15.04.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಮ್ಮದು ಇದು ಬಹಳ ಅಮೂಲ್ಯ ಜನ್ಮವಾಗಿದೆ, ಈ ಜನ್ಮದಲ್ಲಿಯೇ ನೀವು ಮನುಷ್ಯರಿಂದ ದೇವತೆಗಳಾಗಲು ಪಾವನರಾಗುವ ಪುರುಷಾರ್ಥ ಮಾಡಬೇಕಾಗಿದೆ”

ಪ್ರಶ್ನೆ:
ಈಶ್ವರೀಯ ಸಂತಾನರೆಂದು ಕರೆಸಿಕೊಳ್ಳುವ ಮಕ್ಕಳ ಮುಖ್ಯ ಧಾರಣೆ ಏನಿರುವುದು?

ಉತ್ತರ:
ಈಶ್ವರೀಯ ಸಂತಾನರು ಪರಸ್ಪರ ಬಹಳ ಕ್ಷೀರಖಂಡವಾಗಿರುತ್ತಾರೆ, ಎಂದೂ ಉಪ್ಪು ನೀರಾಗುವುದಿಲ್ಲ. ಯಾರು ದೇಹಾಭಿಮಾನಿ ಮನುಷ್ಯರಿದ್ದಾರೆ ಅವರು ಉಲ್ಟಾ-ಸುಲ್ಟಾ ಮಾತನಾಡುತ್ತಾರೆ, ಜಗಳ-ಕಲಹ ಮಾಡುತ್ತಾರೆ. ನೀವು ಮಕ್ಕಳಲ್ಲಿ ಆ ಹವ್ಯಾಸವಿರಲು ಸಾಧ್ಯವಿಲ್ಲ, ಇಲ್ಲಿ ನೀವು ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ, ಕರ್ಮಾತೀತ ಸ್ಥಿತಿಯನ್ನು ಪಡೆಯಬೇಕಾಗಿದೆ.

ಓಂ ಶಾಂತಿ.
ಮೊಟ್ಟ ಮೊದಲಿಗೆ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿ ಭವ. ತಮ್ಮನ್ನು ಆತ್ಮವೆಂದು ತಿಳಿಯಿರಿ. ಗೀತೆಯಲ್ಲಿ ಭಲೆ ಏನೇ ಇರಲಿ ಆದರೆ ಅವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ. ತಂದೆಯು ತಿಳಿಸುತ್ತಾರೆ - ನಾನು ಜ್ಞಾನಸಾಗರನಾಗಿದ್ದೇನೆ, ನೀವು ಮಕ್ಕಳಿಗೆ ಜ್ಞಾನವನ್ನು ತಿಳಿಸುತ್ತೇನೆ. ಯಾವ ಜ್ಞಾನವನ್ನು ತಿಳಿಸುತ್ತಾರೆ? ಸೃಷ್ಟಿಯ ಅಥವಾ ನಾಟಕದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಇದು ವಿದ್ಯೆಯಾಗಿದೆ. ಚರಿತ್ರೆ ಮತ್ತು ಭೂಗೋಳವಿದೆಯಲ್ಲವೆ. ಭಕ್ತಿಮಾರ್ಗದಲ್ಲಿ ಯಾರೂ ಚರಿತ್ರೆ-ಭೂಗೋಳವನ್ನು ಓದುವುದಿಲ್ಲ, ಹೆಸರನ್ನೂ ತೆಗೆದುಕೊಳ್ಳುವುದಿಲ್ಲ. ಸಾಧು-ಸಂತ ಮೊದಲಾದವರು ಕುಳಿತು ಶಾಸ್ತ್ರಗಳನ್ನು ಓದುತ್ತಾರೆ. ಈ ತಂದೆಯಂತೂ ಯಾವುದೇ ಶಾಸ್ತ್ರವನ್ನು ಓದಿ ತಿಳಿಸುವುದಿಲ್ಲ. ನಿಮ್ಮನ್ನು ಈ ವಿದ್ಯೆಯಿಂದ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ನೀವು ಮನುಷ್ಯರಿಂದ ದೇವತೆಗಳಾಗುವುದಕ್ಕಾಗಿಯೇ ಬರುತ್ತೀರಿ. ಅವರೂ ಮನುಷ್ಯರೇ, ಇಲ್ಲಿರುವವರೂ ಮನುಷ್ಯರೇ ಆದರೆ ಹೇ ಪತಿತ-ಪಾವನ ಬನ್ನಿ ಎಂದು ಇಲ್ಲಿರುವವರು ಕರೆಯುತ್ತಾರೆ. ಇದಂತೂ ನಿಮಗೆ ತಿಳಿದಿದೆ - ದೇವತೆಗಳು ಪಾವನರಾಗಿದ್ದಾರೆ, ಉಳಿದಂತೆ ಎಲ್ಲರೂ ಅಪವಿತ್ರ ಮನುಷ್ಯರಾಗಿದ್ದಾರೆ, ಅವರು ದೇವತೆಗಳಿಗೆ ನಮಸ್ಕಾರ ಮಾಡುತ್ತಾರೆ. ಅವರನ್ನು ಪಾವನರು ತಮ್ಮನ್ನು ಪತಿತರೆಂದು ತಿಳಿಯುತ್ತಾರೆ ಆದರೂ ದೇವತೆಗಳು ಹೇಗೆ ಪಾವನರಾದರು, ಯಾರು ಮಾಡಿದರು ಎಂಬುದನ್ನು ಯಾವುದೇ ಮನುಷ್ಯ ಮಾತ್ರರೂ ತಿಳಿದುಕೊಂಡಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿಯಿರಿ, ತಂದೆಯನ್ನು ನೆನಪು ಮಾಡಿ. ಇದರಲ್ಲಿಯೇ ಪರಿಶ್ರಮವಿದೆ. ದೇಹಾಭಿಮಾನವಿರಬಾರದು, ಆತ್ಮವು ಅವಿನಾಶಿಯಾಗಿದೆ, ಸಂಸ್ಕಾರವು ಆತ್ಮದಲ್ಲಿಯೇ ಇರುತ್ತದೆ, ಆತ್ಮವು ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ದೇಹೀ-ಅಭಿಮಾನಿಗಳಾಗಿ. ತಮ್ಮ ಆತ್ಮವನ್ನೂ ಸಹ ಯಾರೂ ಅರಿತುಕೊಂಡಿಲ್ಲ. ಯಾವಾಗ ರಾವಣ ರಾಜ್ಯವು ಆರಂಭವಾಗುತ್ತದೆಯೋ ಆಗ ಅಂಧಕಾರದ ಮಾರ್ಗವು ಆರಂಭವಾಗುತ್ತದೆ, ದೇಹಾಭಿಮಾನಿಗಳಾಗಿ ಬಿಡುತ್ತಾರೆ. ಮುಸಲ್ಮಾನರು ಹೇಳುತ್ತಾರೆ. ಅವರು ಅಲ್ಲಾಹು ಎಂದು ಹೇಳುವ ಬದಲು ಅಲ್ಲಾ ಹ್ಞೂ (ಅಲ್ಲಾ ಆಗಿದ್ದೇನೆ) ಎಂದು ಹೇಳಿ ಬಿಟ್ಟಿದ್ದಾರೆ. ಅಲ್ಲಾಹು ಎಂದರೆ ಅವರು ಅಲ್ಲಾ ಆಗಿದ್ದಾರೆಂದರ್ಥ ಮತ್ತು ಇಲ್ಲಿ ಸ್ವಯಂ ಅನ್ನು ಅಲ್ಲಾಹ್(ಭಗವಂತ) ಎಂದು ಹೇಳಿ ಬಿಡುತ್ತಾರೆ. ಆದುದರಿಂದ ತಂದೆ ಕುಳಿತು ತಿಳಿಸುತ್ತಾರೆ - ಇದು ಅತ್ಯಂತ ದೊಡ್ಡ ತಪ್ಪು. ತಂದೆಯು ತಿಳಿಸುತ್ತಾರೆ - ನಾವು ಯಾರ ಬಳಿ ಬಂದಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಇವರ (ಬ್ರಹ್ಮಾ) ಬಳಿಯಲ್ಲ, ನಾನು ಇವರಲ್ಲಿ ಪ್ರವೇಶ ಮಾಡಿದ್ದೇನೆ. ಇದು ಇವರ ಬಹಳ ಜನ್ಮಗಳ ಅಂತಿಮದ ಪತಿತ ಜನ್ಮವಾಗಿದೆ. ಬಹಳ ಜನ್ಮಗಳು ಯಾವುದು? ಅದನ್ನೂ ತಿಳಿಸಿದ್ದಾರೆ. ಅರ್ಧಕಲ್ಪ ಪವಿತ್ರ ಜನ್ಮವಾಗಿದೆ, ಇನ್ನರ್ಧಕಲ್ಪ ಪತಿತ ಜನ್ಮವಾಗಿದೆ. ಅಂದಾಗ ಇವರೂ ಸಹ ಪತಿತರಾದಂತಲ್ಲವೆ. ಬ್ರಹ್ಮಾರವರು ತಮ್ಮನ್ನು ದೇವತೆ ಅಥವಾ ಈಶ್ವರನೆಂದು ಹೇಳಿಕೊಳ್ಳುವುದಿಲ್ಲ. ಪ್ರಜಾಪಿತ ಬ್ರಹ್ಮನು ದೇವತೆಯಾಗಿದ್ದರು ಆದ್ದರಿಂದಲೇ ಬ್ರಹ್ಮಾ ದೇವತಾಯ ನಮಃ ಎಂದು ಹೇಳುತ್ತಾರೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ಬ್ರಹ್ಮನು ಯಾರು ಪತಿತರಾಗಿದ್ದರೋ ಬಹಳ ಜನ್ಮಗಳ ಅಂತಿಮದಲ್ಲಿ ಅವರೇ ಮತ್ತೆ ಪಾವನನಾಗಿ ಮತ್ತೆ ದೇವತೆಯಾಗುತ್ತಾರೆ. ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ನೀವು ಬ್ರಾಹ್ಮಣರೂ, ಈ ಬ್ರಹ್ಮಾರವರೂ ಸಹ ಬ್ರಾಹ್ಮಣನಾಗಿದ್ದಾರೆ, ಇವರಿಗೆ ದೇವತೆಯೆಂದು ಯಾರು ಹೇಳುತ್ತಾರೆ? ಬ್ರಹ್ಮನಿಗೆ ಬ್ರಾಹ್ಮಣನೆಂದು ಹೇಳಲಾಗುತ್ತದೆಯೇ ಹೊರತು ದೇವತೆಯಂದಲ್ಲ. ಇವರು ಪವಿತ್ರರಾದಾಗಲೂ ಸಹ ಬ್ರಹ್ಮನಿಗೆ ದೇವತೆಯೆಂದು ಹೇಳುವುದಿಲ್ಲ. ಎಲ್ಲಿಯವರೆಗೆ ಇವರು ವಿಷ್ಣು(ಲಕ್ಷ್ಮೀ-ನಾರಾಯಣ) ಆಗುವುದಿಲ್ಲವೋ ಅಲ್ಲಿಯವರೆಗೆ ದೇವತೆಯಂದು ಹೇಳುವುದಿಲ್ಲ. ನೀವು ಬ್ರಾಹ್ಮಣ-ಬ್ರಾಹ್ಮಿಣಿಯಾಗಿದ್ದೀರಿ. ನಿಮ್ಮನ್ನು ಮೊಟ್ಟ ಮೊದಲಿಗೆ ಶೂದ್ರರಿಂದ ಬ್ರಾಹ್ಮಣರು, ಬ್ರಾಹ್ಮಣರಿಂದ ದೇವತೆಗಳನ್ನಾಗಿ ಮಾಡುತ್ತೇನೆ. ಇದು ನಿಮ್ಮ ಅಮೂಲ್ಯ ವಜ್ರ ಸಮಾನ ಜನ್ಮವೆಂದು ಹೇಳಲಾಗುತ್ತದೆ. ಭಲೆ ಕರ್ಮಭೋಗವಂತೂ ಇದ್ದೇ ಇರುತ್ತದೆ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡುತ್ತಾ ಇರಿ. ಇದು ಅಭ್ಯಾಸವಾದಾಗಲೇ ವಿಕರ್ಮಗಳು ವಿನಾಶವಾಗುತ್ತವೆ. ದೇಹಧಾರಿಯೆಂದು ತಿಳಿದಾಗ ವಿಕರ್ಮಗಳು ವಿನಾಶವಾಗುವುದಿಲ್ಲ. ಆತ್ಮವು ಬ್ರಾಹ್ಮಣನಲ್ಲ, ಶರೀರವು ಜೊತೆಯಿದ್ದಾಗಲೇ ಬ್ರಾಹ್ಮಣರು ಮತ್ತೆ ದೇವತೆಗಳು, ಶೂದ್ರರಾಗುತ್ತದೆ ಅಂದಾಗ ಈಗ ತಂದೆಯನ್ನು ನೆನಪು ಮಾಡುವ ಪರಿಶ್ರಮವಿದೆ. ಇದು ಸಹಜಯೋಗವೂ ಆಗಿದೆ, ತಂದೆಯು ತಿಳಿಸುತ್ತಾರೆ - ಇದು ಸಹಜಕ್ಕಿಂತ ಸಹಜವಾಗಿದೆ, ಇದು ಕೆಲವರಿಗೆ ಬಹಳ ಕಷ್ಟವೆನಿಸುತ್ತದೆ. ಪದೇ-ಪದೇ ದೇಹಾಭಿಮಾನದಲ್ಲಿ ಬಂದು ತಂದೆಯನ್ನು ಮರೆತು ಹೋಗುತ್ತಾರೆ. ದೇಹೀಅಭಿಮಾನಿಗಳಾಗುವುದರಲ್ಲಿ ಸಮಯವಂತೂ ಹಿಡಿಸುತ್ತದೆಯಲ್ಲವೆ. ನೀವೀಗ ಏಕರಸವಾಗಿ ಬಿಡಿ ಮತ್ತು ತಂದೆಯ ನೆನಪು ಸ್ಥಿರವಾಗಿ ನಿಂತು ಬಿಡಲು ಸಾಧ್ಯವಿಲ್ಲ, ಕರ್ಮಾತೀತ ಸ್ಥಿತಿಯನ್ನು ಪಡೆದರೆ ನಂತರ ಈ ಶರೀರವೂ ಇರುವುದಿಲ್ಲ. ಪವಿತ್ರ ಆತ್ಮವು ಹಗುರವಾಗಿ ಒಮ್ಮೆಲೇ ಶರೀರವನ್ನು ಬಿಟ್ಟು ಬಿಡುವುದು. ಪವಿತ್ರ ಆತ್ಮದ ಜೊತೆಗೆ ಅಪವಿತ್ರ ಶರೀರವಿರಲು ಸಾಧ್ಯವಿಲ್ಲ ಅಂದರೆ ಈ ದಾದಾರವರು ಬಹಳ ದೂರ ತಲುಪಿ ಬಿಟ್ಟಿದ್ದಾರೆಂದಲ್ಲ. ಇವರೂ ಸಹ ಹೇಳುತ್ತಾರೆ - ನೆನಪಿನದು ಬಹಳ ಪರಿಶ್ರಮವಾಗಿದೆ. ದೇಹಾಭಿಮಾನದಲ್ಲಿ ಬರುವುದರಿಂದ ಉಲ್ಟಾ-ಸುಲ್ಟಾ ಮಾತನಾಡುವುದು, ಜಗಳ-ಕಲಹ ಮಾಡುವುದು ಇತ್ಯಾದಿ ನಡೆಯುತ್ತದೆ. ನಾವೆಲ್ಲಾ ಆತ್ಮಗಳು ಸಹೋದರರಾಗಿದ್ದೇವೆ ಎಂದಾಗ ಆತ್ಮಕ್ಕೆ ಏನೂ ಇರುವುದಿಲ್ಲ. ದೇಹಾಭಿಮಾನದಿಂದಲೇ ಈ ಸ್ಥಿತಿಯಾಗಿದೆ. ಈಗ ನೀವು ಮಕ್ಕಳು ದೇಹೀ-ಅಭಿಮಾನಿಗಳಾಗಬೇಕಾಗಿದೆ. ಹೇಗೆ ದೇವತೆಗಳು ಕ್ಷೀರಖಂಡವಾಗಿದ್ದಾರೆಯೋ ಹಾಗೆಯೇ ನೀವೂ ಸಹ ಪರಸ್ಪರ ಕ್ಷೀರಖಂಡವಾಗಿರಬೇಕು. ನೀವೆಂದೂ ಉಪ್ಪು ನೀರಾಗಬಾರದು. ಯಾರು ದೇಹಾಭಿಮಾನಿ ಮನುಷ್ಯರಿದ್ದಾರೆಯೋ ಅವರು ಉಲ್ಟಾ-ಸುಲ್ಟಾ ಮಾತನಾಡುತ್ತಾರೆ, ಜಗಳವಾಡುತ್ತಾರೆ. ನೀವು ಮಕ್ಕಳಲ್ಲಿ ಈ ಹವ್ಯಾಸವಿರಲು ಸಾಧ್ಯವಿಲ್ಲ. ಇಲ್ಲಂತೂ ನೀವು ದೇವತೆಗಳಾಗಲು ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಕರ್ಮಾತೀತ ಸ್ಥಿತಿಯನ್ನು ಪಡೆಯಬೇಕಾಗಿದೆ. ನಿಮಗೆ ಗೊತ್ತಿದೆ - ಈ ಶರೀರ, ಈ ಪ್ರಪಂಚವು ಹಳೆಯ ತಮೋಪ್ರಧಾನವಾಗಿದೆ. ಹಳೆಯ ವಸ್ತುವಿನೊಂದಿಗೆ, ಹಳೆಯ ಸಂಬಂಧದೊಂದಿಗೆ ತಿರಸ್ಕಾರವುಂಟಾಗಬೇಕು. ದೇಹಾಭಿಮಾನದ ಮಾತುಗಳನ್ನು ಬಿಟ್ಟು ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಆಗಲೇ ಪಾಪಗಳು ವಿನಾಶವಾಗುತ್ತದೆ. ಬಹಳ ಮಕ್ಕಳು ನೆನಪಿನಲ್ಲಿ ಅನುತ್ತೀರ್ಣರಾಗುತ್ತಾರೆ, ಜ್ಞಾನವನ್ನು ತಿಳಿಸುವುದರಲ್ಲಿ ಬಹಳ ತೀಕ್ಷ್ಣವಾಗಿ ಹೋಗುತ್ತಾರೆ ಆದರೆ ನೆನಪಿನ ಪರಿಶ್ರಮ ಬಹಳ ದೊಡ್ಡದಾಗಿದೆ, ದೊಡ್ಡ ಪರೀಕ್ಷೆಯಾಗಿದೆ. ಅರ್ಧ ಕಲ್ಪದ ಹಳೆಯ ಭಕ್ತರೇ ಅರಿತುಕೊಳ್ಳುತ್ತಾರೆ. ಭಕ್ತಿಯಲ್ಲಿ ಯಾರು ಕೊನೆಯಲ್ಲಿ ಬಂದಿದ್ದಾರೆಯೋ ಅವರು ಇಷ್ಟೊಂದು ಅರಿತುಕೊಳ್ಳಲು ಸಾಧ್ಯವಿಲ್ಲ.

ತಂದೆಯು ಈ ಶರೀರದಲ್ಲಿ ಬಂದು ತಿಳಿಸುತ್ತಾರೆ - ನಾನು ಪ್ರತೀ 5000 ವರ್ಷಗಳ ನಂತರ ಬರುತ್ತೇನೆ, ನಾಟಕದಲ್ಲಿ ನಮ್ಮ ಪಾತ್ರವಿದೆ ಮತ್ತು ಒಂದೇ ಬಾರಿ ಬರುತ್ತೇನೆ. ಇದು ಅದೇ ಸಂಗಮಯುಗವಾಗಿದೆ. ಯುದ್ಧವೂ ಸನ್ಮುಖದಲ್ಲಿದೆ, ಈ ನಾಟಕವು 5000 ವರ್ಷಗಳದಾಗಿದೆ. ಒಂದುವೇಳೆ ಕಲಿಯುಗದ ಆಯಸ್ಸು ಇನ್ನೂ 40 ಸಾವಿರ ವರ್ಷಗಳಿದ್ದಿದ್ದರೆ ಏನಾಗಿ ಬಿಡುವುದೋ ಗೊತ್ತಿಲ್ಲ. ಭಲೆ ಭಗವಂತನೇ ಬಂದು ಬಿಟ್ಟರೂ ಸಹ ನಾವು ಶಾಸ್ತ್ರಗಳ ಮಾರ್ಗವನ್ನು ಬಿಡುವುದಿಲ್ಲವೆಂದು ಅವರು ಹೇಳುತ್ತಾರೆ. 40 ಸಾವಿರ ವರ್ಷಗಳ ನಂತರ ಯಾವ ಭಗವಂತನು ಬರುವರೆಂಬುದೂ ಸಹ ಅವರಿಗೆ ತಿಳಿದಿಲ್ಲ. ಕೆಲವರು ಕೃಷ್ಣ ಭಗವಂತನು ಬರುವರೆಂದು ತಿಳಿಯುತ್ತಾರೆ. ಇನ್ನು ಸ್ವಲ್ಪವೇ ಮುಂದೆ ಹೋದಂತೆ ನಿಮ್ಮ ಹೆಸರು ಪ್ರಸಿದ್ಧವಾಗುವುದು. ಆದರೆ ಆ ಸ್ಥಿತಿಯು ಬೇಕು, ಪರಸ್ಪರ ಪ್ರೀತಿಯಿರಬೇಕು. ನೀವು ಈಶ್ವರೀಯ ಸಂತಾನರಾಗಿದ್ದೀರಲ್ಲವೆ. ನೀವು ಈಶ್ವರನ ಸೇವಾಧಾರಿಗಳೆಂದು ಗಾಯನ ಮಾಡಲ್ಪಟ್ಟಿದ್ದೀರಿ. ನಾವು ಪತಿತ ಭಾರತವನ್ನು ಪಾವನ ಮಾಡಲು ತಂದೆಗೆ ಸಹಯೋಗಿಗಳಾಗಿದ್ದೇವೆ. ಬಾಬಾ, ಕಲ್ಪ-ಕಲ್ಪವೂ ನಾವು ಆತ್ಮಾಭಿಮಾನಿಗಳಾಗಿ ತಮ್ಮ ಶ್ರೀಮತದನುಸಾರ ಯೋಗಬಲದಿಂದ ನಮ್ಮ ವಿಕರ್ಮಗಳನ್ನು ವಿನಾಶ ಮಾಡಿಕೊಳ್ಳುತ್ತೇವೆಂದು ನೀವು ಹೇಳುತ್ತೀರಿ. ಯೋಗಬಲವು ಶಾಂತಿಯ ಬಲವಾಗಿದೆ. ಶಾಂತಿಯ ಬಲ ಮತ್ತು ವಿಜ್ಞಾನದ ಬಲದಲ್ಲಿ ರಾತ್ರಿ-ಹಗಲಿನ ಅಂತರವಿದೆ. ಮುಂದೆ ಹೋದಂತೆ ನಿಮಗೆ ಬಹಳಷ್ಟು ಸಾಕ್ಷಾತ್ಕಾರಗಳಾಗುತ್ತವೆ. ಎಷ್ಟೊಂದು ಮಕ್ಕಳು ಸಾಕ್ಷಾತ್ಕಾರ ಮಾಡಿದರು, ಪಾತ್ರವನ್ನಭಿನಯಿಸಿದರು ಆದರೆ ಇಂದು ಅವರು ಇಲ್ಲ. ಮಾಯೆಯು ತಿಂದು ಬಿಟ್ಟಿತು, ಯೋಗದಲ್ಲಿಲ್ಲದೇ ಇರುವ ಕಾರಣ ಮಾಯೆಯು ತಿಂದು ಬಿಡುತ್ತದೆ. ಯಾವಾಗ ನಮಗೆ ಭಗವಂತನೇ ಓದಿಸುತ್ತಾರೆಂದು ಮಕ್ಕಳಿಗೆ ಗೊತ್ತಿದೆಯಂದಮೇಲೆ ನಿಯಮಾನುಸಾರವಾಗಿ ಓದಬೇಕಲ್ಲವೆ. ಇಲ್ಲದಿದ್ದರೆ ಬಹಳ-ಬಹಳ ಕಡಿಮೆ ಪದವಿಯನ್ನು ಪಡೆಯುತ್ತೀರಿ, ಬಹಳ ಶಿಕ್ಷೆಗಳನ್ನೂ ಅನುಭವಿಸುತ್ತೀರಿ. ಜನ್ಮ-ಜನ್ಮಾಂತರದ ಪಾಪಿಯಾಗಿದ್ದೇನೆಂದು ಹಾಡುತ್ತಾರಲ್ಲವೆ. ಸತ್ಯಯುಗದಲ್ಲಂತೂ ರಾವಣ ರಾಜ್ಯವೇ ಇಲ್ಲವೆಂದಮೇಲೆ ವಿಕಾರದ ಹೆಸರು ಹೇಗಿರಲು ಸಾಧ್ಯ? ಅದು ಸಂಪೂರ್ಣ ನಿರ್ವಿಕಾರಿ ರಾಜ್ಯವಾಗಿರುತ್ತದೆ. ಇದು ರಾವಣ ರಾಜ್ಯ, ಅದು ರಾಮರಾಜ್ಯವಾಗಿದೆ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಪ್ರತಿಯೊಬ್ಬ ಮಗುವೂ ಸಹ ತಮ್ಮ ಸ್ಥಿತಿಯ ಪರಿಶೀಲನೆ ಮಾಡಿಕೊಳ್ಳಬೇಕು - ನಾವು ಎಷ್ಟು ಸಮಯ ತಂದೆಯ ನೆನಪಿನಲ್ಲಿರುತ್ತೇವೆ? ದೈವೀಗುಣಗಳನ್ನು ಎಲ್ಲಿಯವರೆಗೆ ಧಾರಣೆ ಮಾಡಿದ್ದೇವೆ? ಮುಖ್ಯ ಮಾತು - ಒಳಗೆ ನೋಡಿಕೊಳ್ಳಬೇಕು, ನನ್ನಲ್ಲಿ ಯಾವುದೇ ಅವಗುಣಗಳಂತೂ ಇಲ್ಲವೆ? ನಮ್ಮ ಆಹಾರ ಪಾನೀಯಗಳು ಹೇಗಿವೆ? ಇಡೀ ದಿನದಲ್ಲಿ ಯಾವುದೇ ವ್ಯರ್ಥ ಮಾತು ಅಥವಾ ಸುಳ್ಳು ಹೇಳುತ್ತಿಲ್ಲವೆ? ಶರೀರ ನಿರ್ವಹಣಾರ್ಥವಾಗಿ ಸುಳ್ಳು ಹೇಳಬೇಕಾಗುತ್ತದೆಯಲ್ಲವೆ. ಮತ್ತೆ ಪಾಪವೂ ಕಳೆಯಲೆಂದು ಮನುಷ್ಯರು ದಾನ ಧರ್ಮ ಮಾಡುತ್ತಾರೆ, ಒಳ್ಳೆಯ ಕರ್ಮ ಮಾಡುತ್ತಾರೆಂದರೆ ಅದಕ್ಕೂ ಪ್ರತಿಫಲವು ಸಿಗುತ್ತದೆ. ಯಾರಾದರೂ ಆಸ್ಪತ್ರೆಯನ್ನು ಕಟ್ಟಿಸಿದರೆ ಮುಂದಿನ ಜನ್ಮದಲ್ಲಿ ಒಳ್ಳೆಯ ಆರೋಗ್ಯವು ಸಿಗುವುದು. ಕಾಲೇಜನ್ನು ಕಟ್ಟಿಸಿದರೆ ಚೆನ್ನಾಗಿ ಓದುತ್ತಾರೆ ಆದರೆ ಹಿಂದಿನ ಪಾಪಕ್ಕೆ ಪ್ರಾಯಶ್ಚಿತ್ತವೇನು? ಅದಕ್ಕಾಗಿ ಗಂಗಾಸ್ನಾನ ಮಾಡಲು ಹೋಗುತ್ತಾರೆ ಬಾಕಿ ಯಾರು ಧನ ದಾನ ಮಾಡುತ್ತಾರೆಯೋ ಅದಕ್ಕೆ ಪ್ರತಿಫಲವಾಗಿ ಇನ್ನೊಂದು ಜನ್ಮದಲ್ಲಿ ಸಿಗುತ್ತದೆ. ಅದರಲ್ಲಿ ಪಾಪ ಪರಿಹಾರವಾಗುವ ಮಾತೇ ಇಲ್ಲ. ಅಲ್ಲಿ ಈಶ್ವರಾರ್ಥವಾಗಿ ಕೊಟ್ಟರು ಮತ್ತು ಈಶ್ವರನು ಅಲ್ಪಕಾಲಕ್ಕಾಗಿ ಕೊಟ್ಟು ಬಿಟ್ಟರು ಅದು ಹಣದ ವ್ಯವಹಾರವಾಗಿರುತ್ತದೆ. ಆದರೆ ಇಲ್ಲಂತೂ ನೀವು ಪಾವನರಾಗಬೇಕಾಗಿದೆ ಅಂದಮೇಲೆ ಒಬ್ಬ ತಂದೆಯ ನೆನಪಿನ ವಿನಃ ಮತ್ತ್ಯಾವುದೇ ಉಪಾಯವಿಲ್ಲ. ಪಾವನರು ಮತ್ತೆ ಪತಿತ ಪ್ರಪಂಚದಲ್ಲಿರಲು ಸಾಧ್ಯವಿಲ್ಲ. ಅವರು ಈಶ್ವರಾರ್ಥವಾಗಿ ಪರೋಕ್ಷವಾಗಿ ಕೊಡುತ್ತಾರೆ. ಈಗಂತೂ ಈಶ್ವರನು ತಿಳಿಸುತ್ತಾರೆ - ನಾನು ಪಾವನರನ್ನಾಗಿ ಮಾಡಲು ಸನ್ಮುಖದಲ್ಲಿ ಬಂದಿದ್ದೇನೆ, ನಾನಂತೂ ದಾತನಾಗಿದ್ದೇನೆ, ನೀವು ನನಗೆ ಕೊಡುತ್ತೀರೆಂದರೆ ನಾನೂ ಪ್ರತಿಫಲವಾಗಿ ಕೊಡುತ್ತೇನೆ, ನಾನೇನೂ ನನ್ನ ಬಳಿ ಇಟ್ಟುಕೊಳ್ಳುವುದಿಲ್ಲ. ನೀವು ಮಕ್ಕಳಿಗಾಗಿಯೇ ಈ ಮನೆಗಳನ್ನು ಕಟ್ಟಿಸಲಾಗಿದೆ. ಸನ್ಯಾಸಿಗಳಂತೂ ತಮಗಾಗಿ ದೊಡ್ಡ-ದೊಡ್ಡ ಮಹಲುಗಳನ್ನು ಕಟ್ಟಿಸುತ್ತಾರೆ, ಇಲ್ಲಂತೂ ಶಿವ ತಂದೆಯು ತಮಗಾಗಿ ಏನನ್ನೂ ಮಾಡಿಕೊಳ್ಳುವುದಿಲ್ಲ. ತಿಳಿಸುತ್ತಾರೆ - ಮಕ್ಕಳೇ, ನೀವು ಕೊಟ್ಟಿದ್ದಕ್ಕೆ ಪ್ರತಿಯಾಗಿ ನಿಮಗೆ 21 ಜನ್ಮಗಳಿಗೆ ಹೊಸ ಪ್ರಪಂಚದಲ್ಲಿ ಸಿಗುವುದು, ಏಕೆಂದರೆ ಸನ್ಮುಖದಲ್ಲಿ ವ್ಯವಹರಿಸುತ್ತೀರಿ. ನೀವು ಏನೆಲ್ಲಾ ಹಣವನ್ನು ಕೊಡುತ್ತೀರೋ ಅದು ನಿಮ್ಮ ಕೆಲಸಕ್ಕೇ ಬರುತ್ತದೆ. ಭಕ್ತಿಮಾರ್ಗದಲ್ಲಿಯೂ ಸಹ ದಾತನಾಗಿದ್ದೇನೆ ಅಂದಾಗ ಈಗಲೂ ದಾತನಾಗಿದ್ದೇನೆ. ಅದು ಪರೋಕ್ಷ, ಇದು ಪ್ರತ್ಯಕ್ಷವಾಗಿದೆ. ತಂದೆಯಂತೂ ತಿಳಿಸಿದ್ದಾರೆ, ಏನೆಲ್ಲವೂ ಇದೆಯೋ ಅದರಿಂದ ಹೋಗಿ ಸೇವಾಕೇಂದ್ರವನ್ನು ತೆರೆಯಿರಿ, ಅನ್ಯರ ಕಲ್ಯಾಣವನ್ನು ಮಾಡಿ. ನಾನೂ ಸಹ ಸೇವಾಕೇಂದ್ರವನ್ನು ತೆರೆಯುತ್ತೇನಲ್ಲವೆ. ಮಕ್ಕಳು ಕೊಟ್ಟಿರುವುದನ್ನು ಮಕ್ಕಳಿಗೇ ಸಹಯೋಗ ನೀಡುತ್ತೇನೆ. ನಾನೇನು ನನ್ನ ಜೊತೆಯಲ್ಲಿ ಹಣವನ್ನು ತೆಗೆದುಕೊಂಡು ಬರುವುದಿಲ್ಲ. ನಾನು ಬಂದು ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡುತ್ತೇನೆ, ಇವರ ಮೂಲಕ ಕರ್ತವ್ಯವನ್ನು ಮಾಡಿಸುತ್ತೇನೆ. ನಾನಂತೂ ಸ್ವರ್ಗದಲ್ಲಿ ಬರಬೇಕಾಗಿಲ್ಲ. ಇವೆಲ್ಲವೂ ನಿಮಗಾಗಿಯೇ, ನಾನು ಅಭೋಕ್ತನಾಗಿದ್ದೇನೆ. ಏನನ್ನೂ ತೆಗೆದುಕೊಳ್ಳುವುದಿಲ್ಲ ಅಥವಾ ನನ್ನ ಚರಣಗಳಿಗೆ ನಮಸ್ಕಾರ ಮಾಡಿ ಎಂದೂ ಸಹ ಹೇಳುವುದಿಲ್ಲ. ನಾನು ನೀವು ಮಕ್ಕಳ ವಿಧೇಯ ಸೇವಕನಾಗಿದ್ದೇನೆ, ಇದನ್ನೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ತಂದೆಯೇ ನಿಮ್ಮ ಮಾತಾಪಿತಾ..... ಸರ್ವಸ್ವವೂ ಆಗಿದ್ದಾರೆ. ಆದರೆ ನಿರಾಕಾರನಾಗಿದ್ದಾರೆ. ನೀವು ಯಾವುದೇ ಗುರುಗಳಿಗೆ ಎಂದೂ ನೀವೇ ಮಾತಾಪಿತರೆಂದು ಹೇಳುವುದಿಲ್ಲ. ಗುರುವಿಗೆ ಗುರು, ಶಿಕ್ಷಕರಿಗೆ ಶಿಕ್ಷಕರೆಂದು ಹೇಳುತ್ತೀರಿ ಆದರೆ ಇವರಿಗೆ ಮಾತಾಪಿತರೆಂದು ಹೇಳುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಒಂದೇ ಬಾರಿ ಬರುತ್ತೇನೆ. ನೀವೇ 12 ತಿಂಗಳಿನ ನಂತರ ಜಯಂತಿಯನ್ನಾಚರಿಸುತ್ತೀರಿ ಆದರೆ ಶಿವ ತಂದೆಯು ಯಾವಾಗ ಬಂದರು, ಏನು ಮಾಡಿದರೆಂಬುದು ಯಾರಿಗೂ ತಿಳಿದಿಲ್ಲ. ಬ್ರಹ್ಮಾ, ವಿಷ್ಣು, ಶಂಕರನ ಕರ್ತವ್ಯವೂ ತಿಳಿದಿಲ್ಲ ಏಕೆಂದರೆ ಮೇಲೆ ಶಿವನ ಚಿತ್ರವನ್ನು ಹಾರಿಸಿ ಬಿಟ್ಟಿದ್ದಾರೆ. ಇಲ್ಲವಾದರೆ ಶಿವ ತಂದೆಯು ಮಾಡಿ-ಮಾಡಿಸುವವರಾಗಿದ್ದಾರೆ. ಬ್ರಹ್ಮಾರವರ ಮೂಲಕ ಮಾಡಿಸುತ್ತಾರೆ. ಹೇಗೆ ಬಂದು ಪ್ರವೇಶವಾಗಿ ಮತ್ತು ಮಾಡಿ ತೋರಿಸುತ್ತಾರೆಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಅಂದರೆ ನೀವೂ ಸಹ ಹೀಗೆ ಮಾಡಿ ಎಂದು ಹೇಳುತ್ತಾರೆ. ಮೊದಲನೆಯದಾಗಿ - ಚೆನ್ನಾಗಿ ಓದಿ, ತಂದೆಯನ್ನು ನೆನಪು ಮಾಡಿ, ದೈವೀ ಗುಣಗಳನ್ನು ಧಾರಣೆ ಮಾಡಿ. ಹೇಗೆ ಇವರ ಆತ್ಮವೂ ಹೇಳುತ್ತದೆ, ನಾನು ತಂದೆಯನ್ನು ನೆನಪು ಮಾಡುತ್ತೇನೆ ಎಂದು ಇವರೂ ಹೇಳುತ್ತಾರೆ. ಬಾಬಾರವರೂ ಸಹ ಹೇಗೆ ಜೊತೆಯಲ್ಲಿದ್ದಾರೆ, ನಾವು ಹೊಸ ಪ್ರಪಂಚದ ಮಾಲೀಕರಾಗುವವರಿದ್ದೇವೆಂದು ನಿಮ್ಮ ಬುದ್ಧಿಯಲ್ಲಿದೆ ಅಂದಮೇಲೆ ಚಲನ-ವಲನ, ಆಹಾರ-ಪಾನೀಯ ಇತ್ಯಾದಿಯೆಲ್ಲವೂ ಬದಲಾಗಬೇಕಾಗಿದೆ. ವಿಕಾರಗಳನ್ನು ಬಿಡಬೇಕಾಗಿದೆ. ಸುಧಾರಣೆಯಾಗಬೇಕಲ್ಲವೆ. ಹೇಗೇಗೆ ಸುಧಾರಣೆಯಾಗುತ್ತೀರೋ, ಮತ್ತೆ ಶರೀರವನ್ನು ಬಿಡುತ್ತೀರೆಂದರೆ ಶ್ರೇಷ್ಠ ಕುಲದಲ್ಲಿ ಜನ್ಮ ಪಡೆಯುತ್ತೀರಿ. ನಂಬರ್ವಾರ್ ಕುಲದವರೂ ಆಗುತ್ತೀರಿ. ಇಲ್ಲಿಯೂ ಸಹ ಅನೇಕರು ಒಳ್ಳೊಳ್ಳೆಯ ಕುಲದವರಿರುತ್ತಾರೆ. ನಾಲ್ಕೈದು ಮಂದಿ ಸಹೋದರರು ಪರಸ್ಪರ ಒಟ್ಟಿಗೆ ಇರುತ್ತಾರೆ ಆದರೂ ಸಹ ಯಾವುದೇ ಜಗಳ-ಕಲಹವಿರುವುದಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಅಮರಲೋಕದಲ್ಲಿ ಹೋಗುತ್ತೇವೆ, ಎಲ್ಲಿ ಕಾಲವು ಕಬಳಿಸುವುದಿಲ್ಲ, ಭಯದ ಯಾವುದೇ ಮಾತಿಲ್ಲ. ಇಲ್ಲಂತೂ ದಿನ-ಪ್ರತಿದಿನ ಭಯವು ಹೆಚ್ಚುತ್ತಾ ಹೋಗುತ್ತದೆ. ಹೊರಗೆ ಬರುವುದಕ್ಕೇ ಸಾಧ್ಯವಾಗುವುದಿಲ್ಲ. ಇದೂ ಸಹ ತಿಳಿದಿದೆ - ಈ ವಿದ್ಯೆಯನ್ನು ಕೋಟಿಯಲ್ಲಿ ಕೆಲವರೇ ಓದುತ್ತಾರೆ. ಕೆಲವರು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ ಮತ್ತು ಈ ಜ್ಞಾನವು ಬಹಳ ಚೆನ್ನಾಗಿದೆ ಎಂಬುದನ್ನು ಬರೆಯುತ್ತಾರೆ. ಇಂತಹ ಮಕ್ಕಳೂ ಸಹ ಅವಶ್ಯವಾಗಿ ಬರುತ್ತಾರೆ. ರಾಜಧಾನಿಯು ಸ್ಥಾಪನೆಯಾಗಬೇಕಲ್ಲವೆ. ಇನ್ನು ಸ್ವಲ್ಪ ಸಮಯವೇ ಉಳಿದಿದೆ.

ತಂದೆಯು ಯಾರು ನೆನಪಿನ ಯಾತ್ರೆಯಲ್ಲಿ ತೀಕ್ಷ್ಣವಾಗಿ ಮುಂದೆ ಹೋಗುವವರಿದ್ದಾರೆಯೋ ಅಂತಹ ಪುರುಷಾರ್ಥಿ ಮಕ್ಕಳನ್ನು ಬಹಳ ಬಹಳ ಮಹಿಮೆ ಮಾಡುತ್ತಾರೆ. ಮುಖ್ಯವಾದುದು ನೆನಪಿನ ಮಾತಾಗಿದೆ. ಇದರಿಂದ ಹಳೆಯ ಲೆಕ್ಕಾಚಾರಗಳು ಸಮಾಪ್ತಿಯಾಗುತ್ತದೆ. ಬಾಬಾ, ನಾನು ನಿತ್ಯವೂ ಇಷ್ಟು ಘಂಟೆಗಳ ಕಾಲ ನೆನಪು ಮಾಡುತ್ತೇನೆಂದು ಕೆಲವು ಮಕ್ಕಳು ಬರೆದು ಕಳುಹಿಸುತ್ತಾರೆ. ಇವರು ಬಹಳ ಒಳ್ಳೆಯ ಪುರುಷಾರ್ಥಿ ಎಂದು ತಂದೆಯೂ ತಿಳಿಯುತ್ತಾರೆ, ಪುರುಷಾರ್ಥವನ್ನಂತೂ ಮಾಡಬೇಕಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಪರಸ್ಪರ ಎಂದೂ ಜಗಳ ಮಾಡಬಾರದು, ಇದು ಪ್ರಾಣಿಗಳ ಕೆಲಸವಾಗಿದೆ, ಹೊಡೆದಾಡುವುದು, ಜಗಳವಾಡುವುದು ದೇಹಾಭಿಮಾನವಾಗಿದೆ. ಇದರಿಂದ ತಂದೆಯ ಹೆಸರನ್ನು ಕೆಡಿಸುತ್ತೀರಿ. ಸದ್ಗುರುವಿನ ನಿಂಧಕರು ಪದವಿಯನ್ನು ಪಡೆಯುವುದಿಲ್ಲವೆಂದು ಈ ತಂದೆಗಾಗಿಯೇ ಹೇಳಲಾಗುತ್ತದೆ. ಇದನ್ನು ಸಾಧುಗಳು ತಮಗಾಗಿಯೇ ಹೇಳಿಕೊಂಡಿದ್ದಾರೆ, ಇದರಿಂದ ಮಾತೆಯರು ಸಾಧುಗಳಿಂದ ನಮಗೆ ಯಾವುದೇ ಶಾಪವು ಸಿಗದಿರಲೆಂದು ಅವರು ಬಹಳ ಭಯ ಪಡುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ನಾವು ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆ, ಸತ್ಯ-ಸತ್ಯವಾದ ಅಮರ ಕಥೆಯನ್ನು ಕೇಳುತ್ತಿದ್ದೇವೆ. ನಾವು ಶ್ರೀ ಲಕ್ಷ್ಮೀ-ನಾರಾಯಣರ ಪದವಿಯನ್ನು ಪಡೆಯಲು ಈ ಪಾಠಶಾಲೆಗೆ ಬರುತ್ತೇವೆಂದು ಹೇಳುತ್ತೀರಿ ಮತ್ತೆಲ್ಲಿಯೂ ಈ ರೀತಿ ಹೇಳುವುದಿಲ್ಲ. ಈಗ ನಾವು ನಮ್ಮ ಮನೆಗೆ ಹೋಗುತ್ತೇವೆ, ಇದರಲ್ಲಿ ನೆನಪಿನ ಪುರುಷಾರ್ಥವೇ ಮುಖ್ಯವಾಗಿದೆ. ಅರ್ಧಕಲ್ಪ ನೆನಪು ಮಾಡಲಿಲ್ಲ, ಈಗ ಒಂದೇ ಜನ್ಮದಲ್ಲಿ ನೆನಪು ಮಾಡಬೇಕಾಗಿದೆ, ಇದು ಪರಿಶ್ರಮವಿದೆ. ತಂದೆಯನ್ನು ನೆನಪು ಮಾಡಬೇಕು, ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ, ಯಾವುದೇ ಪಾಪಕರ್ಮಗಳನ್ನು ಮಾಡಿದರೆ ನೂರರಷ್ಟು ಶಿಕ್ಷೆಯಾಗಿ ಬಿಡುತ್ತದೆ ಆದ್ದರಿಂದ ಪುರುಷಾರ್ಥ ಮಾಡಬೇಕು, ತಮ್ಮ ಉನ್ನತಿ ಮಾಡಿಕೊಳ್ಳಬೇಕಾಗಿದೆ. ಆತ್ಮವೇ ಈ ಶರೀರದ ಮೂಲಕ ಓದಿ ವಕೀಲ ಅಥವಾ ವೈದ್ಯನಾಗುತ್ತದೆಯಲ್ಲವೆ. ಈ ಲಕ್ಷ್ಮೀ-ನಾರಾಯಣರ ಪದವಿಯು ಬಹಳ ಶ್ರೇಷ್ಠವಾಗಿದೆ. ಮುಂದೆ ಹೋದಂತೆ ಬಹಳಷ್ಟು ಸಾಕ್ಷಾತ್ಕಾರವಾಗುತ್ತದೆ. ನೀವು ಸರ್ವೋತ್ತಮ ಬ್ರಾಹ್ಮಣ ಕುಲಭೂಷಣರು ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ಕಲ್ಪದ ಹಿಂದೆಯೂ ಸಹ ಈ ಜ್ಞಾನವನ್ನು ನಿಮಗೆ ತಿಳಿಸಿದ್ದೇನೆ, ಈಗ ಪುನಃ ತಿಳಿಸುತ್ತೇನೆ. ನೀವು ಕೇಳಿ ಪದವಿಯನ್ನು ಪಡೆಯುತ್ತೀರಿ ನಂತರ ಈ ಜ್ಞಾನವು ಪ್ರಾಯಃಲೋಪವಾಗಿ ಬಿಡುತ್ತದೆ. ಬಾಕಿ ಈ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಳಗೆ ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು - ನಾವು ಎಷ್ಟು ಸಮಯ ತಂದೆಯ ನೆನಪಿನಲ್ಲಿರುತ್ತೇವೆ? ಎಲ್ಲಿಯವರೆಗೆ ದೈವೀ ಗುಣಗಳನ್ನು ಧಾರಣೆ ಮಾಡಿದ್ದೇವೆ? ನನ್ನಲ್ಲಿ ಯಾವುದೇ ಅವಗುಣವಿಲ್ಲವೆ? ನಮ್ಮ ಆಹಾರ-ಪಾನೀಯ, ಚಲನ-ವಲನೆಯು ಘನತೆಯಿಂದ ಇದೆಯೇ? ವ್ಯರ್ಥ ಮಾತುಗಳನ್ನು ಮಾತನಾಡುವುದಿಲ್ಲವೆ? ಸುಳ್ಳು ಹೇಳುವುದಿಲ್ಲವೆ?

2. ನೆನಪಿನ ಚಾರ್ಟನ್ನು ಹೆಚ್ಚಿಸಿಕೊಳ್ಳಲು ಈ ಅಭ್ಯಾಸ ಮಾಡಬೇಕಾಗಿದೆ - ನಾವೆಲ್ಲಾ ಆತ್ಮಗಳು ಸಹೋದರ-ಸಹೋದರರಾಗಿದ್ದೇವೆ. ದೇಹಾಭಿಮಾನದಿಂದ ದೂರವಿರಬೇಕಾಗಿದೆ, ತಮ್ಮ ಏಕರಸ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ, ಇದಕ್ಕಾಗಿ ಸಮಯ ಕೊಡಬೇಕು.

ವರದಾನ:
ತಂದೆ ಸಮಾನ ಸ್ಥಿತಿಯ ಮೂಲಕ ಸಮಯವನ್ನು ಸಮೀಪ ತರುವಂತಹ ತತತ್ವಂನ ಿ ಭವ.

ತನ್ನತನವನ್ನು ಅಳಿಸಿ ಹಾಕುವುದು ಅರ್ಥಾತ್ ತಂದೆ ಸಮಾನ ಸ್ಥಿತಿಯಲ್ಲಿ ಸ್ಥಿತರಾಗಿ ಸಮಯವನ್ನು ಸಮೀಪ ತರುವುದು. ಎಲ್ಲಿ ತನ್ನತನ ದೇಹದಲ್ಲಿ ಅಥವಾ ತನ್ನ ಯಾವುದೇ ವಸ್ತುವಿನಲ್ಲಿ ತನ್ನತನ ಇದೆ ಅಲ್ಲಿ ಸಮಾನತೆಯಲ್ಲಿ ಪರ್ಸೆಂಟ್ ಇದೆ. ಪರ್ಸೆಂಟೇಜ್ ಎಂದರೆ ಡಿಫೆಕ್ಟ್, ಈ ರೀತಿ ಡಿಫೆಕ್ಟ್ ಉಳ್ಳವರು ಎಂದೂ ಪರ್ಫೆಕ್ಟ್ ಆಗಲು ಸಾಧ್ಯವಿಲ್ಲ. ಪರ್ಫೆಕ್ಟ್ ಆಗಬೇಕಾದರೆ ತಂದೆಯ ಪ್ರೀತಿಯಲ್ಲಿ ಲವಲೀನರಾಗಿರಿ. ಸದಾ ಪ್ರೀತಿಯಲ್ಲಿ ಲವಲೀನರಾಗಿರುವುದರಿಂದ ಸಹಜವಾಗಿ ಅನ್ಯರನ್ನೂ ಸಹ ತಮ್ಮ ಸಮಾನ ಅಥವಾ ತಂದೆ-ಸಮಾನ ಮಾಡಲು ಸಾಧ್ಯ. ಬಾಪ್ದಾದಾ ತಮ್ಮ ಪ್ರೀತಿಯ ಮತ್ತು ಲವಲೀನರಾಗಿರುವಂತಹ ಮಕ್ಕಳಿಗೆ ಸದಾ ತತತ್ವಂನ ವರದಾನ ಕೊಡುತ್ತಾರೆ.

ಸ್ಲೋಗನ್:
ಪರಸ್ಪರ ಒಬ್ಬರಿಗೊಬ್ಬರ ವಿಚಾರಗಳಿಗೆ ಗೌರವ ಕೊಟ್ಟಾಗ ಸ್ವಯಂನ ರಿಕಾರ್ಡ್ ಒಳ್ಳೆಯದಾಗಿ ಬಿಡುವುದು.