ ಆದರೆ ಕರ್ನಾಟಕದ ಭಾಷೆ ಭಾವನೆಯ
ಭಾಷೆಯಲ್ಲಿ ನಂಬರ್ವನ್. ಆದ್ದರಿಂದ ಭಾವನೆಯ ಫಲವು ಸದಾ ಸಿಗುತ್ತದೆ ಹಾಗೂ ಬೇರೆ ಏನನ್ನೂ
ಹೇಳದಿದ್ದರೂ ಸದಾ ಬಾಬಾ, ಬಾಬಾ ಎಂದು ಹೇಳುತ್ತಿರುತ್ತಾರೆ.ಈ ಭಾವನೆಯ ಶ್ರೇಷ್ಠ ಭಾಷೆಯನ್ನು
ತಿಳಿದಿದ್ದಾರೆ. ಭಾವನೆಯ ಧರಣಿಯಲ್ಲವೆ. ಒಳ್ಳೆಯದು.
ನಾಲ್ಕೂ ಕಡೆಯ ಧೈರ್ಯವಂತ ಮಕ್ಕಳಿಗೆ, ಸದಾ ತಂದೆಯ ಸಹಯೋಗವನ್ನು ಪ್ರಾಪ್ತಿ ಮಾಡಿಕೊಳ್ಳುವ
ಪಾತ್ರಧಾರಿ ಆತ್ಮಗಳಿಗೆ, ಸದಾ ವಿಧಾನವನ್ನು ತಿಳಿದು ವಿಧಿಯಿಂದ ಸಿದ್ಧಿಯನ್ನು ಪ್ರಾಪ್ತಿ
ಮಾಡಿಕೊಳ್ಳುವ ಶ್ರೇಷ್ಠಾತ್ಮಗಳಿಗೆ, ಸದಾ ಬ್ರಹ್ಮಾ ತಂದೆಯ ಸಮಾನ ಅಂತಿಮದ ತನಕ ವಿಧ್ಯಾಭ್ಯಾಸ ಹಾಗೂ
ಪುರುಷಾರ್ಥದ ವಿಧಿಯಲ್ಲಿ ನಡೆಯುವ ಶ್ರೇಷ್ಠ ಮಹಾನ್ ತಂದೆಯ ಸಮಾನ ಮಕ್ಕಳಿಗೆ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ
ಅವ್ಯಕ್ತ ಬಾಪ್ ದಾದಾರವರ ವಾರ್ತಾಲಾಪ:
1. ತಮ್ಮನ್ನು ಡಬಲ್ ಲೈಟ್ ಫರಿಶ್ತಾ ಎಂದು ಅನುಭವ ಮಾಡುವಿರಾ? ಡಬಲ್ ಲೈಟ್ ಸ್ಥಿತಿಯು ಫರಿಶ್ತಾತನದ
ಸ್ಥಿತಿಯಾಗಿದೆ.
ಫರಿಶ್ತಾ ಎಂದರೆ ಲೈಟ್ ಎಂದರ್ಥವಾಗಿದೆ. ಯಾವಾಗ ತಂದೆಯ ಮಕ್ಕಳಾದಿರಿ ಆಗ ತಮ್ಮೆಲ್ಲಾ ಹೊರೆಯನ್ನು
ತಂದೆಯವರಿಗೆ ಕೊಟ್ಟಿದ್ದೀರಲ್ಲವೇ? ಯಾವಾಗ ಹೊರೆಯಿಂದ ಹಗುರವಾಗಿ ಬಿಟ್ಟಿರಿ ಆಗಲೇ ಫರಿಶ್ತೆ ಆಗಿ
ಬಿಟ್ಟಿದ್ದೀರಿ. ತಂದೆಯು ಬರುವುದೇ ಹೊರೆಯನ್ನು ಸಮಾಪ್ತಿ ಮಾಡುವುದಕ್ಕಾಗಿ. ಅಂದಮೇಲೆ ಯಾವಾಗ
ತಂದೆಯು ಸಮಾಪ್ತಿ ಮಾಡುವವರು ಆಗಿದ್ದಾರೆ ಅಂದಾಗ ತಾವೆಲ್ಲರೂ ಹೊರೆಯನ್ನು ಸಮಾಪ್ತಿ ಮಾಡಿದಿರಲ್ಲವೆ?
ಯಾವುದೇ ಚಿಕ್ಕದಾದ ಗಂಟನ್ನೂ ಬಚ್ಚಿಟ್ಟಿಲ್ಲ ಅಲ್ಲವೆ? ಎಲ್ಲವನ್ನೂ ಕೊಟ್ಟಿದಿರಾ ಅಥವಾ ಸಮಯದಲ್ಲಿ
ಇರಬೇಕೆಂದು ಸ್ವಲ್ಪ ಸಲ್ಪ ಇಟ್ಟುಕೊಂಡಿದ್ದೀರಾ? ಸ್ವಲ್ಪ-ಸ್ವಲ್ಪ ಹಳೆಯ ಸಂಸ್ಕಾರ ಇದೆಯೋ ಅಥವಾ ಅದೂ
ಸಮಾಪ್ತಿ ಆಗಿ ಬಿಟ್ಟಿದೆಯೇ? ಹಳೆಯ ಸ್ವಭಾವ ಅಥವಾ ಹಳೆಯ ಸಂಸ್ಕಾರ - ಇದೂ ಸಹ ಖಜಾನೆ ಆಗಿದೆಯಲ್ಲವೆ.
ಇದನ್ನೂ ಕೊಟ್ಟಿದ್ದೀರಾ? ಒಂದು ವೇಳೆ ಸ್ವಲ್ಪವೇನಾನಾದರೂ ಉಳಿದುಕೊಂಡಿದೆಯೆಂದರೆ ಮೇಲಿಂದ (ಶ್ರೇಷ್ಠ
ಮಟ್ಟ) ಕೆಳಗೆ ತೆಗೆದುಕೊಂಡು ಬರುತ್ತದೆ, ಫರಿಶ್ತಾ ಆಗಿರುತ್ತಾ ಹಾರುವ ಕಲೆಯ ಅನುಭವ ಮಾಡುವುದಕ್ಕೆ
ಬಿಡುವುದಿಲ್ಲ. ಕೆಲವೊಮ್ಮೆ ಶ್ರೇಷ್ಠವಾದ ಅನುಭವವಿದ್ದರೆ, ಕೆಲವೊಮ್ಮೆ ಕೆಳಗೆ ಕರೆ ತರುತ್ತದೆ.
ಫರಿಶ್ತಾ ಅರ್ಥಾತ್ ಅಂಶದಷ್ಟೂ ರಾವಣನ ಆಸ್ತಿಯಿರಬಾರದು. ಹಳೆಯ ಸ್ವಭಾವ ಅಥವಾ ಸಂಸ್ಕಾರವು ಬರುತ್ತದೆ
ಅಲ್ಲವೆ? ಹೇಳುತ್ತೀರಲ್ಲವೆ - ನಾವಂತು ಬಯಸುವುದಿಲ್ಲ ಆದರೆ ಆಗಿ ಬಿಟ್ಟಿತು, ಮಾಡಿ ಬಿಟ್ಟೆವು ಅಥವಾ
ಆಗಿ ಬಿಡುತ್ತದೆ. ಅಂದಾಗ ಇದರಿಂದ ಸಿದ್ಧವಾಗುತ್ತದೆ – ತಮ್ಮ ಬಳಿ ಚಿಕ್ಕದಾದ ಹಳೆಯ ಗಂಟನ್ನು
ಇಟ್ಟುಕೊಂಡಿದ್ದೀರಿ, ಕೊಳಕಿನ ಗಂಟಿದೆ. ಅಂದಮೇಲೆ ಸದಾಕಾಲಕ್ಕಾಗಿ ಫರಿಶ್ತೆ ಆಗುವುದೇ ಬ್ರಾಹ್ಮಣ
ಜೀವನ ಆಗಿದೆ. ಹಳೆಯದನ್ನು ಸಮಾಪ್ತಿ ಮಾಡಿದಿರಿ, ಹಳೆಯ ಖಾತೆಯನ್ನು ಸಮಾಪ್ತಿ ಮಾಡಿ ಬಿಟ್ಟಿರಿ, ಈಗ
ಹೊಸ ಮಾತು, ಹೊಸ ಖಾತೆಯಾಗಿದೆ. ಒಂದುವೇಳೆ ಹಳೆಯ ಸಾಲವು ಸ್ವಲ್ಪವಿದ್ದರೂ ಸದಾಕಾಲಕ್ಕಾಗಿ ಮಾಯೆಯ
ಬಡ್ಡಿ ಏರುತ್ತಿರುತ್ತದೆ ಏಕೆಂದರೆ ಸಾಲವನ್ನು ಬಡ್ಡಿ ಎಂದು ಹೇಳಲಾಗುತ್ತದೆ. ಆದ್ದರಿಂದ ಖಾತೆಯನ್ನೇ
ಸಮಾಪ್ತಿ ಮಾಡಿರಿ. ಹೊಸ ಜೀವನವು ಸಿಕ್ಕಿದೆ ಅಂದಮೇಲೆ ಹಳೆಯದೆಲ್ಲವೂ ಸಮಾಪ್ತಿ.
2. ಸದಾ 'ವಾಹ್-ವಾಹ್'ನ ಹಾಡನ್ನು ಹಾಡುವವರಲ್ಲವೇ? 'ಅಯ್ಯೋ ಅಯ್ಯೋ' ಎನ್ನುವದಂತು ಸಮಾಪ್ತಿಯಾಯಿತು
ಮತ್ತು ಮನಸ್ಸಿನಲ್ಲಿ 'ವಾಹ್-ವಾಹ್'ನ ಹಾಡನ್ನು ಸದಾ ಹಾಡುತ್ತಾ ಇರುತ್ತೀರಿ. ಯಾವುದೇ ಶ್ರೇಷ್ಠ
ಕರ್ಮವನ್ನು ಮಾಡುತ್ತೀರೆಂದರೆ ಮನಸ್ಸಿನಿಂದ ಯಾವ ಶಬ್ಧವು ಬರುತ್ತದೆ? ವಾಹ್ ನನ್ನ ಶ್ರೇಷ್ಠ ಕರ್ಮವೇ!
ಅಥವ ವಾಹ್ ಶ್ರೇಷ್ಠ ಕರ್ಮವನ್ನು ಕಲಿಸುವವರೇ! ಅಥವ ವಾಹ್ ಶ್ರೇಷ್ಠ ಸಮಯ, ಶ್ರೇಷ್ಠ ಕರ್ಮವನ್ನು
ಮಾಡಿಸುವವರೇ! ಹೀಗೆ ಸದಾ 'ವಾಹ್ - ವಾಹ್ !' ಹಾಡು ಹಾಡುವಂತಹ ಆತ್ಮರಾಗಿದ್ದೀರಿ ಅಲ್ಲವೇ?
ಕೆಲವೊಮ್ಮೆ ಮರೆತೂ ಸಹ 'ಅಯ್ಯೋ' ಎಂದು ಬರುವುದಿಲ್ಲವೇ? ಅಯ್ಯೋ ಇದೇನಾಯಿತು ಎನ್ನುವುದಿರಬಾರದು.
ಯಾವುದೇ ದುಃಖಮಯ ದೃಶ್ಯವನ್ನು ನೋಡುವಾಗಲೂ 'ಅಯ್ಯೋ' ಶಬ್ದವು ಬರಬಾರದು. ನೆನ್ನೆ 'ಅಯ್ಯೋ-ಅಯ್ಯೋ'
ಎನ್ನುತ್ತಿದ್ದಿರಿ ಮತ್ತು ಇಂದು 'ವಾಹ್-ವಾಹ್' ಹಾಡನ್ನು ಹಾಡುತ್ತೀರಿ, ಎಷ್ಟೊಂದು ಅಂತರವಾಯಿತು!
ಇದು ಯಾರ ಶಕ್ತಿಯಾಗಿದೆ? ತಂದೆಯ ಶಕ್ತಿಯೇ ಅಥವಾ ಡ್ರಾಮಾದ ಶಕ್ತಿಯೇ? (ತಂದೆಯವರದು) ತಂದೆಯವರೂ ಸಹ
ಡ್ರಾಮಾದ ಕಾರಣದಿಂದಲೇ ಬಂದರಲ್ಲವೆ. ಅಂದಾಗ ಡ್ರಾಮಾ ಸಹ ಶಕ್ತಿಶಾಲಿ ಆಗಿದೆ. ಡ್ರಾಮಾದಲ್ಲಿ ಏನಾದರೂ
ಪಾತ್ರವಿಲ್ಲದಿದ್ದರೆ ತಂದೆಯೂ ಸಹ ಏನು ಮಾಡುತ್ತಾರೆ. ತಂದೆಯೂ ಶಕ್ತಿಶಾಲಿ ಹಾಗೂ ಡ್ರಾಮಾ ಸಹ
ಶಕ್ತಿಶಾಲಿ ಆಗಿದೆ. ಅಂದಮೇಲೆ ಎರಡರ ಬಗ್ಗೆಯೂ ಹಾಡುಗಳನ್ನು ಹಾಡುತ್ತಿರಿ - ವಾಹ್ ಡ್ರಾಮಾ ವಾಹ್!
ಯಾವುದು ಸ್ವಪ್ನದಲ್ಲಿಯೂ ಇರಲಿಲ್ಲ, ಅದು ಸಾಕಾರವಾಯಿತು. ಮನೆಯಲ್ಲಿ ಕುಳಿತಿದ್ದಂತೆಯೇ ಎಲ್ಲವೂ
ಸಿಕ್ಕಿತು. ಮನೆಯಲ್ಲಿ ಕುಳಿತಿದ್ದಂತೆಯೇ ಭಾಗ್ಯವು ಸಿಕ್ಕಿತು. ಇದಕ್ಕೇ ಡೈಮಂಡ್ ಲಾಟರಿ ಎಂದು
ಹೇಳಲಾಗುತ್ತದೆ.
3. ಸಂಗಮಯುಗಿ ಸ್ವರಾಜ್ಯ ಅಧಿಕಾರಿ ಆತ್ಮರು ಆಗಿದ್ದೀರಲ್ಲವೇ? ಪ್ರತಿಯೊಂದು ಕರ್ಮೇಂದ್ರಿಯದ ಮೇಲೆ
ತಮ್ಮ ರಾಜ್ಯಾಡಳಿತವಿದೆಯೇ? ಯಾವುದೇ ಕರ್ಮೇಂದ್ರಿಯವೂ ಮೋಸವನ್ನಂತು ಮಾಡುವುದಿಲ್ಲವೇ? ಕೆಲವೊಮ್ಮೆ
ಸಂಕಲ್ಪದಲ್ಲಿಯೂ ಸೋಲುಂಟಾಗುವುದಿಲ್ಲವೇ? ಕೆಲವೊಮ್ಮೆ ವ್ಯರ್ಥ ಸಂಕಲ್ಪಗಳು ನಡೆಯುತ್ತದೆಯೇ? 'ಸ್ವರಾಜ್ಯ
ಅಧಿಕಾರಿ ಆತ್ಯರಾಗಿದ್ದೇವೆ' ಈ ನಶೆ ಮತ್ತು ನಿಶ್ಚಯದಿಂದ ಸದಾ ಶಕ್ತಿಶಾಲಿ ಆಗಿರುತ್ತಾ
ಮಾಯಾಜೀತನಿಂದ ಜಗತ್ ಜೀತರು ಆಗಿ ಬಿಡುತ್ತೀರಿ. ಸ್ವರಾಜ್ಯ ಅಧಿಕಾರಿ ಆತ್ಮರು ಸಹಯೋಗಿ, ನಿರಂತರ
ಯೋಗಿಗಳೂ ಆಗಬಹುದು. ಸ್ವರಾಜ್ಯ ಅಧಿಕಾರಿ ನಶೆ ಮತ್ತು ನಿಶ್ಚಯದಿಂದ ಮುಂದೆ ಸಾಗುತ್ತಾ ನಡೆಯಿರಿ.
ಮಾತೆಯರು ನಷ್ಟಮೋಹರು ಆಗಿದ್ದೀರಾ ಅಥವಾ ಮೋಹವಿದೆಯೇ? ಪಾಂಡವರಲ್ಲಿ ಕೆಲವೊಮ್ಮೆ ಕ್ರೋಧ ಅಂಶವಾದ
ಆವೇಶವು ಬರುತ್ತದೆಯೇ? ಕೆಲವೊಮ್ಮೆ ಯಾರಾದರೂ ಏರುಪೇರು ಮಾಡಿದರೆ ಕ್ರೋಧ ಬರುತ್ತದೆಯೇ? ಸ್ವಲ್ಪ
ಸೇವೆಯ ಅವಕಾಶವು ಕಡಿಮೆ ಸಿಕ್ಕಿತು, ಅನ್ಯರಿಗೆ ಹೆಚ್ಚಾಗಿ ಸಿಕ್ಕಿತೆಂದರೆ, ಸಹೋದರಿಯರ ಮೇಲೆ
ಸ್ವಲ್ಪ ಆವೇಶ ಬರುತ್ತದೆಯೇ - ಇದೇನು ಮಾಡುತ್ತಾರೆ? ಎಂದು. ಪರೀಕ್ಷೆಯು ಬರುತ್ತದೆ ನೋಡಿ ಏಕೆಂದರೆ
ಸ್ವಲ್ಪ ದೇಹಾಭಿಮಾನ ಬಂದರೂ ಸಹ, ಅದರಲ್ಲಿ ಆವೇಶ ಅಥವ ಕ್ರೋಧವು ಸಹಜವಾಗಿ ಬಂದು ಬಿಡುತ್ತದೆ,
ಆದ್ದರಿಂದ ಸದಾ ಸ್ವರಾಜ್ಯ ಅಧಿಕಾರಿ ಅರ್ಥಾತ್ ಸದಾಕಾಲದ ನಿರಹಂಕಾರಿ ಆಗಿರುವುದು. ಹೀಗೆ ಇರುತ್ತಾ
ಸೇವಾಧಾರಿ ಆಗಿರುವವರು, ಮೋಹದ ಬಂಧನವೂ ಸಮಾಪ್ತಿಯಾಗಿರಬೇಕು. ಒಳ್ಳೆಯದು.
ವರದಾನ:
ತಂದೆಯ ಸಮಾನ ತಮ್ಮ ಪ್ರತೀ ಮಾತು ಅಥವಾ ಕರ್ಮದ ನೆನಪಾರ್ಥವನ್ನು ಮಾಡಿಕೊಳ್ಳುವ ಹೃದಯ ಸಿಂಹಾಸನ
ಅಧಿಕಾರಿಯಿಂದ ರಾಜ್ಯ ಸಿಂಹಾಸನ ಅಧಿಕಾರಿ ಭವ.
ತಂದೆಯ ಮೂಲಕ ಯಾವುದೆಲ್ಲಾ
ಮಹಾವಾಕ್ಯಗಳು ಬರುತ್ತವೆಯೋ, ಅದು ನೆನಪಾರ್ಥ ಆಗಿ ಬಿಡುತ್ತದೆ. ಅದೇ ರೀತಿ ಯಾರು ತಂದೆಯ
ಸಮಾನರಿದ್ದಾರೆಯೋ ಅವರು ಯಾವುದೆಲ್ಲಾ ಮಾತುಗಳನ್ನಾಡುತ್ತಾ, ಅದು ಎಲ್ಲರ ಹೃದಯದಲ್ಲಿ ಸಮಾವೇಶ
ಆಗುತ್ತದೆ ಅರ್ಥಾತ್ ನೆನಪಾರ್ಥ ಆಗಿ ಬಿಡುತ್ತದೆ. ಅವರು ಯಾವ ಆತ್ಮನ ಬಗ್ಗೆ ಸಂಕಲ್ಪ ಮಾಡುವರು, ಅದು
ಅವರ ಹೃದಯದಕ್ಕೆ ನಾಟುತ್ತದೆ. ಅವರ ಎರಡು ಶಬ್ದಗಳೂ ಸಹ ಹೃದಯಕ್ಕೆ ಮಾರ್ಗ (ಸಮಾಧಾನ)
ಕೊಡುವಂತದ್ದಾಗಿರುತ್ತದೆ. ಅವರ ಸಮೀಪತೆಯ ಅನುಭವವಾಗುತ್ತದೆ. ಆದ್ದರಿಂದ ಅವರನ್ನು ಎಲ್ಲರೂ
ನಮ್ಮವರೆಂದು ತಿಳಿಯುತ್ತಾರೆ. ಇಂತಹ ಮಕ್ಕಳೇ ಹೃದಯ ಸಿಂಹಾಸನ ಅಧಿಕಾರಿಯಿಂದ ರಾಜ್ಯ
ಸಿಂಹಾಸನಾಧಿಕಾರಿ ಆಗುತ್ತಾರೆ.
ಸ್ಲೋಗನ್:
ತಮ್ಮ ಹಾರುವ ಕಲೆಯ ಮೂಲಕ ಪ್ರತಿಯೊಂದು ಸಮಸ್ಯೆಯನ್ನೂ ಸಹ ಯಾವುದೇ ಅಡಚಣೆಯಿಲ್ಲದೆ ಪಾರು ಮಾಡುವಂತಹ
ಹಾರುವ ಪಕ್ಷಿ ಆಗಿರಿ.
21-03-21 ಸಹಯೋಗದ
ಸಾಗರನಿಂದ ಪದಮದಷ್ಟು ಸಹಯೋಗ ತೆಗೆದುಕೊಳ್ಳುವ ವಿಧಿ ರಿವೈಜ್ 22-11-87
1. ಬ್ರಾಹ್ಮಣ ಆತ್ಮರು ಯಾವ ಆಧಾರದಿಂದ ತಂದೆಯ ಸಹಯೋಗಕ್ಕೆ ಪಾತ್ರರಾಗಿದ್ದಾರೆ?
2. ಯಾವ ವಿಧಿಯು ತಂದೆಯ ಪದಮದಷ್ಟು ಸಹಯೋಗದ ಅಧಿಕಾರವನ್ನು ಪ್ರಾಪ್ತಿ ಮಾಡಿಸುತ್ತದೆ?
3. ಬ್ರಾಹ್ಮಣ ಜನ್ಮದ ಮೊಟ್ಟ ಮೊದಲನೆಯ ಸಾಹಸದ ಧಾರಣೆ ಯಾವುದು?
4. ಕೆಲವು ಮಕ್ಕಳು ಸಹಯೋಗದ ಪಾತ್ರರಾಗಿದ್ದರೂ ಏಕೆ ವಂಚಿತರಾಗುತ್ತಾರೆ?
5. ಸಾಹಸ ಮಕ್ಕಳದ್ದು ಸಹಯೋಗ ತಂದೆಯದ್ದು. ಈ ವಿಧಿಯು ವಿಧಾನದಲ್ಲಿ ಇಲ್ಲವೆಂದರೆ ಏನಾಗುತ್ತದೆ?
6. ಸದಾ ಸ್ವರಾಜ್ಯ ಅಧಿಕಾರಿ ಎಂದರೇನು?
7. ಸದಾ ಫರಿಶ್ತೆಯಾಗುವುದೇ ಏನಾಗಿದೆ?
8. ಡೈಮಂಡ್ ಲಾಟರಿ ಎಂದು ಯಾವುದಕ್ಕೆ ಹೇಳಲಾಗುತ್ತದೆ?
9. ಯಾವ ಸ್ಮೃತಿಯಿಂದ ನಿರ್ಬಲದಿಂದ ಸಮರ್ಥರಾಗುತ್ತೇವೆ ಮತ್ತು ಯಾವ ಚಾಲೆಂಜ್
ಮಾಡುತ್ತೇವೆ?
10. ಪ್ರತಿ ಸಮಸ್ಯೆಯನ್ನು ಯಾವುದೇ ಅಡೆ ತಡೆಗಳಿಲ್ಲದೆ ಪಾರು ಮಾಡಲು ಹೇಗೆ ಸಾಧ್ಯ?