10.03.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರರಾಗಬೇಕಾಗಿದೆ, ಒಬ್ಬ ತಂದೆಯ ವ್ಮತದಂತೆ
ನಡೆಯಬೇಕಾಗಿದೆ, ಯಾವುದೇ ಸೇವಾಭಂಗ ಮಾಡಬಾರದು’’
ಪ್ರಶ್ನೆ:
ಎಂತಹ ಮಕ್ಕಳಿಗೆ
ಮಾಯೆಯು ಬಹಳ ಜೋರಾಗಿ ಪೆಟ್ಟು ಕೊಡುತ್ತದೆ? ಉನ್ನತ ಗುರಿ ಯಾವುದಾಗಿದೆ?
ಉತ್ತರ:
ಯಾವ ಮಕ್ಕಳು ದೇಹಾಭಿಮಾನದಲ್ಲಿರುವರೋ ಅವರಿಗೆ ಮಾಯೆಯು ಬಹಳ ಚೆನ್ನಾಗಿ ಪೆಟ್ಟು ಕೊಡುತ್ತದೆ ಮತ್ತೆ
ನಾಮ-ರೂಪದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ದೇಹಾಭಿಮಾನ ಬಂದಿತೆಂದರೆ ಪೆಟ್ಟು ಬಿದ್ದಿತು,
ಇದರಿಂದ ಪದವಿಯು ಭ್ರಷ್ಟವಾಗಿ ಬಿಡುತ್ತದೆ. ದೇಹಾಭಿಮಾನವನ್ನು ಕಳೆಯುವುದೇ ದೊಡ್ಡ ಗುರಿಯಾಗಿದೆ.
ತಂದೆಯು ತಿಳಿಸುತ್ತಾರೆ – ಮಕ್ಕಳೇ, ಆತ್ಮಾಭಿಮಾನಿಯಾಗಿ. ಹೇಗೆ ತಂದೆಯು ವಿಧೇಯ ಸೇವಕನಾಗಿದ್ದಾರೆ,
ಎಷ್ಟು ನಿರಹಂಕಾರಿಯಾಗಿದ್ದಾರೆ, ಅದೇರೀತಿ ನಿರಹಂಕಾರಿಯಾಗಿ, ಯಾವುದೇ ಅಹಂಕಾರವು ಬೇಡ.
ಗೀತೆ:
ಅವರು ನಮ್ಮನ್ನು ಅಗಲುವುದಿಲ್ಲ.........
ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ. ಮಕ್ಕಳು ಹೇಳುತ್ತಾರೆ - ನಾವು ಮೂಲವತನದಲ್ಲಿದ್ದಾಗ
ತಂದೆಯವರಾಗಿದ್ದೆವು ಮತ್ತು ತಂದೆಯು ನಮ್ಮವರಾಗಿದ್ದರು. ನೀವು ಮಕ್ಕಳಿಗೆ ಬಹಳ ಚೆನ್ನಾಗಿ ಜ್ಞಾನವು
ಸಿಕ್ಕಿದೆ. ನೀವು ತಿಳಿದುಕೊಂಡಿದ್ದೀರಿ - ನಾವು ಚಕ್ರವನ್ನು ಸುತ್ತಿದ್ದೇವೆ, ಈಗ ಪುನಃ ನಾವು
ತಂದೆಯ ಮಕ್ಕಳಾಗಿದ್ದೇವೆ. ರಾಜಯೋಗವನ್ನು ಕಲಿಸಿ ಸ್ವರ್ಗದ ಮಾಲೀಕರನ್ನಾಗಿ ಮಾಡಲು ತಂದೆಯು
ಬಂದಿದ್ದಾರೆ. ಕಲ್ಪದ ಹಿಂದಿನ ತರಹ ಪುನಃ ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ - ಹೇ ಮಕ್ಕಳೇ
ಎಂದು. ಹಾಗೆಂದು ಹೇಳಿ ಮಕ್ಕಳಾಗಿ ಇಲ್ಲಿ ಮಧುಬನದಲ್ಲಿ ಕುಳಿತು ಬಿಡುವಂತಿಲ್ಲ. ನೀವು ತಮ್ಮ
ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಕಮಲ ಪುಷ್ಫ ಸಮಾನ ಪವಿತ್ರರಾಗಿರಿ. ಕಮಲ ಪುಷ್ಫವು
ನೀರಿನಲ್ಲಿರುತ್ತದೆ ಆದರೆ ನೀರಿಗೆ ಅಂಟದಂತೆ ಮೇಲಿರುತ್ತದೆ, ಅದಕ್ಕೆ ನೀರು ಸ್ಪರ್ಷಿಸುವುದೇ ಇಲ್ಲ.
ತಂದೆಯು ತಿಳಿಸುತ್ತಾರೆ - ನೀವೂ ಸಹ ಮನೆಯಲ್ಲಿಯೇ ಇರಿ, ಕೇವಲ ಪವಿತ್ರರಾಗಿರಿ. ಇದು ನಿಮ್ಮ ಬಹಳ
ಜನ್ಮಗಳ ಅಂತಿಮ ಜನ್ಮವಾಗಿದೆ. ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಅವರೆಲ್ಲರನ್ನೂ ಪಾವನ ಮಾಡಲು
ನಾನು ಬಂದಿದ್ದೇನೆ. ಪತಿತ-ಪಾವನ, ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ಅವರ ವಿನಃ
ಮತ್ತ್ಯಾರೂ ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ನೀವು ತಿಳಿದುಕೊಂಡಿದ್ದೀರಿ – ಅರ್ಧಕಲ್ಪದಿಂದ
ನಾವು ಏಣಿಯನ್ನಿಳಿಯುತ್ತಾ ಬಂದಿದ್ದೇವೆ. ನೀವು 84 ಜನ್ಮಗಳನ್ನು ಅವಶ್ಯವಾಗಿ ಪೂರ್ಣ ಮಾಡಬೇಕಾಗಿದೆ
ಮತ್ತು 84 ಜನ್ಮಗಳ ಚಕ್ರವನ್ನು ಮುಗಿಸಿ ಯಾವಾಗ ಅಂತಿಮ ಸ್ಥಿತಿಯನ್ನು ತಲುಪುತ್ತೀರೋ ಆಗ ನಾನು
ಬರಬೇಕಾಗುತ್ತದೆ. ಮಧ್ಯದಲ್ಲಿ ಮತ್ತ್ಯಾರೂ ಪತಿತರಿಂದ ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ಯಾರೂ
ಸಹ ತಂದೆಯನ್ನಾಗಲಿ, ರಚನೆಯನ್ನಾಗಲಿ ಅರಿತುಕೊಂಡಿಲ್ಲ. ಡ್ರಾಮಾನುಸಾರ ಎಲ್ಲರೂ ಕಲಿಯುಗದಲ್ಲಿ
ಪತಿತರು, ತಮೋಪ್ರಧಾನರಾಗಲೇಬೇಕಾಗಿದೆ. ತಂದೆಯು ಬಂದು ಎಲ್ಲರನ್ನೂ ಪಾವನ ಮಾಡಿ ಶಾಂತಿಧಾಮಕ್ಕೆ
ಕರೆದುಕೊಂಡು ಹೋಗುತ್ತಾರೆ ಮತ್ತು ತಂದೆಯಿಂದ ಸುಖಧಾಮದ ಆಸ್ತಿಯನ್ನು ಪಡೆಯುತ್ತೀರಿ. ಸತ್ಯಯುಗದಲ್ಲಿ
ಯಾವುದೇ ದುಃಖವಿರುವುದಿಲ್ಲ. ನೀವೀಗ ಜೀವಿಸಿದ್ದಂತೆಯೇ ತಂದೆಯವರಾಗಿದ್ದೀರಿ. ತಂದೆಯು
ತಿಳಿಸುತ್ತಾರೆ - ನೀವು ಗೃಹಸ್ಥ ವ್ಯವಹಾರದಲ್ಲಿಯೇ ಇರಬೇಕು. ನೀವು ಗೃಹಸ್ಥವನ್ನು ಬಿಟ್ಟು ಬಿಡಿ
ಎಂದು ತಂದೆಯು ಯಾರಿಗೂ ಹೇಳುವುದಿಲ್ಲ. ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಕೇವಲ ಅಂತಿಮ ಜನ್ಮ
ಪವಿತ್ರರಾಗಬೇಕಾಗಿದೆ. ನೀವು ಮನೆ-ಮಠವನ್ನು ಬಿಟ್ಟು ಬಿಡಿ ಎಂದು ತಂದೆಯು ಎಂದಾದರೂ ಹೇಳಿದ್ದಾರೆಯೇ?
ನೀವು ಈಶ್ವರೀಯ ಸೇವಾರ್ಥವಾಗಿ ತಾವಾಗಿಯೇ ಬಿಟ್ಟು ಬಂದಿದ್ದೀರಿ. ಕೆಲವು ಮಕ್ಕಳು ಗೃಹಸ್ಥ
ವ್ಯವಹಾರದಲ್ಲಿದ್ದರೂ ಈಶ್ವರೀಯ ಸೇವೆ ಮಾಡುತ್ತಾರೆ. ಯಾರನ್ನೂ ಇಲ್ಲಿ ಬಿಡಿಸಲಾಗುವುದಿಲ್ಲ. ತಂದೆಯು
ಯಾರನ್ನೂ ಬಿಡಿಸುವುದಿಲ್ಲ. ನೀವೆಲ್ಲರೂ ತಾವಾಗಿಯೇ ಸರ್ವೀಸಿಗಾಗಿ ಬಂದು ಬಿಟ್ಟಿದ್ದೀರಿ. ತಂದೆಯು
ಯಾರನ್ನೂ ಬಿಡಿಸಲಿಲ್ಲ. ನಿಮ್ಮ ಲೌಕಿಕ ತಂದೆಯು ವಿವಾಹ ಮಾಡಿಕೊಳ್ಳಲು ಹೇಳುತ್ತಾರೆ, ನೀವು
ಮಾಡಿಕೊಳ್ಳುವುದಿಲ್ಲ ಏಕೆಂದರೆ ನಿಮಗೆ ತಿಳಿದಿದೆ – ಈಗ ಮೃತ್ಯುಲೋಕದ ಅಂತ್ಯವಾಗಿದೆ. ಮದುವೆಯಿಂದ
ನಷ್ಟವೇ ಆಗುವುದು ಮತ್ತೆ ನಾವು ಪಾವನರಾಗುವುದು ಹೇಗೆ? ಅಂದಾಗ ನಾವೇಕೆ ಭಾರತವನ್ನು ಸ್ವರ್ಗವನ್ನಾಗಿ
ಮಾಡುವ ಸೇವೆಯಲ್ಲಿ ತೊಡಗಬಾರದು! ರಾಮ ರಾಜ್ಯವಾಗಲಿ ಎಂದು ತಂದೆಯು ಬಯಸುತ್ತಾರೆ. ಹೇ ಪತಿತ-ಪಾವನ
ಸೀತಾರಾಂ. ಹೇ ರಾಮನೇ ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡಿ ಎಂದು ಕರೆಯುತ್ತಾರಲ್ಲವೆ ಆದರೆ
ಏನನ್ನೂ ತಿಳಿದುಕೊಂಡಿಲ್ಲ. ಈ ಸಮಯದ ಸುಖವು ಕಾಗವಿಷ್ಟ ಸಮಾನವಾಗಿದೆ ಎಂದು ಸನ್ಯಾಸಿಗಳೂ ಸಹ
ಹೇಳುತ್ತಾರೆ. ಅದು ನಿಜವಾಗಿದೆ. ಇಲ್ಲಿ ಸುಖವಂತೂ ಇಲ್ಲವೇ ಇಲ್ಲ. ಹೇಳುತ್ತಿರುತ್ತಾರೆ ಆದರೆ ಯಾರ
ಬುದ್ಧಿಯಲ್ಲಿಯೂ ಇಲ್ಲ. ತಂದೆಯು ದುಃಖಕ್ಕಾಗಿ ಈ ಸೃಷ್ಟಿಯನ್ನು ರಚಿಸುವುದಿಲ್ಲ. ತಂದೆಯು
ತಿಳಿಸುತ್ತಾರೆ – ಮಕ್ಕಳೇ, ನೀವು ಮರೆತು ಹೋಗಿದ್ದೀರಾ, ಸ್ವರ್ಗದಲ್ಲಿ ದುಃಖದ ಹೆಸರು-ಗುರುತೂ
ಇರುವುದಿಲ್ಲ. ಅಲ್ಲಿ ಕಂಸ ಮೊದಲಾದವರು ಎಲ್ಲಿಂದ ಬರುವರು!
ಈಗ ಬೇಹದ್ದಿನ ತಂದೆಯು ಏನನ್ನು ತಿಳಿಸುತ್ತಾರೆಯೋ ಅವರ ಮತದಂತೆ ನಡೆಯಬೇಕಾಗಿದೆ. ತನ್ನ ಮನಮತದಂತೆ
ನಡೆಯುವುದರಿಂದ ನಷ್ಟ ಮಾಡಿಕೊಳ್ಳುತ್ತೀರಿ. ಆಶ್ಚರ್ಯವೆನಿಸುವಂತೆ ಜ್ಞಾನವನ್ನು ಕೇಳಿ-ಹೇಳಿ
ನಡೆಯುತ್ತಾ ಮತ್ತೆ ವಿರೋಧಿಗಳಾಗಿ ಹೋಗಿ ಸೇವಾಭಂಗ ಮಾಡುತ್ತಾರೆ. ಅಂತಹವರದು ಏನಾಗುವುದು?
ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳುವ ಬದಲು ಕವಡೆಯಂತೆ ಮಾಡಿಕೊಳ್ಳುತ್ತಾರೆ. ಅಂತಿಮದಲ್ಲಿ ನಿಮಗೆ
ತಮ್ಮದೆಲ್ಲವೂ ಸಾಕ್ಷಾತ್ಕಾರವಾಗುವುದು – ಇಂತಹ ಚಲನೆಯ ಕಾರಣ ಈ ಪದವಿಯನ್ನು ಪಡೆದೆವು ಎಂದು.
ಇಲ್ಲಂತೂ ನೀವು ಯಾವುದೇ ಪಾಪ ಮಾಡಬಾರದು ಏಕೆಂದರೆ ನೀವು ಪುಣ್ಯಾತ್ಮರಾಗುತ್ತಿದ್ದೀರಿ. ಪಾಪ
ಮಾಡಿದರೆ ನೂರರಷ್ಟು ಶಿಕ್ಷೆಯಾಗಿ ಬಿಡುವುದು. ಭಲೆ ಸ್ವರ್ಗದಲ್ಲಿ ಬರುತ್ತೀರಿ ಆದರೆ ಬಹಳ ಕಡಿಮೆ
ಪದವಿ. ಇಲ್ಲಿ ನೀವು ರಾಜಯೋಗವನ್ನು ಕಲಿಯಲು ಬಂದಿದ್ದೀರಿ ಮತ್ತೆ ಪ್ರಜೆಗಳಾಗಿ ಬಿಡುತ್ತಾರೆ.
ಪದವಿಗಳಲ್ಲಿ ಬಹಳ ಅಂತರವಿದೆಯಲ್ಲವೆ. ಇದನ್ನೂ ತಿಳಿಸಿದ್ದಾರೆ – ಯಜ್ಞದಲ್ಲಿ ಏನಾದರೂ ನೀಡಿ ಮತ್ತೆ
ಅದನ್ನು ಹಿಂತೆಗೆದುಕೊಂಡರೆ ಚಂಡಾಲರ ಜನ್ಮ ಸಿಗುತ್ತದೆ. ಕೆಲವು ಮಕ್ಕಳು ಇಂತಹ ಚಲನೆಯಲ್ಲಿ
ನಡೆಯುತ್ತಾರೆ ಅವರ ಪದವಿಯೇ ಕಡಿಮೆಯಾಗಿ ಬಿಡುತ್ತದೆ.
ತಂದೆಯು ತಿಳಿಸುತ್ತಾರೆ – ಮಕ್ಕಳೇ, ರಾಜ-ರಾಣಿಯ ಬದಲು ಪ್ರಜೆಗಳಲ್ಲಿಯೂ ಕಡಿಮೆ ಪದವಿ ಸಿಗುವವಂತಹ
ಯಾವುದೇ ಕರ್ಮ ಮಾಡಬೇಡಿ. ಯಜ್ಞದಲ್ಲಿ ಸ್ವಾಹಾ ಆಗಿ ಮತ್ತೆ ಬಿಟ್ಟು ಹೋದರೆ ಅಂತಹವರು ಏನಾಗುವರು?
ಇದನ್ನೂ ಸಹ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಯಾವುದೇ ವಿಕರ್ಮ ಮಾಡಬೇಡಿ. ಇಲ್ಲದಿದ್ದರೆ ನೂರು
ಪಟ್ಟು ಶಿಕ್ಷೆ ಸಿಗುವುದು ಅಂದಮೇಲೆ ಏಕೆ ನಷ್ಟ ಮಾಡಿಕೊಳ್ಳಬೇಕು. ಇಲ್ಲಿರುವವರಿಗಿಂತಲೂ ಯಾರು
ಗೃಹಸ್ಥದಲ್ಲಿದ್ದು ಸೇವೆ ಮಾಡುವರೋ ಅವರು ಬಹಳ ಉನ್ನತ ಪದವಿಯನ್ನು ಪಡೆಯುತ್ತಾರೆ. ಹೀಗೆ ಅನೇಕರು
ಬಡವರಿದ್ದಾರೆ, ಎಂಟಾಣೆ ಅಥವಾ ಒಂದು ರೂಪಾಯಿಯನ್ನು ಕಳುಹಿಸುತ್ತಾರೆ ಮತ್ತೆ ಯಾರು ಇಲ್ಲಿ ಭಲೆ
ಸಾವಿರಾರು ರೂಪಾಯಿಗಳನ್ನು ಕೊಟ್ಟರೂ ಸಹ ಬಡವರದು ಶ್ರೇಷ್ಠ ಪದವಿಯಾಗಿ ಬಿಡುತ್ತದೆ ಏಕೆಂದರೆ ಅವರು
ಯಾವುದೇ ಪಾಪಕರ್ಮ ಮಾಡುವುದಿಲ್ಲ. ಪಾಪ ಮಾಡುವುದರಿಂದ ನೂರುಪಟ್ಟು ಶಿಕ್ಷೆಯಾಗುವುದು. ನೀವು
ಪುಣ್ಯಾತ್ಮರಾಗಿ ಎಲ್ಲರಿಗೆ ಸುಖ ಕೊಡಬೇಕಾಗಿದೆ. ದುಃಖ ಕೊಟ್ಟರೆ ಕೊನೆಯಲ್ಲಿ ಟ್ರಿಬ್ಯುನಲ್
ಕುಳಿತುಕೊಳ್ಳುತ್ತದೆ. ನೀವು ಹೀಗ್ಹೀಗೆ ಮಾಡಿದಿರಿ, ಈಗ ಶಿಕ್ಷೆಯನ್ನನುಭವಿಸಿ ಎಂದು
ಸಾಕ್ಷಾತ್ಕಾರವಾಗುತ್ತದೆ, ಪದವಿಯೂ ಭ್ರಷ್ಟವಾಗುತ್ತದೆ. ಕೇಳಿಸಿಕೊಳ್ಳುತ್ತಲೂ ಇರುತ್ತಾರೆ ಆದರೂ
ಸಹ ಕೆಲವು ಮಕ್ಕಳು ಮತ್ತೆ ಉಲ್ಟಾ ಚಲನೆಯಲ್ಲಿ ನಡೆಯುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ –
ಯಾವಾಗಲೂ ಕ್ಷೀರ ಖಂಡವಾಗಿ ಇರಿ. ಒಂದುವೇಳೆ ಉಪ್ಪು ನೀರಾಗಿ ವರ್ತಿಸುತ್ತೀರಿ ಎಂದರೆ ಬಹಳ ಸೇವಾಭಂಗ
ಮಾಡುತ್ತೀರಿ. ಯಾರದೇ ನಾಮ-ರೂಪದಲ್ಲಿ ಸಿಕ್ಕಿ ಹಾಕಿಕೊಂಡರೆ ಇದೂ ಸಹ ಬಹಳ ಪಾಪವಾಗಿ ಬಿಡುತ್ತದೆ.
ಮಾಯೆಯು ಇಲಿ ಇದ್ದಂತೆ. ಅದು ಗಾಳಿಯನ್ನೂ ಊದುತ್ತದೆ, ಕಚ್ಚುತ್ತಲೂ ಇರುತ್ತದೆ, ರಕ್ತ ಹೊರ ಬಂದರೂ
ಸಹ ಗೊತ್ತಾಗುವುದೇ ಇಲ್ಲ. ಮಾಯೆಯೂ ಸಹ ರಕ್ತವನ್ನು ತೆಗೆದು ಬಿಡುತ್ತದೆ. ಇಂತಹ ಕರ್ಮಗಳನ್ನು
ಮಾಡಿಸಿ ಬಿಡುತ್ತದೆ ಅದು ಅರ್ಥವಾಗುವುದೇ ಇಲ್ಲ. ಪಂಚ ವಿಕಾರಗಳು ಒಮ್ಮೆಲೆ ತಲೆಯನ್ನೇ ತಿರುಗಿಸಿ
ಬಿಡುತ್ತದೆ. ತಂದೆಯು ಎಚ್ಚರಿಕೆಯನ್ನಂತೂ ಕೊಡುತ್ತಾರಲ್ಲವೆ. ಕೊನೆಯಲ್ಲಿ ನ್ಯಾಯ ತೀರ್ಮಾನವಾಗುವಾಗ
ನಮಗೆ ಸಾವಧಾನ ನೀಡಲಿಲ್ಲ ಎಂದು ಹೇಳುವಂತಾಗಬಾರದು. ನಿಮಗೆ ತಿಳಿದಿದೆ – ಈಶ್ವರನೇ ಓದಿಸುತ್ತಾರೆ,
ಎಷ್ಟು ನಿರಹಂಕಾರಿಯಾಗಿದ್ದಾರೆ. ಮಕ್ಕಳೇ, ನಾನು ವಿಧೇಯ ಸೇವಕನಾಗಿದ್ದೇನೆಂದು ಹೇಳುತ್ತಾರೆ.
ಕೆಲಕೆಲವು ಮಕ್ಕಳಲ್ಲಿ ಎಷ್ಟೊಂದು ಅಹಂಕಾರವಿರುತ್ತದೆ. ತಂದೆಯ ಮಕ್ಕಳಾಗಿಯೂ ಇಂತಿಂತಹ ಕರ್ಮಗಳನ್ನು
ಮಾಡುತ್ತಾರೆ ಅದರ ಮಾತೇ ಕೇಳಬೇಡಿ. ಇದಕ್ಕಿಂತಲೂ ಯಾರು ಗೃಹಸ್ಥ ವ್ಯವಹಾರದಲ್ಲಿ ಇರುವರೋ ಅವರು ಬಹಳ
ಮುಂದೆ ಹೊರಟು ಹೋಗುತ್ತಾರೆ. ದೇಹಾಭಿಮಾನವು ಬರುತ್ತಿದ್ದಂತೆಯೇ ಮಾಯೆಯು ಬಹಳ ಚೆನ್ನಾಗಿ ಪೆಟ್ಟು
ಕೊಡುತ್ತದೆ. ದೇಹಾಭಿಮಾನವನ್ನು ಕಳೆಯುವುದು ಬಹಳ ದೊಡ್ಡ ಗುರಿಯಾಗಿದೆ. ದೇಹಾಭಿಮಾನವು ಬಂದಿತೆಂದರೆ
ಪೆಟ್ಟು ಬಿದ್ದಿತು ಅಂದಮೇಲೆ ಪದವಿ ಭ್ರಷ್ಟವಾಗಲು ದೇಹಾಭಿಮಾನದಲ್ಲಿ ಬರುವುದಾದರೂ ಏಕೆ?
ಸತ್ಯಯುಗದಲ್ಲಿ ಹೋಗಿ ಕಸ ಗುಡಿಸುವಂತಾಗಬಾರದು. ಈಗ ಒಂದುವೇಳೆ ತಂದೆಯೊಂದಿಗೆ ಯಾರಾದರೂ ಕೇಳಿದರೆ
ತಂದೆಯು ಸ್ಪಷ್ಟವಾಗಿ ತಿಳಿಸಿ ಬಿಡುತ್ತಾರೆ. ನಾನು ಎಷ್ಟು ಸೇವೆ ಮಾಡುತ್ತೇನೆ, ಎಷ್ಟು ಮಂದಿಗೆ
ಸುಖ ನೀಡಿದ್ದೇನೆಂದು ಪ್ರತಿಯೊಬ್ಬರೂ ತಮ್ಮ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಮಮ್ಮಾ-ಬಾಬಾ
ಎಲ್ಲರಿಗೆ ಸುಖ ಕೊಡುತ್ತಾರೆ. ಎಷ್ಟೊಂದು ಖುಷಿ ಪಡುತ್ತಾರೆ! ತಂದೆಯು ಬಾಂಬೆಯಲ್ಲಿ ಎಷ್ಟೊಂದು
ಜ್ಞಾನದ ನರ್ತನ ಮಾಡುತ್ತಿದ್ದರು. ಬಹಳ ಮಂದಿ ಚಾತ್ರಕರಿದ್ದರಲ್ಲವೆ. ತಂದೆಯು ತಿಳಿಸುತ್ತಾರೆ -
ಬಹಳ ಚಾತ್ರಕರ ಮುಂದೆ ಜ್ಞಾನದ ನರ್ತನ ಮಾಡುತ್ತೇನೆ ಆಗ ಒಳ್ಳೊಳ್ಳೆಯ ಮಾತುಗಳು ಹೊರಬರುತ್ತವೆ.
ಚಾತ್ರಕರು ಸೆಳೆಯುತ್ತಾರೆ. ನೀವೂ ಸಹ ಆ ರೀತಿಯಾಗಬೇಕು. ಆಗಲೇ ಫಾಲೋ ಮಾಡುವರು. ಶ್ರೀಮತದಂತೆ
ನಡೆಯಬೇಕಾಗಿದೆ, ತನ್ನ ಮತದಂತೆ ನಡೆದು ಕೆಟ್ಟ ಹೆಸರು ತಂದರೆ ಬಹಳ ನಷ್ಟವುಂಟಾಗುವುದು. ಈಗ ತಂದೆಯು
ನಿಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತಾರೆ. ಭಾರತವು ಸ್ವರ್ಗವಾಗಿತ್ತಲ್ಲವೆ. ಈಗ ಈ ರೀತಿ
ಯಾರಾದರೂ ತಿಳಿದುಕೊಳ್ಳುವರೇ? ಭಾರತದಂತಹ ಪಾವನ ದೇಶವು ಮತ್ತ್ಯಾವುದೂ ಇಲ್ಲ. ಈ ಮಾತನ್ನೂ
ಹೇಳುತ್ತಾರೆ ಆದರೆ ನಾವು ಭಾರತವಾಸಿಗಳೇ ಸ್ವರ್ಗವಾಸಿಗಳಾಗಿದ್ದೆವು, ಅಲ್ಲಿ ಅಪಾರ
ಸುಖವಿತ್ತೆಂಬುದನ್ನು ತಿಳಿದುಕೊಳ್ಳುವುದಿಲ್ಲ. ಭಗವಂತನು ಬಂದು ಕೊಳಕಾದ ಬಟ್ಟೆಯನ್ನು ಒಗೆಯುತ್ತಾರೆ
ಎಂದು ಗುರುನಾನಕರು ಭಗವಂತನ ಮಹಿಮೆಯನ್ನು ಹಾಡಿದ್ದಾರೆ. ಏಕ್ ಓಂಕಾರ್… ಎಚಿದು ಅವರದೇ ಮಹಿಮೆಯಿದೆ.
ಶಿವಲಿಂಗದ ಬದಲು ಅಕಾಲ ಸಿಂಹಾಸನ ಹೆಸರನ್ನಿಟ್ಟು ಬಿಟ್ಟಿದ್ದಾರೆ. ಈಗ ತಂದೆಯು ನಿಮಗೆ ಇಡೀ
ಸೃಷ್ಟಿಯ ರಹಸ್ಯವನ್ನು ತಿಳಿಸುತ್ತಾರೆ – ಮಕ್ಕಳೇ, ಒಂದು ಪಾಪವನ್ನೂ ಮಾಡಬಾರದು. ಇಲ್ಲದಿದ್ದರೆ
ನೂರರಷ್ಟು ಶಿಕ್ಷೆಯಾಗುವುದು. ನನ್ನ ನಿಂದನೆ ಮಾಡಿಸಿದರೆ ಪದವಿಯು ಭ್ರಷ್ಟವಾಗಿ ಬಿಡುವುದು. ಬಹಳ
ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ತನ್ನ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳಿ ಇಲ್ಲದಿದ್ದರೆ ಬಹಳ
ಪಶ್ಚಾತ್ತಾಪ ಪಡುತ್ತೀರಿ. ಏನೆಲ್ಲಾ ವಿರುದ್ಧವಾಗಿ ಮಾಡಿದ್ದೀರೋ ಅದು ಒಳಗೆ ತಿನ್ನುತ್ತಿರುತ್ತದೆ
– ಕಲ್ಪ-ಕಲ್ಪವೂ ನಾವು ಇದೇ ರೀತಿ ಮಾಡುತ್ತೇವೆಯೇ? ಯಾವುದರಿಂದ ನೀಚ ಪದವಿಯನ್ನು ಪಡೆಯುತ್ತೇವೆ
ಎಂದು. ತಂದೆಯು ತಿಳಿಸುತ್ತಾರೆ – ಮಾತಾಪಿತರನ್ನು ಅನುಸರಿಸಬೇಕೆಂದರೆ ಸತ್ಯತೆಯಿಂದ ಸೇವೆ ಮಾಡಿ,
ಮಾಯೆಯಂತೂ ಒಂದಲ್ಲ ಒಂದು ಕಡೆಯಿಂದ ನುಸುಳಿ ಬರುತ್ತದೆ. ಸೇವಾಕೇಂದ್ರಗಳ ಸಂಚಾಲಕರು ಬಹಳ
ನಿರಹಂಕಾರಿಯಾಗಿರಬೇಕಾಗಿದೆ. ತಂದೆಯು ನೋಡಿ, ಎಷ್ಟು ನಿರಹಂಕಾರಿಯಾಗಿದ್ದಾರೆ. ಕೆಲವು ಮಕ್ಕಳು
ಅನ್ಯರಿಂದ ಸೇವೆ ತೆಗೆದುಕೊಳ್ಳುತ್ತಾರೆ. ತಂದೆಯು ಎಷ್ಟೊಂದು ನಿರಹಂಕಾರಿಯಾಗಿದ್ದಾರೆ. ಎಂದೂ ಯಾರ
ಮೇಲೂ ಕೋಪಿಸಿಕೊಳ್ಳುವುದಿಲ್ಲ. ಮಕ್ಕಳು ಒಂದುವೇಳೆ ಆಜ್ಞಾಕಾರಿಗಳಾಗಿದ್ದರೆ ತಂದೆಯು ಅವರಿಗೆ
ತಿಳಿಸುತ್ತಾರೆ. ನೀವು ಏನು ಮಾಡುತ್ತೀರಿ ಎಂಬುದನ್ನು ಬೇಹದ್ದಿನ ತಂದೆಯೇ ತಿಳಿದುಕೊಂಡಿದ್ದಾರೆ.
ಎಲ್ಲಾ ಮಕ್ಕಳು ಒಂದೇ ಸಮನಾಗಿ ಸುಪುತ್ರರಾಗಿರುವುದಿಲ್ಲ, ಕುಪುತ್ರರೂ ಇರುತ್ತಾರೆ. ತಂದೆಯು
ತಿಳುವಳಿಕೆ ನೀಡುತ್ತಾರೆ. ಅನೇಕ ಮಕ್ಕಳಿದ್ದಾರೆ, ಇವರು ವೃದ್ಧಿಯಾಗುತ್ತಾ ಲಕ್ಷಾಂತರ ಅಂದಾಜಿನಲ್ಲಿ
ಮಕ್ಕಳು ವೃದ್ಧಿಯಾಗುತ್ತಾರೆ. ಆದ್ದರಿಂದ ತಂದೆಯು ಮಕ್ಕಳಿಗೆ ಎಚ್ಚರಿಕೆ ನೀಡುತ್ತಾರೆ – ಮಕ್ಕಳೇ,
ಯಾವುದೇ ತಪ್ಪು ಮಾಡಬೇಡಿ. ಇಲ್ಲಿ ಪತಿತರಿಂದ ಪಾವನರಾಗಲು ಬಂದಿದ್ದೀರಿ ಅಂದಮೇಲೆ ಯಾವುದೇ ಪತಿತ
ಕೆಲಸವನ್ನು ಮಾಡಬೇಡಿ. ನಾಮ-ರೂಪದಲ್ಲಿ ಸಿಲುಕಬೇಡಿ. ದೇಹಾಭಿಮಾನದಲ್ಲಿ ಬರಬೇಡಿ.
ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡುತ್ತಾ ಇರಿ. ಶ್ರೀಮತದಂತೆ ನಡೆಯುತ್ತಾ ಇರಿ. ಮಾಯೆಯು
ಬಹಳ ಪ್ರಬಲವಾಗಿದೆ, ತಂದೆಯು ಎಲ್ಲವನ್ನೂ ತಿಳಿಸಿ ಬಿಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರ ತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆ ಸಮಾನ
ನಿರಹಂಕಾರಿಗಳಾಗಬೇಕಾಗಿದೆ. ಯಾರಿಂದಲೂ ಸೇವೆ ತೆಗೆದುಕೊಳ್ಳಬಾರದು. ಯಾರಿಗೂ ದುಃಖವನ್ನು
ಕೊಡಬಾರದಾಗಿದೆ. ಶಿಕ್ಷೆಯನ್ನು ಅನುಭವಿಸುವಂತಹ ಯಾವುದೇ ಪಾಪಕರ್ಮವಾಗಬಾರದು. ಪರಸ್ಪರ ಕ್ಷೀರ
ಖಂಡವಾಗಿರಬೇಕಾಗಿದೆ.
2. ಒಬ್ಬ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ, ತನ್ನ ಮತದಂತೆ ಅಲ್ಲ.
ವರದಾನ:
ದಿವ್ಯ ಬುದ್ಧಿಯ
ವಿಮಾನದ ಮುಖಾಂತರ ವಿಶ್ವವನ್ನು ವಿಚಾರಿಸಿಕೊಳ್ಳುವಂತಹ ಮಾಸ್ಟರ್ ರಚೈತ ಭವ.
ಯಾರ ಬುದ್ಧಿ ಇಷ್ಟು
ದಿವ್ಯವಿರುತ್ತೆ, ದಿವ್ಯತೆಯ ಆಧಾರದಿಂದ ಅಷ್ಟು ವೇಗ ತೀವ್ರವಾಗಿರುತ್ತೆ. ಆದ್ದರಿಂದ ದಿವ್ಯ
ಬುದ್ಧಿಯ ವಿಮಾನದ ಮುಖಾಂತರ ಒಂದು ಸೆಕೆಂಡ್ನಲ್ಲಿ ಸ್ಪಷ್ಟ ರೂಪದಿಂದ ವಿಶ್ವ ಪರಿಕ್ರಮ ಮಾಡುತ್ತಾ
ಸರ್ವ ಆತ್ಮಗಳನ್ನು ವಿಚಾರಿಸಿಕೊಳ್ಳಿ. ಅವರನ್ನು ಸಂತುಷ್ಟ ಮಾಡಿ. ಎಷ್ಟೆಷ್ಟು ನೀವು
ಚಕ್ರವರ್ತಿಯಾಗಿ ಪರಿಕ್ರಮ ಹಾಕುವಿರಿ ಅಷ್ಟು ನಾಲ್ಕಾರು ಕಡೆಯಿಂದ ಧ್ವನಿ ಕೇಳಿ ಬರುತ್ತದೆ ನಾವು
ಜ್ಯೋತಿ ನೋಡಿದೆವು, ಓಡಾಡುತ್ತಿರುವ ಫರಿಸ್ಥಾವನ್ನು ನೋಡಿದೆವು ಎಂದು, ಇದಕ್ಕಾಗಿ ಸ್ವಯಂ
ಕಲ್ಯಾಣಿಯ ಜೊತೆ ವಿಶ್ವ ಕಲ್ಯಾಣಿ ಮಾಸ್ಟರ್ ರಚೈತ ಆಗಿ.
ಸ್ಲೋಗನ್:
ಮಾಸ್ಟರ್ ದಾತ ಆಗಿ ಅನೇಕ
ಆತ್ಮಗಳಿಗೆ ಪ್ರಾಪ್ತಿಗಳ ಅನುಭವ ಮಾಡಿಸುವುದೇ ಬ್ರಹ್ಮಾ ತಂದೆಯ ಸಮಾನ ಆಗುವುದಾಗಿದೆ.
ಮಾತೇಶ್ವರೀಜಿಯವರ
ಅಮೂಲ್ಯ ಮಹಾವಾಕ್ಯ:-
1) ಈಶ್ವರ ಸರ್ವವ್ಯಾಪಿ ಅಲ್ಲ, ಇದರ ಪ್ರಮಾಣ ಏನು? ಶಿರೋಮಣಿ ಗೀತೆಯಲ್ಲಿ ಭಗವಾನ್ ಉವಾಚ ಯಾವುದಿದೆ
ಮಕ್ಕಳೇ, ಎಲ್ಲಿ ಜಯ ಇದೆ ಅಲ್ಲಿ ನಾನು ಇರುವೆ, ಇದೂ ಸಹ ಪರಮಾತ್ಮನ ಮಹಾವಾಕ್ಯವಾಗಿದೆ.
ಬೆಟ್ಟಗಳಲ್ಲಿ ಏನು ಹಿಮಾಲಯ ಬೆಟ್ಟ ಇದೆ ಅದರಲ್ಲಿದ್ದೇನೆ ಮತ್ತು ಸರ್ಪಗಳಲ್ಲಿ ಕಪ್ಪು
ನಾಗನಲ್ಲಿದ್ದೇನೆ ಆದ್ದರಿಂದ ಪರ್ವತಗಳಲ್ಲಿ ಉನ್ನತವಾದ ಪರ್ವತ ಕೈಲಾಸ ಪರ್ವತವನ್ನು ತೋರಿಸುತ್ತಾರೆ
ಮತ್ತು ಸರ್ಪಗಳಲ್ಲಿ ಕರಿನಾಗ, ಆದ್ದರಿಂದ ಇದರಲ್ಲಿ ಸಿದ್ದವಾಗುತ್ತದೆ ಪರಮಾತ್ಮ ಒಂದುವೇಳೆ ಸರ್ವ
ಸರ್ಪಗಳಲ್ಲಿ ಕೇವಲ ಕರಿನಾಗನಲ್ಲಿ ಮಾತ್ರ ಇದ್ದಾರೆ, ಅಂದಾಗ ಸರ್ವ ಸರ್ಪಗಳಲ್ಲಿ ಅವರ ವಾಸ
ಇಲ್ಲವೆಂದಾಯಿತಲ್ಲವೆ. ಒಂದುವೇಳೆ ಪರಮಾತ್ಮ ಉನ್ನತದಲ್ಲಿ ಉನ್ನತವಾದ ಪರ್ವತದಲ್ಲಿರುವುದಾದರೆ ಕೆಳಗೆ
ಸಣ್ಣ ಸಣ್ಣ ಬೆಟ್ಟಗಳಲ್ಲಿಲ್ಲ ಮತ್ತು ನಂತರ ಹೇಳುತ್ತಾರೆ ಎಲ್ಲಿ ಜಯವಿದೆ ಅಲ್ಲಿ ನನ್ನ ಜನ್ಮ ಅಂದರೆ
ಸೋಲಿನಲ್ಲಿ ನಾನಿಲ್ಲ. ಈಗ ಇದೇ ಮಾತು ಸಿದ್ಧ ಮಾಡುತ್ತೆ ಪರಮಾತ್ಮ ಸರ್ವ ವ್ಯಾಪಿ ಅಲ್ಲ. ಒಂದು ಕಡೆ
ಹೀಗೂ ಹೇಳುತ್ತಾರೆ ಮತ್ತು ಇನ್ನೊಂದು ಕಡೆ ಹೀಗೂ ಹೇಳುತ್ತಾರೆ ಪರಮಾತ್ಮ ಅನೇಕ ರೂಪದಲ್ಲಿ
ಬರುತ್ತಾರೆ, ಹೇಗೆ ಪರಮಾತ್ಮನಿಗೆ 24 ಅವತಾರಗಳಲ್ಲಿ ತೋರಿಸುತ್ತಾರೆ, ಹೆಳುತ್ತಾರೆ ಆಮೆ, ಮೀನು
ಇತ್ಯಾದಿ ರೂಪ ಪರಮಾತ್ಮನದು ಎಂದು. ಇದೆಲ್ಲಾ ಅವರ ಮಿಥ್ಯ ಜ್ಞಾನವಾಗಿದೆ, ಹಾಗೆಯೇ ಪರಮಾತ್ಮನನ್ನು
ಸರ್ವವ್ಯಾಪಿ ಎಂದು ತಿಳಿದು ಕುಳಿತಿದ್ದಾರೆ ಆದರೆ ಈ ಸಮಯ ಕಲಿಯುಗದಲ್ಲಿ ಸರ್ವವ್ಯಾಪಿ ಮಾಯೆಯೆ
ವ್ಯಾಪಕವಾಗಿದೆ ಅಂದಮೇಲೆ ಮತ್ತೆ ಪರಮಾತ್ಮ ಹೇಗೆ ವ್ಯಾಪಕ ಆಗಲು ಸಾಧ್ಯ? ಗೀತೆಯಲ್ಲಿ ಹೇಳಲಾಗಿದೆ
ನಾನು ಮಾಯೆಯಲ್ಲಿ ವ್ಯಾಪಕನಾಗಿಲ್ಲ, ಇದರಿಂದ ಪರಮಾತ್ಮ ಸರ್ವ ವ್ಯಾಪಕನಲ್ಲ ಎಂದು ಸಿದ್ಧವಾಗುತ್ತದೆ.
2) ನಿರಾಕಾರಿ ಪ್ರಪಂಚ-ಆತ್ಮ ಮತ್ತು ಪರಮಾತ್ಮರು ಇರುವಂತಹ ಸ್ಥಾನ:
ಈಗ ಇದಂತೂ ನಾವು ತಿಳಿದುಕೊಂಡಿದ್ದೇವೆ ನಾವು ನಿರಾಕಾರಿ ಪ್ರಪಂಚ ಎಂದು ಹೇಳುತ್ತೇವೆ ಅಂದರೆ
ನಿರಾಕಾರದ ಅರ್ಥ ಯಾವುದೇ ಆಕಾರವಿಲ್ಲ ಎಂದಲ್ಲ, ಹೇಗೆ ನಾವು ನಿರಾಕಾರಿ ಪ್ರಪಂಚ ಅಂದಾಗ ಇದರ ಅರ್ಥ
ಆಗಿದೆ ಖಂಡಿತ ಬೇರೆ ಒಂದು ಪ್ರಪಂಚವಿದೆ ಎಂದು, ಆದರೆ ಅದು ಸ್ಥೂಲ ಸೃಷ್ಟಿಯ ತರಹ ಆಕಾರವಿಲ್ಲ, ಹೇಗೆ
ಪರಮಾತ್ಮ ನಿರಾಕಾರನಾಗಿದ್ದಾರೆ ಆದರೆ ಅವರಿಗೆ ತಮ್ಮ ಸೂಕ್ಷ್ಮ ರೂಪ ಅವಶ್ಯವಾಗಿದೆ. ಹಾಗೆ ನಾವು
ಆತ್ಮ ಮತ್ತು ಪರಮಾತ್ಮರ ಧಾಮ (ವಾಸ ಸ್ಥಾನ) ನಿರಾಕಾರಿ ಪ್ರಪಂಚವಾಗಿದೆ. ಆದ್ದರಿಂದ ಯಾವಾಗ ನಾವು
ಪ್ರಪಂಚ ಎನ್ನುವ ಅಕ್ಷರ ಉಚ್ಚರಿಸುತ್ತೇವೆ, ಅಂದಾಗ ಇದರಿಂದ ಸಿದ್ದವಾಗುತ್ತದೆ ಅದು ಪ್ರಪಂಚವಾಗಿದೆ
ಮತ್ತು ಅಲ್ಲಿರುತ್ತಾರೆ ಅದಕ್ಕಾಗಿಯೇ ಪ್ರಪಂಚ ಎನ್ನುವ ಹೆಸರು ಆಗಿದೆ, ಈಗ ಪ್ರಪಂಚದ ಮನುಷ್ಯರು
ತಿಳಿಯುತ್ತಾರೆ ಪರಮಾತ್ಮನ ರೂಪವೂ ಸಹ ಅಖಂಡ ಜ್ಯೋತಿ ತತ್ವವಾಗಿದೆ, ಅದಾಗಿದೆ ಪರಮಾತ್ಮ ಇರುವಂತಹ
ಸ್ಥಾನ, ಯಾವುದನ್ನು ರಿಟೈರ್ಡ್ಹೋಂ (ನಿವಾಸ) ಎಂದು ಕರೆಯುತ್ತಾರೆ. ಆದ್ದರಿಂದ ನಾವು ಪರಮಾತ್ಮನ
ಮನೆಯನ್ನು ಪರಮಾತ್ಮ ಎಂದು ಹೇಳಲಾಗುವುದಿಲ್ಲ. ಮತ್ತು ಇನ್ನೊಂದಾಗಿದೆ ಆಕಾರಿ ಪ್ರಪಂಚ, ಎಲ್ಲಿ
ಬ್ರಹ್ಮಾ, ವಿಷ್ಣು, ಶಂಕರ ದೇವತೆಗಳು ಆಕಾರಿ ರೂಪದಲ್ಲಿರುತ್ತಾರೆ ಮತ್ತು ಇದಾಗಿದೆ ಸಾಕಾರಿ
ಪ್ರಪಂಚ, ಇದರಲ್ಲಿ ಎರಡು ಭಾಗಗಳಿವೆ – ಒಂದಾಗಿದೆ ನಿರ್ವಿಕಾರಿ ಸ್ವರ್ಗದ ಪ್ರಪಂಚ ಎಲ್ಲಿ
ಅರ್ಧಕಲ್ಪ ಸದಾ ಸುಖ ಇರುತ್ತದೆ, ಪವಿತ್ರತೆ ಮತ್ತು ಶಾಂತಿ ಇರುತ್ತದೆ. ಇನ್ನೊಂದಾಗಿದೆ ವಿಕಾರಿ
ಕಲಿಯುಗಿ ದುಃಖ ಮತ್ತು ಅಶಾಂತಿಯ ಪ್ರಪಂಚ. ಈಗ ಅದಕ್ಕೆ ಎರಡು ಪ್ರಪಂಚಗಳು ಎಂದು ಏಕೆ ಹೇಳಲಾಗುವುದು?
ಏಕೆಂದರೆ ಈ ಮನುಷ್ಯರು ಏನು ಹೇಳುತ್ತಾರೆ ಸ್ವರ್ಗ ಮತ್ತು ನರಕ ಎರಡೂ ಪರಮಾತ್ಮ ರಚಿಸಿರುವಂತಹ
ಪ್ರಪಂಚವಾಗಿದೆ ಎಂದು, ಇದರ ಬಗ್ಗೆ ಪರಮಾತ್ಮನ ಮಹಾವಾಕ್ಯ ಇದೆ ಮಕ್ಕಳೇ, ನಾನು ಯಾವುದೇ ದುಃಖದ
ಪ್ರಪಂಚವನ್ನು ಸೃಷ್ಟಿ ಮಾಡಲಿಲ್ಲ ನಾನು ಯಾವ ಪ್ರಪಂಚ ರಚಿಸಿದೆ ಅದು ಸುಖದ ಪ್ರಪಂಚವನ್ನು ರಚಿಸಿದೆ.
ಈಗ ದುಃಖ ಮತ್ತು ಅಶಾಂತಿಯ ಪ್ರಪಂಚವೇನಿದೆ ಅದು ಮನುಷ್ಯಾತ್ಮರು ತಮಗೆ ತಮ್ಮನ್ನು ಮತ್ತು
ಪರಮಾತ್ಮನಾದ ನನ್ನನ್ನು ಮರೆತಿರುವ ಕಾರಣ ಅವರ ಲೆಕ್ಕಾಚಾರವನ್ನು ಭೋಗಿಸುತ್ತಿದ್ದಾರೆ. ಉಳಿದಂತೆ
ಯಾವ ಸಮಯದಲ್ಲಿ ಸುಖ ಮತ್ತು ಪುಣ್ಯದ ಜಗತ್ತಿತ್ತು ಅಲ್ಲಿ ಸೃಷ್ಟಿ ನಡೆಯುತ್ತಿರಲಿಲ್ಲ ಎಂದಲ್ಲ.
ಅಲ್ಲಿ ದೇವತೆಗಳ ನಿವಾಸ ಸ್ಥಾನವಿತ್ತು ಎಂದು ಯಾವಾಗ ನಾವು ಹೇಳುತ್ತೇವೆ, ಅಂದಾಗ ಅಲ್ಲಿ ಎಲ್ಲಾ
ಪ್ರವೃತ್ತಿ ನಡೆಯುತ್ತಿತ್ತು ಆದರೆ ಇಷ್ಟಂತೂ ಖಂಡಿತಯಿತ್ತು ಅಲ್ಲಿ ವಿಕಾರದಿಂದ ಜನ್ಮ ಇರಲಿಲ್ಲ ಆ
ಕಾರಣ ಇಷ್ಟು ಕರ್ಮ ಬಂಧನ ಇರಲಿಲ್ಲ. ಆ ಪ್ರಪಂಚಕ್ಕೆ ಕರ್ಮ ಬಂಧನ ರಹಿತ ಸ್ವರ್ಗದ ಪ್ರಪಂಚ ಎಂದು
ಕರೆಯಲಾಗುತ್ತದೆ. ಅಂದಾಗ ಒಂದಾಗಿದೆ ನಿರಾಕಾರಿ ಪ್ರಪಂಚ, ಇನ್ನೊಂದಾಗಿದೆ ಆಕಾರಿ ಪ್ರಪಂಚ,
ಮೂರನೆಯದಾಗಿದೆ ಸಾಕಾರಿ ಪ್ರಪಂಚ. ಒಳ್ಳೆಯದು. ಓಂ ಶಾಂತಿ.