01.05.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಅನೇಕ
ದೇಹಧಾರಿಗಳೊಂದಿಗಿನ ಪ್ರೀತಿಯನ್ನು ತೆಗೆದು ಒಬ್ಬ ವಿದೇಹಿ ತಂದೆಯನ್ನು ನೆನಪು ಮಾಡಿ, ಆಗ ನಿಮ್ಮ
ಎಲ್ಲಾ ಅಂಗಗಳು ಶೀತಲವಾಗಿ ಬಿಡುತ್ತವೆ”
ಪ್ರಶ್ನೆ:
ಯಾರು ದೈವೀ
ಕುಲದ ಆತ್ಮಗಳಾಗಿದ್ದಾರೆಯೋ ಅವರ ಚಿಹ್ನೆಗಳೇನು?
ಉತ್ತರ:
1. ದೈವೀ ಕುಲದ ಆತ್ಮಗಳಿಗೆ ಈ ಹಳೆಯ ಪ್ರಪಂಚದಿಂದ ಸಹಜವಾಗಿಯೇ ವೈರಾಗ್ಯವಿರುವುದು. 2. ಅವರ
ಬುದ್ಧಿಯು ಬೇಹದ್ದಿನಲ್ಲಿರುವುದು. ಶಿವಾಲಯದಲ್ಲಿ ಹೋಗುವುದಕ್ಕಾಗಿ ಅವರು ಪಾವನ ಹೂಗಳಾಗುವ
ಪುರುಷಾರ್ಥ ಮಾಡುತ್ತಾರೆ. 3. ಯಾವುದೆ ಆಸುರೀ ನಡವಳಿಕೆಯಲ್ಲಿ ನಡೆಯುವುದಿಲ್ಲ. 4. ತಮ್ಮ ಲೆಕ್ಕ
ಪತ್ರವನ್ನಿಟ್ಟುಕೊಳ್ಳುತ್ತಾರೆ. ಯಾವುದೇ ಆಸುರಿ ಕರ್ಮವು ಆಗಲಿಲ್ಲವೆ? ತಂದೆಗೆ ಸತ್ಯವನ್ನೇ
ತಿಳಿಸುತ್ತಾರೆ, ಏನನ್ನೂ ಮುಚ್ಚಿಡುವುದಿಲ್ಲ.
ಗೀತೆ:
ಅವರೆಂದೂ
ನಮ್ಮಿಂದ ದೂರವಾಗುವುದಿಲ್ಲ............
ಓಂ ಶಾಂತಿ.
ಈಗ ಇವು ಬೇಹದ್ದಿನ ಮಾತುಗಳಾಗಿವೆ. ಹದ್ದಿನ ಮಾತುಗಳೆಲ್ಲವೂ ಹೊರಟು ಹೋಗುತ್ತವೆ. ಪ್ರಪಂಚದಲ್ಲಂತೂ
ಅನೇಕರನ್ನು ನೆನಪು ಮಾಡಲಾಗುತ್ತದೆ ಮತ್ತು ಅನೇಕ ದೇಹಧಾರಿಗಳ ಜೊತೆ ಪ್ರೀತಿಯಿದೆ. ಒಬ್ಬ ತಂದೆಯೇ
ವಿದೇಹಿಯಾಗಿದ್ದಾರೆ. ಅವರಿಗೆ ಪರಮಪಿತ ಪರಮಾತ್ಮ ಶಿವನೆಂದು ಕರೆಯಲಾಗುತ್ತದೆ. ನೀವೀಗ ಅವರ
ಜೊತೆಯಲ್ಲಿಯೇ ಬುದ್ಧಿಯೋಗವನ್ನಿಡಬೇಕಾಗಿದೆ. ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು.
ಬ್ರಾಹ್ಮಣರಿಗೆ ತಿನ್ನಿಸುವುದೆಲ್ಲವೂ ಕಲಿಯುಗದ ಸಂಪ್ರದಾಯಗಳಾಗಿವೆ. ಅಲ್ಲಿನ ಸಂಪ್ರದಾಯ ಮತ್ತು
ಇಲ್ಲಿನ ಸಂಪ್ರದಾಯವು ಸಂಪೂರ್ಣ ಭಿನ್ನವಾಗಿದೆ. ಇಲ್ಲಿ ಯಾವುದೇ ದೇಹಧಾರಿಯನ್ನು ನೆನಪು
ಮಾಡುವಂತಿಲ್ಲ. ಎಲ್ಲಿಯವರೆಗೆ ಆ ಸ್ಥಿತಿಯು ಬರುವುದೋ ಅಲ್ಲಿಯವರೆಗೆ ಪುರುಷಾರ್ಥವು
ನಡೆಯುತ್ತಿರುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಎಷ್ಟು ಸಾಧ್ಯವೋ ಅಷ್ಟು ಹಳೆಯ
ಪ್ರಪಂಚದಲ್ಲಿ ಯಾರೆಲ್ಲರೂ ಇದ್ದಾರೆಯೋ ಎಲ್ಲರನ್ನೂ ಮರೆಯಬೇಕಾಗಿದೆ. ಇಡೀ ದಿನ ಬುದ್ಧಿಯಲ್ಲಿ ಇದೇ
ನಡೆಯುತ್ತಿರಲಿ - ಯಾರಿಗೆ ಹೇಗೆ ತಿಳಿಸುವುದು? ಎಲ್ಲರಿಗೂ ತಿಳಿಸಬೇಕಾಗಿದೆ - ಬನ್ನಿ, ವಿಶ್ವದ
ಭೂತ, ಭವಿಷ್ಯತ್, ವರ್ತಮಾನವನ್ನು ತಿಳಿದುಕೊಳ್ಳಿ, ಇದನ್ನು ಯಾರೂ ತಿಳಿದುಕೊಂಡಿಲ್ಲ. ಭೂತ
ಕಾಲವೆಂದರೆ ಯಾವಾಗಿನಿಂದ ಆರಂಭವಾಯಿತು, ವರ್ತಮಾನವೆಂದರೆ ಈಗ ಏನಾಗುತ್ತಿದೆ. ಸತ್ಯಯುಗದಿಂದ
ಆರಂಭವಾಗಿದೆ ಅಂದಮೇಲೆ ಸತ್ಯಯುಗದಿಂದ ಹಿಡಿದು ಇಲ್ಲಿಯವರೆಗೆ ಮತ್ತು ಭವಿಷ್ಯವು ಏನಾಗಲಿದೆ
ಎಂಬುದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಆದ್ದರಿಂದ
ಚಿತ್ರಗಳನ್ನು ರಚಿಸುತ್ತೀರಿ, ಇದು ಬಹಳ ದೊಡ್ಡ ಬೇಹದ್ದಿನ ನಾಟಕವಾಗಿದೆ. ಅವರಂತೂ ಸುಳ್ಳು,
ಹದ್ದಿನ ನಾಟಕಗಳನ್ನು ಬಹಳ ರಚಿಸುತ್ತಾರೆ, ಕಥೆಗಳನ್ನು ರಚಿಸುವವರೇ ಬೇರೆಯವರಿರುತ್ತಾರೆ ಮತ್ತು
ನಾಟಕದ ದೃಶ್ಯಗಳನ್ನು ರಚಿಸುವವರು ಬೇರೆಯವರಿರುತ್ತಾರೆ. ಇದೆಲ್ಲಾ ರಹಸ್ಯವು ನಿಮ್ಮ ಬುದ್ಧಿಯಲ್ಲಿದೆ.
ಈಗ ಏನೆಲ್ಲವನ್ನೂ ನೋಡುತ್ತೀರಿ ಅದೆಲ್ಲವೂ ಉಳಿಯುವುದಿಲ್ಲ, ವಿನಾಶವಾಗಿ ಬಿಡುವುದು. ಆದ್ದರಿಂದ
ನೀವು ಸತ್ಯಯುಗೀ ಹೊಸ ಪ್ರಪಂಚದ ದೃಶ್ಯಗಳನ್ನು ಬಹಳ ಚೆನ್ನಾಗಿ ತೋರಿಸಬೇಕಾಗಿದೆ. ಹೇಗೆ
ಅಜ್ಮೀರಿನಲ್ಲಿ ದ್ವಾರಿಕಾ ಇದೆ. ಅಂದಾಗ ಅದರಲ್ಲಿಯೂ ಆ ದೃಶ್ಯಗಳನ್ನು ತೆಗೆದುಕೊಂಡು ಹೊಸ
ಪ್ರಪಂಚವನ್ನು ಬೇರೆಯಾಗಿ ಮಾಡಿ ತೋರಿಸಿ, ಈ ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳಲಿದೆ, ಇದರ ನಕ್ಷೆಯು
ಇದೆಯಲ್ಲವೆ. ಈ ಹೊಸ ಪ್ರಪಂಚವು ಈಗ ಬರುತ್ತಲಿದೆ. ಇಂತಹ ವಿಚಾರಗಳನ್ನು ಮಾಡಿ ಬಹಳ ಚೆನ್ನಾಗಿ
ಮಾಡಬೇಕು. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ. ಈ ಸಮಯದಲ್ಲಿ ಮನುಷ್ಯರದು ಕಲ್ಲು ಬುದ್ಧಿಯಾಗಿದೆ.
ನೀವು ತಿಳಿಸುತ್ತೀರಿ ಆದರೂ ಸಹ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಹೇಗೆ ನಾಟಕಗಾರರು ಸುಂದರ
ದೃಶ್ಯಗಳನ್ನು ಮಾಡಿಸುತ್ತಾರೆ ಹಾಗೆಯೇ ಯಾರಿಂದಲಾದರೂ ಸಹಯೋಗವನ್ನು ತೆಗೆದುಕೊಂಡು ಸ್ವರ್ಗದ
ದೃಶ್ಯಗಳನ್ನು ಬಹಳ ಚೆನ್ನಾಗಿ ಮಾಡಿಸಬೇಕು. ಇದಕ್ಕೆ ಅವರು ಬಹಳ ಒಳ್ಳೆಯ ಉಪಾಯಗಳನ್ನು
ತಿಳಿಸುತ್ತಾರೆ. ಅದನ್ನು ನೋಡಿದ ಕೂಡಲೇ ಮನುಷ್ಯರು ಬಂದು ತಿಳಿದುಕೊಳ್ಳುವ ಹಾಗೆ ಬಹಳ ಚೆನ್ನಾಗಿ
ಮಾಡಿಸಬೇಕು. ಅವಶ್ಯವಾಗಿ ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು, ನೀವು ಮಕ್ಕಳಲ್ಲಿಯೂ ಕೆಲವರಿಗೆ
ಧಾರಣೆಯಾಗುತ್ತದೆ. ದೇಹಾಭಿಮಾನದ ಬುದ್ಧಿಯನ್ನು ಛೀ-ಛೀ ಎನ್ನಲಾಗುತ್ತದೆ. ದೇಹೀ-ಅಭಿಮಾನಿ ಮಕ್ಕಳಿಗೆ
ಹೂಗಳೆಂದು ಹೇಳಲಾಗುತ್ತದೆ. ಈಗ ನೀವು ಹೂಗಳಾಗುತ್ತೀರಿ, ದೇಹಾಭಿಮಾನದಲ್ಲಿದ್ದರೆ ಮುಳ್ಳಿಗೆ
ಮುಳ್ಳಾಗಿಯೇ ಉಳಿಯುತ್ತಾರೆ. ನೀವು ಮಕ್ಕಳಿಗಂತೂ ಈ ಹಳೆಯ ಪ್ರಪಂಚದಿಂದ ವೈರಾಗ್ಯವಿದೆ. ಈ
ವೇಶ್ಯಾಲಯದಿಂದ ಬಹಳ ತಿರಸ್ಕಾರವಿದೆ. ಈಗ ನಾವು ಶಿವಾಲಯದಲ್ಲಿ ಹೋಗಲು ಹೂಗಳಾಗುತ್ತಿದ್ದೇವೆ.
ಆಗುತ್ತಾ-ಆಗುತ್ತಾ ಒಂದುವೇಳೆ ಮತ್ತೆ ಇಂತಹ ಕೆಟ್ಟ ಚಲನೆಯಲ್ಲಿ ನಡೆಯುತ್ತೀರೆಂದರೆ ಈಗ ಇವರಲ್ಲಿ
ಭೂತ ಪ್ರವೇಶತೆಯಾಗಿದೆಯೆಂದು ತಿಳಿಯಲಾಗುತ್ತದೆ. ಒಂದೇ ಮನೆಯಲ್ಲಿ ಪತಿಯು ಹಂಸವಾಗುತ್ತಿದ್ದರೆ,
ಪತ್ನಿಯು ಜ್ಞಾನವನ್ನು ತಿಳಿದುಕೊಳ್ಳಲಿಲ್ಲವೆಂದರೆ ಕಷ್ಟವಾಗುತ್ತದೆ. ಸಹನೆ ಮಾಡಬೇಕಾಗಿದೆ. ಇವರ
ಅದೃಷ್ಟದಲ್ಲಿಲ್ಲ ಎಂದು ತಿಳಿಯಲಾಗುತ್ತದೆ. ಎಲ್ಲರೂ ದೈವೀ ಕುಲದವರಾಗುವವರಲ್ಲ, ಯಾರು
ಆಗುವವರಿದ್ದಾರೆಯೋ ಅವರೇ ಆಗುತ್ತಾರೆ. ಅನೇಕರ ಕೆಟ್ಟ ಚಲನೆಯ ದೂರುಗಳು ತಂದೆಯ ಬಳಿ ಬರುತ್ತವೆ.
ಆದ್ದರಿಂದ ತಂದೆಯು ಪ್ರತಿನಿತ್ಯವೂ ಹೇಳುತ್ತಿರುತ್ತಾರೆ - ಮಕ್ಕಳೇ, ತಮ್ಮ ದಿನಚರಿಯನ್ನು
ರಾತ್ರಿಯಲ್ಲಿ ನೋಡಿಕೊಳ್ಳಿ, ಇಂದು ನಾನು ಯಾವುದೇ ಆಸುರೀ ಕರ್ಮವನ್ನಂತೂ ಮಾಡಲಿಲ್ಲವೆ? ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಏನೆಲ್ಲಾ ತಪ್ಪುಗಳನ್ನು ಮಾಡಿದ್ದೀರೋ ಅದನ್ನು ಸತ್ಯವಾಗಿ ತಿಳಿಸಿ,
ಯಾರಾದರೂ ಕಠಿಣ ತಪ್ಪನ್ನು ಮಾಡುತ್ತಾರೆಂದರೆ ಅದನ್ನು ಮತ್ತೆ ವೈದ್ಯರಿಗೆ ತಿಳಿಸಲು
ಸಂಕೋಚವಾಗುತ್ತದೆ. ಏಕೆಂದರೆ ಮರ್ಯಾದೆಯು ಕಳೆಯುತ್ತದೆಯಲ್ಲವೆ. ತಿಳಿಸದೇ ಇರುವುದರಿಂದ
ನಷ್ಟವುಂಟಾಗಿ ಬಿಡುತ್ತದೆ. ಮಾಯೆಯು ಈ ರೀತಿ ಪೆಟ್ಟನ್ನು ಕೊಡುತ್ತದೆ, ಒಂದೇ ಸಾರಿ ಸತ್ಯ ನಾಶ ಮಾಡಿ
ಬಿಡುತ್ತದೆ. ಮಾಯೆಯು ಬಹಳ ಪ್ರಬಲವಾಗಿದೆ. ಪಂಚ ವಿಕಾರಗಳ ಮೇಲೆ ಜಯ ಗಳಿಸಲಿಲ್ಲವೆಂದರೆ ತಂದೆಯೂ
ತಾನೆ ಏನು ಮಾಡುತ್ತಾರೆ?
ತಂದೆಯು ತಿಳಿಸುತ್ತಾರೆ - ನಾನು ದಯಾಹೃದಯಿಯಾಗಿದ್ದೇನೆ, ಮಹಾಕಾಲನೂ ಆಗಿದ್ದೇನೆ. ಪತಿತ-ಪಾವನ ಬಂದು
ಪಾವನರನ್ನಾಗಿ ಮಾಡಿ ಎಂದು ನನ್ನನ್ನೇ ಕರೆಯುತ್ತಾರೆ. ನನಗೆ ಎರಡು ಹೆಸರುಗಳಿವೆಯಲ್ಲವೆ. ಹೇಗೆ
ದಯಾಹೃದಯಿಯಾಗಿದ್ದೇನೆ ಮತ್ತು ಮಹಾಕಾಲನಾಗಿದ್ದೇನೆಂಬ ಪಾತ್ರವನ್ನು ಈಗ ಅಭಿನಯಿಸುತ್ತಿದ್ದೇನೆ.
ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತೇನೆ. ಆದ್ದರಿಂದ ನಿಮ್ಮ ಬುದ್ಧಿಯಲ್ಲಿ ಆ ಖುಷಿಯಿದೆ.
ನೀವೆಲ್ಲರೂ ಪಾರ್ವತಿಯರಾಗಿದ್ದೀರಿ, ನೀವೀಗ ನನ್ನೊಬ್ಬನನ್ನೇ ನೆನಪು ಮಾಡಿರಿ ಅದರಿಂದ ನೀವು ಅಮರ
ಪುರಿಯಲ್ಲಿ ಹೋಗುವಿರಿ ಮತ್ತು ನಿಮ್ಮ ಪಾಪಗಳು ನಾಶವಾಗುತ್ತವೆ. ಆ ಸ್ಥೂಲ ಯಾತ್ರೆಗಳಿಂದ ನಿಮ್ಮ
ಪಾಪವು ನಾಶವಾಗುವುದಿಲ್ಲ. ಇವು ಭಕ್ತಿಮಾರ್ಗದ ಯಾತ್ರೆಗಳಾಗಿವೆ. ನಿಮ್ಮ ಖರ್ಚು ಹೇಗೆ ನಡೆಯುತ್ತದೆ
ಎಂದು ಕೆಲವರು ನೀವು ಮಕ್ಕಳನ್ನು ಪ್ರಶ್ನಿಸುತ್ತಾರೆ. ಆದರೆ ನಾವು ಈ ರೀತಿಯಾಗಿ ಪ್ರತ್ಯುತ್ತರವನ್ನು
ಕೊಟ್ಟೆವು ಎಂಬ ಸಮಾಚಾರವನ್ನು ಯಾರೂ ತಿಳಿಸುವುದಿಲ್ಲ. ಇಷ್ಟೆಲ್ಲಾ ಮಕ್ಕಳು ಬ್ರಹ್ಮನ ಸಂತಾನ
ಬ್ರಾಹ್ಮಣರಿದ್ದೇವೆಂದರೆ ನಾವೇ ನಮಗಾಗಿ ಖರ್ಚು ಮಾಡುತ್ತೇವೆ ಅಲ್ಲವೆ. ರಾಜಧಾನಿಯೂ ಸಹ
ಶ್ರೀಮತದನುಸಾರ ನಾವು ನಮಗಾಗಿ ಸ್ಥಾಪನೆ ಮಾಡುತ್ತಿದ್ದೇವೆ. ನಾವೇ ರಾಜ್ಯವನ್ನು ಮಾಡುತ್ತೇವೆ.
ರಾಜಯೋಗವನ್ನು ನಾವೇ ಕಲಿಯುತ್ತೇವೆಂದ ಮೇಲೆ ಅದರ ಖರ್ಚನ್ನು ನಾವೇ ಮಾಡುತ್ತೇವೆ. ಶಿವ ತಂದೆಯಂತು
ಅವಿನಾಶಿ ಜ್ಞಾನ ರತ್ನಗಳ ದಾನ ಕೊಡುತ್ತಾರೆ, ಇದರಿಂದ ನಾವು ರಾಜರಿಗೂ ರಾಜರಾಗುತ್ತೇವೆ. ಯಾವ
ಮಕ್ಕಳು ಓದುವರೋ ಅವರೇ ಖರ್ಚು ಮಾಡುವವರಲ್ಲವೆ. ತಿಳಿಸಬೇಕು - ನಮ್ಮ ಖರ್ಚನ್ನು ನಾವೇ ಮಾಡುತ್ತೇವೆ,
ನಾವು ಯಾರಿಂದಲೂ ಭಿಕ್ಷೆ ಅಥವಾ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಇವರು ಈ ರೀತಿ
ಕೇಳುತ್ತಾರೆಂದು ಮಕ್ಕಳು ಬರೆಯುತ್ತೀರಿ. ಆದ್ದರಿಂದಲೇ ತಂದೆಯು ತಿಳಿಸಿದ್ದರು - ಇಡೀ ದಿನದಲ್ಲಿ
ಯಾವ-ಯಾವ ಸೇವೆ ಮಾಡುತ್ತೀರೋ ಅದನ್ನು ರಾತ್ರಿಯಲ್ಲಿ ತಂದೆಗೆ ಸತ್ಯವಾಗಿ ತಿಳಿಸಬೇಕು. ಅನೇಕರು
ಬರುತ್ತಾರೆ, ಅವರೆಲ್ಲರೂ ಪ್ರಜೆಗಳಾಗುತ್ತಾರೆ. ಆದರೆ ಶ್ರೇಷ್ಠ ಪದವಿಯನ್ನು ಪ್ರಾಪ್ತಿ
ಮಾಡಿಕೊಳ್ಳುವವರು ಬಹಳ ಕೆಲವರೇ ಇದ್ದಾರೆ. ಕೆಲವರೇ ರಾಜರಾಗುತ್ತಾರೆ. ಸಾಹುಕಾರರು ಕೆಲವರೇ
ಆಗುತ್ತಾರೆ. ಉಳಿದಂತೆ ಬಹಳಷ್ಟು ಮಂದಿ ಬಡವರಾಗುತ್ತಾರೆ. ಇಲ್ಲಿಯೂ ಸಹ ಹಾಗೆಯೇ, ಅಂದಮೇಲೆ ದೈವೀ
ಪ್ರಪಂಚದಲ್ಲಿಯೂ ಅದೇ ರೀತಿ ಇರುತ್ತದೆ. ರಾಜಧಾನಿಯು ಸ್ಥಾಪನೆಯಾಗುತ್ತದೆ, ಅದರಲ್ಲಿ ನಂಬರ್ವಾರ್
ಎಲ್ಲರೂ ಬೇಕು. ತಂದೆಯು ಬಂದು ರಾಜಯೋಗವನ್ನು ಕಲಿಸಿ ಆದಿ ಸನಾತನ ದೈವೀ ರಾಜಧಾನಿಯ ಸ್ಥಾಪನೆ
ಮಾಡಿಸುತ್ತಾರೆ. ದೈವೀ ಧರ್ಮದ ರಾಜಧಾನಿಯಿತ್ತು, ಈಗಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಪುನಃ
ಸ್ಥಾಪನೆ ಮಾಡುತ್ತೇನೆ ಅಂದಮೇಲೆ ಅನ್ಯರಿಗೆ ತಿಳಿಸಲು ಚಿತ್ರಗಳೂ ಸಹ ಅಷ್ಟು ಸುಂದರವಾಗಿರಬೇಕು.
ತಂದೆಯ ಮುರುಳಿಯನ್ನು ಹೇಳುತ್ತಾರೆ, ಮಾಡುತ್ತಾರೆ. ದಿನ-ಪ್ರತಿದಿನ ಕಳೆದಂತೆ ಅದರಲ್ಲಿ ನವೀನತೆ
ಬರುತ್ತಾ ಹೋಗುತ್ತದೆ. ನೀವು ತಮ್ಮ ಸ್ಥಿತಿಯನ್ನು ನೋಡಿಕೊಳ್ಳುತ್ತಾ ಇರಿ. ಅದರಲ್ಲಿ
ಬದಲಾವಣೆಯಾಗುತ್ತಾ ಹೋಗುತ್ತದೆ. ತಂದೆಯು ಬಂದು ಕೆಸರಿನಿಂದ ಹೊರ ತೆಗೆಯುತ್ತಾರೆ. ಯಾರೆಷ್ಟು ಹೊರ
ತೆಗೆಯುವ ಸೇವೆ ಮಾಡುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ನೀವು ಮಕ್ಕಳಂತೂ ಒಮ್ಮೆಲೆ
ಕ್ಷೀರ ಖಂಡವಾಗಿರಬೇಕು. ತಂದೆಯು ಇಲ್ಲಿ ಸತ್ಯಯುಗಕ್ಕಿಂತಲೂ ನಿಮ್ಮನ್ನು ಶ್ರೇಷ್ಠರನ್ನಾಗಿ
ಮಾಡುತ್ತಾರೆ. ಈಶ್ವರ ತಂದೆಯೇ ಓದಿಸುತ್ತಾರೆ ಅಂದಮೇಲೆ ಅವರಿಗೆ ತಮ್ಮ ವಿದ್ಯೆಯ ಶೌರ್ಯವನ್ನು
ತೋರಿಸಬೇಕು. ಆಗಲೇ ತಂದೆಯು ಬಲಿಹಾರಿಯಾಗುತ್ತಾರೆ. ಇದು ಹೃದಯದಲ್ಲಿ ಬರಬೇಕು - ಬಾಬಾ, ಕೇವಲ
ನಾವೀಗ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಕಾರ್ಯವನ್ನೇ ಮಾಡುತ್ತೇವೆ, ಈ ನೌಕರಿ ಇತ್ಯಾದಿಯನ್ನಂತೂ
ಮಾಡುವುದು ಮಾಡುತ್ತಲೇ ಇರುತ್ತೇವೆ. ಆದ್ದರಿಂದ ಮೊದಲು ನಮ್ಮ ಉನ್ನತಿಯನ್ನಾದರೂ ಮಾಡಿಕೊಳ್ಳುತ್ತೇವೆ.
ಇದು ಬಹಳ ಸಹಜವಾಗಿದೆ. ಮನುಷ್ಯರು ಎಲ್ಲವನ್ನೂ ಮಾಡಬಲ್ಲರು. ಗೃಹಸ್ಥ ವ್ಯವಹಾರದಲ್ಲಿರುತ್ತಾ ರಾಜ್ಯ
ಪದವಿಯನ್ನು ಪಡೆಯಬೇಕಾಗಿದೆ. ಆದ್ದರಿಂದ ನಿತ್ಯವೂ ತಮ್ಮ ಲೆಕ್ಕ ಪತ್ರವನ್ನು ತೆಗೆಯಿರಿ. ಇಡೀ ದಿನದ
ಲಾಭ ಮತ್ತು ನಷ್ಟವನ್ನು ತೆಗೆಯಿರಿ. ಲೆಕ್ಕ ಪತ್ರವನ್ನು ತೆಗೆಯದೆ ತಮ್ಮನ್ನು ಸುಧಾರಣೆ
ಮಾಡಿಕೊಳ್ಳುವುದು ಬಹಳ ಕಷ್ಟ ಸಾಧ್ಯ. ತಂದೆಯ ಮಾತನ್ನು ಪಾಲಿಸುವುದೇ ಇಲ್ಲ. ಆದ್ದರಿಂದ ಯಾರಿಗೂ
ನಾವು ದುಃಖವನ್ನು ಕೊಡಲಿಲ್ಲವೆ? ಎಂದು ನಿತ್ಯವೂ ತಮ್ಮನ್ನು ನೋಡಿಕೊಳ್ಳಬೇಕು. ಪದವಿಯು ಬಹಳ
ಉನ್ನತವಾದುದಾಗಿದೆ. ಅಪಾರ ಸಂಪಾದನೆಯಿದೆ, ಇಲ್ಲವಾದರೆ ಅಳಬೇಕಾಗುವುದು. ಹೇಗೆ
ಸ್ಪರ್ಧೆಯಿರುತ್ತದೆಯಲ್ಲವೆ. ಕೆಲವರು ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಾರೆ, ಇನ್ನೂ ಕೆಲವರು
ಹಾಗೆಯೇ ಉಳಿದುಕೊಳ್ಳುತ್ತಾರೆ.
ಈಗ ನಿಮ್ಮದು ಈಶ್ವರೀಯ ಸ್ಪರ್ಧೆಯಾಗಿದೆ, ಇದರಲ್ಲಿ ಯಾವುದೇ ಸ್ಥೂಲವಾಗಿ ಓಡಬೇಕಾಗಿಲ್ಲ. ಕೇವಲ
ಬುದ್ಧಿಯಿಂದ ಪ್ರಿಯವಾದ ತಂದೆಯನ್ನು ನೆನಪು ಮಾಡಬೇಕಾಗಿದೆ. ಏನೇ ತಪ್ಪಾದರೂ ತಕ್ಷಣವೇ ಅದನ್ನು
ತಿಳಿಸಿ ಬಿಡಬೇಕು. ಬಾಬಾ, ನಮ್ಮಿಂದ ಈ ತಪ್ಪಾಯಿತು, ಕರ್ಮೇಂದ್ರಿಯಗಳಿಂದ ಈ ತಪ್ಪು ಮಾಡಿದೆವು.
ತಂದೆಯು ತಿಳಿಸುತ್ತಾರೆ - ಸರಿ, ತಪ್ಪನ್ನು ಆಲೋಚಿಸುವ ಬುದ್ಧಿಯು ಸಿಕ್ಕಿದೆ ಅಂದಮೇಲೆ ಈಗ ತಪ್ಪು
ಕೆಲಸಗಳನ್ನು ಮಾಡಬೇಡಿ, ತಪ್ಪು ಕೆಲಸಗಳನ್ನು ಮಾಡಿ ನಂತರ ಬಾಬಾ ಇದನ್ನು ಕ್ಷಮಿಸಿ ಬಿಡಿ ಎಂದು
ಹೇಳುತ್ತಾರೆ. ಏಕೆಂದರೆ ತಂದೆಯು ಈಗ ಕೇಳುವುದಕ್ಕಾಗಿ ಇಲ್ಲಿ ಕುಳಿತಿದ್ದಾರೆ. ಏನೇ ತಪ್ಪು
ಕೆಲಸವಾದರೆ ತಕ್ಷಣ ತಂದೆಗೆ ತಿಳಿಸಿ ಅಥವಾ ಬರೆಯಿರಿ - ಬಾಬಾ, ನನ್ನಿಂದ ಈ ಕೆಟ್ಟ ಕೆಲಸವು ನಡೆಯಿತು
ಎಂದು ಸತ್ಯವಾಗಿ ಹೇಳಿದರೆ ನಿಮ್ಮದು ಅರ್ಧ ಪಾಪವು ಕಳೆಯುವುದು. ಹಾಗೆಂದು ಹೇಳಿ ನಾನು ಕೃಪೆ
ಮಾಡುತ್ತೇನೆಂದಲ್ಲ. ಇಲ್ಲಿ ಕ್ಷಮೆ ಅಥವಾ ಒಂದು ಪೈಸೆಯಷ್ಟೂ ಕೃಪೆಯ ಮಾತಿಲ್ಲ. ಎಲ್ಲರೂ ಸಹ
ತಮ್ಮನ್ನು ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ತಂದೆಯ ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ.
ಹಿಂದಿನ ಲೆಕ್ಕಾಚಾರಗಳೂ ಸಹ ಯೋಗ ಬಲದಿಂದ ತುಂಡಾಗುವುದು. ತಂದೆಯ ಮಕ್ಕಳಾದ ಮೇಲೂ ಸಹ ತಂದೆಯ ನಿಂದನೆ
ಮಾಡಿಸಬೇಡಿ. ಸದ್ಗುರುವಿನ ನಿಂಧಕರಿಗೆ ಪದವಿ ಸಿಗುವುದಿಲ್ಲ. ನಿಮಗೆ ಬಹಳ ಶ್ರೇಷ್ಠ ಪದವಿಯು
ಸಿಗುವುದು, ಅನ್ಯ ಗುರುಗಳ ಬಳಿ ಯಾವುದೇ ರಾಜ್ಯ ಪದವಿಯಿಲ್ಲ. ಇಲ್ಲಿ ನಿಮ್ಮ ಗುರಿ-ಧ್ಯೇಯವಿದೆ.
ಭಕ್ತಿ ಮಾರ್ಗದಲ್ಲಿ ಯಾವುದೇ ಗುರಿ-ಧ್ಯೇಯವಿರುವುದಿಲ್ಲ. ಒಂದುವೇಳೆ ಇದ್ದರೂ ಸಹ ಅಲ್ಪಕಾಲಕ್ಕಾಗಿ
ಅಷ್ಟೇ. 21 ಜನ್ಮಗಳ ಸುಖವೆಲ್ಲಿ! ಇಲ್ಲಿನ ಅಲ್ಪ ಸುಖವೆಲ್ಲಿ! ಧನದಿಂದ ಸುಖವು ಸಿಗುತ್ತದೆ ಎಂದಲ್ಲ.
ಎಷ್ಟೊಂದು ದುಃಖವೂ ಆಗುತ್ತದೆ. ತಿಳಿದುಕೊಳ್ಳಿ, ಯಾರಾದರೂ ಆಸ್ಪತ್ರೆಯನ್ನು ಕಟ್ಟಿಸುತ್ತಾರೆಂದರೆ
ಇನ್ನೊಂದು ಜನ್ಮದಲ್ಲಿ ರೋಗವು ಕಡಿಮೆಯಾಗುವುದು, ಹೆಚ್ಚು ವಿದ್ಯೆಯೂ ಸಿಗುತ್ತದೆ, ಧನವು ಸಿಗುತ್ತದೆ
ಎಂದಲ್ಲ. ಅದಕ್ಕಾಗಿ ಪುನಃ ಎಲ್ಲವನ್ನೂ ಮಾಡಬೇಕಾಗುತ್ತದೆ. ಯಾರಾದರೂ ಧರ್ಮ ಶಾಲೆಯನ್ನು ಕಟ್ಟಿಸಿದರೆ
ಇನ್ನೊಂದು ಜನ್ಮದಲ್ಲಿ ಮಹಲು ಸಿಗುವುದು ಆದರೆ ಅವರು ಆರೋಗ್ಯವಂತರಾಗಿರುತ್ತಾರೆ ಎಂದಲ್ಲ. ತಂದೆಯು
ಎಷ್ಟೊಂದು ಮಾತುಗಳನ್ನು ತಿಳಿಸುತ್ತಾರೆ. ಈ ಮಾತನ್ನು ಕೆಲವರು ಚೆನ್ನಾಗಿ ತಿಳಿದುಕೊಂಡು ಅನ್ಯರಿಗೂ
ತಿಳಿಸುತ್ತಾರೆ. ಇನ್ನೂ ಕೆಲವರು ತಿಳಿದುಕೊಳ್ಳುವುದೇ ಇಲ್ಲ ಆದ್ದರಿಂದ ಪ್ರತಿನಿತ್ಯವೂ ಲೆಕ್ಕ
ಪತ್ರವನ್ನು ತೆಗೆಯಿರಿ. ಇಂದು ನಾನು ಯಾವ ಪಾಪವನ್ನು ಮಾಡಿದೆನು? ಈ ಮಾತಿನಲ್ಲಿ ಅನುತ್ತೀರ್ಣನಾದೆನು,
ಅದಕ್ಕೆ ತಂದೆಯು ಸಲಹೆ ನೀಡುತ್ತಾರೆ - ಇಂತಹ ಕೆಲಸವನ್ನು ಮಾಡಬಾರದು. ನೀವು ತಿಳಿದುಕೊಂಡಿದ್ದೀರಿ
- ಈಗ ನಾವು ಸ್ವರ್ಗದಲ್ಲಿ ಹೋಗುತ್ತೇವೆ. ಆದರೆ ನೀವು ಮಕ್ಕಳಿಗೆ ಇದು ನಶೆಯೇರುವುದೇ ಇಲ್ಲ. ಈ
ಬ್ರಹ್ಮಾ ತಂದೆಗಂತೂ ಎಷ್ಟೊಂದು ಖುಷಿಯಿದೆ - ನಾನು ವೃದ್ಧನಾಗಿದ್ದೇನೆ, ಈ ಶರೀರವನ್ನು ಬಿಟ್ಟು
ಹೋಗಿ ನಾನು ರಾಜಕುಮಾರನಾಗುತ್ತೇನೆ, ನೀವೂ ಸಹ ಇವರ ಹಾಗೆ ಓದಿರಿ ಅಂದಮೇಲೆ ಖುಷಿಯ ನಶೆಯೇರಬೇಕು.
ಆದರೆ ತಂದೆಯನ್ನು ನೆನಪೇ ಮಾಡುವುದಿಲ್ಲ. ತಂದೆಯು ಎಷ್ಟೊಂದು ಸಹಜವಾಗಿ ತಿಳಿಸುತ್ತಾರೆ - ಆ ಆಂಗ್ಲ
ಭಾಷೆ ಇತ್ಯಾದಿಯನ್ನು ಓದುವುದರಲ್ಲಿ ಎಷ್ಟೊಂದು ತಲೆ ಕೆಟ್ಟು ಹೋಗುತ್ತದೆ. ಬಹಳಷ್ಟು
ಕ್ಲಿಷ್ಟವಾಗಿರುತ್ತದೆ. ಆದರೆ ಈ ಜ್ಞಾನವು ಬಹಳ ಸಹಜವಾಗಿದೆ, ಈ ಆತ್ಮಿಕ ವಿದ್ಯೆಯಿಂದ ನೀವು
ಶೀತಲರಾಗಿ ಬಿಡುತ್ತೀರಿ. ಇದರಿಂದ ನೀವು ಕೇವಲ ತಂದೆಯನ್ನು ನೆನಪು ಮಾಡುತ್ತಾ ಇರಿ ಆಗ ಒಮ್ಮೆಲೆ
ಎಲ್ಲಾ ಅಂಗಗಳು ಶೀತಲವಾಗಿ ಬಿಡುತ್ತವೆ. ಶರೀರವಂತೂ ನಿಮಗೆ ಇದೆಯಲ್ಲವೆ. ಶಿವ ತಂದೆಗೆ ತಮ್ಮದೇ ಆದ
ಶರೀರವಿಲ್ಲ. ಶ್ರೀ ಕೃಷ್ಣನಿಗೆ ಅಂಗಗಳಿವೆ. ಕೃಷ್ಣನ ಅಂಗಗಳಂತೂ ಶೀತಲವಾಗಿಯೇ ಇದೆ. ಆದ್ದರಿಂದ
ಕೃಷ್ಣನ ಹೆಸರನ್ನಿಟ್ಟು ಬಿಟ್ಟಿದ್ದಾರೆ. ಈಗ ಅವರ ಸಂಗ ಹೇಗೆ ಮಾಡುವುದು? ಏಕೆಂದರೆ ಕೃಷ್ಣನಿರುವುದು
ಸತ್ಯಯುಗದಲ್ಲಿ. ಅವರ ಅಂಗಗಳನ್ನೂ ಸಹ ಶೀತಲವನ್ನಾಗಿ ಯಾರು ಮಾಡಿದರು? ಇದನ್ನು ನೀವೀಗ
ತಿಳಿದುಕೊಂಡಿದ್ದೀರಿ. ಆದ್ದರಿಂದ ನೀವು ಮಕ್ಕಳಿಗೂ ಸಹ ಬಹಳಷ್ಟು ಧಾರಣೆಯಿರಬೇಕು. ಜಗಳ-ಕಲಹ
ಮಾಡುವಂತಿಲ್ಲ. ಸತ್ಯವನ್ನೇ ನುಡಿಯಬೇಕಾಗಿದೆ. ಸುಳ್ಳು ಹೇಳುವುದರಿಂದ ಸತ್ಯ ನಾಶವಾಗಿ ಬಿಡುತ್ತದೆ.
ತಂದೆಯು ನೀವು ಮಕ್ಕಳಿಗೆ ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಇಂತಹ ಒಳ್ಳೊಳ್ಳೆಯ ಚಿತ್ರಗಳನ್ನು
ಮಾಡಿಸಿ, ಅದು ಎಲ್ಲರ ಬಳಿಯೂ ಹೋಗಲಿ. ಯಾವುದೇ ಒಳ್ಳೆಯ ವಸ್ತುಗಳನ್ನು ನೋಡಿದರೆ ನೀವೂ ಸಹ ಹೋಗಿ
ನೋಡಿ ಎಂದು ಹೇಳುತ್ತಾರೆ. ಹಾಗೆಯೇ ಇಲ್ಲಿ ತಿಳಿಸಿ ಕೊಡುವವರೂ ಸಹ ಬುದ್ಧಿವಂತರಿರಬೇಕು. ಸರ್ವೀಸ್
ಮಾಡುವುದನ್ನು ಕಲಿಯಬೇಕಾಗಿದೆ. ತಮ್ಮ ಸಮಾನರನ್ನಾಗಿ ಮಾಡುವ ಒಳ್ಳೆಯ ಬ್ರಾಹ್ಮಣಿಯರು ಬೇಕು. ಯಾರು
ತಮ್ಮ ಸಮಾನ ಮ್ಯಾನೇಜರ್ನ್ನು ಮಾಡುವರೋ ಅವರಿಗೆ ಒಳ್ಳೆಯ ಬ್ರಾಹ್ಮಿಣಿಯೆಂದು ಹೇಳಲಾಗುತ್ತದೆ. ಅವರು
ಶ್ರೇಷ್ಠ ಪದವಿಯನ್ನೇ ಪಡೆಯುತ್ತಾರೆ. ಇದರಲ್ಲಿ ಬೇಬಿ (ಹುಡುಗಾಟಿಕೆಯ ಬುದ್ಧಿ) ಬುದ್ಧಿಯಿರಬಾರದು.
ಹಾಗಿದ್ದರೆ ಎಳೆದುಕೊಂಡು ಹೋಗುತ್ತಾರೆ. ರಾವಣನ ಸಂಪ್ರದಾಯವಲ್ಲವೆ ಆದ್ದರಿಂದ ಇಂತಹ
ಬ್ರಾಹ್ಮಿಣಿಯರನ್ನು ತಯಾರು ಮಾಡಿ, ಅವರು ನಂತರದಲ್ಲಿ ಸೇವಾಕೇಂದ್ರವನ್ನು ಸಂಭಾಲನೆ ಮಾಡುವಂತಿರಬೇಕು.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಗೆ
ತಮ್ಮ ವಿದ್ಯೆಯ ಶೌರ್ಯವನ್ನು ತೋರಿಸಬೇಕಾಗಿದೆ. ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಕಾರ್ಯದಲ್ಲಿ
ತೊಡಗಬೇಕಾಗಿದೆ. ಮೊದಲು ತಮ್ಮ ಉನ್ನತಿಯ ವಿಚಾರ ಮಾಡಬೇಕಾಗಿದೆ. ಕ್ಷೀರ ಖಂಡವಾಗಿರಬೇಕಾಗಿದೆ.
2. ಯಾವುದೇ ತಪ್ಪಾದರೆ
ತಂದೆಯಿಂದ ಕ್ಷಮೆ ಕೇಳಿ ತಮ್ಮನ್ನು ತಾವೇ ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ತಂದೆಯು ಕೃಪೆ
ತೋರುವುದಿಲ್ಲ. ತಂದೆಯ ನೆನಪಿನಿಂದ ವಿಕರ್ಮಗಳನ್ನು ವಿನಾಶ ಮಾಡಿಕೊಳ್ಳಬೇಕಾಗಿದೆ. ಯಾವುದೇ ನಿಂದನೆ
ಮಾಡಿಸುವಂತಹ ಕರ್ಮವನ್ನು ಮಾಡಬಾರದು.
ವರದಾನ:
ತಮ್ಮ ಶಕ್ತಿಶಾಲಿ
ಸ್ಟೇಜ್ ಮೂಲಕ ಸರ್ವರ ಶುಭ ಕಾಮನೆಗಳನ್ನು ಪೂರ್ಣ ಮಾಡುವಂತಹ ಮಹಾದಾನಿ ಭವ.
ಮುಂದೆ ಬರುವಂತಹ ಆತ್ಮಗಳು
ಸ್ವಲ್ಪದರಲ್ಲಿಯೆ ರಾಜಿ ಖುಶಿಯಾಗುತ್ತಾರೆ, ಏಕೆಂದರೆ ಅವರ ಪಾತ್ರ ಒಂದು ಕಣದಷ್ಟು ಅಗುಳನ್ನು
ಪಡೆಯುವುದಾಗಿದೆ. ಆದ್ದರಿಂದ ಅಂತಹ ಆತ್ಮಗಳಿಗೆ ಅವರ ಭಾವನೆಗೆ ತಕ್ಕಂತೆ ಫಲ ಪ್ರಾಪ್ತಿಯಾಗಬೇಕು ,
ಯಾರೂ ವಂಚಿತರಾಗಬಾರದು , ಅದಕ್ಕಾಗಿ ಈಗಿನಿಂದಲೇ ತಮ್ಮಲ್ಲಿ ಸರ್ವ ಶಕ್ತಿಗಳನ್ನು ಜಮಾ ಮಾಡಿಕೊಳ್ಳಿ.
ಯಾವಾಗ ತಾವು ತಮ್ಮ ಸಂಪೂರ್ಣ ಶಕ್ತಿಶಾಲಿ, ಮಹಾದಾನಿ ಸ್ಟೇಜ್ ಮೇಲೆ ಸ್ಥಿತರಾದಲ್ಲಿ ಯಾವುದೇ
ಆತ್ಮಕ್ಕೆ ತಮ್ಮ ಸಹಯೋಗದಿಂದ, ಮಹಾದಾನ ಕೊಡುವಂತಹ ಕರ್ತವ್ಯದ ಆಧಾರದ ಮೇಲೆ, ಶುಭ ಭಾವನೆಯ ಸ್ವಿಚ್
ಆನ್ ಮಾಡಿದೊಡನೆ ದೃಷ್ಠಿಯಿಂದಲೆ ಸಂತುಷ್ಠರನ್ನಾಗಿ ಮಾಡುತ್ತಾರೆ.
ಸ್ಲೋಗನ್:
ಸದಾ ಈಶ್ವರೀಯ
ಮರ್ಯಾದೆಗಳ ಮೇಲೆ ನಡೆಯುತ್ತಿರಿ ಆಗ ಮರ್ಯಾದಾ ಪುರುಷೋತ್ತಮ ಆಗಿ ಬಿಡುವಿರಿ.