20/03/21 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ - ಮನುಷ್ಯರನ್ನು ಜಾಗೃತ ಮಾಡುವುದು, ಮಾರ್ಗವನ್ನು ತಿಳಿಸುವುದು ನಿಮ್ಮ ಉದ್ಯೋಗವಾಗಿದೆ, ನೀವು ಎಷ್ಟು ದೇಹೀ-ಅಭಿಮಾನಿಯಾಗಿ ತಂದೆಯ ಪರಿಚಯ ತಿಳಿಸುತ್ತೀರೋ ಅಷ್ಟು ಕಲ್ಯಾಣವಾಗುವುದು”

ಪ್ರಶ್ನೆ:

ಬಡ ಮಕ್ಕಳು ತನ್ನ ಯಾವ ವಿಶೇಷತೆಯ ಆಧಾರದ ಮೇಲೆ ಸಾಹುಕಾರರಿಗಿಂತಲೂ ಮುಂದೆ ಹೋಗುತ್ತಾರೆ?

ಉತ್ತರ:

ಬಡವರಲ್ಲಿ ದಾನ-ಪುಣ್ಯದ ಪ್ರತಿ ಬಹಳ ಶ್ರದ್ಧೆಯಿರುತ್ತದೆ. ಬಡವರು ಭಕ್ತಿಯನ್ನೂ ಸಹ ಬಹಳ ಪ್ರೀತಿಯಿಂದ ಮಾಡುತ್ತಾರೆ. ಬಡವರಿಗೇ ಸಾಕ್ಷಾತ್ಕಾರವಾಗುತ್ತದೆ. ಸಾಹುಕಾರರಿಗೆ ತಮ್ಮ ಹಣದ ನಶೆಯಿರುತ್ತದೆ. ಹೆಚ್ಚು ಪಾಪಗಳಾಗುತ್ತವೆ ಆದ್ದರಿಂದ ಬಡ ಮಕ್ಕಳು ಅವರಿಗಿಂತ ಮುಂದೆ ಹೊರಟು ಹೋಗುತ್ತಾರೆ.

ಗೀತೆ:

ಓಂ ನಮಃ ಶಿವಾಯ........

ಓಂ ಶಾಂತಿ. ನೀವು ಮಾತಾಪಿತಾ ನಾನು ನಿಮ್ಮ ಬಾಲಕ...... ಇದಂತೂ ಪರಮಪಿತ ಪರಮಾತ್ಮನ ಮಹಿಮೆ ಗಾಯನ ಮಾಡಲ್ಪಟ್ಟಿದೆ. ಇದು ಸ್ಪಷ್ಟ ಮಹಿಮೆಯಾಗಿದೆ ಏಕೆಂದರೆ ಅವರು ರಚಯಿತನಾಗಿದ್ದಾರೆ. ಲೌಕಿಕ ತಂದೆ-ತಾಯಿಯೂ ಸಹ ಮಕ್ಕಳಿಗೆ ರಚಯಿತರಾಗಿದ್ದಾರೆ, ಪಾರಲೌಕಿಕ ತಂದೆಗೂ ಸಹ ರಚಯಿತನೆಂದು ಹೇಳಲಾಗುತ್ತದೆ. ಬಂಧು-ಸಹಾಯಕ..... ಎಂದು ಅವರಿಗೆ ಬಹಳ ಮಹಿಮೆ ಹಾಡುತ್ತಾರೆ. ಲೌಕಿಕ ತಂದೆಗೆ ಇಷ್ಟೊಂದು ಮಹಿಮೆಯಿರುವುದಿಲ್ಲ, ಪರಮಪಿತ ಪರಮಾತ್ಮನ ಮಹಿಮೆಯೇ ಬೇರೆಯಾಗಿದೆ. ಜ್ಞಾನ ಸಾಗರ, ಜ್ಞಾನ ಪೂರ್ಣನೆಂದು ಮಕ್ಕಳೂ ಸಹ ಮಹಿಮೆ ಮಾಡುತ್ತೀರಿ, ಅವರಲ್ಲಿ ಸಂಪೂರ್ಣ ಜ್ಞಾನವಿದೆ. ಇದು ಯಾವುದೇ ಶರೀರ ನಿರ್ವಹಣೆಯ ವಿದ್ಯೆಯ ಜ್ಞಾನವಲ್ಲ. ತಂದೆಗೆ ಜ್ಞಾನ ಸಾಗರ, ಜ್ಞಾನಪೂರ್ಣನೆಂದು ಹೇಳಲಾಗುತ್ತದೆ ಅಂದಮೇಲೆ ಯಾವುದರ ಜ್ಞಾನ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದರ ತಿಳುವಳಿಕೆಗೆ ಜ್ಞಾನವೆಂದು ಹೇಳಲಾಗುತ್ತದೆ ಅಂದಾಗ ತಂದೆಯಲ್ಲಿ ಸಂಪೂರ್ಣ ಜ್ಞಾನವಿದೆ, ಜ್ಞಾನ ಸಾಗರ, ಪತಿತ -ಪಾವನನಾಗಿದ್ದಾರೆ. ಕೃಷ್ಣನಿಗೆ ಎಂದೂ ಸಹ ಪತಿತ-ಪಾವನ ಅಥವಾ ಜ್ಞಾನ ಸಾಗರನೆಂದು ಹೇಳುವುದಿಲ್ಲ. ಅವರ ಮಹಿಮೆಯು ಸಂಪೂರ್ಣ ಭಿನ್ನವಾಗಿದೆ. ಇಬ್ಬರೂ ಭಾರತದ ನಿವಾಸಿಗಳಾಗಿದ್ದಾರೆ. ಶಿವ ತಂದೆಯದೂ ಸಹ ಭಾರತದಲ್ಲಿ ಮಹಿಮೆಯಿದೆ. ಶಿವ ಜಯಂತಿಯನ್ನು ಇಲ್ಲಿಯೇ ಆಚರಿಸುತ್ತಾರೆ, ಕೃಷ್ಣನ ಜಯಂತಿಯನ್ನು ಮತ್ತು ಗೀತಾ ಜಯಂತಿಯನ್ನೂ ಆಚರಿಸುತ್ತಾರೆ. ಮೂರು ಜಯಂತಿಗಳು ಮುಖ್ಯವಾಗಿವೆ ಅಂದಮೇಲೆ ಈಗ ಪ್ರಶ್ನೆಯು ಬರುತ್ತದೆ - ಮೊದಲು ಯಾರ ಜಯಂತಿಯಾಗುವುದು? ಶಿವನದೇ ಅಥವಾ ಕೃಷ್ಣನದೇ? ಮನುಷ್ಯರಂತೂ ತಂದೆಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಕೃಷ್ಣನ ಜಯಂತಿಯನ್ನು ಬಹಳ ಪ್ರೀತಿಯಿಂದ, ವಿಜೃಂಭಣೆಯಿಂದ ಆಚರಿಸುತ್ತಾರೆ. ಶಿವ ಜಯಂತಿಯ ಬಗ್ಗೆ ಯಾರಿಗೂ ಅಷ್ಟು ತಿಳಿದಿಲ್ಲ, ಗಾಯನವೂ ಇಲ್ಲ. ಶಿವನು ಬಂದು ಏನು ಮಾಡಿದರು? ಅವರ ಚರಿತ್ರೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ಕೃಷ್ಣನಿಗಾಗಿ ಅನೇಕ ಮಾತುಗಳನ್ನು ಬರೆದಿದ್ದಾರೆ, ಗೋಪಿಕೆಯರನ್ನು ಓಡಿಸಿಕೊಂಡು ಹೋದನು, ಇದನ್ನು ಮಾಡಿದನು, ಅದನ್ನು ಮಾಡಿದನು ಎಂದು. ಕೃಷ್ಣನ ಚರಿತ್ರೆಗಳ ಬಗ್ಗೆ ವಿಶೇಷವಾಗಿ ಒಂದು ಪುಸ್ತಕವು ಹೊರಡುತ್ತದೆ. ಶಿವನ ಚರಿತ್ರೆಯೇನೂ ಇಲ್ಲ. ಕೃಷ್ಣ ಜಯಂತಿ ಯಾವಾಗ ಆಯಿತು ಮತ್ತು ಗೀತಾ ಜಯಂತಿ ಯಾವಾಗ ಆಯಿತು? ಕೃಷ್ಣನು ದೊಡ್ಡವನಾದಾಗಲೇ ಜ್ಞಾನವನ್ನು ತಿಳಿಸಬೇಕಲ್ಲವೆ. ಕೃಷ್ಣನ ಬಾಲ್ಯವನ್ನಂತೂ ತೋರಿಸುತ್ತಾರೆ. ಅವನನ್ನು ಬುಟ್ಟಿಯಲ್ಲಿ ತೆಗೆದುಕೊಂಡು ಹೋಗಿ ಪಾರು ಮಾಡಿದರು ಎಂದು ಬಾಲ್ಯವನ್ನು ತೋರಿಸುತ್ತಾರೆ. ಇನ್ನೊಂದು ಕಡೆ ರಥದ ಮೇಲೆ ನಿಂತು ಚಕ್ರವನ್ನು ತಿರುಗಿಸುತ್ತಿರುವ ಯೌವ್ವನದ ಚಿತ್ರವನ್ನೂ ತೋರಿಸುತ್ತಾರೆ. 16-17 ವರ್ಷದ್ದಿರಬಹುದು ಬಾಕಿ ಬಾಲ್ಯದ ಚಿತ್ರವನ್ನು ತೋರಿಸಿದ್ದಾರೆ. ಈಗ ಗೀತೆಯನ್ನು ಯಾವಾಗ ತಿಳಿಸಿದರು? ಅದೇ ಸಮಯದಲ್ಲಂತೂ ತಿಳಿಸಿರುವುದಿಲ್ಲ. ಇಂತಹವರನ್ನು ಓಡಿಸಿಕೊಂಡು ಹೋದನೆಂದು ಬರೆಯುತ್ತಾರೆ ಅಂದಮೇಲೆ ಆ ಸಮಯದಲ್ಲಿ ಜ್ಞಾನವಂತೂ ಶೋಭಿಸುವುದಿಲ್ಲ. ಜ್ಞಾನವನ್ನು ಯಾವಾಗ ವಯಸ್ಸಾಗುವುದೋ ಆಗ ತಿಳಿಸಬೇಕು. ಗೀತೆಯನ್ನೂ ಸಹ ಸ್ವಲ್ಪ ಸಮಯದ ನಂತರ ತಿಳಿಸಿರಬೇಕು ಆದರೆ ಈ ರೀತಿಯಲ್ಲ. ಶಿವನು ಏನು ಮಾಡಿದನು ಎಂಬುದು ಮನುಷ್ಯರಿಗೆ ಗೊತ್ತಿಲ್ಲ. ಅಜ್ಞಾನ ನಿದ್ರೆಯಲ್ಲಿ ಮಲಗಿದ್ದಾರೆ. ತಂದೆಯು ತಿಳಿಸುತ್ತಾರೆ - ನನ್ನ ಚರಿತ್ರೆಯ ಬಗ್ಗೆ ಯಾರಿಗೂ ತಿಳಿದಿಲ್ಲ, ನಾನೇನು ಮಾಡಿದೆನು, ನನಗೇ ಪತಿತ-ಪಾವನನೆಂದು ಹೇಳುತ್ತಾರೆ. ನಾನು ಬರುತ್ತೇನೆ ಅಂದರೆ ನನ್ನ ಜೊತೆಯಲ್ಲಿ ಗೀತೆಯಿದೆ. ನಾನು ಸಾಧಾರಣ ವೃದ್ಧ ಅನುಭವೀ ತನುವಿನಲ್ಲಿ ಬರುತ್ತೇನೆ. ನೀವು ಭಾರತದಲ್ಲಿಯೇ ಶಿವ ಜಯಂತಿಯನ್ನಾಚರಿಸುತ್ತೀರಿ. ಕೃಷ್ಣ ಜಯಂತಿ, ಗೀತಾ ಜಯಂತಿ, ಇವು ಮುಖ್ಯವಾಗಿದೆ. ರಾಮನ ಜಯಂತಿಯಂತೂ ಕೊನೆಯಲ್ಲಿ ಆಗುತ್ತದೆ. ಈ ಸಮಯದಲ್ಲಿ ಏನೆಲ್ಲವೂ ಆಗುತ್ತದೆಯೋ ಅದೆಲ್ಲವೂ ನಂತರದಲ್ಲಿ ಆಚರಣೆ ಮಾಡಲಾಗುತ್ತದೆ. ಸತ್ಯ - ತ್ರೇತಾಯುಗದಲ್ಲಿ ಜಯಂತಿಗಳೇನೂ ಇರುವುದಿಲ್ಲ. ಸೂರ್ಯವಂಶಿಯರಿಂದ ಚಂದ್ರವಂಶಿಯರು ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ, ಮತ್ತೇನೂ ಮಹಿಮೆಯಿಲ್ಲ. ಕೇವಲ ರಾಜರ ಪಟ್ಟಾಭಿಷೇಕದ ದಿನಗಳನ್ನು ಆಚರಿಸುತ್ತಾರೆ. ಇತ್ತೀಚೆಗೆ ಜನ್ಮ ದಿನವನ್ನಂತೂ ಎಲ್ಲರೂ ಆಚರಿಸುತ್ತಾರೆ, ಅದು ಸಾಮಾನ್ಯ ಮಾತಾಯಿತು. ಕೃಷ್ಣನು ಜನ್ಮ ಪಡೆದನು ನಂತರ ದೊಡ್ಡವನಾಗಿ ರಾಜಧಾನಿಯನ್ನು ನಡೆಸಿದನು, ಅದರಲ್ಲಿ ಮಹಿಮೆಯ ಮಾತೇ ಇಲ್ಲ. ಸತ್ಯ-ತ್ರೇತಾಯುಗದಲ್ಲಿ ಸುಖದ ರಾಜ್ಯವು ನಡೆಯುತ್ತಾ ಬಂದಿದೆ. ಅದು ಯಾವಾಗ, ಹೇಗೆ ಸ್ಥಾಪನೆಯಾಯಿತು? ಎಂಬುದು ನೀವು ಮಕ್ಕಳ ಬುದ್ಧಿಯಲ್ಲಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ನಾನು ಬರುತ್ತೇನೆ. ಕಲಿಯುಗದ ಅಂತಿಮವು ಪತಿತ - ಪ್ರಪಂಚವಾಗಿದೆ. ಸತ್ಯಯುಗದ ಆದಿ ಪಾವನ ಪ್ರಪಂಚವಾಗಿರುವುದು. ನಾನು ತಂದೆಯೂ ಆಗಿದ್ದೇನೆ, ನೀವು ಮಕ್ಕಳಿಗೆ ಆಸ್ತಿಯನ್ನೂ ಕೊಡುತ್ತೇನೆ. ಕಲ್ಪದ ಮೊದಲೂ ಸಹ ನಿಮಗೆ ಆಸ್ತಿಯನ್ನು ಕೊಟ್ಟಿದ್ದೆನು. ಆದ್ದರಿಂದ ನೀವು ಆಚರಿಸುತ್ತಾ ಬಂದಿದ್ದೀರಿ ಆದರೆ ಹೆಸರನ್ನು ಮರೆತಿರುವ ಕಾರಣ ಕೃಷ್ಣನ ಹೆಸರನ್ನು ಹಾಕಿದ್ದಾರೆ. ಎಲ್ಲರಿಗಿಂತ ದೊಡ್ಡವರು ಶಿವನಾಗಿದ್ದಾರೆ, ಮೊಟ್ಟ ಮೊದಲು ಅವರ ಜಯಂತಿಯಾದಾಗಲೇ ನಂತರ ಸಾಕಾರ ಮನುಷ್ಯರದಾಗುವುದು. ಆತ್ಮರೆಲ್ಲರೂ ವಾಸ್ತವದಲ್ಲಿ ಮೇಲಿನಿಂದ ಇಳಿಯುತ್ತಾರೆ, ನನ್ನದೂ ಅವತರಣೆಯಾಗಿದೆ. ಕೃಷ್ಣನು ತಾಯಿ ಗರ್ಭದಿಂದ ಜನ್ಮ ಪಡೆದನು, ಪಾಲನೆ ಪಡೆದುಕೊಂಡನು. ಎಲ್ಲರೂ ಪುನರ್ಜನ್ಮದಲ್ಲಿ ಬರಲೇಬೇಕಾಗಿದೆ. ಶಿವ ತಂದೆಯು ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ, ಅವರು ಬರುತ್ತಾರಲ್ಲವೆ. ಅಂದಾಗ ತಂದೆಯು ಇದೆಲ್ಲವನ್ನೂ ತಿಳಿಸುತ್ತಾರೆ - ಬ್ರಹ್ಮಾ, ವಿಷ್ಣು, ಶಂಕರರ ತ್ರಿಮೂರ್ತಿ ಚಿತ್ರವನ್ನು ತೋರಿಸುತ್ತಾರೆ. ಬ್ರಹ್ಮನ ಮೂಲಕ ಸ್ಥಾಪನೆ, ಏಕೆಂದರೆ ಶಿವನಿಗಂತೂ ತನ್ನದೇ ಆದ ಶರೀರವಿಲ್ಲ. ಆದ್ದರಿಂದ ಸ್ವಯಂ ಬಂದು ತಿಳಿಸುತ್ತಾರೆ. ನಾನು ಇವರ (ಬ್ರಹ್ಮಾ) ವೃದ್ಧ ತನುವಿನಲ್ಲಿ ಬರುತ್ತೇನೆ, ಇವರ ತಮ್ಮ ಜನ್ಮಗಳ ಬಗ್ಗೆಯೂ ತಿಳಿದುಕೊಂಡಿಲ್ಲ. ಇವರದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಆದ್ದರಿಂದ ಮೊಟ್ಟ ಮೊದಲು ತಿಳಿಸಬೇಕು – ಶಿವ ಜಯಂತಿ ದೊಡ್ಡದೋ ಅಥವಾ ಕೃಷ್ಣ ಜಯಂತಿ ದೊಡ್ಡದೋ? ಒಂದುವೇಳೆ ಕೃಷ್ಣನು ಗೀತೆಯನ್ನು ತಿಳಿಸಿದ್ದರೆ ಗೀತಾ ಜಯಂತಿಯಂತೂ ಶ್ರೀಕೃಷ್ಣನ ಬಹಳ ವರ್ಷಗಳ ನಂತರ ಯಾವಾಗ ದೊಡ್ಡವನಾಗುವನೋ ಆಗ ಆಗಬೇಕು. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಲ್ಲವೆ ಆದರೆ ವಾಸ್ತವದಲ್ಲಿ ಶಿವ ಜಯಂತಿಯ ನಂತರ ಕೂಡಲೇ ಗೀತಾ ಜಯಂತಿಯಾಯಿತು, ಈ ಮಾತುಗಳನ್ನೂ ಸಹ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಮಾತುಗಳಂತೂ ಬಹಳಷ್ಟಿದೆ. ಇವನ್ನು ಬರೆದಿಟ್ಟುಕೊಳ್ಳದೇ ನೆನಪಿರಲು ಸಾಧ್ಯವಿಲ್ಲ. ತಂದೆಯು ಎಷ್ಟು ಸಮೀಪವಿದ್ದಾರೆ, ಅವರಿಗೆ ರಥವೂ ಇದೆ. ತಂದೆಯು ತಿಳಿಸುತ್ತಾರೆ - ಇವೆಲ್ಲಾ ಜ್ಞಾನ ಬಿಂದುಗಳು ಸಮಯದಲ್ಲಿ ನೆನಪಿಗೆ ಬರುವುದು ಅಸಂಭವವಾಗಿದೆ. ತಂದೆಯು ತಿಳಿಸಿದ್ದಾರೆ - ಎಲ್ಲರಿಗೆ ಇಬ್ಬರು ತಂದೆಯರ ರಹಸ್ಯವನ್ನು ತಿಳಿಸಿ. ಶಿವ ಜಯಂತಿಯನ್ನು ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಬಂದಿರಬೇಕು. ಹೇಗೆ ಕ್ರಿಸ್ತ, ಬುದ್ಧ ಮೊದಲಾದವರು ಬಂದು ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ. ಈಗಲೂ ಸಹ ಆತ್ಮವು ಬಂದು ಪ್ರವೇಶ ಮಾಡಿ ಧರ್ಮ ಸ್ಥಾಪನೆ ಮಾಡುತ್ತದೆ. ಇವರು ಸ್ವರ್ಗದ ರಚಯಿತ, ಸೃಷ್ಟಿಯ ರಚಯಿತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಹೊಸ ಸೃಷ್ಟಿಯನ್ನು ರಚಿಸುತ್ತಾರೆ, ಹಳೆಯದನ್ನು ರಚಿಸುವುದಿಲ್ಲ. ಹೊಸ ಸೃಷ್ಟಿಗೆ ಸ್ವರ್ಗವೆಂದು ಹೇಳಲಾಗುತ್ತದೆ, ಈಗ ನರಕವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಸಂಗಮದಲ್ಲಿ ಬಂದು ನೀವು ಮಕ್ಕಳಿಗೆ ರಾಜಯೋಗದ ಜ್ಞಾನವನ್ನು ಕೊಡುತ್ತೇನೆ. ಇದು ಭಾರತದ ಪ್ರಾಚೀನ ಯೋಗವಾಗಿದೆ, ಇದನ್ನು ಯಾರು ಕಲಿಸಿದರು? ಶಿವ ತಂದೆಯ ಹೆಸರನ್ನಂತೂ ಮರೆ ಮಾಡಿ ಬಿಟ್ಟಿದ್ದಾರೆ. ಮೊದಲನೆಯದಾಗಿ ಗೀತೆಯ ಭಗವಂತನು ಶ್ರೀಕೃಷ್ಣನೆಂದು ಹೇಳುತ್ತಾರೆ ಮತ್ತು ವಿಷ್ಣು ಮೊದಲಾದ ಹೆಸರುಗಳನ್ನು ಕೊಟ್ಟು ಬಿಡುತ್ತಾರೆ. ಶಿವ ತಂದೆಯು ರಾಜಯೋಗವನ್ನು ಕಲಿಸಿದ್ದರು. ಇದು ಯಾರಿಗೂ ತಿಳಿದಿಲ್ಲ. ಶಿವ ಜಯಂತಿಯು ನಿರಾಕಾರನ ಜಯಂತಿಯನ್ನೇ ತೋರಿಸುತ್ತಿರುತ್ತಾರೆ, ಅವರು ಹೇಗೆ ಬಂದರು, ಬಂದು ಏನು ಮಾಡಿದರು? ಅವರು ಸರ್ವರ ಸದ್ಗತಿದಾತ, ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ. ಈಗ ಸರ್ವ ಆತ್ಮರಿಗೆ ಪರಮಾತ್ಮ ಮಾರ್ಗದರ್ಶಕನು ಬೇಕಾಗಿದೆ. ಅವರೂ ಆತ್ಮನೇ ಆಗಿದ್ದಾರೆ. ಹೇಗೆ ಮನುಷ್ಯರ ಮಾರ್ಗದರ್ಶಕರು ಮನುಷ್ಯರೇ ಆಗಿರುತ್ತಾರೆ ಹಾಗೆಯೇ ಆತ್ಮರಿಗೂ ಮಾರ್ಗದರ್ಶಕನು ಆತ್ಮನೇ ಆಗಿರಬೇಕು. ಅವರಿಗೆ ಪರಮಾತ್ಮನೆಂದೇ ಹೇಳಲಾಗುತ್ತದೆ. ಮನುಷ್ಯರೆಲ್ಲರೂ ಪುನರ್ಜನ್ಮವನ್ನು ತೆಗೆದುಕೊಂಡು ಪತಿತರಾಗಿದ್ದಾರೆ. ಮತ್ತೆ ಪಾವನರನ್ನಾಗಿ ಮಾಡಿ ಮರಳಿ ಕರೆದುಕೊಂಡು ಹೋಗುವವರು ಯಾರು? ತಂದೆಯು ತಿಳಿಸುತ್ತಾರೆ - ಮಕ್ಕಳೇ ನಾನೇ ಬಂದು ಪಾವನರಾಗುವ ಯುಕ್ತಿಯನ್ನು ತಿಳಿಸುತ್ತೇನೆ. ನೀವು ನನ್ನನ್ನು ನೆನಪು ಮಾಡಿ. ದೇಹದ ಸಂಬಂಧಗಳನ್ನು ಬಿಡಿ ಎಂದು ಕೃಷ್ಣನು ಹೇಳಲು ಸಾಧ್ಯವಿಲ್ಲ. ಕೃಷ್ಣನಂತೂ 84 ಜನ್ಮಗಳನ್ನು ತೆಗೆದುಕೊಂಡು ಎಲ್ಲಾ ಸಂಬಂಧಗಳಲ್ಲಿ ಬರುತ್ತಾನೆ. ತಂದೆಗೆ ತನ್ನ ಶರೀರವಿಲ್ಲ. ನಿಮಗೆ ಈ ಆತ್ಮಿಕ ಯಾತ್ರೆಯನ್ನು ತಂದೆಯೇ ಕಲಿಸುತ್ತಾರೆ. ಇದು ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯ ಜ್ಞಾನವಾಗಿದೆ. ಕೃಷ್ಣನು ಆತ್ಮಿಕ ತಂದೆಯಲ್ಲ. ಎಲ್ಲರಿಗೆ ಆತ್ಮಿಕ ತಂದೆಯು ನಾನಾಗಿದ್ದೇನೆ. ನಾನೇ ಮಾರ್ಗದರ್ಶಕನಾಗಬಲ್ಲೆನು, ಮುಕ್ತಿದಾತ, ಮಾರ್ಗದರ್ಶಕ, ಆನಂದ ಸಾಗರ, ಶಾಂತಿಯ ಸಾಗರ, ಪತಿತ ಪಾವನ ಎಲ್ಲಾ ಹೆಸರುಗಳನ್ನು ನನಗಾಗಿಯೇ ಹೇಳುತ್ತಾರೆ. ಈಗ ನೀವಾತ್ಮರಿಗೆ ಆ ತಂದೆಯೇ ಜ್ಞಾನವನ್ನು ಕೊಡುತ್ತಿದ್ದಾರೆ. ನಾನು ಈ ಶರೀರದ ಮೂಲಕ ಜ್ಞಾನವನ್ನು ಕೊಡುತ್ತಿದ್ದೇನೆ. ನೀವೂ ಸಹ ಶರೀರದ ಮೂಲಕ ಜ್ಞಾನವನ್ನು ಪಡೆಯುತ್ತಿದ್ದೀರಿ. ಅವರು ಪರಮ ಆತ್ಮನಾಗಿದ್ದಾರೆ. ಅವರ ರೂಪವನ್ನೂ ತಿಳಿಸಿದ್ದಾರೆ. ಹೇಗೆ ಆತ್ಮವು ಬಿಂದುವಾಗಿದೆಯೋ ಹಾಗೆಯೇ ಪರಮಾತ್ಮನೂ ಬಿಂದುವಾಗಿದ್ದಾರೆ. ಇದು ಸೃಷ್ಟಿಯಲ್ಲವೆ. ವಾಸ್ತವದಲ್ಲಿ ಇದು ಅತಿ ದೊಡ್ಡ ಸೃಷ್ಟಿ (ಲೀಲೆ) ಯು ಇದಾಗಿದೆ. ಎಷ್ಟು ಚಿಕ್ಕ ಬಿಂದುವಿನಲ್ಲಿ 84 ಜನ್ಮಗಳ ಪಾತ್ರವಿದೆ. ಇದು ಸೃಷ್ಟಿಯ ಲೀಲೆಯಾಗಿದೆ. ತಂದೆಯದೂ ಡ್ರಾಮಾದಲ್ಲಿ ಪಾತ್ರವಿದೆ. ಭಕ್ತಿಮಾರ್ಗದಲ್ಲಿಯೂ ನಿಮ್ಮ ಸೇವೆ ಮಾಡುತ್ತಾರೆ. ನೀವಾತ್ಮರಲ್ಲಿ 84 ಜನ್ಮಗಳ ಅವಿನಾಶಿ ಪಾತ್ರವಿದೆ. ಇದಕ್ಕೆ ವಿಧಿ ಲೀಲೆಯೆಂದು ಹೇಳಲಾಗುತ್ತದೆ. ಇದರ ವರ್ಣನೆಯನ್ನು ಹೇಗೆ ಮಾಡುವುದು! ಇಷ್ಟು ಸೂಕ್ಷ್ಮ ಆತ್ಮವಾಗಿದೆ. ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಆಶ್ಚರ್ಯ ಚಕಿತರಾಗುತ್ತಾರೆ. ಆತ್ಮವಿರುವುದೇ ಬಿಂದುವಿನ ತರಹ ಆದರೆ ಅದು, 84 ಜನ್ಮಗಳನ್ನು ಆಕ್ಯುರೇಟ್ ಅನುಭವಿಸುತ್ತದೆ. ಸುಖವನ್ನೂ ಸಹ ಅದು ನಿಖರವಾಗಿ ಭೋಗಿಸುತ್ತದೆ. ಇದು ಸೃಷ್ಟಿಯ ಲೀಲೆಯಾಗಿದೆ. ತಂದೆಯೂ ಆತ್ಮನಾಗಿದ್ದಾರೆ ಆದರೆ ಪರಮ ಆತ್ಮನಾಗಿದ್ದಾರೆ. ಅವರಲ್ಲಿ ಸಂಪೂರ್ಣ ಜ್ಞಾನವು ಅಡಕವಾಗಿದೆ, ಅದನ್ನು ಮಕ್ಕಳಿಗೆ ತಿಳಿಸುತ್ತಾರೆ. ಇವು ಹೊಸ ಮಾತುಗಳಾಗಿವೆ. ಹೊಸ ಮನುಷ್ಯರು ಕೇಳಿ ಇವರ ಜ್ಞಾನವು ಯಾವುದೇ ಶಾಸ್ತ್ರಗಳಲ್ಲಿಯೂ ಇಲ್ಲವೆಂದು ಹೇಳುತ್ತಾರೆ. ಆದರೂ ಸಹ ಯಾರು ಕಲ್ಪದ ಹಿಂದೆ ಕೇಳಿದ್ದಾರೆಯೋ ಆಸ್ತಿಯನ್ನು ತೆಗೆದುಕೊಂಡಿದ್ದಾರೆಯೋ ಅವರೇ ವೃದ್ಧಿಯಾಗುತ್ತಿರುತ್ತಾರೆ. ಸಮಯ ಹಿಡಿಸುತ್ತದೆ. ಪ್ರಜೆಗಳು ಅನೇಕರು ತಯಾರಾಗುತ್ತಾರೆ. ಅದಂತೂ ಸಹಜವಾಗಿದೆ, ರಾಜರಾಗುವುದರಲ್ಲಿ ಪರಿಶ್ರಮವಿದೆ. ಮನುಷ್ಯರು ಯಾರು ಬಹಳ ಧನದಾನ ಮಾಡುವರೋ ಅವರು ರಾಜನ ಮನೆಯಲ್ಲಿ ಜನ್ಮ ಪಡೆಯುತ್ತಾರೆ. ಬಡವರೂ ಸಹ ತನ್ನ ಶಕ್ತಿಯನುಸಾರ ದಾನ-ಧರ್ಮಗಳನ್ನು ಮಾಡುವರು. ಅವರೂ ಸಹ ರಾಜರಾಗುತ್ತಾರೆ. ಯಾರು ಪೂರ್ಣ ಭಕ್ತರಾಗಿರುವರೋ ಅವರು ದಾನ ಪುಣ್ಯಗಳನ್ನು ಮಾಡುತ್ತಾರೆ. ಸಾಹುಕಾರರಿಂದ ಹೆಚ್ಚು ಪಾಪಗಳಾಗುತ್ತಿರುತ್ತವೆ. ಬಡವರಲ್ಲಿ ಬಹಳ ಶ್ರದ್ಧೆಯಿರುತ್ತದೆ. ಅವರು ಬಹಳ ಪ್ರೀತಿಯಿಂದ ಸ್ವಲ್ಪವಾದರೂ ದಾನ ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಬಹಳಷ್ಟು ಸಿಗುತ್ತದೆ. ಬಡವರು ಭಕ್ತಿಯನ್ನೂ ಸಹ ಬಹಳ ಮಾಡುತ್ತಾರೆ. ದರ್ಶನ ನೀಡಿ ಇಲ್ಲವಾದರೆ ನಾವು ನಮ್ಮ ತಲೆಯನ್ನು ತೆಗೆದಿಡುತ್ತೇವೆ ಎನ್ನುವುದಕ್ಕೂ ಸಿದ್ಧರಿರುತ್ತಾರೆ. ಸಾಹುಕಾರರು ಈ ರೀತಿ ಮಾಡುವುದಿಲ್ಲ. ಬಡವರಿಗೇ ಸಾಕ್ಷಾತ್ಕಾರವಾಗುತ್ತದೆ. ಅವರೇ ದಾನ ಪುಣ್ಯ ಮಾಡುತ್ತಾರೆ, ಅವರೇ ರಾಜರಾಗುತ್ತಾರೆ. ಹಣವಿರುವವರಿಗೆ ಅಹಂಕಾರವಿರುತ್ತದೆ, ಬಡವರಿಗೆ ಇಲ್ಲಿಯೂ 21 ಜನ್ಮದ ಸುಖ ಸಿಗುತ್ತದೆ. ಹೆಚ್ಚು ಬಡವರಿದ್ದಾರೆ, ಸಾಹುಕಾರರು ಕೊನೆಯಲ್ಲಿ ಬರುತ್ತಾರೆ. ಯಾವ ಭಾರತವು ಇಷ್ಟು ಶ್ರೇಷ್ಠವಾಗಿತ್ತು ಅದು ಹೇಗೆ ಬಡ ದೇಶವಾಯಿತು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಭೂಕಂಪ ಇತ್ಯಾದಿಗಳಲ್ಲಿ ಎಲ್ಲಾ ಮಹಲುಗಳು ಹೊರಟು ಹೋಗುತ್ತವೆ ಮತ್ತೆ ಭಾರತವು ಬಡದೇಶವಾಗಿ ಬಿಡುತ್ತದೆ. ರಾವಣ ರಾಜ್ಯವಾಗುವುದರಿಂದ ಹಾಹಾಕಾರವಾಗಿ ಬಿಡುತ್ತದೆ ಮತ್ತು ಅಂತಹ ವಸ್ತುಗಳಿರಲು ಸಾಧ್ಯವಿಲ್ಲ. ಪ್ರತಿಯೊಂದು ವಸ್ತುವಿಗೂ ಆಯಸ್ಸು ಇರುತ್ತದೆಯಲ್ಲವೆ. ಅಲ್ಲಿ ಹೇಗೆ ಮನುಷ್ಯರದು ಧೀರ್ಘಾಯಸ್ಸು ಇರುತ್ತದೆಯೋ ಹಾಗೆಯೇ ಮನೆಗೂ ಧೀರ್ಘಾಯಸ್ಸು ಇರುತ್ತದೆ. ಚಿನ್ನ ಮತ್ತು ಮಾರ್ಬಲ್ನಿಂದ ದೊಡ್ಡ-ದೊಡ್ಡ ಮನೆಗಳನ್ನು ಕಟ್ಟಿಸುತ್ತಾರೆ. ಚಿನ್ನದ್ದಂತೂ ಇನ್ನೂ ಬಲವಾಗಿರುತ್ತದೆ. ನಾಟಕದಲ್ಲಿ ತೋರಿಸುತ್ತಾರಲ್ಲವೆ - ಯುದ್ಧವಾದಾಗ ಮನೆಗಳೆಲ್ಲವೂ ಒಡೆದು ಬಿದ್ದು ಹೋಗುತ್ತದೆ, ಮತ್ತೆ ಆಗಿ ಬಿಡುತ್ತದೆ. ಕೇವಲ ಚಿತ್ರಗಳಲ್ಲಿ ಕೃತಕವಾಗಿ ತೋರಿಸುತ್ತಾರೆ ಆದರೆ ಯಾವ ಸ್ವರ್ಗದ ಮಹಲು ಇತ್ಯಾದಿಗಳನ್ನು ಕಟ್ಟಿಸುತ್ತಾರೆಯೋ ಅವರು ಮೇಸ್ತ್ರಿಗಳು ಮನೆಯನ್ನು ಹೇಗೆ ಕಟ್ಟುವರೆಂದು ತೋರಿಸುವುದಿಲ್ಲ ಕೇವಲ ಹಾಗೆಯೇ ತೋರಿಸುತ್ತಾರೆ. ಮುಂದೆ ಹೋದಂತೆ ನಿಮಗೆ ಸಾಕ್ಷಾತ್ಕಾರವಾಗುತ್ತದೆ. ಹೀಗೆ ವಿವೇಕವು ಹೇಳುತ್ತದೆ. ಈ ಮಾತುಗಳೊಂದಿಗೆ ಮಕ್ಕಳಿಗೆ ಸಂಬಂಧವಿಲ್ಲ, ನೀವು ಮಕ್ಕಳಂತೂ ಓದಬೇಕಾಗಿದೆ, ಸ್ವರ್ಗದ ಮಾಲೀಕರಾಗಬೇಕಾಗಿದೆ. ಸ್ವರ್ಗ ಮತ್ತು ನರಕವು ಅನೇಕ ಬಾರಿ ಕಳೆದಿದೆ. ಈಗ ಎರಡೂ ಇಲ್ಲ. ಇದು ಸಂಗಮವಾಗಿದೆ. ಸತ್ಯಯುಗದಲ್ಲಿ ಈ ಜ್ಞಾನವಿರುವುದಿಲ್ಲ. ನೀವು ಮಕ್ಕಳಿಗೆ ಈಗ ಸಂಪೂರ್ಣ ಜ್ಞಾನವಿದೆ. ಲಕ್ಷ್ಮಿ - ನಾರಾಯಣರಿಗೆ ಈ ರಾಜ್ಯವನ್ನು ಯಾರು ಕೊಟ್ಟಿದ್ದರು ಎಂಬುದು ಈಗ ನೀವು ಮಕ್ಕಳಿಗೆ ಅರ್ಥವಾಗಿದೆ. ಇವರು ಈ ಆಸ್ತಿಯನ್ನು ಯಾರಿಂದ ಪಡೆದರು? ಇಲ್ಲಿಯೇ ವಿದ್ಯೆಯನ್ನು ಓದಿ ಸ್ವರ್ಗದ ಮಾಲೀಕರಾಗುತ್ತಾರೆ ನಂತರ ಅಲ್ಲಿಗೆ ಹೋಗಿ ಮಹಲು ಇತ್ಯಾದಿಗಳನ್ನು ಕಟ್ಟಿಸುತ್ತಾರೆ. ಸರ್ಜನ್ಗಳು ದೊಡ್ಡ-ದೊಡ್ಡ ಆಸ್ಪತ್ರೆಗಳನ್ನು ಕಟ್ಟಿಸುತ್ತಾರಲ್ಲವೆ.

ತಂದೆಯು ನೀವು ಮಕ್ಕಳಿಗೆ ದಿನ-ಪ್ರತಿದಿನ ಒಳೊಳ್ಳೆಯ ಮಾತುಗಳನ್ನು ತಿಳಿಸುತ್ತಿದ್ದಾರೆ. ನಿಮ್ಮ ಕರ್ತವ್ಯವೇ ಆಗಿದೆ – ಮನುಷ್ಯರನ್ನು ಜಾಗೃತಗೊಳಿಸುವುದು, ಮಾರ್ಗವನ್ನು ತಿಳಿಸುವುದು. ಹೇಗೆ ತಂದೆಯು ಎಷ್ಟು ಪ್ರೀತಿಯಿಂದ ತಿಳಿಸಿಕೊಡುತ್ತಾರೆ ಅಂದಾಗ ದೇಹಾಭಿಮಾನದ ಅವಶ್ಯಕತೆಯೇ ಇಲ್ಲ. ತಂದೆಗೆ ಎಂದೂ ದೇಹಾಭಿಮಾನವಿರಲು ಸಾಧ್ಯವಿಲ್ಲ. ದೇಹಿ-ಅಭಿಮಾನಿ ಆಗುವುದರಲ್ಲಿಯೇ ನಿಮಗೆ ಪರಿಶ್ರಮವಾಗುತ್ತದೆ. ಯಾರು ದೇಹಿ ಅಭಿಮಾನಿಯಾಗಿ ತಂದೆಯ ಪರಿಚಯ ಕೊಡುವರೋ ಅವರು ಅನೇಕರ ಕಲ್ಯಾಣ ಮಾಡುತ್ತಾರೆಂದರ್ಥ. ಮೊದಲು ದೇಹಾಭಿಮಾನವು ಬರುವುದರಿಂದ ಮತ್ತೆಲ್ಲಾ ವಿಕಾರಗಳು ಬರುತ್ತವೆ. ಹೊಡೆದಾಡುವುದು, ಜಗಳವಾಡುವುದು, ಸ್ವ ಪ್ರತಿಷ್ಠೆಯಿಂದ ನಡೆಯುವುದು, ದೇಹಾಭಿಮಾನವಾಗಿದೆ. ಭಲೆ ನಿಮ್ಮದು ರಾಜಯೋಗವಾಗಿದೆ, ಆದರೂ ಸಹ ಬಹಳ ಸಾಧಾರಣವಾಗಿರಬೇಕಾಗಿದೆ. ಚಿಕ್ಕ ವಸ್ತುಗಳಲ್ಲಿಯೇ ಅಹಂಕಾರವು ಬಂದು ಬಿಡುತ್ತದೆ, ಬಹಳ ಫ್ಯಾಷನ್ ಆಗಿರುವ ಗಡಿಯಾರವನ್ನು ನೋಡಿದರೆ ಅದನ್ನು ಧರಿಸೋಣವೆಂದು ಮನಸ್ಸಾಗುತ್ತದೆ, ಸಂಕಲ್ಪ ನಡೆಯುತ್ತಿರುತ್ತದೆ. ಇದಕ್ಕೂ ಸಹ ದೇಹಾಭಿಮಾನವೆಂದು ಹೇಳಲಾಗುತ್ತದೆ. ಬಹಳ ಒಳ್ಳೆಯ ಉನ್ನತ ವಸ್ತುವಾಗಿದ್ದರೆ ಅದನ್ನು ಸಂಭಾಲನೆ ಮಾಡಬೇಕಾಗಿದೆ ಏಕೆಂದರೆ ಒಂದುವೇಳೆ ಯಾರಾದರೂ ಅದನ್ನು ಕಳ್ಳತನ ಮಾಡಿದರೆ ಸಂಕಲ್ಪ ನಡೆಯುತ್ತದೆ. ಅಂತಿಮ ಸಮಯದಲ್ಲಿ ಏನು ನೆನಪಿಗೆ ಬಂದರೂ ಸಹ ಪದವಿ ಭ್ರಷ್ಟವಾಗುವುದು. ಇದು ದೇಹಾಭಿಮಾನದ ಹವ್ಯಾಸಗಳಾಗಿವೆ. ಅಂತಹವರು ಸೇವೆಯ ಬದಲು ಸೇವಾಭಂಗ ಮಾಡುತ್ತಾರೆ. ರಾವಣನು ನಿಮ್ಮನ್ನು ದೇಹಾಭಿಮಾನಿಗಳನ್ನಾಗಿ ಮಾಡಿದ್ದಾನೆ. ನೀವು ನೋಡುತ್ತೀರಿ – ಬ್ರಹ್ಮ ತಂದೆಯು ಎಷ್ಟು ಸಾಧಾರಣವಾಗಿ ನಡೆಯುತ್ತಾರೆ! ಪ್ರತಿಯೊಬ್ಬರ ಸೇವೆಯನ್ನು ನೋಡಲಾಗುತ್ತದೆ. ಮಹಾರಥಿ ಮಕ್ಕಳು ತಮ್ಮ ಪ್ರತ್ಯಕ್ಷತೆ ಮಾಡಬೇಕಾಗಿದೆ. ನೀವು ಇಂತಹ ಸ್ಥಳಕ್ಕೆ ಹೋಗಿ ಭಾಷಣ ಮಾಡಿ ಎಂದು ಮಹಾರಥಿಗಳಗೇ ಹೇಳಲಾಗುತ್ತದೆ. ಒಬ್ಬರು ಇನ್ನೊಬ್ಬರನ್ನು ಕರೆಸುತ್ತಾರೆ ಆದರೆ ಮಕ್ಕಳಲ್ಲಿ ಬಹಳ ದೇಹಾಭಿಮಾನವಿರುತ್ತದೆ. ಭಾಷಣದಲ್ಲಿ ಭಲೆ ಚೆನ್ನಾಗಿದ್ದಾರೆ ಆದರೆ ಪರಸ್ಪರ ಆತ್ಮಿಕ ಸ್ನೇಹವಿಲ್ಲ. ದೇಹಾಭಿಮಾನವು ಉಪ್ಪು ನೀರನ್ನಾಗಿ ಮಾಡಿ ಬಿಡುತ್ತದೆ. ಯಾವುದೇ ಮಾತಿನಲ್ಲಿ ಕೂಡಲೇ ಮುನಿಸಿಕೊಳ್ಳುವುದೂ ಇರಬಾರದು. ಆದ್ದರಿಂದ ತಂದೆಯು ಹೇಳುತ್ತಾರೆ - ಯಾರಾದರೂ ಕೇಳುವುದಿದ್ದರೆ ಬಂದು ತಂದೆಯೊಂದಿಗೆ ಕೇಳಿರಿ. ಬಾಬಾ, ತಮಗೆ ಎಷ್ಟು ಮಂದಿ ಮಕ್ಕಳು ಎಂದು ಯಾರಾದರೂ ಕೇಳಿದರೆ ಹೇಳುತ್ತೇನೆ - ಮಕ್ಕಳಂತೂ ಎಣಿಸಲಾರದಷ್ಟು ಮಂದಿ ಮಕ್ಕಳಿದ್ದಾರೆ. ಆದರೆ ಕೆಲವರು ಕುಪುತ್ರರು, ಕೆಲವರು ಒಳ್ಳೊಳ್ಳೆಯ ಸುಪುತ್ರರಿದ್ದಾರೆ. ಇಂತಹ ತಂದೆಗೆ ಆಜ್ಞಾಕಾರಿಗಳು ಪ್ರಾಮಾಣಿಕರಾಗಬೇಕಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ದೇಹಾಭಿಮಾನದಲ್ಲಿ ಬಂದು ಯಾವುದೇ ಪ್ರಕಾರದ ಫ್ಯಾಷನ್ ಮಾಡಬಾರದು. ಹೆಚ್ಚು ಆಸಕ್ತಿ ಇಡಬಾರದು. ಬಹಳ-ಬಹಳ ಸಾಧಾರಣವಾಗಿ ನಡೆಯಬೇಕಾಗಿದೆ.

2. ಪರಸ್ಪರ ಬಹಳ-ಬಹಳ ಆತ್ಮಿಕ ಸ್ನೇಹದಿಂದ ನಡೆಯಬೇಕು. ಎಂದೂ ಉಪ್ಪು ನೀರಾಗಬಾರದು. ತಂದೆಯ ಸುಪುತ್ರ ಮಗುವಾಗಬೇಕು. ಅಹಂಕಾರದಲ್ಲಿ ಎಂದೂ ಬರಬಾರದು.

ವರದಾನ:

ಸಂಪೂರ್ಣತೆಯ ಮುಖಾಂತರ ಬುದ್ಧಿಯನ್ನು ಸ್ವಚ್ಛ ಮಾಡುವಂತಹ ಸರ್ವ ಖಜಾನೆಗಳಿಂದ ಸಂಪನ್ನ ಭವ.

ಜ್ಞಾನದ, ಶ್ರೇಷ್ಠ ಸಮಯದ ಖಜಾನೆ ಜಮಾ ಮಾಡುವುದು ಹಾಗೂ ಸ್ಥೂಲ ಖಜಾನೆಯನ್ನು ಒಂದಕ್ಕೆ ಲಕ್ಷದಷ್ಟು ಮಾಡುವುದು ಅರ್ಥಾತ್ ಜಮಾ ಮಾಡುವುದು....... ಈ ಎಲ್ಲಾ ಖಜಾನೆಗಳನ್ನು ಸಂಪನ್ನ ಮಾಡಲು ಆಧಾರವಾಗಿದೆ ಸ್ವಚ್ಛ ಬುದ್ದಿ ಮತ್ತು ಸತ್ಯ ಹೃದಯ. ಆದರೆ ಬುದ್ಧಿ ಸ್ವಚ್ಛ ಯಾವಾಗ ಆಗುವುದೆಂದರೆ ಯಾವಾಗ ಬುದ್ದಿಯ ಮುಖಾಂತರ ತಂದೆಯನ್ನು ತಿಳಿದುಕೊಂಡು, ಅದನ್ನು ತಂದೆಯ ಎದುರು ಸಮರ್ಪಣೆ ಮಾಡಿದಾಗ, ಶುದ್ಧ ಬುದ್ಧಿಯನ್ನು ಸಮರ್ಪಣೆ ಮಾಡುವುದು ಅರ್ಥಾತ್ ಕೊಡುವುದೇ ದಿವ್ಯ ಬುದ್ಧಿಯನ್ನು ಪಡೆದುಕೊಳ್ಳುವುದು.

ಸ್ಲೋಗನ್:

"ಒಬ್ಬ ತಂದೆ ಬಿಟ್ಟರೆ ಇನ್ನೊಬ್ಬರಿಲ್ಲ" ಈ ವಿಧಿಯ ಮುಖಾಂತರ ಸದಾ ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿರಿ.