08.03.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಶ್ರೀಮತದಂತೆ ಕಲ್ಯಾಣಕಾರಿಗಳಾಗಬೇಕಾಗಿದೆ, ಎಲ್ಲರಿಗೂ ಸುಖದ ಮಾರ್ಗವನ್ನು ತಿಳಿಸಬೇಕಾಗಿದೆ''

ಪ್ರಶ್ನೆ:
ಯಾವುದೇ ಪ್ರಕಾರದ ತಪ್ಪುಗಳಾಗಲು ಮುಖ್ಯ ಕಾರಣವೇನು?

ಉತ್ತರ:
ದೇಹಾಭಿಮಾನ. ದೇಹಾಭಿಮಾನದ ಕಾರಣವೇ ಮಕ್ಕಳಿಂದ ಅನೇಕ ತಪ್ಪುಗಳಾಗುತ್ತವೆ. ಅವರು ಸೇವೆಯನ್ನು ಮಾಡುವುದಿಲ್ಲ. ಅವರಿಂದ ಇಂತಹ ಕರ್ಮವಾಗುತ್ತದೆ ಯಾವುದನ್ನು ಎಲ್ಲರೂ ತಿರಸ್ಕರಿಸುತ್ತಾರೆ. ಅದಕ್ಕಾಗಿ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಯಾಗಿ ಯಾವುದೇ ಅಕರ್ತವ್ಯ ಮಾಡಬೇಡಿ. ಕ್ಷೀರ ಖಂಡವಾಗಿ ಸರ್ವೀಸಿನ ಒಳ್ಳೊಳ್ಳೆಯ ಉಪಾಯಗಳನ್ನು ರಚಿಸಿ. ಮುರುಳಿಯನ್ನು ಕೇಳಿ ಧಾರಣೆ ಮಾಡಿಕೊಳ್ಳಿ, ಇದರಲ್ಲಿ ನಿರ್ಲಕ್ಷ್ಯವಾಗಬೇಡಿ.

ಗೀತೆ:
ಆಕಾಶ ಸಿಂಹಾಸನವನ್ನು ಬಿಟ್ಟು ಬಾ..............

ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯ ಶ್ರೀಮತವಾಗಿದೆ - ಈಗ ನಾನು ಎಲ್ಲಾ ಸೇವಾಕೇಂದ್ರಗಳ ಮಕ್ಕಳೊಂದಿಗೆ ಮಾತನಾಡುತ್ತಿದ್ದೇನೆ. ನಿಮ್ಮ ಬಳಿ ತ್ರಿಮೂರ್ತಿ, ಗೋಲ, ಕಲ್ಪವೃಕ್ಷ, ಏಣಿ, ಲಕ್ಷ್ಮೀ-ನಾರಾಯಣ ಮತ್ತು ಶ್ರೀಕೃಷ್ಣನ ಚಿತ್ರ ಈ ಆರು ಚಿತ್ರಗಳು ಮುಖ್ಯವಾಗಿದೆ. ಇದು ಪೂರ್ಣ ಪ್ರದರ್ಶನಿಯಾಗಿದೆ. ಇದರಲ್ಲಿ ಎಲ್ಲಾ ಸಾರವು ಬಂದು ಬಿಡುತ್ತದೆ. ಹೇಗೆ ಜಾಹೀರಾತಿಗಾಗಿ ನಾಟಕದ ಪರದೆಗಳನ್ನು ಮಾಡಲಾಗುತ್ತದೆ. ಅದೆಂದೂ ಮಳೆ ಇತ್ಯಾದಿಗಳಿಗೆ ಹಾಳಾಗುವುದಿಲ್ಲ. ಅದೇರೀತಿ ಈ ಮುಖ್ಯ ಚಿತ್ರಗಳನ್ನು ಮಾಡಿಸಬೇಕು. ಆತ್ಮಿಕ ಸೇವೆಯನ್ನು ವೃದ್ಧಿ ಮಾಡುವುದಕ್ಕಾಗಿ ಭಾರತವಾಸಿ ಮನುಷ್ಯರ ಕಲ್ಯಾಣ ಮಾಡುವುದಕ್ಕಾಗಿ ಮಕ್ಕಳಿಗೆ ಶ್ರೀಮತ ಸಿಗುತ್ತದೆ. ಕಲ್ಯಾಣಕಾರಿ ಬೇಹದ್ದಿನ ತಂದೆಯಾಗಿದ್ದಾರೆ ಎಂದು ಹಾಡುತ್ತಾರೆ ಅಂದಮೇಲೆ ಅವಶ್ಯವಾಗಿ ಯಾರೋ ಅಕಲ್ಯಾಣಕಾರಿಯು ಇರಬೇಕಲ್ಲವೆ. ಆ ಕಾರಣದಿಂದಲೇ ತಂದೆಯು ಬಂದು ಮತ್ತೆ ಕಲ್ಯಾಣ ಮಾಡಬೇಕಾಗುತ್ತದೆ. ಆತ್ಮಿಕ ಮಕ್ಕಳು ಯಾರ ಕಲ್ಯಾಣವಾಗುತ್ತಿದೆಯೋ ಅವರೇ ಈ ಮಾತುಗಳನ್ನು ಅರಿತುಕೊಳ್ಳುತ್ತಾರೆ. ಹೇಗೆ ನಮ್ಮ ಕಲ್ಯಾಣವಾಗಿದೆಯೋ ಅದೇರೀತಿ ನಾವು ಅನ್ಯರ ಕಲ್ಯಾಣವನ್ನೂ ಮಾಡಬೇಕು. ಹೇಗೆ ತಂದೆಗೂ ಸಹ ಹೇಗೆ ಮಕ್ಕಳ ಕಲ್ಯಾಣ ಮಾಡುವುದು ಎಂದು ಚಿಂತನೆ ನಡೆಯುತ್ತದೆ. ಯುಕ್ತಿಗಳನ್ನು ತಿಳಿಸುತ್ತಿದ್ದಾರೆ. 6’/9’ ಸೈಜ್ ನ ಶೀಟ್ನ ಮೇಲೆ ಈ ಚಿತ್ರಗಳನ್ನು ಮಾಡಿಸಬೇಕು. ದೆಹಲಿಯಂತಹ ನಗರಗಳಲ್ಲಿ ಬಹಳಷ್ಟು ಮಂದಿ ಬರುತ್ತಾರೆ. ಅಲ್ಲಿ ಸರ್ಕಾರದ ಸಭೆ ಸೇರುತ್ತದೆ. ಅಂತಹ ಕಡೆ ಅನೇಕ ಮನುಷ್ಯರು ಬರುತ್ತಾರೆ. ಅಲ್ಲಿ ಈ ಚಿತ್ರಗಳನ್ನು ಹಾಕಬೇಕು. ಅನೇಕರ ಕಲ್ಯಾಣ ಮಾಡುವ ಅರ್ಥವಾಗಿ ತಂದೆಯು ಮತ ಕೊಡುತ್ತಾರೆ. ಇಂತಹ ಥಿನ್ ಶೀಟ್ನ ಮೇಲೆ ಬಹಳ ಚಿತ್ರಗಳನ್ನು ಮಾಡಿಸಬಹುದು. ದೇಹೀ-ಅಭಿಮಾನಿಯಾಗಿ ತಂದೆಯ ಸರ್ವೀಸ್ನಲ್ಲಿ ತೊಡಗಬೇಕಾಗಿದೆ. ತಂದೆಯು ಸಲಹೆ ನೀಡುತ್ತಾರೆ - ಇಂತಹ ಚಿತ್ರಗಳನ್ನು ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾಡಿಸಬೇಕು. ಈ ಆರು ಚಿತ್ರಗಳನ್ನು ಮುಖ್ಯ ಸ್ಥಾನಗಳಲ್ಲಿ ಹಾಕಬೇಕಾಗಿದೆ. ಒಂದುವೇಳೆ ಇಂತಹ ಮುಖ್ಯ ಸ್ಥಾನಗಳಲ್ಲಿ ಚಿತ್ರಗಳನ್ನು ಹಾಕಿದ್ದೇ ಆದರೆ ತಿಳಿದುಕೊಳ್ಳುವುದಕ್ಕಾಗಿ ನಿಮ್ಮಬಳಿ ಸಾವಿರಾರು ಮಂದಿ ಬರುತ್ತಾರೆ. ಆದರೆ ಮಕ್ಕಳಲ್ಲಿ ದೇಹಾಭಿಮಾನವಿರುವ ಕಾರಣ ಬಹಳ ತಪ್ಪುಗಳಾಗುತ್ತವೆ. ನಾನು ಪಕ್ಕಾ ಆತ್ಮಾಭಿಮಾನಿಯಾಗಿದ್ದೇನೆ ಎಂದು ಯಾರೂ ತಿಳಿದುಕೊಳ್ಳಬೇಡಿ. ತಪ್ಪುಗಳಂತೂ ಬಹಳಷ್ಟು ಆಗುತ್ತಿರುತ್ತವೆ, ಸತ್ಯವನ್ನು ತಿಳಿಸುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಅನ್ಯರಿಗೆ ಇವರಲ್ಲಿ ದೇಹಾಭಿಮಾನವಿದೆ ಎಂದು ಕೆಟ್ಟ ಅಭಿಪ್ರಾಯವನ್ನು ತರುವಂತಹ ಯಾವುದೇ ಕರ್ತವ್ಯವನ್ನು ಮಾಡಬೇಡಿ. ಸದಾ ಯುದ್ಧದ ಮೈದಾನದಲ್ಲಿದ್ದೀರಿ. ಅನ್ಯ ಸ್ಥಳಗಳಲ್ಲಿ 10-20 ವರ್ಷಗಳವರೆಗೆ ಯುದ್ಧ ನಡೆಯುತ್ತದೆ. ಆದರೆ ಮಾಯೆಯೊಂದಿಗಿನ ನಿಮ್ಮ ಯುದ್ಧವು ಅಂತ್ಯದವರೆಗೂ ನಡೆಯಲಿದೆ ಆದರೆ ಇದು ಗುಪ್ತವಾಗಿದೆ. ಯಾರಿಗೂ ಅರ್ಥವಾಗುವುದಿಲ್ಲ. ಗೀತೆಯಲ್ಲಿ ಯಾವ ಮಹಾಭಾರತ ಯುದ್ಧವಿದೆಯೋ ಅದನ್ನು ಸ್ಥೂಲವಾಗಿ ತೋರಿಸಿದ್ದಾರೆ ಆದರೆ ಇದು ಆತ್ಮಿಕ ಯುದ್ಧವಾಗಿದೆ. ಪಾಂಡವರ ಆತ್ಮಿಕ ಯುದ್ಧವಾಗಿದೆ. ಪರಮಪಿತ ಪರಮಾತ್ಮನೊಂದಿಗೆ ಯಾರು ವಿಪರೀತ ಬುದ್ಧಿಯವರಾಗಿದ್ದಾರೆಯೋ ಅವರದು ಸ್ಥೂಲ ಯುದ್ಧವಾಗಿದೆ. ನೀವು ಬ್ರಾಹ್ಮಣ ಕುಲಭೂಷಣರದು ಪ್ರೀತಿ ಬುದ್ಧಿಯಾಗಿದೆ. ನೀವು ಅನ್ಯ ಸಂಗಗಳನ್ನು ಬಿಟ್ಟು ಒಬ್ಬ ತಂದೆಯ ಸಂಗವನ್ನು ಸೇರಿದ್ದೀರಿ. ಅನೇಕ ಬಾರಿ ದೇಹಾಭಿಮಾನವು ಬರುವ ಕಾರಣ ಮರೆತು ಹೋಗುತ್ತಾರೆ ಮತ್ತೆ ತಮ್ಮದೇ ಪದವಿ ಭ್ರಷ್ಟ ಮಾಡಿಕೊಳ್ಳುತ್ತಾರೆ. ಮತ್ತೆ ಅಂತ್ಯದಲ್ಲಿ ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ. ಏನೂ ಮಾಡಲು ಸಾಧ್ಯವಾಗುವುದಿಲ್ಲ. ಇದು ಕಲ್ಪ-ಕಲ್ಪದ ಆಟವಾಗಿದೆ. ಈ ಸಮಯದಲ್ಲಿ ಯಾವುದೇ ಅಕರ್ತವ್ಯ ಕಾರ್ಯ ಮಾಡಿದರೆ ಕಲ್ಪ-ಕಲ್ಪಾಂತರಕ್ಕಾಗಿ ಪದವಿಯು ಭ್ರಷ್ಟವಾಗಿ ಬಿಡುತ್ತದೆ. ಬಹಳ ನಷ್ಟವುಂಟಾಗುತ್ತದೆ.

ತಂದೆಯು ತಿಳಿಸುತ್ತಾರೆ-ಮೊದಲು ನೀವು 100% ನಷ್ಟದ ಖಾತೆಯಲ್ಲಿದ್ದಿರಿ, ಈಗ ತಂದೆಯು 100% ಲಾಭದಲ್ಲಿ ತೆಗೆದುಕೊಂಡು ಹೋಗುತ್ತಾರೆ ಆದ್ದರಿಂದ ಶ್ರೀಮತದಂತೆ ನಡೆಯಬೇಕಾಗಿದೆ. ಪ್ರತಿಯೊಬ್ಬ ಮಗುವು ಕಲ್ಯಾಣಕಾರಿಯಾಗಬೇಕಾಗಿದೆ. ಎಲ್ಲರಿಗೆ ಸುಖದ ಮಾರ್ಗವನ್ನು ತಿಳಿಸಬೇಕಾಗಿದೆ. ಸುಖವಿರುವುದೇ ಸ್ವರ್ಗದಲ್ಲಿ, ದುಃಖವು ನರಕದಲ್ಲಿದೆ - ಏಕೆ? ಏಕೆಂದರೆ ಇದು ವಿಕಾರಿ ಪ್ರಪಂಚವಾಗಿದೆ. ಅದು ನಿರ್ವಿಕಾರಿ ಪ್ರಪಂಚವಾಗಿತ್ತು, ಈಗ ವಿಕಾರಿ ಪ್ರಪಂಚವಾಗಿದೆ. ಮತ್ತೆ ತಂದೆಯು ನಿರ್ವಿಕಾರಿಗಳನ್ನಾಗಿ ಮಾಡುತ್ತಾರೆ. ಈ ಮಾತುಗಳನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಆದ್ದರಿಂದ ಈ ಮುಖ್ಯ ಚಿತ್ರಗಳನ್ನು ಒಳ್ಳೊಳ್ಳೆಯ ಸ್ಥಾನಗಳಲ್ಲಿ ಹಾಕಬೇಕು. ಮೊಟ್ಟ ಮೊದಲನೆಯದಾಗಿ ದೆಹಲಿಯಲ್ಲಿ, ಎರಡನೆಯದಾಗಿ ಬಾಂಬೆ ಮತ್ತು ಕಲ್ಕತ್ತಾದಲ್ಲಿ ಹಾಕಬೇಕು. ಆಗ್ರಾದಲ್ಲಿಯೂ ಪ್ರವಾಸಿಗರು ಬಹಳ ಹೋಗುತ್ತಾರೆ. ಮಕ್ಕಳು ಸೇವೆಯನ್ನಂತೂ ಬಹಳ ಚೆನ್ನಾಗಿ ಮಾಡುತ್ತಿದ್ದೀರಿ, ಈಗ ಇನ್ನೂ ಯಾವುದಾದರೂ ಅಂತಹ ಕರ್ತವ್ಯವನ್ನು ಮಾಡಿ ತೋರಿಸಿ. ಈ ಚಿತ್ರಗಳನ್ನು ಮಾಡಿಸುವುದರಲ್ಲಿ ಯಾವುದೇ ಕಷ್ಟವಿಲ್ಲ ಕೇವಲ ಅನುಭವ ಬೇಕು. ಒಳ್ಳೆಯ ದೊಡ್ಡ-ದೊಡ್ಡ ಚಿತ್ರಗಳಾಗಿರಲಿ ಯಾವುದು ದೂರದಿಂದಲೇ ಓದುವಂತಿರಬೇಕು. ಗೋಲದ ಚಿತ್ರವನ್ನೂ ದೊಡ್ಡದಾಗಿ ಮಾಡಿಸಿ ಅದನ್ನು ಬಹಳ ಸುರಕ್ಷಿತವಾಗಿಟ್ಟುಕೊಳ್ಳಬೇಕಾಗುತ್ತದೆ. ಯಾರೂ ಹಾಳು ಮಾಡದಿರಲಿ. ಯಜ್ಞದಲ್ಲಿ ಅಸುರರ ವಿಘ್ನಗಳು ಬೀಳುತ್ತವೆ ಏಕೆಂದರೆ ಇವು ಹೊಸ ಮಾತುಗಳಾಗಿವೆ. ಎಲ್ಲರೂ ತಮ್ಮ-ತಮ್ಮ ಅಂಗಡಿಗಳನ್ನು ತೆರೆದು ಕುಳಿತಿದ್ದಾರೆ. ಎಲ್ಲರಿಗೂ ಕೊನೆಗೊಂದು ದಿನ ಅರ್ಥವಾಗುತ್ತದೆ - ನಾವು ಕೆಳಗಿಳಿಯುತ್ತಾ ಬಂದಿದ್ದೇವೆ ಅಂದಮೇಲೆ ಏನೋ ಕೊರತೆಯಿದೆ. ತಂದೆಯೇ ಕಲ್ಯಾಣಕಾರಿಯಾಗಿದ್ದಾರೆ. ಅವರೇ ತಿಳಿಸುತ್ತಾರೆ - ಭಾರತದ ಅಕಲ್ಯಾಣ ಹೇಗೆ ಮತ್ತು ಏಕೆ ಆಗಿದೆ? ಭಾರತವನ್ನು ತಮೋಪ್ರಧಾನವನ್ನಾಗಿ ಯಾರು ಮಾಡುತ್ತಾರೆ ಮತ್ತು ಸತೋಪ್ರಧಾನವನ್ನಾಗಿ ಯಾರು ಮಾಡುತ್ತಾರೆ? ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಸಂಗಮಯುಗವನ್ನೂ ತಿಳಿದುಕೊಂಡಿಲ್ಲ. ಭಗವಂತನು ಯುಗ ಯುಗಗಳಲ್ಲಿ ಬರುತ್ತಾರೆಂದು ಹೇಳುತ್ತಾರೆ, ಇನ್ನೂ ಕೆಲವೊಮ್ಮೆ ಭಗವಂತನು ನಾಮ-ರೂಪದಿಂದ ಭಿನ್ನವಾಗಿದ್ದಾರೆ ಎಂದೂ ಹೇಳುತ್ತಾರೆ. ಭಾರತವು ಪ್ರಾಚೀನ ಸ್ವರ್ಗವಾಗಿತ್ತು, ಕ್ರಿಸ್ತನಿಗೆ ಮೂರು ಸಾವಿರ ವರ್ಷಗಳ ಮೊದಲು ದೇವತೆಗಳ ರಾಜ್ಯವಿತ್ತೆಂಬುದನ್ನೂ ಹೇಳುತ್ತಾರೆ. ಮತ್ತೆ ಕಲ್ಪದ ಆಯಸ್ಸನ್ನು ಬಹಳ ಉದ್ದಗಲವಾಗಿ ಬರೆದು ಬಿಟ್ಟಿದ್ದಾರೆ. ಆದ್ದರಿಂದ ಮಕ್ಕಳು ಆತ್ಮಾಭಿಮಾನಿಗಳಾಗುವ ಬಹಳ ಪರಿಶ್ರಮ ಪಡಬೇಕಾಗಿದೆ. ಅರ್ಧಕಲ್ಪ ಸತ್ಯ-ತ್ರೇತಾಯುಗದಲ್ಲಿ ನೀವು ಆತ್ಮಾಭಿಮಾನಿಗಳಾಗಿದ್ದಿರಿ ಆದರೆ ಪರಮಾತ್ಮ ಅಭಿಮಾನಿಗಳಾಗಿರಲಿಲ್ಲ. ಇಲ್ಲಂತೂ ನೀವು ದೇಹಾಭಿಮಾನಿಗಳಾಗಿ ಬಿಟ್ಟಿದ್ದೀರಿ, ಈಗ ಪುನಃ ದೇಹೀ-ಅಭಿಮಾನಿಗಳಾಗಬೇಕಾಗಿದೆ. ಯಾತ್ರೆ ಎಂಬ ಶಬ್ಧವೂ ಇದೆ ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಮನ್ಮನಾಭವದ ಅರ್ಥವಾಗಿದೆ - ಆತ್ಮಿಕ ಯಾತ್ರೆಯಲ್ಲಿರಿ. ಹೇ ಆತ್ಮಗಳೇ, ತಂದೆಯಾದ ನನ್ನನ್ನು ನೆನಪು ಮಾಡಿ. ಕೃಷ್ಣನಂತೂ ಈ ರೀತಿ ಹೇಳಲು ಸಾಧ್ಯವಿಲ್ಲ. ಕೃಷ್ಣನು ಗೀತೆಯ ಭಗವಂತನಾಗಲು ಹೇಗೆ ಸಾಧ್ಯ! ಅವರ ಮೇಲೆ ಯಾರೂ ಕಳಂಕ ಹೊರಿಸಲು ಸಾಧ್ಯವಿಲ್ಲ. ಇದನ್ನೂ ತಂದೆಯು ತಿಳಿಸಿದ್ದಾರೆ, ಏಣಿಯನ್ನು ಇಳಿಯುವಾಗ ಅರ್ಧಕಲ್ಪ ಕಾಮ ಚಿತೆಯ ಮೇಲೆ ಕುಳಿತು ಕಪ್ಪಾಗಿ ಬಿಡುತ್ತೀರಿ. ಈಗ ಕಬ್ಬಿಣದ ಯುಗವಾಗಿದೆ. ಅವರ ಸಂಪ್ರದಾಯಗಳೂ ಸಹ ಕಪ್ಪಾಗಿಯೇ ಇದೆ ಆದರೆ ಎಲ್ಲರ ರೂಪವನ್ನು ಕಪ್ಪಾಗಿ ಹೇಗೆ ತೋರಿಸುವುದು! ಚಿತ್ರಗಳನ್ನೂ ಸಹ ತಿಳುವಳಿಕೆಯಿಲ್ಲದೆ ಮಾಡಿಸಿ ಬಿಟ್ಟಿದ್ದಾರೆ. ಕೃಷ್ಣನನ್ನೇ ಶ್ಯಾಮ ಮತ್ತು ಸುಂದರ ಎಂದು ಹೇಳುವುದು.... ಇದು ಹೇಗೆ ಸಾಧ್ಯ! ಇಂತಹವರಿಗೆ ಅಂಧಶ್ರದ್ಧೆಯಿಂದ ಗೊಂಬೆ ಪೂಜೆ ಮಾಡುವವರೆಂದು ಹೇಳಲಾಗುತ್ತದೆ. ಗೊಂಬೆಗಳಿಗೆ ಯಾವುದೆ ನಾಮ-ರೂಪ, ಕರ್ತವ್ಯವಿರುವುದಿಲ್ಲ ಹಾಗೆಯೇ ನೀವೂ ಸಹ ಮೊದಲು ಗೊಂಬೆ ಪೂಜೆ ಮಾಡುತ್ತಿದ್ದಿರಿ, ಅರ್ಥವೇನನ್ನೂ ತಿಳಿದುಕೊಂಡಿರಲಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಪ್ರದರ್ಶನಿಯ ಮುಖ್ಯ ಚಿತ್ರಗಳನ್ನು ಮಾಡಿಸಿ ಕಮಿಟಿ ಮಾಡಿ. ಪ್ರದರ್ಶನಿಯ ಹಿಂದೆ ಪ್ರದರ್ಶನಿ ನಡೆಯುತ್ತಿರಲಿ. ಬಂಧನ ಮುಕ್ತರಂತೂ ಅನೇಕರಿದ್ದಾರೆ. ಕನ್ಯೆಯರು, ವಾನಪ್ರಸ್ಥಿಗಳು ಬಂಧನ ಮುಕ್ತರಾಗಿದ್ದಾರೆ ಅಂದಮೇಲೆ ನೀವು ಮಕ್ಕಳು ಆದೇಶವನ್ನು ಕಾರ್ಯದಲ್ಲಿ ತರಬೇಕು. ಇವರು ಗುಪ್ತ ಪಾಂಡವರಾಗಿದ್ದಾರೆ, ಇದು ಯಾರಿಗೂ ಅರ್ಥವಾಗುವುದಿಲ್ಲ. ತಂದೆಯೂ ಗುಪ್ತ, ಜ್ಞಾನವೂ ಗುಪ್ತವಾಗಿದೆ. ಅಲ್ಲಿ ಮನುಷ್ಯರು ಮನುಷ್ಯರಿಗೆ ಜ್ಞಾನ ಕೊಡುತ್ತಾರೆ. ಇಲ್ಲಿ ಪರಮಾತ್ಮನು ಆತ್ಮರಿಗೆ ಜ್ಞಾನ ಕೊಡುತ್ತಾರೆ, ಆತ್ಮವೇ ಜ್ಞಾನವನ್ನು ತೆಗೆದುಕೊಳ್ಳುತ್ತದೆ ಆದರೆ ಇದು ಅರ್ಥವಾಗುವುದೇ ಇಲ್ಲ. ಏಕೆಂದರೆ ಅವರು ಆತ್ಮವನ್ನು ನಿರ್ಲೇಪವೆಂದು ಹೇಳುತ್ತಾರೆ. ವಾಸ್ತವದಲ್ಲಿ ಆತ್ಮವೇ ಎಲ್ಲವನ್ನೂ ಮಾಡುತ್ತದೆ. ಆತ್ಮವೇ ಕರ್ಮಗಳನುಸಾರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತದೆ. ತಂದೆಯು ಇವೆಲ್ಲಾ ಮಾತುಗಳನ್ನು ಚೆನ್ನಾಗಿ ಬುದ್ಧಿಯಲ್ಲಿ ಹಾಕುತ್ತಾರೆ. ಎಲ್ಲಾ ಸೇವಾಕೇಂದ್ರಗಳಲ್ಲಿ ನಂಬರ್ವಾರ್ ದೇಹೀ-ಅಭಿಮಾನಿಗಳಿದ್ದಾರೆ. ಯಾರು ಚೆನ್ನಾಗಿ ತಿಳಿದುಕೊಳ್ಳುವರೋ ಅವರು ಮತ್ತೆ ಅನ್ಯರಿಗೆ ತಿಳಿಸುತ್ತಾರೆ. ದೇಹಾಭಿಮಾನಿಗಳು ತಿಳಿದುಕೊಳ್ಳುವುದೂ ಇಲ್ಲ, ತಿಳಿಸುವುದೂ ಇಲ್ಲ. ನನಗೇನೂ ಅರ್ಥವಾಗುವುದಿಲ್ಲ ಎಂದು ಹೇಳುವುದೂ ಸಹ ದೇಹಾಭಿಮಾನವಾಗಿದೆ. ಅರೆ! ನೀವಂತೂ ಆತ್ಮರಾಗಿದ್ದೀರಿ, ತಂದೆಯು ಆತ್ಮರಿಗೆ ಕುಳಿತು ತಿಳಿಸುತ್ತಾರೆ. ಬುದ್ಧಿಯು ತೆರೆದು ಬಿಡಬೇಕು. ಅದೃಷ್ಟದಲ್ಲಿಲ್ಲವೆಂದರೆ ಬುದ್ಧಿಯ ಬೀಗವು ತೆರೆಯುವುದಿಲ್ಲ. ಆದ್ದರಿಂದ ತಂದೆಯು ಪುರುಷಾರ್ಥ ಮಾಡಿಸುತ್ತಾರೆ ಆದರೆ ಅದೃಷ್ಟದಲ್ಲಿಲ್ಲವೆಂದರೆ ಪುರುಷಾರ್ಥವೂ ಇಲ್ಲ. ಇದು ಬಹಳ ಸಹಜವಾಗಿದೆ. ಕೇವಲ ತಂದೆ ಮತ್ತು ಆಸ್ತಿಯನ್ನು ತಿಳಿದುಕೊಳ್ಳಬೇಕಾಗಿದೆ. ಬೇಹದ್ದಿನ ತಂದೆಯಿಂದ ಆಸ್ತಿಯು ಸಿಗುತ್ತದೆ. ನೀವು ಭಾರತವಾಸಿಗಳೆಲ್ಲರೂ ದೇವಿ-ದೇವತೆಗಳಾಗಿದ್ದಿರಿ, ಪ್ರಜೆಗಳೂ ಅದೇರೀತಿಯಿದ್ದಾರೆ, ಈ ಸಮಯದಲ್ಲಿ ಪತಿತರಾಗಿ ಬಿಟ್ಟಿದ್ದಾರೆ. ಎಷ್ಟೊಂದು ತಿಳಿಸಲಾಗುತ್ತದೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ನಾನು ನಿಮ್ಮನ್ನು ದೇವಿ-ದೇವತೆಗಳನ್ನಾಗಿ ಮಾಡಿದ್ದೆನು, ನೀವೀಗ ಏನಾಗಿ ಬಿಟ್ಟಿದ್ದೀರಿ! ಇದು ಕುಂಭಿಪಾಕ ನರಕವಾಗಿದೆ. ವಿಷಯ ವೈತರಣಿ ನದಿಯಲ್ಲಿ ಮನುಷ್ಯರನ್ನು ಪ್ರಾಣಿ-ಪಕ್ಷಿ ಇತ್ಯಾದಿಯಲ್ಲವನ್ನೂ ಒಂದೇ ಸಮಾನವಾಗಿ ತೋರಿಸುತ್ತಾರೆ. ಇಲ್ಲಂತೂ ಮನುಷ್ಯರು ಇನ್ನೂ ಕೆಟ್ಟು ಹೋಗಿದ್ದಾರೆ. ಮನುಷ್ಯರಲ್ಲಿ ಕ್ರೋಧವು ನೋಡಿ ಎಷ್ಟೊಂದಿದೆ. ಲಕ್ಷಾಂತರ ಜನರನ್ನು ಸಾಯಿಸುತ್ತಾರೆ. ಯಾವ ಭಾರತವು ವೇಶ್ಯಾಲಯವಾಗಿದೆ, ಇದನ್ನು ಶಿವಾಲಯವನ್ನಾಗಿ ಶಿವ ತಂದೆಯೇ ಮಾಡುತ್ತಾರೆ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ಹೀಗೀಗೆ ಮಾಡಿ ಎಂದು ಸಲಹೆ ನೀಡುತ್ತಾರೆ. ಮಕ್ಕಳೇ, ಚಿತ್ರಗಳನ್ನು ಮಾಡಿಸಿ ಮತ್ತು ದೊಡ್ಡ-ದೊಡ್ಡ ವ್ಯಕ್ತಿಗಳಿಗೆ ತಿಳಿಸಿ - ಈ ಪ್ರಾಚೀನ ಯೋಗ, ಪ್ರಾಚೀನ ಜ್ಞಾನವನ್ನು ಎಲ್ಲರೂ ಕೇಳಬೇಕಾಗಿದೆ ಆದ್ದರಿಂದ ಹಾಲ್ ತೆಗೆದುಕೊಂಡು ಪ್ರದರ್ಶನಿಯನ್ನಿಡಿ. ಅವರಿಂದ ಹಣ ಇತ್ಯಾದಿಗಳೇನನ್ನೂ ಪಡೆಯಬೇಡಿ. ಆದರೂ ಯಾರಾದರೂ ಸರಿಯಾಗಿ ತಿಳಿದುಕೊಂಡರೆ ಅವರಿಂದ ಬಾಡಿಗೆಯನ್ನು ತೆಗೆದುಕೊಳ್ಳಿ. ತಾವು ಚಿತ್ರಗಳನ್ನು ನೋಡಿದರೆ ಹಣವನ್ನು ಕೂಡಲೇ ಹಿಂತಿರುಗಿಸಿ ಬಿಡುವರು. ಕೇವಲ ಯುಕ್ತಿಯಿಂದ ತಿಳಿಸಬೇಕು. ತಮ್ಮ ಕೈಯಲ್ಲಿ ಅಧಿಕಾರವಿರುತ್ತದೆಯಲ್ಲವೆ. ಏನು ಬೇಕಾದರೂ ಮಾಡಬಹುದು ಆದರೆ ಅವರು ತಿಳಿದುಕೊಳ್ಳುವರೇ? ವಿನಾಶಕಾಲೇ ವಿಪರೀತ ಬುದ್ಧಿಯವರಂತೂ ವಿನಾಶವನ್ನೇ ಪ್ರಾಪ್ತಿ ಹೊಂದಿದರು. ಪಾಂಡವರಂತೂ ಭವಿಷ್ಯದಲ್ಲಿ ಪದವಿಯನ್ನು ಪಡೆದರು. ಆದರೂ ರಾಜ್ಯವು ಕೊನೆಯಲ್ಲಿ ಭವಿಷ್ಯದಲ್ಲಿರುವುದು, ಈಗ ಇರುವುದಿಲ್ಲ. ಈ ಮನೆ ಇತ್ಯಾದಿಗಳೆಲ್ಲವೂ ಮಣ್ಣು ಪಾಲಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ಪ್ರದರ್ಶನಿಯನ್ನು ಮಾಡಬೇಕು. ಬಹಳ ಚೆನ್ನಾಗಿ ಕಾರ್ಡಿನ ಮೇಲೆ ನಿಮಂತ್ರಣ ಕೊಡಬೇಕು. ನೀವು ಮೊದಲು ದೊಡ್ಡ-ದೊಡ್ಡವರಿಗೆ ತಿಳಿಸಿ ಆಗ ಅವರು ಸಹಯೋಗ ನೀಡುತ್ತಾರೆ ಬಾಕಿ ನೀವೇ ಮಲಗಿರಬಾರದು. ಕೆಲವು ಮಕ್ಕಳು ದೇಹಾಭಿಮಾನದಲ್ಲಿ ಮಲಗಿರುತ್ತಾರೆ. ಕಮಿಟಿ ಮಾಡಿ ಕ್ಷೀರ ಖಂಡವಾಗಿ ಯುಕ್ತಿಗಳನ್ನು ರಚಿಸಬೇಕು ಬಾಕಿ ಮುರುಳಿಯನ್ನೇ ಓದದಿದ್ದರೆ ಧಾರಣೆ ಹೇಗಾಗುವುದು? ಹೀಗೆ ನಿರ್ಲಕ್ಷ್ಯ ಮಾಡುವವರು ಅನೇಕರಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ದೇಹೀ-ಅಭಿಮಾನಿಯಾಗಿ ಸರ್ವೀಸಿನ ಭಿನ್ನ-ಭಿನ್ನ ಯುಕ್ತಿಗಳನ್ನು ರಚಿಸಬೇಕಾಗಿದೆ. ಪರಸ್ಪರ ಕ್ಷೀರ ಖಂಡವಾಗಿ ಸರ್ವೀಸ್ ಮಾಡಬೇಕಾಗಿದೆ. ಹೇಗೆ ತಂದೆಯು ಕಲ್ಯಾಣಕಾರಿಯಾಗಿದ್ದಾರೆ ಅದೇರೀತಿ ಕಲ್ಯಾಣಕಾರಿಗಳಾಗಬೇಕಾಗಿದೆ.

2. ಪ್ರೀತಿ ಬುದ್ಧಿಯವರಾಗಿ ಅನ್ಯ ಸಂಗಗಳನ್ನು ಬಿಟ್ಟು ಒಬ್ಬರ ಸಂಗವನ್ನು ಸೇರಬೇಕಾಗಿದೆ. ಕಲ್ಪ-ಕಲ್ಪಾಂತರಕ್ಕಾಗಿ ನಷ್ಟವಾಗುವಂತಹ ಯಾವುದೇ ಅಕರ್ತವ್ಯ ಮಾಡಬಾರದು.

ವರದಾನ:
ಸದಾ ಒಲವು-ಉಲ್ಲಾಸದಲ್ಲಿರುತ್ತಾ ಏರುವ ಕಲೆಯ ಅನುಭವ ಮಾಡುವಂತಹ ಮಹಾವೀರ ಭವ.

ಮಹಾವೀರ ಮಕ್ಕಳು ಪ್ರತಿ ಸೆಕೆಂಡ್, ಪ್ರತಿ ಸಂಕಲ್ಪದಲ್ಲಿ ಏರುವ ಕಲೆಯ ಅನುಭವ ಮಾಡುತ್ತಾರೆ. ಅವರ ಏರುವ ಕಲೆ ಸರ್ವರ ಪ್ರತಿ ಒಳ್ಳೆಯದು ಅರ್ಥಾತ್ ಕಲ್ಯಾಣ ಮಾಡಲು ನಿಮಿತ್ತರಾಗಿ ಮಾಡಿ ಬಿಡುವುದು. ಅವರಿಗೆ ನಿಲ್ಲುವ ಅಥವಾ ಆಯಾಸದ ಅನುಭೂತಿ ಆಗುವುದಿಲ್ಲ, ಅವರು ಸದಾ ಅವಿಶ್ರಾಂತ, ಸದಾ ಒಲವು-ಉಲ್ಲಾಸದಲ್ಲಿರುವವರಾಗಿರುತ್ತಾರೆ. ನಿಲ್ಲುವಂತಹವರಿಗೆ ಕುದುರೆ ಸವಾರ, ಆಯಾಸಗೊಳ್ಳುವವರಿಗೆ ಪ್ಯಾದೆ ಮತ್ತು ಯಾರು ಸದಾ ನಡೆಯುತ್ತಿರುವವರಾಗಿದ್ದಾರೆ ಅವರನ್ನು ಮಹಾವೀರ ಎಂದು ಕರೆಯಲಾಗುವುದು. ಅವರಿಗೆ ಮಾಯೆಯ ಯಾವುದೇ ರೂಪದಲ್ಲಿಯೂ ಸಹ ಕಣ್ಣು ಮುಳುಗುವುದಿಲ್ಲ.

ಸ್ಲೋಗನ್:
ಯಾರು ತಮ್ಮ ಸಾಧನೆಯ ಮುಖಾಂತರ ಯಾವಾಗ ಬೇಕು ಆಗ ಶೀತಲ ಸ್ವರೂಪ ಮತ್ತು ಯಾವಾಗ ಬೇಕು ಆಗ ಜ್ವಾಲಾ ಸ್ವರೂಪ ಧಾರಣೆ ಮಾಡುತ್ತಾರೆ, ಅವರೇ ಶಕ್ತಿಶಾಲಿ ಆಗಿದ್ದಾರೆ.


ಮಾತೇಶ್ವರೀಜಿಯವರ ಅಮೂಲ್ಯ ಮಹಾವಾಕ್ಯ:-

ಆತ್ಮ ಎಂದೂ ಪರಮಾತ್ಮನ ಅಂಶ ಆಗಲು ಸಾಧ್ಯವಿಲ್ಲ:- ಬಹಳ ಮನುಷ್ಯರು ಹೀಗೆ ತಿಳಿಯುತ್ತಾರೆ, ನಾವು ಆತ್ಮಗಳು ಪರಮಾತ್ಮನ ಅಂಶವಾಗಿದ್ದೇವೆ, ಅಂಶ ಎಂದು ಹೇಳಲಾಗುವುದು ಒಂದು ತುಂಡಿಗೆ. ಒಂದು ಕಡೆ ಹೇಳುತ್ತಾರೆ ಪರಮಾತ್ಮ ಅನಾದಿ ಮತ್ತು ಅವಿನಾಶಿಯಾಗಿದ್ದಾರೆ ಎಂದು, ಅಂದಾಗ ಈ ರೀತಿಯ ಅವಿನಾಶಿ ಪರಮಾತ್ಮನನ್ನು ತುಂಡುಗಳೆಂದು ಹೇಗೆ ಹೇಳುತ್ತಾರೆ. ಈಗ ಪರಮಾತ್ಮ ಹೇಗೆ ತುಂಡಾಗಲು ಸಾಧ್ಯ, ಆತ್ಮವೂ ಸಹ ಅಜರ ಅಮರ ಆಗಿದೆ, ಅಂದಾಗ ಅವಶ್ಯವಾಗಿ ಆತ್ಮಕ್ಕೆ ಜನ್ಮ ಕೊಡುವವರೂ ಸಹ ಅಮರರಾದರು ಎಂದಾಯಿತು. ಇಂತಹ ಅಮರ ಪರಮಾತ್ಮನನ್ನು ತುಂಡುಗಳಲ್ಲಿ ತರುವುದು ಎಂದರೆ ಪರಮಾತ್ಮನನ್ನೂ ಸಹ ವಿನಾಶಿ ಎಂದು ಹೇಳಿದ ಹಾಗೆ ಆದರೆ ನಾವಂತೂ ತಿಳಿದಿರುವೆವು ನಾವು ಆತ್ಮಗಳು ಪರಮಾತ್ಮನ ಸಂತಾನರು. ಅಂದಾಗ ನಾವು ಅವರ ವಂಶಜರಾದೆವು ಅರ್ಥಾತ್ ಮಕ್ಕಳಾದೆವು ಅಂದಮೇಲೆ ಅಂಶ ಆಗಲು ಹೇಗೆ ಸಾಧ್ಯ? ಆದ್ದರಿಂದ ಪರಮಾತ್ಮನ ಮಹಾವಾಕ್ಯವಿದೆ ಮಕ್ಕಳೇ ನಾನು ಸ್ವತಃ ಅಮರನಾಗಿದ್ದೇನೆ, ಹೊಳೆಯುತ್ತಿರುವ ಜ್ಯೋತಿಯಾಗಿದ್ದೇನೆ, ನಾನು ಎಂದೂ ನಂದಿಹೋಗುವುದಿಲ್ಲ ಮತ್ತು ಎಲ್ಲ ಮನುಷ್ಯ ಆತ್ಮಗಳ ದೀಪ ಬೆಳಗುತ್ತೆ ಹಾಗೂ ನಂದಿಯೂ ಸಹ ಹೋಗುತ್ತೆ. ಅವುಗಳನ್ನೆಲ್ಲಾ ಬೆಳಗಿಸುವಂತಹವರು ಮತ್ತೆ ನಾನೇ ಏಕೆಂದರೆ ಬೆಳಕು ಮತ್ತು ಶಕ್ತಿಯನ್ನು ಕೊಡುವಂತಹವನು ನಾನಾಗಿದ್ದೇನೆ, ಬಾಕಿ ಇಷ್ಟಂತೂ ಖಂಡಿತ ಇದೆ ನಾನು ಪರಮಾತ್ಮನ ಹೊಳಪು ಮತ್ತು ಆತ್ಮಗಳ ಹೊಳಪಿನಲ್ಲಿ ವ್ಯತ್ಯಾಸ ಅವಶ್ಯವಾಗಿದೆ. ಹೇಗೆ ಬಲ್ಬ್ನಲ್ಲಿಯೂ ಕೆಲವು ಹೆಚ್ಚು ಪವರ್ ಉಳ್ಳದ್ದು. ಕೆಲವು ಕಡಿಮೆ ಪವರ್ ಉಳ್ಳದ್ದು ಇರುವುದು, ಹಾಗೆಯೇ ಆತ್ಮವೂ ಸಹ ಕೆಲವು ಹೆಚ್ಚು ಶಕ್ತಿ ಉಳ್ಳದ್ದು ಕೆಲವು ಕಡಿಮೆ ಶಕ್ತಿ ಉಳ್ಳದ್ದು ಇರುವುದು. ಬಾಕಿ ಪರಮಾತ್ಮನ ಶಕ್ತಿ ಯಾವುದಕ್ಕಿಂತಲೂ ಕಡಿಮೆ ಹೆಚ್ಚು ಆಗುವುದಿಲ್ಲ ಅದಕ್ಕಾಗಿಯೇ ಪರಮಾತ್ಮನಿಗೆ ಹೇಳಲಾಗುವುದು ಪರಮಾತ್ಮ ಸರ್ವಶಕ್ತಿವಾನ್ ಅರ್ಥಾತ್ ಸರ್ವ ಆತ್ಮಗಳಿಗಿಂತಲೂ ಅವರಲ್ಲಿ ಶಕ್ತಿ ಹೆಚ್ಚಾಗಿದೆ. ಅವರೇ ಸೃಷ್ಟಿಯ ಅಂತ್ಯದಲ್ಲಿ ಬರುತ್ತಾರೆ, ಒಂದುವೇಳೆ ಯಾರಾದರೂ ಪರಮಾತ್ಮ ಸೃಷ್ಟಿಯ ಮಧ್ಯದಲ್ಲಿ ಬರುತ್ತಾರೆ ಅರ್ಥಾತ್ ಯುಗ-ಯುಗದಲ್ಲಿ ಬರುತ್ತಾರೆ ಎಂದು ತಿಳಿದಿದ್ದಾರೆ ಅಂದಾಗ ತಿಳಿಯಿರಿ ಪರಮಾತ್ಮ ಮಧ್ಯದಲ್ಲಿ ಬಂದಿದ್ದೇ ಆದರೆ ಪರಮಾತ್ಮ ಸರ್ವ ಶ್ರೇಷ್ಠ ಹೇಗೆ ಆಗುತ್ತಾರೆ. ಒಂದುವೇಳೆ ಯಾರಾದರೂ ಪರಮಾತ್ಮ ಯುಗ-ಯುಗದಲ್ಲಿ ಬರುತ್ತಾರೆ ಎಂದು ತಿಳಿದಿದ್ದರೆ, ಆಗ ಹೀಗೆ ತಿಳಿಯೋಣವೇ ಪರಮಾತ್ಮ ಪದೇ ಪದೇ ತನ್ನ ಶಕ್ತಿಯನ್ನು ಉಪಯೋಗಿಸುತ್ತಾರೆ ಎಂದು. ಇಂತಹ ಸರ್ವ ಶಕ್ತಿವಾನ್ನ ಶಕ್ತಿ ಇಷ್ಟರ ಮಟ್ಟಿಗೆ ಇದೆ, ಒಂದುವೇಳೆ ಮಧ್ಯದಲ್ಲಿಯೇ ಬಂದು ತನ್ನ ಶಕ್ತಿಯಿಂದ ಎಲ್ಲರಿಗೆ ಶಕ್ತಿ ಅಥವಾ ಸದ್ಗತಿ ಕೊಟ್ಟಿದ್ದೇ ಆದರೆ ಎಲ್ಲರ ಶಕ್ತಿ ಖಾಯಂ ಆಗಿರಬೇಕು ಮತ್ತೆ ದುರ್ಗತಿಯನ್ನು ಏಕೆ ಪ್ರಾಪ್ತಿ ಮಾಡಿಕೊಳ್ಳುವಿರಿ? ಆದ್ದರಿಂದ ಇದರಲ್ಲಿ ಸಿದ್ಧವಾಗುತ್ತದೆ ಪರಮಾತ್ಮ ಯುಗ-ಯುಗದಲ್ಲಿ ಬರುವುದಿಲ್ಲ ಅರ್ಥಾತ್ ಮಧ್ಯೆ ಮಧ್ಯೆದಲ್ಲಿ ಬರುವುದಿಲ್ಲ ಎಂದು. ಅವರು ಬರುವುದೇ ಕಲ್ಪದ ಅಂತ್ಯದ ಸಮಯದಲ್ಲಿ ಮತ್ತು ಒಂದೇ ಬಾರಿ ತನ್ನ ಶಕ್ತಿಯಿಂದ ಸರ್ವರ ಸದ್ಗತಿ ಮಾಡುತ್ತಾರೆ. ಯಾವಾಗ ಪರಮಾತ್ಮನು ಇಷ್ಟು ದೊಡ್ಡ ಸೇವೆ ಮಾಡಿರುವ ಕಾರಣ ಅದರ ನೆನಪಾರ್ಥ ದೊಡ್ಡ ಶಿವ ಲಿಂಗವನ್ನು ಮಾಡಿರುವುದು ಮತ್ತು ಇಷ್ಟು ಪೂಜೆ ಮಾಡುತ್ತಾರೆ, ಆದ್ದರಿಂದ ಅವಶ್ಯವಾಗಿ ಪರಮಾತ್ಮ ಸತ್ಯ, ಚೈತನ್ಯ ಮತ್ತು ಸುಂದರ ಸ್ವರೂಪರೂ ಆಗಿದ್ದಾರೆ. ಒಳ್ಳಯದು. ಓಂ ಶಾಂತಿ.