13.09.20    Avyakt Bapdada     Kannada Murli     22.03.86     Om Shanti     Madhuban


"ಸುಖ, ಶಾಂತಿ ಮತ್ತು ಖುಷಿಯ ಆಧಾರ - ಪವಿತ್ರತೆ"


ಇಂದು ಬಾಪ್ದಾದಾರವರು ನಾಲ್ಕೂ ಕಡೆಯಲ್ಲಿನ ಸರ್ವ ಹೋಲಿನೆಸ್ ಮತ್ತು ಹ್ಯಾಪಿನೆಸ್ ಮಕ್ಕಳನ್ನು ನೋಡುತ್ತಿದ್ದಾರೆ. ಇಷ್ಟು ದೊಡ್ಡ ಸಂಘಟಿತ ರೂಪದಲ್ಲಿ ಇಂತಹ ಹೋಲಿ ಮತ್ತು ಹ್ಯಾಪಿ - ಎರಡೂ ವಿಶೇಷತೆಯಿರುವ ಈ ಡ್ರಾಮಾದಲ್ಲಿ, ಮತ್ತೆಲ್ಲಿಯೂ ಇಷ್ಟು ದೊಡ್ಡ ಸಭೆ ಅಥವಾ ಇಷ್ಟು ದೊಡ್ಡ ಸಂಖ್ಯೆಯಾಗಲು ಸಾಧ್ಯವಿಲ್ಲ. ಇತ್ತೀಚೆಗೆ ಭಲೆ ಹೈನೆಸ್(ಶ್ರೇಷ್ಠತೆ) ಅಥವಾ ಹೋಲಿನೆಸ್(ಪವಿತ್ರತೆ)ನ ಟೈಟಲ್ನ್ನು ಯಾರಿಗಾದರೂ ಕೊಡಬಹುದು ಆದರೆ ಪ್ರತ್ಯಕ್ಷ ಪ್ರಮಾಣದ ರೂಪದಲ್ಲಿ ನೋಡಿದಾಗ, ಆ ಪವಿತ್ರತೆ-ಮಹಾನತೆಯು ಕಾಣಿಸುವುದೇ ಇಲ್ಲ. ಬಾಪ್ದಾದಾರವರು ಇಷ್ಟು ಮಹಾನ್ ಪವಿತ್ರಾತ್ಮರುಗಳ ಸಂಘಟನೆಯು ಎಲ್ಲಾಗಬಹುದು! ಎಂದು ನೋಡುತ್ತಿದ್ದರು. ಪ್ರತಿಯೊಂದು ಮಕ್ಕಳಲ್ಲಿ ಈ ಧೃಡ ಸಂಕಲ್ಪವಿದೆ- ಅದೇನೆಂದರೆ, ಕೇವಲ ಕರ್ಮದಿಂದ ಅಲ್ಲ ಆದರೆ ಮನ-ವಾಣಿ-ಕರ್ಮ, ಮೂರರಲ್ಲಿಯೂ ಪವಿತ್ರರಾಗಲೇಬೇಕು. ಪವಿತ್ರರಾಗುವ ಈ ಶ್ರೇಷ್ಠ ಸಂಕಲ್ಪವು ಮತ್ತೆಲ್ಲಿಯೂ ಇರಲು ಸಾಧ್ಯವಿಲ್ಲ ಮತ್ತು ಅವಿನಾಶಿಯಾಗುವುದಕ್ಕೂ ಸಾಧ್ಯವಿಲ್ಲ, ಸಹಜವಾಗಲೂ ಸಾಧ್ಯವಿಲ್ಲ. ಮತ್ತೆ ತಾವೆಲ್ಲರೂ ಪವಿತ್ರತೆಯನ್ನು ಧಾರಣೆ ಮಾಡಿಕೊಳ್ಳುವುದು ಬಹಳ ಸಹಜವೆಂದು ತಿಳಿಯುತ್ತೀರಿ ಏಕೆಂದರೆ ಬಾಪ್ದಾದಾರವರ ಮೂಲಕ ತಿಳುವಳಿಕೆ ಸಿಕ್ಕಿದೆ ಮತ್ತು ಜ್ಞಾನದ ಶಕ್ತಿಯಿಂದ ನಾನು ಆತ್ಮನ ಅನಾದಿ ಮತ್ತು ಆದಿ ಸ್ವರೂಪ ಪವಿತ್ರವಾಗಿರುವ ಆತ್ಮನೆಂದು ತಿಳಿದುಕೊಂಡಿದ್ದೀರಿ. ಯಾವಾಗ ಆದಿ-ಅನಾದಿ ಸ್ವರೂಪದ ಸ್ಮೃತಿಯು ಬಂದಿತು, ಅದೇ ಸ್ಮೃತಿಯು ಸಮರ್ಥರನ್ನಾಗಿ ಮಾಡಿ, ಸಹಜತೆಯ ಅನುಭವ ಮಾಡಿಸುತ್ತಿದೆ. ನಮ್ಮ ವಾಸ್ತವಿಕ ಸ್ವರೂಪವೂ ಪವಿತ್ರವಾಗಿರುವುದಾಗಿದೆ ಎಂದು ತಿಳಿದು ಬಿಟ್ಟಿರಿ. ಈ ಸಂಗ-ದೋಷದ ಸ್ವರೂಪವು ಅಪವಿತ್ರವಾಗಿದೆ. ಹಾಗಾದರೆ ವಾಸ್ತವವನ್ನು ತಮ್ಮದಾಗಿಸಿಕೊಳ್ಳುವುದರಲ್ಲಿ (ಧಾರಣೆ ಮಾಡುವುದರಲ್ಲಿ) ಸಹಜವಾಯಿತಲ್ಲವೆ.

ಸ್ವಧರ್ಮ, ಸ್ವದೇಶ, ಸ್ವ(ಆತ್ಮನ)ನ ತಂದೆ ಮತ್ತು ಸ್ವ-ಸ್ವರೂಪ, ಸ್ವ-ಕರ್ಮ, ಎಲ್ಲದರ ತಿಳುವಳಿಕೆಯೂ ಸಿಕ್ಕಿದೆ. ಅಂದಾಗ ಜ್ಞಾನದ ಶಕ್ತಿಯಿಂದ ಪರಿಶ್ರಮವು ಅತಿ ಸಹಜವಾಯಿತು. ಇತ್ತೀಚೆಗೆ ಮಹಾನ್ ಆತ್ಮರೆಂದು ಕರೆಸಿಕೊಳ್ಳುವವರೂ ಸಹ ಯಾವ ಮಾತನ್ನು ಅಸಂಭವ, ಅಸ್ವಾಭಾವಿಕವೆಂದು ತಿಳಿಯುತ್ತಾರೆ, ಅದೇ ಅಸಂಭವವನ್ನು ತಾವು ಪವಿತ್ರಾತ್ಮರು ಬಹಳ ಸಹಜವೆಂದು ಅನುಭವ ಮಾಡಿ ಬಿಟ್ಟಿರಿ. ಪವಿತ್ರತೆಯನ್ನು ಧಾರಣೆ ಮಾಡಿಕೊಳ್ಳುವುದು ಸಹಜವೇ ಅಥವಾ ಕಷ್ಟವೆನಿಸುತ್ತದೆಯೇ? ಪವಿತ್ರತೆಯಂತು ನಮ್ಮ ಸ್ವ-ಸ್ವರೂಪವಾಗಿದೆ ಎಂದು ಇಡೀ ಜಗತ್ತಿನ ಮುಂದೆ ಚಾಲೆಂಜ್ನಿಂದ ಹೇಳಬಹುದಲ್ಲವೆ. ಪವಿತ್ರತೆಯ ಶಕ್ತಿಯ ಕಾರಣ ಎಲ್ಲಿ ಪವಿತ್ರತೆಯಿದೆಯೋ ಅಲ್ಲಿ ಸುಖ-ಶಾಂತಿಯು ಸ್ವತಹವಾಗಿಯೇ ಇರುತ್ತದೆ. ಪವಿತ್ರತೆಯು ಫೌಂಡೇಷನ್ ಆಗಿದೆ, ಪವಿತ್ರತೆಯನ್ನು ಜನನಿಯೆಂದೂ ಹೇಳಲಾಗುತ್ತದೆ. ಮತ್ತು ಸುಖ-ಶಾಂತಿಯು ಪವಿತ್ರತೆಯ ಸಂತಾನವಾಗಿದೆ. ಅಂದ ಮೇಲೆ ಎಲ್ಲಿ ಪವಿತ್ರತೆಯಿದೆಯೋ ಅಲ್ಲಿ ಸ್ವತಹವಾಗಿಯೇ ಸುಖ-ಶಾಂತಿಯು ಇದ್ದೇ ಇರುತ್ತದೆ ಆದ್ದರಿಂದ ಆನಂದವೂ ಇರುತ್ತದೆ, ಎಂದಿಗೂ ಸಹ ದುಃಖಿತರಾಗಲು ಸಾಧ್ಯವಿಲ್ಲ, ಸದಾ ಖುಷಿಯಾಗಿರುತ್ತಾರೆ. ಎಲ್ಲಿ ಪವಿತ್ರತೆಯಿದೆಯೋ ಅಲ್ಲಿ ಅವಶ್ಯವಾಗಿ ಆನಂದವೂ ಇರುತ್ತದೆ. ಪವಿತ್ರಾತ್ಮರ ಚಿಹ್ನೆಯು ಸದಾ ಖುಷಿಯಾಗಿರುವುದು ಆದ್ದರಿಂದ ಬಾಪ್ದಾದಾರವರು ನೋಡುತ್ತಿದ್ದಾರೆ - ಇಲ್ಲಿ ನಿಶ್ಚಯ ಬುದ್ಧಿ ಪಾವನಾತ್ಮರು ಎಷ್ಟು ಮಕ್ಕಳು ಕುಳಿತಿದ್ದಾರೆಂದು ನೋಡುತ್ತಿದ್ದಾರೆ. ಜಗತ್ತಿನವರು ಸುಖ-ಶಾಂತಿಯ ಹಿಂದೆ ಓಡುತ್ತಿರುತ್ತಾರೆ. ಆದರೆ ಸುಖ-ಶಾಂತಿಯ ಫೌಂಡೇಷನ್ ಪವಿತ್ರತೆಯಾಗಿದೆ, ಅವರು ಫೌಂಡೇಷನ್ನ್ನು ತಿಳಿದುಕೊಂಡಿಲ್ಲ. ಆದ್ದರಿಂದ ಪವಿತ್ರತೆಯ ಫೌಂಡೇಷನ್ ಧೃಡವಾಗಿರದ ಕಾರಣದಿಂದ ಅಲ್ಪಕಾಲಕ್ಕಾಗಾದರೂ ಸುಖ ಅಥವಾ ಶಾಂತಿಯ ಪ್ರಾಪ್ತಿಯಾಗುತ್ತದೆ. ಆದರೆ ಈಗೀಗ ಇರುತ್ತದೆ, ಈಗೀಗ ಇರುವುದಿಲ್ಲ ಎನ್ನುವಂತೆ. ಪವಿತ್ರತೆಯಿಲ್ಲದೆ ಸದಾಕಾಲದ ಸುಖ-ಶಾಂತಿಯ ಪ್ರಾಪ್ತಿಯಾಗುವುದು ಅಸಂಭವವಿದೆ. ತಾವುಗಳು ಫೌಂಡೇಷನ್ನ್ನು(ಪವಿತ್ರತೆ) ಧಾರಣೆ ಮಾಡಿಕೊಂಡಿದ್ದೀರಿ, ಆದ್ದರಿಂದ ಸುಖ-ಶಾಂತಿಗಾಗಿ ಅದರ ಹಿಂದೆ ಓಡುವುದೇನೂ ಇರುವುದಿಲ್ಲ. ಸುಖ-ಶಾಂತಿಯು ಸ್ವಯಂತಾನೇ ಪಾವನಾತ್ಮರ ಬಳಿ ಬರುತ್ತದೆ. ಹೇಗೆ ಮಕ್ಕಳು ತಾಯಿಯ ಬಳಿ ಸ್ವತಹವಾಗಿಯೇ ಹೋಗುತ್ತಾರಲ್ಲವೆ. ಮಕ್ಕಳನ್ನು ಎಷ್ಟೇ ದೂರ ಮಾಡಿದರೂ, ತಾಯಿಯ ಬಳಿ ಅವಶ್ಯವಾಗಿ ಹೋಗುತ್ತದೆ. ಹಾಗಾದರೆ ಸುಖ-ಶಾಂತಿಯ ಜನನಿ ಪವಿತ್ರತೆಯಾಗಿದೆ. ಎಲ್ಲಿ ಪವಿತ್ರತೆಯಿದೆಯೋ ಅಲ್ಲಿ ಸುಖ-ಶಾಂತಿ, ಖುಷಿಯು ಸ್ವತಹವಾಗಿಯೇ ಬರುತ್ತದೆ. ಹಾಗಾದರೆ ತಾವೇನಾಗಿ ಬಿಟ್ಟಿರಿ? ನಿಶ್ಚಿಂತ ಚಕ್ರವರ್ತಿಗಳು. ಈ ಹಳೆಯ ಜಗತ್ತಿನ ಚಕ್ರವರ್ತಿಯಲ್ಲ, ಆದರೆ ನಿಶ್ಚಿಂತ ಚಕ್ರವರ್ತಿಗಳು. ಈ ಬ್ರಾಹ್ಮಣ ಪರಿವಾರವು ನಿಶ್ಚಿಂತ ಅಂದರೆ ಸುಖವಿರುವ ಸಂಸಾರವಾಗಿದೆ. ಅಂದ ಮೇಲೆ ಈ ಸುಖದ ಸಂಸಾರದ ನಿಶ್ಚಿಂತ ಚಕ್ರವರ್ತಿಗಳಾಗಿ ಬಿಟ್ಟಿರಿ. ಹಿಜ್ ಹೋಲಿನೆಸ್ ಸಹ ಆಗಿದ್ದೀರಲ್ಲವೆ. ಅಂದರೆ ಕಿರೀಟವೂ ಇದೆ, ಸಿಂಹಾಸನವೂ ಇದೆ. ಇನ್ನೇನು ಕಡಿಮೆಯಿದೆ! ಎಷ್ಟೊಂದು ಶ್ರೇಷ್ಠವಾದ ಕಿರೀಟವಿದೆ! ಪ್ರಕಾಶತೆಯ ಕಿರೀಟವು ಪವಿತ್ರತೆಯ ಸಂಕೇತವಾಗಿದೆ, ಹಾಗೆಯೆ ಬಾಪ್ದಾದಾರವರ ಹೃದಯ ಸಿಂಹಾಸನದ ಅಧಿಕಾರಿಯಾಗಿದ್ದೀರಿ. ಅಂದ ಮೇಲೆ ನಿಶ್ಚಿಂತ ಚಕ್ರವರ್ತಿಗಳ ಕಿರೀಟವೂ ಭಿನ್ನ ಮತ್ತು ಸಿಂಹಾಸನವೂ ಭಿನ್ನವಾಗಿದೆ. ರಾಜ್ಯಭಾಗ್ಯವೂ ಭಿನ್ನವಾದುದು(ವಿಶೇಷ), ಅಂದಾಗ ಚಕ್ರವರ್ತಿಯೂ ಭಿನ್ನವಾಗಿರುವವರಾಗಿದ್ದೀರಿ.

ವರ್ತಮಾನದ ಮನುಷ್ಯಾತ್ಮರು ಇಷ್ಟೊಂದು ಓಡುತ್ತಿರುವುದನ್ನು ನೋಡುತ್ತಾ ಬಾಪ್ದಾದಾರವರಿಗೂ ಸಹ ಮಕ್ಕಳ ಮೇಲೆ ದಯೆ ಬರುತ್ತದೆ. ಮಕ್ಕಳು ಎಷ್ಟೊಂದು ಪ್ರಯತ್ನ ಪಡುತ್ತಿರುತ್ತಾರೆ. ಪ್ರಯತ್ನ ಅಂದರೆ ಓಡುವುದು, ಅವರು ಹೆಚ್ಚು ಪರಿಶ್ರಮ ಪಡುತ್ತಿದ್ದಾರೆ ಆದರೆ ಪ್ರಾಪ್ತಿಯೇನಿದೆ? ಸುಖವೂ ಇರಬಹುದು, ಸುಖದ ಜೊತೆಗೆ ಒಂದಲ್ಲ ಒಂದು ದುಃಖವೂ ಸಿಗುತ್ತಿರಬಹುದು. ಬೇರೇನೂ ಇಲ್ಲದಿದ್ದರೂ ಅಲ್ಪಕಾಲದ ಸುಖದ ಜೊತೆಗೆ ಚಿಂತೆ ಮತ್ತು ಭಯ, ಇವೆರಡಂತು ಇದ್ದೇ ಇರುತ್ತದೆ. ಹಾಗಾದರೆ ಎಲ್ಲಿ ಚಿಂತೆಯಿದೆಯೋ ಅಲ್ಲಿ ಶಾಂತಿಯಿರಲು ಸಾಧ್ಯವಿಲ್ಲ. ಎಲ್ಲಿ ಭಯವಿರುತ್ತದೆಯೋ ಅಲ್ಲಿ ಶಾಂತಿಯಿರಲು ಸಾಧ್ಯವಿಲ್ಲ. ಹಾಗಾದರೆ ಸುಖದ ಜೊತೆಗೆ ಈ ದುಃಖ-ಅಶಾಂತಿಯ ಕಾರಣವಂತು ಇದ್ದೇ ಇದೆ. ಮತ್ತೆ ತಾವೆಲ್ಲಾ ಮಕ್ಕಳಿಗೆ ದುಃಖಕ್ಕೆ ಕಾರಣ ಮತ್ತು ನಿವಾರಣೆಯೂ ಸಿಕ್ಕಿ ಬಿಟ್ಟಿತು. ಈಗ ತಾವು ಸಮಸ್ಯೆಗಳಿಗೆ ಸಮಾಧಾನ ಕೊಡುವಂತಹ ಸಮಾಧಾನ ಸ್ವರೂಪರಾಗಿ ಬಿಟ್ಟಿದ್ದೀರಲ್ಲವೆ. ಸಮಸ್ಯೆಗಳು ತಮ್ಮೊಂದಿಗೆ ಆಟವಾಡುವ ಆಟಿಕೆಗಳಾಗಿ ಬರುತ್ತವೆ. ಆಟವಾಡುವುದಕ್ಕಾಗಿ ಬರುತ್ತದೆಯೇ ಹೊರತು ಭಯ ಪಡಿಸುವುದಕ್ಕಲ್ಲ. ಗಾಬರಿಗೊಳ್ಳುವುದಿಲ್ಲ ಅಲ್ಲವೆ. ಎಲ್ಲಿ ಸರ್ವಶಕ್ತಿಗಳ ಖಜಾನೆಯು ಜನ್ಮ ಸಿದ್ಧ ಅಧಿಕಾರವಾಯಿತು, ಅಂದಮೇಲೆ ಇನ್ನೇನು ಕಡಿಮೆಯಾಯಿತು, ಸಂಪನ್ನ ಆಗಿದ್ದೀರಲ್ಲವೆ! ಮಾಸ್ಟರ್ ಸರ್ವಶಕ್ತಿವಂತನ ಮುಂದೆ ಸಮಸ್ಯೆಗಳೇನೂ ಇರುವುದಿಲ್ಲ. ಆನೆಯ ಕಾಲಿನ ಕೆಳಗೇನಾದರೂ ಇರುವೆಯು ಬಂದಿತೆಂದರೆ ಕಾಣಿಸುತ್ತದೆಯೇ? ಹಾಗೆಯೇ ಈ ಸಮಸ್ಯೆಗಳೂ ಸಹ ತಾವು ಮಹಾರಥಿಗಳ ಮುಂದೆ ಇರುವೆಯಂತೆ. ಅದನ್ನು ಆಟವೆಂದು ತಿಳಿಯುವುದರಿಂದ ಖುಷಿಯಿರುತ್ತದೆ, ಎಷ್ಟೇ ದೊಡ್ಡ ಮಾತಿರಲಿ ಚಿಕ್ಕದಾಗಿ ಬಿಡುತ್ತದೆ. ಹೇಗೆ ಇತ್ತೀಚೆಗೆ ಯಾವ ಆಟವನ್ನು ಮಕ್ಕಳಿಗೆ ಆಡಿಸುತ್ತಾರೆ? ಬುದ್ಧಿಯ ಆಟ. ಮಕ್ಕಳಿಗೆ ಲೆಕ್ಕ ಮಾಡಿ ಎಂದು ಕೆಲಸವನ್ನು ಕೊಡುತ್ತೀರೆಂದರೆ ಸುಸ್ತಾಗಿ ಬಿಡುತ್ತಾರೆ. ಆದರೆ ಅದೇ ಲೆಕ್ಕವನ್ನು ಆಟದ ರೀತಿಯಲ್ಲಿ ಕೊಟ್ಟರೆ ಖುಷಿ-ಖುಷಿಯಿಂದ ಮಾಡುತ್ತಾರೆ. ಹಾಗೆಯೇ ತಮ್ಮೆಲ್ಲರಿಗೂ ಸಮಸ್ಯೆಗಳು ಇರುವೆಯ ಸಮಾನವಲ್ಲವೆ. ಎಲ್ಲಿ ಪವಿತ್ರತೆ, ಸುಖ-ಶಾಂತಿಯ ಶಕ್ತಿಯಿದೆಯೋ ಅಲ್ಲಿ ದುಃಖ-ಅಶಾಂತಿಯ ವೈಬ್ರೇಷನ್ ಸ್ವಪ್ನದಲ್ಲಿಯೂ ಸಹ ಬರಲು ಸಾಧ್ಯವಿಲ್ಲ. ಶಕ್ತಿಶಾಲಿ ಆತ್ಮರುಗಳ ಮುಂದೆ ಈ ದುಃಖ ಮತ್ತು ಅಶಾಂತಿಯು ಕಾಲನ್ನು ಇಡುವುದಕ್ಕೂ ಸಾಹಸವನ್ನು ಇಡುವುದಿಲ್ಲ. ಪವಿತ್ರಾತ್ಮರು ಸದಾ ಹರ್ಷಿತವಾಗಿರುವ ಆತ್ಮರಾಗಿದ್ದೇವೆ ಎನ್ನುವುದನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿರಿ. ಅನೇಕ ಪ್ರಕಾರದ ಗೊಂದಲಗಳಿಂದ, ಅಲೆದಾಟದಿಂದ, ದುಃಖ-ಅಶಾಂತಿಯ ಜಾಲದಿಂದ ಬಿಡಿಸಿಕೊಂಡು ಬಂದಿದ್ದೀರಿ ಏಕೆಂದರೆ ಬಂದರೆ ದುಃಖವೊಂದೇ ಬರುವುದಿಲ್ಲ, ಆದರೆ ಒಂದೇ ಒಂದು ದುಃಖವೂ ಸಹ ವಂಶಾವಳಿಯ ಜೊತೆಗೆ ಬರುತ್ತದೆ. ಅಂದಾಗ ಆ ಜಾಲದಿಂದ ಹೊರ ಬಂದಿದ್ದೀರಿ. ತಮ್ಮನ್ನು ಭಾಗ್ಯವಂತರೆಂದು ತಿಳಿದುಕೊಳ್ಳುತ್ತೀರಲ್ಲವೆ! ಇಂದು ಆಸ್ಟ್ರೇಲಿಯಾದವರು ಕುಳಿತಿದ್ದಾರೆ. ಬಾಪ್ದಾದಾರವರು ಸದಾ ಆಸ್ಟ್ರೇಲಿಯಾದವರ ತಪಸ್ಸು ಮತ್ತು ಮಹಾದಾನಿಯ ಗುಣದ ವಿಶೇಷತೆಯನ್ನೇ ವರ್ಣನೆ ಮಾಡುತ್ತಾರೆ. ಸದಾ ಸೇವೆಯ ಲಗನ್ನಿನ ತಪಸ್ಸು ಅನೇಕ ಆತ್ಮರಿಗೆ ಹಾಗೂ ತಾವು ತಪಸ್ವಿ ಆತ್ಮರಿಗೆ ಫಲವನ್ನು ಕೊಡುತ್ತಿದೆ. ಧರಣಿ ಅನುಸಾರ ವಿಧಿ ಮತ್ತು ವೃದ್ಧಿಯೆರಡನ್ನೂ ನೋಡುತ್ತಾ ಬಾಪ್ದಾದಾರವರು ವಿಶೇಷ ಖುಷಿಯಾಗಿದ್ದಾರೆ. ಆಸ್ಟ್ರೇಲಿಯಾದವರಿರುವುದೇ ಎಕ್ಸ್ಟ್ರಾರ್ಡಿನರಿ (ಅಸಾಧಾರಣ). ಎಲ್ಲರಲ್ಲಿಯೂ ಬಹಳ ಬೇಗನೆ ಸೇವೆಗಾಗಿ ತ್ಯಾಗದ ಭಾವನೆ ಬರುತ್ತದೆ. ನಮಗೆ ಹೇಗೆ ಭಾಗ್ಯವು ಸಿಕ್ಕಿದೆಯೋ ಹಾಗೆಯೇ ಅನ್ಯರ ಭಾಗ್ಯವನ್ನು ರೂಪಿಸಬೇಕು ಎನ್ನುವುದಿರುತ್ತದೆ, ಆದ್ದರಿಂದಲೇ ಇಷ್ಟೆಲ್ಲಾ ಸೇವಾಕೇಂದ್ರಗಳನ್ನು ತೆರೆದಿದ್ದಾರೆ. ಧೃಡ ಸಂಕಲ್ಪ ಮಾಡುವುದೇ ತಪಸ್ಸಾಗಿದೆ. ತ್ಯಾಗ ಮತ್ತು ತಪಸ್ಸಿನ ವಿಧಿಯಿಂದ ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದಾರೆ. ಸೇವಾ-ಭಾವವು ಅನೇಕ ಅಲ್ಪಕಾಲದ ಭಾವಗಳನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಇದೇ ತ್ಯಾಗ ಮತ್ತು ತಪಸ್ಸು ಸಫಲತೆಗ ಆಧಾರವಾಯಿತು, ತಿಳಿಯಿತೆ. ಸಂಘಟನೆಯ ಶಕ್ತಿಯಿದೆ, ಒಬ್ಬರು ಹೇಳಿದರು ಮತ್ತೊಬ್ಬರು ಮಾಡಿದರು ಎಂಬಂತಿದೆ. ಅಲ್ಲಿ ಹೀಗೂ ಇಲ್ಲ- ಒಬ್ಬರು ಹೇಳಿದರು, ಇನ್ನೊಬ್ಬರೂ ಹೇಳಿದರು, ಹೀಗಾಗಲು ಸಾಧ್ಯವಿಲ್ಲ, ಇದರಲ್ಲಿ ಸಂಘಟನೆಯು ಮುರಿಯುತ್ತದೆ. ಒಬ್ಬರು ಹೇಳಿದರು, ಇನ್ನೊಬ್ಬರು ಉಮ್ಮಂಗದಿಂದ ಸಹಯೋಗಿಯಾಗುತ್ತಾ, ಅದನ್ನು ಪ್ರತ್ಯಕ್ಷದಲ್ಲಿ ತಂದರೆಂದರೆ ಇದು ಸಂಘಟನೆಯ ಶಕ್ತಿಯೇ ಆಗಿದೆ. ಪಾಂಡವರಲ್ಲಿಯೂ ಸಂಘಟನೆಯಿದೆ, ಕೆಲವೊಮ್ಮೆಗೂ ನೀನು-ನಾನು ಎನ್ನುವುದಿಲ್ಲ. ಕೇವಲ ಬಾಬಾ-ಬಾಬಾ ಎಂದರೆ ಸಾಕು, ಎಲ್ಲಾ ಮಾತುಗಳೂ ಸಮಾಪ್ತಿಯಾಗಿ ಬಿಡುತ್ತವೆ. ಕಿರಿಕಿರಿಯಾಗುವುದೇ ಈ ನೀನು-ನಾನು, ನನ್ನದು-ನಿನ್ನದು ಎನ್ನುವುದರಿಂದ. ತಂದೆಯವರನ್ನು ಮುಂದಿಟ್ಟುಕೊಳ್ಳುತ್ತೀರಿ ಎಂದರೆ ಯಾವುದೇ ಸಮಸ್ಯೆಯೂ ಸಹ ಬರಲು ಸಾಧ್ಯವಿಲ್ಲ. ಮತ್ತು ನಿರ್ವಿಘ್ನ ಆತ್ಮರು ಸದಾ ತೀವ್ರ ಪುರುಷಾರ್ಥದಿಂದ ಹಾರುವ ಕಲೆಯ ಅನುಭವವನ್ನು ಮಾಡುತ್ತಾರೆ. ಬಹಳ ಕಾಲದ ನಿರ್ವಿಘ್ನ ಸ್ಥಿತಿ ಶಕ್ತಿಶಾಲಿ ಸ್ಥಿತಿಯಾಗುತ್ತದೆ. ಮತ್ತೆ-ಮತ್ತೆ ಯಾರು ವಿಘ್ನಗಳಿಗೆ ವಶರಾಗುತ್ತಾರೆಯೋ, ಅವರ ಫೌಂಡೇಶನ್ ಕಚ್ಚಾ ಆಗಿ ಬಿಡುತ್ತದೆ ಮತ್ತು ಬಹಳ ಕಾಲದಿಂದ ನಿರ್ವಿಘ್ನವಾಗಿರುವ ಆತ್ಮರ ಫೌಂಡೇಷನ್ ಪರಿಪಕ್ವವಾಗಿರುವ ಕಾರಣದಿಂದ ಸ್ವಯಂ ಸಹ ಶಕ್ತಿಶಾಲಿಯಾಗಿದ್ದು, ಅನ್ಯರನ್ನೂ ಶಕ್ತಿಶಾಲಿಯನ್ನಾಗಿ ಮಾಡುವರು. ತುಂಡಾಗಿರುವ ಯಾವುದೇ ವಸ್ತುವನ್ನು ಜೋಡಿಸುವುದರಿಂದ, ಅದು ಬಲಹೀನವಾಗಿ ಬಿಡುತ್ತದೆ. ಬಹಳ ಕಾಲದಿಂದ ಶಕ್ತಿಶಾಲಿಯಾಗಿರುವ, ನಿರ್ವಿಘ್ನವಾಗಿರುವ ಆತ್ಮನು ಅಂತ್ಯದಲ್ಲಿಯೂ ನಿರ್ವಿಘ್ನನಾಗಿ ಪಾಸ್-ವಿತ್-ಅನರ್ ಆಗಿಬಿಡುವನು. ಅಥವಾ ಫಸ್ಟ್ ಡಿವಿಜನ್ನಲ್ಲಿ ಬಂದು ಬಿಡುವನು. ಆದ್ದರಿಂದ ಸದಾ ಲಕ್ಷ್ಯವನ್ನಿಡಿ - ನಾನು ಬಹಳ ಕಾಲದ ನಿರ್ವಿಘ್ನ ಸ್ಥಿತಿಯ ಅನುಭವವನ್ನು ಮಾಡಬೇಕು. ಹೀಗೂ ತಿಳಿಯಬಾರದು - ವಿಘ್ನ ಬಂದಿತು, ಅದಂತು ಸಮಾಪ್ತಿಯಾಯಿತಲ್ಲವೆ. ಪರವಾಗಿಲ್ಲ. ಆದರೆ ಮತ್ತೆ-ಮತ್ತೆ ವಿಘ್ನ ಬರುವುದು ಮತ್ತು ಸಮಾಪ್ತಿಯಾಗುವುದರಲ್ಲಿ ಸಮಯವು ವ್ಯರ್ಥವಾಗಿ ಬಿಡುತ್ತದೆ. ಶಕ್ತಿಯೂ ವ್ಯರ್ಥವಾಗಿ ಬಿಡುತ್ತದೆ. ಆ ಸಮಯ ಮತ್ತು ಶಕ್ತಿಯನ್ನು ಸೇವೆಯಲ್ಲಿ ಉಪಯೋಗಿಸುತ್ತೀರಿ ಎಂದರೆ, ಒಂದಕ್ಕೆ ಪದಮದಷ್ಟು ಜಮಾ ಆಗಿ ಬಿಡುತ್ತದೆ. ಆದರಿಂದ ಬಹಳ ಕಾಲದ ನಿರ್ವಿಘ್ನ ಆತ್ಮರದು, ವಿಘ್ನ ವಿನಾಶಕನ ರೂಪದಿಂದ ಪೂಜೆಯಾಗುತ್ತದೆ. ವಿಘ್ನ-ವಿನಾಶಕನ ಟೈಟಲ್ ಪೂಜ್ಯಾತ್ಮರದಾಗಿದೆ. ನಾನು ವಿಘ್ನ-ವಿನಾಶಕ, ಪೂಜ್ಯಾತ್ಮ ಆಗಿದ್ದೇನೆ ಎಂಬ ಸ್ಮೃತಿಯಿಂದ ಸದಾ ನಿರ್ವಿಘ್ನವಾಗಿ ಹಾರುವ ಕಲೆಯ ಮೂಲಕ ಹಾರುತ್ತಿರಿ ಮತ್ತು ಹಾರಿಸುತ್ತಿರಿ. ತಿಳಿಯಿತೆ! ತಮ್ಮ ವಿಘ್ನವನ್ನಂತು ವಿನಾಶ ಮಾಡಿ ಬಿಟ್ಟಿರಿ, ಆದರೆ ಅನ್ಯರಿಗಾಗಿಯೂ ವಿಘ್ನ ವಿನಾಶಕರು ಆಗಬೇಕು. ನೋಡಿ, ತಾವಾತ್ಮರಿಗಂತು ಅಂತಹ ನಿಮಿತ್ಮ ಆತ್ಮ ಸಿಕ್ಕಿದ್ದಾರೆ (ಡಾ|| ನಿರ್ಮಲಾ) ಅವರು ಆರಂಭದಿಂದಲೂ ಯಾವುದೇ ವಿಘ್ನದಲ್ಲಿ ಬಂದಿಲ್ಲ. ಸದಾ ಭಿನ್ನ ಹಾಗೂ ಪ್ರಿಯರಾಗಿದ್ದಾರೆ. ಸ್ವಲ್ಪ ಕಟ್ಟು ನಿಟ್ಟಾಗಿರುತ್ತಾರೆ, ಇದೂ ಸಹ ಅವಶ್ಯಕವಿದೆ. ಹೇಗೆ ರೋಗಕ್ಕಾಗಿ ಕಹಿಯಾದ ಔಷಧಿಯು ಅವಶ್ಯಕ ಇರುತ್ತದೆಯಲ್ಲವೆ. ಅದೇರೀತಿ ಡ್ರಾಮಾನುಸಾರ ನಿಮಿತ್ತ ಆತ್ಮರ ಸಂಗವೂ ರಂಗೇರುತ್ತದೆ ಮತ್ತು ಹೇಗೆ ಸ್ವಯಂ ಬಂದ ಕೂಡಲೇ ಸೇವೆಗೆ ನಿಮಿತ್ತರಾಗಿ ಬಿಟ್ಟರು, ಹಾಗೆಯೇ ಆಸ್ಟ್ರೇಲಿಯಾಗೆ ಬಂದ ಕೂಡಲೇ ಸೇವಾಕೇಂದ್ರವನ್ನು ತೆರೆಯುವ ಸೇವೆಯಲ್ಲಿ ತೊಡಗಿ ಬಿಡುತ್ತಾರೆ. ಈ ತ್ಯಾಗದ ಭಾವನೆಯ ವೈಬ್ರೇಷನ್ ಆಸ್ಟ್ರೇಲಿಯಾ ಮತ್ತು ಅದಕ್ಕೆ ಸಂಬಂಧ ಪಟ್ಟಂತಹ ಯಾವುದೆಲ್ಲಾ ಸ್ಥಾನಗಳಿವೆ, ಅಲ್ಲಿ ಅದೇರೂಪದಿಂದ ವೃದ್ಧಿಯಾಗುತ್ತಿದೆ. ಯಾರಲ್ಲಿ ತಪಸ್ಸು ಮತ್ತು ತ್ಯಾಗವಿದೆಯೋ, ಅವರೇ ಶ್ರೇಷ್ಠಾತ್ಮನಾಗಿದ್ದಾರೆ. ತೀವ್ರ ಪುರುಷಾರ್ಥಿಯಂತು ಎಲ್ಲಾ ಆತ್ಮರೂ ಆಗಿದ್ದಾರೆ ಆದರೆ ಪುರುಷಾರ್ಥಿಯಾಗಿದ್ದರೂ ತನ್ನ ವಿಶೇಷತೆಗಳ ಪ್ರಭಾವವಂತು ಖಂಡಿತವಾಗಿಯೂ ಬೀರುತ್ತದೆ. ಈಗ ಎಲ್ಲರೂ ಸಂಪನ್ನರಂತು ಆಗಿದ್ದೀರಲ್ಲವೆ. ಸಂಪನ್ನರಾಗಿದ್ದೀರಿ ಎನ್ನುವ ಸರ್ಟಿಫಿಕೇಟ್ ಯಾರಿಗೂ ಸಿಕ್ಕಿಲ್ಲ. ಆದರೆ ಸಂಪನ್ನತೆಗೆ ಸಮೀಪ ತಲುಪುವುದರಲ್ಲಿ ನಂಬರ್ವಾರ್ ಇದ್ದಾರೆ. ಕೆಲವರು ಬಹಳ ಸಮೀಪಕ್ಕೆ ತಲುಪಿದ್ದಾರೆ, ಕೆಲವರು ನಂಬರ್ವಾರ್ ಆಗಿ ಹಿಂದೆ ಮುಂದೆ ಇದ್ದಾರೆ. ಆಸ್ಟ್ರೇಲಿಯಾದವರು ಅದೃಷ್ಟವಂತರು, ತ್ಯಾಗದ ಬೀಜದ ಭಾಗ್ಯವು ಪ್ರಾಪ್ತಿಯಾಗುತ್ತಿದೆ. ಬಾಪ್ದಾದಾರವರಿಗೆ ಶಕ್ತಿ ಸೇನೆಯೂ ಸಹ ಅತಿ ಪ್ರಿಯರು ಏಕೆಂದರೆ ಸಾಹಸವಂತರಾಗಿದ್ದಾರೆ. ಎಲ್ಲಿ ಸಾಹಸವಿದೆಯೋ ಅಲ್ಲಿ ಬಾಪ್ದಾದಾರವರ ಸಹಯೋಗವಂತು ಸದಾ ಜೊತೆಯಿದೆ. ಸದಾ ಸಂತುಷ್ಟವಾಗಿ ಇರುವವರಲ್ಲವೇ. ಸಂತುಷ್ಟತೆಯು ಸಫಲತೆಗೆ ಆಧಾರವಾಗಿದೆ. ತಾವೆಲ್ಲಾ ಸಂತುಷ್ಟರಾಗಿದ್ದೀರೆಂದಾಗ ಸಫಲತೆಯು ತಮ್ಮ ಜನ್ಮ ಸಿದ್ಧ ಅಧಿಕಾರವಾಗಿದೆ. ತಿಳಿಯಿತೆ. ಆಸ್ಟ್ರೇಲಿಯಾದವರು ನಿಯರೆಸ್ಟ್ ಮತ್ತು ಡಿಯರೆಸ್ಟ್ ಆಗಿದ್ದಾರೆ ಆದರಿಂದ ವಿಶೇಷ ಗೌರವವಿದೆ.

ಅವ್ಯಕ್ತ ಮುರುಳಿಗಳಿಂದ ಆಯ್ಕೆ ಮಾಡಿರುವ ಮಹಾವಾಕ್ಯಗಳು(ಪ್ರಶ್ನೋತ್ತರ) –

ಪ್ರಶ್ನೆ:- ಇಡೀ ವಿಶ್ವದಲ್ಲಿ ಯಾವಾಗ ಶಕ್ತಿ ಸೇನೆಯ ಹೆಸರು ಪ್ರಸಿದ್ಧವಾಗುವುದು?

ಉತ್ತರ:- ಯಾವಾಗ ಸಂಘಟಿತ ರೂಪದಲ್ಲಿ ಏಕರಸ ಸ್ಥಿತಿ ಅಥವಾ ಒಂದು ಶುಭ ಸಂಕಲ್ಪದಲ್ಲಿ ಸ್ಥಿತರಾಗುವ ಅಭ್ಯಾಸ ಇರುತ್ತದೆ, ಸಂಘಟನೆಯಲ್ಲಿರುವವರಲ್ಲಿ ಮತ್ತ್ಯಾವುದೇ ಸಂಕಲ್ಪ ಇರುವುದಿಲ್ಲ, ಎಲ್ಲರಲ್ಲಿಯೂ ಒಂದೇ ಲಗನ್, ಅಶರೀರಿಯಾಗುವ ಶುದ್ಧ ಸಂಕಲ್ಪದಲ್ಲಿ ಸ್ಥಿತರಾಗುವುದರಲ್ಲಿಯೇ ಅಭ್ಯಾಸಿಯಾದಾಗ, ಇಡೀ ವಿಶ್ವದಲ್ಲಿ ಶಕ್ತಿಸೇನೆಯ ಹೆಸರು ಪ್ರಸಿದ್ಧವಾಗುತ್ತದೆ.

ಪ್ರಶ್ನೆ:- ಸ್ಥೂಲ ಸೈನಿಕರು ಯಾವ ಆಧಾರದಿಂದ ಯುದ್ಧದ ಮೈದಾನದಲ್ಲಿ ವಿಜಯಿಯಾಗುವನು? ತಮ್ಮ ವಿಜಯದ ನಗಾರಿಯು ಯಾವಾಗ ಮೊಳಗುತ್ತದೆ?

ಉತ್ತರ:- ಸ್ಥೂಲ ಸೈನಿಕರು ಯಾವಾಗ ಯುದ್ಧದ ಮೈದಾನದಲ್ಲಿ ಹೋಗುತ್ತಾರೆಂದರೆ, ಕೇವಲ ಒಂದು ಆದೇಶದಿಂದ ನಾಲ್ಕೂ ಕಡೆಯಲ್ಲಿಯೂ ಗುಂಡು ಹಾರಿಸುವುದನ್ನು ಆರಂಭಿಸಿ ಬಿಡುತ್ತಾರೆ. ನಾಲ್ಕೂ ಕಡೆಗಳಲ್ಲಿಯೂ ಒಂದೇ ಸಮಯ, ಒಂದೇ ಆದೇಶದಿಂದ ಮುತ್ತಿಗೆ ಹಾಕಿದಾಗಲೇ ವಿಜಯಿಯಾಗುತ್ತಾರೆ. ಹಾಗೆಯೇ ಆತ್ಮಿಕ ಸೇನೆಯು ಸಂಘಟಿತ ರೂಪದಲ್ಲಿ ಎಲ್ಲರೂ ಒಂದೇ ಸೂಚನೆ ಮತ್ತು ಒಂದೇ ಸೆಕೆಂಡಿನಲ್ಲಿ, ಏಕರಸ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡುತ್ತಾರೆಯೋ ಆಗಲೇ ವಿಜಯದ ನಗಾರಿಯು ಜೋರಾಗಿ ಮೊಳಗುತ್ತದೆ.

ಪ್ರಶ್ನೆ:- ತಂದೆಯ ಯಾವ ಆದೇಶವನ್ನು ಪ್ರತ್ಯಕ್ಷ ಮಾಡುವುದಕ್ಕಾಗಿ ಎವರೆಡಿಯಾಗುತ್ತೀರೆಂದರೆ, ಕಲಿಯುಗಿ ಪರ್ವತವು ಮೇಲೇಳುತ್ತದೆ?

ಉತ್ತರ:- ತಂದೆಯವರು ಇದೇ ಆದೇಶವನ್ನು ಕೊಡುತ್ತಾರೆ - ಒಂದು ಸೆಕೆಂಡಿನಲ್ಲಿ ಎಲ್ಲರೂ ಏಕರಸ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ. ಯಾವಾಗ ಎಲ್ಲರ ಸರ್ವ ಸಂಕಲ್ಪಗಳು ಒಂದು ಸಂಕಲ್ಪದಲ್ಲಿ ಸಮಾವೇಶವಾಗಿ ಬಿಡುತ್ತದೆಯೋ, ಆಗ ಈ ಕಲಿಯುಗಿ ಪರ್ವತವು ಮೇಲೇಳುತ್ತದೆ. ಆ ಒಂದು ಸೆಕೆಂಡ್ ಸದಾಕಾಲದ ಸೆಕೆಂಡ್ ಆಗಿರುತ್ತದೆ. ಆ ಒಂದು ಸೆಕೆಂಡ್ನಲ್ಲಿ ಸ್ಥಿತರಾದ ನಂತರ ಕೆಳಗೆ ಬಂದು ಬಿಡಿ ಎಂದಲ್ಲ.

ಪ್ರಶ್ನೆ:- ಪ್ರತಿಯೊಬ್ಬ ಬ್ರಾಹ್ಮಣ ಮಕ್ಕಳ ಜವಾಬ್ದಾರಿಯೇನಾಗಿದೆ?

ಉತ್ತರ:- ಇಡೀ ಸಂಘಟನೆಯನ್ನು ಏಕರಸ ಸ್ಥಿತಿಯಲ್ಲಿ ಸ್ಥಿತಗೊಳಿಸುವುದಕ್ಕಾಗಿ ಸಹಯೋಗಿಯಾಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹೇಗೆ ಅಜ್ಞಾನಿ ಆತ್ಮರಿಗೆ ಜ್ಞಾನದ ಬೆಳಕನ್ನು ಕೊಡುವುದಕ್ಕಾಗಿ ಸದಾ ಶುಭ ಭಾವನೆ ಅಥವಾ ಕಲ್ಯಾಣದ ಭಾವನೆಯನ್ನಿಡುತ್ತಾ ಪ್ರಯತ್ನ ಪಡುತ್ತಿರುತ್ತೀರಿ. ಹಾಗೆಯೇ ತಮ್ಮ ಈ ದೈವೀ ಸಂಘಟನೆಯನ್ನೂ ಏಕರಸ ಸ್ಥಿತಿಯಲ್ಲಿ ಸ್ಥಿತಗೊಳಿಸುವ ಅಥವಾ ಸಂಘಟನೆಯನ್ನು ವೃದ್ಧಿ ಮಾಡುವುದಕ್ಕಾಗಿ ಒಬ್ಬರಿನ್ನೊಬ್ಬರ ಬಗ್ಗೆ ಭಿನ್ನ-ಭಿನ್ನ ರೂಪಗಳಿಂದ ಪ್ರಯತ್ನ ಮಾಡಿರಿ. ಇದಕ್ಕಾಗಿ ಯೋಜನೆಗಳನ್ನು ತಯಾರು ಮಾಡಿರಿ. ಕೇವಲ ನಾನು ನನ್ನ ಕಡೆಯಿಂದ ಸರಿಯಾಗಿದ್ದೇನೆಂದು ಖುಷಿಯಾಗಿ ಬಿಡಬಾರದು.

ಪ್ರಶ್ನೆ:- ಪರಮಾತ್ಮ ಜ್ಞಾನದ ವಿಶೇಷತೆಯೇನಾಗಿದೆ?

ಉತ್ತರ:- ಸಂಘಟನೆಯ ಶಕ್ತಿಯೇ ಈ ಪರಮಾತ್ಮ ಜ್ಞಾನದ ವಿಶೇಷತೆಯಾಗಿದೆ. ಈ ಬ್ರಾಹ್ಮಣ ಸಂಘಟನೆಯ ವಿಶೇಷತೆಯು ದೇವತಾ ರೂಪದಲ್ಲಿ ಪ್ರತ್ಯಕ್ಷವಾಗಿ ಒಂದು ಧರ್ಮ, ಒಂದು ರಾಜ್ಯ, ಒಂದು ಮತದ ರೂಪದಲ್ಲಿ ನಡೆಯುತ್ತದೆ.

ಪ್ರಶ್ನೆ:- ಯಾವ ಒಂದು ಮಾತಿನ ಸಂಪೂರ್ಣ ಪರಿವರ್ತನೆಯೇ ಸಂಪೂರ್ಣತೆಯನ್ನು ಸಮೀಪದಲ್ಲಿ ತರುತ್ತದೆ?

ಉತ್ತರ:- ಪ್ರತಿಯೊಬ್ಬರಲ್ಲಿ ದೇಹಾಭಿಮಾನವಿರುವ ಯಾವ ಮೂಲ ಸಂಸ್ಕಾರವಿದೆ, ಅದನ್ನು ತಾವುಗಳು ಸ್ವಭಾವವೆಂದು ಹೇಳುತ್ತೀರಿ, ಆ ಸಂಸ್ಕಾರವು ಅಂಶದಷ್ಟೂ ಇರಬಾರದು. ತಮ್ಮ ಈ ಸಂಸ್ಕಾರಗಳನ್ನು ಪರಿವರ್ತನೆಗೊಳಿಸಿ, ಬಾಪ್ದಾದಾರವರ ಸಂಸ್ಕಾರಗಳನ್ನು ಧಾರಣೆ ಮಾಡಿಕೊಳ್ಳುವುದೇ ಅಂತಿಮ ಪುರುಷಾರ್ಥವಾಗಿದೆ.

ಪ್ರಶ್ನೆ:- ಬಾಪ್ದಾದಾರವರ ಪ್ರತ್ಯಕ್ಷತೆಯು ಯಾವ ಆಧಾರದಿಂದ ಆಗುತ್ತದೆ?

ಉತ್ತರ:- ಯಾವಾಗ ಒಬ್ಬೊಬ್ಬರಲ್ಲಿ ಬಾಪ್ದಾದಾರವರ ಸಂಸ್ಕಾರವು ಕಾಣಿಸುತ್ತದೆ. ಬಾಪ್ದಾದಾರವರ ಸಂಸ್ಕಾರಗಳನ್ನು ಕಾಪಿ ಮಾಡಿ, ಅವರ ಸಮಾನರಾಗುತ್ತೀರೆಂದರೆ ಸಮಯ ಮತ್ತು ಶಕ್ತಿಗಳು ಉಳಿತಾಯವಾಗಿ ಬಿಡುತ್ತದೆ ಮತ್ತು ಇಡೀ ಜಗತ್ತಿನಲ್ಲಿ ಬಾಪ್ದಾದಾರವರನ್ನು ಸಹಜವಾಗಿಯೇ ಪ್ರತ್ಯಕ್ಷಗೊಳಿಸಬಹುದು. ಭಕ್ತಿ ಮಾರ್ಗದಲ್ಲಂತು ಕೇವಲ ಎಲ್ಲಿ ನೋಡಿದರೂ ನೀನೇ ನೀನು ಎಂದು ಹೇಳಿ ಬಿಡುತ್ತಾರೆ. ಆದರೆ ಇಲ್ಲಿ ಪ್ರತ್ಯಕ್ಷವಾಗಿ ಎಲ್ಲಿ ನೋಡಿದರೂ, ಯಾರನ್ನೇ ನೋಡಿದರೂ ಅಲ್ಲಿ ಬಾಪ್ದಾದಾರವರ ಸಂಸ್ಕಾರವೇ ಕಾಣಿಸಲಿ.

ವರದಾನ:  
ಆವೇಶದ ಅಂಶವನ್ನೂ ತ್ಯಾಗ ಮಾಡುವಂತಹ ಸ್ವಮಾನಧಾರಿ ಪುಣ್ಯಾತ್ಮ ಭವ.

ಸ್ವಮಾನದಲ್ಲಿರುವ ಮಕ್ಕಳು ಎಲ್ಲರಿಗೂ ಮಾನ್ಯತೆಯನ್ನು ಕೊಡುವಂತಹ ದಾತಾ ಆಗಿರುತ್ತಾರೆ. ದಾತಾ ಅಂದರೆ ದಯಾಹೃದಯಿ ಎಂದರ್ಥ. ಅವರಲ್ಲೆಂದಿಗೂ ಯಾವುದೇ ಆತ್ಮನ ಬಗ್ಗೆ ಸಂಕಲ್ಪದಲ್ಲಿಯೂ ಆವೇಶವಿರುವುದಿಲ್ಲ. ಇವರೇಕೆ ಹೀಗಿದ್ದಾರೆ? ಇವರು ಹೀಗೆ ಮಾಡಬಾರದು, ಹೀಗಾಗಬಾರದು, ಜ್ಞಾನವು ಇದನ್ನು ಹೇಳುತ್ತದೆಯೇನು...... ಇಂತಹ ಸಂಕಲ್ಪವೂ ಸಹ ಸೂಕ್ಷ್ಮವಾಗಿ ಆವೇಶದ ಅಂಶವಾಗಿದೆ. ಆದರೆ ಸ್ವಮಾನವುಳ್ಳ ಪುಣ್ಯಾತ್ಮರು ಕೆಳಗೆ ಬಿದ್ದಿರುವವರನ್ನು ಮೇಲೆತ್ತುತ್ತಾರೆ, ಸಹಯೋಗಿಯಾಗುತ್ತಾರೆ. ಅವರೆಂದಿಗೂ ಈ ಸಂಕಲ್ಪವನ್ನು ಮಾಡಲು ಸಾಧ್ಯವಿಲ್ಲ - ಅದೇನೆಂದರೆ, ಇವರಂತು ತನ್ನ ಕರ್ಮಗಳ ಫಲವನ್ನು ಅಭವಿಸುತ್ತಿದ್ದಾರೆ, ಮಾಡುವರೆಂದರೆ ಅವಶ್ಯವಾಗಿ ಪಡೆಯುವರು..... ಇವರು ಬೀಳಲೇಬೇಕು.... ಇಂತಹ ಸಂಕಲ್ಪಗಳು ತಾವು ಮಕ್ಕಳದಾಗಲು ಸಾಧ್ಯವೇ ಇಲ್ಲ.

ಸ್ಲೋಗನ್:
ಸಂತುಷ್ಟತೆ ಮತ್ತು ಪ್ರಸನ್ನತೆಯ ವಿಶೇಷತೆಯೇ ಹಾರುವ ಕಲೆಯ ಅನುಭವವನ್ನು ಮಾಡಿಸುತ್ತದೆ.


ಮುರಳಿ ಪ್ರಶ್ನೆಗಳು –

1. ಪ್ರತಿಯೊಂದು ಮಕ್ಕಳಲ್ಲಿ ಯಾವ ಧೃಡ ಸಂಕಲ್ಪವಿದೆ?
ಅ. ಮನ-ವಾಣಿ-ಕರ್ಮ ಮೂರರಲ್ಲಿಯೂ ಪವಿತ್ರರಾಗಲೇಬೇಕು.
ಆ. ತನು-ಮನ-ಧನ ಮೂರರಲ್ಲಿಯೂ ಪವಿತ್ರರಾಗಲೇಬೇಕು.
ಇ. ಯೋಚಿಸುವುದು, ಮಾತನಾಡುವುದು, ಮಾಡುವುದು ಮೂರರಲ್ಲಿಯೂ ಪವಿತ್ರರಾಗಲೇಬೇಕು.

2. ಜನನಿಯೆಂದೂ ಯಾವುದಕ್ಕೆ ಹೇಳಲಾಗುತ್ತದೆ? ಸುಖ-ಶಾಂತಿಯು ಯಾವುದರ ಸಂತಾನವಾಗಿದೆ?
ಅ. ಆನಂದ ಆ. ಪವಿತ್ರತೆ ಇ. ಶಕ್ತಿ

3. ಸುಖ-ಶಾಂತಿಯು ಎಲ್ಲಿ ಸಹಜವಾಗಿ ಬರುತ್ತದೆ?
ಅ. ನಿಶ್ಚಯ ಆ. ದೃಢತೆ ಇ. ಪವಿತ್ರತೆ

4. ನಾವು ಏನಾಗಿ ಬಿಟ್ಟಿದ್ದೇವೆ?
ಅ. ಸ್ವರಾಜ್ಯಾಧಿಕಾರಿಗಳು ಆ. ನಿಶ್ಚಿಂತ ಚಕ್ರವರ್ತಿಗಳು ಇ. ಹೃದಯ ಸಿಂಹಸನಾಧಿಕಾರಿಗಳು

5. ಅಲ್ಪಕಾಲದ ಸುಖದ ಜೊತೆಗೆ ಏನಿರುತ್ತದೆ?
ಅ. ಚಿಂತೆ ಮತ್ತು ಭಯ ಆ. ಈಷ್ರ್ಯೆ ಮತ್ತು ದ್ವೇಷ ಇ. ನಿದ್ರೆ ಮತ್ತು ಆಲಸ್ಯ

6. ಬಾಪ್ದಾದಾರವರು ಸದಾ ಆಸ್ಟ್ರೇಲಿಯಾದವರ ಯಾವ ಗುಣದ ವಿಶೇಷತೆಯನ್ನೇ ವರ್ಣನೆ ಮಾಡುತ್ತಾರೆ?
ಅ. ತಪಸ್ಸು ಮತ್ತು ಮಹಾದಾನಿಯ
ಆ. ತ್ಯಾಗ ಮತ್ತು ತಪಸ್ಸು
ಇ. ಬೇಹದ್ದಿನ ವೈರಾಗ್ಯ

7. ಯಾವ ಭಾವವು ಅನೇಕ ಅಲ್ಪಕಾಲದ ಭಾವಗಳನ್ನು ಸಮಾಪ್ತಿ ಮಾಡಿ ಬಿಡುತ್ತದೆ?
ಅ. ಸೇವಾ ಭಾವ ಆ. ದಯೆ ಭಾವ ಇ. ಸ್ನೇಹ ಭಾವ

8. ಒಬ್ಬರು ಹೇಳಿದರು, ಇನ್ನೊಬ್ಬರು ಉಮ್ಮಂಗದಿಂದ ಸಹಯೋಗಿಯಾಗುತ್ತಾ, ಅದನ್ನು ಪ್ರತ್ಯಕ್ಷದಲ್ಲಿ ತಂದರೆಂದರೆ ಇದು ಯಾವ ಶಕ್ತಿ ಆಗಿದೆ?
ಅ. ಸ್ನೇಹ ಆ. ಸಂಘಟನೆ ಇ. ಸಹನೆ

9. ತಾವು ಸಮಸ್ಯೆ ಸ್ವರೂಪ ಬದಲಾಗಿ ಯಾವ ಸ್ವರೂಪರಾಗಿದ್ದೀರಿ?
ಅ. ಸಮಾಧಾನ ಸ್ವರೂಪ ಆ. ಸಹನೆಯ ಸ್ವರೂಪ ಇ. ಶಕ್ತಿ ಸ್ವರೂಪ

10. ಯಾವ ತ್ಯಾಗ ಮಾಡುವಂತಹ ಸ್ವಮಾನಧಾರಿ ಪುಣ್ಯಾತ್ಮಗಳಾಗಬಹುದು.
ಅ. ಕ್ರೋಧದ ಅಂಶ ಆ. ತಿರಸ್ಕಾರದ ಗುಣ ಇ. ಆವೇಶದ ಅಂಶವನ್ನು