24.03.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಈ ಸಮಯದಲ್ಲಿ ತಂದೆಯ ಜೊತೆ ಸೇವೆಯಲ್ಲಿ ಸಹಯೋಗಿಗಳಾಗಿದ್ದೀರಿ, ಆದ್ದರಿಂದ ನಿಮ್ಮದು
ಸ್ಮರಣೆಯಾಗುತ್ತದೆ, ಪೂಜೆಯಿಲ್ಲ ಏಕೆಂದರೆ ಶರೀರವು ಅಪವಿತ್ರವಾಗಿದೆ”
ಪ್ರಶ್ನೆ:
ನೀವು ಮಕ್ಕಳ
ಬುದ್ಧಿಯಲ್ಲಿ ನಿರಂತರ ಯಾವ ನಶೆಯಿರಬೇಕು?
ಉತ್ತರ:
ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ, ಅವರಿಂದ ರಾಜಯೋಗವನ್ನು ಕಲಿತು ಸ್ವರ್ಗದ ರಾಜಧಾನಿಯ
ಆಸ್ತಿಯನ್ನು ಪಡೆಯುತ್ತೇವೆ - ಈ ನಶೆಯು ನಿಮಗೆ ನಿರಂತರ ಇರಬೇಕು. ವಿಶ್ವದ ಮಾಲೀಕರಾಗಬೇಕೆಂದರೆ
ಬಹಳ ಎಚ್ಚರಿಕೆಯಿಂದ ಓದಬೇಕು ಮತ್ತು ಓದಿಸಬೇಕಾಗಿದೆ, ಎಂದೂ ಸಹ ತಂದೆಯ ನಿಂದನೆ ಮಾಡಿಸಬಾರದು.
ಯಾರೊಂದಿಗೂ ಜಗಳ-ಕಲಹ ಮಾಡಬಾರದು. ನೀವು ಕವಡೆಯಿಂದ ವಜ್ರ ಸಮಾನರಾಗುತ್ತೀರಿ. ಆದ್ದರಿಂದ ಚೆನ್ನಾಗಿ
ಧಾರಣೆ ಮಾಡಿಕೊಳ್ಳಬೇಕಾಗಿದೆ.
ಗೀತೆ:
ಯಾರು ತಂದೆಯ
ಜೊತೆಯಿದ್ದಾರೆಯೋ ಅವರ ಮೇಲೆ ಜ್ಞಾನದ ಮಳೆ.......
ಓಂ ಶಾಂತಿ.
ಓಂ ಶಾಂತಿ. ಮಕ್ಕಳು ತಿಳಿದುಕೊಂಡಿರಿ - ಯಾರು ತಂದೆಯ ಜೊತೆಯಿದ್ದಾರೆಯೋ ಅವರು ಬಾಪ್ದಾದಾರವರ
ಜೊತೆಯಿದ್ದಾರೆ. ಈಗಂತೂ ಡಬಲ್ ಇದ್ದಾರಲ್ಲವೆ. ಇದನ್ನು ಚೆನ್ನಾಗಿ ತಿಳಿಸಲಾಗುತ್ತದೆ -
ಬ್ರಹ್ಮಾರವರ ಮೂಲಕ ಪರಮಪಿತ ಪರಮಾತ್ಮ ಶಿವನು ಹೇಗೆ ಸ್ಥಾಪನೆ ಮಾಡುತ್ತಾರೆ? ಅವರಂತೂ ಇದನ್ನು
ತಿಳಿದುಕೊಂಡಿಲ್ಲ, ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ಪರಮಾತ್ಮನಿಗೆ ತನ್ನ ಶರೀರವಿಲ್ಲ.
ಕೃಷ್ಣನಿಗಂತೂ ತನ್ನ ಶರೀರವಿದೆ, ಪರಮಾತ್ಮನು ಶ್ರೀಕೃಷ್ಣನ ಶರೀರದಮೂಲಕ ಬರುತ್ತಾರೆ...... ಎಂದು
ಹೇಳಲು ಸಾಧ್ಯವಿಲ್ಲ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ, ಪರಮಪಿತ ಪರಮಾತ್ಮನು
ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡಿಸುತ್ತಾರೆ. ಆದ್ದರಿಂದ ಅವಶ್ಯವಾಗಿ ಬ್ರಹ್ಮಾರವರಲ್ಲಿ ಪ್ರವೇಶ
ಮಾಡಬೇಕಾಗುತ್ತದೆ, ಮತ್ತ್ಯಾವುದೇ ಉಪಾಯವಿಲ್ಲ. ಪ್ರೇರಣೆ ಇತ್ಯಾದಿಗಳ ಮಾತಿಲ್ಲ. ತಂದೆಯು
ಬ್ರಹ್ಮಾರವರ ಮೂಲಕ ಎಲ್ಲವನ್ನೂ ತಿಳಿಸುತ್ತಾರೆ. ವಿಜಯ ಮಾಲೆ ಯಾವುದಕ್ಕೆ ರುದ್ರ ಮಾಲೆ ಎಂದು
ಹೇಳಲಾಗುತ್ತದೆಯೋ ಅದನ್ನು ಮನುಷ್ಯರು ಪೂಜಿಸುತ್ತಾರೆ, ಸ್ಮರಣೆ ಮಾಡುತ್ತಾರೆ. ನೀವು ಮಕ್ಕಳು
ತಿಳಿದುಕೊಂಡಿದ್ದೀರಿ, ಈ ರುದ್ರ ಮಾಲೆಯು ಕೇವಲ ಸ್ಮರಣೆ ಮಾಡಲ್ಪಡುತ್ತದೆ. ಮೇರು ಎಂದು
ಬ್ರಹ್ಮಾ-ಸರಸ್ವತಿಗೆ ಹೇಳಲಾಗುತ್ತದೆ. ಉಳಿದಂತೆ ಮಾಲೆಯು ಮಕ್ಕಳದಾಗಿದೆ. ವಿಷ್ಣುವಿನ ಮಾಲೆಯೊಂದೇ
ಪೂಜಿಸಲ್ಪಡುತ್ತದೆ. ಈ ಸಮಯದಲ್ಲಿ ನೀವು ಪುರುಷಾರ್ಥಿಗಳಾಗಿದ್ದೀರಿ. ನಿಮ್ಮದು ಅಂತಿಮದಲ್ಲಿ
ಸ್ಮರಣೆಯಾಗುತ್ತದೆ. ಆತ್ಮಗಳ ಮಾಲೆಯೋ ಅಥವಾ ಜೀವಾತ್ಮರದೋ? ಪ್ರಶ್ನೆ ಬರುತ್ತದೆಯಲ್ಲವೆ?
ವಿಷ್ಣುವಿನ ಮಾಲೆಯು ಚೈತನ್ಯ ಜೀವಾತ್ಮರ ಮಾಲೆಯೆಂದೇ ಹೇಳಬಹುದು. ಲಕ್ಷ್ಮಿ - ನಾರಾಯಣರು
ಪೂಜಿಸಲ್ಪಡುತ್ತಾರಲ್ಲವೆ ಏಕೆಂದರೆ ಅವರ ಆತ್ಮ ಮತ್ತು ಶರೀರವೆರಡೂ ಪವಿತ್ರವಾಗಿದೆ. ರುದ್ರ ಮಾಲೆಯು
ಕೇವಲ ಆತ್ಮರದಾಗಿದೆ ಏಕೆಂದರೆ ಶರೀರವು ಅಪವಿತ್ರವಾಗಿದೆ. ಅದನ್ನು ಪೂಜಿಸಲು ಸಾಧ್ಯವಿಲ್ಲ. ಆತ್ಮವು
ಹೇಗೆ ಪೂಜಿಸಲ್ಪಡುತ್ತದೆ? ರುದ್ರ ಮಾಲೆಯು ಪೂಜಿಸಲ್ಪಡುತ್ತದೆಯೆಂದು ನೀವು ಹೇಳುತ್ತೀರಿ ಆದರೆ
ಪೂಜಿಸಲ್ಪಡುವುದಿಲ್ಲ. ಹೆಸರೇ ಆಗಿದೆ - ಸಿಮರಣಿ. ಅಂದಾಗ ಯಾರೆಲ್ಲಾ ಮಣಿಗಳದ್ದಾರೆಯೋ ಅವರು
ಶರೀರದಲ್ಲಿದ್ದಾಗ ಸ್ಮರಣೆ ಮಾಡಲ್ಪಡುತ್ತಾರೆ. ಮಣಿಗಳು ನೀವು ಬ್ರಾಹ್ಮಣರದಾಗಿದೆ. ಯಾರನ್ನು ಸ್ಮರಣೆ
ಮಾಡುತ್ತೇವೆಂದು ಯಾರಿಗೂ ಗೊತ್ತಿಲ್ಲ. ಇವರು ಬ್ರಾಹ್ಮಣರಾಗಿದ್ದಾರೆ, ಭಾರತದ ಸೇವೆ ಮಾಡುತ್ತಾರೆಯೋ
ಅವರನ್ನು ನೆನಪು ಮಾಡುತ್ತಾರೆ. ಜಗದಂಬಾ, ದೇವಿಯರು ಅನೇಕರಿದ್ದಾರೆ. ಅವರನ್ನು ನೆನಪು ಮಾಡಬೇಕೇ?
ಲಕ್ಷ್ಮಿ - ನಾರಾಯಣರು ಪೂಜೆಗೆ ಅರ್ಹರಾಗುತ್ತಾರೆ, ನೀವಲ್ಲ ಏಕೆಂದರೆ ನಿಮ್ಮ ಶರೀರವು ಪತಿತವಾಗಿದೆ,
ಆತ್ಮವು ಪವಿತ್ರವಾಗಿದೆ ಆದರೆ ಅದು ಪೂಜಿಸಲ್ಪಡುವುದಿಲ್ಲ. ಸ್ಮರಣೆಗೆ ಯೋಗ್ಯವಾಗಿದೆ. ಯಾರಾದರೂ
ನಿಮ್ಮೊಂದಿಗೆ ಕೇಳಿದರೆ ನೀವು ತಿಳಿಸುವಂತಿರಬೇಕು. ನೀವು ಬ್ರಾಹ್ಮಣಿಯರಾಗಿದ್ದೀರಿ, ನಿಮ್ಮ
ನೆನಪಾರ್ಥವು ದೇವಿಯರ ರೂಪದಲ್ಲಿದೆ. ನೀವು ಶ್ರೀಮತದಂತೆ ಸ್ವಯಂ ಪಾವನರಾಗುತ್ತೀರಿ ಆದ್ದರಿಂದ ಈ
ಮಾಲೆಯು ಮೊದಲು ಬ್ರಾಹ್ಮಣರದೆಂದು ತಿಳಿದುಕೊಳ್ಳಬೇಕು ನಂತರ ದೇವತೆಗಳದು. ವಿಚಾರ ಸಾಗರ ಮಂಥನ
ಮಾಡಿದಾಗ ಫಲಿತಾಂಶ ಸಿಗುವುದು. ಯಾವಾಗ ಆತ್ಮರು ಸಾಲಿಗ್ರಾಮ ರೂಪದಲ್ಲಿರುವವರೋ ಆಗ
ಪೂಜಿಸಲ್ಪಡುತ್ತಾರೆ. ಶಿವನ ಪೂಜೆಯಾದಾಗ ಸಾಲಿಗ್ರಾಮಗಳಿಗೂ ಪೂಜೆ ನಡೆಯುತ್ತದೆ ಏಕೆಂದರೆ ಆತ್ಮವೂ
ಪವಿತ್ರವಾಗಿದೆ, ಶರೀರವಲ್ಲ. ಕೇವಲ ನಿಮ್ಮದೇ ಸ್ಮರಣೆಯಾಗುತ್ತದೆ - ಏಕೆ? ನೀವು ಶರೀರದ ಜೊತೆ ಸೇವೆ
ಮಾಡುತ್ತೀರಿ. ಆದ್ದರಿಂದ ನಿಮ್ಮದು ಪೂಜೆಯು ನಡೆಯುವುದಿಲ್ಲ ನಂತರ ಯಾವಾಗ ಶರೀರ ಬಿಡುತ್ತೀರೋ ಆಗ
ನೀವೂ ಸಹ ಶಿವನ ಜೊತೆ ಪೂಜಿಸಲ್ಪಡುತ್ತೀರಿ, ವಿಚಾರ ಮಾಡಬೇಕಲ್ಲವೆ. ನೀವು ಈ ಸಮಯದಲ್ಲಿ
ಬ್ರಾಹ್ಮಣರಾಗಿದ್ದೀರಿ. ಶಿವ ತಂದೆಯೂ ಸಹ ಬ್ರಹ್ಮಾರವರಲ್ಲಿ ಬರುತ್ತಾರೆ ಅಂದಾಗ ಬ್ರಹ್ಮಾರವರು
ಸಾಕಾರದಲ್ಲಿದ್ದಾರೆ. ನೀವು ಪರಿಶ್ರಮ ಪಡುತ್ತೀರಿ. ಈ ಮಾಲೆಯು ಹೇಗೆ ಸಾಕಾರಿಯಾಗಿದೆ,
ಬ್ರಹ್ಮಾ-ಸರಸ್ವತಿ ಮತ್ತು ನೀವು ಜ್ಞಾನ ಗಂಗೆಯರು. ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡಿದಿರಿ,
ಈ ರುದ್ರ ಯಜ್ಞವನ್ನು ರಚಿಸಿದಿರಿ. ಪೂಜೆ ಮಾಡುವಾಗ ಅದರಲ್ಲಿ ಕೇವಲ ಶಿವ ಮತ್ತು
ಸಾಲಿಗ್ರಾಮಗಳಿರುತ್ತವೆ. ಅದರಲ್ಲಿ ಬ್ರಹ್ಮಾ-ಸರಸ್ವತಿಯ ಅಥವಾ ನೀವು ಮಕ್ಕಳ ಹೆಸರಿಲ್ಲ. ಇಲ್ಲಂತೂ
ಎಲ್ಲರ ಹೆಸರೂ ಇದೆ. ನಿಮ್ಮ ಸ್ಮರಣೆ ಮಾಡುತ್ತಾರೆ. ಯಾರು ಯಾರು ಜ್ಞಾನ ಗಂಗೆಯರಿದ್ದರು! ತಂದೆಯಂತೂ
ಜ್ಞಾನ ಸಾಗರನಾಗಿದ್ದಾರೆ, ಇವರು ಬ್ರಹ್ಮ ಪುತ್ರ ದೊಡ್ಡ ನದಿಯಾಗಿದ್ದಾರೆ. ಈ ಬ್ರಹ್ಮಾರವರು ತಾಯಿಯೂ
ಆಗಿದ್ದಾರೆ. ಸಾಗರವು ಒಂದೇ ಆಗಿದೆ, ಆದರೆ ಗಂಗೆಯರು ಭಿನ್ನ-ಭಿನ್ನ ಪ್ರಕಾರದವರಿರುತ್ತಾರೆ.
ನಂಬರ್ವಾರ್ ಯಾರಲ್ಲಿ ಒಳ್ಳೆಯ ಜ್ಞಾನವಿದೆಯೋ ಅವರಿಗೆ ಸರೋವರವೆಂದು ಹೇಳಲಾಗುತ್ತದೆ. ಮಹಿಮೆಯೂ ಇದೆ,
ಮಾನಸ ಸರೋವರದಲ್ಲಿ ಮಿಂದರೆ ಫರಿಗಳಾಗಿ ಬಿಡುತ್ತಾರೆಂದು ಹೇಳುತ್ತಾರೆ, ಅಂದಾಗ ನಿಮ್ಮ ಮಾಲೆಯು
ಸ್ಮರಣೆ ಮಾಡಲ್ಪಡುತ್ತದೆ. ಸಿಮಿರಣಿ ಎಂದು ಹೇಳುತ್ತಾರಲ್ಲವೆ. ಸ್ಮರಣೆ ಮಾಡಿ, ಅವರಂತೂ ಕೇವಲ
ರಾಮ-ರಾಮ ಎಂದು ಹೇಳುತ್ತಾರೆ ಆದರೆ ಯಾರ ಸ್ಮರಣೆಯಾಗುವುದು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ.
ಯಾರು ಹೆಚ್ಚು ಸರ್ವಿಸ್ ಮಾಡುವರೋ ಅವರದೇ ಆಗುತ್ತದೆ. ಮೊದಲು ತಂದೆ ಹೂವಾಗಿದ್ದಾರೆ ನಂತರ ಜೋಡಿ
ಮಣಿಗಳು. ಇವರು ಬಹಳ ಪರಿಶ್ರಮ ಪಡುತ್ತಾರೆ ಅನಂತರ ರುದ್ರ ಮಾಲೆಯೇ ವಿಷ್ಣುವಿನ ಮಾಲೆಯಾಗುತ್ತದೆ.
ನೀವಾತ್ಮಗಳು ಕೇವಲ ಪೂಜಿಸಲ್ಪಡುತ್ತೀರಿ. ನೀವೀಗ ಗಾಯನ ಯೋಗ್ಯರಾಗಿದ್ದೀರಿ. ನಿಮ್ಮದೇ ಸ್ಮರಣೆಯಿದೆ.
ಬಾಕಿ ಈಗ ನಿಮಗೆ ಪೂಜೆ ನಡೆಯಲು ಸಾಧ್ಯವಿಲ್ಲ ಏಕೆಂದರೆ ಆತ್ಮವು ಪವಿತ್ರ, ಶರೀರವು ಅಪವಿತ್ರವಾಗಿದೆ.
ಅಪವಿತ್ರ ವಸ್ತುವೆಂದೂ ಪೂಜಿಸಲ್ಪಡುವುದಿಲ್ಲ. ಯಾವಾಗ ರುದ್ರ ಮಾಲೆಯಾಗಲು ಯೋಗ್ಯರಾಗಿಬಿಡುತ್ತೀರೋ
ಆಗ ಅಂತ್ಯದಲ್ಲಿ ನೀವು ಶುದ್ಧವಾಗಿ ಬಿಡುತ್ತೀರಿ. ಯಾರು ಯಾರು ಗೌರವ ಪೂರ್ಣವಾಗಿ
ತೇರ್ಗಡೆಯಾಗುವರೆಂದು ನಿಮಗೆ ಸಾಕ್ಷಾತ್ಕಾರವಾಗುತ್ತದೆ. ಸರ್ವಿಸ್ ಮಾಡುವುದರಿಂದ ಹೆಸರು ಬಹಳ
ಪ್ರಸಿದ್ಧವಾಗುತ್ತದೆ. ವಿಜಯ ಮಾಲೆಯಲ್ಲಿ ನಂಬರ್ವಾರ್ ಯಾರು ಯಾರು ಬರುತ್ತಾರೆಂದು ತಿಳಿಯುತ್ತಾ
ಹೋಗುವುದು. ಈ ಮಾತುಗಳು ಬಹಳ ಗುಹ್ಯವಾಗಿದೆ.
ಮನುಷ್ಯರು ಕೇವಲ ರಾಮ-ರಾಮ ಎಂದು ಹೇಳುತ್ತಾರೆ. ಕ್ರಿಶ್ಚಿಯನ್ನರು ಕ್ರಿಸ್ತನನ್ನು ನೆನಪು
ಮಾಡುತ್ತಾರೆ. ಮಾಲೆಯು ಯಾರದಿರಬಹುದು? ಭಗವಂತನು ಒಬ್ಬರೇ ಆಗಿದ್ದಾರೆ ಬಾಕಿ ಯಾರು ಸನ್ಮುಖದಲ್ಲಿ
ಕುಳಿತಿದ್ದಾರೆಯೋ ಅವರದೇ ಮಾಲೆಯಾಗುತ್ತದೆ. ಈ ಮಾಲೆಯನ್ನು ನೀವೀಗ ತಿಳಿದುಕೊಂಡಿದ್ದೀರಿ. ತಮ್ಮ ಆದಿ
ಸನಾತನ ದೇವಿ-ದೇವತಾಧರ್ಮದವರೇ ತಿಳಿದುಕೊಂಡಿಲ್ಲವೆಂದರೆ ಅನ್ಯರು ಹೇಗೆ ತಿಳಿದುಕೊಳ್ಳುವರು.
ಎಲ್ಲರನ್ನೂ ಪತಿತರಿಂದ ಪಾವನ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ಕ್ರಿಸ್ತನಿಗೆ ಪತಿತರನ್ನು
ಪಾವನ ಮಾಡುವವರೆಂದು ಹೇಳುವುದಿಲ್ಲ. ಅವರು ಜನನ-ಮರಣದಲ್ಲಿ ಬಂದು ಕೆಳಗಿಳಿಯಲೇಬೇಕಾಗಿದೆ.
ವಾಸ್ತವದಲ್ಲಿ ಅವರಿಗೆ ಗುರುವೆಂದೂ ಹೇಳುವುದಿಲ್ಲ. ಏಕೆಂದರೆ ಸರ್ವರ ಸದ್ಗತಿದಾತನು ಒಬ್ಬರೇ
ತಂದೆಯಾಗಿದ್ದಾರೆ. ಯಾವಾಗ ಅಂತ್ಯವಾಗುವುದು, ವೃಕ್ಷವು ಜಡಜಡೀಭೂತ ಸ್ಥಿತಿಯನ್ನು ತಲುಪುವುದೋ ಆಗ
ತಂದೆಯು ಬಂದು ಎಲ್ಲರಿಗೆ ಸದ್ಗತಿ ನೀಡುತ್ತಾರೆ. ಆತ್ಮವು ಧರ್ಮ ಸ್ಥಾಪನೆ ಮಾಡಲು ಮೇಲಿನಿಂದ
ಬರುತ್ತಾರೆ. ಅವರಂತೂ ಜನನ-ಮರಣದಲ್ಲಿ ಬರಲೇಬೇಕಾಗಿದೆ. ಸದ್ಗುರು ಒಬ್ಬರೇ ಆಗಿದ್ದಾರೆ. ಅವರು
ಸರ್ವರ ಸದ್ಗತಿದಾತನಾಗಿದ್ದಾರೆ. ಮನುಷ್ಯರು ಯಾರೂ ಸತ್ಯವಾದ ಸದ್ಗುರುವಾಗಲು ಸಾಧ್ಯವಿಲ್ಲ. ಅವರಂತೂ
ಕೇವಲ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ. ಅವರ ಹಿಂದೆ ಪಾತ್ರವನ್ನಭಿನಯಿಸಲು ಎಲ್ಲರೂ
ಬರತೊಡಗುತ್ತಾರೆ. ಯಾವಾಗ ಎಲ್ಲರೂ ತಮೋಪ್ರಧಾನ ಸ್ಥಿತಿಯನ್ನು ಹೊಂದುವರೋ ಆಗ ನಾನು ಬಂದು ಸರ್ವರ
ಸದ್ಗತಿ ಮಾಡುತ್ತೇನೆ. ಎಲ್ಲರೂ ಹಿಂತಿರುಗಿ ಹೋಗುತ್ತಾರೆ ನಂತರ ಹೊಸದಾಗಿ ಚಕ್ರವು ಆರಂಭವಾಗುತ್ತದೆ.
ನೀವು ರಾಜಯೋಗವನ್ನು ಕಲಿಯುತ್ತೀರಿ, ಅವರೇ ರಾಜ್ಯ ಪದವಿಯನ್ನು ಪಡೆಯುತ್ತಾರೆ. ಅದರಲ್ಲಿ ರಾಜರಾದರೂ
ಆಗಬಹುದು, ಪ್ರಜೆಗಳಾದರೂ ಆಗಬಹುದು. ಪ್ರಜೆಗಳಂತೂ ಅನೇಕರಾಗುತ್ತಾರೆ, ರಾಜ್ಯ ಪದವಿಯನ್ನು
ಪಡೆಯುವುದರಲ್ಲಿಯೇ ಪರಿಶ್ರಮವಿದೆ. ಅಂತಿಮದಲ್ಲಿ ಎಲ್ಲವೂ ತಿಳಿಯುತ್ತಾ ಹೋಗುವುದು ಯಾರು ವಿಜಯ
ಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ ಎಂದು. ಅವಿದ್ಯಾವಂತರು ವಿದ್ಯಾವಂತರ ಮುಂದೆ ತಲೆ ಬಾಗುವರು.
ಸತ್ಯಯುಗದಲ್ಲಂತೂ ಬರುತ್ತಾರೆ ಆದರೆ ನೌಕರ-ಚಾಕರರಾಗಬೇಕಾಗುತ್ತದೆ. ಇದು ಎಲ್ಲರಿಗೆ ಅರ್ಥವಾಗಿ
ಬಿಡುತ್ತದೆ. ಹೇಗೆ ಪರೀಕ್ಷೆಯ ದಿನಗಳಲ್ಲಿ ಯಾರು ಯಾರು ತೇರ್ಗಡೆಯಾಗುತ್ತಾರೆ ಎಂಬುದು ಎಲ್ಲರಿಗೆ
ಗೊತ್ತಾಗಿ ಬಿಡುತ್ತದೆ. ವಿದ್ಯೆಯ ಮೇಲೆ ಗಮನವಿಲ್ಲದಿದ್ದರೆ ಅನುತ್ತೀರ್ಣರಾಗಿ ಬಿಡುತ್ತಾರೆ.
ನಿಮ್ಮದು ಇದು ಬೇಹದ್ದಿನ ವಿದ್ಯೆಯಾಗಿದೆ. ಈಶ್ವರೀಯ ವಿಶ್ವ ವಿದ್ಯಾಲಯವು ಒಂದೇ ಆಗಿದೆ. ಇಲ್ಲಿ
ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ಇದರಲ್ಲಿ ನಂಬರ್ವಾರ್ ತೇರ್ಗಡೆಯಾಗುತ್ತಾರೆ. ರಾಜಯೋಗದ
ವಿದ್ಯೆಯು ಒಂದೇ ಆಗಿದೆ, ರಾಜ್ಯ ಪದವಿಯನ್ನು ಪಡೆಯುವುದರಲ್ಲಿ ಪರಿಶ್ರಮವಿದೆ ಮತ್ತು ಸರ್ವಿಸನ್ನೂ
ಮಾಡಬೇಕಾಗಿದೆ. ಯಾರು ರಾಜರಾಗುವರೋ ಅವರು ತಮ್ಮ ಪ್ರಜೆಗಳನ್ನೂ ಮಾಡಿಕೊಳ್ಳಬೇಕಾಗಿದೆ. ಒಳ್ಳೊಳ್ಳೆಯ
ಮಕ್ಕಳು ದೊಡ್ಡ-ದೊಡ್ಡ ಸೇವಾಕೇಂದ್ರಗಳನ್ನು ಸಂಭಾಲನೆ ಮಾಡುತ್ತಾರೆ, ಪ್ರಜೆಗಳನ್ನು
ಮಾಡಿಕೊಳ್ಳುತ್ತಾರೆ. ತಂದೆಯೂ ತಿಳಿಸುತ್ತಾರೆ - ದೊಡ್ಡ ಉದ್ಯಾನವನವನ್ನು ತಯಾರು ಮಾಡಿ ಆಗ ತಂದೆಯು
ಬಂದು ನೋಡುವರು. ಈಗಿನ್ನೂ ಬಹಳ ಚಿಕ್ಕದಾಗಿದೆ. ಬಾಂಬೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ
ವೃದ್ಧಿಯಾಗುತ್ತಾರೆ. ಸೂರ್ಯವಂಶಿ ರಾಜಧಾನಿಯು ತಯಾರಾಗಬೇಕಾಗಿದೆ ಅಂದಮೇಲೆ ಅನೇಕರು ತಯಾರಾಗುತ್ತಾರೆ.
ಯಾರು ಪರಿಶ್ರಮ ಪಡುವರೋ ಅವರು ರಾಜರಾಗುತ್ತಾರೆ, ಉಳಿದವರು ಪ್ರಜೆಗಳಾಗುತ್ತಾ ಹೋಗುವರು. ಹೇ ಪ್ರಭು,
ನಿನ್ನ ಸದ್ಗತಿಯ ಲೀಲೆಯು ಅಪರಮಪಾರ..... ಎಂದು ಗಾಯನವೂ ಇದೆ. ವಾಹ್! ಬಾಬಾ ತಮ್ಮ ಗತಿ ಮತವು......
ಸರ್ವರ ಸದ್ಗತಿ ಮಾಡುವ ಶ್ರೀಮತವು ಎಲ್ಲದಕ್ಕಿಂತ ಭಿನ್ನವಾಗಿದೆ ಎಂದು ನೀವು ಹೇಳುತ್ತೀರಿ. ತಂದೆಯು
ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ, ಬಿಟ್ಟು ಹೋಗುವುದಿಲ್ಲ. ನಿರಾಕಾರಿ, ಆಕಾರಿ, ಸಾಕಾರಿ
ಲೋಕವನ್ನೂ ತಿಳಿದುಕೊಂಡಿಲ್ಲ. ಕೇವಲ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳುವುದು
ಸಂಪೂರ್ಣ ಜ್ಞಾನವಲ್ಲ. ಮೊದಲು ಮೂಲವತನವನ್ನು ತಿಳಿದುಕೊಳ್ಳಬೇಕಾಗಿದೆ, ಎಲ್ಲಿ ನಾವಾತ್ಮರಿರುತ್ತೇವೆ.
ಇಡೀ ಸೃಷ್ಟಿಚಕ್ರವನ್ನು ಅರಿತುಕೊಳ್ಳುವುದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ. ಇವೆಲ್ಲವೂ
ಎಷ್ಟೊಂದು ತಿಳಿದುಕೊಳ್ಳುವ ಮಾತುಗಳಾಗಿವೆ. ಅವರಂತೂ ಶಿವನು ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು
ಹೇಳಿ ಬಿಡುತ್ತಾರೆ. ಚಿತ್ರವೂ ಇದೆ ಆದರೂ ಸಹ ನಾಮ - ರೂಪದಿಂದ ಭಿನ್ನವೆಂದು ಹೇಳುತ್ತಾರೆ ಮತ್ತು
ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಒಬ್ಬ ಪ್ರಧಾನ ಮಂತ್ರಿಯು ಹೇಳಿದ್ದರು - ಈಶ್ವರ
ಸರ್ವವ್ಯಾಪಿಯೆಂಬುದನ್ನು ನಾನು ಒಪ್ಪುವುದಿಲ್ಲ, ಮನುಷ್ಯರು ಒಬ್ಬರು ಇನ್ನೊಬ್ಬರನ್ನು
ಸಾಯಿಸುತ್ತಾರೆ ಅಂದಮೇಲೆ ಇದು ಈಶ್ವರನ ಕೆಲಸವೇ? ಮುಂದೆ ಹೋದಂತೆ ಈ ಮಾತುಗಳನ್ನು ತಿಳಿದುಕೊಳ್ಳುವರು
ಆಗ ನಿಮ್ಮದೂ ವೃದ್ಧಿಯಾಗುವುದು. ತಂದೆಯು ರಾತ್ರಿಯೂ ತಿಳಿಸಿದ್ದರು, ಯಾರು ತಮ್ಮನ್ನು
ಬುದ್ದಿವಂತರೆಂದು ತಿಳಿಯುವರೋ ಅವರು ಇಂತಿಂತಹ ಪತ್ರಗಳನ್ನು ಬರೆಯಿರಿ, ಈ ಸಂಪೂರ್ಣ
ಜ್ಞಾನವೇನೆಂಬುದನ್ನು ಅವರಿಗೆ ತಿಳಿಸಬೇಕು. ಇದನ್ನೂ ಬರೆಯಿರಿ - ನಾವು ಸಂಪೂರ್ಣ ಜ್ಞಾನವನ್ನು
ಕೊಡಬಲ್ಲೆವು. ಮೂಲವತನದ ಜ್ಞಾನವನ್ನು ಕೊಡುತ್ತೇವೆ, ನಿರಾಕಾರ ತಂದೆಯ ಪರಿಚಯವನ್ನೂ ಹೇಳುತ್ತೇವೆ.
ಮತ್ತೆ ಪ್ರಜಾಪಿತ ಬ್ರಹ್ಮಾ ಹಾಗೂ ಅವರ ಬ್ರಾಹ್ಮಣ ಧರ್ಮವನ್ನು ಕುರಿತು ತಿಳಿಸಬಲ್ಲೆವು.
ಲಕ್ಷ್ಮಿ-ನಾರಾಯಣರು ಮತ್ತು ರಾಮ-ಸೀತೆಯರ ರಾಜ್ಯವು ಹೇಗೆ ನಡೆಯುತ್ತದೆ ಮತ್ತೆ ಅವರಿಂದ ರಾಜ್ಯವನ್ನು
ಯಾರು ಕಸಿದುಕೊಂಡರು? ಆ ಸ್ವರ್ಗವು ಎಲ್ಲಿ ಹೋಯಿತು? ಎಂಬುದನ್ನು ತಿಳಿಸುತ್ತೇವೆ. ಹೇಗೆ
ಹೇಳಲಾಗುತ್ತದೆ - ನರಕವು ಎಲ್ಲಿ ಹೋಯಿತು? ಸಮಾಪ್ತಿಯಾಯಿತು. ಸ್ವರ್ಗವೂ ಸಹ ಸಮಾಪ್ತಿಯಾಗಿ
ಬಿಡುವುದು. ಆ ಸಮಯದಲ್ಲಿಯೂ ಭೂಕಂಪ ಇತ್ಯಾದಿಗಳಾಗುತ್ತವೆ. ಆ ವಜ್ರ ವೈಡೂರ್ಯದ ಮಹಲುಗಳು ಮತ್ತೆ
ತೆಗೆಯಲಾರದಂತೆ ಹೊರಟು ಹೋಯಿತು. ಚಿನ್ನ, ವಜ್ರ-ವೈಡೂರ್ಯಗಳ ಮಹಲುಗಳೆಂದೂ ಕೆಳಗಿನಿಂದ ಹೊರ
ಬಂದಿಲ್ಲ. ಸೋಮನಾಥ ಮೊದಲಾದ ಮಂದಿರವಂತೂ ನಂತರದಲ್ಲಿ ಆಯಿತು. ಅಂದಮೇಲೆ ಅದಕ್ಕಿಂತಲೂ ಮೊದಲಿನವರ
ಮನೆಗಳು ಬಹಳ ಚೆನ್ನಾಗಿರುತ್ತವೆ. ಲಕ್ಷ್ಮಿ - ನಾರಾಯಣರ ಮನೆಯು ಹೇಗಿರಬಹುದು, ಅವರ ಎಲ್ಲಾ ಸಂಪತ್ತು
ಎಲ್ಲಿಗೆ ಹೋಯಿತು? ಈ ರೀತಿಯ ಮಾತುಗಳನ್ನು ಯಾವಾಗ ವಿದ್ವಾಂಸರು ಕೇಳಿಸಿಕೊಳ್ಳುವರೋ ಆಗ ಆಶ್ಚರ್ಯ
ಚಕಿತರಾಗುತ್ತಾರೆ. ಆಗ ಇವರ ಜ್ಞಾನವು ಬಹಳ ಶಕ್ತಿಶಾಲಿಯಾಗಿದೆ ಎಂದು ಹೇಳುತ್ತಾರೆ. ಮನುಷ್ಯರಂತೂ
ಏನನ್ನೂ ತಿಳಿದುಕೊಂಡಿಲ್ಲ, ಕೇವಲ ಸರ್ವವ್ಯಾಪಿಯೆಂದು ಹೇಳುತ್ತಾರೆ. ಇವೆಲ್ಲವೂ ತಿಳಿದುಕೊಳ್ಳುವ
ಮತ್ತು ತಿಳಿಸುವ ಮಾತುಗಳಾಗಿವೆ. ನಿಮಗೆ ಧನ ಸಿಗುತ್ತದೆ ಅಂದಮೇಲೆ ಅದನ್ನು ದಾನ ಮಾಡಬೇಕಾಗಿದೆ.
ತಂದೆಯು ನಿಮಗೆ ಕೊಡುತ್ತಾ ಹೋಗುತ್ತಾರೆ. ಮತ್ತೆ ನೀವೂ ಸಹ ಕೊಡುತ್ತಾ ಹೋಗಿ. ಇದು ಅಕೂಟ
ಖಜಾನೆಯಾಗಿದೆ, ಎಲ್ಲವೂ ಧಾರಣೆಯ ಮೇಲೆ ಆಧಾರಿತವಾಗಿದೆ. ಯಾರೆಷ್ಟು ಧಾರಣೆ ಮಾಡುವರೋ ಅಷ್ಟು
ಶ್ರೇಷ್ಠ ಪದವಿ ಪಡೆಯುತ್ತಾರೆ. ವಿಚಾರ ಮಾಡಿ - ಕವಡೆಯಲ್ಲಿ! ವಜ್ರಗಳೆಲ್ಲಿ! ಎಲ್ಲದಕ್ಕಿಂತ
ಹೆಚ್ಚಿನ ಮೌಲ್ಯವು ವಜ್ರಕ್ಕಿದೆ. ಕವಡೆಯ ಮೌಲ್ಯವು ಎಲ್ಲದಕ್ಕಿಂತ ಕಡಿಮೆಯಾಗಿದೆ. ನೀವೀಗ
ಕವಡೆಯಿಂದ ವಜ್ರ ಸಮಾನ ಆಗುತ್ತೀರಿ, ಈ ಮಾತುಗಳು ಎಂದೂ ಯಾರ ಸ್ವಪ್ನದಲ್ಲಿಯೂ ಬರುವುದಿಲ್ಲ, ಕೇವಲ
ಇಷ್ಟನ್ನು ತಿಳಿದುಕೊಳ್ಳುತ್ತಾರೆ - ಅವಶ್ಯವಾಗಿ ಲಕ್ಷ್ಮಿ - ನಾರಾಯಣರ ರಾಜ್ಯವಿತ್ತು, ಅವರು ಇದ್ದು
ಹೋಗಿದ್ದಾರೆ. ಆದರೆ ಈ ರಾಜ್ಯವನ್ನು ಯಾವಾಗ ಯಾರು ಕೊಟ್ಟರು? ಎಂಬುದನ್ನು ತಿಳಿದುಕೊಂಡಿಲ್ಲ.
ರಾಜ್ಯವನ್ನು ಯಾರು ಕೊಟ್ಟರು? ಇಲ್ಲಂತೂ ಏನೂ ಇಲ್ಲ. ರಾಜಯೋಗದಿಂದ ಸ್ವರ್ಗದ ರಾಜ್ಯ ಪದವಿಯು
ಸಿಗುತ್ತದೆ. ಇದು ಅದ್ಭುತವಲ್ಲವೆ. ಮಕ್ಕಳ ಬುದ್ಧಿಯಲ್ಲಿ ಚೆನ್ನಾಗಿ ನಶೆಯಿರಬೇಕು ಆದರೆ ಮಾಯೆಯು
ಸ್ಥಿರವಾಗಿ ನಶೆಯಿರಲು ಬಿಡುವುದಿಲ್ಲ. ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ, ಈ ಜ್ಞಾನವನ್ನು ಓದಿ
ನಾವು ವಿಶ್ವದ ಮಾಲೀಕರಾಗುತ್ತೇವೆ, ಇದು ಎಂದಾದರೂ ಯಾರ ಬುದ್ಧಿಯಲ್ಲಾದರೂ ಬರುತ್ತದೆಯೇ?
ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಮಕ್ಕಳು ಎಷ್ಟೊಂದು ಪರಿಶ್ರಮ ಪಡಬೇಕು! ಗುರುವಿನ
ನಿಂಧಕರಿಗೆ ನೆಲೆಯಿಲ್ಲ. ಇದು ಇಲ್ಲಿನ ಮಾತಾಗಿದೆ. ಅವರಿಗಂತೂ ಅಲ್ಲಿ ಗುರಿ-ಧ್ಯೇಯವೇ ಇರುವುದಿಲ್ಲ.
ನಿಮಗೆ ಗುರಿ-ಧ್ಯೇಯವಿದೆ. ತಂದೆ, ಶಿಕ್ಷಕ, ಗುರು ಮೂವರೂ ಇದ್ದಾರೆ, ನೀವು ತಿಳಿದುಕೊಂಡಿದ್ದೀರಿ -
ಈ ವಿದ್ಯೆಯಿಂದ ನಾವು ವಿಶ್ವದ ಮಾಲೀಕರಾಗುತ್ತೇವೆ ಅಂದಾಗ ಎಚ್ಚರ ವಹಿಸಿ ಓದಬೇಕು ಮತ್ತು
ಓದಿಸಬೇಕಾಗಿದೆ. ನಿಂದನೆ ಮಾಡಿಸುವಂತಹ ಯಾವುದೇ ಮಾತು ಇರಬಾರದು. ಯಾರೊಂದಿಗೂ ಜಗಳ - ಕಲಹ ಮಾಡಬಾರದು.
ಎಲ್ಲರೊಂದಿಗೆ ಮಧುರವಾಗಿ ಮಾತನಾಡಬೇಕಾಗಿದೆ. ತಂದೆಯ ಪರಿಚಯ ಕೊಡಬೇಕಾಗಿದೆ. ತಂದೆಯು ತಿಳಿಸುತ್ತಾರೆ
- ಜ್ಞಾನ ಕೊಟ್ಟರೆ ಗ್ರಹಣ ಬಿಟ್ಟು ಹೋಗುವುದು. ನಂಬರ್ವನ್ ದಾನವು ದೇಹಾಭಿಮಾನದ್ದಾಗಿದೆ, ಈ
ಸಮಯದಲ್ಲಿ ನೀವು ಆತ್ಮಾಭಿಮಾನಿ ಮತ್ತು ಪರಮಾತ್ಮಾಭಿಮಾನಿಗಳಾಗುತ್ತೀರಿ. ಇದು ಅಮೂಲ್ಯ ಜೀವನವಾಗಿದೆ.
ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ನಿಮಗೆ ಈ ರೀತಿ ಓದಿಸಲು ಬರುತ್ತೇನೆ ಮತ್ತು ನೀವು
ಮರೆತು ಹೋಗುತ್ತೀರಿ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ, ಜ್ಞಾನ ರತ್ನಗಳನ್ನು ಧಾರಣೆ ಮಾಡುವ ಮತ್ತು ಸರ್ವಿಸ್
ಮಾಡುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ
ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಎಲ್ಲರೊಂದಿಗೆ
ಮಧುರವಾಗಿ ಮಾತನಾಡಬೇಕಾಗಿದೆ. ತಂದೆಯ ನಿಂದನೆಯಾಗುವಂತಹ ಯಾವುದೇ ಮಾತುಗಳನ್ನಾಡಬಾರದು.
ದೇಹಾಭಿಮಾನದ ದಾನ ಮಾಡಿ ಆತ್ಮಾಭಿಮಾನಿ ಮತ್ತು ಪರಮಾತ್ಮಾಭಿಮಾನಿ ಆಗಬೇಕು.
2. ಯಾವ ಜ್ಞಾನ ಧನ
ಸಿಗುತ್ತಿದೆಯೋ ಅದರ ದಾನ ಮಾಡಬೇಕಾಗಿದೆ. ವಿದ್ಯೆಯಿಂದ ರಾಜ್ಯಭಾಗ್ಯ ಸಿಗುತ್ತದೆ. ಈ ನಶೆಯಲ್ಲಿ
ಸ್ಥಿರವಾಗಿರಬೇಕಾಗಿದೆ. ಗಮನವನ್ನಿಟ್ಟು ವಿದ್ಯೆಯನ್ನು ಓದಬೇಕು.
ವರದಾನ:
ಏಕಾಗ್ರತೆಯ
ಅಭ್ಯಾಸದ ಮುಖಾಂತರ ಅನೇಕ ಆತ್ಮಗಳ ಇಚ್ಛೆಗಳನ್ನು ಪೂರ್ಣ ಮಾಡುವಂತಹ ವಿಶ್ವ ಕಲ್ಯಾಣಕಾರಿ ಭವ.
ಸರ್ವ ಆತ್ಮಗಳ
ಇಚ್ಛೆಯಾಗಿದೆ ಅಲೆದಾಡುತ್ತಿರುವ ಬುದ್ಧಿ ಹಾಗೂ ಮನಸ್ಸಿನ ಚಂಚಲತೆಯಿಂದ ಏಕಾಗ್ರತೆಯಾಗಿ ಬಿಡಬೇಕು
ಎಂದು. ಅಂದಾಗ ಅವರ ಈ ಇಚ್ಛೆಯನ್ನು ಪೂರ್ಣ ಮಾಡುವುದಕ್ಕಾಗಿ ಮೊದಲು ನೀವು ಸ್ವಯಂ ಸಂಕಲ್ಪಗಳನ್ನು
ಏಕಾಗ್ರ ಮಾಡುವ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಿ, ನಿರಂತರ ಏಕರಸ ಸ್ಥಿತಿಯಲ್ಲಿ ಅಥವಾ ಒಬ್ಬ ತಂದೆಯ
ವಿನಹ ಬೇರೊಬ್ಬರಿಲ್ಲ.... ಈ ಸ್ಥಿತಿಯಲ್ಲಿ ಸ್ಥಿತರಾಗಿ, ವ್ಯರ್ಥ ಸಂಕಲ್ಪಗಳನ್ನು ಶುದ್ಧ
ಸಂಕಲ್ಪಗಳಲ್ಲಿ ಪರಿವರ್ತನೆ ಮಾಡಿ ಆಗ ವಿಶ್ವ ಕಲ್ಯಾಣಕಾರಿ ಭವದ ವರದಾನ ಪ್ರಾಪ್ತಿಯಾಗುವುದು.
ಸ್ಲೋಗನ್:
ಬ್ರಹ್ಮಾ ತಂದೆಯ ಸಮಾನ
ಗುಣ ಸ್ವರೂಪ, ಶಕ್ತಿ ಸ್ವರೂಪ ಮತ್ತು ನೆನಪಿನ ಸ್ವರೂಪರಾಗುವಂತಹವರೇ ಸತ್ಯ ಬ್ರಾಹ್ಮಣರಾಗಿದ್ದಾರೆ.