29.03.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ರೂಪಭಸಂತರಾಗಿದ್ದೀರಿ, ನಿಮ್ಮ ಬಾಯಿಂದ ಸದಾ ಜ್ಞಾನ ರತ್ನಗಳೇ ಹೊರ ಬರಬೇಕು, ಯಾರೇ ಹೊಸಬರು ಬಂದರೆ ಅವರಿಗೆ ತಂದೆಯ ಪರಿಚಯ ಕೊಡಿ”

ಪ್ರಶ್ನೆ:
ತಮ್ಮ ಸ್ಥಿತಿಯನ್ನು ಏಕರಸ ಮಾಡಿಕೊಳ್ಳುವ ಸಾಧನ ಯಾವುದಾಗಿದೆ?

ಉತ್ತರ:
ಸಂಗದ ಸಂಭಾಲನೆ ಮಾಡಿ ಆಗ ಸ್ಥಿತಿಯು ಏಕರಸವಾಗುತ್ತಾ ಹೋಗುವುದು. ಸದಾ ಒಳ್ಳೆಯ ಸೇವಾಧಾರಿ ವಿದ್ಯಾರ್ಥಿಯ ಸಂಗವನ್ನೇ ಮಾಡಬೇಕು. ಒಂದುವೇಳೆ ಯಾರಾದರೂ ಜ್ಞಾನ ಮತ್ತು ಯೋಗದ ಮಾತುಗಳನ್ನು ಬಿಟ್ಟು ಉಲ್ಟಾ ಮಾತುಗಳನ್ನು ಮಾತನಾಡುತ್ತಾರೆ, ಬಾಯಿಂದ ರತ್ನಗಳ ಬದಲು ಕಲ್ಲುಗಳು ಹೊರ ಬರುತ್ತವೆ ಎಂದರೆ ಅವರ ಸಂಗದಿಂದ ಸದಾ ಸಾವಧಾನವಾಗಿರಬೇಕು.

ಗೀತೆ:
ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ......

ಓಂ ಶಾಂತಿ.
ಜ್ಞಾನ ಮತ್ತು ವಿಜ್ಞಾನ, ಇದಕ್ಕೆ ತಂದೆ ಮತ್ತು ಆಸ್ತಿ ಎಂದು ಹೇಳುತ್ತಾರೆ. ತಂದೆಯು ತಂದೆ ಮತ್ತು ಆಸ್ತಿಯ ಜ್ಞಾನವನ್ನು ಹೇಳುತ್ತಾರೆ. ದೆಹಲಿಯಲ್ಲಿ ವಿಜ್ಞಾನ ಭವನವಿದೆ, ಆದರೆ ಅವರು ಅರ್ಥವನ್ನು ತಿಳಿದುಕೊಂಡಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಜ್ಞಾನ ಮತ್ತು ಯೋಗ. ಯೋಗದಿಂದ ನಾವು ಪವಿತ್ರರಾಗುತ್ತೇವೆ, ಜ್ಞಾನದಿಂದ ನಮ್ಮ ಶರೀರವು ಪವಿತ್ರವಾಗುತ್ತದೆ, ನಾವು ಇಡೀ ಚಕ್ರವನ್ನು ಅರಿತುಕೊಳ್ಳುತ್ತೇವೆ. ಯೋಗದ ಯಾತ್ರೆಗಾಗಿ ಈ ಜ್ಞಾನವು ಸಿಗುತ್ತದೆ. ಮತ್ತ್ಯಾರೂ ಯೋಗ ಮಾಡುವುದಕ್ಕಾಗಿ ಜ್ಞಾನವನ್ನು ತಿಳಿಸುವುದಿಲ್ಲ. ಅವರು ಸ್ಥೂಲ ವ್ಯಾಯಾಮಗಳನ್ನು ಕಲಿಸುತ್ತಾರೆ. ಇದು ಸೂಕ್ಷ್ಮ ಮತ್ತು ಮೂಲ ಮಾತಾಗಿದೆ. ಗೀತೆಯೂ ಸಹ ಅದರೊಂದಿಗೆ ಸಂಬಂಧವನ್ನಿಡುತ್ತದೆ. ತಂದೆಯು ತಿಳಿಸುತ್ತಾರೆ - ಹೇ ಮಕ್ಕಳೇ, ಹೇ ಮೂಲವತನದ ಪ್ರಯಾಣಿಕರೇ, ಪತಿತ- ಪಾವನ ತಂದೆಯೇ ಸರ್ವರ ಸದ್ಗತಿದಾತನಾಗಿದ್ದಾರೆ. ಅವರೇ ಎಲ್ಲರಿಗೆ ಮನೆಗೆ ಹೋಗುವ ಮಾರ್ಗವನ್ನು ತಿಳಿಸುತ್ತಾರೆ. ನಿಮ್ಮ ಬಳಿ ತಿಳಿದುಕೊಳ್ಳುವುದಕ್ಕಾಗಿ ಮನುಷ್ಯರು ಬರುತ್ತಾರೆ. ಯಾರ ಬಳಿ ಬರುತ್ತಾರೆ? ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರ ಬಳಿ ಬರುತ್ತಾರೆ. ಅಂದಾಗ ನೀವು ಅವರೊಂದಿಗೆ ಕೇಳಿರಿ - ನೀವು ಯಾರ ಬಳಿ ಬಂದಿದ್ದೀರಿ? ಮನುಷ್ಯರು ಸಾಧು-ಸಂತ ಮಹಾತ್ಮರ ಬಳಿ ಬರುತ್ತಾರೆ. ಇಂತಹ ಮಹಾತ್ಮರು ಎಂದು ಅವರು ಹೆಸರೂ ಇರುತ್ತದೆ. ಇಲ್ಲಂತೂ ಹೆಸರೇ ಆಗಿದೆ - ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು. ಬಿ.ಕೆ.ಗಳಂತೂ ಅನೇಕರಿದ್ದಾರೆ, ಆದ್ದರಿಂದ ನೀವು ಕೇಳಿರಿ - ಯಾರ ಬಳಿ ಬಂದಿದ್ದೀರಿ, ಪ್ರಜಾಪಿತ ಬ್ರಹ್ಮಾರವರೊಂದಿಗೆ ನಿಮ್ಮ ಸಂಬಂಧವೇನು? ಅವರು ಎಲ್ಲರ ತಂದೆಯಾದರಲ್ಲವೆ. ನಿಮ್ಮ ಮಹಾತ್ಮರ, ಗುರೂಜಿಯ ದರ್ಶನ ಮಾಡಬೇಕೆಂದು ಕೆಲವರು ಹೇಳುತ್ತಾರೆ ಆಗ ಹೇಳಿರಿ, ನೀವು ಗುರುಗಳೆಂದು ಹೇಗೆ ಹೇಳುತ್ತೀರಿ? ಪ್ರಜಾಪಿತ ಬ್ರಹ್ಮಾಕುಮಾರಿಯರೆಂದು ಹೆಸರನ್ನಿಡಲಾಗಿದೆ ಅಂದಮೇಲೆ ಅವರು ತಂದೆಯಾದರಲ್ಲವೆ, ಗುರುಗಳಲ್ಲ. ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯೆಂದರೆ ಇವರಿಗೆ ಯಾರೋ ತಂದೆಯಿದ್ದಾರೆ. ಅವರು ನಿಮಗೂ ತಂದೆಯಾದರು ಆದ್ದರಿಂದ ನಾವು ಬಿ.ಕೆ.ಗಳ ತಂದೆಯೊಂದಿಗೆ ಮಿಲನ ಮಾಡಲು ಬಯಸುತ್ತೇವೆಂದು ಹೇಳಿರಿ ಎಂದು ಅವರಿಗೆ ತಿಳಿಸಬೇಕು. ಪ್ರಜಾಪಿತನ ಹೆಸರನ್ನು ಎಂದಾದ್ದರೂ ಕೇಳಿದ್ದೀರಾ? ಇಷ್ಟೊಂದು ಮಂದಿ ಮಕ್ಕಳಿದ್ದಾರೆ. ತಂದೆಯ ಬಗ್ಗೆ ಅರ್ಥವಾದಾಗಲೇ ಇವರು ಬೇಹದ್ದಿನ ತಂದೆಯಾಗಿದ್ದಾರೆ. ಪ್ರಜಾಪಿತ ಬ್ರಹ್ಮನಿಗೂ ಅವಶ್ಯವಾಗಿ ಯಾರೋ ತಂದೆಯಿರುವರು ಎಂಬುದು ಅರ್ಥವಾಗುತ್ತದೆ. ಆದ್ದರಿಂದ ಯಾರೇ ಬರಲಿ ಅವರನ್ನು ಕೇಳಿರಿ, ತಾವು ಯಾರ ಬಳಿ ಬಂದಿದ್ದೀರಿ? ಬೋರ್ಡಿನ ಮೇಲೆ ಏನು ಬರೆಯಲ್ಪಟ್ಟಿದೆ? ಇಷ್ಟೊಂದು ಸೇವಾ ಕೇಂದ್ರಗಳಿವೆ, ಇಷ್ಟೊಂದು ಮಂದಿ ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆ ಅಂದಮೇಲೆ ಅವಶ್ಯವಾಗಿ ಅವರಿಗೆ ತಂದೆಯಿರುವರು, ಗುರುಗಳಾಗಲು ಸಾಧ್ಯವಿಲ್ಲ. ಮೊದಲು ಇದು ಬುದ್ಧಿಯಿಂದ ಹೊರಡಲಿ. ಆಗ ಇದು ಮನೆಯಾಗಿದೆ, ನಾನು ಪರಿವಾರದಲ್ಲಿ ಬಂದಿದ್ದೇನೆ ಎಂಬುದು ಅವರಿಗೆ ಅರ್ಥವಾಗುವುದು. ನಾವು ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದೇವೆ ಅಂದಾಗ ಅವಶ್ಯವಾಗಿ ನೀವೂ ಆಗಿರುವಿರಿ. ಒಳ್ಳೆಯದು - ಬ್ರಹ್ಮನು ಯಾರ ಮಗನಾಗಿದ್ದಾರೆ? ಬ್ರಹ್ಮಾ-ವಿಷ್ಣು-ಶಂಕರನಿಗೂ ರಚಯಿತನು ಪರಮಪಿತ ಪರಮಾತ್ಮ ಶಿವನಾಗಿದ್ದಾರೆ. ಅವರು ಬಿಂದುವಾಗಿದ್ದಾರೆ, ಅವರ ಹೆಸರಾಗಿದೆ ಶಿವ. ಅವರು ನಮ್ಮ ತಾತನಾಗಿದ್ದಾರೆ. ನೀವಾತ್ಮರೂ ಅವರ ಸಂತಾನರಾಗಿದ್ದೀರಿ, ಬ್ರಹ್ಮನಿಗೆ ನೀವೆಲ್ಲರೂ ಸಂತಾನರಾಗಿದ್ದೀರಿ ಅಂದಮೇಲೆ ನಾವು ಬಾಪ್ ದಾದಾರವರೊಂದಿಗೆ ಮಿಲನ ಮಾಡಲು ಬಯಸುತ್ತೇವೆಂದು ನೀವು ಈ ರೀತಿ ಹೇಳಿರಿ. ಅವರಿಗೆ ತಿಳಿಸಬೇಕಾದರೆ ಅವರ ಬುದ್ಧಿಯು ತಂದೆಯ ಕಡೆ ಹೊರಟು ಹೋಗುವಂತೆ ತಿಳಿಸಬೇಕು. ನಾನು ಯಾರ ಬಳಿ ಬಂದಿದ್ದೇನೆ ಎಂಬುದು ಅವರಿಗೆ ಅರ್ಥವಾಗಲಿ. ಪ್ರಜಾಪಿತ ಬ್ರಹ್ಮನು ನಮ್ಮ ತಂದೆಯಾಗಿದ್ದಾರೆ, ಶಿವ ತಂದೆಯು ಎಲ್ಲಾ ಆತ್ಮರ ತಂದೆಯಾಗಿದ್ದಾರೆ ಅಂದಮೇಲೆ ಮೊದಲು ನಾವು ಯಾರ ಬಳಿ ಬಂದಿದ್ದೇವೆಂಬುದನ್ನು ತಿಳಿದುಕೊಳ್ಳಿ. ಹೀಗೆ ಯುಕ್ತಿಯಿಂದ ತಿಳಿಸಬೇಕು ಅದರಿಂದ ಇವರು ಶಿವ ತಂದೆಯ ಸಂತಾನರಾಗಿದ್ದಾರೆ, ಇದೊಂದು ಪರಿವಾರವಾಗಿದೆ ಎಂದು ಅವರಿಗೆ ಅರ್ಥವಾಗಲಿ. ಅವರಿಗೆ ತಂದೆ ಮತ್ತು ದಾದಾರವರ ಪರಿಚಯವಾಗಲಿ. ಸರ್ವರ ಸದ್ಗತಿದಾತನು ನಿರಾಕಾರ ತಂದೆಯಾಗಿದ್ದಾರೆ. ಅವರು ಪ್ರಜಾಪಿತ ಬ್ರಹ್ಮಾರವರ ಮೂಲಕ ಸರ್ವರ ಸದ್ಗತಿ ಮಾಡುತ್ತಾರೆ. ಅವರನ್ನೇ ಎಲ್ಲರೂ ಕರೆಯುತ್ತಾರೆಂಬುದನ್ನು ನೀವು ತಿಳಿಸಿಕೊಡಿ. ನೋಡುತ್ತಾರಲ್ಲವೆ – ಎಷ್ಟೊಂದು ಮಂದಿ ಮಕ್ಕಳು ಬಂದು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಮೊದಲು ಅವರಿಗೆ ತಂದೆಯ ಪರಿಚಯ ಸಿಗಲಿ ಆಗ ನಾವು ಬಾಪ್ದಾದಾರವರೊಂದಿಗೆ ಮಿಲನ ಮಾಡಲು ಬಂದಿದ್ದೇವೆಂದು ಅರ್ಥವಾಗುವುದು ಆದ್ದರಿಂದ ಹೇಳಿರಿ, ನಾವು ಇವರಿಗೆ ಬಾಪ್ ದಾದಾ ಎಂದು ಹೇಳುತ್ತೇವೆ. ಜ್ಞಾನಪೂರ್ಣ, ಪತಿತ- ಪಾವನ ಈ ಶಿವ ತಂದೆಯಾಗಿದ್ದಾರೆ. ಭಗವಂತನು ಸರ್ವರ ಸದ್ಗತಿದಾತ, ನಿರಾಕಾರನಾಗಿದ್ದಾರೆ, ಅವರು ಜ್ಞಾನ ಸಾಗರನಾಗಿದ್ದಾರೆ. ಬ್ರಹ್ಮಾರವರ ಮೂಲಕ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಈ ಬ್ರಹ್ಮಾಕುಮಾರ-ಕುಮಾರಿಯರು ಶಿವ ತಂದೆಯ ಸಂತಾನರಾಗಿದ್ದಾರೆ. ಅವರೇ ಎಲ್ಲರ ತಂದೆಯಾಗಿದ್ದಾರೆ ಎಂಬುದನ್ನು ಅವರು ತಿಳಿದುಕೊಳ್ಳುವರು. ಭಗವಂತನು ಒಬ್ಬರೇ ಆಗಿದ್ದಾರೆ, ಅವರೇ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ಅವರು ಸ್ವರ್ಗದ ರಚಯಿತ, ಸರ್ವರ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ ಅರ್ಥಾತ್ ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಾರೆ. ಅವರನ್ನು ನೋಡಿ ತಿಳಿದುಕೊಳ್ಳಲು ಯೋಗ್ಯರಾಗಿದ್ದರೆ ಅವರಿಗೆ ಇದನ್ನು ತಿಳಿಸಿಕೊಡಬೇಕು – ಮೊಟ್ಟ ಮೊದಲಿಗೆ ಕೇಳಿರಿ - ನಿಮಗೆ ಎಷ್ಟು ಮಂದಿ ತಂದೆಯರಿದ್ದಾರೆ? ಲೌಕಿಕ ಮತ್ತು ಪಾರಲೌಕಿಕ. ತಂದೆಯಂತೂ ಸರ್ವವ್ಯಾಪಿಯಾಗಿರಲು ಸಾಧ್ಯವಿಲ್ಲ. ಲೌಕಿಕ ತಂದೆಯಿಂದ ಈ ಆಸ್ತಿಯು ಸಿಗುತ್ತದೆ, ಪಾರಲೌಕಿಕ ತಂದೆಯಿಂದ ಆ ಆಸ್ತಿಯು ಸಿಗುತ್ತದೆ ಅಂದಮೇಲೆ ಅವರಿಗೆ ಸರ್ವವ್ಯಾಪಿಯೆಂದು ಹೇಗೆ ಹೇಳುವಿರಿ? ಈ ಶಬ್ಧವನ್ನು ಬರೆದುಕೊಂಡು ಧಾರಣೆ ಮಾಡಿಕೊಳ್ಳಿ. ಇದನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ತಿಳಿಸುವವರಂತೂ ನೀವಾಗಿದ್ದೀರಿ, ಇದು ಮನೆಯಾಗಿದೆ, ಇವರು ನಮ್ಮ ಗುರುಗಳಲ್ಲ, ನಾವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ನಮಗೆ ಆಸ್ತಿಯನ್ನು ನಿರಾಕಾರ ಶಿವ ತಂದೆಯೇ ಕೊಡುತ್ತಾರೆ. ಅವರೇ ಸರ್ವರ ಸದ್ಗತಿದಾತನಾಗಿದ್ದಾರೆ. ಬ್ರಹ್ಮನಿಗೆ ಸರ್ವರ ಸದ್ಗತಿದಾತ, ಪತಿತ-ಪಾವನ, ಮುಕ್ತಿದಾತನೆಂದು ಹೇಳಲಾಗುವುದಿಲ್ಲ. ಇದು ಶಿವ ತಂದೆಯದೇ ಮಹಿಮೆಯಾಗಿದೆ. ಯಾರೇ ಬರಲಿ ಅವರಿಗೆ ಇದನ್ನೇ ತಿಳಿಸಿ - ಇವರು ಸರ್ವರ ಬಾಪ್ದಾದಾ ಆಗಿದ್ದಾರೆ. ಆ ತಂದೆಯೇ ಸ್ವರ್ಗದ ರಚಯಿತನಾಗಿದ್ದಾರೆ. ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಾರೆ. ನೀವು ಈ ರೀತಿ ಯಾರಿಗಾದರೂ ತಿಳಿಸಿದ್ದೇ ಆದರೆ ಅವರು ತಂದೆಯ ಬಳಿ ಬರುವ ಅವಶ್ಯಕತೆಯೇ ಇರುವುದಿಲ್ಲ, ಎಲ್ಲವೂ ಅರ್ಥವಾಗಿ ಬಿಡುತ್ತದೆ. ನಾವು ಗುರೂಜಿಯ ದರ್ಶನ ಮಾಡಬೇಕೆಂದು ಅವರು ಹೇಳುತ್ತಾರೆ ಏಕೆಂದರೆ ಭಕ್ತಿ ಮಾರ್ಗದಲ್ಲಿ ಗುರುಗಳಿಗೆ ಬಹಳ ಮಹಿಮೆ ಮಾಡುತ್ತಾರೆ. ವೇದಶಾಸ್ತ್ರ, ಯಾತ್ರೆ ಇತ್ಯಾದಿಗಳೆಲ್ಲವನ್ನೂ ಗುರುಗಳೇ ಕಲಿಸುತ್ತಾರೆ. ಆದ್ದರಿಂದ ನೀವು ತಿಳಿಸಿ, ಮನುಷ್ಯರು ಗುರುಗಳಾಗಲು ಸಾಧ್ಯವಿಲ್ಲ. ನಾವು ಈ ಬ್ರಹ್ಮಾರವರಿಗೂ ಸಹ ಗುರುವೆಂದು ಹೇಳುವುದಿಲ್ಲ. ಸರ್ವರ ಸದ್ಗುರು ಒಬ್ಬರೇ ಆಗಿದ್ದಾರೆ. ಯಾವುದೇ ಮನುಷ್ಯರು ಜ್ಞಾನ ಸಾಗರನಾಗಲು ಸಾಧ್ಯವಿಲ್ಲ. ಅವರೆಲ್ಲರೂ ಭಕ್ತಿಮಾರ್ಗದ ಶಾಸ್ತ್ರಗಳನ್ನು ಓದುವವರಾಗಿದ್ದಾರೆ. ಅದಕ್ಕೆ ಶಾಸ್ತ್ರಗಳ ಜ್ಞಾನವೆಂದು ಹೇಳಲಾಗುತ್ತದೆ. ಇಲ್ಲಿ ನಮಗೆ ಜ್ಞಾನ ಸಾಗರ ತಂದೆಯು ಓದಿಸುತ್ತಾರೆ, ಇದು ಆಧ್ಯಾತ್ಮಿಕ ಜ್ಞಾನವಾಗಿದೆ. ಬ್ರಹ್ಮಾ, ವಿಷ್ಣು, ಶಂಕರನಿಗೆ ಜ್ಞಾನ ಸಾಗರನೆಂದು ಹೇಳಲು ಸಾಧ್ಯವಿಲ್ಲ ಅಂದಮೇಲೆ ಮತ್ತೆ ಮನುಷ್ಯರಿಗೆ ಹೇಳಲು ಹೇಗೆ ಸಾಧ್ಯ! ಮನುಷ್ಯರು ಜ್ಞಾನದ ಅಥಾರಿಟಿಯಾಗಲು ಸಾಧ್ಯವಿಲ್ಲ. ಶಾಸ್ತ್ರಗಳ ಅಥಾರಿಟಿಯೆಂದೂ ಸಹ ಪರಮಪಿತ ಪರಮಾತ್ಮನಿಗೇ ಹೇಳಲಾಗುತ್ತದೆ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ ಎಂದು ತೋರಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನನ್ನು ಯಾರೂ ಅರಿತುಕೊಂಡಿಲ್ಲ ಅಂದಮೇಲೆ ಅವರಿಗೆ ಆಸ್ತಿಯು ಎಲ್ಲಿಂದ ಸಿಗುವುದು? ಬೇಹದ್ದಿನ ಆಸ್ತಿಯು ಬೇಹದ್ದಿನ ತಂದೆಯ ಮೂಲಕವೇ ಸಿಗುತ್ತದೆ. ಈಗ ಈ ತಂದೆಯು ಏನು ಮಾಡುತ್ತಿದ್ದಾರೆ? ಇದು ಹೋಲಿ ಮತ್ತು ದುರಿಯಾ ಆಗಿದೆಯಲ್ಲವೆ. ಜ್ಞಾನ ಮತ್ತು ವಿಜ್ಞಾನ ಕೇವಲ ಎರಡು ಶಬ್ಧಗಳಿವೆ. ತಂದೆಯು ಮನ್ಮನಾಭವದ ಜ್ಞಾನವನ್ನು ಕೊಡುತ್ತಾರೆ. ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಅಂದಾಗ ಈ ಜ್ಞಾನ - ವಿಜ್ಞಾನವು ಹೋಲಿ ಮತ್ತು ದುರಿಯಾ ಆಗಿದೆ. ಮನುಷ್ಯರಲ್ಲಿ ಜ್ಞಾನವಿಲ್ಲದೇ ಇರುವ ಕಾರಣ ಒಬ್ಬರು ಇನ್ನೊಬ್ಬರ ಬಾಯಲ್ಲಿ ಧೂಳನ್ನೇ ಎರಚುತ್ತಾರೆ. ಇರುವುದೇ ಹೀಗೆ. ಯಾರದೂ ಗತಿ - ಸದ್ಗತಿಯಾಗುವುದಿಲ್ಲ. ಬಾಯಲ್ಲಿ ಮಣ್ಣನ್ನೇ ಹಾಕುತ್ತಾರೆ. ಜ್ಞಾನದ ಮೂರನೇ ನೇತ್ರವು ಯಾರಿಗೂ ಇಲ್ಲ. ದಂತ ಕಥೆಗಳನ್ನು ಕೇಳುತ್ತಾ ಬಂದಿದ್ದಾರೆ, ಇದಕ್ಕೆ ಅಂಧಶ್ರದ್ಧೆಯೆಂದು ಹೇಳಲಾಗುತ್ತದೆ.

ಈಗ ನೀವಾತ್ಮರಿಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ನೀವು ಮಕ್ಕಳು ತಂದೆಯಿಂದ ಆಸ್ತಿಯ ಪ್ರಾಪ್ತಿಗಾಗಿ ಸಲಹೆಯನ್ನು ಕೊಡಬೇಕಾಗಿದೆ. ಆಗ ಅವರಿಗೆ ಅರ್ಥವಾಗುತ್ತದೆ. ಬ್ರಹ್ಮಾರವರ ಮೂಲಕ ಇವರು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅದು ಮತ್ತ್ಯಾರ ಮೂಲಕವೂ ಸಿಗಲು ಸಾಧ್ಯವಿಲ್ಲ . ಎಲ್ಲಾ ಸೇವಾಕೇಂದ್ರಗಳಲ್ಲಿ ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರೆಂದು ಹೆಸರನ್ನು ಬರೆಯಲಾಗಿದೆ. ಒಂದುವೇಳೆ ಗೀತಾ ಪಾಠಶಾಲೆ ಎಂದು ಬರೆದರೆ ಅದು ಸಾಮಾನ್ಯ ಮಾತಾಗಿ ಬಿಡುತ್ತದೆ. ಈಗ ನೀವೂ ಸಹ ಬಿ.ಕೆ. ಎಂದು ಬರೆದಾಗಲೇ ತಂದೆಯ ಪರಿಚಯ ಕೊಡಲು ಸಾಧ್ಯ. ಮನುಷ್ಯರು ಬಿ.ಕೆ. ಹೆಸರನ್ನು ಕೇಳಿ ಹೆದರುತ್ತಾರೆ ಆದ್ದರಿಂದ ಗೀತಾ ಪಾಠಶಾಲೆ ಎಂದು ಹೆಸರನ್ನು ಬರೆಯುತ್ತಾರೆ. ಆದರೆ ಇದರಲ್ಲಿ ಯಾವುದೇ ಹೆದರುವ ಮಾತಿಲ್ಲ. ತಿಳಿಸಿ ಕೊಡಿ - ಇದು ಮನೆಯಾಗಿದೆ. ಯಾರ ಮನೆಗೆ ಬಂದಿದ್ದೇವೆ ಎಂದು ನೀವು ತಿಳಿದುಕೊಂಡಿದ್ದೀರಿ. ಇವರೆಲ್ಲರ ತಂದೆಯು ಪ್ರಜಾಪಿತ ಬ್ರಹ್ಮನಾಗಿದ್ದಾರೆ. ಭಾರತವಾಸಿಗಳು ಪ್ರಜಾಪಿತ ಬ್ರಹ್ಮನನ್ನು ಒಪ್ಪುತ್ತಾರೆ. ಕ್ರಿಶ್ಚಿಯನ್ನರೂ ಸಹ ಆದಿ ದೇವನು ಬಂದು ಹೋಗಿದ್ದಾರೆ. ಅವರದು ಈ ಮನುಷ್ಯ ವಂಶಾವಳಿಯಾಗಿದೆ ಎಂದು ತಿಳಿಯುತ್ತಾರೆ ಆದರೆ ಅವರು ತಮ್ಮ ಕ್ರಿಸ್ತನನ್ನೇ ಅನುಸರಿಸುತ್ತಾರೆ. ಕ್ರಿಸ್ತನನ್ನು, ಬುದ್ಧನನ್ನು ತಂದೆಯೆಂದು ತಿಳಿಯುತ್ತಾರೆ. ಅವರದೇ ವಂಶಾವಳಿಯಲ್ಲವೆ. ವಾಸ್ತವದಲ್ಲಿ ತಂದೆಯು ಬ್ರಹ್ಮಾರವರ ಮೂಲಕ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಿದ್ದಾರೆ. ಅವರು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದಾರೆ. ಮೊದಲು ತಂದೆಯ ಪರಿಚಯ ಕೋಡಬೇಕಾಗಿದೆ. ನಾವು ನಿಮ್ಮ ತಂದೆಯೊಂದಿಗೆ ಮಿಲನ ಮಾಡಲು ಬಯಸುತ್ತೇವೆ ಎಂದು ಹೇಳಿದರೆ ತಿಳಿಸಿ, ಆಸ್ತಿಯು ಶಿವ ತಂದೆಯಿಂದ ಸಿಗುತ್ತದೆ. ಬ್ರಹ್ಮ ತಂದೆಯಿಂದಲ್ಲ. ಸತ್ಯ ತಂದೆ ಯಾರು? ಗೀತೆಯ ಭಗವಂತ ಯಾರು? ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ಯಾರು ಮಾಡಿದರು? ತಂದೆ. ಈ ರೀತಿ ಹೇಳಿದರೆ ಇವರೆಲ್ಲಾ ಬ್ರಹ್ಮಾಕುಮಾರ-ಕುಮಾರಿಯರು ಶಿವ ತಂದೆಯ ಸಂತಾನರಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವರು. ಶಿವನಿಂದ ಬಹ್ಮಾರವರ ಮೂಲಕ ಗತಿ-ಸದ್ಗತಿಯ ಆಸ್ತಿಯು ಸಿಗುತ್ತದೆ. ಅವರು ಈ ಸಮಯದಲ್ಲಿ ನಮಗೆ ಜೀವನ್ಮುಕ್ತಿಯನ್ನು ಕೊಡುತ್ತಿದ್ದಾರೆ, ಉಳಿದೆಲ್ಲರೂ ಮುಕ್ತಿಯಲ್ಲಿ ಹೋಗುತ್ತಾರೆ. ಈ ಜ್ಞಾನವು ನೀವು ಮಕ್ಕಳ ಬುದ್ದಿಯಲ್ಲಿರಬೇಕು. ಯಾರಾದರೂ ಬರಲಿ ಅವರಿಗೆ ತಿಳಿಸಿ, ಯಾರನ್ನು ಮಿಲನ ಮಾಡಲು ಬಯಸುತ್ತೀರಿ, ಅವರಂತೂ ನಮಗೂ ತಂದೆಯಾಗಿದ್ದಾರೆ ಮತ್ತು ನಿಮಗೂ ತಂದೆಯಾಗಿದ್ದಾರೆ, ಇಲ್ಲಿ ಯಾವುದೇ ಗುರು-ಗೋಸಾಯಿಗಳಿಲ್ಲ. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ. ಹೇಗೆ ಹೋಲಿ - ದುರಿಯಾ ಮಾಡಿಸುತ್ತೀರಿ. ದುರಿಯಾ ಎಂಬುದಕ್ಕೆ ಮತ್ತ್ಯಾವುದೇ ಅರ್ಥವಿಲ್ಲ, ಜ್ಞಾನದಿಂದ ಬಣ್ಣವನ್ನು ಹಾಕುತ್ತೀರಿ. ಆತ್ಮವು ಈ ಶರೀರದಲ್ಲಿದೆ, ಅದು ಪವಿತ್ರವಾದರೆ ಅದಕ್ಕೆ ಪವಿತ್ರ ಶರೀರವೇ ಸಿಗುವುದು. ಇದಂತೂ ಪವಿತ್ರ ಶರೀರವಲ್ಲ. ಇದು ಈಗ ಸಮಾಪ್ತಿಯಾಗಬೇಕಾಗಿದೆ. ಶರೀರಕ್ಕೆ ಗಂಗಾ ಸ್ನಾನ ಮಾಡಿಸುತ್ತಾರೆ ಆದರೆ ಪತಿತ-ಪಾವನ ತಂದೆಯ ವಿನಃ ಮತ್ತ್ಯಾರೂ ಇಲ್ಲ. ಆತ್ಮವೇ ಪತಿತವಾಗುತ್ತದೆ ಅಂದಾಗ ಆತ್ಮವು ನೀರಿನ ಸ್ನಾನದಿಂದ ಪಾವನವಾಗಲು ಸಾಧ್ಯವಿಲ್ಲ. ಇದು ಯಾರಿಗೂ ತಿಳಿದಿಲ್ಲ. ಅವರಂತೂ ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ಆತ್ಮ ನಿರ್ಲೆಪವೆಂದು ಹೇಳುತ್ತಾರೆ. ಈಗ ಯಾರು ಬುದ್ಧಿವಂತರಾಗಿದ್ದಾರೆಯೋ ಅವರೇ ಧಾರಣೆ ಮಾಡಿ ಅನ್ಯರಿಗೂ ಧಾರಣೆ ಮಾಡಿಸಬಲ್ಲರು. ಯಾವ ಮಕ್ಕಳ ಬಾಯಿಂದ ಸದಾ ರತ್ನಗಳೇ ಹೊರಬರುತ್ತವೆಯೋ ಅವರಿಗೆ ರೂಪ ಭಸಂತರೆಂದು ಹೇಳಲಾಗುತ್ತದೆ. ಜ್ಞಾನ-ವಿಜ್ಞಾನವನ್ನು ಬಿಟ್ಟು ಪರಸ್ಪರ ಮತ್ತೇನಾದರೂ ಲೇವಾದೇವಿ ಮಾಡುತ್ತಾರೆಂದರೆ ಅವರ ಬಾಯಿಂದ ಕಲ್ಲುಗಳು ಬರುತ್ತಿವೆ ಎಂದರ್ಥ. ಸೇವೆಯ ಬದಲು ಸೇವಾಭಂಗ ಮಾಡುತ್ತಾರೆ. 63 ಜನ್ಮಗಳಿಂದಲೂ ಒಬ್ಬರು ಇನ್ನೊಬ್ಬರಿಗೆ ಕಲ್ಲುಗಳನ್ನು ಹೊಡೆಯುತ್ತಲೇ ಬಂದರು. ಈಗ ತಂದೆಯು ತಿಳಿಸುತ್ತಾರೆ - ನೀವು ಜ್ಞಾನ-ವಿಜ್ಞಾನದ ಮಾತುಗಳನ್ನಾಡಿ ಮನಸ್ಸನ್ನು ಖುಷಿ ಪಡಿಸಬೇಕಾಗಿದೆ. ಅಲ್ಲಸಲ್ಲದ ಮಾತುಗಳನ್ನು ಕೇಳಬಾರದು. ಇದು ಜ್ಞಾನವಲ್ಲವೆ. ಇಡೀ ಪ್ರಪಂಚವಂತೂ ಒಬ್ಬರು ಇನ್ನೊಬ್ಬರಿಗೆ ಕಲ್ಲುಗಳನ್ನೇ ಹೊಡೆಯುತ್ತಾರೆ. ನೀವು ಮಕ್ಕಳು ರೂಪ ಭಸಂತರಾಗಿದ್ದೀರಿ ಅಂದಮೇಲೆ ನೀವು ಜ್ಞಾನ-ವಿಜ್ಞಾನವನ್ನು ಬಿಟ್ಟು ಮತ್ತೇನನ್ನೂ ಕೇಳಬಾರದು, ಹೇಳಲೂಬಾರದು. ಯಾರು ಉಲ್ಟಾ ಮಾತನಾಡುವರೋ ಅವರ ಸಂಗವೇ ಕೆಟ್ಟದ್ದಾಗಿದೆ. ಯಾರು ಬಹಳ ಸೇವೆ ಮಾಡುವವರಿದ್ದಾರೆ ಅವರ ಸಂಗವು ಒಳ್ಳೆಯದಾಗಿದೆ. ಕೆಲವರು ಬ್ರಾಹ್ಮಣರು ರೂಪಭಸಂತರಾಗಿದ್ದಾರೆ. ಇನ್ನೂ ಕೆಲವರು ಬ್ರಾಹ್ಮಣರಾಗಿಯೂ ಉಲ್ಟಾ-ಸುಲ್ಟಾ ಮಾತನ್ನಾಡುತ್ತಾರೆ, ಇಂತಹವರ ಸಂಗ ಮಾಡಬಾರದು. ಅವರು ಇನ್ನೂ ನಷ್ಟವನ್ನೇ ಉಂಟು ಮಾಡುತ್ತಾರೆ, ಆದ್ದರಿಂದ ತಂದೆಯು ಪದೇ-ಪದೇ ಸಾವಧಾನ ನೀಡುತ್ತಾರೆ. ಎಂದೂ ಪರಸ್ಪರ ಉಲ್ಟಾ-ಸುಲ್ಟಾ ಮಾತುಗಳನ್ನಾಡಬೇಡಿ. ಇಲ್ಲವಾದರೆ ತಮ್ಮದೂ ಸತ್ಯ ನಾಶ, ಅನ್ಯರದೂ ಸತ್ಯ ನಾಶ ಮಾಡುತ್ತೀರಿ ಮತ್ತೆ ಪದವಿ ಭ್ರಷ್ಟವಾಗುತ್ತದೆ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ! ಬಾಬಾ, ನಾವು ಹೋಗಿ ಅನೇಕರಿಗೆ ಈ ಜ್ಞಾನವನ್ನು ತಿಳಿಸುತ್ತೇವೆ ಎನ್ನುವಷ್ಟು ಉಮ್ಮಂಗವಿರಬೇಕು. ಅವರೇ ತಂದೆಯ ಸತ್ಯ ಮಕ್ಕಳಾಗಿದ್ದಾರೆ. ತಂದೆಯೂ ಸಹ ಸೇವಾಧಾರಿ ಮಕ್ಕಳ ಮಹಿಮೆ ಮಾಡುತ್ತಾರೆ. ಅಂತಹವರ ಸಂಗ ಮಾಡಬೇಕು. ಯಾರು ಒಳ್ಳೆಯ ವಿದ್ಯಾರ್ಥಿಯ ಸಂಗ ಮಾಡುತ್ತಾರೆ ಎಂಬುದನ್ನು ತಂದೆಯೊಂದಿಗೆ ಕೇಳಿದರೆ ತಿಳಿಸಬಲ್ಲರು. ಎಂತಹವರ ಸಂಗ ಮಾಡಬೇಕು? ಯಾರು ತಂದೆಯ ಹೃದಯವನ್ನೇರಿದ್ದಾರೆ ಎಂಬುದನ್ನು ಕೂಡಲೇ ತಿಳಿಸಬಲ್ಲರು. ಸೇವಾಧಾರಿ ಮಕ್ಕಳ ಪ್ರತಿ ತಂದೆಗೂ ಗೌರವವಿದೆ. ಕೆಲವರಂತೂ ಸೇವೆಯನ್ನೂ ಮಾಡುವುದಿಲ್ಲ. ಹೀಗೆ ಅನೇಕರಿಗೆ ಕೆಟ್ಟ ಸಂಗವು ಸಿಗುವುದರಿಂದ ಸ್ಥಿತಿಯೇ ಏರುಪೇರಾಗಿ ಬಿಡುತ್ತದೆ. ಕೆಲವರು ಸ್ಥೂಲ ಸೇವೆಯಲ್ಲಿ ಬಹಳ ಚೆನ್ನಾಗಿದ್ದಾರೆ, ಅವರೂ ಸಹ ಒಳ್ಳೆಯ ಆಸ್ತಿಯನ್ನು ಪಡೆಯುತ್ತಾರೆ. ತಂದೆ ಮತ್ತು ಆಸ್ತಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಸಹಜವಾಗಿದೆ. ಕೇವಲ ಇಷ್ಟನ್ನೇ ತಿಳಿಸಿ - ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಎರಡೇ ಶಬ್ಧಗಳಿವೆ, ತಂದೆ ಮತ್ತು ಆಸ್ತಿ. ಯಾರೇ ಬಂದರೂ ಸಹ ಅವರಿಗೆ ತಿಳಿಸಿ - ತಂದೆಯ ಆದೇಶವಾಗಿದೆ. ನನ್ನೊಬ್ಬನನ್ನೇ ನೆನಪು ಮಾಡಿ. ಎಲ್ಲದಕ್ಕಿಂತ ದೊಡ್ಡ ಅದ್ಭುತ ಇದಾಗಿದೆ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮಗೆ ಸ್ವರ್ಗದ ಆಸ್ತಿಯು ಸಿಗುವುದು. ಪ್ರತೀ ಸೇವಾಕೇಂದ್ರದಲ್ಲಿ ಹೀಗೆ ನಂಬರ್ವಾರ್ ಇದ್ದಾರೆ. ಕೆಲವರು ವಿವರವಾಗಿ ತಿಳಿಸಿಕೊಡುತ್ತಾರೆ. ಯಾರಿಗಾದರೂ ಹೀಗೆ ತಿಳಿಸಲು ಬರಲಿಲ್ಲವೆಂದರೆ ಕೇವಲ ಇಷ್ಟನ್ನೇ ತಿಳಿಸಿ, ಕಲ್ಪದ ಮೊದಲೂ ಸಹ ತಂದೆಯು ಹೇಳಿದ್ದರು. ನನ್ನೊಬ್ಬನನ್ನೇ ನೆನಪು ಮಾಡಿ, ಮತ್ತ್ಯಾವುದೇ ದೇಹಧಾರಿ, ದೇವತೆ ಯಾರನ್ನೂ ನೆನಪು ಮಾಡಬೇಡಿ. ಇಂತಹವರು ಹೀಗೆ ಮಾಡುತ್ತಾರೆ. ಹಾಗೆ ಮಾಡುತ್ತಾರೆ... ಇಂತಹ ಪರಚಿಂತನೆಯನ್ನೇ ಮಾಡಬೇಡಿ. ತಂದೆಯು ನಿಮಗೆ ಹೋಲಿ ಮತ್ತು ದುರಿಯಾ ತಿನ್ನಿಸಿದರು, ಬಾಕಿ ಸ್ಥೂಲ ಬಣ್ಣವನ್ನು ಹಾಕುವುದು ಆ ಮನುಷ್ಯರ ಕೆಲಸವಾಗಿದೆ. ಯಾರು ಯಾರದೇ ನಿಂದನೆಯ ಮಾತುಗಳನ್ನು ತಿಳಿಸಿದರೂ ನೀವು ಕೇಳಬಾರದು. ತಂದೆಯು ಎಷ್ಟು ಒಳ್ಳೆಯ ಮಾತನ್ನು ತಿಳಿಸುತ್ತಾರೆ - ಮನ್ಮನಾಭವ, ಮಧ್ಯಾಜೀಭವ. ಯಾರೇ ಬಂದರೂ ಸಹ ಅವರಿಗೆ ತಿಳಿಸಿಕೊಡಿ, ಶಿವ ತಂದೆಯು ಎಲ್ಲರ ತಂದೆಯಾಗಿದ್ದಾರೆ. ಅವರು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ಸ್ವರ್ಗದ ಆಸ್ತಿಯು ಸಿಗುವುದು. ಗೀತೆಯ ಭಗವಂತನೂ ಅವರಾಗಿದ್ದಾರೆ. ಈ ಮೃತ್ಯು ಸಮ್ಮುಖದಲ್ಲಿ ನಿಂತಿದೆ ಅಂದಾಗ ಸರ್ವಿಸ್ ಮಾಡುವುದು, ತಂದೆಯ ನೆನಪು ತರಿಸುವುದು ನೀವು ಮಕ್ಕಳ ಕರ್ತವ್ಯವಾಗಿದೆ. ಇದು ಮಹಾನ್ ಮಂತ್ರವಾಗಿದೆ. ಇದರಿಂದ ರಾಜಧಾನಿಯ ತಿಲಕ ಸಿಗುವುದು. ಎಷ್ಟು ಸಹಜ ಮಾತಾಗಿದೆ - ತಂದೆಯನ್ನು ನೆನಪು ಮಾಡಿ ಮತ್ತು ಮಾಡಿಸಿ ಆಗ ದೋಣಿಯು ಪಾರಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬುದ್ಧಿವಂತರಾಗಿ ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಬಾಯಿಂದ ಎಂದೂ ಕಲ್ಲುಗಳಂತೆ ಮಾತನಾಡಿ ಸೇವಾಭಂಗ ಮಾಡಬಾರದು. ಜ್ಞಾನ-ಯೋಗವನ್ನು ಬಿಟ್ಟು ಮತ್ತೇನೂ ಚರ್ಚೆ ಮಾಡಬಾರದು.

2. ಯಾರು ರೂಪ ಭಸಂತರಾಗಿದ್ದಾರೆ. ಯಾರು ಸೇವಾಧಾರಿಗಳಾಗಿದ್ದಾರೆಯೋ ಅಂತಹವರ ಸಂಗವನ್ನೇ ಮಾಡಬೇಕಾಗಿದೆ. ಉಲ್ಟಾ-ಸುಲ್ಟಾ ಮಾತುಗಳನ್ನು ತಿಳಿಸುವವರ ಸಂಗ ಮಾಡಬಾರದು.

ವರದಾನ:
ಪರತಂತ್ರದ ಅಧೀನತೆಯನ್ನು ಸಮಾಪ್ತಿ ಮಾಡಿ ಸತ್ಯ ಸ್ವತಂತ್ರತೆಯ ಅನುಭವ ಮಾಡುವಂತಹ ಮಾಸ್ಟರ್ ಸರ್ವ ಶಕ್ತಿವಾನ್ ಭವ.

ವಿಶ್ವಕ್ಕೆ ಸರ್ವ ಶಕ್ತಿಗಳ ದಾನ ಕೊಡುವುದಕ್ಕಾಗಿ ಸ್ವತಂತ್ರ ಆತ್ಮ ಆಗಿ, ಎಲ್ಲಕ್ಕಿಂತ ಮೊದಲ ಸ್ವತಂತ್ರತೆ ಹಳೆಯ ದೇಹದೊಳಗಿನ ಸಂಬಂಧದ ಜೊತೆ ಇರಲಿ, ಏಕೆಂದರೆ ದೇಹದ ಪರತಂತ್ರತೆ ಅನೇಕ ಬಂಧನಗಳಲ್ಲಿ ಇಚ್ಛೆ ಇಲ್ಲದಿದ್ದರೂ ಸಹಾ ಬಂಧಿಸಲ್ಪಡುವುದು. ಪರತಂತ್ರ ಸದಾ ಅವನತಿಯ ಕಡೆ ಕರೆದೊಯ್ಯುತ್ತದೆ. ಬೇಸರ ಹಾಗೂ ನಿರಾಶೆಯ ಸ್ಥಿತಿಯ ಅನುಭವ ಮಾಡಿಸುತ್ತದೆ. ಅವರಿಗೆ ಯಾವುದೇ ಆಶ್ರಯ ಸ್ಪಷ್ಟವಾಗಿ ಕಂಡು ಬರುವುದಿಲ್ಲ. ಚಿಂತೆಯ ಅನುಭವವೂ ಇಲ್ಲ ಖುಷಿಯ ಅನುಭವವೂ ಇಲ್ಲ ಸುಳಿಯ ಮಧ್ಯದಲ್ಲಿರುತ್ತಾರೆ. ಆದ್ದರಿಂದ ಮಾಸ್ಟರ್ ಸರ್ವಶಕ್ತಿವಾನ್ ಆಗಿ ಸರ್ವ ಬಂಧನಗಳಿಂದ ಮುಕ್ತರಾಗಿ, ತಮ್ಮ ಸತ್ಯ ಸ್ವತಂತ್ರತಾ ದಿವಸವನ್ನು ಆಚರಿಸಿ.

ಸ್ಲೋಗನ್:
ಪರಮಾತ್ಮ ಮಿಲನದಲ್ಲಿ ಸರ್ವ ಪ್ರಾಪ್ತಿಗಳ ಮೋಜಿನ ಅನುಭವ ಮಾಡಿ ಸಂತುಷ್ಠ ಆತ್ಮ ಆಗಿ.