24.07.20 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ನಿಮಗೆ
ಜ್ಞಾನರತ್ನಗಳನ್ನು ಕೊಡಲು ತಂದೆಯು ಬಂದಿದ್ದಾರೆ, ತಂದೆಯು ನಿಮಗೆ ಏನೆಲ್ಲವನ್ನೂ ತಿಳಿಸುತ್ತಾರೆಯೋ
ಇದು ಜ್ಞಾನವಾಗಿದೆ, ಜ್ಞಾನರತ್ನಗಳನ್ನು ಜ್ಞಾನಸಾಗರನ ಹೊರತು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ.
ಪ್ರಶ್ನೆ:
ಆತ್ಮದ ಬೆಲೆಯು
ಕಡಿಮೆಯಾಗಲು ಮುಖ್ಯ ಕಾರಣವೇನು?
ಉತ್ತರ:
ಆತ್ಮದಲ್ಲಿ ತುಕ್ಕು ಹಿಡಿಯುವುದರಿಂದ ಬೆಲೆಯು ಕಡಿಮೆಯಾಗುತ್ತದೆ. ಹೇಗೆ ಚಿನ್ನದಲ್ಲಿ ಲೋಹಗಳನ್ನು
ಬೆರೆಸಿ ಆಭರಣಗಳನ್ನು ತಯಾರಿಸುತ್ತಾರೆಂದರೆ ಅದರ ಬೆಲೆಯು ಕಡಿಮೆಯಾಗಿ ಬಿಡುತ್ತದೆ. ಹಾಗೆಯೇ ಆತ್ಮವು
ಸತ್ಯ ಚಿನ್ನವಾಗಿದೆ. ಯಾವಾಗ ಅದರಲ್ಲಿ ಅಪವಿತ್ರತೆಯ ತುಕ್ಕು ಬೀಳುವುದೋ ಆಗ ಬೆಲೆಯು ಕಡಿಮೆಯಾಗಿ
ಬಿಡುತ್ತದೆ. ಈ ಸಮಯದಲ್ಲಿ ತಮೋಪ್ರಧಾನ ಆತ್ಮಕ್ಕೆ ಯಾವುದೇ ಬೆಲೆಯಿಲ್ಲ, ಶರೀರಕ್ಕೂ ಬೆಲೆಯಿಲ್ಲ.
ಈಗ ನಿಮ್ಮ ಆತ್ಮ ಮತ್ತು ಶರೀರವೆರಡೂ ನೆನಪಿನಿಂದ ಅಮೂಲ್ಯವಾಗುತ್ತಿದೆ.
ಗೀತೆ:
ಇಂದು
ಬೆಳಗ್ಗೆ-ಬೆಳಗ್ಗೆ ಬಂದವರು ಯಾರು..........
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಾರೆ ಮತ್ತು ನೆನಪಿನ ಯುಕ್ತಿಗಳನ್ನೂ
ತಿಳಿಸುತ್ತಿದ್ದಾರೆ. ಮಕ್ಕಳು ಕುಳಿತಿದ್ದೀರಿ, ಮಕ್ಕಳಲ್ಲಿ ಸಂಕಲ್ಪವಿದೆ – ಶಿವ ಭೋಲಾನಾಥ ತಂದೆಯು
ಬಂದಿದ್ದಾರೆ. ತಿಳಿದುಕೊಳ್ಳಿ, ಅರ್ಧ ಗಂಟೆ ಶಾಂತಿಯಲ್ಲಿ ಕುಳಿತು ಬಿಡುತ್ತಾರೆ.
ಮಾತನಾಡುವುದಿಲ್ಲವೆಂದರೆ ನಿಮ್ಮೊಳಗೆ ಆತ್ಮವು ಹೇಳುತ್ತದೆ – ಶಿವ ತಂದೆಯು ಏನಾದರೂ ಮಾತನಾಡಲಿ.
ಶಿವ ತಂದೆಯು ವಿರಾಜಮಾನವಾಗಿದ್ದಾರೆಂದು ನಿಮಗೆ ತಿಳಿದಿದೆ ಆದರೆ ಹೇಳುವುದಿಲ್ಲ. ಇದೂ ಸಹ ನಿಮ್ಮ
ನೆನಪಿನ ಯಾತ್ರೆ ಅಲ್ಲವೆ. ಬುದ್ಧಿಯಲ್ಲಿ ಶಿವ ತಂದೆಯ ನೆನಪೇ ಇದೆ. ಆಂತರ್ಯದಲ್ಲಿ
ತಿಳಿದುಕೊಳ್ಳುತ್ತೀರಿ - ತಂದೆಯು ಏನನ್ನಾದರೂ ಮಾತನಾಡಲಿ, ಜ್ಞಾನ ರತ್ನಗಳನ್ನು ಕೊಡಲಿ ಎಂದು. ನೀವು
ಮಕ್ಕಳಿಗೆ ಜ್ಞಾನರತ್ನಗಳನ್ನು ಕೊಡುವುದಕ್ಕಾಗಿಯೇ ಬರುತ್ತಾರೆ. ಅವರು ಜ್ಞಾನಸಾಗರನಲ್ಲವೆ!
ತಿಳಿಸುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿ. ಇದು ಜ್ಞಾನವಾಯಿತು. ಈ
ನಾಟಕದ ಚಕ್ರವನ್ನು, ಏಣಿಯನ್ನು, ತಂದೆಯನ್ನು ನೆನಪು ಮಾಡಿ, ಇದೂ ಸಹ ಜ್ಞಾನವಾಯಿತು. ತಂದೆಯು
ಏನೆಲ್ಲವನ್ನೂ ತಿಳಿಸುವರೋ ಅದಕ್ಕೆ ಜ್ಞಾನವೆಂದು ಹೇಳುತ್ತಾರೆ. ನೆನಪಿನ ಯಾತ್ರೆಯ ಬಗ್ಗೆಯೂ
ತಿಳಿಸುತ್ತಾರೆ. ಇವೆಲ್ಲವೂ ಜ್ಞಾನರತ್ನಗಳಾಗಿವೆ. ನೆನಪಿನ ಯಾವ ಮಾತನ್ನು ತಿಳಿಸುತ್ತಾರೆಯೋ ಈ
ರತ್ನಗಳು ಬಹಳ ಚೆನ್ನಾಗಿವೆ. ತಂದೆಯು ತಿಳಿಸುತ್ತಾರೆ - ತಮ್ಮ 84 ಜನ್ಮಗಳನ್ನು ನೆನಪು ಮಾಡಿ, ನೀವು
ಪವಿತ್ರರಾಗಿ ಬಂದಿದ್ದೀರಿ, ಯಾವಾಗ ಆತ್ಮವು ನೆನಪಿನ ಬಲದಿಂದ ಸತೋಪ್ರಧಾನವಾಗಿ ಬಿಡುವುದೋ ಆಗ
ಆಸ್ತಿಯು ಸಿಗುವುದು. ಈ ವಾಕ್ಯವು ಬಹಳ ಅಮೂಲ್ಯವಾಗಿದೆ. ಇದನ್ನು ಬರೆದಿಟ್ಟುಕೊಳ್ಳಿ -
ಆತ್ಮದಲ್ಲಿಯೇ ಧಾರಣೆಯಾಗುತ್ತದೆ, ಈ ಶರೀರವಂತೂ ಕರ್ಮೇಂದ್ರಿಯಗಳಿಂದ ಆಗಿದೆ, ಇದು ವಿನಾಶವಾಗುತ್ತದೆ.
ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವು ಆತ್ಮದಲ್ಲಿಯೇ ತುಂಬುತ್ತದೆ. ತಂದೆಯಲ್ಲಿಯೂ ಸಹ ಸೃಷ್ಟಿಯ
ಆದಿ-ಮಧ್ಯ-ಅಂತ್ಯದ ಜ್ಞಾನದ ಸಂಸ್ಕಾರವು ತುಂಬಲ್ಪಟ್ಟಿದೆ ಆದ್ದರಿಂದ ಅವರಿಗೆ ಜ್ಞಾನಪೂರ್ಣನೆಂದು
ಹೇಳಲಾಗುತ್ತದೆ. ತಂದೆಯು ಸರಿಪಡಿಸಿ ತಿಳಿಸುತ್ತಾರೆ - ಮಕ್ಕಳೇ, 84 ಜನ್ಮಗಳ ಚಕ್ರವು ಬಹಳ
ಸಹಜವಾಗಿದೆ, ಈಗ ಈ ಚಕ್ರವು ಪೂರ್ಣವಾಯಿತು. ನೀವೀಗ ಹಿಂತಿರುಗಿ ತಂದೆಯ ಬಳಿಗೆ ಹೋಗಬೇಕಾಗಿದೆ.
ಅಪವಿತ್ರ ಆತ್ಮವಂತೂ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಯಾವಾಗ ನಿಮ್ಮ ಆತ್ಮವು ಪವಿತ್ರವಾಗಿ ಬಿಡುವುದೋ
ಆಗ ಈ ಶರೀರವು ಬಿಟ್ಟು ಹೋಗುವುದು. ಪವಿತ್ರ ಶರೀರವಂತೂ ಇಲ್ಲಿ ಸಿಗಲು ಸಾಧ್ಯವಿಲ್ಲ. ಇದು ಹಳೆಯ
ಪಾದರಕ್ಷೆಯಾಗಿದೆ. ಇದರೊಂದಿಗೆ ವೈರಾಗ್ಯವು ಬರುತ್ತಿದೆ. ಆತ್ಮವು ಪವಿತ್ರವಾಗಿ ಭವಿಷ್ಯದಲ್ಲಿ ನಾವು
ಪವಿತ್ರ ಶರೀರವನ್ನು ತೆಗೆದುಕೊಳ್ಳಬೇಕಾಗಿದೆ. ಸತ್ಯಯುಗದಲ್ಲಿ ಆತ್ಮ ಮತ್ತು ಶರೀರವೆರಡೂ
ಪವಿತ್ರವಾಗಿತ್ತು, ಈ ಸಮಯದಲ್ಲಿ ನೀವಾತ್ಮಗಳು ಅಪವಿತ್ರರಾಗಿ ಬಿಟ್ಟಿದ್ದೀರಿ ಆದ್ದರಿಂದ ಶರೀರವೂ
ಅಪವಿತ್ರವಾಗಿದೆ. ಎಂತಹ ಚಿನ್ನವೋ ಅಂತಹ ಆಭರಣ. ಹಗುರವಾದ ಚಿನ್ನದ ಆಭರಣಗಳನ್ನು ಧರಿಸಿ ಎಂದು
ಸರ್ಕಾರವು ಹೇಳುತ್ತದೆ, ಅದರ ಬೆಲೆಯೂ ಕಡಿಮೆಯಾಗಿದೆ. ಈಗ ನಿಮ್ಮ ಆತ್ಮದ ಬೆಲೆಯೂ ಕಡಿಮೆಯಾಗಿದೆ,
ಸತ್ಯಯುಗದಲ್ಲಿ ಆತ್ಮಕ್ಕೆ ಎಷ್ಟೊಂದು ಬೆಲೆಯಿರುತ್ತದೆ. ಸತೋಪ್ರಧಾನ ಆತ್ಮವಲ್ಲವೆ. ಈಗ
ತಮೋಪ್ರಧಾನವಾಗಿದೆ, ತುಕ್ಕು ಹಿಡಿದಿದೆ. ಯಾವುದೇ ಕೆಲಸಕ್ಕೆ ಬರುವುದಿಲ್ಲ. ಅಲ್ಲಿ ಆತ್ಮವು
ಪವಿತ್ರವಾಗಿರುತ್ತದೆ ಆದ್ದರಿಂದ ಬಹಳ ಬೆಲೆಯಿರುತ್ತದೆ. ಈಗಂತೂ 9 ಕ್ಯಾರೇಟಿನ
ಚಿನ್ನವಾಗಿರುವುದರಿಂದ ಯಾವುದೇ ಬೆಲೆಯಿಲ್ಲ. ಆದುದರಿಂದ ತಂದೆಯು ತಿಳಿಸುತ್ತಾರೆ- ಆತ್ಮವನ್ನು
ಪವಿತ್ರವನ್ನಾಗಿ ಮಾಡಿಕೊಳ್ಳಿ ಆಗ ಶರೀರವೂ ಪವಿತ್ರವಾದದ್ದೇ ಸಿಗುವುದು. ಈ ಜ್ಞಾನವನ್ನು ಮತ್ತ್ಯಾರೂ
ಕೊಡಲು ಸಾಧ್ಯವಿಲ್ಲ.
ತಂದೆಯೇ ತಿಳಿಸುತ್ತಾರೆ- ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ಇದನ್ನು ಕೃಷ್ಣನು ಹೇಗೆ
ಹೇಳುವನು? ಕೃಷ್ಣನು ದೇಹಧಾರಿಯಲ್ಲವೆ. ತಂದೆಯು ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿದು
ತಂದೆಯಾದ ನನ್ನನ್ನು ನೆನಪು ಮಾಡಿ. ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ನೀವೀಗ
ತಿಳಿದುಕೊಳ್ಳುತ್ತೀರಿ ಅಂದರೆ ತಿಳಿಸಲೂಬೇಕಾಗಿದೆ. ಶಿವ ತಂದೆಯು ನಿರಾಕಾರನಾಗಿದ್ದಾರೆ, ಅವರದು
ಅಲೌಕಿಕ ಜನ್ಮವಾಗಿದೆ. ನೀವು ಮಕ್ಕಳಿಗೂ ಸಹ ಅಲೌಕಿಕ ಜನ್ಮವನ್ನು ಕೊಡುತ್ತಾರೆ. ಅಲೌಕಿಕ ತಂದೆ,
ಅಲೌಕಿಕ ಮಕ್ಕಳು. ಲೌಕಿಕ, ಪಾರಲೌಕಿಕ ಮತ್ತು ಅಲೌಕಿಕವೆಂದು ಹೇಳಲಾಗುತ್ತದೆ. ನೀವು ಮಕ್ಕಳಿಗೆ
ಅಲೌಕಿಕ ಜನ್ಮವು ಸಿಗುತ್ತದೆ, ತಂದೆಯು ನಿಮ್ಮನ್ನು ದತ್ತು ಮಾಡಿಕೊಂಡು ಆಸ್ತಿಯನ್ನು ಕೊಡುತ್ತಾರೆ.
ನಿಮಗೂ ತಿಳಿದಿದೆ- ನಾವು ಬ್ರಾಹ್ಮಣರದು ಅಲೌಕಿಕ ಜನ್ಮವಾಗಿದೆ. ಅಲೌಕಿಕ ತಂದೆಯಿಂದ ಅಲೌಕಿಕ
ಆಸ್ತಿಯು ಸಿಗುತ್ತದೆ. ಬ್ರಹ್ಮಾಕುಮಾರ-ಕುಮಾರಿಯರಲ್ಲದೆ ಮತ್ತ್ಯಾರೂ ಸ್ವರ್ಗದ ಮಾಲೀಕರಾಗಲು
ಸಾಧ್ಯವಿಲ್ಲ. ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ತಂದೆಯು ನಿಮಗೆ ಎಷ್ಟೊಂದು ತಿಳಿಸುತ್ತಾರೆ!
ಅಪವಿತ್ರವಾಗಿರುವ ಆತ್ಮವು ನೆನಪು ಮಾಡದೆ ಪವಿತ್ರವಾಗಲು ಸಾಧ್ಯವಿಲ್ಲ. ನೆನಪಿನಲ್ಲಿಲ್ಲವೆಂದರೆ
ತುಕ್ಕು ಉಳಿದು ಬಿಡುವುದು, ಪವಿತ್ರವಾಗಲು ಸಾಧ್ಯವಿಲ್ಲ ಮತ್ತು ಶಿಕ್ಷೆಗಳನ್ನೂ
ಅನುಭವಿಸಬೇಕಾಗುವುದು. ಇಡೀ ಪ್ರಪಂಚದ ಮನುಷ್ಯಾತ್ಮರು ಪವಿತ್ರರಾಗಿ ಹಿಂತಿರುಗಿ ಹೋಗಬೇಕಾಗಿದೆ.
ಶರೀರವಂತೂ ಹೋಗುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು
ತಿಳಿಯುವುದು ಎಷ್ಟೊಂದು ಕಷ್ಟವಾಗುತ್ತದೆ, ಉದ್ಯೋಗ-ವ್ಯವಹಾರಗಳಲ್ಲಿ ಆ ಸ್ಥಿತಿಯಿರುವುದಿಲ್ಲ.
ಒಳ್ಳೆಯದು- ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಲಿಲ್ಲವೆಂದರೂ ಸಹ ಶಿವ ತಂದೆಯನ್ನು ನೆನಪು ಮಾಡಿ.
ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಾ ಇದೇ ಪರಿಶ್ರಮ ಪಡಿ- ನಾನಾತ್ಮ ಈ ಶರೀರದಿಂದ ಕೆಲಸ ಮಾಡುತ್ತೇನೆ,
ನಾನಾತ್ಮನೇ ಶಿವ ತಂದೆಯನ್ನು ನೆನಪು ಮಾಡುತ್ತೇನೆ, ಆತ್ಮವು ಮೊಟ್ಟ ಮೊದಲು ಪವಿತ್ರವಾಗಿತ್ತು ಈಗ
ಪುನಃ ಪವಿತ್ರವಾಗಬೇಕಾಗಿದೆ. ಇದು ಪರಿಶ್ರಮದ ಮಾತಾಗಿದೆ. ಇದರಲ್ಲಿ ಬಹಳ ದೊಡ್ಡ ಸಂಪಾದನೆಯಿದೆ,
ಇಲ್ಲಿ ಎಷ್ಟೇ ದೊಡ್ಡ ಸಾಹುಕಾರರಿರಲಿ, ಅವರ ಬಳಿ ಅರಬ್-ಕರಬ್ ಇದ್ದರೂ ಸಹ ಅದು ಸುಖವಲ್ಲ. ಎಲ್ಲರ
ತಲೆಯ ಮೇಲೆ ದುಃಖವಿದೆ. ದೊಡ್ಡ-ದೊಡ್ಡ ರಾಜರು, ರಾಷ್ಟ್ರಪತಿ ಇಂದು ಇದ್ದಾರೆ ನಾಳೆ ಅವರನ್ನೂ
ಸಾಯಿಸಿ ಬಿಡುತ್ತಾರೆ. ದ್ವೇಷದಲ್ಲಿ ಏನೇನೆಲ್ಲವೂ ಆಗುತ್ತಿರುತ್ತದೆ! ಸಾಹುಕಾರರ ಮೇಲೆ, ರಾಜರ
ಮೇಲಂತೂ ಸಂಕಟವು ಕಾದಿದೆ. ಇಲ್ಲಿಯೂ ಸಹ ಯಾರು ರಾಜರಾಗಿದ್ದರೋ ಅವರು ಪ್ರಜೆಗಳಾಗಿ ಬಿಟ್ಟಿದ್ದಾರೆ.
ರಾಜರ ಮೇಲೆ ಪ್ರಜೆಗಳ ರಾಜ್ಯವಾಗಿ ಬಿಟ್ಟಿದೆ. ನಾಟಕದಲ್ಲಿ ಹೀಗೆ ನಿಗಧಿಯಾಗಿದೆ. ಅಂತಿಮದಲ್ಲಿಯೇ ಈ
ಗತಿಯುಂಟಾಗುತ್ತದೆ. ಪರಸ್ಪರ ಹೊಡೆದಾಡುತ್ತಿರುತ್ತಾರೆ, ನಿಮಗೆ ತಿಳಿದಿದೆ- ಕಲ್ಪದ ಮೊದಲೂ ಸಹ ಈ
ರೀತಿ ಆಗಿತ್ತು. ನೀವು ಗುಪ್ತ ವೇಷದಲ್ಲಿ ಬಹಳ ಪ್ರೇಮದಿಂದ ತಮ್ಮ ಕಳೆದುಕೊಂಡಿರುವ ರಾಜ್ಯವನ್ನು
ಪಡೆಯುತ್ತೀರಿ. ನಿಮಗೆ ಪರಿಚಯವು ಸಿಕ್ಕಿದೆ- ನಾವು ಮಾಲೀಕರಾಗಿದ್ದೆವು, ಸೂರ್ಯವಂಶಿ
ದೇವತೆಗಳಾಗಿದ್ದೆವು, ಈಗ ಮತ್ತೆ ಈ ರೀತಿಯಾಗಲು ಪುರುಷಾರ್ಥ ಮಾಡುತ್ತಿದ್ದೀರಿ ಏಕೆಂದರೆ ಇಲ್ಲಿ
ನೀವು ಸತ್ಯ ನಾರಾಯಣನ ಕಥೆಯನ್ನು ಕೇಳುತ್ತಿದ್ದೀರಲ್ಲವೆ. ತಂದೆಯ ಮೂಲಕ ನಾವು ನರನಿಂದ ನಾರಾಯಣರು
ಹೇಗಾಗುವುದು ಎಂದು ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ. ಭಕ್ತಿಮಾರ್ಗದಲ್ಲಿ ಈ ರೀತಿ ಯಾರೂ
ಕಲಿಸುವುದಿಲ್ಲ. ಯಾವುದೇ ಮನುಷ್ಯನಿಗೆ ತಂದೆ, ಶಿಕ್ಷಕ, ಸದ್ಗುರುವೆಂದು ಹೇಳುವುದಿಲ್ಲ.
ಭಕ್ತಿಯಲ್ಲಿ ಎಷ್ಟೊಂದು ಹಳೆಯ ಕಥೆಗಳನ್ನು ತಿಳಿಸುತ್ತಾರೆ. ಈಗ ನೀವು ಮಕ್ಕಳು 21 ಜನ್ಮಗಳು
ವಿಶ್ರಾಂತಿ ಪಡೆಯುವುದಕ್ಕಾಗಿ ಪಾವನರು ಅವಶ್ಯವಾಗಿ ಆಗಬೇಕಾಗಿದೆ.
ತಂದೆಯು ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿಯಿರಿ. ಅರ್ಧಕಲ್ಪವಂತೂ ಡ್ರಾಮಾನುಸಾರ
ದೇಹಾಭಿಮಾನಿಗಳಾಗಿದ್ದಿರಿ, ಈಗ ಹಳೆಯ ಪ್ರಪಂಚವು ಬದಲಾಗಿ ಹೊಸದಾಗಬೇಕಾಗಿದೆ. ಪ್ರಪಂಚವು ಒಂದೇ
ಆಗಿದೆ, ಹಳೆಯ ಪ್ರಪಂಚದಿಂದ ಮತ್ತೆ ಹೊಸದಾಗುವುದು. ಹೊಸ ಪ್ರಪಂಚದಲ್ಲಿ ಹೊಸ ಭಾರತವಿತ್ತು, ಅಲ್ಲಿ
ದೇವಿ-ದೇವತೆಗಳಿದ್ದರು. ರಾಜಧಾನಿಯನ್ನೂ ತಿಳಿದುಕೊಂಡಿದ್ದೀರಿ. ಜಮುನಾ ನದಿಯ ತೀರವಾಗಿತ್ತು,
ಅದಕ್ಕೆ ಫರಿಸ್ತಾನವೆಂದೂ ಹೇಳುತ್ತಿದ್ದರು. ಅಲ್ಲಿ ಸ್ವಾಭಾವಿಕ ಸೌಂದರ್ಯವಿರುತ್ತದೆ. ಆತ್ಮವು
ಪವಿತ್ರವಾಗಿ ಬಿಟ್ಟರೆ ಪವಿತ್ರ ಆತ್ಮಕ್ಕೆ ಪವಿತ್ರ ಶರೀರವು ಸಿಗುತ್ತದೆ. ತಂದೆಯು ತಿಳಿಸುತ್ತಾರೆ-
ನಾನು ಬಂದು ನಿಮ್ಮನ್ನು ಸುಂದರ ದೇವಿ-ದೇವತೆಗಳನ್ನಾಗಿ ಮಾಡುತ್ತೇನೆ, ನೀವು ಮಕ್ಕಳು ತಮ್ಮ
ಪರಿಶೀಲನೆ ಮಾಡಿಕೊಳ್ಳುತ್ತಾ ಇರಿ- ನನ್ನಲ್ಲಿ ಯಾವುದೇ ಅವಗುಣವಿಲ್ಲವೇ? ನೆನಪಿನಲ್ಲಿರುತ್ತೇನೆಯೇ?
ವಿದ್ಯೆಯನ್ನೂ ಓದಬೇಕಾಗಿದೆ. ಇದು ಬಹಳ ದೊಡ್ಡ ವಿದ್ಯೆಯಾಗಿದೆ, ಇದೊಂದೇ ವಿದ್ಯೆಯಾಗಿದೆ. ಆ
ವಿದ್ಯೆಯಲ್ಲಂತೂ ಎಷ್ಟೊಂದು ಪುಸ್ತಕಗಳನ್ನು ಓದುತ್ತಾರೆ, ಈ ವಿದ್ಯೆಯು ಸರ್ವ ಶ್ರೇಷ್ಠವಾಗಿದೆ.
ಓದಿಸುವವರೂ ಸಹ ಸರ್ವ ಶ್ರೇಷ್ಠ ಶಿವ ತಂದೆಯಾಗಿದ್ದಾರೆ. ಶಿವ ತಂದೆಯು ಈ ಪ್ರಪಂಚದ ಮಾಲೀಕನಲ್ಲ,
ನೀವೇ ವಿಶ್ವದ ಮಾಲೀಕನಾಗುತ್ತೀರಿ. ಎಷ್ಟು ಹೊಸ-ಹೊಸ ಮಾತುಗಳನ್ನು ತಿಳಿಸುತ್ತಿರುತ್ತಾರೆ.
ಪರಮಾತ್ಮನು ಸೃಷ್ಟಿಯ ಮಾಲೀಕನೆಂದು ಮನುಷ್ಯರು ತಿಳಿಯುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ-
ಮಧುರಾತಿ ಮಧುರ ಮಕ್ಕಳೇ, ನಾನು ಈ ಸೃಷ್ಟಿಯ ಮಾಲೀಕನಲ್ಲ, ನೀವು ಮಾಲೀಕರಾಗುತ್ತೀರಿ ಮತ್ತೆ
ರಾಜ್ಯವನ್ನು ಕಳೆದುಕೊಳ್ಳುತ್ತೀರಿ. ತಂದೆಯು ಪುನಃ ಬಂದು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ.
ವಿಶ್ವವೆಂದು ಇದಕ್ಕೇ ಹೇಳಲಾಗುತ್ತದೆ. ಮೂಲವತನ ಅಥವಾ ಸೂಕ್ಷ್ಮವತನಕ್ಕೆ ಹೇಳುವುದಿಲ್ಲ.
ಮೂಲವತನದಿಂದ ನೀವು ಇಲ್ಲಿಗೆ ಬಂದು 84 ಜನ್ಮಗಳ ಚಕ್ರವನ್ನು ಸುತ್ತುತ್ತೀರಿ ನಂತರ ತಂದೆಯು
ಬರಬೇಕಾಗುತ್ತದೆ. ಯಾವುದನ್ನು ನೀವು ಕಳೆದುಕೊಂಡಿದ್ದೀರೋ ಆ ಪ್ರಾಲಬ್ಧವನ್ನು ಪಡೆಯಲು ಈಗ ಪುನಃ
ನಿಮಗೆ ಪುರುಷಾರ್ಥವನ್ನು ಮಾಡಿಸುತ್ತೇನೆ. ಇದು ಸೋಲು-ಗೆಲುವಿನ ಆಟವಲ್ಲವೆ. ಈ ರಾವಣ ರಾಜ್ಯವು
ಸಮಾಪ್ತಿಯಾಗುವುದಿದೆ. ತಂದೆಯು ಎಷ್ಟು ಸಹಜ ರೀತಿಯಲ್ಲಿ ತಿಳಿಸುತ್ತಾರೆ, ಸ್ವಯಂ ಕುಳಿತು
ಓದಿಸುತ್ತಾರೆ. ಅಲ್ಲಂತೂ ಮನುಷ್ಯರು ಮನುಷ್ಯರಿಗೆ ಓದಿಸುತ್ತಾರೆ. ನೀವೂ ಮನುಷ್ಯರೇ ಆಗಿದ್ದೀರಿ
ಆದರೆ ತಂದೆಯು ನೀವಾತ್ಮಗಳಿಗೆ ಓದಿಸುತ್ತಾರೆ. ವಿದ್ಯೆಯ ಸಂಸ್ಕಾರವು ಆತ್ಮದಲ್ಲಿಯೇ ಇರುತ್ತದೆ.
ನೀವೀಗ ಬಹಳ ಜ್ಞಾನಪೂರ್ಣನಾಗಿದ್ದೀರಿ, ಅದೆಲ್ಲವೂ ಭಕ್ತಿಯ ಜ್ಞಾನವಾಗಿದೆ, ಸಂಪಾದನೆಗಾಗಿಯೂ
ಜ್ಞಾನವಿದೆ, ಶಾಸ್ತ್ರಗಳ ಜ್ಞಾನವೂ ಇದೆ ಆದರೆ ಇದು ಆತ್ಮಿಕ ಜ್ಞಾನವಾಗಿದೆ. ನೀವಾತ್ಮಗಳಿಗೆ
ಆತ್ಮಿಕ ತಂದೆಯು ಈ ಜ್ಞಾನವನ್ನು ತಿಳಿಸುತ್ತಾರೆ. 5000 ವರ್ಷಗಳ ಮೊದಲೂ ಸಹ ನೀವು ಕೇಳಿದ್ದಿರಿ.
ಇಡೀ ಮನುಷ್ಯ ಸೃಷ್ಟಿಯಲ್ಲಿ ಯಾರೂ ಈ ರೀತಿ ಎಂದೂ ಓದಿಸಿರುವುದಿಲ್ಲ, ಈಶ್ವರನು ಹೇಗೆ
ಓದಿಸುತ್ತಾರೆಂಬುದು ಯಾರಿಗೂ ಗೊತ್ತಿಲ್ಲ.
ಈಗ ಈ ವಿದ್ಯೆಯಿಂದ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ.
ಯಾರು ಚೆನ್ನಾಗಿ ಓದಿ ಶ್ರೀಮತದಂತೆ ನಡೆಯುವರೋ ಅವರು ಶ್ರೇಷ್ಠರಾಗುತ್ತಾರೆ ಮತ್ತು ಯಾರು ಹೋಗಿ
ತಂದೆಯ ನಿಂದನೆ ಮಾಡಿಸುವರೋ, ಕೈಯನ್ನು ಬಿಟ್ಟು ಹೋಗುವರೋ ಅವರು ಪ್ರಜೆಗಳಲ್ಲಿ ಬಹಳ ಕಡಿಮೆ
ಪದವಿಯನ್ನು ಪಡೆಯುತ್ತಾರೆ. ತಂದೆಯಂತೂ ಒಂದೇ ವಿದ್ಯೆಯನ್ನು ಓದಿಸುತ್ತಾರೆ. ವಿದ್ಯೆಯಲ್ಲಿ
ಎಷ್ಟೊಂದು ಅವಕಾಶವಿದೆ. ದೈವೀ ರಾಜಧಾನಿಯಿತ್ತಲ್ಲವೆ. ತಂದೆಯೊಬ್ಬರೇ ಇಲ್ಲಿ ಬಂದು ರಾಜಧಾನಿಯನ್ನು
ಸ್ಥಾಪನೆ ಮಾಡುತ್ತಾರೆ. ಇದೆಲ್ಲವೂ ವಿನಾಶವಾಗಲಿದೆ ಆದ್ದರಿಂದ ಮಕ್ಕಳೇ, ಈಗ ಬೇಗನೆ ತಯಾರಾಗಿರಿ,
ಹುಡುಗಾಟಿಕೆಯಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ತಂದೆಯು ತಿಳಿಸುತ್ತಾರೆ. ನೆನಪು
ಮಾಡಲಿಲ್ಲವೆಂದರೆ ಅತ್ಯಮೂಲ್ಯವಾದ ಸಮಯವು ನಷ್ಟವಾಗುತ್ತದೆ. ಶರೀರ ನಿರ್ವಹಣೆಗಾಗಿ
ಉದ್ಯೋಗ-ವ್ಯವಹಾರಗಳನ್ನು ಭಲೆ ಮಾಡಿ ಆದರೂ ಸಹ ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯನ್ನು
ನೆನಪು ಮಾಡಲಿ. ನನ್ನನ್ನು ನೆನಪು ಮಾಡಿದರೆ ನಿಮಗೆ ರಾಜ್ಯಭಾಗ್ಯವು ಸಿಗುವುದು. ಖುದಾದೋಸ್ತ್ನ
ಕಥೆಯನ್ನೂ ಕೇಳಿದ್ದೀರಲ್ಲವೆ. ಅಲ್ಲಾವುದ್ದೀನನ ನಾಟಕವನ್ನೂ ತೋರಿಸುತ್ತಾರೆ. ಉಜ್ಜಿದ ತಕ್ಷಣವೇ
ಖಜಾನೆಯು ಹೊರ ಬಂದಿತು, ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಭಗವಂತನಿಂದ ನಿಮ್ಮನ್ನು ಚಿಟಿಕೆ
ಹೊಡೆಯುವುದರಲ್ಲಿಯೇ ಹೇಗಿದ್ದವರನ್ನು ಏನು ಮಾಡಿ ಬಿಡುತ್ತಾರೆ! ದಿವ್ಯ ದೃಷ್ಟಿಯಿಂದ ವೈಕುಂಠಕ್ಕೆ
ಹೋಗಿ ಬಿಡುತ್ತೀರಿ. ಮೊದಲು ಮಕ್ಕಳು ಪರಸ್ಪರ ಸೇರಿ ಕುಳಿತುಕೊಂಡು ಧ್ಯಾನದಲ್ಲಿ ಹೊರಟು
ಹೋಗುತ್ತಿದ್ದರು, ಇವೆಲ್ಲವೂ ಈ ಸಮಯದ ಮಾತುಗಳಾಗಿವೆ. ಹಾತಿಮ್ತಾಯಿಯ ಕಥೆಯೂ ಇದೆ. ಉಂಗುರವನ್ನು
ಬಾಯಲ್ಲಿ ಹಾಕಿಕೊಂಡಾಗ ಮಾಯವಾಗಿ ಬಿಡುತ್ತಿತ್ತು, ಉಂಗುರವನ್ನು ತೆಗೆದ ತಕ್ಷಣ ಮಾಯೆಯು ಬಂದು
ಬಿಡುತ್ತಿತ್ತು, ರಹಸ್ಯವಂತೂ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಮಕ್ಕಳೇ, ನಿಮ್ಮ ಬಾಯಲ್ಲಿ
ನೆನಪು ಎಂಬ ಉಂಗುರವನ್ನು ಹಾಕಿಕೊಳ್ಳಿ. ನೀವು ಶಾಂತಿಯ ಸಾಗರನಾಗಿದ್ದೀರಿ. ಆತ್ಮವು ಶಾಂತಿಯಲ್ಲಿ
ತನ್ನ ಸ್ವಧರ್ಮದಲ್ಲಿರುತ್ತದೆ. ನಾವಾತ್ಮರಾಗಿದ್ದೇವೆಂದು ಸತ್ಯಯುಗದಲ್ಲಿ ತಿಳಿದಿರುತ್ತದೆ ಆದರೆ
ಪರಮಾತ್ಮ ತಂದೆಯನ್ನು ಯಾರೂ ತಿಳಿದುಕೊಂಡಿರುವುದಿಲ್ಲ. ಯಾರೇ ಕೇಳಿದರೂ ಸಹ ತಿಳಿಸಿ, ಅಲ್ಲಿ
ವಿಕಾರದ ಹೆಸರು ಇರುವುದಿಲ್ಲ. ಅದು ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿದೆ, ಅಲ್ಲಿ ಪಂಚ ವಿಕಾರಗಳೇ
ಇರುವುದಿಲ್ಲ, ದೇಹಾಭಿಮಾನವೇ ಇಲ್ಲ. ಮಾಯಾ ರಾಜ್ಯದಲ್ಲಿ ದೇಹಾಭಿಮಾನಿಗಳಾಗಿರುತ್ತಾರೆ.
ಅಲ್ಲಿರುವುದೇ ಮೋಹಜೀತರು. ಈ ಹಳೆಯ ಪ್ರಪಂಚದಿಂದ ನಷ್ಟಮೋಹಿಗಳಾಗಬೇಕಾಗಿದೆ. ಯಾರು ಮನೆ-ಮಠವನ್ನು
ಬಿಡುವರೋ ಅವರಿಗೆ ವೈರಾಗ್ಯ ಬರುತ್ತದೆ. ನೀವಂತೂ ಬಿಡಬೇಕಾಗಿಲ್ಲ, ತಂದೆಯ ನೆನಪಿನಲ್ಲಿರುತ್ತಾ ಈ
ಹಳೆಯ ಶರೀರವನ್ನು ಬಿಟ್ಟು ಹೋಗಬೇಕಾಗಿದೆ. ಎಲ್ಲರ ಲೆಕ್ಕಾಚಾರಗಳು ಸಮಾಪ್ತಿಯಾಗಲಿದೆ ನಂತರ ಮನೆಗೆ
ಹೊರಟು ಹೋಗುತ್ತೀರಿ. ಇದು ಕಲ್ಪ-ಕಲ್ಪವೂ ನಡೆಯುತ್ತದೆ. ನಿಮ್ಮ ಬುದ್ಧಿಯು ಈಗ ದೂರ-ದೂರದವರೆಗೆ
ಮೇಲೆ ಹೋಗುತ್ತದೆ. ಎಲ್ಲಿಯವರೆಗೆ ಸಾಗರವಿದೆ? ಸೂರ್ಯ, ಚಂದ್ರರಲ್ಲಿ ಏನಿದೆಯೆಂದು ಆ ವಿಜ್ಞಾನಿಗಳು
ನೋಡುತ್ತಾರೆ. ಮೊದಲಂತೂ ಈ ಸೂರ್ಯ, ಚಂದ್ರರು ದೇವತೆಗಳೆಂದು ಹೇಳುತ್ತಿದ್ದರು. ನೀವು ಹೇಳುತ್ತೀರಿ-
ಇವಂತೂ ಸೃಷ್ಟಿನಾಟಕದ ರಂಗಮಂಚದ ದೀಪಗಳಾಗಿವೆ. ಇಲ್ಲಿ ಆಟವು ನಡೆಯುತ್ತದೆ ಆದ್ದರಿಂದ ಈ ದೀಪಗಳೂ
ಇಲ್ಲಿಯೇ ಇವೆ. ಮೂಲವತನ, ಸೂಕ್ಷ್ಮವತನದಲ್ಲಿ ಇರುವುದಿಲ್ಲ, ಅಲ್ಲಿ ಆಟವೇ ಇಲ್ಲ. ಈ ಅನಾದಿ ನಾಟಕವು
ನಡೆಯುತ್ತಾ ಬರುತ್ತದೆ. ಚಕ್ರವು ಸುತ್ತುತ್ತಾ ಇರುತ್ತದೆ, ಪ್ರಳಯವಾಗುವುದಿಲ್ಲ. ಭಾರತವು ಅವಿನಾಶಿ
ಖಂಡವಾಗಿದೆ. ಇದರಲ್ಲಿ ಮನುಷ್ಯರು ಇದ್ದೇ ಇರುತ್ತಾರೆ, ಪೂರ್ಣ ಜಲಮಯವಾಗುವುದಿಲ್ಲ. ಪಶು, ಪಕ್ಷಿ,
ಏನೆಲ್ಲವೂ ಇವೆಯೋ ಎಲ್ಲವೂ ಇರುತ್ತದೆ. ಉಳಿದ ಖಂಡಗಳೆಲ್ಲವೂ ಸತ್ಯ, ತ್ರೇತಾಯುಗದಲ್ಲಿರುವುದಿಲ್ಲ.
ನೀವು ಏನೆಲ್ಲವನ್ನೂ ದಿವ್ಯದೃಷ್ಟಿಯಿಂದ ನೋಡಿದ್ದೀರೋ ಅದೆಲ್ಲವನ್ನೂ ಮತ್ತೆ ಪ್ರತ್ಯಕ್ಷದಲ್ಲಿ
ನೋಡುವಿರಿ. ಪ್ರಾಕ್ಟಿಕಲ್ನಲ್ಲಿ ನೀವು ವೈಕುಂಠದಲ್ಲಿ ರಾಜ್ಯಭಾರ ಮಾಡುತ್ತೀರಿ. ಇದಕ್ಕಾಗಿಯೇ
ಪುರುಷಾರ್ಥ ಮಾಡುತ್ತಾ ಇರುತ್ತೀರಿ. ತಂದೆಯು ತಿಳಿಸುತ್ತಾರೆ- ನೆನಪಿನದು ಬಹಳ ಪರಿಶ್ರಮವಿದೆ.
ನೆನಪು ಮಾಡಲು ಮಾಯೆಯು ಬಿಡುವುದಿಲ್ಲ. ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ.
ಅಜ್ಞಾನ ಕಾಲದಲ್ಲಿಯೂ ಪ್ರೀತಿಯಿಂದ ತಂದೆಯ ಮಹಿಮೆ ಮಾಡುತ್ತಾರೆ. ನಮ್ಮ ತಂದೆಯು ಹೀಗಿದ್ದರು, ಇಂತಹ
ಪದವೀಧರರಾಗಿದ್ದರು ಎಂದು ಹೇಳುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿ ಇಡೀ ಸೃಷ್ಟಿಚಕ್ರವು ಕುಳಿತಿದೆ.
ಎಲ್ಲಾ ಧರ್ಮಗಳ ಜ್ಞಾನವಿದೆ. ಹೇಗೆ ಪರಮಧಾಮದಲ್ಲಿ ಆತ್ಮಗಳ ವೃಕ್ಷ ಹೇಗೆ ಇದೆಯೋ ಹಾಗೆಯೇ ಇಲ್ಲಿ
ಮನುಷ್ಯರ ವೃಕ್ಷವಿದೆ. ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಬ್ರಹ್ಮನಾಗಿದ್ದಾರೆ, ಇದು ನಿಮ್ಮ
ವಂಶಾವಳಿಯಾಗಿದೆ. ಸೃಷ್ಟಿಯಂತೂ ನಡೆಯುತ್ತಿರುತ್ತದೆ ಅಲ್ಲವೆ.
ತಂದೆಯು ತಿಳಿಸುತ್ತಾರೆ- ಮಕ್ಕಳೇ, ನರನಿಂದ ನಾರಾಯಣನಾಗಬೇಕೆಂದರೆ ನೀವು ಹೇಳುವುದು, ಮಾಡುವುದು
ಒಂದೇ ಆಗಿರಲಿ. ಮೊದಲು ತಮ್ಮ ಸ್ಥಿತಿಯನ್ನು ನೋಡಿಕೊಳ್ಳಿ. ಬಾಬಾ, ನಾವಂತೂ ತಮ್ಮಿಂದ ಪೂರ್ಣ
ಆಸ್ತಿಯನ್ನು ಪಡೆದೇ ಪಡೆಯುತ್ತೇವೆಂದು ಹೇಳುತ್ತೀರಿ ಅಂದಮೇಲೆ ಆ ಚಲನೆಯೂ ಬೇಕಲ್ಲವೆ. ನರನಿಂದ
ನಾರಾಯಣನಾಗಲು ಇದೊಂದೇ ವಿಧ್ಯೆಯಾಗಿದೆ. ರಾಜರಿಗೂ ರಾಜರು ನೀವೇ ಆಗುವಿರಿ, ಬೇರೆ ಇನ್ಯಾವ
ಖಂಡದಲ್ಲಿಯೂ ಆಗುವುದಿಲ್ಲ. ನೀವು ಪವಿತ್ರ ರಾಜರಾಗುತ್ತೀರಿ, ನಂತರ ಪ್ರಕಾಶತೆಯ ಕಿರೀಟವಿಲ್ಲದ
ಅಪವಿತ್ರ ರಾಜರು ಪವಿತ್ರ ರಾಜರ ಮಂದಿರಗಳನ್ನು ಕಟ್ಟಿಸಿ ಪೂಜೆ ಮಾಡುತ್ತಾರೆ. ನೀವೀಗ
ಓದುತ್ತಿದ್ದೀರಿ. ವಿದ್ಯಾರ್ಥಿಗಳು ಶಿಕ್ಷಕರನ್ನು ಏಕೆ ಮರೆಯುತ್ತಾರೆ! ಬಾಬಾ, ಮಾಯೆಯು ಮರೆಸಿ
ಬಿಡುತ್ತದೆ ಎಂದು ಹೇಳುತ್ತಾರೆ. ಮಾಯೆಯ ಮೇಲೆ ದೋಷವನ್ನು ಹಾಕಿ ಬಿಡುತ್ತಾರೆ. ಅರೆ! ನೆನಪನ್ನು
ನೀವು ಮಾಡಬೇಕಾಗಿದೆ. ಮುಖ್ಯೋಪಾಧ್ಯಾಯರು ಒಬ್ಬರೇ ಆಗಿದ್ದಾರೆ, ಉಳಿದೆಲ್ಲರೂ ಉಪಾಧ್ಯಾಯರಾಗಿದ್ದಾರೆ.
ತಂದೆಯನ್ನು ಮರೆಯುತ್ತೀರೆಂದರೆ ಶಿಕ್ಷಕರನ್ನು ನೆನಪು ಮಾಡಿ. ನಿಮಗೆ ಮೂರು ಅವಕಾಶಗಳನ್ನು
ಕೊಡಲಾಗಿದೆ. ಒಂದು ಸಂಬಂಧವನ್ನು ಮರೆತರೆ ಇನ್ನೊಂದನ್ನು ನೆನಪು ಮಾಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ
ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯಿಂದ
ಪೂರ್ಣ ಆಸ್ತಿಯನ್ನು ಪಡೆಯಲು ನುಡಿಯಂತೆ ನಡೆಯಿರಲಿ- ಪುರುಷಾರ್ಥ ಮಾಡಬೇಕಾಗಿದೆ.
ಮೋಹಜೀತರಾಗಬೇಕಾಗಿದೆ.
2. ಸದಾ ನೆನಪಿರಲಿ- ನಾವು
ಶಾಂತಿಯ ಸಾಗರನ ಮಕ್ಕಳಾಗಿದ್ದೇವೆ, ನಾವು ಶಾಂತಿಯಲ್ಲಿರಬೇಕಾಗಿದೆ. ಬಾಯಲ್ಲಿ ನೆನಪಿನ ಉಂಗುರವನ್ನು
ಹಾಕಿಕೊಳ್ಳಬೇಕು. ಹುಡುಗಾಟಿಕೆಯಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು.
ವರದಾನ:
ಸಂಕಟದಲ್ಲಿರುವ
ಆತ್ಮರಿಗೆ ಒಂದು ಸೆಕೆಂಡ್ನಲ್ಲಿ ಗತಿ-ಸದ್ಗತಿ ಕೊಡುವಂತಹ ಮಾಸ್ಟರ್ ದಾತ ಭವ.
ಯಾವ ರೀತಿ ಸ್ಥೂಲ
ಸೀಜನ್ನ ನಿರೀಕ್ಷಣೆ ಮಾಡುವಿರಿ, ಸೇವಾಧಾರಿ ಸಾಮಗ್ರಿ ಎಲ್ಲಾ ತಯಾರಿ ಮಾಡುವಿರಿ ಯಾವುದರಿಂದ ಯಾರಿಗೂ
ಯಾವುದೇ ತೊಂದರೆ ಆಗಬಾರದು, ಸಮಯ ವ್ಯರ್ಥವಾಗಿ ಹೋಗಬಾರದು, ಹಾಗೆಯೇ ಈಗ ಸರ್ವ ಆತ್ಮಗಳ ಗತಿ-ಸದ್ಗತಿ
ಮಾಡುವ ಅಂತಿಮ ಸೀಜನ್ ಬರುವುದಿದೆ, ಸಂಕಟದಲ್ಲಿರುವ ಆತ್ಮರಿಗೆ ಸರತಿಯಲ್ಲಿ ನಿಲ್ಲುವಂತಹ ಕಷ್ಟವನ್ನು
ಕೊಡಬಾರದಾಗಿದೆ, ಬರುತ್ತಿರಬೇಕು ತೆಗೆದುಕೊಂಡು ಹೋಗುತ್ತಿರಬೇಕು. ಇದಕ್ಕಾಗಿ ಎವರೆಡಿ ಆಗಿ.
ಪುರುಷಾರ್ಥಿ ಜೀವನದಲ್ಲಿರುವುದರಿಂದ ದಾತಾತನದ ಸ್ಥಿತಿಯಲ್ಲಿರಿ. ಪ್ರತಿ ಸಂಕಲ್ಪ, ಪ್ರತಿ ಸೆಕೆಂಡ್
ಮಾಸ್ಟರ್ ದಾತರಾಗಿ ಕೊಡುತ್ತಾ ಹೋಗಿ.
ಸ್ಲೋಗನ್:
ಹುಜೂರ್ಅನ್ನು
ಬುದ್ಧಿಯಲ್ಲಿ ಹಾಜಿರ್ ಆಗಿ ಇಟ್ಟುಕೊಂಡಾಗ ಸರ್ವ ಪ್ರಾಪ್ತಿಗಳು ಜೀ ಹಾಜಿರ್ ಆಗುತ್ತವೆ.