12.03.21 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ -
ಸಂಗದೋಷದಿಂದ ದೂರವಿದ್ದು ವಿದ್ಯೆಯ ಮೇಲೆ ಸಂಪೂರ್ಣ ಗಮನ ಕೊಡಿ. ಆಗ ಯಾವುದೇ ಬಿರುಗಾಳಿ ಬರಲು
ಸಾಧ್ಯವಿಲ್ಲ, ಆದರೆ ಮಾಯೆಯನ್ನು ದೋಷಿಯನ್ನಾಗಿ ಮಾಡಬೇಡಿ"
ಪ್ರಶ್ನೆ:
ಯಾವ ಒಂದು
ಮಾತನ್ನು ಸದಾ ಗಮನದಲ್ಲಿಟ್ಟುಕೊಂಡಾಗ ಜೀವನದ ದೋಣಿಯು ಪಾರಾಗುವುದು?
ಉತ್ತರ:
"ಬಾಬಾ, ತಮ್ಮ ಆಜ್ಞೆ" - ಹೀಗೆ ಸದಾ ತಂದೆಯ ಆಜ್ಞೆಯಂತೆ ನಡೆಯುತ್ತಾ ಇರಿ, ಆಗ ನಿಮ್ಮ ಜೀವನದ ದೋಣಿ
ಪಾರಾಗುವುದು. ಆಜ್ಞೆಯಂತೆ ನಡೆಯುವವರು ಮಾಯೆಯ ಪ್ರಭಾವದಿಂದ ಮುಕ್ತರಾಗುತ್ತಾರೆ. ಬುದ್ಧಿಯ ಬೀಗವು
ತೆರೆಯುತ್ತದೆ, ಅಪಾರ ಖಷಿಯಿರುತ್ತದೆ. ಯಾವುದೇ ಉಲ್ಟಾ ಕರ್ಮವಾಗುವುದಿಲ್ಲ.
ಗೀತೆ:
ನಿಮ್ಮನ್ನು ಪಡೆದ ನಾನು ಜಗತ್ತನ್ನೇ ಪಡೆದೆನು..........
ಓಂ ಶಾಂತಿ.
ಮಧುರಾತಿ ಮಧುರ ಎಲ್ಲಾ ಸೇವಾಕೇಂದ್ರಗಳ ಮಕ್ಕಳು ಗೀತೆಯನ್ನು ಕೇಳಿದಿರಿ, ಎಲ್ಲರಿಗೂ ತಿಳಿದಿದೆ -
ಬೇಹದ್ದಿನ ತಂದೆಯಿಂದ ಪುನಃ 5000 ವರ್ಷಗಳ ಮೊದಲಿನ ತರಹ ನಾವು ವಿಶ್ವದ ರಾಜ್ಯಭಾಗ್ಯವನ್ನು
ಪಡೆಯುತ್ತಿದ್ದೇವೆ. ಕಲ್ಪ-ಕಲ್ಪವೂ ನಾವು ಪಡೆಯುತ್ತಾ ಬಂದಿದ್ದೇವೆ. ರಾಜ್ಯವನ್ನು ಪಡೆಯುತ್ತೇವೆ
ಮತ್ತು ಕಳೆದುಕೊಳ್ಳುತ್ತೇವೆ. ಮಕ್ಕಳಿಗೆ ತಿಳಿದಿದೆ - ನಾವೀಗ ಬೇಹದ್ದಿನ ತಂದೆಯ ಮಡಿಲನ್ನು
ತೆಗೆದುಕೊಂಡಿದ್ದೇವೆ ಅಥವಾ ಅವರ ಮಕ್ಕಳಾಗಿದ್ದೇವೆ. ಇದು ಖಂಡಿತವಾಗಿದೆ. ಮನೆಯಲ್ಲಿ ಕುಳಿತಿದ್ದರೂ
ಸಹ ಪುರುಷಾರ್ಥ ಮಾಡುತ್ತಾರೆ. ಬೇಹದ್ದಿನ ತಂದೆಯಿಂದ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ
ಪುರುಷಾರ್ಥ ನಡೆಯುತ್ತಿದೆ. ಮಕ್ಕಳು ತಿಳಿದುಕೊಂಡಿದ್ದೀರಿ – ಜ್ಞಾನ ಸಾಗರ, ಪತಿತ-ಪಾವನ, ಸರ್ವರ
ಸದ್ಗತಿದಾತ ಶಿವ ತಂದೆಯೇ ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಮತ್ತು ಸದ್ಗುರುವೂ
ಆಗಿದ್ದಾರೆ. ಅವರಿಂದ ನಾವು ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಅಂದಮೇಲೆ ಅದರಲ್ಲಿ ಶ್ರೇಷ್ಠ
ಪದವಿಯನ್ನು ಪಡೆಯುವುದಕ್ಕಾಗಿ ಎಷ್ಟೊಂದು ಪುರುಷಾರ್ಥ ಮಾಡಬೇಕು! ಅಜ್ಞಾನ ಕಾಲದಲ್ಲಿಯೂ ಶಾಲೆಯಲ್ಲಿ
ಓದುತ್ತಾರೆಂದರೆ ತನ್ನ ವಿದ್ಯಾಭ್ಯಾಸದನುಸಾರ ನಂಬರ್ವಾರ್ ಅಂಕಗಳಿಂದ ತೇರ್ಗಡೆಯಾಗುತ್ತಾರೆ. ಅಲ್ಲಿ
ಯಾರೂ ಸಹ ಮಾಯೆಯು ನಮಗೆ ವಿಘ್ನ ಹಾಕುತ್ತದೆ ಅಥವಾ ಬಿರುಗಾಳಿ ಬರುತ್ತದೆಯೆಂದು ಹೇಳುವುದಿಲ್ಲ.
ಸರಿಯಾಗಿ ಓದುವುದಿಲ್ಲ ಅಥವಾ ಕೆಟ್ಟ ಸಂಗದಲ್ಲಿ ಹೋಗಿ ಸಿಲುಕುತ್ತಾರೆ. ಆಟಗಳಲ್ಲಿ ತೊಡಗುತ್ತಾರೆ
ಆದ್ದರಿಂದ ಓದುವುದಿಲ್ಲ, ಅನುತ್ತೀರ್ಣರಾಗಿ ಬಿಡುತ್ತಾರೆ. ಆದರೆ ಇದಕ್ಕೆ ಮಾಯೆಯ ಬಿರುಗಾಳಿ ಎಂದು
ಹೇಳುವುದಿಲ್ಲ. ನಡವಳಿಕೆಯು ಸರಿಯಿರುವುದಿಲ್ಲವೆಂದರೆ ಶಿಕ್ಷಕರೂ ಸಹ ಇವರ ಚಲನೆಯು ಸರಿಯಿಲ್ಲವೆಂದು
ಸರ್ಟಿಫಿಕೇಟ್ ಕೊಡುತ್ತಾರೆ. ಕೆಟ್ಟ ಸಂಗದಲ್ಲಿ ಕೆಟ್ಟು ಹೋಗಿದ್ದಾರೆ, ಇದರಲ್ಲಿ ಮಾಯಾ ರಾವಣನನ್ನು
ದೋಷಿಯನ್ನಾಗಿ ಮಾಡುವ ಮಾತಿಲ್ಲ. ದೊಡ್ಡ-ದೊಡ್ಡ ಒಳ್ಳೊಳ್ಳೆಯ ವ್ಯಕ್ತಿಗಳ ಮಕ್ಕಳೂ ಸಹ ಕೆಲವರು
ಚೆನ್ನಾಗಿ ಮೇಲೆ ಬರುತ್ತಾರೆ, ಇನ್ನೂ ಕೆಲವರು ಸಾರಾಯಿ ಕುಡಿಯುವುದರಲ್ಲಿ ತೊಡಗುತ್ತಾರೆ. ಕೆಟ್ಟ
ಮಾರ್ಗದಲ್ಲಿ ಹೊರಟು ಹೋಗುತ್ತಾರೆ, ಆಗ ಇವರು ಕುಪುತ್ರರಾಗಿ ಬಿಟ್ಟರು ಎಂದು ತಂದೆಯೂ ಹೇಳುತ್ತಾರೆ.
ಆ ವಿದ್ಯೆಯಲ್ಲಾದರೆ ಬಹಳ ಸಬ್ಜೆಕ್ಟ್ ಗಳಿರುತ್ತವೆ, ಇಲ್ಲಿಯೂ ಒಂದೇ ಪ್ರಕಾರದ ವಿದ್ಯೆಯಾಗಿದೆ.
ಅಲ್ಲಿ ಮನುಷ್ಯರು ಓದಿಸುತ್ತಾರೆ, ಇಲ್ಲಿ ಮಕ್ಕಳಿಗೆ ಗೊತ್ತಿದೆ - ನಮಗೆ ಭಗವಂತನೇ ಓದಿಸುತ್ತಾರೆ,
ನಾವು ಚೆನ್ನಾಗಿ ಓದಿದ್ದೇ ಆದರೆ ವಿಶ್ವದ ಮಾಲೀಕರಾಗಬಹುದು. ಅನೇಕ ಮಕ್ಕಳಿದ್ದಾರೆ, ಕೆಲವರು
ಸಂಗದೋಷದಲ್ಲಿ ಬಂದು ಓದುವುದಿಲ್ಲ, ಇದಕ್ಕೆ ಮಾಯೆಯ ಬಿರುಗಾಳಿ ಎಂದು ಏಕೆ ಹೇಳುವುದು? ಸಂಗದೋಷದಲ್ಲಿ
ಯಾರಾದರೂ ಓದುವುದಿಲ್ಲವೆಂದರೆ ಇದರಲ್ಲಿ ಮಾಯೆ, ಶಿಕ್ಷಕ ಅಥವಾ ತಂದೆಯೇನು ಮಾಡುತ್ತಾರೆ?
ಓದಲಿಲ್ಲವೆಂದರೆ ತಮ್ಮ ಮನೆಗೆ ಹೊರಟು ಹೋದರು. ಡ್ರಾಮಾನುಸಾರ ಮೊದಲು ಭಟ್ಟಿಯಲ್ಲಿ ಎಲ್ಲರೂ
ಬರಲೇಬೇಕಾಗಿತ್ತು, ಬಂದು ಆಶ್ರಯವನ್ನು ಪಡೆದರು. ಕೆಲವರನ್ನು ಪತಿಯು ಹೊಡೆದರು, ತೊಂದರೆ ಕೊಟ್ಟರು.
ಆದ್ದರಿಂದ ಕೆಲವರಿಗೆ ವೈರಾಗ್ಯ ಬಂದು ಬಿಟ್ಟಿತು. ಮನೆಯಲ್ಲಿ ನಡೆಯಲಾಗಲಿಲ್ಲ ಆದ ಕಾರಣ ಕೆಲವರು
ಇಲ್ಲಿಗೆ ಬಂದು ಬಿಟ್ಟರು, ಆದರೂ ಸಹ ಮತ್ತೆ ಹೊರಟು ಹೋದರು. ಹೋಗಿ ನೌಕರಿ ಇತ್ಯಾದಿಗಳಲ್ಲಿ
ತೊಡಗಿದರು, ವಿವಾಹ ಮಾಡಿಕೊಂಡರು. ಮಾಯೆಯ ಬಿರುಗಾಳಿಯಿಂದ ಓದುತ್ತಿಲ್ಲ ಎಂಬುದು ಕೇವಲ ನೆಪವಾಗಿದೆ
ಆದರೆ ಇದು ಅರ್ಥವಾಗುವುದಿಲ್ಲ - ಸಂಗದೋಷದಲ್ಲಿ ಬಂದ ಕಾರಣ ಈ ಗತಿಯಾಗಿದೆ ಮತ್ತು ನಮ್ಮಲ್ಲಿ
ವಿಕಾರಗಳು ಬಲವಾಗಿವೆ ಅಂದಮೇಲೆ ಮಾಯೆಯ ಬಿರುಗಾಳಿ ಬಂದಿತು. ಆದ್ದರಿಂದ ಬಿದ್ದು ಹೋಯಿತು ಎಂದು
ಮಾಯೆಯ ಮೇಲೆ ಏಕೆ ಹೇಳುತ್ತೀರಿ, ಇದು ತಮ್ಮ ಮೇಲೆ ಆಧಾರಿತವಾಗಿದೆ. ತಂದೆ, ಶಿಕ್ಷಕ, ಸದ್ಗುರುವಿನ
ಯಾವ ಶಿಕ್ಷಣ ಸಿಗುತ್ತದೆಯೋ ಅದರಂತೆಯೇ ನಡೆಯಬೇಕು. ನಡೆಯಲಿಲ್ಲವೆಂದರೆ ಯಾವುದೇ ಕೆಟ್ಟ ಸಂಗವಿದೆ
ಅಥವಾ ಕಾಮದ ನಶೆ ಇಲ್ಲವೆ ದೇಹಾಭಿಮಾನದ ನಶೆಯಿದೆ, ಎಲ್ಲಾ ಸೇವಾಕೇಂದ್ರದವರು ತಿಳಿದುಕೊಂಡಿದ್ದೀರಿ
- ನಾವು ಬೇಹದ್ದಿನ ತಂದೆಯಿಂದ ವಿಶ್ವದ ರಾಜ್ಯಭಾಗ್ಯವನ್ನು ಪಡೆಯಲು ಓದುತ್ತಿದ್ದೇವೆ. ಒಂದುವೇಳೆ
ನಿಶ್ಚಯವಿಲ್ಲವೆಂದರೆ ಕುಳಿತು ಕೊಳ್ಳುವುದಾದರೂ ಏಕೆ, ಇನ್ನೂ ಬಹಳಷ್ಟು ಆಶ್ರಮಗಳಿವೆ. ಆದರೆ
ಅಲ್ಲಂತೂ ಏನೂ ಪ್ರಾಪ್ತಿಯೂ ಇಲ್ಲ, ಗುರಿ-ಧ್ಯೇಯವೂ ಇಲ್ಲ. ಅವೆಲ್ಲವೂ ಚಿಕ್ಕ-ಚಿಕ್ಕ ಮಠ ಪಂಥಗಳು
ರೆಂಬೆ-ಕೊಂಬೆಗಳಾಗಿವೆ. ವೃಕ್ಷವು ವೃದ್ಧಿಯನ್ನು ಹೊಂದಲೇಬೇಕಾಗಿದೆ. ಇಲ್ಲಂತೂ ಪರಸ್ಪರ ಸಂಬಂಧವಿದೆ.
ಮಧುರ ದೈವೀ ವೃಕ್ಷದವರು ಯಾರಿರುವರೋ ಅವರು ಬಂದೇ ಬರುವರು. ಎಲ್ಲರಿಗಿಂತ ಮಧುರರು ಯಾರಾಗಿರುತ್ತಾರೆ?
ಯಾರು ಸತ್ಯಯುಗದ ಮಹಾರಾಜ-ಮಹಾರಾಣಿಯಾಗುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ಯಾರು ಮೊದಲ
ನಂಬರಿನಲ್ಲಿ ಬರುವರೋ ಅವರು ಅವಶ್ಯವಾಗಿ ಒಳ್ಳೆಯ ವಿದ್ಯೆಯನ್ನು ಓದಿರುವರು. ಅವರೇ ಸೂರ್ಯವಂಶಿ
ಮನೆತನದಲ್ಲಿ ಹೋದರು. ಇಂತಹವರೂ ಇದ್ದಾರೆ, ಗೃಹಸ್ಥ ವ್ಯವಹಾರದಲ್ಲಿದ್ದರೂ ಸಹ ಅವರ ಜೀವನವು
ಅರ್ಪಣಮಯವಾಗಿದೆ, ಬಹಳ ಸೇವೆ ಮಾಡುತ್ತಿದ್ದಾರೆ. ಅಂತರವಿದೆಯಲ್ಲವೆ. ಭಲೆ ಇಲ್ಲಿದ್ದರೂ ಸಹ ಓದಲು
ಆಗಲಿಲ್ಲವೆಂದರೆ ಅನ್ಯ ಸೇವೆಯಲ್ಲಿ ತೊಡಗುತ್ತಾರೆ. ಕೊನೆಯಲ್ಲಿ ಬಂದು ಸ್ವಲ್ಪ ರಾಜ್ಯ ಪದವಿಯನ್ನು
ಪಡೆದುಕೊಳ್ಳುತ್ತಾರೆ. ನೋಡಿದಾಗ ಹೊರಗಡೆ ಗೃಹಸ್ಥ ವ್ಯವಹಾರದಲ್ಲಿರುವವರೇ ಕೆಲವರು ಓದುವ ಮತ್ತು
ಓದಿಸುವುದರಲ್ಲಿ ಬಹಳ ತೀಕ್ಷ್ಣವಾಗಿ ಬಿಡುತ್ತಾರೆ. ಕನ್ಯೆ ಅಥವಾ ಕುಮಾರಿಗೆ ಗೃಹಸ್ಥಿ ಎಂದು
ಹೇಳುವುದಿಲ್ಲ ಮತ್ತು ಯಾರು ವಾನಪ್ರಸ್ಥಿಗಳಿದ್ದಾರೆಯೋ ಅವರು 60 ವರ್ಷಗಳ ನಂತರ ಎಲ್ಲವನ್ನೂ
ಮಕ್ಕಳಿಗೆ ಕೊಟ್ಟು ತಾನು ಯಾವುದಾದರೂ ಸಾಧು ಮೊದಲಾದವರ ಸಂಗದಲ್ಲಿ ಹೋಗಿ ಇರುತ್ತಾರೆ. ಇತ್ತೀಚೆಗಂತೂ
ತಮೋಪ್ರಧಾನರಾಗಿದ್ದಾರೆ, ಆ ಕಾರಣ ಸಾಯುವವರೆಗೂ ಉದ್ಯೋಗ-ವ್ಯವಹಾರವನ್ನು ಬಿಡುವುದಿಲ್ಲ ಮೊದಲಿಗೆ
60 ವರ್ಷಗಳಿಗೆ ವಾನಪ್ರಸ್ಥ ಸ್ಥಿತಿಯಲ್ಲಿ ಹೊರಟು ಹೋಗುತ್ತಿದ್ದರು, ಹೋಗಿ ಕಾಶಿಯಲ್ಲಿರುತ್ತಿದ್ದರು.
ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ, ಸದ್ಗತಿಯನ್ನು
ಪಡೆಯಲು ಸಾಧ್ಯವಿಲ್ಲ.
ತಂದೆಯೇ ಮುಕ್ತಿ-ಜೀವನ್ಮುಕ್ತಿದಾತನಾಗಿದ್ದಾರೆ, ಅದರಲ್ಲಿಯೂ ಎಲ್ಲರೂ ಜೀವನ್ಮುಕ್ತಿಯನ್ನು
ಪಡೆಯುವುದಿಲ್ಲ. ಕೆಲವರು ಮುಕ್ತಿಯಲ್ಲಿ ಹೋಗುತ್ತಾರೆ, ಈಗ ಆದಿ ಸನಾತನ ದೇವಿ-ದೇವತಾ ಧರ್ಮದ
ಸ್ಥಾಪನೆಯಾಗುತ್ತಿದೆ. ಯಾರೆಷ್ಟಾದರೂ ಪುರುಷಾರ್ಥ ಮಾಡಬಹುದು, ಅದರಲ್ಲಿಯೂ ಕುಮಾರಿಯರಿಗೆ ಒಳ್ಳೆಯ
ಅವಕಾಶವಿದೆ. ಪಾರಲೌಕಿಕ ತಂದೆಗೆ ವಾರಸುಧಾರರಾಗಿ ಬಿಡುತ್ತಾರೆ. ಇಲ್ಲಂತೂ ಎಲ್ಲಾ ಮಕ್ಕಳು
ತಂದೆಯಿಂದ ಆಸ್ತಿಯನ್ನು ಪಡೆಯಲು ಹಕ್ಕುದಾರರಾಗಿದ್ದಾರೆ.
ಲೌಕಿಕ ದಲ್ಲಾದರೆ ಕನ್ಯೆಯರಿಗೆ ಆಸ್ತಿಯು ಸಿಗುವುದಿಲ್ಲ. ಮಕ್ಕಳಿಗೆ ಲಾಲಸೆ ಇರುತ್ತದೆ. ಭಲೆ
ಇಂತಹವರೂ ಇದ್ದಾರೆ, ಇದು ಆಸ್ತಿಯು ಸಿಗುತ್ತದೆ. ಅದನ್ನೂ ತೆಗೆದುಕೊಳ್ಳೋಣ, ಅದನ್ನೂ ಏಕೆ ಬಿಡುವುದು
ಎಂದು ತಿಳಿದುಕೊಳ್ಳುತ್ತಾರೆ. ಎರಡೂ ಕಡೆ ಓದುತ್ತಾರೆ. ಹೀಗೆ ಭಿನ್ನ-ಭಿನ್ನ ಪ್ರಕಾರದವರಿರುತ್ತಾರೆ.
ಈಗ ಇದನ್ನಂತೂ ತಿಳಿದುಕೊಂಡಿದ್ದೀರಿ - ಯಾರು ಚೆನ್ನಾಗಿ ಓದುವರೋ ಅವರು ಶ್ರೇಷ್ಠ ಪದವಿಯನ್ನು
ಪಡೆಯುತ್ತಾರೆ. ಪ್ರಜೆಗಳಲ್ಲಿಯೂ ಬಹಳ ಸಾಹುಕಾರರಾಗಿ ಬಿಡುತ್ತಾರೆ. ಇಲ್ಲಿರುವವರಂತೂ ಒಳಗೇ
ಇರಬೇಕಾಗುತ್ತದೆ. ಆದ್ದರಿಂದ ಆಗುವುದಾದರೆ ರಾಜ-ರಾಣಿ ಇಲ್ಲವೆಂದರೆ ದಾಸ-ದಾಸಿಯರಾಗಿ ಬಿಡುತ್ತಾರೆ.
ಮತ್ತೆ ತ್ರೇತಾದ ಅಂತ್ಯದಲ್ಲಿ 3, 4, 5 ಜನ್ಮಗಳು ರಾಜ್ಯ ಪದವಿ ಸಿಗಬಹುದೇನೋ ಅಷ್ಟೇ! ಅದಕ್ಕಿಂತಲೂ
ಆ ಸಾಹುಕಾರರದ್ದೇ ಒಳ್ಳೆಯದು, ಯಾರು ಸತ್ಯಯುಗದಿಂದ ಹಿಡಿದು ಅವರ ಸಾಹುಕಾರಿತನವು
ಸ್ಥಿರವಾಗಿರುತ್ತದೆ. ಗೃಹಸ್ಥ ವ್ಯವಹಾರದಲ್ಲಿದ್ದು ಸಾಹುಕಾರಿ ಪದವಿಯನ್ನು ಏಕೆ ಪಡೆಯಬಾರದು? ನಾವು
ರಾಜ್ಯ ಪದವಿಯನ್ನು ಪಡೆಯಬೇಕೆಂದು ಪ್ರಯತ್ನ ಪಡುತ್ತಾರೆ ಆದರೆ ಒಂದುವೇಳೆ ಜಾರಿ ಬಿದ್ದರೆ
ಪ್ರಜೆಗಳಲ್ಲಿಯಾದರೂ ಒಳ್ಳೆಯ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕು, ಅದು ಒಳ್ಳೆಯ
ಪದವಿಯಾಯಿತಲ್ಲವೆ. ಇಲ್ಲಿರುವವರಿಗಿಂತಲೂ ಹೊರಗಿರುವವರು ಬಹಳ ಶ್ರೇಷ್ಠ ಪದವಿಯನ್ನು ಪಡೆಯಬಲ್ಲರು.
ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಪುರುಷಾರ್ಥವನ್ನೆಂದೂ ಮುಚ್ಚಿಡಲು ಸಾಧ್ಯವಿಲ್ಲ.
ಪ್ರಜೆಗಳಲ್ಲಿ ಯಾರು ಅತಿ ದೊಡ್ಡ ಸಾಹುಕಾರರಾಗುವರೋ ಅವರೂ ಸಹ ಮುಚ್ಚಿಡಲ್ಪಡಲು ಸಾಧ್ಯವಿಲ್ಲ.
ಹೊರಗಿರುವವರಿಗೆ ಕಡಿಮೆ ಪದವಿ ಸಿಗುತ್ತದೆ ಎಂದಲ್ಲ. ಕೊನೆಯಲ್ಲಿ ರಾಜ್ಯ ಪದವಿಯನ್ನು ಪಡೆಯುವುದು
ಒಳ್ಳೆಯದೋ ಅಥವಾ ಪ್ರಜೆಗಳಲ್ಲಿ ಆರಂಭದಿಂದ ಹಿಡಿದು ಶ್ರೇಷ್ಠ ಪದವಿಯನ್ನು ಪಡೆಯುವುದು ಒಳ್ಳೆಯದೋ?
ಗೃಹಸ್ಥ ವ್ಯವಹಾರದಲ್ಲಿರುವವರಿಗೆ ಇಷ್ಟೊಂದು ಮಾಯೆಯ ಬಿರುಗಾಳಿಗಳು ಬರುವುದಿಲ್ಲ. ಇಲ್ಲಿರುವವರಿಗೆ
ಬಹಳ ಬಿರುಗಾಳಿಗಳು ಬರುತ್ತವೆ. ನಾವು ಶಿವ ತಂದೆಯ ಮಡಿಲಿನಲ್ಲಿ ಕುಳಿತಿದ್ದೇವೆಂದು
ಸಾಹಸವನ್ನಿಡುತ್ತಾರೆ ಆದರೆ ಸಂಗದೋಷದಲ್ಲಿ ಬಂದು ಓದುವುದಿಲ್ಲ. ಅಂತಿಮದಲ್ಲಿ ಎಲ್ಲವೂ ಅರ್ಥವಾಗಿ
ಬಿಡುತ್ತದೆ. ಯಾರು ಯಾವ ಪದವಿಯನ್ನು ಪಡೆಯುತ್ತಾರೆಂದು ಸಾಕ್ಷಾತ್ಕಾರವಾಗುತ್ತದೆ. ನಂಬರ್ವಾರ್
ಓದುತ್ತಾರಲ್ಲವೆ! ಕೆಲವರಂತೂ ತಾವೇ ಸೇವಾಕೇಂದ್ರವನ್ನು ನಡೆಸುತ್ತಾರೆ, ಕೆಲವೊಂದೆಡೆ
ಸೇವಾಕೇಂದ್ರವನ್ನು ನಡೆಸುವವರಿಗಿಂತಲೂ ಓದುವವರು ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ. ಎಲ್ಲವೂ
ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಮಾಯೆಯ ಬಿರುಗಾಳಿಗಳು ಬರುತ್ತವೆ ಎಂದು ಹೇಳುವುದಲ್ಲ.
ವಾಸ್ತವದಲ್ಲಿ ತನ್ನ ಚಲನೆ ಸರಿಯಿಲ್ಲ, ಶ್ರೀಮತದಂತೆ ನಡೆಯುವುದಿಲ್ಲ. ಲೌಕಿಕದಲ್ಲಿಯೂ ಇದೇ
ರೀತಿಯಾಗುತ್ತದೆ, ಶಿಕ್ಷಕರು ಅಥವಾ ತಂದೆ-ತಾಯಿಯ ಮತದಂತೆ ನಡೆಯುವುದಿಲ್ಲ. ನೀವಂತೂ ಇಂತಹ ತಂದೆಯ
ಮಕ್ಕಳಾಗಿದ್ದೀರಿ, ಅವರಿಗೆ ಯಾರೂ ತಂದೆಯಿಲ್ಲ, ಅಲ್ಲಂತೂ ಹೊರಗಡೆ ಬಹಳ ಹೋಗಬೇಕಾಗುತ್ತದೆ. ಕೆಲವು
ಮಕ್ಕಳು ಸಂಗದೋಷದಲ್ಲಿ ಸಿಲುಕುತ್ತಾರೆ ಆದ್ದರಿಂದ ಅನುತ್ತೀರ್ಣರಾಗಿ ಬಿಡುತ್ತಾರೆ. ಮಾಯೆಯ
ಬಿರುಗಾಳಿಗಳು ಬರುತ್ತವೆಯೆಂದು ಏಕೆ ಹೇಳುತ್ತೀರಿ, ಇದು ತನ್ನದೇ ಮೂರ್ಖತೆಯಾಗಿದೆ. ತಂದೆಯ
ಆದೇಶದಂತೆ ನಡೆಯುವುದಿಲ್ಲ, ಈ ರೀತಿಯ ಚಲನೆಯಿಂದ ಅನುತ್ತೀರ್ಣರಾಗಿ ಬಿಡುತ್ತಾರೆ. ಅನೇಕರಿಗೆ
ಲಾಲಸೆಯಿರುತ್ತದೆ. ಕೆಲವರಲ್ಲಿ ಕ್ರೋಧ, ಕೆಲವರಲ್ಲಿ ಕಳ್ಳತನದ ಹವ್ಯಾಸವಿರುತ್ತದೆ. ಕೊನೆಯಲ್ಲಿ
ಎಲ್ಲವೂ ಅರ್ಥವಾಗುತ್ತದೆ. ಇಂತಿಂತಹವರು ಇಂತಿಂತಹ ಚಲನೆಯ ಕಾರಣ ಹೊರಟು ಹೋದರು. ಶೂದ್ರ ಕುಲದವರಾಗಿ
ಬಿಟ್ಟರು ಎಂದು ತಿಳಿಯಲಾಗುತ್ತದೆ. ಅಂತಹವರಿಗೆ ಮತ್ತೆ ಬ್ರಾಹ್ಮಣರು ಎಂದು ಹೇಳುವುದಿಲ್ಲ, ಅವರು
ಹೋಗಿ ಶೂದ್ರರಾದರು. ವಿದ್ಯಾಭ್ಯಾಸವನ್ನೇ ಬಿಟ್ಟು ಬಿಟ್ಟರು. ಸ್ವಲ್ಪ ಜ್ಞಾನವನ್ನು ಕೇಳಿದರೂ ಸಹ
ಪ್ರಜೆಗಳಲ್ಲಿ ಬಂದು ಬಿಡುತ್ತಾರೆ. ದೊಡ್ಡ ವೃಕ್ಷವಾಗಿದೆ, ಎಲ್ಲೆಲ್ಲಿಂದಲೋ ಬರುತ್ತಾರೆ. ಯಾರು
ದೇವಿ-ದೇವತಾ ಧರ್ಮದವರು ಅನ್ಯ ಧರ್ಮಗಳಲ್ಲಿ ಹೋಗಿ ಸೇರಿದ್ದಾರೆಯೋ ಅವರು ಪುನಃ ಬರುತ್ತಾರೆ. ಅನೇಕರು
ಬರುತ್ತಾರೆ, ಆಗ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಅನ್ಯ ಧರ್ಮದವರೂ ಸಹ ಮುಕ್ತಿಯ ಆಸ್ತಿಯನ್ನಂತೂ
ತೆಗೆದುಕೊಳ್ಳುತ್ತಾರಲ್ಲವೆ. ಇಲ್ಲಿ ಯಾರು ಬೇಕಾದರೂ ಬರಬಹುದು, ತಮ್ಮ ಮನೆತನದಲ್ಲಿ ಶ್ರೇಷ್ಠ
ಪದವಿಯನ್ನು ಪಡೆಯುವುದಿದ್ದರೆ ಅವರೂ ಸಹ ಬಂದು ಲಕ್ಷ್ಯವನ್ನು ತೆಗೆದುಕೊಂಡು ಹೋಗುತ್ತಾರೆ. ತಂದೆಯು
ನಿಮಗೆ ಸಾಕ್ಷಾತ್ಕಾರ ಮಾಡಿಸಿದ್ದರು - ಅವರೂ ಸಹ ಬಂದು ಕೊನೆಗೆ ಲಕ್ಷ್ಯವನ್ನು ತೆಗೆದುಕೊಂಡು
ಹೋಗುತ್ತಾರೆ. ಇಲ್ಲಿದ್ದು ಲಕ್ಷ್ಯದಂತೆ ಇರಲು ಸಾಧ್ಯವಿಲ್ಲ ಎಂದಲ್ಲ. ಯಾವುದೇ ಧರ್ಮದವರು
ಲಕ್ಷ್ಯವನ್ನಿಡಬಹುದು, ತಂದೆಯನ್ನು ನನೆಪು ಮಾಡಿ ಮತ್ತು ಶಾಂತಿಧಾಮವನ್ನು ನೆನಪು ಮಾಡಿದರೆ ತಮ್ಮ
ಧರ್ಮದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ಎಂದು ಲಕ್ಷ್ಯವು ಸಿಗುತ್ತದೆ. ಅವರಿಗೆ
ಜೀವನ್ಮುಕ್ತಿಯಂತೂ ಸಿಗುವುದಿಲ್ಲ. ಅವರು ಅಲ್ಲಿ ಬರುವುದೂ ಇಲ್ಲ. ಅವರಿಗೆ ಇದು ಇಷ್ಟವಾಗುವುದೇ
ಇಲ್ಲ. ಯಾರು ಇಲ್ಲಿಯವರಾಗಿದ್ದಾರೆಯೋ ಅವರಿಗೆ ಹೃದಯಕ್ಕೆ ನಾಟುತ್ತದೆ. ಕೊನೆಯಲ್ಲಿ ಆತ್ಮರು ತನ್ನ
ತಂದೆಯನ್ನಾದರೂ ಅರಿತುಕೊಳ್ಳಲಿ. ಅನೇಕ ಸೇವಾಕೇಂದ್ರಗಳಲ್ಲಿ ಇಂತಹವರೂ ಇದ್ದಾರೆ ಯಾರಿಗೆ ವಿದ್ಯೆಯ
ಮೇಲೂ ಗಮನವಿಲ್ಲ ಅಂದಾಗ ಅಂತಹವರು ಶ್ರೇಷ್ಠ ಪದವಿಯನ್ನು ಪಡೆಯುವುದಿಲ್ಲ ಎಂದು ತಿಳಿಯಲಾಗುತ್ತದೆ.
ಒಂದುವೇಳೆ ನಿಶ್ಚಯವಿದ್ದಿದ್ದೇ ಆದರೆ ನಮಗೆ ಬಿಡುವಿಲ್ಲವೆಂದು ಹೇಳಲು ಸಾಧ್ಯವಿಲ್ಲ.
ಅದೃಷ್ಟದಲ್ಲಿಲ್ಲ ಆದ್ದರಿಂದಲೇ ನಮಗೆ ಬಿಡುವಿಲ್ಲ, ಈ ಕೆಲಸವಿದೆ ಎಂದು ಹೇಳುತ್ತಾರೆ.
ಅದೃಷ್ಟದಲ್ಲಿದ್ದರೆ ದಿನ - ರಾತ್ರಿ ಪುರುಷಾರ್ಥ ಮಾಡತೊಡಗುತ್ತಾರೆ. ನಡೆಯುತ್ತಾ-ನಡೆಯುತ್ತಾ
ಸಂಗದಲ್ಲಿ ಕೆಟ್ಟು ಹೋಗುತ್ತಾರೆ ಅದಕ್ಕೆ ಗ್ರಹಚಾರಿಯೆಂದೂ ಹೇಳಬಹುದು. ಬೃಹಸ್ಪತಿಯು ದೆಶೆಗೆ
ಬದಲಾಗಿ ಮಂಗಳದೆಶೆಯಾಗಿ ಬಿಡುತ್ತದೆ. ಅಂತಹವರು ಮುಂದೆ ಕೆಳಗಿಳಿಯಲೂಬಹುದು. ಕೆಲವರಿಗಂತೂ ತಂದೆಯು
ಹೇಳುತ್ತಾರೆ - ಇವರಿಗೆ ರಾಹು ದೆಶೆ ಕುಳಿತಿದೆ, ಭಗವಂತನನ್ನೂ ಒಪ್ಪುವುದಿಲ್ಲವೆಂದು ಹೇಳುತ್ತಾರೆ.
ಕೆಲವರು ಈ ಬ್ರಹ್ಮಾರವರೇ ಹೇಳುತ್ತಾರೆ ಎಂದು ತಿಳಿದುಕೊಳ್ಳುತ್ತಾರೆ. ಯಾರು ಆದೇಶ ನೀಡುತ್ತಾರೆ
ಎಂಬುದು ಮಕ್ಕಳಿಗೆ ಅರ್ಥವಾಗುವುದಿಲ್ಲ, ದೇಹಾಭಿಮಾನ ಇರುವ ಕಾರಣ ಈ ಸಾಕಾರಿ ತಂದೆಯೇ
ತಿಳಿಸುತ್ತಾರೆಂದು ತಿಳಿದುಕೊಳ್ಳುತ್ತಾರೆ. ದೇಹೀ-ಅಭಿಮಾನಿಯಾಗಿದ್ದರೆ ಶಿವ ತಂದೆಯು ಏನೆಲ್ಲವನ್ನೂ
ಮಾಡುತ್ತಾರೆಯೋ ಅದನ್ನು ನಾವು ಮಾಡಬೇಕೆಂದು ತಿಳಿಯುತ್ತಾರೆ. ಜವಾಬ್ದಾರಿಯು ತಂದೆಯ ಮೇಲಿದೆ. ಶಿವ
ತಂದೆಯ ಮತದಂತೆ ನಡೆಯಬೇಕಲ್ಲವೆ. ದೇಹಾಭಿಮಾನದಲ್ಲಿ ಬರುವುದರಿಂದ ಶಿವ ತಂದೆಯನ್ನು ಮರೆತು
ಹೋಗುತ್ತಾರೆ. ಅಂದಮೇಲೆ ಮತ್ತೆ ಶಿವ ತಂದೆಯು ಜವಾಬ್ದಾರನಾಗಿರಲು ಸಾಧ್ಯವಿಲ್ಲ. ಅವರ ಆದೇಶವನ್ನಂತೂ
ತಲೆಯ ಮೇಲಿಟ್ಟುಕೊಂಡು ಧಾರಣೆ ಮಾಡಬೇಕು ಆದರೆ ಯಾರು ತಿಳಿಸುತ್ತಾರೆಂದು ತಿಳಿದುಕೊಳ್ಳುವುದೇ ಇಲ್ಲ.
ಅದರಲ್ಲಿಯೂ ಮತ್ತ್ಯಾರೂ ನಿಮಗೆ ಆಜ್ಞೆ ಮಾಡುವುದಿಲ್ಲ. ಕೇವಲ ತಂದೆಯು ತಿಳಿಸುತ್ತಾರೆ - ನಾನೇ
ನಿಮಗೆ ಶ್ರೀಮತ ಕೊಡುತ್ತೇನೆ. ಮೊದಲನೆಯದಾಗಿ ನನ್ನನ್ನು ನೆನಪು ಮಾಡಿ ಮತ್ತು ನಾನು ಯಾವ
ಜ್ಞಾನವನ್ನು ತಿಳಿಸುತ್ತೇನೆಯೋ ಅದನ್ನು ಧಾರಣೆ ಮಾಡಿಕೊಳ್ಳಿ ಮತ್ತು ಮಾಡಿಸಿ. ಕೇವಲ ಇದೇ ಕಾರ್ಯ
ಮಾಡುತ್ತಾ ಇರಿ, ಒಳ್ಳೆಯದು ಬಾಬಾ ತಮ್ಮ ಆಜ್ಞೆಯಂತೆ. ರಾಜರ ಮುಂದೆ ಇರುವವರು “ಆಜ್ಞೆ ಮಹಾಪ್ರಭು"
ಎಂದು ಹೇಳುತ್ತಾರೆ, ಆ ರಾಜರು ಆಜ್ಞೆ ಮಾಡುತ್ತಿದ್ದರು. ಇಲ್ಲಂತೂ ಇದು ಶಿವ ತಂದೆಯ ಆಜ್ಞೆಯಾಗಿದೆ.
ಪದೇ-ಪದೇ ಹೇಳಬೇಕು -ಬಾಬಾ "ತಮ್ಮ ಆಜ್ಞೆ”. ಆಗ ನಿಮಗೆ ಖುಷಿಯೂ ಇರುವುದು. ಶಿವ ತಂದೆಯು ಆಜ್ಞೆ
ನೀಡುತ್ತಾರೆಂದು ತಿಳಿಯುತ್ತೀರಿ, ಶಿವ ತಂದೆಯ ನೆನಪಿದ್ದಾಗ ಬುದ್ಧಿಯ ಬೀಗವು ತೆರೆಯುವುದು.
ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದು ಅಭ್ಯಾಸವಾಗಿ ಬಿಟ್ಟರೆ ದೋಣಿಯು ಪಾರಾಗುವುದು
ಆದರೆ ಇದೇ ಪರಿಶ್ರಮವಾಗಿದೆ, ಪದೇ-ಪದೇ ಮರೆತು ಹೋಗುತ್ತಾರೆ. ಮಾಯೆಯು ಮರೆಸುತ್ತದೆ ಎಂದು ಏಕೆ
ಹೇಳಬೇಕು? ನಾವೇ ಮರೆತು ಹೋಗುತ್ತೇವೆ. ಆದ್ದರಿಂದ ಉಲ್ಟಾ ಕೆಲಸಗಳು ಆಗುತ್ತಿರುತ್ತವೆ. ಅನೇಕ
ಕನ್ಯೆಯರಿದ್ದಾರೆ, ಜ್ಞಾನವನ್ನು ಬಹಳ ಚೆನ್ನಾಗಿ ತಿಳಿಸುತ್ತಾರೆ ಆದರೆ ಯೋಗವಿಲ್ಲ ಯಾವುದರಿಂದ
ವಿಕರ್ಮ ವಿನಾಶವಾಗುತ್ತದೆ. ಹೀಗೆ ಅನೇಕರು ಒಳ್ಳೊಳ್ಳೆಯ ಮಕ್ಕಳಿದ್ದಾರೆ ಆದರೆ ಯೋಗವಿಲ್ಲ. ಇವರು
ಯೋಗದಲ್ಲಿರುವುದಿಲ್ಲ ಮತ್ತೆ ಪಾಪವಾಗಿ ಬಿಡುತ್ತದೆ, ಅದನ್ನು ಅನುಭವಿಸಬೇಕಾಗುತ್ತದೆ ಎಂದು
ಚಲನೆಯಿಂದಲೇ ತಿಳಿಯಲಾಗುತ್ತದೆ. ಇದರಲ್ಲಿ ಬಿರುಗಾಳಿಯ ಮಾತಿಲ್ಲ. ತಿಳಿದುಕೊಳ್ಳಿ, ಇದು ನನ್ನ
ತಪ್ಪಾಗಿದೆ, ನಾನು ಶ್ರೀಮತದಂತೆ ನಡೆಯುವುದಿಲ್ಲ. ಇಲ್ಲಿ ನೀವು ರಾಜಯೋಗವನ್ನು ಕಲಿಯುವುದಕ್ಕಾಗಿ
ಬಂದಿದ್ದೀರಿ. ಪ್ರಜಾಯೋಗವನ್ನು ಕಲಿಸಲಾಗುವುದಿಲ್ಲ. ತಂದೆಯನ್ನು ಅನುಸರಿಸಿ ಆಗ
ಸಿಂಹಾಸನಾಧಿಕಾರಿಗಳಾಗುವಿರಿ. ಅವರದಂತೂ ನಿಶ್ಚಿತವಾಗಿದೆ. ಇವರು ಲಕ್ಷ್ಮಿ -ನಾರಾಯಣರಾಗುತ್ತಾರೆ
ಅಂದಮೇಲೆ ಆ ಮಾತಾಪಿತರನ್ನು ಫಾಲೋ ಮಾಡಿ. ಅನ್ಯ ಧರ್ಮದವರು ಮಾತಾಪಿತರನ್ನು ಫಾಲೋ ಮಾಡುವುದಿಲ್ಲ.
ಅವರು ತಂದೆಯನ್ನೇ ಒಪ್ಪುತ್ತಾರೆ, ಇಲ್ಲಂತೂ ಇಬ್ಬರೂ ಇದ್ದಾರೆ. ತಂದೆಯು ರಚಯಿತನಾಗಿದ್ದಾರೆ,
ತಾಯಿಯದೆಲ್ಲವೂ ಗುಪ್ತ ರಹಸ್ಯವಾಗಿದೆ. ತಂದೆ-ತಾಯಿಯು ಓದಿಸುತ್ತಾ ಇರುತ್ತಾರೆ, ಹೀಗೆ ಮಾಡಿ, ಹೀಗೆ
ಮಾಡಬೇಡಿ ಎಂದು ತಿಳಿಸುತ್ತಾರೆ. ಶಿಕ್ಷಕರು ಯಾವುದೇ ಶಿಕ್ಷೆ ಕೊಡುವುದಾದರೆ ಶಾಲೆಯ ಮಧ್ಯದಲ್ಲಿಯೇ
ಕೊಡುತ್ತಾರಲ್ಲವೆ. ಆದರೆ ನನ್ನ ಗೌರವವನ್ನು ಕಳೆಯುತ್ತೀರಿ ಎಂದು ಮಕ್ಕಳು ಹೇಳುವರೇ? ತಂದೆಯು 5-6
ಮಂದಿ ಮಕ್ಕಳ ಮುಂದೆಯೇ ಪೆಟ್ಟು ಕೊಡುವರು ಆದರೆ 5-6 ಮಂದಿ ಮುಂದೆ ಏಕೆ ಹೊಡೆದಿರಿ ಎಂದು ಮಗುವು
ಹೇಳುವುದಿಲ್ಲ. ಇಲ್ಲಂತೂ ಮಕ್ಕಳಿಗೆ ಶಿಕ್ಷಣ ಕೊಡಲಾಗುವುದು, ಆದರೂ ನಡೆಯಲಿಲ್ಲವೆಂದರೆ ಹೋಗಿ
ಗೃಹಸ್ಥ ವ್ಯವಹಾರದಲ್ಲಿದ್ದು ಪುರುಷಾರ್ಥ ಮಾಡಿ. ಒಂದುವೇಳೆ ಇಲ್ಲಿ ಕುಳಿತು ಸೇವಾಭಂಗ ಮಾಡಿದರೆ
ಇರುವ ಅಲ್ಪಸ್ವಲ್ಪ ಪುಣ್ಯವೂ ಸಹ ಸಮಾಪ್ತಿಯಾಗುವುದು. ಆದ್ದರಿಂದ ಓದದಿದ್ದರೆ ಬಿಟ್ಟು ಬಿಡಿ.
ನಾವಿನ್ನು ನಡೆಯಲಾಗುವುದಿಲ್ಲ ಎಂದು ಹೇಳಿರಿ. ಅದಕ್ಕೆ ಬದಲಾಗಿ ನಿಂದನೆಯನ್ನೇಕೆ ಮಾಡಬೇಕು! ಅನೇಕ
ಮಕ್ಕಳಿದ್ದಾರೆ, ಕೆಲವರು ಓದುತ್ತಾರೆ, ಕೆಲವರು ಬಿಟ್ಟು ಬಿಡುತ್ತಾರೆ. ಪ್ರತಿಯೊಬ್ಬರೂ ತನ್ನ
ವಿದ್ಯೆಯಲ್ಲಿ ಮಸ್ತರಾಗಿರಬೇಕು. ತಂದೆಯು ತಿಳಿಸುತ್ತಾರೆ - ಒಬ್ಬರು ಇನ್ನೊಬ್ಬರಿಂದ ಸೇವೆಯನ್ನು
ತೆಗೆದುಕೊಳ್ಳಬೇಡಿ. ಇನ್ನೊಬ್ಬರಿಂದ ಸೇವೆಯನ್ನು ತೆಗೆದುಕೊಳ್ಳುವುದೂ ಸಹ ದೇಹ ಅಹಂಕಾರವಾಗಿದೆ.
ತಂದೆಯು ತಿಳಿಸಬೇಕಾಗುತ್ತದೆಯಲ್ಲವೆ. ಇಲ್ಲದಿದ್ದರೆ ಕೊನೆಯಲ್ಲಿ ಧರ್ಮರಾಜ ಸಭೆಯು ಕುಳಿತಾಗ ನಮಗೆ
ಕಾಯಿದೆ-ಕಾನೂನಿನ ಬಗ್ಗೆ ಗೊತ್ತೇ ಇರಲಿಲ್ಲವೆಂದು ಹೇಳಿ ಬಿಡುತ್ತಾರೆ. ಆದ್ದರಿಂದ ತಂದೆಯು
ತಿಳಿಸುತ್ತಾರೆ - ಸಾಕ್ಷಾತ್ಕಾರ ಮಾಡಿಸಿ ಶಿಕ್ಷೆ ಕೊಡುತ್ತೇನೆ. ಸಾಕ್ಷಿಯಿಲ್ಲದೆ ಶಿಕ್ಷೆ
ಸಿಗುವುದಿಲ್ಲ, ಕಲ್ಪದ ಹಿಂದಿನ ತರಹ ಚೆನ್ನಾಗಿ ತಿಳಸುವವರು ಅನೇಕರಿದ್ದಾರೆ. ಪ್ರತಿಯೊಬ್ಬರ
ಅದೃಷ್ಟವನ್ನು ನೋಡಲಾಗುತ್ತದೆ. ಕೆಲವರು ಸರ್ವಿಸ್ ಮಾಡಿ ಜೀವನವನ್ನು ವಜ್ರ ಸಮಾನವನ್ನಾಗಿ
ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಅದೃಷ್ಟಕ್ಕೆ ಬರೆಯೆಳೆದುಕೊಳ್ಳುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಕ ಮಕ್ಕಳಿಗೆ ಆತ್ಮೀಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆ,
ಶಿಕ್ಷಕ, ಸದ್ಗುರುವಿನ ಮೂಲಕ ಯಾವ ಶಿಕ್ಷಣ ಸಿಗುತ್ತದೆಯೋ ಅದರಂತೆಯೇ ನಡೆಯಬೇಕಾಗಿದೆ. ಮಾಯೆಯನ್ನು
ದೋಷಿಯನ್ನಾಗಿ ಮಾಡದೆ ತನ್ನ ನಿರ್ಬಲತೆಗಳನ್ನು ಪರಿಶೀಲನೆ ಮಾಡಿ ಅವನ್ನು ತೆಗೆಯಬೇಕಾಗಿದೆ.
2. ಅಹಂಕಾರದ ತ್ಯಾಗ ಮಾಡಿ ತನ್ನ ವಿದ್ಯಾಭ್ಯಾಸದಲ್ಲಿ ಮಸ್ತರಾಗಿರಬೇಕಾಗಿದೆ. ಎಂದೂ ಅನ್ಯರಿಂದ ಸೇವೆ
ತೆಗೆದುಕೊಳ್ಳಬಾರದು. ಸಂಗದೋಷದಿಂದ ಬಹಳ-ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ.
ವರದಾನ:
ನಿಶ್ಚಯದ ಆಧಾರದ
ಮೇಲೆ ಸದಾ ಏಕರಸ, ಅಚಲ ಸ್ಥಿತಿಯಲ್ಲಿ ಸ್ಥಿತರಾಗಿರುವಂತಹ ನಿಶ್ಚಿಂತ ಭವ.
ನಿಶ್ಚಯ ಬುದ್ಧಿಯ
ನಿಶಾನಿಯಾಗಿದೆ - ಸದಾ ನಿಶ್ಚಿಂತೆ. ಅವರು ಯಾವುದೇ ಮಾತಿನಲ್ಲಿ ಅಲುಗಾಡಲು ಸಾಧ್ಯವಿಲ್ಲ, ಸದಾ
ಅಚಲವಾಗಿರುತ್ತಾರೆ ಆದ್ದರಿಂದ ಏನೇ ಆಗಿ ಹೋದರೂ ಯೋಚಿಸಬೇಡಿ, ಏಕೆ? ಏನು? ಎನ್ನುವುದರಲ್ಲಿ ಎಂದೂ
ಹೋಗಬೇಡಿ, ತ್ರಿಕಾಲದರ್ಶಿಯಾಗಿ ನಿಶ್ಚಿಂತರಾಗಿರಿ ಏಕೆಂದರೆ ಪ್ರತಿ ಹೆಜ್ಜೆಯಲ್ಲಿ ಕಲ್ಯಾಣವಿದೆ.
ಯಾವಾಗ ಕಲ್ಯಾಣಕಾರಿ ತಂದೆಯ ಕೈ ಹಿಡಿದಿರುವಾಗ ಅವರ ಅಕಲ್ಯಾಣವನ್ನೂ ಸಹ ಕಲ್ಯಾಣದಲ್ಲಿ ಬದಲಾಯಿಸಿ
ಬಿಡುತ್ತಾರೆ. ಆದ್ದರಿಂದ ಸದಾ ನಿಶ್ಚಿಂತವಾಗಿರಿ.
ಸ್ಲೋಗನ್:
ಯಾರು ಸದಾ
ಸ್ನೇಹಿಯಾಗಿದ್ದಾರೆ ಅವರು ಪ್ರತಿ ಕಾರ್ಯದಲ್ಲಿ ಸ್ವತಃ ಸಹಯೋಗಿಯಾಗುತ್ತಾರೆ.