27.05.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಜ್ಞಾನ-ಯೋಗದಿಂದ ನಿಶ್ಚಯವುಂ ಟಾಗುತ್ತದೆ, ಸಾಕ್ಷಾತ್ಕಾರದಿಂದಲ್ಲ, ಸಾಕ್ಷಾತ್ಕಾರವು ಡ್ರಾಮಾದಲ್ಲಿ
ನಿಗಧಿಯಾಗಿದೆ, ಬಾಕಿ ಅದರಿಂದ ಯಾರದೇ ಕಲ್ಯಾಣವಾಗುವುದಿಲ್ಲ”
ಪ್ರಶ್ನೆ:
ತಂದೆಯು ಯಾವ
ಒಂದು ಶಕ್ತಿಯನ್ನು ತೋರಿಸುವುದಿಲ್ಲ ಆದರೆ ತಂದೆಯ ಬಳಿ ಜಾದೂಗರಿ ಅವಶ್ಯವಾಗಿ ಇದೆ?
ಉತ್ತರ:
ಭಗವಂತನು ಶಕ್ತಿಶಾಲಿಯಾಗಿದ್ದಾರೆ, ಅವರು ಸತ್ತವರನ್ನು ಬದುಕಿಸುತ್ತಾರೆ ಎಂದು ಮನುಷ್ಯರು
ತಿಳಿದುಕೊಳ್ಳುತ್ತಾರೆ. ಆದರೆ ನಾನು ಈ ರೀತಿಯ ಶಕ್ತಿಯನ್ನು ತೋರಿಸುವುದಿಲ್ಲವೆಂದು ತಂದೆಯು
ಹೇಳುತ್ತಾರೆ. ಬಾಕಿ ಯಾರು ನೌಧಾಭಕ್ತಿ ಮಾಡುತ್ತಾರೆಯೋ ಅಂತಹವರಿಗೆ ಸಾಕ್ಷಾತ್ಕಾರ ಮಾಡಿಸುತ್ತೇನೆ.
ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಸಾಕ್ಷಾತ್ಕಾರ ಮಾಡಿಸುವಂತಹ ಜಾದೂತನ ತಂದೆಯಲ್ಲಿದೆ.
ಆದ್ದರಿಂದ ಕೆಲವು ಮಕ್ಕಳಿಗೆ ಮನೆಯಲ್ಲಿ ಕುಳಿತಲ್ಲಿಯೇ ಬ್ರಹ್ಮನ ಅಥವಾ ಶ್ರೀಕೃಷ್ಣನ
ಸಾಕ್ಷಾತ್ಕಾರವಾಗುತ್ತದೆ.
ಗೀತೆ:
ಯಾರು ಬಂದರು
ನನ್ನ ಮನದ ಬಾಗಿಲಲ್ಲಿ................
ಓಂ ಶಾಂತಿ.
ಇದು ಮಕ್ಕಳ ಅನುಭವದ ಗೀತೆಯಾಗಿದೆ. ಸತ್ಸಂಗಗಳು ಬಹಳಷ್ಟಿದೆ, ಪ್ರತ್ಯೇಕವಾಗಿ ಭಾರತದಲ್ಲಂತೂ
ಬಹಳಷ್ಟು ಸತ್ಸಂಗಗಳಿವೆ, ಅನೇಕ ಮತ-ಮತಾಂತರವಿದೆ, ವಾಸ್ತವದಲ್ಲಿ ಇದ್ಯಾವುದೂ ಸತ್ಸಂಗವಲ್ಲ.
ಸತ್ಸಂಗವು ಒಂದೇ ಆಗಿದೆ ಉಳಿದಂತೆ ಅಲ್ಲಿ ನೀವು ವಿದ್ವಾಂಸರು, ಆಚಾರ್ಯರು, ಪಂಡಿತರ ಮುಖವನ್ನು
ನೋಡಿದಾಗ ಬುದ್ಧಿಯು ಅವರಲ್ಲಿ ಹೋಗುತ್ತದೆ. ಇಲ್ಲಂತೂ ಭಿನ್ನವಾದ ಮಾತಾಗಿದೆ. ಈ ಸತ್ಸಂಗವು ಒಂದೇ
ಬಾರಿ ಸಂಗಮಯುಗದಲ್ಲಿಯೇ ನಡೆಯುತ್ತದೆ. ಇದು ಹೊಸ ಮಾತಾಗಿದೆ. ಬೇಹದ್ದಿನ ತಂದೆಗೆ ಶರೀರವಂತು ಇಲ್ಲ.
ನಾನು ನಿಮ್ಮ ನಿರಾಕಾರ ಶಿವ ತಂದೆಯಾಗಿದ್ದೇನೆಂದು ಹೇಳುತ್ತಾರೆ. ನೀವು ಬೇರೆ ಸತ್ಸಂಗಗಳಲ್ಲಿ
ಹೋದಾಗ ಶರೀರಗಳನ್ನು ನೋಡುತ್ತೀರಿ. ಶಾಸ್ತ್ರಗಳನ್ನು ನೆನಪು ಮಾಡಿಕೊಂಡು ಹೇಳುತ್ತೀರಿ, ಅನೇಕ
ಪ್ರಕಾರದ ಶಾಸ್ತ್ರಗಳಿವೆ, ಅದಂತೂ ನೀವು ಜನ್ಮ-ಜನ್ಮಾಂತರದಿಂದಲೂ ಕೇಳುತ್ತಲೇ ಬಂದಿದ್ದೀರಿ.
ಇದಾದರೂ ಹೊಸ ಮಾತಾಗಿದೆ. ಬುದ್ಧಿಯಿಂದ ಆತ್ಮವು ತಿಳಿಯುತ್ತದೆ. ತಂದೆಯು ಹೇಳುತ್ತಾರೆ - ಹೇ ನನ್ನ
ಅಗಲಿ ಹೋಗಿ ಸಿಕ್ಕಿರುವ ಮಕ್ಕಳೇ, ನನ್ನ ಸಾಲಿಗ್ರಾಮಗಳೇ, ನೀವು ಮಕ್ಕಳಿಗೆ ಗೊತ್ತಿದೆ, 5000
ವರ್ಷಗಳ ಹಿಂದೆ ಈ ಶರೀರರಿಂದ (ಬ್ರಹ್ಮಾ) ತಂದೆಯು ಓದಿಸಿದ್ದರು. ನಿಮ್ಮ ಬುದ್ಧಿಯು ಒಮ್ಮೆಲೆ ದೂರ
ಹೋಗುತ್ತದೆ ಅಂದಾಗ ತಂದೆಯು ಬಂದಿದ್ದಾರೆ, ಬಾಬಾ ಎನ್ನುವ ಅಕ್ಷರವು ಎಷ್ಟೊಂದು ಮಧುರವಾಗಿದೆ! ಅವರು
ಮಾತಾಪಿತನಾಗಿದ್ದಾರೆ. ಯಾರಾದರೂ ಕೇಳಿದಾಗ ಇವರ ತಂದೆ-ತಾಯಿ ಯಾರು ಎಂದು ಗೊತ್ತಿಲ್ಲವೆಂದು
ಹೇಳುತ್ತಾರೆ. ಖಂಡಿತವಾಗಿ ಅವರು ಸಾಕ್ಷಾತ್ಕಾರ ಮಾಡಿಸಿದಾಗ ಅದರಲ್ಲಿಯೂ ಗೊಂದಲಕ್ಕೊಳಗಾಗುತ್ತರೆ.
ಕೆಲವೊಮ್ಮೆ ಬ್ರಹ್ಮಾರವರನ್ನು, ಕೆಲವೊಮ್ಮೆ ಕೃಷ್ಣನನ್ನು ನೋಡುತ್ತಾರೆ. ಆಗ ಏನೆಂದು ವಿಚಾರವನ್ನೂ
ಮಾಡುತ್ತಿರುತ್ತಾರೆ. ಅನೇಕರಿಗೆ ಮನೆಯಲ್ಲಿ ಕುಳಿತಿದ್ದಂತೆಯೇ ಬ್ರಹ್ಮನ ಸಾಕ್ಷಾತ್ಕಾರವಾಗುತ್ತದೆ.
ಈಗ ಬ್ರಹ್ಮನನ್ನು ಯಾರೂ ಪೂಜಿಸುವುದಿಲ್ಲ. ಕೃಷ್ಣನ ಪೂಜೆಯನ್ನಾದರೂ ಮಾಡುತ್ತಾರೆ, ಬ್ರಹ್ಮನನ್ನು
ಯಾರೂ ತಿಳಿದೇ ಇಲ್ಲ. ಪ್ರಜಾಪಿತ ಬ್ರಹ್ಮನಂತೂ ಈಗ ಬಂದಿದ್ದಾರೆ, ಇವರು ಪ್ರಜಾಪಿತನಾಗಿದ್ದಾರೆ.
ತಂದೆಯು ತಿಳಿಸುತ್ತಾರೆ - ಇಡೀ ಪ್ರಪಂಚ ಪತಿತವಾಗಿದೆ, ಅಂದಾಗ ಖಂಡಿತವಾಗಿ ಇವರೂ ಸಹ ಅನೇಕ ಜನ್ಮಗಳ
ಅಂತಿಮದಲ್ಲಿ ಪತಿತರಾಗಿದ್ದಾರೆ. ಯಾರೂ ಸಹ ಪಾವನರಿಲ್ಲ ಆದ್ದರಿಂದ ಕುಂಭಮೇಳದಲ್ಲಿ ಹರಿದ್ವಾರ,
ಗಂಗಾ ಸಾಗರದ ಮೇಳಕ್ಕೆ ಹೋಗುತ್ತಾರೆ, ಸ್ನಾನ ಮಾಡುವುದರಿಂದ ಪಾವನರಾಗುತ್ತೇವೆಂದು ತಿಳಿಯುತ್ತಾರೆ
ಆದರೆ ಈ ನದಿಗಳೇನೂ ಪತಿತ-ಪಾವನಿಯಲ್ಲ. ನದಿಗಳಂತೂ ಸಾಗರದಿಂದ ಹೊರಡುತ್ತದೆ, ವಾಸ್ತವದಲ್ಲಿ ನೀವು
ಜ್ಞಾನ ಗಂಗೆಯಾಗಿದ್ದೀರಿ, ನಿಮ್ಮದು ಮಹತ್ವಿಕೆಯಿದೆ. ನೀವು ಜ್ಞಾನ ಗಂಗೆಯರು ಎಲ್ಲೆಲ್ಲಿಂದ
ಹೊರಡುತ್ತೀರಿ. ಅವರು ಬಾಣ ನಾಟಿದಾಗ ಗಂಗೆಯು ಹೊರಟಿತು ಎಂದು ತೋರಿಸುತ್ತಾರೆ. ಇಲ್ಲಿ ಬಾಣ ನಾಟುವ
ಮಾತಿಲ್ಲ. ಈ ಜ್ಞಾನ ಗಂಗೆಯರು ದೇಶ-ವಿದೇಶಗಳಲ್ಲಿ ಹೋಗುತ್ತಾರೆ.
ಶಿವ ತಂದೆಯು ತಿಳಿಸುತ್ತಾರೆ - ನಾನು ಡ್ರಾಮಾದ ಬಂಧನದಲ್ಲಿ ಬಂಧಿತನಾಗಿದ್ದೇನೆ. ಎಲ್ಲರ ಪಾತ್ರವು
ನಿಶ್ಚಿತವಾಗಿರುತ್ತದೆ. ನನ್ನದೂ ಸಹ ಪಾತ್ರವು ನಿಶ್ಚಿತವಾಗಿದೆ. ಭಗವಂತನು ಬಹಳ ಶಕ್ತಿಶಾಲಿಯೆಂದು
ಕೆಲವರು ತಿಳಿದುಕೊಳ್ಳುತ್ತಾರೆ, ಸತ್ತವರನ್ನು ಬದುಕಿಸುತ್ತಾರೆ ಎನ್ನುತ್ತಾರೆ. ಇದೆಲ್ಲವೂ
ಅಸತ್ಯವಾಗಿದೆ. ನಾನು ಓದಿಸುವುದಕ್ಕೋಸ್ಕರ ಬರುತ್ತೇನೆ ಉಳಿದಂತೆ ಶಕ್ತಿಯನ್ನೇನು ತೋರಿಸಲಿ!
ಸಾಕ್ಷಾತ್ಕಾರದ್ದೂ ಸಹ ಜಾದೂತನವಿದೆ, ನೌಧಾಭಕ್ತಿಯನ್ನು ಮಾಡುತ್ತಾರೆ, ಆಗ ನಾನು ಸಾಕ್ಷಾತ್ಕಾರ
ಮಾಡಿಸುತ್ತೇನೆ. ಹೇಗೆ ಕಾಳಿಯ ರೂಪವನ್ನು ತೋರಿಸುತ್ತಾರೆ, ಅದರ ಮೇಲೆ ಎಣ್ಣೆಯನ್ನು
ಸುರಿಯುತ್ತಾರೆ. ಈಗ ಇಂತಹ ಕಾಳಿಯೇನೂ ಇರುವುದಿಲ್ಲ ಆದರೆ ಕಾಳಿದೇವಿಯ ನೌಧಾಭಕ್ತಿಯನ್ನು ಬಹಳ
ಮಾಡುತ್ತಾರೆ. ವಾಸ್ತವದಲ್ಲಿ ಜಗದಂಬೆಯೇ ಕಾಳಿಯಾಗಿರುತ್ತಾಳೆ. ಕಾಳಿಯ ಈ ರೀತಿಯ ರೂಪವಂತು ಇಲ್ಲ
ಆದರೆ ನೌಧಾಭಕ್ತಿಯನ್ನು ಮಾಡುವುದರಿಂದ ತಂದೆಯು ಭಾವನೆಗೆ ಫಲವನ್ನು ಕೊಡುತ್ತಾರೆ. ಕಾಮ ಚಿತೆಯ
ಮೇಲೆ ಕುಳಿತುಕೊಂಡಿದ್ದರಿಂದ ಕಪ್ಪಾದೆವು, ಈಗ ಜ್ಞಾನ ಚಿತೆಯ ಮೇಲೆ ಕುಳಿತುಕೊಂಡು
ಸುಂದರರಾಗುತ್ತೇವೆ. ಯಾವ ಕಾಳಿ ಈಗ ಜಗದಂಬೆಯಾಗಿರುತ್ತಾಳೆ, ಅವಳು ಸಾಕ್ಷಾತ್ಕಾರವನ್ನು ಹೇಗೆ
ಮಾಡಿಸುತ್ತಾಳೆ? ಅವಳಂತೂ ಈಗ ಬಹಳ ಜನ್ಮಗಳ ಅಂತ್ಯದಲ್ಲಿಯೂ ಅಂತಿಮ ಜನ್ಮದಲ್ಲಿದ್ದಾಳೆ. ಈಗಂತೂ
ದೇವತೆಗಳಿಲ್ಲ ಎಂದಾಗ ಅವರೇನು ಸಾಕ್ಷಾತ್ಕಾರ ಮಾಡಿಸಲು ಸಾಧ್ಯ! ಸಾಕ್ಷಾತ್ಕಾರದ ಬೀಗದ ಕೈ ಈಗ ನನ್ನ
ಕೈಯಲ್ಲಿದೆ ಎಂದು ತಂದೆಯು ತಿಳಿಸುತ್ತಾರೆ. ಅಲ್ಪಕಾಲಕ್ಕಾಗಿ ಭಾವನೆಯನ್ನು ಈಡೇರಿಸಲು
ಸಾಕ್ಷಾತ್ಕಾರ ಮಾಡಿಸುತ್ತೇನೆ ಆದರೆ ಅವರ್ಯಾರೂ ನನ್ನೊಂದಿಗೆ ಮಿಲನ ಮಾಡಲು ಸಾಧ್ಯವಿಲ್ಲ. ಒಂದು
ಕಾಳಿಯ ಉದಾಹರಣೆಯನ್ನು ಕೊಡಲಾಗಿದೆ. ಈ ರೀತಿ ಹನುಮಂತ, ಗಣೇಶ ಮುಂತಾದವರು ಇದ್ದಾರೆ. ಒಂದುವೇಳೆ
ಸಿಖ್ಖರು ಗುರುನಾನಕರದು ಬಹಳ ಭಕ್ತಿ ಮಾಡಿದ್ದಲ್ಲಿ ಅವರಿಗೂ ಸಾಕ್ಷಾತ್ಕಾರವಾಗುತ್ತದೆ. ಆದರೆ ಅವರೂ
ಕನಿಷ್ಠ ಮಟ್ಟಕ್ಕೆ ಇಳಿಯುತ್ತಾರೆ. ನೋಡಿ, ಇವರು ಗುರುನಾನಕರ ಭಕ್ತಿಯನ್ನು ಮಾಡುತ್ತಿದ್ದಾರೆಂದು
ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ಆದರೂ ಸಾಕ್ಷಾತ್ಕಾರವನ್ನಂತೂ ನಾನೇ ಮಾಡಿಸುತ್ತೇನೆ. ಅವರು
ಹೇಗೆ ಸಾಕ್ಷಾತ್ಕಾರ ಮಾಡಿಸಲು ಸಾಧ್ಯ. ಅವರ ಬಳಿ ಸಾಕ್ಷಾತ್ಕಾರ ಮಾಡಿಸುವ ಬೀಗದ ಕೈ ಇಲ್ಲ. ಈ
ತಂದೆಯು (ಬ್ರಹ್ಮಾ) ಹೇಳುತ್ತಾರೆ - ನನಗೆ ವಿನಾಶ-ಸ್ಥಾಪನೆಯ ಸಾಕ್ಷಾತ್ಕಾರವು ಆ ತಂದೆಯು (ಶಿವ
ತಂದೆ) ಮಾಡಿಸಿದರು ಆದರೆ ಸಾಕ್ಷಾತ್ಕಾರದಿಂದ ಯಾರದೇ ಕಲ್ಯಾಣವಾಗುವುದಿಲ್ಲ. ಈ ರೀತಿಯಂತೂ
ಅನೇಕರಿಗೆ ಸಾಕ್ಷಾತ್ಕಾರಗಳಾಗುತ್ತಿದ್ದವು ಆದರೆ ಅವರ್ಯಾರೂ ಇಂದು ಇಲ್ಲ. ಅನೇಕ ಮಂದಿ ಮಕ್ಕಳು
ನಮಗೆ ಸಾಕ್ಷಾತ್ಕಾರದಿಂದ ನಿಶ್ಚಯವಾಗುವುದಿಲ್ಲ, ಜ್ಞಾನ ಮತ್ತು ಯೋಗದಿಂದ ನಿಶ್ಚಯವಾಗುತ್ತದೆ.
5000 ವರ್ಷಗಳ ಹಿಂದೆಯೂ ಸಹ ಈ ಸಾಕ್ಷಾತ್ಕಾರವನ್ನು ನಾನೇ ಮಾಡಿಸುತ್ತೇನೆಂದು ಹೇಳಿದ್ದರು.
ಮೀರಳಿಗೂ ಸಾಕ್ಷಾತ್ಕಾರವಾಯಿತು, ಹಾಗೆಂದು ಆತ್ಮವೇನೂ ಅಲ್ಲಿಗೆ ಹೋಗಲಿಲ್ಲ. ಕುಳಿತಲ್ಲಿ
ಸಾಕ್ಷಾತ್ಕಾರವಾಗುತ್ತದೆ ಆದರೆ ಯಾರೂ ನನ್ನನ್ನು ಪಡೆಯುವುದಿಲ್ಲ.
ತಂದೆಯು ತಿಳಿಸುತ್ತಾರೆ - ಯಾವುದೇ ಮಾತಿನಲ್ಲಿ ಸಂಶಯವಿದ್ದರೆ ಬ್ರಾಹ್ಮಿಣಿಯರೊಂದಿಗೆ ಕೇಳಿ,
ಇದಂತೂ ಮಕ್ಕಳಿಗೆ ಗೊತ್ತಿದೆ, ಮಕ್ಕಳೂ ಸಹ ನಂಬರ್ವಾರ್ ಇದ್ದಾರೆ, ನದಿಗಳೂ ಸಹ ನಂಬರ್ವಾರ್ ಆಗಿದೆ.
ಕೆಲವರು ಕೊಳ ಆಗಿದ್ದಾರೆ, ಬಹಳ ಕೊಳಕು, ಕೊಳಚೆ ನೀರಾಗಿದ್ದಾರೆ, ಅಲ್ಲಿಗೂ ಶ್ರದ್ಧಾಭಾವದಿಂದ
ಮನುಷ್ಯರು ಹೋಗುತ್ತಾರೆ, ಅದು ಭಕ್ತಿಯ ಅಂಧಶ್ರದ್ಧೆಯಾಗಿದೆ. ಎಂದೂ ಯಾರಿಂದಲೂ ಭಕ್ತಿಯನ್ನು
ಬಿಡಿಸಬಾರದು, ಯಾವಾಗ ಜ್ಞಾನಕ್ಕೆ ಬರುತ್ತಾರೆಯೋ ಆಗ ಭಕ್ತಿಯು ತಾನಾಗಿಯೇ ಬಿಟ್ಟು ಹೋಗುತ್ತದೆ.
ತಂದೆಯೂ (ಬ್ರಹ್ಮಾ) ಸಹ ನಾರಾಯಣನ ಭಕ್ತನಾಗಿದ್ದರು, ಚಿತ್ರದಲ್ಲಿ ಲಕ್ಷ್ಮಿಯು ದಾಸಿಯಾಗಿ ನಾರಾಯಣನ
ಕಾಲನ್ನು ಒತ್ತುವುದನ್ನು ನೋಡಿದರು ಆಗ ಅದು ಅವರಿಗೆ ಸ್ವಲ್ಪವೂ ಇಷ್ಟವಾಗಲಿಲ್ಲ, ಸತ್ಯಯುಗದಲ್ಲಿ ಈ
ರೀತಿಯಿರುವುದಿಲ್ಲ ಆಗ ಬ್ರಹ್ಮಾರವರು ಒಬ್ಬ ಕಲೆಗಾರನನ್ನು ಕರೆದು ಲಕ್ಷ್ಮಿಯನ್ನು ಈ ದಾಸ್ಯತನದಿಂದ
ಮುಕ್ತಗೊಳಿಸಲು ಹೇಳಿದೆನು. ಬಾಬಾ(ಬ್ರಹ್ಮಾ) ಭಕ್ತನಂತೂ ಆಗಿದ್ದರು ಆದರೆ ಜ್ಞಾನವೂ ಸಹ ಸ್ವಲ್ಪ
ಇತ್ತು, ಎಲ್ಲರೂ ಭಕ್ತರಾಗಿದ್ದಾರೆ. ನಾವೀಗ ತಂದೆಯ ಮಕ್ಕಳು ಮಾಲೀಕರಾಗಿ ಬಿಟ್ಟಿದ್ದೇವೆ,
ಮಕ್ಕಳನ್ನು ಬ್ರಹ್ಮಾಂಡದ ಮಾಲೀಕರನ್ನಾಗಿ ಮಾಡುತ್ತಾರೆ. ನಿಮಗೆ ರಾಜ್ಯಭಾಗ್ಯವನ್ನು ಕೊಡುತ್ತೇನೆ
ಅಂದಾಗ ಇಂತಹ ತಂದೆಯನ್ನು ನೋಡಿರುವಿರಾ? ಎಂದು ಕೇಳುತ್ತಾರೆ. ಆ ತಂದೆಯನ್ನು ಪೂರ್ಣ ನೆನಪು
ಮಾಡಬೇಕಾಗಿದೆ. ಅವರನ್ನು ನೀವು ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಅವರೊಂದಿಗೆ ಯೋಗವನ್ನು
ಜೋಡಿಸಬೇಕು. ಯೋಗ ಮತ್ತು ಜ್ಞಾನವು ಬಹಳ ಸಹಜವಾಗಿದೆ. ಬೀಜ ಮತ್ತು ವೃಕ್ಷವನ್ನು
ತಿಳಿದುಕೊಳ್ಳಬೇಕು. ನೀವು ಆ ನಿರಾಕಾರಿ ವೃಕ್ಷದಿಂದ ಸಾಕಾರಿ ವೃಕ್ಷದಲ್ಲಿ ಬಂದಿರುವಿರಿ, ತಂದೆಯು
ಸಾಕ್ಷಾತ್ಕಾರದ ರಹಸ್ಯವನ್ನು ತಿಳಿಸಿದರು. ತಂದೆ-ಶಿಕ್ಷಕ-ಗುರು ಮೂವರಿಂದಲೂ ಶಿಕ್ಶಣವು
ಸಿಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಈ ರೀತಿ ಶಿಕ್ಷಣವನ್ನು ಕೊಡುತ್ತೇನೆ,
ಇಂತಹ ಕರ್ಮವನ್ನು ಕಲಿಸುತ್ತೇನೆ ಯಾವುದರಿಂದ ನೀವು 21 ಜನ್ಮಗಳಲ್ಲಿ ಸದಾ ಸುಖಿಯಾಗಿರುತ್ತೀರಿ.
ಶಿಕ್ಷಕ ಶಿಕ್ಷಣವನ್ನು ಕೊಡುತ್ತಾರಲ್ಲವೆ. ಗುರುಗಳೂ ಸಹ ಪವಿತ್ರರಾಗುವ ಶಿಕ್ಷಣವನ್ನು ಕೊಡುತ್ತಾರೆ
ಅಥವಾ ಕಥೆಗಳನ್ನು ಹೇಳುತ್ತಾರೆ ಆದರೆ ಧಾರಣೆಯಂತೂ ಸ್ವಲ್ಪವೂ ಇರುವುದಿಲ್ಲ. ಇಲ್ಲಂತೂ ತಂದೆಯು
ಅಂತಿಮ ಮತಿ ಸೋ ಗತಿಯೆಂದು ತಿಳಿಸುತ್ತಾರೆ. ಮನುಷ್ಯರು ಶರೀರ ಬಿಡುವ ಸಮಯದಲ್ಲಿ ರಾಮ-ರಾಮನೆಂದು
ಹೇಳಿ ಎಂದು ಹೇಳುತ್ತಾರೆ. ಈಗ ಬುದ್ಧಿಯು ಆ ಕಡೆ ಹೋಗುತ್ತದೆ. ನಿಮ್ಮದು ಈಗ ಸಾಕಾರದಿಂದ ಯೋಗವು
ತುಂಡಾಗಿದೆಯೆಂದು ತಂದೆಯು ತಿಳಿಸುತ್ತಾರೆ. ಈಗ ನಾನು ನಿಮಗೆ ಬಹಳ ಒಳ್ಳೆಯ ಕರ್ಮವನ್ನು
ಕಲಿಸುತ್ತೇನೆ. ಶ್ರೀಕೃಷ್ಣನ ಚಿತ್ರವನ್ನು ನೋಡಿ, ಹಳೆಯ ಪ್ರಪಂಚವನ್ನು ಕಾಲಿನಿಂದ ಒದೆಯುತ್ತಾ
ಮತ್ತು ಹೊಸ ಪ್ರಪಂಚದಲ್ಲಿ ಬರುತ್ತಾನೆ. ನೀವೀಗ ಹಳೆಯ ಪ್ರಪಂಚವನ್ನು ಒದೆಯುತ್ತಾ ಹೊಸ
ಪ್ರಪಂಚದಲ್ಲಿ ಬರುತ್ತೀರಿ. ಅಂದಾಗ ನಿಮ್ಮ ಕಾಲು ನರಕದ ಕಡೆ, ಮುಖವು ಸ್ವರ್ಗದ ಕಡೆ ಇರಬೇಕು.
ಸ್ಮಶಾನದ ಒಳಗೆ ಹೋಗುವಾಗ ಶವದ ಮುಖವನ್ನು ಸ್ಮಶಾನದ ಕಡೆ ತಿರುಗಿಸುತ್ತಾರೆ, ಕಾಲನ್ನು ಊರಿನ ಕಡೆ
ತಿರುಗಿಸುತ್ತಾರೆ ಅಂದಾಗ ಈ ಚಿತ್ರವನ್ನು ಈ ರೀತಿ ಬಿಡಿಸಬೇಕು.
ಮಮ್ಮಾ, ಬಾಬಾ ಮತ್ತು ನೀವು ಮಕ್ಕಳು, ನೀವಂತೂ ಮಮ್ಮಾ-ಬಾಬಾರವರನ್ನು ಅನುಸರಿಸಬೇಕು ಯಾವುದರಿಂದ
ಅವರ ಗದ್ದುಗೆಯಲ್ಲಿ ನೀವು ಕುಳಿತುಕೊಳ್ಳಬಹುದು. ರಾಜನ ಮಕ್ಕಳಿಗೆ ರಾಜಕುಮಾರ-ರಾಜಕುಮಾರಿಯೆಂದು
ಹೇಳಲಾಗುತ್ತದೆ. ನಿಮಗೆ ಗೊತ್ತಿದೆ - ನಾವು ಭವಿಷ್ಯದಲ್ಲಿ ರಾಜಕುಮಾರ-ರಾಜಕುಮಾರಿಯಾಗುತ್ತೇವೆ.
ಇಂತಹ ಕರ್ಮಗಳನ್ನು ಕಲಿಸುವ ಯಾವುದಾದರೂ ತಂದೆ, ಶಿಕ್ಷಕ, ಗುರು ಇದ್ದಾರೆಯೇ! ನೀವು ಸದಾಕಾಲಕ್ಕಾಗಿ
ಸುಖಿಗಳಾಗುತ್ತೀರಿ. ಇದು ಶಿವ ತಂದೆಯ ವರವಾಗಿದೆ - ಅವರಂತೂ ಆಶೀರ್ವಾದ ಮಾಡುತ್ತಾರೆ. ಈ ರೀತಿ
ನಮ್ಮ ಮೇಲೆ ಅವರ ಕೃಪೆಯೇನೂ ಇಲ್ಲ. ಕೇವಲ ಹೇಳುವುದರಿಂದ ಏನೂ ಆಗುವುದಿಲ್ಲ. ನೀವಿಲ್ಲಿ
ಕಲಿಯಬೇಕಾಗಿದೆ, ಕೇವಲ ಆಶೀರ್ವಾದದಿಂದ ನೀವು ಆಗುವುದಿಲ್ಲ. ಅವರ ಮತದಂತೆ ನಡೆಯಬೇಕು, ಜ್ಞಾನ-ಯೋಗದ
ಧಾರಣೆ ಮಾಡಬೇಕು. ಬಾಯಿಂದ ರಾಮ-ರಾಮ ಎಂದು ಹೇಳುವುದು ಶಬ್ಧದಲ್ಲಿ ಬರುವುದಾಗಿದೆ ಎಂದು ತಂದೆಯು
ತಿಳಿಸುತ್ತಾರೆ. ನೀವಂತೂ ಶಬ್ಧದಿಂದ ದೂರ ಹೋಗಬೇಕಾಗಿದೆ, ಶಾಂತವಾಗಿರಬೇಕಾಗಿದೆ. ಬಹಳ ಒಳ್ಳೊಳ್ಳೆಯ
ಆಟಗಳು ಇರುತ್ತವೆ, ಅವಿದ್ಯಾವಂತರನ್ನು ಬುದ್ಧುಗಳೆಂದು ಹೇಳಲಾಗುತ್ತದೆ. ಈಗ ಎಲ್ಲವನ್ನು ಮರೆತು
ನೀವು ಸಂಪೂರ್ಣ ಬುದ್ದುಗಳಾಗಿ ಎಂದು ತಂದೆಯು ಹೇಳುತ್ತಾರೆ. ನಾನೇನೂ ನಿಮಗೆ ಮತವನ್ನು
ಕೊಡುತ್ತೇನೆಯೋ ಅದರಂತೆ ನಡೆಯಿರಿ. ಪರಮಧಾಮದಲ್ಲಿ ನೀವೆಲ್ಲಾ ಆತ್ಮಗಳು ಅಶರೀರಿಯಾಗಿರುತ್ತೀರಿ,
ನಂತರ ಇಲ್ಲಿ ಶರೀರವನ್ನು ಪಡೆದಾಗ ಜೀವಾತ್ಮ ಎಂದು ಹೇಳಲಾಗುವುದು. ನಾನು ಒಂದು ಶರೀರವನ್ನು ಬಿಟ್ಟು
ಇನ್ನೊಂದು ಶರೀರವನ್ನು ಪಡೆಯುತ್ತೇನೆಂದು ಆತ್ಮವು ಹೇಳುತ್ತದೆ ಅಂದಾಗ ತಂದೆಯು ಹೇಳುತ್ತಾರೆ -
ನಾನು ನಿಮಗೆ ಫಸ್ಟ್ಕ್ಲಾಸ್ ಕರ್ಮವನ್ನು ಕಲಿಸುತ್ತೇನೆ. ಶಿಕ್ಷಕ ಓದಿಸುತ್ತಾರೆ, ಇದರಲ್ಲಿ ಶಕ್ತಿಯ
ಮಾತೇನಿದೆ! ಸಾಕ್ಷಾತ್ಕಾರ ಮಾಡಿಸುತ್ತಾರೆ. ಇದಕ್ಕೆ ಜಾದೂವೆಂದು ಹೇಳುತ್ತಾರೆ. ಮನುಷ್ಯರಿಂದ
ದೇವತೆಯಾಗುವ ಜಾದುವನ್ನು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ತಂದೆಯು ವ್ಯಾಪಾರಿಯಾಗಿದ್ದಾರೆ,
ಹಳೆಯದನ್ನು ತೆಗೆದುಕೊಂಡು ಹೊಸದನ್ನು ಕೊಡುತ್ತಾರೆ. ಇದಕ್ಕೆ (ಶರೀರ) ಕಬ್ಬಿಣದ ಪಾತ್ರೆಯೆಂದು
ಹೇಳುತ್ತಾರೆ. ಇದಕ್ಕೆ ಬೆಲೆಯೇನೂ ಇಲ್ಲ. ಇಂದು ನೋಡಿ, ತಾಮ್ರಕ್ಕೂ ಬೆಲೆಯಿಲ್ಲ. ಅಲ್ಲಂತೂ ಚಿನ್ನದ
ನಾಣ್ಯಗಳಿರುತ್ತವೆ, ಅದ್ಭುತವಲ್ಲವೆ! ಹೇಗಿದ್ದದ್ದು ಹೇಗಾಯಿತು!
ತಂದೆಯು ತಿಳಿಸುತ್ತಾರೆ - ನಾನು ನಿಮಗೆ ನಂಬರ್ವನ್ ಕರ್ಮವನ್ನು ಕಲಿಸುತ್ತೇನೆ, ಮನ್ಮಾನ ಭವ ಆಗಿ
ಬಿಡಿ. ಮತ್ತೆ ವಿದ್ಯೆಯಾಗಿದೆ, ಇದರಿಂದಲೇ ಸ್ವರ್ಗದ ರಾಜಕುಮಾರರಾಗುವಿರಿ. ಈಗ ದೇವತಾ ಧರ್ಮವು
ಪ್ರಾಯಲೋಪವಾಗಿದೆ, ಅದು ಮತ್ತೆ ಪುನಸ್ರ್ಥಾಪನೆಯಾಗುತ್ತದೆ. ಮನುಷ್ಯರು ನಿಮ್ಮ ಹೊಸ ಮಾತುಗಳನ್ನು
ಕೇಳಿ ಆಶ್ಚರ್ಯಚಕಿತರಾಗುತ್ತಾರೆ, ಸ್ತ್ರೀ-ಪುರುಷರಿಬ್ಬರೂ ಒಟ್ಟಿಗೆ ಇದ್ದು ಪವಿತ್ರರಾಗಿರಲು ಹೇಗೆ
ಸಾಧ್ಯವೆಂದು ಕೇಳುತ್ತಾರೆ. ತಂದೆಯು ಹೇಳುತ್ತಾರೆ - ಭಲೆ ಒಟ್ಟಿಗೆ ಇರಿ, ಇಲ್ಲದಿದ್ದರೆ ಹೇಗೆ
ತಿಳಿಯುವುದು! ಮಧ್ಯದಲ್ಲಿ ಜ್ಞಾನದ ಕತ್ತಿಯನ್ನು ಇಟ್ಟುಕೊಳ್ಳಿ, ಇಷ್ಟೊಂದು ಸಾಹಸವನ್ನು
ತೋರಿಸಬೇಕು. ಪರೀಕ್ಷೆಯಿರುತ್ತದೆಯಲ್ಲವೆ. ಅಂದಾಗ ಮನುಷ್ಯರು ಈ ಮಾತುಗಳಿಂದ ಆಶ್ಚರ್ಯ
ಚಕಿತರಾಗುತ್ತಾರೆ. ಏಕೆಂದರೆ ಶಾಸ್ತ್ರಗಳಲ್ಲಿಯೂ ಈ ಮಾತುಗಳಿರುವುದಿಲ್ಲ. ಇಲ್ಲಂತೂ ನಿಜ
ಜೀವನದಲ್ಲಿ ಪರಿಶ್ರಮ ಪಡಬೇಕಾಗಿದೆ. ಗಂಧರ್ವ ವಿವಾಹದ ಮಾತು ಇಲ್ಲಿಯದಾಗಿದೆ. ಈಗ ನೀವು
ಪವಿತ್ರರಾಗುತ್ತೀರಿ ಆದ್ದರಿಂದ ಧೈರ್ಯವನ್ನು ತೋರಿಸಿ ಎಂದು ತಂದೆಯು ಹೇಳುತ್ತಾರೆ. ಸನ್ಯಾಸಿಗಳ
ಮುಂದೆ ಪ್ರತ್ಯಕ್ಷ ಪ್ರಮಾಣವನ್ನು ತೋರಿಸಬೇಕು. ಸಮರ್ಥ ತಂದೆಯೇ ಇಡೀ ಪ್ರಪಂಚವನ್ನು
ಪಾವನಗೊಳಿಸುತ್ತಾರೆ. ಒಂದು ಜನ್ಮವು ತಂದೆಯ ಆಜ್ಞೆಯನುಸಾರ ಪವಿತ್ರರಾಗುವುದರಿಂದ ಬಹಳಷ್ಟು
ಪ್ರಾಪ್ತಿಯಿರುವುದು. ಯೋಗ ಮತ್ತು ಜ್ಞಾನದಿಂದ 21 ಜನ್ಮಗಳಲ್ಲಿ ಆರೋಗ್ಯವಂತರಾಗುತ್ತೀರಿ, ಇದರಲ್ಲಿ
ಪರಿಶ್ರಮವಿದೆಯಲ್ಲವೆ. ನೀವು ಶಕ್ತಿಸೇನೆಯಾಗಿದ್ದೀರಿ. ಮಾಯೆಯ ಮೇಲೆ ವಿಜಯ ಪಡೆದು
ಜಗತ್ಜೀತರಾಗುವಿರಿ. ಎಲ್ಲರೂ ಆಗುತ್ತಾರೆಯೇ? ಯಾವ ಮಕ್ಕಳು ಪುರುಷಾರ್ಥ ಮಾಡುತ್ತಾರೆ ಅವರೇ
ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ನೀವು ಭಾರತವನ್ನು ಪಾವನಗೊಳಿಸಿ ನಂತರ ಭಾರತದಲ್ಲಿ ರಾಜ್ಯ
ಮಾಡುವಿರಿ. ಯುದ್ದದಿಂದ ಎಂದೂ ಸಹ ಸೃಷ್ಟಿಯ ರಾಜ್ಯಭಾಗ್ಯವನ್ನು ಪಡೆಯಲು ಸಾಧ್ಯವಿಲ್ಲ. ಇದೂ ಸಹ
ಅದ್ಭುತವಾಗಿದೆಯಲ್ಲವೆ! ಈ ಸಮಯದಲ್ಲಿ ಎಲ್ಲರೂ ಸಹ ಜಗಳವಾಡಿ ನಾಶವಾಗುತ್ತಾರೆ. ಬೆಣ್ಣೆಯು
ಭಾರತಕ್ಕೆ ಸಿಗುತ್ತದೆ. ಇದನ್ನು ಕೊಡಿಸುವವರು ವಂದೇ ಮಾತರಂ ಆಗಿರುತ್ತಾರೆ. ಹೆಚ್ಚಿನಾಂಶ
ಮಾತೆಯರದ್ದಾಗಿದೆ. ಈಗ ತಂದೆಯು ತಿಳಿಸುತ್ತಾರೆ - ಜನ್ಮ-ಜನ್ಮಾಂತರ ನೀವು ಗುರುಗಳನ್ನು
ಮಾಡಿಕೊಂಡಿರಿ, ಶಾಸ್ತ್ರಗಳನ್ನು ಓದುತ್ತಾ ಬಂದಿರಿ. ಈಗ ನಾನು ನಿಮಗೆ ತಿಳಿಸುತ್ತೇನೆ - ಯಾವುದು
ಸರಿಯಾಗಿದೆ ಎಂದು ನೀವೇ ತೀರ್ಮಾನಿಸಿ. ಸತ್ಯಯುಗವು ರೈಟಿಯಸ್ (ಶ್ರೇಷ್ಠಾಚಾರಿ) ಪ್ರಪಂಚವಾಗಿದೆ,
ಮಾಯೆಯು ಇದನ್ನು ಭ್ರಷ್ಠಾಚಾರಿಯನ್ನಾಗಿ ಮಾಡಿಸುತ್ತದೆ. ಈಗ ಭಾರತವಾಸಿಗಳು
ಅಧರ್ಮಕ್ಕೊಳಗಾಗಿದ್ದಾರೆ. ಧರ್ಮವು ಇಲ್ಲ ಆದ್ದರಿಂದ ಶಕ್ತಿಯೂ ಇಲ್ಲ. ಧರ್ಮ ಭ್ರಷ್ಟರು,
ಭ್ರಷ್ಟಾಚಾರಿಗಳು ಕಾನೂನು ಬಾಹಿರವಾಗಿರುವವರು, ಪತಿತರೂ ಆಗಿದ್ದಾರೆ. ಇವರು ಬೇಹದ್ದಿನ
ತಂದೆಯಾಗಿದ್ದಾರೆ. ಆದ್ದರಿಂದ ಬೇಹದ್ದಿನ ಮಾತುಗಳನ್ನು ತಿಳಿಸುತ್ತಾರೆ. ನಿಮ್ಮನ್ನು ಪುನಃ
ಶ್ರೇಷ್ಠಾಚಾರಿ, ಸರ್ವಶಕ್ತಿವಂತರನ್ನಾಗಿ ಮಾಡುತ್ತೇನೆಂದು ಹೇಳುತ್ತಾರೆ. ಸ್ವರ್ಗವನ್ನು
ಸ್ಥಾಪಿಸುವುದು ಬಹಳ ಶಕ್ತಿಶಾಲಿ ಕೆಲಸವಾಗಿದೆ ಆದರೆ ಇದು ಬಹಳ ಗುಪ್ತವಾಗಿದೆ. ನೀವೆಲ್ಲರೂ ಗುಪ್ತ
ಸೈನಿಕರಾಗಿದ್ದೀರಿ. ತಂದೆಗೆ ಮಕ್ಕಳ ಮೇಲೆ ಬಹಳ ಪ್ರೀತಿಯಿರುತ್ತದೆ. ಮತವನ್ನು ಕೊಡುತ್ತಾರೆ.
ತಂದೆಯ ಮತ, ಶಿಕ್ಷಕನ ಮತ, ಗುರುವಿನ ಮತ, ಅಕ್ಕಸಾಲಿಗನ ಮತ, ಅಗಸನ ಮತ - ಇದರಲ್ಲಿ ಎಲ್ಲಾ ಮತಗಳ
ಬಂದು ಬಿಡುತ್ತವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ ಒಂದು
ಅಂತಿಮ ಜನ್ಮದಲ್ಲಿ ತಂದೆಯ ಆಜ್ಞಾನುಸಾರ ನಡೆದು ಗೃಹಸ್ಥದಲ್ಲಿರುತ್ತಾ ಪವಿತ್ರರಾಗಬೇಕು. ಇದರಲ್ಲಿ
ಬಹಳ ಸಾಹಸವನ್ನು ತೋರಿಸಬೇಕು.
2. ಶ್ರೀಮತದಂತೆ ಸದಾ
ಶ್ರೇಷ್ಠ ಕರ್ಮವನ್ನು ಮಾಡಬೇಕು. ಶಬ್ಧದಿಂದ ದೂರ ಹೋಗಬೇಕು, ಏನೆಲ್ಲಾ ಓದಿದ್ದೀರಿ ಅಥವಾ
ಕೇಳಿದ್ದೀರಿ ಅದನ್ನು ಮರೆತು ತಂದೆಯನ್ನು ನೆನಪು ಮಾಡಬೇಕು.
ವರದಾನ:
ಶುಭ ಚಿಂತನೆಯ
ಮೂಲಕ ಜ್ಞಾನ ಸಾಗರನಲ್ಲಿ ಸಮಾವೇಶವಾಗುವಂತಹ ಅತೀಂದ್ರೀಯ ಸುಖದ ಅನುಭವಿ ಭವ.
ಹೇಗೆ ಸಾಗರದ ಒಳಗೆ
ಇರುವಂತಹ ಜೀವ ಜಂತು ಸಾಗರದಲ್ಲಿಯೇ ಸಮಾವೇಶವಾಗಿರುತ್ತವೆ, ಹೊರಗಡೆ ಬರಲು ಇಚ್ಛೆ ಪಡುವುದಿಲ್ಲ,
ಮೀನೂ ಸಹ ನೀರಿನ ಒಳಗೆ ಇರುವುದು, ಸಾಗರ ಅಥವಾ ನೀರೆ ಅದರ ಸಂಸಾರವಾಗಿದೆ. ಅದೇ ರೀತಿ ತಾವು ಮಕ್ಕಳೂ
ಸಹ ಶುಭ ಚಿಂತನೆಯ ಮೂಲಕ ಜ್ಞಾನ ಸಾಗರ ತಂದೆಯಲ್ಲಿ ಸಮಾವೇಶವಾಗಿರಿ, ಎಲ್ಲಿಯವರೆಗೆ ಸಾಗರದಲ್ಲಿ
ಸಮಾವೇಶವಾಗುವ ಅನುಭವ ಮಾಡುವುದಿಲ್ಲ, ಅಲ್ಲಿಯವರೆಗೆ ಅತೀಂದ್ರಿಯ ಸುಖದ ಉಯ್ಯಾಲೆಯಲ್ಲಿ ತೂಗಾಡುವ,
ಸದಾ ಹರ್ಷಿತರಾಗಿರುವ ಅನುಭವ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಸ್ವಯಂ ಅನ್ನು ಏಕಾಂತವಾಸಿ
ಮಾಡಿಕೊಳ್ಳಿ ಅರ್ಥಾತ್ ಸರ್ವ ಆಕರ್ಷಣೆಯ ವ್ಯಭ್ರೇಷನ್ ಗಳಿಂದ ಅಂತರ್ಮುಖಿಗಳಾಗಿ.
ಸ್ಲೋಗನ್:
ತಮ್ಮ ಮುಖ ಲಕ್ಷಣವನ್ನು
ಈ ರೀತಿ ನಡೆದಾಡುವ ತಿರುಗಾಡುವ ಮ್ಯೂಸಿಯಂ ಮಾಡಿಕೊಳ್ಳಿ ಯಾವುದರಲ್ಲಿ ತಂದೆ ಬಿಂದು ಕಂಡುಬರಬೇಕು.