01.04.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಸುಖ ಮತ್ತು ದುಃಖದ ಆಟವನ್ನು ನೀವೇ ಅರಿತುಕೊಂಡಿದ್ದೀರಿ, ಅರ್ಧಕಲ್ಪ ಸುಖ ಮತ್ತು ಅರ್ಧಕಲ್ಪ ದುಃಖವಾಗಿದೆ, ತಂದೆಯು ದುಃಖವನ್ನು ದೂರ ಮಾಡಿ ಸುಖ ನೀಡಲು ಬರುತ್ತಾರೆ”

ಪ್ರಶ್ನೆ:
ಕೆಲವು ಮಕ್ಕಳು ಯಾವ ಒಂದು ಮಾತಿನಲ್ಲಿ ತಮ್ಮ ಮನಸ್ಸನ್ನು ಖುಷಿ ಪಡಿಸಿಕೊಂಡು ನಾನೇ ಎಲ್ಲವನ್ನು ಅರಿತವನೆಂದು ತಿಳಿದುಕೊಳ್ಳುತ್ತಾರೆ?

ಉತ್ತರ:
ನಾವು ಸಂಪೂರ್ಣರಾಗಿ ಬಿಟ್ಟೆವು, ಸಂಪೂರ್ಣ ತಯಾರಾಗಿ ಬಿಟ್ಟೆವೆಂದು ಕೆಲವರು ತಿಳಿಯುತ್ತಾರೆ. ಹೀಗೆ ತಿಳಿದುಕೊಂಡು ತಮ್ಮ ಮನಸ್ಸನ್ನು ಖುಷಿ ಪಡಿಸಿಕೊಳ್ಳುತ್ತಾರೆ. ಇದೂ ಸಹ ನಾನೇ ಎಲ್ಲವನ್ನೂ ತಿಳಿದವನೆಂದಾಗಿದೆ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ಇನ್ನೂ ಬಹಳ ಪುರುಷಾರ್ಥ ಮಾಡಬೇಕಾಗಿದೆ. ನೀವು ಪಾವನರಾಗಿ ಬಿಟ್ಟರೆ ಪಾವನ ಪ್ರಪಂಚವು ಬೇಕು. ರಾಜಧಾನಿಯು ಸ್ಥಾಪನೆಯಾಗಲಿದೆ, ಒಬ್ಬರೇ ಹೋಗಲು ಸಾಧ್ಯವಿಲ್ಲ.

ಗೀತೆ:
ನೀವೇ ತಾಯಿ, ತಂದೆಯೂ ನೀವೇ ಆಗಿದ್ದೀರಿ.............

ಓಂ ಶಾಂತಿ.
ಮಕ್ಕಳಿಗೆ ಇಲ್ಲಿ ತಮ್ಮ ಪರಿಚಯವು ಸಿಗುತ್ತದೆ. ತಂದೆಯೂ (ಬ್ರಹ್ಮಾ) ಸಹ ಹೀಗೇ ಹೇಳುತ್ತಾರೆ. ನಾವೆಲ್ಲರೂ ಆತ್ಮಗಳಾಗಿದ್ದೇವೆ, ಎಲ್ಲರೂ ಮನುಷ್ಯರೇ ಆಗಿದ್ದೇವೆ. ದೊಡ್ಡವರಿರಲಿ ಅಥವಾ ಚಿಕ್ಕವರಿರಲಿ, ರಾಷ್ಟ್ರಪತಿ, ರಾಜ-ರಾಣಿ ಎಲ್ಲರೂ ಮನುಷ್ಯರೇ ಆಗಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ಎಲ್ಲರೂ ಆತ್ಮಗಳಾಗಿದ್ದೀರಿ ಮತ್ತೆ ನಾನು ಎಲ್ಲಾ ಆತ್ಮಗಳ ಪಿತನಾಗಿದ್ದೇನೆ. ಆದ್ದರಿಂದಲೇ ನನ್ನನ್ನು ಪರಮಪಿತ ಪರಮಾತ್ಮ ಅರ್ಥಾತ್ ಸುಪ್ರೀಂ ಎಂದು ಹೇಳುತ್ತಾರೆ. ಮಕ್ಕಳಿಗೆ ತಿಳಿದಿದೆ - ಅವರು ನಾವೆಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ನಾವೆಲ್ಲರೂ ಸಹೋದರರಾಗಿದ್ದೇವೆ. ಮತ್ತೆ ಬ್ರಹ್ಮಾರವರ ಮೂಲಕ ಸಹೋದರ-ಸಹೋದರಿಯರು. ಶ್ರೇಷ್ಠ ಮತ್ತು ನೀಚ ಕುಲವಾಗುತ್ತದೆ. ಎಲ್ಲರೂ ಆತ್ಮಗಳೆಂದು ನೀವು ತಿಳಿದುಕೊಂಡಿದ್ದೀರಿ. ಮನುಷ್ಯರು ಏನನ್ನೂ ತಿಳಿದುಕೊಳ್ಳುವುದಿಲ್ಲ. ನಿಮಗೆ ತಂದೆಯೇ ತಿಳಿಸುತ್ತಾರೆ - ತಂದೆಯನ್ನಂತೂ ಯಾರೂ ತಿಳಿದುಕೊಂಡಿಲ್ಲ. ಹೇ ಭಗವಂತ, ಹೇ ಮಾತಾಪಿತಾ ಎಂದು ಮನುಷ್ಯರು ಹಾಡುತ್ತಾರೆ. ಆದರೆ ಸರ್ವ ಶ್ರೇಷ್ಠನಂತೂ ಒಬ್ಬರಿರಬೇಕಲ್ಲವೆ. ಅವರು ಎಲ್ಲರಿಗೆ ಸುಖ ನೀಡುವಂತಹ ಎಲ್ಲರ ತಂದೆಯಾಗಿದ್ದಾರೆ. ಸುಖ ಮತ್ತು ದುಃಖದ ಆಟವನ್ನೂ ಸಹ ನೀವು ಅರಿತುಕೊಂಡಿದ್ದೀರಿ. ಮನುಷ್ಯರು ತಿಳಿದುಕೊಳ್ಳುತ್ತಾರೆ - ಈಗೀಗ ಸುಖವಿದೆ, ಈಗೀಗ ದುಃಖವಿರುತ್ತದೆ ಆದರೆ ಅರ್ಧಕಲ್ಪ ಸುಖ, ಅರ್ಧಕಲ್ಪ ದುಃಖವೆಂಬುದನ್ನು ಅವರು ತಿಳಿದುಕೊಂಡಿಲ್ಲ. ಸತೋಪ್ರಧಾನರಿಂದ ಸತೋ, ರಜೋ, ತಮೋ ಆಗುತ್ತದೆಯಲ್ಲವೆ. ಶಾಂತಿಧಾಮದಲ್ಲಿ ನಾವೆಲ್ಲಾ ಆತ್ಮಗಳಿದ್ದಾಗ ಅಲ್ಲಿ ಎಲ್ಲರೂ ಸತ್ಯ ಚಿನ್ನವಾಗಿರುತ್ತೇವೆ ಅದರಲ್ಲಿ ಏನೂ ಬೆರಕೆಯಿರುವುದಿಲ್ಲ, ಭಲೆ ತಮ್ಮ-ತಮ್ಮ ಪಾತ್ರವು ಸಂಸ್ಕಾರದಲ್ಲಿ ತುಂಬಿರುತ್ತದೆ. ಆದರೆ ಆತ್ಮಗಳೆಲ್ಲರೂ ಪವಿತ್ರರಾಗಿರುತ್ತೇವೆ. ಅಪವಿತ್ರ ಆತ್ಮವಿರಲು ಸಾಧ್ಯವಿಲ್ಲ ಮತ್ತೆ ಈ ಸಮಯದಲ್ಲಿ ಯಾರು ಪವಿತ್ರ ಆತ್ಮಗಳು ಇಲ್ಲಿರಲು ಸಾಧ್ಯವಿಲ್ಲ. ನೀವು ಬ್ರಾಹ್ಮಣ ಕುಲಭೂಷಣರು ಪವಿತ್ರರಾಗುತ್ತಿದ್ದೀರಿ. ನೀವೀಗ ತಮ್ಮನ್ನು ದೇವತೆಗಳೆಂದು ಹೇಳಿಕೊಳ್ಳುವಂತಿಲ್ಲ. ದೇವತೆಗಳು ಸಂಪೂರ್ಣ ನಿರ್ವಿಕಾರಿಗಳಾಗಿದ್ದಾರೆ, ನಿಮಗೆ ಸಂಪೂರ್ಣ ನಿರ್ವಿಕಾರಿಗಳೆಂದು ಹೇಳುವುದಿಲ್ಲ. ಭಲೆ ಶಂಕರಾಚಾರ್ಯರಾಗಿರಲಿ ಅಥವಾ ಮತ್ತ್ಯಾರೇ ಆಗಿರಲಿ, ದೇವತೆಗಳ ವಿನಃ ಮತ್ತ್ಯಾರಿಗೂ ಹೇಳಲು ಸಾಧ್ಯವಿಲ್ಲ. ಈ ಮಾತುಗಳನ್ನು ಜ್ಞಾನ ಸಾಗರನ ಮುಖದಿಂದ ನೀವೇ ಕೇಳಿಸಿಕೊಳ್ಳುತ್ತೀರಿ. ಜ್ಞಾನ ಸಾಗರನು ಒಂದೇ ಬಾರಿ ಬರುತ್ತಾರೆಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಮನುಷ್ಯರಂತೂ ಪುನರ್ಜನ್ಮವನ್ನು ಪಡೆದುಕೊಳ್ಳುತ್ತಾ ಬರುತ್ತಾರೆ. ಯಾರಾದರೂ ಜ್ಞಾನವನ್ನು ಕೇಳಿಹೋಗಿದ್ದಾರೆ, ಸಂಸ್ಕಾರವನ್ನು ತೆಗೆದುಕೊಂಡು ಹೋಗಿದ್ದಾರೆಯೋ ಅವರು ಮತ್ತೆ ಬರುತ್ತಾರೆ, ಬಂದು ಜ್ಞಾನವನ್ನು ಕೇಳುತ್ತಾರೆ. ತಿಳಿದುಕೊಳ್ಳಿ, 6-8 ವರ್ಷಗಳವರಿದ್ದಾರೆ, ಕೆಲಕೆಲವರಲ್ಲಿ ಒಳ್ಳೆಯ ತಿಳುವಳಿಕೆಯೂ ಬಂದು ಬಿಡುತ್ತದೆ, ಅದೇ ಆತ್ಮವಲ್ಲವೆ. ಜ್ಞಾನವನ್ನು ಕೇಳಿದಾಗ ಅದಕ್ಕೆ ಬಹಳ ಇಷ್ಟವಾಗುತ್ತದೆ, ನನಗೆ ಪುನಃ ತಂದೆಯ ಅದೇ ಜ್ಞಾನವು ಸಿಗುತ್ತಿದೆ ಎಂದು ಆತ್ಮವು ತಿಳಿಯುತ್ತಿದೆ. ಆಂತರಿಕವಾಗಿ ಬಹಳ ಖುಷಿಯಿರುತ್ತದೆ. ಅನ್ಯರಿಗೂ ಕಲಿಸತೊಡಗುತ್ತಾರೆ. ಸ್ಪೂರ್ತಿವಂತರಾಗಿ ಬಿಡುತ್ತಾರೆ. ಹೇಗೆ ಯೋಧರು ಆ ಸಂಸ್ಕಾರವನ್ನು ತೆಗೆದುಕೊಂಡು ಹೋಗುವುದರಿಂದ ಬಾಲ್ಯದಲ್ಲಿ ಅದೇ ಕೆಲಸದಲ್ಲಿ ಖುಷಿಯಿಂದ ತೊಡಗುತ್ತಾರೆ. ಈಗ ನೀವಂತೂ ಪುರುಷಾರ್ಥ ಮಾಡಿ ಹೊಸ ಪ್ರಪಂಚದ ಮಾಲೀಕರಾಗಬೇಕಾಗಿದೆ. ನೀವು ಎಲ್ಲರಿಗೆ ತಿಳಿಸಬಲ್ಲಿರಿ ಅಥವಾ ಹೊಸ ಪ್ರಪಂಚದ ಮಾಲೀಕರಾಗಬಲ್ಲಿರಿ ಇಲ್ಲವೆ ಶಾಂತಿಧಾಮದ ಮಾಲೀಕರಾಗಬಲ್ಲಿರಿ. ಶಾಂತಿಧಾಮವು ನಿಮ್ಮ ಮನೆಯಾಗಿದೆ, ಅಲ್ಲಿಂದ ನೀವಾತ್ಮಗಳು ಪಾತ್ರವನ್ನಭಿನಯಿಸಲು ಬರುತ್ತೀರಿ. ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ ಏಕೆಂದರೆ ಆತ್ಮದ ಬಗ್ಗೆಯೇ ತಿಳಿದಿಲ್ಲ. ನಾವು ನಿರಾಕಾರಿ ಪ್ರಪಂಚದಿಂದ ಇಲ್ಲಿ ಬಂದಿದ್ದೇವೆ, ನಾವು ಬಿಂದುಗಳಾಗಿದ್ದೇವೆಂದು ಮೊದಲು ನಿಮಗೂ ಸಹ ತಿಳಿದಿರಲಿಲ್ಲ. ಭೃಕುಟಿಯ ನಡುವೆ ಹೊಳೆಯುವ ನಕ್ಷತ್ರವೆಂದು ಭಲೆ ಸನ್ಯಾಸಿಗಳು ಹೇಳುತ್ತಾರೆ. ಆದರೆ ಬುದ್ಧಿಯಲ್ಲಿ ದೊಡ್ಡ ರೂಪದಲ್ಲಿ ಬಂದು ಬಿಡುತ್ತದೆ. ಸಾಲಿಗ್ರಾಮವೆಂದು ಹೇಳುವುದರಿಂದ ಅವರು ದೊಡ್ಡ ರೂಪವೆಂದು ತಿಳಿಯುತ್ತಾರೆ, ಆತ್ಮವು ಸಾಲಿಗ್ರಾಮವಾಗಿದೆ. ಯಜ್ಞವನ್ನು ರಚಿಸಿದಾಗಲೂ ಸಹ ಅದರಲ್ಲಿಯೂ ದೊಡ್ಡ-ದೊಡ್ಡ ಸಾಲಿಗ್ರಾಮಗಳನ್ನು ಮಾಡಿಸುತ್ತಾರೆ. ಪೂಜೆಯ ಸಮಯದಲ್ಲಿ ದೊಡ್ಡ ರೂಪವೇ ನೆನಪಿಗೆ ಬಂದು ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ಇದೆಲ್ಲವೂ ಅಜ್ಞಾನವಾಗಿದೆ, ನಾನೇ ಜ್ಞಾನವನ್ನು ತಿಳಿಸುತ್ತೇನೆ, ಪ್ರಪಂಚದಲ್ಲಿ ಮತ್ತ್ಯಾರೂ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ. ಆತ್ಮವೂ ಬಿಂದು, ಪರಮಾತ್ಮನೂ ಬಿಂದು ಎಂಬ ಮಾತನ್ನು ಯಾರೂ ತಿಳಿಸಿಕೊಡುವುದಿಲ್ಲ. ಅವರು ಅಖಂಡ ಜ್ಯೋತಿ ಸ್ವರೂಪ ಬ್ರಹ್ಮ್ತತ್ವವೆಂದು ಹೇಳಿ ಬಿಡುತ್ತಾರೆ. ಬ್ರಹ್ಮ್ತತ್ವವನ್ನೇ ಭಗವಂತನೆಂದು ತಿಳಿಯುತ್ತಾರೆ ಮತ್ತು ತಮ್ಮನ್ನೇ ಭಗವಂತನೆಂದು ಹೇಳಿಕೊಳ್ಳುತ್ತಾರೆ. ನಾವು ಪಾತ್ರವನ್ನಭಿನಯಿಸಲು ಚಿಕ್ಕ ಆತ್ಮನ ರೂಪವನ್ನು ಧರಿಸುತ್ತೇನೆ. ನಂತರ ದೊಡ್ಡ ಜ್ಯೋತಿಯಲ್ಲಿ ಹೋಗಿ ಲೀನವಾಗಿ ಬಿಡುತ್ತೇವೆಂದು ಹೇಳುತ್ತಾರೆ. ಲೀನವಾಗಿ ಬಿಟ್ಟ ನಂತರ ಮತ್ತೇನು ಪಾತ್ರವೂ ಲೀನವಾಗಿ ಬಿಡಬೇಕು. ಇದು ಎಷ್ಟು ತಪ್ಪಾಗಿ ಬಿಡುತ್ತದೆ.

ಈಗ ತಂದೆಯು ಬಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಕೊಡುತ್ತಾರೆ ಮತ್ತೆ ಅರ್ಧಕಲ್ಪದ ನಂತರ ಏಣಿಯನ್ನಿಳಿಯುತ್ತಾ ಜೀವನ ಬಂಧನದಲ್ಲಿ ಬರುತ್ತೀರಿ. ಪುನಃ ತಂದೆಯು ಬಂದು ಜೀವನ್ಮುಕ್ತರನ್ನಾಗಿ ಮಾಡುತ್ತಾರೆ. ಆದ್ದರಿಂದ ಅವರಿಗೆ ಸರ್ವರ ಸದ್ಗತಿದಾತನೆಂದು ಹೇಳಲಾಗುತ್ತದೆ. ಅಂದಮೇಲೆ ಯಾರು ಪತಿತ-ಪಾವನ ತಂದೆಯಾಗಿದ್ದಾರೆಯೋ ಅವರನ್ನೇ ನೆನಪು ಮಾಡಬೇಕಾಗಿದೆ, ಅವರ ನೆನಪಿನಿಂದಲೇ ನೀವು ಪಾವನರಾಗುತ್ತೀರಿ. ಇಲ್ಲದಿದ್ದರೆ ಪಾವನರಾಗಲು ಸಾಧ್ಯವಿಲ್ಲ, ಶ್ರೇಷ್ಠಾತಿ ಶ್ರೇಷ್ಠರು ಒಬ್ಬರೇ ತಂದೆಯಾಗಿದ್ದಾರೆ. ನಾವು ಸಂಪೂರ್ಣರಾಗಿ ಬಿಟ್ಟೆವು, ಸಂಪೂರ್ಣ ತಯಾರಾಗಿ ಬಿಟ್ಟೆವೆಂದು ಕೆಲವರು ತಿಳಿಯುತ್ತಾರೆ, ಹೀಗೆ ತಿಳಿದುಕೊಂಡು ತಮ್ಮ ಮನಸ್ಸನ್ನು ಖುಷಿ ಪಡಿಸಿಕೊಳ್ಳುತ್ತಾರೆ. ಇದೂ ಸಹ ನಾನೇ ಎಲ್ಲವನ್ನೂ ಅರಿತವನೆಂದು ತಿಳಿಯುವುದಾಗಿದೆ. ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ಈಗ ಬಹಳ ಪುರುಷಾರ್ಥ ಮಾಡಬೇಕಾಗಿದೆ. ಪಾವನರಾಗಿ ಬಿಟ್ಟರೆ ಮತ್ತೆ ಪಾವನ ಪ್ರಪಂಚವೂ ಬೇಕು. ಒಬ್ಬರೇ ಹೋಗುವಂತಿಲ್ಲ. ನಾವು ಬೇಗನೆ ಕರ್ಮಾತೀತರಾಗಬೇಕೆಂದು ಯಾರೆಷ್ಟೇ ಪ್ರಯತ್ನ ಪಡಲಿ ಆದರೆ ಆಗುವುದಿಲ್ಲ. ರಾಜಧಾನಿಯು ಸ್ಥಾಪನೆಯಾಗಲಿದೆ. ಭಲೆ ಯಾವ ವಿದ್ಯಾರ್ಥಿಯಾದರೂ ಬಹಳ ಬುದ್ಧಿವಂತರಾಗಿ ಬಿಡುತ್ತಾರೆ. ಆದರೆ ಪರೀಕ್ಷೆಯಂತೂ ತನ್ನ ಸಮಯದಲ್ಲಿಯೇ ಇರುತ್ತದೆಯಲ್ಲವೆ. ಪರೀಕ್ಷೆಯು ಸಮಯಕ್ಕೆ ಮುಂಚಿತವಾಗಿಯೇ ಆಗಲು ಸಾಧ್ಯವಿಲ್ಲ. ಇಲ್ಲಿಯೂ ಹಾಗೆಯೇ ಸಮಯವು ಬಂದಾಗ ನಿಮ್ಮ ವಿದ್ಯಾಭ್ಯಾಸದ ಫಲಿತಾಂಶವು ತಿಳಿಯುವುದು. ಎಷ್ಟೇ ಒಳ್ಳೆಯ ಪುರುಷಾರ್ಥಿಯಾಗಿರಲಿ ನಾನು ಸಂಪೂರ್ಣ ತಯಾರಾಗಿದ್ದೇನೆಂದು ಹೇಳುವಂತಿಲ್ಲ. ಯಾವುದೇ ಆತ್ಮವು 16 ಕಲಾ ಸಂಪೂರ್ಣನಾಗಲು ಸಾಧ್ಯವಿಲ್ಲ, ಬಹಳ ಪುರುಷಾರ್ಥ ಮಾಡಬೇಕಾಗಿದೆ. ನಾನು ಸಂಪೂರ್ಣನಾಗಿ ಬಿಟ್ಟೆನೆಂದು ಕೇವಲ ತಮ್ಮ ಮನಸ್ಸನ್ನು ಖುಷಿ ಪಡಿಸಿಕೊಳ್ಳಬಾರದು. ಸಂಪೂರ್ಣರಾಗುವುದು ಅಂತ್ಯದಲ್ಲಿ, ಆದ್ದರಿಂದ ನಾನೇ ಎಲ್ಲವನ್ನೂ ಅರಿತವನೆಂದು ತಿಳಿಯಬಾರದು. ಈಗ ರಾಜಧಾನಿಯ ಸ್ಥಾಪನೆಯಾಗಬೇಕಾಗಿದೆ. ಹಾ! ಇಷ್ಟು ತಿಳಿಯಬಹುದು - ಇನ್ನು ಸ್ವಲ್ಪವೇ ಸಮಯವಿದೆ, ಅಣ್ವಸ್ತ್ರಗಳನ್ನೂ ತಯಾರಿಸಿದ್ದಾರೆ. ಇವುಗಳನ್ನು ತಯಾರಿಸುವುದರಲ್ಲಿಯೂ ಸಮಯ ಹಿಡಿಸುತ್ತದೆ ನಂತರ ಅಭ್ಯಾಸವಾದ ಮೇಲೆ ಬಹುಬೇಗ-ಬೇಗನೆ ತಯಾರು ಮಾಡುತ್ತಾರೆ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ವಿನಾಶಕ್ಕಾಗಿ ಅಣು ಬಾಂಬುಗಳನ್ನು ತಯಾರಿಸುತ್ತಾರೆ. ಗೀತೆಯಲ್ಲಿಯೂ ಈ ಅಣ್ವಸ್ತ್ರದ ಶಬ್ಧವಿದೆ. ಶಾಸ್ತ್ರಗಳಲ್ಲಿ ಈ ರೀತಿಯಾಗಿ ಬರೆದಿದ್ದಾರೆ - ಹೊಟ್ಟೆಯಿಂದ ಲೋಹವು ಬಂದಿತು ನಂತರ ಈ ರೀತಿ ಆಯಿತು ಎಂದು ಹೇಳಿದ್ದಾರೆ. ಇವೆಲ್ಲವೂ ಸುಳ್ಳು ಮಾತುಗಳಲ್ಲವೆ. ತಂದೆಯು ಬಂದು ತಿಳಿಸುತ್ತಾರೆ - ಇವುಗಳಿಗೆ ಅಣ್ವಸ್ತ್ರಗಳೆಂದು ಕರೆಯಲಾಗುತ್ತದೆ. ಈಗ ವಿನಾಶಕ್ಕೆ ಮೊದಲೇ ನಾವು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಮಕ್ಕಳಿಗೆ ಗೊತ್ತಿದೆ, ನಾವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ಸತ್ಯ ಚಿನ್ನವಾಗಿದ್ದೆವು. ಭಾರತಕ್ಕೆ ಸತ್ಯ ಖಂಡವೆಂದು ಹೇಳುತ್ತಾರೆ. ಈಗಂತೂ ಸುಳ್ಳು ಖಂಡವಾಗಿ ಬಿಟ್ಟಿದೆ. ಹೇಗೆ ಚಿನ್ನದಲ್ಲಿಯೂ ಅಪ್ಪಟ ಮತ್ತು ಕಲಬೆರಕೆಯಿರುತ್ತದೆಯಲ್ಲವೆ. ತಂದೆಯ ಮಹಿಮೆಯೇನು ಎಂಬುದನ್ನು ತಾವು ಮಕ್ಕಳು ಅರಿತಿದ್ದೀರಿ. ತಂದೆಯು ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ, ಸತ್ಯ-ಚೈತನ್ಯನಾಗಿದ್ದಾರೆ. ಮೊದಲಂತೂ ಕೇವಲ ಗಾಯನ ಮಾಡುತ್ತಿದ್ದಿರಿ, ಈಗ ನೀವು ತಿಳಿದುಕೊಂಡಿದ್ದೀರಿ - ತಂದೆಯು ಎಲ್ಲಾ ಗುಣಗಳನ್ನು ನಮ್ಮಲ್ಲಿ ತುಂಬುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ – ಮೊಟ್ಟ ಮೊದಲು ನೆನಪಿನ ಯಾತ್ರೆ ಮಾಡಿ, ನನ್ನನ್ನು ನೆನಪು ಮಾಡಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುವವು. ನನ್ನ ಹೆಸರೇ ಆಗಿದೆ, ಪತಿತ-ಪಾವನ. ಹೇ ಪತಿತ-ಪಾವನ ಬನ್ನಿ ಎಂದು ಹಾಡುತ್ತಾರೆ. ಆದರೆ ಅವರು ಬಂದು ಏನು ಮಾಡುತ್ತಾರೆಂಬುದನ್ನು ಅರಿತುಕೊಂಡಿಲ್ಲ. ಕೇವಲ ಒಬ್ಬ ಸೀತೆಯೇ ಇರುವುದಿಲ್ಲ. ನೀವೆಲ್ಲರೂ ಸೀತೆಯರಾಗಿದ್ದೀರಿ.

ತಂದೆಯು ನೀವು ಮಕ್ಕಳನ್ನು ಬೇಹದ್ದಿನಲ್ಲಿ ಕರೆದುಕೊಂಡು ಹೋಗಲು ಬೇಹದ್ದಿನ ಮಾತುಗಳನ್ನು ತಿಳಿಸುತ್ತಾರೆ. ನೀವು ಬೇಹದ್ದಿನ ಬುದ್ಧಿಯಿಂದ ತಿಳಿದುಕೊಂಡಿದ್ದೀರಿ - ಸ್ತ್ರೀ ಹಾಗೂ ಪುರುಷರೆಲ್ಲರೂ ಸೀತೆಯರಾಗಿದ್ದೇವೆ. ಎಲ್ಲರೂ ರಾವಣನ ಬಂಧನದಲ್ಲಿದ್ದೇವೆ. ತಂದೆ (ರಾಮ) ಯು ಬಂದು ಎಲ್ಲರನ್ನೂ ರಾವಣನ ಬಂಧನದಿಂದ ಬಿಡಿಸುತ್ತಾರೆ. ರಾವಣನೆಂದರೆ ಯಾವುದೇ ಮನುಷ್ಯನಲ್ಲ. ಪ್ರತಿಯೊಬ್ಬರಲ್ಲಿಯೂ ಪಂಚ ವಿಕಾರಗಳಿವೆ. ಆದ್ದರಿಂದ ರಾವಣ ರಾಜ್ಯವೆಂದು ಕರೆಯಲಾಗುತ್ತದೆ. ಹೆಸರೇ ಆಗಿದೆ - ನಿರ್ವಿಕಾರಿ ಪ್ರಪಂಚ, ಇದು ವಿಕಾರಿ ಪ್ರಪಂಚವಾಗಿದೆ. ಎರಡೂ ಬೇರೆ-ಬೇರೆ ಹೆಸರುಗಳಿವೆ. ಇದು ವೇಶ್ಯಾಲಯ ಮತ್ತು ಅದು ಶಿವಾಲಯವಾಗಿದೆ. ಈ ಲಕ್ಷ್ಮೀ-ನಾರಾಯಣರು ನಿರ್ವಿಕಾರಿ ಪ್ರಪಂಚದ ಮಾಲೀಕರಾಗಿದ್ದರು, ಇವರ ಮುಂದೆ ವಿಕಾರಿ ಮನುಷ್ಯರು ಹೋಗಿ ತಲೆ ಬಾಗುತ್ತಾರೆ. ವಿಕಾರಿ ರಾಜರು ಆ ನಿರ್ವಿಕಾರಿ ರಾಜರ ಮುಂದೆ ತಲೆ ಬಾಗುತ್ತಾರೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ - ಮನುಷ್ಯರಿಗೆ ಕಲ್ಪದ ಆಯಸ್ಸೇ ತಿಳಿದಿಲ್ಲ. ಅಂದಮೇಲೆ ರಾವಣ ರಾಜ್ಯವು ಯಾವಾಗ ಆರಂಭವಾಗುತ್ತದೆಯೆಂದು ತಿಳಿದುಕೊಳ್ಳಲು ಹೇಗೆ ಸಾಧ್ಯ! ಎರಡೂ ಅರ್ಧ-ಅರ್ಧ ಇರಬೇಕಲ್ಲವೆ. ರಾಮ ರಾಜ್ಯ-ರಾವಣ ರಾಜ್ಯ ಯಾವಾಗಿನಿಂದ ಆರಂಭಿಸುವರು ಎಂಬುದನ್ನೂ ಸಹ ತಬ್ಬಿಬ್ಬು ಮಾಡಿ ಬಿಟ್ಟಿದ್ದಾರೆ.

ತಂದೆಯು ತಿಳಿಸುತ್ತಾರೆ - ಈ 5000 ವರ್ಷಗಳ ಚಕ್ರವು ಸುತ್ತುತ್ತಿರುತ್ತದೆ. ಈಗ ನಿಮಗೆ ತಿಳಿದಿದೆ - ನಾವು 84 ಜನ್ಮಗಳ ಪಾತ್ರವನ್ನಭಿನಯಿಸುತ್ತೇವೆ ಮತ್ತೆ ಮನೆಗೆ ಹೋಗುತ್ತೇವೆ. ಸತ್ಯಯುಗ-ತ್ರೇತಾಯುಗದಲ್ಲಿಯೂ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತೇವೆ. ಅದು ರಾಮ ರಾಜ್ಯವಾಗಿದೆ ನಂತರ ರಾವಣ ರಾಜ್ಯದಲ್ಲಿ ಬರಬೇಕಾಗಿದೆ. ಇದು ಸೋಲು-ಗೆಲುವಿನ ಆಟವಾಗಿದೆ. ನೀವು ಜಯ ಗಳಿಸುತ್ತೀರಿ ಆದ್ದರಿಂದ ಸ್ವರ್ಗದ ಮಾಲೀಕರಾಗುತ್ತೀರಿ. ಸೋಲನ್ನನುಭವಿಸುತ್ತೀರೆಂದರೆ ನರಕದ ಮಾಲೀಕರಾಗುತ್ತೀರಿ. ಸ್ವರ್ಗವೇ ಬೇರೆಯಾಗಿದೆ, ಯಾರಾದರೂ ಶರೀರ ಬಿಟ್ಟರೆ ಸ್ವರ್ಗಸ್ಥರಾದರೆಂದು ಹೇಳುತ್ತಾರೆ. ನೀವು ಹೀಗೆ ಹೇಳುವುದಿಲ್ಲ ಏಕೆಂದರೆ ಯಾವಾಗ ಸ್ವರ್ಗವು ಬರುವುದೆಂದು ನಿಮಗೆ ತಿಳಿದಿದೆ. ಜ್ಯೋತಿಯು ಜ್ಯೋತಿಯಲ್ಲಿ ಸಮಾವೇಶವಾಯಿತು ಅಥವಾ ನಿರ್ವಾಣಗೈದರೆಂದು ಅವರು ಹೇಳುತ್ತಾರೆ. ಆದರೆ ಜ್ಯೋತಿಯು ಜ್ಯೋತಿಯಲ್ಲಿ ಸಮಾವೇಶವಾಗಲು ಸಾಧ್ಯವಿಲ್ಲವೆಂದು ನೀವು ಹೇಳುತ್ತೀರಿ. ಸರ್ವರ ಸದ್ಗತಿದಾತನು ಒಬ್ಬರೇ ಎಂದು ಗಾಯನ ಮಾಡಲಾಗುತ್ತದೆ. ಸತ್ಯಯುಗಕ್ಕೆ ಸ್ವರ್ಗವೆಂದು ಕರೆಯಲಾಗುತ್ತದೆ, ಈಗ ನರಕವಾಗಿದೆ. ಇದು ಭಾರತದ್ದೇ ಮಾತಾಗಿದೆ ಉಳಿದಂತೆ ಮೇಲೇನೂ ಇಲ್ಲ. ದಿಲ್ವಾಡಾ ಮಂದಿರದಲ್ಲಿ ಮೇಲ್ಭಾಗದಲ್ಲಿ ಸ್ವರ್ಗವನ್ನು ತೋರಿಸಿದ್ದಾರೆ ಅದರಿಂದ ಅವಶ್ಯವಾಗಿ ಮೇಲೆ ಸ್ವರ್ಗವಿದೆಯೆಂದು ಮನುಷ್ಯರು ತಿಳಿಯುತ್ತಾರೆ. ಅರೆ! ಮೇಲೆ ಮನುಷ್ಯರು ಹೇಗೆ ಇರುತ್ತಾರೆ, ಅಮಾಯಕರಾದರಲ್ಲವೆ. ನೀವೀಗ ಸ್ಪಷ್ಟ ಮಾಡಿ ತಿಳಿಸುತ್ತೀರಿ ಮತ್ತು ನೀವು ತಿಳಿದುಕೊಂಡಿದ್ದೀರಿ. ಇಲ್ಲಿಯೆ ಸ್ವರ್ಗವಾಸಿಗಳಾಗಿದ್ದೆವು ಮತ್ತೆ ಇಲ್ಲಿಯೇ ನರಕವಾಸಿಗಳಾಗುತ್ತೇವೆ. ಈಗ ಮತ್ತೆ ಸ್ವರ್ಗವಾಸಿಗಳಾಗಬೇಕಾಗಿದೆ. ಈ ಜ್ಞಾನವಿರುವುದೇ ನರನಿಂದ ನಾರಾಯಣನಾಗಲು. ಕಥೆಯೂ ಸಹ ಸತ್ಯ ನಾರಾಯಣನಾಗುವುದನ್ನೇ ತಿಳಿಸುತ್ತಾರೆ. ರಾಮ ಸೀತೆಯರ ಕಥೆ ಎನ್ನುವುದಿಲ್ಲ ಇದು ನರನಿಂದ ನಾರಾಯಣನಾಗುವ ಕಥೆಯಾಗಿದೆ. ಲಕ್ಷ್ಮೀ-ನಾರಾಯಣರದು ಶ್ರೇಷ್ಠಾತಿ ಶ್ರೇಷ್ಠ ಪದವಿಯಾಗಿದೆ. ತ್ರೇತಾಯುಗದಲ್ಲಾದರೂ ಎರಡು ಕಲೆಗಳು ಕಡಿಮೆಯಾಗಿ ಬಿಡುತ್ತದೆ. ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥವನ್ನೇ ಮಾಡಬೇಕಾಗುತ್ತದೆ. ಒಂದುವೇಳೆ ಮಾಡಲಿಲ್ಲವೆಂದರೆ ಹೋಗಿ ತ್ರೇತಾಯುಗಿಗಳಾಗುತ್ತಾರೆ. ಭಾರತವಾಸಿಗಳು ಪತಿತರಾಗುವುದರಿಂದ ತಮ್ಮ ಧರ್ಮವನ್ನೇ ಮರೆತು ಹೋಗುತ್ತಾರೆ. ಕ್ರಿಶ್ಚಿಯನ್ನರು ಎಲ್ಲಿ ಸತೋದಿಂದ ತಮೋಪ್ರಧಾನರಾಗಿದ್ದಾರೆ ಆದರೂ ಸಹ ಕ್ರಿಶ್ಚಿಯನ್ ಸಂಪ್ರದಾಯದವರಲ್ಲವೆ. ಆದಿ ಸನಾತನ ದೇವಿ-ದೇವತಾ ಧರ್ಮದವರು ತಮ್ಮನ್ನು ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ. ನಾವು ಮೂಲತಃ ದೇವಿ-ದೇವತಾ ಧರ್ಮದವರಾಗಿದ್ದೇವೆ ಎಂಬುದನ್ನೂ ಸಹ ತಿಳಿದುಕೊಳ್ಳುವುದಿಲ್ಲ, ಆಶ್ಚರ್ಯದ ಮಾತಲ್ಲವೆ. ಹಿಂದೂ ಧರ್ಮವನ್ನು ಯಾರು ಸ್ಥಾಪಿಸಿದರೆಂದು ನೀವು ಕೇಳುತ್ತೀರಿ ಆಗ ಅವರು ತಬ್ಬಿಬ್ಬಾಗುತ್ತಾರೆ. ದೇವತೆಗಳ ಪೂಜೆ ಮಾಡುತ್ತಾರೆಂದಮೇಲೆ ದೇವತಾ ಧರ್ಮದವರಾದರಲ್ಲವೆ ಆದರೆ ತಿಳಿದುಕೊಂಡಿಲ್ಲ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ. ನೀವು ತಿಳಿದುಕೊಂಡಿದ್ದೀರಿ - ಮೊದಲು ನಾವು ಸೂರ್ಯವಂಶಿಯರಾಗಿದ್ದೇವೆ, ನಂತರ ಅನ್ಯ ಧರ್ಮದವರು ಬರುತ್ತಾರೆ, ನಾವು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಬರುತ್ತೇವೆ, ನಿಮ್ಮಲ್ಲಿಯೂ ಕೆಲವರೇ ಯಥಾರ್ಥ ರೀತಿಯಿಂದ ಅರಿತುಕೊಂಡಿದ್ದಾರೆ. ಶಾಲೆಯಲ್ಲಿಯೂ ಸಹ ಕೆಲವು ವಿದ್ಯಾರ್ಥಿಗಳ ಬುದ್ಧಿಯಲ್ಲಿ ಬಹಳ ಚೆನ್ನಾಗಿ ಕುಳಿತುಕೊಳ್ಳುತ್ತದೆ, ಕೆಲವರ ಬುದ್ಧಿಯಲ್ಲಿ ಕಡಿಮೆ ಕುಳಿತುಕೊಳ್ಳುತ್ತದೆ. ಇಲ್ಲಿಯೂ ಸಹ ಯಾರು ಅನುತ್ತೀರ್ಣರಾಗುವರೋ ಅವರಿಗೆ ಕ್ಷತ್ರಿಯರೆಂದು ಹೇಳಲಾಗುತ್ತದೆ. ಚಂದ್ರವಂಶದಲ್ಲಿ ಹೊರಟು ಹೋಗುತ್ತಾರೆ, ಎರಡು ಕಲೆಗಳು ಕಡಿಮೆಯಾಯಿತಲ್ಲವೆ ಅಂದಾಗ ಸಂಪೂರ್ಣರಾಗಲು ಸಾಧ್ಯವಿಲ್ಲ. ನಿಮ್ಮ ಬುದ್ಧಿಯಲ್ಲಿ ಬೇಹದ್ದಿನ ಚರಿತ್ರೆ-ಭೂಗೋಳವಿದೆ, ಆ ಶಾಲೆಯಲ್ಲಂತೂ ಸ್ಥೂಲವಾದ ಇತಿಹಾಸ-ಭೂಗೋಳವನ್ನು ಓದುತ್ತಾರೆ, ಅವರು ಮೂಲವತನ-ಸೂಕ್ಷ್ಮವತನವನ್ನು ತಿಳಿದುಕೊಂಡಿಲ್ಲ. ಇದು ಸಾಧು-ಸಂತ ಮೊದಲಾದವರ ಬುದ್ಧಿಯಲ್ಲಿಲ್ಲ. ನಿಮ್ಮ ಬುದ್ಧಿಯಲ್ಲಿದೆ - ಮೂಲವತನದಲ್ಲಿ ನಾವಾತ್ಮಗಳಿರುತ್ತೇವೆ, ಇದು ಸ್ಥೂಲವತನವಾಗಿದೆ. ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ, ಇದು ಸ್ವದರ್ಶನ ಚಕ್ರಧಾರಿಗಳ ಸೈನ್ಯವು ಕುಳಿತಿದೆ. ಈ ಸೈನ್ಯವು ತಂದೆ ಮತ್ತು ಚಕ್ರವನ್ನು ನೆನಪು ಮಾಡುತ್ತದೆ. ನಿಮ್ಮ ಬುದ್ಧಿಯಲ್ಲಿ ಜ್ಞಾನವಿದೆ, ಉಳಿದಂತೆ ಯಾವುದೆ ಆಯುಧಗಳಿಲ್ಲ. ಜ್ಞಾನದಿಂದ ಸ್ವಯಂನ ದರ್ಶನವಾಗಿದೆ. ತಂದೆಯು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಈಗ ತಂದೆಯ ಆಜ್ಞೆಯಾಗಿದೆ - ರಚಯಿತನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವುದು. ಯಾರೆಷ್ಟು ಸ್ವದರ್ಶನ ಚಕ್ರಧಾರಿಗಳಾಗುವರು ಅನ್ಯರನ್ನೂ ಮಾಡುವರು. ಅಷ್ಟು ಹೆಚ್ಚಿನ ಪದವಿ ಸಿಗುವುದು, ಇದು ಸಾಮಾನ್ಯ ಮಾತಾಗಿದೆ. ಕೃಷ್ಣನಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ, ಕೃಷ್ಣನಿಗೆ ತಂದೆಯೆಂತಲೂ ಹೇಳುವುದಿಲ್ಲ. ಆಸ್ತಿಯೂ ತಂದೆಯಿಂದಲೇ ಸಿಗುತ್ತದೆ. ಪತಿತ-ಪಾವನನೆಂದು ತಂದೆಗೇ ಹೇಳಲಾಗುತ್ತದೆ. ಅವರು ಬಂದಾಗಲೇ ನಾವು ಹಿಂತಿರುಗಿ ಶಾಂತಿಧಾಮಕ್ಕೆ ಹೋಗುತ್ತೇವೆ. ಮನುಷ್ಯರು ಮುಕ್ತಿಗಾಗಿ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ! ನೀವು ಎಷ್ಟು ಸಹಜವಾಗಿ ತಿಳಿಸುತ್ತೀರಿ. ಹೇಳಿ, ಪತಿತ-ಪಾವನನು ಪರಮಾತ್ಮನಾಗಿದ್ದಾರೆ, ಮತ್ತೆ ಗಂಗಾ ಸ್ನಾನ ಮಾಡಲು ಏಕೆ ಹೋಗುತ್ತೀರಿ! ಗಂಗಾ ನದಿಯ ತೀರದಲ್ಲಿ ಹೋಗಿ ಅಲ್ಲಿಯೇ ನಾವು ಶರೀರವನ್ನು ಬಿಡುತ್ತೇವೆಂದು ಕುಳಿತುಕೊಳ್ಳುತ್ತಾರೆ. ಬಂಗಾಳದವರೂ ಸಹ ಸಾಯುವ ಸಮಯದಲ್ಲಿ ಹೋಗಿ ಗಂಗೆಯಲ್ಲಿಯೇ ಹರಿನಾಮವನ್ನು ಜಪಿಸುತ್ತಾರೆ. ಮುಕ್ತರಾಗಿ ಬಿಟ್ಟರೆಂದು ತಿಳಿಯುತ್ತಾರೆ. ಈಗ ಆತ್ಮವಂತೂ ಹೊರಟು ಹೋಯಿತು, ಅದು ಪವಿತ್ರವಾಗಲಿಲ್ಲ. ಆತ್ಮವನ್ನು ಪವಿತ್ರವನ್ನಾಗಿ ಮಾಡುವವರು ತಂದೆಯೇ ಆಗಿದ್ದಾರೆ, ಅವರನ್ನೇ ಕರೆಯುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತದೆ. ತಂದೆಯು ಬಂದು ಇಡೀ ಪ್ರಪಂಚವನ್ನು ಹೊಸದನ್ನಾಗಿ ಮಾಡುತ್ತಾರೆ. ಉಳಿದಂತೆ ಯಾವುದೇ ರಚನೆಯನ್ನು ರಚಿಸುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯಲ್ಲಿ ಯಾವ ಗುಣಗಳಿವೆಯೋ ಅದನ್ನು ಸ್ವಯಂನಲ್ಲಿ ತುಂಬಿಸಿಕೊಳ್ಳಬೇಕಾಗಿದೆ. ಪರೀಕ್ಷೆಗೆ ಮೊದಲೇ ಪುರುಷಾರ್ಥ ಮಾಡಿ ಸ್ವಯಂನ್ನು ಸಂಪೂರ್ಣ ಪಾವನ ಮಾಡಿಕೊಳ್ಳಬೇಕಾಗಿದೆ, ಇದರಲ್ಲಿ ನಾನೇ ಎಲ್ಲವನ್ನೂ ಅರಿತವನೆಂದು ತಿಳಿಯಬಾರದು.

2. ಸ್ವದರ್ಶನ ಚಕ್ರಧಾರಿಗಳು ಆಗಬೇಕು ಮತ್ತು ಅನ್ಯರನ್ನೂ ಮಾಡಬೇಕು. ತಂದೆ ಮತ್ತು ಚಕ್ರವನ್ನು ನೆನಪು ಮಾಡಬೇಕಾಗಿದೆ. ಬೇಹದ್ದಿನ ತಂದೆಯ ಮೂಲಕ ಬೇಹದ್ದಿನ ಮಾತುಗಳನ್ನು ಕೇಳಿ ತಮ್ಮ ಬುದ್ಧಿಯನ್ನು ಬೇಹದ್ದಿನಲ್ಲಿಟ್ಟುಕೊಳ್ಳಬೇಕಾಗಿದೆ, ಹದ್ದಿನಲ್ಲಿ ಬರಬಾರದು.

ವರದಾನ:
ಮಧುರ ಮೌನದ ಲವಲೀನ ಸ್ಥಿತಿಯ ಮೂಲಕ ನಷ್ಠಾಮೋಹ ಸಮರ್ಥ ಸ್ವರೂಪ ಭವ.

ದೇಹ,ದೇಹದ ಸಂಬಂಧ,ದೇಹದ ಸಂಸ್ಕಾರ, ವ್ಯಕ್ತಿ ಹಾಗೂ ವೈಭವ, ವಾಯುಮಂಡಲ, ವೈಬ್ರೇಷನ್ ಎಲ್ಲಾ ಇದ್ದರೂ ಸಹಾ ತಮ್ಮ ಮತ್ತು ಆಕರ್ಷಣೆ ಮಾಡಬಾರದು. ಜನರು ಕಿರುಚಾಡುತ್ತಿರಲಿ ಆದರೆ ತಾವು ಅಚಲರಾಗಿರಿ. ಪ್ರಕೃತಿ, ಮಾಯೆ ಎಲ್ಲಾ ಕೊನೆಯ ಹಕ್ಕು ಚಲಾಯಿಸಲು ತಮ್ಮ ಕಡೆ ಎಷ್ಟೇ ಸೆಳೆಯಲಿ ಆದರೆ ತಾವು ನ್ಯಾರಾ ಮತ್ತು ತಂದೆಗೆ ಪ್ಯಾರಾ ಆಗುವ ಸ್ಥಿತಿಯಲ್ಲಿ ಲವಲೀನರಾಗಿರಿ - ಇದಕ್ಕೆ ಹೇಳಲಾಗುವುದು ನೋಡುತ್ತಿದ್ದರೂ ನೋಡದ ಹಾಗಿರಿ, ಕೇಳುತ್ತಿದ್ದರೂ ಕೇಳದ ಹಾಗಿರಿ. ಇದೇ ಮಧುರ ಮೌನ ಸ್ವರೂಪದ ಲವಲೀನ ಸ್ಥಿತಿಯಾಗಿದೆ, ಯಾವಾಗ ಇಂತಹ ಸ್ಥಿತಿಯಾಗುವುದು ಆಗ ಹೇಳಲಾಗುವುದು ನಷ್ಠಮೋಹ ಸಮರ್ಥ ಸ್ವರೂಪದ ವರದಾನಿ ಆತ್ಮ.

ಸ್ಲೋಗನ್:
ಹೋಲಿ ಹಂಸ ಆಗಿ ಅವಗುಣರೂಪಿ ಕಲ್ಲುಗಳನ್ನು ಬಿಟ್ಟು ಒಳ್ಳೆಗುಣ ರೂಪಿ ಮುತ್ತುಗಳನ್ನು ಅರಿಸುತ್ತಾ ಹೋಗಿ.