31.05.20    Avyakt Bapdada     Kannada Murli     18.01.86     Om Shanti     Madhuban


ಮನಸ್ಸಾ ಸೇವೆ ಹಾಗೂ ನಿರ್ಭಯತೆಯ ಶಕ್ತಿ


ಇಂದು ವೃಕ್ಷಪತಿಯು ತನ್ನ ಹೊಸ ವೃಕ್ಷದ ಫೌಂಡೇಷನ್ನಲ್ಲಿರುವ ಮಕ್ಕಳನ್ನು ನೋಡುತ್ತಿದ್ದಾರೆ. ವೃಕ್ಷಪತಿಯು ತನ್ನ ವೃಕ್ಷ ಬುಡವನ್ನು ನೋಡುತ್ತಿದ್ದಾರೆ. ವೃಕ್ಷಪತಿಯ ಪಾಲನೆಯಲ್ಲಿ ಬೆಳೆದಿರುವ ಶ್ರೇಷ್ಠ ಫಲ ಸ್ವರೂಪ ಎಲ್ಲಾ ಮಕ್ಕಳನ್ನು ನೋಡುತ್ತಿದ್ದಾರೆ. ಆದಿ ದೇವನು ತನ್ನ ಆದಿ ರತ್ನಗಳನ್ನು ನೋಡುತ್ತಿದ್ದಾರೆ. ಪ್ರತಿಯೊಂದು ರತ್ನದ ಮಹಾನತೆ, ವಿಶೇಷತೆಯು ತನ್ನ-ತನ್ನದಾಗಿದೆ. ಆದರೆ ಇರುವುದೆಲ್ಲರೂ ಹೊಸ ರಚನೆಗೆ ನಿಮಿತ್ತರಾಗಿರುವ ವಿಶೇಷ ಆತ್ಮರಾಗಿದ್ದಾರೆ. ಏಕೆಂದರೆ ತಂದೆಯನ್ನು ಗುರುತಿಸುವುದರಲ್ಲಿ, ತಂದೆಯ ಕಾರ್ಯದಲ್ಲಿ ಸಹಯೋಗಿಯಾಗುವುದರಲ್ಲಿ ನಿಮಿತ್ತರಾದರು ಮತ್ತು ಅನೇಕರ ಮುಂದೆ ಉದಾಹರಣೆಯಾದರು. ಪ್ರಪಂಚದವರನ್ನು ನೋಡದೆ, ಹೊಸ ಪ್ರಪಂಚವನ್ನಾಗಿ ಮಾಡುವವರನ್ನು ನೋಡಿದರು. ಅಟಲ ನಿಶ್ಚಯ ಮತ್ತು ಸಾಹಸದನುಸಾರವಾಗಿ ಮುಂದೆ ಬಂದು ಪ್ರಪಂಚದ ಮುಂದೆ ತೋರಿಸಿದರು. ಆದ್ದರಿಂದ ಎಲ್ಲರೂ ವಿಶೇಷ ಆತ್ಮರಾಗಿದ್ದೀರಿ. ವಿಶೇಷ ಆತ್ಮರನ್ನು ವಿಶೇಷ ರೂಪದಿಂದ ಸಂಘಟಿತ ರೂಪದಲ್ಲಿ ನೋಡುತ್ತಾ, ಬಾಪ್ದಾದಾರವರೂ ಸಹ ಹರ್ಷಿತವಾಗುತ್ತಾರೆ. ಮತ್ತು ಇಂತಹ ಮಕ್ಕಳ ಮಹಿಮೆಯ ಗಾಯನ ಮಾಡುತ್ತಾರೆ. ತಂದೆಯನ್ನು ಗುರುತಿಸಿದಿರಿ ಮತ್ತು ತಂದೆಯವರೂ ಸಹ ಮಕ್ಕಳು ಯಾರೇ ಆಗಿದ್ದಾರೆ, ಹೇಗೆಯೇ ಇರಬಹುದು ಇಷ್ಟ ಪಟ್ಟರು. ಏಕೆಂದರೆ ಹೃದಯ ರಾಮನಿಗೆ ಸತ್ಯ ಹೃದಯದವರು ಪ್ರಿಯವಾಗುತ್ತಾರೆ. ಪ್ರಪಂಚದ ಜ್ಞಾನವಿಲ್ಲದಿರಬಹುದು ಆದರೆ ತಂದೆಗೆ ಪ್ರಪಂಚದ ಜ್ಞಾನಿಗಳು ಇಷ್ಟವಿಲ್ಲ, ದಿಲ್ವಾಲೆ ಇಷ್ಟವಾಗುತ್ತಾರೆ. ಬುದ್ಧಿಯನ್ನಂತು ತಂದೆಯವರು ಇಷ್ಟು ಶ್ರೇಷ್ಠವಾಗಿರುವುದನ್ನು ಕೊಟ್ಟು ಬಿಡುತ್ತಾರೆ, ಅದರಿಂದ ರಚೈತನನ್ನು ತಿಳಿದುಕೊಳ್ಳುವುದರಿಂದ ರಚನೆಯ ಆದಿ, ಮಧ್ಯ, ಅಂತ್ಯದ ಜ್ಞಾನವನ್ನು ತಿಳಿದು ಬಿಡುತ್ತೀರಿ. ಆದ್ದರಿಂದ ಬಾಪ್ದಾದಾರವರು ಹೃದಯದಿಂದ ಇಷ್ಟ ಪಡುತ್ತಾರೆ. ಸತ್ಯ ಸ್ವಚ್ಛ ಹೃದಯದ ಆಧಾರದಿಂದ ನಂಬರ್ ಸಹ ಆಗುತ್ತದೆ. ಸೇವೆಯ ಆಧಾರದಿಂದಲ್ಲ. ಸೇವೆಯಲ್ಲಿಯೂ ಸತ್ಯ ಹೃದಯದಿಂದ ಸೇವೆ ಮಾಡಿದಿರಾ ಅಥವಾ ಕೇವಲ ಬುದ್ಧಿಯ ಆಧಾರದಿಂದ ಸೇವೆ ಮಾಡಿದಿರಾ! ಹೃದಯದ ಧ್ವನಿಯು ಹೃದಯದವರೆಗೆ ತಲುಪುತ್ತದೆ, ಬುದ್ಧಿಯ ಧ್ವನಿಯು ಬುದ್ಧಿಯವರೆಗೆ ತಲುಪುತ್ತದೆ.

ಇಂದು ಬಾಪ್ದಾದಾರವರು ದಿಲ್ವಾಲಾ ಮಕ್ಕಳ ಲಿಸ್ಟನ್ನು ನೋಡುತ್ತಿದ್ದರು. ಬುದ್ಧಿವಂತರು ಹೆಸರನ್ನು ಗಳಿಸುತ್ತಾರೆ, ದಿಲ್ವಾಲಾ ಮಕ್ಕಳು ಆಶೀರ್ವಾದವನ್ನು ಗಳಿಸುತ್ತಾರೆ. ಅಂದಮೇಲೆ ಎರಡು ಮಾಲೆಗಳಾಗುತ್ತಿದ್ದವು ಏಕೆಂದರೆ ಇಂದು ವತನದಲ್ಲಿ ಅಡ್ವಾನ್ಸ್ನಲ್ಲಿ ಹೋಗಿರುವ ಆತ್ಮರು ಇಮರ್ಜ್ ಆಗಿದ್ದರು. ಆ ವಿಶೇಷ ಆತ್ಮರು ಆತ್ಮಿಕ ವಾರ್ತಾಲಾಪ ಮಾಡುತ್ತಿದ್ದರು. ವಾರ್ತಾಲಾಪದಲ್ಲಿ ಮುಖ್ಯವಾದ ಮಾತೇನಿರಬಹುದು? ತಾವೆಲ್ಲರೂ ಸಹ ವಿಶೇಷ ಆತ್ಮರನ್ನು ಇಮರ್ಜ್ ಮಾಡಿದಿರಲ್ಲವೆ! ವತನದಲ್ಲಿಯೂ ವಾರ್ತಾಲಾಪ ನಡೆಯುತ್ತಿತ್ತು - ಅದೇನೆಂದರೆ, ಸಮಯ ಮತ್ತು ಸಂಪೂರ್ಣತೆ ಎರಡರಲ್ಲಿ ಎಷ್ಟು ಅಂತರವು ಉಳಿದುಕೊಂಡಿದೆ! ಎಷ್ಟು ಸಂಖ್ಯೆಯಲ್ಲಿ ತಯಾರಿಯಾಗಿದ್ದಾರೆ ಅಥವಾ ಈಗ ಆಗುವವರಿದ್ದಾರೆ? ನಂಬರ್ವಾರ್ ಎಲ್ಲರೂ ಸ್ಟೇಜಿನ ಮೇಲೆ ಬರುತ್ತಿದ್ದಾರಲ್ಲವೆ. ಅಡ್ವಾನ್ಸ್ ಪಾರ್ಟಿಯವರು ಕೇಳುತ್ತಿದ್ದರು - ಈಗ ನಾವಂತು ಅಡ್ವಾನ್ಸ್ನಲ್ಲಿ ಕಾರ್ಯವನ್ನು ಮಾಡುತ್ತಿದ್ದೇವೆ ಆದರೆ ನಮ್ಮ ಜೊತೆಗಾರರು ನಮ್ಮ ಕಾರ್ಯದಲ್ಲಿ ವಿಶೇಷವಾಗಿ ಯಾವ ಸಹಯೋಗವನ್ನು ಕೊಡುತ್ತಿದ್ದಾರೆ? ಆ ಮಾಲೆಯನ್ನೂ ಮಾಡುತ್ತಿದ್ದೇವೆ. ಯಾವ ಮಾಲೆಯನ್ನು ಮಾಡುತ್ತಿದ್ದಾರೆ? ಎಲ್ಲೆಲ್ಲಿ ಯಾರು-ಯಾರದು ಹೊಸ ಪ್ರಪಂಚದ ಆರಂಭ ಮಾಡಲು ಜನ್ಮವಾಗುತ್ತದೆ. ಅದು ನಿಶ್ಚಿತವಾಗುತ್ತಿದೆ. ಅವರನ್ನೂ ಸಹ ನಮ್ಮ ಕಾರ್ಯದಲ್ಲಿ ವಿಶೇಷವಾಗಿ ಸಹಯೋಗವು, ಸೂಕ್ಷ್ಮ ಶಕ್ತಿಶಾಲಿ ಮನಸ್ಸಾ ಸಹಯೋಗವು ಬೇಕು. ಯಾರು ಶಕ್ತಿಶಾಲಿ ಆತ್ಮರು ಸ್ಥಾಪನೆಗೆ ನಿಮಿತ್ತರಾಗುವವರಿದ್ದಾರೆ ಅವರು ಸ್ವಯಂ ಭಲೆ ಪಾವನರಿದ್ದಾರೆ ಆದರೆ ವಾಯುಮಂಡಲ, ವ್ಯಕ್ತಿಗಳ, ಪ್ರಕೃತಿಯ ತಮೋಗುಣಿಯಿದೆ. ಅತೀ ತಮೋಗುಣಿಯ ಮಧ್ಯೆ, ಅಲ್ಪ ಸತೋಗುಣಿ ಆತ್ಮರು ಕಮಲಪುಷ್ಪ ಸಮಾನರಿದ್ದಾರೆ. ಆದ್ದರಿಂದ ಇಂದು ವಾರ್ತಾಲಾಪ ಮಾಡುತ್ತಾ, ತಮ್ಮ ಅತಿ ಸ್ನೇಹಿ ಶ್ರೇಷ್ಠಾತ್ಮರು ಮುಗುಳ್ನಗುತ್ತಾ ಮಾತನಾಡುತ್ತಿದರು - ನಮ್ಮ ಜೊತೆಗಾರರಿಗೆ ಇಷ್ಟು ಶ್ರೇಷ್ಠ ಸೇವೆಯ ಸ್ಮೃತಿಯಿದೆಯೇ ಅಥವಾ ಸೇವಾಕೇಂದ್ರದಲ್ಲಿಯೇ ಬ್ಯುಸಿಯಾಗಿ ಬಿಟ್ಟಿದ್ದಾರೆಯೇ ಅಥವಾ ಝೋನ್ ನಲ್ಲಿಯೇ ಬ್ಯುಸಿಯಾಗಿ ಬಿಟ್ಟಿದ್ದಾರೆಯೇ?

ಇಷ್ಟೆಲ್ಲಾ ಪ್ರಕೃತಿಯ ಪರಿವರ್ತನೆಯ ಕಾರ್ಯ, ತಮೋಗುಣಿ ಸಂಸ್ಕಾರವಿರುವ ಇಷ್ಟೊಂದು ಆತ್ಮರ ವಿನಾಶ ಯಾವುದಾದರೂ ವಿಧಿಯಿಂದ ಆಗುತ್ತದೆ. ಆದರೆ ಅಚಾನಕ್ ಮೃತ್ಯು, ಅಕಾಲಮೃತ್ಯು, ಸಮೂಹ ರೂಪದಲ್ಲಿ ಮೃತ್ಯು, ಆ ಆತ್ಮರ ವೈಬ್ರೇಷನ್ ಎಷ್ಟು ತಮೋಗುಣಿಯಾಗಿರಬಹುದು! ಅದನ್ನು ಪರಿವರ್ತನೆ ಮಾಡುವುದು ಮತ್ತು ಸ್ವಯಂನ್ನೂ ಹಾಗೆಯೇ ರಕ್ತದ ಕೋಡಿ ಹರಿಯುವಂತಹ ವೈಬ್ರೇಷನ್ನಿಂದ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮತ್ತು ಆ ಆತ್ಮರಿಗೆ ಸಹಯೋಗ ಕೊಡುವುದು - ಈ ವಿಶಾಲ ಕಾರ್ಯಕ್ಕಾಗಿ ತಯಾರು ಮಾಡಿಕೊಳ್ಳುತ್ತಿದ್ದೀರಾ? ಅಥವಾ ಕೇವಲ ಯಾರೇ ಬಂದರು, ತಿಳಿಸಿದೆವು ಮತ್ತು ತಿಂದೆವು - ಇದರಲ್ಲಿಯೇ ಸಮಯವಂತು ಕಳೆದು ಹೋಗುತ್ತಿಲ್ಲವೇ? ಅದನ್ನು ಕೇಳುತ್ತಿದ್ದರು. ಇಂದು ಬಾಪ್ದಾದಾರವರು ಅವರುಗಳ ಸಂದೇಶವನ್ನು ತಿಳಿಸುತ್ತಿದ್ದಾರೆ. ಇಷ್ಟೆಲ್ಲಾ ಬೇಹದ್ದಿನ ಕಾರ್ಯವನ್ನು ಮಾಡಲು ನಿಮಿತ್ತರ್ಯಾರು? ಯಾವಾಗ ಆದಿಯಲ್ಲಿ ನಿಮಿತ್ತರಾದಿರಿ, ಅಂದಮೇಲೆ ಅಂತ್ಯದಲ್ಲಿಯೂ ಪರಿವರ್ತನೆಯ ಬೇಹದ್ದಿನ ಕಾರ್ಯದಲ್ಲಿ ನಿಮಿತ್ತರಾಗಬೇಕು ಅಲ್ಲವೆ. ಹಾಗೆ ನೋಡಿದಾಗ ಹೇಳಿಕೆಯಿದೆ - ಯಾರು ಅಂತ್ಯಗೊಳಿಸಿದರು, ಅವರು ಎಲ್ಲವನ್ನೂ ಮಾಡಿದರು. ಗರ್ಭ ಮಹಲನ್ನೂ ತಯಾರು ಮಾಡಬೇಕು, ಆಗಲೇ ಹೊಸ ರಚನೆಯ, ಯೋಗಬಲದ ಆರಂಭವಾಗುತ್ತದೆ. ಯೋಗಬಲಕ್ಕಾಗಿ ಮನಸ್ಸಾ ಶಕ್ತಿಯ ಅವಶ್ಯಕತೆಯಿದೆ. ತಮ್ಮ ಸುರಕ್ಷತೆಗಾಗಿಯೂ ಸಹ ಮನಸ್ಸಾ ಶಕ್ತಿಯು ಸಾಧನವಾಗುತ್ತದೆ. ಮನಸ್ಸಾ ಶಕ್ತಿಯ ಮೂಲಕವೇ ಸ್ವಯಂನ ಅಂತ್ಯವು ಸುಂದರ(ಸೌಭಾಗ್ಯ)ವಾಗಲು ನಿಮಿತ್ತವಾಗಬಹುದು. ಇಲ್ಲವೆಂದರೆ ಸಾಕಾರ ಸಹಯೋಗವು ಸಮಯದಲ್ಲಿ ಸಂದರ್ಭದನುಸಾರವಾಗಿ ಪ್ರಾಪ್ತಿಯೂ ಆಗದಿರಬಹುದು. ಆ ಸಮಯದಲ್ಲಿ ಮನಸ್ಸಾ ಅರ್ಥಾತ್ ಶ್ರೇಷ್ಠ ಸಂಕಲ್ಪದ ಶಕ್ತಿ, ಒಬ್ಬರ ಜೊತೆ ಲೈನ್ ಕ್ಲಿಯರ್ ಇರಲಿಲ್ಲವೆಂದರೆ ತಮ್ಮ ಬಲಹೀನತೆಗಳು ಪಶ್ಚಾತ್ತಾಪದ ರೂಪದಲ್ಲಿ ಭೂತಗಳಂತೆ ಅನುಭವವಾಗುತ್ತದೆ ಏಕೆಂದರೆ ಬಲಹೀನತೆಗಳು ಸೃತಿಯಲ್ಲಿ ಬರುವುದರಿಂದ ಭಯವು ಭೂತದಂತೆ ಅನುಭವವಾಗುತ್ತದೆ. ಈಗ ಭಲೆ ಹೇಗಾದರೂ ನಡೆಸಿ ಬಿಡುತ್ತೀರಿ. ಆದರೆ ಅಂತ್ಯದಲ್ಲಿ ಭಯದ ಅನುಭವವಾಗುತ್ತದೆ, ಆದ್ದರಿಂದ ಈಗಿನಿಂದ ಬೇಹದ್ದಿನ ಸೇವೆಗಾಗಿ, ಸ್ವಯಂನ ಸುರಕ್ಷತೆಗಾಗಿ ಮನಸ್ಸಾ ಶಕ್ತಿ ಮತ್ತು ನಿರ್ಭಯತೆಯ ಶಕ್ತಿಯನ್ನು ಜಮಾ ಮಾಡಿಕೊಳ್ಳಿರಿ, ಆಗಲೇ ಅಂತ್ಯವು ಸೌಭಾಗ್ಯ ಮತ್ತು ಬೇಹದ್ದಿನ ಕಾರ್ಯದಲ್ಲಿ ಸಹಯೋಗಿಯಾಗಿ ಬೇಹದ್ದಿನ ವಿಶ್ವದ ರಾಜ್ಯಾಧಿಕಾರಿ ಆಗುತ್ತೀರಿ. ಈಗ ತಮ್ಮ ಜೊತೆಗಾರನು, ತಮ್ಮ ಸಹಯೋಗವನ್ನು ನಿರೀಕ್ಷಿಸುತ್ತಿದ್ದಾರೆ. ಕಾರ್ಯವು ಭಲೆ ಬೇರೆ-ಬೇರೆಯದಿದೆ, ಆದರೆ ಪರಿವರ್ತನೆಗೆ ನಿಮಿತ್ತರು ಇಬ್ಬರೂ ಆಗಿದ್ದೀರಿ. ಅವರು ತಮ್ಮ ಫಲಿತಾಂಶವನ್ನು ತಿಳಿಸುತ್ತಿದ್ದರು.

ಅಡ್ವಾನ್ಸ್ ಪಾರ್ಟಿಯಲ್ಲಿ ಕೆಲವರು ಸ್ವಯಂ ಶ್ರೇಷ್ಠಾತ್ಮರ ಆಹ್ವಾನವನ್ನು ಮಾಡುವುದಕ್ಕಾಗಿ ತಯಾರಾಗಿದ್ದಾರೆ ಮತ್ತು ಆಗುತ್ತಿದ್ದಾರೆ, ಕೆಲವರು ತಯಾರು ಮಾಡಿಸುವುದರಲ್ಲಿ ತೊಡಗಿದ್ದಾರೆ. ಅವರುಗಳ ಸೇವಾ ಸಾಧನವಾಗಿದೆ - ಮಿತ್ರತ್ವ ಮತ್ತು ಸಮೀಪತೆಯ ಸಂಬಂಧ. ಅದರಿಂದ ಇಮರ್ಜ್ ರೂಪದಲ್ಲಿ ಜ್ಞಾನದ ಚರ್ಚೆಯನ್ನು ಮಾಡುವುದಿಲ್ಲ ಆದರೆ ಜ್ಞಾನಿ ಆತ್ಮನ ಸಂಸ್ಕಾರವಿರುವ ಕಾರಣದಿಂದ ಒಬ್ಬರಿನ್ನೊಬ್ಬರ ಶ್ರೇಷ್ಠ ಸಂಸ್ಕಾರ, ಶ್ರೇಷ್ಠ ವೈಬ್ರೇಷನ್ ಮತ್ತು ಸದಾ ಹೋಲಿ ಮತ್ತು ಹ್ಯಾಪಿ ಚಹರೆಯು ಒಬ್ಬರಿನ್ನೊಬ್ಬರಿಗೆ ಪ್ರೇರಣೆಯನ್ನು ಕೊಡುವ ಕಾರ್ಯವನ್ನು ಮಾಡುತ್ತಿದೆ. ಭಲೆ ಬೇರೆ-ಬೇರೆ ಪರಿವಾರದಲ್ಲಿದ್ದಾರೆ. ಆದರೆ ಯಾವುದಾದರೊಂದು ಸಂಬಂಧ ಅಥವಾ ಮಿತ್ರತೆಯ ಆಧಾರದ ಮೇಲೆ ಒಬ್ಬರಿನ್ನೊಬ್ಬರ ಸಂಪರ್ಕದಲ್ಲಿ ಬರುವುದರಿಂದ, ಆತ್ಮದ ಜ್ಞಾನವಿರುವ ಕಾರಣದಿಂದ ಈ ಅನುಭೂತಿಯಾಗುತ್ತಿರುತ್ತದೆ - ಅದೇನೆಂದರೆ, ಇವರು ನಮ್ಮವರಾಗಿದ್ದಾರೆ ಅಥವಾ ಸಮೀಪದವರಿದ್ದಾರೆ. ನಮ್ಮವರೆನ್ನುವ ಆಧಾರದಿಂದ ಒಬ್ಬರಿನ್ನೊಬ್ಬರನ್ನು ಗುರುತಿಸುತ್ತಾರೆ. ಈಗ ಸಮಯವು ಸಮೀಪಕ್ಕೆ ಬರುತ್ತಿದೆ ಆದ್ದರಿಂದ ಅಡ್ವಾನ್ಸ್ ಪಾರ್ಟಿಯ ಕಾರ್ಯವು ತೀವ್ರ ಗತಿಯಿಂದ ನಡೆಯುತ್ತಿದೆ - ಇಂತಹ ಲೇವಾದೇವಿ (ಮಾತುಕತೆ) ವತನದಲ್ಲಿ ನಡೆಯುತ್ತಿತ್ತು. ವಿಶೇಷವಾಗಿ ಜಗದಂಬಾರವರು ಎಲ್ಲಾ ಮಕ್ಕಳ ಪ್ರತಿ ಎರಡು ಮಧುರ ಮಾತುಗಳನ್ನು ಹೇಳುತ್ತಿದ್ದರು. ಎರಡು ಮಾತುಗಳಲ್ಲಿ ಎಲ್ಲರಿಗೂ ಸ್ಮೃತಿ ತರಿಸಿದರು - "ಸಫಲತೆಯ ಆಧಾರ ಸದಾ ಸಹನಾಶಕ್ತಿ ಮತ್ತು ಸಮಾವೇಶ ಮಾಡಿಕೊಳ್ಳುವ ಶಕ್ತಿಯಾಗಿದೆ, ಈ ವಿಶೇಷತೆಗಳಿಂದ ಸಫಲತೆಯು ಸದಾ ಸಹಜ ಮತ್ತು ಶ್ರೇಷ್ಠ ಅನುಭವವಾಗುವುದು" ಅನ್ಯರದನ್ನೂ ತಿಳಿಸುವುದೇ? ಇಂದು ವಾರ್ತಾಲಾಪದ ದಿನ ವಿಶೇಷವಾಗಿ ಮಿಲನವಾಗುವುದಿತ್ತು, ಆದ್ದರಿಂದ ಪ್ರತಿಯೊಬ್ಬರೂ ತನ್ನ ಅನುಭವಗಳ ವರ್ಣನೆಯನ್ನು ಮಾಡುತ್ತಿದ್ದರು. ಒಳ್ಳೆಯದು, ಮತ್ತ್ಯಾರದನ್ನು ಕೇಳುವಿರಿ? (ವಿಶ್ವ ಕಿಶೋರ್ ಭಾವುರವರದು) ಅವರಂತು ಹಾಗೆ ನೋಡಿದರೆ ಕಡಿಮೆ ಮಾತನಾಡುತ್ತಾರೆ. ಆದರೆ ಏನು ಮಾತನಾಡುತ್ತಾರೆ ಅದು ಶಕ್ತಿಶಾಲಿಯಾದ ಮಾತಾಗಿರುತ್ತದೆ. ಅವರದೂ ಸಹ ಒಂದೇ ಮಾತಿನಲ್ಲಿ ಸಾರದ ಅನುಭವವಿತ್ತು - ಯಾವುದೇ ಕಾರ್ಯದಲ್ಲಿ ಸಫಲತೆಗೆ ಆಧಾರ "ನಿಶ್ಚಯ ಅಟಲ ಮತ್ತು ನಶೆಯಿಂದ ಸಂಪನ್ನ". ಒಂದುವೇಳೆ ನಿಶ್ಚಯವು ಅಟಲವಾಗಿದೆಯೆಂದರೆ ನಶೆಯು ಸ್ವತಹವಾಗಿಯೇ ಅನ್ಯರಿಗೂ ಅನುಭವವಾಗುತ್ತದೆ. ಆದ್ದರಿಂದ ನಿಶ್ಚಯ ಮತ್ತು ನಶೆಯು ಸಫಲತೆಗೆ ಆಧಾರವಾಗಿತ್ತು. ಇದು ಅವರ ಅನುಭವವಾಗಿದೆ. ಹೇಗೆ ಸಾಕಾರ ತಂದೆಗೆ (ಬ್ರಹ್ಮಾ ಬಾಬಾ) ಸದಾ ನಿಶ್ಚಯ ಮತ್ತು ನಶೆಯಿತ್ತು - ನಾನು ಭವಿಷ್ಯದಲ್ಲಿ ವಿಶ್ವ ಮಹಾರಾಜನ್ ಈಗೀಗ ಆಗಿ ಬಿಟ್ಟೆನು. ಹಾಗೆಯೇ ವಿಶ್ವ ಕಿಶೋರ್ರವರಿಗೂ ಸಹ ಈ ನಶೆಯಿದ್ದಿತು - ನಾನು ಮೊದಲು ವಿಶ್ವ ಮಹಾರಾಜನ್ನ ಮೊದಲ ರಾಜಕುಮಾರನಾಗುವೆನು. ಈ ನಶೆಯು ವರ್ತಮಾನ ಮತ್ತು ಭವಿಷ್ಯದ ಅಟಲವಾಗಿದೆ. ಅಂದಾಗ ಸಮಾನತೆಯಾಯಿತಲ್ಲವೆ. ಯಾರು ಜೊತೆಯಲ್ಲಿದ್ದಿರಿ, ಅವರು ಹೀಗೆಯೇ ನೋಡಿದಿರಲ್ಲವೆ!

ಒಳ್ಳೆಯದು. ದೀದಿಯವರು ಏನು ಹೇಳಿದರು? ದೀದಿಯವರು ವಾರ್ತಾಲಾಪವನ್ನು ಬಹಳ ಚೆನ್ನಾಗಿ ಮಾಡುತ್ತಿದ್ದರು. ಅವರು ಹೇಳುತ್ತಾರೆ - ತಾವು ಎಲ್ಲರಿಗೂ ಸೂಚನೆಯನ್ನು ಕೊಡದೇ ಏಕೆ ಕರೆಸಿಕೊಂಡಿರಿ. ಅನುಮತಿ ತೆಗೆದುಕೊಂಡು ಬರುತ್ತಿದ್ದೆವಲ್ಲವೆ. ಒಂದುವೇಳೆ ತಾವು ಹೇಳುತ್ತೀರೆಂದರೆ ನಾವು ಅನುಮತಿ ತೆಗೆದುಕೊಂಡು ತಯಾರಾಗಿ ಬಿಡುತ್ತಿದ್ದೆವು. ತಾವು ಅನುಮತಿ ಕೊಡುತ್ತಿದ್ದಿರಾ? ಬಾಪ್ದಾದಾರವರು ಮಕ್ಕಳೊಂದಿಗೆ ವಾರ್ತಾಲಾಪ ಮಾಡುತ್ತಿದ್ದರು – ದೇಹ ಸಹಿತ ದೇಹದ ಸಂಬಂಧ, ದೇಹದ ಸಂಸ್ಕಾರ, ಎಲ್ಲಾ ಸಂಬಂಧಗಳು, ಲೌಕಿಕವಿಲ್ಲವೆಂದರೆ ಅಲೌಕಿಕವಂತು ಇದೆ. ಲೌಕಿಕ ಸಂಬಂಧದಿಂದ, ದೇಹದಿಂದ, ಸಂಸ್ಕಾರದಿಂದ ನಷ್ಟಮೋಹಿಯಾಗುವ ವಿಧಿ - ಇದೇ ಡ್ರಾಮಾದಲ್ಲಿ ನೊಂದಣಿಯಾಗಿದೆ. ಆದ್ದರಿಂದ ಅಂತ್ಯದಲ್ಲಿ ಎಲ್ಲರಿಂದ ನಷ್ಟಮೋಹಿಯಾಗಿ ತಮ್ಮ ಕರ್ತವ್ಯದಲ್ಲಿ ತಲುಪಿಬಿಟ್ಟಿರಿ. ಭಲೆ ವಿಶ್ವ ಕಿಶೋರ್ರವರಿಗೆ ಮುಂಚಿತವಾಗಿಯೇ ಸ್ವಲ್ಪ ಗೊತ್ತಿತ್ತು. ಆದರೆ ಯಾವ ಸಮಯ ಹೋಗುವ ಸಮಯವಾಗಿತ್ತು, ಆ ಸಮಯದಲ್ಲಿ ಅವರೂ ಮರೆತು ಬಿಟ್ಟಿದ್ದರು. ಇದೂ ಸಹ ಡ್ರಾಮಾದಲ್ಲಿ ನಷ್ಟಮೋಹಿಯಾಗುವ ವಿಧಿಯು ನೊಂದಣಿಯಾಗಿತ್ತು, ಅದು ರಿಪೀಟ್ ಆಗುತ್ತಿದೆ. ಏಕೆಂದರೆ ಸ್ವಲ್ಪ ತಮ್ಮ ಪರಿಶ್ರಮ ಮತ್ತು ಸ್ವಲ್ಪ ತಂದೆಯವರು, ಡ್ರಾಮಾನುಸಾರವಾಗಿ ಕರ್ಮ ಬಂಧನ ಮುಕ್ತರಾಗುವುದರಲ್ಲಿ ಸಹಯೋಗವನ್ನೂ ಕೊಟ್ಟು ಬಿಡುತ್ತಾರೆ. ಯಾರು ಬಹಳ ಕಾಲದ ಸಹಯೋಗಿ ಮಕ್ಕಳಾಗಿದ್ದರು, ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ - ಈ ಮುಖ್ಯವಾದ ವಿಷಯದಲ್ಲಿ ಉತ್ತೀರ್ಣರಾಗಿದ್ದರು, ಇಂತಹ ಒಂದು ಅನುಭವ ಮಾಡುವವರಿಗೆ ಬಾಬಾರವರು ವಿಶೇಷವಾಗಿ ಅಂತಹ ಒಂದು ಸಮಯದಲ್ಲಿ ಅವಶ್ಯವಾಗಿ ಸಹಯೋಗವನ್ನು ಕೊಡುತ್ತಾರೆ. ಕೆಲವರು ಯೋಚಿಸುತ್ತಾರೆ - ಇವರೆಲ್ಲರೂ ಕರ್ಮಾತೀತರಾಗಿ ಬಿಟ್ಟಿದ್ದಾರೆಯೇ? ಇದೇ ಕರ್ಮಾತೀತ ಸ್ಥಿತಿಯಾಗಿದೆ. ಆದರೆ ಹೀಗೆಯೇ ಆದಿಯಿಂದ ಸಹಯೋಗಿ ಮಕ್ಕಳಿಗೆ ವಿಶೇಷ ಸಹಯೋಗವು ಸಿಗುತ್ತದೆ. ಆದ್ದರಿಂದ ಸ್ವಲ್ಪ ತಮ್ಮ ಪರಿಶ್ರಮವು ಕಡಿಮೆಯೆಂದೇ ಕಾಣಿಸುತ್ತದೆ. ಆದರೆ ತಂದೆಯ ಸಹಯೋಗವು ಆ ಸಮಯ, ಅಂತ್ಯದಲ್ಲಿ ವಿಶೇಷ ಅಂಕಗಳನ್ನು ಕೊಟ್ಟು ಪಾಸ್-ವಿತ್-ಆನರ್ ಮಾಡಿ ಬಿಡುತ್ತದೆ. ಅದು ಗುಪ್ತವಾಗಿರುತ್ತದೆ, ಆದ್ದರಿಂದ ಹೀಗಾಯಿತೇನು ಎಂದು ಪ್ರಶ್ನೆಯು ಉತ್ಪನ್ನವಾಗುತ್ತದೆ. ಆದರೆ ಇದು ಸಹಯೋಗದ ರಿಟರ್ನ್ ಆಗಿದೆ. ಹೇಗೆ ನಾಣ್ಣುಡಿಯಿದೆಯಲ್ಲವೆ - "ಅಂತ್ಯದ ಸಮಯದಲ್ಲಿ(ಅಂತಹ ಸಮಯ) ಕೆಲಸಕ್ಕೆ ಬರುತ್ತದೆ". ಅಂದಾಗ ಯಾರು ಮನಃಪೂರ್ವಕವಾಗಿ ಹೃದಯದಿಂದ ಸಹಯೋಗಿಯಾಗಿದ್ದರು ಅವರಿಗೆ ಇಂತಹ ಸಮಯದಲ್ಲಿ ವಿಶೇಷ ಅಂಕಗಳು ರಿಟರ್ನ್ನ ರೂಪದಲ್ಲಿ ಪ್ರಾಪ್ತಿಯಾಗುತ್ತದೆ. ಈ ರಹಸ್ಯವು ತಿಳಿಯಿತೆ? ಆದ್ದರಿಂದ ನಷ್ಟಮೋಹಿಯ ವಿಧಿಯಿಂದ ವಿಶೇಷ ಅಂಕಗಳ ಗಿಫ್ಟ್ ನಿಂದ ಸಫಲತೆಯನ್ನು ಪ್ರಾಪ್ತಿ ಮಾಡಿಕೊಂಡು ಬಿಟ್ಟರು. ಕೇಳುತ್ತಿದ್ದಿರಲ್ಲವೆ - ಕೊನೆಗೇನಾಗುವುದು ಎಂದು ತಿಳಿಯಿತೆ. ಅಂದಾಗ ಇಂದು ಈ ವಾರ್ತಾಲಾಪವನ್ನು ತಿಳಿಸುತ್ತಿದ್ದಾರೆ. ಒಳ್ಳೆಯದು - ದೀದಿಯವರೇನು ಹೇಳಿದರು? ಅವರ ಅನುಭವವಂತು ಎಲ್ಲರೂ ತಿಳಿದುಕೊಂಡೇ ಇದ್ದೀರಿ. ಅವರು ಇದೇ ಮಾತನ್ನು ಹೇಳುತ್ತಿದ್ದರು - ಸದಾ ಬಾಪ್ ಮತ್ತು ದಾದಾರವರ ಬೆರಳನ್ನು(ಶ್ರೀಮತ) ಹಿಡಿದುಕೊಳ್ಳಿ ಅಥವಾ ಬೆರಳನ್ನು ಕೊಡಿ. ಭಲೆ ಮಗುವಾಗಿ ಬೆರಳನ್ನಿಡಿಯಿರಿ, ಭಲೆ ತಂದೆಯಾಗಿ ಬೆರಳನ್ನು ಕೊಡಿ. ಎರಡೂ ರೂಪದಿಂದ ಪ್ರತೀ ಹೆಜ್ಜೆಯಲ್ಲಿ ಬೆರಳನ್ನಿಡಿದು ಜೊತೆಯ ಅನುಭವ ಮಾಡುತ್ತಾ ನಡೆಯಿರಿ - ಇದೇ ನನ್ನ ಸಫಲತೆಯ ಆಧಾರವಾಗಿದೆ. ಅಂದಾಗ ವಿಶೇಷವಾಗಿ ಇದೇ ವಾರ್ತಾಲಾಪ ನಡೆಯಿತು. ಆದಿರತ್ನಗಳ ಸಂಘಟನೆಯಲ್ಲಿ ದೀದಿಯವರು ಹೇಗೆ ಮಿಸ್ ಆಗುತ್ತಾರೆ! ಆದ್ದರಿಂದ ಅವರೂ ಇಮರ್ಜ್ ಆಗಿದ್ದರು. ಒಳ್ಳೆಯದು - ಅದಾಗಿತ್ತು ಅಡ್ವಾನ್ಸ್ ಪಾರ್ಟಿಯವರ ಮಾತುಗಳು, ತಾವೇನು ಮಾಡುವಿರಿ?

ಅಡ್ವಾನ್ಸ್ ಪಾರ್ಟಿಯವರು ತನ್ನ ಕಾರ್ಯವನ್ನು ಮಾಡುತ್ತಿದ್ದಾರೆ. ತಾವು ಅಡ್ವಾನ್ಸ್ ಫೋರ್ಸ್ (ಶಕ್ತಿ) ತುಂಬಿರಿ, ಅದರಿಂದ ಪರಿವರ್ತನೆ ಮಾಡುವ ಕಾರ್ಯದ ಕೋರ್ಸ್ ಸಮಾಪ್ತಿಯಾಗಿ ಬಿಡಲಿ ಏಕೆಂದರೆ ಫೌಂಡೇಶನ್ ಆಗಿದ್ದೀರಿ. ಬೇಹದ್ದಿನ ಸೇವಾಧಾರಿಯಾಗಿ ಬೇಹದ್ದಿನ ತಂದೆಯನ್ನು ಫೌಂಡೇಷನ್ನಲ್ಲಿರುವವರೇ ಪ್ರತ್ಯಕ್ಷ ಮಾಡುತ್ತಾರೆ. ಪ್ರತ್ಯಕ್ಷತೆಯ ನಗಾರಿ, ಬೇಗನೆ ಈ ಸೃಷ್ಟಿಯಲ್ಲಿ ಮೊಳಗುತ್ತಿರುವುದನ್ನು ಕೇಳುತ್ತೇವೆ. ನಾಲ್ಕೂ ಕಡೆಗಳಿಂದ ಒಂದೇ ನಗಾರಿ, ಒಂದೇ ವಾದ್ಯದಲ್ಲಿ ಮೊಳಗುತ್ತದೆ - "ಸಿಕ್ಕಿ ಬಿಟ್ಟರು, ಬಂದು ಬಿಟ್ಟರು". ಈಗಂತು ಬಹಳ ಕೆಲಸಗಳು ಉಳಿದುಕೊಂಡಿದೆ. ಪೂರ್ಣವಾಗುತ್ತಿದೆ ಎಂದು ತಾವು ತಿಳಿಯುತ್ತಿದ್ದೀರಾ! ಈಗಂತು ವಾಣಿಯ ಮೂಲಕ ಬದಲಾಗುವ ಕಾರ್ಯವು ನಡೆಯುತ್ತಿದೆ. ಈಗ ವೃತ್ತಿಯ ಮೂಲಕ ವೃತ್ತಿಗಳು ಬದಲಾಗಲಿ, ಸಂಕಲ್ಪದ ಮೂಲಕ ಸಂಕಲ್ಪವು ಬದಲಾಗಲಿ. ಈಗ ಈ ಅನ್ವೇಷಣೆಯಂತು ಪ್ರಾರಂಭವಾಗಿಲ್ಲ. ಸ್ವಲ್ಪ-ಸ್ವಲ್ಪ ಮಾಡಿದ್ದೀರೆಂದರೆ ಏನಾಯಿತು! ಈ ಸೂಕ್ಷ್ಮ ಸೇವೆಯು ಸ್ವತಹವಾಗಿ ಕೆಲವು ಬಲಹೀನತೆಗಳಿಂದ ಪಾರು ಮಾಡಿ ಬಿಡುತ್ತದೆ. ಇದು ಹೇಗಾಗುತ್ತದೆ ಎಂದು ಯಾರು ತಿಳಿಯುತ್ತೀರಿ! ಅವರು ಯಾವಾಗ ಈ ಸೇವೆಯಲ್ಲಿ ಬ್ಯುಸಿಯಾಗಿರುತ್ತೀರಿ. ಆಗ ಸ್ವತಹವಾಗಿಯೇ ವಾಯುಮಂಡಲವು ಹಾಗಾಗುತ್ತದೆ, ಅದರಲ್ಲಿ ತಮ್ಮ ಬಲಹೀನತೆಗಳು ತಮಗೇ ಸ್ಪಷ್ಟವಾಗಿ ಕಾಣಿಸುತ್ತದೆ ಮತ್ತು ವಾಯುಮಂಡಲದ ಕಾರಣ, ತಮಗೇ ಸಂಕೋಚವಾಗಿ ಪರಿವರ್ತನೆಯಾಗಿ ಬಿಡುತ್ತೀರಿ. ಆಗ ಹೇಳಬೇಕಾಗಿರುವುದು ಇರುವುದಿಲ್ಲ. ಹೇಳುವುದರಿಂದ ನೋಡಿ ಬಿಟ್ಟಿರಿ, ಆದ್ದರಿಂದ ಈಗ ಅಂತಹ ಯೋಜನೆ ಮಾಡಿಕೊಳ್ಳಿರಿ. ಜಿಜ್ಞಾಸುಗಳು ಇನ್ನೂ ಹೆಚ್ಚಾಗುತ್ತಾರೆ, ಇದರ ಚಿಂತೆ ಮಾಡದಿರಿ. ಸಹಯೋಗಿಗಳೂ ಹೆಚ್ಚಾಗುತ್ತಾರೆ, ಇದರದೂ ಚಿಂತೆ ಬೇಡ. ಮನೆಯೂ ಸಿಕ್ಕಿ ಬಿಡುತ್ತದೆ, ಇದರದೂ ಚಿಂತೆ ಬೇಡ. ಎಲ್ಲವೂ ಸಿದ್ದವಾಗಿ ಬಿಡುತ್ತದೆ. ಈ ವಿಧಿಯು ಇಂತಹದ್ದಾಗಿದೆ, ಅದು ಸಿದ್ಧಿ ಸ್ವರೂಪರನ್ನಾಗಿ ಮಾಡಿ ಬಿಡುತ್ತದೆ. ಒಳ್ಳೆಯದು.

ಶಕ್ತಿಗಳು ಬಹಳಷ್ಟಿದೆ, ಆದಿಯಲ್ಲಿ ನಿಮಿತ್ತರಾಗಿ ಹೆಚ್ಚು ಶಕ್ತಿಯರಾಗಿದ್ದರು. ಗೋಲ್ಡನ್ ಜುಬಿಲಿಯಲ್ಲಿ ಶಕ್ತಿಯೇ ಹೆಚ್ಚಾಗಿದ್ದಾರೆ. ಪಾಂಡವರು ಸ್ವಲ್ಪವಿದ್ದಾರೆ. ಆದರೂ ಪಾಂಡವರಿದ್ದಾರೆ. ಒಳ್ಳೆಯದು - ಸಾಹಸವನ್ನಿಟ್ಟು ಆದಿಯಲ್ಲಿ ಸಹನೆ ಮಾಡಿರುವ ಪ್ರತ್ಯಕ್ಷ ಪ್ರಮಾಣವು ಇದೇ ಆದಿ ರತ್ನಗಳಾಗಿವೆ. ವಿಘ್ನ ವಿನಾಶಕರಾಗಿ ನಿಮಿತ್ತರಾಗಿ, ನಿಮಿತ್ತರನ್ನಾಗಿ ಮಾಡುವ ಕಾರ್ಯದಲ್ಲಿ ಅಮರರಾಗಿದ್ದೀರಿ. ಆದ್ದರಿಂದ ಬಾಪ್ದಾದಾರವರಿಗೂ ಅವಿನಾಶಿ ಮತ್ತು ಅಮರ ಭವದ ವರದಾನಿ ಮಕ್ಕಳು ಸದಾ ಪ್ರಿಯರಾಗಿದ್ದಾರೆ. ಮತ್ತು ಈ ಆದಿ ರತ್ನಗಳು ಸ್ಥಾಪನೆಯ, ಅವಶ್ಯಕತೆಯ ಸಮಯದ ಸಹಯೋಗಿಯಾಗಿದ್ದಾರೆ. ಆದ್ದರಿಂದ ಹೀಗೆ ನಿಮಿತ್ತರಾಗುವ ಆತ್ಮರಿಗೆ, ಅಂತಹ ಯಾವುದೇ ಕಷ್ಟದ ಸಮಯವು ಬರುತ್ತದೆಯೆಂದರೆ ಬಾಪ್ದಾದಾರವರೂ ಸಹ ಅದರ ರಿಟರ್ನ್ ಕೊಟ್ಟು ಬಿಡುತ್ತಾರೆ. ಆದ್ದರಿಂದ ತಾವೆಲ್ಲರೂ ಯಾರೆಲ್ಲಾ ಅಂತಹ ಸಮಯದಲ್ಲಿ ನಿಮಿತ್ತರಾಗಿದ್ದಿರಿ, ಅವರಿಗೆ ಈ ವಿಶೇಷ ಗಿಫ್ಟ್ ಡ್ರಾಮಾದಲ್ಲಿ ನೊಂದಣಿಯಾಗಿದೆ ಆದ್ದರಿಂದ ವಿಶೇಷ ಗಿಫ್ಟ್ ನ ಅಧಿಕಾರಿಯಾಗಿದ್ದೀರಿ.

ತಿಳಿಯಿತೆ - ಮಾತೆಯರ ಒಂದೊಂದು ಹನಿಯ ಹಳ್ಳದಿಂದ ಸ್ಥಾಪನೆಯ ಕಾರ್ಯದ ಆರಂಭವಾಯಿತು ಮತ್ತು ಈಗ ಸಫಲತೆಯ ಸಮೀಪಕ್ಕೆ ಬಂದು ತಲುಪಿತೆಂದರೆ ತಲುಪಿತು. ಮಾತೆಯರ ಹೃದಯದ ಸಂಪಾದನೆಯಿದೆ, ವ್ಯಾಪಾರದ ಸಂಪಾದನೆಯಿಲ್ಲ. ಹೃದಯದ ಸಂಪಾದನೆಯು ಒಂದು ಸಾವಿರಕ್ಕೆ ಸಮಾನವಾಗಿದೆ. ಸ್ನೇಹದ ಬೀಜವನ್ನು ಹಾಕಲಾಗಿದೆ ಆದ್ದರಿಂದ ಸ್ನೇಹದ ಬೀಜದ ಫಲವು ಫಲೀಭೂತವಾಗುತ್ತಿದೆ, ಜೊತೆಯಲ್ಲಿ ಪಾಂಡವರಂತು ಇದ್ದಾರೆ. ಪಾಂಡವರಿಲ್ಲದೆ ಕಾರ್ಯವು ನಡೆಯುವುದಿಲ್ಲ, ಆದರೆ ಹೆಚ್ಚಿನ ಸಂಖ್ಯೆಯು ಶಕ್ತಿಯರದಾಗಿದೆ. ಆದ್ದರಿಂದ ಪಂಚ ಪಾಂಡವರೆಂದು ಬರೆದು ಬಿಟ್ಟಿದ್ದಾರೆ. ಆದರೂ ಪ್ರವೃತ್ತಿಯನ್ನು ನಿಭಾಯಿಸುತ್ತಾ ಭಿನ್ನ ಹಾಗೂ ತಂದೆಗೆ ಪ್ರಿಯರಾಗಿ ಸಾಹಸ ಮತ್ತು ಉಮ್ಮಂಗದ ಪ್ರತ್ಯಕ್ಷ ಪ್ರಮಾಣವನ್ನು ಕೊಟ್ಟಿದ್ದೀರಿ. ಆದ್ದರಿಂದ ಪಾಂಡವರೂ ಸಹ ಕಡಿಮೆಯೇನಿಲ್ಲ. ಶಕ್ತಿಯರ ಸರ್ವಶಕ್ತಿವಂತ ಎಂದು ಗಾಯನಗೊಂಡಿದೆ, ಅಂದಾಗ ಪಾಂಡವರ ಪಾಂಡವ ಪತಿಯೆಂದೂ ಗಾಯನವಿದೆ. ಆದ್ದರಿಂದ ಹೇಗೆ ನಿಮಿತ್ತರಾದಿರಿ ಹಾಗೆಯೇ ನಿಮಿತ್ತ ಭಾವವನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳುತ್ತಾ ಮುಂದೆ ಸಾಗುತ್ತಾ ಇರಿ. ಒಳ್ಳೆಯದು!

ಸದಾ ಪದಮಾಪದಮ ಭಾಗ್ಯದ ಅಧಿಕಾರಿ, ಸದಾ ಸಫಲತೆಯ ಅಧಿಕಾರಿ, ಸದಾ ಸ್ವಯಂನ್ನು ಶ್ರೇಷ್ಠ ಆಧಾರಮೂರ್ತಿ ಎಂದು ತಿಳಿದುಕೊಂಡು, ಸರ್ವರ ಉದ್ಧಾರ ಮಾಡುವಂತಹ, ಶ್ರೇಷ್ಠಾತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ವರದಾನ:  
ಅನುಭವಗಳ ಗುಹ್ಯತೆಯ ಪ್ರಯೋಗ ಶಾಲೆಯಲ್ಲಿದ್ದು ಹೊಸ ಅನ್ವೇಷಣೆಯನ್ನು ಮಾಡುವಂತಹ ಅಂತರ್ಮುಖಿ ಭವ.

ಯಾವಾಗ ಸ್ವಯಂನಲ್ಲಿ ಮೊದಲು ಸರ್ವ ಅನುಭವಗಳು ಪ್ರತ್ಯಕ್ಷವಾಗುತ್ತದೆಯೋ ಆಗ ಪ್ರತ್ಯಕ್ಷತೆಯಾಗುತ್ತದೆ - ಇದಕ್ಕಾಗಿ ಅಂತರ್ಮುಖಿಯಾಗಿ ನೆನಪಿನ ಯಾತ್ರೆ ಅಥವಾ ಪ್ರತಿಯೊಂದು ಪ್ರಾಪ್ತಿಯ ಗುಹ್ಯತೆಯಲ್ಲಿ ಹೋಗಿ ಅನ್ವೇಷಣೆ ಮಾಡಿರಿ, ಸಂಕಲ್ಪ ಧಾರಣೆ ಮಾಡಿರಿ ಮತ್ತು ಆನಂತರ ಅದರ ಪರಿಣಾಮ ಅಥವಾ ಸಿದ್ಧಿಯನ್ನು ನೋಡಿರಿ - ಯಾವ ಸಂಕಲ್ಪವನ್ನು ಮಾಡಿದೆನು, ಅದು ಸಿದ್ಧವಾಯಿತೆ ಅಥವಾ ಇಲ್ಲವೇ? ಹೀಗೆ ಅನುಭವಗಳ ಗುಹ್ಯತೆಯ ಪ್ರಯೋಗ ಶಾಲೆಯಲ್ಲಿರಿ, ಅದರಿಂದ ಅನುಭವವಾಗಲಿ - ಇವರೆಲ್ಲರೂ ಯಾವುದೇ ವಿಶೇಷ ಲಗನ್ನಿನಲ್ಲಿ ಮಗ್ನ, ಈ ಪ್ರಪಂಚದಿಂದ ಉಪರಾಂ(ಭಿನ್ನ) ಆಗಿದ್ದಾರೆ. ಕರ್ಮವನ್ನು ಮಾಡುತ್ತಾ ಯೋಗದ ಶಕ್ತಿಶಾಲಿ ಸ್ಥಿತಿಯಲ್ಲಿರುವ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಿರಿ. ಹೇಗೆ ವಾಣಿಯಲ್ಲಿ ಬರುವ ಅಭ್ಯಾಸವಿದೆ ಹಾಗೆಯೇ ಆತ್ಮೀಯತೆಯಲ್ಲಿರುವ ಅಭ್ಯಾಸವನ್ನು ಹಾಕಿಕೊಳ್ಳಿರಿ.

ಸ್ಲೋಗನ್:
ಸಂತುಷ್ಟತೆಯ ಸೀಟ್ನಲ್ಲಿ ಕುಳಿತುಕೊಂಡು ಪರಿಸ್ಥಿತಿಗಳ ಆಟವನ್ನು ನೋಡುವವರೇ ಸಂತುಷ್ಟಮಣಿ ಆಗಿದ್ದಾರೆ.


ಮುರಳಿ ಪ್ರಶ್ನೆಗಳು -

1. ತಂದೆಗೆ ಯಾವ ಮಕ್ಕಳು ಇಷ್ಟ ಮತ್ತು ಯಾವ ಮಕ್ಕಳು ಇಷ್ಟವಿಲ್ಲ?

2. ತಂದೆ ನಮಗೆ ಯಾವ ಬುದ್ಧಿಯನ್ನು ಕೊಟ್ಟಿದ್ದಾರೆ? ಅದರಿಂದ ನಾವು ಏನು ತಿಳಿದುಕೊಳ್ಳಬಹುದು?

3. ಹೃದಯವಂತರು ಏನು ಸಂಪಾದಿಸುತ್ತಾರೆ ಮತ್ತು ಬುದ್ಧಿವಂತರು ಏನು ಸಂಪಾದಿಸುತ್ತಾರೆ?

4. ವಿಶೇಷ ಆತ್ಮಗಳ ವಿಶೇಷತೆಗಳೇನು?

5. ಯೋಗ ಬಲಕ್ಕೆ ಯಾವ ಶಕ್ತಿಯ ಅವಶ್ಯಕತೆಯಿದೆ?
ಅ. ಬುದ್ಧಿಯ ಶಕ್ತಿ
ಆ. ಜ್ಞಾನದ ಶಕ್ತಿ
ಇ. ಮನಸ್ಸಾ ಶಕ್ತಿ

6. ನಮ್ಮ ಸೇಫ್ಟಿಗೊಸ್ಕರ ಯಾವ ಶಕ್ತಿಯ ಅವಶ್ಯಕತೆಯಿದೆ?
ಅ. ಯೋಗ ಶಕ್ತಿ
ಆ. ಜ್ಞಾನದ ಶಕ್ತಿ
ಇ. ಮನಸ್ಸಾ ಶಕ್ತಿ

7. ನಿರ್ಬಲತೆಯ ಸ್ಮೃತಿಯಲ್ಲಿ ಯಾವ ಅನುಭವವಾಗುತ್ತದೆ?
ಅ. ಭಯ ಭೂತ
ಆ. ಶಾಂತಿ ಸುಖದ
ಇ. ಅಶಾಂತಿ ದುಃಖದ

8. ಯಾವ ಶಕ್ತಿಗಳನ್ನು ಜಮಾ ಮಾಡಿಕೊಂಡಾಗ ಅಂತಿಮ ಸಮಯದಲ್ಲಿ ಸಹಯೋಗಿಗಳಾಗಬಹುದು?
ಅ. ಸಹನೆ ಶಕ್ತಿ ಮತ್ತು ನಿರ್ಣಯ ಶಕ್ತಿ
ಆ. ಮನಸ್ಸಾ ಶಕ್ತಿ ಮತ್ತು ನಿರ್ಭಯ ಶಕ್ತಿ
ಇ. ಸಹಯೋಗ ಶಕ್ತಿ ಮತ್ತು ಸಹನೆ ಶಕ್ತಿ

9. ವಾಣಿಯ ಮುಖಾಂತರ ಯಾವ ಕಾರ್ಯ ನಡೆಯುತ್ತಿದೆ?
ಅ. ಪರಿವರ್ತನೆಯ ಕಾರ್ಯ
ಆ. ಪುನರಾವರ್ತನೆಯ ಶಕ್ತಿ
ಇ. ಮಾರ್ಗದರ್ಶನದ ಕಾರ್ಯ

10. ಜೋಡಿಸಿ ಬರೆಯಿರಿ
1) ಸಮಯದಲ್ಲಿ ನಿಮಿತ್ತರಾಗುವುದು ನಶೆಯಿಂದ ಸಂಪನ್ನರಾಗುತ್ತೇವೆ
2) ಅಲೌಕಿಕ ಸಂಬಂಧ ಮೇನ್ ಸಬ್ಜೆಕ್ಟ್
3) ಸಹಯೋಗಿ ಮಕ್ಕಳು ನಷ್ಟಮೋಹಿಗಳಾಗುವುದು
4) ನಿಶ್ಚಯ ಅಟಲವಾಗಿದ್ದರೆ ಗಿಫ್ಟ್ ಪಡೆದುಕೊಳ್ಳುವುದು