10.05.20 Avyakt Bapdada
Kannada
Murli
08.01.86 Om Shanti Madhuban
ಧರಣಿಯ "ಪವಿತ್ರ"
ನಕ್ಷತ್ರ
ಇಂದು ಜ್ಞಾನ ಸೂರ್ಯ
ತಂದೆಯು ತನ್ನ ಅನೇಕ ಪ್ರಕಾರದ ವಿಶೇಷತೆಗಳಿಂದ ಸಂಪನ್ನವಾಗಿರುವ ವಿಶೇಷ ನಕ್ಷತ್ರಗಳನ್ನು
ನೋಡುತ್ತಿದ್ದಾರೆ. ಪ್ರತಿಯೊಂದು ನಕ್ಷತ್ರಗಳ ವಿಶೇಷತೆಯು ವಿಶ್ವವನ್ನು ಪರಿವರ್ತನೆ ಮಾಡುವ
ಪ್ರಕಾಶತೆಯನ್ನು ಕೊಡುವಂತದ್ದಾಗಿದೆ. ವರ್ತಮಾನದಲ್ಲಿ ನಕ್ಷತ್ರಗಳ ಅನ್ವೇಷಣೆಯನ್ನು ವಿಶ್ವದಲ್ಲಿ
ವಿಶೇಷವಾಗಿ ಮಾಡುತ್ತಾರೆ ಏಕೆಂದರೆ ನಕ್ಷತ್ರಗಳ ಪ್ರಭಾವವು ಪ್ರಥ್ವಿಯ ಮೇಲೆ ಬೀಳುತ್ತದೆ.
ವಿಜ್ಞಾನಿಗಳು ಆಕಾಶದ ನಕ್ಷತ್ರಗಳ ಅನ್ವೇಷಣೆ ಮಾಡುತ್ತಾರೆ, ಬಾಪ್ದಾದಾರವರು ತನ್ನ ಪವಿತ್ರ
ನಕ್ಷತ್ರಗಳನ್ನು ವಿಶೇಷವಾಗಿ ನೋಡುತ್ತಿದ್ದಾರೆ. ಯಾವಾಗ ಆಕಾಶದ ನಕ್ಷತ್ರಗಳು ಇಷ್ಟೂ ದೂರದಿಂದ
ತನ್ನ ಪ್ರಭಾವವನ್ನು ಒಳ್ಳೆಯ ಅಥವಾ ಕೆಟ್ಟ ಪ್ರಭಾವವನ್ನು ಬೀರಲು ಸಾಧ್ಯವಿದೆ, ಅಂದಮೇಲೆ ತಾವು
ಪವಿತ್ರ ನಕ್ಷತ್ರಗಳು ಈ ವಿಶ್ವವನ್ನು ಪರಿವರ್ತನೆ ಮಾಡುವ, ಪವಿತ್ರತೆ-ಸುಖ-ಶಾಂತಿಮಯ
ಪ್ರಪಂಚವನ್ನಾಗಿ ಮಾಡುವ ಪ್ರಭಾವವು ಎಷ್ಟೊಂದು ಸಹಜವಾಗಿ ಬೀರಬಹುದು. ತಾವು ಧರಣಿಯ ನಕ್ಷತ್ರಗಳು,
ಅವು ಆಕಾಶದ ನಕ್ಷತ್ರಗಳು. ಧರಣಿಯ ನಕ್ಷತ್ರಗಳು ಈ ವಿಶ್ವವನ್ನು ಹಲ್ಚಲ್ನಿಂದ ರಕ್ಷಿಸಿ ಸುಖಿ
ಪ್ರಪಂಚ, ಸ್ವರ್ಣೀಮ ಪ್ರಪಂಚವನ್ನಾಗಿ ಮಾಡುವವರಾಗಿದ್ದೀರಿ. ಈ ಸಮಯದಲ್ಲಿ ಪ್ರಕೃತಿ ಮತ್ತು ವ್ಯಕ್ತಿ
ಎರಡೂ ಸಹ ಹಲ್ಚಲ್ನಲ್ಲಿ ತರಲು ನಿಮಿತ್ತರಾಗಿದ್ದಾರೆ. ಆದರೆ ತಾವು ಪುರುಷೋತ್ತಮ ಆತ್ಮರು
ವಿಶ್ವವನ್ನು ಸುಖದ ಶ್ವಾಸ, ಶಾಂತಿಯ ಶ್ವಾಸವನ್ನು ಕೊಡಲು ನಿಮಿತ್ತರಿದ್ದೀರಿ. ತಾವು ಧರಣಿಯ
ನಕ್ಷತ್ರಗಳು ಸರ್ವ ಆತ್ಮರ ಸರ್ವ ಇಚ್ಛೆಗಳನ್ನು ಪೂರ್ಣಗೊಳಿಸುವ ಪ್ರಾಪ್ತಿ ಸ್ವರೂಪ ನಕ್ಷತ್ರಗಳು,
ಸರ್ವರನ್ನು ಭರವಸೆಯಿಲ್ಲದಿರುವವರಿಂದ ಭರವಸೆಯಲ್ಲಿರುವವರನ್ನಾಗಿ ಪರಿವರ್ತಿಸುವ ಶ್ರೇಷ್ಠ ಭರವಸೆಯ
ನಕ್ಷತ್ರಗಳಾಗಿದ್ದೀರಿ. ಅಂದಮೇಲೆ ತಮ್ಮ ಶ್ರೇಷ್ಠ ಪ್ರಭಾವವನ್ನು ಪರಿಶೀಲನೆ ಮಾಡಿಕೊಳ್ಳಿರಿ - ನಾನು
ಶಾಂತಿಯ ನಕ್ಷತ್ರ, ಪವಿತ್ರತೆಯ ನಕ್ಷತ್ರದ, ಸುಖ ಸ್ವರೂಪ ನಕ್ಷತ್ರದ, ಸದಾ ಸಫಲತೆಯ ನಕ್ಷತ್ರದ,
ಸರ್ವರ ಆಶೆಗಳನ್ನು ಪೂರ್ಣಗೊಳಿಸುವ ನಕ್ಷತ್ರದ, ಸಂತುಷ್ಟತೆಯ ಪ್ರಭಾವಶಾಲಿ ನಕ್ಷತ್ರದ
ಪ್ರಭಾವವನ್ನಾಕುವ ಹೊಳಪು ಮತ್ತು ಪ್ರಕಾಶತೆಯೆಷ್ಟಿದೆ? ಎಲ್ಲಿಯವರೆಗೆ ಪ್ರಭಾವವನ್ನು
ಹಾಕುತ್ತಿದ್ದೀರಿ? ಪ್ರಭಾವದ ಗತಿಯೆಷ್ಟಿದೆ? ಹೇಗೆ ಆ ನಕ್ಷತ್ರಗಳ ಗತಿಯನ್ನು ಪರಿಶೀಲಿಸುತ್ತಾರೆ,
ಹಾಗೆಯೇ ತಮ್ಮ ಪ್ರಭಾವದ ಗತಿಯನ್ನು ತಾವೇ ಪರಿಶೀಲನೆ ಮಾಡಿಕೊಳ್ಳಿರಿ. ಏಕೆಂದರೆ ವಿಶ್ವದಲ್ಲಿ ಈ
ಸಮಯದಲ್ಲಿ ಅವಶ್ಯಕತೆಯು ತಾವು ಪವಿತ್ರ ಹಂಸಗಳದಾಗಿದೆ. ಅಂದಮೇಲೆ ಬಾಪ್ದಾದಾರವರು ಎಲ್ಲಾ ಪ್ರಕಾರದ
ನಕ್ಷತ್ರಗಳನ್ನು ನೋಡುತ್ತಿದ್ದರು.
ಈ ಆತ್ಮಿಕ ನಕ್ಷತ್ರಗಳ
ಸಂಘಟನೆಯು ಎಷ್ಟೊಂದು ಶ್ರೇಷ್ಠವಾಗಿದೆ ಮತ್ತು ಎಷೊಂದು ಸುಖ ಕೊಡುವುದಾಗಿದೆ! ಹೀಗೆ ತಮ್ಮನ್ನು
ಹೊಳೆಯುವಂತಹ ನಕ್ಷತ್ರಗಳೆಂದು ತಿಳಿಯುತ್ತೀರಾ? ಹೇಗೆ ಆ ನಕ್ಷತ್ರಗಳನ್ನು ನೋಡುವುದಕ್ಕಾಗಿ
ಎಷ್ಟೊಂದು ಇಚ್ಛುಕರಾಗಿರುತ್ತಾರೆ. ಈಗ ಇಂತಹ ಸಮಯವು ಬರುತ್ತಿದೆ, ಅದರಲ್ಲಿ ತಾವು ಪವಿತ್ರ
ನಕ್ಷತ್ರಗಳನ್ನು ನೋಡುವುದಕ್ಕಾಗಿ ಎಲ್ಲರೂ ಇಚ್ಛುಕರಾಗಿರುತ್ತಾರೆ. ತಾವು ನಕ್ಷತ್ರಗಳನ್ನು
ಹುಡುಕುತ್ತಾರೆ - ಹೇಗೆಂದರೆ, ಈ ಶಾಂತಿಯ ಪ್ರಭಾವ, ಸುಖದ ಪ್ರಭಾವ, ಅಚಲರನ್ನಾಗಿ ಮಾಡುವ ಪ್ರಭಾವವು
ಎಲ್ಲಿಂದಲೋ ಬರುತ್ತಿದೆ, ಇದನ್ನೂ ರಿಸರ್ಚ್ (ಅನ್ವೇಷಣೆ) ಮಾಡುತ್ತಾರೆ. ಈಗಂತು ಪ್ರಕೃತಿಯ
ಅನ್ವೇಷಣೆಯ ಕಡೆಗೆ ತೊಡಗಿದ್ದಾರೆ, ಯಾವಾಗ ಪ್ರಕೃತಿಯ ಅನ್ವೇಷಣೆ ಮಾಡಿ ಸುಸ್ತಾಗಿ ಬಿಡುತ್ತಾರೆಯೋ
ಆಗ ಈ ಆತ್ಮಿಕ ಅನ್ವೇಷಣೆಯನ್ನು ಮಾಡುವ ಸಂಕಲ್ಪವು ಬರುತ್ತದೆ. ಅದಕ್ಕೆ ಮೊದಲು ತಾವು ಪವಿತ್ರ
ನಕ್ಷತ್ರಗಳು ತಮ್ಮನ್ನು ಸಂಪನ್ನರನ್ನಾಗಿ ಮಾಡಿಕೊಂಡು ಬಿಡಿ. ಯಾವುದಾದರೊಂದು ಗುಣದ, ಭಲೆ ಶಾಂತಿಯ
ಗುಣವಿರಬಹುದು, ಭಲೆ ಶಕ್ತಿಯ ವಿಶೇಷತೆಯನ್ನೇ ತಮ್ಮಲ್ಲಿ ತುಂಬಿಕೊಳ್ಳುವುದರಲ್ಲಿ ವಿಶೇಷವಾಗಿ
ತೀವ್ರ ಗತಿಯಿಂದ ತಯಾರಿ ಮಾಡಿಕೊಳ್ಳಿರಿ. ತಾವೂ ರಿಸರ್ಚ್ ಮಾಡಿರಿ. ಎಲ್ಲಾ ಗುಣಗಳಂತು ಇದ್ದೇ ಇದೆ,
ಆದರೂ ಸಹ ಕೊನೆಪಕ್ಷ ಒಂದು ಗುಣದಲ್ಲಿ ವಿಶೇಷತೆಯಿಂದ ತಮ್ಮನ್ನು ವಿಶೇಷವಾಗಿ ಸಂಪನ್ನ ಮಾಡಿಕೊಳ್ಳಿರಿ.
ಹೇಗೆ ವೈದ್ಯರುಗಳಿರುತ್ತಾರೆ- ಸಾಮಾನ್ಯವಾದ ರೋಗಗಳ ಬಗ್ಗೆ ತಿಳುವಳಿಯನ್ನಂತು ಇಟ್ಟುಕೊಂಡಿರುತ್ತಾರೆ.
ಆದರೆ ಜೊತೆ ಜೊತೆಗೆ ಯಾವುದರಲ್ಲಾದರೂ ವಿಶೇಷವಾಗಿ ಜ್ಞಾನವಿರುತ್ತದೆ. ಆ ವಿಶೇಷತೆಯ ಕಾರಣದಿಂದ
ಹೆಸರುವಾಸಿಯಾಗಿ ಬಿಡುತ್ತಾರೆ. ಅಂದಾಗ ಸರ್ವಗುಣ ಸಂಪನ್ನರಾಗಲೇಬೇಕು, ಆದರೂ ಒಂದು ವಿಶೇಷತೆಯನ್ನು
ವಿಶೇಷ ರೂಪದಿಂದ ಅನುಭವದಲ್ಲಿ ತರುತ್ತಾ, ಸೇವೆಯಲ್ಲಿ ಉಪಯೋಗಿಸುತ್ತಾ ಮುಂದುವರೆಯುತ್ತಾ ಸಾಗಿರಿ.
ಹೇಗೆ ಭಕ್ತಿಯಲ್ಲಿಯೂ ಪ್ರತಿಯೊಂದು ದೇವಿಯ ಮಹಿಮೆಯಲ್ಲಿ, ಪ್ರತಿಯೊಬ್ಬರ ವಿಶೇಷತೆಯು
ಬೇರೆ-ಬೇರೆಯಾಗಿ ಗಾಯನವಾಗುತ್ತದೆ. ಮತ್ತು ಪೂಜೆಯೂ ಸಹ ಅದೇ ವಿಶೇಷತೆಯನುಸಾರವಾಗಿ ಆಗುತ್ತದೆ, ಹೇಗೆ
ಸರಸ್ವತಿಗೆ ವಿಶೇಷವಾಗಿ ವಿದ್ಯಾದೇವಿ ಎಂದು ಮಾನ್ಯತೆ ಕೊಡುತ್ತಾ ಪೂಜೆ ಮಾಡುತ್ತಾರೆ. ಇರುವುದಂತು
ಶಕ್ತಿಸ್ವರೂಪವಾಗಿ ಆದರೆ ವಿಶೇಷತೆ ವಿದ್ಯೆಯ ದೇವಿ ಎಂದು ಹೇಳಿ ಪೂಜಿಸುತ್ತಾರೆ. ಲಕ್ಷ್ಮಿಯನ್ನು
ಧನ ದೇವಿ ಎಂದು ಹೇಳುತ್ತಾ ಪೂಜಿಸುತ್ತಾರೆ. ಹಾಗೆಯೇ ತಮ್ಮಲ್ಲಿ ಸರ್ವಗುಣ, ಸರ್ವಶಕ್ತಿಗಳಿದ್ದರೂ
ಸಹ ಒಂದು ವಿಶೇಷತೆಯಲ್ಲಿ ವಿಶೇಷವಾಗಿ ರಿಸರ್ಚ್ ಮಾಡುತ್ತಾ ಸ್ವಯಂನ್ನು ಪ್ರಭಾವಶಲಿಯನ್ನಾಗಿ
ಮಾಡಿಕೊಳ್ಳಿರಿ. ಈ ವರ್ಷದಲ್ಲಿ ಪ್ರತಿಯೊಂದು ಗುಣದ, ಪ್ರತಿಯೊಂದು ಶಕ್ತಿಯ ರಿಸರ್ಚ್ ಮಾಡಿರಿ.
ಪ್ರತಿಯೊಂದು ಗುಣದ ಆಳದಲ್ಲಿ ಹೋಗಿರಿ. ಆಳದಲ್ಲಿ ಹೋಗುವುದರಿಂದ ಅದರ ಮಹಾನತೆಯ ಅನುಭವವನ್ನು
ಮಾಡಬಲ್ಲಿರಿ. ನೆನಪಿನ ಸ್ಥಿತಿಗಳ, ಪುರುಷಾರ್ಥದ ಸ್ಥಿತಿಗಳ ಮಹಾನತೆಯಿಂದ ರಿಸರ್ಚ್ ಮಾಡಿರಿ,
ಗುಹ್ಯತೆಯಲ್ಲಿ ಹೋಗಿರಿ, ಆಳವಾದ ಅನುಭೂತಿಗಳನ್ನು ಮಾಡಿರಿ. ಅನುಭವದ ಸಾಗರದಲ್ಲಿ ಆಳದಲ್ಲಿ ಹೋಗಿರಿ.
ಕೇವಲ ಮೇಲೆ-ಮೇಲೆ ತೇಲಾಡುವ ಅನುಭವಿಯಾಗುವುದು - ಇದೇ ಸಂಪೂರ್ಣ ಅನುಭವವಲ್ಲ. ಮತ್ತು
ಅಂತರ್ಮುಖಿಯಾಗಿ ಗುಹ್ಯ ಅನುಭವಗಳ ರತ್ನಗಳಿಂದ ಬುದ್ಧಿಯನ್ನು ಸಂಪನ್ನ ಮಾಡಿಕೊಳ್ಳಿರಿ, ಏಕೆಂದರೆ
ಪ್ರತ್ಯಕ್ಷತೆಯ ಸಮಯವು ಸಮೀಪಕ್ಕೆ ಬರುತ್ತಿದೆ. ಸಂಪನ್ನರಾಗಿ, ಸಂಪೂರ್ಣರಾಗುತ್ತೀರೆಂದರೆ ಸರ್ವ
ಆತ್ಮರುಗಳ ಮುಂದೆ ಅಜ್ಞಾನದ ಪರದೆಯು ದೂರವಾಗಿ ಬಿಡಲಿ. ತಮ್ಮ ಸಂಪೂರ್ಣತೆಯ ಬೆಳಕಿನಿಂದ ಈ ಪರದೆಯು
ಸ್ವತಹವಾಗಿಯೇ ತೆರೆದು ಬಿಡುತ್ತದೆ ಆದ್ದರಿಂದ ರಿಸರ್ಚ್ ಮಾಡಿರಿ. ಸರ್ಚ್ಲೈಟ್ ಆಗಿರಿ, ಆಗಲೇ
ಗೋಲ್ಡನ್ ಜುಬಿಲಿಯನ್ನಾಚರಿಸಿದಿರಿ ಎಂದು ಹೇಳಲಾಗುತ್ತದೆ.
ಗೋಲ್ಡನ್ ಜುಬಿಲಿಯ
ವಿಶೇಷತೆಯು ಪ್ರತಿಯೊಬ್ಬರ ಮೂಲಕ ಎಲ್ಲರಿಗೂ ಇದೇ ಅನುಭವವಾಗಲಿ, ದೃಷ್ಟಿಯಿಂದಲೂ ಶ್ರೇಷ್ಠ ಶಕ್ತಿಗಳ
ಅನುಭೂತಿಯಾಗಲಿ. ಹೇಗೆ ಬೆಳಕಿನ ಕಿರಣಗಳು ಆತ್ಮರನ್ನು ಗೋಲ್ಡನ್ ಆಗುವ ಶಕ್ತಿಯನ್ನು ಕೊಡುತ್ತಿದೆ.
ಅಂದಮೇಲೆ ಪ್ರತಿಯೊಂದು ಸಂಕಲ್ಪ, ಪ್ರತಿಯೊಂದು ಕರ್ಮವು ಗೋಲ್ಡನ್ ಆಗಲಿ. ಗೋಲ್ಡನ್ ಮಾಡಲು
ನಿಮಿತ್ತರಾಗಿರಿ. ಈ ಗೋಲ್ಡನ್ ಜುಬಿಲಿಯ ವರ್ಷವು ತಮ್ಮನ್ನು ಪಾರಸನಾಥನ ಮಕ್ಕಳು ಮಾಸ್ಟರ್
ಪಾರಸನಾಥರೆಂದು ತಿಳಿದುಕೊಳ್ಳಿರಿ. ಎಂತಹ ಲೋಹದ ಸಮಾನವಾಗಿರುವ ಆತ್ಮವೇ ಆಗಿರಲಿ ಆದರೆ ಪಾರಸದ
ಸಂಗದಿಂದ ಲೋಹವೂ ಪಾರಸವಾಗಿಬಿಡಲಿ. ಇದು ಲೋಹವೆಂದು ಯೋಚಿಸಬಾರದು, ನಾನು ಪಾರಸನೆಂದು ತಿಳಿಯಿರಿ.
ಪಾರಸದ ಕಾರ್ಯವೇ ಆಗಿದೆ - ಲೋಹವನ್ನೂ ಸಹ ಪಾರಸವನ್ನಾಗಿ ಮಾಡುವುದು. ಇದೇ ಲಕ್ಷ್ಯ ಮತ್ತು
ಲಕ್ಷಣವನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿರಿ, ಆಗಲೇ ಪವಿತ್ರ ನಕ್ಷತ್ರಗಳ ಪ್ರಭಾವವು ವಿಶ್ವದ
ದೃಷ್ಟಿಯಲ್ಲಿ ಬರುತ್ತದೆ. ಈಗಂತು ಪಾಪ ಇಂತಹ ನಕ್ಷತ್ರವು ಬರುತ್ತಿದೆ ಎಂದು ಗಾಬರಿಯಾಗುತ್ತಿದ್ದಾರೆ.
ನಂತರದಲ್ಲಿ ಪವಿತ್ರ ನಕ್ಷತ್ರವು ಬರುತ್ತಿದೆ ಎಂದು ಖುಷಿಯಾಗುತ್ತಾರೆ. ನಾಲ್ಕೂ ಕಡೆಗಳಲ್ಲಿ
ವಿಶ್ವದಲ್ಲಿ ಪವಿತ್ರ ನಕ್ಷತ್ರಗಳ ಶೋಭೆಯ ಅನುಭವವಾಗುವುದು. ಎಲ್ಲರ ಮುಖದಿಂದ ಇದೇ ಧ್ವನಿಯು
ಬರುತ್ತದೆ - ಅದೃಷ್ಟ ನಕ್ಷತ್ರ, ಸಫಲತಾ ನಕ್ಷತ್ರವು ಬಂದು ಬಿಟ್ಟಿತು. ಸುಖ-ಶಾಂತಿಯ ನಕ್ಷತ್ರವು
ಬಂದು ಬಿಟ್ಟಿತು. ಈಗಂತು ದುರ್ಬಿನ್ ತೆಗೆದುಕೊಂಡು ನೋಡುತ್ತಾರಲ್ಲವೆ. ನಂತರದಲ್ಲಿ ಮೂರನೇ ನೇತ್ರ,
ದಿವ್ಯ ನೇತ್ರದಿಂದ ನೋಡುವರು. ಆದರೆ ಇದು ವರ್ಷದ ತಯಾರಿಯಾಗಿದೆ. ಬಹಳ ಚೆನ್ನಾಗಿ ತಯಾರಿ
ಮಾಡಿಕೊಳ್ಳಿರಿ. ಒಳ್ಳೆಯದು. ಕಾರ್ಯಕ್ರಮದಲ್ಲಿ ಏನು ಮಾಡುವಿರಿ! ಬಾಪ್ದಾದಾರವರೂ ಸಹ ವತನದಲ್ಲಿ
ದೃಶ್ಯವನ್ನು ಇಮರ್ಜ್ ಮಾಡಿದರು, ದೃಶ್ಯವೇನಿತ್ತು?
ಸಮ್ಮೇಳನದ ಸ್ಟೇಜಿನ
ಮೇಲಂತು ಸ್ಪೀಕರ್ಸ್ರನ್ನು ಕೂರಿಸುತ್ತಿರುತ್ತೀರಲ್ಲವೆ. ಸಮ್ಮೇಳನದ ಸ್ಟೇಜ್ ಅರ್ಥಾತ್ ಸ್ಪೀಕರ್ಸ್
ಸ್ಟೇಜ್. ಈ ರೂಪರೇಖೆಯನ್ನು ಮಾಡುತ್ತೀರಲ್ಲವೆ. ಟಾಪಿಕ್ನ ಬಗ್ಗೆ ಭಾಷಣವಂತು ಮಾಡುತ್ತೀರಿ ಮತ್ತು
ಬಹಳ ಚೆನ್ನಾಗಿ ಮಾಡುತ್ತೀರಿ ಆದರೆ ಈ ಗೋಲ್ಡನ್ ಜುಬಿಲಿಯಲ್ಲಿ ಭಾಷಣದ ಸಮಯವು ಕಡಿಮೆಯಿರಲಿ ಮತ್ತು
ಪ್ರಭಾವವು ಹೆಚ್ಚಾಗಿರಲಿ. ಅದೇ ಸಮಯದಲ್ಲಿ ಭಿನ್ನ-ಭಿನ್ನ ಸ್ಪೀಕರ್ಸ್ಗಳು ತನ್ನ ಪ್ರಭಾವಶಾಲಿ
ಭಾಷಣವನ್ನು ಮಾಡಬಹುದು, ಅದರ ಆ ರೂಪರೇಖೆಗಳೇನಾಗಿರಬೇಕು! ಒಂದುದಿನ ವಿಶೇಷವಾಗಿ ಅರ್ಧಗಂಟೆಗಾಗಿ ಈ
ಕಾರ್ಯಕ್ರಮವನ್ನಿಡಿ ಮತ್ತು ಹೇಗೆ ಹೊರಗಿನವರು ಅಥವಾ ವಿಶೇಷವಾಗಿ ಭಾಷಣ ಮಾಡುವವರು ಭಾಷಣವನ್ನು
ಮಾಡುತ್ತಾರೆ, ಅದು ಭಲೆ ನಡೆಯಲಿ ಆದರೆ ಅರ್ಧ ಗಂಟೆಗಾಗಿ ಒಂದು ದಿನ ಸ್ಟೇಜಿನ ಮುಂದೆಯೂ ಸಹ
ಭಿನ್ನ-ಭಿನ್ನ ಆಯಸ್ಸಿನವರು ಅರ್ಥಾತ್ ಒಂದು ಚಿಕ್ಕಮಗು, ಒಂದು ಕುಮಾರಿ, ಒಂದು ಪವಿತ್ರ ಯುಗಲ್ ಇರಲಿ.
ಒಬ್ಬರು ಪ್ರವೃತ್ತಿಯಲ್ಲಿರುವ ಯುಗಲ್ ಇರಲಿ. ಒಬ್ಬರು ವೃದ್ಧನಿರಲಿ. ಭಿನ್ನ-ಭಿನ್ನವಾಗಿ ಅವರು
ಚಂದ್ರಮನಂತೆ ಸ್ಟೇಜಿನ ಮೇಲೆ ಕುಳಿತಿರಲಿ ಮತ್ತು ಸ್ಟೇಜಿನ ಲೈಟ್ ಹೆಚ್ಚಾಗಿ ಬೆಳಕಿರಬಾರದು.
ಸಾಧಾರಣವಾಗಿರಲಿ ಮತ್ತು ಒಬ್ಬೊಬ್ಬರು ಮೂರು-ಮೂರು ನಿಮಿಷದಲ್ಲಿ ತಮ್ಮ ವಿಶೇಷ ಗೋಲ್ಡನ್
ವರ್ಶನ್ಸ್ಗಳನ್ನು ತಿಳಿಸಲಿ - ಏನೆಂದರೆ, ಈ ಶ್ರೇಷ್ಠ ಜೀವನವಾಗುವುದರಲ್ಲಿ ಗೋಲ್ಡನ್ ವರ್ಶನ್ಸ್ ಏನು
ಸಿಕ್ಕಿತು, ಅದರಿಂದ ಜೀವನವು ರೂಪುಗೊಂಡಿತು ಎಂದು ಹೇಳಲಿ. ಚಿಕ್ಕ ಕುಮಾರ ಅರ್ಥಾತ್ ಮಗು ಅಥವಾ ಮಗಳು
ತಿಳಿಸಲಿ, ಮಕ್ಕಳಾಗಿ ಯಾವ ಗೋಲ್ಡನ್ ವರ್ಶನ್ಸ್ ಸಿಕ್ಕಿತು. ಮತ್ತು ಪ್ರವೃತ್ತಿಯಲ್ಲಿರುವವರು
ನಿಮಿತ್ತ ಆತ್ಮರಿಗೆ ಯಾವ ಗೋಲ್ಡನ್ ವರ್ಶನ್ಸ್ ಸಿಕ್ಕಿತು. ವೃದ್ಧರಿಗೆ ಗೋಲ್ಡನ್ ವರ್ಶನ್ಸ್ ಏನು
ಸಿಕ್ಕಿತು. ಅವರು ಮೂರು-ಮೂರು ನಿಮಿಷಗಳು ಹೇಳಲಿ. ಆದರೆ ಅಂತ್ಯದಲ್ಲಿ ಗೋಲ್ಡನ್ ವರ್ಶನ್ಸ್ನ್ನು
ಸ್ಲೋಗನ್ನ ರೂಪದಲ್ಲಿ ಇಡೀ ಸಭೆಗೆ ತಿಳಿಪಡಿಸಲಿ. ಮತ್ತು ಯಾರ ಟರ್ನ್ ಆಗಿರುತ್ತದೆಯೋ ಅವರಕಡೆಗೆ
ವಿಶೇಷವಾಗಿ ಲೈಟ್ ಇರಲಿ. ಆಗ ಸ್ವತಹವಾಗಿ ಎಲ್ಲರ ಗಮನವು ಅವರ ಕಡೆಗೆ ಹೋಗುತ್ತದೆ, ಸೈಲೆನ್ಸ್ ನ
ಪ್ರಭಾವವಿರಲಿ. ಹೇಗೆ ಯಾರೇ ಡ್ರಾಮಾ ಮಾಡುತ್ತೀರಿ, ಹಾಗೆಯೇ ಸೀನ್ ಇರಲಿ. ಭಾಷಣವಿರಲಿ ಆದರೆ
ದೃಶ್ಯದ ರೂಪದಲ್ಲಿರಲಿ ಮತ್ತು ಸ್ವಲ್ಪ ಮಾತನಾಡಲಿ. 3 ನಿಮಿಷಗಳಿಗಿಂತ ಹೆಚ್ಚು ಮಾತನಾಡಬಾರದು.
ಮುಂಚೆಯೇ ತಯಾರಿ ಆಗಿರಲಿ. ಮತ್ತು ಇನ್ನೊಂದು ದಿನ ಇದೇ ರೂಪರೇಖೆಯಿಂದ ಭಿನ್ನ-ಭಿನ್ನ ವರ್ಗದವರದಿರಲಿ.
ಹೇಗೆ ಯಾರಾದರೂ ವೈದ್ಯರಿರಬಹುದು, ಕೆಲವರು ವ್ಯಾಪಾರ ಮಾಡುವವರಿರಬಹುದು, ಆಫೀಸರ್ ಇರಬಹುದು....
ಹಾಗೆಯೇ ಭಿನ್ನ-ಭಿನ್ನ ವರ್ಗದವರು ಮೂರು-ಮೂರು ನಿಮಿಷಗಳಲ್ಲಿ ಮಾತನಾಡಲಿ - ಏನೆಂದರೆ, ಆಫೀಸರ್ನ
ಕರ್ತವ್ಯವನ್ನು ಮಾಡುತ್ತಿದ್ದರೂ ಯಾವ ಮುಖ್ಯ ಗೋಲ್ಡನ್ ಧಾರಣೆಯಿಂದ ಕಾರ್ಯದಲ್ಲಿ ಸಫಲರಾಗಿರುತ್ತಾರೆ.
ಆ ಸಫಲತೆಯ ಮುಖ್ಯ ಪಾಯಿಂಟ್ ಗೋಲ್ಡನ್ ವರ್ಶನ್ಸ್ ನ ರೂಪದಲ್ಲಿ ತಿಳಿಸಲಿ. ಅಲ್ಲಿರುವುದು ಭಾಷಣವೇ
ಆದರೆ ರೂಪರೇಖೆಯು ಸ್ವಲ್ಪ ಭಿನ್ನವಾದರ ರೀತಿಯಾಗುವುದರಿಂದ, ಈ ಈಶ್ವರೀಯ ಜ್ಞಾನವು ಎಷ್ಟೊಂದು
ವಿಶಾಲವಾಗಿದೆ ಮತ್ತು ಪ್ರತಿಯೊಂದು ವರ್ಗದವರಿಗಾಗಿ ವಿಶೇಷತೆಯೇನಿದೆ, ಅದನ್ನು ಮೂರು-ಮೂರು
ನಿಮಿಷಗಳಲ್ಲಿ ಅನುಭವವನ್ನು ಅನುಭವದ ರೀತಿಯಿಂದ ತಿಳಿಸಬಾರದು, ಆದರೆ ಅನೇಕ ಅನುಭವ ಮಾಡಿಸಿಬಿಡಲಿ.
ವಾತಾವರಣವು ಇಷ್ಟು ಸೈಲೆನ್ಸ್ ಆಗಿರಲಿ, ಅದನ್ನು ಕೇಳುವವರಿಗೂ ಸಹ ಮಾತನಾಡುವ ಏರುಪೇರಿನ ಧೈರ್ಯವೇ
ಇರಬಾರದು. ಪ್ರತಿಯೊಬ್ಬರ ಭಾಷಣದ ಲಕ್ಷ್ಯವನ್ನು ಇದೇ ಇಟ್ಟುಕೊಳ್ಳಿರಿ- ಎಷ್ಟು ಸಮಯದಲ್ಲಿ
ಕಾರ್ಯಕ್ರಮವು ನಡೆಯುತ್ತದೆ, ಅಷ್ಟೂ ಸಮಯದಲ್ಲಿ ಹೇಗೆ ಟ್ರಾಫಿಕ್ ಕಂಟ್ರೋಲ್ನ ರಿಕಾರ್ಡ್
ಮೊಳಗುತ್ತದೆ, ಆಗ ಎಲ್ಲರೂ ಒಂದೇ ಸೈಲೆನ್ಸ್ ನಲ್ಲ್ಲಿರುವ ವಾಯುಮಂಡಲವನ್ನು ಮಾಡುತ್ತೀರಿ. ಹಾಗೆಯೇ
ಈ ಬಾರಿ ಈ ವಾಯುಮಂಡಲವನ್ನು ಶಕ್ತಿಶಾಲಿಯನ್ನಾಗಿ ಮಾಡುವುದಕ್ಕಾಗಿ ಮುಖದ ಭಾಷಣವಲ್ಲ. ಆದರೆ ಶಾಂತಿಯ
ಭಾಷಣವನ್ನು ಮಾಡಬೇಕಾಗಿದೆ. ನಾನೂ ಸಹ ಒಂದು ಸ್ಪೀಕರ್ ಆಗಿದ್ದೇನೆ, ಇದಕ್ಕೆ ನಾನು
ಬಂಧಿತನಾಗಿರುವೆನು. ಶಾಂತಿಯ ಭಾಷೆಯೇನು ಕಡಿಮೆಯಲ್ಲ. ಈ ಬ್ರಾಹ್ಮಣರ ವಾತಾವರಣವು ಅನ್ಯರನ್ನೂ ಅದೇ
ಅನುಭೂತಿಯಲ್ಲಿ ತರುತ್ತದೆ. ಎಲ್ಲಿಯವರೆಗೆ ಸಾಧ್ಯವೋ ಅನ್ಯ ಕಾರ್ಯಗಳನ್ನು ಸಮಾಪ್ತಿ ಮಾಡಿಕೊಂಡು
ಸಭೆಯ ಸಮಯದಲ್ಲಿ ಎಲ್ಲಾ ಬ್ರಾಹ್ಮಣರು ವಾಯುಮಂಡಲವನ್ನಾಗಿ ಮಾಡುವ ಸಹಯೋಗವನ್ನು ಕೊಡಲೇಬೇಕಾಗಿದೆ.
ಒಂದುವೇಳೆ ಯಾರದಾದರೂ ಅಂತಹ ಡ್ಯೂಟಿಯಿದೆಯೆಂದರೆ ಅವರು ಮುಂದೆ ಕುಳಿತುಕೊಳ್ಳಬಾರದು. ಮುಂದೆ ಹಲ್ಚಲ್
ಆಗಬಾರದು. ಉದಾ: ಮೂರು ಗಂಟೆಗಳ ಭಟ್ಟಿಯಿದೆ ಎಂದು ತಿಳಿದುಕೊಳ್ಳಿರಿ, ಆಗ ಭಾಷಣವು ಇಷ್ಟವಿದೆ ಎಂದು
ಹೇಳುವುದಿಲ್ಲ. ಆದರೆ ಹೇಳುತ್ತಾರೆ - ನಮಗೆ ಒಳ್ಳೆಯ ಅನುಭವವಾಯಿತು. ಭಾಷಣದ ಜೊತೆಗೆ ಅನುಭವವಂತು
ಆಗುತ್ತದೆಯಲ್ಲವೆ. ಯಾರೇ ಬ್ರಾಹ್ಮಣರು ಬರುತ್ತಾರೆಂದರೆ, ಅವರು ಹೀಗೆ ತಿಳಿದುಕೊಂಡು ಬರಲಿ - ನಾವು
ಭಟ್ಟಿಯಲ್ಲಿ ಬರಬೇಕು. ಸಮ್ಮೇಳನವನ್ನು ನೋಡುವುದಕ್ಕೆ ಅಲ್ಲ, ಆದರೆ ಸಹಯೋಗಿಯಾಗಿ ಬರಬೇಕು ಎಂದು
ತಿಳಿದುಕೊಳ್ಳಬೇಕು. ಅಂದಾಗ ಇದೇ ಪ್ರಕಾರದ ವಾಯುಮಂಡಲವು ಹೀಗೆ ಶಕ್ತಿಶಾಲಿಯನ್ನಾಗಿ ಮಾಡಿರಿ,
ಅದರಲ್ಲಿ ಯಾವುದೇ ರೀತಿಯಲ್ಲಿ ಹಲ್ಚಲ್ ಮಾಡುವ ಆತ್ಮರು ಸ್ವಲ್ಪ ಸಮಯಕ್ಕಾದರೂ ಶಾಂತಿ ಮತ್ತು
ಶಕ್ತಿಯ ಅನುಭೂತಿಯನ್ನು ಮಾಡಿ ಹೋಗಲಿ. ಸಮ್ಮೇಳನವು ಹೀಗೆನಿಸಲಿ - ಇಲ್ಲಿರುವುದು ಮೂರು ಸಾವಿರ
ಅಲ್ಲ ಆದರೆ ಫರಿಶ್ತೆಗಳ ಸಭೆಯಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಸಮಯದಲ್ಲಿ ಭಲೆ ತಮಾಷೆ ಮಾಡುವುದು,
ನಗಿಸುವುದು ಮಾಡಿರಿ ಆದರೆ ಸಮ್ಮೇಳನದ ಸಮಯದಲ್ಲಿ ಶಕ್ತಿಶಾಲಿ ವಾತಾವರಣವಿರಲಿ. ಆಗ ಬೇರೆಯವರು
ಬರುವವರೂ ಸಹ ಅದೇ ರೀತಿಯಿಂದ ಮಾತನಾಡುವರು. ವಾಯುಮಂಡಲವು ಹೇಗಿರುತ್ತದೆಯೋ ಹಾಗೆಯೇ ಅನ್ಯರು
ಮಾತನಾಡುವವರೂ ಸಹ ಅಂತಹದ್ದೇ ವಾಯುಮಂಡಲದಲ್ಲಿ ಬಂದು ಬಿಡುತ್ತಾರೆ. ಸ್ವಲ್ಪ ಸಮಯದಲ್ಲಿ ಬಹಳ
ಖಜಾನೆಯನ್ನು ಕೊಡುವ ಕಾರ್ಯಕ್ರಮವನ್ನು ಮಾಡಿಕೊಳ್ಳಿರಿ. ಶಾರ್ಟ್ ಮತ್ತು ಸ್ವೀಟ್. ಒಂದುವೇಳೆ ತಾವು
ಬ್ರಾಹ್ಮಣರು ನಿಧಾನವಾಗಿ ಮಾತನಾಡುತ್ತೀರೆಂದರೆ ಹೊರಗಡೆಯಿಂದ ಬರುವವರೂ ಸಹ ನಿಧಾನವಾಗಿ
ಮಾತನಾಡುತ್ತಾರೆ. ಒಳ್ಳೆಯದು - ಈಗ ಏನು ಮಾಡುವಿರಿ? ತಮ್ಮನ್ನು ವಿಶೇಷ ನಕ್ಷತ್ರವೆಂದು ಪ್ರತ್ಯಕ್ಷ
ಮಾಡುವಿರಲ್ಲವೆ. ಅಂದಮೇಲೆ ಈ ಗೋಲ್ಡನ್ ಜುಬಿಲಿಯ ವರ್ಷದಲ್ಲಿ ವಿಶೇಷವಾಗಿ ತಮ್ಮನ್ನು ಸಂಪನ್ನ ಮತ್ತು
ಸಂಪೂರ್ಣರನ್ನಾಗಿ ಮಾಡಿಕೊಳ್ಳುವ ವರ್ಷವನ್ನಾಗಿ ಆಚರಿಸಿರಿ. ಹಲ್ಚಲ್ನಲ್ಲಿ ಬರಬೇಡಿ, ಹಲ್ಚಲ್ನಲ್ಲಿ
ತರಬೇಡಿ. ಹಲ್ಚಲ್ ಎಬ್ಬಿಸುವುದಂತು ಪ್ರಕೃತಿಯದೇ ಬಹಳಷ್ಟಾಯಿತು. ಈ ಪ್ರಕೃತಿಯು ತನ್ನ ಕಾರ್ಯವನ್ನು
ಮಾಡುತ್ತಿದೆ. ತಾವು ತಮ್ಮ ಕಾರ್ಯವನ್ನು ಮಾಡಿರಿ. ಒಳ್ಳೆಯದು!
ಸದಾ ಹೋಲಿ ನಕ್ಷತ್ರಗಳಾಗಿ
ವಿಶ್ವವನ್ನು ಸುಖ-ಶಾಂತಿಮಯವನ್ನಾಗಿ ಮಾಡುವಂತಹ, ಮಾಸ್ಟರ್ ಪಾರಸನಾಥರಾಗಿ ಪಾರಸ ಪ್ರಪಂಚವನ್ನಾಗಿ
ಮಾಡುವಂತಹ, ಸರ್ವರನ್ನು ಪಾರಸವನ್ನಾಗಿ ಮಾಡುವಂತಹ, ಸದಾ ಅನುಭವಗಳ ಸಾಗರದ ತಳದಲ್ಲಿ ಅನುಭವಗಳ
ರತ್ನಗಳನ್ನು ಸ್ವಯಂ ಜಮಾ ಮಾಡಿಕೊಳ್ಳುವಂತಹ, ಸರ್ಚ್ಲೈಟ್ ಆಗಿ ಅಜ್ಞಾನದ ಪರದೆಯನ್ನು ದೂರ
ಮಾಡುವಂತಹ - ಹೀಗೆ ತಂದೆಯನ್ನು ಪ್ರತ್ಯಕ್ಷಗೊಳಿಸುವ ವಿಶೇಷ ನಕ್ಷತ್ರಗಳಿಗೆ ಬಾಪ್ದಾದಾರವರ
ನೆನಪು-ಪ್ರೀತಿ ಹಾಗೂ ನಮಸ್ತೆ.
ನಿಮಿತ್ತ (ಟೀಚರ್ಸ್)
ಶಿಕ್ಷಕಿಯರೊಂದಿಗೆ:-
ಹೊಸ ಪ್ರಪಂಚವನ್ನಾಗಿ
ಮಾಡುವ ಕಾಂಟ್ರಾಕ್ಟ್ ನ್ನು ತೆಗೆದುಕೊಂಡಿದ್ದೀರಲ್ಲವೆ! ಅಂದಮೇಲೆ ಸದಾ ಹೊಸ ಪ್ರಪಂಚವನ್ನು ತಯಾರು
ಮಾಡುವುದಕ್ಕಾಗಿ ಹೊಸ ಉಮ್ಮಂಗ, ಹೊಸ ಉತ್ಸಾಹವು ಸದಾ ಇರುತ್ತದೆ - ವಿಶೇಷವಾದ ಅವಕಾಶದಲ್ಲಿ ಉಮ್ಮಂಗ
ಬರುತ್ತದೆಯೇ? ಕೆಲಕೆಲವೊಮ್ಮೆ ಉಮ್ಮಂಗ-ಉತ್ಸಾಹದಿಂದ ಹೊಸ ಪ್ರಪಂಚವು ಸ್ಥಾಪನೆಯಾಗುವುದಿಲ್ಲ. ಸದಾ
ಉಮ್ಮಂಗ-ಉತ್ಸಾಹವಿರುವವರೇ ಹೊಸ ಪ್ರಪಂಚವನ್ನು ತಯಾರಿಮಾಡಲು ನಿಮಿತ್ತರಾಗುತ್ತೀರಿ. ಹೊಸ ಪ್ರಪಂಚವು
ಎಷ್ಟು ಸಮೀಪಕ್ಕೆ ಬರುತ್ತದೆಯೋ ಅಷ್ಟೇ ಹೊಸ ಪ್ರಪಂಚದ ವಿಶೇಷ ವಸ್ತುಗಳ ವಿಸ್ತಾರವಾಗುತ್ತಿರುತ್ತದೆ.
ಹೊಸ ಪ್ರಪಂಚದಲ್ಲಿ ಬರುವವರೂ ಸಹ ತಾವಾಗಿದ್ದೀರಿ, ಅಂದಮೇಲೆ ತಯಾರಿ ಮಾಡುವವರೂ ತಾವಾಗಿದ್ದೀರಿ.
ಹಾಗಾದರೆ ಮಾಡುವುದರಲ್ಲಿ ಶಕ್ತಿಗಳೂ ಉಪಯೋಗವಾಗುತ್ತದೆ, ಸಮಯವೂ ಹಿಡಿಸುತ್ತದೆ ಆದರೆ ಯಾರು
ಶಕ್ತಿಶಾಲಿ ಆತ್ಮರಿದ್ದಾರೆ ಅವರು ಸದಾ ವಿಘ್ನಗಳನ್ನು ಸಮಾಪ್ತಿ ಮಾಡಿ ಮುಂದುವರೆಯುತ್ತಿರುತ್ತಾರೆ.
ಹಾಗಾದರೆ ಇಂತಹ ಹೊಸ ಪ್ರಪಂಚದ ಫೌಂಡೇಷನ್ ಆಗಿದ್ದೀರಿ. ಒಂದುವೇಳೆ ಫೌಂಡೇಷನ್ ಕಚ್ಚಾ ಆಗಿದ್ದರೆ
ಬಿಲ್ಡಿಂಗ್ನ ಸ್ಥಿತಿಯೇನಾಗುತ್ತದೆ! ಆದ್ದರಿಂದ ಹೊಸ ಪ್ರಪಂಚವನ್ನು ತಯಾರಿ ಮಾಡುವ ಡ್ಯೂಟಿಯವರು
ಯಾರಿದ್ದಾರೆ, ಅವರು ಪರಿಶ್ರಮ ಪಟ್ಟು ಫೌಂಡೇಷನ್ನ್ನು ಪರಿಪಕ್ವ ಮಾಡಿಕೊಳ್ಳಬೇಕಾಗಿದೆ. ಈ ರೀತಿ
ಪರಿಪಕ್ವ ಮಾಡಿಕೊಳ್ಳಿರಿ, ಅದರಿಂದ 21 ಜನ್ಮಗಳವರೆಗೆ ಬಿಲ್ಡಿಂಗ್ ಸದಾ ನಡೆಯುತ್ತಿರಲಿ. ಅಂದಮೇಲೆ
ತಮ್ಮ 21 ಜನ್ಮಗಳ ಬಿಲ್ಡಿಂಗ್ ತಯಾರು ಮಾಡಿದ್ದೀರಲ್ಲವೆ! ಒಳ್ಳೆಯದು.
2. ತಂದೆಯ ಹೃದಯಸಿಂಹಾಸನ
ಅಧಿಕಾರಿ ಆತ್ಮರಾಗಿದ್ದೇವೆ - ಇಂತಹ ಅನುಭವ ಮಾಡುತ್ತೀರಾ? ಈ ಸಮಯದಲ್ಲಿ ಹೃದಯ ಸಿಂಹಾಸನ
ಅಧಿಕಾರಿಯಾಗಿದ್ದೀರಿ ನಂತರ ವಿಶ್ವ ರಾಜ್ಯದ ಸಿಂಹಾಸನಧಿಕಾರಿ. ಹೃದಯ ಸಿಂಹಾಸನ ಅಧಿಕಾರಿಗಳು ಅವರೇ
ಆಗುತ್ತಾರೆ, ಯಾರ ಹೃದಯದಲ್ಲಿ ಒಬ್ಬ ತಂದೆಯ ನೆನಪೇ ಸಮಾವೇಶವಾಗಿರುತ್ತದೆ. ಹೇಗೆ ತಂದೆಯ ಹೃದಯದಲ್ಲಿ
ಸದಾ ಮಕ್ಕಳು ಸಮಾವೇಶವಾಗಿದ್ದಾರೆ, ಹಾಗೆಯೇ ಮಕ್ಕಳ ಹೃದಯದಲ್ಲಿ ತಂದೆಯ ನೆನಪು ಸದಾ ಮತ್ತು
ಸ್ವತಹವಾಗಿರಲಿ. ತಂದೆಯಲ್ಲದೆ ಮತ್ತೇನಾದರೂ ಇದೆಯೇನು! ಹಾಗಾದರೆ ಸಿಂಹಾಸನಾಧಿಕಾರಿಯಾಗಿದ್ದೇವೆ
ಎನ್ನುವ ನಶೆ ಮತ್ತು ಖುಷಿಯಲ್ಲಿರಿ. ಒಳ್ಳೆಯದು.
ವಿದಾಯಿಯ ಸಮಯದಲ್ಲಿ (ಬೆಳಗ್ಗೆ
6 ಗಂಟೆ ಗುರುವಾರ):-
ನಾಲ್ಕೂ ಕಡೆಯಲ್ಲಿನ
ಸ್ನೇಹಿ ಸಹಯೋಗಿ ಮಕ್ಕಳ ಮೇಲೆ ಸದಾ ವೃಕ್ಷಪತಿಯ ಬೃಹಸ್ಪತಿ ದೆಶೆಯಂತು ಇದ್ದೇ ಇರುತ್ತದೆ. ಮತ್ತು
ಇದೇ ಬೃಹಸ್ಪತಿಯ ದೆಶೆಯಿಂದ ಶ್ರೇಷ್ಠರನ್ನಾಗಿ ಮಾಡುವ ಸೇವೆಯಲ್ಲಿ ಮುಂದುವರೆಯುತ್ತಿರುತ್ತೀರಿ.
ಸೇವೆ ಮತ್ತು ನೆನಪು ಎರಡರಲ್ಲಿ ವಿಶೇಷವಾಗಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೀರಿ
ಮತ್ತು ಮಾಡುತ್ತಿರುತ್ತೀರಿ. ಮಕ್ಕಳಿಗಾಗಿ ಸಂಗಮಯುಗವೇ ಬೃಹಸ್ಪತಿಯ ವೇಳೆಯಾಗಿದೆ. ಸಂಗಮಯುಗದ
ಪ್ರತೀಗಳಿಗೆಯು ಬೃಹಸ್ಪತಿ ಅರ್ಥಾತ್ ಭಾಗ್ಯಶಾಲಿಯಾಗಿದೆ ಆದ್ದರಿಂದ ಭಾಗ್ಯಶಾಲಿಯಾಗಿದ್ದೀರಿ,
ಭಗವಂತನವರಾಗಿದ್ದೀರಿ, ಭಾಗ್ಯವನ್ನು ರೂಪಿಸುವವರಾಗಿದ್ದೀರಿ. ಭಾಗ್ಯವಂತ ಪ್ರಪಂಚದ
ಅಧಿಕಾರಿಯಾಗಿದ್ದೀರಿ. ಸದಾ ಅಂತಹ ಭಾಗ್ಯಶಾಲಿ ಮಕ್ಕಳಿಗೆ ನೆನಪು-ಪ್ರೀತಿ ಹಾಗೂ ಸುಪ್ರಭಾತ!
ವರದಾನ:
ಈಶ್ವರೀಯ ಮರ್ಯಾದೆಗಳ ಆಧಾರದ ಮೇಲೆ ವಿಶ್ವದ ಮುಂದೆ ಉದಾಹರಣೆಯಾಗುವ ಸಹಜಯೋಗಿ ಭವ.
ವಿಶ್ವದ ಮುಂದೆ
ಉದಾಹರಣೆಯಾಗುವುದಕ್ಕಾಗಿ ಅಮೃತವೇಳೆಯಿಂದ ರಾತ್ರಿಯವರೆಗೆ, ಈಶ್ವರೀಯ ಮರ್ಯಾದೆಗಳೇನಿದೆಯೋ
ಅದರನುಸಾರವಾಗಿ ನಡೆಯುತ್ತಿರಿ. ವಿಶೇಷವಾಗಿ ಅಮೃತವೇಳೆಯ ಮಹತ್ವವನ್ನು ತಿಳಿದುಕೊಂಡು, ಆ ಸಮಯವನ್ನು
ಶಕ್ತಿಶಾಲಿ ಸ್ಥಿತಿಯನ್ನಾಗಿ ಮಾಡಿಕೊಳ್ಳುತ್ತೀರೆಂದರೆ ಇಡೀ ದಿನದ ಜೀವನವು ಮಹಾನ್ ಆಗಿ ಬಿಡುತ್ತದೆ.
ಯಾವಾಗ ಅಮೃತವೇಳೆಯಲ್ಲಿ ವಿಶೇಷವಾಗಿ ತಂದೆಯಿಂದ ಶಕ್ತಿಯನ್ನು ತುಂಬಿಕೊಂಡುತ್ತೀರಿ, ಆಗ ಶಕ್ತಿ
ಸ್ವರೂಪರಾಗಿ ನಡೆಯುವುದರಿಂದ ಯಾವುದೇ ಕಾರ್ಯದಲ್ಲಿ ಕಷ್ಟದ ಅನುಭವವಾಗುವುದಿಲ್ಲ ಮತ್ತು
ಮರ್ಯಾದಾಪೂರ್ವಕ ಜೀವನವನ್ನು ಕಳೆಯುವುದರಿಂದ(ಮಾಡುವುದರಿಂದ) ಸಹಜಯೋಗಿಯ ಸ್ಥಿತಿಯೂ ಸಹ ಸ್ವತಹವಾಗಿ
ಆಗಿ ಬಿಡುತ್ತದೆ. ನಂತರ ವಿಶ್ವವು ತಾವುಗಳ ಜೀವನವನ್ನು ನೋಡಿ ತನ್ನ ಜೀವನವನ್ನು ಮಾಡಿಕೊಳ್ಳುತ್ತಾರೆ.
ಸ್ಲೋಗನ್:
ತಮ್ಮ ಚಲನೆ
ಮತ್ತು ಚಹರೆಯಿಂದ ಪವಿತ್ರತೆಯ ಶ್ರೇಷ್ಠತೆಯ ಅನುಭವವನ್ನು ಮಾಡಿಸಿರಿ.
10-05-2020 ಧರಣಿಯ "ಪವಿತ್ರ"
ನಕ್ಷತ್ರ ಮುರಳಿ ಪ್ರಶ್ನೆಗಳು :
1. ಯಾವುದರಿಂದ
ಬುದ್ಧಿಯನ್ನು ಭರಪೂರ್ ಮಾಡಿಕೊಳ್ಳಬೇಕು?
2. ಪಾರಸನಾಥನ ಕರ್ತವ್ಯ
ಏನಾಗಿದೆ?
3. ಗೋಲ್ಡನ ಜುಬಲಿಯಲ್ಲಿ
ಭಾಷಣ ಮಾಡುವುದಕ್ಕೆ ಎಂತಹ ವೇದಿಕೆಯನ್ನು ತಯಾರಿಸಲು ಬಾಪ್ದಾದಾರವರು ತಿಳಿಸುತ್ತಿದ್ದಾರೆ?
4. ನಾವು ಮಕ್ಕಳು ಯಾವ
ರಿಸರ್ಚನ್ನು ಮಾಡಬೇಕು?
5. ಪ್ರತಿಯೊಂದು
ನಕ್ಷತ್ರದ ವಿಶೇಷತೆ ____________ ಕೊಡುವಂತಹದಾಗಿದೆ.
ಅ. ವಿಶ್ವ ಪರಿವರ್ತನೆ ಮಾಡುವ ಪ್ರಕಾಶ
ಆ. ಎಲ್ಲರಿಗೂ ಸುಖ -ಶಾಂತಿಯನ್ನು
ಇ. ಸರ್ವ ಆತ್ಮರಿಗೆ ಜ್ಞಾನದ ಪ್ರಕಾಶ
6. ಸದಾ ಉಮಂಗ ಉತ್ಸಾಹದಲ್ಲಿರುವವರು ಯಾವುದಕ್ಕೆ ನಿಮಿತ್ತರಾಗುತ್ತಾರೆ?
ಅ. ಹೊಸ ಯುಗವನ್ನು ತರಲು
ಆ. ಹೊಸ ವರ್ಷವನ್ನು ತರಲು
ಇ. ಹೊಸ ಪ್ರಪಂಚವನ್ನು ತಯಾರಿ ಮಾಡಲು
7. ಪ್ರತಿ ಗುಣದ ಆಳದಲ್ಲಿ
ಹೋಗುವುದರಿಂದ ಅದರ ___________ ಅನುಭವ ಮಾಡಬಹುದು.
ಅ. ಮಹಾನತೆ ಆ. ವಿಶೇಷತೆ ಇ. ಶ್ರೇಷ್ಠತೆ
8. ಗೋಲ್ಡನ ಜುಬಲಿ
ಯಾವಾಗ ಆಚರಿಸಲಾಗುವುದು?
ಅ. ಫರಿಶ್ತಾ ಆದಾಗ ಆ. ಡಬಲ್ ಲೈಟ್ ಆದಾಗ ಇ. ಸರ್ಚ್ ಲೈಟ್ ಆದಾಗ
9. ವಾಯುಮಂಡಲವನ್ನು
ಶಕ್ತಿಶಾಲಿಯನ್ನಾಗಿ ಮಾಡಲು ಯಾವ ಭಾಷಣ ಮಾಡಬೇಕು?
ಅ. ಮುಖದ ಭಾಷಣ ಆ. ಸಂಕಲ್ಪಗಳ ಭಾಷಣ ಇ. ಶಾಂತಿಯ ಭಾಷಣ
10. ಜೋಡಿಸಿ ಬರೆಯಿರಿ
1) ಹೃದಯ ಸಿಂಹಾಸನ ಸದಾ ನಿರ್ವಿಘ್ನರಾಗಿ ಮುಂದೆ ಹೋಗುವವರು
2) ಶಕ್ತಿಶಾಲಿ ಆತ್ಮ ಒಬ್ಬ ತಂದೆಯ ನೆನಪಿನಲ್ಲಿ ಸಮಾವೇಶ
3) ಧರಣಿಯ ನಕ್ಷತ್ರಗಳು ವಿಶ್ವಕ್ಕೆ ಸುಖಶಾಂತಿಯನ್ನು ಕೊಡುವವರು
4) ಪುರುಷೋತ್ತಮ ಆತ್ಮಗಳು ಸರ್ವ ಆತ್ಮಗಳ ಸರ್ವ ಆಸೆಗಳನ್ನು ಪೂರ್ಣ ಮಾಡುವವರು.