05.04.20    Avyakt Bapdada     Kannada Murli     19.12.85     Om Shanti     Madhuban


ಫಾಲೋ ಫಾದರ್


ಇಂದು ಬಾಪ್ದಾದಾರವರು ಸರ್ವ ಸ್ನೇಹಿ ಮಕ್ಕಳ ಸ್ನೇಹದ ಪ್ರತ್ಯುತ್ತರವನ್ನು ಕೊಡುವ ಸಲುವಾಗಿ ಮಿಲನವಾಗಲು ಬಂದಿದ್ದಾರೆ. ವಿದೇಹಿ ಬಾಪ್ದಾದಾರವರು ದೇಹದ ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಏತಕ್ಕಾಗಿ? ಮಕ್ಕಳನ್ನೂ ವಿದೇಹಿಯನ್ನಾಗಿ ಮಾಡುವ ಸಲುವಾಗಿ. ಹೇಗೆ ತಂದೆಯು ವಿದೇಹಿಯಿದ್ದಾರೆ, ದೇಹದಲ್ಲಿ ಬಂದರೂ ವಿದೇಹಿ ಸ್ವರೂಪದಲ್ಲಿ, ವಿದೇಹಿ ಸ್ಥಿತಿಯ ಅನುಭವವನ್ನು ಮಾಡಿಸುತ್ತಾರೆ. ಹಾಗೆಯೇ ತಾವೆಲ್ಲರೂ ಸಹ ಜೀವನದಲ್ಲಿರುತ್ತಾ, ದೇಹದಲ್ಲಿರುತ್ತಾ, ವಿದೇಹಿ ಆತ್ಮ ಸ್ಥಿತಿಯಲ್ಲಿ ಸ್ಥಿತರಾಗಿದ್ದು, ಈ ದೇಹದ ಮೂಲಕ ಮಾಡಿಸುವವರಾಗಿದ್ದು ಕರ್ಮವನ್ನು ಮಾಡಿಸಿರಿ. ಈ ದೇಹವು ಮಾಡುವವನಾಗಿದೆ. ತಾವು ದೇಹಿ ಮಾಡಿಸುವವರಾಗಿದ್ದೀರಿ. ಇದೇ ಸ್ಥಿತಿಯನ್ನು "ವಿದೇಹಿ ಸ್ಥಿತಿ" ಎಂದು ಹೇಳಲಾಗುತ್ತದೆ. ಇದನ್ನೇ ಫಾಲೋ ಫಾದರ್ ಎಂದು ಹೇಳಲಾಗುತ್ತದೆ. ಸದಾ ಫಾಲೋ ಫಾದರ್ ಮಾಡುವುದಕ್ಕಾಗಿ ತಮ್ಮ ಬುದ್ಧಿಯನ್ನು ಎರಡು ಸ್ಥಿತಿಗಳಲ್ಲಿ ಸ್ಥಿತರಾಗಿರಿ. ತಂದೆಯನ್ನು ಫಾಲೋ ಮಾಡುವ ಸ್ಥಿತಿಯಾಗಿದೆ - ಸದಾ ಅಶರೀರಿ ಭವ, ವಿದೇಹಿ ಭವ, ನಿರಾಕಾರಿ ಭವ! ದಾದಾ ಅರ್ಥಾತ್ ಬ್ರಹ್ಮಾ ತಂದೆಯನ್ನು ಫಾಲೋ ಮಾಡುವುದಕ್ಕಾಗಿ ಸದಾ ಅವ್ಯಕ್ತ ಸ್ಥಿತಿ ಭವ, ಫರಿಶ್ತಾ ಸ್ವರೂಪ ಭವ, ಆಕಾರಿ ಸ್ಥಿತಿ ಭವ. ಇವೆರಡು ಸ್ಥಿತಿಗಳಲ್ಲಿ ಸ್ಥಿತರಾಗುವುದು ಫಾಲೋ ಫಾದರ್ ಮಾಡುವುದಾಗಿದೆ. ಇದರಿಂದ ಕೆಳಗಿನ ವ್ಯಕ್ತ ಭಾವ, ದೇಹಭಾನ, ವ್ಯಕ್ತಿಭಾವ, ಇದರಲ್ಲಿ ಕೆಳಗೆ ಬರಬಾರದು. ವ್ಯಕ್ತಿಭಾವ ಅಥವಾ ವ್ಯಕ್ತಭಾವವು ಕೆಳಗೆ ಕರೆ ತರಲು ಆಧಾರವಾಗಿದೆ, ಆದ್ದರಿಂದ ಇದೆಲ್ಲದರಿಂದ ದೂರವಾಗುವ ಇವೆರಡು ಸ್ಥಿತಿಗಳಲ್ಲಿ ಸದಾ ಇರಿ. ಮೂರನೆಯದು - ಬ್ರಾಹ್ಮಣ ಜನ್ಮವಾಗುತ್ತಿದ್ದಂತೆಯೇ ಬಾಪ್ದಾದಾರವರ ಶಿಕ್ಷಣವು ಸಿಕ್ಕಿದೆ - ಈ ಬೀಳುವ ಸ್ಥಿತಿಯಲ್ಲಿ ಅಥವಾ ಸ್ವಪ್ನದಲ್ಲಿಯೂ ಹೋಗಬಾರದು, ಇದು ಪರರ ಸ್ಥಿತಿಯಾಗಿದೆ. ಹೇಗೆ ಯಾರಾದರೂ ಒಂದುವೇಳೆ ಆಜ್ಞೆಯಿಲ್ಲದೆ ಪರದೇಶಕ್ಕೆ ಹೊರಟು ಹೋದರೆ ಏನಾಗುತ್ತದೆ? ಬಾಪ್ದಾದಾರವರೂ ಸಹ ಈ ಆಜ್ಞೆಯ ರೇಖೆಯನ್ನೆಳೆದಿದ್ದಾರೆ, ಇದರಿಂದ ಹೊರಗೆ ಹೋಗಬಾರದು. ಒಂದುವೇಳೆ ಉಲ್ಲಂಘನೆ ಮಾಡಿದರೆ ಬೇಸರವೂ ಆಗುತ್ತೀರಿ, ಪಶ್ಚಾತ್ತಾಪ ಸಹ ಪಡಬೇಕಾಗುತ್ತದೆ. ಆದ್ದರಿಂದ ಸದಾ ಗೌರವದಲ್ಲಿರುವ, ಸದಾ ಪ್ರಾಪ್ತಿ ಸ್ವರೂಪ ಸ್ಥಿತಿಯಲ್ಲಿ ಸ್ಥಿತರಾಗುವ ಸಹಜ ಸಾಧನವಾಗಿದೆ - "ಫಾಲೋ ಫಾದರ್". ಫಾಲೋ ಫಾದರ್ ಮಾಡುವುದಂತು ಸಹಜವಾಗಿದೆಯಲ್ಲವೆ! ಜೀವನದಲ್ಲಿ ಬಾಲ್ಯದಿಂದ ಫಾಲೋ ಮಾಡುವ ಅನುಭವಿಯಾಗಿದ್ದೀರಿ. ಬಾಲ್ಯದಲ್ಲಿಯೂ ಸಹ ತಂದೆಯು ಮಕ್ಕಳ ಬೆರಳನ್ನಿಡಿದು ನಡೆಯುವುದರಲ್ಲಿ, ಏಳುವ-ಕುಳಿತುಕೊಳ್ಳುವುದರಲ್ಲಿ ಫಾಲೋ ಮಾಡಿಸುತ್ತಾರೆ. ನಂತರ ಯಾವಾಗ ಗೃಹಸ್ಥಿಯಾಗುತ್ತಾರೆ, ಆಗಲೂ ಪತಿಯು ಪತ್ನಿಗೆ ಒಬ್ಬರಿನ್ನೊಬ್ಬರು ಫಾಲೋ ಮಾಡಿ ನಡೆಯುವುದನ್ನು ಕಲಿಸುತ್ತಾರೆ. ನಂತರ ಮುಂದೆ ನಡೆದಂತೆ ಗುರುವನ್ನು ಮಾಡಿಕೊಳ್ಳುತ್ತಾರೆ, ಅಂದಮೇಲೆ ಗುರುವಿಗೆ ಅನುಯಾಯಿಯೇ ಆಗುತ್ತಾರೆ ಅರ್ಥಾತ್ ಫಾಲೋ ಮಾಡುವವರು. ಲೌಕಿಕ ಜೀವನದಲ್ಲಿಯೂ ಆದಿ ಮತ್ತು ಅಂತ್ಯದಲ್ಲಿ ಫಾಲೋ ಮಾಡಬೇಕಾಗುತ್ತದೆ. ಅಲೌಕಿಕ, ಪಾರಲೌಕಿಕ ತಂದೆಯೂ ಸಹ ಒಂದೇ ಒಂದು ಸಹಜ ಮಾತಿನ ಸಾಧನವನ್ನು ತಿಳಿಸುತ್ತಾರೆ - ಏನು ಮಾಡಲಿ, ಹೇಗೆ ಮಾಡಲಿ, ಹೀಗೆ ಮಾಡಲೇ ಅಥವಾ ಹಾಗೆ ಮಾಡಲೇ - ಈ ವಿಸ್ತಾರದಿಂದ ಮುಕ್ತಗೊಳಿಸುತ್ತಾರೆ. ಎಲ್ಲಾ ಪ್ರಶ್ನೆಗಳ ಉತ್ತರವು ಒಂದೇ ಮಾತಿನದಾಗಿದೆ - "ಫಾಲೋ ಫಾದರ್".

ಸಾಕಾರ ರೂಪದಲ್ಲಿಯೂ ನಿಮಿತ್ತವಾಗಿ ಕರ್ಮವನ್ನು ಕಲಿಸುವುದಕ್ಕಾಗಿ ಸಂಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುವಂತಹ ಬ್ರಹ್ಮನ ಆತ್ಮವು ನಿಮಿತ್ತವಾಯಿತು. ಕರ್ಮದಲ್ಲಿ, ಕರ್ಮ ಬಂಧನಗಳಿಂದ ಮುಕ್ತನಾಗುವುದರಲ್ಲಿ, ಕರ್ಮ ಸಂಬಂಧವನ್ನು ನಿಭಾಯಿಸುವುದರಲ್ಲಿ, ದೇಹದಲ್ಲಿರುತ್ತಾ ವಿದೇಹಿ ಸ್ಥಿತಿಯಲ್ಲಿ ಸ್ಥಿತರಾಗುವುದರಲ್ಲಿ, ತನುವಿನ ಬಂಧನಗಳನ್ನು ಮುಕ್ತಗೊಳಿಸುವುದರಲ್ಲಿ, ಮನಸ್ಸಿನ ಲಗನ್ನಿನಲ್ಲಿ ಮಗ್ನರಾಗುವ ಸ್ಥಿತಿಯಲ್ಲಿ, ಧನದ ಒಂದೊಂದು ನಯಾಪೈಸೆಯನ್ನು ಸಫಲ ಮಾಡುವುದರಲ್ಲಿ, ಸಾಕಾರ ಬ್ರಹ್ಮಾರವರು ಸಾಕಾರ ಜೀವನದಲ್ಲಿ ನಿಮಿತ್ತನಾದರು. ಕರ್ಮ ಬಂಧನವಿರುವ ಆತ್ಮವು, ಕರ್ಮಾತೀತನಾಗುವ ಉದಾಹರಣೆಯಾದರು. ಅಂದಮೇಲೆ ಸಾಕಾರ ಜೀವನವನ್ನು ಫಾಲೋ ಮಾಡುವುದು ಸಹಜವಿದೆಯಲ್ಲವೆ. ಇದೇ ಪಾಠವು ಫಾಲೋ ಫಾದರ್ ಆಯಿತು. ಪ್ರಶ್ನೆಯೂ ಸಹ ಭಲೆ ತನುವಿನ ಬಗ್ಗೆ ಕೇಳುತ್ತಾರೆ, ಸಂಬಂಧದ ಬಗ್ಗೆ ಕೇಳುತ್ತಾರೆ ಅಥವಾ ಧನದ ಬಗ್ಗೆ ಕೇಳುತ್ತಾರೆ. ಎಲ್ಲಾ ಪ್ರಶ್ನೆಗಳ ಜವಾಬು ಬ್ರಹ್ಮಾ ತಂದೆಯ ಜೀವನವಾಗಿದೆ. ಹೇಗೆ ಇತ್ತೀಚೆಗೆ ವಿಜ್ಞಾನದವರು ಪ್ರತಿಯೊಂದು ಪ್ರಶ್ನೆಗಳ ಉತ್ತರವನ್ನು ಗಣಕ ಯಂತ್ರದಿಂದ(ಕಂಪ್ಯೂಟರ್) ಕೇಳುತ್ತಾರೆ. ಏಕೆಂದರೆ ತಿಳಿಯುತ್ತಾರೆ - ಮನುಷ್ಯನ ಬುದ್ಧಿಗಿಂತ ಈ ಗಣಕ ಯಂತ್ರವು ಅಕ್ಯುರೇಟ್ ಇದೆ. ಮಾಡಿರುವವರಿಗಿಂತಲೂ ತಯಾರಾದ ವಸ್ತುವನ್ನು ಅಕ್ಯುರೇಟ್ ಎಂದು ತಿಳಿಯುತ್ತಿದ್ದಾರೆ. ಆದರೆ ತಾವು ಶಾಂತಿಯವರಿಗಾಗಿ ಬ್ರಹ್ಮಾರವರ ಜೀವನವೇ ಅಕ್ಯುರೇಟ್ ಗಣಕ ಯಂತ್ರವಾಗಿದೆ. ಆದ್ದರಿಂದ ಏನು, ಹೇಗೆ ಎನ್ನುವುದಕ್ಕೆ ಬದಲು ಜೀವನದ ಗಣಕ ಯಂತ್ರದಿಂದ ನೋಡಿರಿ. ಹೇಗೆ ಮತ್ತು ಏನು ಎನ್ನುವ ಪ್ರಶ್ನೆಗೆ, ಹೀಗೆ ಎನ್ನುವುದರಲ್ಲಿ ಬದಲಾಗಿ ಬಿಡುತ್ತದೆ. ಪ್ರಶ್ನಾರ್ಥಕಕ್ಕೆ ಬದಲಾಗಿ ಪ್ರಸನ್ನಚಿತ್ತರಾಗಿ ಬಿಡುತ್ತೀರಿ. ಪ್ರಶ್ನಚಿತ್ತವು ಏರುಪೇರು ಬುದ್ಧಿಯಾಗಿದೆ. ಆದ್ದರಿಂದ ಪ್ರಶ್ನೆಯ ಚಿಹ್ನೆಯೂ ಸಹ ಡೊಂಕಾಗಿದೆ. ಪ್ರಶ್ನೆಯನ್ನು ಬರೆಯುತ್ತೀರೆಂದರೆ ಅಂಕುಡೊಂಕಾಗಿದೆಯಲ್ಲವೆ. ಮತ್ತು ಪ್ರಸನ್ನಚಿತ್ತವು ಬಿಂದಿ ಆಗಿದೆ. ಅಂದಮೇಲೆ ಬಿಂದಿಯಲ್ಲಿ(ಪೂರ್ಣ ವಿರಾಮ ಚಿಹ್ನೆ) ಯಾವುದೇ ಅಂಕುಡೊಂಕು ಇದೆಯೇ? ನಾಲ್ಕೂ ಕಡೆಯಿಂದ ಒಂದೇ ಇದೆ. ಬಿಂದಿಯನ್ನು ಯಾವುದೇ ಕಡೆಯಿಂದ ನೋಡಿದರೂ ಸೀದಾ ನೋಡುವಿರಿ. ಮತ್ತು ಒಂದೇ ರೀತಿ ನೋಡುವಿರಿ. ಭಲೆ ಉಲ್ಟಾ ನೋಡಿ ಅಥವಾ ಸುಲ್ಟಾ ನೋಡಿ. ಪ್ರಸನ್ನಚಿತ್ತ ಅರ್ಥಾತ್ ಏಕರಸ ಸ್ಥಿತಿಯಲ್ಲಿ ಒಬ್ಬ ತಂದೆಯನ್ನು ಫಾಲೋ ಮಾಡುವವರು. ನಂತರವೂ ಸಾರವೇನು ಬರುತ್ತದೆ? ಫಾಲೋ ಬ್ರಹ್ಮಾ ಸಾಕಾರ ರೂಪ ತಂದೆ ಅಥವಾ ಫಾಲೋ ಆಕಾರ ರೂಪ ಬ್ರಹ್ಮಾ ತಂದೆ. ಭಲೆ ಬ್ರಹ್ಮಾ ತಂದೆಯನ್ನು ಫಾಲೋ ಮಾಡಿರಿ, ಅಥವಾ ಶಿವ ತಂದೆಯನ್ನು ಫಾಲೋ ಮಾಡಿರಿ. ಆದರೆ ಶಬ್ಧವು ಅದೇ ಇದೇ - ಫಾಲೋ ಫಾದರ್. ಆದ್ದರಿಂದ ಬ್ರಹ್ಮಾರವರ ಮಹಿಮೆಯು "ಬ್ರಹ್ಮಾ ವಂದೇ ಜಗದ್ಗುರು" ಎಂದು ಹೇಳುತ್ತಾರೆ ಏಕೆಂದರೆ ಫಾಲೋ ಮಾಡುವುದಕ್ಕಾಗಿ ಸಾಕಾರ ರೂಪದಲ್ಲಿ ಬ್ರಹ್ಮಾರವರೇ ಸಾಕಾರ ಜಗತ್ತಿಗಾಗಿ ನಿಮಿತ್ತರಾದರು. ತಾವೆಲ್ಲರೂ ಸಹ ತಮ್ಮನ್ನು ಶಿವ ಕುಮಾರ, ಶಿವ ಕುಮಾರಿ ಎಂದು ಹೇಳಿಕೊಳ್ಳುವುದಿಲ್ಲ. ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯೆಂದೇ ಹೇಳಿಕೊಳ್ಳುತ್ತೀರಿ. ಸಾಕಾರ ರಚನೆಗೆ ನಿಮಿತ್ತವಾಗಿರುವ ಸಾಕಾರ ಶ್ರೇಷ್ಠ ಜೀವನದ ಉದಾಹರಣೆಯು ಬ್ರಹ್ಮಾರವರೇ ಆಗುತ್ತಾರೆ. ಆದ್ದರಿಂದ ಸದ್ಗುರು ಎಂದು ಶಿವ ತಂದೆಗೆ ಹೇಳುತ್ತಾರೆ, ಗುರು ಎಂದು ಕಲಿಸಿಕೊಡುವವರಿಗೆ ಹೇಳಲಾಗುತ್ತದೆ. ಜಗತ್ತಿನ ಮುಂದೆ ಕಲಿಸುವವರು ಬ್ರಹ್ಮಾರವರೇ ನಿಮಿತ್ತನಾಗುತ್ತಾರೆ. ಅಂದಮೇಲೆ ಪ್ರತೀ ಕರ್ಮದಲ್ಲಿ ಫಾಲೋ ಮಾಡಬೇಕು. ಬ್ರಹ್ಮಾರವರನ್ನು ಈ ಲೆಕ್ಕದಿಂದ ಜಗದ್ಗುರು ಎಂದು ಹೇಳಲಾಗುತ್ತದೆ. ಆದ್ದರಿಂದ ಜಗತ್ ಬ್ರಹ್ಮಾರವರಿಗೆ ವಂದನೆಯನ್ನು ಮಾಡುತ್ತಾರೆ. ಜಗತ್ಪಿತನ ಬಿರುದೂ ಸಹ ಬ್ರಹ್ಮಾರವರದಾಗಿದೆ. ವಿಷ್ಣುವಿಗೆ ಅಥವಾ ಶಂಕರನಿಗೆ ಪ್ರಜಾಪಿತನೆಂದು ಹೇಳುವುದಿಲ್ಲ. ಅವರು ಮಾಲೀಕನ ಲೆಕ್ಕದಿಂದ ಪಿತನೆಂದು ಹೇಳಿ ಬಿಡುತ್ತಾರೆ. ಆದರೆ ಇರುವುದು ತಂದೆಯಾಗಿ. ಜಗತ್ತಿಗೆ ಪ್ರಿಯನೆಷ್ಟಾಗಿದ್ದಾರೆಯೋ ಅಷ್ಟೇ ಭಿನ್ನವಾಗಿ, ಈಗ ಅವ್ಯಕ್ತ ರೂಪದಲ್ಲಿ ಫಾಲೋ ಅವ್ಯಕ್ತ ಸ್ಥಿತಿ ಭವದ ಪಾಠವನ್ನು ಓದಿಸುತ್ತಿದ್ದಾರೆ. ತಿಳಿಯಿತೆ - ಯಾವುದೇ ಆತ್ಮನು ಹೀಗೆ ಇಷ್ಟು ಭಿನ್ನವಾಗುವುದಿಲ್ಲ. ಈ ಭಿನ್ನವಾಗಿರುವ ಬ್ರಹ್ಮಾನ ಕಥೆಯನ್ನು ಮತ್ತೆಂದಾದರೂ ತಿಳಿಸುತ್ತೇವೆ.

ಇಂದು ಈ ಶರೀರವನ್ನೂ ಸಂಭಾಲನೆ ಮಾಡಬೇಕು. ಯಾವಾಗ ಲೋನ್ ತೆಗೆದುಕೊಳ್ಳುತ್ತಾರೆ, ಆಗ ಒಳ್ಳೆಯ ಮಾಲೀಕನು ಅವರೇ ಆಗುತ್ತಾರೆ, ಯಾರು ಶರೀರವನ್ನು ಸ್ಥಾನವನ್ನು ಶಕ್ತಿಯನುಸಾರ ಕಾರ್ಯದಲ್ಲಿ ಉಪಯೋಗಿಸುತ್ತಾರೆ. ಆದರೂ ಬಾಪ್ದಾದಾರವರಿಬ್ಬರ ಶಕ್ತಿಶಾಲಿ ಪಾತ್ರವನ್ನು ನಡೆಸುವುದಕ್ಕೆ ರಥವು ನಿಮಿತ್ತವಾಯಿತು. ಇದೂ ಸಹ ಡ್ರಾಮಾದಲ್ಲಿ ವಿಶೇಷವಾದ ವರದಾನವಿದೆ. ಕೆಲವು ಮಕ್ಕಳಿಗೆ ಪ್ರಶ್ನೆಯೂ ಉತ್ಪನ್ನವಾಗುತ್ತದೆ - ಇದೇ ರಥವೇಕೆ ನಿಮಿತ್ತವಾಯಿತು. ಅನ್ಯರಿಗೇನು, ಇವರಿಗೂ (ಗುಲ್ಜಾರ್ ದಾದಿಯವರಿಗೆ) ಉತ್ಪನ್ನವಾಗುತ್ತದೆ. ಆದರೆ ಹೇಗೆ ಬ್ರಹ್ಮಾರವರೂ ಸಹ ತನ್ನ ಜನ್ಮಗಳನ್ನು ತಿಳಿದುಕೊಂಡಿರಲಿಲ್ಲ ಅಲ್ಲವೆ, ಇವರೂ ಸಹ ತನ್ನ ವರದಾನವನ್ನು ಮರೆತು ಬಿಟ್ಟಿದ್ದಾರೆ. ಇದು ವಿಶೇಷವಾಗಿ ಸಾಕಾರ ಬ್ರಹ್ಮಾರವರ ಆದಿಯ ಸಾಕ್ಷಾತ್ಕಾರ ಪಾತ್ರದ ಸಮಯದಲ್ಲಿ ಮಗುವಿಗೆ ವರದಾನವು ಸಿಕ್ಕಿದೆ. ಬ್ರಹ್ಮಾ ತಂದೆಯ ಜೊತೆ ಆದಿ ಸಮಯದಲ್ಲಿ ಏಕಾಂತತೆಯ ತಪಸ್ಯಾ ಸ್ಥಾನದಲ್ಲಿ, ಈ ಆತ್ಮವು ವಿಶೇಷವಾಗಿ ಸಾಕ್ಷಾತ್ಕಾರದ ಪಾತ್ರವನ್ನು ನೋಡಿ ಬ್ರಹ್ಮಾ ತಂದೆಯು ಮಗುವಿನ ಸರಳ ಸ್ವಭಾವ, ಮುಗ್ಧ ಜೀವನದ ವಿಶೇಷತೆಯನ್ನು ನೋಡಿ ಈ ವರದಾನವನ್ನು ಕೊಟ್ಟಿದ್ದರು - ಏನೆಂದರೆ ಹೇಗೆ ಈಗ ಈ ಪಾತ್ರದಲ್ಲಿ ಆದಿಯಲ್ಲಿ ಬ್ರಹ್ಮಾ ತಂದೆಯ ಜೊತೆಗಾರನೂ ಆದಿರಿ ಮತ್ತು ಜೊತೆಗಾರನೂ ಆಗಿದ್ದೀರಿ, ಹಾಗೆಯೇ ಮುಂದೆ ನಡೆದಂತೆ ತಂದೆಗೆ ಜೊತೆಗಾರನಾಗುವ, ಸಮಾನರಾಗುವ ಕರ್ತವ್ಯವನ್ನೂ ಸಂಭಾಲನೆ ಮಾಡುವರು. ಬ್ರಹ್ಮಾ ತಂದೆಯ ಸಮಾನ ಸೇವೆಯಲ್ಲಿ ಪಾತ್ರವನ್ನಭಿನಯಿಸುವರು. ಅಂದಮೇಲೆ ಅದೇ ವರದಾನವು ಅದೃಷ್ಟ ರೇಖೆಯಾಗಿ ಬಿಟ್ಟಿತು. ಮತ್ತು ಬ್ರಹ್ಮಾ ತಂದೆಯ ಸಮಾನವಾಗಿ ರಥವಾಗುವ ಪಾತ್ರವನ್ನಭಿನಯಿಸುವುದು - ಈ ನೊಂದಣಿಯು ನೊಂದಣಿಯಾಗಿದೆ. ಈ ಪಾತ್ರವನ್ನಭಿನಯಿಸುವುದಕ್ಕಾಗಿ ಮಗುವಿಗೆ ಬಾಪ್ದಾದಾರವರು ಶುಭಾಷಯಗಳನ್ನು ಕೊಡುತ್ತಾರೆ. ಇಷ್ಟೂ ಸಮಯ, ಇಷ್ಟು ಶಕ್ತಿಯನ್ನು ಅಡ್ಜೆಸ್ಟ್ ಮಾಡುವುದು, ಈ ಅಡ್ಜೆಸ್ಟ್ ಮಾಡುವ ವಿಶೇಷತೆಯ ಲಿಫ್ಟ್ ನ ಕಾರಣದಿಂದ ಎಕ್ಸ್ ಟ್ರಾ ಗಿಫ್ಟ್ ಇದೆ. ಆದರೂ ಬಾಪ್ದಾದಾರವರು ಶರೀರದ, ಎಲ್ಲದರ ಬಗ್ಗೆಯೂ ನೋಡಬೇಕಾಗುತ್ತದೆ. ವಾದ್ಯವು (ರಥವು) ಹಳೆಯದಾಗಿದೆ ಮತ್ತು ನಡೆಸುವುದರಲ್ಲಿ ಶಕ್ತಿಶಾಲಿಯಾಗಿದೆ. ಆದರೂ ಹಾಂ ಜಿ, ಹಾಂ ಜಿಯ ಪಾಠದ ಕಾರಣದಿಂದ ಚೆನ್ನಾಗಿ ನಡೆಯುತ್ತಿದೆ. ಆದರೆ ಬಾಪ್ದಾದಾರವರೂ ಸಹ ವಿಧಿ ಮತ್ತು ಯುಕ್ತಿಯಿಂದಲೇ ಕಾರ್ಯವನ್ನು ನಡೆಸುತ್ತಿದ್ದಾರೆ. ಮಿಲನವಾಗುವ ಪ್ರತಿಜ್ಞೆಯಂತು ಇದೆ. ಆದರೆ ವಿಧಿಯು ಸಮಯದನುಸಾರವಾಗಿ ಪರಿವರ್ತನೆಯಾಗುತ್ತಿರುತ್ತದೆ. ಈಗಂತು 18ನೇ ವರ್ಷದಲ್ಲಿ ಎಲ್ಲವನ್ನೂ ತಿಳಿಸುತ್ತಾರೆ. 17ನ್ನಂತು ಪೂರ್ಣಗೊಳಿಸಲೇಬೇಕು. ಒಳ್ಳೆಯದು.

ಎಲ್ಲರೂ ಫಾಲೋಫಾದರ್ ಮಾಡುವಂತಹ ಸಹಜ ಪುರುಷಾರ್ಥಿ ಮಕ್ಕಳಿಗೆ, ಸದಾ ಪ್ರಸನ್ನಚಿತ್ತ ವಿಶೇಷ ಆತ್ಮರಿಗೆ, ಸದಾ ಮಾಡಿಸುವವರಾಗಿ ದೇಹದಿಂದ ಕರ್ಮವನ್ನು ಮಾಡಿಸುವಂತಹ ಮಾಸ್ಟರ್ ರಚೈತ ಮಕ್ಕಳಿಗೆ, ಬಾಪ್ದಾದಾರವರ ಸ್ನೇಹದ, ಜೀವನದ ಮೂಲಕ ಪ್ರತ್ಯುತ್ತರವನ್ನು ಕೊಡುವಂತಹ ಇಂತಹ ಮಕ್ಕಳಿಗೆ ಸ್ನೇಹ ಸಂಪನ್ನ ನೆನಪು-ಪ್ರೀತಿ ಹಾಗೂ ನಮಸ್ತೆ.

ಟೀಚರ್ಸ್ ಸಹೋದರಿಯರೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ -

1. ಟೀಚರ್ಸ್ ಸದಾ ಸ್ವ ಸ್ಥಿತಿಯಿಂದ ಸ್ವಯಂ ಸಹ ಮುಂದುವರೆಯುವವರು ಮತ್ತು ಅನ್ಯರನ್ನೂ ಮುಂದುವರೆಸುವವರು, ವೃದ್ಧಿಯಾಗುವುದು ಮತ್ತು ವೃದ್ಧಿ ಮಾಡಬೇಕಾಗಿದೆ, ಇದೇ ಟೀಚರ್ಸ್ನ ವಿಶೇಷ ಲಕ್ಷ್ಯವಾಗಿದೆ ಮತ್ತು ಲಕ್ಷಣವೂ ಆಗಿದೆ. ಸದಾ ತಂದೆಯ ಸಮಾನ ಮಾಸ್ಟರ್ ಸರ್ವಶಕ್ತಿವಂತ ಆತ್ಮನಾಗಿದ್ದು ಮುಂದುವರೆಯುತ್ತಾ ಮತ್ತು ಮುಂದುವರೆಸುತ್ತಾ ಸಾಗಿರಿ. ತ್ಯಾಗದಿಂದ ಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಆತ್ಮರಾಗಿದ್ದೀರಿ, ಸದಾ ತ್ಯಾಗವೇ ಭಾಗ್ಯವಾಗಿದೆ. ಶ್ರೇಷ್ಠ ಭಾಗ್ಯ, ಶ್ರೇಷ್ಠ ಕರ್ಮ ಮತ್ತು ಶ್ರೇಷ್ಠ ಫಲ.... ಸದಾ ಈ ಪ್ರತ್ಯಕ್ಷ ಫಲದಿಂದ ಸ್ವಯಂ ಹಾಗೂ ಅನ್ಯರನ್ನು ಹಾರಿಸುತ್ತಾ ನಡೆಯಿರಿ. ತಮ್ಮನು ಪ್ರತೀ ಕರ್ಮದಲ್ಲಿ ನಿಮಿತ್ತರೆಂದು ತಿಳಿಯುವುದೇ ಶ್ರೇಷ್ಠರಾಗುವ ಸಹಜ ಸಾಧನವಾಗಿದೆ. ಸೇವಾಧಾರಿಯಾಗುವುದೂ ಸಹ ಸಂಗಮಯುಗದಲ್ಲಿ ವಿಶೇಷ ಭಾಗ್ಯದ ಚಿಹ್ನೆಯಾಗಿದೆ. ಸೇವೆ ಮಾಡುವುದು ಅರ್ಥಾತ್ ಜನ್ಮ-ಜನ್ಮಕ್ಕಾಗಿ ಸಂಪನ್ನರಾಗುವುದು ಏಕೆಂದರೆ ಸೇವೆಯಿಂದ ಜಮಾ ಆಗುತ್ತದೆ ಮತ್ತು ಜಮಾ ಆಗಿರುವುದನ್ನು ಅನೇಕ ಜನ್ಮಗಳಲ್ಲಿ ಅನುಭವಿಸುತ್ತಿರುತ್ತೀರಿ. ಒಂದುವೇಳೆ ಸೇವೆಯಲ್ಲಿ ಜಮಾ ಆಗುತ್ತಿದೆ - ಈ ಸ್ಮೃತಿಯಿದ್ದರೆ ಸದಾ ಖುಷಿಯಲ್ಲಿರುತ್ತೀರಿ. ಮತ್ತು ಖುಷಿಯ ಕಾರಣದಿಂದ ಎಂದಿಗೂ ಸುಸ್ತಾಗುವುದಿಲ್ಲ. ಸೇವೆಯು ಅವಿಶ್ರಾಂತರನ್ನಾಗಿ ಮಾಡುವಂತದ್ದಾಗಿದೆ. ಖುಷಿಯ ಅನುಭವವನ್ನು ಮಾಡಿಸುವಂತದ್ದಾಗಿದೆ.

ಸೇವಾಧಾರಿ ಅರ್ಥಾತ್ ತಂದೆಯ ಸಮಾನ. ಅಂದಾಗ ಸಮಾನತೆಯನ್ನು ಪರಿಶೀಲನೆ ಮಾಡುತ್ತಾ ತಂದೆಯ ಸಮಾನರಾಗಿ ಅನ್ಯರನ್ನೂ ತಂದೆಯ ಸಮಾನರನ್ನಾಗಿ ಮಾಡುತ್ತಾ ಸಾಗಿರಿ. ಸೇವಾಕೇಂದ್ರದ ವಾಯುಮಂಡಲವನ್ನು ಶಕ್ತಿಶಾಲಿ ಮಾಡುವುದಕ್ಕಾಗಿ ಒಂದೆರಡು ಬಾರಿ ಪರಿಕ್ರಮಣ ಹಾಕುತ್ತಾ, ಶಕ್ತಿಶಾಲಿ ನೆನಪಿನ ಅನುಭೂತಿಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಿರಿ. ಶಕ್ತಿಶಾಲಿ ವಾತಾವರಣವು ಕೆಲಮಾತುಗಳಿಂದ ಸ್ವತಹವಾಗಿಯೇ ದೂರ ಮಾಡಿ ಬಿಡುತ್ತದೆ. ಈಗ ಸ್ವಯಂ ಕ್ವಾಲಿಟಿಯಿರುವವರಾಗಿದ್ದು ಕ್ವಾಲಿಟಿಯಿರುವವರನ್ನಾಗಿ ಮಾಡುತ್ತಾ ಸಾಗಿರಿ. ಒಳ್ಳೆಯದು.

2. ಎಲ್ಲರೂ ಸ್ವಯಂನ್ನು ಎಂತಹ ಮಣಿ ಎಂದು ತಿಳಿಯುತ್ತೀರಿ? (ಸಂತುಷ್ಟ ಮಣಿ) ಇಂದಿನ ಸಮಯದಲ್ಲಿ ವಿಶೇಷವಾಗಿ ಸಂತುಷ್ಟತೆಯದೇ ಅವಶ್ಯಕತೆಯಿದೆ. ಪೂಜೆಯೂ ಹೆಚ್ಚಾಗಿ ಯಾವ ದೇವಿಯದಾಗುತ್ತದೆ? ಸಂತೋಷಿ ದೇವಿ. ಮತ್ತು ಸಂತೋಷಿಯನ್ನು ಸಂತೋಷ ಪಡಿಸುವುದೂ ಸಹಜವಾಗುತ್ತದೆ. ಸಂತೋಷಿಯು ಬೇಗನೆ ಸಂತುಷ್ಟವಾಗಿ ಬಿಡುತ್ತಾಳೆ. ಸಂತೋಷಿಯ ಪೂಜೆಯು ಏಕೆ ಆಗುತ್ತದೆ? ಏಕೆಂದರೆ ಇಂದಿನ ಸಮಯದಲ್ಲಿ ಬಹಳ ಒತ್ತಡವಿದೆ, ಪರಿಸ್ಥಿತಿಗಳು ಬಹಳಷ್ಟಿವೆ, ಇದರ ಕಾರಣದಿಂದ ಅಸಂತುಷ್ಟತೆಯು ಹೆಚ್ಚಾಗುತ್ತಿದೆ. ಆದ್ದರಿಂದ ಸಂತುಷ್ಟವಾಗಿರುವ ಸಾಧನವನ್ನು ಎಲ್ಲರೂ ಯೋಚಿಸುತ್ತಾರೆ. ಆದರೆ ಮಾಡಲು ಸಾಧ್ಯವಾಗುತ್ತಿಲ್ಲ. ಅಂದಮೇಲೆ ಇಂತಹ ಸಮಯದಲ್ಲಿ ತಾವೆಲ್ಲರೂ ಸಂತುಷ್ಟ ಮಣಿಗಳಾಗಿ ಸಂತುಷ್ಟತೆಯ ಪ್ರಕಾಶತೆಯನ್ನು ಕೊಡಿ. ತಮ್ಮ ಸಂತುಷ್ಟತೆಯ ಪ್ರಕಾಶತೆಯಿಂದ ಅನ್ಯರನ್ನೂ ಸಂತುಷ್ಟರನ್ನಾಗಿ ಮಾಡಿರಿ. ಮೊದಲು ತಮ್ಮಿಂದ ತಾವು ಸಂತುಷ್ಟವಾಗಿರಿ, ನಂತರ ಸೇವೆಯಲ್ಲಿ ಸಂತುಷ್ಟವಾಗಿರಿ, ನಂತರ ಸಂಬಂಧದಲ್ಲಿ ಸಂತುಷ್ಟವಾಗಿರಿ ಆಗಲೇ ಸಂತುಷ್ಟ ಮಣಿಯೆಂದು ಕರೆಸಿಕೊಳ್ಳುತ್ತೀರಿ. ಸಂತುಷ್ಟತೆಯಲ್ಲಿಯೂ ಮೂರು ಸರ್ಟಿಫಿಕೇಟ್ ಇರಬೇಕು. ತಾವು ತಮ್ಮಿಂದ, ಸೇವೆಯಿಂದ ನಂತರ ಜೊತೆಗಾರರಿಂದ - ಈ ಮೂರು ಸರ್ಟಿಫಿಕೇಟ್ಗಳನ್ನು ತೆಗೆದುಕೊಂಡಿದ್ದೀರಲ್ಲವೆ. ಚೆನ್ನಾಗಿದೆ, ಆದರೂ ಪ್ರಪಂಚದ ಏರುಪೇರುಗಳಿಂದ ಆಚೆಬಂದು ಅಚಲಘರ್ನಲ್ಲಿ(ಮಧುಬನ) ತಲುಪಿ ಬಿಟ್ಟಿದ್ದೀರಿ. ಇದು ತಂದೆಯ ಸ್ಥಾನ ಅಚಲ್ಘರ್ ಆಗಿದೆ. ಅಂದಮೇಲೆ ಅಚಲ್ಘರ್ನಲ್ಲಿ ತಲುಪುವುದು - ಇದೂ ಸಹ ಶ್ರೇಷ್ಠ ಭಾಗ್ಯದ ಚಿಹ್ನೆಯಾಗಿದೆ. ತ್ಯಾಗ ಮಾಡಿದಿರಿ ಆದ್ದರಿಂದ ಅಚಲ್ಘರ್ನಲ್ಲಿ ತಲುಪಿದ್ದೀರಿ. ಭಾಗ್ಯವಂತರಾಗಿ ಬಿಟ್ಟಿರಿ. ಆದರೆ ಭಾಗ್ಯದ ರೇಖೆಯನ್ನು ಇನ್ನೂ ಎಷ್ಟು ಉದ್ದನೆಯದಾಗಿ ಎಳೆಯಬೇಕೋ ಅಷ್ಟೂ ಎಳೆಯಬಹುದು. ಭಾಗ್ಯವಂತರ ಲಿಸ್ಟ್ನಲ್ಲಂತು ಬಂದು ಬಿಟ್ಟಿರಿ. ಏಕೆಂದರೆ ಭಗವಂತ ಮಕ್ಕಳಾಗಿ ಬಿಟ್ಟಿರಿ ಅಂದಮೇಲೆ ಭಾಗ್ಯವಂತರಾಗಿ ಬಿಟ್ಟಿರಿ ಮತ್ತು ಎಲ್ಲರನ್ನು ದೂರ ಮಾಡಿಕೊಂಡು ಒಬ್ಬರನ್ನು ತಮ್ಮವರನ್ನಾಗಿ ಮಾಡಿಕೊಂಡಿರಿ, ಅಂದಾಗ ಭಾಗ್ಯವಂತರಾಗಿ ಬಿಟ್ಟಿರಿ. ಬಾಪ್ದಾದಾರವರು ಮಕ್ಕಳ ಈ ಸಾಹಸವನ್ನು ನೋಡಿ ಖುಷಿಯಾಗಿದ್ದಾರೆ. ಏನೇ ಆಗಲಿ, ಆದರೂ ತ್ಯಾಗ ಮತ್ತು ಸೇವೆಯ ಸಾಹಸದಲ್ಲಿ ಶ್ರೇಷ್ಠವಾಗಿದ್ದೀರಿ. ಕಿರಿಯರಿರಬಹುದು ಅಥವಾ ಹೊಸಬರಿರಬಹುದು ಆದರೆ ಬಾಪ್ದಾದಾರವರು ತ್ಯಾಗ ಮತ್ತು ಸಾಹಸಕ್ಕಾಗಿ ಶುಭಾಷಯಗಳನ್ನು ಕೊಡುತ್ತಾರೆ. ಅದೇ ಗೌರವದಿಂದ ಬಾಪ್ದಾದಾರವರು ನೋಡುತ್ತಾರೆ. ನಿಮಿತ್ತರಾಗುವುದರ ಮಹತ್ವಿಕೆಯೂ ಇದೆ. ಇದೇ ಮಹತ್ವದಿಂದ ಸದಾ ಮುಂದುವರೆಯುತ್ತಾ ವಿಶ್ವದಲ್ಲಿ ಮಹಾನ್ ಆತ್ಮರಾಗಿ ಪ್ರಸಿದ್ಧರಾಗಿ ಬಿಡುತ್ತೀರಿ. ಅಂದಮೇಲೆ ತಮ್ಮ ಮಹಾನತೆಯನ್ನಂತು ತಿಳಿದಿದ್ದೀರಲ್ಲವೆ! ಎಷ್ಟು ಮಹಾನರೋ ಅಷ್ಟು ನಿರ್ಮಾಣರು. ಹೇಗೆ ಫಲ ಕೊಡುವ ವೃಕ್ಷದ ಚಿಹ್ನೆಯಾಗಿದೆ - ಬಾಗುವುದು. ಹಾಗೆಯೇ ಯಾರು ನಿರ್ಮಾಣರಾಗಿರುತ್ತಾರೆಯೋ ಅವರೇ ಪ್ರತ್ಯಕ್ಷ ಫಲವನ್ನು ಅನುಭವಿಸುವವರಾಗಿದ್ದಾರೆ. ಸಂಗಮಯುಗದ ವಿಶೇಷತೆಯೇ ಇದಾಗಿದೆ. ಒಳ್ಳೆಯದು.

ಕುಮಾರರೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ -

ಕುಮಾರ ಅರ್ಥಾತ್ ಬಲಹೀನತೆಗಳಿಗೆ ಸದಾಕಾಲಕ್ಕಾಗಿ ವಿಚ್ಛೇದನವನ್ನು ಕೊಡುವವರು. ಅರ್ಧಕಲ್ಪಕ್ಕಾಗಿ ಬಲಹೀನತೆಗಳಿಗೆ ವಿಚ್ಛೇದನವನ್ನು ಕೊಟ್ಟಿದ್ದೀರಲ್ಲವೆ ಅಥವಾ ಈಗಲೂ ಕೊಟ್ಟಿಲ್ಲವೇ? ಯಾರು ಸದಾ ಸಮರ್ಥ ಆತ್ಮರಾಗಿದ್ದಾರೆಯೋ ಅವರ ಮುಂದೆ ಬಲಹೀನತೆಗಳು ಬರಲು ಸಾಧ್ಯವಿಲ್ಲ. ಸದಾ ಸಮರ್ಥರಾಗಿರುವುದು ಅರ್ಥಾತ್ ಬಲಹೀನತೆಯನ್ನು ಸಮಾಪ್ತಿಗೊಳಿಸುವುದು. ಇಂದು ಸಮರ್ಥ ಆತ್ಮರು ತಂದೆಗೂ ಪ್ರಿಯರಾಗಿದ್ದಾರೆ. ಪರಿವಾರಕ್ಕೂ ಪ್ರಿಯರಾಗಿದ್ದಾರೆ. ಕುಮಾರ ಅರ್ಥಾತ್ ತಮ್ಮ ಪ್ರತೀ ಕರ್ಮದ ಮೂಲಕ ಅನೇಕರಲ್ಲಿ ಶ್ರೇಷ್ಠ ಕರ್ಮದ ರೇಖೆಯನ್ನೆಳೆಯುವವರು. ಸ್ವಯಂನ ಕರ್ಮವು ಅನ್ಯರಲ್ಲಿ ಕರ್ಮದ ರೇಖೆಯನ್ನೆಳೆಯುವುದರಲ್ಲಿ ನಿಮಿತ್ತವಾಗಿ ಬಿಡುತ್ತದೆ. ಇಂತಹ ಸೇವಾಧಾರಿಯಾಗಿದ್ದೀರಿ. ಅಂದಮೇಲೆ ಪ್ರತೀ ಕರ್ಮದಲ್ಲಿ ಪರಿಶೀಲನೆ ಮಾಡಿರಿ – ಪ್ರತೀ ಕರ್ಮವು ಹೀಗೆ ಸ್ಪಷ್ಟವಾಗಿದೆಯೋ, ಅದರಿಂದ ಅನ್ಯರಿಗೂ ಕರ್ಮದ ರೇಖೆಯು ಸ್ಪಷ್ಟವಾಗಿ ಕಾಣಿಸಲಿ. ಇಂತಹ ಶ್ರೇಷ್ಠ ಕರ್ಮದ ಶ್ರೇಷ್ಠ ಖಾತೆಯನ್ನು ಸದಾ ಜಮಾ ಮಾಡಿಕೊಳ್ಳುವ ವಿಶೇಷ ಆತ್ಮರು - ಇವರಿಗೆ ಸತ್ಯ ಸೇವಾಧಾರಿ ಎಂದು ಹೇಳಲಾಗುತ್ತದೆ. ನೆನಪು ಮತ್ತು ಸೇವೆ - ಇದೇ ಸದಾ ಮುಂದುವರೆಯುವ ಸಾಧನವಾಗಿದೆ. ನೆನಪು ಶಕ್ತಿಶಾಲಿಯನ್ನಾಗಿ ಮಾಡುತ್ತದೆ ಮತ್ತು ಸೇವೆಯು ಖಜಾನೆಗಳಿಂದ ಸಂಪನ್ನಗೊಳಿಸುತ್ತದೆ. ನೆನಪು ಮತ್ತು ಸೇವೆಯಿಂದ ಮುಂದುವರೆಯುತ್ತಿರಿ ಮತ್ತು ಮುಂದುವರೆಸುತ್ತಾ ಸಾಗಿರಿ. ಒಳ್ಳೆಯದು.

ವರದಾನ:  
ಬ್ರಹ್ಮಾ ತಂದೆಯ ಸಮಾನ ಶ್ರೇಷ್ಠಾತಿ ಶ್ರೇಷ್ಠ ಚಹರೆಯನ್ನಾಗಿ ಮಾಡಿಕೊಳ್ಳುವಂತಹ ಪರೋಪಕಾರಿ ಭವ.

ಶ್ರೇಷ್ಠ ಸ್ಮೃತಿ ಮತ್ತು ಶ್ರೇಷ್ಠ ಕರ್ಮದ ಮೂಲಕ ಅದೃಷ್ಟದ ಚಹರೆಯಂತು ಎಲ್ಲಾ ಮಕ್ಕಳಿಗೂ ಮಾಡಲಾಗಿದೆ. ಈಗ ಕೇವಲ ಲಾಸ್ಟ್ ಟಚಿಂಗ್ ಸಂಪೂರ್ಣತೆಯದು ಇದೆ ಅಥವಾ ಬ್ರಹ್ಮಾ ತಂದೆಯ ಸಮಾನ ಶ್ರೇಷ್ಠಾತಿ ಶ್ರೇಷ್ಠರಾಗುವುದು ಇದೆ, ಇದಕ್ಕಾಗಿ ಪರೋಪಕಾರಿ ಆಗಿರಿ ಅರ್ಥಾತ್ ಸ್ವಾರ್ಥ ಭಾವದಿಂದ ಸದಾ ಮುಕ್ತ ಆಗಿರಿ. ಪ್ರತೀ ಪರಿಸ್ಥಿತಿಯಲ್ಲಿ, ಪ್ರತೀ ಕಾರ್ಯದಲ್ಲಿ, ಪ್ರತಿಯೊಂದು ಸಹಯೋಗಿ ಸಂಘಟನೆಯಲ್ಲಿ ಎಷ್ಟು ನಿಸ್ವಾರ್ಥತೆಯು ಇರುತ್ತದೆಯೋ, ಅಷ್ಟೇ ಪರ-ಉಪಕಾರಿಯಾಗಲು ಸಾಧ್ಯವಾಗುವುದು. ಸದಾ ಸ್ವಯಂನ್ನು ಸಂಪನ್ನನೆಂದು ಅನುಭವ ಮಾಡುವಿರಿ. ಸದಾ ಪ್ರಾಪ್ತಿ ಸ್ವರೂಪದ ಸ್ಥಿತಿಯಲ್ಲಿ ಸ್ಥಿತರಾಗಿರುತ್ತೀರಿ. ಸ್ವಯಂಗಾಗಿ ಏನನ್ನೂ ಸ್ವೀಕರಿಸುವುದಿಲ್ಲ.

ಸ್ಲೋಗನ್:
ಸರ್ವಸ್ವ ತ್ಯಾಗಿ ಆಗುವುದರಿಂದಲೇ ಸರಳತೆ ಹಾಗೂ ಸಹನಶೀಲತೆಯ ಗುಣವು ಬರುತ್ತದೆ.


05-04-2020 ಫಾಲೋ ಫಾದರ್ ಮುರಳಿ ಪ್ರಶ್ನೆಗಳು:

1. ಬಾಪ್ ದಾದಾರವರು ದೇಹದ ಆಧಾರವನ್ನು ಏಕೆ ತೆಗೆದುಕೊಳ್ಳುತ್ತಾರೆ?

ಉ: ಮಕ್ಕಳನ್ನು ವಿದೇಹಿಗಳನ್ನಾಗಿ ಮಾಡಲು ಬಾಪ್ ದಾದಾರವರು ದೇಹದ ಆಧಾರವನ್ನು ತೆಗೆದುಕೊಳ್ಳುತ್ತಾರೆ.

2. ಸದಾ ಫಾಲೋ ಫಾದರ್ ಮಾಡಲು ಯಾವ ಸ್ಥಿತಿಯಲ್ಲಿ ಸ್ಥಿತರಾಗಬೇಕು?

ಉ: ತಂದೆಯನ್ನು ಫಾಲೋ ಮಾಡಲು ಅಶರೀರಿ ಭವ, ವಿದೇಹಿ ಭವ, ನಿರಾಕಾರಿ ಭವದ ಸ್ಥಿತಿಯಲ್ಲಿ ಸ್ಥಿತರಾಗಬೇಕು. ಬ್ರಹ್ಮಾ ತಂದೆಯನ್ನು ಫಾಲೋ ಮಾಡಲು ಅವ್ಯಕ್ತ ಸ್ಥಿತಿ ಭವ, ಫರಿಶ್ತಾ ಭವ, ಆಕಾರಿ ಸ್ಥಿತಿ ಭವದ ಸ್ಥಿತಿಯಲ್ಲಿ ಸ್ಥಿತರಾಗಬೇಕು.

3. ಲೌಕಿಕದಲ್ಲಿ ಯಾರು ಯಾರನ್ನು ಫಾಲೋ ಮಾಡುತ್ತಾರೆ?

ಉ: ಲೌಕಿಕದಲ್ಲಿ ಬಾಲ್ಯದಲ್ಲಿ ತಂದೆ ಮಕ್ಕಳ ಬೆರಳನ್ನು ಹಿಡಿದು ನಡೆಸುತ್ತಾರೆ. ಎದ್ದೆಳುತ್ತಾ-ಕುಳಿತುಕೊಳ್ಳುವುದರಲ್ಲಿ ಫಾಲೋ ಫಾದರ್ ಮಾಡಿಸುತ್ತಾರೆ. ಗೃಹಸ್ಥಿಗಳಾದಾಗ ಪತಿ-ಪತ್ನಿ ಒಬ್ಬರು ಇನ್ನೊಬ್ಬರನ್ನು ಫಾಲೋ ಮಾಡುತ್ತಾರೆ.

4. ಅಲೌಕಿಕ ಮತ್ತು ಪಾರಲೌಕಿಕ ತಂದೆ ನಮ್ಮನ್ನು ಯಾವುದರಿಂದ ಬಿಡಿಸುತ್ತಾರೆ?

ಉ: ಅಲೌಕಿಕ ಮತ್ತು ಪಾರಲೌಕಿಕ ತಂದೆ ನಮ್ಮನ್ನು ಏನು ಮಾಡುವುದು, ಹೇಗೆ ಮಾಡುವುದು, ಹೀಗೆ ಅಥವಾ ಹಾಗೆ ಮಾಡುವುದು ಎನ್ನುವುದರ ವಿಸ್ತಾರದಿಂದ ಬಿಡಿಸುತ್ತಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಒಂದೇ ಉತ್ತರ “ಫಾಲೋ ಫಾದರ್”.

5. ಸಾಕಾರ ಬ್ರಹ್ಮಾ ಸಾಕಾರ ಜೀವನದಲ್ಲಿ ಯಾವುದಕ್ಕೆ ನಿಮಿತ್ತರಾಗಿದ್ದಾರೆ?

ಉ: ಕರ್ಮ, ಕರ್ಮ ಬಂಧನಗಳಿಂದ ಮುಕ್ತರಾಗುವುದು, ಕರ್ಮ ಸಂಬಂಧವನ್ನು ನಿಭಾಯಿಸುವುದು, ಒಂದೊಂದು ಪೈಸೆಯ ಸಫಲ ಮಾಡುವುದರಲ್ಲಿ ಸಾಕಾರ ಬ್ರಹ್ಮಾ ನಿಮಿತ್ತರಾಗಿದ್ದಾರೆ.

6. ಸೈಲೆನ್ಸ್ ನವರ ಎಕ್ಯೂರೆಟ್ (ನಿಖರವಾದ) ಕಂಪ್ಯೂಟರ್ ಯಾವುದಾಗಿದೆ?

ಉ: ಬ್ರಹ್ಮಾರವರ ಜೀವನವೇ ಸೈಲೆನ್ಸ್ ನವರ ಎಕ್ಯೂರೆಟ್(ನಿಖರವಾದ) ಕಂಪ್ಯೂಟರ್ ಆಗಿದೆ.

7. ಪ್ರಸನ್ನಚಿತ್ತ ಎಂದರೇನು?
ಉ: ಪ್ರಸನ್ನಚಿತ್ತ ಎಂದರೆ ಏಕರಸ ಸ್ಥಿತಿಯಲ್ಲಿ ಒಬ್ಬ ತಂದೆಯನ್ನು ಫಾಲೋ ಮಾಡುವುದು.