19.03.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ – ಈ ವಿದ್ಯೆಯು ಆದಾಯದ ಮೂಲವಾಗಿದೆ. ಇದರಿಂದ ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ, 21 ಜನ್ಮಗಳಿಗಾಗಿ ಸತ್ಯ ಸಂಪಾದನೆಯಾಗುತ್ತದೆ”

ಪ್ರಶ್ನೆ:
ತಂದೆಯು ಯಾವ ಮಧುರಾತಿ ಮಧುರ ಮಾತುಗಳನ್ನು ತಿಳಿಸುತ್ತಾರೆಯೋ ಅವು ಯಾವಾಗ ಧಾರಣೆಯಾಗುತ್ತವೆ?

ಉತ್ತರ:
ಯಾವಾಗ ಬುದ್ದಿಯ ಮೇಲೆ ಪರಮತ ಹಾಗೂ ಮನಮತದ ಪ್ರಭಾವ ಆಗುವುದಿಲ್ಲವೋ, ಯಾವ ಮಕ್ಕಳು ಹೇಳಿಕೆ, ಕೇಳಿಕೆ ಮಾತುಗಳಲ್ಲಿ ನಡೆಯುತ್ತಾರೆಯೋ ಅವರ ಬುದ್ಧಿಯಲ್ಲಿ ತಂದೆಯ ಮಧುರ ಮಾತುಗಳು ಧಾರಣೆಯಾಗಲು ಸಾಧ್ಯವಿಲ್ಲ. ಜ್ಞಾನದ ಮಾತುಗಳನ್ನು ಬಿಟ್ಟು ಬೇರೇನಾದರೂ ತಿಳಿಸುತ್ತಾರೆಂದರೆ ಅವರು ಶತ್ರುಗಳಿದ್ದಂತೆ. ಸುಳ್ಳು ಮಾತುಗಳನ್ನು ತಿಳಿಸುವವರು ಅನೇಕರಿದ್ದಾರೆ. ಆದ್ದರಿಂದ ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ, ಮನುಷ್ಯರಿಂದ ದೇವತೆಗಳಾಗಲು ಒಬ್ಬ ತಂದೆಯ ಶ್ರೀಮತದನುಸಾರವೇ ನಡೆಯಬೇಕಾಗಿದೆ.

ಗೀತೆ:
ನಮ್ಮ ತೀರ್ಥ ಸ್ಥಾನವು ಭಿನ್ನವಾಗಿದೆ.......

ಓಂ ಶಾಂತಿ.
ಈ ಗೀತೆಯಲ್ಲಿ ಹೇಗೆ ತಮ್ಮ ಮಹಿಮೆ ಮಾಡಿಕೊಳ್ಳುತ್ತಾರೆ. ವಾಸ್ತವದಲ್ಲಿ ತನ್ನ ಮಹಿಮೆ ಮಾಡಿಕೊಳ್ಳುವುದಿಲ್ಲ, ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಯಾವ ಭಾರತವಾಸಿಗಳು ಬಹಳ ಬುದ್ಧಿವಂತರಾಗಿದ್ದರೋ ಅವರೇ ಈಗ ಬುದ್ದಿಹೀನರಾಗಿದ್ದಾರೆ ಅಂದಮೇಲೆ ಈಗ ಬುದ್ದಿವಂತರು ಯಾರೆಂದು ಪ್ರಶ್ನೆ ಉದ್ಭವಿಸುತ್ತದೆ. ಇದನ್ನು ಎಲ್ಲಿಯೂ ಬರೆದಿಲ್ಲ, ನೀವು ಗುಪ್ತವಾಗಿದ್ದೀರಿ. ಎಷ್ಟೊಂದು ಅದ್ಭುತ ಮಾತುಗಳಾಗಿವೆ! ಒಂದಂತೂ ತಂದೆಯು ತಿಳಿಸುತ್ತಾರೆ - ನನ್ನ ಮೂಲಕವೇ ನನ್ನನ್ನು ಮಕ್ಕಳು ಅರಿತುಕೊಳ್ಳಬಹುದಾಗಿದೆ. ಮತ್ತೆ ನನ್ನ ಮೂಲಕ ಎಲ್ಲವನ್ನೂ ಅರಿತುಕೊಳ್ಳುತ್ತಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಯಾವ ಆಟವಿದೆಯೋ ಅದನ್ನೂ ತಿಳಿದುಕೊಳ್ಳುತ್ತಾರೆ. ಇದನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ ಮತ್ತು ಮುಖ್ಯವಾಗಿ ಒಂದು ತಪ್ಪನ್ನು ಮಾಡಿದ್ದಾರೆ, ನಿರಾಕಾರ ಪರಮಪಿತ ಪರಮಾತ್ಮ ಶಿವನ ಬದಲು ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಮೊದಲ ನಂಬರಿನ ಶಾಸ್ತ್ರ ಯಾವುದಕ್ಕೆ ಶ್ರೀ ಮತ್ಭಗವದ್ಗೀತೆ ಎಂದು ಹೇಳುವರೋ ಅದೇ ತಪ್ಪಾಗಿ ಬಿಟ್ಟಿದೆ. ಆದ್ದರಿಂದ ಮೊಟ್ಟ ಮೊದಲು ಸಿದ್ಧ ಮಾಡಬೇಕಾಗಿದೆ - ಭಗವಂತನು ಒಬ್ಬರೇ ಆಗಿದ್ದಾರೆ, ಅಂದಮೇಲೆ ಕೇಳಿರಿ - ಗೀತೆಯ ಭಗವಂತ ಯಾರು? ಭಾರತದ ಆದಿಸನಾತನ ದೇವಿ-ದೇವತಾಧರ್ಮವಾಗಿದೆ. ಒಂದುವೇಳೆ ಹೊಸಧರ್ಮವೆಂದು ಹೇಳುವುದಾದರೆ ಬ್ರಾಹ್ಮಣ ಧರ್ಮವೆಂದೇ ಹೇಳಬಹುದು. ಮೊದಲು ಶಿಖೆಗೆ ಸಮಾನ ಬ್ರಾಹ್ಮಣರಾಗಿದ್ದಾರೆ, ನಂತರ ದೇವತೆಗಳು. ಬ್ರಾಹ್ಮಣ ಧರ್ಮವು ಸರ್ವ ಶ್ರೇಷ್ಠವಾಗಿದೆ. ಯಾವ ಬ್ರಾಹ್ಮಣರನ್ನು ಬ್ರಹ್ಮಾರವರ ಮೂಲಕ ಪರಮಪಿತ ಪರಮಾತ್ಮನೇ ರಚಿಸುತ್ತಾರೆ ಮತ್ತೆ ಅದೇ ಬ್ರಾಹ್ಮಣರು ನಂತರ ದೇವತೆಗಳಾಗುತ್ತಾರೆ. ಮುಖ್ಯ ಮಾತೇನೆಂದರೆ ಭಗವಂತನು ಎಲ್ಲರ ತಂದೆಯಾಗಿದ್ದಾರೆ, ಹೊಸ ಪ್ರಪಂಚದ ರಚಯಿತನಾಗಿದ್ದಾರೆ. ಅಂದಮೇಲೆ ಅವಶ್ಯವಾಗಿ ಹೊಸ ಪ್ರಪಂಚವನ್ನೇ ರಚಿಸುತ್ತಾರಲ್ಲವೆ, ಹೊಸ ಪ್ರಪಂಚದಲ್ಲಿ ಹೊಸ ಭಾರತವಿರುತ್ತದೆ. ಭಾರತದಲ್ಲಿಯೇ ಅವತರಿಸಿದ್ದಾರೆ. ಭಾರತವನ್ನೇ ಬ್ರಹ್ಮಾರವರ ಮೂಲಕ ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ. ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಓದಿಸುತ್ತಾರೆ. ಮೊದಲು ನೀವು ಶೂದ್ರ ವರ್ಣದವರಾಗಿದ್ದಿರಿ, ನಂತರ ಬ್ರಾಹ್ಮಣ ವರ್ಣದಲ್ಲಿ, ಅನಂತರ ದೈವೀ ವರ್ಣದಲ್ಲಿ ಬಂದಿರಿ. ಕೊನೆಯಲ್ಲಿ ವೃದ್ಧಿಯಾಗುತ್ತಿರುತ್ತದೆ. ಒಂದು ಧರ್ಮದಿಂದ ಅನೇಕ ಧರ್ಮಗಳಾಗಿ ಬಿಡುತ್ತವೆ. ಎಲ್ಲಾ ಧರ್ಮಗಳ ರೆಂಬೆ-ಕೊಂಬೆಗಳು ಬಂದು ಬಿಡುತ್ತವೆ. ಪ್ರತಿಯೊಂದು ಧರ್ಮದಿಂದ ಅನೇಕ ಶಾಖೆಗಳು ಹೊರಡುತ್ತವೆ. ಮೂರು ಧರ್ಮಗಳು ಸ್ಥಾಪನೆಯಾಗುತ್ತವೆಯಲ್ಲವೆ. ಇದು ಮುಖ್ಯವಾಗಿದೆ. ಪ್ರತಿಯೊಂದು ಧರ್ಮದಿಂದ ತನ್ನ ತನ್ನದೆ ಶಾಖೆಗಳು ಹೊರಡುತ್ತವೆ. ಮುಖ್ಯ ತಳಪಾಯವು ಒಂದು ಆಗಿದೆ, ಮತ್ತೆ ಅದರಿಂದ ಮುಖ್ಯ ಮೂರು ಶಾಖೆಗಳವೆ. ಬುಡವು ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ ಯಾರು ಈಗ ರಾಜಯೋಗವನ್ನು ಕಲಿಯುತ್ತಿದ್ದೀರಿ. ದಿಲ್ವಾಡಾ ಮಂದಿರವು ಬಹಳ ಚೆನ್ನಾಗಿ ಮಾಡಲ್ಪಟ್ಟಿದೆ, ಅದರಲ್ಲಿ ಎಲ್ಲವನ್ನೂ ತಿಳಿಸಬೇಕಾಗಿದೆ. ಮಕ್ಕಳು ಇಲ್ಲಿ ಕುಳಿತಿದ್ದೀರಿ, ಕಲ್ಪದ ಮೊದಲೂ ಸಹ ನೀವು ರಾಜಯೋಗದ ತಪಸ್ಸು ಮಾಡಿದ್ದಿರಿ, ಹೇಗೆ ಕ್ರಿಸ್ತನ ನೆನಪಾರ್ಥವು ಕ್ರಿಶ್ಚಿಯನ್ ದೇಶದಲ್ಲಿದೆ ಹಾಗೆಯೇ ನೀವು ಮಕ್ಕಳೂ ಇಲ್ಲಿ ತಪಸ್ಸು ಮಾಡಿದ್ದೀರಿ, ಆದ್ದರಿಂದ ನಿಮ್ಮ ನೆನಪಾರ್ಥವೂ ಇಲ್ಲಿಯೇ ಇದೆ. ಬಹಳ ಸಹಜವಾಗಿದೆ ಆದರೆ ಯಾರೂ ತಿಳಿದುಕೊಂಡಿಲ್ಲ. ಇದೆಲ್ಲವೂ ಕಲ್ಪನೆಯಾಗಿದೆ, ಯಾರು ಹೇಗಾದರೂ ಕಲ್ಪನೆ ಮಾಡಿಕೊಳ್ಳಬಹುದೆಂದು ಸನ್ಯಾಸಿಗಳು ಹೇಳಿಬಿಡುತ್ತಾರೆ. ನಿಮಗೂ ಸಹ ಹೇಳುತ್ತಾರೆ - ನಿಮ್ಮ ಚಿತ್ರಗಳೆಲ್ಲವೂ ಕಲ್ಪನೆಯಿಂದ ಮಾಡಿಸಿದ್ದೀರಿ ಎಂದು. ಎಲ್ಲಿಯವರೆಗೆ ತಂದೆಯನ್ನು ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಕಲ್ಪನೆಯೆಂದೇ ತಿಳಿದುಕೊಳ್ಳುತ್ತಾರೆ. ಜ್ಞಾನಪೂರ್ಣನು ತಂದೆಯೇ ಅಲ್ಲವೆ ಆದ್ದರಿಂದ ಮುಖ್ಯವಾಗಿ ತಂದೆಯ ಪರಿಚಯ ಕೊಡಬೇಕಾಗಿದೆ. ಆ ತಂದೆಯು ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ಕಲ್ಪದ ಹಿಂದೆಯೂ ಕೊಟ್ಟಿದ್ದರು ನಂತರ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಯಿತು. ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಮತ್ತೆ ಸಂಗಮಯುಗದಲ್ಲಿ ತಂದೆಯು ಬಂದು ರಾಜಧಾನಿಯ ಸ್ಥಾಪನೆ ಮಾಡುತ್ತಾರೆ. ನೀವು ಮಕ್ಕಳು ತಂದೆಯ ಮೂಲಕ ಅರಿತುಕೊಂಡಿದ್ದೀರಿ. ಯಾವಾಗ ಚೆನ್ನಾಗಿ ತಿಳಿದುಕೊಂಡು ಬುದ್ಧಿಯಲ್ಲಿ ಕುಳಿತುಕೊಳ್ಳುವುದೋ ಆಗ ಖುಷಿಯೂ ಇರುವುದು. ಈ ವಿದ್ಯೆಯು ಬಹಳ ಆದಾಯದ ಮೂಲವಾಗಿದೆ. ವಿದ್ಯೆಯಿಂದಲೇ ಮನುಷ್ಯರು ವಕೀಲ ಇತ್ಯಾದಿಯಾಗುತ್ತಾರೆ ಆದರೆ ಈ ವಿದ್ಯೆಯು ಮನುಷ್ಯನಿಂದ ದೇವತೆಯಾಗುವುದಾಗಿದೆ. ಪ್ರಾಪ್ತಿಯು ಎಷ್ಟು ದೊಡ್ಡದಾಗಿದೆ. ಇಂತಹ ಪ್ರಾಪ್ತಿಯನ್ನು ಮತ್ತ್ಯಾರೂ ಮಾಡಿಸಲು ಸಾಧ್ಯವಿಲ್ಲ. ಮನುಷ್ಯರಿಂದ ದೇವತೆಯನ್ನಾಗಿ ಮಾಡಿದರು ಎಂದು ಗ್ರಂಥ ಸಾಹೇಬ್ನಲ್ಲಿ ಬರೆಯಲ್ಪಟ್ಟಿದೆ. ಆದರೆ ಮನುಷ್ಯರ ಬುದ್ಧಿಯು ಕೆಲಸ ಮಾಡುವುದಿಲ್ಲ. ಅವಶ್ಯವಾಗಿ ಆ ದೇವಿ-ದೇವತಾ ಧರ್ಮವು ಪ್ರಾಯಃಲೋಪವಾಗಿ ಬಿಟ್ಟಿದೆ. ಆದ್ದರಿಂದಲೇ ಮನುಷ್ಯನಿಂದ ದೇವತೆಯಾಗಬೇಕು ಎಂದು ಬರೆಯುತ್ತಾರೆ. ದೇವತೆಗಳು ಸತ್ಯಯುಗದಲ್ಲಿದ್ದರು ಅಂದಮೇಲೆ ಅವಶ್ಯವಾಗಿ ಭಗವಂತನು ಅವರನ್ನು ಸಂಗಮದಲ್ಲಿಯೇ ರಚಿಸಿರುವರು. ಹೇಗೆ ರಚಿಸಿದರು ಎಂಬುದನ್ನು ತಿಳಿದುಕೊಂಡಿಲ್ಲ. ಗುರುನಾನಕರೂ ಸಹ ಪರಮಾತ್ಮನ ಮಹಿಮೆಯನ್ನು ಹಾಡಿದ್ದಾರೆ. ಅವರ ತರಹ ಮಹಿಮೆಯನ್ನು ಮತ್ತ್ಯಾರೂ ಮಾಡಿಲ್ಲ ಆದ್ದರಿಂದ ಭಾರತದಲ್ಲಿ ಗ್ರಂಥವನ್ನು ಓದಿದ್ದಾರೆ. ಕಲಿಯುಗದಲ್ಲಿ ಗುರುನಾನಕರ ಅವತಾರವಾಗುತ್ತದೆ. ಅವರು ಧರ್ಮ ಸ್ಥಾಪಕನಾಗಿದ್ದಾರೆ. ಅವರ ರಾಜಧಾನಿಯಂತೂ ಕೊನೆಯಲ್ಲಿ ನಡೆಯಿತು. ತಂದೆಯು ಈ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡಿದ್ದಾರೆ. ವಾಸ್ತವದಲ್ಲಿ ಹೊಸ ಪ್ರಪಂಚವು ಬ್ರಾಹ್ಮಣರದು ಎಂದೇ ಹೇಳಬಹುದು. ಶಿಖೆಯು ಭಲೆ ಬ್ರಾಹ್ಮಣರದಾಗಿದೆ ಆದರೆ ರಾಜಧಾನಿಯು ದೇವಿ-ದೇವತೆಗಳಿಂದ ಆರಂಭವಾಗುತ್ತದೆ. ನೀವು ಬ್ರಾಹ್ಮಣರು ರಚಿಸಲ್ಪಟ್ಟಿದ್ದೀರಿ. ನಿಮ್ಮ ರಾಜಧಾನಿಯಿಲ್ಲ, ನೀವು ತಮಗಾಗಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತೀರಿ. ಇವು ಅದ್ಭುತ ಮಾತುಗಳಾಗಿವೆ. ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಮೊಟ್ಟ ಮೊದಲು ತನಗೆ ಅರ್ಥವಾದರೆ ತನ್ನ ಮೂಲಕ ಅನ್ಯರಿಗೂ ಅರ್ಥವಾಗುತ್ತದೆ. ನೀವು ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ. ಬ್ರಹ್ಮಾರವರಿಗೂ ಈಗ ತಂದೆಯ ಮೂಲಕ ಅರ್ಥವಾಗಿದೆ. ಒಬ್ಬರಿಗೆ ತಿಳಿಸಿದರೆ ಮಕ್ಕಳಿಗೂ ತಿಳಿಸಬೇಕಾಗುತ್ತದೆ. ಅವರ ತನುವಿನ ಮೂಲಕ ನೀವು ಮಕ್ಕಳಿಗೂ ತಿಳಿಸಿಕೊಡುತ್ತೇನೆ, ಇವು ಅನುಭವದ ಮಾತುಗಳಾಗಿವೆ. ಶಾಸ್ತ್ರಗಳಿಂದ ಯಾರೂ ಏನೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಇಡೀ ಕಲ್ಪದಲ್ಲಿ ಒಂದೇ ಬಾರಿ ನಾನು ಇದೇ ರೀತಿ ಬಂದು ತಿಳಿಸಿಕೊಡುತ್ತೇನೆ ಮತ್ತು ಅನೇಕ ಧರ್ಮಗಳ ವಿನಾಶ, ಒಂದು ಧರ್ಮದ ಸ್ಥಾಪನೆ ಮಾಡಿಸುತ್ತೇನೆ. ಇದು 5000 ವರ್ಷಗಳ ಆಟವಾಗಿದೆ. ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂದು ನೀವು ಮಕ್ಕಳುತಿಳಿದುಕೊಂಡಿದ್ದೀರಿ. ವಿಷ್ಣುವಿನ ನಾಭಿಯಿಂದ ಬ್ರಹ್ಮನನ್ನು ತೋರಿಸುತ್ತಾರೆ. ಬ್ರಹ್ಮಾ ಮತ್ತು ವಿಷ್ಣು ಯಾರ ಮಕ್ಕಳಾಗಿದ್ದಾರೆ. ಇಬ್ಬರೂ ಶಿವನ ಮಕ್ಕಳಾಗಿದ್ದಾರೆ. ಶಿವನು ರಚಯಿತ ಮತ್ತು ಇವರಿಬ್ಬರು ರಚನೆಯಾಗಿದ್ದಾರೆ. ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಇದು ಸಂಪೂರ್ಣ ಹೊಸ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ಇವು ಹೊಸ ಮಾತುಗಳಾಗಿವೆ, ಯಾವುದೇ ಶಾಸ್ತ್ರಗಳಲ್ಲಿ ಈ ಮಾತುಗಳಿಲ್ಲ. ಜ್ಞಾನ ಸಾಗರನು ತಂದೆಯಾಗಿದ್ದಾರೆ, ಅವರೇ ಗೀತೆಯ ಭಗವಂತನಾಗಿದ್ದಾರೆ. ಭಕ್ತಿಮಾರ್ಗದಲ್ಲಿ ಶಿವ ಜಯಂತಿಯನ್ನಾಚರಿಸುತ್ತಾರೆ. ಸತ್ಯ-ತ್ರೇತಾಯುಗದಲ್ಲಿ ಆಚರಿಸುವುದಿಲ್ಲ ಅಂದಮೇಲೆ ಅವಶ್ಯವಾಗಿ ಸಂಗಮದಲ್ಲಿಯೇ ಬರುತ್ತಾರೆ, ಈ ಮಾತುಗಳನ್ನು ನೀವು ತಿಳಿದುಕೊಳ್ಳುತ್ತಾ ಅನ್ಯರಿಗೂ ತಿಳಿಸುತ್ತಾ ಇರುತ್ತೀರಿ. ತಿಳಿಸುವಂತಹ ತಂದೆಯ ಮಹಿಮೆಯೇ ಮಕ್ಕಳಿಗೂ ಇರಬೇಕು. ನೀವೂ ಸಹ ಮಾII ಜ್ಞಾನ ಸಾಗರರಾಗಬೇಕಾಗಿದೆ. ಇಲ್ಲಿಯೇ ಪ್ರೇಮ ಸಾಗರ, ಸುಖದ ಸಾಗರರಾಗಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬಾರದು, ಬಹಳ ಮಧುರರಾಗಬೇಕಾಗಿದೆ. ನೀವು ಬಹಳ ಕಹಿ ಅಂದರೆ ವಿಷದ ಸಮಾನರಿದ್ದವರು ಈಗ ನಿರ್ವಿಕಾರಿ ಬ್ರಾಹ್ಮಣರಾಗುತ್ತಿದ್ದೀರಿ. ಈಶ್ವರನ ಸಂತಾನರಾಗುತ್ತಿದ್ದೀರಿ. ವಿಕಾರಿಗಳಿಂದ ನಿರ್ವಿಕಾರಿ ದೇವತೆಗಳಾಗುತ್ತಿದ್ದೀರಿ. ಅರ್ಧಕಲ್ಪ ನೀವು ಪತಿತರಾಗುತ್ತಾ ಆಗುತ್ತಾ ಈಗ ಸಂಪೂರ್ಣ ಜಡಜಡೀಭೂತ ಸ್ಥಿತಿಯನ್ನು ತಲುಪಿದ್ದೀರಿ. ಹೇಗೆ ಸವೆದಿರುವ ಬಟ್ಟೆಗಳನ್ನು ಒಗೆದರೆ ಒಮ್ಮೆಲೆ ಹರಿದು ಹೋಗುತ್ತದೆ. ಇಲ್ಲಿಯೂ ಸಹ ಜ್ಞಾನದ ಒಗೆತವನ್ನು ಒಗೆದಾಗ ಪುಡಿ ಪುಡಿಯಾಗಿ ಬಿಡುತ್ತಾರೆ. ಕೆಲವು ಬಟ್ಟೆಗಳಂತೂ ಇಷ್ಟು ಮೈಲಿಗೆಯಾಗಿದೆ, ಅವನ್ನು ಸ್ವಚ್ಛ ಮಾಡುವುದರಲ್ಲಿ ಬಹಳ ಸಮಯ ಹಿಡಿಸುತ್ತದೆ. ಅಂತಹವರಿಗೆ ಅಲ್ಲಿಯೂ ಸಹ ಬಹಳ ಕಡಿಮೆ ಪದವಿ ಸಿಗುತ್ತದೆ. ತಂದೆಯು ಅಗಸನಾಗಿದ್ದಾರೆ. ಜೊತೆಯಲ್ಲಿ ನೀವೂ ಸಹಯೋಗಿಗಳಾಗಿದ್ದೀರಿ ಅಗಸರಲ್ಲಿಯೂ ನಂಬರ್ವಾರ್ ಇರುತ್ತಾರೆ, ಹಾಗೆಯೇ ಇಲ್ಲಿಯೂ ಇದ್ದಾರೆ. ಅಗಸನು ಬಟ್ಟೆಯನ್ನು ಚೆನ್ನಾಗಿ ಒಗೆಯದಿದ್ದರೆ ಇವನು ಹಜಾಮನಿದ್ದ ಹಾಗೆ ಎಂದು ಹೇಳೂವರಲ್ಲವೇ ಇತ್ತೀಚೆಗೆ ಬಟ್ಟೆ ಚೆನ್ನಾಗಿ ಒಗೆಯುವುದನ್ನು ಕಲಿತಿದ್ದಾರೆ. ಮೊದಲು ಹಳ್ಳಿಗಳಲ್ಲಿ ಬಹಳ ಮೈಲಿಗೆ ಬಟ್ಟೆಗಳನ್ನು ಸ್ವಚ್ಛ ಮಾಡಲಾಗುತ್ತಿತ್ತು. ಈ ಕಲೆಯನ್ನೂ ಸಹ ಹೊರಗಿನವರಿಂದ ಕಲಿತಿದ್ದಾರೆ. ಹೊರಗಿನವರು ಸ್ವಲ್ಪ ಗೌರವ ಕೊಡುತ್ತಾರೆ. ಹಣದ ಸಹಯೋಗ ನೀಡುತ್ತಾರೆ ಏಕೆಂದರೆ ಅವರಿಗೆ ತಿಳಿದಿದೆ - ಇವರು ಬಹಳ ದೊಡ್ಡ ವಂಶಾವಳಿಯವರಾಗಿದ್ದಾರೆ, ಈಗ ಕೆಳಗಿಳಿದಿದ್ದಾರೆ. ಕೆಳಗಿಳಿಯುವವರ ಮೇಲೆ ದಯೆ ಬರುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ – ನಿಮ್ಮನ್ನು ಎಷ್ಟೊಂದು ಧನವಂತರನ್ನಾಗಿ ಮಾಡಿದ್ದೆನು, ಮಾಯೆಯು ಯಾವ ಗತಿ ಮಾಡಿಬಿಟ್ಟಿದೆ! ನೀವೀಗ ತಿಳಿದುಕೊಂಡಿದ್ದೀರಿ, ನಾವು ವಿಜಯ ಮಾಲೆಯ ಮಣಿಯಾಗಿದ್ದೇವೆ. 84 ಜನ್ಮಗಳನ್ನು ತೆಗೆದುಕೊಂಡು ಯಾವ ಸ್ಥಿತಿಗೆ ಬಂದಿದ್ದೇವೆ! ಆಶ್ಚರ್ಯವಲ್ಲವೆ. ನೀವಿದನ್ನು ತಿಳಿಸಿ, ನೀವು ಭಾರತವಾಸಿಗಳು ಸ್ವರ್ಗವಾಸಿಗಳಾಗಿದ್ದಿರಿ, ಭಾರತವೇ ಸ್ವರ್ಗವಾಗಿತ್ತು, ನಂತರ ಕೆಳಗಿಳಿಯುತ್ತಾ-ಇಳಿಯುತ್ತಾ ನರಕವಾಸಿಗಳಾಗಬೇಕಾಯಿತು. ಈಗ ತಂದೆಯು ತಿಳಿಸುತ್ತಾರೆ - ಪವಿತ್ರರಾಗಿ ಸ್ವರ್ಗವಾಸಿಗಳಾಗಿ, ಮನ್ಮನಾಭವ. ಶಿವ ಭಗವಾನುವಾಚ - ನನ್ನೊಬ್ಬನನ್ನೇ ನೆನಪು ಮಾಡಿ. ನೆನಪಿನ ಯಾತ್ರೆಯಿಂದ ನಿಮ್ಮ ಎಲ್ಲಾ ಪಾಪಗಳು ನಷ್ಟವಾಗುತ್ತವೆ. ಕೃಷ್ಣನು ಪಟ್ಟದ ರಾಣಿಯರನ್ನಾಗಿ ಮಾಡಿಕೊಳ್ಳಲು ಓಡಿಸಿಕೊಂಡು ಹೋದನೆಂದು ಶಾಸ್ತ್ರಗಳಲ್ಲಿ ಬರೆದಿದ್ದಾರೆ. ವಾಸ್ತವದಲ್ಲಿ ನೀವೆಲ್ಲರೂ ಓದುತ್ತಿದ್ದೀರಿ. ಪಟ್ಟದ ರಾಣಿಯರು ಆಗುತ್ತಿದ್ದೀರಿ ಆದರೆ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಈಗ ತಂದೆಯು ಬಂದು ಮಕ್ಕಳಗೆ ತಿಳಿಸಿದ್ದಾರೆ. ನಾನು ಕಲ್ಪ-ಕಲ್ಪವೂ ನಿಮಗೆ ತಿಳಿಸಲು ಬರುತ್ತೇನೆ, ಮೊಟ್ಟ ಮೊದಲು ಭಗವಂತನು ಒಬ್ಬರೇ ಆಗಿದ್ದಾರೆ ಎಂಬುದನ್ನು ಸಿದ್ಧ ಮಾಡಿ ತಿಳಿಸಿ ನಂತರ ಗೀತೆಯ ಭಗವಂತ ಯಾರು ಎಂಬುದನ್ನು ತಿಳಿಸಿ. ರಾಜಯೋಗವನ್ನು ಯಾರು ಕಲಿಸಿದ್ದಾರೆ? ಭಗವಂತನೇ ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡಿಸುತ್ತಾರೆ ಮತ್ತು ವಿನಾಶ ನಂತರ ಪಾಲನೆ ಮಾಡಿಸುತ್ತಾರೆ. ಈ ಬ್ರಾಹ್ಮಣರೇ ಮತ್ತೆ ದೇವತೆಗಳಾಗುವರು. ಯಾರು ಕಲ್ವದ ಹಿಂದೆ ತಿಳಿದುಕೊಂಡಿದ್ದರೋ ಅವರಿಗೇ ಈ ಮಾತುಗಳು ಅರ್ಥವಾಗುತ್ತದೆ. ಈ ಸಮಯದವರೆಗೆ ಯಾವ ಕ್ಷಣ ಪ್ರತಿ ಕ್ಷಣ ಕಳೆಯಿತೋ ಅದೆಲ್ಲವನ್ನೂ ತಿಳಿದುಕೊಳ್ಳುತ್ತಾರೆ. ಡ್ರಾಮಾದಲ್ಲಿ ನೀವು ಬಹಳ ಪುರುಷಾರ್ಥ ಮಾಡಬೇಕಾಗಿದೆ. ಇದಂತೂ ಮಕ್ಕಳಿಗೆ ತಿಳಿದಿದೆ - ಈಗಿನ್ನೂ ನಮ್ಮ ಸ್ಥಿತಿಯು ಅಲ್ಲಿಯವರೆಗೆ ತಲುಪಿಲ್ಲ, ಸಮಯ ಹಿಡಿಸುತ್ತದೆ. ಕರ್ಮಾತೀತರಾಗಿ ಬಿಟ್ಟರೆ ಮತ್ತೆ ಎಲ್ಲರೂ ನಂಬರ್ವನ್ ತೇರ್ಗಡೆಯಾಗಿ ಬಿಡುವರು, ಮತ್ತೆ ಯುದ್ಧವೂ ಆರಂಭವಾಗಿ ಬಿಡುತ್ತಿತ್ತು. ಈಗಿನ್ನೂ ಪರಸ್ಪರ ಕಿರಿಕಿರಿ ನಡೆಯುತ್ತಲೇ ಇರುತ್ತದೆ. ನೀವು ತಿಳಿದುಕೊಂಡಿದ್ದೀರಿ - ಎಲ್ಲಿ ನೋಡಿದರಲ್ಲಿ ಯುದ್ಧಕ್ಕಾಗಿ ತಯಾರು ಮಾಡುತ್ತಿದ್ದಾರೆ. ಇತ್ತ ಕಡೆಯೂ ತಯಾರಿಗಳು ನಡೆಯುತ್ತಿದೆ, ನೀವು ಯಾವುದೆಲ್ಲವನ್ನೂ ದಿವ್ಯ ದೃಷ್ಟಿಯಿಂದ ನೋಡಿದ್ದೀರೋ ಅದನ್ನು ಮತ್ತೆ ಈ ಕಣ್ಣುಗಳಿಂದ ನೋಡುವಿರಿ. ಯಾವ ವಿನಾಶದ ಸಾಕ್ಷಾತ್ಕಾರ ಮಾಡಿದ್ದೀರೋ ಅದನ್ನು ಈ ಸ್ಥೂಲ ಕಣ್ಣುಗಳಿಂದ ನೋಡುತ್ತೀರಿ. ಸ್ಥಾಪನೆಯ ಸಾಕ್ಷಾತ್ಕಾರವನ್ನೂ ನೋಡಿದ್ದೀರಿ ಮತ್ತೆ ಅದನ್ನು ಪ್ರತ್ಯಕ್ಷದಲ್ಲಿ ರಾಜಧಾನಿಯನ್ನೂ ನೋಡುತ್ತೀರಿ. ನೀವು ಮಕ್ಕಳಿಗಂತೂ ಬಹಳ ಖುಷಿಯಿರಬೇಕು. ಇದಂತೂ ಹಳೆಯ ಶರೀರವಾಗಿದೆ, ಯೋಗದಿಂದ ಆತ್ಮವು ಪವಿತ್ರವಾಗುವುದು. ನಂತರ ಈ ಹಳೆಯ ಶರೀರವನ್ನೂ ಬಿಡಬೇಕಾಗಿದೆ. 84 ಜನ್ಮಗಳ ಚಕ್ರವು ಪೂರ್ಣವಾಗುತ್ತದೆ ಆಗ ಎಲ್ಲರಿಗೆ ಹೊಸ ಶರೀರವು ಸಿಗುತ್ತದೆ. ಇವೂ ಸಹ ತಿಳಿದುಕೊಳ್ಳುವ ಬಹಳ ಸಹಜ ಮಾತುಗಳಾಗಿವೆ. ಇದನ್ನೂ ತಿಳಿಸಬಹುದು - ಕಲಿಯುಗದ ನಂತರ ಸತ್ಯಯುಗವು ಅವಶ್ಯವಾಗಿ ಆಗುವುದು. ಅನೇಕ ಧರ್ಮಗಳ ವಿನಾಶವೂ ಆಗುವುದು. ನಂತರ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನಾರ್ಥವಾಗಿ ತಂದೆಯು ಬರಬೇಕಾಗುತ್ತದೆ. ದೇವತೆಗಳಾಗುವುದಕ್ಕಾಗಿ ನೀವೀಗ ಬ್ರಾಹ್ಮಣರಾಗಿದ್ದೀರಿ, ಮತ್ತ್ಯಾರೂ ಆಗಲು ಸಾಧ್ಯವಿಲ್ಲ. ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ. ನಮಗೆ ತಂದೆಯು ಆಸ್ತಿಯನ್ನು ಕೊಡುತ್ತಿದ್ದಾರೆಂದು ನಿಮಗೆ ತಿಳಿದಿದೆ.

ಶಿವ ಜಯಂತಿ ಎಂದರೆ ಭಾರತಕ್ಕೆ ಆಸ್ತಿಯು ಸಿಕ್ಕಿತು ಎಂದರ್ಥ. ಶಿವ ತಂದೆಯು ಬಂದರು, ಬಂದು ಏನು ಮಾಡಿದರು? ಇಸ್ಲಾಮಿ, ಬೌದ್ಧರು ಮೊದಲಾದವರು ಬಂದು ತಮ್ಮ ಧರ್ಮವನ್ನು ಸ್ಥಾಪನೆ ಮಾಡಿದರು. ಅಂದಾಗ ತಂದೆಯು ಬಂದು ಏನು ಮಾಡಿದರು? ಅವಶ್ಯವಾಗಿ ಸ್ವರ್ಗ ಸ್ಥಾಪನೆ ಮಾಡಿದರು. ಹೇಗೆ ಸ್ಥಾಪನೆ ಮಾಡಿದರು? ಹೇಗೆ ಸ್ಥಾಪನೆಯಾಗುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ ಮತ್ತೆ ಸತ್ಯಯುಗದಲ್ಲಿ ಇದೆಲ್ಲವನ್ನೂ ಮರೆತು ಹೋಗುತ್ತೀರಿ. ಈಗ ಇದನ್ನೂ ತಿಳಿದುಕೊಂಡಿದ್ದೀರಿ, ನಾವೀಗ 21 ಜನ್ಮಗಳ ಆಸ್ತಿಯನ್ನು ತೆಗೆದುಕೊಂಡು ಹೋಗುತ್ತೇವೆ. ಇದು ಡ್ರಾಮಾದಲ್ಲಿ ನಿಗಧಿಯಾಗಿದೆ, ಭಲೆ ಅಲ್ಲಿ ಇವರು ತಂದೆಯಾಗಿದ್ದಾರೆ, ಇವರು ಮಕ್ಕಳಿಗೆ ಆಸ್ತಿಯು ಸಿಗುತ್ತದೆ ಎಂಬುದು ತಿಳಿದಿರುತ್ತದೆ. ಆದರೆ ಆ ಪ್ರಾಲಬ್ದವು ಈಗಿನದಾಗಿದೆ. ಸತ್ಯ ಸಂಪಾದನೆ ಮಾಡಿ 21 ಜನ್ಮಗಳಿಗಾಗಿ ನೀವು ಆಸ್ತಿಯನ್ನು ಪಡೆಯುತ್ತಿದ್ದೀರಿ. 84 ಜನ್ಮಗಳನ್ನಂತೂ ತೆಗೆದುಕೊಳ್ಳಲೇಬೇಕಾಗಿದೆ. ಸತೋಪ್ರಧಾನರಿಂದ ಮತ್ತೆ ಸತೋ, ರಜೋ, ತಮೋದಲ್ಲಿ ಬರುತ್ತೀರಿ, ಇದನ್ನು ಚೆನ್ನಾಗಿ ನೆನಪಿಟ್ಟುಕೊಂಡಾಗ ಖುಷಿಯಲ್ಲಿರುತ್ತೀರಿ. ತಿಳಿಸುವುದರಲ್ಲಿ ಬಹಳ ಪರಿಶ್ರಮವಾಗುತ್ತದೆ. ಯಾವಾಗ ತಿಳಿದುಕೊಳ್ಳುವರೋ ಆಗ ಅವರಿಗೆ ಬಹಳ ಖುಷಿಯಾಗುತ್ತದೆ. ಯಾವ ಮಕ್ಕಳು ಚೆನ್ನಾಗಿ ತಿಳಿದುಕೊಳ್ಳುವರೋ ಅವರು ಅನೇಕರಿಗೆ ತಿಳಿಸುತ್ತಾ ಇರುತ್ತಾರೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಿರುತ್ತಾರೆ. ಇದು ಬೇಹದ್ದಿನ ವಿದ್ಯೆಯಾಗಿದೆ. ಬೇಹದ್ದಿನ ಆಸ್ತಿಯೇ ಸಿಗುತ್ತದೆ. ಅಂದಮೇಲೆ ಇದರಲ್ಲಿ ತ್ಯಾಗವೂ ಬೇಹದ್ದಿನದಾಗಿದೆ. ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಇಡೀ ಪ್ರಪಂಚದ ತ್ಯಾಗ ಮಾಡಬೇಕಾಗಿದೆ ಏಕೆಂದರೆ ನಿಮಗೆ ತಿಳಿದಿದೆ - ಈ ಹಳೆಯ ಪ್ರಪಂಚವೇ ಸಮಾಪ್ತಿಯಾಗುವುದು, ಈಗ ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ ಆದ್ದರಿಂದ ಬೇಹದ್ದಿನ ಸನ್ಯಾಸ ಮಾಡಿಸುತ್ತಾರೆ. ಸನ್ಯಾಸಿಗಳದು ಹದ್ದಿನ ಸನ್ಯಾಸವಾಗಿದೆ ಮತ್ತು ಅವರದು ಹಠಯೋಗವಾಗಿದೆ. ಇಲ್ಲಿ ಯಾವುದೇ ಹಠದ ಮಾತಿರುವುದಿಲ್ಲ. ಇದು ವಿದ್ಯೆಯಾಗಿದೆ. ಈ ಪಾಠಶಾಲೆಯಲ್ಲಿ ಮನುಷ್ಯರಿಂದ ದೇವತೆಗಳಾಗಲು ಓದಬೇಕಾಗಿದೆ. ಶಿವ ಭಗವಾನುವಾಚ - ಕೃಷ್ಣನು ಭಗವಂತನಾಗಲು ಸಾಧ್ಯವಿಲ್ಲ. ಕೃಷ್ಣನು ಹೊಸ ಪ್ರಪಂಚದ ಸ್ಥಾಪನೆ ಮಾಡಲೂ ಸಾಧ್ಯವಿಲ್ಲ. ಸ್ವರ್ಗದ ರಚಯಿತನೆಂದೂ ಹೇಳುವುದಿಲ್ಲ. ಕೃಷ್ಣನಿಗೆ ಸ್ವರ್ಗದ ರಾಜಕುಮಾರನೆಂದು ಹೇಳುತ್ತಾರೆ. ಇವು ಎಷ್ಟು ಮಧುರಾತಿ ಮಧುರ ಮಾತುಗಳು ತಿಳಿದುಕೊಳ್ಳುವ ಮತ್ತು ಧಾರಣೆ ಮಾಡುವಂತದ್ದಾಗಿದೆ, ದೈವೀ ಲಕ್ಷಣಗಳೂ ಇರಬೇಕಾಗಿದೆ. ಎಂದೂ ಹೇಳಿಕೆ-ಕೇಳಿಕೆ ಮಾತುಗಳಲ್ಲಿ ತೊಡಗಬಾರದು. ವ್ಯಾಸನು ಬರೆದಿರುವ ಮಾತುಗಳಂತೆ ನಡೆಯುತ್ತಾ-ನಡೆಯುತ್ತಾ ಕೆಟ್ಟ ಗತಿಯೇ ಆಯಿತಲ್ಲವೆ. ಆದ್ದರಿಂದ ಜ್ಞಾನದ ಮಾತುಗಳನ್ನು ಬಿಟ್ಟು ಬೇರೇನಾದರೂ ತಿಳಿಸಿದರೆ ಇವರು ನಮ್ಮ ಶತ್ರುವಾಗಿದ್ದಾರೆ, ದುರ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆಂದು ತಿಳಿಯಿರಿ. ಎಂದೂ ಸಹ ಪರಮತದಂತೆ ನಡೆಯಬಾರದು. ಮನಮತ, ಪರಮತದಂತೆ ನಡೆದರೆ ಅವರು ಸತ್ತರು ಎಂದರ್ಥ. ತಂದೆಯು ತಿಳಿಸುತ್ತಿರುತ್ತಾರೆ – ಸುಳ್ಳು ಮಾತುಗಳಂತೂ ಹೇಳುವವರು ಅನೇಕರಿದ್ದಾರೆ, ನೀವು ಮಕ್ಕಳು ತಂದೆಯಿಂದಲೇ ಕೇಳಬೇಕಾಗಿದೆ. ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಕೇಳಬೇಡಿ..... ತಂದೆಯು ಬಂದಿರುವುದೇ ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಅಂದಮೇಲೆ ಅವರ ಶ್ರೀಮತದಂತೆ ನಡೆಯಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಇಲ್ಲಿ ತಂದೆಯ ಸಮಾನ ಸುಖದ ಸಾಗರ, ಪ್ರೇಮದ ಸಾಗರರಾಗಬೇಕಾಗಿದೆ. ಸರ್ವ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬಾರದು.

2. ಹೇಳಿಕೆ-ಕೇಳಿಕೆ ಮಾತುಗಳ ಮೇಲೆ ಎಂದೂ ವಿಶ್ವಾಸವನ್ನಿಡಬಾರದು. ಪರಮತದಂತೆ ನಡೆಯಬಾರದು, ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ.

ವರದಾನ:
ಬ್ರಾಹ್ಮಣ ಜೀವನದ ನೀತಿ ರೀತಿ ಪ್ರಮಾಣ ಸದಾ ನಡೆಯುವಂತಹ ವ್ಯರ್ಥ ಸಂಕಲ್ಪ ಮುಕ್ತ ಭವ.

ಯಾರು ಬ್ರಾಹ್ಮಣ ಜೀವನದ ನೀತಿ, ರೀತಿ ಪ್ರಮಾಣ ನಡೆಯುತ್ತಾ ಸದಾ ಶ್ರೀಮತದ ಆಜ್ಞೆಗಳನ್ನು ಸ್ಮೃತಿಯಲ್ಲಿಡುತ್ತಾರೆ ಮತ್ತು ಇಡೀದಿನ ಶುದ್ಧ ಪ್ರವೃತ್ತಿಯಲ್ಲಿ ವ್ಯಸ್ತವಾಗಿರುತ್ತಾರೆ ಅವರ ಮೇಲೆ ವ್ಯರ್ಥ ಸಂಕಲ್ವರೂಪಿ ರಾವಣ ಯುದ್ಧ ಮಾಡಲು ಸಾಧ್ಯವಿಲ್ಲ. ಬುದ್ಧಿಯ ಪ್ರವೃತ್ತಿಯಾಗಿದೆ ಶುದ್ಧ ಸಂಕಲ್ಪ ಮಾಡುವುದು, ವಾಣಿಯ ಪ್ರವೃತ್ತಿಯಾಗಿದೆ ತಂದೆಯ ಮುಖಾಂತರ ಏನು ಕೇಳುವಿರಿ ಅದನ್ನು ಬೇರೆಯವರಿಗೆ ಹೇಳುವುದು, ಕರ್ಮದ ಪ್ರವೃತ್ತಿಯಾಗಿದೆ. ಕರ್ಮಯೋಗಿಯಾಗಿ ಪ್ರತಿ ಕರ್ಮ ಮಾಡುವುದು - ಇದೇ ಪ್ರವೃತ್ತಿಯಲ್ಲಿ ವ್ಯಸ್ತವಾಗಿರುವವರು ವ್ಯರ್ಥ ಸಂಕಲ್ಪಗಳಿಂದ ನಿವೃತ್ತಿ ಪ್ರಾಪ್ತಿ ಮಾಡಿಕೊಳ್ಳುತ್ತಾರೆ.

ಸ್ಲೋಗನ್:
ತಮ್ಮ ಪ್ರತಿ ಹೊಸ ಸಂಕಲ್ಪದಿಂದ, ಹೊಸ ಪ್ರಪಂಚದ ಹೊಸ ಹೊಳಪಿನ ಸಾಕ್ಷಾತ್ಕಾರ ಮಾಡಿಸಿ.