11.03.21         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನೀವು ಸರ್ವೋತ್ತಮ ಸೌಭಾಗ್ಯಶಾಲಿ ಬ್ರಾಹ್ಮಣ ಕುಲಭೂಷಣರಾಗಿದ್ದೀರಿ, ನಿಮಗೆ ಸ್ವಯಂ ಭಗವಂತನೇ ಶುಭಾಷಯಗಳನ್ನು ನೀಡುತ್ತಾರೆ"

ಪ್ರಶ್ನೆ:
ತಂದೆಯು ಮಕ್ಕಳಿಗೆ ಸಂಗಮದಲ್ಲಿಯೇ ಸೃಷ್ಟಿಯ ಸಮಾಚಾರವನ್ನು ತಿಳಿಸುತ್ತಾರೆ, ಸತ್ಯಯುಗದಲ್ಲಿ ಅಲ್ಲ - ಯಾಕೆ?

ಉತ್ತರ:
ಏಕೆಂದರೆ ಸತ್ಯಯುಗವು ಆದಿಯ ಸಮಯವಾಗಿದೆ, ಆ ಸಮಯದಲ್ಲಿ ಇಡೀ ಸೃಷ್ಟಿಯ ಸಮಾಚಾರ ಅರ್ಥಾತ್ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಹೇಗೆ ತಿಳಿಸುವುದು! ಎಲ್ಲಿಯವರೆಗೆ ಚಕ್ರವು ಪುನರಾವರ್ತನೆಯೇ ಆಗಿಲ್ಲವೋ ಅಲ್ಲಿಯವರೆಗೆ ಸಮಾಚಾರವನ್ನು ತಿಳಿಸುವುದಕ್ಕೆ ಹೇಗೆ ಸಾಧ್ಯ. ಸಂಗಮದಲ್ಲಿಯೇ ನೀವು ಮಕ್ಕಳು ತಂದೆಯ ಮೂಲಕ ಪೂರ್ಣ ಸಮಾಚಾರವನ್ನು ಕೇಳುತ್ತೀರಿ. ನಿಮಗೇ ಜ್ಞಾನದ ಮೂರನೆಯ ನೇತ್ರವು ಸಿಗುತ್ತದೆ.

ಓಂ ಶಾಂತಿ.
ಇಂದು ತ್ರಿಮೂರ್ತಿ ಶಿವ ಜಯಂತಿ ಸೋ ಬ್ರಾಹ್ಮಣ ಜಯಂತಿ ಸೋ ಸಂಗಮಯುಗ ಜಯಂತಿಯ ಶುಭ ದಿವಸವಾಗಿದೆ. ಇಂತಹವರು ಅನೇಕರಿದ್ದಾರೆ - ಯಾರಿಗೆ ತಂದೆಯು ಈಶ್ವರೀಯ ಜನ್ಮಸಿದ್ಧ ಅಧಿಕಾರದ ಶುಭಾಷಯಗಳನ್ನೂ ಕೊಡಲು ಸಾಧ್ಯವಿಲ್ಲ. ಏಕೆಂದರೆ ಶಿವ ತಂದೆ ಯಾರು? ಅವರಿಂದ ಏನು ಸಿಗುತ್ತದೆ? ಎಂಬುದೇ ಅನೇಕರಿಗೆ ಗೊತ್ತಿಲ್ಲ ಅಂದಮೇಲೆ ಅವರು ಶುಭಾಷಯಗಳನ್ನೇನು ತಿಳಿದುಕೊಳ್ಳುವರು? ಹೊಸ ಮಕ್ಕಳು ಏನನ್ನೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇದು ಜ್ಞಾನದ ನರ್ತನವಾಗಿದೆ. ಶ್ರೀಕೃಷ್ಣನು ನರ್ತನ ಮಾಡುತ್ತಿದ್ದನೆಂದು ಹೇಳುತ್ತಾರಲ್ಲವೆ. ಇಲ್ಲಿ ಮಕ್ಕಳು ರಾಧೆ-ಕೃಷ್ಣರಾಗಿ ನರ್ತನ ಮಾಡುತ್ತಾರೆ ನೃತ್ಯದ ಮಾತೇ ಇಲ್ಲ. ಅದು ಕೇವಲ ಸತ್ಯಯುಗದಲ್ಲಿ ಬಾಲ್ಯದಲ್ಲಿ ರಾಜಕುಮಾರ-ಕುಮಾರಿಯರ ಜೊತೆ ನರ್ತನ ಮಾಡುತ್ತಾರೆ. ಮಕ್ಕಳಿಗೆ ತಿಳಿದಿದೆ - ಇವರು ಬಾಪ್ದಾದಾ ಆಗಿದ್ದಾರೆ ದಾದಾರವರಿಗೆ ಗ್ರಾಂಡ್ ಫಾದರ್ ಎಂದು ಹೇಳಲಾಗುತ್ತದೆ. ಈ ದಾದಾರವರಂತೂ ಸಾಕಾರ ತಂದೆಯಾದರು. ಇಲ್ಲಿ ಬಹಳ ವಿಚಿತ್ರ ಮಾತಾಗಿದೆ. ಅವರು ಆತ್ಮಿಕ ದಾದಾ (ತಾತ) ಮತ್ತು ಇವರು ಶಾರೀರಿಕ ದಾದಾ ಆಗಿದ್ದಾರೆ. ಇವರಿಗೆ ಬಾಪ್ ದಾದಾ ಎಂದು ಹೇಳುತ್ತಾರೆ. ತಂದೆಯಿಂದ ದಾದಾರವರ ಮೂಲಕ ಆಸ್ತಿಯು ಸಿಗುತ್ತದೆ. ಇದು ತಾತನ ಆಸ್ತಿಯಾಗಿದೆ. ಎಲ್ಲಾ ಆತ್ಮ ಸಹೋದರರಾಗಿದ್ದೀರಿ ಆದ್ದರಿಂದ ಆಸ್ತಿಯು ತಂದೆಯಿಂದ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ನೀವಾತ್ಮರಿಗೆ ತಮ್ಮ ಶರೀರ, ತಮ್ಮ ಕರ್ಮೇಂದ್ರಿಯಗಳಿವೆ. ನನಗೆ ನಿರಾಕಾರನೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಶರೀರವು ಬೇಕಲ್ಲವೆ. ಆಗಲೇ ಮಕ್ಕಳಿಗೆ ರಾಜಯೋಗವನ್ನು ಕಲಿಸುವೆನು ಅಥವಾ ಮನುಷ್ಯರಿಂದ ದೇವತೆ, ಪತಿತರಿಂದ ಪಾವನರಾಗುವ ಮಾರ್ಗವನ್ನು ತಿಳಿಸುವೆನು ಹಾಗೂ ಕೊಳಕಾದ ಬಟ್ಟೆಯನ್ನು ಒಗೆಯುವೆನು.... ಅಂದಾಗ ತಂದೆಯು ಅವಶ್ಯವಾಗಿ ದೊಡ್ಡ ದೋಬಿ (ಅಗಸ) ಯಾಗಿರುವರು. ಇಡೀ ವಿಶ್ವದ ಆತ್ಮರನ್ನು ಮತ್ತು ಶರೀರವನ್ನು ತೊಳೆಯುತ್ತಾರೆ. ಜ್ಞಾನ ಮತ್ತು ಯೋಗದಿಂದ ನೀವು ಆತ್ಮರನ್ನು ಸ್ವಚ್ಚ ಮಾಡಲಾಗುತ್ತದೆ. ಇಂದು ನೀವು ಮಕ್ಕಳು ಬಂದಿದ್ದೀರಿ, ನಿಮಗೆ ತಿಳಿದಿದೆ - ನಾವು ಶಿವ ತಂದೆಗೆ ಶುಭಾಶಯಗಳನ್ನು ನೀಡಲು ಬಂದಿದ್ದೇವೆ. ಮತ್ತೆ ತಂದೆಯು ತಿಳಿಸುತ್ತಾರೆ - ನೀವು ಯಾರಿಗೆ ಶುಭಾಷಯಗಳನ್ನು ಹೇಳುತ್ತೀರೋ ಆ ತಂದೆಯೂ ಸಹ ನೀವು ಮಕ್ಕಳಿಗೆ ಶುಭಾಷಯಗಳನ್ನು ಹೇಳುವರು ಏಕೆಂದರೆ ನೀವು ಬಹಳ ಸರ್ವೋತ್ತಮ ಸೌಭಾಗ್ಯಶಾಲಿ ಬ್ರಾಹ್ಮಣ ಕುಲಭೂಷಣ ಆಗಿದ್ದೀರಿ. ನೀವೆಷ್ಟು ಉತ್ತಮರಾಗಿದ್ದೀರೋ ಅಷ್ಟು ದೇವತೆಗಳೂ ಸಹ ಉತ್ತಮರಾಗಿರುವುದಿಲ್ಲ. ಬ್ರಾಹ್ಮಣರು ದೇವತೆಗಳಿಗಿಂತಲೂ ಶ್ರೇಷ್ಠರಾಗಿದ್ದೀರಿ. ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ, ಮತ್ತೆ ಅವರು ಬ್ರಹ್ಮಾರವರ ತನುವಿನಲ್ಲಿ ಬರುತ್ತಾರೆ. ಅವರ ಮಕ್ಕಳು ನೀವು ಬಹಳ ಶ್ರೇಷ್ಠಾತಿ ಶ್ರೇಷ್ಠ ಬ್ರಾಹ್ಮಣರಾಗುತ್ತೀರಿ. ಬ್ರಾಹ್ಮಣರದು ಶಿಖೆಯಾಗಿದೆ, ಅದರ ಕೆಳಗೆ ದೇವತೆಗಳಿದ್ದಾರೆ. ಎಲ್ಲರಿಗಿಂತ ಮೇಲೆ ತಂದೆಯಿದ್ದಾರೆ, ತಂದೆಯು ನೀವು ಮಕ್ಕಳಿಗೆ ಸ್ವರ್ಗದ ಆಸ್ತಿಯನ್ನು ಕೊಡಲು ನಿಮ್ಮನ್ನು ಬ್ರಾಹ್ಮಣ-ಬ್ರಾಹ್ಮಣಿಯರನ್ನಾಗಿ ಮಾಡಿದ್ದಾರೆ. ನೋಡಿ! ಈ ಲಕ್ಷ್ಮಿ - ನಾರಾಯಣರಿಗೆ ಎಷ್ಟೊಂದು ಮಂದಿರಗಳನ್ನು ಕಟ್ಟಿಸಿದ್ದಾರೆ, ತಲೆ ಬಾಗುತ್ತಾರೆ. ಭಾರತ ವಾಸಿಗಳಿಗೆ ಇದು ತಿಳಿದಿರಬೇಕು - ಇವರೂ ಮನುಷ್ಯರಾಗಿದ್ದಾರೆ, ಲಕ್ಷ್ಮೀ-ನಾರಾಯಣ ಇಬ್ಬರೂ ಬೇರೆ-ಬೇರೆಯಾಗಿದ್ದಾರೆ. ಇಲ್ಲಂತೂ ಒಬ್ಬ ಮನುಷ್ಯನಿಗೆ ಎರಡು ಹೆಸರುಗಳನ್ನು ಇಟ್ಟಿರುತ್ತಾರೆ. ಒಬ್ಬರ ಹೆಸರೇ ಲಕ್ಷ್ಮಿ -ನಾರಾಯಣ ಅರ್ಥಾತ್ ತಮ್ಮನ್ನು ವಿಷ್ಣು ಚತುರ್ಭುಜನೆಂದು ಹೇಳುತ್ತಾರೆ. ಲಕ್ಷ್ಮೀ ನಾರಾಯಣ ಅಥವಾ ರಾಧಾ ಕೃಷ್ಣ ಎಂದು ಹೆಸರನ್ನಿಟ್ಟುಕೊಂಡರೆ ಚತುರ್ಭುಜನಾದರಲ್ಲವೆ. ಈ ವಿಷ್ಣು ಚಿತ್ರವು ಸೂಕ್ಷ್ಮ ವತನದ ಗುರಿ-ಧ್ಯೇಯವಾಗಿದೆ. ನೀವು ಈ ವಿಷ್ಣು ಪುರಿಯ ಮಾಲೀಕರಾಗುತ್ತೀರಿ, ಲಕ್ಷ್ಮಿ - ನಾರಾಯಣನು ವಿಷ್ಣು ಪುರಿಯ ಮಾಲೀಕರಾಗಿದ್ದಾರೆ. ವಿಷ್ಣುವಿಗೆ ನಾಲ್ಕು ಭುಜಗಳಿವೆ, ಎರಡು ಲಕ್ಷ್ಮಿಯದು, ಎರಡು ನಾರಾಯಣನದು. ನಾವು ವಿಷ್ಣು ಪುರಿಯ ಮಾಲೀಕರಾಗುತ್ತಿದ್ದೇವೆಂದು ನೀವು ಹೇಳುತ್ತೀರಿ.

ಒಳ್ಳೆಯದು - ತಂದೆಯ ಮಹಿಮೆಯ ಗೀತೆಯನ್ನು ತಿಳಿಸಿ. ಇಡೀ ಪ್ರಪಂಚದಲ್ಲಿ ಆದಿಯಿಂದ ಹಿಡಿದು ಇಲ್ಲಿನವರೆಗೆ ಒಬ್ಬ ತಂದೆಯನ್ನು ಬಿಟ್ಟರೆ ಬೇರೆ ಯಾರಿಗೂ ಇಷ್ಟೊಂದು ಮಹಿಮೆಯಿಲ್ಲ. ನಂಬರ್ವಾರಂತೂ ಇದ್ದೇ ಇರುತ್ತಾರೆ. ಎಲ್ಲರಿಗಿಂತ ಹೆಚ್ಚು ಸರ್ವೋತ್ತಮ ಮಹಿಮೆಯು ಶ್ರೇಷ್ಠಾತಿ ಶ್ರೇಷ್ಠ ಪರಮಪಿತ ಪರಮಾತ್ಮನಿಗಿದೆ. ನೀವೆಲ್ಲರೂ ಅವರ ಮಕ್ಕಳಾಗಿದ್ದೀರಿ. ನಾವು ಈಶ್ವರನ ಸಂತಾನರೆಂದು ಹೇಳುತ್ತೀರಿ, ಈಶ್ವರನಂತೂ ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ನೀವೇಕೆ ನರಕದಲ್ಲಿದ್ದೀರಿ! ಇಲ್ಲಿ ಈಶ್ವರನ ಜನ್ಮವಾಗಿದೆ. ನಾವು ಕ್ರಿಶ್ಚಿಯನ್ನರಾಗಿದ್ದೇವೆಂದು ಕ್ರಿಶ್ಚಿಯನ್ನರು ಹೇಳುತ್ತಾರೆ. ಭಾರತವಾಸಿಗಳಿಗೆ ನಾವು ಪರಮಪಿತ ಪರಮಾತ್ಮ ಶಿವನ ಡೈರೆಕ್ಟ್ ಮಕ್ಕಳಾಗಿದ್ದೇವೆ ಎಂಬುದೇ ಮರೆತು ಹೋಗಿದೆ. ತಂದೆಯು ಮಕ್ಕಳನ್ನು ತನ್ನವರನ್ನಾಗಿ ಮಾಡಿಕೊಂಡು ರಾಜ್ಯಭಾಗ್ಯವನ್ನು ಕೊಡಲು ಇಲ್ಲಿಗೆ ಬರುತ್ತಾರೆ. ಇಂದು ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ ಏಕೆಂದರೆ ಬಹಳ ಮಂದಿ ಹೊಸಬರಿದ್ದಾರೆ. ಇವರಿಗೆ ತಿಳಿದುಕೊಳ್ಳುವುದು ಕಷ್ಟವಾಗುತ್ತದೆ, ಆದರೂ ಸಹ ಸ್ವರ್ಗವಾಸಿಗಳಂತೂ ಆಗುತ್ತಾರೆ. ಸ್ವರ್ಗದಲ್ಲಿ ಸೂರ್ಯವಂಶಿಯರೂ ಇರುತ್ತಾರೆ. ದಾಸ ದಾಸಿಯರೂ ಇರುತ್ತಾರೆ. ಪ್ರಜೆಗಳೂ ಇರುತ್ತಾರೆ. ಅದರಲ್ಲಿ ಕೆಲವರು ಬಡವರು, ಕೆಲವರು ಸಾಹುಕಾರರಿರುತ್ತಾರೆ. ಅವರಿಗೂ ದಾಸ-ದಾಸಿಯರಿರುತ್ತಾರೆ. ಇಡೀ ರಾಜಧಾನಿಯು ಇಲ್ಲಿ ಸ್ಥಾಪನೆಯಾಗುತ್ತಿದೆ. ಇದು ಮತ್ತ್ಯಾರಿಗೂ ತಿಳಿದಿಲ್ಲ. ಎಲ್ಲರ ಆತ್ಮವು ತಮೋಪ್ರಧಾನವಾಗಿದೆ. ಯಾರಿಗೂ ಜ್ಞಾನದ ಮೂರನೇ ನೇತ್ರವಿಲ್ಲ. (ಹಾಡು) ಈಗ ತಂದೆಯ ಮಹಿಮೆಯನ್ನು ಕೇಳಿದಿರಿ. ಅವರು ಎಲ್ಲರ ತಂದೆಯಾಗಿದ್ದಾರೆ. ಭಗವಂತನಿಗೆ ಬೇಹದ್ದಿನ ಸುಖ ಕೊಡುವಂತಹ ಪಿತನೆಂದು ಹೇಳುತ್ತಾರೆ, ಇದೇ ಭಾರತದಲ್ಲಿಯೇ ಬೇಹದ್ದಿನ ಸುಖವಿತ್ತು, ಲಕ್ಷ್ಮಿ - ನಾರಾಯಣರ ರಾಜ್ಯವಿತ್ತು. ಈ ಲಕ್ಷ್ಮಿ -ನಾರಾಯಣರು ಬಾಲ್ಯದಲ್ಲಿ ರಾಧೆ-ಕೃಷ್ಣರಾಗಿರುತ್ತಾರೆ. ಮತ್ತೆ ಸ್ವಯಂವರದ ನಂತರ ಲಕ್ಷ್ಮಿ - ನಾರಾಯಣರೆಂಬ ಹೆಸರು ಬರುತ್ತದೆ. ಈ ಭಾರತದಲ್ಲಿ 5000 ವರ್ಷಗಳ ಮೊದಲು ದೇವತೆಗಳ ರಾಜ್ಯವಿತ್ತು. ಲಕ್ಷ್ಮೀ-ನಾರಾಯಣರ ರಾಜ್ಯವನ್ನು ಬಿಟ್ಟು ಮತ್ತಾವುದೇ ರಾಜ್ಯವಿರಲಿಲ್ಲ, ಯಾವುದೇ ಖಂಡವಿರಲಿಲ್ಲ ಅಂದಮೇಲೆ ಈಗ ಭಾರತವಾಸಿಗಳಿಗೂ ಸಹ ಅವಶ್ಯವಾಗಿ ಇದು ಅರ್ಥವಾಗಬೇಕು - ಲಕ್ಷ್ಮೀ-ನಾರಾಯಣರು ಮೊದಲ ಜನ್ಮದಲ್ಲಿ ಯಾವ ಕರ್ಮ ಮಾಡಿದರು? ಹೇಗೆ ಬಿರ್ಲಾದವರು ಯಾವ ಕರ್ಮ ಮಾಡಿದ ಕಾರಣ ಇಷ್ಟು ಧನವಂತರಾದರು! ಎಂದು ಹೇಳುತ್ತಾರೆ. ಅವಶ್ಯವಾಗಿ ಮೊದಲ ಜನ್ಮದಲ್ಲಿ ದಾನ-ಪುಣ್ಯವನ್ನು ಮಾಡಿರಬೇಕು. ಕೆಲವರ ಬಳಿ ಬಹಳಷ್ಟು ಹಣವಿದೆ. ಇನ್ನೂ ಕೆಲವರಿಗೆ ತಿನ್ನುವುದಕ್ಕೂ ಸಿಗುವುದಿಲ್ಲ ಏಕೆಂದರೆ ಅಂತಹ ಕರ್ಮ ಮಾಡಿದ್ದಾರೆ. ಕರ್ಮಗಳನ್ನಂತೂ ನೀವು ಒಪ್ಪುತ್ತೀರಿ. ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ಗೀತೆಯ ಭಗವಂತನು ತಿಳಿಸಿದ್ದರು ಯಾರ ಮಹಿಮೆಯನ್ನು ನೀವೀಗ ಕೇಳಿದಿರಿ. ಶಿವ ಭಗವಂತನು ಒಬ್ಬರೇ ಆಗಿದ್ದಾರೆ, ಮನುಷ್ಯರಿಗೆ ಭಗವಂತನೆಂದು ಹೇಳುವುದಿಲ್ಲ. ಈಗ ತಂದೆಯು ಎಲ್ಲಿ ಬಂದಿದ್ದಾರೆ ! ತಿಳಿಸುತ್ತಾರೆ - ಸನ್ಮುಖದಲ್ಲಿ ಮಹಾಭಾರತ ಯುದ್ಧವು ನಿಂತಿದೆ. ಆದ್ದರಿಂದ ಮಧುರಾತಿ ಮಧುರ ತಂದೆಯು ತಿಳಿಸುತ್ತಾರೆ, ಇವರನ್ನು ದುಃಖದಲ್ಲಿ ಎಲ್ಲರೂ ನೆನಪು ಮಾಡುತ್ತಾರೆ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ಇಲ್ಲ.... ಶಿವ ತಂದೆಯನ್ನು ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ, ಸುಖದಲ್ಲಿ ಮಾಡುವುದಿಲ್ಲ. ಸ್ವರ್ಗದಲ್ಲಂತೂ ದುಃಖವಿರಲಿಲ್ಲ. ಅಲ್ಲಿ ತಂದೆಯಿಂದ ಪಡೆದ ಆಸ್ತಿಯಿತ್ತು 5000 ವರ್ಷಗಳ ಮೊದಲು ಶಿವ ತಂದೆಯು ಬಂದಾಗ ಭಾರತವನ್ನು ಸ್ವರ್ಗವನ್ನಾಗಿ ಮಾಡಿದ್ದರು, ಈಗ ನರಕವಾಗಿದೆ. ಪುನಃ ಸ್ವರ್ಗವನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಪ್ರಪಂಚದವರಿಗಂತೂ ಏನೂ ತಿಳಿದಿಲ್ಲ. ನಾವೆಲ್ಲರೂ ಅಂಧರಾಗಿದ್ದೇವೆ. ಅಂಧರಿಗೆ ಊರುಗೋಲಾಗಿರುವ ಪ್ರಭುವೇ ಬನ್ನಿ, ಬಂದು ನಮಗೆ ಕಣ್ಣುಗಳನ್ನು ಪ್ರಧಾನಿಸಿ ಎಂದು ಹೇಳುತ್ತಾರೆ. ಈಗ ನೀವು ಮಕ್ಕಳಿಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ಎಲ್ಲಿ ನಾವಾತ್ಮರು ಇರುತ್ತೇವೆಯೋ ಅದು ಶಾಂತಿಧಾಮವಾಗಿದೆ, ತಂದೆಯೂ ಅಲ್ಲಿರುತ್ತಾರೆ. ನೀವಾತ್ಮರು ಮತ್ತು ನಾನು ಅಲ್ಲಿರುತ್ತೇವೆ. ಇವರ ಆತ್ಮನಿಗೆ ತಂದೆಯು ತಿಳಿಸುತ್ತಾರೆ - ನೀವೆಲ್ಲಾ ಆತ್ಮರ ತಂದೆಯಾದ ನಾನು ಪರಮಧಾಮದಲ್ಲಿರುತ್ತೇನೆ, ನೀವು ಪುನರ್ಜನ್ಮದ ಪಾತ್ರವನ್ನು ಅಭಿನಯಿಸುತ್ತೀರಿ, ನಾನು ಅಭಿನಯಿಸುವುದಿಲ್ಲ, ನೀವು ವಿಶ್ವದ ಮಾಲೀಕರಾಗುತ್ತೀರಿ, ನಾನಾಗುವುದಿಲ್ಲ. ನೀವು 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮಗೆ ತಿಳಿಸಿದ್ದೇನೆ, ಹೇ ಮಕ್ಕಳೇ, ನೀವು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ಮನುಷ್ಯರು 84 ಲಕ್ಷ ಜನ್ಮಗಳೆಂದು ಹೇಳುತ್ತಾರೆ. ಇವು ಅಸತ್ಯ ಮಾತುಗಳಾಗಿವೆ. ನಾನು ಜ್ಞಾನ ಸಾಗರ, ಪತಿತ - ಪಾವನನಾಗಿದ್ದೇನೆ, ಯಾವಾಗ ಎಲ್ಲರೂ ಪತಿತರಾಗುವರೋ ಆಗ ನಾನು ಬರುತ್ತೇನೆ. ಬಂದು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಿ ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತೇನೆ. ಮೊಟ್ಟ ಮೊದಲು ಮನುಷ್ಯರನ್ನು ಹೇಗೆ ರಚಿಸಿದರು? ಭಗವಂತನು ಸೃಷ್ಟಿಯನ್ನು ಹೇಗೆ ರಚಿಸಿದರು? ಎಂದು ಅನೇಕರು ಕೇಳುತ್ತಾರೆ. ಶಾಸ್ತ್ರದಲ್ಲಿಯೂ ತೋರಿಸುತ್ತಾರೆ-ಪ್ರಳಯವಾಯಿತು ನಂತರ ಕೃಷ್ಣನು ಸಾಗರದ ಆಲದ ಎಲೆಯ ಮೇಲೆ ತೇಲಿ ಬಂದನು. ಆದರೆ ತಂದೆಯು ತಿಳಿಸುತ್ತಾರೆ - ಇಂತಹ ಯಾವುದೇ ಮಾತಿಲ್ಲ. ಇದು ಬೇಹದ್ದಿನ ನಾಟಕವಾಗಿದೆ. ಸತ್ಯ-ತ್ರೇತಾಯುಗವು ದಿನವಾಗಿದೆ. ದ್ವಾಪರ-ಕಲಿಯುಗವು ರಾತ್ರಿಯಾಗಿದೆ.

ಮಕ್ಕಳು ತಂದೆಗೆ ಶುಭಾಷಯಗಳನ್ನು ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ - ತತ್ತ್ವಂ. ನೀವೂ ಸಹ 100% ದೌರ್ಭಾಗ್ಯಶಾಲಿಗಳಿಂದ 100% ಸೌಭಾಗ್ಯಶಾಲಿಗಳಾಗುತ್ತೀರಿ. ನೀವು ಭಾರತವಾಸಿಗಳೇ ಆ ರೀತಿ ಆಗಿದ್ದಿರಿ, ಆದರೆ ನಿಮಗೆ ತಿಳಿದಿಲ್ಲ, ತಂದೆಯು ಬಂದು ತಿಳಿಸುತ್ತಾರೆ. ನೀವು ತಮ್ಮ ಜನ್ಮಗಳನ್ನೂ ಅರಿತುಕೊಂಡಿಲ್ಲ. ನಾನು ಬಂದು ತಿಳಿಸುತ್ತೇನೆ - ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ತಂದೆಯು ನಿಮಗೆ ಸಂಗಮದಲ್ಲಿ ಇಡೀ ಸೃಷ್ಟಿಯ ಸಮಾಚಾರವನ್ನು ತಿಳಿಸುತ್ತಾರೆ, ಸತ್ಯಯುಗದಲ್ಲಿ ತಿಳಿಸುವುದಿಲ್ಲ. ಯಾವ ಸಮಯದಲ್ಲಿ ಇನ್ನೂ ಸೃಷ್ಟಿಯ ಆದಿ-ಮಧ್ಯ-ಅಂತ್ಯವೇ ಮುಗಿಯಲ್ಲಿಲ್ಲವೋ ಅದರ ಸಮಾಚಾರವನ್ನು ಹೇಗೆ ತಿಳಿಸುವುದು? ನಾನು, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ, ಶಾಸ್ತ್ರಗಳಲ್ಲಿ ಯುಗೇ ಯುಗೇ ಎಂದು ಬರೆದು ಬಿಟ್ಟಿದ್ದಾರೆ, ಕೃಷ ಭಗವಾನುವಾಚವೆಂದು ಗೀತೆಯಲ್ಲಿ ಬರೆದಿದ್ದಾರೆ. ಎಲ್ಲಾ ಧರ್ಮದವರು ಕೃಷ್ಣನಿಗೆ ಭಗವಂತ ನೆಂದು ಒಪ್ಪುವುದಿಲ್ಲ, ಭಗವಂತನು ನಿರಾಕಾರನಲ್ಲವೆ, ಅವರು ಎಲ್ಲಾ ಆತ್ಮರ ತಂದೆ ಆಗಿದ್ದಾರೆ. ತಂದೆಯಿಂದ ಆಸ್ತಿಯು ಸಿಗುತ್ತದೆ. ನೀವೆಲ್ಲಾ ಆತ್ಮರು ಸಹೋದರ-ಸಹೋದರರಾಗಿದ್ದೀರಿ, ಪರಮಾತ್ಮನಿಗೆ ಸರ್ವವ್ಯಾಪಿಯೆಂದು ಹೇಳುವುದಾದರೆ ವಿಶ್ವ ಪಿತೃತ್ವವಾಗಿ ಬಿಡುತ್ತದೆ. ತಂದೆಗೆ ಎಂದಾದರೂ ಆಸ್ತಿಯು ಸಿಗುತ್ತದೆಯೇ? ಆಸ್ತಿಯು ಮಕ್ಕಳಿಗೆ ಸಿಗುತ್ತದೆ. ನೀವಾತ್ಮರೆಲ್ಲ ಮಕ್ಕಳಾಗಿದ್ದೀರಿ ಅಂದಮೇಲೆ ತಂದೆಯ ಆಸ್ತಿಯು ಖಂಡಿತ ಬೇಕು. ಲೌಕಿಕ ಆಸ್ತಿಯಿಂದ ನೀವು ಖುಷಿಯಾಗುವುದಿಲ್ಲ. ಆದ್ದರಿಂದಲೇ ಕರೆಯುತ್ತೀರಿ, ಬಾಬಾ ನಿಮ್ಮ ಕೃಪೆಯಿಂದ ಅಪಾರ ಸುಖವು ಸಿಕ್ಕಿತ್ತು ಎಂದು. ಈಗ ಪುನಃ ರಾವಣನ ಮೂಲಕ ದುಃಖ ಸಿಗುವುದರಿಂದ ನೀವು ಕೂಗಲಾರಂಭಿಸುತ್ತೀರಿ, ಎಲ್ಲಾ ಆತ್ಮರು ಕರೆಯುತ್ತಾರೆ ಏಕೆಂದರೆ ದುಃಖವಿದೆ ಆದ್ದರಿಂದ ಬಾಬಾ, ಬಂದು ಸುಖವನ್ನು ಕೊಡಿ ಎಂದು ನೆನಪು ಮಾಡುತ್ತಾರೆ. ನೀವೀಗ ಈ ಜ್ಞಾನದಿಂದ ಸ್ವರ್ಗದ ಮಾಲೀಕರಾಗುತ್ತೀರಿ. ನಿಮ್ಮ ಸದ್ಗತಿಯಾಗುತ್ತದೆ ಆದ್ದರಿಂದ ಸರ್ವರ ಸದ್ಗತಿದಾತನು ಒಬ್ಬ ತಂದೆಯಾಗಿದ್ದಾರೆ ಎಂದು ಗಾಯನವಿದೆ. ಈಗ ಎಲ್ಲರೂ ದುರ್ಗತಿಯಲ್ಲಿದ್ದಾರೆ. ಮತ್ತೆ ಸರ್ವರ ಸದ್ಗತಿಯಾಗುತ್ತದೆ. ಲಕ್ಷ್ಮೀ ನಾರಾಯಣರಿದ್ದಾಗ ನೀವು ಸ್ವರ್ಗದಲ್ಲಿದ್ದಿರಿ ಉಳಿದೆಲ್ಲರೂ ಮುಕ್ತಿಧಾಮದಲ್ಲಿದ್ದರು. ನಾವೀಗ ತಂದೆಯ ಮೂಲಕ ರಾಜಯೋಗವನ್ನು ಕಲಿಯುತ್ತೇವೆ. ತಂದೆಯು ತಿಳಿಸುತ್ತಾರೆ - ಕಲ್ಪದ ಸಂಗಮಯುಗದಲ್ಲಿ ನಾನು ನಿಮಗೆ ಓದಿಸುತ್ತೇನೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೇನೆ. ಈಗ ನೀವು ಮಕ್ಕಳಿಗೆ ಇಡೀ ರಹಸ್ಯವನ್ನು ತಿಳಿಸುತ್ತೇನೆ. ಶಿವ ರಾತ್ರಿಯು ಯಾವಾಗ ಆಯಿತು, ಇದು ತಿಳಿದಿರಬೇಕಲ್ಲವೆ. ಏನಾಯಿತು, ಶಿವ ತಂದೆಯು ಯಾವಾಗ ಬಂದರು? ಏನನ್ನೂ ತಿಳಿದುಕೊಂಡಿಲ್ಲ ಅಂದಮೇಲೆ ಕಲ್ಲು ಬುದ್ಧಿಯವರಾದರಲ್ಲವೆ. ನೀವೀಗ ಪಾರಸ ಬುದ್ಧಿಯವರಾಗಿದ್ದೀರಿ, ನಮ್ಮ ಪಾರಸ ಪುರಿಯು ಸತ್ಯಯುಗವಾಗಿತ್ತು, ಲಕ್ಷ್ಮಿ - ನಾರಾಯಣರಿಗೂ ಸಹ ಭಗವಾನ್-ಭಗವತಿಯೆಂದು ಹೇಳುತ್ತಾರೆ. ಅವರಿಗೆ ಆಸ್ತಿಯನ್ನು ಭಗವಂತನು ಕೊಟ್ಟಿದ್ದರು, ಈಗ ಪುನಃ ಕೊಡುತ್ತಿದ್ದಾರೆ. ನಿಮ್ಮನ್ನು ಪುನಃ ಭಗವಾನ್ ಭಗವತಿಯನ್ನಾಗಿ ಮಾಡುತ್ತಿದ್ದಾರೆ. ಈಗ ನಿಮ್ಮದು ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ತಂದೆಯು ತಿಳಿಸುತ್ತಾರೆ - ವಿನಾಶವು ಸಮ್ಮುಖದಲ್ಲಿ ನಿಂತಿದೆ. ಇದಕ್ಕೆ ರುದ್ರ ಜ್ಞಾನ ಯಜ್ಞವೆಂದು ಹೇಳಲಾಗುತ್ತದೆ. ಅವೆಲ್ಲವೂ ಸ್ಥೂಲ ಯಜ್ಞಗಳಾಗಿರುತ್ತವೆ, ಇದು ಜ್ಞಾನದ ಮಾತಾಗಿದೆ. ಇದರಲ್ಲಿ ತಂದೆಯು ಬಂದು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ. ನೀವು ಶಿವ ತಂದೆಯ ಅವತರಣೆಗಾಗಿ ಶುಭಾಷಯಗಳನ್ನು ನೀಡುತ್ತೀರಿ ಮತ್ತೆ ತಂದೆಯು ಹೇಳುತ್ತಾರೆ - ಮಕ್ಕಳೇ, ನಾನೊಬ್ಬನೇ ಬರುತ್ತೇನೆಯೇ? ನನಗೂ ಶರೀರ ಬೇಕು ಅಂದಮೇಲೆ ಬ್ರಹ್ಮಾರವರ ತನುವಿನಲ್ಲಿ ಬರಬೇಕಾಗುತ್ತದೆ. ಮೊಟ್ಟ ಮೊದಲು ಸೂಕ್ಷ್ಮವತನವನ್ನು ರಚಿಸಬೇಕಾಗುತ್ತದೆ ಆದ್ದರಿಂದ ಇವರಲ್ಲಿ ಪ್ರವೇಶ ಮಾಡಿದ್ದೇನೆ, ಇವರಂತೂ ಪತಿತನಾಗಿದ್ದರು. 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿದ್ದಾರೆ. ಎಲ್ಲರೂ ಕರೆಯುತ್ತಿದ್ದಿರಿ, ನಾನೀಗ ಪುನಃ ನೀವು ಮಕ್ಕಳಿಗೆ ಆಸ್ತಿಯನ್ನು ಕೊಡಲು ಬಂದಿದ್ದೇನೆ. ತಂದೆಯೇ ಭಾರತಕ್ಕೆ ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಸ್ವರ್ಗದ ಉಡುಗೊರೆಯನ್ನೇ ಕೊಡುತ್ತಾರೆ. ನೀವೀಗ ಸ್ವರ್ಗದ ಮಾಲೀಕರಾಗುತ್ತಿದ್ದೀರಿ. ಭವಿಷ್ಯದಲ್ಲಿ ಮನುಷ್ಯರಿಂದ 21 ಜನ್ಮಗಳಿಗಾಗಿ ದೇವತೆಗಳಾಗುವ ಪಾಠಶಾಲೆಯು ಇದಾಗಿದೆ. ನೀವು ಸ್ವರ್ಗದ ಮಾಲೀಕರಾಗುತ್ತಿದ್ದೀರಿ. 21 ಪೀಳಿಗೆಗಳವರೆಗೆ ನೀವು ಸುಖ ಪಡೆಯುತ್ತೀರಿ, ಅಲ್ಲಿ ಅಕಾಲ ಮೃತ್ಯುವೆಂದೂ ಆಗುವುದಿಲ್ಲ. ಯಾವಾಗ ಶರೀರದ ಆಯಸ್ಸು ಮುಗಿಯುವುದೋ ಆಗ ಸಾಕ್ಷಾತ್ಕಾರವಾಗುತ್ತದೆ. ಸರ್ಪದಂತೆ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಈಗ ನೀವು ಮಕ್ಕಳು ತಂದೆಗೆ ಶುಭಾಷಯಗಳನ್ನು ತಿಳಿಸುತ್ತೀರಿ ಮತ್ತೆ ತಂದೆಯು ನಿಮಗೆ ಶುಭಾಷಯಗಳನ್ನು ತಿಳಿಸುತ್ತಾರೆ. ನೀವೀಗ ದೌರ್ಭಾಗ್ಯಶಾಲಿಗಳಿಂದ ಸೌಭಾಗ್ಯಶಾಲಿಗಳಾಗುತ್ತಿದ್ದೀರಿ. ಪತಿತ ಮನುಷ್ಯರಿಂದ ಪಾವನ ದೇವತೆಗಳಾಗುತ್ತೀರಿ, ಚಕ್ರವು ಸುತ್ತುತ್ತದೆ. ಇದನ್ನೇ ನೀವು ಮಕ್ಕಳು ತಿಳಿಸಬೇಕಾಗಿದೆ ಮತ್ತೆ ಈ ಜ್ಞಾನವು ಪ್ರಾಯಲೋಪವಾಗಿ ಬಿಡುತ್ತದೆ. ಸತ್ಯಯುಗದಲ್ಲಿ ಜ್ಞಾನದ ಅವಶ್ಯಕತೆಯಿರುವುದಿಲ್ಲ. ನೀವೀಗ ದುರ್ಗತಿಯಲ್ಲಿದ್ದೀರಿ ಆದ್ದರಿಂದ ಈ ಜ್ಞಾನದಿಂದ ಸದ್ಗತಿ ಸಿಗುತ್ತದೆ. ತಂದೆಯೇ ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ಸರ್ವರ ಸದ್ಗುರು ಒಬ್ಬರೇ ತಂದೆಯಾಗಿದ್ದಾರೆ. ಬಾಕಿ ಭಕ್ತಿಮಾರ್ಗದ ಕರ್ಮ ಕಾಂಡದಿಂದ ಯಾರ ಸದ್ಗತಿಯೂ ಆಗುವುದಿಲ್ಲ. ಎಲ್ಲರೂ ಏಣಿಯನ್ನು ಕೆಳಗಿಳಿಯಲೇಬೇಕಾಗಿದೆ. ಭಾರತವು ಸತೋಪ್ರಧಾನವಾಗಿತ್ತು ನಂತರ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಯಿತು, ಈಗ ಪುನಃ ನೀವು ಮೇಲೇರಬೇಕಾಗಿದೆ. ತಮ್ಮ ಮನೆಯಾದ ಮುಕ್ತಿಧಾಮಕ್ಕೆ ಹೋಗಬೇಕಾಗಿದೆ. ಈಗ ನಾಟಕವು ಪೂರ್ಣವಾಗುತ್ತದೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಬಿಡುವುದು. ಭಾರತಕ್ಕೆ ಅವಿನಾಶಿ ಖಂಡವೆಂದು ಹೇಳಲಾಗುತ್ತದೆ. ತಂದೆಯ ಜನ್ಮ ಸ್ಥಾನವೆಂದೂ ಸಮಾಪ್ತಿಯಾಗುವುದಿಲ್ಲ. ನೀವು ಶಾಂತಿಧಾಮದಲ್ಲಿ ಹೋಗಿ ಮತ್ತೆ ಬರುತ್ತೀರಿ. ಬಂದು ರಾಜ್ಯ ಮಾಡುತ್ತೀರಿ. ಪಾವನ ಮತ್ತು ಪತಿತರು ಭಾರತದಲ್ಲಿಯೇ ಆಗುತ್ತಾರೆ, 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತರಾಗಿದ್ದೀರಿ, ಯೋಗಿಗಳಿಂದ ಭೋಗಿಗಳಾಗಿದ್ದೀರಿ. ಇದು ರೌರವ ನರಕವಾಗಿದೆ, ಮಹಾನ್ ದುಃಖದ ಸಮಯವಾಗಿದೆ. ಈಗಂತೂ ಬಹಳ ದುಃಖವು ಬರುವುದಿದೆ. ರಕ್ತ ಕ್ರಾಂತಿಯಾಗುವುದು, ಕುಳಿತು-ಕುಳಿತಿದ್ದಂತೆಯೇ ಬಾಂಬುಗಳು ಬೀಳುತ್ತವೆ. ನೀವೇನು ಅಪರಾಧ ಮಾಡಿದಿರಿ? ಪಾಪ! ಯಾವುದೇ ಅಪರಾಧವಿಲ್ಲದೆ ಎಲ್ಲರ ವಿನಾಶವಾಗಿ ಬಿಡುವುದು. ವಿನಾಶದ ಸಾಕ್ಷಾತ್ಕಾರವನ್ನಂತೂ ಮಕ್ಕಳು ಮಾಡಿದ್ದೀರಿ, ನೀವೀಗ ಸೃಷ್ಟಿಚಕ್ರದ ಜ್ಞಾನವನ್ನು ಅರಿತುಕೊಂಡಿದ್ದೀರಿ. ನಿಮ್ಮ ಬಳಿ ಜ್ಞಾನದ ಖಡ್ಗವಿದೆ. ನೀವು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ. ಪ್ರಜಾಪಿತನು ತಂದೆಯಾಗಿದ್ದಾರೆ. ಕಲ್ಪದ ಮೊದಲೂ ಸಹ ಇವರು ಮುಖವಂಶಾವಳಿಯನ್ನು ರಚನೆ ಮಾಡಿದ್ದರು. ತಂದೆಯು ತಿಳಿಸುತ್ತಾರೆ- ನಾನು ಕಲ್ಪ-ಕಲ್ಪವೂ ಬರುತ್ತೇನೆ. ಇವರಲ್ಲಿ ಪ್ರವೇಶ ಮಾಡಿ ನಿಮ್ಮನ್ನು ಮುಖ ವಂಶಾವಳಿಯನ್ನಾಗಿ ಮಾಡುತ್ತೇನೆ. ಬ್ರಹ್ಮಾರವರ ಮೂಲಕ ಸ್ವರ್ಗವನ್ನು ಸ್ಥಾಪನೆ ಮಾಡಿಸುತ್ತೇನೆ. ಸ್ವರ್ಗಕ್ಕಂತೂ ಭವಿಷ್ಯದಲ್ಲಿ ಹೋಗುತ್ತೀರಿ. ಛೀ ಛೀ ಪ್ರಪಂಚವು ಸಮಾಪ್ತಿಯಾಗಬೇಕು. ಬೇಹದ್ದಿನ ತಂದೆಯು ಹೊಸ ಪ್ರಪಂಚವನ್ನು ರಚಿಸುವುದಕ್ಕಾಗಿಯೇ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳಿಗಾಗಿ ಅಂಗೈಯಲ್ಲಿ ಸ್ವರ್ಗವನ್ನು ತೆಗೆದುಕೊಂಡು ಬಂದಿದ್ದೇನೆ. ನಿಮಗೆ ಯಾವುದೇ ಕಷ್ಟವನ್ನು ಕೊಡುವುದಿಲ್ಲ. ನೀವೆಲ್ಲರೂ ದ್ರೌಪದಿಯರಾಗಿದ್ದೀರಿ, ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೊಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ದೇವತೆಗಳಿಗಿಂತಲೂ ಶ್ರೇಷ್ಠರು ನಾವು ಸರ್ವೋತ್ತಮ ಬ್ರಾಹ್ಮಣರಾಗಿದ್ದೇವೆ - ಈ ಆತ್ಮಿಕ ನಶೆಯಲ್ಲಿರಬೇಕಾಗಿದೆ. ಜ್ಞಾನ ಮತ್ತು ಯೋಗದಿಂದ ಆತ್ಮವನ್ನು ಸ್ವಚ್ಛ ಮಾಡಿಕೊಳ್ಳಬೇಕಾಗಿದೆ.

2. ಎಲ್ಲರಿಗೆ ಶಿವ ತಂದೆಯ ಅವತರಣಿಯ ಶುಭಾಷಯಗಳನ್ನು ತಿಳಿಸಬೇಕಾಗಿದೆ. ತಂದೆಯ ಪರಿಚಯವನ್ನು ಕೊಟ್ಟು ಪತಿತರಿಂದ ಪಾವನರನ್ನಾಗಿ ಮಾಡಬೇಕಾಗಿದೆ. ರಾವಣ ಶತ್ರುವಿನಿಂದ ಮುಕ್ತ ಮಾಡಬೇಕಾಗಿದೆ.

ವರದಾನ:
ಪ್ರತಿ ಸಂಕಲ್ಪ ತಂದೆಯ ಮುಂದೆ ಅರ್ಪಣೆ ಮಾಡಿ ಬಲಹೀನತೆಗಳನ್ನು ದೂರ ಮಾಡುವಂತಹ ಸದಾ ಸ್ವತಂತ್ರ ಭವ.

ಬಲಹೀನತೆಗಳನ್ನು ದೂರ ಮಾಡಲು ಸಹ ಸಾಧನವಾಗಿದೆ - ಏನೆಲ್ಲ ಕೆಲವು ಸಂಕಲ್ಪದಲ್ಲಿ ಬರುತ್ತದೆ, ಅದನ್ನು ತಂದೆಗೆ ಅರ್ಪಣೆ ಮಾಡಿ ಬಿಡಿ. ಎಲ್ಲಾ ಜವಾಬ್ದಾರಿಗಳನ್ನು ತಂದೆಗೆ ಕೊಟ್ಟು ಬಿಡಿ ಆಗ ಸ್ವಯಂ ಸ್ವತಂತ್ರವಾಗಿ ಬಿಡುವಿರಿ. ಕೇವಲ ಒಂದು ದೃಢ ಸಂಕಲ್ಪ ಇಡಿ ನಾನು ತಂದೆಯವೆನು ತಂದೆ ನನ್ನವರು. ಯಾವಾಗ ಈ ಅಧಿಕಾರಿ ಸ್ವರೂಪದಲ್ಲಿ ಸ್ಥಿತರಾಗುವಿರಿ, ಆಗ ಅಧೀನತೆ ತಾನೇ ತಾನಾಗಿ ಬಿಟ್ಟು ಹೋಗಿ ಬಿಡುವುದು. ಪ್ರತಿ ಸೆಕೆಂಡ್ ಇದನ್ನೇ ಚೆಕ್ ಮಾಡಿಕೊಳ್ಳಿ ನಾನು ತಂದೆಯ ಸಮಾನ ಸರ್ವ ಶಕ್ತಿಗಳ ಅಧಿಕಾರಿ ಮಾಸ್ಟರ್ ಸರ್ವ ಶಕ್ತಿವಾನ್ ಆಗಿರುವೆ.

ಸ್ಲೋಗನ್:
ಶ್ರೀಮತದ ಸೂಚನೆಯ ಪ್ರಮಾಣ ಸೆಕೆಂಡ್ನಲ್ಲಿ ನ್ಯಾರಾ ಮತ್ತು ಪ್ಯಾರಾ ಆಗುವುದು ತಪಸ್ವಿ ಆತ್ಮಗಳ ಗುರುತಾಗಿದೆ.