05.03.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಹೇಗೆ ಬಾಪ್ದಾದಾ ಇಬ್ಬರೂ ನಿರಹಂಕಾರಿಯಾಗಿದ್ದಾರೆ, ದೇಹೀ-ಅಭಿಮಾನಿಯಾಗಿದ್ದಾರೆ ಹಾಗೆಯೇ ಫಾಲೋ ಫಾದರ್ ಮಾಡಿ ಆಗ ಸದಾ ಉನ್ನತಿಯಾಗುತ್ತಾ ಇರುವುದು''

ಪ್ರಶ್ನೆ:
ಶ್ರೇಷ್ಠ ಪದವಿಯ ಪ್ರಾಪ್ತಿಗಾಗಿ ಯಾವ ಎಚ್ಚರಿಕೆಯನ್ನಿಡುವುದು ಅತ್ಯವಶ್ಯಕವಾಗಿದೆ?

ಉತ್ತರ:
1. ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ಎಚ್ಚರಿಕೆಯಿರಲಿ - ಮನಸ್ಸಿನಿಂದಲೂ ಯಾರಿಗೂ ನನ್ನ ಮೂಲಕ ದುಃಖ ಸಿಗಬಾರದು. 2. ಯಾವುದೇ ಪರಿಸ್ಥಿತಿಯಲ್ಲಿ ಕ್ರೋಧ ಬರಬಾರದು. 3. ತಂದೆಯ ಮಕ್ಕಳಾಗಿಯೂ ತಂದೆಯ ಕಾರ್ಯದಲ್ಲಿ ಈ ರುದ್ರ ಯಜ್ಞದಲ್ಲಿ ವಿಘ್ನ ರೂಪವಾಗಬಾರದು. ಒಂದುವೇಳೆ ಯಾರಾದರೂ ಬಾಯಿಂದ ಬಾಬಾ, ಬಾಬಾ ಎಂದು ಹೇಳುತ್ತಾ ಚಲನೆಯು ಘನತೆಯಿಂದ ಕೂಡಿಲ್ಲವೆಂದರೆ ಶ್ರೇಷ್ಠ ಪದವಿಯು ಸಿಗಲು ಸಾಧ್ಯವಿಲ್ಲ.

ಓಂ ಶಾಂತಿ.
ಮಕ್ಕಳೇ, ಇದನ್ನು ಚೆನ್ನಾಗಿ ತಿಳಿದುಕೊಂಡಿದ್ದೀರಿ - ತಂದೆಯಿಂದ ಆಸ್ತಿಯನ್ನು ಖಂಡಿತ ತೆಗೆದುಕೊಳ್ಳಬೇಕಾಗಿದೆ. ಅದು ಹೇಗೆ? ಶ್ರೀಮತದಂತೆ. ತಂದೆಯು ತಿಳಿಸಿದ್ದಾರೆ - ಒಂದೇ ಗೀತಾ ಶಾಸ್ತ್ರವಾಗಿದೆ ಯಾವುದರಲ್ಲಿ ಶ್ರೀ ಮತ್ಭಗವಾನುವಾಚ ಇದೆ. ಭಗವಂತನು ಎಲ್ಲರ ತಂದೆಯಾಗಿದ್ದಾರೆ. ಶ್ರೀ ಮತ್ಭಗವಾನುವಾಚ ಅಂದಾಗ ಅವಶ್ಯವಾಗಿ ಭಗವಂತನೇ ಬಂದು ಶ್ರೇಷ್ಠರನ್ನಾಗಿ ಮಾಡಿರಬೇಕು ಆದ್ದರಿಂದಲೇ ಅವರ ಮಹಿಮೆಯಿದೆ. ಶ್ರೀ ಮತ್ಭಗವದ್ಗೀತೆ ಅರ್ಥಾತ್ ಶ್ರೀ ಮತ್ಭಗವಾನುವಾಚ. ಭಗವಂತನಂತೂ ಅವಶ್ಯವಾಗಿ ಸರ್ವಶ್ರೇಷ್ಠನಾದರು. ಶ್ರೀಮತವೂ ಸಹ ಅದೊಂದೇ ಶಾಸ್ತ್ರದಲ್ಲಿ ಗಾಯನವಿದೆ, ಮತ್ತ್ಯಾವುದೇ ಶಾಸ್ತ್ರದಲ್ಲಿ ಶ್ರೀ ಮತ್ಭಗವಾನುವಾಚವಿಲ್ಲ. ಶ್ರೀಮತವು ಯಾರದಾಗಿರಬೇಕು ಎಂಬುದನ್ನೂ ಬರೆಯುವವರೂ ಸಹ ತಿಳಿದುಕೊಂಡಿರುವುದಿಲ್ಲ. ಅದರಲ್ಲಿ ಏಕೆ ತಪ್ಪಾಗಿದೆ ಅದನ್ನೂ ಸಹ ತಂದೆಯು ಬಂದು ತಿಳಿಸುತ್ತಾರೆ. ರಾವಣ ರಾಜ್ಯವು ಆರಂಭವಾಗುವುದರಿಂದಲೇ ರಾವಣನ ಮತದಂತೆ ನಡೆಯತೊಡಗುತ್ತಾರೆ. ಮೊದಲು ಬಹಳ ಕಠಿಣವಾದ ತಪ್ಪನ್ನು ಈ ರಾವಣ ಮತದವರೇ ಮಾಡಿದ್ದಾರೆ. ರಾವಣನ ಪೆಟ್ಟು ಬೀಳುತ್ತದೆ. ಹೇಗೆ ಶಂಕರನು ಪ್ರೇರಕನಾಗಿದ್ದಾನೆ, ಬಾಂಬು ಇತ್ಯಾದಿಗಳನ್ನು ಮಾಡಿಸಿದ್ದಾನೆ ಎಂದು ಹೇಳಲಾಗುತ್ತದೆಯೋ ಹಾಗೆಯೇ ಪಂಚ ವಿಕಾರ ರೂಪಿ ರಾವಣನು ಮನುಷ್ಯರನ್ನು ಪತಿತರನ್ನಾಗಿ ಮಾಡಲು ಪ್ರೇರಕನಾಗಿದ್ದಾನೆ ಆದ್ದರಿಂದಲೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಪತಿತ-ಪಾವನನು ಒಬ್ಬರೇ ಆದರಲ್ಲವೆ. ಇದರಿಂದಲೇ ಸಿದ್ಧವಾಗುತ್ತದೆ - ಪತಿತರನ್ನಾಗಿ ಮಾಡುವವರೇ ಬೇರೆ ಮತ್ತು ಪಾವನರನ್ನಾಗಿ ಮಾಡುವವರೇ ಬೇರೆಯಾಗಿದ್ದಾರೆ. ಇಬ್ಬರೂ ಒಂದಾಗಲು ಸಾಧ್ಯವಿಲ್ಲ. ಈ ಮಾತುಗಳನ್ನು ನಂಬರ್ವಾರ್ ಪುರುಷಾರ್ಥದನುಸಾರ ನೀವೇ ತಿಳಿದುಕೊಂಡಿದ್ದೀರಿ. ಎಲ್ಲರಿಗೂ ನಿಶ್ಚಯವಿದೆಯೆಂದು ತಿಳಿದುಕೊಳ್ಳಬೇಡಿ. ನಂಬರ್ವಾರ್ ಇದ್ದಾರೆ. ಎಷ್ಟು ನಿಶ್ಚಯವೋ ಅಷ್ಟು ಖುಷಿಯು ಹೆಚ್ಚುತ್ತದೆ. ತಂದೆಯ ಮತದಂತೆ ನಡೆಯುತ್ತಾರೆ. ಶ್ರೀಮತದಂತೆ ನಾವು ಸ್ವರಾಜ್ಯ ಪದವಿಯನ್ನು ಪಡೆಯಬೇಕಾಗಿದೆ. ಮನುಷ್ಯರಿಂದ ದೇವತೆಗಳಾಗುವುದರಲ್ಲಿ ತಡವಾಗುವುದಿಲ್ಲ. ನೀವು ಪುರುಷಾರ್ಥ ಮಾಡುತ್ತೀರಿ, ಮಮ್ಮಾ-ಬಾಬಾರವರನ್ನು ಫಾಲೋ ಮಾಡುತ್ತೀರಿ. ಹೇಗೆ ಅವರು ತಮ್ಮ ಸಮಾನ ಮಾಡಿಕೊಳ್ಳುವ ಸೇವೆ ಮಾಡುತ್ತಿದ್ದಾರೆ ನೀವೂ ಸಹ ತಿಳಿದುಕೊಂಡಿದ್ದೀರಿ - ನಾವೇನು ಸೇವೆ ಮಾಡುತ್ತಿದ್ದೇವೆ ಮತ್ತು ಮಮ್ಮಾ-ಬಾಬಾರವರು ಯಾವ ಸೇವೆ ಮಾಡುತ್ತಿದ್ದಾರೆ. ಶಿವ ತಂದೆ ಮತ್ತು ಬ್ರಹ್ಮಾ ದಾದಾ ಇಬ್ಬರೂ ಒಟ್ಟಿಗೆ ಇದ್ದಾರೆ ಅಂದಾಗ ತಿಳಿದುಕೊಳ್ಳಬೇಕು - ಎಲ್ಲರಿಗಿಂತ ಸಮೀಪವಿದ್ದಾರೆ. ಇವರದೇ ಸಂಪೂರ್ಣ ರೂಪವನ್ನು ಸೂಕ್ಷ್ಮವತನದಲ್ಲಿ ನೋಡುತ್ತೀರಿ ಅಂದಮೇಲೆ ಅವಶ್ಯವಾಗಿ ಮುಂದಿರುವರು ಆದರೆ ಹೇಗೆ ತಂದೆಯು ನಿರಹಂಕಾರಿ, ದೇಹೀ-ಅಭಿಮಾನಿಯಾಗಿದ್ದಾರೆಯೋ ಹಾಗೆಯೇ ಈ ದಾದಾರವರೂ ಸಹ ನಿರಹಂಕಾರಿಯಾಗಿದ್ದಾರೆ. ಎಲ್ಲವನ್ನೂ ಶಿವ ತಂದೆಯೇ ತಿಳಿಸುತ್ತಿರುತ್ತಾರೆ ಎಂದು ಹೇಳುತ್ತಾರೆ. ಮುರುಳಿಯನ್ನು ನುಡಿಸುವಾಗ ಇವರು ಹೇಳುತ್ತಾರೆ – ಶಿವ ತಂದೆಯು ಇವರ ಮೂಲಕ ನಿಮಗೆ ತಿಳಿಸುತ್ತಾರೆ. ಬ್ರಹ್ಮನೂ ಸಹ ಕೇಳುತ್ತಿರುವರು. ಇವರು ಕೇಳದೇ ಅನ್ಯರಿಗೆ ಹೇಳದೇ ಇದ್ದರೆ ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುವರು! ಆದರೆ ತಮ್ಮ ದೇಹಾಭಿಮಾನವನ್ನು ಬಿಟ್ಟು ಹೇಳುತ್ತಾರೆ - ಮಕ್ಕಳೇ, ಶಿವ ತಂದೆಯೇ ತಿಳಿಸುತ್ತಾರೆಂದು ತಿಳಿಯಿರಿ, ನಾವು ಪುರುಷಾರ್ಥ ಮಾಡುತ್ತಿರುತ್ತೇವೆ. ಶಿವ ತಂದೆಯೇ ತಿಳಿಸುತ್ತಾರೆ - ಇವರಂತೂ ಪತಿತತನವನ್ನು ಪಾರು ಮಾಡಿದ್ದಾರೆ. ಮಮ್ಮಾರವರಾದರೆ ಕುಮಾರಿಯಾಗಿದ್ದರು ಆದ್ದರಿಂದ ಎಲ್ಲರಿಗಿಂತ ಮುಂದೆ ಹೊರಟು ಹೋದರು. ನೀವು ಕುಮಾರಿಯರೂ ಸಹ ಮಮ್ಮಾರವರನ್ನು ಫಾಲೋ ಮಾಡಿ, ಗೃಹಸ್ಥಿಗಳು ಬಾಬಾರವರನ್ನು ಫಾಲೋ ಮಾಡಬೇಕು. ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು - ನಾನು ಪತಿತನಾಗಿದ್ದೇನೆ, ನಾನೀಗ ಪಾವನನಾಗಬೇಕಾಗಿದೆ. ಮುಖ್ಯ ಮಾತೇನೆಂದರೆ ತಂದೆಯು ನೆನಪಿನ ಯಾತ್ರೆಯನ್ನು ಕಲಿಸಿದ್ದಾರೆ, ಇದರಲ್ಲಿ ದೇಹಾಭಿಮಾನವಿರಬಾರದು. ಯಾರಿಗಾದರೂ ಮುರುಳಿಯನ್ನು ಓದಿ ಹೇಳಲು ಬರಲಿಲ್ಲವೆಂದರೆ ನೆನಪಿನ ಯಾತ್ರೆಯಲ್ಲಿರಿ. ಯಾತ್ರೆಯಲ್ಲಿರುತ್ತಾ ಮುರುಳಿಯನ್ನು ತಿಳಿಸಬಹುದು. ಆದರೆ ಆ ಸಮಯದಲ್ಲಿ ಯಾತ್ರೆಯನ್ನು ಮರೆತು ಹೋದರೂ ಪರವಾಗಿಲ್ಲ, ಮುರುಳಿಯನ್ನು ನುಡಿಸಿ ನಂತರ ಯಾತ್ರೆಯಲ್ಲಿ ತೊಡಗಿರಿ ಏಕೆಂದರೆ ಅದು ವಾಣಿಯಿಂದ ದೂರ ವಾನಪ್ರಸ್ಥ ಸ್ಥಿತಿಯಾಗಿದೆ. ಮೂಲ ಮಾತೇನೆಂದರೆ ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡುತ್ತಾ ಇರಿ ಮತ್ತು ಚಕ್ರವನ್ನು ನೆನಪು ಮಾಡುತ್ತಾ ಇರಿ. ಯಾರಿಗೂ ದುಃಖವನ್ನು ಕೊಡಬೇಡಿ. ಇದನ್ನೇ ತಿಳಿಸುತ್ತಾ ಇರಿ - ತಂದೆಯನ್ನು ನೆನಪು ಮಾಡಿ. ಇದು ಯಾತ್ರೆಯಾಗಿದೆ. ಮನುಷ್ಯರು ಸಾವನ್ನಪ್ಪಿದಾಗ ಸ್ವರ್ಗಸ್ಥರಾದರೆಂದು ಹೇಳುತ್ತಾರೆ. ಅಜ್ಞಾನ ಕಾಲದಲ್ಲಿ ಯಾರು ಸ್ವರ್ಗವನ್ನು ನೆನಪು ಮಾಡಿಕೊಳ್ಳುವುದಿಲ್ಲ. ಸ್ವರ್ಗವನ್ನು ನೆನಪು ಮಾಡುವುದು ಎಂದರೆ ಇಲ್ಲಿಂದ ಸಾಯುವುದು. ಈ ರೀತಿಯಂತೂ ಯಾರೂ ನೆನಪು ಮಾಡುವುದಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಹಿಂತಿರುಗಿ ಹೋಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಎಷ್ಟು ನೀವು ನೆನಪು ಮಾಡುತ್ತೀರೋ ಅಷ್ಟು ಖುಷಿಯ ನಶೆಯೇರುವುದು, ಆಸ್ತಿಯ ನೆನಪಿರುವುದು. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟೇ ಹರ್ಷಿತರಾಗಿರುತ್ತೀರಿ. ತಂದೆಯನ್ನು ನೆನಪು ಮಾಡದಿದ್ದರೆ ತಬ್ಬಿಬ್ಬಾಗುತ್ತಾರೆ, ಗುಟುಕರಿಸುತ್ತಿರುತ್ತಾರೆ. ನೀವು ಅಷ್ಟೊಂದು ಸಮಯ ನೆನಪು ಮಾಡಲು ಸಾಧ್ಯವಿಲ್ಲ. ತಂದೆಯು ಪ್ರಿಯತಮ-ಪ್ರಿಯತಮೆಯರ ಉದಾಹರಣೆಯನ್ನೂ ತಿಳಿಸುತ್ತಾರೆ. ಅವರು ಭಲೆ ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಾರೆ ಮತ್ತು ಇವರು ಭಲೆ ಚರಕವನ್ನು ತಿರುಗಿಸುತ್ತಿದ್ದರೂ ಸಹ ಅವರ ಸನ್ಮುಖದಲ್ಲಿ ಪ್ರಿಯತಮನು ಬಂದು ನಿಂತು ಬಿಡುತ್ತಾರೆ. ಪ್ರಿಯತಮೆಯು ಪ್ರಿಯತಮನನ್ನೂ, ಪ್ರಿಯತಮನು ಪ್ರಿಯತಮೆಯನ್ನೂ ನೆನಪು ಮಾಡುತ್ತಿರುತ್ತಾರೆ. ಇಲ್ಲಂತೂ ನೀವು ಕೇವಲ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯಂತೂ ನಿಮ್ಮನ್ನು ನೆನಪು ಮಾಡಬೇಕಾಗಿಲ್ಲ, ಅವರು ಎಲ್ಲರ ಪ್ರಿಯತಮನಾಗಿದ್ದಾರೆ. ಬಾಬಾ, ತಾವು ನಮ್ಮನ್ನು ನೆನಪು ಮಾಡಿಕೊಳ್ಳುತ್ತೀರಾ ಎಂದು ಮಕ್ಕಳು ಕರೆಯುತ್ತಾರೆ. ಅರೆ! ಯಾರು ಎಲ್ಲರ ಪ್ರಿಯತಮನಾಗಿದ್ದಾರೆ ಅವರು ನೀವು ಪ್ರಿಯತಮೆಯರನ್ನು ಹೇಗೆ ನೆನಪು ಮಾಡುವರು? ಇದು ಸಾಧ್ಯವಿಲ್ಲ. ಅವರು ಪ್ರಿಯತಮನಾಗಿದ್ದಾರೆ, ಪ್ರಿಯತಮೆಯಾಗಲು ಸಾಧ್ಯವಿಲ್ಲ. ನೀವೇ ಅವರನ್ನು ನೆನಪು ಮಾಡಬೇಕಾಗಿದೆ. ನೀವು ಪ್ರತಿಯೊಬ್ಬರೂ ಆ ಒಬ್ಬ ಪ್ರಿಯತಮನಿಗೆ ಪ್ರಿಯತಮೆಯರಾಗಬೇಕಾಗಿದೆ. ಒಂದುವೇಳೆ ಅವರು ಪ್ರಿಯತಮೆಯಾದರೆ ಎಷ್ಟು ಮಂದಿಯನ್ನು ನೆನಪು ಮಾಡುವುದು! ಇದು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಯಾರನ್ನಾದರೂ ನೆನಪು ಮಾಡಲು ನನ್ನ ಮೇಲೆ ಪಾಪದ ಹೊರೆಯಿದೆಯೇ! ನಿಮ್ಮ ಮೇಲಂತೂ ಹೊರೆಯಿದೆ. ತಂದೆಯನ್ನು ನೆನಪು ಮಾಡದಿದ್ದರೆ ಪಾಪದ ಹೊರೆ ಇಳಿಯುವುದಿಲ್ಲ. ನಾನು ಯಾರನ್ನೇಕೆ ನೆನಪು ಮಾಡಲಿ! ನೆನಪು ಮಾಡಬೇಕಾಗಿರುವುದು ನೀವು ಆತ್ಮಗಳು. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪುಣ್ಯಾತ್ಮರಾಗುತ್ತೀರಿ, ಪಾಪಗಳು ಕಳೆಯುತ್ತಾ ಹೋಗುತ್ತದೆ. ಉನ್ನತ ಗುರಿಯಾಗಿದೆ. ಆತ್ಮಾಭಿಮಾನಿಯಾಗುವುದರಲ್ಲಿಯೇ ಪರಿಶ್ರಮವಿದೆ. ಈ ಜ್ಞಾನವೆಲ್ಲವೂ ನಿಮಗೆ ಸಿಗುತ್ತಿದೆ. ನಂಬರ್ವಾರ್ ಪುರುಷಾರ್ಥದನುಸಾರ ನೀವು ತ್ರಿಕಾಲದರ್ಶಿಗಳಾಗಿದ್ದೀರಿ. ಇಡೀ ಚಕ್ರವು ನಿಮ್ಮ ಬುದ್ಧಿಯಲ್ಲಿರಬೇಕು. ತಂದೆಯು ತಿಳಿಸುತ್ತಾರೆ - ನೀವು ಲೈಟ್ಹೌಸ್ ಆಗಿದ್ದೀರಲ್ಲವೆ. ಪ್ರತಿಯೊಬ್ಬರಿಗೆ ಶಾಂತಿಧಾಮ ಮತ್ತು ಸುಖಧಾಮದ ಮಾರ್ಗವನ್ನು ತಿಳಿಸುವವರಾಗಿದ್ದೀರಿ. ಇವೆಲ್ಲಾ ಹೊಸ ಮಾತುಗಳನ್ನು ನೀವು ಕೇಳುತ್ತೀರಿ. ನಿಮಗೆ ತಿಳಿದಿದೆ - ಅವಶ್ಯವಾಗಿ ನಾವಾತ್ಮರು ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ಇಲ್ಲಿಗೆ ಪಾತ್ರವನ್ನಭಿನಯಿಸಲು ಬರುತ್ತೇವೆ. ನಾವು ಪಾತ್ರಧಾರಿಗಳಾಗಿದ್ದೇವೆ, ಇದೇ ಚಿಂತನೆ ಬುದ್ಧಿಯಲ್ಲಿ ನಡೆಯುತ್ತಿದ್ದರೆ ನಶೆಯಿರುವುದು. ತಂದೆಯು ತಿಳಿಸಿದ್ದಾರೆ - ಆದಿಯಿಂದ ಹಿಡಿದು ಅಂತ್ಯದವರೆಗೆ ನಿಮ್ಮದು ಪಾತ್ರವಿದೆ. ಈಗ ಕರ್ಮಾತೀತ ಸ್ಥಿತಿಯಲ್ಲಿ ಖಂಡಿತ ಹೋಗಬೇಕಾಗಿದೆ ನಂತರ ಸತ್ಯಯುಗದಲ್ಲಿ ಬರಬೇಕಾಗಿದೆ. ಈ ಗುಂಗಿನಲ್ಲಿರುತ್ತಾ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ, ಕೇವಲ ಪಂಡಿತರಾಗಬಾರದು. ಅನ್ಯರಿಗೆ ಕಲಿಸುತ್ತಾ ಇರುತ್ತೀರಿ. ತಾನು ಆ ಸ್ಥಿತಿಯಲ್ಲಿ ಇರುವುದಿಲ್ಲವೆಂದರೆ ಅದು ಪ್ರಭಾವ ಬೀರುವುದಿಲ್ಲ. ತಾನೂ ಪುರುಷಾರ್ಥ ಮಾಡಬೇಕಾಗಿದೆ. ಬ್ರಹ್ಮಾ ತಂದೆಯೂ ಹೇಳುತ್ತಾರೆ - ನಾನೂ ಕೂಡ ನೆನಪು ಮಾಡುವ ಪ್ರಯತ್ನಪಡುತ್ತೇನೆ. ಕೆಲವೊಮ್ಮೆ ಮಾಯೆಯ ಬಿರುಗಾಳಿಗಳೂ ಈ ರೀತಿ ಬರುತ್ತವೆ ಅವು ಬುದ್ಧಿ ಯೋಗವನ್ನೇ ತುಂಡರಿಸಿ ಬಿಡುತ್ತವೆ. ಅನೇಕ ಮಕ್ಕಳು ಚಾರ್ಟನ್ನು ಕಳುಹಿಸುತ್ತಾರೆ. ನನಗೆ ಆಶ್ಚರ್ಯವೆನಿಸುತ್ತದೆ - ಇವರಂತೂ ನನಗಿಂತಲೂ ತೀಕ್ಷ್ಣವಾಗಿ ಹೋಗುತ್ತಾರೆ. ಬಹುಷಃ ತೀವ್ರವಾಗಿ ಹೋದಾಗ ಚಾರ್ಟ್ ಬರೆಯತೊಡಗುತ್ತಾರೆ ಆದರೆ ಒಂದುವೇಳೆ ಇದೇ ತೀವ್ರತೆಯಿಂದ ಮುಂದೆ ಹೋದರೆ ನಂಬರ್ವನ್ನಲ್ಲಿ ಹೊರಟು ಹೋಗುವರು ಆದರೆ ಇಲ್ಲ, ಅದು ಕೇವಲ ಚಾರ್ಟ್ ಬರೆಯುವವರೆಗೆ ಮಾತ್ರ. ಬಾಬಾ, ನಾನು ಇಷ್ಟು ಮಂದಿಯನ್ನು ತನ್ನ ಸಮಾನರನ್ನಾಗಿ ಮಾಡಿಕೊಂಡೆನು ಎಂಬುದನ್ನು ಬರೆಯುವುದಿಲ್ಲ ಮತ್ತು ಅವರೂ ಸಹ ಬಾಬಾ, ಇವರು ಈ ಮಾರ್ಗವನ್ನು ತಿಳಿಸಿದ್ದಾರೆಂದು ಸಮಾಚಾರ ಬರುವುದಿಲ್ಲ ಅಂದಮೇಲೆ ತಂದೆಯು ಏನು ತಿಳಿದುಕೊಳ್ಳುವರು? ಕೇವಲ ಚಾರ್ಟ್ ಕಳುಹಿಸುವುದರಿಂದ ಕೆಲಸ ನಡೆಯುವುದಿಲ್ಲ. ಅನ್ಯರನ್ನೂ ತಮ್ಮ ಸಮಾನ ಮಾಡಿಕೊಳ್ಳಬೇಕಾಗಿದೆ. ರೂಪ ಮತ್ತು ಭಸಂತ ಎರಡೂ ಆಗಬೇಕಾಗಿದೆ. (ರೂಪ - ಆತ್ಮದ ಸ್ಮೃತಿ, ಭಸಂತ - ಜ್ಞಾನದ ಮಳೆ ಸುರಿಸುವುದು) ಇಲ್ಲದಿದ್ದರೆ ಅವರು ತಂದೆಯ ಸಮಾನ ಆಗಲಿಲ್ಲ. ರೂಪ ಭಸಂತರು ಆಕ್ಯುರೇಟ್ ಆಗಬೇಕಾಗಿದೆ, ಇದರಲ್ಲಿಯೇ ಪರಿಶ್ರಮವಿದೆ. ದೇಹಾಭಿಮಾನವು ಬೀಳಿಸುತ್ತದೆ, ರಾವಣನು ದೇಹಾಭಿಮಾನಿಗಳನ್ನಾಗಿ ಮಾಡಿದ್ದಾನೆ, ನೀವೀಗ ದೇಹೀ-ಅಭಿಮಾನಿಯಾಗುತ್ತೀರಿ ಮತ್ತೆ ಅರ್ಧ ಕಲ್ಪದ ನಂತರ ಮಾಯಾ ರಾವಣನು ದೇಹಾಭಿಮಾನಿಯನ್ನಾಗಿ ಮಾಡುತ್ತಾನೆ. ದೇಹೀ-ಅಭಿಮಾನಿಗಳು ಬಹಳ ಮಧುರರಾಗಿ ಬಿಡುತ್ತಾರೆ. ಇನ್ನು ಯಾರೂ ಸಂಪೂರ್ಣರಾಗಿಲ್ಲ. ಆದ್ದರಿಂದ ತಂದೆಯು ಯಾವಾಗಲೂ ಹೇಳುತ್ತಾರೆ - ಮಕ್ಕಳೇ, ಯಾರ ಮನಸ್ಸನ್ನು ಬೇಸರ ಪಡಿಸಬಾರದು, ದುಃಖ ಕೊಡಬಾರದು, ಎಲ್ಲರಿಗೆ ತಂದೆಯ ಪರಿಚಯ ಕೊಡಿ. ಮಾತನಾಡುವುದರಲ್ಲಿಯೂ ಬಹಳ ಘನತೆಯಿರಬೇಕು. ಈಶ್ವರನ ಸಂತಾನರ ಬಾಯಿಂದ ಸದಾ ರತ್ನಗಳೇ ಹೊರ ಬರಬೇಕು. ನೀವು ಮನುಷ್ಯರಿಗೆ ಜೀವ ದಾನ ನೀಡುತ್ತೀರಿ. ಮಾರ್ಗ ತಿಳಿಸಬೇಕಾಗಿದೆ, ನೀವು ಪರಮಾತ್ಮನ ಮಕ್ಕಳಲ್ಲವೆ. ಅವರಿಂದ ನಿಮಗೆ ಸ್ವರ್ಗದ ರಾಜ್ಯಭಾಗ್ಯ ಸಿಗಬೇಕು ಅಂದಮೇಲೆ ಅದು ಈಗ ಏಕೆ ಇಲ್ಲ. ನೆನಪು ಮಾಡಿಕೊಳ್ಳಿ - ಅವಶ್ಯವಾಗಿ ತಂದೆಯಿಂದ ಆಸ್ತಿಯು ಸಿಕ್ಕಿತ್ತಲ್ಲವೆ! ನೀವು ಭಾರತವಾಸಿಗಳು ದೇವಿ-ದೇವತೆಗಳಾಗಿದ್ದಿರಿ, ನೀವೇ 84 ಜನ್ಮಗಳನ್ನು ತೆಗೆದುಕೊಂಡಿರಿ. ನೀವು ತಿಳಿದುಕೊಳ್ಳಿ - ನಾವೇ ಲಕ್ಷ್ಮೀ-ನಾರಾಯಣರ ಕುಲದವರಾಗಿದ್ದೆವು, ತಮ್ಮನ್ನೇಕೆ ಕಡಿಮೆಯೆಂದು ತಿಳಿದುಕೊಳ್ಳುತ್ತೀರಿ. ಬಾಬಾ, ಎಲ್ಲರೂ ಆಗಲು ಸಾಧ್ಯವೇ ಎಂದು ಒಂದುವೇಳೆ ಯಾರಾದರೂ ಹೇಳಿದರೆ ಇದರಿಂದಲೇ ತಂದೆಯು ಇವರು ನಮ್ಮ ಕುಲದವರಲ್ಲ ಎಂದು ತಿಳಿದುಕೊಳ್ಳುತ್ತಾರೆ. ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ತಂದೆಯು 21 ಜನ್ಮಗಳ ಪ್ರಾಲಬ್ಧವನ್ನು ಜಮಾ ಮಾಡಿಸಿದರು. ಅದನ್ನು ತಿಂದು ಬಿಟ್ಟಿರಿ ನಂತರ ಸಮಾಪ್ತಿಯಾಗತೊಡಗಿತು. ತುಕ್ಕು ಏರುತ್ತಾ-ಏರುತ್ತಾ ತಮೋಪ್ರಧಾನ ಕವಡೆಯಂತೆ ಆಗಿ ಬಿಟ್ಟಿದ್ದೀರಿ. ಭಾರತವೇ 100% ಸಾಹುಕಾರವಾಗಿತ್ತು, ಅವರಿಗೆ ಈ ಆಸ್ತಿಯು ಎಲ್ಲಿಂದ ಸಿಕ್ಕಿತ್ತು? ಪಾತ್ರಧಾರಿಗಳೇ ತಿಳಿಸಲು ಸಾಧ್ಯವಲ್ಲವೆ? ಮನುಷ್ಯರೇ ಪಾತ್ರಧಾರಿಗಳಾಗಿದ್ದಾರೆ, ಅವರಿಗೆ ಇದು ತಿಳಿದಿರಬೇಕು - ಈ ಲಕ್ಷ್ಮೀ-ನಾರಾಯಣರಿಗೆ ರಾಜ್ಯಭಾಗ್ಯವು ಎಲ್ಲಿಂದ ಸಿಕ್ಕಿತ್ತು? ಎಷ್ಟು ಒಳ್ಳೊಳ್ಳೆಯ ವಿಚಾರಗಳಿವೆ! ಅವಶ್ಯವಾಗಿ ಅವರು ಹಿಂದಿನ ಜನ್ಮದಲ್ಲಿಯೇ ಈ ರಾಜ್ಯಭಾಗ್ಯವನ್ನು ಪಡೆದಿರಬೇಕು.

ತಂದೆಯೇ ಪತಿತ-ಪಾವನನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಕರ್ಮ, ಅಕರ್ಮ ಮತ್ತು ವಿಕರ್ಮದ ಗತಿಯನ್ನು ತಿಳಿಸುತ್ತೇನೆ. ರಾವಣ ರಾಜ್ಯದಲ್ಲಿ ಮನುಷ್ಯರ ಕರ್ಮಗಳು ವಿಕರ್ಮಗಳಾಗಿ ಬಿಡುತ್ತವೆ. ಸತ್ಯಯುಗದಲ್ಲಿ ನಿಮ್ಮ ಕರ್ಮವು ಅಕರ್ಮವಾಗುತ್ತದೆ. ಅದು ದೈವೀ ಸೃಷ್ಟಿಯಾಗಿದೆ. ನಾನೇ ರಚಿಸುತ್ತೇನೆ ಅಂದಮೇಲೆ ಅವಶ್ಯವಾಗಿ ನಾನು ಸಂಗಮದಲ್ಲಿಯೇ ಬರಬೇಕಾಗುತ್ತದೆ. ಇದು ರಾವಣ ರಾಜ್ಯವಾಗಿದೆ, ಅದು ಈಶ್ವರೀಯ ರಾಜ್ಯವಾಗಿದೆ. ಈಶ್ವರನು ಈಗ ಸ್ಥಾಪನೆ ಮಾಡಿಸುತ್ತಿದ್ದಾರೆ. ನೀವೆಲ್ಲರೂ ಈಶ್ವರನ ಮಕ್ಕಳಾಗಿದ್ದೀರಿ. ನಿಮಗೆ ಆಸ್ತಿಯು ಸಿಗುತ್ತಿದೆ, ಭಾರತವಾಸಿಗಳೇ ಸಾಹುಕಾರರಾಗಿದ್ದಿರಿ, ಈಗ ಬಡವರಾಗಿಬಿಟ್ಟಿದ್ದೀರಿ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಲ್ಲಿ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಎಲ್ಲರ ವೃಕ್ಷವು ಬೇರೆ-ಬೇರೆಯಾಗಿದೆ. ವಿಭಿನ್ನ ವೃಕ್ಷವಲ್ಲವೆ. ದೇವತಾ ಧರ್ಮದವರೇ ಪುನಃ ದೇವತಾ ಧರ್ಮದಲ್ಲಿ ಬರುತ್ತಾರೆ. ಕ್ರಿಶ್ಚಿಯನ್ ಧರ್ಮದವರು ತಮ್ಮ ಧರ್ಮದಲ್ಲಿ ಖುಷಿಯಾಗಿದ್ದಾರೆ, ಅನ್ಯರನ್ನೂ ತಮ್ಮ ಧರ್ಮಕ್ಕೆ ಸೆಳೆದಿದ್ದಾರೆ. ಭಾರತವಾಸಿಗಳು ತಮ್ಮ ಧರ್ಮವನ್ನು ಮರೆತಿರುವ ಕಾರಣ ಆ ಧರ್ಮವೇ ಒಳ್ಳೆಯದೆಂದು ತಿಳಿದು ಹೊರಟು ಹೋಗುತ್ತಾರೆ. ನೌಕರಿಗಾಗಿ ವಿದೇಶಕ್ಕೆ ಎಷ್ಟೊಂದು ಮಂದಿ ಹೋಗುತ್ತಾರೆ ಏಕೆಂದರೆ ಅಲ್ಲಿ ಬಹಳ ಸಂಪಾದನೆಯಿದೆ, ನಾಟಕವು ಬಹಳ ವಿಚಿತ್ರವಾಗಿ ಮಾಡಲ್ಪಟ್ಟಿದೆ, ಇದನ್ನು ತಿಳಿದುಕೊಳ್ಳಲು ಒಳ್ಳೆಯ ಬುದ್ಧಿ ಬೇಕು. ವಿಚಾರ ಸಾಗರ ಮಂಥನ ಮಾಡುವುದರಿಂದ ಎಲ್ಲವೂ ಅರ್ಥವಾಗತೊಡಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ಅನಾದಿ ನಾಟಕವಾಗಿದೆ. ಆದ್ದರಿಂದ ನೀವು ಮಕ್ಕಳು ತಮ್ಮ ಸಮಾನ ಸದಾ ಸುಖಿಯನ್ನಾಗಿ ಮಾಡಬೇಕಾಗಿದೆ. ಪತಿತರಿಂದ ಪಾವನರನ್ನಾಗಿ ಮಾಡುವುದು ನಿಮ್ಮ ಕರ್ತವ್ಯವಾಗಿದೆ. ತಂದೆಯ ಕರ್ತವ್ಯವೇ ನಿಮ್ಮ ಕರ್ತವ್ಯ. ನಿಮ್ಮ ಮುಖವು ಸದಾ ದೇವತೆಗಳಂತೆ ಖುಷಿಯಲ್ಲಿ ಹರ್ಷಿತವಾಗಿರಬೇಕು. ನಿಮಗೆ ತಿಳಿದಿದೆ - ನಾವು ವಿಶ್ವದ ಮಾಲೀಕರಾಗುತ್ತೇವೆ. ನೀವು ಅತೀ ಪ್ರಿಯ ಮಕ್ಕಳಾಗಿದ್ದೀರಿ. ಕ್ರೋಧದ ಮೇಲೆ ಬಹಳ ಎಚ್ಚರಿಕೆಯಿರಲಿ. ತಂದೆಯು ಮಕ್ಕಳಿಗೆ ಸುಖದ ಆಸ್ತಿಯನ್ನು ಕೊಡಲು ಬಂದಿದ್ದಾರೆ, ಸ್ವರ್ಗದ ಮಾರ್ಗವನ್ನು ಎಲ್ಲರಿಗೂ ತಿಳಿಸಬೇಕಾಗಿದೆ. ತಂದೆಯು ದುಃಖಹರ್ತ-ಸುಖಕರ್ತನಾಗಿದ್ದಾರೆ ಅಂದಮೇಲೆ ನೀವೂ ಸಹ ಸುಖಕರ್ತರಾಗಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬಾರದು. ದುಃಖ ಕೊಡುತ್ತೀರೆಂದರೆ ನಿಮ್ಮ ಶಿಕ್ಷೆಯು ನೂರು ಪಟ್ಟು ಹೆಚ್ಚಾಗುವುದು. ಯಾರೂ ಶಿಕ್ಷೆಯಿಂದ ಪಾರಾಗಲು ಸಾಧ್ಯವಿಲ್ಲ. ನೀವು ಮಕ್ಕಳಿಗಂತೂ ವಿಶೇಷವಾಗಿ ನ್ಯಾಯಾಲಯವು ಕುಳಿತುಕೊಳ್ಳುತ್ತದೆ. ತಂದೆಯು ತಿಳಿಸುತ್ತಾರೆ - ನೀವು ವಿಘ್ನಗಳನ್ನು ಹಾಕಿದರೆ ಬಹಳ ಶಿಕ್ಷೆಗಳನ್ನನುಭವಿಸುತ್ತೀರಿ. ಕಲ್ಪ-ಕಲ್ಪಾಂತರ ಇಂತಹವರು ಈ ರೀತಿಯಾಗುತ್ತಾರೆ ಎಂಬುದನ್ನು ನೀವು ಸಾಕ್ಷಾತ್ಕಾರ ಮಾಡುತ್ತೀರಿ. ಮೊದಲು ಸಾಕ್ಷಾತ್ಕಾರದಲ್ಲಿ ಶಿಕ್ಷೆಯನ್ನು ನೋಡುತ್ತಿದ್ದಾಗ ತಂದೆಯು ನನಗೆ ಹೇಳಬೇಡಿ ಎಂದು ಸುಮ್ಮನಿರಿಸಿ ಬಿಡುತ್ತಿದ್ದರು. ಅಂತ್ಯದಲ್ಲಂತೂ ಎಲ್ಲವೂ ಅರ್ಥವಾಗುತ್ತಾ ಹೋಗುವುದು. ಮುಂದೆ ಹೋದಂತೆ ಬಹಳ ಸಾಕ್ಷಾತ್ಕಾರವಾಗುತ್ತದೆ, ವೃದ್ಧಿಯಾಗುತ್ತಾ ಹೋಗುತ್ತದೆ, ಅಬು ಪರ್ವತದವರೆಗೆ ಸಾಲು ನಿಲ್ಲುವುದು. ತಂದೆಯೊಂದಿಗೆ ಯಾರೂ ಮಿಲನ ಮಾಡಲು ಆಗುವುದಿಲ್ಲ ಆಗ ಓಹೋ ಪ್ರಭು! ನಿನ್ನ ಲೀಲೆ ಅಪರಮಪಾರ ಎಂದು ಹೇಳುತ್ತಾರೆ. ಇದೂ ಸಹ ಗಾಯನವಿದೆಯಲ್ಲವೆ. ವಿದ್ವಾಂಸ, ಪಂಡಿತ ಮೊದಲಾದವರೂ ಸಹ ಕೊನೆಯಲ್ಲಿ ಬರುತ್ತಾರೆ. ಅವರ ಸಿಂಹಾಸನಗಳೂ ಅಲುಗಾಡುತ್ತವೆ, ನೀವು ಮಕ್ಕಳು ಆಗ ಬಹಳ ಖುಷಿಯಲ್ಲಿರುತ್ತೀರಿ.

ಒಳ್ಳೆಯದು. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ. ಇಂತಹ ನೆನಪು-ಪ್ರೀತಿಯು ಒಂದೇ ಬಾರಿ ಸಿಗುತ್ತದೆ. ನೀವು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪ್ರೀತಿಯನ್ನು ಪಡೆಯುತ್ತೀರಿ, ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಧಾರಣೆಯೂ ಆಗುತ್ತದೆ. ಮಕ್ಕಳಿಗೆ ಖುಷಿಯ ನಶೆಯೇರಿರಬೇಕು. ಯಾರೇ ಬರಲಿ ಅವರಿಗೆ ಮಾರ್ಗವನ್ನು ತಿಳಿಸಬೇಕು. ಬೇಹದ್ದಿನ ಆಸ್ತಿಯನ್ನು ಬೇಹದ್ದಿನ ತಂದೆಯಿಂದ ಪಡೆಯಬೇಕಾಗಿದೆ. ಇದು ಕಡಿಮೆ ಮಾತೇನು? ಇಂತಹ ಪುರುಷಾರ್ಥ ಮಾಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮಾತು-ಚಲನೆಯಲ್ಲಿ ಬಹಳ ರಾಯಲ್ ಆಗಬೇಕಾಗಿದೆ. ಮುಖದಿಂದ ಸದಾ ರತ್ನಗಳೇ ಹೊರಬರಬೇಕಾಗಿದೆ. ತಮ್ಮ ಸಮಾನ ಮಾಡಿಕೊಳ್ಳುವ ಸೇವೆ ಮಾಡಬೇಕಾಗಿದೆ. ಯಾರ ಮನಸ್ಸನ್ನೂ ಬೇಸರ ಪಡಿಸಬಾರದು.

2. ಕ್ರೋಧದ ಮೇಲೆ ಬಹಳ ಎಚ್ಚರಿಕೆಯಿರಬೇಕಾಗಿದೆ. ಮುಖವು ಸದಾ ದೇವತೆಗಳಂತೆ ಹರ್ಷಿತವಾಗಿರಬೇಕು. ಸ್ವಯಂನ್ನು ಜ್ಞಾನ-ಯೋಗಬಲದಿಂದ ದೇವತೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ.

ವರದಾನ:
ಸದಾ ಪಶ್ಚಾತಾಪದಿಂದ ದೂರ, ಪ್ರಾಪ್ತಿ ಸ್ವರೂಪ ಸ್ಥಿತಿಯ ಅನುಭವ ಮಾಡುವಂತಹ ಸದ್ಭುದ್ಧಿವಂತ ಭವ.

ಯಾವ ಮಕ್ಕಳು ತಂದೆಗೆ ತಮ್ಮ ಜೀವನದ ದೋಣಿಯನ್ನು ಕೊಟ್ಟು ನನ್ನತನವನ್ನು ಅಳಿಸಿ ಹಾಕಿ ಬಿಡುತ್ತಾರೆ, ಶ್ರೀಮತದಲ್ಲಿ ಮನಮತ ಬೆರೆಸುವುದಿಲ್ಲ, ಅವರು ಸದಾ ಪಶ್ಚಾತಾಪದಿಂದ ದೂರ ಪ್ರಾಪ್ತಿ ಸ್ವರೂಪ ಸ್ಥಿತಿಯ ಅನುಭವ ಮಾಡುತ್ತಾರೆ. ಅಂತಹವರನ್ನೇ ಸಧ್ಭುದ್ಧಿವಾನ್ ಎಂದು ಕರೆಯಲಾಗುವುದು. ಇಂತಹ ಸಧ್-ಬುದ್ಧಿವುಳ್ಳವರು ಬಿರುಗಾಳಿಯನ್ನು ಬಳುವಳಿ ಎಂದು ತಿಳಿದು, ಸ್ವಭಾವ-ಸಂಸ್ಕಾರದ ಘರ್ಷಣೆ ಮುಂದುವರೆಯಲು ಆಧಾರ ಎಂದು ತಿಳಿದು, ಸದಾ ತಂದೆಯನ್ನು ಜೊತೆಗಾರನನ್ನಾಗಿ ಮಾಡಿಕೊಳ್ಳುತ್ತಾ, ಸಾಕ್ಷಿಯಾಗಿ ಎಲ್ಲಾ ಪಾತ್ರವನ್ನು ನೋಡುತ್ತಾ ಸದಾ ಹರ್ಷಿತರಾಗಿ ನಡೆಯುತ್ತಾರೆ.

ಸ್ಲೋಗನ್:
ಯಾರು ಸುಖದಾತ ತಂದೆಯ ಸುಖದಾಯಿ ಮಕ್ಕಳಿದ್ದಾರೆ ಅವರ ಬಳಿ ದುಃಖದ ಅಲೆ ಬರಲು ಸಾಧ್ಯವಿಲ್ಲ.