17.05.20 Avyakt Bapdada
Kannada
Murli
13.01.86 Om Shanti Madhuban
ಬ್ರಾಹ್ಮಣ ಜೀವನ - ಸದಾ
ಬೇಹದ್ದಿನ ಖುಷಿಗಳ ಜೀವನ
ಇಂದು ಬಾಪ್ದಾದಾರವರು
ತನ್ನ ಹೋಲಿ ಮತ್ತು ಹ್ಯಾಪಿ ಹಂಸಗಳ ಸಭೆಯನ್ನು ನೋಡುತ್ತಿದ್ದಾರೆ. ಎಲ್ಲರೂ ಹೋಲಿ (ಪವಿತ್ರ)ಯ
ಜೊತೆಗೆ ಹ್ಯಾಪಿ ಸದಾ ಇರುತ್ತೀರಾ? ಹೋಲಿ ಅರ್ಥಾತ್ ಪವಿತ್ರತೆಯ ಪ್ರತ್ಯಕ್ಷ ಪ್ರಮಾಣ. ಹ್ಯಾಪಿ
ಅರ್ಥಾತ್ ಖುಷಿಯು ಸದಾ ಪ್ರತ್ಯಕ್ಷ ರೂಪದಲ್ಲಿ ಕಾಣಿಸುತ್ತದೆ. ಒಂದುವೇಳೆ ಖುಷಿಯಿಲ್ಲವೆಂದರೆ
ಅವಶ್ಯವಾಗಿ ಯಾವುದಾದರೂ ಅಪವಿತ್ರತೆ ಅರ್ಥಾತ್ ಸಂಕಲ್ಪ ಅಥವಾ ಕರ್ಮವು ಯಥಾರ್ಥವಾಗಿ ಇಲ್ಲ,
ಆದ್ದರಿಂದ ಖುಷಿಯಿಲ್ಲ. ಅಪವಿತ್ರತೆಯೆಂದರೆ ಕೇವಲ 5 ವಿಕಾರಗಳಿಗೆ ಹೇಳಲಾಗುವುದಿಲ್ಲ. ಆದರೆ
ಸಂಪೂರ್ಣ ಆತ್ಮರಿಗಾಗಿ, ದೇವಾತ್ಮರಿಗಾಗಿ ಅಯಥಾರ್ಥ, ವ್ಯರ್ಥ, ಸಾಧಾರಣ ಸಂಕಲ್ಪ, ಮಾತು ಹಾಗೂ
ಕರ್ಮವನ್ನೂ ಸಂಪೂರ್ಣ ಪವಿತ್ರತೆಯೆಂದು ಹೇಳಲಾಗುವುದಿಲ್ಲ. ಸಂಪೂರ್ಣ ಸ್ಥಿತಿಯ ಸಮೀಪಕ್ಕೆ
ತಲುಪುತ್ತಿದ್ದೀರಿ ಆದ್ದರಿಂದ ವರ್ತಮಾನ ಸಮಯದನುಸಾರ ವ್ಯರ್ಥ ಮತ್ತು ಸಾಧಾರಣ ಕರ್ಮವಾಗಬಾರದು.
ಇದರಲ್ಲಿಯೂ ಪರಿಶೀಲನೆ ಮತ್ತು ಪರಿವರ್ತನೆಯಿರಬೇಕು. ಎಷ್ಟು ಸಮರ್ಥ ಮತ್ತು ಶ್ರೇಷ್ಠ ಸಂಕಲ್ಪ,
ಮಾತು ಮತ್ತು ಕರ್ಮವಿರುತ್ತದೆಯೋ ಅಷ್ಟೇ ಸದಾ ಖುಷಿಯ ಹೊಳಪು, ಅದೃಷ್ಟದ ನಶೆಯ ಅನುಭವವಾಗುತ್ತದೆ
ಮತ್ತು ಅನುಭವ ಮಾಡಿಸುತ್ತದೆ. ಬಾಪ್ದಾದಾರವರು ಎಲ್ಲಾ ಮಕ್ಕಳಲ್ಲಿ ಇವೆರಡು ಮಾತುಗಳಲ್ಲಿ ಪರಿಶೀಲನೆ
ಮಾಡುತ್ತಿದ್ದರು - ಪವಿತ್ರತೆಯನ್ನು ಎಲ್ಲಿಯವರೆಗೆ ಧಾರಣೆ ಮಾಡಿಕೊಂಡಿದ್ದಾರೆ! ವ್ಯರ್ಥ ಮತ್ತು
ಸಾಧಾರಣತೆಯು ಈಗಿನವರೆಗೆ ಎಲ್ಲಿಯವರೆಗೆ ಇದೆ? ಮತ್ತು ಆತ್ಮಿಕ ಖುಷಿ, ಅವಿನಾಶಿ ಖುಷಿ, ಆಂತರಿಕ
ಖುಷಿಯು ಎಲ್ಲಿಯವರೆಗೆ ಇರುತ್ತದೆ! ಎಲ್ಲಾ ಬ್ರಾಹ್ಮಣ ಮಕ್ಕಳಲ್ಲಿ ಬ್ರಾಹ್ಮಣ ಜೀವನವನ್ನು ಧಾರಣೆ
ಮಾಡಿಕೊಳ್ಳುವ ಲಕ್ಷ್ಯವೇ ಆಗಿದೆ - ಸದಾ ಖುಷಿಯಾಗಿರುವುದು. ಖುಷಿಯ ಜೀವನವನ್ನು ವ್ಯತೀತ
ಮಾಡುವುದಕ್ಕಾಗಿಯೇ ಬ್ರಾಹ್ಮಣರಾಗಿದ್ದೀರಿ, ಪುರುಷಾರ್ಥದ ಪರಿಶ್ರಮ ಅಥವಾ ಯಾವುದಾದರೊಂದು
ತೊಡಕಿನಲ್ಲಿರುವುದಕ್ಕಾಗಿ ಬ್ರಾಹ್ಮಣರಾಗಿಲ್ಲ.
ಆತ್ಮಿಕ ಆಂತರಿಕ ಖುಷಿ ಅಥವಾ ಅತೀಂದ್ರಿಯ ಸುಖವೇನು ಇಡೀ ಕಲ್ಪದಲ್ಲಿ ಪ್ರಾಪ್ತಿಯಾಗಲು
ಸಾಧ್ಯವಿಲ್ಲ, ಅದನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಬ್ರಾಹ್ಮಣರಾಗಿದ್ದೀರಿ. ಆದರೆ
ಪರಿಶೀಲನೆ ಮಾಡಿರಿ - ಖುಷಿಯು ಯಾವ ಸಾಧನದ ಆಧಾರದ ಮೇಲೆ, ಯಾವುದಾದರೂ ಅಲ್ಪಕಾಲದ ಪ್ರಾಪ್ತಿಯ
ಆಧಾರದ ಮೇಲೆ, ಅಥವಾ ಸ್ವಲ್ಪಸಮಯದ ಸಫಲತೆಯ ಆಧಾರದ ಮೇಲೆ, ಮಾನ್ಯತೆ ಅಥವಾ ಹೆಸರಿನ ಆಧಾರದ ಮೇಲೆ,
ಮನಸ್ಸಿನ ಅಲ್ಪಕಾಲದ ಇಚ್ಛೆಗಳ ಆಧಾರದ ಮೇಲೆ ಅಥವಾ ಇದೇ ಇಷ್ಟವಾಗುತ್ತದೆ - ಭಲೆ ವ್ಯಕ್ತಿ, ಭಲೆ
ಸ್ಥಾನ ಅಥವಾ ವೈಭವ, ಹಾಗೆಯೇ ಮನಸ್ಸಿಗೆ ಇಷ್ಟವಾಗುವುದರನುಸಾರ ಖುಷಿಯ ಪ್ರಾಪ್ತಿಯ ಆಧಾರವಂತು
ಇಲ್ಲವೇ? ಈ ಆಧಾರಗಳಿಂದ ಖುಷಿಯ ಪ್ರಾಪ್ತಿ - ಇದ್ಯಾವುದೂ ವಾಸ್ತವಿಕ ಖುಷಿಯಲ್ಲ. ಅವಿನಾಶಿ
ಖುಷಿಯಲ್ಲ. ಆಧಾರವು ನಡುಗಿತೆಂದರೆ ಖುಷಿಯೂ ಅಲುಗಾಡಿ ಬಿಡುತ್ತದೆ. ಇಂತಹ ಖುಷಿಯನ್ನು ಪ್ರಾಪ್ತಿ
ಮಾಡಿಕೊಳ್ಳುವುದಕ್ಕಾಗಿ ಬ್ರಾಹ್ಮಣರಾಗಿಲ್ಲ. ಅಲ್ಪಕಾಲದ ಪ್ರಾಪ್ತಿಯ ಮೂಲಕ ಖುಷಿ - ಇದಂತು
ಪ್ರಪಂಚದವರ ಬಳಿಯೂ ಇದೆ. ಅವರ ಬಳಿಯೂ ಸ್ಲೋಗನ್ ಇದೆ - ತಿನ್ನಿರಿ, ಕುಡಿಯಿರಿ, ಮೋಜು ಮಾಡಿರಿ.
ಆದರೆ ಆ ಅಲ್ಪಕಾಲದ ಆಧಾರವು ಸಮಾಪ್ತಿಯಾಯಿತೆಂದರೆ ಖುಷಿಯೂ ಸಮಾಪ್ತಿಯಾಗಿ ಬಿಡುತ್ತದೆ. ಹಾಗೆಯೇ
ಬ್ರಾಹ್ಮಣ ಜೀವನದಲ್ಲಿಯೂ ಸಹ ಈ ಆಧಾರಗಳಿಂದ ಖುಷಿಯ ಪ್ರಾಪ್ತಿಯಾಯಿತೆಂದರೆ, ಇನ್ನೇನು
ಅಂತರವಾಯಿತು? ಖುಷಿಗಳ ಸಾಗರನ ಮಕ್ಕಳಾಗಿದ್ದೀರೆಂದಾಗ ಪ್ರತೀ ಸಂಕಲ್ಪದಲ್ಲಿ, ಪ್ರತೀ ಸೆಕೆಂಡಿನ
ಖುಷಿಯ ಪ್ರಕಂಪನಗಳಲ್ಲಿ ತೇಲಾಡುತ್ತಿರಿ. ಸದಾ ಖುಷಿಗಳ ಭಂಡಾರವಾಗಿದ್ದೀರಿ! ಇಂತಹವರಿಗೆ ಹೋಲಿ
ಮತ್ತು ಹ್ಯಾಪಿ ಹಂಸಗಳು ಹೇಳಲಾಗುತ್ತದೆ. ಬಾಪ್ದಾದಾರವರು ನೋಡುತ್ತಿದ್ದರು - ಯಾವ ಲಕ್ಷ್ಯವಿದೆ,
ಯಾವುದೇ ಅಲ್ಪಕಾಲದ ಆಧಾರವಿಲ್ಲದೆ ಸದಾ ಆಂತರಿಕ ಖುಷಿಯಲ್ಲಿರಬೇಕು. ಆ ಲಕ್ಷ್ಯಕ್ಕೆ ಬದಲು ಅನ್ಯ
ಅಲ್ಪಕಾಲದ ಪ್ರಾಪ್ತಿಗಳ ಚಿಕ್ಕ ಪುಟ್ಟ ಗಲ್ಲಿಗಳಲ್ಲಿ ಸಿಲುಕುವುದರಿಂದ ಕೆಲ ಮಕ್ಕಳು ಲಕ್ಷ್ಯ
ಅರ್ಥಾತ್ ಗುರಿಯಿಂದ ದೂರವಾಗಿ ಬಿಡುತ್ತಾರೆ. ಇಂದು ಹೆಸರಾಯಿತು ಅಥವಾ ಕೆಲಸವಾಯಿತು, ಇಚ್ಛೆಯು
ಪೂರ್ಣವಾಯಿತೆಂದರೆ ಖುಷಿಯಿದೆ. ಮನ ಪ್ರಿಯ, ಸಂಕಲ್ಪ ಪ್ರಿಯವಾದ ಪ್ರಾಪ್ತಿಯಾಯಿತೆಂದರೆ ಬಹಳ
ಖುಷಿಯಿದೆ. ಸ್ವಲ್ಪವೇನಾದರೂ ಕಡಿಮೆಯಾಯಿತೆಂದರೆ ಲಕ್ಷ್ಯವೂ ಸಹ ಅಲ್ಲಿಯೇ ಉಳಿದು ಬಿಡುತ್ತದೆ.
ಲಕ್ಷ್ಯವು ಅಲ್ಪಕಾಲದ್ದಾಗಿ ಬಿಡುತ್ತದೆ. ಆದ್ದರಿಂದ ಬೇಹದ್ದಿನ ಖುಷಿಯಿಂದ ದೂರವಾಗಿ ಬಿಡುತ್ತಾರೆ.
ಆದ್ದರಿಂದ ಬಾಪ್ದಾದಾರವರು ಮಕ್ಕಳೊಂದಿಗೆ ಕೇಳುತ್ತಾರೆ - ಇದಕ್ಕಾಗಿ ಬ್ರಾಹ್ಮಣರಾದಿರಾ?
ಇದಕ್ಕಾಗಿಯೇ ಈ ಆತ್ಮಿಕ ಜೀವನವನ್ನು ಬೇಕೆಂದುಕೊಂಡಿರಾ? ಹೀಗಿರುವುದಂತು ಸಾಧಾರಣ ಜೀವನವಾಯಿತು.
ಇದಕ್ಕೆ ಶ್ರೇಷ್ಠ ಜೀವನವೆಂದು ಹೇಳುವುದಿಲ್ಲ.
ಯಾವುದೇ ಕರ್ಮ ಮಾಡಿರಿ, ಭಲೆ ಎಷ್ಟೇ ದೊಡ್ಡ ಸೇವೆಯ ಕಾರ್ಯವಾಗಿರಲಿ ಆದರೆ ಯಾವ ಸೇವೆಯು ಆಂತರಿಕ
ಖುಷಿ, ಆತ್ಮಿಕ ಮೋಜು, ಬೇಹದ್ದಿನ ಪ್ರಾಪ್ತಿಗಳಿಂದ ಕೆಳಗೆ ಕರೆ ತರುತ್ತದೆ ಅರ್ಥಾತ್
ಅಲ್ಪಕಾಲದರಲ್ಲಿ ತೆಗೆದುಕೊಂಡು ಬರುತ್ತದೆ, ಇಂದು ಮೋಜು ನಾಳೆ ಗೊಂದಲ, ಇಂದು ಖುಷಿ ನಾಳೆ
ವ್ಯರ್ಥವು ತೊಡಕುಗಳಲ್ಲಿ ಹಾಕಿ ಬಿಡುತ್ತದೆ, ಖುಷಿಯಿಂದ ವಂಚಿತರನ್ನಾಗಿ ಮಾಡಿ ಬಿಡುತ್ತದೆ, ಇಂತಹ
ಸೇವೆಯನ್ನು ಬಿಟ್ಟು ಬಿಡಿ ಆದರೆ ಖುಷಿಯನ್ನು ಬಿಡಬೇಡಿ. ಸತ್ಯ ಸೇವೆಯು ಸದಾ ಬೇಹದ್ದಿನ ಸ್ಥಿತಿಯ,
ಬೇಹದ್ದಿನ ಖುಷಿಯ ಅನುಭವವನ್ನು ಮಾಡಿಸುತ್ತದೆ. ಒಂದುವೇಳೆ ಇಂತಹ ಅನುಭೂತಿಯಾಗುವುದಿಲ್ಲವೆಂದರೆ
ಅದು ಮಿಕ್ಸ್ ಸೇವೆಯಾಯಿತು. ಸತ್ಯ ಸೇವೆಯಲ್ಲ. ಈ ಲಕ್ಷ್ಯವನ್ನು ಸದಾ ಇಟ್ಟುಕೊಳ್ಳಿರಿ - ಸೇವೆಯ
ಮೂಲಕ ಸ್ವ-ಉನ್ನತಿ, ಸ್ವ ಪ್ರಾಪ್ತಿ, ಸಂತುಷ್ಟತೆ ಮತ್ತು ಮಹಾನತೆಯ ಅನುಭೂತಿಯಾಯಿತೆ? ಎಲ್ಲಿ
ಸಂತುಷ್ಟತೆಯ ಮಹಾನತೆಯಿರುತ್ತದೆ ಅಲ್ಲಿ ಅವಿನಾಶಿ ಪ್ರಾಪ್ತಿಯ ಅನುಭೂತಿಯಾಗುತ್ತದೆ. ಸೇವೆ
ಅರ್ಥಾತ್ ಹೂಗಳ ಉದ್ಯಾನವನವನ್ನು ಹಚ್ಚ ಹಸಿರನ್ನಾಗಿ ಮಾಡುವುದು. ಸೇವೆ ಅರ್ಥಾತ್ ಹೂಗಳ ಉದ್ಯಾನವನದ
ಅನುಭವ ಮಾಡುವುದು, ಮುಳ್ಳುಗಳ ಕಾಡಿನಲ್ಲಿ ಸಿಲುಕುವುದಲ್ಲ. ತೊಡಕು, ಅಪ್ರಾಪ್ತಿ, ಮನಸ್ಸಿನ
ಗೊಂದಲ, ಈಗೀಗ ಮೋಜು, ಈಗೀಗ ಗೊಂದಲ- ಇದಾಗಿದೆ ಮುಳ್ಳು. ಈ ಮುಳ್ಳುಗಳಿಂದ ದೂರವಾಗುವುದು ಅರ್ಥಾತ್
ಬೇಹದ್ದಿನ ಖುಷಿಯ ಅನುಭವ ಮಾಡುವುದಾಗಿದೆ. ಏನೇ ಆಗಲಿ, ಅಲ್ಪಕಾಲದ ಪ್ರಾಪ್ತಿಗಳ ತ್ಯಾಗವನ್ನೂ
ಮಾಡಬೇಕಾಗುತ್ತದೆ, ಕೆಲವು ಮಾತುಗಳನ್ನು ಬಿಡಲೂಬೇಕಾಗುತ್ತದೆ, ಮಾತುಗಳನ್ನು ಬಿಡಿ ಆದರೆ
ಖುಷಿಯನ್ನು ಬಿಡಬಾರದು. ಯಾವುದಕ್ಕೋಸ್ಕರ ಬಂದಿದ್ದೀರಿ ಆ ಲಕ್ಷ್ಯದಿಂದ ದೂರವಾಗಿ ಬಿಡಬೇಡಿ. ಇದರ
ಸೂಕ್ಷ್ಮ ಪರಿಶೀಲನೆಯನ್ನು ಮಾಡಿಕೊಳ್ಳಬೇಕು. ಖುಷಿಯಂತು ಇದೆ ಆದರೆ ಅಲ್ಪಕಾಲದ ಪ್ರಾಪ್ತಿಗಳ
ಆಧಾರದಿಂದ ಖುಷಿಯಾಗಿರುವುದು, ಇದಕ್ಕೇ ಖುಷಿಯೆಂದು ತಿಳಿದುಕೊಳ್ಳುವುದಿಲ್ಲವೇ? ಎಲ್ಲಿಯೇ
ಸೈಡ್ಸೀನ್ನ್ನೇ ಗುರಿಯೆಂದು ತಿಳಿದುಕೊಳ್ಳುತ್ತಿಲ್ಲವೇ? ಏಕೆಂದರೆ ಸೈಡ್ಸೀನ್ ಸಹ ಆಕರ್ಷಣೆ
ಮಾಡುವಂತದ್ದಾಗಿರುತ್ತದೆ. ಆದರೆ ಗುರಿಯನ್ನು ತಲುಪುವುದು ಅರ್ಥಾತ್ ಬೇಹದ್ದಿನ ರಾಜ್ಯ
ಅಧಿಕಾರಿಯಾಗುವುದು. ಗುರಿಯನ್ನು ದೂರ ಮಾಡಿಕೊಳ್ಳುವವರು ವಿಶ್ವದ ರಾಜ್ಯ ಅಧಿಕಾರಿಯಾಗಲು
ಸಾಧ್ಯವಿಲ್ಲ. ರಾಯಲ್ ಫ್ಯಾಮಿಲಿಯಲ್ಲಿಯೂ ಬರಲು ಸಾಧ್ಯವಿಲ್ಲ. ಆದ್ದರಿಂದ ಲಕ್ಷ್ಯವನ್ನು,
ಗುರಿಯನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿರಿ. ತಮ್ಮೊಂದಿಗೆ ಕೇಳಿಕೊಳ್ಳಿರಿ -
ನಡೆಯುತ್ತಾ-ನಡೆಯುತ್ತಾ ಎಲ್ಲಾದರೂ ಯಾವುದೇ ಅಲ್ಪಕಾಲದ ಗಲ್ಲಿಗಳಲ್ಲಂತು (ಇಚ್ಛೆಗಳು)
ತಲುಪುತ್ತಿದ್ದೇನೆಯೇ! ಅಲ್ಪಕಾಲದ ಪ್ರಾಪ್ತಿಯ ಖುಷಿ, ಸದಾಕಾಲದ ಅದೃಷ್ಟದಿಂದ ದೂರವಂತು
ಮಾಡಿಸುತ್ತಿಲ್ಲವೇ? ಸ್ವಲ್ಪದರಲ್ಲಿ ಖುಷಿಯಾಗುವವರಂತು ಅಲ್ಲವೇ? ತಾವು ತಮ್ಮನ್ನು ಖುಷಿ
ಪಡಿಸುತ್ತಿಲ್ಲವೇ? ಹೇಗಿದ್ದೇನೆ, ಹಾಗೆಯೇ ಇದ್ದೇನೆ, ಸರಿಯಿದ್ದೇನೆ, ಖುಷಿಯಾಗಿದ್ದೇನೆ. ಆದರೆ
ಅವಿನಾಶಿ ಖುಷಿಯ ಚಿಹ್ನೆಯಾಗಿದೆ - ಅವರಿಗೆ ಅನ್ಯರಿಂದಲೂ ಸಹ ಸದಾ ಖುಷಿಯ ಆಶೀರ್ವಾದಗಳು
ಅವಶ್ಯವಾಗಿ ಪ್ರಾಪ್ತವಾಗುತ್ತದೆ. ಬಾಪ್ದಾದಾ ಮತ್ತು ನಿಮಿತ್ತರಾಗಿರುವ ಹಿರಿಯರ ಸ್ನೇಹದ
ಆಶೀರ್ವಾದಗಳು, ಆಂತರ್ಯದಲ್ಲಿ ಅಲೌಕಿಕ ಆತ್ಮಿಕ ಖುಷಿಯ ಸಾಗರದಲ್ಲಿ ತೇಲಾಡುವ ಅನುಭವವನ್ನು
ಮಾಡಿಸುತ್ತದೆ. ಹುಡುಗಾಟಿಕೆಯಲ್ಲಿ ಇದನ್ನು ಯೋಚಿಸಬೇಡಿ - ನಾನಂತು ಸರಿಯಿದ್ದೇನೆ ಆದರೆ ಅನ್ಯರು
ನನ್ನನ್ನು ತಿಳಿದುಕೊಂಡಿಲ್ಲ. ಸೂರ್ಯನ ಬೆಳಕು ಬಚ್ಚಿಟ್ಟುಕೊಳ್ಳಲು ಸಾಧ್ಯವೇ? ಸತ್ಯತೆಯ
ಸುಗಂಧವನ್ನೆಂದಿಗೂ ಸಹ ನಶಿಸಲು ಸಾಧ್ಯವಿಲ್ಲ, ಬಚ್ಚಿಡಲು ಸಾಧ್ಯವಿಲ್ಲ ಆದ್ದರಿಂದ ಎಂದಿಗೂ
ಮೋಸವನ್ನನುಭವಿಸುವುದಿಲ್ಲ. ಇದೇ ಪಾಠವನ್ನು ಪರಿಪಕ್ವ ಮಾಡಿಕೊಳ್ಳಬೇಕು. ಮೊದಲು ತಮ್ಮ ಬೇಹದ್ದಿನ
ಅವಿನಾಶಿ ಖುಷಿ, ನಂತರ ಅನ್ಯ ಮಾತುಗಳು. ಬೇಹದ್ದಿನ ಖುಷಿ ಸೇವೆಯ ಅಥವಾ ಸರ್ವರ ಸ್ನೇಹದ, ಸರ್ವರ
ಮೂಲಕ ಅವಿನಾಶಿ ಸಮ್ಮಾನವು ಪ್ರಾಪ್ತಿಯಾಗುವ ಅದೃಷ್ಠ ಅರ್ಥಾತ್ ಶ್ರೇಷ್ಠ ಭಾಗ್ಯವು ಸ್ವತಹವಾಗಿಯೇ
ಅನುಭೂತಿ ಮಾಡಿಸುತ್ತದೆ. ಯಾರು ಸದಾ ಖುಷಿಯಾಗಿದ್ದಾರೆ ಅವರು ಅದೃಷ್ಟವಂತರಾಗಿದ್ದಾರೆ.
ಪರಿಶ್ರಮವಿಲ್ಲ, ಇಚ್ಛೆಯಿಲ್ಲದೆ ಅಥವಾ ಹೇಳದೆಯೇ ಸರ್ವಪ್ರಾಪ್ತಿಗಳು ಸಹಜವಾಗಿ
ಪ್ರಾಪ್ತಿಯಾಗುತ್ತದೆ. ಈ ಪಾಠವನ್ನು ಪರಿಪಕ್ವ ಮಾಡಿಕೊಂಡಿರಾ?
ಬಾಪ್ದಾದಾರವರು ನೋಡುತ್ತಾರೆ - ಬಂದಿರುವುದು ಏತಕ್ಕಾಗಿ, ಹೋಗುವುದು ಎಲ್ಲಿಗೆ ಮತ್ತು ಎಲ್ಲಿಗೆ
ಹೋಗುತ್ತಿದ್ದಾರೆ? ಅಲ್ಪಕಾಲದ್ದನ್ನು ಬಿಟ್ಟು ಮತ್ತೆ ಅಲ್ಪಕಾಲದರಲ್ಲಿಯೇ ಹೋದರೆ ಬೇಹದ್ದಿನ
ಅನುಭವವನ್ನು ಯಾವಾಗ ಮಾಡುವಿರಿ! ಬಾಪ್ದಾದಾರವರಿಗೂ ಮಕ್ಕಳ ಪ್ರತಿ ಸ್ನೇಹವುಂಟಾಗುತ್ತದೆ.
ದಯೆಯೆಂದು ಹೇಳುವುದಿಲ್ಲ ಏಕೆಂದರೆ ಭಿಕಾರಿಗಳಾಗಿದ್ದೀರೇನು! ದಾತಾ, ವಿದಾತಾನ ಮಕ್ಕಳಾಗಿದ್ದೀರಿ,
ದುಃಖಿಗಳ ಮೇಲೆ ದಯೆ ತೋರಿಸಲಾಗುತ್ತದೆ. ತಾವಂತು ಸುಖ ಸ್ವರೂಪ, ಸುಖ ದಾತಾನ ಮಕ್ಕಳಾಗಿದ್ದೀರಿ. ಈಗ
ತಿಳಿಯಿತೆ - ಏನು ಮಾಡಬೇಕು? ಎಂದು. ಬಾಪ್ದಾದಾರವರು ಈ ವರ್ಷಕ್ಕಾಗಿ ಮತ್ತೆ-ಮತ್ತೆ ಭಿನ್ನ-ಭಿನ್ನ
ಮಾತುಗಳಲ್ಲಿ ಗಮನ ತರಿಸುತ್ತಿದ್ದಾರೆ. ಈ ವರ್ಷದಲ್ಲಿ ವಿಶೇಷವಾಗಿ ಸ್ವಯಂ ಬಗ್ಗೆ ಗಮನವನ್ನಿಡುವ
ಸಮಯವನ್ನು ಕೊಡಲಾಗುತ್ತಿದೆ. ಪ್ರಪಂಚದವರಂತು ಕೇವಲ ಹೇಳುತ್ತಾರೆ - ತಿನ್ನಿರಿ, ಕುಡಿಯಿರಿ, ಮೋಜು
ಮಾಡಿರಿ. ಆದರೆ ಬಾಪ್ದಾದಾರವರು ಹೇಳುತ್ತಾರೆ - ತಿನ್ನಿರಿ ಮತ್ತು ತಿನ್ನಿಸಿರಿ. ಮೋಜಿನಲ್ಲಿರಿ
ಮತ್ತು ಮೋಜಿನಲ್ಲಿ ತನ್ನಿರಿ. ಒಳ್ಳೆಯದು.
ಸದಾ ಅವಿನಾಶಿ ಬೇಹದ್ದಿನ ಖುಷಿಯಲ್ಲಿರುವಂತಹ, ಪ್ರತೀ ಕರ್ಮದಲ್ಲಿ ಅದೃಷ್ಟದ ಅನುಭವವನ್ನು
ಮಾಡುವಂತಹ, ಸದಾ ಸರ್ವರಿಗೂ ಖುಷಿಯ ಖಜಾನೆಯನ್ನು ಹಂಚುವಂತಹ, ಸದಾ ಖುಷಿಯ ಸುಗಂಧವನ್ನು ಹರಡುವಂತಹ,
ಸದಾ ಖುಷಿಯ ಉಮ್ಮಂಗ, ಉತ್ಸಾಹದ ಪ್ರಕಂಪನಗಳಲ್ಲಿ ತೇಲಾಡುವ, ಸದಾ ಇಂತಹ ಖುಷಿಯ ಹೊಳಪು ಮತ್ತು
ನಶೆಯಲ್ಲಿರುವಂತಹ, ಶ್ರೇಷ್ಠ ಲಕ್ಷ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಶ್ರೇಷ್ಠಾತ್ಮರಿಗೆ
ಬಾಪ್ದಾದಾರವರ ಸದಾ ಹೋಲಿ ಮತ್ತು ಹ್ಯಾಪಿಯಾಗಿರುವ ನೆನಪು-ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ:-
1. ಪ್ರವೃತ್ತಿಯಲ್ಲಿರುತ್ತಾ ಸದಾ ಭಿನ್ನ ಹಾಗೂ ತಂದೆಯ ಪ್ರಿಯರಾಗಿದ್ದೀರಲ್ಲವೇ! ಕೆಲವೊಮ್ಮೆ
ಪ್ರವೃತ್ತಿಯೊಂದಿಗೆ ಸೆಳೆತವುಂಟಾಗುವುದಿಲ್ಲವೇ? ಒಂದುವೇಳೆ ಎಲ್ಲಿಯಾದರೂ ಯಾರೊಂದಿಗೇ
ಮಮತ್ವವುಂಟಾಯಿತೆಂದರೆ, ಅದು ಸದಾಕಾಲಕ್ಕಾಗಿ ತಮ್ಮ ಜೀವನದ ವಿಘ್ನವಾಗಿ ಬಿಡುತ್ತದೆ. ಆದ್ದರಿಂದ
ಸದಾ ನಿರ್ವಿಘ್ನರಾಗಿದ್ದು ಮುಂದುವರೆಯುತ್ತಾ ಸಾಗಿರಿ. ಕಲ್ಪದ ಮೊದಲಿನಂತೆ ಅಂಗಧನನಾಗಿದ್ದು
ಅಚಲ-ಅಡೋಲರಾಗಿರಿ. ಅಂಗಧನ ವಿಶೇಷತೆಯೇನು ಕಾಣಿಸುತ್ತದೆ? ಅಂತಹ ನಿಶ್ಚಯ ಬುದ್ಧಿ, ಯಾರ ಕಾಲನ್ನೂ
ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಮಾಯೆಯು ನಿಶ್ಚಯವೆಂಬ ಕಾಲನ್ನು ಅಲುಗಾಡಿಸುವುದಕ್ಕಾಗಿ
ಭಿನ್ನ-ಭಿನ್ನ ಪ್ರಕಾರದಿಂದ ಬರುತ್ತದೆ. ಆದರೆ ಮಾಯೆಯು ಅಲುಗಾಡಲಿ, ತಮ್ಮ ನಿಶ್ಚಯವೆಂಬ ಕಾಲು
ಅಲುಗಾಡದಿರಲಿ. ಮಾಯೆಯು ತಾನೇ ಸಮರ್ಪಣೆಯಾಗಿ ಬಿಡುತ್ತದೆ. ತಾವಂತು ಅದಕ್ಕೆ
ಸಮರ್ಪಣೆಯಾಗುವುದಿಲ್ಲವೇ! ತಂದೆಯ ಮುಂದೆ ಸಮರ್ಪಣೆಯಾಗಿರಿ, ಮಾಯೆಯ ಮುಂದೆ ಅಲ್ಲ, ಇಂತಹ
ನಿಶ್ಚಯಬುದ್ಧಿ ಸದಾ ನಿಶ್ಚಿಂತರಾಗಿರುತ್ತಾರೆ. ಒಂದುವೇಳೆ ಸ್ವಲ್ಪವೇನಾದರೂ ಚಿಂತೆಯಿದೆಯೆಂದರೆ
ನಿಶ್ಚಯವೂ ಕಡಿಮೆಯಿದೆ. ಕೆಲವೊಮ್ಮೆ ಯಾವುದೇ ಮಾತಿನಲ್ಲಿ ಸ್ವಲ್ಪವೇನಾದರೂ ಚಿಂತೆಯಾಗುತ್ತದೆ -
ಅದರ ಕಾರಣ ಏನಾಗುತ್ತದೆ, ಅವಶ್ಯವಾಗಿ ಒಂದಲ್ಲ ಒಂದು ಮಾತಿನ ನಿಶ್ಚಯದಲ್ಲಿ ಕೊರತೆಯಿದೆ.
ಕೆಲವೊಮ್ಮೆ ಕೆಲವು ಮಾತಿನಲ್ಲಿ ಸ್ವಲ್ಪವಾದರೂ ಕೊರತೆಯಿದೆ, ಅದು ಭಲೆ ಡ್ರಾಮಾದಲ್ಲಿ ನಿಶ್ಚಯದ
ಕೊರೆಯಿರಬಹುದು, ಭಲೆ ತಮಗೆ ತಮ್ಮ ಪ್ರತಿ ನಿಶ್ಚಯದ ಕೊರತೆಯಿರಬಹುದು, ಭಲೆ ತಂದೆಯಲ್ಲಿ ನಿಶ್ಚಯದ
ಕೊರತೆಯಿರಬಹುದು, ಈ ಮೂರೂ ಪ್ರಕಾರದ ನಿಶ್ಚಯದಲ್ಲಿ ಸ್ವಲ್ಪವೇನಾದರೂ ಕೊರತೆಯಿದೆಯೆಂದರೆ
ನಿಶ್ಚಿಂತರಿರಲು ಸಾಧ್ಯವಿಲ್ಲ. ಅತಿ ದೊಡ್ಡ ರೋಗವಾಗಿದೆ - ಚಿಂತೆ. ಚಿಂತೆಯ ರೋಗಕ್ಕೆ ಔಷಧಿಯು
ವೈದ್ಯರ ಬಳಿಯೂ ಇಲ್ಲ. ತತ್ಕಾಲಕ್ಕೆ ನಿದ್ರೆಯ ಗುಳಿಗೆಯನ್ನು ಕೊಟ್ಟು ಬಿಡುತ್ತಾರೆ ಆದರೆ
ಸದಾಕಾಲಕ್ಕಾಗಿ ಚಿಂತೆಯು ಸಮಾಪ್ತಿಯಾಗಲು ಸಾಧ್ಯವಿಲ್ಲ. ಚಿಂತೆಯಿರುವವರು ಪ್ರಾಪ್ತಿಯ ಹಿಂದೆ
ಎಷ್ಟೇ ಓಡುತ್ತಾರೆ, ಅಷ್ಟು ಪ್ರಾಪ್ತಿಯೂ ಮುಂದಕ್ಕೆ ಓಡುತ್ತಿರುತ್ತದೆ ಆದ್ದರಿಂದ ಸದಾ
ನಿಶ್ಚಯವೆಂಬ ಕಾಲು ಅಚಲವಾಗಿರಲಿ. ಸದಾ ಒಂದು ಬಲ ಒಂದು ಭರವಸೆ - ಇದೇ ಕಾಲಾಗಿದೆ.
ನಿಶ್ಚಯವೆಂದಾದರೂ ಹೇಳಿ, ಭರವಸೆಯೆಂದಾದರೂ ಹೇಳಿ, ಒಂದೇ ಮಾತಾಗಿದೆ. ಇಂತಹ ನಿಶ್ಚಯ ಬುದ್ಧಿ ಮಕ್ಕಳ
ವಿಜಯವು ನಿಶ್ಚಿತವಾಗಿದೆ.
2. ಸದಾ ತಂದೆಯ ಮೇಲೆ ಬಲಿಹಾರಿಯಾಗುವವರಾಗಿದ್ದೀರಾ? ಭಕ್ತಿಯಲ್ಲಿ ಏನು ಪ್ರತಿಜ್ಞೆ
ಮಾಡುತ್ತಿದ್ದಿರಿ - ಅದನ್ನು ನಿಭಾಯಿಸುವವರಾಗಿದ್ದೀರಾ? ಪ್ರತಿಜ್ಞೆಯನ್ನೇನು ಮಾಡಿದಿರಿ? ಸದಾ
ತಮ್ಮ ಮೇಲೆ (ತಂದೆಯ ಮುಂದೆ) ಬಲಿಹಾರಿಯಾಗುತ್ತೇವೆ. ಬಲಿಹಾರಿ ಅರ್ಥಾತ್ ಸದಾ ಸಮರ್ಪಿತರಾಗಿ
ಬಲಶಾಲಿಯಾಗುವವರು. ಅಂದಮೇಲೆ ಬಲಿಹಾರಿಯಾಗಿ ಬಿಟ್ಟಿದ್ದೀರಾ ಅಥವಾ ಆಗುವವರೇ?
ಬಲಿಹಾರಿಯಾಗುವುದೆಂದರೆ ನನ್ನದೇನೂ ಇಲ್ಲ, ನನ್ನತನವೆಲ್ಲವೂ ಸಮಾಪ್ತಿ. ನನ್ನ ಶರೀರವೂ ಇಲ್ಲ.
ಅಂದಮೇಲೆ ಎಂದಾದರೂ ದೇಹಾಭಿಮಾನದಲ್ಲಿ ಬರುತ್ತೀರಾ? ನನ್ನದು ಇದೆಂದರೆ ದೇಹಭಾನವು ಬರುತ್ತದೆ.
ಇದರಿಂದಲೂ ಆಚೆಯಿರುವುದು - ಇದಕ್ಕೆ ಬಲಹಾರಿ ಆಗುವುದು ಎಂದು ಹೇಳಲಾಗುತ್ತದೆ. ಅಂದಾಗ ನನ್ನತನವು
ಸದಾಕಾಲಕ್ಕಾಗಿ ಸಮಾಪ್ತಿ ಮಾಡುತ್ತಾ ಸಾಗಿರಿ. ಎಲ್ಲವೂ ನಿನ್ನದೇ ಎಂಬ ಅನುಭವ ಮಾಡುತ್ತಾ ಸಾಗಿರಿ.
ಎಷ್ಟು ಹೆಚ್ಚು ಅನುಭವಿಯೋ ಅಷ್ಟೇ ಅಥಾರಿಟಿ ಸ್ವರೂಪರು. ಅಂತಹವರು ಎಂದಿಗೂ ಸಹ ಮೋಸವನ್ನನುಭವಿಸಲು
ಸಾಧ್ಯವಿಲ್ಲ. ದುಃಖದ ಪ್ರಕಂಪನಗಳಲ್ಲಿ ಬರಲು ಸಾಧ್ಯವಿಲ್ಲ. ಅಂದಾಗ ಸದಾ ಅನುಭವಗಳ ಕಥೆಗಳನ್ನು
ಎಲ್ಲರಿಗೂ ತಿಳಿಸುತ್ತಿರಿ. ಅನುಭವಿ ಆತ್ಮವು ಸ್ವಲ್ಪ ಸಮಯದಲ್ಲಿ ಸಫಲತೆಯನ್ನು ಹೆಚ್ಚು ಪ್ರಾಪ್ತಿ
ಮಾಡಿಸುತ್ತದೆ. ಒಳ್ಳೆಯದು.
ವಿದಾಯಿಯ
ಸಮಯದಲ್ಲಿ - 14 ಜನವರಿ ಮಕರ ಸಂಕ್ರಾಂತಿಯ ನೆನಪು-ಪ್ರೀತಿ.
ಇಂದಿನ ದಿನದ ಮಹತ್ವವನ್ನು ಸದಾ ತಿನ್ನುವ ಮತ್ತು ತಿನ್ನಿಸುವ ಮಹತ್ವವನ್ನಾಗಿ ಮಾಡಿ
ಬಿಟ್ಟಿದ್ದಾರೆ. ಸ್ವಲ್ಪ ತಿನ್ನುತ್ತಾರೆ, ಸ್ವಲ್ಪ ತಿನ್ನಿಸುತ್ತಾರೆ. ಅವರು ಎಳ್ಳನ್ನು ದಾನ
ಮಾಡುತ್ತಾರೆ ಅಥವಾ ತಿನ್ನುತ್ತಾರೆ. ಎಳ್ಳು ಅರ್ಥಾತ್ ಬಹಳ ಚಿಕ್ಕದಾದ ಬಿಂದು, ಯಾವುದೇ
ಮಾತಾಗುತ್ತದೆ, ಚಿಕ್ಕದಾಗಿಯೇ ಆಗುತ್ತದೆಯೆಂದರೆ ಹೇಳುತ್ತಾರೆ - ಇದು ಎಳ್ಳಿನ ಸಮಾನವಾಗಿದೆ ಮತ್ತು
ದೊಡ್ಡದಾಗಿ ಆಗುತ್ತದೆಯೆಂದರೆ ಬೆಟ್ಟದಂತೆ ಎಂದು ಹೇಳುತ್ತಾರೆ. ಅಂದಾಗ ಬೆಟ್ಟ ಮತ್ತು ಎಳ್ಳು ಬಹಳ
ಅಂತರವಾಗಿ ಬಿಡುತ್ತದೆ ಅಲ್ಲವೆ. ಹಾಗಾದರೆ ಎಳ್ಳಿನ ಮಹತ್ವವು ಇದಕ್ಕಾಗಿಯೇ ಇದೆ ಏಕೆಂದರೆ ಅತಿ
ಸೂಕ್ಷ್ಮವಾದ ಬಿಂದುವಾಗುತ್ತೀರಿ. ಯಾವಾಗ ಬಿಂದು ರೂಪವಾಗಿ ಬಿಡುತ್ತೀರಿ, ಆಗ ಹಾರುವ ಕಲೆಯ
ಪತಂಗವಾಗಿ ಬಿಡುತ್ತೀರಿ. ಆದ್ದರಿಂದ ಎಳ್ಳಿನದೂ ಮಹತ್ವವಿದೆ. ಮತ್ತು ಎಳ್ಳು ಸದಾ ಮಧುರತೆಯಿಂದ
ಸಂಘಟನೆಯ ರೂಪದಲ್ಲಿ ತರುತ್ತದೆ, ಎಳ್ಳನ್ನು ಹಾಗೆಯೇ ತಿನ್ನುವುದಿಲ್ಲ. ಮಧುರತೆ ಅರ್ಥಾತ್
ಸ್ನೇಹದಿಂದ ಸಂಘಟಿತ ರೂಪದಲ್ಲಿ ತರುವ ಚಿಹ್ನೆಯಾಗಿದೆ. ಹೇಗೆ ಎಳ್ಳಿನಲ್ಲಿ ಮಧುರತೆಯು
ಬೆರೆಯುತ್ತದೆ, ಆಗ ಚೆನ್ನಾಗಿದೆಯೆನಿಸುತ್ತದೆ. ಎಳ್ಳೊಂದನ್ನೇ ತಿಂದರೆ ಕಹಿಯೆನಿಸುತ್ತದೆ ಆದರೆ
ಸಿಹಿಯು ಸೇರಿ ಬಿಡುತ್ತದೆಯೆಂದರೆ ಬಹಳ ಚೆನ್ನಾಗಿದೆ ಎನಿಸುತ್ತದೆ. ಅಂದಾಗ ತಾವಾತ್ಮರೂ ಸಹ ಯಾವಾಗ
ಮಧುರತೆಯಿಂದ ಸಂಬಂಧದಲ್ಲಿ ಬಂದು ಬಿಡುತ್ತೀರಿ, ಸ್ನೇಹದಲ್ಲಿ ಬಂದು ಬಿಡುತ್ತೀರೆಂದರೆ
ಶ್ರೇಷ್ಠರಾಗಿ ಬಿಡುತ್ತೀರಿ. ಅಂದಾಗ ಈ ಸಂಘಟನೆಯು ಮಧುರತೆಯ ನೆನಪಾರ್ಥವಾಗಿದೆ. ಇದೂ ಸಹ
ಚಿಹ್ನೆಯಾಗಿದೆ. ಆದ್ದರಿಂದ ಸದಾ ಸ್ವಯಂನ್ನು ಮಧುರತೆಯ ಆಧಾರದಿಂದ ಸಂಘಟನೆಯ ಶಕ್ತಿಯಲ್ಲಿ
ತರುವುದು, ಬಿಂದು ರೂಪರಾಗುವುದು ಮತ್ತು ಪತಂಗವಾಗಿ ಹಾರುವ ಕಲೆಯಲ್ಲಿ ಹಾರುವುದು - ಇದಾಗಿದೆ
ಇಂದಿನ ದಿನದ ಮಹತ್ವಿಕೆ. ಅಂದಾಗ ಆಚರಿಸುವುದು ಅರ್ಥಾತ್ ಆಗುವುದು. ತಾವಾಗಿದ್ದೀರಿ ಮತ್ತು ಅವರು
ಕೇವಲ ಸ್ವಲ್ಪ ಸಮಯಕ್ಕಾಗಿ ಆಚರಿಸುತ್ತಾರೆ. ಇದರಲ್ಲಿ ದಾನ ಕೊಡುವುದು ಅರ್ಥಾತ್ ಏನೇ
ಬಲಹೀನತೆಗಳಿದೆ ಅದನ್ನು ದಾನದಲ್ಲಿ ಕೊಟ್ಟು ಬಿಡಿ. ಚಿಕ್ಕ ದಾದಾ ಮಾತನ್ನು ತಿಳಿದುಕೊಂಡುಬಿಡಿ.
ಎಳ್ಳಿನ ಸಮಾನವೆಂದು ತಿಳಿದುಕೊಂಡು ಕೊಟ್ಟು ಬಿಡಿ. ದೊಡ್ಡ ಮಾತೆಂದು ತಿಳಿಯಬೇಡಿ -
ಬಿಡಬೇಕಾಗುತ್ತದೆ, ಕೊಡಬೇಕಾಗುತ್ತದೆ ಎಂದು ತಿಳಿಯಬೇಡಿ. ಎಳ್ಳಿನ ಸಮಾನ ಚಿಕ್ಕದಾದ ಮಾತನ್ನು ದಾನ
ಕೊಡುವುದು, ಖುಷಿ-ಖುಷಿಯಾಗಿ ಚಿಕ್ಕದಾದ ಮಾತೆಂದು ತಿಳಿದುಕೊಂಡು ಖುಷಿಯಾಗಿ ಕೊಟ್ಟು ಬಿಡಿ. ಇದು
ದಾನದ ಮಹತ್ವಿಕೆಯಾಗಿದೆ. ತಿಳಿಯಿತೆ.
ಸದಾ ಸ್ನೇಹಿಯಾಗುವುದು, ಸದಾ ಸಂಘಟನೆಯ ರೂಪದಲ್ಲಿ ನಡೆಯುವುದು ಮತ್ತು ಸದಾ ದೊಡ್ಡ ಮಾತನ್ನು
ಚಿಕ್ಕದೆಂದು ತಿಳಿದು ಸಮಾಪ್ತಿ ಮಾಡಿರಿ. ಬೆಂಕಿಯಲ್ಲಿ ಸುಟ್ಟು ಬಿಡಿ, ಇದು ಮಹತ್ವಿಕೆಯಾಗಿದೆ.
ಅಂದಮೇಲೆ ಆಚರಿಸಿ ಬಿಟ್ಟಿರಲ್ಲವೆ. ಧೃಡ ಸಂಕಲ್ಪದ ಬೆಂಕಿಯನ್ನು ಉರಿಸಿ ಬಿಟ್ಟಿರಿ. ಈ ದಿನದಂದು
ಬೆಂಕಿಯನ್ನುರಿಸುತ್ತಾರಲ್ಲವೆ. ಅಂದಮೇಲೆ ಸಂಸ್ಕಾರ ಪರಿವರ್ತನೆಯ ದಿನ, ಅವರು ಸಂಕ್ರಾಂತಿ ಎಂದು
ಹೇಳುತ್ತಾರೆ, ತಾವು ಸಂಸ್ಕಾರ ಪರಿವರ್ತನೆ ಎಂದು ಹೇಳುತ್ತೀರಿ. ಒಳ್ಳೆಯದು - ಎಲ್ಲರಿಗೂ ಸ್ನೇಹ
ಮತ್ತು ಸಂಘಟನೆಯ ಶಕ್ತಿಯಲ್ಲಿ ಸದಾ ಸಫಲರಾಗುವ ನೆನಪು-ಪ್ರೀತಿ ಮತ್ತು ಸುಪ್ರಭಾತ.
ವರದಾನ:
ಸದಾ ಭಗವಂತ ಮತ್ತು ಭಾಗ್ಯದ ಸ್ಮೃತಿಯಲ್ಲಿರುವ ಸರ್ವ ಶ್ರೇಷ್ಠ ಭಾಗ್ಯಶಾಲಿ ಭವ.
ಸಂಗಮಯುಗದಲ್ಲಿ ಚೈತನ್ಯ
ಸ್ವರೂಪದಲ್ಲಿ ಭಗವಂತನ ಮಕ್ಕಳ ಸೇವೆಯನ್ನು ಮಾಡುತ್ತಿದ್ದೀರಿ. ಭಕ್ತಿಮಾರ್ಗದಲ್ಲಿ ಎಲ್ಲರೂ ಭಗವಂತನ
ಸೇವೆಯನ್ನು ಮಾಡುತ್ತಾರೆ ಆದರೆ ಇಲ್ಲಿ ಚೈತನ್ಯ ರಾಜಕುಮಾರರ ಸೇವೆಯನ್ನು ಸ್ವಯಂ ಭಗವಂತನೇ
ಮಾಡುತ್ತಾರೆ. ಅಮೃತವೇಳೆ ಏಳಿಸುತ್ತಾರೆ, ಭೋಗವನ್ನಿಡುತ್ತಾರೆ, ಮಲಗಿಸುತ್ತಾರೆ. ರಿಕಾರ್ಡ್ನಲ್ಲಿ
ಮಲಗಿಸುವ ಮತ್ತು ರಿಕಾರ್ಡ್ನಲ್ಲಿ ಏಳುವುದು, ಇಂತಹ ಮುದ್ದಾದ ಅಥವಾ ಸರ್ವ ಶ್ರೇಷ್ಠ ಭಾಗ್ಯಶಾಲಿಗಳು
ನಾವು ಬ್ರಾಹ್ಮಣರಾಗಿದ್ದೇವೆ - ಇದೇ ಭಾಗ್ಯದ ಖುಷಿಯಲ್ಲಿ ಸದಾ ತೂಗುತ್ತಿರಿ. ಕೇವಲ ತಂದೆಗೆ
ಮುದ್ದಾಗಿರಿ, ಮಾಯೆಗಲ್ಲ. ಯಾರು ಮಾಯೆಗೆ ಮುದ್ದಾದವರಾಗುತ್ತಾರೆ ಅವರು ಬಹಳ ತುಂಟಾಟ ಮಾಡುತ್ತಾರೆ.
ಸ್ಲೋಗನ್:
ಸ್ಲೋಗನ್: ತಮ್ಮ
ಹರ್ಷಿತಮುಖ ಚಹರೆಯಿಂದ ಸರ್ವ ಪ್ರಾಪ್ತಿಗಳ ಅನುಭೂತಿ ಮಾಡಿಸುವುದು - ಸತ್ಯ ಸೇವೆಯಾಗಿದೆ.
ಸೂಚನೆ:
ಇಂದು
ಅಂತರಾಷ್ಟ್ರೀಯ ಯೋಗ ದಿನ ಮೂರನೇ ರವಿವಾರವಾಗಿದೆ. ಸಂಜೆ 6.30ರಿಂದ 7.30ರವರೆಗೆ ಎಲ್ಲಾ
ಸಹೋದರ-ಸಹೋದರಿಯರು ಸಂಘಟಿತ ರೂಪದಲ್ಲಿ ಪ್ರಭು ಪ್ರೀತಿಯಲ್ಲಿ ಸಮಾವೇಶವಾಗುವ ಅನುಭವ ಮಾಡಿರಿ. ಸದಾ
ಇದೇ ಸ್ವಮಾನದಲ್ಲಿ ಕುಳಿತುಕೊಳ್ಳಿರಿ- ನಾನು ಆತ್ಮನು ಸರ್ವಪ್ರಾಪ್ತಿಗಳಿಂದ ಸಂಪನ್ನ,
ಸರ್ವಶ್ರೇಷ್ಠ ಭಾಗ್ಯಶಾಲಿ ಆತ್ಮನಾಗಿದ್ದೇನೆ. ಪ್ರೀತಿಯ ಸಾಗರ ತಂದೆಯ ಪ್ರೀತಿಯ ಕಿರಣಗಳು
ಹೊರಬಂದು, ನಾನಾತ್ಮನಲ್ಲಿ ಸಮಾವೇಶವಾಗುತ್ತಿದೆ. ಅದೇ ಪ್ರೀತಿಯ ಪ್ರಕಂಪನಗಳು ನಾಲ್ಕೂ ಕಡೆಯ
ವಾತಾವರಣದಲ್ಲಿ ಹರಡುತ್ತಿದೆ.
ಮುರಳಿ ಪ್ರಶ್ನೆಗಳು
1. ಸಂಪೂರ್ಣ ಸ್ಟೇಜ್
ತಲುಪಲು ಯಾವುದರ ಚೆಕ್ಕಿಂಗ್ ಮಾಡಬೇಕು?
2. ಅಚಲ ಅಡೋಲರಾಗುವುದು
ಎಂದರೇನು?
3. ಬೇಹದ್ದಿನ ಖುಷಿಯ
ಅನುಭವ ಮಡುವುದು ಹೇಗೆ?
4. ಸಮರ್ಥ ಮತ್ತು
ಶ್ರೇಷ್ಠ ಸಂಕಲ್ಪ, ಮಾತು ಮತ್ತು ಕರ್ಮ ಯಾವುದರ ಅನುಭವ ಮಾಡಿಸುವುದು?
5. ಬ್ರಾಹ್ಮಣ
ಜೀವನವೆಂದರೆ ____________ ಅನುಭವ ಮಾಡುವುದು
ಅ. ಕ್ಷಣಿಕ ಅಲ್ಪಕಾಲದ ಸುಖದ
ಆ. ಅತೀಂದ್ರಿಯ ಸುಖದ
ಇ. ಶಾರೀರಿಕ ಸುಖದ
6. ಎಲ್ಲಿಯಾದರು ಮೋಹವಿದ್ದರೆ ಅದು ಸದಾಕಾಲಕ್ಕೆ ____________ ಆಗಿ ಬಿಡುವುದು.
ಅ. ವಿಘ್ನ
ಆ. ನಷ್ಟ
ಇ. ನರಕ
7. ಎಲ್ಲದಕ್ಕಿಂತ ದೊಡ್ಡ
ರೋಗ/ ಖಾಯಿಲೆ ಯಾವುದು?
ಅ. ಆಲಸ್ಯ
ಆ. ಚಿಂತನ
ಇ. ಚಿಂತೆ
8. ಹೋಲಿ ಎಂದರೇನು?
ಅ. ಖುಷಿಯ ಪ್ರತ್ಯಕ್ಷತೆ
ಆ. ಆನಂದದ ಪ್ರತ್ಯಕ್ಷತೆ
ಇ. ಪವಿತ್ರತೆಯ ಪ್ರತ್ಯಕ್ಷತೆ
9. ಎಲ್ಲಿ ಸಂತುಷ್ಟತೆಯ
ಮಹಾನತೆಯಿರುತ್ತದೆಯೋ ಅಲ್ಲಿ
ಅ. ಅವಿನಾಶಿ ಪ್ರಾಪ್ತಿಯ ಅನುಭವವಿರುತ್ತದೆ.
ಆ. ಸರ್ವ ಪ್ರಾಪ್ತಿಯ ಅನುಭವವಿರುತ್ತದೆ.
ಇ. ಅಖಂಡ ಪ್ರಾಪ್ತಿಯ ಅನುಭವವಿರುತ್ತದೆ.
10. ಜೋಡಿಸಿ ಬರೆಯಿರಿ
1) ಬ್ರಾಹ್ಮಣ ಜೀವನ ಹೂ ತೋಟದಲ್ಲಿ ಹಸಿರಾಗಿರುವುದು
2) ಸೇವೆ ಮತ್ತು ಖುಷಿ ನನ್ನದು ಏನು ಇಲ್ಲ
3) ಖುಷಿಯ ಭಂಡಾರ ಸದಾ ಖುಷಿಯಾಗಿರುವುದು
4) ಬಲಿಹಾರಿಯಾಗುವುದು ಹೋಲಿ ಮತ್ತು ಹ್ಯಾಪಿ ಹಂಸ