12.04.20 Avyakt Bapdada
Kannada
Murli
23.12.85 Om Shanti Madhuban
ಕಾಮಜೀತ - ಸರ್ವ
ಅಲ್ಪಕಾಲದ ಕಾಮನೆಗಳಿಂದ ದೂರ
ಬಾಪ್ದಾದಾರವರು ತನ್ನ
ಚಿಕ್ಕದರಿಂದ ಶ್ರೇಷ್ಠ ಸುಖಿ ಸಂಸಾರವನ್ನು ನೋಡುತ್ತಿದ್ದಾರೆ. ಒಂದು ಕಡೆಯಿದೆ - ಬಹಳ ದೊಡ್ಡ
ನಿಸ್ಸಾರವಾದ ಸಂಸಾರ(ಪ್ರಪಂಚ). ಇನ್ನೊಂದು ಕಡೆ - ಚಿಕ್ಕದಾದ ಸುಖಿ ಸಂಸಾರ. ಈ ಸುಖಿ ಸಂಸಾರದಲ್ಲಿ
ಸದಾ ಸುಖ-ಶಾಂತಿ ಸಂಪನ್ನವಾಗಿರುವ ಬ್ರಾಹ್ಮಣ ಆತ್ಮರಿದ್ದಾರೆ ಏಕೆಂದರೆ ಪವಿತ್ರತೆ, ಸ್ವಚ್ಛತೆಯ
ಆಧಾರದಿಂದ ಈ ಸುಖ-ಶಾಂತಿಮಯ ಜೀವನವಿದೆ. ಎಲ್ಲಿ ಪವಿತ್ರತೆ ಅಥವಾ ಸ್ವಚ್ಛತೆಯಿದೆ ಅಲ್ಲಿ ಯಾವುದೇ
ದುಃಖ, ಅಶಾಂತಿಯ ಹೆಸರು-ಚಿಹ್ನೆಯಿಲ್ಲ. ಪವಿತ್ರತೆಯ ಕೋಟೆಯೊಳಗೆ ಚಿಕ್ಕದಾದ ಈ ಸುಖಿ ಸಂಸಾರವಿದೆ.
ಒಂದುವೇಳೆ ಪವಿತ್ರತೆಯ ಕೋಟೆಯಿಂದ ಸಂಕಲ್ಪದಿಂದಲಾದರೂ ಹೊರಗೆ ಹೋಗುತ್ತೀರಿ, ಆಗ ದುಃಖ ಮತ್ತು
ಅಶಾಂತಿಯ ಪ್ರಭಾವದ ಅನುಭವ ಮಾಡುತ್ತೀರಿ. ಈ ಬುದ್ಧಿಯೆಂಬ ಕಾಲು ಕೋಟೆಯೊಳಗಿರಲಿ, ಆಗ ಸಂಕಲ್ಪವೇನು!
ಸ್ವಪ್ನದಲ್ಲಿಯೂ ದುಃಖ-ಅಶಾಂತಿಯ ಪ್ರಕಂಪನಗಳು ಬರಲು ಸಾಧ್ಯವಿಲ್ಲ. ದುಃಖ ಮತ್ತು ಅಶಾಂತಿಯು
ಸ್ವಲ್ಪವಾದರೂ ಅನುಭವವಾಗುತ್ತದೆಯೆಂದರೆ, ಅವಶ್ಯವಾಗಿ ಏನಾದರೊಂದು ಅಪವಿತ್ರತೆಯ ಪ್ರಭಾವವಿದೆ.
ಪವಿತ್ರತೆಯು ಕೇವಲ ಕಾಮಜೀತ ಜಗಜ್ಜೀತರಾಗುವುದಲ್ಲ ಆದರೆ ಕಾಮ ವಿಕಾರದ ಅಂಶವು ಸರ್ವ ಅಲ್ಪಕಾಲದ
ಕಾಮನೆಗಳಾಗಿವೆ. ಕಾಮಜೀತ ಅರ್ಥಾತ್ ಸರ್ವ ಕಾಮನೆಗಳ ವಿಜಯಿ ಏಕೆಂದರೆ ಕಾಮನೆಗಳು ಅನೇಕ
ವಿಸ್ತಾರವಿರುವುದಾಗಿದೆ. ಕಾಮನೆಗಳು ಒಂದು - ವಸ್ತುಗಳ, ಎರಡನೆಯದು - ವ್ಯಕ್ತಿಯ ಮೂಲಕ ಅಲ್ಪಕಾಲದ
ಪ್ರಾಪ್ತಿಯ ಕಾಮನೆಯಿದೆ. ಮೂರನೆಯದು - ಸಂಬಂಧವನ್ನು ನಿಭಾಯಿಸುವುದರಲ್ಲಿಯೂ ಅಲ್ಪಕಾಲದ ಕಾಮನೆಗಳು
ಅನೇಕ ಪ್ರಕಾರದಲ್ಲಿ ಉತ್ಪನ್ನವಾಗುತ್ತದೆ. ನಾಲ್ಕನೆಯದು – ಸೇವಾ ಭಾವನೆಯಲ್ಲಿಯೂ ಅಲ್ಪಕಾಲದ
ಕಾಮನೆಯ ಭಾವವು ಉತ್ಪನ್ನವಾಗಿ ಬಿಡುತ್ತದೆ. ಈ ನಾಲ್ಕೂ ಪ್ರಕಾರದ್ದೇ ಕಾಮನೆಗಳನ್ನು ಸಮಾಪ್ತಿ
ಮಾಡಬೇಕು ಅರ್ಥಾತ್ ಸದಾಕಾಲಕ್ಕಾಗಿ ದುಃಖ-ಅಶಾಂತಿಯನ್ನು ಗೆಲ್ಲಬೇಕು. ಯಾವಾಗ ತಮ್ಮೊಂದಿಗೆ ತಾವು
ಕೇಳಿಕೊಳ್ಳಿರಿ - ಈ ನಾಲ್ಕೇ ಪ್ರಕಾರದ ಕಾಮನೆಗಳನ್ನು ಸಮಾಪ್ತಿ ಮಾಡಿದ್ದೇನೆಯೇ? ಯಾವುದೇ ವಿನಾಶಿ
ವಸ್ತುವೇನಾದರೂ ಬುದ್ಧಿಯನ್ನು ತನ್ನ ಕಡೆಗೆ ಆಕರ್ಷಿಸುತ್ತದೆಯೆಂದರೆ, ಖಂಡಿತವಾಗಿ ಕಾಮನೆಯ ರೂಪ
ಸೆಳೆತವಾಯಿತು. ರಾಯಲ್ ರೂಪದಲ್ಲಿ ಶಬ್ಧವನ್ನು ಪರಿವರ್ತನೆ ಮಾಡಿ ಹೇಳುತ್ತೀರಿ - ಇಚ್ಛೆಯಿಲ್ಲ ಆದರೆ
ಇಷ್ಟವಾಗುತ್ತದೆ. ಭಲೆ ವಸ್ತುವಾಗಿರಲಿ ಅಥವಾ ವ್ಯಕ್ತಿಯಾಗಿರಲಿ ಆದರೆ ಯಾವುದರೊಂದಿಗೇ ವಿಶೇಷ
ಆಕರ್ಷಣೆಯಿದೆಯೋ ಅದೇ ವಸ್ತು ಅಥವಾ ಅದೇ ವ್ಯಕ್ತಿಯೇ ಇಷ್ಟವೆನಿಸುತ್ತದೆ ಅರ್ಥಾತ್ ಕಾಮನೆಯಿದೆ.
ಇಚ್ಛೆಯಿದೆ. ಎಲ್ಲವೂ ಇಷ್ಟವಾಗುತ್ತದೆ - ಇದಾಯಿತು ಯಥಾರ್ಥವಾದದ್ದು. ಆದರೆ ಇದೇ ಇಷ್ಟವಾಗುತ್ತದೆ
- ಇದಾಯಿತು ಅಯಥಾರ್ಥ.
ಈ ಇಚ್ಛೆಯು ರಾಯಲ್ ರೂಪವಾಗಿದೆ. ಭಲೆ ಯಾರದೇ ಸೇವೆಯು ಇಷ್ಟವೆನಿಸುತ್ತದೆ, ಯಾರದೇ ಪಾಲನೆಯು
ಇಷ್ಟವೆನಿಸಬಹುದು, ಯಾರದೇ ಗುಣವು ಇಷ್ಟವಾಗಬಹುದು, ಯಾರದೇ ಪರಿಶ್ರಮವು ಇಷ್ಟವಾಗಬಹುದು, ಯಾರದೇ
ತ್ಯಾಗವು ಇಷ್ಟವೆನಿಸಬಹುದು, ಯಾರದೇ ಸ್ವಭಾವವು ಇಷ್ಟವಾಗಬಹುದು. ಆದರೆ ಒಳ್ಳೆಯ ಸುಗಂಧವನ್ನು
ತೆಗೆದುಕೊಳ್ಳುವುದು ಮತ್ತು ಒಳ್ಳೆಯದನ್ನು ಸ್ವಯಂನಲ್ಲಿ ಧಾರಣೆ ಮಾಡಿಕೊಳ್ಳುವುದು ಬೇರೆ ಮಾತಾಗಿದೆ.
ಆದರೆ ಈ ಒಳ್ಳೆಯ ಕಾರಣದಿಂದ ಇವರೇ ಒಳ್ಳೆಯವರಾಗಿದ್ದಾರೆ - ಈ ಒಳ್ಳೆಯದು ಅಥವಾ ಇಷ್ಟವಾಗುತ್ತದೆ
ಎಂದು ಹೇಳುವುದು ಇಚ್ಛೆಯಲ್ಲಿ ಬದಲಾಗಿ ಬಿಡುತ್ತದೆ. ಇದು ಕಾಮನೆಯಾಗಿದೆ. ಅವರು ದುಃಖ ಮತ್ತು
ಅಶಾಂತಿಯನ್ನು ಎದುರಿಸುವುದಕ್ಕಾಗುವುದಿಲ್ಲ. ಒಂದಿದೆ - ಒಳ್ಳೆಯದರ ಹಿಂದೆ ತನ್ನನ್ನು
ಒಳ್ಳೆಯವರನ್ನಾಗಿ ಮಾಡಿಕೊಳ್ಳುವುದರಿಂದ ವಂಚಿತ ಮಾಡುವುದು. ಇನ್ನೊಂದು- ಶತ್ರುವಿನ ಕಾಮನೆಯೂ ಸಹ
ಕೆಳಗೆ ತೆಗೆದುಕೊಂಡುಬರುತ್ತದೆ. ಒಂದಿದೆ- ಪ್ರಭಾವಿತರಾಗುವ ಕಾಮನೆ. ಇನ್ನೊಂದು - ಯಾರೊಂದಿಗಾದರೂ
ವೈರ ಅಥವಾ ಈರ್ಷ್ಯೆಯ ಭಾವನೆಯ ಕಾಮನೆ. ಅದೂ ಸಹ ಸುಖ-ಶಾಂತಿಯನ್ನು ಸಮಾಪ್ತಿ ಮಾಡಿ ಬಿಡುತ್ತದೆ.
ಸದಾಕಾಲವೂ ಮನಸ್ಸು ಏರುಪೇರಿನಲ್ಲಿ ಬಂದು ಬಿಡುತ್ತದೆ. ಪ್ರಭಾವಿತರಾಗುವ ಲಕ್ಷಣವು ಸೆಳೆತ ಮತ್ತು
ಬಾಗುವುದಾಗಿದೆ. ಇಂತಹ ಈರ್ಷ್ಯೆ ಅಥವಾ ಶತ್ರುತ್ವದ ಭಾವದ ಚಿಹ್ನೆಯಾಗಿದೆ - ಜಿದ್ ಮಾಡುವುದು ಮತ್ತು
ಸಿದ್ಧ ಮಾಡುವುದು. ಎರಡೂ ಭಾವಗಳಲ್ಲಿ ಎಷ್ಟು ಶಕ್ತಿ, ಎಷ್ಟು ಸಮಯವನ್ನು ಸಮಾಪ್ತಿ ಮಾಡಿ ಬಿಡುತ್ತದೆ
- ಇದು ಗೊತ್ತಾಗುವುದೇ ಇಲ್ಲ. ಎರಡೂ ಬಹಳಷ್ಟೇ ನಷ್ಟ ಮಾಡುವಂತದ್ದಾಗಿದೆ. ಸ್ವಯಂ ಸಹ ಬೇಸರದಲ್ಲಿ
ಮತ್ತು ಅನ್ಯರನ್ನೂ ಬೇಸರ ಮಾಡುವಂತದ್ದಾಗಿದೆ. ಇಂತಹ ಸ್ಥಿತಿಯ ಸಮಯದಲ್ಲಿ, ಇಂತಹ ಆತ್ಮರ ಗುಂಗು ಇದೇ
ಆಗಿರುತ್ತದೆ - ದುಃಖವನ್ನು ತೆಗೆದುಕೊಳ್ಳುವುದು ಮತ್ತು ದುಃಖವನ್ನು ಕೊಡಲೇಬೇಕು. ಏನೇ ಆಗಲಿ ಆದರೆ
ಮಾಡಲೇಬೇಕು. ಈ ಕಾಮನೆಯು ಆ ಸಮಯದಲ್ಲಿ ಮಾತನಾಡುತ್ತದೆ. ಬ್ರಾಹ್ಮಣ ಆತ್ಮನು ಮಾತನಾಡುವುದಿಲ್ಲ
ಆದ್ದರಿಂದ ಏನಾಗುತ್ತದೆ - ಸುಖ-ಶಾಂತಿಯ ಸಂಸಾರದಿಂದ ಬುದ್ಧಿಯೆಂಬ ಕಾಲನ್ನು ಹೊರಗೆ ಹೋಗಿ
ಬಿಡುತ್ತದೆ. ಆದ್ದರಿಂದ ಈ ರಾಯಲ್ ಕಾಮನೆಗಳ ಮೇಲೂ ವಿಜಯಿಯಾಗಿರಿ. ಈ ಇಚ್ಛೆಗಳಿಂದಲೂ ಇಚ್ಛಾ ಮಾತ್ರಂ
ಅವಿದ್ಯಾ ಸ್ಥಿತಿಯಲ್ಲಿ ಬನ್ನಿರಿ.
ಎರಡೂ ಭಾವಗಳಲ್ಲಿ ಯಾವ ಈ ಸಂಕಲ್ಪವನ್ನು ಮಾಡುತ್ತೀರಿ - ನಾನು ಈ ಮಾತನ್ನು ಮಾಡಿಯೇ ತೋರಿಸುತ್ತೇನೆ,
ಯಾರಿಗೆ ತೋರಿಸುತ್ತೀರಿ? ತಂದೆಗೋ ಅಥವಾ ಬ್ರಾಹ್ಮಣಕ್ಕೋ? ಯಾರಿಗೆ ತೋರಿಸುತ್ತೀರಿ? ಹೀಗೆ
ತಿಳಿದುಕೊಳ್ಳಿರಿ, ಇದನ್ನು ಮಾಡಿ ತೋರಿಸುವುದಿಲ್ಲ ಆದರೆ ಬೀಳಿಸಿ ತೋರಿಸುತ್ತೇವೆ. ಇದೇನು
ತೋರಿಸುತ್ತೀರಿ, ಇದು ಚಮತ್ಕಾರವೇ! ಬೀಳಿಸುವುದು ತೋರಿಸುವ ಮಾತೇನು! ಇದು ಅಲ್ಪಕಾಲದ ಪ್ರಾಪ್ತಿಯ
ನಶೆಯಾಗಿದೆ - ನಾನು ಸೇವೆಯನ್ನು ಮಾಡಿ ತೋರಿಸುತ್ತೇನೆ, ನಾನು ಹೆಸರನ್ನು ಪ್ರಸಿದ್ಧ ಮಾಡಿ
ತೋರಿಸುತ್ತೇನೆ, ಈ ಶಬ್ಧವನ್ನು ಪರಿಶೀಲನೆ ಮಾಡಿಕೊಳ್ಳಿರಿ, ರಾಯಲ್ ಇದೆಯೇ? ಹೇಳುತ್ತೀರಿ ಸಿಂಹದ
ಭಾಷೆ ಆದರೆ ಆಗುತ್ತೀರಿ ಕುರಿ. ಹೇಗೆ ಇತ್ತೀಚೆಗೆ ಕೆಲವರು ಸಿಂಹದ, ಕೆಲವರು ಆನೆಯ, ಕೆಲವರು ರಾವಣನ,
ಕೆಲವರು ರಾಮನ ಮುಖವಾಡವನ್ನು ಹಾಕಿಕೊಳ್ಳುತ್ತಾರಲ್ಲವೆ. ಅಂದಮೇಲೆ ಇವರು ಮಾಯೆಯ ಸಿಂಹದ
ಮುಖವಾಡವನ್ನು ಹಾಕಿಕೊಳ್ಳುತ್ತಾರೆ - ನಾನು ಇದನ್ನು ಮಾಡಿ ತೋರಿಸುತ್ತೇನೆ, ಇದನ್ನು ಮಾಡುತ್ತೇನೆ,
ಆದರೆ ಮಾಯೆಯು ತನ್ನ ವಶ ಮಾಡಿಕೊಂಡು ಕುರಿಯನ್ನಾಗಿ ಮಾಡಿ ಬಿಡುತ್ತದೆ. ನಾನು ಎನ್ನುವುದು ಬರುವುದು
ಅರ್ಥಾತ್ ಒಂದಲ್ಲ ಒಂದು ಅಲ್ಪಕಾಲದ ಕಾಮನೆಗೆ ವಶಕ್ಕೊಳಗಾಗುವುದು. ಈ ಭಾಷೆಯನ್ನು ಯುಕ್ತಿಯುಕ್ತವಾಗಿ
ಮಾತನಾಡಿರಿ ಮತ್ತು ಭಾವನೆಯನ್ನೂ ಯುಕ್ತಿಯುಕ್ತವಾಗಿ ಇಟ್ಟುಕೊಳ್ಳಿರಿ. ಇದು ಬುದ್ಧಿವಂತಿಕೆಯಲ್ಲ
ಆದರೆ ಪ್ರತೀ ಕಲ್ಪದಲ್ಲಿ - ಸೂರ್ಯವಂಶಿಯಿಂದ ಚಂದ್ರವಂಶಿಯಾಗುವ ಸೋಲನ್ನನುಭವಿಸಬೇಕು. ಕಲ್ಪ
ಕಲ್ಪದಲ್ಲಿ ಚಂದ್ರವಂಶಿಯೇ ಆಗಬೇಕಾಗುತ್ತದೆ. ಅಂದಮೇಲೆ ಇದು ಸೋಲಾಯಿತೇ ಅಥವಾ ಬುದ್ಧಿವಂತಿಕೆಯಾಯಿತೇ?
ಹಾಗಾದರೆ ಇಂತಹ ಬುದ್ಧಿವಂತಿಕೆಯನ್ನು ತೋರಿಸದಿರಿ. ಅಭಿಮಾನದಲ್ಲಿಯೂ ಬರಬೇಡಿ, ಅಪಮಾನದಲ್ಲಿಯೂ
ಬರಬೇಡಿ. ಎರಡೂ ಭಾವನೆಗಳು ಶುಭಭಾವನೆ-ಶುಭಕಾಮನೆಯಿಂದ ದೂರಗೊಳಿಸಿ ಬಿಡುತ್ತದೆ. ಪರಿಶೀಲನೆ ಮಾಡಿರಿ
- ಸ್ವಲ್ಪವಾದರೂ ಸಂಕಲ್ಪದಲ್ಲಾದರೂ ಅಭಿಮಾನ ಅಥವಾ ಅಪಮಾನದ ಭಾವನೆಯನ್ನು ಉಳಿದುಕೊಂಡಿಲ್ಲವೇ? ಎಲ್ಲಿ
ಅಭಿಮಾನ ಮತ್ತು ಅಪಮಾನದ ಭಾವನೆಯಿದೆಯೋ, ಅಲ್ಲಿ ಎಂದಿಗೂ ಯಾರೂ ಸಹ ಸ್ವಮಾನದ ಸ್ಥಿತಿಯಲ್ಲಿ
ಸ್ಥಿತರಾಗಲು ಸಾಧ್ಯವಿಲ್ಲ. ಸ್ವಮಾನವು ಸರ್ವ ಕಾಮನೆಗಳಿಂದ ದೂರ ಮಾಡಿ ಬಿಡುತ್ತದೆ ಮತ್ತು ಸದಾ
ಸುಖದ ಸಂಸಾರದಲ್ಲಿ, ಸುಖದ ಶಾಂತಿಯ ಉಯ್ಯಾಲೆಯಲ್ಲಿ ತೂಗುತ್ತಿರುತ್ತೀರಿ. ಇದಕ್ಕೇ ಸರ್ವ ಕಾಮನಾಜೀತ,
ಜಗಜ್ಜೀತ ಎಂದು ಹೇಳಲಾಗುತ್ತದೆ. ಅದಕ್ಕಾಗಿ ಬಾಪ್ದಾದಾರವರು ಚಿಕ್ಕದಾದ ಸುಖಿ ಸಂಸಾರವನ್ನು
ನೋಡುತ್ತಿದ್ದರು. ಸುಖದ ಸಂಸಾರದಲ್ಲಿ, ತನ್ನ ಸ್ವದೇಶದಿಂದ ಪರದೇಶದಲ್ಲಿ ಬುದ್ಧಿಯೆಂಬ ಕಾಲಿನ ಮೂಲಕ
ಏಕೆ ಹೋಗಿ ಬಿಡುತ್ತೀರಿ! ಪರ-ಧರ್ಮ, ಪರದೇಶವು ದುಃಖ ಕೊಡುವಂತದ್ದಾಗಿದೆ. ಸ್ವ ಧರ್ಮ, ಸ್ವ ದೇಶ
ಸುಖವನ್ನು ಕೊಡುವಂತದ್ದಾಗಿದೆ. ಅಂದಾಗ ಸುಖದ ಸಾಗರ ತಂದೆಯ ಮಕ್ಕಳಿದ್ದೀರಿ, ಸುಖದ ಸಂಸಾರದ ಅನುಭವೀ
ಆತ್ಮರಾಗಿದ್ದೀರಿ. ಅಧಿಕಾರಿ ಆತ್ಮರಾಗಿದ್ದೀರಿ ಅಂದಾಗ ಸದಾ ಸುಖಿಯಾಗಿರಿ, ಶಾಂತಿಯಿಂದಿರಿ.
ತಿಳಿಯಿತೆ!
ದೇಶ-ವಿದೇಶದ ಇಬ್ಬರೂ ಸ್ನೇಹಿ ಮಕ್ಕಳು ತನ್ನ ಮನೆ ಅಥವಾ ತಂದೆಯ ಮನೆಯಲ್ಲಿ ತನ್ನ ಅಧಿಕಾರವನ್ನು
ತೆಗೆದುಕೊಳ್ಳುವುದಕ್ಕಾಗಿ ತಲುಪಿ ಬಿಟ್ಟಿದ್ದೀರಿ. ಅಧಿಕಾರಿ ಮಕ್ಕಳನ್ನು ನೋಡುತ್ತಾ ಬಾಪ್ದಾದಾರವರೂ
ಸಹ ಹರ್ಷಿತವಾಗುತ್ತಾರೆ. ಹೇಗೆ ಖುಷಿಯಲ್ಲಿ ಬಂದಿದ್ದೀರಿ, ಹಾಗೆಯೇ ಸದಾ ಖುಷಿಯಾಗಿರುವ ವಿಧಿ,
ಇವೆರಡು ಮಾತುಗಳ ಸಂಕಲ್ಪದಿಂದಲೂ ತ್ಯಾಗ ಮಾಡುತ್ತಾ ಸದಾಕಾಲಕ್ಕಾಗಿ ಭಾಗ್ಯವಂತರಾಗಿ ಹೋಗಿರಿ.
ಭಾಗ್ಯವನ್ನು ತೆಗೆದುಕೊಳ್ಳಲು ಬಂದಿದ್ದೀರಿ ಆದರೆ ಭಾಗ್ಯವನ್ನು ತೆಗೆದುಕೊಳ್ಳುವುದರ ಜೊತೆಗೆ
ಮನಸ್ಸಿನಿಂದ ಯಾವುದೇ ಬಲಹೀತನೆಗಳು, ಯಾವುದು ಹಾರುವ ಕಲೆಯಲ್ಲಿ ವಿಘ್ನ ರೂಪವಾಗುತ್ತದೆ ಅದನ್ನು
ಬಿಟ್ಟು ಹೋಗಿರಿ. ಇದನ್ನು ಬಿಡುವುದೇ ತೆಗೆದುಕೊಳ್ಳುವುದಾಗಿದೆ. ಒಳ್ಳೆಯದು.
ಸದಾ ಸುಖದ ಸಂಸಾರದಲ್ಲಿರುವ ಸರ್ವ ಕಾಮನಾಜೀತ, ಸದಾ ಸರ್ವಆತ್ಮರ ಬಗ್ಗೆ ಶುಭ ಭಾವನೆ ಮತ್ತು
ಶುಭಕಾಮನೆಯನ್ನಿಡುವ ಶ್ರೇಷ್ಠಾತ್ಮರಿಗೆ, ಸದಾ ಸ್ವಮಾನದ ಸ್ಥಿತಿಯಲ್ಲಿ ಸ್ಥಿತರಾಗುವ ವಿಶೇಷ
ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
"ಮಧುರತೆಯ ಮೂಲಕ
ಕಠಿಣವಾದ ಧರಣಿಯನ್ನೂ ಮಧುರವನ್ನಾಗಿ ಮಾಡಿರಿ"
ಇಂದು ಅತಿ ದೊಡ್ಡ ತಂದೆ, ಗ್ರಾಂಡ್ ಫಾದರ್ ತನ್ನ ಗ್ರಾಂಡ್ ಚಿಲ್ರನ್ ಲವ್ಲಿ ಮಕ್ಕಳೊಂದಿಗೆ
ಮಿಲನವಾಗಲು ಬಂದಿದ್ದಾರೆ. ಗ್ರೇಟ್-ಗ್ರೇಟ್ ಗ್ರಾಂಡ್ ಫಾದರ್ ಬ್ರಹ್ಮನ ಗಾಯನವಾಗಿದೆ. ನಿರಾಕಾರ
ತಂದೆಯು ಸಾಕಾರ ಸೃಷ್ಠಿಯ ರಚನೆಗೆ ಬ್ರಹ್ಮರವರನ್ನು ನಿಮಿತ್ತನನ್ನಾಗಿ ಮಾಡಿದರು. ಮನುಷ್ಯ ಸೃಷ್ಠಿಯ
ರಚೈತನಾಗಿರುವ ಕಾರಣದಿಂದ, ಮನುಷ್ಯ ಸೃಷ್ಠಿಯ ನೆನಪಾರ್ಥವಾಗಿ ವೃಕ್ಷದ ರೂಪದಲ್ಲಿ ತೋರಿಸಲಾಗಿದೆ.
ಬೀಜವು ಗುಪ್ತವಿರುತ್ತದೆ, ಮೊದಲು ಎರಡು ಎಲೆಗಳು, ಅದರಿಂದ ಬುಡವು ತಯಾರಾಗುತ್ತದೆ, ಅದೇ ವೃಕ್ಷದ
ಆದಿ ದೇವ ಆದಿ ದೇವಿ ಮಾತಾಪಿತನ ಸ್ವರೂಪದಲ್ಲಿ ವೃಕ್ಷದ ಬುನಾದಿಯಾಗಿ ಬ್ರಹ್ಮಾರವರು
ನಿಮಿತ್ತನಾಗುತ್ತಾರೆ. ಅವರ ಮೂಲಕ ಬ್ರಾಹ್ಮಣರ ಬುಡವು ಪ್ರಕಟಗೊಳ್ಳುತ್ತದೆ ಮತ್ತು ಬ್ರಾಹ್ಮಣ
ಬುಡದಿಂದ ಅನೇಕ ಶಾಖೆಗಳು ಉತ್ಪನ್ನವಾಗುತ್ತದೆ. ಆದ್ದರಿಂದ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್
ಬ್ರಹ್ಮಾನ ಗಾಯನವಾಗುತ್ತದೆ. ಬ್ರಹ್ಮನ ಅವತರಣೆಯಾಗುವುದು ಅರ್ಥಾತ್ ಕೆಟ್ಟ ದಿನಗಳು ಸಮಾಪ್ತಿಯಾಗಿ
ಶ್ರೇಷ್ಠ ದಿನಗಳ ಪ್ರಾರಂಭವಾಗುವುದು. ರಾತಿಯು ಸಮಾಪ್ತಿಯಾಗಿ ಬ್ರಹ್ಮಾ ಮಹೂರ್ತ ಪ್ರಾರಂಭವಾಗಿ
ಬಿಡುತ್ತದೆ, ವಾಸ್ತವದಲ್ಲಿದೆ- ಬ್ರಹ್ಮಾ ಮಹೂರ್ತ ಎಂದು, ಹೇಳುವುದರಲ್ಲಿ ಬ್ರಹ್ಮ್ ಮೂಹೂರ್ತ ಎಂದು
ಬರುತ್ತದೆ. ಆದ್ದರಿಂದ ಬ್ರಹ್ಮನದು ವೃದ್ಧ ರೂಪವನ್ನು ತೋರಿಸುತ್ತಾರೆ. ಗ್ರಾಂಡ್ ಫಾದರ್ ನಿರಾಕಾರಿ
ತಂದೆಯು ಗ್ರಾಂಡ್ ಚಿಲ್ರನ್ಗೆ ಇಷ್ಟೂ ಉಡುಗೊರೆಯನ್ನು ಕೊಡುತ್ತಾರೆ, ಅದು 21 ಜನ್ಮಗಳಿಗಾಗಿ
ಅನುಭವಿಸುತ್ತಿರುತ್ತೀರಿ. ದಾತಾ ಸಹ ಆಗಿದ್ದಾರೆ ಮತ್ತು ವಿದಾತಾ ಸಹ ಆಗಿದ್ದಾರೆ. ಜ್ಞಾನರತ್ನಗಳ
ತಟ್ಟೆಗಳನ್ನು ತುಂಬಿ-ತುಂಬಿ ಕೊಡುತ್ತಾರೆ. ತಮ್ಮ ಬಳಿ ಎಷ್ಟೊಂದು ಶೃಂಗಾರದ ಡಬ್ಬಗಳಿವೆ!
ಪ್ರತಿನಿತ್ಯವೂ ಹೊಸ ಶೃಂಗಾರವನ್ನು ಮಾಡಿಕೊಳ್ಳುತ್ತೀರೆಂದರೂ ಲೆಕ್ಕವಿಲ್ಲದಷ್ಟಾಗುತ್ತದೆ. ಈ
ಗಿಫ್ಟ್ ಸದಾ ಜೊತೆಯಲ್ಲಿ ನಡೆಯುವಂತದ್ದಾಗಿದೆ. ಈ ಸ್ಥೂಲ ಗಿಫ್ಟಂತು ಇಲ್ಲಿಯೇ ಉಳಿದು ಬಿಡುತ್ತದೆ,
ಆದರೆ ಇದು ಜೊತೆಯಲ್ಲಿ ನಡೆಯುತ್ತದೆ. ಇಷ್ಟೊಂದು ಗಾಡ್ಲೀ ಗಿಫ್ಟ್ಗಳಿಂದ ಸಂಪನ್ನರಾಗಿ ಬಿಡುತ್ತೀರಿ,
ಸಂಪಾದನೆ ಮಾಡುವ ಅವಶ್ಯಕತೆಯೇ ಬರುವುದಿಲ್ಲ. ಗಿಫ್ಟ್ನಿಂದಲೇ ತಿನ್ನುತ್ತಿರುತ್ತೀರಿ(ಜೀವನ
ನಡೆಯುತ್ತದೆ), ಪರಿಶ್ರಮದಿಂದ ಮುಕ್ತರಾಗಿ ಬಿಡುತ್ತೀರಿ.
ಎಲ್ಲರೂ ವಿಶೇಷವಾಗಿ ಕ್ರಿಸ್ಮಸ್ ದಿನವನ್ನಾಚರಿಸುವುದಕ್ಕಾಗಿ ಬಂದಿದ್ದೀರಲ್ಲವೆ. ಬಾಪ್ದಾದಾರವರು
ಕಿಸ್ಮಿಸ್ ದಿನವೆಂದು ಹೇಳುತ್ತಾರೆ. ಕಿಸ್ಮಿಸ್ ಡೆ ಅಂದರೆ ಮಧುರತೆಯ ದಿನ. ಸದಾ ಮಧುರರಾಗುವ
ದಿನವಾಗಿದೆ. ಸಿಹಿಯನ್ನೇ ಹೆಚ್ಚಾಗಿ ತಿನ್ನುತ್ತೀರಿ ಮತ್ತು ತಿನ್ನಿಸುತ್ತೀರಲ್ಲವೆ. ಮುಖದ
ಮಧುರತೆಯಂತು ಸ್ವಲ್ಪ ಸಮಯಕ್ಕಾಗುತ್ತದೆ ಆದರೆ ಸ್ವಯಂ ತಾವೇ ಮಧುರರಾಗಿ ಬಿಡುತ್ತೀರೆಂದರೆ, ಸದಾ
ಮುಖದಲ್ಲಿ ಮಧುರ ಮಾತುಗಳಿರಲಿ. ಹೇಗೆ ಸಿಹಿ ತಿನ್ನುವ ಮತ್ತು ತಿನ್ನಿಸುವುದರಿಂದ
ಖುಷಿಯಾಗುತ್ತೀರಲ್ಲವೆ, ಹಾಗೆಯೇ ಮಧುರ ಮಾತುಗಳು ಸ್ವಯಂನ್ನೂ ಖುಷಿ ಪಡಿಸುತ್ತದೆ, ಅನ್ಯರನ್ನೂ ಖುಷಿ
ಪಡಿಸುತ್ತೀರಿ, ಅಂದಮೇಲೆ ಇದರಿಂದ ಸದಾ ಸರ್ವರ ಮುಖವನ್ನು ಮಧುರ ಮಾಡುತ್ತಿರಿ. ಸದಾ ಮಧುರ ದೃಷ್ಟಿ,
ಮಧುರ ಮಾತು, ಮಧುರ ಕರ್ಮ. ಇದೇ ಕಿಸ್ಮಿಸ್ ಡೇ ಆಚರಿಸುವುದಾಯಿತು. ಆಚರಿಸುವುದು ಅರ್ಥಾತ್
ಆಗುವುದಾಗಿದೆ. ಯಾರಿಗಾದರೂ ಎರಡು ಕ್ಷಣ ಮಧುರ ದೃಷ್ಟಿಯನ್ನು ಕೊಡಿ, ಮಧುರ ಮಾತನ್ನು
ಮಾತನಾಡುತ್ತೀರೆಂದರೆ, ಆ ಆತ್ಮನನ್ನು ಸದಾಕಾಲಕ್ಕಾಗಿ ಸಂಪನ್ನಗೊಳಿಸಿ ಬಿಡುತ್ತೀರಿ. ಈ ಎರಡು
ಗಳಿಗೆಗಳ ಮಧುರ ದೃಷ್ಟಿ, ಮಾತು ಆ ಆತ್ಮನ ಸೃಷ್ಟಿಯು ಬದಲಾಗಿ ಬಿಡುತ್ತದೆ. ಈ ಎರಡು ಮಧುರ ಮಾತುಗಳು
ಸದಾಕಾಲಕ್ಕಾಗಿ ಬದಲಾಗಲು ನಿಮಿತ್ತವಾಗಿ ಬಿಡುತ್ತದೆ. ಮಧುರತೆಯು ಇಂತಹ ವಿಶೇಷ ಧಾರಣೆಯಾಗಿದೆ, ಅದು
ಕಠಿಣವಾದ ಧರಣಿಯನ್ನೂ ಮಧುರವನ್ನಾಗಿ ಮಾಡಿ ಬಿಡುತ್ತದೆ. ತಾವೆಲ್ಲರೂ ಬದಲಾಗುವುದರ ಆಧಾರವು
ತಂದೆಯವರ ಎರಡು ಮಧುರ ಮಾತುಗಳಿದ್ದವಲ್ಲವೆ. ಮಧುರ ಮಕ್ಕಳೇ ನೀವು ಮಧುರ ಶುದ್ಧ ಆತ್ಮರಾಗಿದ್ದೀರಿ.
ಇವೆರಡು ಮಧುರ ಮಾತುಗಳು ಬದಲಾಯಿಸಿ ಬಿಟ್ಟಿತಲ್ಲವೆ. ಮಧುರ ದೃಷ್ಟಿಯು ಬದಲಾಯಿಸಿ ಬಿಟ್ಟಿತು.
ಹಾಗೆಯೇ ಮಧುರತೆಯ ಮೂಲಕ ಅನ್ಯರನ್ನೂ ಮಧುರರನ್ನಾಗಿ ಮಾಡಿರಿ. ಈ ಮುಖವನ್ನು ಮಧುರ ಮಾಡಿರಿ.
ತಿಳಿಯಿತೆ - ಕ್ರಿಸ್ಮಸ್ ಡೇ ಆಚರಿಸಿದಿರಲ್ಲವೆ. ಸದಾ ಈ ಉಡುಗೊರೆಗಳಿಂದ ತಮ್ಮ ಜೋಳಿಗೆಯನ್ನು
ಸಂಪನ್ನ ಮಾಡಿ ಬಿಟ್ಟಿರಾ? ಸದಾ ಮಧುರತೆಯ ಉಡುಗೊರೆಯನ್ನು ಜೊತೆಯಿಟ್ಟುಕೊಳ್ಳಿರಿ. ಇದರಿಂದ ಸದಾ
ಮಧುರವಾಗಿರಿ ಮತ್ತು ಮಧುರವನ್ನಾಗಿ ಮಾಡಬೇಕು. ಒಳ್ಳೆಯದು.
ಸದಾ ಜ್ಞಾನರತ್ನಗಳಿಂದ ಬುದ್ಧಿಯೆಂಬ ಜೋಳಿಗೆಯನ್ನು ತುಂಬಿಕೊಳ್ಳುವ, ಸದಾ ಸರ್ವಶಕ್ತಿಗಳಿಂದ
ಶಕ್ತಿಶಾಲಿ ಆತ್ಮನಾಗಿ ಶಕ್ತಿಗಳಿಂದ ಸದಾ ಸಂಪನ್ನವಾಗಿರುವ, ಸರ್ವಗುಣಗಳ ಆಭರಣಗಳಿಂದ ಸದಾ
ಶೃಂಗಾರಿತವಾಗಿರುವ ಶ್ರೇಷ್ಠಾತ್ಮರಿಗೆ, ಸದಾ ಮಧುರತೆಯಿಂದ ಮುಖ ಮಧುರ ಮಾಡುವಂತಹ ಮಧುರ ಮಕ್ಕಳಿಗೆ
ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಅವ್ಯಕ್ತ
ಬಾಪ್ದಾದಾರವರ ಕುಮಾರರೊಂದಿಗೆ ವಾರ್ತಾಲಾಪ:-
ಕುಮಾರ ಅರ್ಥಾತ್ ತೀವ್ರ ಗತಿಯಿಂದ ಮುಂದುವರೆಯುವವರು. ನಿಲ್ಲುವುದು - ನಡೆಯುವುದು, ನಿಲ್ಲುವುದು -
ನಡೆಯುವುದು, ಹೀಗಲ್ಲ. ಎಂತಹ ಪರಿಸ್ಥಿತಿಯೇ ಇರಲಿ ಆದರೆ ಸ್ವಯಂನ್ನು ಸದಾ ಶಕ್ತಿಶಾಲಿ ಆತ್ಮನೆಂದು
ತಿಳಿದು ಮುಂದೆ ಸಾಗಿರಿ. ಪರಿಸ್ಥಿತಿ ಅಥವಾ ವಾಯುಮಂಡಲದ ಪ್ರಭಾವದಲ್ಲಿ ಬರುವವರಲ್ಲ, ಆದರೆ ತಮ್ಮ
ಶ್ರೇಷ್ಠ ಪ್ರಭಾವವನ್ನು ಅನ್ಯರ ಮೇಲೆ ಬೀರುವವರು. ಶ್ರೇಷ್ಠ ಪ್ರಭಾವ ಅರ್ಥಾತ್ ಆತ್ಮಿಕ ಪ್ರಭಾವ,
ಬೇರೆಯಲ್ಲ. ಇಂತಹ ಕುಮಾರರಿದ್ದೀರಾ? ಪರೀಕ್ಷೆಯು ಬಂದಿತೆಂದರೆ ಅಲುಗಾಡುವವರಂತು ಅಲ್ಲವೆ.
ಪರೀಕ್ಷೆಯಲ್ಲಿ ಪಾಸ್ ಆಗುವವರಲ್ಲವೆ! ಸದಾ ಸಾಹಸವಂತರಾಗಿದ್ದೀರಲ್ಲವೆ! ಎಲ್ಲಿ ಸಾಹಸವಿದೆ, ಅಲ್ಲಿ
ತಂದೆಯ ಸಹಯೋಗವು ಇದ್ದೇ ಇದೆ. ಸಾಹಸ ಮಕ್ಕಳದು ಸಹಯೋಗ ತಂದೆಯದು. ಪ್ರತೀ ಕಾರ್ಯದಲ್ಲಿ ಸ್ವಯಂನ್ನು
ಮುಂದಿಟ್ಟುಕೊಂಡು ಅನ್ಯರನ್ನೂ ಶಕ್ತಿಶಾಲಿ ಮಾಡುತ್ತಾ ಸಾಗಿರಿ.
ಕುಮಾರರಿರುವುದೇ ಹಾರುವ ಕಲೆಯವರು. ಯಾರು ಸದಾ ನಿರ್ಬಂಧನರಿದ್ದಾರೆ ಅವರೇ ಹಾರುವ ಕಲೆಯವರಾಗಿದ್ದಾರೆ.
ಅಂದಮೇಲೆ ನಿರ್ಬಂಧನ ಕುಮಾರರಾಗಿದ್ದೀರಿ. ಮನಸ್ಸಿನದೂ ಬಂಧನವಿಲ್ಲ. ಹಾಗಾದರೆ ಸದಾ ಬಂಧನಗಳನ್ನು
ಸಮಾಪ್ತಿಗೊಳಿಸಿ ನಿರ್ಬಂಧನರಾಗಿ ಹಾರುವ ಕಲೆಯ ಕುಮಾರರಾಗಿದ್ದೀರಾ? ಕುಮಾರರು ತನ್ನ ಶರೀರದ ಶಕ್ತಿ
ಮತ್ತು ಬುದ್ಧಿ ಶಕ್ತಿಯೆರಡನ್ನು ಸಫಲ ಮಾಡುತ್ತಿದ್ದೀರಾ? ಲೌಕಿಕ ಜೀವನದಲ್ಲಿ ತಮ್ಮ ಶರೀರದ
ಶಕ್ತಿಯನ್ನು ಮತ್ತು ಬುದ್ಧಿಶಕ್ತಿಯನ್ನು ವಿನಾಶಕಾರಿ ಕಾರ್ಯಗಳಲ್ಲಿ ತೊಡಗಿಸುತ್ತಿದ್ದಿರಿ ಮತ್ತು
ಈಗ ಶ್ರೇಷ್ಠ ಕಾರ್ಯದಲ್ಲಿ ತೊಡಗಿಸುವವರು. ಏರುಪೇರುಗಳನ್ನು ಹರಡುವವರಲ್ಲ. ಆದರೆ ಶಾಂತಿ ಸ್ಥಾಪನೆ
ಮಾಡುವವರು. ಇಂತಹ ಶ್ರೇಷ್ಠ ಕುಮಾರರಾಗಿದ್ದೀರಾ? ಕೆಲವೊಮ್ಮೆ ಲೌಕಿಕ ಜೀವನದ ಸಂಸ್ಕಾರಗಳು ಇಮರ್ಜ್
ಆಗುವುದಿಲ್ಲವೇ? ಅಲೌಕಿಕ ಜೀವನದವರು ಅಂದರೆ ಹೊಸ ಜನ್ಮದವರು. ಅಂದಮೇಲೆ ಹೊಸ ಜನ್ಮದಲ್ಲಿ ಹಳೆಯ
ಮಾತುಗಳಿರುವುದಿಲ್ಲ. ತಾವೆಲ್ಲರೂ ಹೊಸ ಜನ್ಮವಿರುವ ಶ್ರೇಷ್ಠಾತ್ಮರಾಗಿದ್ದೀರಿ. ತಮ್ಮನ್ನೆಂದಿಗೂ
ಸಹ ಸಾಧಾರಣನೆಂದು ತಿಳಿಯದೆ ಶಕ್ತಿಶಾಲಿಯೆಂದು ತಿಳಿಯಿರಿ. ಸಂಕಲ್ಪದಲ್ಲಿಯೂ ಏರುಪೇರಿನಲ್ಲಿ
ಬರಬಾರದು. ಹೀಗಂತು ಪ್ರಶ್ನೆ ಮಾಡುವುದಿಲ್ಲವೇ – ವ್ಯರ್ಥ ಸಂಕಲ್ಪಗಳು ಬರುತ್ತವೆ, ಏನು ಮಾಡಲಿ?
ಭಾಗ್ಯವಂತ ಕುಮಾರರಾಗಿದ್ದೀರಿ. 21 ಜನ್ಮಗಳು ಭಾಗ್ಯವನ್ನು ಅನುಭವಿಸುತ್ತಿರುತ್ತೀರಿ. ಸ್ಥೂಲ
ಸೂಕ್ಷ್ಮ ಎರಡೂ ಸಂಪಾದನೆಯಿಂದ ಮುಕ್ತರಾಗಿ ಬಿಡುತ್ತೀರಿ. ಒಳ್ಳೆಯದು.
ವಿದಾಯಿಯ
ಸಮಯದಲ್ಲಿ ನೆನಪು - ಪ್ರೀತಿ:-
ಎಲ್ಲರೂ ದೇಶ - ವಿದೇಶವೆರಡೂ ಕಡೆಯ ಮಕ್ಕಳ ಈ ವಿಶೇಷ ದಿನದ ಪ್ರಯುಕ್ತವಾಗಿ ಕಾರ್ಡುಗಳನ್ನೂ ಪಡೆದೆವು,
ಪತ್ರಗಳೂ ಬಂದಿವೆ ಮತ್ತು ನೆನಪುಗಳೂ ಪಡೆದೆವು. ಬಾಪ್ದಾದಾರವರು ಎಲ್ಲಾ ಮಧುರಾತಿ ಮಧುರ ಮಕ್ಕಳಿಗೆ
ಈ ಶ್ರೇಷ್ಠ ದಿನದಂದು ಸದಾ ಮಧುರತೆಯಿಂದ ಶ್ರೇಷ್ಠರಾಗಿರಿ ಮತ್ತು ಶ್ರೇಷ್ಠರನ್ನಾಗಿ ಮಾಡಿರಿ, ಇದೇ
ವರದಾನದ ಜೊತೆಗೆ ಸ್ವಯಂ ಸಹ ವೃದ್ಧಿಯನ್ನು ಪ್ರಾಪ್ತಿ ಹೊಂದುತ್ತಿರಿ ಮತ್ತು ಸೇವೆಯನ್ನೂ
ವೃದ್ಧಿಯಲ್ಲಿ ತರುತ್ತಿರಿ. ಎಲ್ಲಾ ಮಕ್ಕಳಿಗೆ ಅತಿ ಶ್ರೇಷ್ಠ ತಂದೆಯ ಶ್ರೇಷ್ಠಾತಿ ಶ್ರೇಷ್ಠ
ನೆನಪು-ಪ್ರೀತಿ ಮತ್ತು ಜೊತೆ ಜೊತೆಗೆ ಸ್ನೇಹ ತುಂಬಿದ ಶುಭಾಷಯಗಳು. ಸುಪ್ರಭಾತ. ಸದಾ ಮಧುರರಾಗುವ
ಶುಭಾಷಯಗಳು.
ವರದಾನ:
ವರದಾನ: ಸಹನ ಶಕ್ತಿಯ ಮೂಲಕ ಅವಿನಾಶಿ ಮತ್ತು ಮಧುರ ಫಲ ಪ್ರಾಪ್ತಿ ಮಾಡಿಕೊಳ್ಳುವ ಸರ್ವರ ಸ್ನೇಹಿ
ಭವ.
ಸಹನೆ ಮಾಡುವುದು
ಸಾಯುವುದಲ್ಲ ಆದರೆ ಎಲ್ಲರ ಹೃದಯಗಳಲ್ಲಿ ಸ್ನೇಹದಿಂದ ಗೆಲ್ಲಬೇಕು. ಎಷ್ಟೇ ವಿರೋಧಿಯಿರಲಿ,
ರಾವಣನಿಂದ ಜೋರಾಗಿರಲಿ, ಒಂದು ಬಾರಿ ಅಲ್ಲ 10 ಬಾರಿ ಸಹನೆ ಮಾಡಬೇಕಾಗುತ್ತದೆ, ಆದರೂ ಸಹನ ಶಕ್ತಿಯ
ಫಲವು ಅವಿನಾಶಿ ಮತ್ತು ಮಧುರವಾಗಿದೆ. ಕೇವಲ ಈ ಭಾವನೆಯನ್ನಿಡಬಾರದು - ನಾನು ಇಷ್ಟೊಂದು ಸಹನೆ
ಮಾಡಿದೆನು ಆದ್ದರಿಂದ ಇವರೂ ಸ್ವಲ್ಪ ಮಾಡಲಿ. ಅಲ್ಪಕಾಲದ ಫಲದ ಭಾವನೆಯನ್ನಿಡದಿರಿ. ದಯಾ ಭಾವವನ್ನಿಡಿ
- ಇದೇ ಸೇವಾಭಾವವಾಗಿದೆ. ಸೇವಾಭಾವವಿರುವವರು ಸರ್ವರ ಬಲಹೀನತೆಗಳನ್ನು ಸಮಾವೇಶ ಮಾಡಿಕೊಂಡು
ಬಿಡುತ್ತಾರೆ. ಅವರು ಎದುರಿಸುವುದಿಲ್ಲ.
ಸ್ಲೋಗನ್:
ಏನು ಕಳೆದು
ಹೋಯಿತು ಅದನ್ನು ಮರೆತು ಬಿಡಿ, ಕಳೆದಿರುವ ಮಾತುಗಳಿಂದ ಶಿಕ್ಷಣವನ್ನು ತೆಗೆದುಕೊಂಡು ಮುಂದಕ್ಕಾಗಿ
ಸದಾ ಎಚ್ಚರವಾಗಿರಿ.
12-04-2020 ವಿಶಾಲ
ಬುದ್ಧಿಯ ಲಕ್ಷಣಗಳು ಮುರಳಿ ಪ್ರಶ್ನೆಗಳು:
1. ಎಲ್ಲಿ ಪವಿತ್ರತೆ,
ಸ್ವಚ್ಛತೆ ಇರುತ್ತದೆಯೋ ಅಲ್ಲಿ __________ ಹೆಸರು ಲಕ್ಷಣಗಳು ಇರುವುದಿಲ್ಲ.
ಅ. ವಿಘ್ನದ
ಆ. ಅಭಿಮಾನ ಮತ್ತು ಅಪಮಾನ
ಇ. ಸೋಲಿನ
ಈ. ದುಃಖ, ಅಶಾಂತಿ
2. ಕಾಮಜೀತ್ ಎಂದರೇನು?
ಅ. ಕಾಮ ವಿಕಾರದ ಮೇಲೆ ವಿಜಯ
ಆ. ಸರ್ವ ಇಚ್ಛೆಗಳ ಮೇಲೆ ವಿಜಯ
ಇ. ಸರ್ವ ವಿಕಾರಗಳ ಮೇಲೆ ವಿಜಯ
ಈ. ವ್ಯಕ್ತಿಯ ಆಕರ್ಷಣೆಯ ಮೇಲೆ ವಿಜಯ
3. ಈರ್ಷೆ, ದ್ವೇಷದ ಭಾವನೆಯ ಲಕ್ಷಣಗಳು
ಅ. ಹಠ ಮಾಡುವುದು ಮತ್ತು ಸಿದ್ಧ ಮಾಡುವುದು
ಆ. ಪ್ರೀತಿ ಮಾಡುವುದು ಮತ್ತು ನೆಪಗಳನ್ನು ಹೇಳುವುದು
ಇ. ಸ್ನೇಹದಲ್ಲಿರುವುದು ಮತ್ತು ಸುಳ್ಳು ಹೇಳುವುದು
ಈ. ಕೋಪ ಮಾಡಿಕೊಳ್ಳುವುದು ಹಾಗೂ ತಿರಸ್ಕರಿಸುವುದು
4. ಸ್ವಮಾನದ ಸ್ಥಿತಿಯಲ್ಲಿ ಸ್ಥಿತರಾಗದಿರುವದಕ್ಕೆ ಕಾರಣವೇನು?
ಅ. ಅಭಿಮಾನ ಮತ್ತು ಅಪಮಾನ
ಆ. ಇರ್ಶೆ ಮತ್ತು ದ್ವೇಷ
ಇ. ದುಃಖ, ಅಶಾಂತಿ
ಈ. ಸೋಲಿನ
5. ಬಾಪದಾದಾರವರು ಕ್ರಿಸ್ಮಸ ದಿನವನ್ನು ಯಾವ ದಿನವೆಂದು ತಿಳಿಸುತ್ತಾರೆ?
ಅ. ಖುಷಿಯ ದಿನ
ಆ. ಸಂಪನ್ನತೆಯ ದಿನ
ಇ. ಕಿಸಮಿಸ (ಮಧುರತೆಯ ದಿನ)
ಈ. ಶಾಂತಿಯ ದಿನ
6. ಏರಡು ಘಳಿಗೆಯ ದೃಷ್ಟಿ ಮತ್ತು ಮಾತಿನಿಂದ ಏನು ಪರಿವರ್ತನೆ ಆಗುವುದು?
ಅ. ಆತ್ಮದ ಸೃಷ್ಟಿ
ಆ. ಆತ್ಮದ ದೃಷ್ಟಿ
ಇ. ಆತ್ಮದ ವೃತ್ತಿ
ಈ. ಆತ್ಮದ ಕೃತ್ತಿ
7. ಮಧುರ ಮಾತುಗಳು ಏನು ಮಾಡುವುದು?
ಅ. ಸ್ವಯಂನ್ನು ಖುಷಿಯಾಗಿ ಅನ್ಯರನ್ನು ಖುಷಿ ಪಡಿಸುವುದು
ಆ. ಅನ್ಯರನ್ನು ದುಃಖ ಪಡಿಸಿ ಸ್ವಯಂ ದುಃಖಿಯಾಗುವುದು.
ಇ. ಅನ್ಯರನ್ನು ಖುಷಿ ಪಡಿಸಿ ಸ್ವಯಂ ಖುಷಿಯಾಗುವುದು.
ಈ. ಅನ್ಯರನ್ನು ಖುಷಿ ಪಡಿಸುವುದು
8. ಸಹನಶಕ್ತಿಯ ಫಲ ಹೇಗಿರುತ್ತದೆ?
ಅ. ಸುಖ ಮತ್ತು ಶಾಂತಿ
ಆ. ಅವಿನಾಶಿ ಮತ್ತು ಮಧುರ
ಇ. ಆನಂದ ಮತ್ತು ಖುಷಿ
ಈ. ಸ್ನೇಹ ಮತ್ತು ಸಂಪತ್ತು