17.03.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ – ಜ್ಞಾನ
ಸಾಗರ ತಂದೆಯ ಮೂಲಕ ನೀವು ಮಾಸ್ಟರ್ ಜ್ಞಾನ ಸಾಗರರಾಗಿದ್ದೀರಿ, ನಿಮಗೆ ಜ್ಞಾನದ ಮೂರನೇಯ ನೇತ್ರವು
ಸಿಕ್ಕಿದೆ. ಆದ್ದರಿಂದ ನೀವು ತ್ರಿನೇತ್ರಿ, ತ್ರಿಕಾಲದರ್ಶಿ ಮತ್ತು ತ್ರಿಲೋಕಿನಾಥರಿದ್ದೀರಿ"
ಪ್ರಶ್ನೆ:
ವಿಶ್ವದ ಆತ್ಮಿಕ
ಸೇವೆಯನ್ನು ನೀವು ಮಕ್ಕಳ ವಿನಃ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ - ಏಕೆ?
ಉತ್ತರ:
ಏಕೆಂದರೆ ನಿಮಗೇ ಪರಮಾತ್ಮ (ಶಿವ ತಂದೆ) ನ ಶಕ್ತಿ ಸಿಗುತ್ತದೆ. ಮೊದಲು ನೀವಾತ್ಮರಿಗೆ ಪರಮಾತ್ಮನ
ಮೂಲಕ ಜ್ಞಾನದ ಇಂಜೆಕ್ಷನ್ ಹಾಕಲ್ಪಡುತ್ತದೆ, ಇದರಿಂದ ನೀವು ಪಂಚ ವಿಕಾರಗಳ ಮೇಲೆ ವಿಜಯವನ್ನು
ಪ್ರಾಪ್ತಿ ಮಾಡಿಕೊಳ್ಳುತ್ತಾ ಅನ್ಯರಿಗೂ ಮಾಡಿಸುತ್ತೀರಿ. ಇಂತಹ ಸೇವೆಯನ್ನು ಮತ್ತ್ಯಾರೂ ಮಾಡಲು
ಸಾಧ್ಯವಿಲ್ಲ. ಕಲ್ಪ-ಕಲ್ಪವೂ ನೀವು ಮಕ್ಕಳೇ ಈ ಆತ್ಮಿಕ ಸೇವೆಯನ್ನು ಮಾಡುತ್ತೀರಿ.
ಗೀತೆ:
ನಯನಹೀನರಿಗೆ ದಾರಿ ತೋರಿಸು ಪ್ರಭು.........
ಓಂ ಶಾಂತಿ.
ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಬೇಕಾಗಿದೆ, ಮತ್ತ್ಯಾವುದೇ ದೇಹಧಾರಿಯ ನೆನಪಿನಲ್ಲಿ
ಕುಳಿತುಕೊಳ್ಳಬಾರದು. ಯಾರು ಹೊಸ-ಹೊಸ ಮಕ್ಕಳು ಬರುವರೋ ಅವರು ತಂದೆಯನ್ನಂತೂ ತಿಳಿದುಕೊಂಡಿಲ್ಲ.
ತಂದೆಯ ಹೆಸರಂತೂ ಬಹಳ ಸಹಜವಾಗಿದೆ – ಶಿವ ತಂದೆ. ತಂದೆಯನ್ನು ಮಕ್ಕಳೇ ಅರಿತುಕೊಂಡಿಲ್ಲ, ಇದು ಎಷ್ಟು
ಆಶ್ಚರ್ಯಕರವಾಗಿದೆ! ಶಿವ ತಂದೆಯು ಶ್ರೇಷ್ಠಾತಿ ಶ್ರೇಷ್ಠ ಸರ್ವರ ಸದ್ಗತಿದಾತನಾಗಿದ್ದಾರೆ. ಸರ್ವ
ಪತಿತರ ಪಾವನ ಕರ್ತ ಸರ್ವರ ದುಃಖ ಹರ್ತನೆಂದೂ ಹೇಳುತ್ತಾರೆ. ಆದರೆ ಅವರು ಯಾರು ಎಂಬುದನ್ನು ನೀವು
ಬ್ರಹ್ಮಾಕುಮಾರ ಕುಮಾರಿಯರ ವಿನಃ ಮತ್ತ್ಯಾರೂ ಅರಿತುಕೊಂಡಿಲ್ಲ. ನೀವು ಅವರಿಗೆ
ಮೊಮ್ಮಕ್ಕಳಾಗಿದ್ದೀರಿ ಅಂದಮೇಲೆ ಅವಶ್ಯವಾಗಿ ತಮ್ಮ ತಂದೆ ಹಾಗೂ ಅವರ ರಚನೆಯ ಆದಿ-ಮಧ್ಯ-ಅಂತ್ಯವನ್ನು
ತಿಳಿದುಕೊಳ್ಳುತ್ತೀರಿ. ತಂದೆಯ ಮೂಲಕ ಮಕ್ಕಳು ಎಲ್ಲವನ್ನೂ ಅರಿತುಕೊಳ್ಳುತ್ತಾರೆ. ಇದಂತೂ ಪತಿತ
ಪ್ರಪಂಚವಾಗಿದೆ, ಸರ್ವ ಕಲಿಯುಗೀ ಪತಿತರನ್ನು ಹೇಗೆ ಸತ್ಯಯುಗೀ ಪಾವನರನ್ನಾಗಿ ಮಾಡುತ್ತಾರೆ ಎಂಬುದು
ನೀವು ಬಿ.ಕೆ.ಗಳ ವಿನಃ ಪ್ರದಾದಲ್ಲಿ ಮತ್ತ್ಯಾರಿಗೂ ಗೊತ್ತಿಲ್ಲ. ಕಲಿಯುಗಿ ದುರ್ಗತಿಯಿಂದ ಹೊರ
ತೆಗೆಯುವ ಸತ್ಯಯುಗೀ ಸದ್ಗತಿದಾತನು ತಂದೆಯೇ ಆಗಿದ್ದಾರೆ. ಶಿವ ಜಯಂತಿಯೂ ಭಾರತದಲ್ಲಿಯೇ ಆಗುತ್ತದೆ
ಅಂದಮೇಲೆ ಅವರು ಅವಶ್ಯವಾಗಿ ಭಾರತದಲ್ಲಿಯೇ ಬರುತ್ತಾರೆ ಆದರೆ ಬಂದು ಭಾರತಕ್ಕೆ ಏನು ಕೊಡುತ್ತಾರೆ
ಎಂಬುದನ್ನು ಭಾರತವಾಸಿಗಳು ತಿಳಿದುಕೊಂಡಿಲ್ಲ. ಪ್ರತೀ ವರ್ಷ ಶಿವ ಜಯಂತಿಯನ್ನು ಆಚರಿಸುತ್ತಾರೆ,
ಆದರೆ ಜ್ಞಾನದ ಮೂರನೆಯ ನೇತ್ರವಿಲ್ಲ, ಆದ್ದರಿಂದ ತಂದೆಯನ್ನು ಅರಿತುಕೊಂಡಿಲ್ಲ.
ನಾವೆಲ್ಲರೂ ನಯನಹೀನರಾಗಿದ್ದೇವೆ ಎಂದು ಇದು ಮನುಷ್ಯರು ರಚಿಸಿರುವ ಗೀತೆಯಾಗಿದೆ. ಈ ಸ್ಥೂಲ
ನಯನಗಳಂತೂ ಎಲ್ಲರಿಗೂ ಇವೆ ಆದರೆ ತಮ್ಮನ್ನು ನಯನಹೀನರೆಂದು ಏಕೆ ಹೇಳಿಕೊಳ್ಳುತ್ತಾರೆ? ಅದನ್ನು
ತಂದೆಯೇ ಕುಳಿತು ತಿಳಿಸುತ್ತಾರೆ - ಜ್ಞಾನದ ಮೂರನೆಯ ನೇತ್ರವು ಯಾರಿಗೂ ಇಲ್ಲ. ತಂದೆಯನ್ನು ಅರಿಯದೇ
ಇರುವುದು ಅಜ್ಞಾನವಾಯಿತು. ತಂದೆಯನ್ನು ತಂದೆಯ ಮೂಲಕವೇ ಅರಿತುಕೊಳ್ಳುವುದಕ್ಕೆ ಜ್ಞಾನವೆಂದು
ಹೇಳಲಾಗುತ್ತದೆ. ತಂದೆಯು ಜ್ಞಾನದ ಮೂರನೆಯ ನೇತ್ರವನ್ನು ಕೊಡುತ್ತಾರೆ, ಇದರಿಂದ ನೀವು ಇಡೀ ರಚನೆಯ
ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುತ್ತೀರಿ. ಜ್ಞಾನ ಸಾಗರನ ಮಕ್ಕಳು ನೀವು ಮಾಸ್ಟರ್ ಜ್ಞಾನ
ಸಾಗರರಾಗಿ ಬಿಡುತ್ತೀರಿ. ಮೂರನೆಯ ನೇತ್ರವೆಂದರೆ ತ್ರಿನೇತ್ರಿ, ತ್ರಿಕಾಲದರ್ಶಿ, ತ್ರಿಲೋಕಿನಾಥರಾಗಿ
ಬಿಡುತ್ತೀರಿ. ಈ ಲಕ್ಷ್ಮಿ - ನಾರಾಯಣರು ಯಾರು ಸತ್ಯಯುಗದ ಮಾಲೀಕರಾಗಿದ್ದರೋ ಇವರಿಗೆ ಈ ಆಸ್ತಿಯು
ಹೇಗೆ ಸಿಕ್ಕಿತು? ಅವರು ಯಾವಾಗ ಬಂದರು ಮತ್ತು ಎಲ್ಲಿ ಹೋದರು? ಮತ್ತೆ ಹೇಗೆ ರಾಜ್ಯವನ್ನು ಪಡೆದರು?
ಎಂಬುದೇನನ್ನೂ ಭಾರತವಾಸಿಗಳು ಅರಿತುಕೊಂಡಿಲ್ಲ. ಈ ದೇವತೆಗಳು ಪಾವನರಲ್ಲವೆ ಅಂದಮೇಲೆ ಅವಶ್ಯವಾಗಿ
ತಂದೆಯೇ ಪಾವನರನ್ನಾಗಿ ಮಾಡುತ್ತಾರೆ. ನೀವು ಭಾರತವಾಸಿಗಳಿಗೆ ತಂದೆಯು ತಿಳಿಸಿ ಕೊಡುತ್ತಾರೆ,
ಏಕೆಂದರೆ ಭಾರತವಾಸಿಗಳೇ ದೇವತೆಗಳನ್ನು, ಶಿವನನ್ನು ಒಪ್ಪುತ್ತಾರೆ. ಶಿವನ ಜನ್ಮವೂ ಸಹ ಭಾರತದಲ್ಲಿಯೇ
ಆಗಿದೆ. ಶ್ರೇಷ್ಠಾತಿ ಶ್ರೇಷ್ಠನು ಭಗವಂತನಾಗಿದ್ದಾರೆ. ಶಿವ ಜಯಂತಿಯನ್ನೂ ಇಲ್ಲಿಯೇ ಆಚರಣೆ
ಮಾಡುತ್ತಾರೆ. ಜಗದಂಬಾ, ಜಗತ್ ಪಿತಾ ಬ್ರಹ್ಮ ಮತ್ತು ಸರಸ್ವತಿಯ ಜನ್ಮವು ಇಲ್ಲಿಯೇ ಆಗಿದೆ.
ಭಾರತದಲ್ಲಿಯೇ ಆಚರಣೆ ಮಾಡಲಾಗುತ್ತದೆ. ಲಕ್ಷ್ಮೀ-ನಾರಾಯಣರ ಜನ್ಮವೂ ಸಹ ಇಲ್ಲಿಯೇ ಆಗುತ್ತದೆ, ಅವರೇ
ರಾಧೆ-ಕೃಷ್ಣರಾಗಿದ್ದಾರೆ. ಇದನ್ನೂ ಸಹ ಭಾರತವಾಸಿಗಳು ತಿಳಿದುಕೊಂಡಿಲ್ಲ. ಪತಿತ ಪಾವನನೇ ಬನ್ನಿ
ಎಂದರೆ ಅವಶ್ಯವಾಗಿ ಎಲ್ಲರೂ ಪತಿತರಾಗಿದ್ದಾರೆ. ಸಾಧು-ಸಂತ, ಋಷಿ-ಮುನಿಗಳೆಲ್ಲರೂ ಸಹ ನಮ್ಮನ್ನು
ಪಾವನ ಮಾಡಲು ಬನ್ನಿ ಎಂದು ಒಂದು ಕಡೆ ಕರೆಯುತ್ತಾರೆ, ಇನ್ನೊಂದು ಕಡೆ ಕುಂಭಮೇಳದಲ್ಲಿ ಪಾಪವನ್ನು
ತೊಳೆಯಲು ಹೋಗುತ್ತಾರೆ. ಗಂಗೆಯು ಪತಿತ-ಪಾವನಿ ಎಂದು ತಿಳಿಯುತ್ತಾರೆ .ಪತಿತ-ಪಾವನ ಬನ್ನಿ ಎಂದು
ಕರೆಯುತ್ತಾರೆ ಅಂದಮೇಲೆ ಮನುಷ್ಯರು ಯಾರನ್ನು ಹೇಗೆ ಪಾವನ ಮಾಡಬಲ್ಲರು? ತಂದೆಯು ತಿಳಿಸುತ್ತಾರೆ -
ನೀವು ಮೊದಲು ದೇವಿ-ದೇವತಾ ಧರ್ಮದವರಾಗಿದ್ದೀರಿ, ಆಗ ಎಲ್ಲರೂ ಪಾವನರಾಗಿದ್ದರು, ಈಗ
ಪತಿತರಾಗಿದ್ದಾರೆ. ಮಾರ್ಗ ತೋರಿಸು ಪ್ರಭು ಎಂದು ಹೇಳುತ್ತಾರೆ ಅಂದಾಗ ಎಲ್ಲಿಯ ಮಾರ್ಗ? ಬಾಬಾ
ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸಿ, ನಮ್ಮಲ್ಲಿ ಪಂಚ ವಿಕಾರಗಳಿವೆ. ನಾವೆಲ್ಲರೂ
ಸ್ವರ್ಗದಲ್ಲಿದ್ದಾಗ ನಿರ್ವಿಕಾರಿಗಳಾಗಿದ್ದೆವು, ಈಗ ವಿಕಾರಿ ಪತಿತರಾಗಿ ಬಿಟ್ಟಿದ್ದೇವೆ. ಇದರ
ರಹಸ್ಯವನ್ನಾದರೂ ತಿಳಿಸಿ ಎಂದು ಹೇಳುತ್ತಾರೆ. ಇದೇನೂ ದಂತ ಕಥೆಗಳಲ್ಲ, ತಂದೆಯು ತಿಳಿಸುತ್ತಾರೆ –
ಶ್ರೀ ಮದ್ಭಗವದ್ಗೀತೆ ಅಥವಾ ಪರಮಾತ್ಮನಿಂದ ಉಚ್ಚರಿಸಲ್ಪಟ್ಟ ಗೀತೆಯಾಗಿದೆ. ಪತಿತರನ್ನು ಪಾವನ
ಮಾಡುವವರು ನಿರಾಕಾರ ಭಗವಂತನಾಗಿದ್ದಾರೆ. ಮನುಷ್ಯರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ತಂದೆಯು
ತಿಳಿಸುತ್ತಾರೆ - ಇಷ್ಟು ದೊಡ್ಡ-ದೊಡ್ಡ ಗುರುಗಳಿದ್ದರೂ ಸಹ ಭಾರತವು ಏಕೆ ಇಷ್ಟೊಂದು ಪತಿತ,
ಕವಡೆಯಂತೆ ಆಗಿ ಬಿಟ್ಟಿದೆ! ಭಾರತವು ಸ್ವರ್ಗವಾಗಿತ್ತು, ಇದು ನೆನ್ನೆಯ ಮಾತಾಗಿದೆ. ತಂದೆಯು
ಭಾರತಕ್ಕೆ ಸ್ವರ್ಗದ ಉಡುಗೊರೆಯನ್ನು ಕೊಟ್ಟಿದ್ದರು, ಭಾರತವಾಸಿ ಪತಿತರಿಗೆ ಬಂದು ರಾಜಯೋಗವನ್ನು
ಕಲಿಸಿ ಪಾವನರನ್ನಾಗಿ ಮಾಡಿದ್ದರು. ಈಗ ಪುನಃ ತಂದೆಯು ಸೇವಾಧಾರಿಯಾಗಿ ಮಕ್ಕಳ ಬಳಿ ಬಂದಿದ್ದಾರೆ.
ತಂದೆಯು ಆತ್ಮಿಕ ಸೇವಾಧಾರಿಯಾಗಿದ್ದಾರೆ. ಉಳಿದೆಲ್ಲಾ ಮನುಷ್ಯ ಮಾತ್ರರು ದೈಹಿಕ ಸೇವಾಧಾರಿಗಳಾದರು.
ಸನ್ಯಾಸಿಗಳೂ ಸಹ ದೈಹಿಕ ಸೇವಾಧಾರಿಗಳಾಗಿದ್ದಾರೆ. ಅವರು ಪುಸ್ತಕ ಇತ್ಯಾದಿಗಳನ್ನು ಓದಿ
ತಿಳಿಸುತ್ತಾರೆ. ಈಗ ತಂದೆಯು ತಿಳಿಸುತ್ತಾರೆ, ನಾನು ನಿರಾಕಾರನು ಸಾಕಾರ ಸಾಧಾರಣ ವೃದ್ಧನ
ತನುವಿನಲ್ಲಿ ಪ್ರವೇಶ ಮಾಡಿ ಬಂದು ಮಕ್ಕಳಿಗೆ ತಿಳಿಸುತ್ತೇನೆ. ಹೇ ಭಾರತವಾಸಿ ಮಕ್ಕಳೇ, ನೋಡಿ-
ಆತ್ಮಿಕ ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ. ಈ ಬ್ರಹ್ಮಾರವರು ತಿಳಿಸುವುದಿಲ್ಲ ಆದರೆ ನಿರಾಕಾರ
ತಂದೆಯು ಈ ತನುವಿನ ಆಧಾರವನ್ನು ತೆಗೆದುಕೊಳ್ಳುತ್ತಾರೆ. ಶಿವನಿಗಂತೂ ತನ್ನ ಶರೀರವಿಲ್ಲ.
ಸಾಲಿಗ್ರಾಮ ಆತ್ಮರಿಗೆ ತಮ್ಮ-ತಮ್ಮದೇ ಆದ ಶರೀರವಿದೆ, ಪುನರ್ಜನ್ಮದಲ್ಲಿ ಬರುತ್ತಾ-ಬರುತ್ತಾ
ಪತಿತರಾಗಿ ಬಿಡುತ್ತಾರೆ. ಈಗಂತೂ ಇಡೀ ಪ್ರಪಂಚವು ಪತಿತವಾಗಿದೆ. ಯಾರೊಬ್ಬರೂ ಪಾವನರಿಲ್ಲ. ನೀವು
ಸತೋಪ್ರಧಾನರಾಗಿದ್ದಿರಿ ನಂತರ ತುಕ್ಕು ಹಿಡಿಯುವ ಕಾರಣ ಸತೋದಿಂದ ರಜೋ, ತಮೋದಲ್ಲಿ ಬಂದಿದ್ದೀರಿ.
ನೀವು ಭಾರತವಾಸಿಗಳ ಬಳಿ ಶಿವ ತಂದೆಯು ಬಂದು ಶರೀರ ಧಾರಣೆ ಮಾಡಿಕೊಳ್ಳುತ್ತಾರೆ, ಅವರಿಗೆ
ಭಗೀರಥನೆಂದೂ ಹೇಳುತ್ತಾರೆ. ಮಂದಿರಗಳಲ್ಲಿ ಶಂಕರನ ಚಿತ್ರವನ್ನು ತೋರಿಸುತ್ತಾರೆ ಏಕೆಂದರೆ ಅವರು
ಶಿವ-ಶಂಕರ ಒಂದೇ ಎಂದು ತಿಳಿದುಕೊಳ್ಳುತ್ತಾರೆ. ಅವರಿಗೆ ಇದು ಗೊತ್ತಿಲ್ಲ - ಶಿವನು
ನಿರಾಕಾರನಾಗಿದ್ದಾರೆ, ಶಂಕರನಂತೂ ಆಕಾರಿಯಾಗಿದ್ದಾರೆ ಅಂದಮೇಲೆ ಶಿವ-ಶಂಕರ ಒಂದೇ ಎಂದು ಹೇಗೆ
ಹೇಳುತ್ತಾರೆ! ಮತ್ತು ಎತ್ತಿನ ಮೇಲೆ ಯಾರು ಸವಾರಿ ಮಾಡುತ್ತಾರೆ - ಶಿವನೋ, ಶಂಕರನೋ? ಸೂಕ್ಷ್ಮ
ವತನದಲ್ಲಿ ಎತ್ತು ಎಲ್ಲಿಂದ ಬರುವುದು? ಶಿವನು ಮೂಲವತನದಲ್ಲಿರುತ್ತಾನೆ, ಶಂಕರನು
ಸೂಕ್ಷ್ಮವತನದಲ್ಲಿರುತ್ತಾನೆ. ಮೂಲವತನದಲ್ಲಿ ಎಲ್ಲಾ ಆತ್ಮರಿರುತ್ತಾರೆ. ಸೂಕ್ಷ್ಮ ವತನದಲ್ಲಿ ಕೇವಲ
ಬ್ರಹ್ಮ, ವಿಷ್ಣು, ಶಂಕರರಿರುತ್ತಾರೆ, ಅಲ್ಲಿ ಯಾವುದೇ ಪ್ರಾಣಿಗಳಿರುವುದಿಲ್ಲ. ತಂದೆಯು
ತಿಳಿಸುತ್ತಾರೆ - ನಾನು ಸಾಧಾರಣ ವೃದ್ಧನ ತನುವಿನಲ್ಲಿ ಪ್ರವೇಶ ಮಾಡಿ ನಿಮಗೆ ತಿಳಿಸುತ್ತೇನೆ. ನೀವು
ಮಕ್ಕಳು ತನ್ನ ಜನ್ಮಗಳನ್ನು ಅರಿತುಕೊಂಡಿಲ್ಲ. ಸತ್ಯಯುಗದಿಂದ ಹಿಡಿದು ನೀವು ಎಷ್ಟು ಜನ್ಮಗಳನ್ನು
ತೆಗೆದುಕೊಂಡಿರಿ? 84 ಜನ್ಮಗಳನ್ನು ಪಡೆದಿದ್ದೀರಿ. ಈಗ ಇದು ಅಂತಿಮ ಜನ್ಮವಾಗಿದೆ, ಯಾವ ಭಾರತವು
ಅಮರಲೋಕ ಪಾವನವಾಗಿತ್ತೋ ಅದು ಈಗ ಮೃತ್ಯುಲೋಕ, ಪತಿತವಾಗಿದೆ. ಸರ್ವರ ಸದ್ಗತಿದಾತನು ಒಬ್ಬರೇ ಅಲ್ಲವೆ.
ರುದ್ರ ಮಾಲೆಯು ಪರಮಪಿತ ಪರಮಾತ್ಮ ನಿರಾಕಾರ ಶಿವನದಾಗಿದೆ. ಶ್ರೀ ಶ್ರೀ 108 ರುದ್ರ ಮಾಲೆಯೆಂದು
ಹೇಳಲಾಗುತ್ತದೆ, ಎಲ್ಲರೂ ಶಿವನ ಕೊರಳಿನ ಹಾರವಾಗುತ್ತಾರೆ. ತಂದೆಯು ಪತಿತ-ಪಾವನ, ಸರ್ವರ
ಸದ್ಗತಿದಾತ, ಸರ್ವರಿಗೆ ಆಸ್ತಿಯನ್ನು ನೀಡುವವರಾಗಿದ್ದಾರೆ. ಲೌಕಿಕ ತಂದೆಯಿಂದ ಹದ್ದಿನ ಆಸ್ತಿಯು
ಸಿಗುತ್ತದೆ ಯಾವುದನ್ನು ಸನ್ಯಾಸಿಗಳು ಕಾಗವಿಷ್ಟ ಸಮಾನ ಸುಖವೆಂದು ತಿಳಿಯುತ್ತಾರೆ. ತಂದೆಯು
ತಿಳಿಸುತ್ತಾರೆ - ಅವಶ್ಯವಾಗಿಯೂ ಈಗಿನ ನಿಮ್ಮ ಸುಖವು ಕಾಗವಿಷ್ಟ ಸಮಾನವಾಗಿದೆ. ತಂದೆಯೇ ಬಂದು
ಜ್ಞಾನದಿಂದ ನೀವು ಪತಿತರನ್ನು ಪಾವನ ಅಥವಾ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ. ಇದು ಗೀತಾ
ಜ್ಞಾನವಾಗಿದೆ, ಈ ಜ್ಞಾನವನ್ನು ಯಾವುದೇ ಮನುಷ್ಯರು ತಿಳಿಸಲು ಸಾಧ್ಯವಿಲ್ಲ. ಇದನ್ನು ಜ್ಞಾನ ಸಾಗರ,
ಪತಿತ-ಪಾವನ ತಂದೆಯೇ ತಿಳಿಸುತ್ತಾರೆ. ತಂದೆಯಿಂದಲೇ ಆಸ್ತಿಯು ಸಿಗುತ್ತದೆ, ಅದನ್ನು ನೀವು
ತೆಗೆದುಕೊಳ್ಳುತ್ತಿದ್ದೀರಿ. ಕೇವಲ ನೀವೇ ಸದ್ಗತಿಯ ಕಡೆ ಸಾಗುತ್ತಿದ್ದೀರಿ. ನೀವೀಗ
ಸಂಗಮದಲ್ಲಿದ್ದೀರಿ, ಅವರು ಕಲಿಯುಗದಲ್ಲಿದ್ದಾರೆ. ಈಗ ಕಲಿಯುಗದ ಅಂತ್ಯವಾಗಿದೆ. ಮಹಾಭಾರತ ಯುದ್ಧವು
ಸಮ್ಮುಖದಲ್ಲಿ ನಿಂತಿದೆ. 5000 ವರ್ಷಗಳ ಮೊದಲೂ ಸಹ ನೀವು ರಾಜಯೋಗವನ್ನು ಕಲಿತಿದ್ದಿರಿ. ಆಗ
ಬಿದಿರಿನ ಕಾಡಿಗೆ ಬೆಂಕಿ ಬಿದ್ದಿತ್ತು. ಈಗಲೂ ಸಹ ನೀವು ಈ ಲಕ್ಷ್ಮಿ -ನಾರಾಯಣರಾಗಲು ರಾಜಯೋಗವನ್ನು
ಕಲಿಯುತ್ತಿದ್ದೀರಿ. ಉಳಿದೆಲ್ಲವೂ ಭಕ್ತಿಮಾರ್ಗವಾಗಿದೆ, ಯಾವಾಗ ತಂದೆಯು ಬರುತ್ತಾರೆಯೋ ಆಗ
ಸ್ವರ್ಗದ ಬಾಗಿಲನ್ನು ತೆರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಶಿವ ಶಕ್ತಿ ಭಾರತ ಮಾತೆಯರು
ಭಾರತವನ್ನು ಶ್ರೀಮತದಂತೆ ಸ್ವರ್ಗವನ್ನಾಗಿ ಮಾಡುತ್ತಾರೆ. ನೀವು ಶಿವ ಶಕ್ತಿ ಭಾರತ
ಮಾತೆಯರಾಗಿದ್ದೀರಿ, ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ. ನೀವು ಶಿವನ ಸಂತಾನರಾಗಿದ್ದೀರಿ,
ಶಿವನಿಂದ ಶಕ್ತಿಯನ್ನು ಪಡೆದುಕೊಂಡು ಪಂಚ ವಿಕಾರಗಳೆಂಬ ಶತ್ರುಗಳ ಮೇಲೆ ಜಯ ಗಳಿಸುತ್ತೀರಿ. ನೀವು
ಮಕ್ಕಳು 5000 ವರ್ಷಗಳ ಮೊದಲೂ ಸಹ ಭಾರತದ ಆತ್ಮಿಕ ಸೇವೆ ಮಾಡಿದ್ದಿರಿ, ಆ ಸಮಾಜ ಸೇವಕರು ದೈಹಿಕ
ಸೇವೆ ಮಾಡಿದ್ದಾರೆ. ಇದು ಆತ್ಮಿಕ ಸೇವೆಯಾಗಿದೆ. ಪರಮಾತ್ಮನೇ ಬಂದು ಆತ್ಮಕ್ಕೆ ಇಂಜೆಕ್ಷನ್
ಹಾಕುತ್ತಾರೆ, ಓದಿಸುತ್ತಾರೆ. ಆತ್ಮವೇ ಕೇಳಿಸಿಕೊಳ್ಳುತ್ತದೆ, ನೀವು ಆತ್ಮರಾಗಿದ್ದೀರಿ. ನೀವೇ 84
ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ, ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು
ತೆಗೆದುಕೊಳ್ಳುತ್ತೀರಿ, 84 ಜನ್ಮಗಳನ್ನು ತೆಗೆದುಕೊಂಡು 84 ತಂದೆ -ತಾಯಿಯರನ್ನು ಮಾಡಿಕೊಂಡಿದ್ದೀರಿ.
ಸತ್ಯ-ತ್ರೇತಾಯುಗದಲ್ಲಿ ನೀವು ಸ್ವರ್ಗದ ಸುಖವನ್ನು ಪಡೆದಿರಿ, ಈಗ ಪುನಃ ಬೇಹದ್ದಿನ ತಂದೆಯ ಮೂಲಕ
ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ, ಅವಶ್ಯವಾಗಿ ಭಾರತಕ್ಕೆ ಈ ಆಸ್ತಿಯಿತ್ತು,
ಭಾರತದಲ್ಲಿ ಈ ಲಕ್ಷ್ಮಿ -ನಾರಾಯಣರ ರಾಜ್ಯವಿತ್ತು. ಅಲ್ಲಿ ದೈತ್ಯರಿರಲ್ಲ. ನಿಮಗೆ ತಿಳಿದಿದೆ - ಈಗ
ಈ ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳಲಿದೆ. ನಾನು ಬಂದು ಜ್ಞಾನ ಯಜ್ಞವನ್ನು ರಚಿಸುತ್ತೇನೆ. ನೀವೆಲ್ಲರೂ
ಪವಿತ್ರ ದೇವತೆಗಳಾಗುತ್ತೀರಿ. ಸಾವಿರಾರು ಮಂದಿ ದೇವತೆಗಳಾಗುವ ಪುರುಷಾರ್ಥ ಮಾಡುತ್ತಿದ್ದೀರಿ.
ತಂದೆಯು ಮಕ್ಕಳ ಸದ್ಗತಿ ಮಾಡಲು ಬಂದಿದ್ದಾರೆ. ನೀವು ಮಕ್ಕಳನ್ನು ಮುಳ್ಳುಗಳಿಂದ ಹೂಗಳನ್ನಾಗಿ
ಮಾಡುತ್ತಿದ್ದಾರೆ. ನಿಮಗೆ ಜ್ಞಾನದ ಮೂರನೆಯ ನೇತ್ರವನ್ನು ಕೊಡುತ್ತಿದ್ದಾರೆ. ಇದರಿಂದ ನಿಮಗೆ ಇಡೀ
ಸೃಷ್ಟಿ ನಾಟಕವನ್ನು ಮತ್ತು ಶಿವ ತಂದೆಯ ಪಾತ್ರವೇನೆಂಬುದನ್ನು ನೀವು ತಿಳಿದುಕೊಂಡಿದ್ದೀರಿ.
ಬ್ರಹ್ಮಾ ಮತ್ತು ವಿಷ್ಣುವಿನ ಸಂಬಂಧವೇನೆಂಬುದನ್ನು ತಿಳಿದಿದ್ದೀರಿ. ವಿಷ್ಣುವಿನ ನಾಭಿಯಿಂದ
ಬ್ರಹ್ಮಾ ಬಂದನೆಂದು ಅವರು ತೋರಿಸುತ್ತಾರೆ, ಅಂದರೆ ಬ್ರಹ್ಮನೇ ಹೋಗಿ ವಿಷ್ಣುವಾಗುತ್ತಾರೆ.
ಬ್ರಾಹ್ಮಣರಿಂದ ದೇವತೆಗಳು, ವಿಷ್ಣುವಿನಿಂದ ಬ್ರಹ್ಮನಾಗುವುದರಲ್ಲಿ 5000 ವರ್ಷಗಳು ಹಿಡಿಸಿತು. ಇದು
ನಿಮಗೆ ಜ್ಞಾನವಿದೆ. ನೀವು ಬ್ರಾಹ್ಮಣರ ನಾಭಿ ಕಮಲದಿಂದ ವಿಷ್ಣು ಪುರಿಯು ಪ್ರಕಟವಾಗುತ್ತಿದೆ.
ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನು ಮತ್ತು ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸಿದನೆಂದು
ಅವರು ಚಿತ್ರಗಳನ್ನು ತೋರಿಸಿದ್ದಾರೆ. ನೀವೀಗ ವಾಸ್ತವದಲ್ಲಿ ಬ್ರಹ್ಮಾವರ ಮೂಲಕ ಎಲ್ಲಾ ಸಾರವನ್ನು
ತಿಳಿದುಕೊಳ್ಳುತ್ತೀರಿ. ತಂದೆಯು ತಿಳಿಸುತ್ತಾರೆ - ನಾಲ್ಕು ಮುಖ್ಯ ಧರ್ಮ ಶಾಸ್ತ್ರಗಳಿವೆ, ಮೊದಲ
ದೈವೀ ಧರ್ಮದ ಶಾಸ್ತ್ರವು ಗೀತೆಯಾಗಿದೆ. ಗೀತೆಯನ್ನು ಯಾರು ತಿಳಿಸಿದರು? ಶಿವ ತಂದೆ. ಜ್ಞಾನ ಸಾಗರ,
ಪತಿತ-ಪಾವನ ಸುಖದ ಸಾಗರನು ಶಿವ ತಂದೆಯಾಗಿದ್ದಾರೆ. ಅವರೇ ಕುಳಿತು ಭಾರತವನ್ನು ಸ್ವರ್ಗವನ್ನಾಗಿ
ಮಾಡಿದರು, ಕೃಷ್ಣನಲ್ಲ. ಕೃಷ್ಣನಂತೂ ನನ್ನ ಮುಖಾಂತರವೇ ಜ್ಞಾನವನ್ನು ಕೇಳಿ ಮತ್ತೆ ಕೃಷ್ಣನಾದನು
ಅಂದಾಗ ಇದು ಗುಪ್ತ ಮಾತಾಯಿತಲ್ಲವೆ. ಹೊಸ-ಹೊಸ ಮಕ್ಕಳು ಈ ಮಾತುಗಳನ್ನು ಅರಿತುಕೊಳ್ಳಲು
ಸಾಧ್ಯವಿಲ್ಲ. ಇದಕ್ಕೇ ನರಕವೆಂದು ಹೇಳಲಾಗುತ್ತದೆ. ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಶಿವ
ತಂದೆಯು ಸ್ವರ್ಗದ ಸ್ಥಾಪನೆ ಮಾಡಿದರು ಅದರಲ್ಲಿ ಈ ಲಕ್ಷ್ಮಿ -ನಾರಾಯಣರು ರಾಜ್ಯ ಮಾಡುತ್ತಿದ್ದರು,
ನೀವೀಗ ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ಈ ಮೃತ್ಯುಲೋಕ, ದುಃಖಧಾಮದಲ್ಲಿ ನಿಮ್ಮದು ಅಂತಿಮ
ಜನ್ಮವಾಗಿದೆ. ಭಾರತವೇ ಅಮರ ಲೋಕವಾಗಿತ್ತು, ಅಲ್ಲಿ ದುಃಖದ ಹೆಸರಿರಲಿಲ್ಲ. ಭಾರತವು
ಫರಿಸ್ತಾನವಾಗಿತ್ತು, ಈಗ ಸ್ಮಶಾನವಾಗಿದೆ. ಇದು ಪುನಃ ಫರಿಸ್ತಾನವಾಗುವುದು. ಇವೆಲ್ಲವೂ
ತಿಳಿದುಕೊಳ್ಳುವ ಮಾತುಗಳಾಗಿವೆ. ಇದು ಮನುಷ್ಯನಿಂದ ದೇವತೆಯಾಗುವ ಪಾಠಶಾಲೆಯಾಗಿದೆ. ಇದು ಯಾವುದೇ
ಸನ್ಯಾಸಿಗಳ ಸತ್ಸಂಗವಲ್ಲ, ಅಲ್ಲಿ ಶಾಸ್ತ್ರಗಳನ್ನು ತಿಳಿಸುತ್ತಾರೆ. ಈ ಮಾತುಗಳನ್ನು ಎಲ್ಲಿಯವರೆಗೆ
7 ದಿನಗಳ ಕೋರ್ಸ್ ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಹೊಸಬರು ಅರಿತುಕೊಳ್ಳಲು
ಸಾಧ್ಯವಿಲ್ಲ. ಈ ಸಮಯದಲ್ಲಿ ಎಲ್ಲಾ ಮನುಷ್ಯ ಮಾತ್ರರು ಭಕ್ತರಾಗಿದ್ದಾರೆ. ಅವರ ಆತ್ಮವೂ ನೆನಪು
ಮಾಡುತ್ತದೆ.ಒಬ್ಬ ಪರಮಾತ್ಮ ಪ್ರಿಯತಮನಿಗೆ ಎಲ್ಲರೂ ಪ್ರಿಯತಮೆಯರಾಗಿದ್ದಾರೆ. ತಂದೆಯು ಬಂದು ಸತ್ಯ
ಖಂಡವನ್ನು ಸ್ಥಾಪನೆ ಮಾಡುತ್ತಾರೆ. ಅರ್ಧ ಕಲ್ಪದ ನಂತರ ಮತ್ತೆ ರಾವಣನು ಬಂದು ಅಸತ್ಯ ಖಂಡವನ್ನಾಗಿ
ಮಾಡುತ್ತಾನೆ. ಈಗ ಸಂಗಮವಾಗಿದೆ, ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯ
ಶ್ರೀಮತದಂತೆ ಭಾರತದ ಸತ್ಯ-ಸತ್ಯವಾದ ಆತ್ಮಿಕ ಸೇವೆ ಮಾಡಬೇಕಾಗಿದೆ. ಸರ್ವಶಕ್ತಿವಂತ ತಂದೆಯಿಂದ
ಶಕ್ತಿಯನ್ನು ಪಡೆದುಕೊಂಡು ಪಂಚ ವಿಕಾರರೂಪಿ ಶತ್ರುಗಳ ಮೇಲೆ ವಿಜಯಗೊಳಿಸಬೇಕಾಗಿದೆ.
2. ಮನುಷ್ಯರಿಂದ ದೇವತೆಗಳಾಗಲು ಖಂಡಿತ ಪವಿತ್ರರಾಗಬೇಕಾಗಿದೆ. ಜ್ಞಾನವನ್ನು ಧಾರಣೆ ಮಾಡಿಕೊಂಡು
ಮುಳ್ಳುಗಳಿಂದ ಹೂಗಳಾಗಬೇಕು ಮತ್ತು ಅನ್ಯರನ್ನೂ ಮಾಡಬೇಕಾಗಿದೆ.
ವರದಾನ:
ಶ್ರೀಮತದ
ಮುಖಾಂತರ ಸದಾ ಖುಷಿ ಹಾಗೂ ಹಗುರತನದ ಅನುಭವ ಮಾಡುವಂತಹ ಮನಮತ ಮತ್ತು ಪರಮತದಿಂದ ಮುಕ್ತ ಭವ.
ಯಾವ ಮಕ್ಕಳ ಪ್ರತಿ
ಹೆಜ್ಜೆ ಶ್ರೀಮತದ ಪ್ರಮಾಣವಿರುತ್ತೆ ಅವರ ಮನಸ್ಸು ಸದಾ ಸಂತುಷ್ಟವಾಗಿರುತ್ತೆ , ಮನಸ್ಸಿನಲ್ಲಿ
ಯಾವುದೇ ಪ್ರಕಾರದ ಹಲ್-ಚಲ್ ಇರುವುದಿಲ್ಲ, ಶ್ರೀಮತದ ಮೇಲೆ ನಡೆಯುವುದರಿಂದ ಸ್ವಾಭಾವಿಕವಾಗಿ ಖುಷಿ
ಇರುವುದು, ಹಗುರತೆಯ ಅನುಭವವಾಗುವುದು. ಆದ್ದರಿಂದ ಎಂದಾದರೂ ಮನಸ್ಸಿನಲ್ಲಿ ಹಲ್-ಚಲ್ ಉಂಟಾದರೆ,
ಖುಷಿಯ ಪರಸೆಂಟ್ ಸ್ವಲ್ಪವಾದರೂ ಕಡಿಮೆಯಾಯಿತೆಂದರೆ ಚೆಕ್ ಮಾಡಿಕೊಳ್ಳಿ - ಖಂಡಿತ ಶ್ರೀಮತದ
ಅವಜ್ಞೆಯಾಗಿರುತ್ತದೆ. ಆದ್ದರಿಂದ ಸೂಕ್ಷ್ಮ ಚೆಕ್ಕಿಂಗ್ ಮಾಡಿಕೊಳ್ಳಿ ಮನ್ ಮತ ಅಥವಾ ಪರಮತದಿಂದ
ಸ್ವಯಂನ್ನು ಮುಕ್ತ ಮಾಡಿಕೊಳ್ಳಿ.
ಸ್ಲೋಗನ್:
ಬುದ್ಧಿರೂಪಿ ವಿಮಾನದ
ಮುಖಾಂತರ ವತನವನ್ನು ತಲುಪಿ ಜ್ಞಾನ ಸೂರ್ಯನ ಕಿರಣಗಳ ಅನುಭವ ಮಾಡುವುದೇ ಶಕ್ತಿಶಾಲಿ ಯೋಗ.
ಮಾತೇಶ್ವರೀಜಿಯವರ
ಅಮೂಲ್ಯ ಮಹಾವಾಕ್ಯ:
1) ಆತ್ಮ ಪರಮಾತ್ಮನಲ್ಲಿ ಅಂತರ, ಭೇದ:
ಆತ್ಮ ಮತ್ತು ಪರಮಾತ್ಮ ಬೇರೆ ಇದ್ದರು ಬಹುಕಾಲ ಸುಂದರ ಮೇಳ ಮಾಡಿದರು ಯಾವಾಗ ಸದ್ಗುರು ಸಿಕ್ಕರು
ದಲ್ಲಾಳಿ...... ಯಾವಾಗ ನಾವು ಈ ಶಬ್ದವನ್ನು ಹೇಳುತ್ತೇವೆ ಆಗ ಇದರ ಯರ್ಥಾಥ ಅರ್ಥವಾಗಿದೆ ಆತ್ಮ,
ಪರಮಾತ್ಮನಿಂದ ಬಹುಕಾಲದಿಂದ ಅಗಲಿ ಹೋಗಿದ್ದರು. ಬಹಳ ಕಾಲದ ಅರ್ಥವಾಗಿದೆ - ಬಹು ಸಮಯದಿಂದ ಆತ್ಮ
ಪರಮಾತ್ಮನಿಂದ ಅಗಲಿ ಹೋಗಿದ್ದರು, ಆದ್ದರಿಂದ ಈ ಶಬ್ದ ಸಾಬೀತು (ಸಿದ್ಧ) ಮಾಡುತ್ತದೆ. ಆತ್ಮ ಮತ್ತು
ಪರಮಾತ್ಮ ಬೇರೆ-ಬೇರೆ ಎರಡು ವಸ್ತುಗಳಾಗಿವೆ, ಎರಡರಲ್ಲಿ ಆಂತರಿಕ ಬೇಧವಿದೆ. ಆದರೆ ಪ್ರಪಂಚದ
ಮನುಷ್ಯರಿಗೆ ಪರಿಚಯ ಇಲ್ಲದ ಕಾರಣ ಅವರು ಈ ಶಬ್ದದ ಅರ್ಥವನ್ನು ಹೀಗೆ ಅರ್ಥೈಸುತ್ತಾರೆ ಆತ್ಮನೇ
ಪರಮಾತ್ಮ ಆಗಿದೆ. ಆದರೆ ಆತ್ಮನ ಮೇಲೆ ಮಾಯೆಯ ಹೊದಿಕೆ ಹಾಕಲ್ಪಟ್ಟಿರುವ ಕಾರಣ ತನ್ನ ನಿಜವಾದ
ಸ್ವರೂಪವನ್ನು ಮರೆತು ಹೋಗಿದೆ, ಹೇಳುತ್ತಾರೆ ಯಾವಾಗ ಮಾಯೆಯ ಹೊದಿಕೆ ಇಳಿದು ಹೋಗುವುದು. ಆ ನಂತರ
ಆತ್ಮ ಅದೇ ಪರಮಾತ್ಮ ಆಗುತ್ತದೆ. ಅವರು ಆತ್ಮ ಬೇರೆಯಿರುವುದನ್ನು ಈ ಅರ್ಥದಲ್ಲಿ ಹೇಳುತ್ತಾರೆ ನಂತರ
ಇನ್ನೂ ಕೆಲವರು ಮತ್ತೆ ಈ ಅರ್ಥದಿಂದ ಹೇಳುತ್ತಾರೆ ನಾನೇ ಆತ್ಮ ಸೋ ಪರಮಾತ್ಮ ಎಂದು. ಆದರೆ ಆತ್ಮ
ತನ್ನನ್ನು ತಾನು ಮರೆತಿರುವ ಕಾರಣ ದುಃಖಿಯಾಗಿ ಬಿಟ್ಟಿದೆ. ಯಾವಾಗ ಆತ್ಮ ಪುನಃ ತನ್ನನ್ನು ತಾನು
ಅರಿತು ಶುದ್ಧವಾಗುವುದು, ಆ ನಂತರ ಆತ್ಮ ಪರಮಾತ್ಮನೊಂದಿಗೆ ಸೇರಿಕೊಂಡು ಒಂದೇ ಆಗಿ ಬಿಡುವುದು.
ಅಂದರೆ ಅವರು ಆತ್ಮವನ್ನು ಬೇರೆ ಎಂದು ಈ ಅರ್ಥದಲ್ಲಿ ಹೇಳುತ್ತಾರೆ ಆದರೆ ನಾವಂತೂ ತಿಳಿದಿದ್ದೇವೆ
ಆತ್ಮ ಪರಮಾತ್ಮ ಇಬ್ಬರೂ ಬೇರೆ ವಸ್ತು, ಆತ್ಮ ಪರಮಾತ್ಮ ಆಗಲು ಸಾಧ್ಯವಿಲ್ಲ ಮತ್ತು ಆತ್ಮ
ಪರಮಾತ್ಮನಲ್ಲಿ ಲೀನವಾಗಿ ಒಂದಾಗುವುದಿಲ್ಲ ಮತ್ತು ಪರಮಾತ್ಮನ ಮೇಲೆ ಯಾವುದೇ ಹೊದಿಕೆ ಏರಲು
ಸಾಧ್ಯವಿಲ್ಲ.
2) “ಮನಸ್ಸಿನ ಅಶಾಂತಿಯ ಕಾರಣವಾಗಿದೆ – ಕರ್ಮ ಬಂಧನ ಮತ್ತು ಶಾಂತಿಯ ಆಧಾರ ಕರ್ಮಾತೀತ"
ವಾಸ್ತವದಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲಿ ಅವಶ್ಯವಾಗಿ ಇದೇ ಇಚ್ಛೆ ಇರುತ್ತದೆ. ನನಗೆ ಮನಸ್ಸಿನ
ಶಾಂತಿ ಪ್ರಾಪ್ತಿಯಾಗಲಿ ಅನೇಕ ಪ್ರಯತ್ನ ಮಾಡುತ್ತಾ ಬಂದಿದ್ದಾರೆ ಆದರೂ ಮನಸ್ಸಿಗೆ ಶಾಂತಿ ಇದುವರೆಗೂ
ಪ್ರಾಪ್ತಿಯಾಗಲಿಲ್ಲ. ಇದಕ್ಕೆ ಯಥಾರ್ಥ ಕಾರಣ ಏನಾಗಿದೆ? ಈಗ ಮೊದಲು ಈ ವಿಚಾರ ನಡೆಯಬೇಕಾಗಿರುವುದು
ಅವಶ್ಯಕವಾಗಿದೆ ಮನಸ್ಸಿನ ಅಶಾಂತಿಗೆ ಮೂಲ ಏನು? ಮನಸ್ಸಿನ ಅಶಾಂತಿಗೆ ಮುಖ್ಯ ಕಾರಣ – ಕರ್ಮ
ಬಂಧನದಲ್ಲಿ ಸಿಕ್ಕಿ ಹಾಕಿಕೊಳ್ಳುವುದು. ಎಲ್ಲಿಯವರೆಗೆ ಮನುಷ್ಯ ಈ ಐದು ವಿಕಾರಗಳ ಕರ್ಮ ಬಂಧನದಿಂದ
ಬಿಡಿಸಿಕೊಳ್ಳುವುದಿಲ್ಲ ಅಲ್ಲಿಯವರೆಗೆ ಮನುಷ್ಯ ಅಶಾಂತಿಯಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ.
ಯಾವಾಗ ಕರ್ಮ ಬಂಧನ ಕಡಿದು ಹೋಗುತ್ತದೆ ಆಗ ಮನಸ್ಸಿನ ಶಾಂತಿ ಅರ್ಥಾತ್ ಜೀವನ್ಮುಕ್ತಿಯನ್ನು
ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯ. ಈಗ ಯೋಚಿಸಬೇಕಾಗಿದೆ ಈ ಕರ್ಮ ಬಂಧನದಿಂದ ಬಿಡಿಸಿಕೊಳ್ಳುವುದು
ಹೇಗೆ? ಮತ್ತು ಇದಕ್ಕೆ ಬಿಡುಗಡೆ ಕೊಡುವವರು ಯಾರು? ಇದಂತೂ ನಾವು ತಿಳಿದಿದ್ದೇವೆ ಯಾವುದೇ
ಮನುಷ್ಯಾತ್ಮ ಯಾರೇ ಮನುಷ್ಯಾತ್ಮರಿಗೆ ಬಿಡುಗಡೆ ಕೊಡಲು ಸಾಧ್ಯವಿಲ್ಲ. ಈ ಕರ್ಮ ಬಂಧನದ ಲೆಕ್ಕಾಚಾರ
ಕಡಿದು ಹಾಕುವವರು ಕೇವಲ ಒಬ್ಬ ಪರಮಾತ್ಮ ಆಗಿದ್ದಾರೆ, ಅವರೇ ಬಂದು ಈ ಜ್ಞಾನ ಯೋಗಬಲದಿಂದ ಕರ್ಮ
ಬಂಧನ ಬಿಡಿಸುತ್ತಾರೆ. ಆದ್ದರಿಂದಲೇ ಪರಮಾತ್ಮನಿಗೆ ಸುಖದಾತ ಎಂದು ಹೇಳಲಾಗುತ್ತದೆ. ಎಲ್ಲಿಯವರೆಗೆ
ಮೊದಲು ನಾನು ಆತ್ಮನಾಗಿದ್ದೇನೆ ಎನ್ನುವ ಈ ಜ್ಞಾನ ಇಲ್ಲ, ವಾಸ್ತವಿಕವಾಗಿ ನಾನು ಯಾರ
ಸಂತಾನನಾಗಿದ್ದೇನೆ?, ನನ್ನ ವಾಸ್ತವಿಕ ಗುಣ ಏನು? ಯಾವಾಗ ಇದು ಬುದ್ಧಿಯಲ್ಲಿ ಬರುತ್ತದೆ ಆಗಲೇ
ಕರ್ಮ ಬಂಧನ ಮುರಿದು ಹೋಗುತ್ತದೆ. ಈಗ ಈ ಜ್ಞಾನ ನಮಗೆ ಪರಮಾತ್ಮನ ಮುಖಾಂತರವೇ ಪ್ರಾಪ್ತಿಯಾಗುವುದು.
ಅಂದರೆ ಪರಮಾತ್ಮನ ಮೂಲಕವೇ ಕರ್ಮ ಬಂಧನ ಮುರಿಯುತ್ತದೆ. ಒಳ್ಳೆಯದು. ಓಂ ಶಾಂತಿ.