24.05.20 Avyakt Bapdada
Kannada
Murli
15.01.86 Om Shanti Madhuban
"ಸಸ್ತಾ ವ್ಯಾಪಾರ ಮತ್ತು
ಉಳಿತಾಯದ ಬಜೆಟ್"
ರತ್ನಾಗರ ತಂದೆಯು ತನ್ನ
ಅತಿ ಶ್ರೇಷ್ಠ ವ್ಯಾಪಾರವನ್ನು ಮಾಡುವಂತಹ ಸೌಧಾಗರ ಮಕ್ಕಳನ್ನು ನೋಡುತ್ತಾ ಮುಗುಳ್ನಗುತ್ತಿದ್ದಾರೆ.
ವ್ಯಾಪಾರವು ಎಷ್ಟು ಶ್ರೇಷ್ಠವಾದುದು ಮತ್ತು ವ್ಯಾಪಾರ ಮಾಡುವವರು ಸೌಧಾಗರ್ ಪ್ರಪಂಚದಲ್ಲಿ ಎಷ್ಟು
ಸಾಧಾರಣರು ಮತ್ತು ಮುಗ್ಧರಿದ್ದಾರೆ. ಭಗವಂತನೊಂದಿಗೆ ಸೌಧಾ ಮಾಡುವಂತಹ ಆತ್ಮರು ಎಷ್ಟು
ಭಾಗ್ಯವಂತರಾದರು! ಇದನ್ನು ನೋಡಿ ಮುಗುಳ್ನಗುತ್ತಿದ್ದಾರೆ. ಇಷ್ಟು ಶ್ರೇಷ್ಠವಾದ ವ್ಯಾಪಾರವು ಒಂದು
ಜನ್ಮದ್ದು, ಅದು 21 ಜನ್ಮಗಳಲ್ಲಿ ಸದಾ ಸಂಪನ್ನರಾಗಿ ಬಿಡುತ್ತಾರೆ. ಕೊಡುವುದೇನಾಗಿದೆ ಮತ್ತು
ತೆಗೆದುಕೊಳ್ಳುವುದೇನು! ಲೆಕ್ಕವಿಲ್ಲದಷ್ಟು ಪದಮಗಳ ಸಂಪಾದನೆ ಅಥವಾ ಪದಮಗಳ ವ್ಯಾಪಾರವನ್ನು
ಎಷ್ಟೊಂದು ಸಹಜವಾಗಿ ಮಾಡುತ್ತೀರಿ. ವ್ಯಾಪಾರ ಮಾಡುವುದರಲ್ಲಿ ಸಮಯವೂ ಸಹ ವಾಸ್ತವದಲ್ಲಿ ಒಂದು
ಸೆಕೆಂಡ್ ಹಿಡಿಸುತ್ತದೆ. ಮತ್ತು ಎಷ್ಟೊಂದು ಸಸ್ತಾ ವ್ಯಾಪಾರ ಮಾಡಿದಿರಿ? ಒಂದು ಸೆಕೆಂಡಿನಲ್ಲಿ
ಮತ್ತು ಒಂದು ಮಾತಿನಲ್ಲಿ ವ್ಯಾಪಾರವನ್ನು ಮಾಡಿ ಬಿಟ್ಟಿರಿ - ಮನಃಪೂರ್ವಕವಾಗಿ ಒಪ್ಪಿದಿರಿ -
ಮೇರಾಬಾಬಾ. ಈ ಒಂದು ಮಾತಿನಿಂದ ಇಷ್ಟು ದೊಡ್ಡ ಲೆಕ್ಕವಿಲ್ಲದಷ್ಟು ಖಜಾನೆಯ ವ್ಯಾಪಾರವನ್ನು ಮಾಡಿ
ಬಿಡುತ್ತೀರಿ. ಸಸ್ತಾ ವ್ಯಾಪಾರವಾಯಿತಲ್ಲವೆ. ಪರಿಶ್ರಮವೂ ಇಲ್ಲ, ದುಬಾರಿಯೂ ಇಲ್ಲ. ಸಮಯವನ್ನೂ
ಕೊಡಬೇಕಾಗಿರುವುದಿಲ್ಲ. ಮತ್ತ್ಯಾವುದಾದರೂ ಅಲ್ಪಕಾಲದ ವ್ಯಾಪಾರವನ್ನು ಮಾಡುತ್ತಾರೆಂದರೆ ಎಷ್ಟೊಂದು
ಸಮಯವನ್ನು ಕೊಡಬೇಕಾಗುತ್ತದೆ. ಪರಿಶ್ರಮವನ್ನೂ ಪಡಬೇಕಾಗುತ್ತದೆ ಮತ್ತು ದಿನ ಕಳೆದಂತೆ ದುಬಾರಿಯೂ
ಆಗುತ್ತದೆ. ಮತ್ತು ಎಲ್ಲಿಯವರೆಗೆ ನಡೆಯುತ್ತದೆ? ಒಂದು ಜನ್ಮಕ್ಕಾಗಿಯೂ ಗ್ಯಾರಂಟಿಯಿಲ್ಲ. ಅಂದಾಗ
ಈಗ ಶ್ರೇಷ್ಠ ವ್ಯಾಪಾರವನ್ನು ಮಾಡಿ ಬಿಟ್ಟಿರಾ ಅಥವಾ ಈಗಲೂ ಯೋಚಿಸುತ್ತಿದ್ದೀರಾ - ಮಾಡಬೇಕು?
ಎಂದು. ಪರಿಪಕ್ವವಾಗಿ ವ್ಯಾಪಾರವನ್ನು ಮಾಡಿಬಿಟ್ಟಿರಲ್ಲವೆ? ಬಾಪ್ದಾದಾರವರು ತನ್ನ ವ್ಯಾಪಾರಗಾರ
ಮಕ್ಕಳನ್ನು ನೋಡುತ್ತಿದ್ದರು. ಸೌಧಾಗರ (ವ್ಯಾಪಾರ ಮಾಡುವವರು)ರ ಪಟ್ಟಿಯಲ್ಲಿ ಯಾರು-ಯಾರು
ಹೆಸರುವಾಸಿಯಿದ್ದಾರೆ. ಪ್ರಪಂಚದವರೂ ಸಹ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯನ್ನು ಮಾಡುತ್ತಾರಲ್ಲವೆ.
ವಿಶೇಷವಾಗಿ ಡೈರೆಕ್ಟರಿಯನ್ನೂ ಮಾಡುತ್ತಾರೆ. ತಂದೆಯವರ ಡೈರೆಕ್ಟರಿಯಲ್ಲಿ ಯಾರ ಹೆಸರುಗಳಿವೆ?
ಅದರಲ್ಲಿ ಪ್ರಪಂಚದವರ ದೃಷ್ಟಿಯು ಹೋಗುವುದಿಲ್ಲ, ಅವರೇ ತಂದೆಯೊಂದಿಗೆ ವ್ಯಾಪಾರ ಮಾಡಿ ಬಿಟ್ಟರು
ಮತ್ತು ಪರಮಾತ್ಮನ ನಯನಗಳ ನಕ್ಷತ್ರಗಳಾಗಿ ಬಿಟ್ಟರು, ಕಣ್ಮಣಿಗಳಾಗಿ ಬಿಟ್ಟರು. ಭರವಸೆಯಿಲ್ಲದ
ಆತ್ಮರುಗಳನ್ನು ವಿಶೇಷ ಆತ್ಮರನ್ನಾಗಿ ಮಾಡಿ ಬಿಟ್ಟರು. ಇಂತಹ ನಶೆಯು ಸದಾ ಇರುತ್ತದೆಯೇ? ಪರಮಾತ್ಮನ
ಡೈರೆಕ್ಟರಿಯ ವಿಶೇಷ ವಿ.ಐ.ಪಿ., ನಾವಾಗಿದ್ದೇವೆ. ಆದ್ದರಿಂದ ಗಾಯನವಿದೆ - ಮುಗ್ದರ ಭಗವಂತ.
ಇರುವುದಂತು ಚತುರ್ ಸುಜಾನ್ ಆದರೆ ಮುಗ್ಧರೇ ಇಷ್ಟವಾಗುತ್ತಾರೆ. ಪ್ರಪಂಚದ ಬಾಹರ್ಮುಖಿ ಚತುರತೆಯು
ತಂದೆಗೆ ಪ್ರಿಯವಾಗುವುದಿಲ್ಲ. ಅವರದು ಕಲಿಯುಗದಲ್ಲಿ ರಾಜ್ಯವಿದೆ, ಅಲ್ಲಿ ಈಗೀಗ ಲಕ್ಪತಿ, ಈಗೀಗ
ಕಖ್ಪತಿ(ದಿವಾಳಿ) ಇದೆ. ಆದರೆ ತಾವೆಲ್ಲರೂ ಸದಾಕಾಲಕ್ಕಾಗಿ ಪದಮಾಪದಮತಿ ಆಗಿ ಬಿಡುತ್ತೀರಿ. ಭಯದ
ರಾಜ್ಯವಿಲ್ಲ, ನಿರ್ಭಯವಿದೆ.
ಇಂದು ಪ್ರಪಂಚದಲ್ಲಿ ಹಣವೂ ಇದೆ ಮತ್ತು ಭಯವೂ ಇದೆ. ಎಷ್ಟು ಹಣವೋ ಅಷ್ಟು ಭಯದಲ್ಲಿಯೇ
ತಿನ್ನುತ್ತಾರೆ, ಭಯದಲ್ಲಿಯೇ ಮಲಗುತ್ತಾರೆ. ಮತ್ತು ತಾವು ನಿಶ್ಚಿಂತ ಚಕ್ರವರ್ತಿಗಳಾಗಿ
ಬಿಡುತ್ತೀರಿ. ನಿರ್ಭಯರಾಗಿ ಬಿಡುತ್ತೀರಿ. ಭಯಕ್ಕೂ ಭೂತವೆಂದೇ ಹೇಳಲಾಗುತ್ತದೆ. ತಾವು ಆ
ಭೂತದಿಂದಲೂ ಮುಕ್ತರಾಗಿ ಬಿಡುತ್ತೀರಿ. ಮುಕ್ತರಾಗಿ ಬಿಟ್ಟಿದ್ದೀರಲ್ಲವೆ? ಯಾವುದಾದರೂ ಭಯವಿದೆಯೇ?
ಎಲ್ಲಿ ನನ್ನದೆನ್ನುವುದಿರುತ್ತದೆ, ಅಲ್ಲಿ ಅವಶ್ಯವಾಗಿ ಭಯವಿರುತ್ತದೆ. "ನನ್ನ ಬಾಬಾ". ಕೇವಲ ಒಂದೇ
ಶಿವ ತಂದೆಯೆನ್ನುವುದಿದೆ ಎಂದರೆ ಅದು ನಿರ್ಭಯರನ್ನಾಗಿ ಮಾಡುತ್ತದೆ. ಅವರ ವಿನಃ ಯಾವುದೇ ಚಿನ್ನದ
ಜಿಂಕೆಯೇ ಒಂದುವೇಳೆ ನನ್ನದಾಗಿದೆಯೆಂದರೂ ಸಹ ಭಯವಿದೆ. ಅಂದಾಗ ಪರಿಶೀಲನೆ ಮಾಡಿಕೊಳ್ಳಿರಿ -
ನನ್ನದು-ನನ್ನದು ಎಂಬ ಸಂಸ್ಕಾರವು ಬ್ರಾಹ್ಮಣ ಜೀವನದಲ್ಲಿಯೂ ಸಹ ಯಾವುದೇ ಸೂಕ್ಷ್ಮ ರೂಪದಲ್ಲಿಯಾದರೂ
ಉಳಿದುಕೊಂಡಿಲ್ಲವೇ? ಸಿಲ್ವರ್ ಜುಬಿಲಿ, ಗೋಲ್ಡನ್ ಜುಬಿಲಿಯನ್ನು ಆಚರಿಸುತ್ತಿದ್ದೀರಲ್ಲವೆ.
ಬೆಳ್ಳಿ ಅಥವಾ ಚಿನ್ನವು ಅಪ್ಪಟವಂತು ಆಗ ಆಗುತ್ತದೆ, ಯಾವಾಗ ಬೆಂಕಿಯಲ್ಲಿ ಕರಗಿಸಿ, ಅದರಲ್ಲಿರುವ
ಬೆರಕೆಯನ್ನು(ಅಲಾಯಿ) ಸಮಾಪ್ತಿ ಮಾಡಿ ಬಿಡುತ್ತಾರೆ. ರಿಯಲ್ ಸಿಲ್ವರ್ ಜುಬಿಲಿ, ರಿಯಲ್ ಗೋಲ್ಡನ್
ಜುಬಿಲಿಯಾಗಿದೆ ಅಲ್ಲವೆ. ಅಂದಮೇಲೆ ಜುಬಿಲಿಯನ್ನಾಚರಿಸಲು ರಿಯಲ್ ಸಿಲ್ವರ್, ರಿಯಲ್ ಗೋಲ್ಡನ್
ಆಗಲೇಬೇಕಾಗುತ್ತದೆ. ಹೀಗೆ ತಿಳಿಯಬಾರದು - ಯಾರು ಸಿಲ್ವರ್ ಜುಬಿಲಿಯವರಿದ್ದಾರೆ, ಅವರೇ ಸಿಲ್ವರ್
ಆಗಿದ್ದಾರೆ. ಇದಂತು ವರ್ಷಗಳ ಲೆಕ್ಕದಿಂದ ಸಿಲ್ವರ್ ಜುಬಿಲಿ ಎಂದು ಹೇಳಲಾಗುತ್ತದೆ ಆದರೆ
ಇರುವುದೆಲ್ಲರೂ ಗೋಲ್ಡನೇಜ್ನ ಅಧಿಕಾರಿ ಗೋಲ್ಡನೇಜಿನವರು. ಅಂದಮೇಲೆ ಪರಿಶೀಲನೆ ಮಾಡಿಕೊಳ್ಳಿರಿ -
ಎಲ್ಲಿಯವರೆಗೆ ರಿಯಲ್ ಗೋಲ್ಡ್ ಆಗಿರುವೆನು? ವ್ಯಾಪಾರವನ್ನಂತು ಮಾಡಿದಿರಿ ಆದರೆ ಬಂದಿರಿ ಮತ್ತು
ತಿಂದಿರಿ. ಈ ರೀತಿಯಂತು ಇಲ್ಲವೇ? ಇಷ್ಟೂ ಜಮಾ ಮಾಡಿದ್ದೀರಿ, ಅದು 21 ಪೀಳಿಗೆಗಳವರೆಗೂ ಸದಾ
ಸಂಪನ್ನವಾಗಿರುತ್ತದೆ? ತಮ್ಮ ವಂಶಾವಳಿಯೂ ಸಂಪನ್ನರಾಗಿರಲಿ. ಕೇವಲ 21 ಜನ್ಮಗಳಲ್ಲ ಆದರೆ
ದ್ವಾಪರದಲ್ಲಿಯೂ ಭಕ್ತಾತ್ಮರಾಗಿರುವ ಕಾರಣದಿಂದ ಕಡಿಮೆಯೇನಾಗುವುದಿಲ್ಲ. ಇಷ್ಟು ಹಣ
ದ್ವಾಪರದಲ್ಲಿಯೂ ಇರುತ್ತದೆ, ಅದರಿಂದ ದಾನ-ಪುಣ್ಯವನ್ನು ಬಹಳ ಚೆನ್ನಾಗಿ ಮಾಡಬಹುದು. ಕಲಿಯುಗದ
ಅಂತ್ಯದಲ್ಲಿಯೂ ನೋಡಿರಿ, ಅಂತಿಮ ಜನ್ಮದಲ್ಲಿಯೂ ಭಿಕಾರಿಗಳಂತು ಆಗಿಲ್ಲ ಅಲ್ಲವೆ! ದಾಲ್-ರೋಟಿ
ತಿನ್ನುವವರಾಗಿದ್ದೀರಲ್ಲವೆ. ಕಪ್ಪು ಹಣವಂತು ಇಲ್ಲ ಆದರೆ ದಾಲ್-ರೋಟಿಯಂತು ಇದೆಯಲ್ಲವೆ. ಈ ಸಮಯದ
ಸಂಪಾದನೆ ಅಥವಾ ವ್ಯಾಪಾರವು ಇಡೀ ಕಲ್ಪದಲ್ಲಿ ಭಿಕಾರಿಯನ್ನಾಗಿ ಮಾಡುವುದಿಲ್ಲ, ಇಷ್ಟೂ ಜಮಾ
ಮಾಡಿದ್ದೀರಾ, ಅದರಿಂದ ಅಂತಿಮ ಜನ್ಮದಲ್ಲಿಯೂ ದಾಲ್-ರೋಟಿಯನ್ನು ತಿನ್ನುತ್ತೀರಿ. ಇಷ್ಟೂ ಉಳಿತಾಯದ
ಲೆಕ್ಕವನ್ನಿಡುತ್ತೀರಾ? ಬಜೆಟ್ ಮಾಡುವುದು ಬರುತ್ತದೆಯೇ? ಜಮಾ ಮಾಡುವುದರಲ್ಲಿಯೂ
ಬುದ್ಧಿವಂತರಾಗಿದ್ದೀರಲ್ಲವೆ! ಇಲ್ಲವೆಂದರೆ 21 ಜನ್ಮಗಳೇನು ಮಾಡುವಿರಿ? ಸಂಪಾದನೆಯನ್ನು ಮಾಡುವವರು
ಆಗುವಿರಾ ಅಥವಾ ರಾಜ್ಯಾಧಿಕಾರಿಯಾಗಿ ರಾಜ್ಯಾಡಳಿತ ಮಾಡುವಿರಾ? ರಾಯಲ್ ಫ್ಯಾಮಿಲಿಯವರು ಸಂಪಾದಿಸುವ
ಅವಶ್ಯಕತೆಯಿರುವುದಿಲ್ಲ. ಪ್ರಜೆಗಳು ಸಂಪಾದಿಸಬೇಕಾಗುತ್ತದೆ. ಅದರಲ್ಲಿಯೂ ಪ್ರಕಾರಗಳಿವೆ. ಸಾಹುಕಾರ
ಪ್ರಜೆ ಮತ್ತು ಸಾಧಾರಣ ಪ್ರಜೆ. ಬಡವರಂತು ಇರುವುದೇ ಇಲ್ಲ. ಆದರೆ ರಾಯಲ್ ಫ್ಯಾಮಿಲಿ ಪುರುಷಾರ್ಥದ
ಪ್ರಾಲಬ್ಧವು ರಾಜ್ಯ ಪ್ರಾಪ್ತಿಯಾಗುತ್ತದೆ. ಜನ್ಮ-ಜನ್ಮವೂ ರಾಯಲ್ ಫ್ಯಾಮಿಲಿಯ
ಅಧಿಕಾರಿಯಾಗುತ್ತಾರೆ. ಪ್ರತೀ ಜನ್ಮದಲ್ಲಿಯೂ ರಾಜ್ಯ ಸಿಂಹಾಸನದ ಅಧಿಕಾರಿಯಾಗುವುದಿಲ್ಲ. ಆದರೆ
ರಾಯಲ್ ಫ್ಯಾಮಿಲಿಯ ಅಧಿಕಾರವು ಜನ್ಮ-ಜನ್ಮದಲ್ಲಿಯೂ ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಅಂದಾಗ
ಏನಾಗುವಿರಿ? ಈಗ ಬಜೆಟ್ ಮಾಡಿರಿ. ಉಳಿತಾಯದ ಸ್ಕೀಂ ಮಾಡಿರಿ.
ವರ್ತಮಾನದ ಸಮಯದಲ್ಲಿ ವೇಸ್ಟ್ ನಿಂದ ಬೆಸ್ಟ್ ಮಾಡುತ್ತಾರೆ. ವೇಸ್ಟ್ ನ್ನೇ ಉಳಿಸುತ್ತಾರೆ.
ಅಂದಮೇಲೆ ತಾವೆಲ್ಲರೂ ಸಹ ಉಳಿತಾಯದ ಖಾತೆಯನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿರಿ. ಬಜೆಟ್
ಮಾಡಿರಿ. ಸಂಕಲ್ಪ ಶಕ್ತಿ, ವಾಣಿಯ ಶಕ್ತಿ, ಕರ್ಮದ ಶಕ್ತಿ, ಸಮಯದ ಶಕ್ತಿಯು ಹೇಗೆ ಮತ್ತು ಎಲ್ಲಿ
ಕಾರ್ಯದಲ್ಲಿ ಉಪಯೋಗಿಸಬೇಕು. ಇದೆಲ್ಲಾ ಶಕ್ತಿಗಳು ವ್ಯರ್ಥವಾಗಿ ಹೊರಟು ಹೋಗಲಿ ಎನ್ನುವಂತಾಗಬಾರದು.
ಸಂಕಲ್ಪವೇನಾದರೂ ಸಾಧಾರಣವಿದೆ, ವ್ಯರ್ಥವಿದೆಯೆಂದರೆ ವ್ಯರ್ಥ ಮತ್ತು ಸಾಧಾರಣವೆರಡೂ
ಉಳಿತಾಯವಾಗುವುದಿಲ್ಲ. ಆದರೆ ಕಳೆದಿರಿ. ಇಡೀ ದಿನದಲ್ಲಿ ತಮ್ಮ ಚಾರ್ಟ್ ಮಾಡಿಕೊಳ್ಳಿರಿ. ಈ
ಶಕ್ತಿಗಳನ್ನು ಕಾರ್ಯದಲ್ಲಿ ಉಪಯೋಗಿಸಿ ಎಷ್ಟು ವೃದ್ಧಿಯನ್ನು ಮಾಡಿರುವೆನು! ಏಕೆಂದರೆ ತಾವೆಷ್ಟು
ಕಾರ್ಯದಲ್ಲಿ ಉಪಯೋಗಿಸುತ್ತೀರಿ ಅಷ್ಟು ಶಕ್ತಿಗಳು ಹೆಚ್ಚುತ್ತವೆ. ಎಲ್ಲರೂ ತಿಳಿದಿದ್ದೀರಿ -
ಸಂಕಲ್ಪಶಕ್ತಿ ಇದೆ. ಆದರೆ ಕಾರ್ಯದಲ್ಲಿ ಉಪಯೋಗಿಸುವ ಅಭ್ಯಾಸ, ಇದರಲ್ಲಿ ನಂಬರ್ವಾರ್. ಕೆಲವರು
ನಂತರದಲ್ಲಿ, ಕೆಲವರು ಕಾರ್ಯದಲ್ಲಿ ಉಪಯೋಗಿಸುತ್ತಾರೆ, ಇಲ್ಲವೆಂದರೆ ಪಾಪ ಕರ್ಮದಲ್ಲಿ
ಕಳೆಯುತ್ತಾರೆ. ಆದರೆ ಸಾಧಾರಣ ದಿನಚರ್ಯದಲ್ಲಿ ಸಂಪಾದಿಸಲೂ ಇಲ್ಲ, ಕಳೆಯಲೂ ಇಲ್ಲ. ಜಮಾ
ಆಗಲಿಲ್ಲವಲ್ಲವೆ. ಸಾಧಾರಣ ಸೇವೆಯ ದಿನಚರಿ ಅಥವಾ ಸಾಧಾರಣ ಪ್ರವೃತ್ತಿಯ ದಿನಚರಿ - ಇದಕ್ಕೆ ಬಜೆಟ್ನ
ಖಾತೆಯು ಜಮಾ ಆಗುವುದು ಎಂದು ಹೇಳುವುದಿಲ್ಲ. ಕೇವಲ ಇದನ್ನಷ್ಟೇ ಪರಿಶೀಲನೆ ಮಾಡಬೇಡಿ - ಯಥಾಶಕ್ತಿ
ಸೇವೆಯನ್ನೂ ಮಾಡಿದೆನು, ವಿದ್ಯೆಯನ್ನೂ ಓದಿದೆನು. ಯಾರಿಗೂ ದುಃಖ ಕೊಡಲಿಲ್ಲ. ಯಾವುದೇ ಉಲ್ಟಾ
ಕಾರ್ಯಗಳನ್ನು ಮಾಡಲಿಲ್ಲ. ಆದರೆ ದುಃಖವನ್ನಂತು ಕೊಡಲಿಲ್ಲ ಆದರೆ ಸುಖ ಕೊಟ್ಟಿರಾ? ಎಷ್ಟು ಮತ್ತು
ಹೇಗೆ ಶಕ್ತಿಶಾಲಿ ಸೇವೆಯನ್ನು ಮಾಡಬೇಕು, ಅಷ್ಟು ಆಯಿತೇ? ಹೇಗೆ ಬಾಪ್ದಾದಾರವರು ಸದಾ ಡೈರೆಕ್ಷನ್
ಕೊಡುತ್ತಾರೆ - ನಾನು ಎನ್ನುವ, ನನ್ನತನದ ತ್ಯಾಗವೇ ಸತ್ಯ ಸೇವೆಯಾಗಿದೆ, ಇಂತಹ ಸೇವೆಯಾಯಿತೇ?
ಉಲ್ಟಾ ಮಾತನ್ನು ಮಾತನಾಡಲಿಲ್ಲ. ಆದರೆ ಇಂತಹ ಮಾತನ್ನು ಮಾತನಾಡಿದಿರಾ, ಅದರಿಂದ ಯಾರೇ
ಭರವಸೆಯಿಲ್ಲದವರನ್ನೂ ಭರವಸೆಯಿರುವವರನ್ನಾಗಿ ಮಾಡಿ ಬಿಟ್ಟಿತು. ಅದೇರೀತಿ ಎರಡು ಗಂಟೆ, ನಾಲ್ಕು
ಗಂಟೆ ಕಳೆಯಿತು, ಅದು ಉಳಿತಾಯವಾಗಲಿಲ್ಲ. ಎಲ್ಲಾ ಶಕ್ತಿಗಳ ಉಳಿತಾಯ ಮಾಡಿ ಜಮಾ ಮಾಡಿರಿ. ಇಂತಹ
ಬಜೆಟ್ ಮಾಡಿರಿ. ಈ ವರ್ಷ ಬಜೆಟ್ ಮಾಡಿ ಕಾರ್ಯ ಮಾಡಿರಿ. ಪ್ರತಿಯೊಂದು ಶಕ್ತಿಯನ್ನು ಕಾರ್ಯದಲ್ಲಿ
ಹೇಗೆ ಉಪಯೋಗಿಸುವುದು - ಇದರ ಪ್ಲಾನ್ ಮಾಡಿಕೊಳ್ಳಿರಿ. ಈಶ್ವರನ ಬಜೆಟ್ನ್ನು ಹೀಗೆ ಮಾಡಿಕೊಳ್ಳಿರಿ,
ಅದು ವಿಶ್ವದ ಪ್ರತಿಯೊಂದು ಆತ್ಮನಿಗೆ ಏನಾದರೊಂದು ಪ್ರಾಪ್ತಿಯನ್ನು ಮಾಡಿಸಿ ತಮ್ಮ ಗುಣಗಾನ ಮಾಡಲಿ.
ಎಲ್ಲರಿಗೂ ಏನಾದರೊಂದು ಕೊಡಲೇಬೇಕು. ಭಲೆ ಮುಕ್ತಿಯನ್ನು ಕೊಡಿ, ಭಲೆ ಜೀವನ್ಮುಕ್ತಿಯನ್ನು ಕೊಡಿ.
ಮನುಷ್ಯಾತ್ಮರನ್ನೇನು, ಪ್ರಕೃತಿಯನ್ನೂ ಸಹ ಪಾವನ ಮಾಡುವ ಸೇವೆಯನ್ನು ಮಾಡುತ್ತಿದ್ದೀರಿ. ಈಶ್ವರೀಯ
ಬಜೆಟ್ ಅರ್ಥಾತ್ ಸರ್ವ ಆತ್ಮರು ಪ್ರಕೃತಿಯ ಸಹಿತವಾಗಿ ಸುಖಿ ಹಾಗೂ ಶಾಂತವಾಗಿ ಬಿಡಲಿ. ಆ ಸರ್ಕಾರವು
ಬಜೆಟ್ ಮಾಡುತ್ತದೆ - ಇಷ್ಟು ನೀರನ್ನು ಕೊಡುತ್ತೇವೆ, ಇಷ್ಟು ಮನೆಗಳನ್ನು ಕೊಡುತ್ತೇವೆ, ಇಷ್ಟು
ವಿದ್ಯುಚ್ಛಕ್ತಿಯನ್ನು ಕೊಡುತ್ತೇವೆ. ತಾವೇನು ಬಜೆಟ್ ಮಾಡುತ್ತೀರಿ? ಎಲ್ಲರಿಗೂ ಅನೇಕ
ಜನ್ಮಗಳವರೆಗೆ ಮುಕ್ತಿ ಮತ್ತು ಜೀವನ್ಮುಕ್ತಿಯನ್ನು ಕೊಡಲಿ. ಭಿಕಾರಿತನದಿಂದ, ದುಃಖ-ಅಶಾಂತಿಯಿಂದ
ಮುಕ್ತರಾಗಲಿ. ಅರ್ಧಕಲ್ಪವಂತು ಆರಾಮದಿಂದ ಇರುವರು. ಅವರ ಆಶೆಯಂತು ಪೂರ್ಣವಾಗಿಯೇ ಬಿಡುತ್ತದೆ.
ಅವರುಗಳಂತು ಮುಕ್ತಿಯನ್ನೇ ಬಯಸುತ್ತಾರಲ್ಲವೆ. ಅದರ ಬಗ್ಗೆ ಗೊತ್ತಿಲ್ಲ ಆದರೆ ಬೇಡುವುದಂತು
ಮಾಡುತ್ತಿರುತ್ತಾರಲ್ಲವೆ. ಅಂದಮೇಲೆ ಸ್ವಯಂಗಾಗಿ ಮತ್ತು ವಿಶ್ವದ ಪ್ರತಿ ಈಶ್ವರೀಯ ಬಜೆಟ್ ಮಾಡಿರಿ.
ಏನು ಮಾಡಬೇಕೆಂದು ತಿಳಿಯಿತೆ! ಸಿಲ್ವರ್ ಮತ್ತು ಗೋಲ್ಡನ್ ಜುಬಿಲಿಯೆರಡೂ ಇದೇ ವರ್ಷದಲ್ಲಿ
ಮಾಡುತ್ತಿದ್ದೀರಲ್ಲವೆ. ಅಂದಮೇಲೆ ಇದು ಮಹತ್ವದ ವರ್ಷವಾಗಿದೆ. ಒಳ್ಳೆಯದು.
ಸದಾ ಶ್ರೇಷ್ಠ ವ್ಯಾಪಾರವನ್ನು ಸ್ಮೃತಿಯಲ್ಲಿಟ್ಟುಕೊಳ್ಳುವಂತಹ, ಸದಾ ಜಮಾದ ಖಾತೆಯನ್ನು
ಹೆಚ್ಚಿಸಿಕೊಳ್ಳುವಂತಹ, ಸದಾ ಪ್ರತಿಯೊಂದು ಶಕ್ತಿಗಳನ್ನು ಕಾರ್ಯದಲ್ಲಿ ಉಪಯೋಗಿಸಿ ವೃದ್ಧಿ
ಹೊಂದುವ, ಸದಾ ಸಮಯದ ಮಹತ್ವವನ್ನು ತಿಳಿದುಕೊಂಡು ಮಹಾನರಾಗುವ ಮತ್ತು ಅನ್ಯರನ್ನೂ ಮಾಡುವಂತಹ, ಇಂತಹ
ಶ್ರೇಷ್ಠ ಧನವಂತ, ಶ್ರೇಷ್ಠ ಬುದ್ಧಿವಂತ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಕುಮಾರರೊಂದಿಗೆ:-
ಕುಮಾರ ಜೀವನವೂ ಸಹ
ಅದೃಷ್ಟ ಜೀವನವಾಗಿದೆ ಏಕೆಂದರೆ ಉಲ್ಟಾ ಏಣಿಯನ್ನೇರುವುದರಿಂದ ಪಾರಾಗಿ ಬಿಟ್ಟಿರಿ. ಎಂದಿಗೂ
ಸಂಕಲ್ಪವಂತು ಬರುವುದಿಲ್ಲವೇ – ಉಲ್ಟಾ ಏಣಿಯನ್ನೇರುವ ಸಂಕಲ್ಪ. ಏರುತ್ತಿರುವವರೂ ಸಹ
ಇಳಿಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಇರುವವರೆಲ್ಲರೂ ಸಹ ಕುಮಾರ-ಕುಮಾರಿಯೆಂದು
ಕರೆಸಿಕೊಳ್ಳುತ್ತಾರಲ್ಲವೆ. ಅಂದಮೇಲೆ ಏಣಿಯನ್ನಿಳಿದರಲ್ಲವೆ! ಅಂದಾಗ ಸದಾ ತಮ್ಮ ಈ ಶ್ರೇಷ್ಠ
ಭಾಗ್ಯವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಿರಿ. ಕುಮಾರ ಜೀವನ ಅರ್ಥಾತ್ ಬಂಧನಗಳಿಂದ ಪಾರಾಗುವ ಜೀವನ.
ಇಲ್ಲವೆಂದರೆ ನೋಡಿ - ಎಷ್ಟೊಂದು ಬಂಧನಗಳಲ್ಲಿರುತ್ತಾರೆ. ಅಂದಮೇಲೆ ಬಂಧನಗಳಲ್ಲಿ ಸಿಲುಕುವುದರಿಂದ
ಪಾರಾಗಿ ಬಿಟ್ಟಿರಿ. ಮನಸ್ಸಿನಿಂದಲೂ ಸ್ವತಂತ್ರ, ಸಂಬಂಧದಿಂದಲೂ ಸ್ವತಂತ್ರ. ಕುಮಾರ ಜೀವನವಿರುವುದೇ
ಸ್ವತಂತ್ರವಾಗಿ. ಯಾರಾದರೂ ಸ್ವಲ್ಪ ಸಹಯೋಗಿ ಸಿಕ್ಕಿ ಬಿಡಲಿ, ಯಾರಾದರೂ ಜೊತೆಗಾರ ಸಿಕ್ಕಿ ಬಿಡಲಿ,
ರೋಗಿಯಾಗಿದ್ದಾಗ ಸಹಯೋಗಿಯಾಗಿ ಬಿಡಲಿ ಎನ್ನುವ ವಿಚಾರವು ಕೆಲವೊಮ್ಮೆ ಸ್ವಪ್ನದಲ್ಲಿಯೂ
ಬರುವುದಿಲ್ಲವೇ! ಹೀಗೆಂದಾದರೂ ಯೋಚಿಸುತ್ತೀರಾ! ವಿಚಾರವೇ ಬರುವುದಿಲ್ಲವೇ? ಕುಮಾರ ಜೀವನ ಅರ್ಥಾತ್
ಸದಾ ಹಾರುವ ಪಕ್ಷಿ ಬಂಧನದಲ್ಲಿ ಸಿಲುಕಿಕೊಂಡಿರುವವರಲ್ಲ. ಎಂದಿಗೂ ಯಾವುದೇ ಸಂಕಲ್ಪವೂ ಬರಬಾರದು.
ಸದಾ ನಿರ್ಬಂಧನರಾಗಿದ್ದು ತೀವ್ರ ಗತಿಯಿಂದ ಮುಂದೆ ಸಾಗುತ್ತಾ ನಡೆಯಿರಿ.
ಕುಮಾರಿಯರೊಂದಿಗೆ:-
ಕುಮಾರಿಯರು ಸೇವೆಯಲ್ಲಿ
ಮುಂದುವರೆಯುವ ಲಿಫ್ಟ್ ಸಿಕ್ಕಿದೆ. ಈ ಲಿಫ್ಟೇ ಶ್ರೇಷ್ಠ ಗಿಫ್ಟ್ ಆಗಿದೆ. ಈ ಗಿಫ್ಟ್ ಅನ್ನು
ಉಪಯೋಗಿಸುವುದು ಬರುತ್ತದೆಯಲ್ಲವೆ! ಸ್ವಯಂನ್ನು ಎಷ್ಟು ಶಕ್ತಿಶಾಲಿ ಮಾಡಿಕೊಳ್ಳುತ್ತೀರಿ ಅಷ್ಟೇ
ಸೇವೆಯೂ ಶಕ್ತಿಶಾಲಿ ಮಾಡಿಕೊಳ್ಳುತ್ತೀರಿ. ಒಂದುವೇಳೆ ಸ್ವಯಂ ತಾವೇ ಯಾವುದಾದರೂ ಮಾತಿನಲ್ಲಿ
ಬಲಹೀನರಾಗಿರುತ್ತೀರೆಂದರೆ ಸೇವೆಯೂ ಬಲಹೀನವಾಗುತ್ತದೆ. ಆದ್ದರಿಂದ ಶಕ್ತಿಶಾಲಿಯಾಗಿ ಶಕ್ತಿಶಾಲಿ
ಸೇವಾಧಾರಿ ಆಗಿ ಬಿಡಿ. ಇಂತಹ ತಯಾರಿ ಮಾಡಿಕೊಳ್ಳುತ್ತಾ ಸಾಗಿರಿ. ಅಂತಹ ಯಾವುದೇ ಸಮಯ ಬಂದಾಗ
ಸಫಲತಾಪೂರ್ವಕ ಸೇವೆಯಲ್ಲಿ ತೊಡಗಿ ಬಿಡಿ ಮತ್ತು ಮೊದಲ ನಂಬರನ್ನು ತೆಗೆದುಕೊಂಡುಬಿಡಿ. ಈಗಂತು
ಓದುವುದಕ್ಕೆ ಸಮಯ ಕೊಡಬೇಕಾಗುತ್ತದೆ, ನಂತರವಂತು ಒಂದೇ ಕಾರ್ಯವಿರುತ್ತದೆ, ಆದ್ದರಿಂದ ಎಲ್ಲಿಯೇ
ಇರಿ ಟ್ರೈನಿಂಗ್ ಮಾಡುತ್ತಿರಿ. ನಿಮಿತ್ತರಾಗಿರುವ ಆತ್ಮರ ಸಂಗದಿಂದ ತಯಾರಿ ಮಾಡುತ್ತಿರಿ. ಆಗ
ಯೋಗ್ಯ ಸೇವಾಧಾರಿಯಾಗಿ ಬಿಡುತ್ತೀರಿ. ಎಷ್ಟು ಮುಂದೆ ಹೋಗುತ್ತೀರಿ ಅಷ್ಟು ತಮಗೇ ಲಾಭವಿದೆ.
ಸೇವಾಧಾರಿ ಟೀಚರ್ಸ್
ಸಹೋದರಿಯರೊಂದಿಗೆ:-
1. ಸೇವಾಧಾರಿ ಅರ್ಥಾತ್
ಸದಾ ನಿಮಿತ್ತ. ನಿಮಿತ್ತ ಭಾವ - ಸೇವೆಯಲ್ಲಿ ಸ್ವತಹವಾಗಿಯೇ ಸಫಲತೆಯನ್ನು ಕೊಡುತ್ತದೆ. ನಿಮಿತ್ತ
ಭಾವವಿಲ್ಲವೆಂದರೆ ಸಫಲತೆಯಿಲ್ಲ. ಸದಾ ತಂದೆಯವರಾಗಿದ್ದೆವು, ತಂದೆಯವರಾಗಿದ್ದೇವೆ ಮತ್ತು
ತಂದೆಯವರಾಗಿಯೇ ಇರುತ್ತೇವೆ - ಇಂತಹ ಪ್ರತಿಜ್ಞೆಯನ್ನು ಮಾಡಿದ್ದೀರಲ್ಲವೆ. ಸೇವಾಧಾರಿ ಅರ್ಥಾತ್
ಪ್ರತೀ ಹೆಜ್ಜೆಯನ್ನು ತಂದೆಯ ಹೆಜ್ಜೆಯಂತೆ ಇಡುವವರು. ಇದಕ್ಕೆ ಫಾಲೋ ಫಾದರ್ ಮಾಡುವವರೆಂದು
ಹೇಳಲಾಗುತ್ತದೆ. ಪ್ರತೀ ಹೆಜ್ಜೆಯನ್ನು ಶ್ರೇಷ್ಠ ಮತದಂತೆ ಶ್ರೇಷ್ಠವನ್ನಾಗಿ ಮಾಡುವಂತಹ ಸೇವಾಧಾರಿ
ಆಗಿದ್ದೀರಲ್ಲವೆ. ಸೇವೆಯಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವುದು, ಇದೇ ಸೇವಾಧಾರಿಯ
ಶ್ರೇಷ್ಠ ಲಕ್ಷ್ಯವಾಗಿದೆ. ಅಂದಮೇಲೆ ಎಲ್ಲರೂ ಶ್ರೇಷ್ಠ ಲಕ್ಷ್ಯವನ್ನಿಡುವವರು ಅಲ್ಲವೆ. ಸೇವೆಯಲ್ಲಿ
ಹಾಗೂ ಸ್ವಯಂನಲ್ಲಿ ಎಷ್ಟು ವ್ಯರ್ಥವು ಸಮಾಪ್ತಿಯಾಗಿ ಬಿಡುತ್ತದೆ, ಅಷ್ಟೇ ಸ್ವಯಂ ಮತ್ತು ಸೇವೆಯು
ಸಮರ್ಥವಾಗುತ್ತದೆ. ಅಂದಾಗ ವ್ಯರ್ಥವನ್ನು ಸಮಾಪ್ತಿ ಮಾಡುವುದು, ಸಮರ್ಥರಾಗುವುದು. ಇದೇ
ಸೇವಾಧಾರಿಗಳ ವಿಶೇಷತೆಯಾಗಿದೆ. ಸ್ವಯಂ ಎಷ್ಟು ನಿಮಿತ್ತರಾಗಿರುವ ಆತ್ಮರು ಶಕ್ತಿಶಾಲಿಯಾಗುತ್ತಾರೆ,
ಅಷ್ಟು ಸೇವೆಯೂ ಶಕ್ತಿಶಾಲಿಯಾಗುತ್ತದೆ. ಸೇವಾಧಾರಿ ಎನ್ನುವುದರ ಅರ್ಥವಾಗಿದೆ - ಸೇವೆಯಲ್ಲಿ ಸದಾ
ಉಮ್ಮಂಗ-ಉತ್ಸಾಹದಲ್ಲಿ ತರುವುದು. ಸ್ವಯಂ ಉಮ್ಮಂಗ-ಉತ್ಸಾಹದಲ್ಲಿರುವವರು ಅನ್ಯರಿಗೂ
ಉಮ್ಮಂಗ-ಉತ್ಸಾಹವನ್ನು ಕೊಡಲು ಸಾಧ್ಯವಾಗುವುದು. ಅದರಿಂದ ಸದಾ ಪ್ರತ್ಯಕ್ಷ ರೂಪದಲ್ಲಿ
ಉಮ್ಮಂಗ-ಉತ್ಸಾಹವು ಕಾಣಿಸುತ್ತದೆ. ಹೀಗಲ್ಲ, ನಾನು ಒಳಗಿಂದಿರುತ್ತೇನೆ ಆದರೆ ಹೊರಗೆ
ಕಾಣಿಸುವುದಿಲ್ಲ ಎಂದಲ್ಲ. ಹೇಳಿ, ಹೇಳದಿರಿ ಆದರೆ ಚಹರೆಯೇ ಮಾತನಾಡುತ್ತದೆ, ಹೊಳಪು ಹೇಳುತ್ತದೆ.
ಇಂತಹ ಸೇವಾಧಾರಿ ಆಗಿದ್ದೀರಾ?
ಸೇವೆಯ ಸುವರ್ಣಾವಕಾಶವೂ ಸಹ ಶ್ರೇಷ್ಠ ಭಾಗ್ಯದ ಗುರುತಾಗಿದೆ. ಸೇವಾಧಾರಿಯಾಗುವ ಭಾಗ್ಯವಂತು
ಪ್ರಾಪ್ತಿಯಾಯಿತು, ಈಗ ಸೇವಾಧಾರಿ ನಂಬರ್ವನ್ ಅಥವಾ ನಂಬರ್ ಟು ಆಗಿದ್ದೀರಾ, ಇದೂ ಸಹ ಭಾಗ್ಯವನ್ನು
ರೂಪಿಸಿಕೊಳ್ಳಿರಿ ಮತ್ತು ನೋಡಿಕೊಳ್ಳಿರಿ. ಕೇವಲ ಒಂದು ಭಾಗ್ಯವಲ್ಲ ಆದರೆ ಭಾಗ್ಯದ ಮೇಲೆ ಭಾಗ್ಯದ
ಪ್ರಾಪ್ತಿ. ಎಷ್ಟು ಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾ ಹೋಗುತ್ತೀರಿ, ಅಷ್ಟು ನಂಬರ್
ಸ್ವತಹವಾಗಿಯೇ ಹೆಚ್ಚಾಗುತ್ತದೆ. ಇದಕ್ಕೆ ಪದಮಾಪದಮ ಭಾಗ್ಯಶಾಲಿ ಎಂದು ಹೇಳಲಾಗುತ್ತದೆ. ಒಂದು
ವಿಷಯದಲ್ಲಲ್ಲ, ಎಲ್ಲಾ ವಿಷಯಗಳಲ್ಲಿಯೂ ಸಫಲತಾ ಸ್ವರೂಪರು. ಒಳ್ಳೆಯದು.
2. ಅತಿ ಹೆಚ್ಚು ಖುಷಿಯು ಯಾರಿಗಿದೆ - ತಂದೆಗಿದೆಯೇ ಅಥವಾ ತಮಗೋ? ನನಗಿದೆ ಎಂದು ಏಕೆ
ಹೇಳುವುದಿಲ್ಲ! ದ್ವಾಪರದಿಂದ ಭಕ್ತಿಯಲ್ಲಿ ಕೂಗಿದಿರಿ ಅಂದಮೇಲೆ ಎಷ್ಟೊಂದು ಖುಷಿಯಾಗುತ್ತದೆ!
ಯಾವುದೇ ವಸ್ತುವಿನ ಇಚ್ಛೆಯು ಪೂರ್ಣವಾಗುತ್ತದೆಯೆಂದರೆ ಖುಷಿಯಾಗುತ್ತದೆಯಲ್ಲವೆ. ಈ ಖುಷಿಯೇ
ವಿಶ್ವಕ್ಕೆ ಖುಷಿಯನ್ನು ಕೊಡಿಸುತ್ತದೆ. ತಾವು ಖುಷಿಯಾಗುತ್ತೀರೆಂದರೆ ಇಡೀ ವಿಶ್ವವು ಖುಷಿಯಾಗಿ
ಬಿಡುತ್ತದೆ. ಇಂತಹ ಖುಷಿಯು ಸಿಕ್ಕಿದೆಯಲ್ಲವೆ. ಯಾವಾಗ ತಾವು ಬದಲಾಗುತ್ತೀರಿ, ಆಗ ಪ್ರಪಂಚವೂ
ಬದಲಾಗಿ ಬಿಡುತ್ತದೆ. ಮತ್ತು ಹೀಗೆ ಬದಲಾಗುತ್ತದೆ, ಅದರಲ್ಲಿ ದುಃಖ ಮತ್ತು ಅಶಾಂತಿಯ
ಹೆಸರು-ಚಿಹ್ನೆಯೇ ಇರುವುದಿಲ್ಲ. ಅಂದಾಗ ಸದಾ ಖುಷಿಯಲ್ಲಿ ನರ್ತಿಸುತ್ತಿರಿ. ಸದಾ ತಮ್ಮ ಶ್ರೇಷ್ಠ
ಕರ್ಮಗಳ ಖಾತೆಯನ್ನು ಜಮಾ ಮಾಡಿಕೊಳ್ಳುತ್ತಾ ಸಾಗಿರಿ. ಎಲ್ಲರಿಗೂ ಖುಷಿಯ ಖಜಾನೆಯನ್ನು ಹಂಚಿರಿ.
ಇಂದಿನ ಪ್ರಪಂಚದಲ್ಲಿ ಖುಷಿಯಿಲ್ಲ. ಎಲ್ಲರೂ ಖುಷಿಯ ಭಿಕಾರಿಯಾಗಿದ್ದಾರೆ, ಅವರನ್ನು ಖುಷಿಯಿಂದ
ಸಂಪನ್ನ ಮಾಡಿರಿ. ಸದಾ ಇದೇ ಸೇವೆಯಲ್ಲಿ ಮುಂದುವರೆಯುತ್ತಿರಿ. ಯಾವ ಆತ್ಮರು ಹೃದಯ ವಿಧೀರ್ಣರಾಗಿ
ಬಿಟ್ಟಿದ್ದಾರೆ, ಅವರಲ್ಲಿ ಉಮ್ಮಂಗ-ಉತ್ಸಾಹವನ್ನು ತರಿಸಿರಿ. ಏನೂ ಮಾಡಲು ಸಾಧ್ಯವಿಲ್ಲ, ಆಗಲು
ಸಾಧ್ಯವಿಲ್ಲ..... ಹೀಗೆ ಹೃದಯ ವಿಧೀರ್ಣರಾಗಿ ಬಿಟ್ಟಿದ್ದಾರೆ ಮತ್ತು ತಾವು ವಿಜಯಿಯಾಗಿ
ವಿಜಯಿಯನ್ನಾಗಿ ಮಾಡುವ ಉಮ್ಮಂಗ-ಉತ್ಸಾಹವನ್ನು ಹೆಚ್ಚಿಸುವವರಾಗಿದ್ದೀರಿ. ಸದಾ ವಿಜಯದ ಸ್ಮೃತಿಯ
ತಿಲಕವನ್ನಿಟ್ಟುಕೊಂಡಿರಿ. ತಿಲಕಧಾರಿಯೂ ಆಗಿದ್ದೀರಿ ಮತ್ತು ಸ್ವರಾಜ್ಯ ಅಧಿಕಾರಿಯೂ ಆಗಿದ್ದೀರಿ -
ಸದಾ ಇದೇ ಸ್ಮೃತಿಯಲ್ಲಿರಿ.
ಪ್ರಶ್ನೆ:-
ಯಾರು
ಸಮೀಪದಲ್ಲಿರುವ ನಕ್ಷತ್ರವಾಗಿದ್ದಾರೆ, ಅವರ ಲಕ್ಷಣಗಳೇನಾಗಿರುತ್ತದೆ?
ಉತ್ತರ:-
ಅವರಲ್ಲಿ
ಸಮಾನತೆಯು ಕಾಣಿಸುತ್ತದೆ. ಸಮೀಪದಲ್ಲಿರುವ ನಕ್ಷತ್ರಗಳಲ್ಲಿ ಬಾಪ್ದಾದಾರವರ ಗುಣ ಮತ್ತು ಕರ್ತವ್ಯವು
ಪ್ರತ್ಯಕ್ಷದಲ್ಲಿ ಕಾಣಿಸುತ್ತದೆ. ಎಷ್ಟು ಸಮೀಪತೆಯೋ ಅಷ್ಟು ಸಮಾನತೆಯಿರುತ್ತದೆ. ಅವರ ಮುಖವು
ಬಾಪ್ದಾದಾರವರನ್ನು ಸಾಕ್ಷಾತ್ಕಾರ ಮಾಡಿಸಲು ದರ್ಪಣವಾಗಿರುತ್ತದೆ. ಅವರನ್ನು ನೋಡುತ್ತಿದ್ದಂತೆಯೇ
ಬಾಪ್ದಾದಾರವರ ಪರಿಚಯವು ಪ್ರಾಪ್ತಿಯಾಗುತ್ತದೆ. ಭಲೆ ತಮ್ಮನ್ನು ನೋಡುವರು, ಆದರೆ ಆಕರ್ಷಣೆ
ಬಾಪ್ದಾದಾರವರ ಕಡೆ ಆಗುತ್ತದೆ. ಇದಕ್ಕೆ ಮಕ್ಕಳು ತಂದೆಯನ್ನು ಪ್ರತ್ಯಕ್ಷ ಮಾಡುವುದು ಎಂದು
ಹೇಳಲಾಗುತ್ತದೆ. ಸ್ನೇಹಿಯ ಪ್ರತೀ ಹೆಜ್ಜೆಯಲ್ಲಿ, ಯಾರೊಂದಿಗೆ ಸ್ನೇಹವಿದೆ ಅವರ ಲಕ್ಷಣಗಳು ಕಂಡು
ಬರುತ್ತದೆ. ಎಷ್ಟು ಹರ್ಷಿತಮೂರ್ತಿ ಅಷ್ಟು ಆಕರ್ಷಣಾ ಮೂರ್ತಿ ಆಗಿ ಬಿಡುತ್ತಾರೆ. ಒಳ್ಳೆಯದು.
ವರದಾನ:
ಸೇವೆಯ ಮೂಲಕ ಅನೇಕ ಆತ್ಮರ ಆಶೀರ್ವಾದವನ್ನು ಪ್ರಾಪ್ತಿ ಮಾಡಿಕೊಂಡು ಸದಾ ಮುಂದುವರೆಯುವ ಮಹಾದಾನಿ
ಭವ.
ಮಹಾದಾನಿಯಾಗುವುದು
ಅರ್ಥಾತ್ ಅನ್ಯರ ಸೇವೆ ಮಾಡುವುದು, ಅನ್ಯರ ಸೇವೆಯನ್ನು ಮಾಡುವುದರಿಂದ ಸ್ವಯಂನ ಸೇವೆಯು ಸ್ವತಹವಾಗಿ
ಆಗಿ ಬಿಡುತ್ತದೆ. ಮಹಾದಾನಿ ಆಗುವುದು ಅರ್ಥಾತ್ ಸ್ವಯಂನ್ನು ಸಂಪನ್ನ ಮಾಡಿಕೊಳ್ಳುವುದು, ಎಷ್ಟು
ಆತ್ಮರಿಗೆ ಸುಖ, ಶಕ್ತಿ ಹಾಗೂ ಜ್ಞಾನ ದಾನ ಮಾಡುತ್ತೀರಿ, ಅಷ್ಟು ಆತ್ಮರಿಗೆ ಪ್ರಾಪ್ತಿಯ ಧ್ವನಿ
ಅಥವಾ ಧನ್ಯವಾದಗಳೇನು ಬರುತ್ತದೆ, ಅದು ತಮಗಾಗಿ ಆಶೀರ್ವಾದದ ರೂಪವಾಗಿ ಬಿಡುತ್ತದೆ. ಈ
ಆಶೀರ್ವಾದಗಳೇ ಮುಂದುವರೆಯುವ ಸಾಧನವಾಗಿದೆ. ಯಾರಿಗೆ ಆಶೀರ್ವಾದವು ಸಿಗುತ್ತದೆ, ಅವರು ಸದಾ
ಖುಷಿಯಾಗಿರುತ್ತಾರೆ. ಅಂದಾಗ ಪ್ರತಿನಿತ್ಯ ಅಮೃತವೇಳೆಯಲ್ಲಿ ಮಹಾದಾನಿಯಾಗುವ ಕಾರ್ಯಕ್ರಮ
ಹಾಕಿಕೊಳ್ಳಿರಿ. ಯಾವುದೇ ಸಮಯ ಅಥವಾ ದಿನವು ಹೀಗಾಗಬಾರದು, ಅದರಲ್ಲಿ ದಾನವಾಗಲಿಲ್ಲ ಎನ್ನುವಂತೆ.
ಸ್ಲೋಗನ್:
ಈಗಿನ
ಪ್ರತ್ಯಕ್ಷ ಫಲವು ಆತ್ಮಕ್ಕೆ ಹಾರುವ ಕಲೆಯ ಬಲವನ್ನು ಕೊಡುತ್ತದೆ.
ಮುರಳಿ ಪ್ರಶ್ನೆಗಳು –
1. “ಸನ್ ಶೋಸ್ ಫಾದರ್”
ಯಾವುದಕ್ಕೆ ಹೇಳಲಾಗುತ್ತದೆ?
2. ಪದಮಾಪದಮ ಭಾಗ್ಯಶಾಲಿ
ಯಾವುದಕ್ಕೆ ಹೇಳಲಾಗುತ್ತದೆ?
3. ಇವತ್ತಿನ
ಪ್ರಪಂಚದಲ್ಲಿ ಧನವು ಇದೆ, ಭಯವೂ ಇದೆ. ಎಲ್ಲ ಆತ್ಮಗಳು ಹೇಗಿದ್ದಾರೆ ಮತ್ತು ತಂದೆಯ ಮಕ್ಕಳು
ಹೇಗಿದ್ದಾರೆ?
4. ಮಕ್ಕಳು
ವ್ಯಾಪಾರವನ್ನು ಹೇಗೆ, ಯಾವ ರೀತಿಯಲ್ಲಿ ವ್ಯಾಪಾರವನ್ನು ಮಾಡುತ್ತಾರೆ?
ಅ. ಒಂದು ಸೆಕೆಂಡಿನಲ್ಲಿ ಮತ್ತು ಒಂದು ಮಾತಿನಲ್ಲಿ “ನನ್ನ ಬಾಬಾ” ಎನ್ನುವುದರಿಂದ
ಆ. ಒಂದು ಜನ್ಮಕ್ಕೆ ಕೊಟ್ಟು 21 ಜನ್ಮಗಳಿಗೆ ತೆಗೆದುಕೊಳ್ಳುತ್ತಾರೆ.
ಇ. ದೊಡ್ಡ ವ್ಯಾಪಾರವನ್ನು ಸಾಧಾರಣ ರೀತಿಯಲ್ಲಿ ಮಾಡುತ್ತಾರೆ.
5. ____ ಎಂದರೆ ಭಯ
ಇರುತ್ತದೆ. _______ ಎಂದರೆ ನಿರ್ಭಯ ಇರುತ್ತದೆ.
ಅ. ನಾನು, ನೀನು
ಆ. ನನ್ನತನ, ಬಾಬಾ
ಇ. ಮೋಹ, ಪ್ರೀತಿ
6. ಪದಮಾಪದಮ ಭಾಗ್ಯಶಾಲಿ
ಆತ್ಮಗಳು ಎಲ್ಲ ಸಬ್ಜೆಕ್ಟ್ ________
ಅ. ಸಂಪೂರ್ಣ ಸ್ವರೂಪದ
ಆ. ಸಂಪನ್ನ ಸ್ವರೂಪದ
ಇ. ಸಫಲತಾ ಸ್ವರೂಪದ
7. ಹೊಸ ಪ್ರಪಂಚವು ಹೇಗೆ
ಇರುತ್ತದೆ?
ಅ. ಶರೀರ ಸಹಿತ ಪಂಚ ತತ್ವಗಳು ಸತೋಪ್ರಧಾನವಾಗಿರುತ್ತದೆ.
ಆ. ದುಃಖ ಅಶಾಂತಿಯ ಹೆಸರು ನಿಶಾನೆಯಿರುವುದಿಲ್ಲ
ಇ. ಸದಾ ಖುಷಿ, ಆರೋಗ್ಯಶಾಲಿ, ಸಂಪತ್ತು ಭರಿತವಿರುತ್ತದೆ.
8. ನಿಮಿತ್ತ ಆತ್ಮಗಳು
ಶಕ್ತಿಶಾಲಿಯಾದಾಗ ಯಾವ ಶಕ್ತಿಯು ಶಕ್ತಿಶಾಲಿ ಆಗುವುದು?
ಅ. ಸೇವೆಯ ಶಕ್ತಿ
ಆ. ಬುದ್ಧಿ ಶಕ್ತಿ
ಇ. ಮನಸ್ಸಾ ಶಕ್ತಿ
9. ಕುಮಾರರ ಜೀವನ ಯಾವ
ಜೀವನವಾಗಿದೆ?
ಅ. ಅದೃಷ್ಟದ ಜೀವನ
ಆ. ಶ್ರೆಷ್ಠ ಜೀವನ
ಇ. ಸುಖಮಯ ಜೀವನ
10. ಜೋಡಿಸಿ ಬರೆಯಿರಿ
1) ಸೇವೆಯ ಗೋಲ್ಡನ್ ಚಾನ್ಸ್ ಸದಾ ಶಕ್ತಿಶಾಲಿಯಾಗುವುದು
2) ವ್ಯರ್ಥದ ಸಮಾಪ್ತಿ ಖಜಾನೆಯನ್ನು ಹಂಚುವುದು
3) ಮಾತುಗಳನ್ನು ಮಾತನಾಡುವುದಿಲ್ಲ ಭಾಗ್ಯದ ಚಿಹ್ನೆಯಾಗಿದೆ
4) ಎಲ್ಲರಿಗೆ ಖುಷಿಯನ್ನು ಕೊಡುವುದೆಂದರೆ ಮುಖ ಮಾತನಾಡುವುದು