04.03.21 Morning Kannada Murli Om Shanti
BapDada Madhuban
"ಮಧುರಾತಿ ಮಧುರ
ಸೇವಾಧಾರಿ ಮಕ್ಕಳೇ - ಸೇವೆಯಲ್ಲಿ ವಿಘ್ನವಾಗುವಂತಹ ಯಾವುದೇ ಕಾರ್ಯ ಮಾಡಬಾರದು"
ಪ್ರಶ್ನೆ:
ಸಂಗಮಯುಗದಲ್ಲಿ
ನೀವು ಮಕ್ಕಳು ಬಹಳ ಅಕ್ಯುರೇಟ್ ಆಗಬೇಕಾಗಿದೆ, ಯಾರು ಆಕ್ಯುರೇಟ್ ಆಗಲು ಸಾಧ್ಯ?
ಉತ್ತರ:
1. ಯಾರು ಸತ್ಯ ತಂದೆಯ ಜೊತೆ ಸದಾ ಸತ್ಯವಾಗಿರುತ್ತಾರೆ, ಒಳಗೊಂದು-ಹೊರಗೊಂದು ಇರುವುದಿಲ್ಲವೋ,
2.ಯಾರು ಶಿವ ತಂದೆಯ ವಿನಃ ಅನ್ಯ ಮಾತುಗಳಲ್ಲಿ ಹೋಗುವುದಿಲ್ಲವೋ 3.ಪ್ರತೀ ಹೆಜ್ಜೆಯಲ್ಲಿ
ಶ್ರೀಮತದಂತೆ ನಡೆಯುವರೋ, ಯಾವುದೋ ತಪ್ಪು ಮಾಡುವುದಿಲ್ಲವೋ ಅವರೇ ಆಕ್ಯುರೇಟ್ ಆಗುತ್ತಾರೆ.
ಗೀತೆ:
ಬಾಲ್ಯದ ದಿನಗಳನ್ನು ಮರೆಯಬಾರದು......
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳೇ ಗೀತೆಯ ಎರಡು ಶಬ್ಧಗಳನ್ನು ಕೇಳಿದಿರಿ. ಇದಂತೂ ನಿಶ್ಚಯ
ಮಾಡಿಕೊಳ್ಳುತ್ತೀರಿ - ಬೇಹದ್ದಿನ ತಂದೆಯು ಈಗ ಬೇಹದ್ದಿನ ಸುಖದ ಆಸ್ತಿಯನ್ನು ಕೊಡುತ್ತಿದ್ದಾರೆ.
ಇಂತಹ ತಂದೆಗೆ ನಾವು ಮಕ್ಕಳಾಗಿದ್ದೇವೆ ಅಂದಮೇಲೆ ತಂದೆಯ ಶ್ರೀಮತದನುಸಾರವೂ ನಡೆಯಬೇಕಾಗಿದೆ,
ಇಲ್ಲವೆಂದರೆ ಏನಾಗುವುದು! ಈಗೀಗ ನಗುತ್ತೀರಿ, ನಾವು ಮಹಾರಾಜ-ಮಹಾರಾಣಿ ಆಗಬೇಕೆಂದು ಹೇಳುತ್ತೀರಿ,
ಅಥವಾ ಒಂದುವೇಳೆ ಕೈ ಬಿಟ್ಟರೆ ಮತ್ತೆ ಹೋಗಿ ಸಾಧಾರಣ ಪ್ರಜೆಯಾಗುತ್ತೀರಿ. ಸ್ವರ್ಗದಲ್ಲಂತೂ ಖಂಡಿತ
ಬರುತ್ತೀರಿ ಆದರೆ ಎಲ್ಲರೂ ಸ್ವರ್ಗದಲ್ಲಿ ಬರುತ್ತಾರೆ ಎಂದೂ ಅಲ್ಲ, ಯಾರು ಸತ್ಯ-ತ್ರೇತಾಯುಗದಲ್ಲಿ
ಬರುವವರಿದ್ದಾರೆಯೋ ಅವರೇ ಬರುತ್ತಾರೆ. ಸತ್ಯ-ತ್ರೇತಾಯುಗ ಎರಡನ್ನೂ ಸೇರಿಸಿ ಸ್ವರ್ಗವೆಂದು
ಹೇಳಲಾಗುತ್ತದೆ. ಆದರೂ ಯಾರು ಮೊಟ್ಟ ಮೊದಲು ಹೊಸ ಪ್ರಪಂಚದಲ್ಲಿ ಬರುತ್ತಾರೆಯೋ ಅವರು ಒಳ್ಳೆಯ
ಸುಖವನ್ನು ಪಡೆಯುತ್ತಾರೆ ಬಾಕಿ ಯಾರು ಕೊನೆಯಲ್ಲಿ ಬರುವರೋ ಅವರು ಬಂದು ಜ್ಞಾನವನ್ನು
ತೆಗೆದುಕೊಳ್ಳುವುದಿಲ್ಲ. ಜ್ಞಾನವನ್ನು ಪಡೆಯುವವರು ಸತ್ಯ-ತ್ರೇತಾಯುಗದಲ್ಲಿ ಬರುತ್ತಾರೆ.
ಉಳಿದವರಂತೂ ರಾವಣ ರಾಜ್ಯದಲ್ಲಿ ಬರುತ್ತಾರೆ. ಅವರು ಅಲ್ಪಸ್ವಲ್ಪ ಸುಖವನ್ನು ಪಡೆಯುತ್ತಾರೆ.
ಸತ್ಯ-ತ್ರೇತಾಯುಗದಲ್ಲಿ ಬಹಳ ಸುಖವಿರುತ್ತದೆಯಲ್ಲವೆ ಆದ್ದರಿಂದ ಪುರುಷಾರ್ಥ ಮಾಡಿ ತಂದೆಯಿಂದ
ಬೇಹದ್ದಿನ ಸುಖದ ಆಸ್ತಿಯನ್ನು ಪಡೆದುಕೊಳ್ಳಬೇಕು ಮತ್ತು ಈ ಮಹಾನ್ ಖುಷಿಯ ಸಂದೇಶವನ್ನೂ ಬರೆಯಿರಿ,
ಕಾರ್ಡುಗಳನ್ನು ಮುದ್ರಿಸುವಾಗಲೂ ಇದನ್ನು ಬರೆಯಬೇಕು – ಶ್ರೇಷ್ಠಾತಿ ಶ್ರೇಷ್ಠ ಬೇಹದ್ದಿನ ತಂದೆಯ
ಖುಷಿಯ ಸಂದೇಶ. ಪ್ರದರ್ಶನಿಯಲ್ಲಿಯೂ ಹೊಸ ಪ್ರಪಂಚವು ಹೇಗೆ ಸ್ಥಾಪನೆಯಾಗುತ್ತದೆ ಎಂದು ನೀವು
ತೋರಿಸುತ್ತೀರಿ ಅಂದಾಗ ಇದನ್ನು ಸ್ಪಷ್ಟ ಮತ್ತು ದೊಡ್ಡ-ದೊಡ್ಡ ಅಕ್ಷರಗಳಲ್ಲಿ ಬರೆಯಬೇಕು.
ಬೇಹದ್ದಿನ ತಂದೆಯು ಜ್ಞಾನ ಸಾಗರ, ಪತಿತ-ಪಾವನ, ಸದ್ಗತಿದಾತ, ಗೀತೆಯ ಭಗವಂತ ಶಿವನು ಹೇಗೆ
ಬ್ರಹ್ಮಾಕುಮಾರ-ಕುಮಾರಿಯರ ಮೂಲಕ ಪುನಃ ಕಲಿಯುಗೀ, ಸಂಪೂರ್ಣ ವಿಕಾರಿ ಭ್ರಷ್ಟಾಚಾರಿ ಪತಿತ
ಪ್ರಪಂಚವನ್ನು, ಸತ್ಯಯುಗೀ ಸಂಪೂರ್ಣ ನಿರ್ವಿಕಾರಿ ಪಾವನ ಶ್ರೇಷ್ಟಾಚಾರಿ ಪ್ರಪಂಚವನ್ನಾಗಿ
ಮಾಡುತ್ತಿದ್ದಾರೆ. ಆ ಖುಷಿಯ ಸಂದೇಶವನ್ನು ಬಂದು ಕೇಳಿರಿ ಅಥವಾ ತಿಳಿದುಕೊಳ್ಳಿ. ಸರ್ಕಾರದೊಂದಿಗೂ
ನಿಮ್ಮದು ಇದು ಪ್ರತಿಜ್ಞೆಯಿದೆ - ನಾವು ಭಾರತದಲ್ಲಿ ಪುನಃ ಸತ್ಯಯುಗೀ ಶ್ರೇಷ್ಠಾಚಾರಿ 100%
ಪವಿತ್ರತೆ, ಸುಖ, ಶಾಂತಿಯ ದೈವೀ ಸ್ವರಾಜ್ಯವನ್ನು ಹೇಗೆ ಸ್ಥಾಪನೆ ಮಾಡುತ್ತಿದ್ದೇವೆ ಮತ್ತು ಈ
ವಿಕಾರಿ ಪ್ರಪಂಚದ ವಿನಾಶವು ಹೇಗಾಗುವುದು ಎಂದು ಬಂದು ತಿಳಿದುಕೊಳ್ಳಿ. ಹೀಗೆ ಸ್ಪಷ್ಟವಾಗಿ
ಬರೆಯಬೇಕು. ಕಾರ್ಡುಗಳಲ್ಲಿಯೂ ಈ ರೀತಿ ಬರೆಯಿರಿ - ಯಾವುದು ಮನುಷ್ಯರಿಗೆ ಚೆನ್ನಾಗಿ ಅರ್ಥವಾಗಲಿ.
ಈ ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ಕಲ್ಪದ ಹಿಂದಿನ ತರಹ ಡ್ರಾಮಾ ಪ್ಲಾನನುಸಾರ ಪರಮಪಿತ
ಪರಮಾತ್ಮ ಶಿವನ ಶ್ರೀಮತದಂತೆ ಸಹಜ ರಾಜಯೋಗ ಮತ್ತು ಪವಿತ್ರತೆಯ ಬಲದಿಂದ, ತಮ್ಮ ತನು-ಮನ-ಧನದಿಂದ
ಭಾರತವನ್ನು ಇಂತಹ ಶ್ರೇಷ್ಠಾಚಾರಿ ಪಾವನವನ್ನಾಗಿ ಹೇಗೆ ಮಾಡುತ್ತಿದ್ದಾರೆ ಎಂಬುದನ್ನು ಬಂದು
ತಿಳಿದುಕೊಳ್ಳಿ. ಸ್ಪಷ್ಟ ಮಾಡಿ ಕಾರ್ಡುಗಳಲ್ಲಿ ಮುದ್ರಿಸಬೇಕು. ಯಾವುದು ಎಂತಹವರಿಗಾದರೂ
ಅರ್ಥವಾಗುವಂತಿರಲಿ. ಈ ಬ್ರಹ್ಮಾಕುಮಾರ-ಕುಮಾರಿಯರು ಶಿವ ತಂದೆಯ ಮತದಂತೆ ರಾಮ ರಾಜ್ಯವನ್ನು ಸ್ಥಾಪನೆ
ಮಾಡುತ್ತಿದ್ದಾರೆ. ಯಾವುದು ಮಹಾತ್ಮ ಗಾಂಧೀಜಿಯ ಬಯಕೆಯೂ ಆಗಿತ್ತು, ಪತ್ರಿಕೆಗಳಲ್ಲಿ ಹೀಗೆ ಪೂರ್ಣ
ನಿಮಂತ್ರಣವಿರಲಿ. ಇದನ್ನು ಅವಶ್ಯವಾಗಿ ತಿಳಿಸಬೇಕಾಗಿದೆ - ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು
ತಮ್ಮ ತನು-ಮನ-ಧನದಿಂದ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಇದರಿಂದ ಇವರು ಯಾವುದೇ ಭಿಕ್ಷೆ ಅಥವಾ
ಶುಲ್ಕವನ್ನು ಕೇಳುತ್ತಾರೆ ಎಂದು ಮನುಷ್ಯರು ಎಂದೂ ತಿಳಿದುಕೊಳ್ಳಬಾರದು. ಪ್ರಪಂಚದಲ್ಲಂತೂ ಎಲ್ಲವೂ
ಡೊನೇಷನ್ ಮೇಲೆಯೇ ನಡೆಯುತ್ತದೆ. ಇಲ್ಲಿ ನೀವು ಹೇಳುತ್ತೀರಿ - ನಾವು ಬಿ.ಕೆ.ಗಳು ನಮ್ಮದೇ
ತನು-ಮನ-ಧನದಿಂದ ಮಾಡುತ್ತಿದ್ದೇವೆ. ನೀವು ಸ್ವಯಂ ಸ್ವರಾಜ್ಯವನ್ನು ಪಡೆಯುತ್ತೀರಿ ಅಂದಮೇಲೆ
ಅವಶ್ಯವಾಗಿ ತಮ್ಮದೇ ಖರ್ಚು ಮಾಡುತ್ತೀರಿ. ಯಾರು ಪರಿಶ್ರಮ ಪಡುವರೋ ಅವರಿಗೇ 21 ಜನ್ಮಗಳಿಗಾಗಿ
ಆಸ್ತಿಯು ಸಿಗುತ್ತದೆ. ಭಾರತವಾಸಿಗಳೇ 21 ಜನ್ಮಗಳಿಗಾಗಿ ಶ್ರೇಷ್ಠಾಚಾರಿ, ಡಬಲ್
ಕಿರೀಟಧಾರಿಗಳಾಗುತ್ತೀರಿ. ಈ ಲಕ್ಷ್ಮೀ-ನಾರಾಯಣರು ಡಬಲ್ ಕಿರೀಟಧಾರಿಗಳಲ್ಲವೆ. ಈಗಂತೂ ಯಾವುದೇ
ಕಿರೀಟವಿಲ್ಲ ಅಂದಾಗ ಇದನ್ನು ಚೆನ್ನಾಗಿ ತಿಳಿಸಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ
ರೀತಿಯಾಗಿ ಬರೆಯಿರಿ ಅದರಿಂದ ಈ ಬ್ರಹ್ಮಾಕುಮಾರ-ಕುಮಾರಿಯರು ಏನು ಮಾಡುತ್ತಿದ್ದಾರೆಂಬುದು ಅವರಿಗೆ
ಅರ್ಥವಾಗಲಿ. ದೊಡ್ಡ-ದೊಡ್ಡವರಿಂದ ಕೇಳಿದಾಗ ಮತ್ತೆ ಬಡವರ ಮಾತನ್ನೂ ಹೇಳುತ್ತಾರೆ. ಇಲ್ಲವೆಂದರೆ
ಬಡವರ ಮಾತನ್ನು ಯಾರೂ ಕೇಳುವುದಿಲ್ಲ. ಸಾಹುಕಾರರ ಕೂಗು ಬಹು ಬೇಗನೆ ಕೇಳಿ ಬರುತ್ತದೆ. ನೀವು ಸಿದ್ಧ
ಮಾಡಿ ತಿಳಿಸುತ್ತೀರಿ - ನಾವು ವಿಶೇಷವಾಗಿ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ.
ಉಳಿದೆಲ್ಲರನ್ನೂ ಶಾಂತಿಧಾಮಕ್ಕೆ ಕಳುಹಿಸುತ್ತೇವೆ. ಈ ರೀತಿಯಾಗಿಯೇ ತಿಳಿಸಬೇಕಾಗಿದೆ, ಭಾರತವು
5000 ವರ್ಷಗಳ ಮೊದಲು ಈ ರೀತಿ ಸ್ವರ್ಗವಾಗಿತ್ತು, ಈಗಂತೂ ಕಲಿಯುಗವಾಗಿದೆ. ಅದು ಸತ್ಯವಾಗಿತ್ತು,
ಈಗ ಹೇಳಿ ಸತ್ಯಯುಗದಲ್ಲಿ ಎಷ್ಟು ಜನಸಂಖ್ಯೆಯಿತ್ತು? ಈಗ ಕಲಿಯುಗದ ಅಂತ್ಯವಾಗಿದೆ. ಇದು ಅದೇ
ಮಹಾಭಾರಿ ಮಹಾಭಾರತ ಯುದ್ಧವಾಗಿದೆ. ಮತ್ತ್ಯಾವುದೇ ಸಮಯದಲ್ಲಿ ಇಂತಹ ಯುದ್ಧಗಳು ಆಗಿಯೇ ಇಲ್ಲ. ಇದು
ಕೊನೆಯಲ್ಲಿ ಮೂರನೆಯ ಮಹಾ ಯುದ್ಧವಾಗಿದೆ. ಈಗಂತೂ ಅಣು ಬಾಂಬುಗಳನ್ನು ತಯಾರಿಸುತ್ತಿದ್ದಾರೆ, ಯಾರ
ಮಾತನ್ನೂ ಕೇಳುವುದಿಲ್ಲ. ಯಾವ ಬಾಂಬುಗಳನ್ನು ಮಾಡಿದ್ದಾರೆಯೋ ಅವನ್ನು ಸಮುದ್ರದಲ್ಲಿ ಹಾಕಿ ಬಿಡಿ
ಆಗ ನಾವೂ ಸಹ ಮುಂದೆ ಮಾಡುವುದಿಲ್ಲ. ನೀವು ಇಟ್ಟುಕೊಂಡೇ ಇದ್ದರೆ ನಾವು ತಯಾರಿಸದೇ ಇರಲು ಹೇಗೆ
ಸಾಧ್ಯವೆಂದು ಅವರು ಹೇಳುತ್ತಾರೆ ಆದರೆ ನೀವು ಮಕ್ಕಳಿಗೆ ತಿಳಿದಿದೆ - ಇದಂತೂ ಪೂರ್ವ
ನಿಶ್ಚಿತವಾಗಿದೆ. ಎಷ್ಟಾದರೂ ಅವರಿಗೆ ಮತ ಕೊಡಲು ಅವರಿಗೆ ಅರ್ಥವಾಗುವುದಿಲ್ಲ. ವಿನಾಶವಾಗದಿದ್ದರೆ
ನೀವು ರಾಜ್ಯಭಾರ ಹೇಗೆ ಮಾಡುವಿರಿ! ನೀವು ಮಕ್ಕಳಿಗಂತೂ ನಿಶ್ಚಯವಿದೆಯಲ್ಲವೆ. ಸಂಶಯ ಬುದ್ಧಿಯವರಂತೂ
ಬಿಟ್ಟು ಹೋಗುತ್ತಾರೆ, ವಿರೋಧಿಗಳಾಗಿ ಬಿಡುತ್ತಾರೆ. ತಂದೆಯ ಮಕ್ಕಳಾಗಿ ಮತ್ತೆ ವಿರೋಧಿಗಳಾಗಬಾರದು.
ನೀವಂತೂ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ, ಅನ್ಯ ಮಾತುಗಳಿಂದೇನು ಲಾಭ? ಸತ್ಯ ತಂದೆಯ ಜೊತೆ
ಸತ್ಯವಂತರಾಗಬೇಕಾಗಿದೆ. ಒಳಗೊಂದು ಹೊರಗೊಂದು ಇಟ್ಟುಕೊಳ್ಳುತ್ತಾರೆಂದರೆ ಅವರು ತಮ್ಮ ಪದವಿ ಭ್ರಷ್ಟ
ಮಾಡಿಕೊಳ್ಳುತ್ತಾರೆ. ತಮ್ಮದೇ ನಷ್ಟ ಮಾಡಿಕೊಳ್ಳುತ್ತಾರೆ. ಕಲ್ಪ-ಕಲ್ಪಾಂತರಕ್ಕಾಗಿ ಎಂದೂ ಶ್ರೇಷ್ಠ
ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಈ ಸಮಯದಲ್ಲಿ ಬಹಳ ಆಕ್ಯುರೇಟ್ ಆಗಬೇಕಾಗಿದೆ, ಯಾವುದೇ
ತಪ್ಪು ಮಾಡಬಾರದು. ಸಾಧ್ಯವಾದಷ್ಟು ಶ್ರೀಮತದಲ್ಲಿರಬೇಕಾಗಿದೆ. ನಿರಂತರ ನೆನಪಂತೂ ಅಂತಿಮದಲ್ಲಿ
ಇರುವುದು, ಒಬ್ಬ ತಂದೆಯ ವಿನಃ ಮತ್ತ್ಯಾರ ನೆನಪೂ ಇರಬಾರದು. ಅಂತ್ಯ ಕಾಲದಲ್ಲಿ ಯಾರು ಸ್ತ್ರೀ
ಸ್ಮರಣೆ ಮಾಡಿದರೋ ಅವರು.......... ಎಂದು ಗಾಯನವೂ ಇದೆ ಅಂದರೆ ಯಾರಲ್ಲಿ ಮೋಹವಿರುವುದೋ ಅವರ ನೆನಪೇ
ಬಂದು ಬಿಡುವುದು. ಮುಂದೆ ಹೋದಂತೆ ನೀವು ಎಷ್ಟು ಸಮೀಪ ಬರುತ್ತಾ ಹೋಗುವಿರೋ ಅಷ್ಟು
ಸಾಕ್ಷಾತ್ಕಾರವಾಗುತ್ತಾ ಇರುವುದು. ತಂದೆಯು ಪ್ರತಿಯೊಬ್ಬರಿಗೆ ನೀವು ಇಂತಿಂತಹ ಕೆಲಸವನ್ನೇ
ಮಾಡಿದಿರಿ ಎಂದು ತೋರಿಸುತ್ತಾರೆ. ಆರಂಭದಲ್ಲಿಯೂ ಸಹ ನೀವು ಸಾಕ್ಷಾತ್ಕಾರ ಮಾಡಿದ್ದೀರಿ, ಯಾರು
ಶಿಕ್ಷೆಗಳನ್ನನುಭವಿಸುತ್ತಿದರು ಅವರು ಬಹಳ ಚೀರಾಡುತ್ತಿದ್ದರು. ತಂದೆಯು ಹೇಳುತ್ತಾರೆ - ನಿಮಗೆ
ತೋರಿಸುವುದಕ್ಕಾಗಿ ಇವರ 100ರಷ್ಟು ಶಿಕ್ಷೆಯನ್ನು ತುಂಡರಿಸಿದೆನು. ಆದ್ದರಿಂದ ತಂದೆಯ ಸೇವೆಯಲ್ಲಿ
ವಿಘ್ನ ಬರುವಂತಹ ಕೆಲಸ ಮಾಡಬಾರದು. ಕೊನೆಯಲ್ಲಿ ಎಲ್ಲವೂ ನಿಮಗೆ ಸಾಕ್ಷಾತ್ಕಾರವಾಗುವುದು - ಹೀಗೀಗೆ
ತಂದೆಯ ಸೇವೆಯಲ್ಲಿ ಬಹಳ ವಿಘ್ನಗಳನ್ನು ಹಾಕಿ ನಷ್ಟ ಮಾಡಿದ್ದೀರಿ ಎಂದು. ಆಸುರೀ ಸಂಪ್ರದಾಯವಲ್ಲವೆ.
ಯಾರು ವಿಘ್ನಗಳನ್ನು ಹಾಕಿದ್ದಾರೆಯೋ ಅವರಿಗೆ ಬಹಳ ಶಿಕ್ಷೆ ಸಿಗುತ್ತದೆ. ಶಿವ ತಂದೆಯದು ಬಹಳ ದೊಡ್ಡ
ದರ್ಬಾರು ಆಗಿದೆ. ಬಲ ಭುಜವಾಗಿ ಧರ್ಮರಾಜನೂ ಇದ್ದಾರೆ, ಅವು ಹದ್ದಿನ ಶಿಕ್ಷೆಗಳಾಗಿವೆ. ಇಲ್ಲಂತೂ
21 ಜನ್ಮಗಳಿಗಾಗಿ ನಷ್ಟವಾಗುತ್ತದೆ, ಪದವಿಯು ಭ್ರಷ್ಟವಾಗಿ ಬಿಡುತ್ತದೆ. ಪ್ರತಿಯೊಂದು ಮಾತಿನಲ್ಲಿ
ತಂದೆಯು ತಿಳಿಸುತ್ತಿರುತ್ತಾರೆ ಏಕೆಂದರೆ ಕೊನೆಯಲ್ಲಿ ನಮಗೆ ಗೊತ್ತಿರಲಿಲ್ಲವೆಂದು ಯಾರೂ
ಹೇಳುವಂತಿಲ್ಲ. ಆದ್ದರಿಂದ ತಂದೆಯು ಎಲ್ಲಾ ಎಚ್ಚರಿಕೆಯನ್ನು ಕೊಡುತ್ತಿರುತ್ತಾರೆ. ಪ್ರತಿಯೊಂದು
ಸೇವಾಕೇಂದ್ರದಲ್ಲಿ ಎಷ್ಟೊಂದು ಮಂದಿ ಬಿಟ್ಟು ಹೋಗುತ್ತಾರೆ, ತೊಂದರೆ ಕೊಡುತ್ತಾರೆ ವಿಕಾರಿಗಳಾಗಿ
ಬಿಡುತ್ತಾರೆ. ಶಾಲೆಯಲ್ಲಿ ಪೂರ್ಣ ರೀತಿಯಲ್ಲಿ ಓದಬೇಕು. ಇಲ್ಲವಾದರೆ ಏನು ಪದವಿ ಪಡೆಯುವಿರಿ!
ಪದವಿಯಲ್ಲಿ ಬಹಳ ಅಂತರವಾಗಿ ಬಿಡುತ್ತದೆ. ಹೇಗೆ ಇಲ್ಲಿ ದುಃಖಧಾಮದಲ್ಲಿ ಕೆಲವರು
ರಾಷ್ಟ್ರಪತಿಯಾಗಿದ್ದಾರೆ, ಕೆಲವರು ಸಾಹುಕಾರ, ಕೆಲವರು ಬಡವರಿದ್ದಾರೆ ಹಾಗೆಯೇ ಸುಖಧಾಮದಲ್ಲಿಯೂ
ಪದವಿಗಳು ನಂಬರ್ವಾರ್ ಇರುತ್ತವೆ. ಯಾರು ರಾಯಲ್ ಬುದ್ಧಿವಂತ ಮಕ್ಕಳಿರುವರೋ ಅವರು ತಂದೆಯಿಂದ ಪೂರ್ಣ
ಆಸ್ತಿಯನ್ನು ತೆಗೆದುಕೊಳ್ಳುವ ಪ್ರಯತ್ನ ಪಡುತ್ತಾರೆ. ಮಾಯೆಯ ಯುದ್ಧವಾಗಿದೆಯಲ್ಲವೆ. ಮಾಯೆಯು ಬಹಳ
ಪ್ರಬಲವಾಗಿದೆ. ಸೋಲು-ಗೆಲುವು ಆಗುತ್ತಿರುತ್ತದೆ. ಎಷ್ಟೊಂದು ಮಂದಿ ಬರುತ್ತಾರೆ ಮತ್ತೆ
ವಿರೋಧಿಗಳಾಗಿ ಬಿಡುತ್ತಾರೆ. ನಡೆಯುತ್ತಾ-ನಡೆಯುತ್ತಾ ಅನುತ್ತೀರ್ಣರಾಗಿ ಬಿಡುತ್ತಾರೆ. ಅನೇಕರು
ಕೇಳುತ್ತಾರೆ – ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿರಬಹುದು ಎಂಬ ಮಾತನ್ನು ನಾವೆಂದೂ
ಕೇಳಿಲ್ಲ ಅಂದಮೇಲೆ ಇದು ಹೇಗೆ ಸಾಧ್ಯ ಎನ್ನುತ್ತಾರೆ. ಅರೆ! ಕಾಮ ಮಹಾಶತ್ರುವೆಂದು
ಭಗವಾನುವಾಚವಿದೆಯಲ್ಲವೆ. ಗೀತೆಯಲ್ಲಿಯೂ ಇದೆಯಲ್ಲವೆ! ಕೇವಲ ಭಗವಂತನ ಬದಲು ಕೃಷ್ಣನ ಹೆಸರನ್ನು ಹಾಕಿ
ಬಿಟ್ಟಿದ್ದಾರೆ. ಕೃಷ್ಣನಿಗೆ ದೇವತೆಯೆಂದೂ ಹೇಳುವುದಿಲ್ಲ, ಅದು ದೇವತಾ ಧರ್ಮವಲ್ಲವೆ. ಕೇವಲ
ಸೂಕ್ಷ್ಮವತನವಾಸಿಗಳೇ ದೇವತೆಗಳಾಗಿದ್ದಾರೆ. ಉಳಿದೆಲ್ಲರೂ ದೈವೀ ಗುಣವಂತ ಮನುಷ್ಯರಾಗಿದ್ದಾರೆ.
ಸತ್ಯಯುಗದಲ್ಲಿ ದೈವೀ ಗುಣವುಳ್ಳವರು, ಕಲಿಯುಗದಲ್ಲಿ ಆಸುರೀ ಅವಗುಣವುಳ್ಳವರಾಗಿದ್ದಾರೆ. ಆಸುರೀ
ಗುಣವಿರುವವರು ದೈವೀ ಗುಣವಂತರ ಮಹಿಮೆ ಹಾಡುತ್ತಾರೆ, ಎಷ್ಟೊಂದು ಅಂತರವಿದೆ! ನೀವೀಗ
ತಿಳಿದುಕೊಂಡಿದ್ದೀರಿ - ನಾವು ಹೇಗಿದ್ದೆವು, ಏನಾಗುತ್ತಿದ್ದೇವೆ! ನೀವಿಲ್ಲಿ ಎಲ್ಲಾ ಗುಣಗಳನ್ನು
ಧಾರಣೆ ಮಾಡಿಕೊಳ್ಳಬೇಕಾಗಿದೆ. ಸತೋಗುಣಿ ಆಹಾರ ಪದಾರ್ಥಗಳನ್ನೇ ಸೇವಿಸಬೇಕಾಗಿದೆ. ನೋಡಿ, ದೇವತೆಗಳು
ಏನನ್ನು ಸೇವಿಸುತ್ತಾರೆ. ಶ್ರೀನಾಥ ದ್ವಾರದಲ್ಲಿಯೂ ಹೋಗಿ ನೋಡಿ, ಎಷ್ಟು ಶುದ್ಧ ಭೋಜನವು
ತಯಾರಾಗುತ್ತದೆ! ಅಲ್ಲಿರುವವರೇ ವೈಷ್ಣವರು. ಮತ್ತು ಜಗನ್ನಾಥ ಪುರಿಯಲ್ಲಿ ಹೋಗಿ ನೋಡಿ, ಏನು
ಸಿಗುತ್ತದೆ? ಕೇವಲ ಅನ್ನ. ಅಲ್ಲಿ ವಾಮಮಾರ್ಗದ ಬಹಳ ಕೊಳಕು ಚಿತ್ರಗಳಿವೆ. ಯಾವಾಗ ರಾಜಧಾನಿಯಿತ್ತೋ
ಆಗ 36 ಪ್ರಕಾರದ ಭೋಜನ ಸಿಗುತ್ತಿತ್ತು. ಆದ್ದರಿಂದ ಶ್ರೀನಾಥ ದ್ವಾರದಲ್ಲಿ ಅನೇಕ ಪ್ರಕಾರದ
ಪದಾರ್ಥಗಳು ತಯಾರಾಗುತ್ತವೆ. ಜಗನ್ನಾಥ ಪುರಿ ಮತ್ತು ಶ್ರೀನಾಥ ದ್ವಾರದ ಮಂದಿರವು ಬೇರೆಯಾಗಿದೆ.
ಜಗನ್ನಾಥ ಪುರಿಯ ಮಂದಿರದಲ್ಲಿ ದೇವತೆಗಳ ಉಡುಪಿನಲ್ಲಿ ಬಹಳ ಕೊಳಕು ಚಿತ್ರಗಳಿವೆ. ಆದ್ದರಿಂದ
ಅಲ್ಲಿನ ನೈವೇದ್ಯವೂ ಸಹ ಚೆನ್ನಾಗಿರುವುದಿಲ್ಲ. ಕೇವಲ ಅನ್ನದ ನೈವೇದ್ಯವನ್ನಿಡುತ್ತಾರೆ.
ತುಪ್ಪವನ್ನೂ ಹಾಕುವುದಿಲ್ಲ. ಸತೋಪ್ರಧಾನ ಮತ್ತು ತಮೋಪ್ರಧಾನರು ಇರುವಾಗಿನ ಅಂತರವನ್ನು
ತೋರಿಸುತ್ತಾರೆ. ಭಾರತವು ಹೇಗಿತ್ತು ಮತ್ತೆ ಏನಾಗಿ ಬಿಟ್ಟಿತು, ಈಗಂತೂ ನೋಡಿ ಯಾವ ಗತಿಯಾಗಿದೆ!
ಪೂರ್ಣ ಅನ್ನವೂ ಸಿಗುವುದಿಲ್ಲ. ಅವರ ಪ್ಲಾನ್ ಮತ್ತು ಶಿವ ತಂದೆಯ ಪ್ಲಾನ್ನಲ್ಲಿ ರಾತ್ರಿ-ಹಗಲಿನ
ವ್ಯತ್ಯಾಸವಿದೆ. ಅವೆಲ್ಲವೂ ಮಣ್ಣು ಪಾಲಾಗುತ್ತವೆ, ಪ್ರಾಕೃತಿಕ ವಿಕೋಪಗಳಾಗುವುದು,
ದವಸ-ಧಾನ್ಯಗಳೇನೂ ಸಿಗುವುದಿಲ್ಲ. ಮಳೆಯು ಕೆಲವೊಂದೆಡೆ ಅತಿಯಾಗಿ ಬೀಳುತ್ತದೆ, ಕೆಲವೊಂದು ಕಡೆ
ಬೀಳುವುದೇ ಇಲ್ಲ. ಎಷ್ಟೊಂದು ನಷ್ಟವನ್ನುಂಟು ಮಾಡುತ್ತದೆ. ಈ ಸಮಯದಲ್ಲಿ ತತ್ವಗಳು
ತಮೋಪ್ರಧಾನವಾಗಿರುವುದರಿಂದ ಮಳೆಯೂ ಸಹ ಸಮಯವಲ್ಲದ ಸಮಯದಲ್ಲಿ ಬೀಳುತ್ತಿರುತ್ತದೆ. ಬಿರುಗಾಳಿಯು
ತಮೋಪ್ರಧಾನ, ಸೂರ್ಯನ ತಾಪವೂ ಸಹ ಈ ರೀತಿಯಿರುತ್ತದೆ ಅದರ ಮಾತೇ ಕೇಳಬೇಡಿ. ಈ ಪ್ರಾಕೃತಿಕ ವಿಕೋಪಗಳು
ಡ್ರಾಮಾದಲ್ಲಿ ನಿಗಧಿಯಾಗಿದೆ. ಅವರದು ವಿನಾಶ ಕಾಲದಲ್ಲಿ ವಿಪರೀತ ಬುದ್ಧಿಯಾಗಿದೆ. ನಿಮ್ಮದು ತಂದೆಯ
ಜೊತೆ ಪ್ರೀತಿ ಬುದ್ದಿಯಾಗಿದೆ. ಅಜ್ಞಾನ ಕಾಲದಲ್ಲಿಯೂ ಸುಪುತ್ರ ಮಕ್ಕಳ ಮೇಲೆ ತಂದೆ-ತಾಯಿಗೆ
ಪ್ರೀತಿಯಿರುತ್ತದೆ. ಆದ್ದರಿಂದ ಇಲ್ಲಿ ತಂದೆಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ನೆನಪು-ಪ್ರೀತಿ
ಎಂದು ಹೇಳುತ್ತಾರೆ. ಎಷ್ಟೆಷ್ಟು ಸೇವೆ ಮಾಡುವರೋ ಅಷ್ಟಷ್ಟು ನೆನಪು-ಪ್ರೀತಿ..... ಸೇವೆಯನ್ನಂತೂ
ಮಾಡಬೇಕಲ್ಲವೆ. ಇಡೀ ಪ್ರಪಂಚ ಮತ್ತು ವಿಶೇಷವಾಗಿ ಭಾರತವನ್ನು ಸ್ವರ್ಗವನ್ನಾಗಿ ಮಾಡಬೇಕಾಗಿದೆ.
ಉಳಿದೆಲ್ಲರನ್ನು ಶಾಂತಿಧಾಮಕ್ಕೆ ಕಳುಹಿಸಬೇಕಾಗಿದೆ. ಭಾರತಕ್ಕೆ ಸ್ವರ್ಗದ ಆಸ್ತಿಯು ಸಿಗುತ್ತದೆ.
ಉಳಿದೆಲ್ಲರಿಗೆ ಮುಕ್ತಿಯ ಆಸ್ತಿಯು ಸಿಗುತ್ತದೆ. ಎಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ.
ಹಾಹಾಕಾರದ ನಂತರ ಜಯ ಜಯಕಾರವಾಗುವುದು. ಎಷ್ಟೊಂದು ಹಾಹಾಕಾರವು ಏಳುತ್ತದೆ, ಇದು ನಿರಪರಾಧಿಗಳ
ಕೊಲೆಯ ಆಟವಾಗಿದೆ. ಎಲ್ಲರ ಮೃತ್ಯುವಾಗಲೇಬೇಕಾಗಿದೆ.
ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಪೂರ್ಣ ಪುರುಷಾರ್ಥ ಮಾಡಿ. ತಂದೆಯ ಜೊತೆ ಸದಾ
ಆಜ್ಞಾಕಾರಿ, ಪ್ರಾಮಾಣಿಕರಾಗಬೇಕಾಗಿದೆ. ಸೇವಾಧಾರಿಗಳಾಗಬೇಕಾಗಿದೆ. ಯಾರು ಕಲ್ಪದ ಮೊದಲು ಎಂತಹ ಸೇವೆ
ಮಾಡಿದ್ದಾರೆಯೋ ಅದರ ಸಾಕ್ಷಾತ್ಕಾರವಾಗುತ್ತಾ ಇರುವುದು, ನೀವು ಸಾಕ್ಷಿಯಾಗಿ ನೋಡುತ್ತಾ ಇರುತ್ತೀರಿ.
ನೀವೀಗ ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ಆದ್ದರಿಂದ ಸದಾ ಬುದ್ಧಿಯಲ್ಲಿ ಸ್ವದರ್ಶನ ಚಕ್ರವು
ಸುತ್ತುತ್ತಿರಬೇಕು - ನಾವು ಹೀಗ್ಹೀಗೆ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ. ನಾವೀಗ ಹಿಂತಿರುಗಿ
ಮನೆಗೆ ಹೋಗುತ್ತೇವೆ. ತಂದೆಯ ನೆನಪು ಇರಲಿ, ಮನೆ ಮತ್ತು ಸತ್ಯಯುಗವು ನೆನಪಿರಲಿ. ಇಡೀ ದಿನ
ಬುದ್ಧಿಯಲ್ಲಿ ಇದೇ ಚಿಂತನೆ ಮಾಡಬೇಕಾಗಿದೆ - ನಾವೀಗ ವಿಶ್ವದ ಮಹಾರಾಜಕುಮಾರರಾಗುತ್ತೇವೆ. ನಾವು
ಶ್ರೀ ಲಕ್ಷ್ಮೀ ಹಾಗೂ ಶ್ರೀ ನಾರಾಯಣನಾಗುತ್ತೇವೆ. ನಶೆಯೇರಬೇಕಲ್ಲವೆ. ಈ ಬಾಬಾರವರಿಗೆ
ನಶೆಯಿರುತ್ತದೆ. ಇವರು ನಿತ್ಯವೂ ಈ ಲಕ್ಷ್ಮೀ-ನಾರಾಯಣರ ಚಿತ್ರವನ್ನು ನೋಡುತ್ತಾರೆ, ಆಂತರ್ಯದಲ್ಲಿ
ನಶೆಯಿರುತ್ತದೆಯಲ್ಲವೆ - ನಾನು ಹೋಗಿ ನಾಳೆ ಇಂತಹ ಶ್ರೀಕೃಷ್ಣನಾಗುತ್ತೇನೆ, ಮತ್ತೆ ಸ್ವಯಂವರದ
ನಂತರ ಶ್ರೀನಾರಾಯಣನಾಗುತ್ತೇನೆ, ತತ್ತ್ವಂ. ನೀವೂ ಆಗುತ್ತೀರಲ್ಲವೆ. ಇದು ರಾಜಯೋಗವಾಗಿದೆ,
ಪ್ರಜಾಯೋಗವಲ್ಲ. ಆತ್ಮರಿಗೆ ಪುನಃ ತಮ್ಮ ರಾಜ್ಯಭಾಗ್ಯವು ಸಿಗುತ್ತದೆ. ಮಕ್ಕಳು ರಾಜ್ಯವನ್ನು
ಕಳೆದುಕೊಂಡಿದ್ದಿರಿ, ಈಗ ಪುನಃ ರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ. ನೀವು ಮಕ್ಕಳಿಗೆ ನೋಡಿ
ಖುಷಿಯಾಗಲೆಂದೇ ತಂದೆಯು ಈ ಚಿತ್ರಗಳನ್ನು ಮಾಡಿಸುತ್ತಾರೆ. 21 ಜನ್ಮಗಳಿಗಾಗಿ ನಾವು ಸ್ವರ್ಗದ
ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ. ಎಷ್ಟು ಸಹಜವಾಗಿದೆ! ಈ ಶಿವ ತಂದೆಯು ಈ ಪ್ರಜಾಪಿತ
ಬ್ರಹ್ಮಾರವರ ಮೂಲಕ ರಾಜಯೋಗವನ್ನು ಕಲಿಸುತ್ತಾರೆ ನಂತರ ನಾವು ಹೋಗಿ ಇಂತಹ ದೇವತೆಗಳಾಗುತ್ತೇವೆ.
ನೋಡುತ್ತಿದ್ದಂತೆಯೇ ಖುಷಿಯ ನಶೆಯೇರುತ್ತದೆ. ನಾವು ತಂದೆಯ ನೆನಪಿನಲ್ಲಿರುವುದರಿಂದ ವಿಶ್ವದ
ರಾಜಕುಮಾರರಾಗುತ್ತೇವೆ ಎಂದು ಎಷ್ಟೊಂದು ಖುಷಿಯಿರಬೇಕು! ನಾನೂ ಓದುತ್ತಿದ್ದೇನೆ, ನೀವೂ
ಓದುತ್ತಿದ್ದೀರಿ, ಈ ವಿದ್ಯಾಭ್ಯಾಸದ ನಂತರ ನಾನು ಹೋಗಿ ಈ ರೀತಿಯಾಗುತ್ತೇನೆ. ಎಲ್ಲವೂ ವಿದ್ಯೆಯ
ಮೇಲೆ ಆಧಾರಿತವಾಗಿದೆ. ಎಷ್ಟು ಓದುವಿರೋ ಅಷ್ಟು ಸಂಪಾದನೆಯಾಗುತ್ತದೆಯಲ್ಲವೆ. ತಂದೆಯು
ತಿಳಿಸಿದ್ದಾರೆ - ಕೆಲವು ಸರ್ಜನ್ಗಳು ಇಷ್ಟು ಬುದ್ಧಿವಂತರಿರುತ್ತಾರೆ, ಒಂದು ಕೇಸಿನಿಂದ ಲಕ್ಷಾಂತರ
ರೂಪಾಯಿಗಳನ್ನೇ ಸಂಪಾದಿಸುತ್ತಾರೆ. ವಕೀಲರಲ್ಲಿಯೂ ಇದೇ ರೀತಿಯಿರುತ್ತಾರೆ. ಕೆಲವರು ಬಹಳ ಸಂಪಾದನೆ
ಮಾಡುತ್ತಾರೆ, ಇನ್ನೂ ಕೆಲವರನ್ನು ನೋಡಿದರೆ ಹರಿದ ಕೋಟನ್ನು ಧರಿಸಿರುತ್ತಾರೆ, ಇಲ್ಲಿಯೂ ಹಾಗೆಯೇ.
ಆದ್ದರಿಂದ ತಂದೆಯು ಮತ್ತೆ-ಮತ್ತೆ ಹೇಳುತ್ತಾರೆ - ಮಕ್ಕಳೇ, ಯಾವುದೇ ತಪ್ಪು ಮಾಡಬೇಡಿ, ಸದಾ
ಶ್ರೀಮತದಂತೆ ನಡೆಯಿರಿ. ಶ್ರೀ ಶ್ರೀ ಶಿವ ತಂದೆಯಿಂದ ನೀವು ಶ್ರೇಷ್ಠರಾಗುತ್ತೀರಿ. ನೀವು ಮಕ್ಕಳು
ತಂದೆಯಿಂದ ಅನೇಕ ಬಾರಿ ಆಸ್ತಿಯನ್ನು ತೆಗೆದುಕೊಂಡಿದ್ದೀರಿ, ಕಳೆದುಕೊಂಡಿದ್ದೀರಿ. ಅರ್ಧಕಲ್ಪಕ್ಕಾಗಿ
21 ಜನ್ಮಗಳ ಆಸ್ತಿಯು ಸಿಗುತ್ತದೆ. ಅರ್ಧಕಲ್ಪ 2500 ವರ್ಷಗಳಕಾಲ ನೀವು ಸುಖ ಪಡೆಯುತ್ತೀರಿ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಒಳಗೆ-ಹೊರೆಗೂ
ಸತ್ಯವಾಗಿರಬೇಕು. ವಿದ್ಯೆಯಲ್ಲೆಂದೂ ಹುಡುಗಾಟಿಕೆ ಮಾಡಬಾರದು. ಸಂಶಯ ಬುದ್ಧಿಯವರಾಗಿ
ವಿದ್ಯಾಭ್ಯಾಸವನ್ನೆಂದೂ ಬಿಡಬಾರದು. ಸರ್ವೀಸಿನಲ್ಲಿ ವಿಘ್ನ ರೂಪವಾಗಬಾರದು.
2. ಎಲ್ಲರಿಗೆ ಇದೇ ಖುಷಿಯ ಸಂದೇಶ ತಿಳಿಸಿ - ನಾವು ಪವಿತ್ರತೆಯ ಬಲದಿಂದ ಶ್ರೀಮತದಂತೆ ನಮ್ಮ
ತನು-ಮನ-ಧನದ ಸಹಯೋಗದಿಂದ 21 ಜನ್ಮಗಳಿಗಾಗಿ ಭಾರತವನ್ನು ಶ್ರೇಷ್ಟಾಚಾರಿ ಡಬಲ್ ಕಿರೀಟಧಾರಿಯನ್ನಾಗಿ
ಮಾಡುವ ಸೇವೆ ಮಾಡುತ್ತಿದ್ದೇವೆ.
ವರದಾನ:
ಸೆಕೆಂಡ್ನಲ್ಲಿ
ಸಂಕಲ್ಪಗಳನ್ನು ನಿಲ್ಲಿಸಿ ತಮ್ಮ ಬುನಾದಿಯನ್ನು ಶಕ್ತಿಶಾಲಿ ಮಾಡಿಕೊಳ್ಳುವಂತಹವರು ಪಾಸ್ ವಿತ್ ಆನರ್
ಭವ.
ಯಾವುದೇ ಪೇಪರ್ ಸಹ
ಪರಿಪಕ್ವರನ್ನಾಗಿ ಮಾಡಲು, ಬುನಾದಿಯನ್ನು ಶಕ್ತಿಶಾಲಿಯನ್ನಾಗಿ ಮಾಡಲು ಬರುವುದು, ಅದರಲ್ಲಿ
ಗಾಬರಿಯಾಗಬೇಡಿ. ಹೊರಗಿನ ಹಲ್-ಚಲ್ ಅನ್ನು ಒಂದು ಸೆಕೆಂಡ್ನಲ್ಲಿ ನಿಲ್ಲಿಸುವಂತಹ ಅಭ್ಯಾಸ ಮಾಡಿ,
ಎಷ್ಟೇ ವಿಸ್ತಾರವಿರಲಿ ಒಂದು ಸೆಕೆಂಡ್ನಲ್ಲಿ ಸುತ್ತಿಡಿ. ಹಸಿವು, ಬಾಯಾರಿಕೆ, ಚಳಿ, ಬಿಸಿ ಎಲ್ಲಾ
ಇದ್ದರೂ ಸಹ ಸಂಸ್ಕಾರದಲ್ಲಿ ಪ್ರಕಟವಾಗದೇ ಇರಲಿ, ಸುತ್ತಿಡುವ ಶಕ್ತಿಯಿಂದ ನಿಲ್ಲಿಸಿ ಬಿಡಿ. ಇದೇ
ಬಹಳ ಸಮಯದ ಅಭ್ಯಾಸ ಪಾಸ್ ವಿತ್ ಆನರ್ ಮಾಡಿ ಬಿಡುವುದು.
ಸ್ಲೋಗನ್:
ತಮ್ಮ ಸುಖ ಶಾಂತಿಯ
ವೈಬ್ರೇಷನ್ನಿಂದ ಜನರಿಗೆ ಸುಖ ನೆಮ್ಮದಿಯ ಅನುಭೂತಿ ಮಾಡಿಸುವಂತಹದೇ ಸತ್ಯ ಸೇವೆಯಾಗಿದೆ.