06.05.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ತಮ್ಮನ್ನು ತಾವು ನೋಡಿಕೊಳ್ಳಿ - ನಾನು ಹೂವಾಗಿದ್ದೇನೆಯೇ, ದೇಹದ ಅಹಂಕಾರದಲ್ಲಿ ಬಂದು ಮುಳ್ಳಂತೂ
ಆಗುತ್ತಿಲ್ಲವೆ? ನಿಮ್ಮನ್ನು ಮುಳ್ಳುಗಳಿಂದ ಹೂಗಳನ್ನಾಗಿ ಮಾಡಲು ತಂದೆಯು ಬಂದಿದ್ದಾರೆ”
ಪ್ರಶ್ನೆ:
ಯಾವ ನಿಶ್ಚಯದ
ಆಧಾರದ ಮೇಲೆ ತಂದೆಯೊಂದಿಗೆ ಅಟೂಟ್ (ಮುರಿಯಲಾರದ) ಪ್ರೀತಿಯಿರುತ್ತದೆ?
ಉತ್ತರ:
ಮೊದಲು ತನ್ನನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ, ಆಗ ತಂದೆಯೊಂದಿಗೆ ಪ್ರೀತಿಯಿರುತ್ತದೆ. ನಿರಾಕಾರ
ತಂದೆಯು ಈ ಭಗೀರಥನಲ್ಲಿ ವಿರಾಜಮಾನವಾಗಿದ್ದಾರೆ. ಅವರು ನಮಗೆ ಇವರ ಮೂಲಕ ಓದಿಸುತ್ತಿದ್ದಾರೆ ಎಂಬ
ಅಟೂಟ ನಿಶ್ಚಯವಿರಬೇಕು. ಯಾವಾಗ ಈ ನಿಶ್ಚಯವು ಅಲುಗಾಡುವುದೋ ಆಗ ಪ್ರೀತಿಯು ಕಡಿಮೆಯಾಗಿ ಬಿಡುತ್ತದೆ.
ಓಂ ಶಾಂತಿ.
ಮುಳ್ಳುಗಳಿಂದ ಹೂಗಳನ್ನಾಗಿ ಮಾಡುವಂತಹ ಭಗವಾನುವಾಚ ಅಥವಾ ಭಾಗ್ವಾನ್ (ಹೂದೋಟದ ಮಾಲೀಕ) ಭಗವಾನುವಾಚ.
ಮಕ್ಕಳಿಗೆ ತಿಳಿದಿದೆ - ನಾವಿಲ್ಲಿ ಮುಳ್ಳುಗಳಿಂದ ಹೂಗಳಾಗಲು ಬಂದಿದ್ದೇವೆ. ಪ್ರತಿಯೊಬ್ಬರೂ
ತಿಳಿದುಕೊಳ್ಳುತ್ತೀರಿ - ನಾವು ಮೊದಲು ಮುಳ್ಳುಗಳಾಗಿದ್ದೆವು, ಈಗ ಹೂಗಳಾಗುತ್ತಿದ್ದೇವೆ.
ಪತಿತ-ಪಾವನ ಬನ್ನಿ ಎಂದು ಬಹಳಷ್ಟು ತಂದೆಯ ಮಹಿಮೆ ಮಾಡುತ್ತಾರೆ. ಅವರು ಅಂಬಿಗ, ಹೂದೋಟದ ಮಾಲೀಕ,
ಪಾಪಕಟೇಶ್ವರನಾಗಿದ್ದಾರೆ. ಬಹಳಷ್ಟು ಹೆಸರುಗಳನ್ನು ಇಡುತ್ತಾರೆ. ಆದರೆ ಎಲ್ಲಾ ಸ್ಥಾನಗಳಲ್ಲಿ
ಚಿತ್ರವು ಒಂದೇ ಆಗಿದೆ. ಜ್ಞಾನದ ಸಾಗರ, ಸುಖದ ಸಾಗರನೆಂದು ಅವರ ಮಹಿಮೆ ಮಾಡುತ್ತಾರೆ. ಈಗ ನಿಮಗೆ
ತಿಳಿದಿದೆ - ನಾವು ಆ ಒಬ್ಬ ತಂದೆಯ ಬಳಿ ಕುಳಿತಿದ್ದೇವೆ. ಮುಳ್ಳಿನ ತರಹದ ಮನುಷ್ಯರಿಂದ ಈಗ ಹೂವಿನ
ತರಹ ದೇವತೆಗಳಾಗಲು ಬಂದಿದ್ದೇವೆ. ಇದು ಗುರಿ-ಧ್ಯೇಯವಾಗಿದೆ. ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿ
ನೋಡಿಕೊಳ್ಳಬೇಕು - ನನ್ನಲ್ಲಿ ದೈವೀ ಗುಣಗಳಿವೆಯೇ? ನಾನು ಸರ್ವಗುಣ ಸಂಪನ್ನನಾಗಿದ್ದೇನೆಯೇ?
ಮೊದಲಂತೂ ದೇವತೆಗಳ ಮಹಿಮೆ ಮಾಡುತ್ತಿದ್ದಿರಿ, ತಮ್ಮನ್ನು ಮುಳ್ಳುಗಳೆಂದು ತಿಳಿಯುತ್ತಿದ್ದಿರಿ,
ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲ..... ಏಕೆಂದರೆ ಪಂಚ ವಿಕಾರಗಳಿವೆ. ದೇಹಾಭಿಮಾನವೂ ಸಹ
ಬಹಳ ಕಠಿಣ ಅಭಿಮಾನವಾಗಿದೆ. ತನ್ನನ್ನು ಆತ್ಮವೆಂದು ತಿಳಿಯುವುದರಿಂದ ತಂದೆಯ ಜೊತೆಯೂ ಬಹಳ
ಪ್ರೀತಿಯಿರುವುದು. ನೀವೀಗ ತಿಳಿದುಕೊಂಡಿದ್ದೀರಿ - ನಿರಾಕಾರ ತಂದೆಯ ಜೊತೆಯೂ ಬಹಳ ಕಠಿಣ
ಅಭಿಮಾನವಾಗಿದೆ. ತನ್ನನ್ನು ತಿಳಿದುಕೊಂಡಿದ್ದೀರಿ - ನಿರಾಕಾರ ತಂದೆಯು ಈ ರಥದಲ್ಲಿ
ವಿರಾಜಮಾನವಾಗಿದ್ದಾರೆ. ಈ ನಿಶ್ಚಯವನ್ನು ಮಾಡಿಕೊಳ್ಳುತ್ತಿದ್ದರೂ ಸಹ ಮತ್ತೆ ಅದು ಅಲುಗಾಡುತ್ತದೆ.
ನಾವು ಶಿವ ತಂದೆಯ ಬಳಿ ಬಂದಿದ್ದೇವೆ. ತಂದೆಯು ಈ ಭಗೀರಥ, ಪ್ರಜಾಪಿತ ಬ್ರಹ್ಮನ ತನುವಿನಲ್ಲಿದ್ದಾರೆ.
ನಾವೆಲ್ಲಾ ಆತ್ಮಗಳ ತಂದೆಯು ಒಬ್ಬ ಶಿವ ತಂದೆಯಾಗಿದ್ದಾರೆ, ಅವರು ಈ ರಥದಲ್ಲಿ ವಿರಾಜಮಾನವಾಗಿದ್ದಾರೆ
ಎಂದು ನೀವು ಹೇಳುತ್ತೀರಿ ಅಂದಮೇಲೆ ಇದು ಪಕ್ಕಾ ನಿಶ್ಚಯವಾಗಬೇಕು. ಇದರಲ್ಲಿಯೇ ಮಾಯೆಯು ಸಂಶಯದಲ್ಲಿ
ತರುತ್ತದೆ. ಕನ್ಯೆಗೆ ಪತಿಯ ಜೊತೆ ವಿವಾಹವಾದಾಗ ಅವರಿಂದ ಬಹಳ ಸುಖ ಸಿಗುವುದೆಂದು ತಿಳಿಯುತ್ತಾರೆ
ಆದರೆ ಸುಖವೆಲ್ಲಿ ಸಿಗುತ್ತದೆ, ಅವರ ಮನೆಗೆ ಹೋದ ಕೂಡಲೇ ಅಪವಿತ್ರವಾಗುತ್ತಾಳೆ. ಕುಮಾರಿಯಾಗಿದ್ದಾರೆ,
ತಂದೆ-ತಾಯಿ ಮೊದಲಾದವರೆಲ್ಲರೂ ತಲೆ ಬಾಗುತ್ತಾರೆ ಏಕೆಂದರೆ ಪವಿತ್ರವಾಗಿರುತ್ತಾಳೆ. ಅಪವಿತ್ರವಾದರೆ
ಮತ್ತೆ ಎಲ್ಲರ ಮುಂದೆ ತಲೆ ಬಾಗಲು ಆರಂಭಿಸುತ್ತಾಳೆ. ಇಂದು ಎಲ್ಲರೂ ಆಕೆಗೆ ತಲೆ ಬಾಗುತ್ತಾರೆ ಆದರೆ
ನಾಳೆ ತಾನೂ ತಲೆ ಬಾಗಬೇಕಾಗುತ್ತದೆ.
ಈಗ ನೀವು ಮಕ್ಕಳು ಸಂಗಮಯುಗದಲ್ಲಿ ಪುರುಷೋತ್ತಮರಾಗುತ್ತಿದ್ದೀರಿ, ನಾಳೆ ನೀವು ಎಲ್ಲಿರುತ್ತೀರಿ?
ಇಂದು ಈ ಮನೆ-ಮಠವು ಏನಾಗಿದೆ, ಎಷ್ಟೊಂದು ಕೊಳಕಾಗಿ ಬಿಟ್ಟಿದೆ. ಇದಕ್ಕೆ ವೇಶ್ಯಾಲಯವೆಂದು
ಹೇಳಲಾಗುತ್ತದೆ. ಎಲ್ಲರೂ ವಿಷದಿಂದಲೇ ಜನಿಸುತ್ತಾರೆ, ನೀವೇ ಶಿವಾಲಯದಲ್ಲಿದ್ದೀರಿ. ಇಂದಿಗೆ 5000
ವರ್ಷಗಳ ಮೊದಲು ಬಹಳ ಸುಖಿಯಾಗಿದ್ದಿರಿ, ದುಃಖದ ಹೆಸರು, ಚಿಹ್ನೆಯೂ ಇರಲಿಲ್ಲ. ಈಗ ಪುನಃ ಆ
ರೀತಿಯಾಗಲು ಬಂದಿದ್ದೀರಿ. ಮನುಷ್ಯರಿಗೆ ಶಿವಾಲಯದ ಬಗ್ಗೆ ತಿಳಿದೇ ಇಲ್ಲ. ಸ್ವರ್ಗಕ್ಕೆ
ಶಿವಾಲಯವೆಂದು ಹೇಳುತ್ತಾರೆ ಆದರೆ ಕೇಳಿರಿ - ತಂದೆಯು ಎಲ್ಲಿದ್ದಾರೆ? ಅದಕ್ಕೆ ಅವರು ಸರ್ವವ್ಯಾಪಿ
ಎಂದು ಹೇಳಿಬಿಡುತ್ತಾರೆ. ನಾಯಿ, ಬೆಕ್ಕು, ಮೀನು, ಮೊಸಳೆ ಎಲ್ಲದರಲ್ಲಿ ಪರಮಾತ್ಮನಿದ್ದಾರೆಂದು ಹೇಳಿ
ಬಿಡುತ್ತಾರೆಂದರೆ ಎಷ್ಟೊಂದು ಅಂತರವಾಯಿತಲ್ಲವೆ. ತಂದೆಯು ತಿಳಿಸುತ್ತಾರೆ - ನೀವು
ಪುರುಷೋತ್ತಮರಾಗಿದ್ದಿರಿ, ನಂತರ 84 ಜನ್ಮಗಳನ್ನು ತೆಗೆದುಕೊಂಡು ನೀವು ಏನಾಗಿ ಬಿಟ್ಟಿದ್ದೀರಿ?
ನರಕವಾಸಿಗಳಾಗಿದ್ದೀರಿ. ಆದ್ದರಿಂದ ಹೇ ಪತಿತ-ಪಾವನ ಬನ್ನಿ ಎಂದು ಎಲ್ಲರೂ ಕರೆಯುತ್ತಾರೆ. ಈಗ
ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆ ಮತ್ತು ತಿಳಿಸುತ್ತಾರೆ - ಮಕ್ಕಳೇ, ಈ ಅಂತಿಮ
ಜನ್ಮದಲ್ಲಿ ವಿಷ (ವಿಕಾರ) ಕುಡಿಯುವುದನ್ನು ಬಿಡಿ. ಆದರೂ ಸಹ ತಿಳಿದುಕೊಳ್ಳುವುದೇ ಇಲ್ಲ. ಎಲ್ಲಾ
ಆತ್ಮಗಳ ತಂದೆಯು ಈಗ ತಿಳಿಸುತ್ತಾರೆ - ಪವಿತ್ರರಾಗಿ. ಬಾಬಾ ಎಂದು ಎಲ್ಲರೂ ಹೇಳುತ್ತಾರೆ, ಆತ್ಮಕ್ಕೆ
ಮೊದಲು ಶಿವ ತಂದೆಯ ನೆನಪು ಬರುತ್ತದೆ, ನಂತರ ಈ ತಂದೆಯ (ಬ್ರಹ್ಮಾ) ನೆನಪು ಬರುತ್ತದೆ.
ನಿರಾಕಾರದಲ್ಲಿ ಶಿವ ತಂದೆ, ಸಾಕಾರದಲ್ಲಿ ಈ ತಂದೆ (ಬ್ರಹ್ಮಾ). ಪರಮಾತ್ಮನು ಈ ಪತಿತ ಆತ್ಮಗಳಿಗೆ
ತಿಳಿಸಿಕೊಡುತ್ತಾರೆ - ನೀವೂ ಸಹ ಮೊದಲು ಪವಿತ್ರರಾಗಿದ್ದಿರಿ, ತಂದೆಯ ಜೊತೆಯಲ್ಲಿದ್ದಿರಿ ನಂತರ
ನೀವಿಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೀರಿ. ಈ ಚಕ್ರವನ್ನು ಚೆನ್ನಾಗಿ ತಿಳಿದುಕೊಳ್ಳಿ - ನಾವೀಗ
ಸತ್ಯಯುಗದಲ್ಲಿ, ಹೊಸ ಪ್ರಪಂಚದಲ್ಲಿ ಹೋಗಲಿದ್ದೇವೆ. ಸ್ವರ್ಗಕ್ಕೆ ಹೋಗಬೇಕೆಂಬುದೇ ನಿಮ್ಮ ಆಸೆಯೂ
ಆಗಿದೆಯಲ್ಲವೆ. ಕೃಷ್ಣನಂತಹ ಮಗುವಾಗಲಿ ಎಂದು ನೀವು ಹೇಳುತ್ತಿದ್ದಿರಿ. ಈಗ ನಾನು ನಿಮ್ಮನ್ನು ಆ
ರೀತಿ ಮಾಡಲು ಬಂದಿದ್ದೇನೆ. ಸತ್ಯಯುಗದಲ್ಲಿ ಮಕ್ಕಳಿರುವುದೇ ಕೃಷ್ಣನ ತರಹ. ಸತೋಪ್ರಧಾನ ಹೂಗಳಲ್ಲವೆ.
ನೀವೀಗ ಕೃಷ್ಣ ಪುರಿಗೆ ಹೋಗುತ್ತೀರಿ, ಸ್ವರ್ಗದ ಮಾಲೀಕರಾಗುತ್ತೀರಿ ಅಂದಾಗ ತಮ್ಮೊಂದಿಗೆ
ಕೇಳಿಕೊಳ್ಳಿ - ನಾನು ಹೂವಾಗಿದ್ದೇನೆಯೇ? ದೇಹದ ಅಹಂಕಾರದಲ್ಲಿ ಬಂದು ಮುಳ್ಳುಗಳಾಗುತ್ತಿಲ್ಲವೆ?
ಮನುಷ್ಯರು ತಮ್ಮನ್ನು ಆತ್ಮನೆಂದು ತಿಳಿಯದೆ ದೇಹವೆಂದು ತಿಳಿಯುತ್ತಾರೆ. ಆತ್ಮವನ್ನು ಮರೆತಿರುವ
ಕಾರಣ ತಂದೆಯನ್ನೂ ಮರೆತಿದ್ದಾರೆ. ತಂದೆಯನ್ನು ತಂದೆಯ ಮೂಲಕವೇ ಅರಿತುಕೊಳ್ಳುವುದರಿಂದ ತಂದೆಯ
ಆಸ್ತಿಯು ಸಿಗುತ್ತದೆ. ಬೇಹದ್ದಿನ ತಂದೆಯಿಂದ ಎಲ್ಲರಿಗೂ ಆಸ್ತಿಯು ಸಿಗುತ್ತದೆ. ಆಸ್ತಿಯು ಸಿಗದೇ
ಇರುವವರು ಒಬ್ಬರೂ ಇಲ್ಲ. ತಂದೆಯೇ ಬಂದು ಎಲ್ಲರನ್ನೂ ಪಾವನರನ್ನಾಗಿ ಮಾಡುತ್ತಾರೆ, ನಿರ್ವಾಣ
ಧಾಮದಲ್ಲಿ ಕರೆದುಕೊಂಡು ಹೋಗುತ್ತಾರೆ. ಜ್ಯೋತಿಯಲ್ಲಿ ಜ್ಯೋತಿಯು ಸಮಾವೇಶವಾಯಿತು, ಬ್ರಹ್ಮ
ತತ್ವದಲ್ಲಿ ಲೀನವಾಯಿತೆಂದು ಸನ್ಯಾಸಿಗಳು ಹೇಳಿ ಬಿಡುತ್ತಾರೆ, ಅವರಲ್ಲಿ ಸ್ವಲ್ಪವೂ ಜ್ಞಾನವಿಲ್ಲ.
ನೀವು ತಿಳಿದುಕೊಂಡಿದ್ದೀರಿ - ನಾವು ಯಾರ ಬಳಿ ಬಂದಿದ್ದೇವೆ? ಇದು ಯಾವುದೇ ಮನುಷ್ಯರ ಸತ್ಸಂಗವಲ್ಲ.
ಆತ್ಮಗಳು ಪರಮಾತ್ಮನಿಂದ ಅಗಲಿದಿರಿ. ಈಗ ಅವರ ಸಂಗವು ಸಿಕ್ಕಿದೆ. ಈ ಸತ್ಯ ತಂದೆಯ ಸಂಗವು 5000
ವರ್ಷಗಳಲ್ಲಿ ಒಂದೇ ಬಾರಿ ಸಿಗುತ್ತದೆ. ಸತ್ಯ-ತ್ರೇತಾಯುಗದಲ್ಲಂತೂ ಸತ್ಸಂಗವಿರುವುದಿಲ್ಲ.
ಭಕ್ತಿಮಾರ್ಗದಲ್ಲಂತೂ ಅನೇಕಾನೇಕ ಸತ್ಸಂಗಗಳಿವೆ. ಈಗ ವಾಸ್ತವದಲ್ಲಿ ಸತ್ಯವಾದವರು ಒಬ್ಬರೇ
ತಂದೆಯಾಗಿದ್ದಾರೆ. ನೀವು ಅವರ ಸಂಗದಲ್ಲಿ ಬಂದು ಕುಳಿತಿದ್ದೀರಿ. ಇದೂ ಸ್ಮೃತಿಯಿರಲಿ - ನಾವು
ಈಶ್ವರೀಯ ವಿದ್ಯಾರ್ಥಿಗಳಾಗಿದ್ದೇವೆ, ಭಗವಂತನು ನಮಗೆ ಓದಿಸುತ್ತಾರೆ. ಇಷ್ಟು ಸ್ಮೃತಿಯಿದ್ದರೂ ಸಹ
ಅಹೋ ಸೌಭಾಗ್ಯ!
ನಮ್ಮ ತಂದೆಯು ಇಲ್ಲಿದ್ದಾರೆ, ಅವರು ತಂದೆ-ಶಿಕ್ಷಕ ಮತ್ತು ಗುರುವೂ ಆಗುತ್ತಾರೆ. ಮೂರೂ
ಪಾತ್ರಗಳನ್ನು ಈಗ ಅಭಿನಯಿಸುತ್ತಿದ್ದಾರೆ. ಮಕ್ಕಳನ್ನು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ತಂದೆಯನ್ನು
ನೆನಪು ಮಾಡುವುದರಿಂದಲೇ ಪಾಪಗಳು ತುಂಡಾಗುತ್ತವೆ ಮತ್ತು ನಿಮಗೆ ಪ್ರಕಾಶತೆಯ ಕಿರೀಟವು ಸಿಗುತ್ತದೆ.
ಇದೂ ಸಹ ಒಂದು ಸಂಕೇತವಾಗಿದೆ. ಆದರೆ ಸ್ಥೂಲವಾಗಿ ಪ್ರಕಾಶವೇನೂ ಕಾಣುವುದಿಲ್ಲ. ಇದು ಕೇವಲ
ಪವಿತ್ರತೆಯ ಸಂಕೇತವಾಗಿದೆ. ಈ ಜ್ಞಾನವು ಮತ್ತ್ಯಾರಿಗೂ ಸಿಗಲು ಸಾಧ್ಯವಿಲ್ಲ. ಜ್ಞಾನವನ್ನು
ತಿಳಿಸುವವರು ಒಬ್ಬರೇ ತಂದೆಯಾಗಿದ್ದಾರೆ, ಅವರಲ್ಲಿ ಸಂಪೂರ್ಣ ಜ್ಞಾನವಿದೆ. ನಾನು ಮನುಷ್ಯ ಸೃಷ್ಟಿಯ
ಬೀಜ ರೂಪನಾಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ಇದು ತಲೆ ಕೆಳಕಾದ ವೃಕ್ಷವಾಗಿದೆ.
ಕಲ್ಪವೃಕ್ಷವಲ್ಲವೆ. ಮೊದಲು ದೈವೀ ಹೂಗಳ ವೃಕ್ಷವಾಗಿತ್ತು, ಈಗ ಮುಳ್ಳುಗಳ ಕಾಡಾಗಿ ಬಿಟ್ಟಿದೆ. ಪಂಚ
ವಿಕಾರಗಳು ಬಂದು ಬಿಟ್ಟಿವೆ. ಮೊದಲನೇ ಮುಖ್ಯ ವಿಕಾರವು ದೇಹಾಭಿಮಾನವಾಗಿದೆ. ಸತ್ಯಯುಗದಲ್ಲಿ
ದೇಹಾಭಿಮಾನವಿರುವುದಿಲ್ಲ. ನಾವು ಆತ್ಮಗಳಾಗಿದ್ದೇವೆ ಎಂಬುದಷ್ಟೇ ತಿಳಿದಿರುತ್ತದೆ. ಪರಮಾತ್ಮ
ತಂದೆಯು ತಿಳಿದುಕೊಂಡಿರುವುದಿಲ್ಲ. ನಾವಾತ್ಮಗಳಾಗಿದ್ದೇವೆ ಎಂಬುದನ್ನು ಬಿಟ್ಟು ಬೇರೇನೂ
ಜ್ಞಾನವಿರುವುದಿಲ್ಲ. (ಸರ್ಪದಂತೆ) ಈಗ ನಿಮಗೆ ತಿಳಿಸಲಾಗುತ್ತದೆ - ಜನ್ಮ-ಜನ್ಮಾಂತರ ಹಳೆಯ ಹರಿದು
ಹೋಗಿರುವ ಹೊರೆಯನ್ನು ಪೋರೆಯನ್ನು ನೀವೀಗ ಬಿಡಬೇಕಾಗಿದೆ. ಈಗ ಆತ್ಮ ಮತ್ತು ಶರೀರವೆರಡೂ ಪತಿತವಾಗಿದೆ,
ಆತ್ಮವು ಪವಿತ್ರವಾದರೆ ಈ ಶರೀರವೂ ಸಹ ಬಿಟ್ಟು ಹೋಗುವುದು, ಆತ್ಮಗಳೆಲ್ಲರೂ ಮನೆಗೆ ಹೋಗುವರು.
ನಿಮಗೀಗ ಈ ಜ್ಞಾನವಿದೆ - ನಾಟಕವು ಮುಕ್ತಾಯವಾಗುತ್ತದೆ. ನಾವೀಗ ತಂದೆಯ ಬಳಿ ಹೋಗಬೇಕು ಆದ್ದರಿಂದ
ಮನೆಯನ್ನು ನೆನಪು ಮಾಡಬೇಕಾಗಿದೆ. ಈ ದೇಹವನ್ನು ಬಿಡಬೇಕಾಗಿದೆ. ಶರೀರವು ಸಮಾಪ್ತಿಯಾದರೆ ಪ್ರಪಂಚವೇ
ಸಮಾಪ್ತಿಯಾಗುವುದು ಮತ್ತೆ ನಾವು ಹೊಸ ಮನೆಗೆ ಹೋಗುತ್ತೇವೆ. ಆಗ ಹೊಸ ಪ್ರಪಂಚವು ಆರಂಭವಾಗುವುದು.
ಮನುಷ್ಯರಂತೂ ಪುನರ್ಜನ್ಮವನ್ನು ಇಲ್ಲಿಯೇ ತೆಗೆದುಕೊಳ್ಳುತ್ತಾರೆ. ಆದರೆ ನಾವು ಹೂಗಳ ಪ್ರಪಂಚದಲ್ಲಿ
ಪುನರ್ಜನ್ಮವನ್ನು ತೆಗೆದುಕೊಳ್ಳುತ್ತೇವೆ. ದೇವತೆಗಳಿಗೆ ಪವಿತ್ರರೆಂದು ಹೇಳಲಾಗುತ್ತದೆ. ನಿಮಗೆ
ತಿಳಿದಿದೆ - ನಾವೇ ಹೂಗಳಾಗಿದ್ದೆವು, ಮತ್ತೆ ಮುಳ್ಳುಗಳಾಗಿದ್ದೇವೆ. ಪುನಃ ಹೂಗಳ ಪ್ರಪಂಚದಲ್ಲಿ
ಹೋಗಬೇಕಾಗಿದೆ. ಮುಂದೆ ಹೋದಂತೆ ನಿಮಗೆ ಬಹಳ ಸಾಕ್ಷಾತ್ಕಾರವಾಗುತ್ತದೆ. ಇದು ಆಟವಾಗಿದೆ. ಹೇಗೆ ಮೀರಾ
ಧ್ಯಾನದಲ್ಲಿ ಹೋಗಿ ಆಟವಾಡುತ್ತಿದ್ದಳು, ಅವಳಿಗೆ ಜ್ಞಾನವಿರಲಿಲ್ಲ. ಮೀರಾ ವೈಕುಂಠದಲ್ಲೇನೂ
ಹೋಗಲಿಲ್ಲ, ಇಲ್ಲಿಯೇ ಯಾವುದೋ ಪುನರ್ಜನ್ಮದಲ್ಲಿರುವರು. ಈ ಬ್ರಾಹ್ಮಣ ಕುಲದವರಾಗಿದ್ದರೆ ಇಲ್ಲಿಯೇ
ಜ್ಞಾನವನ್ನು ತೆಗೆದುಕೊಂಡಿರುವಳು. ಕೇವಲ ನೃತ್ಯ ಮಾಡಿ ಬಿಟ್ಟರೆ ವೈಕುಂಠಕ್ಕೆ ಹೋಗಿ
ಬಿಟ್ಟಳೆಂದಲ್ಲ. ಹೀಗೆ ಅನೇಕರು ನೃತ್ಯ ಮಾಡುತ್ತಿದ್ದರು. ಧ್ಯಾನದಲ್ಲಿ ಹೋಗಿ ನೋಡಿಕೊಂಡು
ಬರುತ್ತಿದ್ದರು ಆದರೆ ಮತ್ತೆ ಹೋಗಿ ವಿಕಾರಿಗಳಾದರು. ಏರಿದರೆ ವೈಕುಂಠ ರಸ, ಬಿದ್ದರೆ ಪುಡಿ-ಪುಡಿ
ಎಂದು ಗಾಯನವಿದೆಯಲ್ಲವೆ. ಒಂದುವೇಳೆ ಜ್ಞಾನಯೋಗವನ್ನು ಕಲಿತಿದ್ದೇ ಆದರೆ ನೀವು ವೈಕುಂಠದ
ಮಾಲೀಕರಾಗುತ್ತೀರಿ. ತಂದೆಯನ್ನು ಬಿಟ್ಟರೆ ವಿಕಾರಗಳಲ್ಲಿ ಬೀಳುತ್ತೀರೆಂದು ತಂದೆಯು ಎಚ್ಚರಿಕೆ
ಕೊಡುತ್ತಾರೆ. ಆಶ್ಚರ್ಯವೆನಿಸುವಂತೆ ಬಂದು ತಂದೆಯ ಮಕ್ಕಳಾಗುತ್ತಾರೆ. ಜ್ಞಾನವನ್ನು ಕೇಳುತ್ತಾರೆ,
ಹೇಳುತ್ತಾರೆ ಮತ್ತೆ ಜ್ಞಾನವನ್ನು ಬಿಟ್ಟು ಹೊರಟು ಹೋಗುತ್ತಾರೆ. ಓಹೋ ಮಾಯೆ! ನೀನು ಎಷ್ಟೊಂದು
ದೊಡ್ಡ ಪೆಟ್ಟನ್ನು ಕೊಡುತ್ತೀಯಾ. ಈಗ ತಂದೆಯ ಶ್ರೀಮತದಂತೆ ನೀವು ದೇವತೆಗಳಾಗುತ್ತೀರಿ. ಆತ್ಮ ಮತ್ತು
ಶರೀರ ಎರಡೂ ಶ್ರೇಷ್ಠವಾದವು ಬೇಕಲ್ಲವೆ. ದೇವತೆಗಳ ಜನ್ಮವು ವಿಕಾರದಿಂದ ಆಗುವುದಿಲ್ಲ, ಅದು
ನಿರ್ವಿಕಾರಿ ಪ್ರಪಂಚವಾಗಿದೆ. ಅಲ್ಲಿ ಪಂಚ ವಿಕಾರಗಳಿರುವುದಿಲ್ಲ, ಶಿವ ತಂದೆಯು ಸ್ವರ್ಗವನ್ನು
ಸ್ಥಾಪನೆ ಮಾಡಿದರು, ನೀವೀಗ ಪುನಃ ಸ್ವರ್ಗವಾಸಿಗಳಾಗಲು ಬಂದಿದ್ದೀರಿ. ಯಾರು ಚೆನ್ನಾಗಿ ಓದುವರೋ
ಅವರೇ ಸ್ವರ್ಗದಲ್ಲಿ ಹೋಗುತ್ತಾರೆ. ನೀವು ಕಲ್ಪದ ನಂತರವೂ ಓದುತ್ತೀರಿ, ಕಲ್ಪ-ಕಲ್ಪವೂ
ಓದುತ್ತಿರುತ್ತೀರಿ. ಈ ಚಕ್ರವು ಸುತ್ತುತ್ತಿರುವುದು, ಇದು ಮಾಡಿ-ಮಾಡಿಲ್ಪಟ್ಟ ನಾಟಕವಾಗಿದೆ,
ಇದರಿಂದ ಯಾರೂ ಬಿಡುಗಡೆ ಹೊಂದಲು ಸಾಧ್ಯವಿಲ್ಲ. ಏನೆಲ್ಲವನ್ನೂ ನೋಡುತ್ತೀರೋ ಉದಾಹರಣೆಗೆ -
ಸೊಳ್ಳೆಯು ಹಾರಿ ಹೋಯಿತೆಂದರೆ ಅದು ಕಲ್ಪದ ನಂತರವೂ ಹಾರುವುದು. ಇದನ್ನು ತಿಳಿದುಕೊಳ್ಳುವುದರಲ್ಲಿ
ಬಹಳ ಒಳ್ಳೆಯ ಬುದ್ಧಿಯು ಬೇಕು. ಶೂಟಿಂಗ್ ಆಗುತ್ತಿರುತ್ತದೆ, ಇದು ಕರ್ಮ ಕ್ಷೇತ್ರವಾಗಿದೆ. ಇಲ್ಲಿ
ಪಾತ್ರವನ್ನಭಿನಯಿಸಲು ಪರಮಧಾಮದಿಂದ ಬಂದಿದ್ದೀರಿ. ಈ ವಿದ್ಯೆಯಲ್ಲಿ ಕೆಲವರಂತೂ ಬಹಳ ಬುದ್ಧಿವಂತರಾಗಿ
ಬಿಡುತ್ತಾರೆ. ಕೆಲವರು ಈಗ ಓದುತ್ತಿದ್ದಾರೆ, ಇನ್ನೂ ಕೆಲವರು ಓದುತ್ತಾ-ಓದುತ್ತಾ ಹಳಬರಿಗಿಂತಲೂ
ಮುಂದೆ ಹೊರಟು ಹೋಗುತ್ತಾರೆ. ಜ್ಞಾನ ಸಾಗರನಂತೂ ಎಲ್ಲರಿಗೂ ಓದಿಸುತ್ತಿರುತ್ತಾರೆ. ತಂದೆಯ ಮಗುವಾದರೆ
ವಿಶ್ವದ ಆಸ್ತಿಯು ನಿಮ್ಮದಾಗುತ್ತದೆ. ಹಾ! ನಿಮ್ಮ ಆತ್ಮವು ಯಾವುದು ಪತಿತವಾಗಿದೆಯೋ ಅದನ್ನು
ಅವಶ್ಯವಾಗಿ ಪಾವನ ಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ಅತಿ ಸಹಜವಾದ ವಿಧಾನವಾಗಿದೆ - ಬೇಹದ್ದಿನ
ತಂದೆಯನ್ನು ನೆನಪು ಮಾಡುತ್ತಾ ಇರಿ, ಅದರಿಂದ ನೀವು ಪಾವನರಾಗಿ ಬಿಡುತ್ತೀರಿ. ನೀವು ಮಕ್ಕಳಿಗೆ ಈ
ಹಳೆಯ ಪ್ರಪಂಚದಿಂದ ವೈರಾಗ್ಯವು ಬರಬೇಕು. ಬಾಕಿ ಮುಕ್ತಿ-ಜೀವನ್ಮುಕ್ತಿಧಾಮವಿದೆ. ಒಬ್ಬ ತಂದೆಯ ವಿನಃ
ಮತ್ತ್ಯಾರನ್ನೂ ನಾವು ನೆನಪು ಮಾಡುವುದಿಲ್ಲ. ಬೆಳಗ್ಗೆ-ಬೆಳಗ್ಗೆ ಎದ್ದು ಅಭ್ಯಾಸ ಮಾಡಬೇಕಾಗಿದೆ -
ನಾವು ಅಶರೀರಿಯಾಗಿ ಬಂದೆವು, ಅಶರೀರಿಯಾಗಿ ಹೋಗಬೇಕಾಗಿದೆ, ಮತ್ತ್ಯಾವುದೇ ದೇಹಧಾರಿಗಳನ್ನು ನಾವೇಕೆ
ನೆನಪು ಮಾಡುವುದು! ಅಮೃತವೇಳೆ ಎದ್ದು ತಮ್ಮೊಂದಿಗೆ ತಾವು ಈ ರೀತಿಯಾಗಿ ಮಾತನಾಡಿಕೊಳ್ಳಬೇಕಾಗಿದೆ -
ಮುಂಜಾನೆಯ ಸಮಯಕ್ಕೆ ಅಮೃತವೇಳೆ ಎಂದು ಹೇಳಲಾಗುತ್ತದೆ. ಜ್ಞಾನಾಮೃತವು ಜ್ಞಾನ ಸಾಗರನ ಬಳಿಯಿದೆ
ಅಂದಾಗ ಜ್ಞಾನಸಾಗರನು ತಿಳಿಸುತ್ತಾರೆ - ಮಕ್ಕಳೇ, ಮುಂಜಾನೆಯ ಸಮಯವು ಬಹಳ ಒಳ್ಳೆಯದಾಗಿ.
ಮುಂಜಾನೆಯೆದ್ದು ಬಹಳ ಪ್ರೀತಿಯಿಂದ ನೆನಪು ಮಾಡಿ - ಬಾಬಾ, ತಾವು 5000 ವರ್ಷಗಳ ನಂತರ ನಮಗೆ
ಸಿಕ್ಕಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪವು
ಭಸ್ಮವಾಗುವುದು. ಶ್ರೀಮತದಂತೆ ನಡೆಯಬೇಕಾಗಿದೆ, ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ. ತಂದೆಯನ್ನು
ನೆನಪು ಮಾಡುವ ಹವ್ಯಾಸವಾಗಿ ಬಿಟ್ಟರೆ ಖುಷಿಯಲ್ಲಿ ಕುಳಿತಿರುತ್ತೀರಿ. ಶರೀರದ ಪರಿವೆಯು ಕಳೆಯುತ್ತಾ
ಹೋಗುವುದು ನಂತರ ದೇಹಭಾನವು ಇರುವುದಿಲ್ಲ. ಬಹಳ ಖುಷಿಯಿರುವುದು, ನೀವು ಪವಿತ್ರರಾಗಿದ್ದಾಗ ಬಹಳ
ಖುಷಿಯಲ್ಲಿದ್ದಿರಿ, ನಿಮ್ಮ ಬುದ್ಧಿಯಲ್ಲಿ ಪೂರ್ಣ ಜ್ಞಾನವಿರಬೇಕು. ಯಾರು ಮೊಟ್ಟ ಮೊದಲಿಗೆ ಬರುವರೋ
ಅವರು ಅವಶ್ಯವಾಗಿ 84 ಜನ್ಮಗಳನ್ನು ತೆಗೆದುಕೊಳ್ಳುವರು. ಮತ್ತೆ ಚಂದ್ರವಂಶಿಯರು ಅವರಿಗಿಂತಲೂ ಕಡಿಮೆ,
ಇಸ್ಲಾಮಿಗಳು ಇನ್ನೂ ಕಡಿಮೆ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ನಂಬರ್ವಾರ್ ವೃಕ್ಷದ
ವೃದ್ಧಿಯಾಗುತ್ತದೆಯಲ್ಲವೆ. ಮುಖ್ಯವಾದುದು ದೇವತಾ ಧರ್ಮವಾಗಿದೆ, ಮತ್ತೆ ಅದರಿಂದ ಮೂರು ಧರ್ಮಗಳು
ಹುಟ್ಟುತ್ತವೆ ನಂತರ ರೆಂಬೆ ಕೊಂಬೆಗಳು ಬರುತ್ತವೆ. ಈಗ ನಾಟಕವನ್ನು ಅರಿತಿದ್ದೀರಿ, ಈ ನಾಟಕವು ಬಹಳ
ನಿಧಾನವಾಗಿ ಸುತ್ತುತ್ತಿರುತ್ತದೆ. ಕ್ಷಣ-ಪ್ರತಿಕ್ಷಣ ಕಳೆಯುತ್ತಾ ಹೋಗುತ್ತದೆ ಆದ್ದರಿಂದ
ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ. ಆತ್ಮವು ತನ್ನ ತಂದೆಯನ್ನು ನೆನಪು ಮಾಡುತ್ತದೆ.
ಬಾಬಾ, ನಾವು ತಮ್ಮ ಮಕ್ಕಳಾಗಿದ್ದೇವೆ, ನಾವಂತೂ ಸ್ವರ್ಗದಲ್ಲಿರಬೇಕು. ಮತ್ತೇಕೆ ನರಕದಲ್ಲಿದ್ದೇವೆ?
ತಂದೆಯಂತೂ ಸ್ವರ್ಗದ ಸ್ಥಾಪನೆ ಮಾಡುವವರಾಗಿದ್ದಾರೆ ಅಂದಮೇಲೆ ನರಕದಲ್ಲಿ ಏಕೆ ಇದ್ದೀರಿ? ತಂದೆಯು
ತಿಳಿಸುತ್ತಾರೆ - ನೀವು ಸ್ವರ್ಗದಲ್ಲಿದ್ದಿರಿ, 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನೀವು ಎಲ್ಲವನ್ನೂ ಮರೆತು ಹೋಗಿದ್ದಿರಿ. ಈಗ ಪುನಃ ನನ್ನ
ಮತದಂತೆ ನಡೆಯಿರಿ. ತಂದೆಯ ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ ಏಕೆಂದರೆ ಆತ್ಮದಲ್ಲಿಯೇ
ತುಕ್ಕು ಬೀಳುತ್ತದೆ. ಶರೀರವು ಆತ್ಮದ ಆಭರಣವಾಗಿದೆ. ಆತ್ಮವು ಪವಿತ್ರವಾದಾಗ ಪವಿತ್ರ ಶರೀರವು
ಸಿಗುತ್ತದೆ. ನೀವು ತಿಳಿದುಕೊಂಡಿದ್ದೀರಿ- ನಾವು ಸ್ವರ್ಗದಲ್ಲಿದ್ದೆವು ಈಗ ಮತ್ತೆ ತಂದೆಯು
ಬಂದಿದ್ದಾರೆಂದಮೇಲೆ ದೇಹಾಭಿಮಾನವನ್ನು ಬಿಡಬೇಕಾಗಿದೆ. ಕೆಲಸ ಕಾರ್ಯಗಳನ್ನು ಮಾಡುತ್ತಾ ತಂದೆಯನ್ನು
ನೆನಪು ಮಾಡುತ್ತಾ ಇರಿ. ಆತ್ಮವು ತನ್ನ ಪ್ರಿಯತಮನನ್ನು ಅರ್ಧ ಕಲ್ಪದಿಂದ ನೆನಪು ಮಾಡುತ್ತಾ ಬಂದಿದೆ.
ಈಗ ಆ ಪ್ರಿಯತಮನೂ ಬಂದಿದ್ದಾರೆ ಮತ್ತು ತಿಳಿಸುತ್ತಾರೆ - ನೀವು ಕಾಮ ಚಿತೆಯ ಮೇಲೆ ಕುಳಿತು ಕಪ್ಪಾಗಿ
ಬಿಟ್ಟಿದ್ದೀರಿ. ಈಗ ನಾನು ನಿಮ್ಮನ್ನು ಸುಂದರರನ್ನಾಗಿ ಮಾಡಲು ಬಂದಿದ್ದೇನೆ. ಅದಕ್ಕಾಗಿ ಈ
ಯೋಗಾಗ್ನಿಯಾಗಿದೆ. ಜ್ಞಾನಕ್ಕೆ ಚಿತೆಯೆಂದು ಹೇಳುವುದಿಲ್ಲ. ಯೋಗದ ಚಿತೆಯಾಗಿದೆ. ನೆನಪಿನ ಚಿತೆಯ
ಮೇಲೆ ಕುಳಿತುಕೊಳ್ಳುವುದರಿಂದ ವಿಕರ್ಮವು ವಿನಾಶವಾಗುತ್ತದೆ. ಜ್ಞಾನಕ್ಕೆ ನಾಲೆಡ್ಜ್ ಎಂದು
ಹೇಳಲಾಗುತ್ತದೆ. ತಂದೆಯು ನಿಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ.
ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ ನಂತರ ಬ್ರಹ್ಮಾ-ವಿಷ್ಣು-ಶಂಕರ ನಂತರ ಸೂರ್ಯವಂಶಿ,
ಚಂದ್ರವಂಶಿ ಮತ್ತು ಅನ್ಯ ಧರ್ಮಗಳ ಶಾಖೆಗಳಿವೆ. ವೃಕ್ಷವು ಎಷ್ಟೊಂದು ದೊಡ್ಡದಾಗಿ ಬಿಡುತ್ತದೆ, ಈಗ
ಈ ವೃಕ್ಷಕ್ಕೆ ಬುನಾದಿಯೇ ಇಲ್ಲದಂತಾಗಿದೆ. ಆದ್ದರಿಂದ ಆಲದ ಮರದ ಉದಾಹರಣೆಯನ್ನು ಕೊಡಲಾಗುತ್ತದೆ.
ದೇವಿ-ದೇವತಾ ಧರ್ಮವು ಪ್ರಾಯಲೋಪವಾಗಿದೆ. ಎಲ್ಲರೂ ಧರ್ಮ ಭ್ರಷ್ಟರು, ಕರ್ಮ ಭ್ರಷ್ಠರಾಗಿದ್ದಾರೆ.
ನೀವೀಗ ಶ್ರೇಷ್ಠರಾಗಲು ಶ್ರೇಷ್ಠ ಕರ್ಮವನ್ನು ಮಾಡುತ್ತೀರಿ. ತಮ್ಮ ದೃಷ್ಟಿಯನ್ನು
ನಿರ್ವಿಕಾರಿಯನ್ನಾಗಿ ಮಾಡಿಕೊಳ್ಳುತ್ತೀರಿ. ನೀವೀಗ ಭ್ರಷ್ಠ ಕರ್ಮವನ್ನು ಮಾಡುವಂತಿಲ್ಲ.
ಕುದೃಷ್ಟಿಯು ಇರಬಾರದು, ತಮ್ಮನ್ನು ನೋಡಿಕೊಳ್ಳಿ - ನಾನು ಲಕ್ಷ್ಮಿಯನ್ನು ವರಿಸಲು
ಯೋಗ್ಯನಾಗಿದ್ದೇನೆಯೇ? ನಾನು ನನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತೇನೆಯೆ?
ಪ್ರತಿನಿತ್ಯವೂ ಲೆಕ್ಕ ಪತ್ರವನ್ನು ನೋಡಿಕೊಳ್ಳಿ - ಇಡೀ ದಿನದಲ್ಲಿ ದೇಹಾಭಿಮಾನದಲ್ಲಿ ಬಂದು ಯಾವುದೇ
ವಿಕರ್ಮವನ್ನು ಮಾಡಲಿಲ್ಲವೆ? ವಿಕರ್ಮವಾದರೆ ನೂರು ಪಟ್ಟು ಶಿಕ್ಷೆಯಾಗುವುದು. ಮಾಯೆಯು ಚಾರ್ಟ್ ಇಡಲು
ಬಿಡುವುದಿಲ್ಲ. 2-3 ದಿನಗಳವರೆಗೆ ಬರೆದು ಮತ್ತೆ ಬಿಟ್ಟು ಬಿಡುತ್ತಾರೆ. ತಂದೆಗೆ ಮಕ್ಕಳ
ಚಿಂತೆಯಿರುತ್ತದೆಯಲ್ಲವೆ. ದಯೆ ಬರುತ್ತದೆ - ಮಕ್ಕಳು ನನ್ನನ್ನು ನೆನಪು ಮಾಡಿ ಅವರ ಪಾಪಗಳನ್ನು
ಭಸ್ಮ ಮಾಡಿಕೊಳ್ಳಲಿ. ಆದರೆ ಇದರಲ್ಲಿಯೇ ಪರಿಶ್ರಮವಿದೆ. ತಮಗೆ ತಾವೇ ಮೋಸ ಮಾಡಿಕೊಳ್ಳಬಾರದು ಅಲ್ಲವೆ.
ಜ್ಞಾನವು ಬಹಳ ಸಹಜವಾಗಿದೆ. ಒಳ್ಳೆಯದು.
ಧಾರಣೆಗಾಗಿ ಮುಖ್ಯಸಾರ-
1. ಮುಂಜಾನೆ
ಅಮೃತವೇಳೆ ಎದ್ದು ತಂದೆಯೊಂದಿಗೆ ಮಧುರಾತಿ ಮಧುರ ಮಾತುಗಳನ್ನಾಡಬೇಕು. ಅಶರೀರಿಯಾಗುವ ಅಭ್ಯಾಸ
ಮಾಡಬೇಕಾಗಿದೆ. ಗಮನವಿರಲಿ - ತಂದೆಯ ನೆನಪಿನ ವಿನಃ ಮತ್ತ್ಯಾರೂ ನೆನಪಿಗೆ ಬರಬಾರದು.
2. ತಮ್ಮ ದೃಷ್ಟಿಯು ಬಹಳ
ಶುದ್ಧ ಪವಿತ್ರವನ್ನಾಗಿ ಮಾಡಿಕೊಳ್ಳಬೇಕಾಗಿದೆ. ದೈವೀ ಹೂಗಳ ಉದ್ಯಾನವನ ತಯಾರಾಗುತ್ತಿದೆ.
ಆದ್ದರಿಂದ ಹೂವಾಗುವ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಮುಳ್ಳಾಗಬಾರದಾಗಿದೆ.
ವರದಾನ:
ಪ್ರತಿ ಸಂಕಲ್ಪ,
ಸಮಯ, ವೃತ್ತಿ ಮತ್ತು ಕರ್ಮದ ಮೂಲಕ ಸೇವೆಯನ್ನು ಮಾಡುವಂತಹ ನಿರಂತರ ಸೇವಾಧಾರಿ ಭವ.
ಹೇಗೆ ತಂದೆ ಅತೀ ಪ್ಯಾರಾ
ಆಗಿದ್ದಾರೆ ತಂದೆಯಿಲ್ಲದೆ ಜೀವನ ಇಲ್ಲ, ಅದೇ ರೀತಿ ಸೇವೆಯಿಲ್ಲದೆ ಜೀವನ ಇಲ್ಲ. ನಿರಂತರ ಯೋಗಿಯ
ಜೊತೆ-ಜೊತೆ ನಿರಂತರ ಸೇವಾಧಾರಿಗಳಾಗಿ. ಮಲಗಿದ್ದರೂ ಸಹ ಸೇವೆಯಾಗಲಿ, ಮಲಗಿರುವ ಸಮಯದಲ್ಲಿ ಒಂದುವೇಳೆ
ಯಾರಾದರೂ ನಿಮ್ಮನ್ನು ನೋಡಿದರೆ ಆಗ ಅವರಿಗೆ ನಿಮ್ಮ ಮುಖ ಲಕ್ಷಣದಿಂದ ಶಾಂತಿ, ಆನಂದದ ವೈಭ್ರೇಷನ್
ಅನುಭವ ಮಾಡಬೇಕು. ಪ್ರತಿ ಕರ್ಮೇಂದ್ರಿಯದ ಮೂಲಕ ತಂದೆಯ ನೆನಪಿನ ಸ್ಮೃತಿ ತರಿಸುವಂತಹ ಸೇವೆ
ಮಾಡುತ್ತಾ ಹೋಗಿ. ತಮ್ಮ ಶಕ್ತಿಶಾಲಿ ವೃತ್ತಿಯ ಮೂಲಕ ವೈಭ್ರೇಷನ್ ಹರಡುತ್ತಾ ಇರಿ, ಕರ್ಮದ ಮೂಲಕ
ಕರ್ಮಯೋಗಿ ಭವದ ವರದಾನ ಕೊಡುತ್ತಾ ಇರಿ, ಪ್ರತಿ ಹೆಜ್ಜೆಯಲ್ಲಿ ಪಧುಮದಷ್ಟು ಸಂಪಾದನೆ ಜಮಾ ಮಾಡುತ್ತಾ
ಹೋಗಿ ಆಗ ಹೇಳಲಾಗುವುದು ನಿರಂತರ ಸೇವಾಧಾರಿ ಅರ್ಥಾತ್ ಸರ್ವಿಸೇಬಲ್.
ಸ್ಲೋಗನ್:
ತಮ್ಮ ಆತ್ಮೀಯ
ವ್ಯಕ್ತಿತ್ವವನ್ನು ಸ್ಮೃತಿಯಲ್ಲಿಟ್ಟುಕೊಂಡಾಗ ಮಾಯಾಜೀತ್ ಆಗಿ ಬಿಡುವಿರಿ.