18.03.21         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ – ನೆನಪಿನಲ್ಲಿದ್ದು ಅನ್ಯರಿಗೂ ನೆನಪಿನ ಅಭ್ಯಾಸ ಮಾಡಿಸಿ, ಯೋಗ ಮಾಡಿಸುವವರ ಬುದ್ಧಿಯೋಗವು ಅಲ್ಲಿ-ಇಲ್ಲಿ ಅಲೆದಾಡಬಾರದು"

ಪ್ರಶ್ನೆ:
ಯಾವ ಮಕ್ಕಳ ಮೇಲೆ ಬಹಳ ದೊಡ್ಡ ಜವಾಬ್ದಾರಿಯಿದೆ? ಅವರು ಯಾವ ಮಾತಿನ ಮೇಲೆ ಬಹಳ ಗಮನ ಕೊಡಬೇಕು?

ಉತ್ತರ:
ಯಾವ ಮಕ್ಕಳು ನಿಮಿತ್ತ ಶಿಕ್ಷಕರಾಗಿ ಅನ್ಯರಿಗೂ ಯೋಗ ಮಾಡಿಸುತ್ತಾರೆಯೋ ಅವರ ಮೇಲೆ ಬಹಳ ದೊಡ್ಡ ಜವಾಬ್ದಾರಿಯಿದೆ. ಒಂದುವೇಳೆ ಯೋಗ ಮಾಡಿಸುವ ಸಮಯದಲ್ಲಿ ಬುದ್ದಿಯು ಹೊರಗೆ ಅಲೆದಾಡುತ್ತದೆಯೆಂದರೆ ಅಂತಹವರು ಸೇವೆಯ ಬದಲು ಸೇವಾಭಂಗ ಮಾಡುತ್ತಾರೆ. ಆದ್ದರಿಂದ ಈ ಗಮನವಿರಲಿ - ನನ್ನ ಮೂಲಕ ಪುಣ್ಯದ ಕಾರ್ಯವೇ ಆಗುತ್ತಿರಲಿ.

ಗೀತೆ:
ಓಂ ನಮಃ ಶಿವಾಯ...........

ಓಂ ಶಾಂತಿ.
ತಂದೆಯು ಎಲ್ಲಾ ಮಕ್ಕಳಿಗೆ ಮೊಟ್ಟ ಮೊದಲು ಇಲ್ಲಿ ಕುಳಿತುಕೊಂಡು ಲಕ್ಷದಲ್ಲಿ ಸ್ಥಿತರಾಗಲು ದೃಷ್ಟಿಯನ್ನು ಕೊಡುತ್ತಾರೆ – ಹೇಗೆ ನಾನು ಶಿವ ತಂದೆಯ ನೆನಪಿನಲ್ಲಿ ಕುಳಿತಿದ್ದೇನೆಯೋ ಹಾಗೆಯೇ ನೀವೂ ಶಿವ ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಿರಿ. ಪ್ರಶ್ನೆ ಉದ್ಭವಿಸುತ್ತದೆ - ಯಾರು ಸಮ್ಮುಖದಲ್ಲಿ ಯೋಗ ಮಾಡಿಸಲು ಕುಳಿತಿದ್ದಾರೆಯೋ ಅವರು ಇಡೀ ಸಮಯ ಶಿವ ತಂದೆಯ ನೆನಪಿನಲ್ಲಿ ಇರುತ್ತಾರೆಯೇ? ಯಾವುದು ಅನ್ಯರಿಗೂ ಆಕರ್ಷಣೆಯಾಗಬೇಕು. ನೆನಪಿನಲ್ಲಿದ್ದಾಗ ಬಹಳ ಶಾಂತಿಯಲ್ಲಿರುತ್ತೀರಿ, ಅಶರೀರಿಯಾಗಿ ಶಿವ ತಂದೆಯ ನೆನಪಿನಲ್ಲಿದ್ದಾಗ ಅನ್ಯರನ್ನೂ ಶಾಂತಿಯಲ್ಲಿ ತೆಗೆದುಕೊಂಡು ಹೋಗುತ್ತೀರಿ ಏಕೆಂದರೆ ಶಿಕ್ಷಕರಾಗಿ ಕುಳಿತುಕೊಳ್ಳುತ್ತೀರಲ್ಲವೆ. ಒಂದುವೇಳೆ ಶಿಕ್ಷಕರೇ ಸರಿಯಾದ ರೀತಿಯಲ್ಲಿ ನೆನಪಿನಲ್ಲಿ ಇಲ್ಲದಿದ್ದರೆ ಅನ್ಯರೂ ಇರಲು ಸಾಧ್ಯವಿಲ್ಲ. ಮೊದಲು ಈ ಸಂಕಲ್ಪ ಮಾಡಬೇಕು - ನಾನು ಯಾವ ಪ್ರಿಯತಮ ತಂದೆಗೆ ಪ್ರಿಯತಮೆಯಾಗಿದ್ದೇನೆ, ಅವರ ನೆನಪಿನಲ್ಲಿಯೇ ಕುಳಿತಿದ್ದೇನೆಯೇ? ಪ್ರತಿಯೊಬ್ಬರೂ ಈ ರೀತಿ ತಮ್ಮೊಂದಿಗೆ ಕೇಳಿಕೊಳ್ಳಿ. ಒಂದುವೇಳೆ ಬುದ್ಧಿಯು ಬೇರೆ ಕಡೆ ಹೊರಟು ಹೋಗುತ್ತದೆ, ದೇಹಾಭಿಮಾನದಲ್ಲಿ ಬಂದು ಬಿಡುತ್ತೀರೆಂದರೆ ಅವರು ಸೇವೆಯನ್ನಲ್ಲ, ಸೇವಾಭಂಗ ಮಾಡಲು ಕುಳಿತಿದ್ದಾರೆಂದರ್ಥ. ಇದು ತಿಳುವಳಿಕೆಯ ಮಾತಲ್ಲವೆ. ಅವರು ಸ್ವಲ್ಪವೂ ಸೇವೆ ಮಾಡಿದಂತಾಗಲಿಲ್ಲ. ಹಾಗೆಯೇ ಕುಳಿತಿದ್ದಾರೆಂದರೆ ನಷ್ಟವನ್ನೇ ಮಾಡಿಕೊಳ್ಳುತ್ತಾರೆ. ಶಿಕ್ಷಕರ (ಸಹೋದರ/ಸಹೋದರಿ) ಬುದ್ದಿಯೋಗವೇ ಅಲೆಯುತ್ತಿದ್ದರೆ ಅವರು ಏನು ಸಹಯೋಗ ನೀಡುತ್ತಾರೆ? ಯಾರು ಶಿಕ್ಷಕರಾಗಿ ಕುಳಿತುಕೊಳ್ಳುವರೋ ಅವರು ತಮ್ಮೊಂದಿಗೆ ಕೇಳಿಕೊಳ್ಳಿ - ನಾನು ಪುಣ್ಯದ ಕಾರ್ಯವನ್ನೇ ಮಾಡುತ್ತಿದ್ದೇನೆಯೇ? ಒಂದುವೇಳೆ ಪಾಪದ ಕರ್ಮವನ್ನು ಮಾಡುತ್ತಿದ್ದರೆ ದುರ್ಗತಿ ಹೊಂದುವರು, ಪದವಿ ಭ್ರಷ್ಟವಾಗುವುದು. ಒಂದುವೇಳೆ ಅಂತಹವರನ್ನು ಗದ್ದುಗೆಯ ಮೇಲೆ ಕೂರಿಸುತ್ತೀರೆಂದರೆ ಅದಕ್ಕೆ ನೀವೂ ಜವಾಬ್ದಾರರಾಗುವಿರಿ. ಶಿವ ತಂದೆಯು ಎಲ್ಲರನ್ನೂ ತಿಳಿದುಕೊಂಡಿದ್ದಾರೆ. ಈ ಬಾಬಾರವರೂ ಸಹ ಎಲ್ಲರ ಸ್ಥಿತಿಯನ್ನು ಅರಿತುಕೊಂಡಿದ್ದಾರೆ. ಶಿವ ತಂದೆಯು ಹೇಳುತ್ತಾರೆ - ಇವರು ಶಿಕ್ಷಕರಾಗಿ ಕುಳಿತಿದ್ದಾರೆ ಮತ್ತು ಇವರ ಬುದ್ಧಿಯೋಗವು ಅಲೆಯುತ್ತಿರುತ್ತದೆ ಅಂದಮೇಲೆ ಇವರು ಅನ್ಯರಿಗೇನು ಸಹಯೋಗ ನೀಡುತ್ತಾರೆ! ನೀವು ಬ್ರಾಹ್ಮಣ ಮಕ್ಕಳು ಶಿವ ತಂದೆಯ ಮಕ್ಕಳಾಗಿ ಅವರಿಂದ ಆಸ್ತಿಯನ್ನು ಪಡೆಯಲು ನಿಮಿತ್ತರಾಗಿದ್ದೀರಿ. ತಂದೆಯು ತಿಳಿಸುತ್ತಾರೆ - ಹೇ ಆತ್ಮರೇ, ನನ್ನೊಬ್ಬನನ್ನೇ ನೆನಪು ಮಾಡಿ. ಶಿಕ್ಷಕರಾಗಿ ಕುಳಿತುಕೊಳ್ಳುತ್ತೀರೆಂದರೆ ಇನ್ನೂ ಚೆನ್ನಾಗಿ ಆ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ವಾಸ್ತವದಲ್ಲಿ ಪ್ರತಿಯೊಬ್ಬರೂ ತಂದೆಯನ್ನು ನೆನಪು ಮಾಡಬೇಕಾಗಿದೆ. ವಿದ್ಯಾರ್ಥಿಯು ತನ್ನ ಸ್ಥಿತಿಯನ್ನು ಅರಿತುಕೊಳ್ಳಬಹುದು. ಪ್ರತಿಯೊಬ್ಬರಿಗೆ ತಿಳಿದಿದೆ - ನಾನು ತೇರ್ಗಡೆಯಾಗುತ್ತೇನೆಯೇ ಅಥವಾ ಇಲ್ಲವೇ? ಶಿಕ್ಷಕರೂ ತಿಳಿದುಕೊಂಡಿರುತ್ತಾರೆ - ಒಂದುವೇಳೆ ಖಾಸಗಿ ಶಿಕ್ಷಕರನ್ನು ಇಟ್ಟುಕೊಂಡರೆ ಅವರಿಗೂ ತಿಳಿದಿರುತ್ತದೆ. ಆ ವಿದ್ಯೆಯಲ್ಲಿ ಯಾರಾದರೂ ವಿಶೇಷ ಶಿಕ್ಷಕರನ್ನು ಇಟ್ಟುಕೊಳ್ಳುವುದಾದರೆ ಇಟ್ಟುಕೊಳ್ಳಬಹುದು. ಇಲ್ಲಿ ಒಂದುವೇಳೆ ಯಾರಾದರೂ ನಮ್ಮನ್ನು ಯೋಗದಲ್ಲಿ ಕೂರಿಸಿ ಎಂದು ಕೇಳಿದರೆ, ತಂದೆಯ ಆದೇಶವೇ ಆಗಿದೆ - ಮಕ್ಕಳೇ ನನ್ನೊಬ್ಬನನ್ನೇ ನೆನಪು ಮಾಡಿ, ನೀವು ಪ್ರಿಯತಮೆಯರಾಗಿದ್ದೀರಿ. ನಡೆಯುತ್ತಾ-ತಿರುಗಾಡುತ್ತಾ ತಮ್ಮ ಪ್ರಿಯತಮನನ್ನು ನೆನಪು ಮಾಡಿ. ಸನ್ಯಾಸಿಗಳಾದರೆ ಬ್ರಹ್ಮ್ ತತ್ವವನ್ನು ನೆನಪು ಮಾಡುತ್ತಾರೆ. ನಾವು ಹೋಗಿ ಬ್ರಹ್ಮ್ ದಲ್ಲಿ ಲೀನವಾಗುತ್ತೇವೆಂದು ತಿಳಿಯುತ್ತಾರೆ. ಯಾರು ಹೆಚ್ಚು ನೆನಪು ಮಾಡುತ್ತಿರುವರೋ ಅವರ ಸ್ಥಿತಿಯೂ ಚೆನ್ನಾಗಿರುವುದು. ಪ್ರತಿಯೊಬ್ಬರಲ್ಲಿಯೂ ಯಾವುದಾದರೊಂದು ವಿಶೇಷತೆಯಂತೂ ಇರುತ್ತದೆಯಲ್ಲವೆ. ನೆನಪಿನ ಯಾತ್ರೆಯಲ್ಲಿರಿ ಎಂದು ಹೇಳುತ್ತಾರೆ, ಸ್ವಯಂ ಕೂಡ ನೆನಪಿನಲ್ಲಿರಬೇಕಾಗಿದೆ. ತಂದೆಯ ಬಳಿ ಕೆಲವರು ಸತ್ಯವಂತರು, ಇನ್ನೂ ಕೆಲವರು ಅಸತ್ಯವಂತರು ಇದ್ದಾರೆ. ಸ್ವಯಂ ನಿರಂತರ ನೆನಪಿನಲ್ಲಿರುವುದು ಬಹಳ ವಿರಳ. ಕೆಲವರಂತೂ ತಂದೆಯೊಂದಿಗೆ ಬಹಳ ಸತ್ಯವಾಗಿರುತ್ತಾರೆ. ಈ ಬ್ರಹ್ಮಾ ತಂದೆಯೂ ತಮ್ಮ ಅನುಭವವನ್ನು ನೀವು ಮಕ್ಕಳಿಗೆ ತಿಳಿಸುತ್ತಾರೆ. ನಾನು ಸ್ವಲ್ಪ ಸಮಯ ನೆನಪಿನಲ್ಲಿರುತ್ತೇನೆ ಮತ್ತೆ ಮರೆತು ಬಿಡುತ್ತೇನೆ ಏಕೆಂದರೆ ಇವರ ಮೇಲೆ ಬಹಳ ಜವಾಬ್ದಾರಿಯಿದೆ. ಎಷ್ಟೊಂದು ಮಂದಿ ಮಕ್ಕಳಿದ್ದಾರೆ! ನೀವು ಮಕ್ಕಳಿಗೆ ಇದೂ ಸಹ ಅರ್ಥವಾಗುವುದಿಲ್ಲ - ಈ ಮುರುಳಿಯನ್ನು ಶಿವ ತಂದೆಯು ನುಡಿಸಿದರೇ ಅಥವಾ ಬ್ರಹ್ಮಾ ತಂದೆಯು ನುಡಿಸುತ್ತಾರೆಯೇ? ಏಕೆಂದರೆ ಇಬ್ಬರೂ ಒಟ್ಟಿಗೆ ಇದ್ದಾರಲ್ಲವೆ. ನಾನೂ ಸಹ ಶಿವ ತಂದೆಯನ್ನು ನೆನಪು ಮಾಡುತ್ತೇನೆಂದು ಈ ಬ್ರಹ್ಮಾರವರು ಹೇಳುತ್ತಾರೆ. ಇವರೂ ಸಹ ಮಕ್ಕಳಿಗೆ ಯೋಗ ಮಾಡಿಸುತ್ತಾರೆ. ಇವರು ಕುಳಿತುಕೊಂಡಾಗ ನೋಡುತ್ತೀರಿ - ಎಷ್ಟು ಆಳವಾದ ಶಾಂತಿಯು ಏರ್ಪಡುತ್ತದೆ! ಅನೇಕರನ್ನು ಸೆಳೆಯುತ್ತಾರೆ. ತಂದೆಯಲ್ಲವೆ ಆದ್ದರಿಂದಲೇ ಹೇಳುತ್ತಾರೆ - ಮಕ್ಕಳೇ, ನೆನಪಿನ ಯಾತ್ರೆಯಲ್ಲಿರಿ. ಮೊದಲು ಸ್ವಯಂ ನೆನಪಿನಲ್ಲಿರಬೇಕಾಗಿದೆ, ಕೇವಲ ಪಂಡಿತರಾಗಬಾರದು. ನೆನಪಿನಲ್ಲಿ ಇಲ್ಲವೆಂದರೆ ಅಂತಿಮದಲ್ಲಿ ಅನುತ್ತೀರ್ಣರಾಗಿ ಬಿಡುತ್ತೀರಿ. ಮಮ್ಮಾ-ಬಾಬಾರವರದಂತೂ ಶ್ರೇಷ್ಠ ಪದವಿಯಾಗಿದೆ. ಉಳಿದಂತೆ ಇನ್ನೂ ಮಾಲೆಯಾಗಿಲ್ಲ. ಒಂದು ಮಣಿಯೂ ಸಹ ಇನ್ನೂ ಸಂಪೂರ್ಣವಾಗಿಲ್ಲ. ಮೊದಲು ಮಕ್ಕಳಿಗೆ ಲಿಫ್ಟ್ ಕೊಡುವುದಕ್ಕಾಗಿ ಮಾಲೆಯನ್ನು ಮಾಡುತ್ತಿದ್ದರು. ಆದರೆ ತೀಕ್ಷ್ಣವಾಗಿದ್ದವರನ್ನೂ ಸಹ ಮಾಯೆಯು ಸಮಾಪ್ತಿ ಮಾಡಿ ಬಿಟ್ಟಿತು. ಎಲ್ಲವೂ ಸೇವೆಯ ಮೇಲೆ ಅವಲಂಭಿಸಿದೆ. ಆದ್ದರಿಂದ ಯಾರು ಸಮ್ಮುಖದಲ್ಲಿ ಯೋಗ ಮಾಡಿಸಲು ಕುಳಿತುಕೊಳ್ಳುವರೋ ಅವರು ಇದನ್ನು ತಿಳಿದುಕೊಳ್ಳಬೇಕು - ನಾನು ಸತ್ಯ ಶಿಕ್ಷಕನಾಗಿ ಕುಳಿತುಕೊಳ್ಳಬೇಕು, ಇಲ್ಲದಿದ್ದರೆ ನನ್ನ ಬುದ್ಧಿಯು ಅಲ್ಲಿ - ಇಲ್ಲಿ ಹೊರಟು ಹೋಗುತ್ತದೆ ಎಂದು ಹೇಳಬೇಕು. ನಾನು ಇಲ್ಲಿ ಕುಳಿತುಕೊಳ್ಳಲು ಯೋಗ್ಯವಲ್ಲವೆಂದು ಸ್ವಯಂ ನೇರವಾಗಿ ಹೇಳಬೇಕು. ತಾವೇ ಹೋಗಿ ಕುಳಿತುಕೊಳ್ಳುವುದಲ್ಲ, ಕೆಲವರು ಭಲೆ ಮುರುಳಿಯನ್ನು ಓದಿ ಹೇಳುವುದಿಲ್ಲ ಆದರೆ ನೆನಪಿನಲ್ಲಿರುತ್ತಾರೆ. ಇಲ್ಲಂತೂ ಎರಡರಲ್ಲಿಯೂ ತೀಕ್ಷ್ಣವಾಗಿ ಮುಂದೆ ಹೋಗಬೇಕು. ಬಹಳ ಒಳ್ಳೆಯ ಪ್ರಿಯತಮನಾಗಿದ್ದಾರೆ ಅಂದಮೇಲೆ ಅವರನ್ನು ಬಹಳ ನೆನಪು ಮಾಡಬೇಕು. ಇದರಲ್ಲಿಯೇ ಪರಿಶ್ರಮವಿದೆ ಬಾಕಿ ಪ್ರಜೆಗಳಾಗುವುದು ಸಹಜವಾಗಿದೆ. ದಾಸ -ದಾಸಿಯರಾಗುವುದು ದೊಡ್ಡ ಮಾತಲ್ಲ, ಅಂತಹವರು ಹೆಚ್ಚು ಜ್ಞಾನವನ್ನು ತೆಗೆದುಕೊಳ್ಳುವುದಿಲ್ಲ. ಹೇಗೆ ನೋಡಿ, ಯಜ್ಞದ ಭಂಡಾರಿ (ಭೋಲಿ ದಾದಿ) ಎಲ್ಲರನ್ನೂ ಬಹಳ ಖುಷಿ ಪಡಿಸುತ್ತಾರೆ. ಯಾರಿಗೂ ದುಃಖ ಕೊಡುವುದಿಲ್ಲ, ಎಲ್ಲರೂ ಮಹಿಮೆ ಮಾಡುತ್ತಾರೆ - ವಾಹ್! ಶಿವ ತಂದೆಯ ಭಂಡಾರಿಯು ನಂಬರ್ವನ್ ಆಗಿದ್ದಾರೆ. ಅನೇಕರ ಮನಸ್ಸನ್ನು ಖುಷಿ ಪಡಿಸುತ್ತಾರೆ. ತಂದೆಯೂ ಸಹ ಮಕ್ಕಳ ಮನಸ್ಸನ್ನು ಖುಷಿ ಪಡಿಸುತ್ತಾ ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಮತ್ತು ಈ ಚಕ್ರವನ್ನೂ ಬುದ್ಧಿಯಲ್ಲಿಟ್ಟುಕೊಳ್ಳಿ. ಈಗ ಪ್ರತಿಯೊಬ್ಬರೂ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. ಅವಿಶ್ರಾಂತ ಸೇವೆ ಮಾಡಬೇಕು, ಬಹಳ ದಯಾಹೃದಯಿಗಳಾಗಬೇಕಾಗಿದೆ. ಮನುಷ್ಯರು ಮುಕ್ತಿ-ಜೀವನ್ಮುಕ್ತಿಗಾಗಿ ಬಹಳ ಅಲೆದಾಡುತ್ತಾರೆ. ಯಾರಿಗೂ ಸದ್ಗತಿಯ ಬಗ್ಗೆ ತಿಳಿದೇ ಇಲ್ಲ. ಎಲ್ಲಿಂದ ಬಂದೆವೋ ಅಲ್ಲಗೆ ಹಿಂತಿರುಗಿ ಹೋಗಬೇಕೆಂದು ತಿಳಿಯುತ್ತಾರೆ. ನಾಟಕವೆಂಬುದನ್ನೂ ತಿಳಿದುಕೊಳ್ಳುತ್ತಾರೆ ಆದರೆ ಅದರಂತೆ ನಡೆಯುವುದಿಲ್ಲ. ನೋಡಿ, ತರಗತಿಗೆ ಕೆಲವೊಂದು ಕಡೆ ಮುಸಲ್ಮಾನರು ಬರುತ್ತಾರೆ. ಅವರೇ ಹೇಳುತ್ತಾರೆ - ನಾವು ಮೂಲತಃ ದೇವಿ-ದೇವತಾ ಧರ್ಮದವರಾಗಿದ್ದೆವು ನಂತರ ಹೋಗಿ ನಾವು ಮುಸಲ್ಮಾನ ಧರ್ಮದಲ್ಲಿ ಹೋಗಿ ಸೇರಿದೆವು, ನಾವೇ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ. ಸಿಂಗ್ನಲ್ಲಿಯೂ 5-6 ಮಂದಿ ಮುಸಲ್ಮಾನರು ಬರುತ್ತಿದ್ದರು, ಈಗಲೂ ಬರುತ್ತಾರೆ. ಮುಂದೆ ನಡೆಯುವರೆ ಅಥವಾ ಇಲ್ಲವೇ ಎಂದು ನೋಡಬೇಕು ಏಕೆಂದರೆ ಮಾಯೆಯು ಸಹ ಪರೀಕ್ಷೆಯನ್ನು ತೆಗೆದುಕೊಳ್ಳುತ್ತದೆ. ಕೆಲವರು ಬಲವಾಗಿ ನಿಲ್ಲುತ್ತಾರೆ, ಕೆಲವರು ನಿಲ್ಲುವುದಿಲ್ಲ. ಯಾರು ಮೂಲ ಬ್ರಾಹ್ಮಣ ಧರ್ಮದವರಾಗಿರುವರೋ, ಯಾರು 84 ಜನ್ಮಗಳನ್ನು ತೆಗೆದುಕೊಂಡಿರುವರೋ ಅವರೆಂದೂ ಅಲುಗಾಡುವುದಿಲ್ಲ. ಇನ್ನೂ ಕೆಲವರು ಕಾರಣವಿಲ್ಲದೆ ಹೊರಟು ಹೋಗುತ್ತಾರೆ. ದೇಹಾಭಿಮಾನವು ಬಂದು ಬಿಡುತ್ತದೆ. ನೀವು ಮಕ್ಕಳಂತೂ ಅನೇಕರ ಕಲ್ಯಾಣ ಮಾಡಬೇಕಾಗಿದೆ, ಇಲ್ಲವೆಂದರೆ ಯಾವ ಪದವಿಯನ್ನು ಪಡೆಯುತ್ತೀರಿ! ತಮ್ಮ ಕಲ್ಯಾಣಕ್ಕಾಗಿ ಮನೆ-ಮಠವನ್ನು ಬಿಟ್ಟಿದ್ದೀರಿ. ಹಾಗೆಂದು ಹೇಳಿ ನೀವೇನೂ ತಂದೆಯ ಮೇಲೆ ದಯೆ ತೋರಿಸಿಲ್ಲ. ತಂದೆಯ ಮಕ್ಕಳಾಗಿದ್ದೀರೆಂದರೆ ಅದೇರೀತಿ ಸೇವೆಯನ್ನೂ ಮಾಡಬೇಕು. ನಿಮಗಂತೂ ರಾಜ್ಯ ಪದಕವು ಸಿಗುತ್ತದೆ. 21 ಜನ್ಮಗಳು ಸದಾ ಸುಖದ ರಾಜ್ಯವು ಸಿಗುತ್ತದೆ. ಕೇವಲ ಈಗ ಮಾಯೆಯ ಮೇಲೆ ಜಯ ಗಳಿಸಬೇಕು ಮತ್ತು ಅನ್ಯರಿಗೂ ಕಲಿಸಬೇಕಾಗಿದೆ. ಕೆಲವರಂತೂ ಅನುತ್ತೀರ್ಣರಾಗಿ ಬಿಡುತ್ತಾರೆ. ರಾಜ್ಯಭಾಗ್ಯವನ್ನು ಪಡೆಯುವುದು ಬಹಳ ಕಷ್ಟವೆಂದು ತಿಳಿದುಕೊಳ್ಳುತ್ತಾರೆ. ಇದಕ್ಕೆ ತಂದೆಯು ಹೇಳುತ್ತಾರೆ - ಈ ರೀತಿ ತಿಳಿದುಕೊಳ್ಳುವುದು ನಿರ್ಬಲತೆಯಾಗಿದೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವುದಂತೂ ಬಹಳ ಸಹಜವಾಗಿದೆ. ಮಕ್ಕಳಲ್ಲಿ ರಾಜ್ಯವನ್ನೂ ಪಡೆಯುವ ಸಾಹಸವಿಲ್ಲ ಆದ್ದರಿಂದ ಉದಾಸೀನರಾಗಿ ಕುಳಿತು ಬಿಡುತ್ತಾರೆ. ತಾನೂ ತೆಗೆದುಕೊಳ್ಳುವುದಿಲ್ಲ, ಅನ್ಯರೂ ತೆಗೆದುಕೊಳ್ಳಲು ಬಿಡುವುದಿಲ್ಲ ಅಂದಾಗ ಪರಿಣಾಮವೇನಾಯಿತು? ತಂದೆಯು ತಿಳಿಸುತ್ತಾರೆ - ಹಗಲು-ರಾತ್ರಿ ಸರ್ವಿಸ್ ಮಾಡಿ. ಕಾಂಗ್ರೆಸ್ಸಿನವರು ಪರಿಶ್ರಮ ಪಟ್ಟರು. ಎಷ್ಟೊಂದು ಕಷ್ಟವನ್ನು ಸಹನೆ ಮಾಡಿದರು ಆದ್ದರಿಂದಲೇ ಬ್ರಿಟಿಷರಿಂದ ರಾಜ್ಯವನ್ನು ಪಡೆದುಕೊಂಡರು. ನೀವೀಗ ರಾವಣನಿಂದ ರಾಜ್ಯವನ್ನು ಪಡೆಯಬೇಕಾಗಿದೆ. ರಾವಣನಂತೂ ಎಲ್ಲರ ಶತ್ರುವಾಗಿದ್ದಾನೆ. ನಾವು ರಾವಣನ ಮತದಂತೆ ನಡೆಯುತ್ತಿದ್ದೇವೆ ಆದ್ದರಿಂದಲೇ ದುಃಖಿಯಾಗಿದ್ದೇವೆಂದು ಪ್ರಪಂಚದವರಿಗೆ ಗೊತ್ತಿಲ್ಲ. ಯಾರಿಗೂ ಸತ್ಯವಾದ ಸ್ಥಿರವಾದ ಸುಖವಿಲ್ಲ. ಶಿವ ತಂದೆಯು ಹೇಳುತ್ತಾರೆ, ನಾನು ನೀವು ಮಕ್ಕಳನ್ನು ಸದಾ ಸುಖಿಯನ್ನಾಗಿ ಮಾಡಲು ಬಂದಿದ್ದೇನೆ. ಈಗ ಶ್ರೀಮತದಂತೆ ನಡೆದು ಶ್ರೇಷ್ಠರಾಗಬೇಕಾಗಿದೆ. ಯಾರೆಲ್ಲಾ ಭಾರತವಾಸಿಗಳಿದ್ದಾರೆಯೋ ಅವರು ತಮ್ಮ ಧರ್ಮವನ್ನು ಮರೆತು ಬಿಟ್ಟಿದ್ದಾರೆ. ಯಥಾ ರಾಜ-ರಾಣಿ ತಥಾ ಪ್ರಜಾ. ಈಗ ನೀವು ಮಕ್ಕಳಿಗೆ ಸೃಷ್ಟಿಚಕ್ರವು ಹೇಗೆ ನಡೆಯುತ್ತದೆ ಎಂದು ತಿಳುವಳಿಕೆ ಸಿಗುತ್ತಿದೆ ಆದರೂ ಸಹ ಪದೇ-ಪದೇ ಮರೆತು ಹೋಗುತ್ತಾರೆ. ಬುದ್ಧಿಯಲ್ಲಿ ನಿಲ್ಲುವುದೇ ಇಲ್ಲ. ಭಲೆ ಬ್ರಾಹ್ಮಣರಂತೂ ಅನೇಕರಾಗುತ್ತಾರೆ ಆದರೆ ಕೆಲವರು ಕಚ್ಚಾ ಆಗಿರುವ ಕಾರಣ ವಿಕಾರದಲ್ಲಿಯೂ ಹೋಗುತ್ತಿರುತ್ತಾರೆ. ನಾವು ಬಿ.ಕೆ. ಆಗಿದ್ದೇವೆಂದು ಹೇಳುತ್ತಾರೆ ಆದರೆ ಇಲ್ಲ. ಯಾರು ಪೂರ್ಣ ರೀತಿಯಲ್ಲಿ ತಂದೆಯ ಆದೇಶದಂತೆ ನಡೆಯುವರೋ, ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತಾ ಇರುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯಬಲ್ಲರು. ವಿಘ್ನಗಳಂತೂ ಬೀಳುತ್ತವೆ, ಅಮೃತವನ್ನು ಕುಡಿಯುತ್ತಾ - ಕುಡಿಯುತ್ತಾ ಮತ್ತೆ ಹೋಗಿ ವಿಘ್ನಗಳನ್ನು ಹಾಕುತ್ತಾರೆ. ಇದೂ ಗಾಯನವಿದೆ. ಅಂತಹವರ ಪದವಿ ಏನಾಗುವುದು? ಕೆಲವರು ಹೆಣ್ಣು ಮಕ್ಕಳು ವಿಕಾರದ ಕಾರಣ ಪೆಟ್ಟುಗಳನ್ನು ತಿನ್ನುತ್ತಾರೆ. ಬಾಬಾ, ಈ ದುಃಖವನ್ನು ಸ್ವಲ್ಪ ಸಹನೆ ಮಾಡುತ್ತೇನೆ. ನಮ್ಮ ಪ್ರಿಯತಮನು ತಂದೆಯಲ್ಲವೆ, ಪೆಟ್ಟು ತಿನ್ನುತ್ತಿದ್ದರೂ ಸಹ ಶಿವ ತಂದೆಯನ್ನು ನೆನಪು ಮಾಡುತ್ತೇವೆಂದು ಹೇಳುತ್ತಾರೆ. ಅಂತಹವರು ಬಹಳ ಖುಷಿಯಲ್ಲಿರುತ್ತಾರೆ. ಈ ಅಪಾರ ಖುಷಿಯಲ್ಲಿರಬೇಕು - ತಂದೆಯಿಂದ ನಾವು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ಅನ್ಯರನ್ನೂ ನಮ್ಮ ಸಮಾನ ಮಾಡಿಕೊಳ್ಳುತ್ತಾ ಇರುತ್ತೇವೆ.

ತಂದೆಯ ಬುದ್ದಿಯಲ್ಲಂತೂ ಈ ಏಣಿಯ ಚಿತ್ರವು ಬಹಳ ಇರುತ್ತದೆ. ಇದಕ್ಕೆ ಬಹಳ ಮಹತ್ವಿಕೆ ಕೊಡುತ್ತಾರೆ. ಯಾವ ಮಕ್ಕಳು ವಿಚಾರ ಸಾಗರ ಮಂಥನ ಮಾಡಿ ಇಂತಿಂತಹ ಚಿತ್ರಗಳನ್ನು ಮಾಡಿಸುತ್ತಾರೆಯೋ ಅಂತಹವರಿಗೆ ತಂದೆಯೂ ಸಹ ಅಭಿನಂದನೆಗಳನ್ನು ತಿಳಿಸುತ್ತಾರೆ ಅಥವಾ ಈ ರೀತಿ ಹೇಳಬಹುದು - ತಂದೆಯು ಅಂತಹ ಮಕ್ಕಳಿಗೆ ಪ್ರೇರಣೆ ನೀಡಿದ್ದಾರೆ. ಏಣಿಯ ಚಿತ್ರವನ್ನೂ ಸಹ ಬಹಳ ಚೆನ್ನಾಗಿ ಮಾಡಿದ್ದಾರೆ. 84 ಜನ್ಮಗಳನ್ನು ಅರಿತುಕೊಂಡಿರುವುದರಿಂದ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೀರಿ. ಇದು ಬಹಳ ಒಳ್ಳೆಯ ಚಿತ್ರವಾಗಿದೆ. ತ್ರಿಮೂರ್ತಿ, ಗೋಲದ ಚಿತ್ರಕ್ಕಿಂತಲೂ ಇದರಲ್ಲಿ ಜ್ಞಾನವು ಚೆನ್ನಾಗಿದೆ. ನಾವೀಗ ಮೇಲೇರುತ್ತಿದ್ದೇವೆ. ಎಷ್ಟು ಸಹಜವಾಗಿದೆ. ತಂದೆಯು ಬಂದು ಲಿಫ್ಟ್ ಕೊಡುತ್ತಾರೆ. ತಂದೆಯಿಂದ ಶಾಂತಿ ಪೂರ್ವಕವಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಏಣಿಯ ಚಿತ್ರದ ಜ್ಞಾನವು ಬಹಳ ಚೆನ್ನಾಗಿದೆ. ಇದರಲ್ಲಿ ತಿಳಸಬೇಕು, ನೀವು ಹಿಂದೂಗಳಲ್ಲ. ದೇವಿ-ದೇವತಾ ಧರ್ಮದವರಾಗಿದ್ದೀರಿ. ಒಂದುವೇಳೆ ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆಯೇ ಎಂದು ಕೇಳಿದರೆ ತಿಳಿಸಿ - ಅರೆ! ನಾವೇ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಏಕೆ ತಿಳಿದುಕೊಳ್ಳುವುದಿಲ್ಲ. ಈಗ ಪುನಃ ನೆನಪು ಮಾಡಿಕೊಳ್ಳಿ ಆಗ ನೀವು ಪುನಃ ಮೊದಲ ನಂಬರಿನಲ್ಲಿ ಬಂದು ಬಿಡುತ್ತೀರಿ. ತಮ್ಮ ಕುಲದವರಾಗಿದ್ದರೆ ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಯು ಅವರಿಗೆ ಬರಲು ಸಾಧ್ಯವಿಲ್ಲ. ಅರೆ! ನಾವು ತಡವಾಗಿ ಬಂದಿದ್ದೇವೆ ಎಂದು ನೀವೇಕೆ ತಿಳಿದುಕೊಳ್ಳುತ್ತೀರಿ? ತಂದೆಯು ಎಲ್ಲಾ ಮಕ್ಕಳಿಗೆ ತಿಳಿಸುತ್ತಾರೆ - ನೀವು ಭಾರತವಾಸಿಗಳು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, ಈಗ ಪುನಃ ಆಸ್ತಿಯನ್ನು ತೆಗೆದುಕೊಳ್ಳಿ, ಸ್ವರ್ಗಕ್ಕೆ ನಡೆಯಿರಿ. ನೀವು ಮಕ್ಕಳು ಯೋಗದಲ್ಲಿ ಕುಳಿತುಕೊಳ್ಳುತ್ತೀರಿ, ಏಣಿಯನ್ನು ನೆನಪು ಮಾಡುತ್ತೀರೆಂದರೆ ಬಹಳ ಖುಷಿಯಲ್ಲಿರುತ್ತೀರಿ - ನಾವು 84 ಜನ್ನಗಳನ್ನು ಪೂರ್ಣಗೊಳಿಸಿದ್ದೇವೆ. ನಾವೀಗ ಹಿಂತಿರುಗಿ ಹೋಗುತ್ತೇವೆ, ಎಷ್ಟೊಂದು ಖುಷಿಯಾಗುತ್ತದೆ! ಸೇವೆ ಮಾಡುವ ಉಲ್ಲಾಸವೂ ಇರಬೇಕು, ತಿಳಿಸಿ ಕೊಡುವ ಬಹಳಷ್ಟು ವಿಧಾನಗಳೂ ನಿಮಗೆ ಸಿಗುತ್ತಿವೆ. ಏಣಿಯ ಚಿತ್ರದಲ್ಲಿಯೂ ತಿಳಿಸಿ. ಚಿತ್ರಗಳೆಲ್ಲವೂ ಬೇಕಲ್ಲವೆ. ತ್ರಿಮೂರ್ತಿ ಚಿತ್ರವೂ ಬೇಕು, ತಂದೆಯು ತಿಳಿಸುತ್ತಾರೆ - ನೀವು ನನ್ನ ಭಕ್ತರ ಬಳಿ ಹೋಗಿ ನೀವು ಈ ಜ್ಞಾನವನ್ನು ತಿಳಸಿ - ಅವರು ಮಂದಿರಗಳಲ್ಲಿ ಸಿಗುತ್ತಾರೆ. ಮಂದಿರಗಳಲ್ಲಿಯೂ ಈ ಏಣಿಯ ಚಿತ್ರದ ಬಗ್ಗೆ ತಿಳಿಸಿಕೊಡಿ. ಇಡೀ ದಿನ ನಾವು ತಂದೆಯ ಪರಿಚಯವನ್ನು ಕೊಟ್ಟು ಯಾರ ಕಲ್ಯಾಣ ಮಾಡಬೇಕೆಂಬುದೇ ಬುದ್ಧಿಯಲ್ಲಿರಲಿ. ದಿನ - ಪ್ರತಿದಿನ ಬುದ್ಧಿಯ ಬೀಗವು ತೆರೆಯುತ್ತಾ ಹೋಗುವುದು. ಯಾರು ಆಸ್ತಿಯನ್ನು ಪಡೆಯಬೇಕಾಗಿದೆಯೋ ಅವರು ಬರುತ್ತಾರೆ. ದಿನ-ಪ್ರತಿದಿನ ಕಲಿಯುತ್ತಲೇ ಇರುತ್ತಾರೆ. ಕೆಲವರ ಮೇಲೆ ಗ್ರಹಚಾರ ಕುಳಿತುಕೊಳ್ಳುತ್ತದೆಯೆಂದರೆ ತಂದೆಗೆ ತಿಳಿಸಬೇಕಾಗುತ್ತದೆ. ನಮ್ಮ ಮೇಲೆ ಗ್ರಹಚಾರವಿದೆ, ಆದ್ದರಿಂದ ನಮ್ಮಿಂದ ಸೇವೆಯಾಗುತ್ತಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳುವುದೇ ಇಲ್ಲ. ನೀವು ಮಕ್ಕಳ ಮೇಲೆ ಎಲ್ಲಾ ಜವಾಬ್ದಾರಿಯಿದೆ. ತಮ್ಮ ಸಮಾನ ಬ್ರಾಹ್ಮಣರನ್ನಾಗಿ ಮಾಡುತ್ತಾ ಇರಿ. ಸೇವೆಯಲ್ಲಿರುವುದರಿಂದ ಬಹಳ ಖುಷಿಯಿರುತ್ತದೆ, ಅನೇಕರ ಕಲ್ಯಾಣವಾಗುತ್ತದೆ. ಬಾಬಾರವರಿಗೆ ಬಾಂಬೆಯಲ್ಲಿ ಸರ್ವಿಸ್ ಮಾಡಲು ಬಹಳ ಮಜಾ ಬರುತ್ತಿತ್ತು, ಅನೇಕರು ಹೊಸ-ಹೊಸಬರು ಬರುತ್ತಿದ್ದರು. ಬಾಬಾರವರಿಗೆ ಸರ್ವಿಸ್ ಮಾಡಬೇಕೆಂದು ಬಹಳ ಮನಸ್ಸಾಗುತ್ತದೆ ಹಾಗೆಯೇ ಮಕ್ಕಳೂ ಸಹ ದಯಾ ಹೃದಯಿಗಳಾಗಬೇಕು, ಸರ್ವಿಸಿನಲ್ಲಿ ತೊಡಗಬೇಕು. ಇದು ಮನಸ್ಸಿನಲ್ಲಿರಲಿ – ಎಲ್ಲಿಯವರೆಗೆ ನಾವು ಯಾರನ್ನೂ ತಮ್ಮ ಸಮಾನ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಭೋಜನವನ್ನೂ ಸೇವಿಸಬಾರದು. ಮೊದಲು ನಾನು ಪುಣ್ಯ ಕರ್ಮವನ್ನು ಮಾಡಬೇಕು, ಪಾಪತ್ಮರನ್ನು ಪುಣ್ಯಾತ್ಮರಾಗಿ ಮಾಡಿ ನಂತರ ರೊಟ್ಟಿಯನ್ನು ತಿನ್ನುವೇನು. ಹೀಗೆ ಸರ್ವೀಸ್ ನಲ್ಲಿ ತೊಡಗಿರಬೇಕು. ಅನ್ಯರ ಜೀವನವನ್ನು ಸಫಲ ಮಾಡಿಸಿ ಆಗ ರೊಟ್ಟಿ ತಿನ್ನುವೆನು. ಹೀಗೆ ತಮ್ಮ ಸಮಾನ ಬ್ರಾಹ್ಮಣರನ್ನಾಗಿ ಮಾಡುವ ಪ್ರಯತ್ನ ಪಡಬೇಕು.

ಮಕ್ಕಳಿಗಾಗಿ ಈ ಮಾಸ ಪತ್ರಿಕೆ ಬರುತ್ತದೆ ಆದರೆ ಬಿ.ಕೆ.ಗಳು ಇಷ್ಟೊಂದು ಓದುವುದಿಲ್ಲ. ನಾವೇನೂ ಓದುವುದು, ಇದು ಹೊರಗಿನವರಿಗಾಗಿ ಎಂದು ತಿಳಿಯುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ಶಿಕ್ಷಕರಿಲ್ಲದೆ ಹೊರಗಿನವರಿಗೆ ಏನೂ ಅರ್ಥವಾಗುವುದಿಲ್ಲ. ಇದನ್ನು ಓದಿ ರಿಫ್ರೆಷ್ ಆಗಲಿ ಎಂದು. ಇದು ಬ್ರಹ್ಮಾಕುಮಾರ - ಕುಮಾರಿಯರಿಗಾಗಿಯೇ ಇದೆ ಆದರೆ ಅವರೇ ಓದುವುದಿಲ್ಲ. ಎಲ್ಲಾ ಸೇವಾಕೇಂದ್ರಗಳವರೊಂದಿಗೆ ತಂದೆಯು ಕೇಳುತ್ತಾರೆ - ಎಲ್ಲಾ ಪತ್ರಿಕೆಗಳನ್ನು ಯಾರು ಓದುತ್ತೀರಿ? ಪತ್ರಿಕೆಗಳಿಂದ ಏನು ತಿಳಿದುಕೊಳ್ಳುತ್ತೀರಿ? ಎಲ್ಲಿಯವರೆಗೆ ಸರಿಯಾಗಿದೆ? ಪತ್ರಿಕೆಯನ್ನು ಹೊರಡಿಸುವವರಿಗೂ ಸಹ ಉಮ್ಮಂಗವನ್ನು ತರಿಸಬೇಕು - ತಾವು ಬಹಳ ಒಳ್ಳೆಯ ಪತ್ರಿಕೆಯನ್ನು ಹೊರಡಿಸಿದ್ದೀರಿ. ತಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಪರಿಶ್ರಮಪಟ್ಟು ಮಾಸ ಪತ್ರಿಕೆಯನ್ನು ಓದಬೇಕು. ಇದು ಮಕ್ಕಳು ರಿಫ್ರೆಷ್ ಆಗುವುದಕ್ಕಾಗಿ ಇದೆ ಆದರೆ ಮಕ್ಕಳೇ ಓದುವುದಿಲ್ಲ. ಯಾರ ಹೆಸರು ಪ್ರಸಿದ್ಧವಾಗಿದೆಯೋ ಅವರನ್ನು ಬಾಬಾ ಭಾಷಣ ಮಾಡುವುದಕ್ಕಾಗಿ ಇಂತಹವರನ್ನು ನಮ್ಮ ಬಳಿ ಕಳುಹಿಸಿ ಎಂದು ನಿಮಂತ್ರಣ ಕೊಡುತ್ತಾರೆ. ಆಗ ತಂದೆಯು ತಿಳಿದುಕೊಳ್ಳುತ್ತಾರೆ - ಇವರು ತಾನು ಭಾಷಣ ಮಾಡುವುದನ್ನು ಕಲಿತಿಲ್ಲ. ಆದ್ದರಿಂದಲೇ ಕಳುಹಿಸಿ ಎಂದು ಕೇಳುತ್ತಾರೆ ಅಂದಮೇಲೆ ಸೇವಾಧಾರಿಗಳಿಗೆ ಎಷ್ಟೊಂದು ಗೌರವ ಕೊಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ರಾಜ್ಯ ಪದಕವನ್ನು ತೆಗೆದುಕೊಳ್ಳಲು ಎಲ್ಲರ ಮನಸ್ಸನ್ನು ಖುಷಿ ಪಡಿಸಬೇಕು. ಬಹಳ-ಬಹಳ ದಯಾಹೃದಯಿಗಳಾಗಿ ತನ್ನ ಮತ್ತು ಸರ್ವರ ಕಲ್ಯಾಣ ಮಾಡಬೇಕಾಗಿದೆ. ಅವಿಶ್ರಾಂತ ಸೇವೆ ಮಾಡಬೇಕಾಗಿದೆ.

2. ದೇಹಾಭಿಮಾನದಲ್ಲಿ ಬಂದು ಸೇವಾಭಂಗ ಮಾಡಬಾರದು. ಸದಾ ಪುಣ್ಯದ ಕರ್ಮವನ್ನೇ ಮಾಡಬೇಕು. ತಮ್ಮ ಸಮಾನ ಬ್ರಾಹ್ಮಣರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಸೇವಾಧಾರಿಗಳ ಪ್ರತಿ ಗೌರವವನ್ನಿಡಬೇಕಾಗಿದೆ.

ವರದಾನ:
ನೆನಪು ಮತ್ತು ಸೇವೆಯ ಡಬ್ಬಲ್ ಲಾಕ್ ಮುಖಾಂತರ ಸದಾ ಸುರಕ್ಷಿತ ಮತ್ತು ಸದಾ ಸಂತುಷ್ಠ ಭವ.

ಇಡೀ ದಿನ ಸಂಕಲ್ಪ. ಮಾತು ಮತ್ತು ಕರ್ಮ ತಂದೆಯ ನೆನಪು ಮತ್ತು ಸೇವೆಯಲ್ಲಿ ತೊಡಗಿರಲಿ. ಪ್ರತಿ ಸಂಕಲ್ಪದಲ್ಲಿ ತಂದೆಯ ನೆನಪಿರಲಿ, ಮಾತಿನ ಮೂಲಕ ತಂದೆ ಕೊಟ್ಟಿರುವ ಖಜಾನೆ ಬೇರೆಯವರಿಗೆ ಕೊಡಿ ಕರ್ಮದ ಮೂಲಕ ತಂದೆಯ ಚರಿತ್ರೆಯನ್ನು ಸಿದ್ಧ ಮಾಡಿ. ಒಂದುವೇಳೆ ಈ ರೀತಿಯ ನೆನಪು ಮತ್ತು ಸೇವೆಯಲ್ಲಿ ಸದಾ ವ್ಯಸ್ತರಾಗಿದ್ದಾಗ ಡಬ್ಬಲ್ ಲಾಕ್ ಹಾಕಿಕೊಂಡು ಬಿಡುವುದು, ನಂತರ ಮಾಯೆ ಎಂದು ಬರಲು ಸಾಧ್ಯವಿಲ್ಲ. ಯಾರು ಈ ಸ್ಮೃತಿಯಲ್ಲಿ ಪಕ್ಕಾ ಲಾಕ್ ಹಾಕುತ್ತಾರೆ, ಅವರು ಸದಾ ಸುರಕ್ಷಿತರು, ಸದಾ ಖುಷಿ ಮತ್ತು ಸದಾ ಸಂತುಷ್ಟರಾಗಿರುತ್ತಾರೆ.

ಸ್ಲೋಗನ್:
"ಬಾಬಾ" ಶಬ್ದದ ಡೈಮಂಡ್ ಕೀಲಿ ಜೊತೆಯಲ್ಲಿದ್ದಾಗ ಸರ್ವ ಖಜಾನೆಗಳ ಅನುಭೂತಿಯಾಗುತ್ತಿರುತ್ತದೆ.