09.04.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ನಿಮ್ಮ ಸಮಯವು ಬಹಳ ಅಮೂಲ್ಯವಾಗಿದೆ, ಇದರಲ್ಲಿ ನೀವು ತಂದೆಗೆ ಸಂಪೂರ್ಣ ಸಹಯೋಗಿಗಳಾಗಿ, ಸಹಯೋಗಿ ಮಕ್ಕಳೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ”

ಪ್ರಶ್ನೆ:
ಸೇವಾಧಾರಿ ಮಕ್ಕಳು ಯಾವ ನೆಪವನ್ನು ಹೇಳಲು ಸಾಧ್ಯವಿಲ್ಲ?

ಉತ್ತರ:
ಬಾಬಾ, ಇಲ್ಲಿ ಬಿಸಿಲಿದೆ, ಇಲ್ಲಿ ಚಳಿಯಿದೆ. ಆದ್ದರಿಂದ ಸರ್ವೀಸ್ ಮಾಡುವುದಿಲ್ಲವೆಂದು ಸೇವಾಧಾರಿ ಮಕ್ಕಳು ನೆಪ ಹೇಳುವುದಿಲ್ಲ. ಸ್ವಲ್ಪ ಬಿಸಿಲಾಯಿತು ಅಥವಾ ಚಳಿಯಾಯಿತೆಂದರೆ ಇದರಲ್ಲಿ ನಾಜೂಕಾಗಬಾರದು. ನಮ್ಮಿಂದ ಸಹನೆ ಮಾಡುವುದಕ್ಕೇ ಆಗುವುದಿಲ್ಲವೆಂದಲ್ಲ. ಈ ದುಃಖಧಾಮದಲ್ಲಿ ಸುಖ-ದುಃಖ, ಬಿಸಿಲು-ಚಳಿ, ನಿಂದಾ-ಸ್ತುತಿ ಎಲ್ಲವನ್ನೂ ಸಹನೆ ಮಾಡಬೇಕಾಗುತ್ತದೆ, ಆದ್ದರಿಂದ ನೆಪ ಹೇಳಬಾರದು.

ಗೀತೆ:
ಧೈರ್ಯ ತಾಳು ಮಾನವನೆ............

ಓಂ ಶಾಂತಿ.
ಸುಖ ಮತ್ತು ದುಃಖವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು ಮಕ್ಕಳೇ ತಿಳಿದುಕೊಂಡಿದ್ದೀರಿ. ಈ ಜೀವನದಲ್ಲಿ ಸುಖ ಮತ್ತು ದುಃಖವು ಯಾವಾಗ ಸಿಗುತ್ತದೆ ಎಂಬುದನ್ನು ಕೇವಲ ನೀವು ಬ್ರಾಹ್ಮಣರೇ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಇದು ದುಃಖದ ಪ್ರಪಂಚವಾಗಿದೆ, ಇದರಲ್ಲಿ ಸ್ವಲ್ಪ ಸಮಯಕ್ಕಾಗಿ ಸುಖ-ದುಃಖ, ನಿಂದಾ-ಸ್ತುತಿ ಎಲ್ಲವನ್ನೂ ಸಹನೆ ಮಾಡಬೇಕಾಗುತ್ತದೆ. ಇದೆಲ್ಲದರಿಂದ ಪಾರಾಗಬೇಕಾಗಿದೆ. ಕೆಲವರಿಗೆ ಸ್ವಲ್ಪ ಬಿಸಿಲಾದರೂ ಸಹ ನಮ್ಮಿಂದ ಆಗುವುದಿಲ್ಲವೆಂದು ಹೇಳುತ್ತಾರೆ. ಈಗ ಮಕ್ಕಳಂತೂ ಸೆಖೆಯಿರಲಿ ಅಥವಾ ಚಳಿಯಿರಲಿ ಸೇವೆ ಮಾಡಬೇಕಲ್ಲವೆ. ಈ ಸಮಯದಲ್ಲಿ ಅಲ್ಪಸ್ವಲ್ಪ ದುಃಖವಾದರೂ ಇದು ಹೊಸ ಮಾತಲ್ಲ. ಈ ಪ್ರಪಂಚವೇ ದುಃಖವಾಗಿದೆ. ಈಗ ನೀವು ಮಕ್ಕಳು ಸುಖಧಾಮದಲ್ಲಿ ಹೋಗುವ ಪುರುಷಾರ್ಥ ಮಾಡಬೇಕಾಗಿದೆ. ಇದು ನಿಮ್ಮ ಅತ್ಯಮೂಲ್ಯವಾದ ಸಮಯವಾಗಿದೆ. ಇದರಲ್ಲಿ ನೆಪ ಹೇಳುವಂತಿಲ್ಲ. ತಂದೆಯು ಸೇವಾಧಾರಿ ಮಕ್ಕಳಿಗಾಗಿಯೇ ಹೇಳುತ್ತಾರೆ, ಯಾರು ಸೇವೆಯಂದರೇನು ಎಂಬುದನ್ನು ಅರಿತುಕೊಂಡಿಲ್ಲವೋ ಅವರಿಂದೇನು ಪ್ರಯೋಜನ? ಇಲ್ಲಿ ತಂದೆಯು ಭಾರತವನ್ನಷ್ಟೇ ಅಲ್ಲ, ಇಡೀ ವಿಶ್ವವನ್ನೇ ಸುಖಧಾಮವನ್ನಾಗಿ ಮಾಡಲು ಬಂದಿದ್ದಾರೆ ಅಂದಾಗ ಬ್ರಾಹ್ಮಣ ಮಕ್ಕಳೇ ಸಹಯೋಗಿಗಳಾಗಬೇಕಾಗಿದೆ. ತಂದೆಯು ಬಂದಿದ್ದಾರೆಂದರೆ ಅವರ ಮತದಂತೆ ನಡೆಯಬೇಕಾಗಿದೆ. ಯಾವ ಭಾರತವು ಸ್ವರ್ಗವಾಗಿತ್ತೋ ಅದು ಈಗ ನರಕವಾಗಿದೆ, ಅದನ್ನು ಪುನಃ ಸ್ವರ್ಗವನ್ನಾಗಿ ಮಾಡಬೇಕಾಗಿದೆ. ಇದೂ ಸಹ ಈಗಲೇ ಅರ್ಥವಾಗಿದೆ. ಸತ್ಯಯುಗದಲ್ಲಿ ಈ ಪವಿತ್ರ ರಾಜರುಗಳ ರಾಜ್ಯವಿತ್ತು, ಬಹಳ ಸುಖಿಯಾಗಿದ್ದಿರಿ ನಂತರ ಈಶ್ವರಾರ್ಥವಾಗಿ ದಾನ ಮಾಡುವುದರಿಂದ ಅಪವಿತ್ರ ರಾಜರೂ ಸಹ ಆಗುತ್ತಾರೆ, ಅಂದಾಗ ಅವರಿಗೂ ಶಕ್ತಿಯು ಸಿಗುತ್ತದೆ. ಈಗಂತೂ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಾಗಿದೆ. ಆದರೆ ಇವರ್ಯಾರೂ ಭಾರತದ ಸೇವೆ ಮಾಡಲು ಸಾಧ್ಯವಿಲ್ಲ. ಭಾರತ ಅಥವಾ ಇಡೀ ಪ್ರಪಂಚದ ಸೇವೆಯನ್ನು ಬೇಹದ್ದಿನ ತಂದೆಯೊಬ್ಬರೇ ಮಾಡುತ್ತಾರೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಧುರ ಮಕ್ಕಳೇ, ಈಗ ನನ್ನ ಜೊತೆ ಸಹಯೋಗಿಗಳಾಗಿ. ತಂದೆಯು ಎಷ್ಟು ಪ್ರೀತಿಯಿಂದ ತಿಳಿಸಿಕೊಡುತ್ತಾರೆ, ಇದನ್ನು ದೇಹೀಅಭಿಮಾನಿ ಮಕ್ಕಳೇ ತಿಳಿದುಕೊಳ್ಳುತ್ತಾರೆ. ದೇಹಾಭಿಮಾನಿಗಳು ಸಹಯೋಗವನ್ನೇನು ಕೊಡುತ್ತಾರೆ ಏಕೆಂದರೆ ಮಾಯೆಯ ಬಂಧನದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಈಗ ತಂದೆಯು ಆದೇಶ ನೀಡಿದ್ದಾರೆ - ಎಲ್ಲರನ್ನೂ ಮಾಯೆಯ ಬಂಧನಗಳಿಂದ, ಗುರುಗಳ ಬಂಧನಗಳಿಂದ ಬಿಡಿಸಿ. ನಿಮ್ಮ ಕರ್ತವ್ಯವೇ ಇದಾಗಿದೆ. ತಂದೆಯು ತಿಳಿಸುತ್ತಾರೆ - ಯಾರು ನನಗೆ ಸಹಯೋಗಿಗಳಾಗುವರೋ ಅವರೇ ಪದವಿಯನ್ನು ಪಡೆಯುತ್ತಾರೆ. ತಂದೆಯು ಸ್ವಯಂ ಸನ್ಮುಖದಲ್ಲಿ ಹೇಳುತ್ತಾರೆ - ನಾನು ಸಾಧಾರಣವಾಗಿರುವ ಕಾರಣ ಯಾರಾಗಿದ್ದೇನೆಯೋ, ಹೇಗಿದ್ದೇನೆಯೋ ಹಾಗೆಯೇ ನನ್ನನ್ನು ಯಥಾರ್ಥವಾಗಿ ತಿಳಿದುಕೊಂಡಿಲ್ಲ. ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಂಬುದನ್ನು ತಿಳಿದುಕೊಂಡಿಲ್ಲ. ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು ಎಂಬುದನ್ನೂ ತಿಳಿದಿಲ್ಲ. ಇವರು ಹೇಗೆ ರಾಜ್ಯವನ್ನು ಪಡೆದರು ಮತ್ತೆ ಹೇಗೆ ಕಳೆದುಕೊಂಡರು ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಮನುಷ್ಯರದು ಸಂಪೂರ್ಣ ತುಚ್ಛ ಬುದ್ಧಿಯಾಗಿದೆ, ಈಗ ತಂದೆಯು ಎಲ್ಲರ ಬುದ್ಧಿಯ ಬೀಗವನ್ನು ತೆರೆಯಲು ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರನ್ನಾಗಿ ಮಾಡಲು ಬಂದಿದ್ದಾರೆ, ತಿಳಿಸುತ್ತಾರೆ - ಮಕ್ಕಳೇ, ಈಗ ಸಹಯೋಗಿಗಳಾಗಿ. ಮುಸಲ್ಮಾನರು ಖುದಾನ ಸೇವಾಧಾರಿಗಳೆಂದು ಹೇಳಿಕೊಳ್ಳುತ್ತಾರೆ ಆದರೆ ಅವರೇನು ಸಹಯೋಗಿಗಳಾಗುವುದಿಲ್ಲ. ಖುದಾ ಬಂದು ಯಾರನ್ನು ಪಾವನ ಮಾಡುತ್ತಾರೆಯೋ ಅವರಿಗೇ ತಿಳಿಸುತ್ತಾರೆ - ಈಗ ಅನ್ಯರನ್ನೂ ತಮ್ಮ ಸಮಾನರನ್ನಾಗಿ ಮಾಡಿ ಶ್ರೀಮತದಂತೆ ನಡೆಯಿರಿ. ಪಾವನ ಸ್ವರ್ಗವಾಸಿಗಳನ್ನಾಗಿ ಮಾಡುವುದಕ್ಕಾಗಿಯೇ ತಂದೆಯು ಬಂದಿದ್ದಾರೆ.

ನೀವು ಬ್ರಾಹ್ಮಣ ಮಕ್ಕಳಿಗೆ ತಿಳಿದಿದೆ - ಇದು ಮೃತ್ಯುಲೋಕವಾಗಿದೆ, ಕುಳಿತು-ಕುಳಿತಿದ್ದಂತೆಯೇ ಆಕಸ್ಮಿಕ ಮೃತ್ಯುವಾಗುತ್ತಿರುತ್ತದೆ. ಅಂದಮೇಲೆ ನಾವೇಕೆ ಮೊದಲೇ ಪರಿಶ್ರಮ ಪಟ್ಟು ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆದು ನಮ್ಮ ಭವಿಷ್ಯ ಜೀವನವನ್ನು ರೂಪಿಸಿಕೊಳ್ಳಬಾರದು!! ಮನುಷ್ಯರದು ವಾನಪ್ರಸ್ಥ ಸ್ಥಿತಿಯಾದಾಗ ಈಗ ನಾವು ಭಕ್ತಿಯಲ್ಲಿ ತೊಡಗಬೇಕೆಂದು ತಿಳಿಯುತ್ತಾರೆ. ಎಲ್ಲಿಯವರೆಗೆ ವಾನಪ್ರಸ್ಥ ಸ್ಥಿತಿಯಾಗುವುದಿಲ್ಲವೋ ಅಲ್ಲಿಯವರೆಗೆ ಹೆಚ್ಚಿನದಾಗಿ ಹಣ ಸಂಪಾದಿಸುತ್ತಾರೆ, ಆದರೆ ಈಗ ನಿಮ್ಮೆಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ, ಅಂದಾಗ ಏಕೆ ತಂದೆಗೆ ಸಹಯೋಗಿಗಳಾಗಬಾರದು! ನಾವು ತಂದೆಗೆ ಸಹಯೋಗಿಗಳಾಗುತ್ತೇವೆಯೇ ಎಂದು ತಮ್ಮ ಹೃದಯದಿಂದ ಕೇಳಿಕೊಳ್ಳಬೇಕು. ಸೇವಾಧಾರಿ ಮಕ್ಕಳಂತೂ ಪ್ರಸಿದ್ಧರಾಗಿದ್ದಾರೆ, ಒಳ್ಳೆಯ ಪರಿಶ್ರಮ ಪಡುತ್ತಾರೆ. ಯೋಗದಲ್ಲಿದ್ದಾಗಲೇ ಸೇವೆ ಮಾಡಲು ಸಾಧ್ಯ. ನೆನಪಿನ ಶಕ್ತಿಯಿಂದಲೇ ಇಡೀ ಪ್ರಪಂಚವನ್ನು ಪವಿತ್ರವನ್ನಾಗಿ ಮಾಡಬೇಕಾಗಿದೆ. ಇಡೀ ವಿಶ್ವವನ್ನು ಪಾವನ ಮಾಡಲು ನೀವು ನಿಮಿತ್ತರಾಗಿದ್ದೀರಿ, ಮತ್ತೆ ನಿಮಗಾಗಿ ಪವಿತ್ರ ಪ್ರಪಂಚವು ಅವಶ್ಯವಾಗಿ ಬೇಕು. ಆದ್ದರಿಂದಲೇ ಈಗ ಪತಿತ ಪ್ರಪಂಚದ ವಿನಾಶವಾಗಲಿದೆ. ಈಗ ಎಲ್ಲರಿಗೆ ಇದೇ ಮಾತನ್ನು ತಿಳಿಸುತ್ತಾ ಇರಿ - ದೇಹಾಭಿಮಾನವನ್ನು ಬಿಡಿ, ಒಬ್ಬ ತಂದೆಯನ್ನೇ ನೆನಪು ಮಾಡಿ, ಅವರೇ ಪತಿತ-ಪಾವನನಾಗಿದ್ದಾರೆ. ಎಲ್ಲರೂ ಅವರನ್ನೇ ನೆನಪು ಮಾಡುತ್ತಾರೆ. ಸಾಧು-ಸಂತ ಮೊದಲಾದವರೆಲ್ಲರೂ ತಮ್ಮ ಬೆರಳನ್ನು ಮೇಲೆ ತೋರಿಸಿ ಹೇಳುತ್ತಾರೆ - ಪರಮಾತ್ಮನು ಒಬ್ಬರೇ ಆಗಿದ್ದಾರೆ, ಅವರೇ ಎಲ್ಲರಿಗೆ ಸುಖ ನೀಡುವವರಾಗಿದ್ದಾರೆ. ಈಶ್ವರ ಅಥವಾ ಪರಮಾತ್ಮನೆಂದು ಹೇಳಿಬಿಡುತ್ತಾರೆ. ಆದರೆ ಅವರನ್ನು ಯಾರೂ ಅರಿತುಕೊಂಡಿಲ್ಲ. ಕೆಲವರು ಗಣೇಶನನ್ನು, ಕೆಲವರು ಹನುಮಂತನನ್ನು ಇನ್ನೂ ಕೆಲವರು ತಮ್ಮ ಗುರುಗಳನ್ನು ನೆನಪು ಮಾಡುತ್ತಿರುತ್ತಾರೆ. ಈಗ ನಿಮಗೆ ತಿಳಿದಿದೆ, ಅದೆಲ್ಲವೂ ಭಕ್ತಿಮಾರ್ಗವಾಗಿದೆ. ಭಕ್ತಿಮಾರ್ಗವೂ ಸಹ ಅರ್ಧಕಲ್ಪವೇ ನಡೆಯುತ್ತದೆ. ದೊಡ್ಡ-ದೊಡ್ಡ ಋಷಿ-ಮುನಿಗಳೆಲ್ಲರೂ ಸಹ ನೇತಿ-ನೇತಿ (ನಮಗೆ ಗೊತ್ತಿಲ್ಲ) ಎನ್ನುತ್ತಾ ಬಂದಿದ್ದಾರೆ. ರಚಯಿತ ಮತ್ತು ರಚನೆಯನ್ನು ನಾವು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಅವರಂತೂ ತ್ರಿಕಾಲದರ್ಶಿಗಳಲ್ಲ, ಬೀಜರೂಪ ಮತ್ತು ಜ್ಞಾನಸಾಗರನಂತೂ ಒಬ್ಬರೇ ಆಗಿದ್ದಾರೆ, ಅವರು ಭಾರತದಲ್ಲಿಯೇ ಬರುತ್ತಾರೆ, ಶಿವ ಜಯಂತಿಯನ್ನಾಚರಿಸುತ್ತಾರೆ ಮತ್ತು ಗೀತಾಜಯಂತಿಯನ್ನೂ ಆಚರಿಸುತ್ತಾರೆ. ಅಂದಾಗ ಕೃಷ್ಣನನ್ನು ನೆನಪು ಮಾಡುತ್ತಾರೆ, ಶಿವನನ್ನು ಅರಿತುಕೊಂಡಿಲ್ಲ. ಶಿವತಂದೆಯು ತಿಳಿಸುತ್ತಾರೆ - ಪತಿತ-ಪಾವನ, ಜ್ಞಾನಸಾಗರನು ನಾನಾಗಿದ್ದೇನೆ, ಇದನ್ನು ಕೃಷ್ಣನಿಗೆ ಹೇಳಲು ಸಾಧ್ಯವಿಲ್ಲ. ಗೀತೆಯ ಭಗವಂತ ಯಾರು? ಇದು ಬಹಳ ಒಳ್ಳೆಯ ಚಿತ್ರವಾಗಿದೆ. ತಂದೆಯು ಈ ಚಿತ್ರಗಳನ್ನು ಮಕ್ಕಳ ಕಲ್ಯಾಣಕ್ಕಾಗಿಯೇ ಮಾಡಿಸುತ್ತಾರೆ. ಶಿವತಂದೆಯ ಮಹಿಮೆಯನ್ನು ಸಂಪೂರ್ಣವಾಗಿ ಬರೆಯಬೇಕಾಗಿದೆ. ಎಲ್ಲಾ ಆಧಾರವು ಇದರ ಮೇಲಿದೆ. ಮೇಲಿನಿಂದ ಯಾರೆಲ್ಲಾ ಆತ್ಮಗಳು ಬರುತ್ತಾರೆಯೋ ಅವರು ಪವಿತ್ರರಾಗಿರುತ್ತಾರೆ, ಪವಿತ್ರರಾಗದ ಹೊರತು ಯಾರೂ ಹೋಗಲು ಸಾಧ್ಯವಿಲ್ಲ. ಮುಖ್ಯವಾದ ಮಾತು ಪವಿತ್ರರಾಗುವುದಾಗಿದೆ, ಅದು ಪವಿತ್ರಧಾಮವಾಗಿದೆ, ಎಲ್ಲಿ ಎಲ್ಲಾ ಆತ್ಮಗಳೂ ಇರುತ್ತಾರೆ. ಇಲ್ಲಿ ನೀವು ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಪತಿತರಾಗಿದ್ದೀರಿ. ಯಾರು ಎಲ್ಲರಿಗಿಂತ ಹೆಚ್ಚಿನ ಪಾವನರಾಗಿದ್ದರೋ ಅವರೇ ಈಗ ಪತಿತರಾಗಿದ್ದಾರೆ. ಈಗ ದೇವಿ-ದೇವತಾ ಧರ್ಮದ ಹೆಸರೇ ಮರೆಯಾಗಿ ಬಿಟ್ಟಿದೆ. ದೇವತಾ ಧರ್ಮದ ಬದಲಾಗಿ ಹಿಂದೂ ಧರ್ಮವೆಂದು ಹೆಸರನ್ನಿಟ್ಟಿದ್ದಾರೆ. ನೀವು ಮಕ್ಕಳು ಸ್ವರ್ಗದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ ಮತ್ತು ಕಳೆದುಕೊಳ್ಳುತ್ತೀರಿ. ಇದು ಸೋಲು ಮತ್ತು ಗೆಲುವಿನ ಆಟವಾಗಿದೆ. ಮಾಯೆಯಿಂದ ಸೋಲುವುದೇ ಸೋಲು, ಮಾಯೆಯಿಂದ ಗೆಲ್ಲುವುದೇ ಗೆಲುವಾಗಿದೆ. ಮನುಷ್ಯರಂತೂ ರಾವಣನ ಇಷ್ಟೂ ದೊಡ್ಡ ಚಿತ್ರವನ್ನು ಎಷ್ಟೊಂದು ಖರ್ಚು ಮಾಡಿ ಮಾಡಿಸುತ್ತಾರೆ, ಮತ್ತೆ ಒಂದೇ ದಿನದಲ್ಲಿ ಅದನ್ನು ಸಮಾಪ್ತಿ ಮಾಡಿ ಬಿಡುತ್ತಾರೆ ಏಕೆಂದರೆ ರಾವಣನು ಶತ್ರುವಲ್ಲವೆ ಆದರೆ ಇದಂತೂ ಕೇವಲ ಗೊಂಬೆಯಾಟವಾಗಿ ಬಿಟ್ಟಿದೆ. ಶಿವ ತಂದೆಯ ಚಿತ್ರವನ್ನು ಮಾಡಿಸಿ ಪೂಜೆ ಮಾಡಿ ಮತ್ತೆ ಅದನ್ನು ಒಡೆದು ಹಾಕುತ್ತಾರೆ. ದೇವಿಯರ ಚಿತ್ರವನ್ನೂ ಅದೇ ರೀತಿ ಮಾಡಿ ನೀರಿನಲ್ಲಿ ಮುಳುಗಿಸುತ್ತಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ. ಈಗ ನೀವು ಮಕ್ಕಳು ಈ ಪ್ರಪಂಚದ ಚಕ್ರವು ಹೇಗೆ ಸುತ್ತುತ್ತದೆ ಎಂದು ಬೇಹದ್ದಿನ ಇತಿಹಾಸ-ಭೂಗೋಳವನ್ನು ಅರಿತುಕೊಂಡಿದ್ದೀರಿ. ಸತ್ಯ-ತ್ರೇತಾಯುಗದ ಬಗ್ಗೆ ಯಾರಿಗೂ ಗೊತ್ತಿಲ್ಲ. ದೇವತೆಗಳ ಚಿತ್ರಗಳನ್ನೂ ಸಹ ಕೆಟ್ಟದಾಗಿ ತೋರಿಸಿ ಬಿಟ್ಟಿದ್ದಾರೆ.

ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ವಿಶ್ವದ ಮಾಲೀಕರಾಗಲು ತಂದೆಯು ನಿಮಗೆ ಯಾವ ವ್ರತವನ್ನು ತಿಳಿಸಿದ್ದಾರೆಯೋ ಆ ವ್ರತವನ್ನಿಟ್ಟುಕೊಳ್ಳಿ. ನೆನಪಿನಲ್ಲಿದ್ದು ಭೋಜನವನ್ನು ತಯಾರಿಸಿ, ನೆನಪಿನಲ್ಲಿದ್ದು ಭೋಜನವನ್ನು ಸ್ವೀಕಾರ ಮಾಡಿ. ತಂದೆಯು ತಿಳಿಸುತ್ತಾರೆ - ನನ್ನ ನೆನಪು ಮಾಡುವುದರಿಂದ ನೀವು ಪುನಃ ವಿಶ್ವದ ಮಾಲೀಕರಾಗುತ್ತೀರಿ. ತಂದೆಯೂ ಸಹ ಪುನಃ ಬಂದಿದ್ದಾರೆ, ಈಗ ಪೂರ್ಣವಾಗಿ ವಿಶ್ವದ ಮಾಲೀಕರಾಗಬೇಕಾಗಿದೆ ಆದ್ದರಿಂದ ಮಾತಾಪಿತರನ್ನು ಅನುಸರಿಸಿ. ಕೇವಲ ತಂದೆಯೊಬ್ಬರೇ ಇರಲು ಸಾಧ್ಯವಿಲ್ಲ. ಸನ್ಯಾಸಿಗಳೂ ಸಹ ಹೇಳುತ್ತಾರೆ - ನಾವೆಲ್ಲರೂ ತಂದೆಯರಾಗಿದ್ದೇವೆ, ಆತ್ಮವೇ ಪರಮಾತ್ಮನಾಗಿದೆ ಎಂಬುದು ತಪ್ಪಾಗಿ ಬಿಡುತ್ತದೆ. ಇಲ್ಲಿ ಮಾತಾಪಿತರಿಬ್ಬರೂ ಪುರುಷಾರ್ಥ ಮಾಡುತ್ತಿದ್ದರು. ಮಾತಾಪಿತರನ್ನು ಅನುಸರಿಸಿ ಎಂಬ ಶಬ್ಧವೂ ಸಹ ಇಲ್ಲಿಯದೇ ಆಗಿದೆ. ಈಗ ನೀವು ತಿಳಿದುಕೊಂಡಿದ್ದೀರಿ - ಯಾರು ವಿಶ್ವದ ಮಾಲೀಕರಾಗಿದ್ದರೋ, ಪವಿತ್ರರಾಗಿದ್ದರೋ ಅವರು ಈಗ ಅಪವಿತ್ರರಾಗಿದ್ದಾರೆ. ಮತ್ತೆ ಪವಿತ್ರರಾಗುತ್ತಿದ್ದಾರೆ. ನಾವೂ ಸಹ ಅವರ ಶ್ರೀಮತದಂತೆ ನಡೆದು ಈ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೇವೆ. ಆ ತಂದೆಯು ಬ್ರಹ್ಮಾರವರ ಮೂಲಕ ಆದೇಶ ನೀಡುತ್ತಾರೆ ಅದರನುಸಾರವೇ ನಡೆಯಬೇಕಾಗಿದೆ. ಅದನ್ನು ಅನುಸರಿಸದಿದ್ದರೆ ಕೇವಲ ಬಾಬಾ, ಬಾಬಾ ಎಂದು ಹೇಳಿ, ಬಾಯಿಯನ್ನು ಸಿಹಿ ಮಾಡಿಕೊಳ್ಳುತ್ತಾರೆ. ಮಾತಾಪಿತರನ್ನು ಅನುಸರಿಸುವವರಿಗೇ ಸುಪುತ್ರರೆಂದು ಹೇಳಲಾಗುತ್ತದೆಯಲ್ಲವೆ. ಮಮ್ಮಾ-ಬಾಬಾರವರನ್ನು ಅನುಸರಿಸುವುದರಿಂದ ನಾವು ರಾಜಧಾನಿಯಲ್ಲಿ ಬರುತ್ತೇವೆಂಬುದನ್ನು ನೀವೂ ಸಹ ತಿಳಿದುಕೊಂಡಿದ್ದೀರಿ, ಇದು ತಿಳುವಳಿಕೆಯ ಮಾತಾಗಿದೆ. ತಂದೆಯು ಕೇವಲ ಇಷ್ಟನ್ನೇ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಅದರಿಂದ ವಿಕರ್ಮಗಳು ವಿನಾಶವಾಗುವುದು. ಇದನ್ನು ಅನ್ಯರಿಗೂ ಸಹ ತಿಳಿಸಿಕೊಡಿ - ನೀವು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಅಪವಿತ್ರರಾಗಿದ್ದಿರಿ, ಈಗ ಮತ್ತೆ ಪವಿತ್ರರಾಗಬೇಕಾಗಿದೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪವಿತ್ರರಾಗುತ್ತಾ ಹೋಗುತ್ತೀರಿ. ಹೆಚ್ಚು ನೆನಪು ಮಾಡುವವರು ಹೊಸ ಪ್ರಪಂಚದಲ್ಲಿ ಮೊಟ್ಟ ಮೊದಲೇ ಬರುತ್ತೀರಿ. ಮತ್ತೆ ಅನ್ಯರನ್ನೂ ಸಹ ತಮ್ಮ ಸಮಾನರನ್ನಾಗಿ ಮಾಡಬೇಕಾಗಿದೆ. ಪ್ರದರ್ಶನಿಯಲ್ಲಿ ತಿಳಿಸುವುದಕ್ಕಾಗಿ ಮಮ್ಮಾ-ಬಾಬಾರವರಂತೂ ಹೋಗುವುದಕ್ಕೆ ಸಾಧ್ಯವಿಲ್ಲ. ವಿದೇಶದಿಂದ ಯಾರಾದರೂ ಹಿರಿಯ ವ್ಯಕ್ತಿಗಳು ಬರುತ್ತಾರೆಂದರೆ ಇವರು ಯಾರು, ಯಾರು ಬಂದಿದ್ದಾರೆಂದು ನೋಡಲು ಎಷ್ಟೊಂದು ಮಂದಿ ಹೋಗುತ್ತಾರೆ. ಇವರಂತೂ ಎಷ್ಟು ಗುಪ್ತವಾಗಿದ್ದಾರೆ! ತಂದೆಯು ತಿಳಿಸುತ್ತಾರೆ - ನಾನು ಈ ಬ್ರಹ್ಮಾರವರ ತನುವಿನಿಂದ ಮಾತನಾಡುತ್ತೇನೆ, ನಾನು ಈ ಮಗನ ಜವಾಬ್ದಾರನಾಗಿದ್ದೇನೆ. ನೀವು ಸದಾ ನಮಗೆ ಶಿವತಂದೆಯು ತಿಳಿಸುತ್ತಾರೆ, ಓದಿಸುತ್ತಾರೆಂದೇ ತಿಳಿಯಿರಿ. ನೀವು ಶಿವ ತಂದೆಯನ್ನೇ ನೋಡಬೇಕಾಗಿದೆ ಇವರನ್ನಲ್ಲ. ತಮ್ಮನ್ನು ಆತ್ಮವೆಂದು ತಿಳಿಯಿರಿ ಮತ್ತು ಪರಮಾತ್ಮ ತಂದೆಯನ್ನು ನೆನಪು ಮಾಡಿ. ನಾವು ಆತ್ಮಗಳಾಗಿದ್ದೇವೆ, ಆತ್ಮದಲ್ಲಿ ಸಂಪೂರ್ಣ ಪಾತ್ರವು ತುಂಬಲ್ಪಟ್ಟಿದೆ. ಈ ಜ್ಞಾನವು ಬುದ್ಧಿಯಲ್ಲಿ ಸುತ್ತುತ್ತಿರಬೇಕು, ಕೇವಲ ಪ್ರಾಪಂಚಿಕ ಮಾತುಗಳು ಬುದ್ಧಿಯಲ್ಲಿದೆಯಂದರೆ ಅವರು ಏನನ್ನೂ ತಿಳಿದುಕೊಂಡಿಲ್ಲವೆಂದರ್ಥ. ಸಂಪೂರ್ಣ ಯೋಗ್ಯವಿಲ್ಲದವರಾಗಿದ್ದಾರೆ, ಆದರೆ ಇಂತಿಂತಹವರ ಕಲ್ಯಾಣವನ್ನೂ ಮಾಡಬೇಕಾಗಿದೆ. ಸ್ವರ್ಗದಲ್ಲಂತೂ ಬರುತ್ತಾರೆ ಆದರೆ ಶ್ರೇಷ್ಠ ಪದವಿಯಿಲ್ಲ, ಶಿಕ್ಷೆಗಳನ್ನನುಭವಿಸಿ ಹೋಗುತ್ತಾರೆ. ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುತ್ತಾರೆಂಬುದನ್ನು ತಂದೆಯು ತಿಳಿಸಿದ್ದಾರೆ. ಮೊದಲನೆಯದಾಗಿ ಸ್ವದರ್ಶನ ಚಕ್ರಧಾರಿಗಳಾಗಿ ಮತ್ತು ಅನ್ಯರನ್ನೂ ಮಾಡಿ, ಪಕ್ಕಾ ಯೋಗಿಗಳಾಗಿ ಮತ್ತು ಅನ್ಯರನ್ನೂ ಮಾಡಿ. ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ, ಮತ್ತೆ ಬಾಬಾ ನಾವು ನಿಮ್ಮನ್ನು ಮರೆತು ಹೋಗುತ್ತೇವೆಂದು ಹೇಳುತ್ತಾರೆ. ನಾಚಿಕೆಯಾಗುವುದಿಲ್ಲವೆ! ಅನೇಕರು ಸತ್ಯವನ್ನೇ ತಿಳಿಸುವುದಿಲ್ಲ, ಬಹಳಷ್ಟು ಮರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಯಾರೇ ಬಂದರೂ ಸಹ ಅವರಿಗೆ ತಂದೆಯ ಪರಿಚಯ ಕೊಡಿ. ಈಗ 84 ಜನ್ಮಗಳ ಚಕ್ರವು ಮುಕ್ತಾಯವಾಗುತ್ತದೆ, ಈಗ ಹಿಂತಿರುಗಿ ಹೋಗಬೇಕಾಗಿದೆ. ರಾಮನೂ ಹೋದ, ರಾವಣನೂ ಹೋದ......ಇದರ ಅರ್ಥವು ಎಷ್ಟು ಸಹಜವಾಗಿದೆ. ಅವಶ್ಯವಾಗಿ ಸಂಗಮಯುಗವಿರಬೇಕು ಆಗಲೇ ರಾಮ ಮತ್ತು ರಾವಣನ ಪರಿವಾರವಿರುತ್ತದೆ, ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಎಲ್ಲರೂ ವಿನಾಶವಾಗುತ್ತಾರೆ, ಕೆಲವರೇ ಉಳಿಯುತ್ತಾರೆ. ಹೇಗೆ ನಿಮಗೆ ರಾಜ್ಯವು ಸಿಗುತ್ತದೆ ಎಂಬುದೂ ಸಹ ಸ್ವಲ್ಪ ಮುಂದೆ ಹೋದಂತೆ ಎಲ್ಲವೂ ಅರ್ಥವಾಗುತ್ತಾ ಹೋಗುವುದು, ಎಲ್ಲವನ್ನೂ ಮೊದಲೇ ತಿಳಿಸಿ ಬಿಡುವುದಿಲ್ಲ ಅಲ್ಲವೆ. ಮೊದಲೇ ತಿಳಿಸಿ ಬಿಟ್ಟರೆ ಆಟವೆನಿಸಲು ಸಾಧ್ಯವಿಲ್ಲ, ನೀವು ಸಾಕ್ಷಿಯಾಗಿ ನೋಡಬೇಕಾಗಿದೆ. ಸಾಕ್ಷಾತ್ಕಾರವಾಗುತ್ತಾ ಹೋಗುತ್ತದೆ. ಈ 84 ಜನ್ಮಗಳ ಚಕ್ರವನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ.

ನಾವು ಹಿಂತಿರುಗಿ ಹೋಗುತ್ತೇವೆಂದು ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ. ರಾವಣ ರಾಜ್ಯದಿಂದ ಈಗ ಬಿಡುಗಡೆ ಸಿಗುತ್ತದೆ. ನಂತರ ತಮ್ಮ ರಾಜಧಾನಿಯಲ್ಲಿ ಬರುತ್ತೀರಿ, ಇನ್ನು ಸ್ವಲ್ಪ ದಿನಗಳು ಉಳಿದಿದೆ. ಈ ಚಕ್ರವು ಸುತ್ತುತ್ತಿರುತ್ತದೆಯಲ್ಲವೆ. ಅನೇಕ ಬಾರಿ ಈ ಚಕ್ರವನ್ನು ಸುತ್ತಿದ್ದೀರಿ. ಈಗ ತಂದೆಯು ತಿಳಿಸಿದ್ದಾರೆ - ಯಾವ ಕರ್ಮ ಬಂಧನದಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರೋ ಅದನ್ನು ಮರೆಯಿರಿ. ಗೃಹಸ್ಥ ವ್ಯವಹಾರದಲ್ಲಿದ್ದರೂ ಮರೆಯುತ್ತಾ ಹೋಗಿ. ಈಗ ನಾಟಕವು ಪೂರ್ಣವಾಗುತ್ತದೆ, ಈಗ ಮನೆಗೆ ಹೋಗಬೇಕಾಗಿದೆ. ಈ ಮಹಾಭಾರತ ಯುದ್ಧದ ನಂತರವೇ ಸ್ವರ್ಗದ ಬಾಗಿಲುಗಳು ತೆರೆಯುತ್ತವೆ. ಆದ್ದರಿಂದ ತಂದೆಯು ತಿಳಿಸಿದ್ದಾರೆ - ಗೇಟ್ ವೇ ಟು ಹೆವೆನ್ ಎಂಬ ಹೆಸರು ಚೆನ್ನಾಗಿದೆ. ಈ ಯುದ್ಧಗಳಂತೂ ನಡೆಯುತ್ತಾ ಬಂದಿದೆ ಎಂದು ಕೆಲವರು ಹೇಳುತ್ತಾರೆ. ಆಗ ತಿಳಿಸಿ, ಅಣ್ವಸ್ತ್ರಗಳ ಯುದ್ಧವು ಯಾವಾಗ ನಡೆದಿದೆ, ಇದು ಅಣ್ವಸ್ತ್ರಗಳ ಅಂತಿಮ ಯುದ್ಧವಾಗಿದೆ. 5000 ವರ್ಷಗಳ ಮೊದಲೂ ಸಹ ಈ ಯುದ್ಧವು ನಡೆದಾಗ ಈ ಯಜ್ಞವನ್ನು ರಚಿಸಲಾಗಿತ್ತು, ಈಗ ಈ ಹಳೆಯ ಪ್ರಪಂಚದ ವಿನಾಶವಾಗಲಿದೆ, ಹೊಸ ರಾಜಧಾನಿಯ ಸ್ಥಾಪನೆಯಾಗುತ್ತಿದೆ.

ನೀವು ರಾಜ್ಯಭಾಗ್ಯವನ್ನು ಪಡೆಯಲು ಈ ಆತ್ಮಿಕ ವಿದ್ಯೆಯನ್ನು ಓದುತ್ತೀರಿ. ನಿಮ್ಮದು ಇದು ಆತ್ಮಿಕ ವಿದ್ಯೆಯಾಗಿದೆ. ಲೌಕಿಕ ವಿದ್ಯೆಯಂತೂ ಉಪಯೋಗಕ್ಕೆ ಬರುವುದಿಲ್ಲ, ಶಾಸ್ತ್ರಗಳೂ ಸಹ ಪ್ರಯೋಜನಕ್ಕೆ ಬರುವುದಿಲ್ಲ. ಅಂದಮೇಲೆ ಏಕೆ ಈ ಆತ್ಮಿಕ ಸೇವೆಯಲ್ಲಿ ತೊಡಗಬಾರದು, ತಂದೆಯಂತೂ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ಯಾವ ವಿದ್ಯೆಯಲ್ಲಿ ತೊಡಗಬೇಕೆಂದು ವಿಚಾರ ಮಾಡಬೇಕು. ಅವರಂತೂ ಕೆಲವು ಡಿಗ್ರಿಗಳಿಗಾಗಿ ಮಾಡುತ್ತಾರೆ, ನೀವು ರಾಜ್ಯ ಪದವಿಗಾಗಿ ಓದುತ್ತೀರಿ, ಎಷ್ಟು ರಾತ್ರಿ-ಹಗಲಿನ ಅಂತರವಿದೆ! ಆ ವಿದ್ಯೆಯನ್ನು ಓದುವುದರಿಂದ ಕಡಲೆಯು ಸಿಗುತ್ತದೆಯೋ ಅಥವಾ ಅದೂ ಇಲ್ಲವೋ ಗೊತ್ತಿಲ್ಲ. ಯಾರಾದರೂ ಶರೀರ ಬಿಟ್ಟರೆಂದರೆ ಅವರ ಕಡಲೆಯು ಹೋಯಿತು. ಈ ಸಂಪಾದನೆಯು ನಿಮ್ಮ ಜೊತೆ ಬರುವುದಿಲ್ಲ, ಮೃತ್ಯುವು ತಲೆಯ ಮೇಲೆ ನಿಂತಿದೆ. ಮೊದಲು ನಾವು ನಮ್ಮ ಪೂರ್ಣ ಸಂಪಾದನೆಯನ್ನು ಮಾಡಿಕೊಳ್ಳಬೇಕು. ಈ ಸಂಪಾದನೆ ಮಾಡಿಕೊಳ್ಳುತ್ತಾ-ಮಾಡಿಕೊಳ್ಳುತ್ತಾ ಪೂರ್ಣ ಪ್ರಪಂಚವೇ ವಿನಾಶವಾಗಲಿದೆ. ನಿಮ್ಮ ವಿದ್ಯಾಭ್ಯಾಸವು ಪೂರ್ಣವಾದಾಗಲೇ ವಿನಾಶವಾಗುವುದು. ನಿಮಗೆ ತಿಳಿದಿದೆ - ಯಾರೆಲ್ಲಾ ಮನುಷ್ಯಾತ್ಮರಿದ್ದಾರೆಯೋ ಅವರ ಮುಷ್ಟಿಯಲ್ಲಿ ಕೇವಲ ಕಡಲೆಯಿದೆ, ಅದನ್ನೇ ಮಂಗನ ತರಹ ಹಿಡಿದುಕೊಂಡು ಕುಳಿತಿದ್ದಾರೆ, ಈಗ ನೀವು ರತ್ನಗಳನ್ನು ಪಡೆಯುತ್ತಿದ್ದೀರಿ. ಅಂದಮೇಲೆ ಈ ಕಡಲೆಯೊಂದಿಗೆ ಮಮತ್ವವನ್ನಿಡಬೇಡಿ. ಯಾವಾಗ ಒಳ್ಳೆಯ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವರೋ ಆಗಲೇ ಈ ಕಡಲೆಯ ಮುಷ್ಟಿಯನ್ನು ಬಿಡುತ್ತಾರೆ. ಇದಂತೂ ಎಲ್ಲವೂ ಬೂದಿಯಾಗಲಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಆತ್ಮಿಕ ವಿದ್ಯೆಯನ್ನು ಓದಬೇಕು ಮತ್ತು ಓದಿಸಬೇಕಾಗಿದೆ. ಅವಿನಾಶಿ ಜ್ಞಾನರತ್ನಗಳಿಂದ ತಮ್ಮ ಮುಷ್ಟಿಯನ್ನು ತುಂಬಿಸಿಕೊಳ್ಳಬೇಕಾಗಿದೆ. ಕಡಲೆಯ ಹಿಂದೆ ಸಮಯವನ್ನು ಕಳೆಯಬಾರದು.

2. ಈಗ ನಾಟಕವು ಪೂರ್ಣವಾಗುತ್ತಿದೆ ಆದ್ದರಿಂದ ಸ್ವಯಂನ್ನು ಕರ್ಮ ಬಂಧನಗಳಿಂದ ಮುಕ್ತ ಮಾಡಿಕೊಳ್ಳಬೇಕಾಗಿದೆ. ಸ್ವದರ್ಶನ ಚಕ್ರಧಾರಿಗಳಾಗಬೇಕು ಮತ್ತು ಅನ್ಯರನ್ನೂ ಮಾಡಬೇಕಾಗಿದೆ. ಮಾತಾಪಿತರನ್ನು ಅನುಸರಿಸಿ ರಾಜ್ಯ ಪದವಿಗೆ ಅಧಿಕಾರಿಗಳಾಗಬೇಕಾಗಿದೆ.

ವರದಾನ:
ಹದ್ದಿನ ಸರ್ವ ಇಚ್ಛೆಗಳನ್ನು ತ್ಯಾಗ ಮಾಡುವಂತಹ ಸತ್ಯ ತಪಸ್ವಿ ಮೂರ್ತಿ ಭವ.

ಹದ್ಧಿನ ಎಲ್ಲಾ ಇಚ್ಛೆಗಳನ್ನು ತ್ಯಾಗ ಮಾಡಿ ಸತ್ಯ-ಸತ್ಯ ತಪಸ್ವೀ ಮೂರ್ತಿಗಳಾಗಿ. ತಪಸ್ವೀ ಮೂರ್ತಿ ಅರ್ಥಾತ್ ಹದ್ಧಿನ ಇಚ್ಛಾ ಮಾತ್ರಂ ಅವಿದ್ಯಾ ರೂಪ. ಯಾರು ತೆಗೆದುಕೊಳ್ಳುವ ಸಂಕಲ್ಪ ಮಾಡುತ್ತಾರೆ ಅವರು ಅಲ್ಪಕಾಲಕ್ಕಾಗಿ ತೆಗೆದುಕೊಳ್ಳುತ್ತಾರೆ. ಆದರೆ ಸದಾಕಾಲಕ್ಕಾಗಿ ಕಳೆದುಕೊಳ್ಳುತ್ತಾರೆ. ತಪಸ್ವಿಗಳಾಗುವುದರಲ್ಲಿ ವಿಶೇಷ ವಿಘ್ನರೂಪ ಇದೇ ಅಲ್ಪಕಾಲದ ಇಚ್ಛೆಯಾಗಿದೆ. ಆದ್ದರಿಂದ ಈಗ ತಪಸ್ವೀ ಮೂರ್ತಿಗಳಾಗುವ ಪುರಾವೆಯನ್ನು ಕೊಡಿ ಅರ್ಥಾತ್ ಹದ್ಧಿನ ಮಾನ್ ಷಾನ್ ನ ಲೇವತಾತನದ ತ್ಯಾಗ ಮಾಡಿ ವಿಧಾತಾ ಆಗಿ. ಯಾವಾಗ ವಿಧಾತಾತನದ ಸಂಸ್ಕಾರ ಇಮರ್ಜ್ ಆಗುವುದು ಆಗ ಅನ್ಯ ಎಲ್ಲಾ ಸಂಸ್ಕಾರಗಳನ್ನು ಸ್ವತಃ ಅಧುಮಿ ಹೋಗಿ ಬಿಡುವುದು.

ಸ್ಲೋಗನ್:
ಕರ್ಮಫಲದ ಸೂಕ್ಷ್ಮ ಕಾಮನೆಗಳನ್ನು ಇಟ್ಟುಕೊಳ್ಳುವುದೂ ಸಹ ಫಲವು ಹಣ್ಣಾಗುವ ಮೊದಲೇ ತಿಂದು ಬಿಡುವ ಹಾಗೆ.