ಹೊಸ ವರ್ಷದಲ್ಲಿ ನವೀನತೆಯ ಶುಭಾಷಯಗಳು
ಇಂದು ನಾಲ್ಕೂ ಕಡೆಯ ಸರ್ವ ಸ್ನೇಹಿ ಸಹಯೋಗಿ ಮತ್ತು ಶಕ್ತಿಶಾಲಿ ಮಕ್ಕಳ, ಅಮೃತವೇಳೆಯಿಂದ ಮಧುರ-ಮಧುರ ಮನಸ್ಸಿನ ಶ್ರೇಷ್ಠ ಸಂಕಲ್ಪ ಸ್ನೇಹದ ಪ್ರತಿಜ್ಞೆ, ಪರಿವರ್ತನೆಯ ಪ್ರತಿಜ್ಞೆ, ತಂದೆಯ ಸಮಾನನಾಗುವ ಉಮ್ಮಂಗ-ಉತ್ಸಾಹದ ಧೃಡ ಸಂಕಲ್ಪ ಅರ್ಥಾತ್ ಅನೇಕ ಆತ್ಮಿಕ ವಾದ್ಯಗಳಿಂದ ಕೂಡಿರುವ ಮನಸ್ಸಿನ ಗೀತೆಯು ಮನಸ್ಸಿನ ಮಿತ್ರನ ಬಳಿ ತಲುಪಿತು. ಮನಸ್ಸಿನ ಮಿತ್ರರೆಲ್ಲರ ಮಧುರ ಗೀತೆಯನ್ನು ಕೇಳಿ ಶ್ರೇಷ್ಠ ಸಂಕಲ್ಪದಿಂದ ಅತಿ ಹರ್ಷಿತರಾಗುತ್ತಿದ್ದರು. ಮನಸ್ಸಿನ ಮಿತ್ರರು ತನ್ನ ಸರ್ವ ಆತ್ಮಿಕ ಮಿತ್ರರಿಗೆ, ಗಾಡ್ಲೀ ಫ್ರೆಂಡ್ಸ್ ಗೆ ಎಲ್ಲರ ಗೀತೆಗಳ ಪ್ರತ್ಯುತ್ತರವನ್ನು ಕೊಡುತ್ತಿದ್ದರು. ಸದಾ ಪ್ರತೀ ಸಂಕಲ್ಪದಲ್ಲಿ ಪ್ರತೀ ಸೆಕೆಂಡಿನಲ್ಲಿ, ಪ್ರತೀ ಮಾತಿನಲ್ಲಿ ಹೋಲಿ, ಹ್ಯಾಪಿ, ಹೆಲ್ಧಿ ಇರುವ ಶುಭಾಷಯಗಳು. ಸದಾ ಸಹಯೋಗದ ಕೈ ಮನಸ್ಸಿನ ಮಿತ್ರ ಕಾರ್ಯದಲ್ಲಿ ಸಹಯೋಗಿಯಾಗುವ ಸಂಕಲ್ಪದಿಂದ, ಕೈಯಲ್ಲಿ ಕೈಯಿರಲಿ. ನಾಲ್ಕೂ ಕಡೆಯ ಮಕ್ಕಳ ಸಂಕಲ್ಪ, ಪತ್ರ, ಕಾರ್ಡುಗಳು ಮತ್ತು ಜೊತೆ ಜೊತೆಗೆ ನೆನಪಿನ ಚಿಹ್ನೆಯಾಗಿ ಸ್ನೆಹದ ಉಡುಗೊರೆಗಳೆಲ್ಲವೂ ಬಾಪ್ದಾದಾರವರ ಬಳಿ ತಲುಪಿದವು. ಬಾಪ್ದಾದಾರವರು ಸದಾ ಪ್ರತೀ ಮಕ್ಕಳ ಬುದ್ಧಿಯೆಂಬ ಮಸ್ತಕದಲ್ಲಿ ವರದಾನದ, ಸದಾ ಸಫಲತೆಯ ಆಶೀರ್ವಾದ ಕೈಯನ್ನು ಹೊಸ ವರ್ಷದ ಶುಭಾಷಯಗಳಲ್ಲಿ ಎಲ್ಲಾ ಮಕ್ಕಳಿಗೂ ಕೊಡುತ್ತಿದ್ದಾರೆ. ಹೊಸ ವರ್ಷದಲ್ಲಿ ಸದಾ ಪ್ರತಿಯೊಂದು ಪ್ರತಿಜ್ಞೆಗಳನ್ನು ಆಜ್ಞಾಕಾರಿ ಮಕ್ಕಳಿಗೆ ಕೊಡುತ್ತಿದ್ದಾರೆ. ಇಂದಿನ ದಿನದಂದು ಕಿರಿಯ-ಹಿರಿಯರೆಲ್ಲರ ಮುಖದಲ್ಲಿ ಶುಭಾಷಯಗಳ ಮಾತು ಮತ್ತೆ-ಮತ್ತೆ ಇದ್ದೇ ಇರುತ್ತದೆ. ಹಾಗೆಯೇ ಸದಾ ಹೊಸ ವಾದ್ಯವಿದೆ, ಸದಾ ಹೊಸ ಸೆಕೆಂಡ್ ಇದೆ, ಸದಾ ಹೊಸ ಸಂಕಲ್ಪವಿದೆ. ಆದ್ದರಿಂದ ಪ್ರತೀ ಸೆಕೆಂಡ್ ಶುಭಾಷಯಗಳಿವೆ. ಸದಾ ನವೀನತೆಯ ಶುಭಾಷಯಗಳನ್ನು ಕೊಡಲಾಗುತ್ತದೆ. ಯಾವುದೇ ಹೊಸ ಮಾತಾಗಿರಲಿ, ಹೊಸ ಕಾರ್ಯವಾಯಿತೆಂದರೆ ಶುಭಾಷಯಗಳನ್ನು ಅವಶ್ಯವಾಗಿ ಕೊಡುತ್ತಾರೆ. ಶುಭಾಷಯಗಳು ನವೀನತೆಗೆ ಕೊಡಲಾಗುತ್ತದೆ. ಅಂದಮೇಲೆ ತಮ್ಮೆಲ್ಲರಿಗಾಗಿ ಸದಾಕಾಲದ ಹೊಸದಿದೆ. ಇದು ಸಂಗಮಯುಗದ ವಿಶೇಷತೆಯಾಗಿದೆ. ಸಂಗಮಯುಗದ ಪ್ರತೀ ಕರ್ಮವು ಹಾರುವ ಕಲೆಯಲ್ಲಿ ಹೋಗುವಂತದ್ದಾಗಿದೆ. ಈ ಕಾರಣದಿಂದ ಸದಾ ಹೊಸದಕ್ಕಿಂತಲೂ ಹೊಸದಿದೆ. ಸೆಕೆಂಡಿನ ಮೊದಲು ಯಾವ ಸ್ಥಿತಿಯಿತ್ತು, ಯಾವ ಗತಿಯಿತ್ತು, ಅದು ಇನ್ನೊಂದು ಸೆಕೆಂಡಿನಲ್ಲಿ ಅದಕ್ಕಿಂತಲೂ ಶ್ರೇಷ್ಠವಿದೆ ಅರ್ಥಾತ್ ಹಾರುವ ಕಲೆಯ ಕಡೆಯಿದೆ. ಆದ್ದರಿಂದ ಪ್ರತೀ ಸೆಕೆಂಡಿನ ಸ್ಥಿತಿಯ ಗತಿಯು ಶ್ರೇಷ್ಠ ಅರ್ಥಾತ್ ಹೊಸದಿದೆ. ಅಂದಮೇಲೆ ತಮ್ಮೆಲ್ಲರಿಗಾಗಿ ಪ್ರತೀ ಸೆಕೆಂಡಿನ ಸಂಕಲ್ಪದ ನವೀನತೆಗಾಗಿ ಶುಭಾಷಯಗಳು. ಸಂಗಮಯುಗವಿರುವುದೇ ಶುಭಾಷಯಗಳ ಯುಗ. ಸದಾ ಮುಖ ಮಧುರ, ಜೀವನ ಮಧುರ, ಸಂಬಂಧಗಳು ಮಧುರತೆಯ ಅನುಭವ ಮಾಡಿಸುವ ಯುಗವಾಗಿದೆ. ಬಾಪ್ದಾದಾರವರು ಕೇವಲ ಹೊಸ ವರ್ಷಕ್ಕಾಗಿ ಶುಭಾಷಯಗಳನ್ನು ಕೊಡುತ್ತಿಲ್ಲ. ಆದರೆ ಸಂಗಮಯುಗದ ಪ್ರತೀ ಸೆಕೆಂಡಿನ, ಸಂಕಲ್ಪದ ಶ್ರೇಷ್ಠ ಶುಭಾಷಯಗಳನ್ನು ಕೊಡುತ್ತಾರೆ. ಜನರಂತು ಇಂದು ಶುಭಾಷಯಗಳನ್ನು ಕೊಡುತ್ತಾರೆ ನಾಳೆ ಸಮಾಪ್ತಿಯಾಗುತ್ತಾರೆ. ಬಾಪ್ದಾದಾರವರು ಸದಾ ಶುಭಾಷಯಗಳನ್ನು ಕೊಡುತ್ತಾರೆ, ಶುಭಾಷಯಗಳನ್ನು ಕೊಡುತ್ತಾರೆ. ಹೊಸ ಯುಗವು ಸಮೀಪ ಬರುವ ಸಲುವಾಗಿ ಶುಭಾಷಯಗಳನ್ನು ಕೊಡುತ್ತಾರೆ. ಸಂಕಲ್ಪದ ಗೀತೆಯನ್ನು ಬಹಳ ಚೆನ್ನಾಗಿ ಕೇಳಿದೆವು. ಕೇಳಿಸಿಕೊಂಡು ಬಾಪ್ದಾದಾರವರು ಗೀತೆಗಳ ಸಂಗೀತ ಮತ್ತು ರಹಸ್ಯದಲ್ಲಿ ಮುಳುಗಿ ಹೋದರು.
ಇಂದು ವತನದಲ್ಲಿ ಗೀತೆಗಳ ಮಾಲೆಯ ಕಾರ್ಯಕ್ರಮವು ಅಮೃತವೇಳೆಯಿಂದಲೂ ಆಲಿಸುತ್ತಿದ್ದರು. ಅಮೃತವೇಳೆಯೂ ಸಹ ದೇಶ-ವಿದೇಶದ ಲೆಕ್ಕದಿಂದ ತನ್ನ-ತನ್ನದಾಗಿದೆ. ಪ್ರತಿಯೊಂದು ಮಗುವು ತಿಳಿಯುತ್ತದೆ - ಅಮೃತವೇಳೆಯಲ್ಲಿ ತಿಳಿಸುತ್ತಿದ್ದೇವೆ. ಬಾಪ್ದಾದಾರವರಂತು ನಿರಂತರವಾಗಿ ಕೇಳಿಸಿಕೊಳ್ಳುತ್ತಿದ್ದರು. ಪ್ರತಿಯೊಂದು ಗೀತೆಯ ರೀತಿಯೂ ಸಹ ಬಹಳ ಪ್ರಿಯವಾಗಿದೆ. ಸಂಗೀತವೂ ತನ್ನತನ್ನದಾಗಿದೆ. ಆದರೆ ಬಾಪ್ದಾದಾರವರಿಗೆ ಎಲ್ಲರ ಗೀತೆಗಳು ಪ್ರಿಯವಾಗಿದೆ. ಶುಭಾಷಯಗಳನ್ನಂತು ಕೊಟ್ಟಿದ್ದಾರೆ. ಭಲೆ ಮುಖದಿಂದ ಕೊಟ್ಟಿದ್ದಾರೆ, ಮನಸ್ಸಿನಿಂದ ಕೊಟ್ಟಿದ್ದಾರೆ. ರೀತಿಯನುಸಾರವರಾಗಿ ಕೊಟ್ಟಿದ್ದಾರೆ ಅಥವಾ ಪ್ರೀತಿಯ ರೀತಿಯನ್ನು ನಿಭಾಯಿಸುವ ಶ್ರೇಷ್ಠ ಸಂಕಲ್ಪದಿಂದ ಕೊಟ್ಟಿದ್ದಾರೆ. ಈಗ ಮುಂದೇನು ಮಾಡಬೇಕು? ಹೇಗೆ ಸೇವೆಯ 50 (1986ರಲ್ಲಿ) ವರ್ಷಗಳು ಪೂರ್ಣವಾಗುತ್ತಿದೆ, ಇಂತಹ ಸರ್ವ ಶ್ರೇಷ್ಠ ಸಂಕಲ್ಪ ಅಥವಾ ಪ್ರತಿಜ್ಞೆಯನ್ನು ಪೂರ್ಣ ಮಾಡುವಿರಾ ಅಥವಾ ಸಂಕಲ್ಪದವರೆಗೇ ಇಟ್ಟುಕೊಳ್ಳುತ್ತೀರಾ? ಪ್ರತಿಜ್ಞೆಯಂತು ಪ್ರತೀ ವರ್ಷದಲ್ಲಿ ಬಹಳ ಒಳ್ಳೊಳ್ಳೆಯದನ್ನೇ ಮಾಡುತ್ತೀರಿ. ಹೇಗೆ ಇಂದಿನ ಪ್ರಪಂಚದಲ್ಲಿ ದಿನ ಕಳೆದಂತೆ ಎಷ್ಟೊಂದು ಒಳ್ಳೊಳ್ಳೆಯ ಕಾರ್ಡುಗಳನ್ನು ಮಾಡುತ್ತಿರುತ್ತಾರೆ. ಅಂದಾಗ ಸಂಕಲ್ಪವೂ ಸಹ ಪ್ರತೀ ವರ್ಷಕ್ಕಿಂತ ಶ್ರೇಷ್ಠವಾದುದನ್ನು ಮಾಡುತ್ತೀರಿ ಆದರೆ ಸಂಕಲ್ಪ ಮತ್ತು ಸ್ವರೂಪವೆರಡೂ ಸಮಾನವಿರಲಿ. ಇದೇ ಮಹಾನತೆಯಾಗಿದೆ. ಈ ಮಹಾನತೆಯಲ್ಲಿ ಯಾರು ಅರ್ಜುನರು! ಅವರು ಯಾರಾಗುತ್ತಾರೆ? ಎಲ್ಲರೂ ತಿಳಿಯುತ್ತಾರೆ - ನಾವು ಆಗುವೆವು. ಅನ್ಯರು ಅರ್ಜುನನಾಗುತ್ತಾರೆಯೋ ಅಥವಾ ಭೀಮನಾಗುತ್ತಾರೆಯೇ ಎಂದು ನೋಡಬಾರದು. ನಾನು ನಂಬರ್ವನ್ ಅರ್ಥಾತ್ ಅರ್ಜುನನಾಗಬೇಕು. ಹೇ ಅರ್ಜುನ ಎಂದೇ ಗಾಯನವಿರುವುದಾಗಿದೆ. ಹೇ ಭೀಮ ಎಂದು ಗಾಯನವಾಗಿಲ್ಲ. ಅರ್ಜುನನ ವಿಶೇಷೆಯು ಸದಾ ಬಿಂದುವಿನಲ್ಲಿ ಸ್ಮೃತಿ ಸ್ವರೂಪನಾಗಿ ವಿಜಯಿಯಾಗುವುದು. ಹೀಗೆ ನಷ್ಟಮೋಹ ಸ್ಮೃತಿ ಸ್ವರೂಪರಾಗುವವರು ಅರ್ಜುನ. ಸದಾ ಗೀತಾ ಜ್ಞಾನವನ್ನು ಕೇಳುವ ಮತ್ತು ಮನನ ಮಾಡುವವರು ಅರ್ಜುನ. ಹೀಗೆ ವಿದೇಹಿ, ಬದುಕಿದ್ದಂತೆಯೇ ಎಲ್ಲರೂ ಸತ್ತು ಹೋಗಿದ್ದಾರೆ - ಹೀಗೆ ಬೇಹದ್ದಿನ ವೈರಾಗ್ಯ ವೃತ್ತಿಯಿರುವ ಅರ್ಜುನ ಯಾರಾಗುತ್ತೀರಿ? ಆಗಬೇಕಾ ಅಥವಾ ಕೇವಲ ಹೇಳಬೇಕಾ. ಹೊಸ ವರ್ಷವೆಂದು ಹೇಳುತ್ತೀರಿ, ಸದಾ ಪ್ರತೀ ಸೆಕೆಂಡಿನಲ್ಲಿ ನವೀನತೆಯಿರಲಿ. ಮನಸ್ಸಾದಲ್ಲಿ, ವಾಣಿಯಲ್ಲಿ, ಸಂಬಂಧದಲ್ಲಿ ನವೀನತೆಯನ್ನು ತನ್ನಿರಿ. ಹೊಸ ವರ್ಷದ ಇದೇ ಶುಭಾಷಯಗಳನ್ನು ಸದಾ ಜೊತೆಯಲ್ಲಿಟ್ಟುಕೊಳ್ಳಿರಿ. ಪ್ರತೀ ಸೆಕೆಂಡ್, ಪ್ರತೀ ಸಮಯ ಸ್ಥಿತಿಯ ಪರ್ಸೆಂಟೇಜ್ ಬಹಳ ಮುಂದಿರಲಿ. ಹೇಗೆ ಯಾರೇ ಗುರಿಯಲ್ಲಿ ತಲುಪುವುದಕ್ಕಾಗಿ ಎಷ್ಟೇ ಹೆಜ್ಜೆಯನ್ನಿಡುತ್ತಾ ಹೋಗುತ್ತಾರೆಂದರೆ, ಪ್ರತೀ ಹೆಜ್ಜೆಯಲ್ಲಿ ಸಮೀಪತೆಯ ಮುಂದೆ ಹೋಗುತ್ತಾರೆ. ಅಲ್ಲಿದ್ದವರು ಅಲ್ಲಿಯೇ ನಿಂತು ಬಿಡುವುದಿಲ್ಲ. ಹಾಗೆಯೇ ಪ್ರತೀ ಸೆಕೆಂಡ್ ಅಥವಾ ಪ್ರತೀ ಹೆಜ್ಜೆಯಲ್ಲಿ ಸಮೀಪತೆ ಮತ್ತು ಸಂಪೂರ್ಣತೆಯ ಸಮೀಪ ಬರುವ ಲಕ್ಷಣವು ಸ್ವಯಂಗೂ ಅನುಭವವಾಗಲಿ ಮತ್ತು ಅನ್ಯರಿಗೂ ಅನುಭವವಾಗಲಿ. ಇದಕ್ಕೆ ಪರ್ಸೆಂಟೇಜನ್ನು ಮುಂದುವರೆಸುವುದು ಅರ್ಥಾತ್ ಹೆಜ್ಜೆಯನ್ನು ಮುಂದಿಡುವುದು ಎಂದು ಹೇಳಲಾಗುತ್ತದೆ. ಪರ್ಸೆಂಟೇಜ್ನ ನವೀನತೆ, ಗತಿಯ ನವೀನತೆ ಎಂದು ಇದಕ್ಕೆ ಹೇಳಲಾಗುತ್ತದೆ. ಅಂದಮೇಲೆ ಪ್ರತೀ ಸಮಯದಲ್ಲಿಯೂ ನವೀನತೆಯನ್ನು ತರುತ್ತಿರಿ. ಎಲ್ಲರೂ ಕೇಳುತ್ತಾರೆ - ನವೀನತೆಯೇನು ಮಾಡಲಿ? ಮೊದಲು ಸ್ವಯಂನಲ್ಲಿ ನವೀನತೆಯನ್ನು ತರುತ್ತೀರೆಂದರೆ ಸೇವೆಯಲ್ಲಿ ಸ್ವತಹವಾಗಿಯೇ ನವೀನತೆಯು ಬಂದು ಬಿಡುತ್ತದೆ. ಇಂದಿನ ಜನರು ಕಾರ್ಯಕ್ರಮದ ನವೀನತೆಯನ್ನು ಬಯಸುವುದಿಲ್ಲ ಆದರೆ ಪ್ರಭಾವದ ನವೀನತೆಯನ್ನು ಬಯಸುತ್ತಾರೆ. ಅಂದಮೇಲೆ ಸ್ವಯಂನ ನವೀನತೆಯಿಂದ ಪ್ರಭಾವದಿಂದ ನವೀನತೆಯು ಸ್ವತಹವಾಗಿಯೇ ಬರುತ್ತದೆ.
ಈ ವರ್ಷದಲ್ಲಿ ಪ್ರಭಾವಶಾಲಿಯಾಗುವ ವಿಶೇಷತೆಯನ್ನು ತೋರಿಸಿರಿ. ಬ್ರಾಹ್ಮಣ ಆತ್ಮರು ಯಾವಾಗ ಪರಸ್ಪರ ಸಂಪರ್ಕದಲ್ಲಿ ಬರುತ್ತೀರಿ ಆಗ ಸದಾ ಪ್ರತಿಯೊಬ್ಬರ ಪ್ರತಿ ಮನಸ್ಸಿನ ಭಾವನೆಯು ಸ್ನೇಹ ಸಹಯೋಗ ಮತ್ತು ಕಲ್ಯಾಣದ ಪ್ರಭಾವಶಾಲಿ ಆಗಿರಲಿ. ಪ್ರತೀ ಮಾತು ಯಾರಿಗೇ ಸಾಹಸ, ಉಲ್ಲಾಸ ಕೊಡುವ ಪ್ರಭಾವಶಾಲಿಯಾದದ್ದು ಆಗಿರಲಿ. ಸಾಧಾರಣ ಮಾತುಗಳಲ್ಲಿ ಅರ್ಧ ಗಂಟೆಯನ್ನೂ ಕಳೆದು ಬಿಡುತ್ತೀರಿ, ನಂತರ ಯೋಚಿಸುತ್ತೀರಿ - ಇದರ ಫಲಿತಾಂಶವೇನು ಬರುತ್ತದೆ. ಅಂದಮೇಲೆ ಕೆಟ್ಟದ್ದೂ ಅಲ್ಲ, ಒಳ್ಳೆಯದೂ ಅಲ್ಲ, ಸಾಧಾರಣ ಮಾತುಕತೆಯೂ ಸಹ ಪ್ರಭಾವಶಾಲಿ ಮಾತೆಂದು ಹೇಳಲಾಗುವುದಿಲ್ಲ. ಹಾಗೆಯೇ ಪ್ರತೀ ಕರ್ಮವು ಫಲದಾಯಕವಾಗಿರಲಿ. ಒಳ್ಳೆಯ ಪರಿಶ್ರಮ ಪಡುತ್ತೀರಿ, ಹೃದಯದಿಂದ ಮಾಡುತ್ತೀರಿ. ಇದನ್ನಂತು ಎಲ್ಲರೂ ಹೇಳುತ್ತಾರೆ ಆದರೆ ಇವರು ರಾಜಯೋಗಿಗಳು ಫರಿಶ್ತೆಗಳಾಗಿದ್ದಾರೆ, ಆತ್ಮೀಯತೆಯಿದೆಯೆಂದರೆ ಇಲ್ಲಿಯೇ ಇದೆ, ಪರಮಾತ್ಮನ ಕಾರ್ಯವು ಇದೇ ಆಗಿದೆ - ಹೀಗೆ ತಂದೆಯನ್ನು ಪ್ರತ್ಯಕ್ಷ ಮಾಡುವ ಪ್ರಭಾವ ಬೀರಲಿ. ಜೀವನವು ಚೆನ್ನಾಗಿದೆ, ಕಾರ್ಯವು ಚೆನ್ನಾಗಿದೆ - ಇದನ್ನೂ ಹೇಳುತ್ತಾರೆ. ಆದರೆ ಇದು ಪರಮಾತ್ಮನ ಕಾರ್ಯವಾಗಿದೆ, ಪರಮಾತ್ಮನ ಮಕ್ಕಳಾಗಿದ್ದಾರೆ, ಇದೇ ಸಂಪನ್ನ ಜೀವನ ಸಂಪೂರ್ಣ ಜೀವನ ಆಗಿದೆ - ಈ ಪ್ರಭಾವವಾಗಲಿ. ಸೇವೆಯಲ್ಲಿ ಇನ್ನೂ ಶಕ್ತಿಶಾಲಿಯಾಗಬೇಕಾಗಿದೆ, ಈಗ ಈ ಪ್ರಕಂಪನಗಳನ್ನು ಹರಡಿಸಿರಿ, ಅವರು ಹೇಳಲಿ - ನಾವೂ ಒಳ್ಳೆಯವರಾಗಬೇಕು. ತಾವು ಬಹಳ ಒಳ್ಳೆಯವರಿದ್ದೀರಿ, ಇದು ಭಕ್ತಮಾಲೆಯಾಗುತ್ತಿದೆ ಆದರೆ ಈಗ ವಿಜಯಮಾಲೆ ಅಂದರೆ ಸ್ವರ್ಗದ ಅಧಿಕಾರಿಯಾಗುವ ಮಾಲೆಯು ಮೊದಲು ತಯಾರು ಮಾಡಿರಿ. ಮೊದಲ ಜನ್ಮದಲ್ಲಿಯೇ 9 ಲಕ್ಷವಿರಬೇಕು. ಭಕ್ತಮಾಲೆಯು ಬಹಳ ಉದ್ದವಾಗಿದೆ. ರಾಜ್ಯಾಧಿಕಾರಿ ರಾಜ್ಯಾಡಳಿತ ಮಾಡಲು ಅಲ್ಲ, ರಾಜ್ಯದಲ್ಲಿ ಬರುವ ಅಧಿಕಾರಿಗಳು- ಅವರೂ ಈಗ ಬೇಕು. ಅಂದಮೇಲೆ ಈಗ ಇಂತಹ ಪ್ರಕಂಪನಗಳನ್ನು ಹರಡಿಸಿರಿ. ಯಾರು ಒಳ್ಳೆಯದು ಎಂದು ಹೇಳುವವರು ಒಳ್ಳೆಯವರಾಗುವುದರಲ್ಲಿ ಸಂಪರ್ಕದವರು, ಕೊನೆಪಕ್ಷ ಪ್ರಜೆಯ ಸಂಬಂಧದಲ್ಲಾದರೂ ಬಂದು ಬಿಡಲಿ. ಆದರೂ ತಮ್ಮ ಸಂಪರ್ಕದಲ್ಲಿ ಬರುತ್ತಾರೆಂದರೆ, ಅವರನ್ನು ಸ್ವರ್ಗದ ಅಧಿಕಾರಿಯನ್ನಂತು ಮಾಡುತ್ತೀರಲ್ಲವೆ. ಇಂತಹ ಸೇವೆಯಲ್ಲಿ ಪ್ರಭಾವಶಾಲಿಯಾಗಿರಿ. ಈ ವರ್ಷದಲ್ಲಿ ಪ್ರಭಾವಶಾಲಿಯಾಗುವ ಮತ್ತು ಪ್ರಭಾವದ ಮೂಲಕ ತಂದೆಯನ್ನು ಪ್ರತ್ಯಕ್ಷ ಮಾಡುವ ವಿಶೇಷತೆಯಿಂದ ವಿಶೇಷ ರೂಪದಿಂದ ಆಚರಿಸಿರಿ. ಸ್ವಯಂ ತಾವು ಪ್ರಭಾವಿತರಾಗಬಾರದು. ಆದರೆ ತಂದೆಯ ಮೇಲೆ ಪ್ರಭಾವಿತ ಮಾಡಬೇಕು. ತಿಳಿಯಿತೆ - ಹೇಗೆ ಭಕ್ತಿಯಲ್ಲಿ ಹೇಳುತ್ತೀರಲ್ಲವೆ - ಇವರೆಲ್ಲರೂ ಪರಮಾತ್ಮನ ರೂಪವಾಗಿದ್ದಾರೆ. ಅವರು ಉಲ್ಟಾ ಭಾವನೆಯಿಂದ ಹೇಳಿ ಬಿಡುತ್ತಾರೆ. ಆದರೆ ಜ್ಞಾನದ ಪ್ರಭಾವದಿಂದ ತಮ್ಮೆಲ್ಲರ ರೂಪದಲ್ಲಿ ತಂದೆಯ ಅನುಭವ ಮಾಡಲಿ. ಯಾರನ್ನೇ ನೋಡುತ್ತಾರೆಂದರೆ ಪರಮಾತ್ಮನ ಸ್ವರೂಪದ ಅನುಭೂತಿಯಾಗಲಿ ಆಗ ನವಯುಗ ಬರುತ್ತದೆ. ಈಗ ಮೊದಲ ಜನ್ಮದ ಪ್ರಜೆಯೇ ತಯಾರು ಮಾಡಿಲ್ಲ. ಅಂತಿಮ ಪ್ರಜೆಯಂತು ಸಹಜವಾಗಿ ಆಗುತ್ತಾರೆ ಆದರೆ ಮೊದಲ ಜನ್ಮದ ಪ್ರಜೆ. ಹೇಗೆ ರಾಜಾ ಶಕ್ತಿಶಾಲಿಯಾಗಿರುತ್ತಾನೆಯೋ ಹಾಗೆಯೇ ಮೊದಲ ಪ್ರಜೆಯೂ ಶಕ್ತಿಶಾಲಿಯಾಗಿರುತ್ತಾನೆ. ಅಂದಮೇಲೆ ಸಂಕಲ್ಪದ ಬೀಜವನ್ನು ಸದಾ ಫಲ ಸ್ವರೂಪದಲ್ಲಿ ತರುತ್ತಿರಿ. ಪ್ರತಿಜ್ಞೆಯನ್ನು ಪ್ರತ್ಯಕ್ಷತೆಯ ರೂಪದಲ್ಲಿ ಸದಾ ತರುತ್ತಿರಿ. ಡಬಲ್ ವಿದೇಶಿಗಳು ಏನು ಮಾಡುವಿರಿ. ಎಲ್ಲದರಲ್ಲಿ ಡಬಲ್ ಫಲಿತಾಂಶವನ್ನು ತರುತ್ತೀರಲ್ಲವೆ. ಪ್ರತೀ ಸೆಕೆಂಡಿನ ನವೀನತೆಯಿಂದ ಪ್ರತೀ ಸೆಕೆಂಡ್ ತಂದೆಯ ಶುಭಾಷಯಗಳನ್ನು ತೆಗೆದುಕೊಳ್ಳುತ್ತಿರಿ. ಒಳ್ಳೆಯದು!
ಸದಾ ಪ್ರತೀ ಸಂಕಲ್ಪದಲ್ಲಿ ನವೀನತೆಯ ಮಹಾನತೆಯನ್ನು ತೋರಿಸುವ, ಪ್ರತೀ ಸಮಯದಲ್ಲಿ ಹಾರುವ ಕಲೆಯ ಅನುಭವ ಮಾಡುವಂತಹ, ಸದಾ ಪ್ರಭಾವಶಾಲಿಯಾಗಿ ತಂದೆಯ ಪ್ರಭಾವವನ್ನು ಪ್ರತ್ಯಕ್ಷಗೊಳಿಸುವ, ಆತ್ಮರಲ್ಲಿ ಹೊಸ ಜೀವನವನ್ನು ರೂಪಿಸಿಕೊಳ್ಳುವ ಹೊಸ ಪ್ರೇರಣೆಯನ್ನು ಕೊಡುವಂತಹ, ಹೊಸ ಯುಗದ ಅಧಿಕಾರಿಯನ್ನಾಗಿ ಮಾಡುವ ಶ್ರೇಷ್ಠ ಪ್ರಕಂಪನಗಳನ್ನು ಹರಡುವಂತಹ - ಇಂತಹ ಸದಾ ವರದಾನಿ, ಮಹಾದಾನಿ ಆತ್ಮರಿಗೆ ಬಾಪ್ದಾದಾರವರ ಸದಾ ನವೀನತೆಯ ಸಂಕಲ್ಪದ ಜೊತೆಗೆ ನೆನಪು-ಪ್ರೀತಿ ಹಾಗೂ ನಮಸ್ತೆ.
ದಾದಿಯರೊಂದಿಗೆ:-
ಇಂದು ಅವಶ್ಯವಾಗಿ ಶಕ್ತಿಶಾಲಿ ಸಂಕಲ್ಪದ ಸಹಯೋಗವು ಅವಶ್ಯಕತೆಯಿದೆ. ಸ್ವಯಂನ ಪುರುಷಾರ್ಥವು ಬೇರೆ ಮಾತಾಗಿದೆ ಆದರೆ ಶ್ರೇಷ್ಠ ಸಂಕಲ್ಪದ ಸಹಯೋಗವು ವಿಶೇಷವಾಗಿ ಅವಶ್ಯಕತೆಯಿದೆ. ಇದೇ ಸೇವೆ ತಾವು ವಿಶೇಷ ಆತ್ಮರದಾಗಿದೆ. ಸಂಕಲ್ಪದಿಂದ ಸಹಯೋಗವನ್ನು ಕೊಡುವುದು - ಇದು ಸೇವೆಯನ್ನು ಮುಂದುವರೆಸುವುದಾಗಿದೆ. ವಾಣಿಯಿಂದ ಶಿಕ್ಷಣವನ್ನು ಕೊಡುವ ಸಮಯವು ಕಳೆದು ಹೋಯಿತು. ಈಗ ಶ್ರೇಷ್ಠ ಸಂಕಲ್ಪದಿಂದ ಪರಿವರ್ತನೆ ಮಾಡಬೇಕಾಗಿದೆ. ಶ್ರೇಷ್ಠ ಭಾವನೆಯಿಂದ ಪರಿವರ್ತನೆ ಮಾಡುವುದು - ಇದೇ ಸೇವೆಯ ಅವಶ್ಯಕತೆಯಿದೆ. ಇದೇ ಬಲವು ಎಲ್ಲರಿಗೂ ಅವಶ್ಯಕವಿದೆ. ಸಂಕಲ್ಪವನ್ನಂತು ಎಲ್ಲರೂ ಮಾಡುತ್ತಾರೆ ಆದರೆ ಸಂಕಲ್ಪದಲ್ಲಿ ಬಲ ತುಂಬುವುದು - ಅದು ಅವಶ್ಯಕತೆಯಿದೆ. ಅಂದಮೇಲೆ ಯಾರೆಷ್ಟು ಶಕ್ತಿಶಾಲಿಯಾಗಿದ್ದಾರೆ ಅಷ್ಟು ಅನ್ಯರಲ್ಲಿಯೂ ಸಂಕಲ್ಪದಲ್ಲಿ ಬಲವನ್ನು ತುಂಬಬಹುದು. ಹೇಗೆ ಇತ್ತೀಚೆಗೆ ಸೂರ್ಯನ ಶಕ್ತಿಯನ್ನು ಜಮಾ ಮಾಡಿಕೊಂಡು, ಕೆಲವು ಕಾರ್ಯಗಳಲ್ಲಿ ಸಫಲ ಮಾಡುತ್ತಾರಲ್ಲವೆ. ಇದೂ ಸಹ ಸಂಕಲ್ಪದ ಶಕ್ತಿ, ಒಟ್ಟಿಗೆ ಸೇರಿಸಿರುವ ಶಕ್ತಿಯಿಂದ ಅನ್ಯರಲ್ಲಿಯೂ ಬಲ ತುಂಬಬಹುದು. ಕಾರ್ಯವನ್ನು ಸಫಲ ಮಾಡಲು ಸಾಧ್ಯವಿದೆ. ಅವರು ಸ್ಪಷ್ಟವಾಗಿ ಹೇಳುತ್ತಾರೆ - ನಮ್ಮಲ್ಲಿ ಸಾಹಸವಿಲ್ಲ, ಆಗ ಅವರಿಗೆ ಸಾಹಸವನ್ನು ಕೊಡಬೇಕಾಗಿದೆ. ವಾಣಿಯಿಂದಲೂ ಸಾಹಸ ಬರುತ್ತದೆ ಆದರೆ ಸದಾಕಾಲದ್ದಲ್ಲ. ವಾಣಿಯ ಜೊತೆ ಜೊತೆಗೆ ಶ್ರೇಷ್ಠ ಸಂಕಲ್ಪದ ಸೂಕ್ಷ್ಮ ಶಕ್ತಿಯು ಹೆಚ್ಚಿನ ಕಾರ್ಯವನ್ನು ಮಾಡುತ್ತದೆ. ಈ ಸಂಕಲ್ಪ ಶಕ್ತಿಯು ಬಹಳ ಸೂಕ್ಷ್ಮವಾದುದು. ಹೇಗೆ ಇಂಜೆಕ್ಷನ್ ಮೂಲಕ ರಕ್ತದಲ್ಲಿ ಶಕ್ತಿಯನ್ನು ತುಂಬಿ ಬಿಡುತ್ತಾರಲ್ಲವೆ. ಹಾಗೆಯೇ ಸಂಕಲ್ಪವು ಒಂದು ಇಂಜೆಕ್ಷನ್ನ ಕಾರ್ಯವನ್ನು ಮಾಡುತ್ತದೆ, ಅದು ಒಳಗೆ ವೃತ್ತಿಯಲ್ಲಿ ಸಂಕಲ್ಪದ ಮೂಲಕ ಸಂಕಲ್ಪದಲ್ಲಿ ಶಕ್ತಿ ಬಂದು ಬಿಡುತ್ತದೆ. ಈಗ ಈ ಸೇವೆಯು ಬಹಳ ಅವಶ್ಯಕವಿದೆ. ಒಳ್ಳೆಯದು.
ಟೀಚರ್ಸ್ನೊಂದಿಗೆ:-
ನಿಮಿತ್ತ ಸೇವಾಧಾರಿಯಾವುದರಲ್ಲಿ ಭಾಗ್ಯದ ಪ್ರಾಪ್ತಿಯ ಅನುಭವವನ್ನು ಮಾಡುತ್ತೀರಾ? ಸೇವೆಗೆ ನಿಮಿತ್ತರಾಗುವುದು ಅರ್ಥಾತ್ ಗೋಲ್ಡನ್ ಚಾನ್ಸ್ ಸಿಗುವುದು ಏಕೆಂದರೆ ಸೇವಾಧಾರಿಗೆ ಸ್ವತಹವಾಗಿಯೇ ನೆನಪು ಮತ್ತು ಸೇವೆಯಲ್ಲದೆ ಮತ್ತೇನೂ ಇರುವುದಿಲಲ್ಲ. ಒಂದುವೇಳೆ ಸತ್ಯ ಸೇವಾಧಾರಿಯಾಗಿದ್ದರೆ, ಹಗಲು-ರಾತ್ರಿ ಸೇವೆಯಲ್ಲಿ ಬ್ಯುಸಿಯಾಗಿರುವ ಕಾರಣದಿಂದ ಸಹಜವಾಗಿಯೇ ಉನ್ನತಿಯ ಅನುಭವವನ್ನು ಮಾಡುತ್ತಾರೆ. ಇದು ಮಾಯಾಜೀತರಾಗುವ ವಿಶೇಷ ಲಿಫ್ಟ್ ಆಗಿದೆ. ಆದ್ದರಿಂದ ನಿಮಿತ್ತ ಸೇವಾಧಾರಿಯು ಎಷ್ಟು ಮುಂದುವರೆಯಬೇಕು ಎಂದು ಬಯಸುತ್ತಾರೆಯೋ ಅಷ್ಟುಸಹಜವಾಗಿ ಮುಂದುವರೆಯಬಹುದು. ಈ ವಿಶೇಷ ವರದಾನವಿದೆ. ಅಂದಮೇಲೆ ವಿಶೇಷ ಲಿಫ್ಟ್ ಅಥವಾ ಗೋಲ್ಡನ್ ಚಾನ್ಸ್ ಸಿಕ್ಕಿದೆ, ಅದರಿಂದ ಲಾಭವನ್ನು ತೆಗೆದುಕೊಂಡಿದ್ದೀರಾ. ಸೇವಾಧಾರಿಯು ಸ್ವತಹವಾಗಿಯೇ ಸೇವೆಯ ಫಲವನ್ನನುಭವಿಸುವ ಆತ್ಮರಾಗಿ ಬಿಡುತ್ತಾರೆ. ಏಕೆಂದರೆ ಸೇವೆಯ ಪ್ರತ್ಯಕ್ಷ ಫಲವು ಈಗ ಸಿಗುತ್ತದೆ. ಒಳ್ಳೆಯ ಸಾಹಸವನ್ನಿಟ್ಟಿದ್ದೀರಿ. ಸಾಹಸವಿರುವ ಆತ್ಮರ ಮೇಲೆ ಬಾಪ್ದಾದಾರವರ ಆಶೀರ್ವಾದದ ಕೈ ಸದಾ ಇದೆ. ಇದೇ ಸಹಯೋಗದಿಂದ ಮುಂದುವರೆಯುತ್ತಿದ್ದೀರಿ ಮತ್ತು ಮುಂದುವರೆಯುತ್ತಿರಿ. ಇದೇ ತಂದೆಯ ಸಹಯೋಗದ ಕೈ ಸದಾಕಾಲಕ್ಕಾಗಿ ಆಶೀರ್ವಾದವಾಗಿ ಬಿಡುತ್ತದೆ. ಬಾಪ್ದಾದಾರವರು ಸೇವಾಧಾರಿಗಳನ್ನು ನೋಡುತ್ತಾ ವಿಶೇಷವಾಗಿ ಖುಷಿಯಾಗುತ್ತಾರೆ. ಏಕೆಂದರೆ ಕಾರ್ಯದಲ್ಲಿ ತಂದೆಯ ಸಮಾನ ನಿಮಿತ್ತರಾಗಿದ್ದೀರಿ. ಸದಾ ತಾವು ಸಮಾನ ಶಿಕ್ಷಕರ ವೃದ್ಧಿಯನ್ನು ಮಾಡುತ್ತಾ ಸಾಗಿರಿ. ಸದಾ ಹೊಸ ಉಮ್ಮಂಗ, ಹೊಸ ಉತ್ಸಾಹವನ್ನು ಸ್ವಯಂನಲ್ಲಿ ಧಾರಣೆ ಮಾಡಿಕೊಳ್ಳಿರಿ ಮತ್ತು ಅನ್ಯರಿಗೂ ತೋರಿಸಿರಿ. ತಮ್ಮ ಉಮ್ಮಂಗವನ್ನು ನೋಡುತ್ತಾ ಸ್ವತಹವಾಗಿಯೇ ಸೇವೆಯಾಗುತ್ತಿರಲಿ. ಪ್ರತೀ ಸಮಯದಲ್ಲಿ ಯಾವುದಾದರೂ ಸೇವೆಯ ನವೀನತೆಯ ಯೋಜನೆಯನ್ನು ಮಾಡುತ್ತಿರಿ. ಅಂತಹ ಯೋಜನೆಯಿರಲಿ, ಅದು ವಿಹಂಗ ಮಾರ್ಗದ ಸೇವೆಯ ವಿಶೇಷ ಸಾಧನವಾಗಿರಲಿ. ಎಷ್ಟು ಯೋಗಯುಕ್ತರಾಗುತ್ತೀರಿ ಅಷ್ಟೇ ನವೀನತೆಯು ಟಚ್ ಆಗುತ್ತದೆ, ಹೀಗೆ ಮಾಡಬೇಕು ಮತ್ತು ನೆನಪಿನ ಬಲದಿಂದ ಸಫಲತೆಯು ಸಿಕ್ಕಿ ಬಿಡುತ್ತದೆ. ಅಂದಮೇಲೆ ವಿಶೇಷವಾಗಿ ಯಾವುದಾದರೂ ಕಾರ್ಯವನ್ನು ಮಾಡಿ ತೋರಿಸಿರಿ.
ಪಾರ್ಟಿಯೊಂದಿಗೆ:-
1. ಸರ್ವ ಖಜಾನೆಗಳಿಂದ ಸಂಪನ್ನ ಶ್ರೇಷ್ಠ ಆತ್ಮರಾಗಿದ್ದೇವೆ - ಇಂತಹ ಅನುಭವ ಮಾಡುತ್ತೀರಾ? ಎಷ್ಟು ಖಜಾನೆಗಳು ಸಿಕ್ಕಿವೆ - ಅದನ್ನು ತಿಳಿದಿದ್ದೀರಾ? ಎಣಿಕೆ ಮಾಡಲು ಸಾಧ್ಯವೇ? ಅವಿನಾಶಿಯಾಗಿದೆ ಮತ್ತು ಲೆಕ್ಕವಿಲ್ಲದಷ್ಟಿದೆ. ಅಂದಮೇಲೆ ಒಂದೊಂದು ಖಜಾನೆಗಳನ್ನು ಸ್ಮೃತಿಯಲ್ಲಿ ತಂದುಕೊಳ್ಳಿರಿ. ಖಜಾನೆಯನ್ನು ಸ್ಮೃತಿಯಲ್ಲಿ ತಂದುಕೊಳ್ಳುವುದರಿಂದ ಖುಷಿಯಾಗುತ್ತದೆ. ಖಜಾನೆಗಳು ಎಷ್ಟು ಸ್ಮೃತಿಯಲ್ಲಿರುತ್ತದೆಯೋ ಅಷ್ಟು ಸಮರ್ಥರಾಗುತ್ತಾ ಹೋಗುತ್ತೀರಿ ಮತ್ತು ಎಲ್ಲಿ ಸಮರ್ಥತೆಯಿದೆ ಅಲ್ಲಿ ವ್ಯರ್ಥವು ಸಮಾಪ್ತಿಯಾಗಿ ಬಿಡುತ್ತದೆ. ವ್ಯರ್ಥ ಸಂಕಲ್ಪ, ವ್ಯರ್ಥ ಸಮಯ, ವ್ಯರ್ಥ ಮಾತುಗಳೆಲ್ಲವೂ ಬದಲಾಗಿ ಬಿಡುತ್ತದೆ. ಇಂತಹ ಅನುಭವ ಮಾಡುತ್ತೀರಾ? ಪರಿವರ್ತನೆಯಾಗಿ ಬಿಡುತ್ತದೆಯಲ್ಲವೆ. ಹೊಸ ಜೀವನದಲ್ಲಿ ಬಂದು ಬಿಟ್ಟಿದ್ದೀರಿ. ಹೊಸ ಜೀವನ, ಹೊಸ ಉಮ್ಮಂಗ, ಹೊಸ ಉತ್ಸಾಹವು ಪ್ರತೀಗಳಿಗೆಯಲ್ಲಿ ಹೊಸದು, ಪ್ರತೀ ಸಮಯವೂ ಹೊಸದಾಗಿರುತ್ತದೆ. ಅಂದಮೇಲೆ ಪ್ರತೀ ಸಂಕಲ್ಪದಲ್ಲಿ ಹೊಸ ಉಮ್ಮಂಗ, ಹೊಸ ಉತ್ಸಾಹವಿರಲಿ. ನೆನ್ನೆಯೇನಾಗಿದ್ದೆವು, ಇಂದು ಏನಾಗಿ ಬಿಟ್ಟೆವು! ಪಡೆದು ಬಿಟ್ಟೆವು. ಆದ್ದರಿಂದ ಸಂಪನ್ನರಾಗಿ ಬಿಟ್ಟೆವು ಅಲ್ಲವೆ. ಸಂಪನ್ನವಾದ ವಸ್ತುವೆಂದಿಗೂ ಏರುಪೇರಿನಲ್ಲಿ ಬರುವುದಿಲ್ಲ. ಸಂಪನ್ನರಾಗುವುದು ಅರ್ಥಾತ್ ಅಚಲರಾಗುವುದು. ಅಂದಮೇಲೆ ತಮ್ಮ ಈ ಸ್ವರೂಪವನ್ನು ಮುಂದಿಟ್ಟುಕೊಳ್ಳಿರಿ - ನಾವು ಖುಷಿಯ ಖಜಾನೆಗಳಿಂದ ಸಂಪನ್ನವಾದ ಭಂಡಾರವಾಗಿ ಬಿಟ್ಟೆವು. ಎಲ್ಲಿ ಖುಷಿಯಿದೆ ಅಲ್ಲಿ ಸದಾಕಾಲಕ್ಕಾಗಿ ದುಃಖವು ದೂರವಾಗಿ ಬಿಟ್ಟಿತು. ಯಾರೆಷ್ಟು ಸ್ವಯಂ ಖುಷಿಯಾಗಿರುತ್ತೀರಿ ಅಷ್ಟೇ ಅನ್ಯರಿಗೂ ಖುಷಿಯ ಸಮಾಚಾರವನ್ನು ತಿಳಿಸುತ್ತೀರಿ. ಆದ್ದರಿಂದ ಖುಷಿಯಾಗಿರಿ ಮತ್ತು ಖುಷಿಯ ಸಮಾಚಾರವನ್ನು ತಿಳಿಸುತ್ತಿರಿ.
2. ಸದಾ ವಿಸ್ತಾರವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಆತ್ಮಿಕ ಉದ್ಯಾನವನ ಆಗಿದೆಯಲ್ಲವೆ. ಮತ್ತು ತಾವೆಲ್ಲರೂ ಆತ್ಮಿಕ ಗುಲಾಬಿಗಳಲ್ಲವೆ. ಹೇಗೆ ಎಲ್ಲಾ ಹೂಗಳಲ್ಲಿ ಆತ್ಮಿಕ ಗುಲಾಬಿಯು ಶ್ರೇಷ್ಠವೆಂದು ಗಾಯನವಿದೆ. ಅದಾಯಿತು ಅಲ್ಪಕಾಲದ ಸುಗಂಧವನ್ನು ಕೊಡುವಂತಹದ್ದು ಮತ್ತು ತಾವು ಯಾರಾಗಿದ್ದೀರಿ? ಅತ್ಮಿಕ ಗುಲಾಬಿ ಅರ್ಥಾತ್ ಅವಿನಾಶಿ ಸುಗಂಧವನ್ನು ಕೊಡುವವರು. ಸದಾ ಆತ್ಮೀಯತೆಯ ಸುಗಂಧದಲ್ಲಿರುವವರು ಮತ್ತು ಆತ್ಮಿಕ ಸುಗಂಧವನ್ನು ಕೊಡುವವರು. ಹೀಗಾಗಿದ್ದೀರಾ? ಎಲ್ಲರೂ ಆತ್ಮಿಕ ಗುಲಾಬಿ ಆಗಿದ್ದೀರಾ ಅಥವಾ ಇನ್ನೊಂದು ಮತ್ತೊಂದೆ. ಇನ್ನೂ ಭಿನ್ನ-ಭಿನ್ನ ಪ್ರಕಾರದ ಹೂಗಳಿರುತ್ತವೆ. ಆದರೆ ಗುಲಾಬಿ ಹೂವಿನ ಮೌಲ್ಯವೆಷ್ಟಿದೆಯೋ ಅಷ್ಟು ಅನ್ಯ ಪ್ರಕಾರದವುಗಳಿಗೆ ಇಲ್ಲ. ಪರಮಾತ್ಮನ ಉದ್ಯಾನವನದಲ್ಲಿ ಸದಾ ಅರಳಿರುವ ಪುಷ್ಪಗಳಾಗಿದ್ದೀರಿ. ಎಂದಿಗೂ ಮುದುಡಿರುವವರಲ್ಲ. ಸಂಕಲ್ಪದಲ್ಲಿಯೂ ಎಂದೂ ಮಾಯೆಯಿಂದ ಮುದುಡುವವರಲ್ಲ. ಮಾಯೆಯು ಬರುತ್ತದೆ ಅಂದರೆ ಮುದುಡುತ್ತೀರಿ. ಮಾಯಾಜೀತರಾಗುತ್ತೀರೆಂದರೆ ಸದಾ ಅರಳಿರುವವರಾಗಿದ್ದೀರಿ. ಹೇಗೆ ತಂದೆಯು ಅವಿನಾಶಿಯಿದ್ದಾರೆ, ಹಾಗೆಯೇ ಮಕ್ಕಳೂ ಸಹ ಸದಾ ಅವಿನಾಶಿ ಗುಲಾಬಿಯಾಗಿದ್ದಾರೆ. ಪುರುಷಾರ್ಥವೂ ಅವಿನಾಶಿಯಾದುದು ಅಂದಮೇಲೆ ಪ್ರಾಪ್ತಿಯೂ ಅವಿನಾಶಿಯಾದುದು ಆಗಿದೆ.
3. ಸದಾ ತಮ್ಮನ್ನು ಸಹಯೋಗಿ ಎಂದು ಅನುಭವ ಮಾಡುತ್ತೀರಾ? ಸಹಜವೆನಿಸುತ್ತದೆಯೇ ಅಥವಾ ಕಷ್ಟವೆನಿಸುತ್ತದೆಯೇ? ತಂದೆಯ ಆಸ್ತಿಯಲ್ಲಿ ಮಕ್ಕಳಿಗೆ ಅಧಿಕಾರವಿದೆ. ಅಂದಮೇಲೆ ಅಧಿಕಾರವು ಸದಾ ಸಹಜವಾಗಿಯೇ ಸಿಗುತ್ತದೆ. ಹೇಗೆ ಲೌಕಿಕ ತಂದೆಯ ಅಧಿಕಾರವು ಮಕ್ಕಳಿಗೆ ಸಹಜವಾಗಿ ಪ್ರಾಪ್ತಿಯಾಗುತ್ತದೆ. ಹಾಗೆಯೇ ತಾವೂ ಸಹ ಅಧಿಕಾರಿಯಾಗಿದ್ದೀರಿ. ಅಧಿಕಾರಿಯಾಗುವ ಕಾರಣದಿಂದ ಸಹಜಯೋಗಿಯಾಗಿದ್ದೀರಿ. ಪರಿಶ್ರಮ ಪಡುವ ಅವಶ್ಯಕತೆಯಿಲ್ಲ. ತಂದೆಯನ್ನು ನೆನಪು ಮಾಡುವುದೆಂದಿಗೂ ಸಹ ಕಷ್ಟವಾಗುವುದೇ ಇಲ್ಲ. ಇವರು ಬೇಹದ್ದಿನ ತಂದೆಯಾಗಿದ್ದಾರೆ ಮತ್ತು ಅವಿನಾಶಿ ತಂದೆಯಾಗಿದ್ದಾರೆ. ಆದ್ದರಿಂದ ಸದಾ ಸಹಜಯೋಗಿ ಆತ್ಮರು ಆಗಿದ್ದೀರಿ. ಭಕ್ತಿ ಅರ್ಥಾತ್ ಪರಿಶ್ರಮ, ಜ್ಞಾನ ಅರ್ಥಾತ್ ಸಹಜಫಲದ ಪ್ರಾಪ್ತಿ. ಸಂಬಂಧ ಮತ್ತು ಸ್ನೇಹದಿಂದ ಎಷ್ಟು ನೆನಪು ಮಾಡುತ್ತೀರಿ, ಅಷ್ಟು ಸಹಜ ಅನುಭವವಾಗುತ್ತದೆ. ಸದಾ ತಮ್ಮ ಈ ವರದಾನವನ್ನು ನೆನಪಿಟ್ಟುಕೊಳ್ಳಿರಿ - ನಾನು ಇರುವುದೇ ಸಹಜಯೋಗಿ. ಅಂದಾಗ ಎಂತಹ ಸ್ಮೃತಿಯಿರುತ್ತದೆಯೋ ಅಂತಹ ಸ್ಥಿತಿಯು ಸ್ವತಹವಾಗಿ ಆಗಿ ಬಿಡುತ್ತದೆ. ಒಳ್ಳೆಯದು.
26-04-2020 ಹೊಸ ವರ್ಷದಂದು ಹೊಸತನದ ಶುಭಾಶಯಗಳು ಮುರಳಿ ಪ್ರಶ್ನೆಗಳು :
1. ಸದಾ ಪ್ರತಿ ಸೆಕೆಂಡಿನಲ್ಲಿ ಹೊಸತನವನ್ನು ಹೇಗೆ ತರುವುದು?
ಅ. ನಮ್ಮ ನಡೆ ನುಡಿಯಲ್ಲಿ ಹೊಸತನ ತರುವುದು.
ಆ. ಪ್ರತಿ ಹೆಜ್ಜೆಯಲ್ಲಿ ಮುಂದುವರಿಯುವ ಅನುಭವ ಮಾಡುವುದು.
ಇ. ಮನಸ್ಸಿನಲ್ಲಿ, ವಾಣಿಯಲ್ಲಿ, ಕರ್ಮದಲ್ಲಿ, ಸಂಬಂಧದಲ್ಲಿ ಹೊಸತನ.
ಈ. ತನು, ಮನ, ಧನದಲ್ಲಿ ಹೊಸತನ.
2. ಬ್ರಾಹ್ಮಣ ಆತ್ಮಗಳ ಪರಸ್ಪರದ ಸಂಪರ್ಕದಲ್ಲಿ ಯಾವ ಪ್ರಭಾವವಿರಬೇಕು?
ಅ. ಸ್ನೇಹ ಸಹಯೋಗ ಮತ್ತು ಕಲ್ಯಾಣದ ಭಾವನೆ
ಆ. ಆತ್ಮಿಯತೆಯ ಭಾವನೆ
ಇ. ಅಲೌಕಿಕತೆಯ ಭಾವನೆ
ಈ. ಪ್ರೀತಿ ಪ್ರೇಮದ ಭಾವನೆ
3. ಪ್ರತಿ ಕರ್ಮ ಹೇಗಿರಬೇಕು?
ಅ. ಪ್ರಭಾವಶಾಲಿಯಾಗಿರಬೇಕು.
ಆ. ಫಲದಾಯಕವಾಗಿರಬೇಕು
ಇ. ವಿಧಿಪೂರ್ವಕವಾಗಿರಬೇಕು.
ಈ. ಸಫಲತೆವುಳ್ಳವರಾಗಿರಬೇಕು
4. ನವಯುಗ ಯಾವಾಗ ಬರಬೇಕು?
ಅ. ಶಕ್ತಿ ಸ್ವರೂಪದ ಅನುಭೂತಿ ಮಾಡಿದಾಗ
ಆ. ಆತ್ಮಿಕ ಸ್ವರೂಪದ ಅನುಭೂತಿ ಮಾಡಿದಾಗ
ಇ. ಸ್ನೇಹ ಸ್ವರೂಪದ ಅನುಭೂತಿ ಮಾಡಿದಾಗ
ಈ. ಪರಮಾತ್ಮನ ಸ್ವರೂಪದ ಅನುಭೂತಿ ಮಾಡಿದಾಗ
5. ಮಹಾನ ಆತ್ಮಗಳು ಯಾರಾಗಿದ್ದಾರೆ?
ಅ. ಯಾರ ಪ್ರತಿ ಸಂಕಲ್ಪ ಮತ್ತು ಕರ್ಮ ಮಾಹಾನಾಗಿರುತ್ತದೆ.
ಆ. ಯಾರ ಪ್ರತಿ ಮಾತು ಮತ್ತು ಹೆಜ್ಜೆ ಮಾಹಾನಾಗಿರುತ್ತದೆ.
ಇ. ಯಾರ ಪ್ರತಿ ದೃಷ್ಟಿ ನೋಟ ಮಾಹಾನಾಗಿರುತ್ತದೆ.
ಈ. ಯಾರ ಪ್ರತಿ ಕೃತಿ ಮತ್ತು ಚಲನೆ ಮಹಾನಾಗಿರುತ್ತದೆ.
6. ಸಂಪನ್ನರಾಗುವುದು ಎಂದರೆ ________ರಾಗುವುದು.
ಅ. ಅಚಲ
ಆ. ಅಡೊಲ
ಇ. ಸಂಪೂರ್ಣ
ಈ. ಸಂಪನ್ನ
7. ಸಮರ್ಥ ಹೇಗೆ ಆಗುವುದು?
ಅ. ಖಜಾನೆಗಳ ಸ್ಮೃತಿಯಿಂದ
ಆ. ಸಂಪನ್ನತೆಯ ಸ್ಮೃತಿಯಿಂದ
ಇ. ಖುಷಿಯ ಸ್ಮೃತಿಯಿಂದ
ಈ. ಶಕ್ತಿಗಳ ಸ್ಮೃತಿಯಿಂದ