19.04.20 Avyakt Bapdada
Kannada
Murli
30.12.85 Om Shanti Madhuban
ವಿಶಾಲ ಬುದ್ಧಿಯವರ
ಲಕ್ಷಣಗಳು
ಇಂದು ಸರ್ವರ ಸ್ನೇಹಿ,
ಸಹಯೋಗಿ, ಸಹಜಯೋಗಿ ಮಕ್ಕಳೊಂದಿಗೆ ಸ್ನೇಹದ ಸಾಗರ, ಸರ್ವ ಖಜಾನೆಗಳ ವಿದಾತ, ವರದಾತ ತಂದೆಯು ಆತ್ಮಿಕ
ಮಿಲನ ಮಾಡುವುದಕ್ಕಾಗಿ ಬಂದಿದ್ದಾರೆ. ಈ ಆತ್ಮಿಕ ಸ್ನೇಹದ ಮಿಲನ ಅರ್ಥಾತ್ ಆತ್ಮಗಳ ಮಿಲನ ವಿಚಿತ್ರ
ಮಿಲನವಾಗಿದೆ. ಇಡೀ ಕಲ್ಪದಲ್ಲಿ ಇಂತಹ ಆತ್ಮಿಕ ಮೇಳವಾಗಲು ಸಾಧ್ಯವೇ ಇಲ್ಲ. ಈ ಸಂಗಮಯುಗಕ್ಕೆ ಈ
ಆತ್ಮಿಕ ಮಿಲನದ ವರದಾನವು ಸಿಕ್ಕಿದೆ. ಈ ವರದಾನಿ ಸಮಯದಲ್ಲಿ ವರದಾತ ತಂದೆಯ ಮೂಲಕ ವರದಾನಿ ಮಕ್ಕಳು,
ಈ ಅವಿನಾಶಿ ವರದಾನವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ತಂದೆಯದೂ ವಿದಾತ ಮತ್ತು ವರದಾತನ
ಅವಿನಾಶಿ ಪಾತ್ರವು ಇದೇ ಸಮಯದಲ್ಲಿ ನಡೆಯುತ್ತದೆ. ಇಂತಹ ಸಮಯದಲ್ಲಿ ವರದಾನಗಳ ಅಧಿಕಾರಿ ಆತ್ಮರು
ತಮ್ಮ ಸದಾಕಾಲದ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೀರಿ. ಇಂತಹ ಆತ್ಮಿಕ ಮೇಳವನ್ನು ನೋಡಿ
ಬಾಪ್ದಾದಾರವರೂ ಸಹ ಹರ್ಷಿತವಾಗುತ್ತಾರೆ. ಬಾಪ್ದಾದಾರವರು ನೋಡುತ್ತಿದ್ದಾರೆ - ಇಂತಹ ಶ್ರೇಷ್ಠ
ಪ್ರಾಪ್ತಿ ಮಾಡಿಕೊಳ್ಳುವವರು ಎಷ್ಟೊಂದು ಭೋಲಾ ಸಾಧಾರಣ ಆತ್ಮರು, ವಿಶ್ವದ ಮುಂದೆ
ನಿಮಿತ್ತರಾಗಿದ್ದಾರೆ. ಏಕೆಂದರೆ ಎಲ್ಲಾ ಜನ್ಮರು ರಾಜ ವಿದ್ಯೆ, ವಿಜ್ಞಾನದ ವಿದ್ಯೆ, ಅಲ್ಪಕಾಲದ
ರಾಜ್ಯಾಧಿಕಾರ ಅಥವಾ ಧರ್ಮ ನೇತಾಧಿಕಾರ - ಇದನ್ನೇ ಇಂದಿನ ಪ್ರಪಂಚದಲ್ಲಿ ವಿಶೇಷ ಆತ್ಮರೆಂದು
ಒಪ್ಪುತ್ತಾರೆ. ಆದರೆ ಬಾಪ್ದಾದಾರವರು ಯಾವ ವಿಶೇಷತೆಯನ್ನು ನೋಡುತ್ತಾರೆ? ಮೊಟ್ಟ ಮೊದಲು ತಮ್ಮನ್ನು
ತಾವು ಮತ್ತು ತಂದೆಯನ್ನು ತಿಳಿಯುವ ವಿಶೇಷತೆ, ಅದು ತಾವು ಬ್ರಾಹ್ಮಣ ಮಕ್ಕಳಲ್ಲಿ ಇದೆ. ಅದು ಯಾವುದೇ
ಹೆಸರುವಾಸಿಯಾದ ಆತ್ಮನಲ್ಲಿಲ್ಲ ಆದ್ದರಿಂದ ಭೋಲಾ, ಸಾಧಾರಣರಾಗಿದ್ದರೂ ವರದಾತನಿಂದ ವರದಾನವನ್ನು
ತೆಗೆದುಕೊಂಡು ಜನ್ಮ ಜನ್ಮಕ್ಕಾಗಿ ವಿಶೇಷ ಪೂಜ್ಯಾತ್ಮರಾಗಿ ಬಿಡುತ್ತಾರೆ. ಯಾರು ಇಂದಿನ ಪ್ರಸಿದ್ಧ
ಆತ್ಮರಿದ್ದಾರೆ, ಅವರೂ ಸಹ ಪೂಜ್ಯಾತ್ಮರ ಮುಂದೆ ನಮನ-ವಂದನೆ ಮಾಡುತ್ತಾರೆ. ಇಂತಹ ವಿಶೇಷ ಆತ್ಮರಾಗಿ
ಬಿಟ್ಟಿರಿ. ಇಂತಹ ಆತ್ಮಿಕ ನಶೆಯ ಅನುಭವ ಮಾಡುತ್ತೀರಾ? ಭರವಸೆಯಿಲ್ಲದ ಆತ್ಮರನ್ನು
ಭರವಸೆಯಿರುವವರನ್ನಾಗಿ ಮಾಡುವುದೇ ತಂದೆಯ ವಿಶೇಷತೆಯಾಗಿದೆ. ಬಾಪ್ದಾದಾರವರು ವತನದಲ್ಲಿಯೂ
ಮಕ್ಕಳನ್ನು ನೋಡಿ ಮುಗುಳ್ನಗುತ್ತಿದ್ದರು. ಒಂದುವೇಳೆ ಯಾವುದೇ ಅರಿಯದಿರುವ ಆತ್ಮನಿಗೆ ಹೇಳಿರಿ - ಈ
ಇಡೀ ಸಭೆಯು ವಿಶ್ವದ ರಾಜ್ಯಾಧಿಕಾರಿ ಆತ್ಮರದಾಗಿದೆ ಎಂದು, ಆಗ ಒಪ್ಪುತ್ತಾರೆಯೇ?
ಆಶ್ಚರ್ಯಚಕಿತರಾಗುತ್ತಾರೆ. ಆದರೆ ಬಾಪ್ದಾದಾರವರಿಗೆ ಗೊತ್ತಿದೆ - ತಂದೆಗೆ ಹೃದಯದ ಸ್ನೇಹ, ಹೃದಯದ
ಶ್ರೇಷ್ಠ ಭಾವನೆಯಿರುವ ಆತ್ಮರು ಪ್ರಿಯರಾಗಿದ್ದಾರೆ. ಹೃದಯದ ಸ್ನೇಹವೇ ಶ್ರೇಷ್ಠ ಪ್ರಾಪ್ತಿ
ಮಾಡಿಸುವುದಕ್ಕೆ ಮೂಲಾಧಾರವಾಗಿದೆ. ಹೃದಯದ ಸ್ನೇಹವು ದೂರ-ದೂರದಿಂದ ಮಧುಬನ ನಿವಾಸಿಯನ್ನಾಗಿ
ಮಾಡುತ್ತದೆ. ಹೃದಯರಾಮ ತಂದೆಗೆ ಹೃದಯದ ಸ್ನೇಹವೇ ಇಷ್ಟವಿದೆ ಆದ್ದರಿಂದ ಯಾರೇ ಆಗಿರಲಿ, ಹೇಗೇ ಇರಲಿ
ಆದರೆ ಪರಮಾತ್ಮನಿಗೆ ಇಷ್ಟವಾಗಬೇಕು. ಆದ್ದರಿಂದ ತನ್ನವರನ್ನಾಗಿ ಮಾಡಿಕೊಂಡರು. ಪ್ರಪಂಚದವರು ಈಗ
ನಿರೀಕ್ಷಣೆಯನ್ನೇ ಮಾಡುತ್ತಿದ್ದಾರೆ. ತಂದೆಯು ಬರುತ್ತಾರೆ, ಆ ಸಮಯದಲ್ಲಿ ಹಾಗಾಗುತ್ತದೆ
ಹೀಗಾಗುತ್ತದೆ ಆದರೆ ತಮ್ಮೆಲ್ಲರ ಬಾಯಿಂದ, ಹೃದಯದಿಂದ ಏನು ಬರುತ್ತದೆ? "ಪಡೆದು ಬಿಟ್ಟೆವು". ತಾವು
ಸಂಪನ್ನರಾಗಿ ಬಿಟ್ಟಿರಿ ಮತ್ತು ಅವರು ಬುದ್ಧಿವಂತರು, ಈಗಿನವರೆಗೂ ಪರಿಶೀಲಿಸುವುದರಲ್ಲಿ ಸಮಯವನ್ನು
ಸಮಾಪ್ತಿ ಮಾಡುತ್ತಿದ್ದಾರೆ. ಆದ್ದರಿಂದಲೇ ಹೇಳಲಾಗುತ್ತದೆ - ಭೋಲಾನಾಥ ತಂದೆ ಎಂದು. ಗುರುತಿಸುವ
ವಿಶೇಷತೆಯು ವಿಶೇಷ ಆತ್ಮನನ್ನಾಗಿ ಮಾಡಿ ಬಿಟ್ಟಿತು. ಗುರುತಿಸಿ ಬಿಟ್ಟಿರಿ, ಪ್ರಾಪ್ತಿ
ಮಾಡಿಕೊಂಡಿರಿ, ಈಗ ಮುಂದೇನು ಮಾಡಬೇಕು? ಸರ್ವ ಆತ್ಮರ ಬಗ್ಗೆ ದಯೆ ಬರುತ್ತದೆಯೇ? ಇರುವುದಂತು
ಎಲ್ಲರೂ ಆತ್ಮರು, ಒಂದೇ ಬೇಹದ್ದಿನ ಪರಿವಾರವಿದೆ. ತಮ್ಮ ಪರಿವಾರದ ಯಾವುದೇ ಆತ್ಮವು ವರದಾನದಿಂದ
ವಂಚಿತನಾಗಿ ಉಳಿಯಬಾರದು. ಇಂತಹ ಉಮ್ಮಂಗ - ಉತ್ಸಾಹವು ಹೃದಯದಲ್ಲಿರುತ್ತದೆಯೇ? ಅಥವಾ ತಮ್ಮ
ಪ್ರವೃತ್ತಿಯಲ್ಲಿಯೇ ಬ್ಯುಸಿಯಾಗಿದ್ದೀರಾ? ಬೇಹದ್ದಿನ ಸ್ಥಿತಿಯಲ್ಲಿ ಸ್ಥಿತರಾಗಿರಿ, ಬೇಹದ್ದಿನ
ಆತ್ಮರ ಸೇವೆಯ ಶ್ರೇಷ್ಠ ಸಂಕಲ್ಪವೇ ಸಫಲತೆಗೆ ಸಹಜ ಸಾಧನವಾಗಿದೆ.
ಈಗ ಸೇವೆಯ ಗೋಲ್ಡನ್ ಜುಬಿಲಿಯನ್ನಾಚರಿಸುತ್ತಿದ್ದೀರಲ್ಲವೆ! ಅದಕ್ಕಾಗಿ ವಿಶಾಲ ಕಾರ್ಯಕ್ರಮವನ್ನು
ಮಾಡಿದ್ದೀರಲ್ಲವೆ! ಎಷ್ಟು ವಿಶಾಲ ಕಾರ್ಯವನ್ನು ಹಮ್ಮಿಕೊಂಡಿದ್ದೀರಿ ಅಷ್ಟೇ ವಿಶಾಲ ಹೃದಯ, ವಿಶಾಲ
ಉಮ್ಮಂಗ ಮತ್ತು ವಿಶಾಲ ರೂಪದ ತಯಾರಿಗಳಾಗಿವೆಯೇ? ಅಥವಾ ಇದನೇ ಯೋಚಿಸುತ್ತೀರಾ - ಭಾಷಣ ಮಾಡುವುದು
ಸಿಗುತ್ತದೆಯೆಂದರೆ ಮಾಡಿ ಬಿಡುತ್ತೇವೆ. ನಿಮಂತ್ರಣ ಹಂಚುವುದಕ್ಕೆ ಸಿಗುತ್ತದೆಯೆಂದರೆ ಹಂಚುತ್ತೇವೆ.
ಇದೇ ತಯಾರಿ ಮಾಡಿದ್ದೀರಾ? ಇದಕ್ಕೇ ವಿಶಾಲ ತಯಾರಿ ಎಂದು ಹೇಳಲಾಗುತ್ತದೆಯೇ? ಯಾವ ಡ್ಯೂಟಿಯು
ಸಿಕ್ಕಿದೆ, ಅದನ್ನು ಪೂರ್ಣಗೊಳಿಸುವುದಕ್ಕೇ ವಿಶಾಲ ಉಮ್ಮಂಗವೆಂದು ಹೇಳುವುದಿಲ್ಲ. ಡ್ಯೂಟಿಯ
ಪಾತ್ರವನ್ನಭಿನಯಿಸುವುದು ಆಜ್ಞಾಕಾರಿಯಾಗುವ ಚಿಹ್ನೆಯಂತು ಆಗಿದೆ, ಆದರೆ ಬೇಹದ್ದಿನ ವಿಶಾಲ ಬುದ್ಧಿ,
ವಿಶಾಲ ಉಮ್ಮಂಗ-ಉತ್ಸಾಹವೆಂದು ಕೇವಲ ಇದಕ್ಕೆ ಹೇಳುವುದಿಲ್ಲ. ವಿಶಾಲತೆಯ ಚಿಹ್ನೆಯಾಗಿದೆ - ಪ್ರತೀ
ಸಮಯದಲ್ಲಿಯೂ ತಮಗೆ ಸಿಕ್ಕಿರುವ ಡ್ಯೂಟಿಯಲ್ಲಿ ಸೇವೆಯಲ್ಲಿ ನವೀನತೆಯನ್ನು ತರುವುದು. ಭಲೆ ಭೋಜನ
ತಯಾರಿ ಮಾಡುವುದಿರಲಿ, ಭಾಷಣ ಮಾಡುವ ಡ್ಯೂಟಿಯಿರಲಿ ಆದರೆ ಪ್ರತೀ ಸೇವೆಯಲ್ಲಿ ಪ್ರತೀ ಸಮಯದಲ್ಲಿ
ನವೀನತೆಯನ್ನು ತುಂಬುವುದು - ಇದಕ್ಕೆ ವಿಶಾಲತೆ ಎಂದು ಹೇಳಲಾಗುತ್ತದೆ. ಯಾರು ಒಂದು ವರ್ಷ ಮೊದಲು
ಮಾಡಿದರೋ, ಅದರಲ್ಲಿ ಒಂದಲ್ಲ ಒಂದು ಆತ್ಮೀಯತೆಯು ಅವಶ್ಯವಾಗಿ ಸೇರ್ಪಡೆಯಾಗಲಿ. ಇಂತಹ
ಉಮ್ಮಂಗ-ಉತ್ಸಾಹವು ಹೃದಯದಲ್ಲಿ ಬರುತ್ತದೆಯೇ? ಅಥವಾ ಇದು ಹೇಗೆ ನಡೆಯಬೇಕು ಹಾಗೆಯೇ ಆಗುತ್ತದೆ ಎಂದು
ಯೋಚಿಸುತ್ತೀರಾ. ಪ್ರತೀ ಸಮಯದಲ್ಲಿ ವಿಧಿ ಮತ್ತು ವೃದ್ಧಿಯು ಬದಲಾಗುತ್ತಿರುತ್ತದೆ. ಹೇಗೆ ಸಮಯವು
ಸಮೀಪಕ್ಕೆ ಬರುತ್ತಿದೆ, ಹಾಗೆಯೇ ಪ್ರತಿಯೊಂದು ಆತ್ಮನಿಗೆ ತಂದೆಯ ಪರಿವಾರದ ಸಮೀಪತೆಯ ವಿಶೇಷ
ಅನುಭವವನ್ನು ಮಾಡಿಸಿರಿ. ಮನನ ಮಾಡಿರಿ - ಯಾವ ನವೀನತೆಯನ್ನು ತರುವುದು ಎಂದು. ಈಗ ಸಮ್ಮೇಳನದ
ವಿಶಾಲ ಕಾರ್ಯವನ್ನು ಮಾಡುತ್ತಿದ್ದೀರಲ್ಲವೆ. ಎಲ್ಲರೂ ಮಾಡುತ್ತಿದ್ದೀರಾ ಅಥವಾ ಯಾರು
ಹಿರಿಯರಿದ್ದಾರೆ ಅವರೇ ಮಾಡುತ್ತಿದ್ದಾರೆಯೇ? ಎಲ್ಲರ ಕಾರ್ಯವಾಗಿದೆಯಲ್ಲವೆ? ಪ್ರತಿಯೊಬ್ಬರೂ
ಯೋಚಿಸಬೇಕಾಗಿದೆ - ನಾನು ನವೀನತೆಗಾಗಿ ಸೇವೆಯಲ್ಲಿ ಮುಂದುವರೆಯಬೇಕು. ಭಲೆ ನಿಮಿತ್ತರನ್ನಾಗಿ
ಮುಂದಿಡುವುದು ಕೆಲವರನ್ನೇ ಮಾಡಲಾಗುತ್ತದೆ - ಹೇಗೆ ಭಾಷಣ ಮಾಡುತ್ತಾರೆಂದರೆ ಸ್ವಲ್ಪ ಮಂದಿಯೇ
ಮಾಡುವರು, ಇಷ್ಟೆಲ್ಲಾ ಸಭೆಯೇನು ಮಾಡುವರು! ಪ್ರತಿಯೊಬ್ಬರಿಗೂ ತಮ್ಮ-ತಮ್ಮ ಡ್ಯೂಟಿಯನ್ನು ಹಂಚಿಯೇ
ಕಾರ್ಯವನ್ನು ಸಂಪನ್ನಗೊಳಿಸಬೇಕಾಗುತ್ತದೆ. ಆದರೆ ಎಲ್ಲರೂ ನಿಮಿತ್ತರಾಗಬೇಕು. ಯಾವ ಮಾತಿನಲ್ಲಿ?
ನಾಲ್ಕೂ ಕಡೆಯಲ್ಲಿ ಎಲ್ಲಿಯೇ ಇರಬಹುದು, ಯಾವುದೇ ಡ್ಯೂಟಿಗೆ ನಿಮಿತ್ತರಿರಬಹುದು. ಆದರೆ ಯಾವ
ಸಮಯದಲ್ಲಿ ಯಾವುದೇ ವಿಶಾಲ ಕಾರ್ಯವು ಎಲ್ಲಿಯೇ ಆಗುತ್ತದೆ, ಆ ಸಮಯದಲ್ಲಿ ದೂರ ಕುಳಿತಿದ್ದರೂ ಸಹ
ಅಷ್ಟು ಸಮಯದವರೆಗೆ ಸದಾ ಪ್ರತಿಯೊಬ್ಬರ ಮನಸ್ಸಿನಲ್ಲಿ ವಿಶ್ವ ಕಲ್ಯಾಣದ ಶ್ರೇಷ್ಠ ಭಾವನೆ ಮತ್ತು
ಶ್ರೇಷ್ಠ ಕಾಮನೆಯು ಅವಶ್ಯವಾಗಿರಬೇಕು. ಹೇಗೆ ಇತ್ತೀಚೆಗೆ ವಿ.ಐ.ಪಿ.,ಯು ಒಂದುವೇಳೆ ತಲುಪಲು
ಸಾಧ್ಯವಾಗಲಿಲ್ಲವೆಂದರೆ ಶುಭ ಕಾಮನೆಯನ್ನು ಕಳುಹಿಸುತ್ತಾರಲ್ಲವೆ. ಹಾಗೆಯೇ ತಾವು ಅವರಿಗಿಂತ
ಕಡಿಮೆಯಿದ್ದೀರೇನು! ತಾವೆಲ್ಲರೂ ವಿಶೇಷ ಆತ್ಮರ ಶುಭ ಭಾವನೆ, ಶುಭ ಕಾಮನೆಯು ಆ ಕಾರ್ಯವನ್ನು
ಅವಶ್ಯವಾಗಿ ಸಫಲ ಮಾಡುತ್ತದೆ.
ಈ ವಿಶೇಷ ದಿನ ವಿಶೇಷ ಕಂಕಣವನ್ನು ಕಟ್ಟಿಕೊಳ್ಳಬೇಕು ಮತ್ತು ಯಾವುದೇ ಅಲ್ಪಕಾಲದ ಮಾತುಗಳಲ್ಲಿ
ಸಂಕಲ್ಪ ಶಕ್ತಿ, ಸಮಯದ ಶಕ್ತಿಯನ್ನು ವ್ಯರ್ಥವಾಗಿ ಕಳೆಯದೆ ಪ್ರತೀ ಸಂಕಲ್ಪದಲ್ಲಿ, ಪ್ರತೀ ಸಮಯದಲ್ಲಿ
ವಿಶಾಲ ಸೇವೆಗೆ ನಿಮಿತ್ತನಾಗಿ ಮನಸ್ಸಾ ಶಕ್ತಿಯಿಂದಲೂ ಸಹಯೋಗಿಯಾಗಬೇಕಗಿದೆ. ಅಬುನಲ್ಲಿ
ಸಮ್ಮೇಳನವಾಗುತ್ತಿದೆ, ನಾವಂತು ಇಂತಹ ದೇಶದಲ್ಲಿ ಕುಳಿತಿದ್ದೇವೆ ಎಂದು ತಿಳಿಯಬಾರದು. ತಾವೆಲ್ಲರೂ
ವಿಶಾಲ ಕಾರ್ಯದಲ್ಲಿ ಸಹಯೋಗಿಯಾಗಿದ್ದೀರಿ. ವಾತಾವರಣ ವಾಯುಮಂಡಲವನ್ನು ತಯಾರು ಮಾಡಿರಿ. ಯಾವಾಗ
ವಿಜ್ಞಾನದ ಶಕ್ತಿಯಿಂದ ಒಂದು ದೇಶದಿಂದ ಇನ್ನೊಂದು ದೇಶದವರೆಗೆ ರಾಕೆಟ್ನ್ನು ಕಳುಹಿಸಲು ಸಾಧ್ಯವಿದೆ,
ಅಂದಮೇಲೆ ಶಾಂತಿಯ ಶಕ್ತಿಯಿಂದ ತಾವು ಶುಭಭಾವನೆ, ಕಲ್ಯಾಣದ ಭಾವನೆಯ ಮೂಲಕ ಇಲ್ಲಿ ಅಬುವಿನಲ್ಲಿ
ಮನಸ್ಸಾ ಮೂಲಕ ಸಹಯೋಗಿಯಾಗಲು ಸಾಧ್ಯವಿಲ್ಲವೇ? ಕೆಲವರು ಸಾಕಾರದಲ್ಲಿ ವಾಣಿಯಿಂದ, ಕರ್ಮದಿಂದ
ನಿಮಿತ್ತನಾಗುತ್ತಾರೆ. ಕೆಲವರು ಮನಸ್ಸಾ ಸೇವೆಯಲ್ಲಿ ನಿಮಿತ್ತನಾಗುವರು. ಆದರೆ ಎಷ್ಟು ದಿನಗಳು
ಕಾರ್ಯಕ್ರಮಗಳು ನಡೆಯುತ್ತದೆ, ಭಲೆ 5 ದಿನಗಳಿರಲಿ, 6 ದಿನಗಳಿರಲಿ, ಇಷ್ಟೂ ಸಮಯದಲ್ಲಿ ಪ್ರತಿಯೊಬ್ಬ
ಬ್ರಾಹ್ಮಣ ಆತ್ಮನಿಗೂ ಸೇವೆಯ ಕಂಕಣವು ಬಂಧಿಸಲ್ಪಟ್ಟಿರಲಿ - ನಾನು ಆತ್ಮನು ನಿಮಿತ್ತನಾಗಿ
ಸಫಲತೆಯನ್ನು ತರಬೇಕಾಗಿದೆ. ಪ್ರತ್ಯೊಬ್ಬರೂ ತಮ್ಮನ್ನು ಜವಾಬ್ದಾರನೆಂದು ತಿಳಿಯಲಿ. ಇದರ ಭಾವವನ್ನು
ಹೀಗೆ ತಿಳಿಯಬಾರದು - ಎಲ್ಲರೂ ಜವಾಬ್ದಾರರಾಗಿದ್ದಾರೆ ಅಂದಮೇಲೆ ಭಾಷಣದ ಅವಕಾಶವು ಸಿಗಬೇಕು ಅಥವಾ
ವಿಶೇಷವಾಗಿ ಯಾವುದೇ ಡ್ಯೂಟಿಯು ಸಿಕ್ಕಿದೆಯೆಂದರೆ ಜವಾಬ್ದಾರರಾಗಿದ್ದಾರೆ, ಇವರಿಗೆ ಜವಾಬ್ದಾರನೆಂದು
ಹೇಳುವುದಿಲ್ಲ. ಎಲ್ಲಿಯೇ ಇದ್ದೀರಿ, ಯಾವುದೇ ಡ್ಯೂಟಿಯು ಸಿಕ್ಕಿದೆ, ಭಲೆ ದೂರ ಕುಳಿತಿರುವುದಾಗಿರಲಿ,
ಭಲೆ ಸ್ಟೇಜಿನ ಮೇಲೆ ಬರುವುದಾಗಿರಲಿ - ನಾನು ಸಹಯೋಗಿ ಆಗಲೇ ಬೇಕು, ಇದಕ್ಕೆ ಹೇಳಲಾಗುತ್ತದೆ - ಇಡೀ
ವಿಶ್ವದಲ್ಲಿ ಸೇವೆಯ ಆತ್ಮೀಯತೆಯ ಪ್ರಕಂಪನಗಳನ್ನು ಹರಡುವುದು. ಖುಷಿಯ, ಉಮ್ಮಂಗ-ಉತ್ಸಾಹದ
ಪ್ರಕಂಪನಗಳು ಹರಡಿ ಬಿಡಲಿ. ಇಂತಹ ಸಹಯೋಗಿಯಾಗಿದ್ದೀರಾ? ಈ ಸಮ್ಮೇಳನದಲ್ಲಿ ನವೀನತೆಯನ್ನು
ತೋರಿಸುತ್ತೀರಲ್ಲವೇ? ಗೋಲ್ಡನ್ ಜುಬಿಲಿಯಾಗಿದೆ ಅಂದಮೇಲೆ ನಾಲ್ಕೂ ಕಡೆಯಲ್ಲಿ ಗೋಲ್ಡನೇಜ್
ಬರುವುದಿದೆ, ಈ ಖುಷಿಯ ಪ್ರಕಂಪನಗಳು ಹರಡಿ ಬಿಡಲಿ. ಭಯಭೀತರಾಗಿರುವ ಆತ್ಮರಿದ್ದಾರೆ,
ಭರವಸೆಯಿಲ್ಲದಿರುವ ಆತ್ಮರಿದ್ದಾರೆ, ಅವರಲ್ಲಿ ಶ್ರೇಷ್ಠ ಭವಿಷ್ಯದ ಭರವಸೆಯನ್ನು ಉತ್ಪನ್ನ ಮಾಡಿರಿ.
ಭಯಭೀತ ಆತ್ಮರಲ್ಲಿ ಖುಷಿಯ ಪ್ರಕಂಪನಗಳು ಉತ್ಪನ್ನವಾಗಲಿ. ಇದು ಗೋಲ್ಡನ್ ಜುಬಿಲಿಯ ಗೋಲ್ಡನ್ ಸೇವೆ,
ಇದೇ ಲಕ್ಷ್ಯವನ್ನಿಡಿ. ಸ್ವಯಂ ಸಹ ಪ್ರತೀ ಕಾರ್ಯದಲ್ಲಿ ಮೋಲ್ಡ್ ಆಗುವವರು, ರಿಯಲ್ ಗೋಲ್ಡ್ ಆಗಿದ್ದು
ಗೋಲ್ಡನ್ ಜುಬಿಲಿಯನ್ನು ಆಚರಿಸಬೇಕಾಗಿದೆ. ತಿಳಿಯಿತೆ.
ಯಾವುದನ್ನು ಈಗಿನವರೆಗೆ ಮಾಡಿಲ್ಲ, ಅದನ್ನು ಮಾಡಿ ತೋರಿಸಬೇಕಾಗಿದೆ. ಇಂತಹ ಆತ್ಮರನ್ನು ತಯಾರು
ಮಾಡಿರಿ, ಅವರೊಬ್ಬರು ಅನೇಕ ಆತ್ಮರ ಸೇವೆಯನ್ನು ಮಾಡಲು ನಿಮಿತ್ತರಾಗಿ ಬಿಡಲಿ. ಯೋಚಿಸುತ್ತಲೇ
ಇರುತ್ತೀರಿ, ಆದರೆ ಮಾಡುತ್ತೇವೆ, ಮಾಡುತ್ತೇವೆ ಎಂದು ಹೇಳುತ್ತಾ ಸಮಯವು ಕಳೆದು ಹೋಗುತ್ತದೆ ಮತ್ತು
ಅಂತ್ಯದಲ್ಲಿ ಯಾರೇ ಸಿಗುತ್ತಾರೆ ಅವರನ್ನೇ ಕರೆದುಕೊಂಡು ಬರುತ್ತೀರಿ. ಸಂಖ್ಯೆಯಂತು ಹೆಚ್ಚಾಗುತ್ತದೆ
ಆದರೆ ವಿಶಾಲ ಸೇವೆಯ ಕಾರ್ಯವನ್ನು ಇದಕ್ಕಾಗಿಯೇ ಇಡಲಾಗುತ್ತದೆ - ಅಂತಹ ಆತ್ಮರು ಬರಲಿ, ಅವರೊಬ್ಬರು
ಅನೇಕರಿಗೆ ನಿಮಿತ್ತರಾಗಿ ಬಿಡಲಿ. ನಾಲ್ಕೂ ಕಡೆಯಲ್ಲಿ ಸೇವೆಯು ನಡೆಯುತ್ತಿರುತ್ತದೆಯಲ್ಲವೆ.
ತಮ್ಮ-ತಮ್ಮ ಸ್ಥಾನಗಳಲ್ಲಿಯೂ ಅಂತಹ ಆತ್ಮರ ಕಾರ್ಯವಂತು ನಡೆಸುತ್ತಿರುತ್ತೀರಿ. ಆದ್ದರಿಂದ ಈಗಿನಿಂದ
ಗೋಲ್ಡನ್ ಜುಬಿಲಿಯ, ಸ್ವಯಂನ ಸೇವೆಯ ಮತ್ತು ಸ್ವಯಂನ ಜೊತೆ, ಅನ್ಯ ವಿಶೇಷ ಆತ್ಮರ ಸೇವೆಯ
ಪ್ರಕಂಪನಗಳನ್ನು ಹರಡಿಸಿರಿ. ತಿಳಿಯಿತೆ ಏನು ಮಾಡಬೇಕು ಎಂದು.
ಪ್ರೀತಿಯಿಂದ ಪರಿಶ್ರಮ ಪಡಿ. ಸ್ನೇಹವು ಅಂತಹ ವಸ್ತುವಾಗಿದೆ, ಅದು ಸ್ನೇಹಕ್ಕೆ ವಶವಾಗದಿರುವವರೂ ಸಹ
ಆಯಿತು ಎನ್ನುತ್ತಾರೆ. ಸಮಯವಿಲ್ಲದಿದ್ದರೂ ಸಮಯವನ್ನು ತೆಯುತ್ತಾರೆ. ಇದು ಆತ್ಮಿಕ ಸ್ನೇಹವಾಯಿತು.
ಅಂದಮೇಲೆ ಧರಣಿಯನ್ನು ತಯಾರು ಮಾಡಿರಿ. ಹೀಗೆ ಯೋಚಿಸಬೇಡಿ - ಈ ಧರಣಿಯಿರುವುದೇ ಹೀಗೆ. ಇವರುಗಳು
ಇರುವುದೇ ಹೀಗೆ. ತಾವು ಹೇಗಿದ್ದಿರಿ? ಬದಲಾಗಿ ಬಿಟ್ಟಿರಲ್ಲವೆ. ಶುಭ ಭಾವನೆಯ ಫಲವು ಸದಾ ಶ್ರೇಷ್ಠ
ಫಲವಾಗಿರುತ್ತದೆ. ಒಳ್ಳೆಯದು.
ತಮ್ಮ ಮನೆಯಲ್ಲಿ ಬಂದಿದ್ದೀರಿ, ಇದಂತು ತಂದೆಗೂ ಖುಷಿಯಿದೆ ಆದರೆ ಸಮಯವಂತು
ಅಲ್ಪಕಾಲದ್ದಾಗಿದೆಯಲ್ಲವೆ. ಎಷ್ಟು ಸಂಖ್ಯೆಯಾಗುತ್ತದೆಯೋ ಅಷ್ಟೇ ಹಂಚಿಕೆಯಾಗುತ್ತದೆ ಅಲ್ಲವೆ.
ವಸ್ತು 4 ಇದೆ, ತೆಗೆದುಕೊಳ್ಳುವವರು 8 ಮಂದಿಯಿದ್ದಾರೆಂದರೆ ಏನು ಮಾಡುವಿರಿ! ಅದೇ ವಿಧಿಯಿಂದ
ಮಾಡುವಿರಲ್ಲವೆ. ಬಾಪ್ದಾದಾರವರೂ ಸಹ ವಿಧಿಯನುಸಾರವಾಗಿ ನಡೆಯಲೇಬೇಕಾಗುತ್ತದೆ. ಬಾಪ್ದಾದಾರವರು
ಹೀಗಂತು ಹೇಳಲು ಸಾಧ್ಯವಿಲ್ಲ - ಇಷ್ಟೇಕೆ ಬಂದಿದ್ದೀರಿ? ಭಲೆ ಬನ್ನಿರಿ. ಸ್ವಾಗತ ಆದರೆ
ಸಮಯದನುಸಾರವಾಗಿ ವಿಧಿ ಮಾಡಬೇಕಾಗುತ್ತದೆ. ಹೌದು, ಅವ್ಯಕ್ತ ವತನದಲ್ಲಿ ಸಮಯದ ಮಿತಿಯಿಲ್ಲ.
ಮಹಾರಾಷ್ಟ್ರದವರೂ ಸಹ ಕಮಾಲ್ ಮಾಡಿ ತೋರಿಸುತ್ತಾರೆ. ಯಾವುದಾದರೂ ಅಂತಹ ಆತ್ಮನನ್ನು ನಿಮಿತ್ತ ಮಾಡಿ
ತೋರಿಸಿರಿ. ಆಗ ಹೇಳಲಾಗುತ್ತದೆ - ಮಹಾರಾಷ್ಟ್ರ. ದೇಹಲಿಯಂತು ನಿಮಿತ್ತವಿದ್ದೇ ಇರುತ್ತದೆ. ಈಗ
ಸಮ್ಮೇಳನಗಳನ್ನಂತು ಬಹಳಷ್ಟು ಮಾಡಿ ಬಿಟ್ಟೆವು, ಈಗ ಎಷ್ಟಾಗುತ್ತದೆಯೋ ಅಷ್ಟು ಮಾಡುತ್ತೇವೆ ಅಲ್ಲ.
ಪ್ರತೀ ವರ್ಷವೂ ಹೆಚ್ಚಿಸಬೇಕಾಗಿದೆ. ಈಗಂತು ಅನೇಕ ಆತ್ಮರಿದ್ದಾರೆ, ಅವರನ್ನು ನಿಮಿತ್ತ ಮಾಡಬಹುದು.
ದೆಹಲಿಯವರೂ ಸಹ ವಿಶೇಷವಾಗಿ ನಿಮಿತ್ತರಾಗಬೇಕು. ರಾಜಾಸ್ಥಾನವು ಏನು ಮಾಡುತ್ತದೇ? ರಾಜಾಸ್ಥಾನವು ಸದಾ
ಪ್ರತಿಯೊಂದು ಕಾರ್ಯದಲ್ಲಿ ನಂಬರ್ವನ್ ಆಗಬೇಕಾಗಿದೆ ಏಕೆಂದರೆ ರಾಜಾಸ್ಥಾನದಲ್ಲಿ ನಂಬರ್ವನ್
ಹೆಡ್ಕ್ವಾರ್ಟರ್ ಇದೆ. ಭಲೆ ಕ್ವಾಲಿಟಿಯಲ್ಲಿ, ಭಲೆ ಕ್ವಾಂಟಿಟಿಯಲ್ಲಿ, ಎರಡರಲ್ಲಿಯೂ ನಂಬರ್ವನ್
ಆಗಬೇಕು. ಡಬಲ್ ವಿದೇಶಿಯವರೂ ನವೀನತೆಯನ್ನು ತೋರಿಸುತ್ತೀರಲ್ಲವೆ. ಪ್ರತಿಯೊಂದು ದೇಶದಲ್ಲಿ ಈ
ಖುಷಿಯ ಸುದ್ದಿಯ ಪ್ರಕಂಪನಗಳು ಹರಡಿ ಬಿಡುತ್ತದೆಯೆಂದರೆ, ಎಲ್ಲರೂ ತಮಗೆ ಬಹಳ ಮನಃಪೂರ್ವಕವಾಗಿ
ಆಶೀರ್ವಾದಗಳನ್ನು ಕೊಡುತ್ತಾರೆ. ಜನರು ಬಹಳ ಭಯಭೀತರಾಗಿದ್ದಾರಲ್ಲವೆ! ಇಂತಹ ಆತ್ಮರಿಗೆ ಆತ್ಮಿಕ
ಖುಷಿಯ ಪ್ರಕಂಪನಗಳಿರಲಿ, ಅವರು ತಿಳಿಯಲಿ - ಇವರು ಫರಿಶ್ತೆಯಾಗಿ ಶುಭ ಸಂದೇಶವನ್ನು ಕೊಡಲು
ನಿಮಿತ್ತರಾಗಿರುವ ಆತ್ಮನಾಗಿದ್ದಾರೆ. ತಿಳಿಯಿತೆ - ಈಗ ಯಾವ-ಯಾವ ಝೋನ್ ನವೀನತೆಯನ್ನು ಮಾಡುತ್ತವೆ
ಎಂದು ನೋಡುತ್ತೇವೆ. ಸಂಖ್ಯೆಯನ್ನು ಕರೆ ತರುತ್ತೀರಾ ಅಥವಾ ಕ್ವಾಲಿಟಿಯನ್ನು ತರುತ್ತೀರಾ. ನಂತರ
ಇದರ ಫಲಿತಾಂಶವನ್ನು ಬಾಪ್ದಾದಾರವರು ತಿಳಿಸುತ್ತಾರೆ. ನವೀನತೆಯನ್ನೂ ತನ್ನಿರಿ. ನವೀನತೆಯಲ್ಲಿಯೂ
ಅಂಕಗಳು ಸಿಗುತ್ತವೆ. ಒಳ್ಳೆಯದು.
ಸರ್ವ ಸ್ವರಾಜ್ಯದ ಅಧಿಕಾರಿ ಆತ್ಮರಿಗೆ, ಸದ ಬೇಹದ್ದಿನ ಸೇವೆಯಲ್ಲಿ ಬೇಹದ್ದಿನ ವೃತ್ತಿಯಲ್ಲಿ
ಇರುವಂತಹ ಶ್ರೇಷ್ಠಾತ್ಮರಿಗೆ, ವಿಶಾಲ ಹೃದಯ, ಸದಾ ವಿಶಾಲ ಬುದ್ಧಿ, ವಿಶಾಲ
ಉಮ್ಮಂಗ-ಉತ್ಸಾಹದಲ್ಲಿರುವ ವಿಶೇಷ ಆತ್ಮರಿಗೆ, ಸದಾ ಸ್ವಯಂನ್ನು ಪ್ರತೀ ಸೇವೆಗೂ ನಿಮಿತ್ತನೆಂದು
ತಿಳಿದು ನಿರ್ಮಾಣ ಮಾಡುವಂತಹ, ಸದಾ ಶ್ರೇಷ್ಠ ಮತ್ತು ತಂದೆಯ ಸಮಾನ ಸೇವೆಯಲ್ಲಿ ಸಫಲತೆಯನ್ನು
ಪಡೆಯುವ, ಇಂತಹ ಆತ್ಮೀಯವಾಗಿರುವ ಆತ್ಮರಿಗೆ ಆತ್ಮಿಕ ತಂದೆಯ ನೆನಪು-ಪ್ರೀತಿ ಹಾಗೂ ನಮಸ್ತೆ.
ಕುಮಾರಿಯರೊಂದಿಗೆ:-
ಸದಾ ಕುಮಾರಿ ಜೀವನವು
ನಿರ್ದೋಷ ಜೀವನವೆಂದು ಗಾಯನಗೊಂಡಿದೆ. ಕುಮಾರಿ ಜೀವನವು ಸದಾ ಶ್ರೇಷ್ಠವೆಂದು ಗಾಯನವಾಗಿದೆ ಮತ್ತು
ಪೂಜೆಯಾಗುತ್ತದೆ. ಇಂತಹ ಶ್ರೇಷ್ಠ ಮತ್ತು ಪೂಜ್ಯಾತ್ಮನೆಂದು ತಮ್ಮನ್ನು ತಿಳಿಯುತ್ತೀರಾ? ಎಲ್ಲಾ
ಕುಮಾರಿಯರು ವಿಶೇಷವಾಗಿ ಯಾವುದಾದರೂ ಕಮಾಲ್ ಮಾಡಿ ತೋರಿಸುವವರಲ್ಲವೆ! ಅಥವಾ ಕೇವಲ ವಿದ್ಯೆಯನ್ನು
ಓದುವವರಾಗಿದ್ದೀರಾ! ವಿಶ್ವ ಸೇವಾಧಾರಿಯಾಗುತ್ತೀರಾ ಅಥವಾ ಅಲ್ಪಕಾಲದ, ಗುಜರಾತಿನ ಸೇವೆಯನ್ನು
ಮಾಡಬೇಕೆ ಅಥವಾ ಮಧ್ಯಪ್ರದೇಶದ ಅಥವಾ ಇಂತಹ ಸ್ಥಾನದ ಸೇವೆಯನ್ನು ಮಾಡಬೇಕು, ಹೀಗಂತು ಇಲ್ಲ ತಾನೆ.
ಎವರೆಡಿ ಆತ್ಮರು ಅನ್ಯರನ್ನೂ ಎವರೆಡಿ ಮಾಡಿಬಿಡುತ್ತಾರೆ. ಅಂದಮೇಲೆ ತಾವು ಕುಮಾರಿಯರು ಏನು
ಬಯಸುತ್ತೀರಿ ಮಾಡಬಲ್ಲಿರಿ. ಇಂದಿನ ಸರ್ಕಾರವು ಏನು ಹೇಳುತ್ತದೆ, ಅದನ್ನು ಮಾಡಲಾಗುವುದಿಲ್ಲವೇ?
ಇಂತಹ ರಾಜ್ಯದಲ್ಲಿದ್ದುಕೊಂಡು ಸೇವೆಯನ್ನು ಮಾಡಬೇಕೆಂದರೆ, ಇಷ್ಟು ಶಕ್ತಿಶಾಲಿಯಾದ ಸೇವೆಯಾದಾಗಲೇ
ಸಫಲತೆಯಾಗುತ್ತದೆ. ಈ ಜ್ಞಾನದ ವಿದ್ಯೆಯಲ್ಲಿ ಅಂಕಗಳನ್ನು ತೆಗೆದುಕೊಂಡಿದ್ದೀರಾ? ಲಕ್ಷ್ಯವನ್ನು ಇದೇ
ಇಡಬೇಕು - ನಂಬರ್ವನ್ ತೆಗೆದುಕೊಳ್ಳಲೇಬೇಕು. ಸದಾ ಈ ವಿಶೇಷತೆಯನ್ನು ತೋರಿಸಿರಿ - ಹೇಳುವುದು ಕಡಿಮೆ,
ಆದರೆ ಯಾರ ಮುಂದೆಯೇ ಹೋಗಿರಿ, ಅವರು ತಮ್ಮ ಜೀವನದಿಂದ ಪಾಠ ಓದಲಿ. ಮುಖದ ಪಾಠವನ್ನಂತು ಕೆಲವು
ಹೇಳುವವರಿದ್ದಾರೆ, ಕೇಳುವವರೂ ಇದ್ದರೆ ಆದರೆ ಜೀವನದಿಂದ ಪಾಠವನ್ನು ಓದಲಿ - ಇದಾಗಿದೆ ವಿಶೇಷತೆ.
ತಮ್ಮ ಜೀವನವೇ ಟೀಚರ್ ಆಗಿ ಬಿಡಲಿ. ಮುಖದ ಪಾಠದ ಟೀಚರ್ ಅಲ್ಲ, ಮುಖದಿಂದ ಇಷ್ಟು ಹೇಳಬೇಕಾಗುತ್ತದೆ
ಆದರೆ ಮುಖದಿಂದ ತಿಳಿಸಿದ ನಂತರವೂ ಒಂದುವೇಳೆ ಜೀವನದಲ್ಲಿ ಆಗುತ್ತಿಲ್ಲವೆಂದರೆ ಅವರು
ಒಪ್ಪುತ್ತಿಲ್ಲ. ಹೇಳುತ್ತಾರೆ - ತಿಳಿಸುವವರಂತು ಬಹಳಷ್ಟಿದ್ದಾರೆ. ಆದ್ದರಿಂದ ಲಕ್ಷ್ಯವಿಡಿ -
ಜೀವನದ ಮೂಲಕ ಯಾರನ್ನಾದರೂ ತಂದೆಯ ಮಕ್ಕಳನ್ನಾಗಿ ಮಾಡಬೇಕು. ಇತ್ತೀಚೆಗೆ ಕೇಳುವ ರುಚಿಯನ್ನೂ
ಇಡುವುದಿಲ್ಲ, ನೋಡಲು ಬಯಸುತ್ತಾರೆ. ನೋಡಿ - ರೇಡಿಯೋ ಕೇಳುವ ವಸ್ತುವಾಗಿದೆ, ದೂರದರ್ಶನವು ನೋಡುವ
ವಸ್ತುವಾಗಿದೆ, ಹಾಗಾದರೆ ಯಾವುದನ್ನು ಇಷ್ಟ ಪಡುತ್ತಾರೆ? (ದೂರದರ್ಶನ) ಕೇಳುವುದಕ್ಕಿಂತ ನೋಡಲು
ಬಯಸುತ್ತಾರೆ. ಅಂದಮೇಲೆ ತಮ್ಮ ಜೀವನದಲ್ಲಿಯೂ ನೋಡಲು ಬಯಸುತ್ತಾರೆ. ಹೇಗೆ ನಡೆಯುತ್ತಾ, ಹೇಗೆ
ಏಳುತ್ತಾರೆ, ಹೇಗೆ ಆತ್ಮಿಕ ದೃಷ್ಟಿಯನ್ನಿಡುತ್ತಾರೆ - ಇದರ ಲಕ್ಷ್ಯವನ್ನಿಡಿ. ತಿಳಿಯಿತೆ -
ಸಂಗಮಯುಗದಲ್ಲಿ ಕುಮಾರಿಯರ ಮಹತ್ವವೇನಿದೆ, ಅದನ್ನಂತು ತಿಳಿದಿದ್ದೀರಲ್ಲವೇ? ಸಂಗಮದಲ್ಲಿ
ಎಲ್ಲರಿಗಿಂತ ಮಹಾನರು ಕುಮಾರಿಯರಾಗಿದ್ದಾರೆ. ಅಂದಮೇಲೆ ತಮ್ಮನ್ನು ಮಹಾನರೆಂದು ತಿಳಿದು ಸೇವೆಯಲ್ಲಿ
ಸಹಯೋಗಿಯಾಗಿದ್ದೀರಾ ಅಥವಾ ಆಗಬೇಕೆ? ಯಾವ ಲಕ್ಷ್ಯವಿದೆ? ಡಬಲ್ಪಾರ್ಟ್ ಅಭಿನಯಿಸುವ ಲಕ್ಷ್ಯವಿದೆಯೇ?
ಮಂಕರಿಯನ್ನು ಹೊರುತ್ತೀರಾ? ಒಳ್ಳೆಯದು.
ವರದಾನ:
ಬಾಲಕ ಮತ್ತು ಮಾಲೀಕತ್ವದ ಸಮಾನತೆಯ ಮೂಲಕ ಸರ್ವ ಖಜಾನೆಗಳಲ್ಲಿ ಸಂಪನ್ನ ಭವ.
ಹೇಗೆ ಬಾಲಕತ್ವದ ನಶೆಯು
ಎಲ್ಲರಲ್ಲಿದೆ ಅದೇ ರೀತಿ ಬಾಲಕನಿಂದ ಮಾಲೀಕ ಅರ್ಥಾತ್ ತಂದೆಯ ಸಮಾನ ಸಂಪನ್ನ ಸ್ಥಿತಿಯ ಅನುಭವವನ್ನು
ಮಾಡಿರಿ. ಮಾಲೀಕತ್ವದ ವಿಶೇಷತೆಯಿದೆ - ಮಾಲೀಕರೆಷ್ಟಿರುತ್ತೀರಿ ಅಷ್ಟೇ ವಿಶ್ವ ಸೇವಾಧಾರಿಯ
ಸಂಸ್ಕಾರವು ಸದಾ ಇಮರ್ಜ್ ರೂಪದಲ್ಲಿರಲಿ. ಮಾಲೀಕತ್ವದ ನಶೆ ಮತ್ತು ವಿಶ್ವ ಸೇವಾಧಾರಿಯ ನಶೆಯು ಸಮಾನ
ರೂಪದಲ್ಲಿರಲಿ, ಆಗ ತಂದೆಯ ಸಮಾನರೆಂದು ಹೇಳಲಾಗುತ್ತದೆ. ಬಾಲಕ ಮತ್ತು ಮಾಲೀಕ - ಎರಡು ಸ್ವರೂಪವು
ಸದಾಕಾಲ ಪ್ರತ್ಯಕ್ಷ ಕರ್ಮದಲ್ಲಿ ಬಂದು ಬಿಡಲಿ, ಆಗ ತಂದೆಯ ಸಮಾನ ಸರ್ವ ಖಜಾನೆಗಳಿಂದ ಸಂಪನ್ನ
ಸ್ಥಿತಿಯ ಅನುಭವವನ್ನು ಮಾಡಲು ಸಾಧ್ಯವಾಗುವುದು.
ಸ್ಲೋಗನ್:
ಜ್ಞಾನದ ಅಕೂಟ
ಖಜಾನೆಗಳ ಅಧಿಕಾರಿಯಾಗುತ್ತೀರೆಂದರೆ ಅಧೀನತೆಯು ಸಮಾಪ್ತಿಯಾಗಿ ಬಿಡುತ್ತದೆ.
ಸೂಚನೆ:-
ಇಂದು ಅಂತರಾಷ್ಟ್ರೀಯ
ಯೋಗದಿನ ಮೂರನೇ ರವಿವಾರವಾಗಿದೆ, ಸಂಜೆ 6.30ರಿಂದ 7.30ರವರೆಗೆ ಸಹೋದರ-ಸಹೋದರಿಯರೆಲ್ಲರೂ ಸಂಘಟಿತ
ರೂಪದಲ್ಲಿ ಯೋಗಾಭ್ಯಾಸದಲ್ಲಿ ಅನುಭವ ಮಾಡಿರಿ - ನಾನು ಆತ್ಮನು ಬೀಜರೂಪ ತಂದೆಯ ಜೊತೆ ಕಂಬೈಂಡ್
ಇದ್ದೇನೆ. ನಾನು ಸರ್ವಶಕ್ತಿಗಳಿಂದ ಸಂಪನ್ನನಾದ ಮಾಸ್ಟರ್ ಜ್ಞಾನಸೂರ್ಯನಿದ್ದೇನೆ. ನನ್ನಿಂದ
ಸರ್ವಶಕ್ತಿಗಳ ಕಿರಣಗಳು ಹೊರಬಂದು ನಾಲ್ಕೂ ಕಡೆಗಳಲ್ಲಿ ಹರಡುತ್ತಿದೆ.
1. ಆತ್ಮಿಕ ಸ್ನೇಹದ
ಮಿಲನದ ಅರ್ಥವೇನು?
ಅ. ಚಿತ್ರ ಮತ್ತು ವಿಚಿತ್ರದ ಮಿಲನ
ಆ. ಆತ್ಮಗಳ ಮಿಲನ ವಿಚಿತ್ರ ಮಿಲನ
ಇ. ಆತ್ಮ ಮತ್ತು ಪರಮಾತ್ಮನ ಮಿಲನ
ಈ. ಆತ್ಮ ಮಾತು ದೇವತೆಗಳ ಮಿಲನ
2. ಸಂಗಮಯುಗಕ್ಕೆ ಯಾವ ವರದಾನವು ಸಿಕ್ಕಿದೆ?
ಅ. ಶ್ರೇಷ್ಠ ಮಿಲನ
ಆ. ಆತ್ಮಿಕ ಮಿಲನ
ಇ. ಅವಿನಾಶಿ ಮಿಲನ
ಈ. ದೇವತೆಗಳ ಮಿಲನ
3. ತಂದೆಯ ಯಾವ ಪಾತ್ರ ಸಂಗಮಯುದಲ್ಲಿಯೇ ನಡೆಯುತ್ತದೆ?
ಅ. ಪತಿತರಿಂದ ಪಾವನರನ್ನಾಗಿ ಮಾಡುವುದು
ಆ. ವಿದಾತಾ ಮತ್ತು ವರದಾತಾನ ಅವಿನಾಶಿ ಪಾತ್ರ
ಇ. ದುಃಖ ಹರ್ತ ಸುಖ ಕರ್ತ
ಈ. ಮುಕ್ತಿ ಮತ್ತು ಜೀವನಮುಕ್ತಿ ದಾತನ ಪಾತ್ರ
4. ಬ್ರಾಹ್ಮಣ ಮಕ್ಕಳ ವಿಶೇಷತೆ ಏನಾಗಿದೆ?
ಅ. ಸಂತುಷ್ಟರಾಗುವುದು ಮತ್ತು ಸಂತುಷ್ಟ ಮಾಡುವುದು
ಆ. ತಮ್ಮನ್ನು ಮತ್ತು ತಂದೆಯನ್ನು ತಿಳಿದುಕೊಳ್ಳುವುದು
ಇ. ಆರ್ಶೀವಾದವನ್ನು ತೆಗೆದುಕೊಳ್ಳುವುದು ಮತ್ತು ಆರ್ಶೀವಾದವನ್ನು ಕೊಡುವುದು
ಈ. ಸುಖ ಕೊಡುವುದು ದುಃಖ ತೆಗೆದುಕೊಳ್ಳುವುದು
5. ಪರಮಾತ್ಮ ತಂದೆಯ ವಿಶೇಷತೆ ಏನಾಗಿದೆ?
ಅ. ನಿರ್ಬಲರನ್ನು ಸಮರ್ಥರನ್ನಾಗಿ ಮಾಡುವುದು
ಆ. ನಿರಾಶಾವಾದಿ ಆತ್ಮಗಳನ್ನು ಆಶಾವಾದಿಗಳನ್ನಾಗಿ ಮಾಡುವುದು
ಇ. ಪಾಪಾತ್ಮರನ್ನು ಪುಣ್ಯಾತ್ಮರನ್ನಾಗಿ ಮಾಡುವುದು
ಈ. ದುಃಖಿಗಳನ್ನು ಸುಖಿಯನ್ನಾಗಿ ಮಾಡುವುದು
6. ತಂದೆಗೆ ಯಾವ ಮಕ್ಕಳು/ಆತ್ಮಗಳು ಪ್ರಿಯರು?
ಅ. ಹೃದಯದ ಸ್ನೇಹ, ಶ್ರೇಷ್ಠ ಭಾವನೆ ಇರುವಂತಹ ಆತ್ಮಗಳು
ಆ. ಹಾಂ ಜಿ ಎನ್ನುವರು
ಇ. ಹೃದಯದಿಂದ ಸತ್ಯವಾಗಿರುವಂತಹ ಆತ್ಮಗಳು
ಈ. ಆತ್ಮಿಕ ಸ್ಮೃತಿಯಿರುವಂತಹ ಆತ್ಮಗಳು
7. ಶ್ರೇಷ್ಠ ಪ್ರಾಪ್ತಿಯ ಮೂಲ ಆಧಾರ ಏನಾಗಿದೆ?
ಅ. ಹೃದಯದ ಸ್ನೇಹ
ಆ. ಹೃದಯದ ಸಿಂಹಾಸನಾಧಿಕಾರಿಗಳು
ಇ. ಹೃದಯದ ಪ್ರೀತಿ
ಈ. ಆತ್ಮಿಕ ಪ್ರೀತಿ
8. ಮಕ್ಕಳ ಮುಖದಿಂದ ಯಾವ ಹಾಡು ಬರಬೇಕು?
ಅ. ಪಡೆದುಕೊಂಡೆನು
ಆ. ವಾಹ! ಡ್ರಾಮಾ ವಾಹ!
ಇ. ವಾಹ! ನನ್ನ ಭಾಗ್ಯ ವಾಹ!
ಈ. ವಾಹ! ವಾಹ! ವಾಹ!
9. ಮಕ್ಕಳ ಯಾವ ವಿಶೇಷತೆಯು ವಿಶೇಷ ಆತ್ಮವನ್ನಾಗಿ ಮಾಡಿ ಬಿಡುವುದು?
ಅ. ಪರೀಶಿಲನೆಯ ವಿಶೇಷತೆ
ಆ. ಸಹನೆಯ ವಿಶೇಷತೆ
ಇ. ಪರೀಕ್ಷಿಸುವ ವಿಶೇಷತೆ
ಈ. ಸಂಕ್ಷಿಪ್ತಗೊಳಿಸುವ ವಿಶೇಷತೆ