24.04.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಸರ್ವೋತ್ತಮ ಯುಗವು ಈ ಸಂಗಮಯುಗವಾಗಿದೆ, ಇದರಲ್ಲಿಯೇ ನೀವಾತ್ಮಗಳು ಪರಮಾತ್ಮ ತಂದೆಯೊಂದಿಗೆ ಮಿಲನ ಮಾಡುತ್ತೀರಿ, ಇದೇ ಸತ್ಯ-ಸತ್ಯವಾದ ಕುಂಭ ಮೇಳವಾಗಿದೆ”

ಪ್ರಶ್ನೆ:
ಯಾವ ಪಾಠವನ್ನು ತಂದೆಯೇ ಓದಿಸುತ್ತಾರೆ, ಯಾವುದೇ ಮನುಷ್ಯರು ಓದಿಸಲು ಸಾಧ್ಯವಿಲ್ಲ?

ಉತ್ತರ:
ದೇಹೀ ಅಭಿಮಾನಿಗಳಾಗುವ ಪಾಠವನ್ನು ಒಬ್ಬ ತಂದೆಯೇ ಓದಿಸುತ್ತಾರೆ, ಈ ಪಾಠವನ್ನು ಯಾವುದೇ ದೇಹಧಾರಿಗಳು ಓದಿಸಲು ಸಾಧ್ಯವಿಲ್ಲ. ಮೊಟ್ಟ ಮೊದಲಿಗೆ ನಿಮಗೆ ಆತ್ಮದ ಜ್ಞಾನವು ಸಿಗುತ್ತದೆ, ನಿಮಗೆ ತಿಳಿದಿದೆ - ನಾವಾತ್ಮಗಳು ಪರಮಧಾಮದಿಂದ ಪಾತ್ರಧಾರಿಗಳಾಗಿ ಪಾತ್ರವನ್ನಭಿನಯಿಸಲು ಬಂದೆವು, ಈಗ ಈ ನಾಟಕವು ಮುಕ್ತಾಯವಾಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಇದನ್ನು ಯಾರೂ ಮಾಡಿಲ್ಲ ,ಆದ್ದರಿಂದ ಇದಕ್ಕೆ ಆದಿ ಮತ್ತು ಅಂತ್ಯವೂ ಇಲ್ಲ.

ಗೀತೆ:
ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ..........

ಓಂ ಶಾಂತಿ.
ಮಕ್ಕಳು ಈ ಗೀತೆಯನ್ನು ಅನೇಕ ಬಾರಿ ಕೇಳಿರುತ್ತೀರಿ. ಪ್ರಿಯತಮನು ಪ್ರಿಯತಮೆಯರೊಂದಿಗೆ ಹೇಳುತ್ತಾರೆ - ಅವರಿಗೆ ಶರೀರದಲ್ಲಿ ಬಂದಾಗ ಪ್ರಿಯತಮನೆಂದು ಹೇಳಲಾಗುತ್ತದೆ ಇಲ್ಲದಿದ್ದರೆ ಅವರು ತಂದೆ, ನೀವು ಮಕ್ಕಳಾಗಿದ್ದೀರಿ. ನೀವೆಲ್ಲರೂ ಭಕ್ತಿನಿಯರಾಗಿದ್ದೀರಿ. ಭಗವಂತನನ್ನು ನೆನಪು ಮಾಡುತ್ತೀರಿ. ವಧುಗಳು ವರನನ್ನು ನೆನಪು ಮಾಡುತ್ತೀರಿ. ಎಲ್ಲರ ಪ್ರಿಯತಮನು ವರನಾಗಿದ್ದಾರೆ, ಅವರೇ ಕುಳಿತು ತಿಳಿಸಿಕೊಡುತ್ತಾರೆ, ಈಗ ಎದ್ದೇಳಿ ನವಯುಗವು ಬರುತ್ತಿದೆ. ನವಯುಗವೆಂದರೆ ಹೊಸ ಪ್ರಪಂಚ, ಸತ್ಯಯುಗವಾಗಿದೆ. ಹಳೆಯ ಪ್ರಪಂಚವು ಕಲಿಯುಗವಾಗಿದೆ. ಈಗ ತಂದೆಯು ಬಂದಿದ್ದಾರೆ, ನಿಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ನಾನು ನಿಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತೇನೆಂದು ಯಾವುದೇ ಮನುಷ್ಯರು ಹೇಳಲು ಸಾಧ್ಯವಿಲ್ಲ. ಸನ್ಯಾಸಿಗಳಂತೂ ಸ್ವರ್ಗ ಮತ್ತು ನರಕವನ್ನೇ ತಿಳಿದುಕೊಂಡಿಲ್ಲ. ಹೇಗೆ ಅನ್ಯ ಧರ್ಮಗಳಿವೆಯೋ ಹಾಗೆಯೇ ಸನ್ಯಾಸಿಗಳದೂ ಒಂದು ಧರ್ಮವಾಗಿದೆ. ಅವರದು ಆದಿ ಸನಾತನ ದೇವಿ-ದೇವತಾ ಧರ್ಮವಲ್ಲ. ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಭಗವಂತನೇ ಬಂದು ಸ್ಥಾಪನೆ ಮಾಡುತ್ತಾರೆ. ಯಾರು ನರಕವಾಸಿಗಳಾಗಿದ್ದಾರೆಯೋ ಅವರೇ ಮತ್ತೆ ಸತ್ಯಯುಗೀ ಸ್ವರ್ಗವಾಸಿಗಳಾಗುತ್ತಾರೆ. ನೀವೀಗ ನರಕವಾಸಿಗಳಲ್ಲ, ನೀವು ಸಂಗಮಯುಗದಲ್ಲಿದ್ದೀರಿ. ಸಂಗಮವು ನಡುವಿನದಾಗಿರುತ್ತದೆ. ಸಂಗಮಯುಗದಲ್ಲಿ ನೀವು ಸ್ವರ್ಗವಾಸಿಗಳಾಗುವ ಪುರುಷಾರ್ಥ ಮಾಡುತ್ತೀರಿ. ಆದ್ದರಿಂದ ಸಂಗಮಯುಗದ ಮಹಿಮೆಯಿದೆ. ವಾಸ್ತವದಲ್ಲಿ ಇದು ಸರ್ವೋತ್ತಮ ಕುಂಭಮೇಳವಾಗಿದೆ. ಇದನ್ನೇ ಪುರುಷೋತ್ತಮವೆಂದೂ ಹೇಳಲಾಗುತ್ತದೆ. ನಿಮಗೆ ತಿಳಿದಿದೆ - ನಾವೆಲ್ಲರೂ ಒಬ್ಬ ತಂದೆಯ ಮಕ್ಕಳಾಗಿದ್ದೇವೆ, ಸಹೋದರತ್ವವೆಂದು ಹೇಳುತ್ತಾರಲ್ಲವೆ. ಎಲ್ಲಾ ಆತ್ಮಗಳು ಪರಸ್ಪರ ಸಹೋದರರಾಗಿದ್ದಾರೆ. ಹಿಂದೂ-ಚೀನಿಯರು ಸಹೋದರ-ಸಹೋದರರೆಂದು ಹೇಳುತ್ತಾರೆ, ಎಲ್ಲಾ ಧರ್ಮದ ಲೆಕ್ಕದಿಂದಂತೂ ಸಹೋದರ-ಸಹೋದರರಾಗಿದ್ದಾರೆ. ಈ ಜ್ಞಾನವು ನಿಮಗೆ ಈಗ ಸಿಕ್ಕಿದೆ. ತಂದೆಯು ತಿಳಿಸುತ್ತಾರೆ - ನೀವು ನನ್ನ ಸಂತಾನರಾಗಿದ್ದೀರಿ, ನೀವೀಗ ಸನ್ಮುಖದಲ್ಲಿ ಕೇಳುತ್ತೀರಿ. ಅವರಂತೂ ಕೇವಲ ನಾಮ ಮಾತ್ರಕ್ಕೆ ಹೇಳಿ ಬಿಡುತ್ತಾರೆ. ಎಲ್ಲಾ ಆತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ. ಎಲ್ಲರೂ ಅವರೊಬ್ಬರನ್ನೇ ನೆನಪು ಮಾಡುತ್ತಾರೆ. ಸ್ತ್ರೀ ಹಾಗೂ ಪುರುಷ ಇಬ್ಬರಲ್ಲಿಯೂ ಆತ್ಮವಿದೆ, ಈ ಲೆಕ್ಕದಿಂದ ಪರಸ್ಪರ ಸಹೋದರರಾಗಿದ್ದಾರೆ. ನಂತರ ಶರೀರದ ಲೆಕ್ಕದಲ್ಲಿ ಸಹೋದರ-ಸಹೋದರಿ ಮತ್ತೆ ಸ್ತ್ರೀ-ಪುರುಷರಾಗಿ ಬಿಡುತ್ತಾರೆ. ಆದ್ದರಿಂದ ತಂದೆಯು ಬಂದು ಮಕ್ಕಳಿಗೆ ತಿಳಿಸುತ್ತಾರೆ - ಆತ್ಮಗಳು ಮತ್ತು ಪರಮಾತ್ಮನು ಬಹಳ ಕಾಲ ಅಗಲಿದ್ದರೆಂದು ಗಾಯನವಿದೆ. ನದಿಗಳು ಮತ್ತು ಸಾಗರವು ಬಹಳ ಕಾಲ ಅಗಲಿದ್ದವೆಂದು ಹೇಳುವುದಿಲ್ಲ. ದೊಡ್ಡ-ದೊಡ್ಡ ನದಿಗಳಂತೂ ಸಾಗರದೊಂದಿಗೆ ಸೇರಿರುತ್ತವೆ. ಇದನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ - ನದಿಯು ಸಾಗರನ ಮಗುವಾಗಿದೆ, ಸಾಗರದಿಂದ ಹುಟ್ಟುತ್ತದೆ. ಮೋಡಗಳ ಮೂಲಕ ಮತ್ತೆ ಪರ್ವತಗಳ ಮೇಲೆ ಬೀಳುತ್ತದೆ, ಮತ್ತೆ ನದಿಗಳಾಗಿ ಹರಿಯುತ್ತವೆ ಅಂದಾಗ ಎಲ್ಲರೂ ಸಾಗರನ ಮಕ್ಕಳಾಗಿದ್ದೀರಿ. ಅನೇಕರಿಗೆ ನೀರು ಎಲ್ಲಿಂದ ಬರುತ್ತದೆ ಎಂಬುದೂ ಸಹ ತಿಳಿದಿಲ್ಲ, ಇದನ್ನೂ ಕಲಿಸಿಕೊಡಬೇಕಾಗುತ್ತದೆ ಅಂದಾಗ ಈಗ ಮಕ್ಕಳು ತಿಳಿದುಕೊಂಡಿದ್ದೀರಿ - ಜ್ಞಾನಸಾಗರನು ಒಬ್ಬರೇ ತಂದೆಯಾಗಿದ್ದಾರೆ. ನೀವೆಲ್ಲರೂ ಆತ್ಮಗಳಾಗಿದ್ದೀರಿ, ತಂದೆಯು ಒಬ್ಬರೇ ಆಗಿದ್ದಾರೆ. ಆತ್ಮವೂ ನಿರಾಕಾರನಾಗಿದೆ, ನಂತರ ಸಾಕಾರದಲ್ಲಿ ಬಂದಾಗ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತೀರಿ. ತಂದೆಯೂ ಸಹ ಸಾಕಾರದಲ್ಲಿ ಬಂದು ಮಿಲನ ಮಾಡುತ್ತಾರೆ. ತಂದೆಯ ಮಿಲನವು ಒಂದೇ ಬಾರಿ ಆಗುತ್ತದೆ. ಈ ಸಮಯದಲ್ಲಿ ಬಂದು ತಂದೆಯು ಎಲ್ಲರೊಂದಿಗೆ ಮಿಲನ ಮಾಡಿದ್ದಾರೆ. ಇದನ್ನೂ ಸಹ ಅರಿತುಕೊಳ್ಳುತ್ತಾ ಹೋಗುತ್ತಾರೆ - ಭಗವಂತನಿದ್ದಾರೆ, ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ. ಆದರೆ ಕೃಷ್ಣನಂತೂ ಇಲ್ಲಿ ಬರಲು ಸಾಧ್ಯವಿಲ್ಲ. ಕೃಷ್ಣನು ಹೇಗೆ ನಿಂದನೆಯನ್ನು ಸಹಿಸುತ್ತಾನೆ? ಕೃಷ್ಣನ ಆತ್ಮವೂ ಈ ಸಮಯದಲ್ಲಿದೆ, ಮೊಟ್ಟ ಮೊದಲು ನಿಮಗೆ ಆತ್ಮದ ಜ್ಞಾನವು ಸಿಗುತ್ತದೆ. ನೀವು ಆತ್ಮವಾಗಿದ್ದೀರಿ, ತಮ್ಮನ್ನು ಶರೀರವೆಂದು ತಿಳಿದು ಇಷ್ಟು ಸಮಯ ನಡೆದಿದ್ದೀರಿ. ಈಗ ತಂದೆಯು ಬಂದು ಆತ್ಮಾಭಿಮಾನಿಯನ್ನಾಗಿ ಮಾಡುತ್ತಾರೆ. ಸಾಧು-ಸಂತ ಮೊದಲಾದವರು ಎಂದೂ ನಿಮ್ಮನ್ನು ದೇಹೀ ಅಭಿಮಾನಿಯನ್ನಾಗಿ ಮಾಡುವುದಿಲ್ಲ. ನೀವು ಮಕ್ಕಳಾಗಿದ್ದೀರಿ. ನಿಮಗೆ ಬೇಹದ್ದಿನ ತಂದೆಯಿಂದ ಆಸ್ತಿಯು ಸಿಗುತ್ತದೆ. ನಾವು ಪರಮಧಾಮದ ನಿವಾಸಿಗಳಾಗಿದ್ದೇವೆ, ಇಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೇವೆ. ಈಗ ಈ ನಾಟಕವು ಮುಕ್ತಾಯವಾಗುತ್ತದೆಯಂದು ನಿಮ್ಮ ಬುದ್ಧಿಯಲ್ಲಿದೆ. ಈ ನಾಟಕವನ್ನೂ ಯಾರೂ ಮಾಡಲಿಲ್ಲ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಈ ನಾಟಕವು ಯಾವಾಗಿನಿಂದ ಪ್ರಾರಂಭವಾಯಿತೆಂದು ಕೇಳುತ್ತಾರೆ ಆಗ ತಿಳಿಸಿ - ಇದು ಅನಾದಿ ನಾಟಕವಾಗಿದೆ. ಇದರ ಆದಿ ಮತ್ತು ಅಂತ್ಯವಾಗುವುದಿಲ್ಲ, ಹಳೆಯದರಿಂದ ಹೊಸದು, ಹೊಸದರಿಂದ ಹಳೆಯದಾಗುತ್ತದೆ. ನೀವು ಮಕ್ಕಳಿಗೆ ಈ ಪಾಠವು ಪಕ್ಕಾ ಆಗಿದೆ. ಹೊಸ ಪ್ರಪಂಚವು ಯಾವಾಗ ಆಗುತ್ತದೆ ಮತ್ತು ಯಾವಾಗ ಹಳೆಯದಾಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಇದೂ ಸಹ ಕೆಲವರ ಬುದ್ಧಿಯಲ್ಲಿ ಪೂರ್ಣ ರೀತಿಯಲ್ಲಿರುತ್ತದೆ. ನೀವು ತಿಳಿದುಕೊಂಡಿದ್ದೀರಿ - ಈಗ ನಾಟಕವು ಮುಕ್ತಾಯವಾಗಿ ಮತ್ತೆ ಪುನರಾವರ್ತನೆಯಾಗುವುದು, ಅವಶ್ಯವಾಗಿ ನಮ್ಮ 84 ಜನ್ಮಗಳ ಪಾತ್ರವು ಮುಕ್ತಾಯವಾಯಿತು, ಈಗ ನಮ್ಮನ್ನು ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ತಂದೆಯು ಮಾರ್ಗದರ್ಶಕನೂ ಆಗಿದ್ದಾರಲ್ಲವೆ. ಮಾರ್ಗದರ್ಶಕರು ಯಾತ್ರಿಕರನ್ನು ಕರೆದುಕೊಂಡು ಹೋಗುತ್ತಾರೆ. ಅವರು ಸ್ಥೂಲ ಮಾರ್ಗದರ್ಶಕರು, ನೀವು ಆತ್ಮಿಕ ಮಾರ್ಗದರ್ಶಕರಾಗಿದ್ದೀರಿ ಆದ್ದರಿಂದ ಪಾಂಡವ ಸರ್ಕಾರವೆಂದು ನಿಮ್ಮ ಹೆಸರಿದೆ, ಆದರೆ ಗುಪ್ತವಾಗಿದ್ದೀರಿ. ಪಾಂಡವರು, ಕೌರವರು, ಯಾದವರು ಏನು ಮಾಡಿ ಹೋದರು, ಇದು ಈ ಸಮಯದ ಮಾತಾಗಿದೆ. ಈಗ ಮಹಾಭಾರತದ ಯುದ್ಧದ ಸಮಯವೂ ಆಗಿದೆ. ಅನೇಕ ಧರ್ಮಗಳಿವೆ. ಪ್ರಪಂಚವೂ ತಮೋಪ್ರಧಾನವಾಗಿದೆ. ವಿಭಿನ್ನ ಧರ್ಮಗಳ ವೃಕ್ಷವು ಹಳೆಯದಾಗಿ ಬಿಟ್ಟಿದೆ. ಈ ವೃಕ್ಷದ ಮೊಟ್ಟ ಮೊದಲ ಬುನಾದಿಯು ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ. ಸತ್ಯಯುಗದಲ್ಲಿ ಕೆಲವರೇ ಇರುತ್ತಾರೆ ನಂತರ ವೃದ್ಧಿಯಾಗುತ್ತದೆ. ಇದು ಯಾರಿಗೂ ತಿಳಿದಿಲ್ಲ, ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ. ವಿದ್ಯಾರ್ಥಿಗಳಲ್ಲಿಯೂ ಕೆಲವರು ಬುದ್ಧಿವಂತರಿರುತ್ತಾರೆ, ಚೆನ್ನಾಗಿ ಧಾರಣೆ ಮಾಡುತ್ತಾರೆ ಮತ್ತು ಅನ್ಯರಿಗೂ ಮಾಡಿಸುವ ಉತ್ಸಾಹವಿರುತ್ತದೆ. ಕೆಲವರು ಚೆನ್ನಾಗಿ ಧಾರಣೆ ಮಾಡುತ್ತಾರೆ, ಇನ್ನೂ ಕೆಲವರು ಮಧ್ಯಮ, ಇನ್ನೂ ಕೆಲವರು ತೃತೀಯ ದರ್ಜೆಯಲ್ಲಿರುತ್ತಾರೆ. ಪ್ರದರ್ಶನಿಯಲ್ಲಂತೂ ಆಧುನಿಕ ರೀತಿಯಲ್ಲಿ ತಿಳಿಸುವವರು ಬೇಕು. ಮೊಟ್ಟ ಮೊದಲಿಗೆ ತಿಳಿಸಿಕೊಡಿ - ಇಬ್ಬರು ತಂದೆಯರಿದ್ದಾರೆ, ಒಬ್ಬರು ಬೇಹದ್ದಿನ ಪಾರಲೌಕಿಕ ತಂದೆ ಮತ್ತು ಇನ್ನೊಬ್ಬರು ಹದ್ದಿನ ಲೌಕಿಕ ತಂದೆಯಾಗಿದ್ದಾರೆ. ಭಾರತಕ್ಕೆ ಬೇಹದ್ದಿನ ಆಸ್ತಿಯು ಸಿಕ್ಕಿತ್ತು, ಭಾರತವು ಸ್ವರ್ಗವಾಗಿತ್ತು ಅದು ಈಗ ನರಕವಾಗಿದೆ. ಇದಕ್ಕೆ ಆಸುರೀ ರಾಜ್ಯವೆಂದು ಹೇಳಲಾಗುತ್ತದೆ. ಭಕ್ತಿಯೂ ಸಹ ಮೊಟ್ಟ ಮೊದಲಿಗೆ ಅವ್ಯಭಿಚಾರಿಯಾಗಿರುತ್ತದೆ. ಒಬ್ಬ ಶಿವ ತಂದೆಯನ್ನೇ ನೆನಪು ಮಾಡುತ್ತಾರೆ.

ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪುರುಷೋತ್ತಮರಾಗಬೇಕೆಂದರೆ ಕನಿಷ್ಟರನ್ನಾಗಿ ಮಾಡುವ ಮಾತುಗಳನ್ನು ಕೇಳಬೇಡಿ. ಒಬ್ಬ ತಂದೆಯಿಂದಲೇ ಕೇಳಿ. ಅವ್ಯಭಿಚಾರಿ ಜ್ಞಾನವನ್ನು ಕೇಳಿ. ಅನ್ಯರಿಂದ ಏನನ್ನು ಕೇಳುವಿರೋ ಅದು ಅಸತ್ಯವಾಗಿದೆ, ತಂದೆಯು ಈಗ ನಿಮಗೆ ಸತ್ಯವನ್ನು ತಿಳಿಸಿ ಪುರುಷೋತ್ತಮರನ್ನಾಗಿ ಮಾಡುತ್ತಾರೆ. ನೀವು ಕೆಟ್ಟ ಮಾತುಗಳನ್ನು ಕೇಳುತ್ತಾ-ಕೇಳುತ್ತಾ ಕನಿಷ್ಟರಾಗಿ ಬಿಟ್ಟಿದ್ದೀರಿ. ಬಹ್ಮನ ದಿನವು ಪ್ರಕಾಶವಾಗಿದೆ, ಬಹ್ಮನ ರಾತ್ರಿಯು ಅಂಧಕಾರವಾಗಿದೆ. ಇವೆಲ್ಲಾ ಮಾತುಗಳನ್ನು ಧಾರಣೆ ಮಾಡಬೇಕಾಗಿದೆ. ಪ್ರತಿಯೊಂದು ಮಾತಿನಲ್ಲಿ ನಂಬರ್ವಾರ್ ಇದ್ದೇ ಇರುತ್ತಾರೆ. ವೈದ್ಯರಲ್ಲಿ ಕೆಲವರು ಒಂದು ಆಪರೇಷನ್ನಿಗೆ 10-20 ಸಾವಿರ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ, ಇನ್ನೂ ಕೆಲವರಿಗೆ ತಿನ್ನುವುದಕ್ಕೂ ಇರುವುದಿಲ್ಲ. ವಕೀಲರಲ್ಲಿಯೂ ಇದೇ ರೀತಿಯಲ್ಲಿರುತ್ತಾರೆ. ನೀವೂ ಸಹ ಎಷ್ಟು ಓದುತ್ತೀರಿ ಮತ್ತು ಓದಿಸುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ, ಅಂತರವಂತೂ ಇದೆಯಲ್ಲವೆ. ದಾಸ-ದಾಸಿಯರಲ್ಲಿಯೂ ನಂಬರ್ವಾರ್ ಇರುತ್ತಾರೆ. ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ತಮ್ಮೊಂದಿಗೆ ಕೇಳಿಕೊಳ್ಳಬೆಕು - ನಾವೆಷ್ಟು ಓದುತ್ತೇವೆ ಭವಿಷ್ಯದಲ್ಲಿ ಜನ್ಮ-ಜನ್ಮಾಂತರ ಏನು ಪದವಿಯನ್ನು ಪಡೆಯುತ್ತೇವೆ? ಯಾರು ಜನ್ಮ-ಜನ್ಮಾಂತರ ಏನಾಗುವರೋ ಕಲ್ಪ-ಕಲ್ಪಾಂತರವೂ ಅದೇ ಆಗುತ್ತಾರೆ. ಆದ್ದರಿಂದ ವಿದ್ಯೆಯ ಮೇಲೆ ಪೂರ್ಣ ಗಮನವನ್ನಿಡಬೇಕು. ವಿಷ ಕುಡಿಯುವುದನ್ನು ಒಮ್ಮೆಲೆ ಬಿಟ್ಟು ಬಿಡಬೇಕಾಗಿದೆ. ಕೊಳಕಾದ ವಸ್ತ್ರಗಳನ್ನು ಒಗೆದರು ಎಂದು ಸತ್ಯಯುಗದಲ್ಲಿ ಹೇಳುವುದಿಲ್ಲ. ಈ ಸಮಯದಲ್ಲಿ ಎಲ್ಲರ ವಸ್ತ್ರಗಳು ಹರಿದು ಹೋಗಿದೆ, ತಮೋಪ್ರಧಾನರಾಗಿದ್ದಾರಲ್ಲವೆ. ಇದೂ ಸಹ ತಿಳಿಸಿಕೊಡುವ ಮಾತುಗಳಾಗಿವೆ. ಎಲ್ಲರಿಗಿಂತ ಹಳೆಯ ವಸ್ತ್ರವು ಯಾರಾದಾಗಿದೆ? ನಮ್ಮದು. ನಾವು ಈ ಶರೀರವನ್ನು ಬದಲಾಯಿಸುತ್ತಾ ಇರುತ್ತೇವೆ, ಆತ್ಮವು ಪತಿತವಾಗುತ್ತಾ ಹೋಗುತ್ತದೆ. ಶರೀರವು ಹಳೆಯ ಮತ್ತು ಪತಿತವಾಗುತ್ತಾ ಹೋಗುತ್ತದೆ. ಶರೀರವನ್ನು ಬದಲಾಯಿಸಲಾಗುತ್ತದೆ. ಆತ್ಮವಂತೂ ಬದಲಾಗುವುದಿಲ್ಲ, ಶರೀರವು ವೃದ್ಧಾವಸ್ಥೆಗೆ ಬಂದಿತೆಂದರೆ ಮೃತ್ಯುವಾಗುತ್ತದೆ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ಎಲ್ಲರದೂ ಪಾತ್ರವಿದೆ. ಆತ್ಮವು ಅವಿನಾಶಿಯಾಗಿದೆ. ನಾನು ಶರೀರವನ್ನು ಬಿಡುತ್ತೇನೆಂದು ಆತ್ಮವು ಹೇಳುತ್ತದೆ. ಈಗ ದೇಹೀ ಅಭಿಮಾನಿಗಳಾಗಬೇಕಾಗಿದೆ. ಮನುಷ್ಯರೆಲ್ಲರೂ ದೇಹಾಭಿಮಾನಿಗಳಾಗಿದ್ದಾರೆ. ಅರ್ಧಕಲ್ಪ ದೇಹಾಭಿಮಾನಿಗಳು, ಅರ್ಧಕಲ್ಪ ದೇಹೀ ಅಭಿಮಾನಿಗಳಾಗಿರುತ್ತಾರೆ.

ದೇಹೀ-ಅಭಿಮಾನಿಗಳಾಗಿರುವ ಕಾರಣವೇ ಸತ್ಯಯುಗೀ ದೇವತೆಗಳಿಗೆ ಮೋಹಜೀತರೆಂಬ ಬಿರುದು ಸಿಕ್ಕಿದೆ ಏಕೆಂದರೆ ಅಲ್ಲಿ ನಾವಾತ್ಮಗಳಾಗಿದ್ದೇವೆ, ಈಗ ಈ ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕೆಂದು ತಿಳಿಯುತ್ತಾರೆ, ಮೋಹಜೀತ ರಾಜನ ಕಥೆಯೂ ಇದೆಯಲ್ಲವೆ. ತಂದೆಯು ತಿಳಿಸುತ್ತಾರೆ - ದೇವಿ-ದೇವತೆಗಳು ಮೋಹಜೀತರಾಗಿರುತ್ತಾರೆ, ಖುಷಿ-ಖುಷಿಯಿಂದ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕಾಗಿದೆ. ಮಕ್ಕಳಿಗೆ ಸಂಪೂರ್ಣ ಜ್ಞಾನವು ತಂದೆಯಿಂದ ಸಿಗುತ್ತಿದೆ. ನೀವೇ ಚಕ್ರವನ್ನು ಸುತ್ತಿ ಈಗ ಪುನಃ ಬಂದು ಮಿಲನ ಮಾಡಿದ್ದೀರಿ. ಯಾರು ಅನ್ಯ ಧರ್ಮಗಳಲ್ಲಿ ಮತಾಂತರಗೊಂಡಿದ್ದಾರೆಯೋ ಅವರೂ ಸಹ ಬಂದು ಸೇರುತ್ತಾರೆ. ತಮ್ಮ ಅಲ್ಪ ಸ್ವಲ್ಪ ಆಸ್ತಿಯನ್ನು ಪಡೆಯುತ್ತಾರೆ, ಅವರದು ಧರ್ಮವೇ ಬದಲಾಯಿತಲ್ಲವೆ. ಎಷ್ಟು ಸಮಯದಿಂದ ಆ ಧರ್ಮದಲ್ಲಿದ್ದಾರೆಯೋ ಗೊತ್ತಿಲ್ಲ, 2-3 ಜನ್ಮಗಳನ್ನು ತೆಗೆದುಕೊಳ್ಳಬಹುದು. ಯಾರನ್ನಾದರೂ ಹಿಂದೂಗಳಿಂದ ಮುಸಲ್ಮಾನರನ್ನಾಗಿ ಮಾಡಿದರೆ ಅವರು ಆ ಧರ್ಮದಲ್ಲಿದ್ದು ಪುನಃ ಇಲ್ಲಿಗೆ ಬರುತ್ತಾರೆ, ಇವೂ ಸಹ ವಿಸ್ತಾರವಾದ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ - ಇಷ್ಟೊಂದು ಮಾತುಗಳನ್ನು ನೆನಪಿಟ್ಟುಕೊಳ್ಳದಿದ್ದರೆ ತಮ್ಮನ್ನು ತಂದೆಯ ಮಗುವೆಂದಾದರೂ ತಿಳಿದುಕೊಳ್ಳಿ, ಒಳ್ಳೊಳ್ಳೆಯ ಮಕ್ಕಳೂ ಸಹ ಮರೆತು ಹೋಗುತ್ತಾರೆ, ತಂದೆಯನ್ನು ನೆನಪೇ ಮಾಡುವುದಿಲ್ಲ. ಇದರಲ್ಲಿ ಮಾಯೆಯು ಮರೆಸುತ್ತದೆ. ನೀವೂ ಸಹ ಮೊದಲು ಮಾಯೆಗೆ ಶಿಷ್ಯ (ಅಧೀನ) ರಾಗಿದ್ದಿರಲ್ಲವೆ. ಈಗ ಈಶ್ವರನ ಶಿಷ್ಯರಾಗುತ್ತೀರಿ. ಅದು ನಾಟಕದಲ್ಲಿ ಪಾತ್ರವಿದೆ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ನೀವಾತ್ಮಗಳು ಮೊಟ್ಟ ಮೊದಲಿಗೆ ಶರೀರದಲ್ಲಿ ಬಂದಾಗ ಪವಿತ್ರರಾಗಿದ್ದಿರಿ, ಮತ್ತೆ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತರಾಗಿದ್ದೀರಿ. ಈಗ ಪುನಃ ತಂದೆಯು ತಿಳಿಸುತ್ತಾರೆ - ನಷ್ಟಮೋಹಿಗಳಾಗಿ, ಈ ಶರೀರದಲ್ಲಿಯೂ ಮೋಹವನ್ನಿಡಬೇಡಿ.

ಈಗ ನೀವು ಮಕ್ಕಳಿಗೆ ಈ ಹಳೆಯ ಪ್ರಪಂಚದಿಂದ ಬೇಹದ್ದಿನ ವೈರಾಗ್ಯವು ಬರುತ್ತದೆ ಏಕೆಂದರೆ ಈ ಪ್ರಪಂಚದಲ್ಲಿ ಎಲ್ಲರೂ ಪರಸ್ಪರ ದುಃಖವನ್ನು ಕೊಡುವವರಾಗಿದ್ದಾರೆ. ಆದ್ದರಿಂದ ಈ ಪ್ರಪಂಚವನ್ನೇ ಮರೆತು ಹೋಗಿ, ನಾವು ಅಶರೀರಿಯಾಗಿ ಬಂದಿದ್ದೆವು, ಈಗ ಅಶರೀರಿಯಾಗಿ ಹಿಂತಿರುಗಿ ಹೋಗಬೇಕಾಗಿದೆ. ಈಗ ಈ ಪ್ರಪಂಚವೇ ಸಮಾಪ್ತಿಯಾಗಲಿದೆ. ತಮೋಪ್ರಧಾನರಿಂದ ಸತೋಪ್ರಧಾನರಾಗಲು ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ಈ ಮಾತನ್ನು ಕೃಷ್ಣನು ಹೇಳಲು ಸಾಧ್ಯವಿಲ್ಲ. ಕೃಷ್ಣನು ಸತ್ಯಯುಗದಲ್ಲಿರುತ್ತಾನೆ. ತಂದೆಯೇ ತಿಳಿಸುತ್ತಾರೆ - ನನ್ನನ್ನು ನೀವು ಪತಿತ-ಪಾವನನೆಂದೂ ಹೇಳುತ್ತೀರಿ. ಅಂದಮೇಲೆ ಈಗ ನನ್ನನ್ನು ನೆನಪು ಮಾಡಿ, ನಾನು ಪಾವನರಾಗುವ ಯುಕ್ತಿಯನ್ನು ತಿಳಿಸುತ್ತೇನೆ. ಕಲ್ಪ-ಕಲ್ಪದ ಯುಕ್ತಿಯನ್ನು ತಿಳಿಸುತ್ತೇನೆ, ಯಾವಾಗ ಹಳೆಯ ಪ್ರಪಂಚವಾಗುತ್ತದೆಯೋ ಆಗ ಭಗವಂತನೇ ಬರಬೇಕಾಗುತ್ತದೆ. ಮನುಷ್ಯರು ಡ್ರಾಮದ ಆಯಸ್ಸನ್ನು ಬಹಳ ಧೀರ್ಘ ಮಾಡಿ ಬಿಟ್ಟಿದ್ದಾರೆ. ಆದುದರಿಂದ ಮನುಷ್ಯರು ಸಂಪೂರ್ಣವಾಗಿ ಮರೆತು ಹೋಗಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ - ಇದು ಸಂಗಮಯುಗವಾಗಿದೆ, ಇದು ಪುರುಷೋತ್ತಮರಾಗುವ ಯುಗವಾಗಿದೆ. ಮನುಷ್ಯರಂತೂ ಸಂಪೂರ್ಣ ಘೋರ ಅಂಧಕಾರದಲ್ಲಿ ಬಿದ್ದಿದ್ದಾರೆ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ನೀವೀಗ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ನೀವೇ ಎಲ್ಲರಿಗಿಂತ ಹೆಚ್ಚಿನ ಭಕ್ತಿಯನ್ನು ಮಾಡಿದ್ದೀರಿ. ಈಗ ಭಕ್ತಿಮಾರ್ಗವು ಸಮಾಪ್ತಿಯಾಗುತ್ತದೆ. ಮೃತ್ಯುಲೋಕದಲ್ಲಿ ಭಕ್ತಿಯಿದೆ ನಂತರ ಅಮರಲೋಕವು ಬರುತ್ತದೆ. ನೀವು ಈ ಸಮಯದಲ್ಲಿಯೇ ಜ್ಞಾನವನ್ನು ಪಡೆಯುತ್ತೀರಿ, ಇದರ ನಂತರ ಭಕ್ತಿಯ ಹೆಸರು, ಗುರುತೂ ಇರುವುದಿಲ್ಲ. ಹೇ ಭಗವಂತ, ಹೇ ರಾಮ - ಇವೆಲ್ಲವೂ ಭಕ್ತಿಯ ಶಬ್ಧಗಳಾಗಿವೆ. ಇಲ್ಲಿ ಯಾವುದೇ ಶಬ್ಧವನ್ನು ಮಾಡುವಂತಿಲ್ಲ. ತಂದೆಯು ಜ್ಞಾನಸಾಗರನಾಗಿದ್ದಾರೆ, ಅಂದಮೇಲೆ ಶಬ್ಧ ಮಾಡುತ್ತಾರೆಯೇ? ಅವರಿಗೆ ಸುಖ-ಶಾಂತಿಯ ಸಾಗರನೆಂದು ಹೇಳಲಾಗುತ್ತದೆ ಅಂದಮೇಲೆ ತಿಳಿಸುವುದಕ್ಕೆ ಶರೀರವು ಬೇಕಲ್ಲವೆ. ಭಗವಂತನ ಭಾಷೆ ಯಾವುದೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಎಲ್ಲಾ ಭಾಷೆಗಳಲ್ಲಿ ಮಾತನಾಡುತ್ತಾರೆಂದಲ್ಲ, ಅವರ ಭಾಷೆಯೇ ಹಿಂದಿಯಾಗಿದೆ. ತಂದೆಯು ಒಂದೇ ಭಾಷೆಯಲ್ಲಿ ತಿಳಿಸಿಕೊಡುತ್ತಾರೆ ನಂತರ ನೀವು ಅದನ್ನು ಅನುವಾದ ಮಾಡಿ ತಿಳಿಸಿಕೊಡುತ್ತೀರಿ. ವಿದೇಶೀ ಮೊದಲಾದವರು ಯಾರೇ ಭೇಟಿ ಆದರೂ ಅವರಿಗೆ ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ತಂದೆಯು ಆದಿ ಸನಾತನ ದೇವಿ ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದಾರೆ. ತ್ರಿಮೂರ್ತಿ ಚಿತ್ರದ ಕುರಿತು ತಿಳಿಸಬೇಕು - ಪ್ರಜಾಪಿತ ಬ್ರಹ್ಮಾನಿಗೆ ಎಷ್ಟೊಂದು ಬ್ರಹ್ಮಾಕುಮಾರ-ಕುಮಾರಿಯರಿದ್ದೀರಿ, ಯಾರೇ ಬಂದರೂ ಮೊದಲು ಅವರನ್ನು ಕೇಳಿ, ಯಾರ ಬಳಿ ಬಂದಿದ್ದೀರಿ? ಬೋರ್ಡ ಅಂತೂ ಹಾಕಲಾಗಿದೆ. ಪ್ರಜಾಪಿತನೆಂದರೆ ಅವರು ರಚಿಸುವವರಾದರು ಆದರೆ ಅವರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ನಿರಕಾರನಿಗೇ ಭಗವಂತನೆಂದು ಕರೆಯಲಾಗುವುದು. ಇವರು ಬ್ರಹ್ಮಾಕುಮಾರ-ಕುಮಾರಿಯರು ಬ್ರಹ್ಮನ ಸಂತಾನರಾಗಿದ್ದಾರೆ. ತಾವಿಲ್ಲಿ ಏತಕ್ಕಾಗಿ ಬಂದಿದ್ದೀರಿ? ನಮ್ಮ ತಂದೆಯೊಂದಿಗೆ ನಿಮಗೆ ಕೆಲಸವೇನಿದೆ? ತಂದೆಯೊಂದಿಗೆ ಮಕ್ಕಳಿಗೇ ಕೆಲಸವಿರುತ್ತದೆಯಲ್ಲವೆ. ನಾವು ತಂದೆಯನ್ನು ಬಹಳ ಚೆನ್ನಾಗಿ ಅರಿತುಕೊಂಡಿದ್ದೇವೆ. ಸನ್ ಶೋಸ್ ಫಾದರ್ ಎಂದು ಗಾಯನವಿದೆ. ನಾವು ಅವರ ಮಕ್ಕಳಾಗಿದ್ದೇವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಪುರುಷೋತ್ತಮರಾಗಲು ಕನಿಷ್ಟರನ್ನಾಗಿ ಮಾಡುವಂತಹ ಕೆಟ್ಟ ಮಾತುಗಳನ್ನು ಕೇಳಬಾರದು. ಒಬ್ಬ ತಂದೆಯಿಂದಲೇ ಅವ್ಯಭಿಚಾರಿ ಜ್ಞಾನವನ್ನು ಕೇಳಬೇಕಾಗಿದೆ.

2. ನಷ್ಟಮೋಹಿಗಳಾಗಲು ದೇಹೀಅಭಿಮಾನಿಯಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಬುದ್ಧಿಯಲ್ಲಿರಲಿ - ಈ ಹಳೆಯ ಪ್ರಪಂಚವು ದುಃಖ ಕೊಡುವಂತಹ ಪ್ರಪಂಚವಾಗಿದೆ, ಇದನ್ನು ಮರೆಯಬೇಕಾಗಿದೆ. ಇದರೊಂದಿಗೆ ಬೇಹದ್ದಿನ ವೈರಾಗ್ಯವಿರಲಿ.

ವರದಾನ:
ಫಾಲೋ ಫಾದರ್ ನ ಪಾಠದ ಮೂಲಕ ಕಷ್ಟವನ್ನು ಸಹಜ ಮಾಡುವಂತಹ ತೀವ್ರ ಪುರುಷಾರ್ಥಿ ಭವ.

ಕಷ್ಟವನ್ನು ಸಹಜವನ್ನಾಗಿ ಮಾಡುವಂತಹ ಅಥವಾ ಕೊನೆಯ ಪುರುಷಾರ್ಥದಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳಲು ಮೊದಲ ಪಾಠ “ಫಾಲೋ ಫಾದರ್” ಈ ಮೊದಲ ಪಾಠವೇ ಕೊನೆಯ ಸ್ಟೇಜ್ ಅನ್ನು ಸಮೀಪ ತರುವಂತಹದಾಗಿದೆ. ಈ ಪಾಠದಿಂದ ಅಭೂಲ್(ತಪ್ಪಿಲ್ಲದ), ಏಕರಸ ಮತ್ತು ತೀವ್ರ ಪುರುಷಾರ್ಥಿಗಳಾಗಿ ಬಿಡುವಿರಿ. ಏಕೆಂದರೆ ಯಾವುದೇ ಮಾತಿನಲ್ಲಿ ಕಷ್ಟ ಎಂದು ಯಾವಾಗ ಅನ್ನಿಸುವುದೆಂದರೆ ಯಾವಾಗ ಫಾಲೋ ಮಾಡುವ ಬದಲು ತಮ್ಮ ಬುದ್ಧಿಯನ್ನು ತೊರಿಸುವಿರಿ. ಇದರಲ್ಲಿ ತಮ್ಮದೇ ಸಂಕಲ್ಪದ ಜಾಲದಲ್ಲಿ ಸಿಕ್ಕಿ ಹಾಕಿಕೊಂಡು ಬಿಡುವಿರಿ ನಂತರ ಸಮಯವೂ ಹಿಡಿಸುತ್ತದೆ ಮತ್ತು ಶಕ್ತಿ ಸಹ ಹಿಡಿಸುತ್ತದೆ. ಒಂದುವೇಳೆ ಫಾಲೋ ಮಾಡುತ್ತಾ ಹೋಗಿ ಆಗ ಸಮಯ ಮತ್ತು ಶಕ್ತಿ ಎರಡೂ ಉಳಿತಾಯವಾಗುವುದು, ಜಮಾ ಆಗಿ ಬಿಡುವುದು.

ಸ್ಲೋಗನ್:
ಸತ್ಯತೆ, ಸ್ವಚ್ಛತೆಯನ್ನು ಧಾರಣೆ ಮಾಡಲು ತಮ್ಮ ಸ್ವಭಾವವನ್ನು ಸರಳ ಮಾಡಿಕೊಳ್ಳಿ.