14.03.21 Avyakt Bapdada
Kannada
Murli 18.11.87 Om Shanti Madhuban
ಶಾಂತಿಯ ಶಕ್ತಿಯನ್ನು ಜಮಾ
ಮಾಡಿಕೊಳ್ಳುವ ಸಾಧನ - 'ಅಂತರ್ಮುಖಿ ಮತ್ತು ಏಕಾಂತವಾಸಿ ಸ್ಥಿತಿ'
ಇಂದು ಸರ್ವಶಕ್ತಿವಂತ
ಬಾಪ್ದಾದಾ ತಮ್ಮ ಶಕ್ತಿ ಸೈನ್ಯವನ್ನು ನೋಡುತ್ತಿದ್ದಾರೆ. ಈ ಆತ್ಮಿಕ ಶಕ್ತಿ ಸೈನ್ಯವು ವಿಚಿತ್ರ
ಸೇನೆಯಾಗಿದೆ. ಹೆಸರಂತೂ ಆತ್ಮಿಕ ಸೈನ್ಯವಾಗಿದೆ ಆದರೆ ವಿಶೇಷವಾಗಿ ಶಾಂತಿಯ ಶಕ್ತಿಯಿದೆ.
ಶಾಂತಿಯನ್ನು ಕೊಡುವಂತಹ ಅಹಿಂಸಕ ಸೈನ್ಯವಾಗಿದೆ ಅಂದಾಗ ಇಂದು ಬಾಪ್ದಾದಾ ಪ್ರತಿಯೊಬ್ಬ ಶಾಂತಿ ದೇವ
ಮಕ್ಕಳನ್ನು ಪ್ರತಿಯೊಬ್ಬರೂ ಶಾಂತಿಯ ಶಕ್ತಿಯನ್ನು ಎಲ್ಲಿಯವರೆಗೆ ಜಮಾ ಮಾಡಿಕೊಂಡಿದ್ದಾರೆ?
ಎಂಬುದನ್ನು ನೋಡುತ್ತಿದ್ದಾರೆ. ಈ ಶಾಂತಿಯ ಶಕ್ತಿಯು ಈ ಆತ್ಮೀಕ ಸೇನೆಯ ವಿಶೇಷ ಶಸ್ತ್ರವಾಗಿದೆ.
ಎಲ್ಲರೂ ಶಸ್ತ್ರಧಾರಿಗಳೇ, ಆದರೆ ನಂಬರ್ವಾರ್ ಇದ್ದಾರೆ. ಶಾಂತಿಯ ಶಕ್ತಿಯು ಇಡೀ ವಿಶ್ವವನ್ನು
ಅಶಾಂತಿಯಿಂದ ಶಾಂತವನ್ನಾಗಿ ಮಾಡುವಂತದ್ದಾಗಿದೆ. ಕೇವಲ ಮನುಷ್ಯ ಆತ್ಮರನ್ನು ಅಷ್ಟೆ ಅಲ್ಲ,
ಪ್ರಕೃತಿಯನ್ನೂ ಸಹ ಪರಿವರ್ತನೆ ಮಾಡುವಂತದ್ದಾಗಿದೆ. ಶಾಂತಿಯ ಶಕ್ತಿಯನ್ನು ಈಗ ಇನ್ನೂ ಗುಪ್ತ
ರೂಪದಿಂದ ಅರಿತುಕೊಳ್ಳಬೇಕು ಮತ್ತು ಅನುಭವ ಮಾಡಬೇಕಾಗಿದೆ. ಈ ಶಕ್ತಿಯಲ್ಲಿ ಎಷ್ಟು
ಶಕ್ತಿಶಾಲಿಗಳಾಗುವಿರೋ ಅಷ್ಟೇ ಶಾಂತಿಯ ಶಕ್ತಿಯ ಮಹತ್ವಿಕೆ ಮತ್ತು ಮಹಾನತೆಯ ಅನುಭವವನ್ನು ಹೆಚ್ಚಾಗಿ
ಮಾಡುತ್ತಾ ಹೋಗುತ್ತೀರಿ. ಈಗ ವಾಣಿಯ ಶಕ್ತಿಯಿಂದ ಸೇವಾ ಸಾಧನಗಳ ಶಕ್ತಿಯ ಅನುಭವ ಮಾಡುತ್ತಿದ್ದೀರಿ
ಮತ್ತು ಈ ಅನುಭವದ ಮೂಲಕ ಸಫಲತೆಯನ್ನೂ ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೀರಿ ಆದರೆ ವಾಣಿಯ ಶಕ್ತಿ
ಹಾಗೂ ಸ್ಥೂಲ ಸೇವೆಯ ಸಾಧನಗಳಿಗಿಂತಲೂ ಶಾಂತಿಯ ಶಕ್ತಿಯು ಅತಿ ಶ್ರೇಷ್ಠವಾಗಿದೆ. ಶಾಂತಿಯ ಶಕ್ತಿಯ
ಸಾಧನಗಳು ಶ್ರೇಷ್ಠವಾಗಿದೆ. ಹೇಗೆ ವಾಚಾ ಸೇವೆಯ ಸಾಧನಗಳು ಚಿತ್ರ, ಪ್ರೊಜೆಕ್ಟರ್, ವೀಡಿಯೋ
ಇತ್ಯಾದಿಗಳನ್ನು ಮಾಡುತ್ತೀರಿ ಹಾಗೆಯೇ ಶಾಂತಿಯ ಶಕ್ತಿಯ ಸಾಧನವು ಶುಭ ಸಂಕಲ್ಪ, ಶುಭ ಭಾವನೆ ಮತ್ತು
ನಯನಗಳ ಭಾಷೆಯಾಗಿದೆ. ಹೇಗೆ ಮುಖದ ಭಾಷೆಯ ಮೂಲಕ ತಂದೆಯ ಹಾಗೂ ರಚನೆಯ ಪರಿಚಯವನ್ನು ಕೊಡುತ್ತೀರಿ
ಹಾಗೆಯೇ ಶಾಂತಿಯ ಶಕ್ತಿಯ ಆಧಾರದ ಮೇಲೆ ನಯನಗಳ ಭಾಷೆಯಿಂದ ನಯನಗಳ ಮೂಲಕ ತಂದೆಯ ಅನುಭವ
ಮಾಡಿಸಬಲ್ಲಿರಿ. ಹೇಗೆ ಪ್ರೊಜೆಕ್ಟರ್ನ ಮೂಲಕ ಚಿತ್ರಗಳನ್ನು ತೋರಿಸುತ್ತೀರಿ ಹಾಗೆಯೇ ತಮ್ಮ ಮಸ್ತಕದ
ನಡುವೆ ಹೊಳೆಯುತ್ತಿರುವ ತಮ್ಮ ಹಾಗೂ ತಂದೆಯ ಚಿತ್ರವನ್ನು ಸ್ಪಷ್ಟವಾಗಿ ತೋರಿಸಿ. ಹೇಗೆ ವರ್ತಮಾನ
ಸಮಯದಲ್ಲಿ ವಾಣಿಯ ಮೂಲಕ ನೆನಪಿನ ಯಾತ್ರೆಯ ಅನುಭವ ಮಾಡಿಸುತ್ತೀರಿ ಹಾಗೆಯೇ ಶಾಂತಿಯ ಶಕ್ತಿಯ ಮೂಲಕ
ತಮ್ಮ ಚಹರೆ (ಯಾವುದನ್ನು ಮುಖವೆಂದು ಹೇಳುತ್ತೀರಿ) ತಮ್ಮ ಮೂಲಕ ಭಿನ್ನ-ಭಿನ್ನ ನೆನಪಿನ
ಸ್ಥಿತಿಗಳನ್ನು ಸ್ವತಹವಾಗಿಯೇ ಅನುಭವ ಮಾಡಿಸುವುದು. ಅನುಭವ ಮಾಡುವವರಿಗೂ ಸಹ ಇದು ಸಹಜವಾಗಿ
ಅನುಭೂತಿ ಮಾಡಿಸುವುದು - ಈ ಸಮಯದಲ್ಲಿ ಬೀಜ ರೂಪ ಸ್ಥಿತಿಯ ಅನುಭವವಾಗುತ್ತಿದೆ ಅಥವಾ ಫರಿಶ್ತಾ
ರೂಪದ ಅನುಭವವಾಗುತ್ತಿದೆ ಅಥವಾ ಭಿನ್ನ-ಭಿನ್ನ ಗುಣಗಳ ಅನುಭವಗಳು ತಮ್ಮ ಈ ಶಕ್ತಿಶಾಲಿ ಚಹರೆಯಿಂದ
ಸ್ವತಹವಾಗಿ ಆಗುತ್ತಿರುವುದು.
ಹೇಗೆ ವಾಣಿಯ ಮೂಲಕ ಆತ್ಮಗಳಿಗೆ ಸ್ನೇಹ, ಸಹಯೋಗದ ಭಾವನೆಯನ್ನು ಉತ್ಪನ್ನ ಮಾಡಿಸುತ್ತೀರಿ ಹಾಗೆಯೇ
ಯಾವಾಗ ತಾವು ಶುಭ ಭಾವನೆ, ಸ್ನೇಹದ ಭಾವನೆಯಲ್ಲಿ ಸ್ವಯಂ ಸ್ಥಿತರಾಗಿರುತ್ತೀರೋ ಆಗ ತಮ್ಮ ಭಾವನೆಯು
ಹೇಗಿರುವುದೋ ಅದೇ ಭಾವನೆಯೂ ಅದರಲ್ಲಿ ಉತ್ಪನ್ನವಾಗುವುದು. ತಮ್ಮ ಶುಭ ಭಾವನೆಯು ಅವರ ಭಾವನೆಯನ್ನು
ಪ್ರಜ್ವಲಿತ ಮಾಡುವುದು. ಹೇಗೆ ದೀಪವು ದೀಪವನ್ನು ಬೆಳಗಿಸುತ್ತದೆ ಹಾಗೆಯೇ ತಮ್ಮ ಶಕ್ತಿಶಾಲಿ ಶುಭ
ಭಾವನೆಯು ಅನ್ಯರಲ್ಲಿಯೂ ಸರ್ವ ಶ್ರೇಷ್ಠ ಭಾವನೆಯನ್ನು ಸಹಜವಾಗಿ ಉತ್ಪನ್ನ ಮಾಡಿಸುವುದು. ಹೇಗೆ
ವಾಣಿಯ ಮೂಲಕ ಈಗ ಇಡೀ ಸ್ಥೂಲ ಕಾರ್ಯವನ್ನು ಮಾಡುತ್ತಿರುತ್ತೀರಿ. ಹಾಗೆಯೇ ಶಾಂತಿಯ ಶಕ್ತಿಯ
ಶ್ರೇಷ್ಠ ಸಾಧನವಾದ ಶುಭ ಸಂಕಲ್ಪದ ಶಕ್ತಿಯಿಂದ ಸ್ಥೂಲ ಕಾರ್ಯವನ್ನೂ ಇದೇ ರೀತಿ ಸಹಜವಾಗಿ ಮಾಡಬಲ್ಲರಿ
ಮತ್ತು ಮಾಡಿಸಬಲ್ಲಿರಿ. ಹೇಗೆ ವೈಜ್ಞಾನಿಕ ಶಕ್ತಿಯ ಸಾಧನಗಳು ದೂರವಾಣಿ, ವೈರ್ಲೆಸ್ ಇವೆ. ಹಾಗೆಯೇ
ಈ ಶುಭ ಸಂಕಲ್ಪವು ಸನ್ಮುಖದಲ್ಲಿ ಮಾತನಾಡುವ ಹಾಗೂ ದೂರವಾಣಿ, ವೈರ್ಲೆಸ್ನ ಮೂಲಕ ಕಾರ್ಯ ಮಾಡುವ
ಅನುಭವ ಮಾಡಿಸುವುದು. ಹೀಗೆ ಶಾಂತಿಯ ಶಕ್ತಿಯಲ್ಲಿ ವಿಶೇಷತೆಗಳಿವೆ. ಶಾಂತಿಯ ಶಕ್ತಿಯು
ಕಡಿಮೆಯೇನಿಲ್ಲ. ಆದರೆ ಈಗ ವಾಣಿಯ ಶಕ್ತಿಗೆ ಸ್ಥೂಲ ಸಾಧನಗಳನ್ನು ಹೆಚ್ಚಿನದಾಗಿ ಕಾರ್ಯದಲ್ಲಿ
ತೊಡಗಿಸುತ್ತೀರಿ. ಆದ್ದರಿಂದ ಇದು ಸಹಜವೆನಿಸುತ್ತದೆ. ಶಾಂತಿಯ ಶಕ್ತಿಯ ಸಾಧನಗಳನ್ನು ಪ್ರಯೋಗದಲ್ಲಿ
ತಂದಿಲ್ಲ, ಆದ್ದರಿಂದ ಇದರ ಅನುಭವವಿಲ್ಲ. ವಾಣಿಯ ಸೇವೆಯು ಸಹಜವೆನಿಸುತ್ತದೆ. ಇದು
ಕಷ್ಟವೆನಿಸುತ್ತದೆ. ಆದರೆ ಸಮಯ ಪರಿವರ್ತನೆಯ ಪ್ರಮಾಣ ಈ ಶಾಂತಿಯ ಶಕ್ತಿಯ ಸಾಧನವನ್ನು ಪ್ರಯೋಗದಲ್ಲಿ
ತರಲೇ ಬೇಕಾಗುವುದು.
ಆದ್ದರಿಂದ ಈ ಶಾಂತಿದೇವ ಶ್ರೇಷ್ಠ ಆತ್ಮಗಳೇ, ಈ ಶಾಂತಿಯ ಶಕ್ತಿಯನ್ನು ಅನುಭವದಲ್ಲಿ ತಂದುಕೊಳ್ಳಿ.
ಹೇಗೆ ವಾಣಿಯ ಅಭ್ಯಾಸವನ್ನು ಮಾಡುತ್ತಾ - ಮಾಡುತ್ತಾ ವಾಣಿಯಲ್ಲಿ ಶಕ್ತಿಶಾಲಿಗಳಾಗಿ ಬಿಟ್ಟಿದ್ದೀರಿ.
ಹಾಗೆಯೇ ಶಾಂತಿಯ ಶಕ್ತಿಯ ಅಭ್ಯಾಸಿಗಳಾಗುತ್ತಾ ಹೋಗಿರಿ. ಮುಂದೆ ಹೋದಂತೆ ವಾಣಿ ಹಾಗೂ ಸ್ಥೂಲ
ಸಾಧನಗಳ ಮೂಲಕ ಸೇವೆ ಮಾಡಲು ಸಮಯ ಸಿಗುವುದಿಲ್ಲ. ಇಂತಹ ಸಮಯದಲ್ಲಿ ಶಾಂತಿಯ ಶಕ್ತಿಯ ಸಾಧನಗಳು
ಅವಶ್ಯಕವಾಗುತ್ತವೆ ಏಕೆಂದರೆ ಯಾವುದೆಷ್ಟು ಮಹಾನ್ ಶಕ್ತಿಶಾಲಿಯಾಗಿರುವುದೋ ಅದು ಅತಿ
ಸೂಕ್ಷ್ಮವಾಗಿರುತ್ತದೆ ಅಂದಾಗ ವಾಣಿಗಿಂತಲೂ ಶುದ್ಧ ಸಂಕಲ್ಪವು ಸೂಕ್ಷ್ಮವಾಗಿದೆ ಆದ್ದರಿಂದ
ಸೂಕ್ಷ್ಮದ ಪ್ರಭಾವವು ಶಕ್ತಿಶಾಲಿಯಾಗಿರುವುದು. ಈಗಲೂ ಅನುಭವಿಗಳಾಗಿದ್ದೀರಿ, ಎಲ್ಲಿಯಾದರೂ ವಾಣಿಯ
ಮೂಲಕ ಯಾವುದೇ ಕಾರ್ಯವು ಸಿದ್ಧವಾಗಲಿಲ್ಲವೆಂದರೆ ಇವರು ವಾಣಿಯಿಂದ ತಿಳಿದುಕೊಳ್ಳುವುದಿಲ್ಲ, ಶುಭ
ಭಾವನೆಯಿಂದ ಪರಿವರ್ತನೆ ಆಗುತ್ತಾರೆಂದು ತಿಳಿದುಕೊಳ್ಳುತ್ತೀರಿ. ಎಲ್ಲಿ ವಾಣಿಯು ಕಾರ್ಯವನ್ನು ಸಫಲ
ಮಾಡಲು ಸಾಧ್ಯವಾಗುವುದಿಲ್ಲವೋ ಅಲ್ಲಿ ಶಾಂತಿಯ ಶಕ್ತಿಯ ಸಾಧನವಾದ ಶುಭ ಸಂಕಲ್ಪ, ಶುಭ ಭಾವನೆ,
ನಯನಗಳ ಭಾಷೆಯ ಮೂಲಕ ದಯೆ ಮತ್ತು ಸ್ನೇಹದ ಅನುಭೂತಿಯು ಕಾರ್ಯವನ್ನು ಸಿದ್ಧ ಮಾಡಲು ಸಾಧ್ಯತೆಯಿದೆ.
ಹೇಗೆ ಈಗಲೂ ಸಹ ಯಾರಾದರೂ ವಾದ-ವಿವಾದ ಮಾಡುವವರು ಬರುತ್ತಾರೆಂದರೆ ವಾಣಿಯಿಂದ ಇನ್ನೂ ಹೆಚ್ಚಿನದಾಗಿ
ವಾದ - ವಿವಾದದಲ್ಲಿ ಬಂದು ಬಿಡುತ್ತಾರೆ. ಅಂತಹವರನ್ನು ನೆನಪಿನಲ್ಲಿ ಕುಳ್ಳರಿಸಿ ಶಾಂತಿಯ ಶಕ್ತಿಯ
ಅನುಭವ ಮಾಡಿಸುತ್ತೀರಲ್ಲವೆ. ಒಂದುವೇಳೆ ಒಂದು ಕ್ಷಣವಾದರೂ ನೆನಪಿನ ಮೂಲಕ ಶಾಂತಿಯ ಅನುಭವ ಮಾಡಿ
ಬಿಡುತ್ತಾರೆಂದರೆ ಸ್ವಯಂ ತಮ್ಮ ವಾದ-ವಿವಾದದ ಬುದ್ಧಿಯನ್ನು ಶಾಂತಿಯ ಅನುಭೂತಿಯ ಮುಂದೆ ಸಮರ್ಪಣೆ
ಮಾಡಿ ಬಿಡುತ್ತಾರೆ. ಆದ್ದರಿಂದ ಈ ಶಾಂತಿಯ ಶಕ್ತಿಯ ಅನುಭವವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿ.
ಇನ್ನು ಈ ಶಾಂತಿಯ ಶಕ್ತಿಯ ಅನುಭೂತಿಯು ಬಹಳ ಕಡಿಮೆಯಿದೆ, ಶಾಂತಿಯ ಶಕ್ತಿಯ ರಸವು ಇಲ್ಲಿಯವರೆವಿಗೂ
ಅನೇಕರು ಕೇವಲ ಅಂಚಲಿ ಮಾತ್ರವಷ್ಟೆ ಅನುಭವ ಮಾಡಿದ್ದಾರೆ. ಹೇ ಶಾಂತಿದೇವ, ತಮ್ಮ ಭಕ್ತರು ತಮ್ಮ ಜಡ
ಚಿತ್ರಗಳಿಂದ ಶಾಂತಿಯನ್ನೇ ಹೆಚ್ಚು ಬೇಡುತ್ತಾರೆ ಏಕೆಂದರೆ ಶಾಂತಿಯಲ್ಲಿಯೇ ಸುಖವು ಸಮಾವೇಶವಾಗಿದೆ.
ಅವರು ಅಲ್ಪಕಾಲದ ಅನುಭವವನ್ನೂ ಮಾಡುತ್ತಾರೆ ಅಂದಾಗ ಬಾಪ್ದಾದಾ ನೋಡುತ್ತಿದ್ದರು, ಶಾಂತಿಯ ಶಕ್ತಿಯ
ಅನುಭವಿ ಆತ್ಮಗಳು ಎಷ್ಟು ಮಂದಿ ಇದ್ದಾರೆ, ವರ್ಣನೆ ಮಾಡುವವರು ಎಷ್ಟು ಮಂದಿ ಇದ್ದಾರೆ ಮತ್ತು
ಪ್ರಯೋಗ ಮಾಡುವವರು ಎಷ್ಟು ಮಂದಿ ಇದ್ದಾರೆ. ಇದಕ್ಕಾಗಿ ಅಂತರ್ಮುಖತೆ ಮತ್ತು ಏಕಾಂತವಾಸಿಯಾಗುವ
ಅವಶ್ಯಕತೆಯಿದೆ. ಬಾಹರ್ಮುಖತೆಯಲ್ಲಿ ಬರುವುದು ಸಹಜವಾಗಿದೆ ಆದರೆ ಅಂತರ್ಮುಖಿಯಾಗುವ ಅಭ್ಯಾಸವು ಈಗ
ಸಮಯ ಪ್ರಮಾಣ ಬಹಳಷ್ಟು ಬೇಕು...! ಏಕಾಂತವಾಸಿಗಳಾಗಲು ಸಮಯ ಸಿಗುವುದಿಲ್ಲ, ಅಂತರ್ಮುಖಿ ಸ್ಥಿತಿಯ
ಅನುಭವ ಮಾಡಲು ಸಮಯ ಸಿಗುವುದಿಲ್ಲ ಏಕೆಂದರೆ ಸೇವೆಯ ಪ್ರವೃತ್ತಿ, ವಾಣಿಯ ಶಕ್ತಿಯ ಪ್ರವೃತ್ತಿಯು
ಬಹಳ ಹೆಚ್ಚಾಗಿ ಬಿಟ್ಟಿದೆ ಎಂದು ಕೆಲವು ಮಕ್ಕಳು ಹೇಳುತ್ತಾರೆ. ಆದರೆ ಇದಕ್ಕಾಗಿ ಪ್ರತ್ಯೇಕವಾಗಿ
ಅರ್ಧ ಗಂಟೆ, ಒಂದು ಗಂಟೆಯ ಸಮಯವನ್ನು ತೆಗೆಯುವ ಅವಶ್ಯಕತೆಯಿಲ್ಲ. ಸೇವೆಯ ಪ್ರವೃತ್ತಿಯಲ್ಲಿರುತ್ತಾ
ಮಧ್ಯ-ಮಧ್ಯದಲ್ಲಿ ಇಷ್ಟು ಸಮಯ ಸಿಗುತ್ತದೆ ಅದರಲ್ಲಿ ಏಕಾಂತವಾಸಿಗಳಾಗುವ ಅನುಭವ ಮಾಡಿರಿ.
ಏಕಾಂತವಾಸಿ ಅರ್ಥಾತ್ ಯಾವುದಾದರೂ ಒಂದು ಶಕ್ತಿಶಾಲಿ ಸ್ಥಿತಿಯಲ್ಲಿ ಸ್ಥಿತರಾಗುವುದು. ಬೀಜ ರೂಪ
ಸ್ಥಿತಿಯಲ್ಲಾದರೂ ಸ್ಥಿತರಾಗಿ ಅಥವಾ ಲೈಟ್ಹೌಸ್ಮೈಟ್ ಹೌಸ್ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ
ಅರ್ಥಾತ್ ವಿಶ್ವಕ್ಕೆ ಬೆಳಕು ಮತ್ತು ಶಕ್ತಿಯನ್ನು ಕೊಡುವಂತಹ ಅನುಭೂತಿಯಲ್ಲಿ ಸ್ಥಿತರಾಗಿ ಬಿಡಿ
ಇಲ್ಲವೆ ಫರಿಶ್ತಾ ಸ್ವರೂಪದ ಸ್ಥಿತಿಯ ಮೂಲಕ ಅನ್ಯರಿಗೂ ಅವ್ಯಕ್ತ ಸ್ಥಿತಿಯ ಅನುಭವ ಮಾಡಿಸಿ. ಒಂದು
ಕ್ಷಣ ಅಥವಾ ಒಂದು ನಿಮಿಷವಾದರೂ ಒಂದುವೇಳೆ ಈ ಸ್ಥಿತಿಯಲ್ಲಿ ಏಕಾಗ್ರವಾಗಿ ಸ್ಥಿತರಾಗಿ ಬಿಟ್ಟರೆ ಈ
ಒಂದು ನಿಮಿಷದ ಸ್ಥಿತಿಯು ಸ್ವಯಂ ತಮಗೆ ಮತ್ತು ಅನ್ಯರಿಗೂ ಬಹಳ ಲಾಭವನ್ನು ತರುತ್ತದೆ. ಕೇವಲ ಇದರ
ಅಭ್ಯಾಸ ಬೇಕು. ಈಗ ಒಂದು ನಿಮಿಷವೂ ಬಿಡುವು ಸಿಗದೇ ಇರುವಂತಹವರು ಯಾರಿದ್ದಾರೆ? ಮೊದಲು ಟ್ರಾಫಿಕ್
ಕಂಟ್ರೋಲ್ನ್ ಕಾರ್ಯಕ್ರಮವನ್ನು ಜಾರಿಗೆ ತಂದಾಗ ಇದು ಹೇಗೆ ಸಾಧ್ಯ? ಸೇವೆಯ ಪ್ರವೃತ್ತಿಯು ಬಹಳ
ದೊಡ್ಡದಾಗಿದೆ. ಬ್ಯುಸಿ ಆಗಿರುತ್ತೇವೆಂದು ಕೆಲವರು ಯೋಚಿಸುತ್ತಿದ್ದರು ಆದರೆ
ಲಕ್ಷವನ್ನಿಟ್ಟಿದ್ದರಿಂದ ಈಗ ಆಗುತ್ತಿದೆಯಲ್ಲವೆ. ಕಾರ್ಯಕ್ರಮವು ನಡೆಯುತ್ತಿದೆಯಲ್ಲವೆ.
ಸೇವಾಕೇಂದ್ರಗಳಲ್ಲಿಯೂ ಈ ಟ್ರಾಫಿಕ್ ಕಂಟ್ರೋಲ್ನ ನಿಯಮವನ್ನು ಪಾಲಿಸುತ್ತೀರೋ ಅಥವಾ ಕೆಲವೊಮ್ಮೆ
ಪಾಲಿಸುತ್ತಾ, ಕೆಲವೊಮ್ಮೆ ತಪ್ಪಿಸಿ ಬಿಡುತ್ತೀರೋ? ಇದೊಂದು ಬ್ರಾಹ್ಮಣ ಕುಲದ ರೀತಿಯಾಗಿದೆ,
ನಿಯಮವಾಗಿದೆ. ಹೇಗೆ ಅನ್ಯನಿಯಮಗಳನ್ನು ಅವಶ್ಯಕವೆಂದು ತಿಳಿಯುತ್ತೀರೋ ಹಾಗೆಯೇ ಇದೂ ಸಹ
ಸ್ವ-ಉನ್ನತಿಗಾಗಿ ಹಾಗೂ ಸೇವೆಯ ಸಫಲತೆಗಾಗಿ, ಸೇವಾಕೇಂದ್ರದ ವಾತಾವರಣಕ್ಕಾಗಿ ಬಹಳ ಅವಶ್ಯಕವಾಗಿದೆ.
ಹೀಗೆ ಅಂತರ್ಮುಖಿ, ಏಕಾಂತವಾಸಿಗಳಾಗುವ ಅಭ್ಯಾಸವನ್ನು ಇಟ್ಟುಕೊಂಡು ತಮ್ಮ ಹೃದಯದ ಲಗನ್ನಿನಿಂದ
ಮಧ್ಯ-ಮಧ್ಯದಲ್ಲಿ ಸಮಯವನ್ನು ತೆಗೆಯಿರಿ. ಮಹತ್ವವನ್ನು ಅರಿತುಕೊಂಡಿರುವವರಿಗೆ ಸಮಯವು ಸ್ವತಹವಾಗಿ
ಸಿಕ್ಕಿ ಬಿಡುತ್ತದೆ. ಮಹತ್ವಿಕೆ ಇಲ್ಲವೆಂದರೆ ಸಮಯವೂ ಸಿಗುವುದಿಲ್ಲ. ಮನಸ್ಸು, ಬುದ್ಧಿಯನ್ನು ಒಂದು
ಶಕ್ತಿಶಾಲಿ ಸ್ಥಿತಿಯಲ್ಲಿ ಸ್ಥಿತ ಮಾಡುವುದೇ ಏಕಾಂತವಾಸಿಗಳಾಗುವುದಾಗಿದೆ. ಹೇಗೆ ಸಾಕಾರದಲ್ಲಿ
ಬ್ರಹ್ಮಾ ತಂದೆಯನ್ನು ನೋಡಿದಿರಿ, ಸಂಪೂರ್ಣತೆಯ ಸಮೀಪತೆಯ ಚಿಹ್ನೆಯು ಸೇವೆಯಲ್ಲಿರುತ್ತಾ
ಸಮಾಚಾರಗಳನ್ನೂ ಕೇಳುತ್ತಾ-ಕೇಳುತ್ತಾ ಏಕಾಂತವಾಸಿ ಆಗಿ ಬಿಡುತ್ತಿದ್ದರು. ಈ ಅನುಭವ ಮಾಡಿದಿರಲ್ಲವೆ.
ಒಂದು ಗಂಟೆಯ ಸಮಾಚಾರವನ್ನೂ ಸಹ 5 ನಿಮಿಷಗಳಲ್ಲಿ ಸಾರ ರೂಪದಲ್ಲಿ ತಿಳಿದುಕೊಂಡು ಮಕ್ಕಳನ್ನು ಖುಷಿ
ಪಡಿಸಿದರು ಮತ್ತು ತಮ್ಮ ಅಂತರ್ಮುಖಿ, ಏಕಾಂತವಾಸಿ ಸ್ಥಿತಿಯನ್ನು ಅನುಭವ ಮಾಡಿಸಿದರು. ಸಂಪೂರ್ಣತೆಯ
ಚಿಹ್ನೆಯು ಅಂತರ್ಮುಖಿ, ಏಕಾಂತವಾಸಿ ಸ್ಥಿತಿಯನ್ನು ನಡೆಯುತ್ತಾ-ತಿರುಗಾಡುತ್ತಾ,
ಕೇಳುತ್ತಾ-ಮಾಡುತ್ತಾ ಅನುಭವ ಮಾಡಿದರು. ಅಂದಮೇಲೆ ಫಾಲೋ ಫಾದರ್ ಮಾಡಲು ಸಾಧ್ಯವಿಲ್ಲವೆ? ಬ್ರಹ್ಮಾ
ತಂದೆಗಿಂತಲೂ ಹೆಚ್ಚಿನ ಜವಾಬ್ದಾರಿಯು ಯಾರಿಗಾದರೂ ಇದೆಯೇ? ನಾನು ಬಹಳ ವ್ಯಸ್ಥನಾಗಿದ್ದೇನೆಂದು
ಬ್ರಹ್ಮಾ ತಂದೆಯು ಎಂದಿಗೂ ಹೇಳಲ್ಲಿಲ್ಲ ಆದರೆ ಮಕ್ಕಳ ಮುಂದೆ ಉದಾಹರಣ ಮೂರ್ತಿ ಆದರೂ. ಹೀಗೆ ಈಗ
ಸಮಯ ಪ್ರಮಾಣ ಅಭ್ಯಾಸದ ಅವಶ್ಯಕತೆ ಇದೆ. ಎಲ್ಲಾ ಸೇವಾ ಸಾಧನಗಳಿದ್ದರೂ ಸಹ ಶಾಂತಿಯ ಶಕ್ತಿಯ ಸೇವೆಯ
ಅವಶ್ಯಕತೆಯಿರುವುದು ಏಕೆಂದರೆ ಶಾಂತಿಯ ಶಕ್ತಿಯು ಅನುಭೂತಿ ಮಾಡಿಸುವ ಶಕ್ತಿಯಾಗಿದೆ. ವಾಣಿಯ
ಶಕ್ತಿಯ ಬಾಣವು ಹೆಚ್ಚೆಂದರೆ ಬುದ್ಧಿಯವರೆಗೆ ನಾಟುತ್ತದೆ ಆದರೆ ಅನುಭೂತಿಯ ಬಾಣವು ಹೃದಯದ ತನಕ
ನಾಟುತ್ತದೆ. ಅಂದಾಗ ಸಮಯ ಪ್ರಮಾಣ ಒಂದು ಸೆಕೆಂಡಿನಲ್ಲಿ ಅನುಭೂತಿ ಮಾಡಿಸಿ, ಇದೇ ಸುದ್ದಿಯು
ಹರಡುವುದು. ಕೇಳುವ ಹೇಳುವುದರಿಂದ ಸುಸ್ತಾಗಿ ಬರುತ್ತಾರೆ. ಶಾಂತಿಯ ಶಕ್ತಿಯ ಸಾಧನಗಳ ಮೂಲಕ
ದೃಷ್ಟಿಯಿಂದ ಪರಿವರ್ತನೆ ಮಾಡಿ ಬಿಡಿ. ಶುಭ ಸಂಕಲ್ಪದಿಂದ ಆತ್ಮಗಳ ವ್ಯರ್ಥ ಸಂಕಲ್ಪಗಳನ್ನು ಸಮಾಪ್ತಿ
ಮಾಡಿರಿ. ಶುಭ ಭಾವನೆಯಿಂದ ತಂದೆಯ ಕಡೆ ಸ್ನೇಹದ ಭಾವನೆಯನ್ನು ಉತ್ಪನ್ನ ಮಾಡಿಸಿ. ಆ ಆತ್ಮಗಳನ್ನು
ಹೀಗೆ ಶಾಂತಿಯ ಶಕ್ತಿಯಿಂದ ಸಂತುಷ್ಟ ಮಾಡಿದಾಗ ತಾವು ಚೈತನ್ಯ ಶಾಂತಿದೇವ ಆತ್ಯಗಳ ಮುಂದೆ 'ಶಾಂತಿ
ದೇವ, ಶಾಂತಿ ದೇವ' ಎಂದು ಹೇಳಿ ಮಹಿಮೆ ಮಾಡುತ್ತಾರೆ ಮತ್ತು ಇದೇ ಅಂತಿಮ ಸಂಸ್ಕಾರವನ್ನು
ತೆಗೆದುಕೊಂಡು ಹೋಗುವ ಕಾರಣ ದ್ವಾಪರದಲ್ಲಿ ಭಕ್ತಾತ್ಮರಾಗಿ ತಮ್ಮ ಜಡ ಚಿತ್ರಗಳ ಮಹಿಮೆ ಮಾಡುತ್ತಾರೆ.
ಈ ಟ್ರಾಫಿಕ್ ಕಂಟ್ರೋಲ್ನ ಮಹತ್ವಿಕೆಯು ಬಹಳ ದೊಡ್ಡದಾಗಿದೆ ಮತ್ತು ಎಷ್ಟು ಅವಶ್ಯಕವಾಗಿದೆ - ಇದನ್ನು
ಮತ್ತೆಂದಾದರೂ ತಿಳಿಸುತ್ತೇವೆ. ಆದರೆ ಶಾಂತಿಯ ಶಕ್ತಿಯ ಮಹತ್ವವನ್ನು ಸ್ವಯಂ ಅರಿತುಕೊಳ್ಳಿ ಮತ್ತು
ಸೇವೆಯಲ್ಲಿ ತೊಡಗಿಸಿ. ತಿಳಯಿತೆ? ಒಳ್ಳೆಯದು ನಾಲ್ಕಾರು ಕಡೆಯ ಶಾಂತಿ ದೇವ ಶ್ರೇಷ್ಠ ಆತ್ಮರಿಗೆ,
ನಾಲ್ಕಾರು ಕಡೆಯ ಅಂತರ್ಮುಖಿ ಮಹಾನ್ ಆತ್ಮಗಳಗೆ, ಸದಾ ಏಕಾಂತವಾಸಿಗಳಾಗಿ ಕರ್ಮದಲ್ಲಿ ಬರುವಂತಹ
ಕರ್ಮಯೋಗಿ ಶ್ರೇಷ್ಠಾತ್ಮಗಳಿಗೆ, ಸದಾ ಶಾಂತಿಯ ಶಕ್ತಿಯನ್ನು ಪ್ರಯೋಗ ಮಾಡುವಂತಹ ಶ್ರೇಷ್ಠ ಯೋಗಿ
ಆತ್ಮಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ದಾದೀಜಿಯವರು
ಒಂದು ದಿನಕ್ಕಾಗಿ ಗುಜರಾತಿನ ಮೇಳದಲ್ಲಿ ಹೋಗುವುದಕ್ಕಾಗಿ ಅನುಮತಿ ತೆಗೆದುಕೊಳ್ಳುತ್ತಿದ್ದಾರೆ:
ವಿಶೇಷ ಆತ್ಮರ ಪ್ರತೀ ಹೆಜ್ಜೆಯಲ್ಲಿ ಪದಮಗಳ ಸಂಪಾದನೆಯಿದೆ. ಹಿರಿಯರ ಸಹಯೋಗವೂ ಸಹ ಛತ್ರಛಾಯೆಯಾಗಿ
ಸಂಪೂರ್ಣತೆಯಲ್ಲಿ ತರುತ್ತಾರೆ. ಎಲ್ಲಿಯೇ ಹೋಗಿರಿ, ಅಲ್ಲಿ ಎಲ್ಲರಿಗೂ ಒಬ್ಬೊಬ್ಬರ ಹೆಸರಿನಿಂದ
ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿಸಿರಿ. ಹೆಸರ ಮಾಲೆಯಂತು ಭಕ್ತಿಯಲ್ಲಿಯೂ ಮಕ್ಕಳು ಬಹಳ ಜಪ
ಮಾಡಿದ್ದಾರೆ. ಈಗ ಈ ಮಾಲೆಯನ್ನು ತಂದೆಯು ಪ್ರಾರಂಭಿಸಿದರೆ ಬಹಳ ದೊಡ್ಡ ಮಾಲೆಯೇ ಆಗಿ ಬಿಡುತ್ತದೆ.
ಆದ್ದರಿಂದ ಎಲ್ಲಿ ಯಾವುದೇ ಮಕ್ಕಳು (ವಿಶೇಷ ಆತ್ಮರು) ಹೋಗುತ್ತಾರೆ, ಅಲ್ಲಿ ವಿಶೇಷವಾದ
ಒಲವು-ಉತ್ಸಾಹವು ಹೆಚ್ಚಾಗುತ್ತದೆ. ವಿಶೇಷ ಆತ್ಮರು ಹೋಗುವುದು ಅಂದರೆ ಸೇವೆಯಲ್ಲಿ ಮತ್ತಷ್ಟು
ವಿಶೇಷತೆ ಬರುವುದಾಗಿದೆ. ಇಲ್ಲಿಂದ ಪ್ರಾರಂಭವಾಗುತ್ತದೆ, ಕೇವಲ ಧರಣಿಯಲ್ಲಿ ಚರಣವನ್ನು ಸುತ್ತಾಡಿಸಿ
ಹೋಗಬೇಕು. ಚರಣವನ್ನು ಸುತ್ತಾಡಿಸುವುದು ಅಂದರೆ ಪರಿಕ್ರಮಣ ಹಾಕುವುದು. ಇಲ್ಲಿ ಸೇವೆಯಲ್ಲಿ
ಪರಿಕ್ರಮಣ ಹಾಕುವಿರಿ, ಅಲ್ಲಿ ಭಕ್ತಿಯಲ್ಲಿ ಅವರುಗಳು ಚರಣವನ್ನು ಇಡುವ ಮಹತ್ವವನ್ನು ಮಾಡಿದ್ದಾರೆ
ಆದರೆ ಎಲ್ಲವೂ ಇಲ್ಲಿಂದಲೇ ಆರಂಭವಾಗುತ್ತದೆ. ಭಲೆ ಎಲ್ಲಿಗಾದರೂ ಅರ್ಧ ಗಂಟೆಗಾಗಲಿ, ಒಂದು
ಗಂಟೆಗಾದರೂ ಹೋಗುತ್ತೀರೆಂದರೆ ಎಲ್ಲರೂ ಖುಷಿಯಾಗಿ ಬಿಡುವರು. ಆದರೆ ಇಲ್ಲಿ ಸೇವೆಯಾಗುತ್ತದೆ.
ಭಕ್ತಿಯಲ್ಲಿ ಕೇವಲ ಚರಣವನ್ನು ಇಡುವುದರಿಂದ ಖುಷಿಯ ಅನುಭವ ಮಾಡುತ್ತಾರೆ. ಎಲ್ಲಾ ಸ್ಥಾಪನೆಯೂ
ಇಲ್ಲಿಂದಲೇ ಆಗುತ್ತಿದೆ. ಭಕ್ತಿ ಮಾರ್ಗದ ತಳಪಾಯವೂ ಇಲ್ಲಿಂದ ಬೀಳುತ್ತದೆ, ಕೇವಲ ರೂಪವಷ್ಟೇ ಬದಲಾಗಿ
ಬಿಡುತ್ತದೆ. ಅಂದಮೇಲೆ ಈ ಮೇಳಕ್ಕಾಗಿ ಯಾರೆಲ್ಲರೂ ನಿಮಿತ್ತರಾಗಿದ್ದಾರೆ ಅರ್ಥಾತ್ ಮಿಲನ ಮಾಡುವ
ಸೇವೆಗೆ ನಿಮಿತ್ತರಾಗಿದ್ದಾರೆ. ಅವರೆಲ್ಲರಿಗೂ ಬಾಪ್ದಾದಾರವರ ಮಿಲನಕ್ಕೆ ಮೊದಲೇ ಮೇಳವನ್ನು
ಆಚರಿಸುತ್ತಾ ಇದ್ದಾರೆ. ಇದು ತಂದೆ ಹಾಗೂ ಮಕ್ಕಳ ಮೇಳವಾಗಿದೆ. ಅದು ಸೇವೆಯ ಹೇಳಲಾಗಿದೆ. ಅಂದ ಮೇಲೆ
ಎಲ್ಲರಿಗೂ ಹೃದಯದಿಂದ ನೆನಪು - ಪ್ರೀತಿ. ಒಳ್ಳೆಯದು.
ಪ್ರಪಂಚದಲ್ಲಿ ನೈಟ್ ಕ್ಲಬ್ ಆಗುತ್ತದೆ ಮತ್ತು ಇದು ಅಮೃತವೇಳೆಯ ಕ್ಲಬ್ ಆಗಿದೆ.( ದಾದಿಯವರೊಂದಿಗೆ)
ತಾವೆಲ್ಲರೂ ಅಮೃತವೇಳೆಯ ಕ್ಲಬ್ ನ ಸದಸ್ಯರಾಗಿದ್ದೀರಿ. ಎಲ್ಲರೂ ತಮ್ಮನ್ನು ನೋಡಿ ಖುಷಿಯಾಗುವರು.
ವಿಶೇಷ ಆತ್ಮರನ್ನು ನೋಡುತ್ತಿದ್ದರೂ ಖುಷಿಯಾಗುತ್ತದೆ. ಒಳ್ಳೆಯದು.
ಬೀಳ್ಕೊಡುಗೆಯ
ಸಮಯ - ಸದ್ಗುರುವಾರದ ನೆನಪು-ಪ್ರೀತಿ (ಪ್ರಾತಃ 6 ಗಂಟೆ)
ವೃಕ್ಷಪತಿ ದಿನದಂದು ವೃಕ್ಷದ ಮೊದಲ ಆದಿ ಅಮೂಲ್ಯವಾದ ಎಲೆಗಳಿಗೆ ಬಾಬಾರವರ ನೆನಪು - ಪ್ರೀತಿ ಹಾಗೂ
ನಮಸ್ತೆ. ವೃಕ್ಷಪತಿ ದೆಶೆಯಂತು ಎಲ್ಲಾ ಶ್ರೇಷ್ಠಾತ್ಮರ ಮೇಲೆ ಅವಶ್ಯವಾಗಿ ಇದೆ. ರಾಹು ದೆಶೆ ಮತ್ತು
ಅನೇಕ ದೇಶಗಳೆಲ್ಲವೂ ಸಮಾಪ್ತಿಯಾಯಿತು. ಈಗ ಒಂದೇ ಒಂದು ವೃಕ್ಷಪತಿ ದೆಶೆಯು ಪ್ರತಿಯೊಬ್ಬ ಬ್ರಾಹ್ಮಣ
ಆತ್ಮರಿಗೆ ಸದಾ ಇರುತ್ತದೆ. ಅಂದಮೇಲೆ ಬೃಹಸ್ಪತಿ ದೆಶೆಯೂ ಇದೆ ಮತ್ತು ದಿನವೂ ಬೃಹಸ್ಪತಿ ದಿನವಾಗಿದೆ
ಮತ್ತು ವೃಕ್ಷ ಪತಿಯು ತನ್ನ ವೃಕ್ಷದ ಆದಿ ಎಲೆಗಳೊಂದಿಗೆ ಮಿಲನ ಮಾಡುತ್ತಿದ್ದಾರೆ. ಅಂದಾಗ ಸದಾ
ನೆನಪುಗಳಿದೆ ಮತ್ತು ಸದಾ ನೆನಪಿರುತ್ತದೆ. ಸದಾ ಪ್ರೀತಿಯಲ್ಲಿ ಸಮಾವೇಶವಾಗಿರಿ ಮತ್ತು ಸದಾ
ಪ್ರಿಯವಾಗಿರುತ್ತೀರಿ, ತಿಳಿಯಿತೆ!
ವರದಾನ:
ಶಕ್ತಿಶಾಲಿ ಬ್ರೇಕ್ನ ಮೂಲಕ ವರದಾನಿ ರೂಪದಿಂದ ಸೇವೆ ಮಾಡುವಂತಹ ಲೈಟ್ಮೈಟ್ ಹೌಸ್ ಭವ.
ವರದಾನಿ ರೂಪದಿಂದ ಸೇವೆ
ಮಾಡುವುದಕ್ಕಾಗಿ - ಸ್ವಯಂನಲ್ಲಿ ಮೊದಲು ಶುದ್ಧ ಸಂಕಲ್ಪ ಇರಬೇಕು ಹಾಗೂ ಅನ್ಯ ಸಂಕಲ್ಪಗಳನ್ನು
ಸೆಕೆಂಡಿನಲ್ಲಿ ನಿಯಂತ್ರಣ ಮಾಡುವ ವಿಶೇಷ ಅಭ್ಯಾಸ ಇರಬೇಕು. ಇಡೀ ದಿನದಲ್ಲಿ ಶುದ್ಧ ಸಂಕಲ್ಪಗಳ
ಸಾಗರದಲ್ಲಿ ತೇಲಾಡುತ್ತಾ ಇರಿ ಮತ್ತು ಯಾವ ಸಮಯದಲ್ಲಿ ಬೇಕು ಆಗ ಶುದ್ಧ ಸಂಕಲ್ಪಗಳ ಸಾಗರದ ಆಳದಲ್ಲಿ
ಹೋಗಿ ಶಾಂತ ಸ್ವರೂಪರು ಆಗಿ ಬಿಡಿ, ಇದಕ್ಕಾಗಿ ಬ್ರೇಕ್ ಶಕ್ತಿಶಾಲಿ ಆಗಿರಲಿ, ಸಂಕಲ್ಪಗಳ ಮೇಲೆ
ಸಂಪೂರ್ಣ ನಿಯಂತ್ರಣ ಇರಲಿ ಮತ್ತು ಬುದ್ಧಿ ಅಥವಾ ಸಂಸ್ಕಾರಗಳ ಮೇಲೆ ಸಂಪೂರ್ಣ ಅಧಿಕಾರವು ಇರಲಿ,
ಹೀಗಿದ್ದಾಗ ಲೈಟ್ ಮೈಟ್ ಹೌಸ್ ಆಗಿರುತ್ತಾ ವರದಾನಿ ರೂಪದಿಂದ ಸೇವೆಯನ್ನು ಮಾಡಬಹುದು.
ಸ್ಲೋಗನ್:
ಸಂಕಲ್ಪ, ಸಮಯ ಮತ್ತು ಮಾತಿನ ಉಳಿತಾಯ ಮಾಡಿದಾಗ ತಂದೆಯ ಸಹಾಯೋಗವನ್ನು ಕ್ಯಾಚ್ ಮಾಡಲು ಸಾಧ್ಯ.
14-03-87 ಸೈಲೆನ್ಸ್
ಪಾವರ ಜಮಾ ಮಾಡಿಕೊಳ್ಳುವ ಸಾಧನ – ಅಂತರ್ಮುಖಿ ಮತ್ತು ಏಕಾಂತವಾಸಿ ಸ್ಥಿತಿ ರಿವೈಜ್ 18-11-87
1. ಆತ್ಮೀಕ ಸೇನೆಯ ವಿಶೇಷ ಶಸ್ತ್ರ ಯಾವುದಾಗಿದೆ?
2. ಶಾಂತಿಯ ಶಕ್ತಿಯು ಎಂತಹ ಪರಿವರ್ತನೆ ಮಾಡುವಂತಹದಾಗಿದೆ?
3. ನಮ್ಮ ಶಕ್ತಿಶಾಲಿ ಶುಭ ಭಾವನೆಯು ಅನ್ಯರಲ್ಲಿ ಎಂತಹ ಭಾವನೆ ಉತ್ಪನ್ನ ಮಾಡುತ್ತದೆ?
4. ಎಂತಹ ಸಮಯದಲ್ಲಿ ಶಾಂತಿಯ ಶಕ್ತಿಯ ಸಾಧನ ಅವಶ್ಯಕತೆಯಿರುತ್ತದೆ?
5. ಏಕಾಂತವಾಸಿ ಎಂದರೇನು?
6 ಬ್ರಾಹ್ಮಣ ಕುಲದ ರೀತಿ - ನಿಯಮ ಏನಾಗಿದೆ?
7. ಸಂಪೂರ್ಣತೆಯ ಸಮೀಪತೆಯ ಲಕ್ಷಣಗಳೇನು?
8. ಶಾಂತಿಯ ಶಕ್ತಿಯು ಎಂತಹ ವೃತ್ತಿಯವರನ್ನು ಶಾಂತರನ್ನಾಗಿ ಮಾಡುತ್ತದೆ?
9. ಆಂಧ್ರದವರ ವಿಶೇಷತೆ ಏನಾಗಿದೆ?
10. ವರದಾನ ರೂಪದಿಂದ ಸೇವೆ ಮಾಡಲು ಎಂತಹ ಅಭ್ಯಾಸ ಬೇಕಾಗಿದೆ?