07.03.21    Avyakt Bapdada     Kannada Murli    14.11.87     Om Shanti     Madhuban


ಪೂಜ್ಯ ದೇವಾತ್ಮ ಆಗುವ ಸಾಧನ - ಪವಿತ್ರತೆಯ ಶಕ್ತಿ


ಇಂದು ಆತ್ಮಿಕ ಜ್ಯೋತಿಯು ತನ್ನ ಆತ್ಮಿಕ ಪತಂಗಗಳನ್ನು ನೋಡುತ್ತಿದ್ದಾರೆ. ಪ್ರತಿಯೊಂದು ಆತ್ಮಿಕ ಪತಂಗವು ತನ್ನ ಒಲವು-ಉತ್ಸಾಹದ ರೆಕ್ಕೆಗಳಿಂದ ಹಾರುತ್ತಾ-ಹಾರುತ್ತಾ, ಈ ಆತ್ಮಿಕ ಮಹಾ ಸಭೆಯಲ್ಲಿ ತಲುಪಿವೆ. ಈ ಆತ್ಮಿಕ ಮಹಾ ಸಭೆಯು ವಿಚಿತ್ರ ಅಲೌಕಿಕ ಮಹಾಸಭೆ ಆಗಿದೆ ಎನ್ನುವುದು ಆತ್ಮಿಕ ತಂದೆ ಗೊತ್ತಿದೆ ಮತ್ತು ಆತ್ಮಿಕ ಮಕ್ಕಳಿಗೆ ಗೊತ್ತಿದೆ. ಈ ಆತ್ಮಿಕ ಆಕರ್ಷಣೆಯ ಮುಂದೆ ಮಾಯೆಯ ಅನೇಕ ಪ್ರಕಾರದ ಆಕರ್ಷಣೆಗಳು ಕನಿಷ್ಟ ಎನಿಸುತ್ತದೆ, ನಿಸ್ಸಾರವಾಗಿರುವುದು ಎಂಬ ಅನುಭವ ಆಗುತ್ತದೆ. ಈ ಆತ್ಮಿಕ ಆಕರ್ಷಣೆಯು ಸದಾಕಾಲಕ್ಕಾಗಿ ವರ್ತಮಾನ ಮತ್ತು ಭವಿಷ್ಯದ ಅನೇಕ ಜನ್ಮಗಳಿಗಾಗಿ ಹರ್ಷಿತರನ್ನಾಗಿ ಮಾಡುವಂತಹ ಆಕರ್ಷಣೆ ಆಗಿದೆ. ಅನೇಕ ಪ್ರಕಾರದ ದುಃಖ-ಅಶಾಂತಿಯ ಪ್ರಕಂಪನಗಳಿಂದ ದೂರ ಮಾಡುವಂತಹದ್ದಾಗಿದೆ. ಆದ್ದರಿಂದ ಎಲ್ಲಾ ಆತ್ಮಿಕ ಪತಂಗಗಳು ಈ ಮಹಾಸಭೆಯಲ್ಲಿ ತಲುಪಿವೆ.

ಬಾಪ್ದಾದಾರವರು ಎಲ್ಲಾ ಪತಂಗಗಳನ್ನು ನೋಡುತ್ತಾ ಹರ್ಷಿತವಾಗುತ್ತಾ ಇದ್ದಾರೆ. ಎಲ್ಲರ ಮಸ್ತಕದಲ್ಲಿ ಪವಿತ್ರ ಸ್ನೇಹ, ಪವಿತ್ರ ಸ್ನೇಹದ ಸಂಬಂಧ, ಪವಿತ್ರ ಜೀವನದ ಪವಿತ್ರ ದೃಷ್ಟಿ-ವೃತ್ತಿಯ ಲಕ್ಷಣಗಳು ಹೊರ ಹೊಮ್ಮುತ್ತಿವೆ. ಎಲ್ಲರ ಮೇಲೆ ಇವೆಲ್ಲಾ ಪವಿತ್ರ ಚಿಹ್ನೆಗಳ ಸಂಕೇತ ಅಥವಾ ಸೂಚಕವಾಗಿ “ಪ್ರಕಾಶತೆಯ ಕಿರೀಟ” ಹೊಳೆಯುತ್ತಿದೆ. ಸಂಗಮಯುಗದ ಬ್ರಾಹ್ಮಣ ಜೀವನ ವಿಶೇಷತೆ ಆಗಿದೆ - ಪವಿತ್ರತೆಯ ಚಿಹ್ನೆಯಾಗಿ ಈ ಪ್ರಕಾಶತೆಯ ಕಿರೀಟವಿದೆ, ಇದು ಪ್ರತಿಯೊಂದು ಆತ್ಮನಿಗೂ ತಂದೆಯ ಮೂಲಕ ಪ್ರಾಪ್ತಿ ಆಗಿರುತ್ತದೆ. ಮಹಾನ್ ಆತ್ಮ, ಪರಮಾತ್ಮ-ಭಾಗ್ಯವಂತ ಆತ್ಮ, ಶ್ರೇಷ್ಠಾತಿ ಶ್ರೇಷ್ಠ ಆತ್ಮರ ಚಿಹ್ನೆಯಾಗಿ ಈ ಕಿರೀಟವಿದೆ. ಅಂದಮೇಲೆ ತಾವೆಲ್ಲರೂ ಇಂತಹ ಕಿರೀಟಧಾರಿ ಆಗಿರುವಿರಾ? ಬಾಪ್ದಾದಾ ಅಥವಾ ಮಾತಾಪಿತ ಪ್ರತಿಯೊಂದು ಮಕ್ಕಳ ಜನ್ಮವಾಗುತ್ತಿದ್ದಂತೆಯೇ “ಪವಿತ್ರ ಭವ”ದ ವರದಾನವನ್ನು ಕೊಡುತ್ತಾರೆ. ಪವಿತ್ರತೆ ಇಲ್ಲದಿದ್ದರೆ ಬ್ರಾಹ್ಮಣ ಜೀವನವೇ ಇಲ್ಲದಂತೆ ಆಗುತ್ತದೆ. ಆದಿ ಸ್ಥಾಪನೆಯಿಂದ ಈಗಿನವರೆಗೂ ಪವಿತ್ರತೆಯ ಮಾತಿನಲ್ಲಿಯೇ ವಿಘ್ನಗಳು ಉಂಟಾಗುತ್ತಾ ಬಂದಿದೆ ಏಕೆಂದರೆ ಪವಿತ್ರತೆಯ ಬುನಾದಿಯೇ 21 ಜನ್ಮಗಳ ಬುನಾದಿ ಆಗಿದೆ. ಪವಿತ್ರತೆಯ ಪ್ರಾಪ್ತಿಯು ತಾವು ಬ್ರಾಹ್ಮಣ ಆತ್ಮರನ್ನು ಹಾರುವ ಕಲೆಯ ಕಡೆಗೆ ಸಹಜವಾಗಿ ಕರೆದುಕೊಂಡು ಹೋಗಲು ಆಧಾರವಾಗಿದೆ.

ಹೇಗೆ ಕರ್ಮಗಳ ಗತಿಯು ಅತಿ ಗುಹ್ಯವೆಂದು ಮಹಿಮೆಯಿದೆ, ಅಂದಮೇಲೆ ಪವಿತ್ರತೆಯ ಪರಿಭಾಷೆಯೂ ಸಹ ಅತಿ ಗುಹ್ಯವಾಗಿದೆ. ಪವಿತ್ರತೆಯು ಮಾಯೆಯ ಅನೇಕ ವಿಘ್ನಗಳಿಂದ ಪಾರಾಗುವ ಛತ್ರಛಾಯೆ ಆಗಿದೆ. ಪವಿತ್ರತೆಯನ್ನೇ ಸುಖ-ಶಾಂತಿಯ ಜನನಿ ಎಂದು ಹೇಳಲಾಗುತ್ತದೆ. ಯಾವುದೇ ಪ್ರಕಾರದ ಅಪವಿತ್ರತೆಯು ದುಃಖ ಅಥವಾ ಅಶಾಂತಿಯ ಅನುಭೂತಿ ಮಾಡಿಸುತ್ತದೆ ಅಂದಾಗ ಇಡೀ ದಿನದಲ್ಲಿ ಪರಿಶೀಲನೆ ಮಾಡಿಕೊಳ್ಳಿರಿ - ಯಾವುದೇ ಸಮಯದಲ್ಲಿ ದುಃಖ ಅಥವಾ ಅಶಾಂತಿಯ ಪ್ರಕಂಪನಗಳ ಅನುಭವ ಆಗುತ್ತದೆಯೇ? ಅದರ ಬೀಜವಾಗಿದೆ - ಅಪವಿತ್ರತೆ. ಭಲೆ ಮುಖ್ಯವಾದ ವಿಕಾರಗಳ ಕಾರಣದಿಂದ ಇರಬಹುದು ಅಥವಾ ವಿಕಾರಗಳ ಸೂಕ್ಷ್ಮ ರೂಪದ ಕಾರಣ ಇರಬಹುದು, ಪವಿತ್ರ ಜೀವನ ಅಂದರೆ ದುಃಖ-ಅಶಾಂತಿಯ ಚಿಹ್ನೆಯೇ ಇರಬಾರದು. ಯಾವುದೇ ಕಾರಣದಿಂದ ಅಂಶದಷ್ಟು ದುಃಖದ ಅನುಭವವಾಗುತ್ತದೆ ಎಂದರೆ ಸಂಪೂರ್ಣ ಪವಿತ್ರತೆಯಲ್ಲಿ ಕೊರತೆಯಿದೆ. ಪವಿತ್ರ ಜೀವನ ಎಂದರೆ ಬಾಪ್ದಾದಾರವರ ಮೂಲಕ ಪ್ರಾಪ್ತಿಯಾಗಿರುವ ವರದಾನಿ ಜೀವನವಾಗಿದೆ. ಬ್ರಾಹ್ಮಣ ಸಂಕಲ್ಪದಲ್ಲಿ ಅಥವಾ ಮುಖದಿಂದ ಈ ಶಬ್ಧವೆಂದಿಗೂ ಬರಬಾರದು - ಈ ಮಾತಿನ ಕಾರಣ ಅಥವಾ ಈ ವ್ಯಕ್ತಿಯ ವ್ಯವಹಾರದ ಕಾರಣ ನನಗೆ ದುಃಖವಾಯಿತು. ಕೆಲವೊಮ್ಮೆಗೂ ಸಾಧಾರಣ ರೀತಿಯಲ್ಲಿ ಇಂತಹ ಮಾತನ್ನು ಮಾತನಾಡಬಹುದು ಅಥವಾ ಅನುಭವವನ್ನೂ ಮಾಡುತ್ತೀರಿ - ಇದು ಪವಿತ್ರ ಬ್ರಾಹ್ಮಣ ಜೀವನದ ಮಾತಲ್ಲ. ಬ್ರಾಹ್ಮಣ ಜೀವನ ಎಂದರೆ ಪ್ರತೀ ಸೆಕೆಂಡ್ ಸಹ ಸುಖಮಯವಾದ ಜೀವನ. ಭಲೆ ದುಃಖದ ದೃಶ್ಯವೇ ಇರಬಹುದು ಆದರೆ ಎಲ್ಲಿ ಪವಿತ್ರತೆಯ ಶಕ್ತಿಯಿದೆ, ಅವರೆಂದಿಗೂ ದುಃಖದ ದೃಶ್ಯದಲ್ಲಿಯೂ ದುಃಖದ ಅನುಭವವನ್ನು ಮಾಡುವುದಿಲ್ಲ ಆದರೆ ದುಃಖಹರ್ತ ಸುಖ-ಕರ್ತ ತಂದೆಯ ಸಮಾನ ದುಃಖದ ವಾಯುಮಂಡಲದಲ್ಲಿ ದುಃಖಮಯ ವ್ಯಕ್ತಿಗಳಿಗೂ ಸುಖ-ಶಾಂತಿಯ ವರದಾನಿಯಾಗಿ, ಸುಖ-ಶಾಂತಿಯ ಹನಿಯನ್ನು ಕೊಡುವರು, ಮಾಸ್ಟರ್ ಸುಖಕರ್ತ ಆಗಿರುತ್ತಾ ದುಃಖವನ್ನು ಆತ್ಮಿಕ ಸುಖದ ವಾಯುಮಂಡಲದಲ್ಲಿ ಪರಿವರ್ತನೆ ಮಾಡುವರು - ಇವರಿಗೇ ದುಃಖ-ಹರ್ತ ಸುಖ-ಕರ್ತ ಎಂದು ಹೇಳಲಾಗುತ್ತದೆ.

ಯಾವಾಗ ವಿಜ್ಞಾನ ಶಕ್ತಿಯು ಅಲ್ಪಕಾಲಕ್ಕಾಗಿ ಯಾವುದೇ ದುಃಖ-ನೋವುಗಳನ್ನು ಸಮಾಪ್ತಿ ಮಾಡಿ ಬಿಡುತ್ತದೆ ಅಂದಮೆಲೆ ಪವಿತ್ರತೆಯ ಶಕ್ತಿ ಅರ್ಥಾತ್ ಶಾಂತಿಯ ಶಕ್ತಿಯು ದುಃಖ-ನೋವುಗಳನ್ನು ಸಮಾಪ್ತಿ ಮಾಡಲು ಸಾಧ್ಯವಿಲ್ಲವೇ? ವಿಜ್ಞಾನದ ಔಷಧಿಗಳಲ್ಲಿ ಅಲ್ಪಕಾಲದ ಶಕ್ತಿಯಿದೆ, ಅಂದಮೇಲೆ ಪವಿತ್ರತೆಯ ಶಕ್ತಿಯಲ್ಲಿ- ಪವಿತ್ರತೆಯ ವರದಾನದಲ್ಲಿ ಇನ್ನೆಷ್ಟು ಶ್ರೇಷ್ಠ ಶಕ್ತಿಯಿದೆ? ಸಮಯದ ಅನುಸಾರವಾಗಿ ವರ್ತಮಾನದಲ್ಲಿ ಈಗಿನ ವ್ಯಕ್ತಿಯು ಔಷಧಿಗಳಿಂದ ಕಾರಣ-ಅಕಾರಣದಿಂದ ಬೇಸರವಾಗುತ್ತಾರೆ, ರೋಗಗಳು ಅತಿಯಲ್ಲಿ ಹೋಗುತ್ತಿವೆ ಅಂದಾಗ ಸಮಯದಲ್ಲಿ ತಾವು ಪವಿತ್ರ ದೇವ ಅಥವಾ ದೇವಿಯರ ಬಳಿ ಆಶೀರ್ವಾದಕ್ಕಾಗಿ ಬರುತ್ತಾರೆ - ನಮ್ಮನ್ನು ದುಃಖ-ಅಶಾಂತಿಯಿಂದ ಸದಾಕಾಲಕ್ಕಾಗಿ ದೂರಗೊಳಿಸಿ ಎಂದು. ಪವಿತ್ರತೆಯ ದೃಷ್ಟಿ-ವೃತ್ತಿಯು ಸಾಧಾರಣ ಶಕ್ತಿಯಲ್ಲ, ಇದು ಸ್ವಲ್ಪ ಸಮಯದ ಶಕ್ತಿಶಾಲಿ ದೃಷ್ಟಿ ಅಥವಾ ವೃತ್ತಿಯು ಸದಾಕಾಲದ ಪ್ರಾಪ್ತಿಯನ್ನು ಮಾಡಿಸುವುದಾಗಿದೆ. ಹೇಗೆ ಈಗ ಶರೀರದ ವೈದ್ಯರು ಹಾಗೂ ಶರೀರದ ಆಸ್ಪತ್ರೆಯು ಸಮಯ-ಸಮಯದಲ್ಲಿ ಹೆಚ್ಚುತ್ತಾ ಇವೆ, ಇಷ್ಟಾದರೂ ವೈದ್ಯರುಗಳಿಗೆ ಬಿಡುವೇ ಇಲ್ಲ ಮತ್ತು ಆಸ್ಪತ್ರೆಗಳಲ್ಲಿ ಸ್ಥಾನವೂ ಇಲ್ಲ. ರೋಗಿಗಳ ಕ್ಯೂ ಸದಾ ನಿಂತಿರುತ್ತದೆ. ಇದೇ ರೀತಿ ಮುಂದೆ ನಡೆದಂತೆ ಆಸ್ಪತ್ರೆ ಅಥವಾ ವೈದ್ಯರುಗಳ ಬಳಿ ಹೋಗುವ, ಗುಣಮುಖರಾಗುವ ಬಯಕೆ ಇದ್ದರೂ ಹೋಗಲು ಸಾಧ್ಯವಾಗುವುದಿಲ್ಲ. ಮೆಜಾರಿಟಿ ನಿರಾಶೆಗೊಳ್ಳುವರು ಆಗ ಏನು ಮಾಡುವಿರಿ? ಯಾವಾಗ ಔಷಧಿಯಿಂದ ನಿರಾಶೆಯಾಗುವರು ಅಂದಾಗ ಮತ್ತೆಲ್ಲಿಗೆ ಹೋಗುವರು? ತಾವುಗಳ ಬಳಿಯೂ ಕ್ಯೂ ನಿಲ್ಲುತ್ತದೆ. ಹೇಗೆ ಈಗ ತಮ್ಮ ಅಥವಾ ತಂದೆಯವರ ಜಡ ಚಿತ್ರಗಳ ಮುಂದೆ “ಓ ದಯಾಸಾಗರ, ದಯೆ ತೋರಿಸು” ಎನ್ನುತ್ತಾ ದಯೆ ಅಥವಾ ಕೃಪೆಯನ್ನು ಬೇಡುತ್ತಿರುತ್ತಾರೆ, ಹಾಗೆಯೇ ತಾವು ಚೈತನ್ಯ, ಪವಿತ್ರ, ಪೂಜ್ಯ ಆತ್ಮರುಗಳ ಬಳಿ `ಓ ಪವಿತ್ರ ದೇವಿಯರೇ ಅಥವಾ ಪವಿತ್ರ ದೇವತೆಗಳೇ! ನಮ್ಮ ಮೇಲೆ ದಯೆ ತೋರಿಸಿ' ಎಂದು ಬೇಡುವುದಕ್ಕಾಗಿ ಬರುವರು. ಇಂದು ಅಲ್ಪಕಾಲದ ಸಿದ್ಧಿಯವರ ಬಳಿ ಚಿಕಿತ್ಸೆ ಪಡೆಯುವುದಕ್ಕಾಗಿ ಅಥವಾ ಸುಖ-ಶಾಂತಿಯ ದಯೆ ಪಡೆಯುವುದಕ್ಕಾಗಿ ಎಷ್ಟೊಂದು ಅಲೆದಾಡುತ್ತಾರೆ. ಅವರು ತಿಳಿಯುತ್ತಾರೆ - ನಮ್ಮ ಮೇಲೆ ಭಲೆ ದೂರದಿಂದಲೇ ದೃಷ್ಟಿ ಬೀಳಲಿ. ಅಂದಾಗ ತಾವು ಪರಮಾತ್ಮ-ವಿಧಿಯ ಮೂಲಕ ಸಿದ್ಧಿ-ಸ್ವರೂಪರು ಆಗಿದ್ದೀರಿ. ಆ ಅಲ್ಪಕಾಲದ ಆಶ್ರಯವು ಯಾವಾಗ ಸಮಾಪ್ತಿ ಆಗುವುದೋ ಆಗ ಎಲ್ಲಿಗೆ ಹೋಗುವರು?

ಯಾರೆಲ್ಲಾ ಈ ಅಲ್ಪಕಾಲದ ಸಿದ್ಧಿಯವರು ಇದ್ದಾರೆ, ಅಲ್ಪಕಾಲದ ಅಲ್ಪಸ್ವಲ್ಪ ಪವಿತ್ರತೆಯ ವಿಧಿಗಳಿಂದ ಅಲ್ಪಕಾಲದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ, ಇದು ಸದಾಕಾಲ ನಡೆಯಲು ಸಾಧ್ಯವಿಲ್ಲ. ಇದೂ ಸಹ ಗೋಲ್ಡನೇಜಡ್ ಆತ್ಮರಿಗೆ ಅರ್ಥಾತ್ ಅಂತ್ಯದಲ್ಲಿ ಮೇಲಿಂದ ಬಂದಿರುವ ಆತ್ಮರು, ಪವಿತ್ರ ಮುಕ್ತಿಧಾಮದಿಂದ ಬಂದಿರುವ ಕಾರಣ ಹಾಗೂ ಡ್ರಾಮಾದ ನಿಯಮಯದ ಅನುಸಾರ ಸತೋಪ್ರಧಾನ ಸ್ಥಿತಿಯ ಅನುಸಾರವಾಗಿ, ಪವಿತ್ರತೆಯ ಫಲಸ್ವರೂಫವಾಗಿ ಅಲ್ಪಕಾಲದ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ. ಆದರೆ ಸ್ವಲ್ಪ ಸಮಯದಲ್ಲಿಯೇ ಸತೋ, ರಜೋ, ತಮೋ- ಮೂರೂ ಹಂತಗಳನ್ನು ಪಾರು ಮಾಡುವಂತಹ ಆತ್ಮರಾಗಿರುತ್ತಾರೆ ಆದ್ದರಿಂದ ಸದಾಕಾಲದ ಸಿದ್ಧಿ ಇರುವುದಿಲ್ಲ. ಪರಮಾತ್ಮ-ವಿಧಿಯಿಂದ ಸಿದ್ಧಿಯಾಗುವುದಿಲ್ಲ ಆದ್ದರಿಂದ ಎಲ್ಲಾದರೂ ಒಂದು ಕಡೆ ಸ್ವಾರ್ಥ ಅಥವಾ ಅಭಿಮಾನವು ಸಿದ್ಧಿಯನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಆದರೆ ತಾವು ಪವಿತ್ರ ಆತ್ಮರು ಸದಾ ಸಿದ್ಧಿ ಸ್ವರೂಪರಾಗಿದ್ದೀರಿ, ಸದಾಕಾಲದ ಪ್ರಾಪ್ತಿ ಮಾಡಿಕೊಳ್ಳುವವರು ಆಗಿದ್ದೀರಿ. ಕೇವಲ ಚಮತ್ಕಾರವನ್ನೇ ತೋರಿಸುವವರಲ್ಲ ಆದರೆ ಹೊಳೆಯುತ್ತಿರುವ ಜ್ಯೋತಿ ಸ್ವರೂಪರನ್ನಾಗಿ ಮಾಡುವವರು ಆಗಿದ್ದೀರಿ, ಅವಿನಾಶಿ ಭಾಗ್ಯದಿಂದ ಹೊಳೆಯುತ್ತಿರುವ ನಕ್ಷತ್ರವನ್ನಾಗಿ ಮಾಡುವವರು ಆಗಿದ್ದೀರಿ. ಆದ್ದರಿಂದ ಇವೆಲ್ಲಾ ಆಶ್ರಯಗಳು ಈಗಷ್ಟೇ ಸ್ವಲ್ಪ ಸಮಯಕ್ಕಾಗಿ ಇವೆ, ಮತ್ತೆ ಕೊನೆಯಲ್ಲಿ ತಾವು ಪವಿತ್ರ ಆತ್ಮರ ಬಳಿಯೇ ಹನಿಯಷ್ಟು ತೆಗೆದುಕೊಳ್ಳುವುದಕ್ಕಾಗಿ ಬರುವರು. ಅಂದಮೇಲೆ ಇಷ್ಟೂ ಸುಖ-ಶಾಂತಿಯ ಜನನಿ ಪವಿತ್ರ ಆತ್ಮರು ಆಗಿದ್ದೀರಾ? ಇಷ್ಟೂ ಆಶೀರ್ವಾದಗಳ ಸ್ಟಾಕ್ನ್ನು ಜಮಾ ಮಾಡಿಕೊಂಡಿದ್ದೀರಾ ಅಥವಾ ಈಗಿನವರೆಗೂ ತಮಗಾಗಿಯೇ ಆಶೀರ್ವಾದಗಳನ್ನು ಬೇಡುತ್ತಾ ಇರುತ್ತೀರಾ?

ಹಲವು ಮಕ್ಕಳು ಈಗಲೂ ಸಮಯ-ಸಮಯದಲ್ಲಿ ತಂದೆಯಿಂದ ಬೇಡುತ್ತಾ ಇರುತ್ತಾರೆ- ಈ ಮಾತಿನಲ್ಲಿ ನನಗೆ ಸ್ವಲ್ಪ ಆಶೀರ್ವಾದ ಮಾಡಿಬಿಡಿ, ಆಶೀರ್ವಾದ ಕೊಡಿ. ಹಾಗಾದರೆ ಬೇಡುವವರು ಹೇಗೆ ದಾತಾ ಆಗುವರು? ಆದ್ದರಿಂದ ಈಗಿನಿಂದಲೇ ಪವಿತ್ರತೆಯ ಶಕ್ತಿಯ ಮಹಾನತೆಯನ್ನು ತಿಳಿದುಕೊಂಡು ಪವಿತ್ರ ಅರ್ಥಾತ್ ಪೂಜ್ಯ ದೇವಾತ್ಮರು ಆಗಿರಿ. ಅಂತ್ಯದಲ್ಲಿ ಆಗಿ ಬಿಡುತ್ತೇವೆ ಎನ್ನಬಾರದು. ಬಹಳ ಸಮಯದಿಂದ ಜಮಾ ಆಗಿರುವ ಶಕ್ತಿಯೇ ಅಂತ್ಯದಲ್ಲಿ ಕೆಲಸಕ್ಕೆ ಬರುತ್ತದೆ. ಅಂದಾಗ ಪವಿತ್ರತೆಯ ಗುಹ್ಯಗತಿ ಏನೆಂದು ತಿಳಿಯಿತೆ? ಇದು ಸದಾ ಸುಖ-ಶಾಂತ್ಯ ಜನನಿ ಆತ್ಮರ ಪವಿತ್ರತೆಯ ಗುಹ್ಯಗತಿ ಆಗಿದೆ! ಇದು ಸಾಧಾರಣ ಮಾತಲ್ಲ! ಬ್ರಹ್ಮಚಾರಿ ಆಗಿರುತ್ತೇವೆ, ಪವಿತ್ರರಾಗಿದ್ದೀರಿ ಆದರೆ ಪವಿತ್ರತೆಯು ಜನನಿ ಆಗಿದೆ. ಭಲೆ ಸಂಕಲ್ಪದಿಂದ, ಭಲೆ ವೃತ್ತಿಯಿಂದ, ಭಲೆ ವಾಯುಮಂಡಲದಿಂದ, ವಾಣಿಯಿಂದ, ಸಂಪರ್ಕದಿಂದ ಸುಖ-ಶಾಂತಿಯ ಜನನಿ ಆಗಬೇಕು - ಇವರಿಗೆ ಪವಿತ್ರ ಆತ್ಮರೆಂದು ಹೇಳಲಾಗುತ್ತದೆ. ಅಂದಾಗ ತಮ್ಮನ್ನು ತಾವು ಎಲ್ಲಿಯವರೆಗೆ ತಯಾರಾಗಿದ್ದೇವೆ ಎಂದು ಪರಿಶೀಲನೆ ಮಾಡಿಕೊಳ್ಳಿರಿ. ಒಳ್ಳೆಯದು.

ಇಂದು ಬಹಳಷ್ಟು ಬಂದಿದ್ದಾರೆ. ಹೇಗೆ ನೀರಿನ ಬಂಧನವು (ಸೇತುವೆ) ಮುರಿದು ಬಿಡುತ್ತದೆಯೋ ಹಾಗೆಯೇ ಇವರು ಕಾಯಿದೆಯ ಬಂಧನವನ್ನು ಮುರಿದು ಬಂದು ಬಿಟ್ಟಿದ್ದಾರೆ. ಆದರೂ ಕಾಯಿದೆಯಲ್ಲಿ ಲಾಭವಂತು ಇದ್ದೇ ಇದೆ. ಯಾರು ಕಾಯಿದೆಯ ಅನುಸಾರ ಬರುತ್ತಾರೆಯೋ ಅವರಿಗೆ ಹೆಚ್ಚು ಸಿಗುತ್ತದೆ ಮತ್ತು ಯಾರು ಆಕರ್ಷಣೆಯಲ್ಲಿ ಬರುತ್ತಾರೆಯೋ ಅವರಿಗೆ ಸಮಯದ ಅನುಸಾರ ಅಷ್ಟೇ ಸಿಗುತ್ತದೆ ಅಲ್ಲವೆ. ಆದರೂ ನೋಡಿ, ಬಂಧನಮುಕ್ತ ಬಾಪ್ದಾದಾರವರು ಬಂಧನದಲ್ಲಿ ಬರುತ್ತಾರೆ! ಸ್ನೇಹದ ಬಂಧನವಿದೆ. ಸ್ನೇಹದ ಜೊತೆಗೆ ಸಮಯದ ಬಂಧನವೂ ಇದೆ, ಶರೀರದ ಬಂಧನವೂ ಇದೆ ಅಲ್ಲವೆ. ಆದರೆ ಪ್ರಿಯವಾದ ಬಂಧನವಾಗಿದೆ ಆದ್ದರಿಂದ ಬಂಧನದಲ್ಲಿ ಇದ್ದರೂ ಸಹ ಸ್ವತಂತ್ರ ಆಗಿದ್ದೇವೆ. ಬಾಪ್ದಾದಾರವರಂತು ಹೇಳುತ್ತಾರೆ - ಭಲೆ ಬಂದಿದ್ದೀರಿ, ತಮ್ಮ ಮನೆಯಲ್ಲಿ ತಲುಪಿದ್ದೀರಿ. ಒಳ್ಳೆಯದು.

ನಾಲ್ಕೂ ಕಡೆಯಲ್ಲಿ ಇರುವಂತಹ ಸರ್ವ ಪರಮ ಪವಿತ್ರ ಆತ್ಮರಿಗೆ, ಸದಾ ಸುಖ-ಶಾಂತಿಯ ಜನನಿ ಪಾವನ ಆತ್ಮರಿಗೆ, ಸದಾ ಪವಿತ್ರತೆಯ ಶಕ್ತಿಯ ಮೂಲಕ ಅನೇಕ ಅತ್ಮರ ದುಃಖ-ನೋವನ್ನು ದೂರಗೊಳಿಸುವ ದೇವಾತ್ಮರಿಗೆ, ಸದಾ ಪರಮಾತ್ಮ-ವಿಧಿಯ ಮೂಲಕ ಸಿದ್ಧಿ-ಸ್ವರೂಪ ಆತ್ಮರಿಗೆ ಬಾಪ್ದಾದಾರವರ ಸ್ನೇಹ ಸಂಪನ್ನ ನೆನಪು-ಪ್ರೀತಿ ಹಾಗೂ ನಮಸ್ತೆ.

ಹಾಸ್ಟೆಲ್ನ ಕುಮಾರಿಯರೊಂದಿಗೆ (ಇಂದೋರ್ ಗ್ರೂಪ್):- ಎಲ್ಲರೂ ಪವಿತ್ರ ಮಹಾನ್ ಆತ್ಮರಾಗಿದ್ದೀರಿ ಅಲ್ಲವೇ? ವರ್ತಮಾನದಲ್ಲಿ ಮಹಾತ್ಮರೆಂದು ಕರೆಸಿಕೊಳ್ಳುವವರಿಗಿಂತಲೂ ಅನೇಕ ಬಾರಿ ಶ್ರೇಷ್ಠರಾಗಿದ್ದೀರಿ. ಪವಿತ್ರ ಕುಮಾರಿಯರದು ಸದಾ ಪೂಜೆಯಾಗುತ್ತದೆ. ಅಂದಾಗ ತಾವೆಲ್ಲರೂ ಪಾವನ, ಪೂಜ್ಯರು ಸದಾ ಶುದ್ಧ ಆತ್ಮರಾಗಿದ್ದೀರಿ ಅಲ್ಲವೇ? ಯಾವುದೇ ಅಶುದ್ಧಿಯಂತು ಇಲ್ಲವೇ? ಸದಾ ಪರಸ್ಪರದಲ್ಲಿ ಏಕಮತ, ಸ್ನೇಹಿ, ಸಹಯೋಗಿ ಆಗಿರುವ ಆತ್ಮರಾಗಿದ್ದೀರಿ ಅಲ್ಲವೇ? ಸಂಸ್ಕಾರ ಮಿಲನ ಮಾಡುವುದು ಬರುತ್ತದೆಯಲ್ಲವೆ ಏಕೆಂದರೆ ಸಂಸ್ಕಾರ ಮಿಲನವಾಗುವುದೂ ಸಹ ಮಹಾನತೆ ಆಗಿದೆ. ಸಂಸ್ಕಾರಗಳ ಘರ್ಷಣೆ ಆಗಬಾರದು ಆದರೆ ಸದಾ ಸಂಸ್ಕಾರ ಮಿಲನದ ರಾಸ್ ಮಾಡುತ್ತಿರಿ. ಬಹಳ ಒಳ್ಳೆಯ ಭಾಗ್ಯವು ಸಿಕ್ಕಿದೆ - ಬಾಲ್ಯದಲ್ಲಿಯೇ ಮಹಾನ್ ಆಗಿ ಬಿಟ್ಟಿರಿ! ಸದಾ ಖುಷಿಯಾಗಿ ಇರುತ್ತೀರಲ್ಲವೇ? ಎಂದಿಗೂ ಸಹ ಮನಸ್ಸಿನಲ್ಲಿಯೂ ಅಳುವುದಿಲ್ಲವೇ? ನಿರ್ಮೋಹಿ ಆಗಿದ್ದೀರಾ? ಕೆಲವೊಮ್ಮೆ ಲೌಕಿಕ ಪರಿವಾರದ ನೆನಪು ಬರುತ್ತದೆಯೇ? ಎರಡು ವಿದ್ಯಾಭ್ಯಾಸಗಳಲ್ಲಿ ಬುದ್ಧಿವಂತರಿದ್ದೀರಾ? ಎರಡೂ ವಿದ್ಯಾಭ್ಯಾಸಗಳಲ್ಲಿ ಸದಾ ನಂಬರ್ವನ್ ಆಗಿರಬೇಕು. ಹೇಗೆ ತಂದೆಯು ವನ್ ಆಗಿದ್ದಾರೆ, ಹಾಗೆಯೇ ಮಕ್ಕಳೂ ಸಹ ನಂಬರ್ವನ್ ಆಗಿರಬೇಕು. ಎಲ್ಲರಿಗಿಂತಲೂ ನಂಬರ್ವನ್ ಆಗಿರುವ ಮಕ್ಕಳು ಸದಾ ತಂದೆಗೆ ಪ್ರಿಯರಾಗುವರು. ತಿಳಿಯಿತೆ? ಒಳ್ಳೆಯದು.

ಪಾರ್ಟಿಯೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ:- ಸದಾ ತಮ್ಮನ್ನು ಶ್ರೇಷ್ಠ ಭಾಗ್ಯವಂತರು ಎಂದು ತಿಳಿಯುತ್ತೀರಾ? ಮನೆಯಲ್ಲಿ ಕುಳಿತಿದ್ದಂತೆಯೇ ಭಾಗ್ಯವಿದಾತನ ಮೂಲಕ ಶ್ರೇಷ್ಠ ಭಾಗ್ಯವು ಸಿಕ್ಕಿತು. ಮನೆಯಲ್ಲಿ ಕುಳಿತಿದ್ದಂತೆಯೇ ಭಾಗ್ಯವು ಸಿಗುವುದೆಷ್ಟು ಖುಷಿಯ ಮಾತಾಗಿದೆ! ಅವಿನಾಶಿ ತಂದೆಯು ಅವಿನಾಶಿ ಪ್ರಾಪ್ತಿಯನ್ನು ಮಾಡಿಸುತ್ತಾರೆ ಅಂದಮೇಲೆ ಅವಿನಾಶಿ ಅರ್ಥಾತ್ ಸದಾಕಾಲದ ಪ್ರಾಪ್ತಿ, ಕೆಲವೊಮ್ಮೆಯ ಪ್ರಾಪ್ತಿ ಅಲ್ಲ. ಅಂದಮೇಲೆ ಭಾಗ್ಯವನ್ನು ನೋಡುತ್ತಾ ಸದಾ ಖುಷಿಯಾಗಿ ಇರುತ್ತೀರಾ? ಪ್ರತೀ ಸಮಯದಲ್ಲಿಯೂ ಭಾಗ್ಯ ಮತ್ತು ಭಾಗ್ಯವಿದಾತನೇ ಸ್ವತಹವಾಗಿ ನೆನಪಿರಲಿ. ಸದಾ `ವಾಹ್, ನನ್ನ ಶ್ರೇಷ್ಠ ಭಾಗ್ಯವೇ!' ಎಂಬ ಹಾಡನ್ನೇ ಹಾಡುತ್ತಿರಿ. ಇದು ಮನಸ್ಸಿನ ಹಾಡಾಗಿದೆ. ಈ ಹಾಡನ್ನೆಷ್ಟು ಹಾಡುತ್ತೀರಿ ಅಷ್ಟು ಸದಾ ಹಾರುವ ಕಲೆಯ ಅನುಭವ ಮಾಡುತ್ತಾ ಇರುತ್ತೀರಿ. ಇಡೀ ಕಲ್ಪದಲ್ಲಿ ಇಂತಹ ಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವ ಸಮಯವು ಇದೊಂದೇ ಆಗಿದೆ ಆದ್ದರಿಂದ ಸ್ಲೋಗನ್ ಸಹ ಇದೆ - `ಈಗಿಲ್ಲದಿದ್ದರೆ ಮತ್ತೆಂದಿಗೂ ಇಲ್ಲ' ಯಾವುದೇ ಶ್ರೇಷ್ಠ ಕಾರ್ಯವನ್ನು ಮಾಡಬೇಕೆಂದರೆ, ಈಗ ಮಾಡಬೇಕು. ಪ್ರತಿಯೊಂದು ಕಾರ್ಯದಲ್ಲಿ, ಪ್ರತೀ ಸಮಯದಲ್ಲಿಯೂ ಇದನ್ನು ನೆನಪಿಟ್ಟುಕೊಳ್ಳಿರಿ - ಈಗಿಲ್ಲದಿದ್ದರೆ ಮತ್ತೆಂದಿಗೂ ಇಲ್ಲ. ಯಾರಲ್ಲಿ ಈ ಸ್ಮೃತಿಯಿರುತ್ತದೆಯೋ ಅವರೆಂದಿಗೂ ಸಹ ಸಮಯ, ಸಂಕಲ್ಪ ಅಥವಾ ಕರ್ಮವನ್ನು ವ್ಯರ್ಥವಾಗುವುದಕ್ಕೆ ಬಿಡುವುದಿಲ್ಲ, ಸದಾ ಜಮಾ ಮಾಡಿಕೊಳ್ಳುತ್ತಾ ಇರುತ್ತಾರೆ. ವಿಕರ್ಮದ ಮಾತಂತು ಇಲ್ಲವೇ ಇಲ್ಲ ಆದರೆ ವ್ಯರ್ಥ ಕರ್ಮವೂ ಸಹ ಮೋಸ ಮಾಡಿ ಬಿಡುತ್ತದೆ. ಆದ್ದರಿಂದ ಪ್ರತೀ ಸೆಕೆಂಡಿನ ಪ್ರತೀ ಸಂಕಲ್ಪದ ಮಹತ್ವವನ್ನು ತಿಳಿದಿದ್ದೀರಲ್ಲವೆ. ಜಮಾದ ಖಾತೆಯು ಸದಾ ಸಂಪನ್ನವಾಗಿರಲಿ. ಒಂದುವೇಳೆ ಪ್ರತೀ ಸೆಕೆಂಡಿನ ಅಥವಾ ಪ್ರತೀ ಸಂಕಲ್ಪವನ್ನು ಶ್ರೇಷ್ಠವಾಗಿ ಜಮಾ ಮಾಡುತ್ತೀರಿ, ಅದನ್ನು ವ್ಯರ್ಥವಾಗಿ ಕಳೆಯದಿದ್ದರೆ 21 ಜನ್ಮಗಳಿಗಾಗಿ ತಮ್ಮ ಖಾತೆಯು ಶ್ರೇಷ್ಠವನ್ನಾಗಿ ಮಾಡಿಕೊಳ್ಳುತ್ತೀರಿ. ಅಂದಾಗ ಎಷ್ಟು ಜಮಾ ಮಾಡಿಕೊಳ್ಳಬೇಕು ಅಷ್ಟು ಮಾಡಿಕೊಳ್ಳುತ್ತಾ ಇದ್ದೀರಾ? ಈ ಮಾತಿನಲ್ಲಿ ಇನ್ನೂ ಒತ್ತು ಕೊಡಬೇಕು - ಒಂದು ಸೆಕೆಂಡ್ ಸಹ, ಸಂಕಲ್ಪವೂ ಸಹ ವ್ಯರ್ಥವಾಗಬಾರದು. ವ್ಯರ್ಥವು ಸಮಾಪ್ತಿ ಆಗಿ ಬಿಡುತ್ತದೆ ಎಂದರೆ ಸದಾ ಸಮರ್ಥರು ಆಗಿ ಬಿಡುವಿರಿ. ಒಳ್ಳೆಯದು – ಆಂಧ್ರ ಪ್ರದೇಶದಲ್ಲಿ ಬಡತನ ಬಹಳ ಇದೆಯಲ್ಲವೆ. ಮತ್ತು ತಾವಿಷ್ಟು ಸಾಹುಕಾರರು ಆಗಿದ್ದೀರಿ! ನಾಲ್ಕೂ ಕಡೆಗಳಲ್ಲಿ ಬಡತನ ಹೆಚ್ಚಾಗುತ್ತಿದೆ ಮತ್ತು ಇಲ್ಲಿ ತಮ್ಮ ಶ್ರೀಮಂತಿಕೆಯು ಹೆಚ್ಚಾಗುತ್ತಿದೆ ಏಕೆಂದರೆ ಜ್ಞಾನ ಧನವು ಬರುವುದರಿಂದ, ಈ ಸ್ಥೂಲ ಧನವೂ ಸಹ ಸ್ವತಹವಾಗಿಯೇ ದಾಲ್-ರೋಟಿ ಸಿಗುವಷ್ಟಾದರೂ ಬಂದು ಬಿಡುತ್ತದೆ. ಯಾವುದೇ ಬ್ರಾಹ್ಮಣರು ಹಸಿವಿನಿಂದ ಇರುತ್ತಾರೆಯೇ? ಅಂದಮೇಲೆ ಸ್ಥೂಲ ಧನದ ಬಡತನವೂ ಸಮಾಪ್ತಿ ಆಗಿ ಬಿಡುತ್ತದೆ ಏಕೆಂದರೆ ಬುದ್ಧಿವಂತರು ಆಗಿ ಬಿಡುತ್ತಾರೆ. ಕೆಲಸ ಮಾಡುತ್ತಾ ಸ್ವಯಂ ತಿನ್ನುವುದಕ್ಕಾಗಿ ಅಥವಾ ಪರಿವಾರದವರಿಗೆ ತಿನ್ನಿಸುವುದಕ್ಕಾಗಿಯೂ ತಿಳುವಳಿಕೆ ಬಂದು ಬಿಡುತ್ತದೆ. ಆದ್ದರಿಂದ ಡಬಲ್ ಶ್ರೀಮಂತಿಕೆಯು ಬಂದು ಬಿಡುತ್ತದೆ. ಇದು ಶರೀರಕ್ಕೂ ಒಳ್ಳೆಯದು ಮತ್ತು ಮನಸ್ಸಿಗೂ ಒಳ್ಳೆಯದು. ದಾಲ್-ರೋಟಿ ಆರಾಮವಾಗಿ ಸಿಗುತ್ತಿದೆ ಅಲ್ಲವೆ. ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿ ಆಗುವುದರಿಂದ ರಾಯಲ್ ಸಹ ಆಗಿಬಿಟ್ಟಿರಿ, ಸಾಹುಕಾರರೂ ಆಗಿದ್ದೀರಿ ಮತ್ತು ಅನೇಕ ಜನ್ಮಗಳಿಗಾಗಿ ಸಂಪನ್ನರು ಆಗಿರುತ್ತೀರಿ. ಮೊದಲು ಹೇಗೆ ನಡೆಯುತ್ತಿದ್ದಿರಿ, ಇರುತ್ತಿದ್ದಿರಿ, ತೊಡುಗೆ... ಎಲ್ಲದಕ್ಕಿಂತಲೂ ಈಗೆಷ್ಟು ರಾಯಲ್ ಆಗಿ ಬಿಟ್ಟಿದ್ದೀರಿ! ಈಗ ಸದಾಕಾಲವೂ ಸ್ವಚ್ಛವಾಗಿ ಇರುತ್ತೀರಿ. ಮುಂಚೆ ಬಟ್ಟೆಗಳನ್ನೂ ಮೈಲಿಗೆ ಆಗಿರುವುದೇ ತೊಡುತ್ತಿದ್ದಿರಿ, ಈಗ ಆಂತರ್ಯದಿಂದಲೂ ಮತ್ತು ಬಾಹ್ಯದಿಂದಲೂ ಸ್ವಚ್ಛವಾಗಿ ಬಿಟ್ಟಿರಿ. ಅಂದಾಗ ಬ್ರಹ್ಮಾಕುಮಾರ ಆಗುವುದರಿಂದ ಲಾಭವಾಯಿತು ಅಲ್ಲವೆ. ಎಲ್ಲವೂ ಬದಲಾಗಿ ಬಿಡುತ್ತದೆ, ಪರಿವರ್ತನೆ ಆಗಿ ಬಿಡುತ್ತದೆ. ಮುಂಚೆಯ ಆ ಮುಖ, ಬುದ್ಧಿಯನ್ನು ನೋಡಿ ಮತ್ತು ಈಗಿನದನ್ನೂ ನೋಡಿಕೊಳ್ಳುತ್ತೀರೆಂದರೆ ಅಂತರವೇನೆಂದು ತಿಳಿದು ಬರುತ್ತದೆ. ಈಗ ಆತ್ಮೀಯತೆಯ ಹೊಳಪು ಬಂದಿದೆ, ಆದ್ದರಿಂದ ಚಹರೆಯೇ ಬದಲಾಗಿ ಬಿಟ್ಟಿದೆ. ಸದಾ ಇದೇ ರೀತಿ ಖುಷಿಯಲ್ಲಿ ನರ್ತಿಸುತ್ತಿರಿ. ಒಳ್ಳೆಯದು.

ಡಬಲ್ ವಿದೇಶಿ ಸಹೋದರ-ಸಹೋದರಿಯರೊಂದಿಗೆ:- ಡಬಲ್ ವಿದೇಶಿ ಆಗಿದ್ದೀರಾ? ಹಾಗೆ ನೋಡಿದರೆ ಎಲ್ಲರೂ ಬ್ರಾಹ್ಮಣ ಆತ್ಮರು, ಇದೇ ಭಾರತ ದೇಶದವರಾಗಿದ್ದಾರೆ. ಅನೇಕ ಜನ್ಮಗಳಲ್ಲಿ ಭಾರತವಾಸಿಗಳು ಆಗಿದ್ದಿರಿ, ಇದಂತು ಸೇವೆಗಾಗಿ ಅನೇಕ ಸ್ಥಾನಗಳಲ್ಲಿ ತಲುಪಿದ್ದೀರಿ ಆದ್ದರಿಂದ ಇದು ಸಂಕೇತವಾಗಿದೆ - ಯಾವಾಗ ಭಾರತದಲ್ಲಿ ಬರುತ್ತೀರಿ ಅರ್ಥಾತ್ ಮಧುಬನದ ಧರಣಿಯಲ್ಲಿ ಅಥವಾ ಬ್ರಾಹ್ಮಣ ಪರಿವಾರದಲ್ಲಿ ಬರುತ್ತೀರೆಂದರೆ, ಇದು ನಮ್ಮದೆಂದು ಅನುಭವ ಮಾಡುತ್ತೀರಿ. ಅದೇ ರೀತಿ ವಿದೇಶದ ವಿದೇಶಿ ಆತ್ಮರೆಷ್ಟು ಸಮೀಪ ಸಂಪರ್ಕದವರು ಆಗಿದ್ದೀರಿ, ಸಂಬಂಧದವರು ಆಗಿದ್ದೀರಿ ಆದರೆ ಇಲ್ಲಿ ಹೇಗೆ ಆತ್ಮರಿಗೆ ನಮ್ಮದು ಎನಿಸುತ್ತದೆಯೋ ಮತ್ತೆಲ್ಲಿಯೂ ಹಾಗೆನಿಸುವುದಿಲ್ಲ. ಎಷ್ಟು ಸಮೀಪದ ಆತ್ಮರಾಗುವರು ಅಷ್ಟು ನಮ್ಮದೆನ್ನುವ ಅನುಭವವು ಹೆಚ್ಚಾಗುತ್ತದೆ. ನಾನು ಇಲ್ಲಿದ್ದೆನು ಅಥವಾ ನಾನು ಇರಲು ಸಾಧ್ಯವೇ ಎಂದು ಯೋಚಿಸಬೇಕಾಗಿರುವುದಿಲ್ಲ. ಪ್ರತಿಯೊಂದು ಸ್ಥೂಲ ವಸ್ತುವೂ ಸಹ ಅತಿ ಪ್ರಿಯವೆನಿಸುತ್ತದೆ. ಹೇಗೆ ವಸ್ತುವು ತಮ್ಮದಾಗಿರುತ್ತದೆ ಎಂದರೆ, ಸದಾ ಅದು ಪ್ರಿಯವೆನಿಸುತ್ತದೆ. ಅಂದಾಗ ಇದು ಸಂಕೇತವಾಗಿದೆ. ಬಾಪ್ದಾದಾರವರು ನೋಡುತ್ತಿದ್ದಾರೆ - ದೂರದಲ್ಲಿದ್ದರೂ ಹೃದಯದಿಂದ ಸದಾ ಸಮೀಪ ಇರುವವರಾಗಿದ್ದಾರೆ. ಇಡೀ ಪರಿವಾರವು ತಮ್ಮನ್ನು ಶ್ರೇಷ್ಠ ಭಾಗ್ಯವಂತರೆಂಬ ದೃಷ್ಟಿಯಿಂದ ನೋಡುತ್ತಾರೆ. ಒಳ್ಳೆಯದು.

ವರದಾನ:  
ಯುದ್ಧದಲ್ಲಿ ಭಯ ಪಡುವ ಅಥವಾ ಹಿಂಜರಿಯುವುದಕ್ಕೆ ಬದಲಾಗಿ ತಂದೆಯ ಜೊತೆಯ ಮೂಲಕ ಸದಾ ವಿಜಯಿ ಭವ.

ಸೇನೆಯಲ್ಲಿ ಯುದ್ಧ ಮಾಡುವ ಯೋಧರೇನಿರುತ್ತಾರೆ, ಅವರ ಸ್ಲೋಗನ್ ಆಗಿರುತ್ತದೆ - ಸೋಲುವುದು ಅಥವಾ ಹಿಂದೆ ಸರಿಯುವುದು ಹೇಡಿಗಳ ಕೆಲಸವಾಗಿದೆ, ಯೋಧ ಅರ್ಥಾತ್ ಸಾಯುವುದು ಮತ್ತು ಸಾಯಿಸುವುದು. ತಾವೂ ಸಹ ಆತ್ಮಿಕ ಯೋಧರು ಭಯ ಪಡುವ ಅಥವಾ ಹಿಂದೆ ಸರಿಯುವವರಲ್ಲ, ಸದಾ ಮುಂದುವರೆಯುತ್ತಾ ವಿಜಯಿ ಆಗುವವರಾಗಿದ್ದೀರಿ. ಇಂತಹವರು ಎಂದಿಗೂ ಸಹ ಎಲ್ಲಿಯವರೆಗೆ ಯುದ್ಧ ಮಾಡುವುದು ಎಂಬ ಯೋಚನೆ ಮಾಡಬಾರದು. ಇದಂತು ಇಡೀ ಜೀವನದ ಮಾತಾಗಿದೆ ಆದರೆ 5000 ವರ್ಷಗಳ ಪ್ರಾಲಬ್ಧದ ಲೆಕ್ಕದನುಸಾರ ಇದು ಒಂದು ಸೆಕೆಂಡಿನ ಮಾತಾಗಿದೆ, ಇದರಲ್ಲಿ ಕೇವಲ ವಿಶಾಲ ಬುದ್ಧಿಯವರಾಗಿ ಬೇಹದ್ದಿನ ಲೆಕ್ಕದಿಂದ ನೋಡಿರಿ ಮತ್ತು ತಂದೆಯ ನೆನಪು ಅಥವಾ ಜೊತೆಯ ಅನುಭೂತಿಯ ಮೂಲಕ ವಿಜಯಿಗಳಾಗಿ.

ಸ್ಲೋಗನ್:
ಸದಾ ಆಶೆ ಮತ್ತು ವಿಶ್ವಾಸದ ಆಧಾರದ ಮೇಲೆ ವಿಜಯಿ ಆಗಿರಿ.


07-03-21 ಪೂಜ್ಯ ದೇವಾತ್ಮರಾಗಲು ಸಾಧನ - ಪವಿತ್ರತೆಯ ಶಕ್ತಿ ರಿವೈಜ್ 14-11-87

1. ಪ್ರತಿಯೊಬ್ಬ ಆತ್ಮಿಕ ಪತಂಗಗಳು ಯಾವ ರೆಕ್ಕೆಗಳಿಂದ ಹಾರಿಕೊಂಡು ಆತ್ಮಿಕ ಸಭೆಯಲ್ಲಿ ಬಂದು ತಲುಪಿದ್ದಾರೆ?

2. ಈ ಆತ್ಮಿಕ ಮತ್ತು ಅಲೌಕಿಕ ಸಭೆಯನ್ನು ಯಾರು ತಿಳಿದುಕೊಂಡಿದ್ದಾರೆ?

3. ಎಲ್ಲರ ಮಸ್ತಕದಲ್ಲಿ ಯಾವ ಲಕ್ಷಣಗಳು ಪ್ರತಿಫಲಿಸುತ್ತಿದೆ?

4. ಮಾಹಾನ್ ಆತ್ಮ, ಪರಮಾತ್ಮ- ಭಾಗ್ಯವಂತ ಆತ್ಮರ, ಶ್ರೇಷ್ಠಾತಿ ಶ್ರೇಷ್ಠ ಆತ್ಮಗಳ ಲಕ್ಷಣಗಳೇನು?

5. ಬಾಪ್ದಾದಾ ಜನ್ಮ ಪಡೆದ ತಕ್ಷಣ ಮಕ್ಕಳಿಗೆ ಯಾವ ವರದಾನವನ್ನು ಕೊಟ್ಟಿದ್ದಾರೆ?

6. ಪವಿತ್ರತೆಯು ನಮಗೆ ಯಾವುದರಿಂದ ರಕ್ಷಿಸಿಕೊಳ್ಳಲು ಛತ್ರಛಾಯೆ ಆಗಿದೆ?

7. ಪವಿತ್ರತೆಯು ಯಾವುದರ ಜನನಿಯಾಗಿದೆ?

8. ಪವಿತ್ರತೆಯ ದೃಷ್ಟಿಯ ಮಹತ್ವ ಏನಾಗಿದೆ?

9. ಪವಿತ್ರತೆಯ ಜೀವನ ಯಾರಿಂದ ಸಿಕ್ಕಿರುವ ವರದಾನದ ಜೀವನವಾಗಿದೆ?

10. ಸೇನೆಯಲ್ಲಿ ಯುದ್ಧ ಮಾಡುವ ಯೋದ್ಧರ ಸ್ಲೋಗನ್ ಏನಾಗಿದೆ?