03.05.20    Avyakt Bapdada     Kannada Murli     06.01.86     Om Shanti     Madhuban


ಸಂಗಮಯುಗ - ಜಮಾ ಮಾಡಿಕೊಳ್ಳುವ ಯುಗ


ಇಂದು ಸರ್ವ ಮಕ್ಕಳ ಮೂರೂ ಕಾಲಗಳನ್ನು ಬಲ್ಲಂತಹ ತ್ರಿಕಾಲದರ್ಶಿ ಬಾಪ್ದಾದಾರವರು ಎಲ್ಲಾ ಮಕ್ಕಳ ಜಮಾದ ಖಾತೆಯನ್ನು ನೋಡುತ್ತಿದ್ದಾರೆ. ಇದಂತು ಎಲ್ಲರೂ ತಿಳಿದೇ ಇರುತ್ತೀರಿ - ಇಡೀ ಕಲ್ಪದಲ್ಲಿ ಶ್ರೇಷ್ಠ ಖಾತೆಯನ್ನು ಜಮಾ ಮಾಡಿಕೊಳ್ಳುವ ಸಮಯವು ಕೇವಲ ಇದೇ ಸಂಗಯುಗವಾಗಿದೆ. ಚಿಕ್ಕದಾದ ಯುಗ, ಚಿಕ್ಕದಾದ ಜೀವನವಾಗಿದೆ. ಆದರೆ ಈ ಯುಗ, ಈ ಜೀವನದ ವಿಶೇಷತೆಯಿದೆ, ಅದನ್ನು ಈಗಲೇ ಜಮಾ ಮಾಡಿಕೊಳ್ಳಬೇಕೆಂದರೆ ಮಾಡಿಕೊಳ್ಳಬಹುದು. ಈ ಸಮಯದ ಶ್ರೇಷ್ಠ ಖಾತೆಯನುಸಾರವಾಗಿ ಪೂಜ್ಯ ಪದವಿಯನ್ನೂ ಪಡೆಯುತ್ತೀರಿ ಮತ್ತು ನಂತರ ಪೂಜ್ಯನಿಂದ ಪೂಜಾರಿಯೂ ಆಗುತ್ತೀರಿ. ಈ ಸಮಯದ ಶ್ರೇಷ್ಠ ಕರ್ಮಗಳ, ಶ್ರೇಷ್ಠ ಜ್ಞಾನದ, ಶ್ರೇಷ್ಠ ಸಂಬಂಧದ, ಶ್ರೇಷ್ಠ ಶಕ್ತಿಗಳ, ಶ್ರೇಷ್ಠ ಗುಣಗಳ ಎಲ್ಲಾ ಶ್ರೇಷ್ಠ ಖಾತೆಯನ್ನೀಗಲೇ ಜಮಾ ಮಾಡಿಕೊಳ್ಳುತ್ತೀರಿ. ದ್ವಾಪರದಿಂದ ಭಕ್ತಿಯ ಖಾತೆ ಅಲ್ಪಕಾಲದ್ದು ಈಗೀಗ ಜಮಾ ಆಯಿತು, ಈಗೀಗ ಫಲವನ್ನು ಪಡೆಯಲಾಯಿತು ಮತ್ತು ಸಮಾಪ್ತಿಯಾಯಿತು. ಭಕ್ತಿಯ ಖಾತೆಯು ಅಲ್ಪಕಾಲದ್ದು ಆದ್ದರಿಂದ ಹೇಳಲಾಗುತ್ತದೆ - ಈಗ ಸಂಪಾದಿಸಲಾಯಿತು ಮತ್ತು ಈಗ ಸಮಾಪ್ತಿ (ಭೋಗಿಸುವುದು) ಯಾಯಿತು. ಜಮಾ ಮಾಡಿಕೊಳ್ಳುವ ಅವಿನಾಶಿ ಖಾತೆಯು ಜನ್ಮ-ಜನ್ಮಾಂತರ ನಡೆಯುತ್ತಿರಲಿ, ಆ ಅವಿನಾಶಿ ಜಮಾದ ಖಾತೆಯನ್ನು ಜಮಾ ಮಾಡಿಕೊಳ್ಳುವ ಸಮಯವು ವರ್ತಮಾನವಾಗಿದೆ. ಆದ್ದರಿಂದ ಈ ಶ್ರೇಷ್ಠ ಸಮಯವನ್ನು ಪುರುಷೋತ್ತಮ ಯುಗ ಅಥವಾ ಅಧಿಕ ಯುಗವೆಂದು ಹೇಳಲಾಗುತ್ತದೆ. ಪರಮಾತ್ಮ ಅವತರಣೆಯ ಯುಗವೆಂದು ಹೇಳಲಾಗುತ್ತದೆ. ಡೈರೆಕ್ಟ್ ತಂದೆಯ ಮೂಲಕ ಪ್ರಾಪ್ತಿಯಾಗಿರುವ ಶಕ್ತಿಗಳ ಯುಗವೆಂದು ಇದೇ ಯುಗಕ್ಕೆ ಗಾಯನವಾಗಿರುವುದು. ಇದೇ ಯುಗದಲ್ಲಿಯೇ ತಂದೆಯು ವಿದಾತಾ ಮತ್ತು ವರದಾತನ ಪಾತ್ರವನ್ನು ಅಭಿನಯಿಸುತ್ತಾರೆ. ಆದ್ದರಿಂದ ಈಗ ಯುಗವನ್ನು ವರದಾನಿ ಯುಗವೆಂದೂ ಸಹ ಹೇಳಲಾಗುತ್ತದೆ. ಈ ಯುಗದಲ್ಲಿ ಸ್ನೇಹದ ಕಾರಣದಿಂದ ತಂದೆಯು ಭೋಲಾಭಂಡಾರಿ ಆಗಿ ಬಿಡುತ್ತಾರೆ. ಅವರು ಒಂದಕ್ಕೆ ಪದಮದಷ್ಟು ಫಲವನ್ನು ಕೊಡುತ್ತಾರೆ. ಒಂದಕ್ಕೆ ಪದಮಷ್ಟು ಜಮಾ ಆಗುವ ವಿಶೇಷ ಭಾಗ್ಯವು ಈಗಷ್ಟೇ ಪ್ರಾಪ್ತಿಯಾಗುವುದು. ಅನ್ಯ ಯುಗಗಳಲ್ಲಿ ಎಷ್ಟು ಮಾಡಲಾಗುತ್ತದೆ ಅಷ್ಟೇ ಸಿಗುವ ಲೆಕ್ಕವಿದೆ. ಅಂತರವಾಯಿತಲ್ಲವೆ ಏಕೆಂದರೆ ಈಗ ಡೈರೆಕ್ಟ್ ತಂದೆಯ ಆಸ್ತಿ ಮತ್ತು ವರದಾನವೆರಡೂ ರೂಪದಲ್ಲಿ ಪ್ರಾಪ್ತಿ ಮಾಡಿಸಲು ನಿಮಿತ್ತನಾಗಿದ್ದಾರೆ. ಭಕ್ತಿಯಲ್ಲಿ ಭಾವನೆಯ ಫಲವಿದೆ, ಈಗ ಆಸ್ತಿ ಮತ್ತು ವರದಾನದ ಫಲವಿದೆ. ಆದ್ದರಿಂದ ಈಗ ಸಮಯದ ಮಹತ್ವವನ್ನು ತಿಳಿದುಕೊಂಡು, ಪ್ರಾಪ್ತಿಗಳನ್ನು ತಿಳಿದು, ಜಮಾದ ಲೆಕ್ಕವನ್ನು ತಿಳಿದು, ತ್ರಿಕಾಲದರ್ಶಿಯಾಗಿದ್ದು ಪ್ರತೀ ಹೆಜ್ಜೆಯನ್ನಿಡುತ್ತೀರಾ? ಈ ಸಮಯದ ಒಂದು ಸೆಕೆಂಡ್ ಸಾಧಾರಣ ಸಮಯಕ್ಕಿಂತ ಎಷ್ಟೊಂದು ಶ್ರೇಷ್ಠವಾದುದು - ಅದನ್ನು ತಿಳಿದಿದ್ದೀರಾ? ಸೆಕೆಂಡಿನಲ್ಲಿ ಎಷ್ಟು ಸಂಪಾದನೆ ಮಾಡಬಲ್ಲಿರಿ ಮತ್ತು ಸೆಕೆಂಡಿನಲ್ಲಿ ಎಷ್ಟು ಕಳೆಯುತ್ತೀರಿ? ಈ ಲೆಕ್ಕವನ್ನು ಬಹಳ ಚೆನ್ನಾಗಿ ತಿಳಿದಿದ್ದೀರಾ? ಅಥವಾ ಸಾಧಾರಣ ರೀತಿಯಿಂದ ಸ್ವಲ್ಪ ಸಂಪಾದಿಸಿದಿರಿ ಮತ್ತು ಸ್ವಲ್ಪ ಕಳೆದಿರಾ, ಇಂತಹ ಅಮೂಲ್ಯ ಸಮಯವನ್ನು ಸಮಾಪ್ತಿಯಂತು ಮಾಡುವುದಿಲ್ಲವೇ? ಬ್ರಹ್ಮಾಕುಮಾರ ಬ್ರಹ್ಮಾಕುಮಾರಿಯಂತು ಆಗಿದ್ದೀರಿ. ಆದರೆ ಅವಿನಾಶಿ ಆಸ್ತಿ ಮತ್ತು ವಿಶೇಷ ವರದಾನಗಳ ಅಧಿಕಾರಿಯಾಗಿದ್ದೀರಾ? ಏಕೆಂದರೆ ಈ ಸಮಯದ ಅಧಿಕಾರಿಯು ಜನ್ಮ-ಜನ್ಮದ ಅಧಿಕಾರಿಯಾಗುತ್ತಾರೆ. ಈ ಸಮಯದಲ್ಲಿ ಯಾವುದಾದರೊಂದು ಸ್ವಭಾವ-ಸಂಸ್ಕಾರಕ್ಕೆ ಅಥವಾ ಯಾವುದೇ ಸಂಬಂಧದಲ್ಲಿ ಅಧೀನನಾಗಿರುವ ಆತ್ಮನು ಜನ್ಮ-ಜನ್ಮಾಂತರದ ಅಧಿಕಾರಿಯಾಗುವುದಕ್ಕೆ ಬದಲು, ಪ್ರಜಾ ಪದವಿಯ ಅಧಿಕಾರಿಯಾಗುತ್ತಾನೆ, ರಾಜ್ಯಾಧಿಕಾರಿಯಾಗುವುದಿಲ್ಲ. ಪ್ರಜಾ ಪದವಿಯ ಅಧಿಕಾರಿಯಾಗುತ್ತಾನೆ. ಬಂದಿರುವುದು ರಾಜಯೋಗಿ, ರಾಜ್ಯಧಿಕಾರಿ ಆಗುವುದಕ್ಕೆ. ಆದರೆ ಅಧೀನತೆಯ ಸಂಸ್ಕಾರದ ಕಾರಣದಿಂದ ವಿದಾತನ ಮಕ್ಕಳಾಗಿದ್ದರೂ ಸಹ ರಾಜ್ಯಾಧಿಕಾರಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಸದಾ ಇದನ್ನು ಪರಿಶೀಲನೆ ಮಾಡಿರಿ - ಸ್ವ-ರಾಜ್ಯಾಧಿಕಾರಿ ಎಲ್ಲಿಯವರೆಗೆ ಆಗಿರುವೆನು? ಯಾರು ಸ್ವ-ಅಧಿಕಾರವನ್ನು ಪಡೆಯಲು ಸಾಧ್ಯವಿಲ್ಲವೋ ಅವರು ವಿಶ್ವದ ರಾಜ್ಯವನ್ನೇಗೆ ಪ್ರಾಪ್ತಿ ಮಾಡಿಕೊಳ್ಳುವರು? ವಿಶ್ವದ ರಾಜ್ಯಾಧಿಕಾರಿಯಾಗುವ ಚೈತನ್ಯ ಮಾಡಲ್, ಈಗ ಸ್ವ-ರಾಜ್ಯಾಧಿಕಾರಿಯಾಗುವುದರಿಂದ ತಯಾರು ಮಾಡುತ್ತೀರಿ. ಯಾವುದೇ ವಸ್ತುವಿನದು ಮೊದಲು ಮಾಡಲ್ ತಯಾರು ಮಾಡುತ್ತೀರಲ್ಲವೆ. ಅಂದಮೇಲೆ ಮೊದಲು ಈ ಮಾಡಲ್ ನೋಡಿರಿ.

ಸ್ವ-ಅಧಿಕಾರಿ ಅರ್ಥಾತ್ ಸರ್ವ ಕರ್ಮೇಂದ್ರಿಯಗಳೆಂಬ ಪ್ರಜೆಗಳ ರಾಜನಾಗುವುದು. ಪ್ರಜೆಯ ರಾಜ್ಯವಿದೆಯೇ ಅಥವಾ ರಾಜನ ರಾಜ್ಯವಿದೆಯೇ? ಇದನ್ನಂತು ತಿಳಿದುಕೊಳ್ಳಬಹುದಲ್ಲವೆ! ಪ್ರಜೆಯ ರಾಜ್ಯವಿದೆಯೆಂದರೆ ರಾಜನೆಂದು ಕರೆಸಿಕೊಳ್ಳುವುದಿಲ್ಲ. ಪ್ರಜೆಯ ರಾಜ್ಯದಲ್ಲಿ ರಾಜವಂಶವು ಸಮಾಪ್ತಿಯಾಗಿ ಬಿಡುತ್ತದೆ. ಯಾವುದೇ ಒಂದು ಕರ್ಮೇಂದ್ರಿಯವು ಮೋಸ ಮಾಡುತ್ತದೆಯೆಂದರೆ, ಸ್ವ-ರಾಜ್ಯ ಅಧಿಕಾರಿ ಎಂದು ಹೇಳುವುದಿಲ್ಲ. ಎಂದಿಗೂ ಸಹ ಹೀಗೆ ಯೋಚಿಸಬೇಡಿ - ಒಂದೆರಡು ಬಲಹೀನತೆಯಂತು ಇದ್ದೇ ರುತ್ತದೆ. ಸಂಪೂರ್ಣರಂತು ಅಂತ್ಯದಲ್ಲಿ ಆಗಬೇಕು. ಆದರೆ ಬಹಳಕಾಲದ ಒಂದು ಬಲಹೀನತೆಯೂ ಸಹ, ಸಮಯದಲ್ಲಿ ಮೋಸ ಮಾಡಿ ಬಿಡುತ್ತದೆ. ಬಹಳ ಕಾಲದ ಅಧೀನನಾಗುವ ಸಂಸ್ಕಾರವು ಅಧಿಕಾರಿಯನ್ನಾಗಿ ಮಾಡಲು ಬಿಡುವುದಿಲ್ಲ, ಆದ್ದರಿಂದ ಅಧಿಕಾರಿ ಅರ್ಥಾತ್ ಸ್ವ-ಅಧಿಕಾರಿ. ಅಂತ್ಯದಲ್ಲಿ ಸಂಪೂರ್ಣರಾಗಿ ಬಿಡುತ್ತೇವೆ - ಈ ಮೋಸದಲ್ಲಿ ಉಳಿದು ಬಿಡಬೇಡಿ. ಬಹಳ ಕಾಲದ ಸ್ವ-ಅಧಿಕಾರದ ಸಂಸ್ಕಾರವು ಬಹಳ ಕಾಲದ ವಿಶ್ವ-ಅಧಿಕಾರಿಯನ್ನಾಗಿ ಮಾಡುತ್ತದೆ. ಸ್ವಲ್ಪ ಸಮಯದ ಸ್ವ-ರಾಜ್ಯ ಅಧಿಕಾರಿಯು ಸ್ವಲ್ಪ ಸಮಯಕ್ಕಾಗಿಯೇ ವಿಶ್ವ-ರಾಜ್ಯಾಧಿಕಾರಿ ಆಗುವನು. ಯಾರು ಈಗ ತಂದೆಯ ಸಮಾನತೆಯ ಆಜ್ಞೆಯನುಸಾರವಾಗಿ ತಂದೆಯ ಹೃದಯ ಸಿಂಹಾಸನ ಅಧಿಕಾರಿಯಾಗುತ್ತಾರೆಯೋ ಅವರೇ ರಾಜ್ಯ ಸಿಂಹಸನಾಧಿಕಾರಿ ಆಗುತ್ತಾರೆ. ತಂದೆಯ ಸಮಾನರಾಗುವುದು ಅರ್ಥಾತ್ ತಂದೆಯ ಹೃದಯ ಸಿಂಹಾಸನ ಅಧಿಕಾರಿಯಾಗುವುದು. ಹೇಗೆ ಬ್ರಹ್ಮಾ ತಂದೆಯು ಸಂಪನ್ನ ಮತ್ತು ಸಮಾನರಾದರು, ಹಾಗೆಯೇ ಸಂಪೂರ್ಣ ಮತ್ತು ಸಮಾನರಾಗಿರಿ. ರಾಜ್ಯ ಸಿಂಹಾಸನದ ಅಧಿಕಾರಿಯಾಗಿರಿ. ಯಾವುದೇ ಪ್ರಕಾರದ ಹುಡುಗಾಟಿಕೆಯಲ್ಲಿ ತಮ್ಮ ಅಧಿಕಾರದ ಆಸ್ತಿ ಅಥವಾ ವರದಾನದ ಪ್ರಾಪ್ತಿಯನ್ನು ಕಡಿಮೆ ಮಾಡಿಕೊಳ್ಳಬಾರದು. ಅಂದಮೇಲೆ ಜಮಾದ ಖಾತೆಯನ್ನು ಪರಿಶೀಲನೆ ಮಾಡಿರಿ. ಹೊಸ ವರ್ಷವು ಪ್ರಾರಂಭವಾಗಿದೆಯಲ್ಲವೆ. ಹಿಂದಿನ ಖಾತೆಯನ್ನು ಪರಿಶೀಲಿಸಿರಿ ಮತ್ತು ಹೊಸ ಖಾತೆಯನ್ನು ಸಮಯ ಮತ್ತು ತಂದೆಯ ವರದಾನದಿಂದ ಬಹಳ ಹೆಚ್ಚಾಗಿ ಜಮಾ ಮಾಡಿರಿ. ಕೇವಲ ಸಂಪಾದಿಸಿದೆವು ಮತ್ತು ತಿಂದೆವು, ಇಂತಹ ಖಾತೆಯನ್ನು ಮಾಡಿಕೊಳ್ಳಬಾರದು! ಅಮೃತವೇಳೆ ಯೋಗವನ್ನು ಮಾಡಲಾಯಿತು, ಜಮಾ ಮಾಡಿದಿರಿ, ಕ್ಲಾಸಿನಲ್ಲಿ ಓದಿಕೊಂಡು ಜಮಾ ಮಾಡಿದಿರಾ, ಮತ್ತೆ ನಂತರ ಇಡೀದಿನದಲ್ಲಿ ಪರಿಸ್ಥಿತಿಗಳಿಗೆ ವಶರಾಗಿ ಅಥವಾ ಮಾಯೆಯ ಯುದ್ಧಕ್ಕೆ ವಶ ಅಥವಾ ತನ್ನ ಸಂಸ್ಕಾರಗಳಿಗೆ ವಶರಾಗಿ, ಜಮಾ ಮಾಡಿದ್ದೆಲ್ಲವನ್ನು ಯುದ್ಧ ಮಾಡಿ ವಿಜಯಿಯಾಗುವುದರಲ್ಲಿ ಖರ್ಚು ಮಾಡಿದಿರೆಂದರೆ ಫಲಿತಾಂಶವೇನು ಬರುತ್ತದೆ? ಸಂಪಾದಿಸಿರಿ ಮತ್ತು ತಿಂದಿರಿ, ಜಮಾ ಆಯಿತೇನು? ಆದ್ದರಿಂದ ಜಮಾದ ಖಾತೆಯನ್ನು ಸದಾ ಪರಿಶೀಲಿಸಿರಿ ಮತ್ತು ಹೆಚ್ಚಿಸುತ್ತಾ ಸಾಗಿರಿ. ಹಾಗೆಯೇ ಚಾರ್ಟ್ನಲ್ಲಿ ಕೇವಲ ರೈಟ್ಮಾರ್ಕ್ ಹಾಕಬೇಡಿ. ಕ್ಲಾಸ್ ಕೇಳಿದಿರಾ? ಹೌದು. ಯೋಗ ಮಾಡಿದಿರಾ? ಆದರೆ ಶಕ್ತಿಶಾಲಿ ಯೋಗದ ಸಮಯದನುಸಾರವಾಗಿ ಹೇಗಾಗಬೇಕು ಹಾಗೆ ಯೋಗವಿತ್ತೇ? ಸಮಯವನ್ನು ಒಳ್ಳೆಯ ರೀತಿಯಲ್ಲಿ ಪಾಸ್ ಮಾಡಿದೆನು, ಬಹಳ ಆನಂದವಾಯಿತು. ವರ್ತಮಾನವಂತು ಆಯಿತು ಆದರೆ ವರ್ತಮಾನದ ಜೊತೆಗೆ ಜಮಾ ಸಹ ಮಾಡಿಕೊಂಡಿರಾ? ಇಷ್ಟು ಶಕ್ತಿಶಾಲಿ ಅನುಭವವಾಯಿತೇ? ನಡೆಯುತ್ತಿದ್ದೇವೆಯೇ, ಇದನ್ನು ಕೇವಲ ಪರಿಶೀಲನೆ ಮಾಡಬಾರದು. ಯಾರೊಂದಿಗಾದರೂ ಕೇಳಿರಿ, ಹೇಗೆ ನಡೆಯುತ್ತಿದ್ದೀರಿ? ಅವರು ಹೇಳಿಬಿಡುತ್ತಾರೆ- ಬಹಳ ಚೆನ್ನಾಗಿ ನಡೆಯುತ್ತಿದ್ದೇವೆ ಆದರೆ ಯಾವ ಗತಿಯಲ್ಲಿ ನಡೆಯುತ್ತಿದ್ದೇವೆ, ಎನ್ನುವುದನ್ನು ಪರಿಶೀಲನೆ ಮಾಡಿರಿ. ಇರುವೆಯಂತೆ ನಡೆಯುತ್ತಿದ್ದೀರಾ ಅಥವಾ ರಾಕೆಟ್ ಗತಿಯಲ್ಲಿ ನಡೆಯುತ್ತಿದ್ದೀರಾ? ಈ ವರ್ಷದಲ್ಲಿ ಎಲ್ಲಾ ಮಾತುಗಳಲ್ಲಿ ಶಕ್ತಿಶಾಲಿಯಾಗುವ ಗತಿಯನ್ನು ಮತ್ತು ಪರ್ಸೆಂಟೇಜನ್ನು ಪರಿಶೀಲಿಸಿರಿ. ಎಷ್ಟು ಪರ್ಸೆಂಟೇಜ್ನಲ್ಲಿ ಜಮಾ ಮಾಡುತ್ತಿದ್ದೀರಿ? 5 ರೂಪಾಯಿಯನ್ನೂ ಹೇಳುತ್ತೀರಿ - ಜಮಾ ಆಯಿತು. 500 ರೂಪಾಯಿಯನ್ನಾದರೂ ಹೇಳುತ್ತೀರಿ - ಜಮಾ ಆಯಿತು! ಜಮಾವಂತು ಮಾಡಿದಿರಿ ಆದರೆ ಎಷ್ಟು ಮಾಡಿದಿರಿ? ಏನು ಮಾಡಬೇಕೆಂದು ತಿಳಿಯಿತೆ!

ಗೋಲ್ಡನ್ ಜುಬಿಲಿಯ ಕಡೆಗೆ ಹೋಗುತ್ತಿದ್ದೀರಿ - ಈ ಇಡೀ ವರ್ಷವು ಗೋಲ್ಡನ್ ಜುಬಿಲಿಯದಾಗಿದೆಯಲ್ಲವೆ! ಅಂದಮೇಲೆ ಪರಿಶೀಲನೆ ಮಾಡಿರಿ - ಪ್ರತೀ ಮಾತಿನಲ್ಲಿ ಗೋಲ್ಡನೇಜ್ಡ್ ಅರ್ಥಾತ್ ಸತೋಪ್ರಧಾನ ಸ್ಥಿತಿ ಇದೆಯೇ? ಅಥವಾ ಸತೋ ಅರ್ಥಾತ್ ಸಿಲ್ವರೇಜ್ಡ್ ಸ್ಥಿತಿ ಇದೆಯೇ? ಪುರುಷಾರ್ಥವೂ ಸಹ ಸತೋಪ್ರಧಾನ್ ಗೋಲ್ಡನೇಜ್ಡ್ ಆಗಿದ್ದೀರಿ. ಸೇವೆಯೂ ಗೋಲ್ಡನೇಜ್ಡ್ ಆಗಿರಲಿ. ಸ್ವಲ್ಪವೂ ಹಳೆಯ ಸಂಸ್ಕಾರದ ಅಲಾಯಿ(ತುಕ್ಕು) ಇರಬಾರದು. ಹೀಗಲ್ಲ, ಹೇಗೆ ಇತ್ತೀಚೆಗೆ ಬೆಳ್ಳಿಯ ಮೇಲೂ ಚಿನ್ನದ ನೀರನ್ನಾಕಿಬಿಡುತ್ತದೆ ಹಾಗಾಗಬಾರದು. ಹೊರಗಿನಿಂದಂತು ಚಿನ್ನದ್ದೆನಿಸುತ್ತದೆ ಆದರೆ ಒಳಗೇನಿರುತ್ತದೆ? ಮಿಕ್ಸ್ ಎಂದು ಹೇಳುತ್ತೀರಲ್ಲವೆ! ಅಂದಮೇಲೆ ಸೇವೆಯಲ್ಲಿಯೂ ಅಭಿಮಾನ ಮತ್ತು ಅಪಮಾನದ ಅಲಾಯಿ ಮಿಕ್ಸ್ ಆಗಿರಬಾರದು. ಇದಕ್ಕೆ ಗೋಲ್ಡನೇಜ್ಡ್ ಸೇವೆ ಎಂದು ಹೇಳಲಾಗುತ್ತದೆ. ಸ್ವಭಾವದಲ್ಲಿಯೂ ಈರ್ಷ್ಯೆ, ಸಿದ್ಧ ಮತು ಜಿದ್ದಿನ ಭಾವವಿರಬಾರದು. ಇದು ಅಲಾಯಿ ಆಗಿದೆ. ಈ ಅಲಾಯಿಯನ್ನು ಸಮಾಪ್ತಿಗೊಳಿಸಿ ಗೋಲ್ಡನೇಜ್ಡ್ ಸ್ವಭಾವವಿರುವವರಾಗಿರಿ. ಸಂಸ್ಕಾರದಲ್ಲಿ ಸದಾ ಹಾಂಜಿ. ಸಮಯ, ಸೇವೆಯು ಹೇಗಿದೆಯೋ ಹಾಗೆಯೇ ಸ್ವಯಂನ್ನು ಮೋಲ್ಡ್ ಮಾಡಿಕೊಳ್ಳುವುದು ಅರ್ಥಾತ್ ರಿಯಲ್ ಗೋಲ್ಡ್ ಆಗುವುದಾಗಿದೆ. ನಾನು ಮೋಲ್ಡ್ ಆಗಬೇಕು, ಅನ್ಯರು ಮಾಡುತ್ತಾರೆಂದರೆ ನಾನು ಮಾಡುವೆನು - ಇದು ಜಿದ್ದಾಗಿ ಬಿಡುತ್ತದೆ. ಇದು ರಿಯಲ್ ಗೋಲ್ಡ್ ಆಗುವುದಲ್ಲ! ಈ ಅಲಾಯಿಯನ್ನು ಸಮಾಪ್ತಿ ಮಾಡಿ ಗೋಲ್ಡನೇಜ್ಡ್ ಆಗಿರಿ. ಸಂಬಂಧದಲ್ಲಿ ಸದ ಪ್ರತಿಯೊಂದು ಆತ್ಮನ ಬಗ್ಗೆ ಶುಭ ಭಾವನೆ, ಕಲ್ಯಾಣದ ಭಾವನೆಯಿರಲಿ. ಸ್ನೇಹದ ಭಾವನೆಯಿರಲಿ, ಸಹಯೋಗದ ಭಾವನೆಯಿರಲಿ. ಎಂತಹ ಭಾವ-ಸ್ವಭಾವದವರಿರಲಿ ಆದರೆ ತಮ್ಮಲ್ಲಿ ಸದಾ ಶ್ರೇಷ್ಠ ಭಾವವಿರಲಿ. ಇವೆಲ್ಲಾ ಮಾತುಗಳಲ್ಲಿ ಸ್ವ ಪರಿವರ್ತನೆಯೇ ಗೋಲ್ಡನ್ ಜುಬಿಲಿಯನ್ನಾಚರಿಸುವುದಗಿದೆ. ಅಲಾಯಿಯನ್ನು ಸುಡಿರಿ ಅರ್ಥಾತ್ ಗೋಲ್ಡನ್ ಜುಬಿಲಿಯನ್ನಾಚರಿಸುವುದು. ತಿಳಿಯಿತೆ- ವರ್ಷದ ಆರಂಭವನ್ನು ಗೋಲ್ಡನೇಜ್ಡ್ ಸ್ಥಿತಿಯಿಂದ ಆರಂಭಿಸಿರಿ. ಸಹಜವಾಗಿದೆಯಲ್ಲವೆ. ಕೇಳುವ ಸಮಯದಲ್ಲಂತು ಎಲ್ಲರೂ ತಿಳಿಯುತ್ತಾರೆ - ಮಾಡಲೇಬೇಕು ಎಂದು. ಆದರೆ ಯಾವಾಗ ಸಮಸ್ಯೆಯು ಎದುರಾಗುತ್ತದೆ ಆಗ ಯೋಚಿಸುತ್ತಾರೆ - ಇದಂತು ಬಹಳ ಕಷ್ಟದ ಮಾತಾಗಿದೆ. ಪರೀಕ್ಷೆಯ ಸಮಯದಲ್ಲಿಯೇ ನಂಬರ್ವನ್ ತೆಗೆದುಕೊಳ್ಳುವ ಸಮಯವಾಗಿರುತ್ತದೆ. ಸಮಸ್ಯಾ ಸ್ವರೂಪರಾಗದಿರಿ ಆದರೆ ಸಮಾಧಾನ ಸ್ವರೂಪರಾಗಿರಿ. ತಿಳಿಯಿತೆ - ಈ ವರ್ಷದಲ್ಲಿ ಏನು ಮಾಡಬೇಕಾಗಿದೆ? ಎಲ್ಲಾ ಮಕ್ಕಳ ಸಂಕಲ್ಪವಂತು ತಲುಪುತ್ತಲೇ ಇರುತ್ತದೆ. ಕಾರ್ಯಕ್ರಮಗಳಲ್ಲಿಯೂ ಯಾವ ನವೀನತೆಯನ್ನು ಮಾಡುವಿರಿ? ಗೋಲ್ಡನ್ ಸಂಕಲ್ಪಗಳನ್ನು ತಿಳಿಸುವ ಟಾಪಿಕ್ ಇಟ್ಟಿದ್ದೀರಲ್ಲವೆ. ಸುವರ್ಣ ಸಂಕಲ್ಪ, ಸುವರ್ಣ ವಿಚಾರ, ಅದು ಚಿನ್ನವನ್ನಾಗಿ ಮಾಡಿ ಬಿಡಲಿ ಮತ್ತು ಸ್ವರ್ಣೀಮ ಯುಗವನ್ನು ತರಲಿ. ಈ ಟಾಪಿಕ್ ಇಟ್ಟಿದ್ದೀರಲ್ಲವೆ. ಒಳ್ಳೆಯದು. ಇಂದು ವತನದಲ್ಲಿ ಈ ವಿಷಯದ ಬಗ್ಗೆ ಆತ್ಮಿಕ ವಾರ್ತಾಲಾಪ ಆಯಿತು, ಅದರ ಬಗ್ಗೆ ಮತ್ತೆ ತಿಳಿಸುತ್ತೇವೆ. ಒಳ್ಳೆಯದು.

ಆಸ್ತಿ ಮತ್ತು ವರದಾನದ ಡಬಲ್ ಅಧಿಕಾರಿಗಳಾದ ಸರ್ವ ಭಾಗ್ಯಶಾಲಿ ಆತ್ಮರಿಗೆ, ಸದಾ ಸ್ವ ರಾಜ್ಯ ಅಧಿಕಾರಿ ಶ್ರೇಷ್ಠಾತ್ಮರಿಗೆ, ಸದಾ ಸ್ವಯಂನ್ನು ಗೋಲ್ಡನೇಜ್ಡ್ ಸ್ಥಿತಿಯಲ್ಲಿ ಸ್ಥಿತ ಮಾಡುವ ರಿಯಲ್ಗ ಗೋಲ್ಡ್ ಮಕ್ಕಳಿಗೆ, ಸದಾ ಸ್ವ ಪರಿವರ್ತನೆಯ ಲಗನ್ನಿನಿಂದ ವಿಶ್ವ ಪರಿವರ್ತನೆಯಲ್ಲಿ ಮುಂದುವರೆಯುವ ವಿಶೇಷ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಮೀಟಿಂಗ್ನಲ್ಲಿ ಬಂದಿರುವ ವೈದ್ಯರುಗಳೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ -

ತಮ್ಮ ಶ್ರೇಷ್ಠ ಉಮ್ಮಂಗ-ಉತ್ಸಾಹದ ಮೂಲಕ ಅನೇಕ ಆತ್ಮರನ್ನು ಸದಾ ಖುಷಿಯಾಗಿಡುವ ಸೇವೆಯಲ್ಲಿ ತೊಡಗಿದ್ದೀರಲ್ಲವೆ. ವೈದ್ಯರ ವಿಶೇಷ ಕಾರ್ಯವೇ ಆಗಿದೆ - ಪ್ರತೀ ಆತ್ಮನಿಗೂ ಖುಷಿ ಕೊಡುವುದು. ಮೊದಲ ಔಷಧಿ ಖುಷಿಯಾಗಿದೆ. ಖುಷಿಯು ಅರ್ಧ ರೋಗವನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಅಂದಮೇಲೆ ಆತ್ಮಿಕ ವೈದ್ಯರು ಅರ್ಥಾತ್ ಖುಷಿಯ ಔಷಧಿಯನ್ನು ಕೊಡುವವರು. ಅಂದಾಗ ಇಂತಹ ವೈದ್ಯರಾಗಿದ್ದೀರಲ್ಲವೆ. ಒಂದು ಬಾರಿಯಾದರೂ ಖುಷಿಯ ಹೊಳಪು ಆತ್ಮನಿಗೆ ಅನುಭವವಾಗಿ ಬಿಡುತ್ತದೆ ಎಂದರೆ, ಆ ಆತ್ಮನು ಸದಾ ಖುಷಿಯ ಪ್ರಕಾಶತೆಯಿಂದ ಮೇಲೆ ಹಾರುತ್ತಿರುತ್ತದೆ. ಅಂದಮೇಲೆ ಎಲ್ಲರನ್ನೂ ಡಬಲ್ಲೈಟ್ ಮಾಡಿ ಹಾರಿಸುವ ವೈದ್ಯರಾಗಿದ್ದೀರಲ್ಲವೆ. ಅವರು ಬೆಡ್ನಿಂದ ಮೇಲೇಳಿಸಿ ಬಿಡುತ್ತದೆ. ಬೆಡ್ನಲ್ಲಿ ಮಲಗಿರುವ ರೋಗಿಯನ್ನು ಮೇಲೇಳಿಸಿ ಬಿಡುತ್ತಾರೆ, ನಡೆಸಿ ಬಿಡುತ್ತಾರೆ. ತಾವು ಹಳೆಯ ಪ್ರಪಂಚದಿಂದ ಮೇಲೇಳಿಸಿ ಹೊಸ ಪ್ರಪಂಚದಲ್ಲಿ ಕೂರಿಸಿಬಿಡಿ. ಇಂತಹ ಪ್ಲಾನ್ ಮಾಡಿದ್ದೀರಲ್ಲವೆ. ಆತ್ಮಿಕ ಸಾಧನವನ್ನು ಉಪಯೋಗಿಸುವ ಯೋಜನೆಯನ್ನು ಮಾಡಿದ್ದೀರಾ? ಇಂಜೆಕ್ಷನ್ ಯಾವುದು, ಮಾತ್ರೆಗಳು ಯಾವುದು, ರಕ್ತವನ್ನೇನು ಕೊಡಬೇಕು - ಇದೆಲ್ಲಾ ಆತ್ಮಿಕ ಸಾಧನಗಳನ್ನು ಮಾಡಿದ್ದೀರಾ! ಯಾರಿಗಾದರೂ ರಕ್ತವನ್ನು ಕೊಡುವ ಅವಶ್ಯಕತೆಯಿದೆಯೆಂದರೆ ಆತ್ಮಿಕ ರಕ್ತವನ್ನೇನು ಕೊಡಬೇಕು? ಹಾರ್ಟ್ ಪೇಶೆಂಟ್ಗೆ ಯಾವ ಔಷಧಿಯನ್ನು ಕೊಡಬೇಕು? ಹಾರ್ಟ್ ಪೇಶೆಂಟ್ ಅರ್ಥಾತ್ ಹೃದಯ ವಿಧೀರ್ಣರಾಗಿರುವ ಪೇಶೆಂಟ್ ಅವರಿಗೆ ಆತ್ಮಿಕ ಸಾಮಗ್ರಿಯು ಬೇಕಾಗಿರುತ್ತದೆ. ಹೇಗೆ ಅವರು ಹೊಸ-ಹೊಸ ಅನ್ವೇಷಣೆ ಮಾಡುತ್ತಾರೆ, ಅವರು ವಿಜ್ಞಾನದ ಸಾಧನಗಳಿಂದ ಅನ್ವೇಷಣೆ ಮಾಡುತ್ತಾರೆ. ತಾವು ಶಾಂತಿಯ ಸಾಧನಗಳಿಂದ ಸದಾಕಾಲಕ್ಕಾಗಿ ನಿರೋಗಿಯನ್ನಾಗಿ ಮಾಡಿಬಿಡಿ. ಹೇಗೆ ಅವರ ಬಳಿ ಎಲ್ಲದರ ಪಟ್ಟಿಯಿದೆ - ಈ ಸಾಧನವಿದೆ, ಈ ಸಾಧನವಿದೆ ಎಂದು. ಹಾಗೆಯೇ ತಮ್ಮದೂ ಉದ್ದವಾದ ಲಿಸ್ಟ್ ಇರಲಿ. ಅಂತಹ ವೈದ್ಯರಾಗಿದ್ದೀರಿ. ಎವರ್ಹೆಲ್ಧಿ ಮಾಡಲು ಇಷ್ಟು ಶ್ರೇಷ್ಠವಾದ ಸಾಧನವಿರಲಿ. ಅಂತಹ ಕರ್ತವ್ಯವನ್ನು ತಮ್ಮದೆಂದು ಮಾಡಿಕೊಂಡಿದ್ದೀರಾ? ಎಲ್ಲಾ ವೈದ್ಯರುಗಳು ತಮ್ಮ-ತಮ್ಮ ಸ್ಥಾನದಲ್ಲಿ ಇಂತಹ ಬೋರ್ಡ್ ಹಾಕಿದ್ದೀರಾ - ಎವರ್ಹೆಲ್ಧಿ-ಎವರ್ವೆಲ್ಧಿ ಆಗುವ ಆಸ್ಪತ್ರೆ? ಎಂದು. ಹೇಗೆ ತಮ್ಮ ಆ ಕರ್ತವ್ಯವನ್ನು ಬರೆಯುತ್ತೀರಿ, ಹಾಗೆಯೇ ಈ ಬರವಣಿಗೆಯಿರಲಿ, ಅದನ್ನು ನೋಡಿ ಇದೇನು ಎಂದು ಒಳಗೆ ಬಂದು ನೋಡಿ ತಿಳಿದುಕೊಳ್ಳಲಿ. ಆಕರ್ಷಿತವಾಗಿರುವ ಬೋರ್ಡ್ ಇರಲಿ. ಬರವಣಿಗೆಯೂ ಹಾಗಿರಲಿ, ಅದು ಪರಿಚಯವನ್ನು ತೆಗೆದುಕೊಳ್ಳದೆಯೇ ಇರಲು ಸಾಧ್ಯವಾಗಬಾರದು. ಕರೆಯುವ ಅವಶ್ಯಕತೆಯಿರಬಾರದು, ಆದರೆ ಸ್ವಯಂ ತಾವೇ ಬಯಸದಿದ್ದರೂ ತಮ್ಮ ಮುಂದೆ ತಲುಪಿ ಬಿಡಲಿ, ಅಂತಹ ಬೋರ್ಡ್ ಇರಲಿ. ಅವರಂತು ಬರೆಯುತ್ತಾರೆ- ಎಂ.ಬಿ.ಬಿ.ಎಸ್.... ಇತ್ಯಾದಿ ಇತ್ಯಾದಿ ಎಂದು ಬರೆಯುತ್ತಾರೆ, ಮತ್ತೆ ತಾವು ತಮ್ಮ ಬೋರ್ಡನ್ನು ಇಂತಹ ರೀತಿಯಲ್ಲಿ ಆತ್ಮಿಕ ಕರ್ತವ್ಯವನ್ನು ಬರೆಯಿರಿ, ಅದರಿಂದ ಅವರು ತಿಳಿಯಲಿ - ಈ ಸ್ಥಾನವು ಅವಶ್ಯಕವಿದೆ. ತಮ್ಮ ಇಂತಹ ಆತ್ಮಿಕ ಡಿಗ್ರಿಯನ್ನು ಮಾಡಿಕೊಂಡಿದ್ದೀರಾ ಅಥವಾ ಅದೇ ಡಿಗ್ರಿಯನ್ನು ಬರೆಯುತ್ತೀರಾ?

(ಸೇವೆಯ ಶ್ರೇಷ್ಠ ಸಾಧನವೇನಾಗಬೇಕು) ಸೇವೆಯಲ್ಲಿ ಬಹಳ ತೀಕ್ಷ್ಣವಾದ ಸಾಧನವಾಗಿದೆ - ಸಮರ್ಥ ಸಂಕಲ್ಪದಿಂದ ಸೇವೆ. ಸಮರ್ಥ ಸಂಕಲ್ಪವೂ ಇರಲಿ, ಮಾತೂ ಹಾಗೆಯೇಇರಲಿ ಮತ್ತು ಸಮರ್ಥ ಕರ್ಮವೂ ಇರಲಿ. ಮೂರೂ ಒಟ್ಟೊಟ್ಟಿಗೆ ಕಾರ್ಯವನ್ನು ಮಾಡಲಿ. ಶಕ್ತಿಶಾಲಿ ಸಾಧನವು ಇದೇ ಆಗಿದೆ. ವಾಣಿಯಲ್ಲಿ ಬರುತ್ತೀರೆಂದರೆ ಶಕ್ತಿಶಾಲಿ ಸಂಕಲ್ಪದ ಪರ್ಸೆಂಟೇಜ್ ಕಡಿಮೆಯಾಗಿ ಬಿಡುತ್ತದೆಯೋ ಅಥವಾ ಆದು ಪರ್ಸೆಂಟೇಜ್ ಆಗಿ ಬಿಡುತ್ತದೆಯೆಂದರೆ ವಾಣಿಯ ಶಕ್ತಿಯಲ್ಲಿ ಅಂತರವಾಗಿ ಬಿಡುತ್ತದೆ, ಆದರೆ ಹಾಗಾಗಬಾರದು. ಮೂರೂ ಒಟ್ಟೊಟ್ಟಿಗೆ ಇರಲಿ. ಹೇಗೆ ಯಾವುದೇ ರೋಗಿಯನ್ನು ಒಟ್ಟಿಗೆ ಕೆಲವರು ನಾಡಿಯನ್ನು ನೋಡುತ್ತಾರೆ, ಕೆಲವರು ಆಪರೇಷನ್ ಮಾಡುತ್ತಾರೆ..... ಒಟ್ಟೊಟ್ಟಿಗೆ ಮಾಡುತ್ತಾರೆ. ನಾಡಿಯನ್ನು ನೋಡುವವರು ಅಂತ್ಯದಲ್ಲಿ ನೋಡಿ, ಆಪರೇಷನ್ ಮಾಡುವವರು ಮೊದಲು ಮಾಡಿ ಬಿಟ್ಟರೆ ಏನಾಗಬಹುದು? ಒಟ್ಟೊಟ್ಟಿಗೆ ಎಷ್ಟೊಂದು ಕಾರ್ಯವು ನಡೆಯುತ್ತದೆ. ಹಾಗೆಯೇ ಆತ್ಮಿಯತೆಯದೂ ಸಹ ಸೇವೆಯ ಸಾಧನವು ಒಟ್ಟೊಟ್ಟಿಗೆ ಜೊತೆ ಜೊತೆಯಲ್ಲಿ ನಡೆಯಲಿ. ಬಾಕಿ ಸೇವೆಯ ಯೋಜನೆಯನ್ನೇನು ಮಾಡಿದ್ದೀರಿ, ಅದು ಬಹಳ ಒಳ್ಳೆಯದು. ಆದರೆ ಅಂತಹ ಯಾವುದಾದರೂ ಸಾಧನ ಮಾಡಿಕೊಳ್ಳಿರಿ, ಅದರಿಂದ ಎಲ್ಲರೂ ತಿಳಿಯಲಿ - ಹಾ, ಈವರು ಆತ್ಮಿಕ ವೈದ್ಯರು ಸದಾಕಾಲಕ್ಕಾಗಿ ಆರೋಗ್ಯವಂತರನ್ನಾಗಿ ಮಾಡುವವರಾಗಿದ್ದಾರೆ. ಒಳ್ಳೆಯದು.

ಪಾರ್ಟಿಯೊಂದಿಗೆ:-

1. ಯಾರು ಅನೇಕ ಬಾರಿ ವಿಜಯಿ ಆತ್ಮರಾಗಿದ್ದಾರೆ, ಅವರ ಚಿಹ್ನೆಗಳೇನಾಗಿವೆ? ಅವರ ಪ್ರತಿಯೊಂದು ಮಾತು ಬಹಳ ಸಹಜ ಮತ್ತು ಹಗುರತೆಯ ಅನುಭವವಾಗುವುದು. ಯಾರು ಕಲ್ಪ-ಕಲ್ಪದ ವಿಜಯಿ ಆತ್ಮರಾಗಿರುವುದಿಲ್ಲವೋ, ಅವರಿಗೆ ಚಿಕ್ಕದಾದ ಕಾರ್ಯವೂ ಕಷ್ಟದ ಅನುಭವವಾಗುತ್ತದೆ. ಸಹಜವೆನಿಸುವುದಿಲ್ಲ. ಪ್ರತೀ ಕಾರ್ಯವನ್ನು ಮಾಡುವುದಕ್ಕೆ ಮೊದಲು ಸ್ವಯಂನ್ನು ಹೀಗೆ ಅನುಭವ ಮಾಡುವರು, ಹೇಗೆಂದರೆ ಈ ಕಾರ್ಯವು ಆಗಿಯೇ ಇದೆ. ಆಗುತ್ತದೆಯೋ ಅಥವಾ ಇಲ್ಲವೋ, ಈ ಪ್ರಶ್ನೆಯು ಉತ್ಪನ್ನವಾಗುವುದಿಲ್ಲ. ಆಗಿಯೇ ಇದೆ - ಈ ಅನುಭವವು ಸದಾ ಇರುತ್ತದೆ. ಸದಾ ಸಫಲತೆಯಿದ್ದೇ ಇದೆ, ವಿಜಯವು ಆಗಿಯೇ ಇದೆ ಎಂದು ಗೊತ್ತಿದೆ, ಇಂತಹ ನಿಶ್ಚಯ ಬುದ್ಧಿಯವರಾಗಿರುತ್ತಾರೆ. ಯಾವುದೇ ಮಾತು ಹೊಸದೆನಿಸುವುದಿಲ್ಲ, ಬಹಳ ಹಳೆಯ ಮಾತಾಗಿದೆ. ಇದೇ ಸ್ಮೃತಿಯಿಂದ ಸ್ವಯಂನ್ನು ಮುಂದುವರೆಸುತ್ತಿರಿ.

2. ಡಬಲ್ಲೈಟ್ ಆಗುವ ಚಿಹ್ನೆಯೇನಾಗಿದೆ? ಡಬಲ್ಲೈಟ್ ಆತ್ಮರು ಸದಾ ಸಹಜವಾಗಿ ಹಾರುವ ಕಲೆಯ ಅನುಭವ ಮಾಡುತ್ತಾರೆ. ಕೆಲವೊಮ್ಮೆ ನಿಲ್ಲುವ ಮತ್ತು ಕೆಲವರು ಹಾರುವಂತೆ ಇರುವುದಿಲ್ಲ. ಸದಾ ಹಾರುವ ಕಲೆಯ ಅನುಭವಿ, ಇಂತಹ ಡಬಲ್ಲೈಟ್ ಆತ್ಮರೇ ಡಬಲ್ ಕಿರೀಟದ ಅಧಿಕಾರಿಯಾಗುತ್ತಾರೆ. ಡಬಲ್ಲ ಲೈಟ್ ಆಗಿರುವವರು ಸ್ವತಹವಾಗಿಯೇ ಶ್ರೇಷ್ಠ ಸ್ಥಿತಿಯ ಅನುಭವ ಮಾಡುತ್ತಾರೆ. ಯಾವುದೇ ಪರಿಸ್ಥಿತಿಯು ಬರಲಿ, ನೆನಪಿಟ್ಟುಕೊಳ್ಳಿರಿ - ನಾವು ಡಬಲ್ಲೈಟ್ ಆಗಿದ್ದೇವೆ. ಮಕ್ಕಳಾಗಿ ಬಿಟ್ಟೆವು ಅರ್ಥಾತ್ ಹಗುರರಾಗಿ ಬಿಟ್ಟೆವು. ಯಾವುದೇ ಹೊರೆಯನ್ನು ಮೇಲೆತ್ತಿಕೊಳ್ಳುವುದಿಲ್ಲ. ಒಳ್ಳೆಯದು. ಓಂ ಶಾಂತಿ.

ವರದಾನ:  
ಶುಭ ಚಿಂತನೆ ಮತ್ತು ಶುಭ ಚಿಂತಕ ಸ್ಥಿತಿಯ ಮೂಲಕ ಅನುಭವದ ಮೂಲಕ ಬ್ರಹ್ಮಾ ತಂದೆಯ ಸಮಾನ ಮಾಸ್ಟರ್ ದಾತಾ ಭವ.

ಬ್ರಹ್ಮಾ ತಂದೆಯ ಸಮಾನ ಮಾಸ್ಟರ್ ದಾತಾ ಅಗುವುದಕ್ಕಾಗಿ ಈರ್ಷ್ಯೆ, ತಿರಸ್ಕಾರ ಮತ್ತು ಟೀಕೆ - ಈ ಮೂರು ಮಾತುಗಳಿಂದ ಮುಕ್ತರಾಗಿದ್ದು ಸರ್ವರ ಬಗ್ಗೆ ಶುಭ ಚಿಂತಕರಾಗಿರಿ ಮತ್ತು ಶುಭ ಚಿಂತನೆಯ ಸ್ಥಿತಿಯ ಅನುಭವ ಮಾಡಿರಿ ಏಕೆಂದರೆ ಯಾರಲ್ಲಿ ಈರ್ಷ್ಯೆಯ ಅಗ್ನಿಯಿರುತ್ತದೆ, ಅವರು ಸ್ವಯಂ ಸುಡುತ್ತಾರೆ, ಅನ್ಯರನ್ನೂ ಬೇಸರ ಪಡಿಸುತ್ತಾರೆ. ತಿರಸ್ಕಾರವಿರುವವರು ಸ್ವಯಂ ಸಹ ಬೀಳುತ್ತಾರೆ ಮತ್ತು ಅನ್ಯರನ್ನೂ ಬೀಳಿಸುತ್ತಾರೆ ಮತ್ತು ತಮಾಷೆಯಲ್ಲಿಯೂ ಟೀಕೆ ಮಾಡುವವರು, ಆತ್ಮವನ್ನು ಸಾಹಸಹೀನನ್ನಾಗಿ ಮಾಡಿ ದುಃಖಿಯನ್ನಾಗಿ ಮಾಡುತ್ತಾರೆ. ಆದ್ದರಿಂದ ಈ ಮೂರು ಮಾತುಗಳಿಂದ ಮುಕ್ತರಾಗಿದ್ದು ಶುಭ ಚಿಂತಕ ಸ್ಥಿತಿಯ ಅನುಭವದ ಮೂಲಕ ದಾತನ ಮಕ್ಕಳು ಮಾಸ್ಟರ್ ದಾತಾ ಆಗಿರಿ.

ಸ್ಲೋಗನ್:
ಮನ-ಬುದ್ಧಿ ಮತ್ತು ಸಂಸ್ಕಾರಗಳ ಮೇಲೆ ಸಂಪೂರ್ಣವಾಗಿ ರಾಜ್ಯ ಮಾಡುವಂತಹ ಸ್ವರಾಜ್ಯ ಅಧಿಕಾರಿ ಆಗಿರಿ.


ಮುರಳಿ ಪ್ರಶ್ನೆಗಳು -

1. ಶ್ರೇಷ್ಠ ಖಾತೆಯನ್ನು ಜಮಾ ಮಾಡಿಕೊಳ್ಳುವ ಯುಗದ ವಿಶೇಷತೆ ಏನು?

2. ಕಲ್ಪ ಕಲ್ಪದ ವಿಜಯಿ ಆತ್ಮಗಳು ಪ್ರತಿ ಮಾತಿನಲ್ಲಿ ಏನು ಅನುಭವ ಮಾಡುತ್ತಾರೆ?

3. ಭಕ್ತಿಯ ಖಾತೆ ಅಲ್ಪಕಾಲ ಏಕೆ?

4. ಡಾಕ್ಟರ್ನ ವಿಶೇಷ ಕಾರ್ಯ ಏನಾಗಿದೆ?

5. ಡಬಲ್ ಲೈಟ್ ಆತ್ಮಗಳು ಸದಾ____________ ಅನುಭವ ಮಾಡುತ್ತಾರೆ.
ಅ. ಏರುವ ಕಲೆಯ
ಆ. ಓಡುವ ಕಲೆಯ
ಇ. ಹಾರುವ ಕಲೆಯ

6. ಗೋಲ್ಡನ ಏಜ್ ಸೇವೆ ಮಾಡುವುದಕ್ಕೆ ಯಾವ ಅಲಾಯ ಮಿಕ್ಸ್ ಆಗಬಾರದು?
ಅ. ಬೆಳ್ಳಿಯ ಮೇಲೆ ಚಿನ್ನದ ನೀರಿನ ಮಿಕ್ಸ್ ಆಗಬಾರದು
ಆ. ಅಭಿಮಾನ ಮತ್ತು ಅಪಮಾನ ಅಲಾಯ ಮಿಕ್ಸ್ ಆಗಬಾರದು
ಇ. ಹಳೆಯ ಸಂಸ್ಕಾರರೂಪಿ ಅಲಾಯ ಮಿಕ್ಸ್ ಆಗಬಾರದು

7. ಸಮಸ್ಯೆಯ ಸಮಯ ______________ ಅಧಿಕಾರವನ್ನು ತೋರಿಸುವ ಸಮಯವಾಗಿದೆ.
ಅ. ಸ್ವರಾಜ್ಯದ ಅಧಿಕಾರತನದ
ಆ. ಭವಿಷ್ಯ ರಾಜ್ಯಾಧಿಕಾರತನದ
ಇ. ಭವಿಷ್ಯ ಸಿಂಹಾಸನಾಧಿಕಾರತನದ

8. ಸೇವೆಯ ತೀಕ್ಷ್ಣ ಸಾಧನ ಯಾವುದಾಗಿದೆ?
ಅ. ಸಮರ್ಥ ಸಂಕಲ್ಪ
ಆ. ಸಮರ್ಥ ಮಾತು
ಇ. ಸಮರ್ಥ ಕರ್ಮ

9. ಚಿನ್ನದ ಯುಗ (ಸ್ವರ್ಣಿಮ ಯುಗವನ್ನು) ಹೇಗೆ ತರುವುದು?
ಅ. ಶ್ರೇಷ್ಠ ಸಂಕಲ್ಪ, ಶ್ರೇಷ್ಠ ವಿಚಾರಗಳಿಂದ
ಆ. ಸಮರ್ಥ ಸಂಕಲ್ಪ, ಸಮರ್ಥ ವಿಚಾರಗಳಿಂದ
ಇ. ಶುದ್ಧ ಸಂಕಲ್ಪ, ಶುದ್ಧ ವಿಚಾರಗಳಿಂದ

10. ಜೋಡಿಸಿ ಬರೆಯಿರಿ
1) ಸಮಸ್ಯೆ ಪರಮಾತ್ಮನ ಅವತರನೆಯ ಯುಗ
2) ಸ್ವ ಅಧಿಕಾರಿ ಸಮಾಧಾನ
3) ಸ್ವ ಪರಿವರ್ತನೆ ಸರ್ವ ಕರ್ಮೇಂದ್ರಿಯಗಳ ಮೇಲೆ ಅಧಿಕಾರ
4) ಸಂಗಮ ಯುಗ ಗೋಲ್ಡನ ಜುಬಲಿ ಆಚರಿಸುವುದು