13.05.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಅಮೃತವೇಳೆ ಅನ್ಯ ಎಲ್ಲಾ ಸಂಕಲ್ಪಗಳನ್ನು ನಿಲ್ಲಿಸಿ ಒಬ್ಬ ತಂದೆಯನ್ನು ಪ್ರೀತಿಯಿಂದ ನೆನಪು ಮಾಡಿ,
ತಂದೆಯೊಂದಿಗೆ ಮಧುರಾತಿ ಮಧುರ ವಾರ್ತಾಲಾಪ ಮಾಡಿ”
ಪ್ರಶ್ನೆ:
ನೀವು ಮಕ್ಕಳ
ಪ್ರತೀ ಮಾತಿನಲ್ಲಿ ಅರ್ಥವಿದೆ, ಅರ್ಥ ಸಹಿತ ಶಬ್ಧಗಳನ್ನು ಯಾರು ಮಾತನಾಡಬಲ್ಲರು?
ಉತ್ತರ:
ಯಾರು ಆತ್ಮಾಭಿಮಾನಿಗಳಾಗಿದ್ದಾರೆಯೋ ಅವರೇ ಪ್ರತಿಯೊಂದು ಮಾತನ್ನು ಅರ್ಥ ಸಹಿತವಾಗಿ ಹೇಳಬಲ್ಲರು.
ತಂದೆಯು ನಿಮಗೆ ಸಂಗಮಯುಗದಲ್ಲಿ ಏನೆಲ್ಲವನ್ನು ತಿಳಿಸುತ್ತಾರೆಯೋ ಎಲ್ಲವೂ ಅರ್ಥ ಸಹಿತವಾಗಿದೆ.
ದೇಹಾಭಿಮಾನದಲ್ಲಿ ಬಂದು ಮನುಷ್ಯರು ಏನೆಲ್ಲವನ್ನೂ ಮಾತನಾಡುವರೋ ಅದು ಅರ್ಥವಿಲ್ಲದ ಅನರ್ಥವಾಗಿದೆ.
ಅದರಿಂದ ಯಾವುದೇ ಫಲ ಸಿಗುವುದಿಲ್ಲ, ಲಾಭವಾಗುವುದಿಲ್ಲ.
ಗೀತೆ:
ಕಣ್ಣಿಲ್ಲದವನಿಗೆ
ದಾರಿ ತೋರಿಸು ಪ್ರಭು..............
ಓಂ ಶಾಂತಿ.
ಇವೆಲ್ಲಾ ಗೀತೆಗಳು ಭಕ್ತಿಮಾರ್ಗದ್ದಾಗಿದೆ. ನಿಮಗೆ ಗೀತೆಯ ಅವಶ್ಯಕತೆಯಿಲ್ಲ. ಯಾವುದೇ ಕಷ್ಟದ
ಮಾತಿಲ್ಲ. ಭಕ್ತಿಮಾರ್ಗದಲ್ಲಂತೂ ಬಹಳಷ್ಟು ಕಷ್ಟವಿದೆ. ಎಷ್ಟೊಂದು ರೀತಿ-ಪದ್ಧತಿಗಳು ನಡೆಯುತ್ತವೆ
- ಬ್ರಾಹ್ಮಣರಿಗೆ ತಿನ್ನಿಸುವುದು, ತೀರ್ಥ ಸ್ಥಾನಗಳಲ್ಲಿ ಬಹಳಷ್ಟು ಮಾಡಬೇಕಾಗುತ್ತದೆ. ಇಲ್ಲಿ ಬಂದು
ತಂದೆಯು ಎಲ್ಲಾ ಕಷ್ಟಗಳಿಂದ ಬಿಡಿಸುತ್ತಾರೆ. ಇದರಲ್ಲಿ ಏನೂ ಮಾಡಬೇಕಾಗಿಲ್ಲ. ಮುಖದಿಂದ ಶಿವ-ಶಿವ
ಎಂದು ಹೇಳಬೇಕಾಗಿಲ್ಲ. ಇದು ನಿಯಮವೂ ಇಲ್ಲ. ಇದರಿಂದೇನೂ ಫಲವು ಸಿಗುವುದಿಲ್ಲ. ತಂದೆಯು
ತಿಳಿಸುತ್ತಾರೆ - ಆಂತರ್ಯದಲ್ಲಿ ಇದನ್ನು ತಿಳಿದುಕೊಳ್ಳಬೇಕಾಗಿದೆ - ನಾನಾತ್ಮನಾಗಿದ್ದೇನೆ,
ನನ್ನನ್ನು ನೆನಪು ಮಾಡಿ ಎಂದು ತಂದೆಯು ಹೇಳಿದ್ದಾರೆ, ಅಂತರ್ಮುಖಿಯಾಗಿ ತಂದೆಯನ್ನೇ ನೆನಪು
ಮಾಡಬೇಕಾಗಿದೆ. ಆಗ ತಂದೆಯು ಪ್ರತಿಜ್ಞೆ ಮಾಡುತ್ತಾರೆ - ನಿಮ್ಮ ಎಲ್ಲಾ ಪಾಪಗಳು ಭಸ್ಮವಾಗುತ್ತವೆ.
ಇದು ಯೋಗಾಗ್ನಿಯಾಗಿದೆ. ಇದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಮತ್ತು ನೀವು ಹಿಂತಿರುಗಿ
ಹೋಗುತ್ತೀರಿ. ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತದೆ. ಇವೆಲ್ಲವೂ ತಮ್ಮ ಜೊತೆ
ಮಾತನಾಡಿಕೊಳ್ಳುವ ಯುಕ್ತಿಗಳಾಗಿವೆ. ತನ್ನ ಜೊತೆ ವಾರ್ತಾಲಾಪ ಮಾಡಿಕೊಳ್ಳುತ್ತಾ ಇರಿ. ತಂದೆಯು
ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವು ನಿಮಗೆ ಈ ಯುಕ್ತಿಯನ್ನು ತಿಳಿಸುತ್ತೇನೆ. ಇದೂ ಸಹ ತಿಳಿದಿದೆ
- ನಿಧಾನ-ನಿಧಾನವಾಗಿ ಈ ವೃಕ್ಷವು ವೃದ್ಧಿಯಾಗುವುದು. ಮಾಯೆಯ ಬಿರುಗಾಳಿಗಳೂ ಸಹ ಈ ಸಮಯದಲ್ಲಿದೆ
ಯಾವಾಗ ನಾನು ಬಂದು ನೀವು ಮಕ್ಕಳನ್ನು ಮಾಯೆಯ ಬಂಧನದಿಂದ ಬಿಡಿಸುತ್ತೇನೆ. ಸತ್ಯಯುಗದಲ್ಲಿ ಯಾವುದೇ
ಬಂಧನವಿರುವುದಿಲ್ಲ, ಈ ಪುರುಷೋತ್ತಮ ಯುಗವೂ ಸಹ ಈಗ ನಿಮಗೆ ಅರ್ಥ ಸಹಿತವಾಗಿ ಬುದ್ಧಿಯಲ್ಲಿದೆ ಎಲ್ಲಿ
ಪ್ರತಿಯೊಂದು ಮಾತು ಅರ್ಥ ಸಹಿತವಾಗಿದೆ. ಯಾರು ದೇಹಾಭಿಮಾನಿಯಾಗಿ ಮಾತನಾಡುವರು ಅದು ಅನರ್ಥವಾಗಿದೆ.
ದೇಹೀ-ಅಭಿಮಾನಿಯಾಗಿ ಮಾತನಾಡುವವರದು ಅರ್ಥ ಸಹಿತವಾಗಿರುತ್ತದೆ ಅದರಿಂದ ಫಲ ಸಿಗುತ್ತದೆ.
ಭಕ್ತಿಮಾರ್ಗದಲ್ಲಂತೂ ಇಷ್ಟೊಂದು ಪರಿಶ್ರಮವಿರುವುದಿಲ್ಲ. ತೀರ್ಥ ಯಾತ್ರೆಗಳನ್ನು ಮಾಡುವುದು,
ಅದು-ಇದು ಮಾಡುವುದು - ಇವೆಲ್ಲವೂ ಭಗವಂತನ ಬಳಿ ತಲುಪುವ ಮಾರ್ಗಗಳೆಂದು ತಿಳಿಯುತ್ತಾರೆ. ಆದರೆ ನೀವು
ಮಕ್ಕಳು ತಿಳಿದುಕೊಂಡಿದ್ದೀರಿ - ಇವುಗಳಿಂದ ಯಾರೊಬ್ಬರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಯಾರು
ಮೊಟ್ಟ ಮೊದಲ ವಿಶ್ವದ ಮಾಲೀಕರು ಲಕ್ಷ್ಮೀ-ನಾರಾಯಣರಾಗಿದ್ದರೋ ಅವರದೇ 84 ಜನ್ಮಗಳೆಂದು
ತಿಳಿಸುತ್ತಾರೆ. ಅಂದಮೇಲೆ ಮತ್ತ್ಯಾರೂ ತಾನೆ ಇದರಿಂದ ಮುಕ್ತರಾಗಲು ಸಾಧ್ಯ! ಎಲ್ಲರೂ ಚಕ್ರದಲ್ಲಿ
ಬರುತ್ತಾರೆ ಅಂದಾಗ ಕೃಷ್ಣನಿಗಾಗಿಯೇ ಎಂದು ಹೇಗೆ ಹೇಳುತ್ತಾರೆ? ಕೃಷ್ಣನು ಸದಾ
ಶಾಶ್ವತವಾಗಿರುತ್ತಾನೆಂದು ಹಾ! ಕೃಷ್ಣನ ನಾಮ-ರೂಪವು ಹೊರಟು ಹೋಯಿತು ಆದರೆ ಆತ್ಮವು ಯಾವುದಾದರೊಂದು
ರೂಪದಲ್ಲಿದೆ. ಇವೆಲ್ಲಾ ಮಾತುಗಳನ್ನು ತಂದೆಯು ಬಂದು ಮಕ್ಕಳಿಗೆ ತಿಳಿಸುತ್ತಾರೆ. ಇದು
ವಿದ್ಯೆಯಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಗಮನವನ್ನಿಡಬೇಕಾಗಿದೆ. ಪ್ರತಿನಿತ್ಯವೂ ತಮ್ಮ ಚಾರ್ಟನ್ನು
ಬರೆಯಲು ಸಮಯವನ್ನು ನಿಗಧಿಪಡಿಸಿ. ವ್ಯಾಪಾರಿಗಳಿಗೆ ಬಹಳಷ್ಟು ಬಂಧನವಿರುತ್ತದೆ, ನೌಕರಿ ಮಾಡುವವರಿಗೆ
ಬಂಧನವಿರುವುದಿಲ್ಲ. ಅವರಂತೂ ತಮ್ಮ ಕೆಲಸವನ್ನು ಪೂರ್ಣ ಮಾಡಿದರೆ ಮುಗಿಯಿತು. ವ್ಯಾಪಾರಿಗಳ ಬಳಿಯಂತೂ
ಗ್ರಾಹಕರು ಬಂದಾಗಲೆಲ್ಲಾ ಕುಳಿತುಕೊಳ್ಳಬೇಕಾಗುತ್ತದೆ, ಬುದ್ಧಿಯೋಗವು ಹೊರಗಡೆ ಹೋಗುತ್ತದೆಯೆಂದಾಗ
ಪ್ರಯತ್ನ ಪಟ್ಟು ಸಮಯವನ್ನು ತೆಗೆಯಬೇಕು. ಅಮೃತವೇಳೆಯ ಸಮಯವು ಚೆನ್ನಾಗಿದೆ, ಆ ಸಮಯದಲ್ಲಿ ಹೊರಗಿನ
ವಿಚಾರಗಳನ್ನು ನಿಲ್ಲಿಸಿ ಬಿಡಬೇಕು. ಯಾವುದೇ ವಿಚಾರವೂ ಬರಬಾರದು. ತಂದೆಯ ನೆನಪಿರಬೇಕು. ತಂದೆಯ
ಮಹಿಮೆಯಲ್ಲಿ ಬರೆಯಬೇಕು - ತಂದೆಯು ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆ. ತಂದೆಯು ನಮ್ಮನ್ನು
ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಅವರ ಶ್ರೀಮತದಂತೆ ನಡೆಯಬೇಕಾಗಿದೆ. ಎಲ್ಲದಕ್ಕಿಂತ ಒಳ್ಳೆಯ
ಮತವು ಸಿಗುತ್ತದೆ - ಮನ್ಮನಾಭವ. ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಕಲ್ಪ-ಕಲ್ಪವೂ ತಮೋಪ್ರಧಾನದಿಂದ
ಸತೋಪ್ರಧಾನರಾಗುವ ಮತವು ಸಿಗುತ್ತದೆ. ತಂದೆಯು ಇಷ್ಟನ್ನೇ ತಿಳಿಸುತ್ತಾರೆ - ಮಕ್ಕಳೇ,
ನನ್ನೊಬ್ಬನನ್ನೇ ನೆನಪು ಮಾಡಿ, ಇದಕ್ಕೆ ವಶೀಕರಣ ಮಂತ್ರವೆಂದು ಹೇಳಲಾಗುತ್ತದೆ. ಅರ್ಥ ಸಹಿತವಾಗಿ
ನೆನಪು ಮಾಡುವುದರಿಂದಲೆ ಖುಷಿಯಿರುವುದು.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಅವ್ಯಭಿಚಾರಿ ನೆನಪಿರಬೇಕು. ಹೇಗೆ ಭಕ್ತಿಯಲ್ಲಿ ಒಬ್ಬ ಶಿವನ
ಪೂಜೆ ಅವ್ಯಭಿಚಾರಿಯಾಗಿರುತ್ತದೆ ನಂತರ ವ್ಯಭಿಚಾರಿಯಾಗುವುದರಿಂದ ಅನೇಕರ ಭಕ್ತಿ ಮಾಡುತ್ತಾರೆ.
ಮೊದಲು ಅದ್ವೈತ ಭಕ್ತಿಯಿತ್ತು, ಒಬ್ಬರನ್ನೇ ಕುರಿತು ಭಕ್ತಿ ಮಾಡುತ್ತಿದ್ದರು, ಜ್ಞಾನವನ್ನೂ ಸಹ
ಅವರೊಬ್ಬರಿಂದಲೇ ಕೇಳಬೇಕಾಗಿದೆ. ನೀವು ಮಕ್ಕಳು ಯಾರ ಭಕ್ತಿ ಮಾಡುತ್ತೀರೋ ಅವರೇ ನಿಮಗೆ
ತಿಳಿಸುತ್ತಿದ್ದಾರೆ - ಮಧುರಾತಿ ಮಧುರ ಮಕ್ಕಳೇ, ನಾನೀಗ ಬಂದಿದ್ದೇನೆ. ಈಗ ಈ ಭಕ್ತಿಕಾಂಡವು
ಪೂರ್ಣವಾಯಿತು. ನೀವೇ ಮೊಟ್ಟ ಮೊದಲು ಒಬ್ಬ ಶಿವ ತಂದೆಯ ಮಂದಿರವನ್ನು ಕಟ್ಟಿಸಿದಿರಿ ಆ ಸಮಯದಲ್ಲಿ
ನೀವು ಅವ್ಯಭಿಚಾರಿ ಭಕ್ತರಾಗಿದ್ದಿರಿ ಆದ್ದರಿಂದ ಬಹಳ ಸುಖಿಯಾಗಿದ್ದಿರಿ. ನಂತರ ವ್ಯಭಿಚಾರಿ
ಭಕ್ತರಾಗುವುದರಿಂದ ದ್ವೈತದಲ್ಲಿ ಬಂದು ಬಿಟ್ಟಿರಿ. ಆಗ ಸ್ವಲ್ಪ ದುಃಖವಾಗುತ್ತದೆ. ಒಬ್ಬ ತಂದೆಯು
ಎಲ್ಲರಿಗೂ ಸುಖ ಕೊಡುವವರಾಗಿದ್ದಾರಲ್ಲವೆ. ತಂದೆಯು ತಿಳಿಸುತ್ತಾರೆ - ನಾನು ಬಂದು ನೀವು ಮಕ್ಕಳಿಗೆ
ಮಂತ್ರವನ್ನು ಕೊಡುತ್ತೇನೆ, ಒಬ್ಬರಿಂದಲೇ ಮಂತ್ರವನ್ನು ಕೇಳಿ, ಇಲ್ಲಿ ಯಾವುದೇ ದೇಹಧಾರಿ
ತಿಳಿಸುತ್ತಿಲ್ಲ. ನೀವಿಲ್ಲಿ ಬಾಪ್ದಾದಾರವರ ಬಳಿ ಬರುತ್ತೀರಿ, ಶಿವ ತಂದೆಗಿಂತಲೂ ಸರ್ವ ಶ್ರೇಷ್ಠರು
ಯಾರೂ ಇಲ್ಲ. ಎಲ್ಲರೂ ಅವರನ್ನೇ ನೆನಪು ಮಾಡುತ್ತಾರೆ. ಭಾರತವೇ ಸ್ವರ್ಗವಾಗಿತ್ತು,
ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅವರನ್ನು ಈ ರೀತಿ ಯಾರು ಮಾಡಿದರು? ಯಾರ ಪೂಜೆಯನ್ನು ನಂತರದಲ್ಲಿ
ನೀವು ಮಾಡುತ್ತೀರಿ. ಮಹಾಲಕ್ಷ್ಮಿ ಯಾರೆಂದು ಯಾರಿಗೂ ತಿಳಿದಿಲ್ಲ. ಮಹಾಲಕ್ಷ್ಮಿಯ ಮೊದಲ ಜನ್ಮವು
ಯಾವುದಾಗಿತ್ತು? ನೀವು ಮಕ್ಕಳಿಗೆ ತಿಳಿದಿದೆ - ಅವರು ಹಿಂದಿನ ಜನ್ಮದಲ್ಲಿ ಜಗದಂಬೆಯಾಗಿದ್ದರು,
ನೀವೆಲ್ಲರೂ ಮಾತೆಯರಾಗಿದ್ದೀರಿ, ವಂದೇ ಮಾತರಂ. ಇಡೀ ಜಗತ್ತಿನ ಮೇಲೆ ನೀವು ತಮ್ಮ ಅಧಿಕಾರವನ್ನು
ನಡೆಸುತ್ತೀರಿ. ಭಾರತ ಮಾತೆ ಎಂದು ಕೇವಲ ಒಬ್ಬರ ಹೆಸರಲ್ಲ, ನೀವೆಲ್ಲರೂ ಶಿವನಿಂದ ಶಕ್ತಿಯನ್ನು
ಯೋಗಬಲದಿಂದ ಪಡೆಯುತ್ತೀರಿ. ಶಕ್ತಿ ತೆಗೆದುಕೊಳ್ಳುವುದರಲ್ಲಿ ಮಾಯೆಯು ಮಧ್ಯ ಪ್ರವೇಶ ಮಾಡುತ್ತದೆ.
ಯುದ್ಧದಲ್ಲಿ ಯಾರಾದರೂ ಪಣ ತೊಡುತ್ತಾರೆಂದರೆ ಸಾಹಸವಂತರಾಗಿ ಹೋರಾಡಬೇಕು. ಅವರು ಪಣ ತೊಟ್ಟ ತಕ್ಷಣ
ನೀವು ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಇದು ಮಾಯೆಯ ಯುದ್ಧವಾಗಿದೆ. ಇದು ಯಾವುದೇ ಕೌರವರ ಮತ್ತು
ಪಾಂಡವರ ಯುದ್ಧವಲ್ಲ. ಅವರದು ಪರಸ್ಪರ ಯುದ್ಧವಾಗಿದೆ, ಮನುಷ್ಯರು ಪರಸ್ಪರ ಹೊಡೆದಾಡಿ ಒಂದು ಅಡಿ
ಜಮೀನಿಗಾಗಿ ತಲೆಯನ್ನೇ ಕತ್ತರಿಸುತ್ತಾರೆ. ತಂದೆಯು ಬಂದು ತಿಳಿಸುತ್ತಾರೆ - ಇದೆಲ್ಲವೂ ನಾಟಕದಲ್ಲಿ
ಮಾಡಲ್ಪಟ್ಟಿದೆ. ರಾಮ ರಾಜ್ಯ ಮತ್ತು ರಾವಣ ರಾಜ್ಯ. ಈಗ ನೀವು ಮಕ್ಕಳಿಗೆ ಜ್ಞಾನವಿದೆ - ನಾವು ರಾಮ
ರಾಜ್ಯದಲ್ಲಿ ಹೋಗಿದ್ದೇವೆ. ಅಲ್ಲಿ ಅಪಾರ ಸುಖವಿರುತ್ತದೆ, ಹೆಸರೇ ಆಗಿದೆ - ಸುಖಧಾಮ. ಅಲ್ಲಿ
ದುಃಖದ ಹೆಸರು, ಚಿಹ್ನೆಗಳು ಇರುವುದಿಲ್ಲ. ತಂದೆಯು ಇಂತಹ ರಾಜ್ಯಭಾಗ್ಯವನ್ನು ಕೊಡಲು ಬಂದಿದ್ದಾರೆ
ಅಂದಾಗ ಮಕ್ಕಳು ಎಷ್ಟೊಂದು ಪುರುಷಾರ್ಥ ಮಾಡಬೇಕು. ಪದೇ-ಪದೇ ಹೇಳುತ್ತೇನೆ - ಸುಸ್ತಾಗಬೇಡಿ. ಶಿವ
ತಂದೆಯನ್ನು ನೆನಪು ಮಾಡುತ್ತಾ ಇರಿ. ಅವರೂ ಬಿಂದುವಾಗಿದ್ದಾರೆ, ನಾವಾತ್ಮಗಳೂ ಬಿಂದುವಾಗಿದ್ದೇವೆ.
ನಾವು ಆತ್ಮಗಳು ಪಾತ್ರವನ್ನಭಿನಯಿಸಲು ಬಂದಿದ್ದೇವೆ. ಈಗ ಪಾತ್ರವು ಸಮಾಪ್ತಿಯಾಯಿತು ಆದ್ದರಿಂದ
ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡಿ. ಅದರಿಂದ ವಿಕರ್ಮಗಳು ವಿನಾಶವಾಗುತ್ತವೆ.
ವಿಕರ್ಮಗಳು ಆತ್ಮಕ್ಕೆ ಅಂಟುತ್ತದೆಯಲ್ಲವೆ. ಶರೀರವು ಇಲ್ಲಿಯೇ ಸಮಾಪ್ತಿಯಾಗುತ್ತದೆ. ಕೆಲವು
ಮನುಷ್ಯರು ಯಾವುದಾದರೂ ಪಾಪಕರ್ಮ ಮಾಡುತ್ತಾರೆಂದರೆ ತಮ್ಮ ಶರೀರವನ್ನೇ ಸಮಾಪ್ತಿ ಮಾಡಿಕೊಳ್ಳುತ್ತಾರೆ.
ಆದರೆ ಇದರಿಂದೇನು ಪಾಪವು ಕಳೆಯುವುದಿಲ್ಲ. ಪಾಪಾತ್ಮರೆಂದು ಕರೆಯಲಾಗುತ್ತದೆ. ಸಾಧು-ಸಂತ ಮೊದಲಾದವರು
ಆತ್ಮವು ನಿರ್ಲೇಪವಾಗಿದೆ, ಆತ್ಮವೇ ಪರಮಾತ್ಮನೆಂದು ಹೇಳಿಬಿಡುತ್ತಾರೆ. ಅನೇಕ ಮತಗಳಿವೆ. ಈಗ ನಿಮಗೆ
ಒಂದು ಶ್ರೀಮತವು ಸಿಗುತ್ತದೆ. ತಂದೆಯು ಜ್ಞಾನದ ಮೂರನೆಯ ನೇತ್ರವನ್ನು ಕೊಟ್ಟಿದ್ದಾರೆ, ಆತ್ಮವೇ
ಎಲ್ಲವನ್ನೂ ಮಾಡುತ್ತದೆ. ಮೊದಲು ಈಶ್ವರನ ಬಗ್ಗೆ ಏನೂ ತಿಳಿದಿರಲಿಲ್ಲ. ಸೃಷ್ಟಿಚಕ್ರವು ಹೇಗೆ
ಸುತ್ತುತ್ತದೆ. ಆತ್ಮವು ಎಷ್ಟು ಸೂಕ್ಷ್ಮವಾಗಿದೆ! ಮೊಟ್ಟ ಮೊದಲು ತಂದೆಯು ಆತ್ಮಾನುಭೂತಿಯನ್ನು
ಮಾಡಿಸುತ್ತಾರೆ. ಆತ್ಮವು ಬಹಳ ಸೂಕ್ಷ್ಮವಾಗಿದೆ, ಅದರ ಸಾಕ್ಷಾತ್ಕಾರವಾಗುತ್ತದೆ. ಅದೆಲ್ಲವೂ
ಭಕ್ತಿಮಾರ್ಗದ ಮಾತುಗಳಾಗಿವೆ. ಜ್ಞಾನದ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ಅವರೂ ಸಹ ಇವರ
ಭೃಕುಟಿಯ ಮಧ್ಯದಲ್ಲಿ ಬಂದು ಇವರ (ಬ್ರಹ್ಮಾ) ಆತ್ಮದ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ. ಇದು
ಇವರಿಗೂ ಸಹ ಅರ್ಥವಾಗುತ್ತದೆ. ಇವೆಲ್ಲವೂ ಹೊಸ ಮಾತುಗಳಾಗಿವೆ. ಇವನ್ನೂ ತಂದೆಯೇ ಕುಳಿತು
ತಿಳಿಸುತ್ತಾರೆ. ಇದನ್ನು ಪಕ್ಕಾ ನೆನಪಿಟ್ಟುಕೊಳ್ಳಿ, ಮರೆಯಬೇಡಿ. ತಂದೆಯನ್ನು ಎಷ್ಟು ನೆನಪು
ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ. ನಿಮ್ಮ ಭವಿಷ್ಯವು ನಿಮ್ಮ ವಿಕರ್ಮಗಳು
ವಿನಾಶವಾಗುವುದರ ಮೇಲೆ ಆಧಾರಿತವಾಗಿದೆ. ಭಾರತ ಖಂಡವೂ ಸಹ ಎಲ್ಲದಕ್ಕಿಂತ ಸೌಭಾಗ್ಯಶಾಲಿಯಾಗಿದೆ.
ಇದರಂತಹ ಸೌಭಾಗ್ಯಶಾಲಿ ಮತ್ತ್ಯಾವ ಖಂಡವೂ ಇಲ್ಲ. ಸ್ವಯಂ ತಂದೆಯೇ ಇಲ್ಲಿಗೆ ಬರುತ್ತಾರೆ. ಭಾರತವೇ
ಸ್ವರ್ಗವಾಗಿತ್ತು ಅದನ್ನು ಭಗವಂತನ ಹೂದೋಟವೆಂದು ಹೇಳುತ್ತಾರೆ. ತಂದೆಯು ಪುನಃ ಭಾರತವನ್ನು
ಹೂದೋಟವನ್ನಾಗಿ ಮಾಡುತ್ತಿದ್ದಾರೆ ನಾವು ಅಲ್ಲಿಗೆ ಹೋಗುವುದಕ್ಕಾಗಿ ಓದುತ್ತಿದ್ದೇವೆ ಎಂದು ನಿಮಗೂ
ಸಹ ತಿಳಿದಿದೆ. ಸಾಕ್ಷಾತ್ಕಾರವನ್ನೂ ಮಾಡುತ್ತೀರಿ, ಇದು ಅದೇ ಮಹಾಭಾರತ ಯುದ್ಧವಾಗಿದೆ. ನಂತರ
ಅರ್ಧಕಲ್ಪದವರೆಗೆ ಈ ಯುದ್ಧವು ನಡೆಯುವುದೇ ಇಲ್ಲ. ನೀವು ಮಕ್ಕಳಿಗಾಗಿ ಹೊಸ ಪ್ರಪಂಚವು ಅವಶ್ಯವಾಗಿ
ಬೇಕು. ಹೊಸ ಪ್ರಪಂಚವಿತ್ತು, ಭಾರತವು ಸ್ವರ್ಗವಾಗಿತ್ತು, 5000 ವರ್ಷಗಳಾಯಿತು. ಲಕ್ಷಾಂತರ ವರ್ಷಗಳ
ಮಾತಿಲ್ಲ. ಲಕ್ಷಾಂತರ ವರ್ಷಗಳು ಇದ್ದಿದ್ದರೆ ಮನುಷ್ಯರ ಸಂಖ್ಯೆಯು ಇನ್ನೂ ಲೆಕ್ಕವಿಲ್ಲದಷ್ಟಾಗಿ
ಬಿಡುವುದು. ಇಷ್ಟೊಂದು ಜನಸಂಖ್ಯೆಯಿಲ್ಲವೆಂದರೆ ಅಷ್ಟು ಲಕ್ಷಗಳಿರಲು ಹೇಗೆ ಸಾಧ್ಯವೆಂಬುದು ಯಾರ
ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ.
ಈಗ ನೀವು ತಿಳಿದುಕೊಳ್ಳುತ್ತೀರಿ - ಇಂದಿಗೆ 5000 ವರ್ಷಗಳ ಮೊದಲು ನಾವು ವಿಶ್ವದ ಮೇಲೆ ರಾಜ್ಯ
ಮಡುತ್ತಿದ್ದೆವು ಮತ್ತ್ಯಾವುದೇ ಖಂಡವಿರಲಿಲ್ಲ ಎಲ್ಲವೂ ನಂತರದಲ್ಲಿ ಬರುತ್ತದೆ. ನೀವು ಮಕ್ಕಳ
ಬುದ್ಧಿಯಲ್ಲಿ ಇವೆಲ್ಲಾ ಮಾತುಗಳಿವೆ ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ಸ್ವಲ್ಪವಾದರೂ ತಿಳಿಸಿ
ಅದರಿಂದ ಅರ್ಥ ಮಾಡಿಕೊಳ್ಳುವರು. ಈ ಮಾತು ಸತ್ಯವಾಗಿದೆ. ನಮಗಿಂತ ಮೊದಲು ಅವಶ್ಯವಾಗಿ ಯಾವುದೋ
ಧರ್ಮವಿತ್ತು, ನೀವೀಗ ತಿಳಿಸಿ - ಒಂದು ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಅದು ಪ್ರಾಯಲೋಪವಾಗಿ
ಬಿಟ್ಟಿದೆ. ಯಾರೂ ತಮ್ಮನ್ನು ದೇವತಾ ಧರ್ಮದವರೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ನಾವು ಆದಿ ಸನಾತನ
ದೇವಿ-ದೇವತಾ ಧರ್ಮದವರಾಗಿದ್ದೆವು ಅಂದಮೇಲೆ ಆ ಧರ್ಮವು ಎಲ್ಲಿ ಹೋಯಿತೆಂದು ತಿಳಿದುಕೊಂಡೇ ಇಲ್ಲ.
ಹಿಂದೂ ಧರ್ಮವು ಎಲ್ಲಿಂದ ಬಂದಿತು? ಯಾರಿಗೂ ಈ ಮಾತುಗಳಲ್ಲಿ ಚಿಂತನೆಯೇ ನಡೆಯುವುದಿಲ್ಲ. ನೀವು
ಮಕ್ಕಳು ತಿಳಿಸಿಕೊಡಿ - ತಂದೆಯು ಜ್ಞಾನ ಸಾಗರ, ಜ್ಞಾನದ ಅಥಾರಿಟಿಯಾಗಿದ್ದಾರೆ ಅಂದಮೇಲೆ ಅವಶ್ಯವಾಗಿ
ಜ್ಞಾನವನ್ನು ತಿಳಿಸಿರಬೇಕಲ್ಲವೆ. ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಇದರಲ್ಲಿ ಪ್ರೇರಣೆಯ
ಮಾತಿಲ್ಲ. ತಂದೆಯು ತಿಳಿಸುತ್ತಾರೆ - ಹೇಗೆ ಈಗ ಬಂದಿದ್ದೇನೆಯೋ ಅದೇರೀತಿ ಕಲ್ಪ-ಕಲ್ಪವೂ ಬರುತ್ತೇನೆ.
ಕಲ್ಪದ ನಂತರವೂ ಬಂದು ಮತ್ತೆ ಎಲ್ಲಾ ಮಕ್ಕಳೊಂದಿಗೆ ಮಿಲನ ಮಾಡುತ್ತೇನೆ. ನೀವೂ ಸಹ ಅದೇರೀತಿ
ಚಕ್ರವನ್ನು ಸುತ್ತುತ್ತೀರಿ, ರಾಜ್ಯವನ್ನು ಪಡೆಯುತ್ತೀರಿ ಮತ್ತು ಪಡೆದುಕೊಳ್ಳುತ್ತೀರಿ. ಇದು
ಬೇಹದ್ದಿನ ನಾಟಕವಾಗಿದೆ. ನೀವೆಲ್ಲರೂ ಪಾತ್ರಧಾರಿಗಳಾಗಿದ್ದೀರಿ. ಆತ್ಮವು ಪಾತ್ರಧಾರಿಯಾಗಿ
ಡ್ರಾಮಾದ ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿಯನ್ನೇ ಅರಿತುಕೊಂಡಿಲ್ಲವೆಂದರೆ ಇನ್ನೇನು
ಪ್ರಯೋಜನ! ನೀವು ತಿಳಿದುಕೊಂಡಿದ್ದೀರಿ - ಆತ್ಮವು ಹೇಗೆ ಶರೀರವನ್ನು ಧಾರಣೆ ಮಾಡುತ್ತದೆ ಮತ್ತು
ಪಾತ್ರವನ್ನಭಿನಯಿಸುತ್ತದೆ. ಈಗ ಪುನಃ ಹಿಂತಿರುಗಿ ಹೋಗಬೇಕಾಗಿದೆ. ಈಗ ಈ ಪ್ರಪಂಚದ ಅಂತ್ಯವಾಗಿದೆ.
ತಂದೆಯು ಹೇಗೆ ಗುಪ್ತವಾಗಿ ಕುಳಿತಿದ್ದಾರೆ ಎಂಬುದನ್ನು ಮಕ್ಕಳೇ ತಿಳಿದುಕೊಂಡಿದ್ದೀರಿ. ಇವರಲ್ಲಿ
ಕರ್ತನನ್ನು ನೋಡಿದೆವು..... ಈಗ ನೋಡಿದೆವು ಎಂದಾದರೂ ಹೇಳಿ ಅರಿತುಕೊಂಡೆವು ಎಂದಾದರೂ ಹೇಳಿ ಒಂದೇ
ಮಾತಾಗಿದೆ. ಆತ್ಮವನ್ನು ನೋಡುವುದಾದರೆ ಅದರಿಂದೇನೂ ಲಾಭವಿಲ್ಲ. ಯಾರಿಗೂ ಅದು ಅರ್ಥವಾಗುವುದಿಲ್ಲ.
ನೌಧಾಭಕ್ತಿಯಲ್ಲಿ ಬಹಳಷ್ಟು ಸಾಕ್ಷಾತ್ಕಾರಗಳನ್ನು ಮಾಡುತ್ತಾರೆ. ಮೊದಲು ನೀವು ಮಕ್ಕಳೂ ಸಹ
ಎಷ್ಟೊಂದು ಸಾಕ್ಷಾತ್ಕಾರಗಳನ್ನು ಮಾಡುತ್ತಿದ್ದಿರಿ. ಪುನಃ ಕೊನೆಯಲ್ಲಿಯೂ ಸಹ ಈ ಆಟಪಾಠಗಳನ್ನು
ನೋಡುತ್ತೀರಿ. ಈಗಂತೂ ತಂದೆಯು ತಿಳಿಸುತ್ತಾರೆ - ನೀವು ಓದಿ ಬುದ್ಧಿವಂತರಾಗಿ. ಒಂದುವೇಳೆ
ಓದುವುದಿಲ್ಲವೆಂದರೆ ಕೊನೆಯಲ್ಲಿ ಯಾವಾಗ ಫಲಿತಾಂಶ ಬರುವುದೋ ಆಗ ತಲೆಬಾಗಿಸಬೇಕಾಗುವುದು ಮತ್ತು ನಾವು
ಎಷ್ಟೊಂದು ಸಮಯವನ್ನು ವ್ಯರ್ಥ ಮಾಡಿದೆವೆಂದು ಪಶ್ಚಾತ್ತಾಪ ಪಡುತ್ತೀರಿ. ಎಷ್ಟೆಷ್ಟು ತಂದೆಯ
ನೆನಪಿನಲ್ಲಿರುತ್ತೀರೋ ಆ ನೆನಪಿನ ಬಲದಿಂದ ಪಾಪಗಳು ಕಳೆಯುತ್ತವೆ. ಹಾಗೂ ಅಷ್ಟು ಖುಷಿಯ
ನಶೆಯೇರುತ್ತದೆ.
ಭಗವಂತನನ್ನು ಏಕೆ ನೆನಪು ಮಾಡಲಾಗುತ್ತದೆ ಎಂಬುದು ಮನುಷ್ಯರಿಗೆ ತಿಳಿದೇ ಇಲ್ಲ. ನೀವು ಮಾತಾಪಿತಾ....
ಎಂದು ನೀವು ಹೇಳುತ್ತೀರಿ ಆದರೆ ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ಈಗ ನಿಮಗೆ ತಿಳಿದಿದೆ - ಶಿವನ
ಚಿತ್ರದಲ್ಲಿ ತಿಳಿಸಬಹುದು - ಇವರು ಜ್ಞಾನಸಾಗರ, ಪತಿತ-ಪಾವನನಾಗಿದ್ದಾರೆ ಅವರನ್ನು ನೆನಪು
ಮಾಡಬೇಕಾಗಿದೆ. ಆ ತಂದೆಯು ಅಪಾರ ಸುಖದ ಮಾರ್ಗವನ್ನು ತಿಳಿಸಲು ಬಂದಿದ್ದಾರೆಂದು ನಿಮಗೆ ತಿಳಿದಿದೆ.
ಇದು ವಿದ್ಯೆಯಾಗಿದೆ, ಇದರಲ್ಲಿ ಯಾರು ಎಷ್ಟು ಪುರುಷಾರ್ಥ ಮಾಡುವರೋ ಅಷ್ಟು ಶ್ರೇಷ್ಠ ಪದವಿಯನ್ನು
ಪಡೆಯುವರು. ಅವರ ಸಿಂಹಾಸನವು ಪರಂಪರೆಯಿಂದ ನಡೆದುಬಂದಿರಲು ಇವರೇನು ಸಾಧು-ಸಂತರಲ್ಲ. ಇದು ಶಿವ
ತಂದೆಯ ಸಿಂಹಾಸನವಾಗಿದೆ. ಇವರು ಹೋದಮೇಲೆ ಇನ್ನೊಬ್ಬರು ಬಂದು ಸಿಂಹಾಸನವನ್ನು
ಅಲಂಕರಿಸುತ್ತಾರೆಂದಲ್ಲ. ತಂದೆಯಂತೂ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಕೆಲವು
ಮಕ್ಕಳು ವ್ಯರ್ಥ ವಿಚಾರದಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ. ಹೆಚ್ಚಿನ ಹಣವನ್ನು ಕೂಡಿಟ್ಟಾಗ
ಅದನ್ನು ಮಕ್ಕಳು, ಮೊಮ್ಮಕ್ಕಳು ತಿನ್ನುತ್ತಾರೆ. ಕೊನೆಯಲ್ಲಿ ಕೆಲಸಕ್ಕೆ ಬರುವುದು, ಬ್ಯಾಂಕಿನಲ್ಲಿ
ಇಡಬಹುದು, ಮಕ್ಕಳು-ಮೊಮ್ಮಕ್ಕಳು ತಿನ್ನುತ್ತಾರೆಂದು ಕೆಲವರು ಆಲೋಚಿಸುತ್ತಾರೆ. ಆದರೆ ಯಾರನ್ನೂ
ಸರ್ಕಾರವು ಬಿಡುವುದಿಲ್ಲ. ಆದ್ದರಿಂದ ಹೆಚ್ಚಿನದಾಗಿ ಅದರ ವಿಚಾರ ಮಾಡದೇ ತಮ್ಮ ಭವಿಷ್ಯದ
ಸಂಪಾದನೆಯಲ್ಲಿ ತೊಡಗಬೇಕು. ಈಗ ಮಕ್ಕಳು ಪುರುಷಾರ್ಥ ಮಾಡಬೇಕಾಗಿದೆ. ಡ್ರಾಮಾದಲ್ಲಿದ್ದರೆ
ಮಾಡುತ್ತೇವೆಂದಲ್ಲ, ಪುರುಷಾರ್ಥವಿಲ್ಲದೆ ಆಹಾರವೂ ಸಿಗುವುದಿಲ್ಲ ಆದರೆ ಯಾರ
ಅದೃಷ್ಟದಲ್ಲಿರುವುದಿಲ್ಲವೋ ಅವರಿಗೆ ಈ ತರಹದ ವಿಚಾರಗಳು ಬಂದು ಬಿಡುತ್ತವೆ. ಅದೃಷ್ಟದಲ್ಲಿಯೇ
ಇಲ್ಲವೆಂದರೆ ಮತ್ತೆ ಈಶ್ವರೀಯ ಪುರುಷಾರ್ಥವನ್ನೇನು ಮಾಡುತ್ತಾರೆ! ಅದೃಷ್ಟದಲ್ಲಿರುವವರು ಚೆನ್ನಾಗಿ
ಧಾರಣೆ ಮಾಡುತ್ತಾ ಮತ್ತು ಮಾಡಿಸುತ್ತಾರೆ. ತಂದೆಯು ನಿಮ್ಮ ಶಿಕ್ಷಕನೂ ಆಗಿದ್ದಾರೆ, ಗುರುವೂ
ಆಗಿದ್ದಾರೆ. ಅಂದಾಗ ಅವರನ್ನು ನೆನಪು ಮಾಡಬೇಕಲ್ಲವೆ. ಎಲ್ಲರಿಗಿಂತ ಪ್ರಿಯರಾದವರು ತಂದೆ, ಶಿಕ್ಷಕ,
ಗುರುವೇ ಆಗಿದ್ದಾರೆ. ಅವರನ್ನು ನೆನಪು ಮಾಡಬೇಕು. ತಂದೆಯು ಬಹಳಷ್ಟು ಯುಕ್ತಿಗಳನ್ನು ತಿಳಿಸುತ್ತಾರೆ.
ನೀವು ಸಾಧು-ಸಂತ ಮೊದಲಾದವರಿಗೂ ನಿಮಂತ್ರಣ ಕೊಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಪುರುಷಾರ್ಥ
ಮಾಡಿ ತಮ್ಮ ಭವಿಷ್ಯದ ಸಂಪಾದನೆಯಲ್ಲಿ ತೊಡಗಬೇಕಾಗಿದೆ, ಡ್ರಾಮಾದಲ್ಲಿದ್ದರೆ ಮಾಡುತ್ತೇವೆಂದು
ಹೇಳುತ್ತಾ ಪುರುಷಾರ್ಥಹೀನರಾಗಬಾರದು.
2. ಇಡೀ ದಿನದಲ್ಲಿ
ಏನೆಲ್ಲಾ ಪಾಪಗಳಾಗುತ್ತವೆ ಅಥವಾ ಯಾರಿಗಾದರೂ ದುಃಖ ಕೊಡುತ್ತೀರೆಂದರೆ ಅದನ್ನು ಬರೆದಿಡಬೇಕಾಗಿದೆ.
ಸತ್ಯತೆಯಿಂದ ಅದನ್ನು ತಂದೆಗೆ ತಿಳಿಸಬೇಕಾಗಿದೆ. ಸ್ವಚ್ಛ ಹೃದಯಿಗಳಾಗಿ ಒಬ್ಬ ತಂದೆಯ ನೆನಪಿನಿಂದ
ಎಲ್ಲಾ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ.
ವರದಾನ:
ಪ್ರತಿ ಸಂಕಲ್ಪ
ಮತ್ತು ಕರ್ಮವನ್ನು ಶ್ರೇಷ್ಠ ಮತ್ತು ಸಫಲ ಮಾಡಿಕೊಳ್ಳುವಂತಹ ಜ್ಞಾನ ಸ್ವರೂಪ ತಿಳುವಳಿಕಸ್ತ ಭವ.
ಯಾರು ಜ್ಞಾನ ಸ್ವರೂಪ,
ತಿಳುವಳಿಕಸ್ತರಾಗಿ ಯಾವುದೇ ಸಂಕಲ್ಪ ಅಥವಾ ಕರ್ಮ ಮಾಡುತ್ತಾರೆ, ಅವರು ಸಫಲತಾ ಮೂರ್ತಿಗಳಗುತ್ತಾರೆ.
ಇದರದೇ ನೆನಪಾರ್ಥ ಭಕ್ತಿ ಮಾರ್ಗದಲ್ಲಿ ಕಾರ್ಯ ಪ್ರಾರಂಭ ಮಾಡುವ ಸಮಯದಲ್ಲಿ ಸ್ವಸ್ತಿಕ ಬರೆಯುತ್ತಾರೆ
ಮತ್ತು ಗಣೇಶನಿಗೆ ನಮಸ್ಕರಿಸುತ್ತಾರೆ. ಈ ಸ್ವಸ್ತಿಕ. ಸ್ವ ಸ್ಥಿತಿಯಲ್ಲಿ ಸ್ಥಿತರಾಗುವಂತ ಮತ್ತು
ಗಣೇಶ ಜ್ಞಾನಪೂರ್ಣ ಸ್ಥಿತಿಯ ಸೂಚಕವಾಗಿದೆ. ತಾವು ಮಕ್ಕಳು ಯಾವಾಗ ಸ್ವಯಂ ಜ್ಞಾನಪೂರ್ಣರಾಗಿ ಪ್ರತಿ
ಸಂಕಲ್ಪ ಅಥವಾ ಕರ್ಮ ಮಾಡುವಿರಿ ಆಗ ಸಹಜವಾಗಿ ಸಫಲತೆಯ ಅನುಭವವಾಗುವುದು.
ಸ್ಲೋಗನ್:
ಬ್ರಾಹ್ಮಣ ಜೀವನದ
ವಿಶೇಷತೆಯಾಗಿದೆ ಖುಷಿ, ಆದ್ದರಿಂದ ಖುಷಿಯ ದಾನ ಮಾಡುತ್ತಾ ಹೋಗಿ.