20.09.20 Avyakt Bapdada
Kannada
Murli
25.03.86 Om Shanti Madhuban
"ಸಂಗಮಯುಗವು ಪವಿತ್ರ
ಜೀವನದ ಯುಗವಾಗಿದೆ"
ಇಂದು ಬಾಪ್ದಾದಾರವರು
ಸರ್ವ ಸ್ವರಾಜ್ಯಾಧಿಕಾರಿ ಅಲೌಕಿಕ ರಾಜ್ಯ ಸಭೆಯನ್ನು ನೋಡುತ್ತಿದ್ದಾರೆ. ಪ್ರತಿಯೊಂದು
ಶ್ರೇಷ್ಠಾತ್ಮರ ಮೇಲೆ ಪ್ರಕಾಶತೆಯ ಕಿರೀಟವು ಹೊಳೆಯುತ್ತಿರುವುದನ್ನು ನೋಡುತ್ತಿದ್ದಾರೆ. ಇದೇ
ರಾಜ್ಯ ಸಭೆಯು ಹೋಲಿ ಸಭೆ (ಪವಿತ್ರ ಸಭೆ) ಯಾಗಿದೆ. ಪ್ರತಿಯೊಬ್ಬ ಪರಮ ಪಾವನ ಪೂಜ್ಯ ಆತ್ಮರು ಕೇವಲ
ಈ ಒಂದು ಜನ್ಮಕ್ಕಾಗಿ ಪಾವನ ಅಂದರೆ ಪವಿತ್ರರಾಗಿರುವುದಲ್ಲ. ಆದರೆ ಪಾವನ ಅಂದರೆ ಪವಿತ್ರರಾಗುವ
ರೇಖೆಯು, ಅನೇಕ ಜನ್ಮಗಳ ಬಹಳ ದೊಡ್ಡ ರೇಖೆಯಾಗಿದೆ. ಇಡೀ ಕಲ್ಪದಲ್ಲಿ ಅನ್ಯ ಆತ್ಮರೂ ಸಹ ಪಾವನ
ಪವಿತ್ರರಾಗುವರು. ಹೇಗೆ ಪಾವನ ಆತ್ಮರು ಧರ್ಮ ಪಿತನ ರೂಪದಲ್ಲಿ ಧರ್ಮ ಸ್ಥಾಪನೆಯನ್ನು ಮಾಡಲು
ನಿಮಿತ್ತರಾಗುತ್ತಾರೆ. ಜೊತೆ ಜೊತೆಗೆ ಹಲವರು ಮಹಾನ್ ಆತ್ಮನೆಂದು ಕರೆಸಿಕೊಳ್ಳುವವರೂ
ಪಾವನರಾಗಿರುತ್ತಾರೆ ಆದರೆ ಅವರು ಪಾವನವಾಗುವುದರಲ್ಲಿ ಮತ್ತು ತಾವು ಪಾವನಾತ್ಮರಲ್ಲಿ ಅಂತರವಿದೆ.
ತಾವು ಪಾವನರಾಗುವ ಸಾಧನವು ಅತಿ ಸಹಜವಿದೆ. ಯಾವುದೇ ಕಷ್ಟವಿಲ್ಲ ಏಕೆಂದರೆ ತಾವು ಆತ್ಮರಿಗೆ
ತಂದೆಯಿಂದ ಸಹಜವಾಗಿ ಸುಖ-ಶಾಂತಿ ಪವಿತ್ರತೆಯ ಆಸ್ತಿಯು ಸಿಗುತ್ತದೆ. ಈ ಸ್ಮೃತಿಯಿಂದ ಸಹಜ ಮತ್ತು
ಸ್ವತಹವಾಗಿಯೇ ಅವಿನಾಶಿಯಾಗಿ ಬಿಡುತ್ತೀರಿ! ಜಗತ್ತಿನವರು ಪಾವನರಾಗುತ್ತಾರೆ ಆದರೆ ಪರಿಶ್ರಮ ಪಟ್ಟು
ಪವಿತ್ರರಾಗುತ್ತಾರೆ ಮತ್ತು ಅವರಿಗೆ ಆಸ್ತಿಯ ರೂಪದಲ್ಲಿ 21 ಜನ್ಮಗಳ ಪವಿತ್ರತೆಯು
ಪ್ರಾಪ್ತಿಯಾಗುವುದಿಲ್ಲ. ಇಂದು ಜಗತ್ತಿನ ಲೆಕ್ಕದಿಂದ ಹೋಲಿಯ ದಿನವೆಂದು ಹೇಳಲಾಗುತ್ತದೆ. ಅವರು
ಹೋಲಿಯನ್ನು ಆಚರಿಸುತ್ತಾರೆ ಮತ್ತು ತಾವು ಸ್ವಯಂ ಪರಮಾತ್ಮನ ರಂಗಿನಲ್ಲಿ ರಂಗಿತರಾಗಿರುವ ಹೋಲಿ
ಆತ್ಮರಾಗಿ ಬಿಡುತ್ತೀರಿ. ಆಚರಿಸುವುದು ಸ್ವಲ್ಪ ಸಮಯಕ್ಕಾಗಿ ಇರುತ್ತದೆ, ಆಗುವುದು ಜೀವನ
ರೂಪಿಸಿಕೊಳ್ಳುವುದಕ್ಕಾಗಿ ಇರುತ್ತದೆ. ಅವರು ಆ ದಿನವನ್ನು ಆಚರಿಸುತ್ತಾರೆ ಮತ್ತು ತಾವು
ಹೋಲಿ(ಪವಿತ್ರ) ಜೀವನವನ್ನು ರೂಪಿಸಿಕೊಳ್ಳುತ್ತೀರಿ. ಈ ಸಂಗಮ ಯುಗವು ಪವಿತ್ರ ಜೀವನದ ಯುಗವಾಗಿದೆ,
ಅಂದಾಗ ರಂಗಿನಲ್ಲಿ ರಂಗಿತರಾಗಿ ಬಿಟ್ಟಿರಿ ಅಂದರೆ ಅವಿನಾಶಿ ರಂಗೇರಿ ಬಿಟ್ಟಿತು. ಅದನ್ನು ಅಳಿಸುವ
ಅವಶ್ಯಕತೆಯೂ ಇಲ್ಲ. ಸದಾಕಾಲಕ್ಕಾಗಿ ತಂದೆಯ ಸಮಾನರಾಗಿ ಬಿಟ್ಟಿರಿ ಎಂದಾಯಿತು. ಸಂಗಮಯುಗದಲ್ಲಿ
ನಿರಾಕಾರ ತಂದೆಯ ಸಮಾನ ಕರ್ಮಾತೀತ, ನಿರಾಕಾರಿ ಸ್ಥಿತಿಯ ಅನುಭವವನ್ನು ಮಾಡುತ್ತೀರಿ ಹಾಗೂ 21
ಜನ್ಮಗಳು ಬ್ರಹ್ಮಾ ತಂದೆಯ ಸಮಾನ ಸರ್ವಗುಣ ಸಂಪನ್ನ, ಸಂಪೂರ್ಣ ನಿರ್ವಿಕಾರಿ ಶ್ರೇಷ್ಠ ಜೀವನದ ಸಮಾನ
ಅನುಭವವನ್ನು ಮಾಡುತ್ತೀರಿ. ಅಂದಾಗ ತಮ್ಮ ಹೋಲಿಯಾಯಿತು - ಸಂಗದ ರಂಗಿನಲ್ಲಿ ತಂದೆಯ ಸಮಾನರಾಗುವುದು.
ಪರಿಪಕ್ವವಾದ ರಂಗು ಹೀಗೇರಲಿ, ಅದರಿಂದ ಸಮಾನರಾಗಿ ಬಿಡಬೇಕು. ಯಾರಾದರೂ ಇಂತಹ ಹೋಲಿ ಪ್ರಪಂಚದಲ್ಲಿ
ಆಡುತ್ತಾರೆಯೇ? ತಂದೆಯು ಸಮಾನ ಮಾಡುವ ಹೋಲಿಯನ್ನಾಡಲು ಬರುತ್ತಾರೆ. ತಂದೆಯ ಮೂಲಕ ಪ್ರತಿಯೊಂದು
ಆತ್ಮನ ಮೇಲೆ ಭಿನ್ನ-ಭಿನ್ನ ಅವಿನಾಶಿ ರಂಗೇರಿ ಬಿಡುತ್ತದೆ. ಜ್ಞಾನದ ರಂಗು, ನೆನಪಿನ ರಂಗು, ಅನೇಕ
ಶಕ್ತಿಗಳ ರಂಗು, ಗುಣಗಳ ರಂಗು, ಶ್ರೇಷ್ಠ ದೃಷ್ಟಿ, ಶ್ರೇಷ್ಠ ವೃತ್ತಿ, ಶ್ರೇಷ್ಠ ಭಾವನೆ, ಶ್ರೇಷ್ಠ
ಕಾಮನೆಯು ಸ್ವತಹವಾಗಿ ಸದಾಕಾಲದ್ದಾಗಿ ಬಿಡಲಿ - ಈ ಆತ್ಮಿಕ ರಂಗು ಎಷ್ಟು ಸಹಜವಾಗಿ ರಂಗೇರಿ
ಬಿಡುತ್ತದೆ! ಹೋಲಿಯಾಗುವುದು ಅಂದರೆ ಹೋಲಿ ಆಗಿ ಬಿಟ್ಟಿರಿ. ಎಂತಹ ಗುಣವೋ ಅಂತಹ ರೂಪವಾಗುತ್ತದೆ,
ಅವರು ಹೋಲಿಯನ್ನು ಆಚರಿಸುತ್ತಾರೆ, ಅದೇ ಸಮಯದಲ್ಲಿ ಭಾವ ಚಿತ್ರವನ್ನು(ಫೋಟೊ) ತೆಗೆದರೆ
ಹೇಗೆನಿಸುತ್ತದೆ. ಅವರು ಹೋಲಿಯನ್ನು ಆಚರಿಸಿ ಏನಾಗಿ ಬಿಡುತ್ತಾರೆ ಮತ್ತು ತಾವು ಹೋಲಿಯನ್ನು
ಆಚರಿಸುತ್ತೀರೆಂದರೆ ಫರಿಶ್ತೆಯಿಂದ ದೇವತೆಯಾಗಿ ಬಿಡುತ್ತೀರಿ! ಇದೆಲ್ಲವೂ ತಮ್ಮದೇ ನೆನಪಾರ್ಥವಾಗಿದೆ
ಆದರೆ ಆಧ್ಯಾತ್ಮಿಕ ಶಕ್ತಿಯಿಲ್ಲದಿರುವ ಕಾರಣದಿಂದ ಆಧ್ಯಾತ್ಮಿಕ ರೂಪದಿಂದ ಆಚರಿಸಲು ಸಾಧ್ಯವಿಲ್ಲ.
ಬಾಹರ್ಮುಖತೆಯ ಕಾರಣದಿಂದ ಬಾಹರ್ಮುಖಿ ರೂಪದಿಂದಲೇ ಆಚರಿಸುತ್ತಿರುತ್ತಾರೆ. ತಾವು ಯಥಾರ್ಥವಾದ
ರೀತಿಯಿಂದ ಮಂಗಳ ಮಿಲನವನ್ನು ಆಚರಿಸಬೇಕು.
ಹೋಲಿಯ ವಿಶೇಷತೆಯಾಗಿದೆ - ಸುಡುವುದು, ಸುಟ್ಟ ನಂತರ ಆಚರಿಸುವುದು, ಆನಂತರ ಮಂಗಳ ಮಿಲನ ಮಾಡುವುದು.
ಈ ಮೂರು ವಿಶೇಷತೆಗಳಿಂದ ನೆನಪಾರ್ಥವು ಮಾಡಲ್ಪಟ್ಟಿದೆ ಏಕೆಂದರೆ ತಾವೆಲ್ಲರೂ ಹೋಲಿಯಾಗುವುದಕ್ಕಾಗಿ
ಮೊದಲು- ಹಳೆಯ ಸಂಸ್ಕಾರ, ಹಳೆಯ ಸ್ಮೃತಿಗಳೆಲ್ಲವನ್ನೂ ಯೋಗಾಗ್ನಿಯಿಂದ ಸುಟ್ಟಾಗಲೇ ಸಂಗದ ರಂಗಿನಲ್ಲಿ
ಹೋಲಿಯನ್ನು ಆಚರಿಸಿದಂತೆ ಆಯಿತು ಅಂದರೆ ಪರಮಾತ್ಮನ ಪರಿವಾರದವರಾಗಿ ಬಿಟ್ಟಿರಿ. ಪರಮಾತ್ಮನ
ಪರಿವಾರದವರಾಗಿರುವ ಕಾರಣದಿಂದ ಸ್ವತಹವಾಗಿ ಪ್ರತಿಯೊಂದು ಆತ್ಮನ ಬಗ್ಗೆ ಶುಭ ಕಾಮನೆಯು ಸ್ವಾಭಾವಿಕ
ಸ್ವಭಾವವಾಗಿ ಬಿಡುತ್ತದೆ. ಆದ್ದರಿಂದ ಸದಾ ಒಬ್ಬರನ್ನೊಬ್ಬರೊಂದಿಗೆ ಮಂಗಳ ಮಿಲನವನ್ನು
ಆಚರಿಸುತ್ತೀರಿ. ಭಲೆ ಶತ್ರುವೇ ಆಗಿರಲಿ, ಆಸುರಿ ಸಂಸ್ಕಾರದವರು ಆಗಿರಲಿ ಆದರೆ ಈ ಆತ್ಮಿಕ ಮಂಗಳ
ಮಿಲನದಿಂದ ಅವರ ಮೇಲೂ ಅವಶ್ಯವಾಗಿ ಪರಮಾತ್ಮ ರಂಗಿನ ಹನಿಯನ್ನು ಹಾಕುತ್ತೀರಿ. ತಮ್ಮ ಬಳಿ ಯಾರೇ
ಬಂದರೂ ಅವರೇನು ಮಾಡುವರು? ಎಲ್ಲರೊಂದಿಗೆ ಮಿಲನವಾಗುವುದು ಅರ್ಥಾತ್ ಶ್ರೇಷ್ಠಾತ್ಮನೆಂದು
ತಿಳಿದುಕೊಂಡು ಮಿಲನವಾಗುವುದು, ಇವರು ತಂದೆಯ ಮಕ್ಕಳಾಗಿದ್ದಾರೆನ್ನುವ ಈ ಪ್ರಿಯವಾದ ಮಿಲನ, ಶುಭ
ಭಾವನೆಯ ಮಿಲನವು ಆತ್ಮರಲ್ಲಿಯೂ ಹಳೆಯ ಮಾತುಗಳನ್ನು ಮರೆಸಿ ಬಿಡುತ್ತದೆ. ಅವರೂ ಸಹ ಉತ್ಸಾಹದಲ್ಲಿ
ಬಂದು ಬಿಡುತ್ತಾರೆ. ಆದ್ದರಿಂದ ಉತ್ಸವದ ರೂಪದಲ್ಲಿ ಈ ನೆನಪಾರ್ಥವನ್ನು ಮಾಡಿದ್ದಾರೆ. ಹಾಗಾದರೆ
ತಂದೆಯೊಂದಿಗೆ ಹೋಲಿಯನ್ನಾಚರಿಸುವುದು ಅರ್ಥಾತ್ ಅವಿನಾಶಿ ಆತ್ಮಿಕ ರಂಗಿನಲ್ಲಿ ತಂದೆಯ
ಸಮಾನರಾಗುವುದು. ಆ ಜನರಂತು ದುಃಖಿತರಾಗಿರುತ್ತಾರೆ ಆದ್ದರಿಂದ ಖುಷಿಯಾಗಿರುವುದಕ್ಕಾಗಿ ಈ
ದಿನವನ್ನಿಟ್ಟಿದ್ದಾರೆ ಮತ್ತು ತಾವುಗಳಂತು ಸದಾಕಾಲವೂ ಖುಷಿಯಲ್ಲಿ ನರ್ತಿಸುತ್ತಾ, ಹಾಡುತ್ತಾ,
ಮೋಜನ್ನು ಆರಿಸುತ್ತಿರುತ್ತೀರಿ. ಯಾರು ಹೆಚ್ಚಾಗಿ ಏನಾಯಿತು, ಏಕಾಯಿತು, ಹೇಗಾಯಿತು ಎನ್ನುತ್ತಾರೆ,
ಅವರು ಮೋಜಿನಲ್ಲಿರಲು ಸಾಧ್ಯವಿಲ್ಲ. ತಾವು ತ್ರಿಕಾಲದರ್ಶಿಯಾಗಿ ಬಿಟ್ಟಿದ್ದೀರಿ. ಆದ್ದರಿಂದ ಏಕೆ,
ಏನು, ಹೇಗೆ ಎನ್ನುವ ಸಂಕಲ್ಪವು ಉತ್ಪನ್ನವಾಗಲು ಸಾಧ್ಯವಿಲ್ಲ. ಏಕೆಂದರೆ ಮೂರೂ ಕಾಲಗಳನ್ನು
ತಿಳಿದಿದ್ದೀರಿ. ಏಕಾಯಿತು? ನಾವು ಮುಂದುವರೆಯುವುದಕ್ಕಾಗಿ ಪರೀಕ್ಷೆಯಾಯಿತು ಎಂದು ಗೊತ್ತಿದೆ. ಇದು
ಏಕಾಯಿತು? ಹೊಸದೇನಲ್ಲ ಆದ್ದರಿಂದ ಏನಾಯಿತು ಎನ್ನುವ ಪ್ರಶ್ನೆಯೇ ಇಲ್ಲ. ಹೇಗಾಯಿತು? ಮಾಯೆಯು
ನಮ್ಮನ್ನಿನ್ನೂ ಶಕ್ತಿಶಾಲಿ ಮಾಡುವುದಕ್ಕಾಗಿ ಬಂದಿತು ಮತ್ತು ಹೊರಟು ಹೋಯಿತು. ಅಂದಾಗ ಇದರಲ್ಲಿ
ತ್ರಿಕಾಲದರ್ಶಿ ಸ್ಥಿತಿಯಿರುವವರು ಎಂದಿಗೂ ಗೊಂದಲರಾಗುವುದಿಲ್ಲ. ಪ್ರಶ್ನೆಯ ಜೊತೆ ಜೊತೆಗೆ ಮೊದಲು
ಪ್ರತ್ಯುತ್ತರವು ಬರುತ್ತದೆ ಏಕೆಂದರೆ ತ್ರಿಕಾಲದರ್ಶಿಯಾಗಿದ್ದೀರಿ. ಹೆಸರು ತ್ರಿಕಾಲದರ್ಶಿ ಮತ್ತು
ವರ್ತಮಾನವನ್ನೂ ತಿಳಿದುಕೊಳ್ಳಲು ಸಾಧ್ಯವಿಲ್ಲ, ಏಕಾಯಿತು, ಹೇಗಾಯಿತೆಂದರೆ ಅವರನ್ನು
ತ್ರಿಕಾಲದರ್ಶಿಗಳೆಂದು ಹೇಗೆ ಹೇಳುವುದು! ಅನೇಕ ಬಾರಿ ವಿಜಯಿಯಾಗಿದ್ದಾರೆ ಮತ್ತು ಆಗುವವರೂ ಇದ್ದಾರೆ.
ಪಾಸ್ಟ್ ಮತ್ತು ನಾವು ಬ್ರಾಹ್ಮಣರಿಂದ ಫರಿಶ್ತಾ, ಫರಿಶ್ತೆಯಿಂದ ದೇವತೆಯಾಗುವವರು ಎಂದು
ಫ್ಯೂಚರ್ನ್ನೂ ತಿಳಿದಿದ್ದಾರೆ. ಇಂದು ಮತ್ತು ನಾಳೆಯ ಮಾತಾಗಿದೆ. ಪ್ರಶ್ನೆಯು ಸಮಾಪ್ತಿಯಾಗಿ ಪೂರ್ಣ
ವಿರಾಮವು ಬಂದು ಬಿಡುತ್ತದೆ.
ಹೋಲಿಯ ಅರ್ಥವೇ ಆಗಿದೆ - ಹೋ-ಲಿ, ಆಗಿದ್ದು ಕಳೆದು ಹೋಯಿತು - ಹೀಗೆ ಬಿಂದುವನ್ನಿಡಲು
ಬರುತ್ತದೆಯಲ್ಲವೇ! ಇದೂ ಸಹ ಹೋಲಿಯ ಅರ್ಥವಾಗಿದೆ. ಸುಡುವಂತಹ ಹೋಲಿಯೂ ಬರುತ್ತದೆಯೇ, ರಂಗಿನಲ್ಲಿ
ರಂಗಿತರಾಗುವ, ಬಿಂದುವನ್ನಿಡುವ ಹಾಗೂ ಮಂಗಳ ಮಿಲನವನ್ನಾಚರಿಸುವ ಹೋಲಿಯೂ ಬರುತ್ತದೆಯೇ - ನಾಲ್ಕೂ
ಪ್ರಕಾರದ ಹೋಲಿಯೂ ಬರುತ್ತದೆಯಲ್ಲವೆ! ಏನಾದರೂ ಒಂದು ಪ್ರಕಾರದ ಹೋಲಿಯೇ ಕಡಿಮೆಯಾಯಿತೆಂದರೆ
ಪ್ರಕಾಶತೆಯ ಕಿರೀಟವು ನಿಲ್ಲುವುದಿಲ್ಲ, ಬೀಳುತ್ತಿರುತ್ತದೆ. ಕಿರೀಟವು ಬಿಗಿಯಾಗಿರುವುದಿಲ್ಲವೆಂದರೆ
ಬೀಳುತ್ತಿರುತ್ತದೆಯಲ್ಲವೆ. ನಾಲ್ಕೂ ಪ್ರಕಾರದ ಹೋಲಿಯನ್ನಾಚರಿಸುವುದರಲ್ಲಿ ಉತ್ತೀರ್ಣರಾಗಿದ್ದೀರಾ?
ಯಾವಾಗ ತಂದೆಯ ಸಮಾನರಾಗಬೇಕು, ಅಂದಮೇಲೆ ತಂದೆಯ ಸಮಾನರೂ ಆಗಿರಬೇಕು ಮತ್ತು ಸಂಪೂರ್ಣರೂ ಆಗಿರಬೇಕು.
ಪರ್ಸೆಂಟೇಜಿನ ಸ್ಥಿತಿಯೂ ಎಲ್ಲಿಯವರೆಗೆ? ಯಾರೊಂದಿಗೆ ಸ್ನೇಹವಿರುತ್ತದೆ, ಸ್ನೇಹಿಗೆ
ಸಮಾನನಾಗುವುದರಲ್ಲಿ ಕಷ್ಟವಾಗುವುದಿಲ್ಲ. ತಂದೆಗೆ ಸದಾ ಸ್ನೇಹಿಯಾಗಿದ್ದೀರೆಂದರೆ ಸದಾ
ಸಮಾನರೇಕಿಲ್ಲ! ಸಹಜವಲ್ಲವೆ. ಒಳ್ಳೆಯದು.
ಎಲ್ಲರೂ ಸದಾ ಹೋಲಿ ಮತ್ತು ಹ್ಯಾಪಿಯಾಗಿರುವ ಹೋಲಿ ಹಂಸಗಳನ್ನು ಸರ್ವ ಶ್ರೇಷ್ಠ ತಂದೆಯ ಸಮಾನ
ಹೋಲಿಯಾಗುವಂತಹ ಅವಿನಾಶಿ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಸದಾ ತಂದೆಯ ಸಮಾನರಾಗುವ,
ಪವಿತ್ರಯುಗದಲ್ಲಿ ಸದಾ ಮೋಜನ್ನು ಆಚರಿಸುವ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಸದಾ ಪವಿತ್ರ
ಹಂಸಗಳಾಗಿರುತ್ತಾ ಜ್ಞಾನರತ್ನಗಳಿಂದ ಸಂಪನ್ನರಾಗುವ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಸರ್ವ
ರಂಗುಗಳಲಿ ರಂಗಿತರಾಗಿ ಪೂಜ್ಯಾತ್ಮರಾಗುವ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಶುಭಾಷಯಗಳೂ ಇದೆ
ಮತ್ತು ಸದಾ ನೆನಪು-ಪ್ರೀತಿಯೂ ಇದೆ ಮತ್ತು ಸೇವಾಧಾರಿ ತಂದೆಯ ಮಾಲೀಕ ಮಕ್ಕಳ ಪ್ರತಿ ನಮಸ್ತೆಯೂ ಸಹ
ಸದಾ ಇದೆ. ಆದ್ದರಿಂದ ನೆನಪು-ಪ್ರೀತಿ ಹಾಗೂ ನಮಸ್ತೆ.
ಇಂದು ಮಲೇಷಿಯಾ ಗ್ರೂಪ್ ಇದೆಯೇ! ಸೌತ್ ಈಸ್ಟ್. ಎಲ್ಲರೂ ಇದನ್ನು ತಿಳಿದಿದ್ದೀರಾ - ನಾವು
ಎಲ್ಲೆಲ್ಲಿ ಚದುರಿ ಹೋಗಿದ್ದೆವು, ಪರಮಾತ್ಮನ ಪರಿವಾರದ ಸ್ಟೀಮರ್ನಿಂದ ಕೆಳಗಿಳಿದು ಯಾವ-ಯಾವ
ಮೂಲೆಯಲ್ಲಿ ಹೊರಟು ಹೋಗಿದ್ದೆವು, ಸಂಸಾರ ಸಾಗರದಲ್ಲಿ ಮುಳುಗಿ ಹೋಗಿದ್ದೆವು ಏಕೆಂದರೆ ದ್ವಾಪರದಲ್ಲಿ
ಆತ್ಮಿಕ ಬಾಂಬಿಗೆ ಬದಲಾಗಿ ಶರೀರದ ಭಾನದ ಬಾಂಬ್ ಹಿಡಿದುಕೊಂಡಿತು. ರಾವಣನು ಬಾಂಬನ್ನು ಹಾಕಿದನು,
ಅದರಿಂದ ಸ್ಟೀಮರ್ ಸಹ ಮುರಿದು ಹೋಯಿತು. ಪರಮಾತ್ಮನ ಪರಿವಾರದ ಸ್ಟೀಮರ್ ಮುರಿದು ಹೋಯಿತು ಮತ್ತು
ಎಲ್ಲೆಲ್ಲಿ ಹೊರಟು ಹೋಯಿತು! ಎಲ್ಲಿಯೇ ಆಶ್ರಯ ಸಿಕ್ಕಿತು ಅಲ್ಲಿಗೆ ಹೋಗಲಾಯಿತು. ಮುಳುಗುವವರಿಗೆ
ಎಲ್ಲಿಯೇ ಆಶ್ರಯವು ಸಿಗುತ್ತದೆಯೆಂದರೆ ತೆಗೆದುಕೊಳ್ಳುತ್ತಾರಲ್ಲವೆ. ತಾವೆಲ್ಲರೂ ಸಹ ಯಾವ ಧರ್ಮ,
ಯಾವ ದೇಶದಲ್ಲಿಯೇ ಸ್ವಲ್ಪ ಆಶ್ರಯ ಸಿಕ್ಕಿತೋ ಅಲ್ಲಿಗೆ ಹೋಗಿ ಬಿಟ್ಟಿರಿ. ಆದರೆ ಸಂಸ್ಕಾರವಂತು ಅದೇ
ಇದೆಯಲ್ಲವೆ. ಆದ್ದರಿಂದ ಬೇರೆ ಧರ್ಮದಲ್ಲಿ ಹೋಗಿದ್ದರೂ ಸಹ ತಮ್ಮ ವಾಸ್ತವಿಕ ಧರ್ಮದ ಪರಿಚಯವು
ಸಿಕ್ಕಿದ ಕೂಡಲೇ ತಲುಪಿ ಬಿಟ್ಟಿರಿ. ಇಡೀ ವಿಶ್ವದಲ್ಲಿ ಹರಡಿ ಬಿಟ್ಟಿದ್ದಿರಿ. ಹೀಗೆ ದೂರವಾಗುವುದೂ
ಸಹ ಕಲ್ಯಾಣಕಾರಿಯಾಯಿತು, ಅನೇಕ ಆತ್ಮರನ್ನು ಒಬ್ಬರು ಕರೆ ತರುವ ಕಾರ್ಯವನ್ನು ಮಾಡಿದರು.
ವಿಶ್ವದಲ್ಲಿ ಪರಮಾತ್ಮನ ಪರಿವಾರದ ಪರಿಚಯವನ್ನು ಕೊಡುವುದಕ್ಕಾಗಿ ಕಲ್ಯಾಣಕಾರಿ ಆಗಿ ಬಿಟ್ಟರು. ಒಂದು
ವೇಳೆ ಎಲ್ಲರೂ ಭಾರತದಲ್ಲಿಯೇ ಇದ್ದಿದ್ದರೆ ವಿಶ್ವದ ಸೇವೆಯು ಹೇಗಾಗುತ್ತಿತ್ತು! ಆದ್ದರಿಂದ
ಮೂಲೆ-ಮೂಲೆಯಲ್ಲಿ ತಲುಪಿ ಬಿಟ್ಟಿದ್ದೀರಿ. ಎಲ್ಲರ ಮುಖ್ಯವಾದ ಧರ್ಮಗಳಲ್ಲಿ ಯಾರಾದರೊಬ್ಬರು ತಲುಪಿ
ಬಿಟ್ಟಿದ್ದಾರೆ. ಅದರಲ್ಲಿ ಒಬ್ಬರೂ ಬಂದರೂ ಸಹ ತನ್ನ ಜೊತೆಗಾರರನ್ನು ಅವಶ್ಯವಾಗಿ
ಮೇಲೆಬ್ಬಿಸುತ್ತಾರೆ. ಬಾಪ್ದಾದಾರವರಿಗೂ ಸಹ 5000 ವರ್ಷಗಳ ನಂತರವೇ ಅಗಲಿರುವ ಮಕ್ಕಳನ್ನು ನೋಡುತ್ತಾ
ಖುಷಿಯಾಗುತ್ತದೆ. ತಮ್ಮೆಲ್ಲರಿಗೂ ಸಹ ಖುಷಿಯಾಗುತ್ತದೆಯಲ್ಲವೆ. ಅವಶ್ಯವಾಗಿ ತಲುಪಿದ್ದೀರಿ, ಸೇರಿ
ಬಿಟ್ಟಿರಿ.
ಈಗಿನವರೆಗೂ ಮಲೇಷಿಯಾದ ಯಾವುದೇ ವಿ.ಐ.ಪಿ.,ಯೂ ಬಂದಿಲ್ಲ. ಸೇವೆಯ ಲಕ್ಷ್ಯದಿಂದ ಅವರನ್ನೂ ನಿಮಿತ್ತ
ಮಾಡಲಾಗುತ್ತದೆ. ಸೇವೆಯ ತೀವ್ರಗತಿಗಾಗಿ ನಿಮಿತ್ತರಾಗಿ ಬಿಡುತ್ತಾರೆ, ಆದ್ದರಿಂದ ಅವರನ್ನು
ಮುಂದಿಡಲಗುತ್ತದೆ. ತಂದೆಗಂತು ತಾವೇ ಶ್ರೇಷ್ಠಾತ್ಮರಾಗಿದ್ದೀರಿ. ಆತ್ಮಿಕ ನಶೆಯಲ್ಲಂತು ತಾವು
ಶ್ರೇಷ್ಠರಾಗಿದ್ದೀರಲ್ಲವೆ. ತಾವು ಪೂಜ್ಯಾತ್ಮರೆಲ್ಲಿ! ಮತ್ತು ಅವರು ಮಾಯೆಯಲ್ಲಿ
ಸಿಲುಕಿಕೊಂಡಿರುವವರೆಲ್ಲಿ! ಅಜ್ಞಾನಿ ಆತ್ಮರಿಗೆ ಪರಿಚಯವನ್ನಂತು ಕೊಡಬೇಕಲ್ಲವೆ. ಈಗ
ಸಿಂಗಪುರದಲ್ಲಿಯೂ ವೃದ್ಧಿಯಾಗುತ್ತಿದೆ. ಎಲ್ಲಿ ತಂದೆಯ ಅನನ್ಯ ರತ್ನಗಳು ತಲುಪಿದ್ದಾರೆಯೋ, ಆ
ರತ್ನಗಳು ರತ್ನಗಳನ್ನೇ ತೆಗೆಯುತ್ತಾರೆ. ಸೇವೆಯಲ್ಲಿ ಸಾಹಸವನ್ನಿಟ್ಟು ಲಗನ್ನಿನಿಂದ
ಮುಂದುವರೆಯುತ್ತಿದ್ದಾರೆ. ಅಂದಾಗ ಪರಿಶ್ರಮದ ಫಲವೂ ಸಹ ಶ್ರೇಷ್ಠವಾಗಿರುವುದೇ ಸಿಗುತ್ತದೆ. ತಮ್ಮ
ಪರಿವಾರವನ್ನು ಸೇರಿಸಬೇಕಾಗಿದೆ. ಪರಿವಾರದಿಂದ ದೂರವಾಗಿರುವವರು, ಪರಿವಾರದಲ್ಲಿಯೇ
ತಲುಪುತ್ತಾರೆಂದರೆ ಎಷ್ಟೊಂದು ಖುಷಿಯಾಗುತ್ತದೆ ಮತ್ತು ಹೃದಯದಿಂದ ಧನ್ಯವಾದಗಳ ಹಾಡನ್ನಾಡುತ್ತಾರೆ.
ಹಾಗೆಯೇ ಇವರೂ ಸಹ ಪರಿವಾರದಲ್ಲಿ ಬಂದು ಧನ್ಯವಾದಗಳ ಹಾಡನ್ನೆಷ್ಟೊಂದು ಹಾಡುತ್ತಿರುತ್ತಾರೆ!
ನಿಮಿತ್ತರಾಗಿದ್ದು ತಂದೆಯ ಮಕ್ಕಳನ್ನಾಗಿ ಮಾಡಿಬಿಟ್ಟಿರಿ, ಸಂಗಮದಲ್ಲಿ ಬಹಳಷ್ಟು ಧನ್ಯವಾದಗಳ
ಮಾಲೆಗಳು ತಮ್ಮ ಕೊರಳಿಗೆ ಬೀಳುತ್ತವೆ. ಒಳ್ಳೆಯದು.
ಅವ್ಯಕ್ತ ಮಹಾವಾಕ್ಯ -
ಅಖಂಡ ಮಹಾದಾನಿಯಾಗಿರಿ:
ಮಹಾದಾನಿಯೆಂದರೆ ಸಿಕ್ಕಿರುವಂತಹ ಖಜಾನೆಗಳನ್ನು ಸ್ವಾರ್ಥವಿಲ್ಲದೆ ಸರ್ವ ಆತ್ಮರಿಗಾಗಿ ಕೊಡುವಂತಹ
ನಿಸ್ವಾರ್ಥಿ ಎಂದರ್ಥ. ಸ್ವಯಂನ ಸ್ವಾರ್ಥದಿಂದ ದೂರವಿರುವ ಆತ್ಮವೇ ಮಹಾದಾನಿಯಾಗಲು ಸಾಧ್ಯ. ಅನ್ಯರ
ಖುಷಿಯಲ್ಲಿ ಸ್ವಯಂನ ಖುಷಿಯ ಅನುಭವ ಮಾಡುವುದೂ ಸಹ ಮಹಾದಾನಿಯಾಗುವುದಾಗಿದೆ. ಹೇಗೆ ಸಾಗರವು
ಸಂಪನ್ನವಾಗಿರುತ್ತದೆ, ಅಕೂಟವಾಗಿದೆ, ಅಖಂಡವಾಗಿದೆ, ಹಾಗೆಯೇ ತಾವು ಮಕ್ಕಳು ಮಾಸ್ಟರ್, ಅಖಂಡ,
ಅಕೂಟ ಖಜಾನೆಗಳ ಮಾಲೀಕರಾಗಿದ್ದೀರಿ. ಅಂದಮೇಲೆ ಯಾವ ಖಜಾನೆಗಳು ಸಿಕ್ಕಿವೆಯೋ, ಅದನ್ನು ಮಹಾದಾನಿಯಾಗಿ
ಅನ್ಯರಿಗಾಗಿ ಕಾರ್ಯದಲ್ಲಿ ಉಪಯೋಗಿಸುತ್ತಿರಿ. ಯಾರೇ ಸಂಬಂಧದಲ್ಲಿ ಬರುವಂತಹ ಭಕ್ತ ಅಥವಾ ಸಾಧಾರಣ
ಆತ್ಮರಾಗಿರುತ್ತಾರೆ, ಅವರಿಗಾಗಿ ಸದಾ ಇದೇ ಲಗನ್ ಇರಲಿ - ಇವರಿಗೆ ಭಕ್ತಿಯ ಫಲವು ಸಿಕ್ಕಿ ಬಿಡಲಿ.
ತಾವೆಷ್ಟು ದಯಾಹೃದಯಿಯಾಗುತ್ತೀರಿ, ಅಷ್ಟು ಹೀಗೆ ಅಲೆದಾಡುತ್ತಿರುವ ಆತ್ಮರಿಗೆ ಸಹಜ ಮಾರ್ಗವನ್ನು
ತಿಳಿಸುತ್ತೀರಿ.
ತಮ್ಮಬಳಿ ಅತ್ಯಂತ ಶ್ರೇಷ್ಠವಾದ ಖಜಾನೆಯಾದ ಖುಷಿಯ ಖಜಾನೆಯಿದೆ, ತಾವು ಈ ಖುಷಿಯ ಖಜಾನೆಯನ್ನು ದಾನ
ಮಾಡುತ್ತಿರಿ. ಯಾರಿಗೆ ಖುಷಿ ಕೊಡುವಿರಿ, ಅವರು ತಮಗೆ ಮತ್ತೆ-ಮತ್ತೆ ಧನ್ಯವಾದಗಳನ್ನು ಕೊಡುವರು.
ದುಃಖಿ ಆತ್ಮರಿಗೆ ಖುಷಿಯ ದಾನ ಕೊಡುತ್ತೀರೆಂದರೆ ತಮ್ಮ ಗುಣ ಗಾನ ಮಾಡುವರು. ಇದರಲ್ಲಿ
ಮಹಾದಾನಿಯಾಗಿರಿ, ಖುಷಿಯ ಖಜಾನೆಯನ್ನು ಹಂಚಿರಿ. ತಮ್ಮ ಸಮಾನರನ್ನು ಜಾಗೃತಗೊಳಿಸಿರಿ, ಮಾರ್ಗವನ್ನು
ತೋರಿಸಿರಿ. ಈಗ ಸಮಯದ ಅನುಸಾರವಾಗಿ ತಮ್ಮ ಕರ್ಮೇಂದ್ರಿಯಗಳ ಮೂಲಕ ಮಹಾದಾನಿ ಅಥವಾ ವರದಾನಿಯಾಗಿರಿ.
ಮಸ್ತಕದ ಮೂಲಕ ಸರ್ವರಿಗೆ ಸ್ವ-ಸ್ವರೂಪದ ಸ್ಮೃತಿಯನ್ನು ತರಿಸಿರಿ. ನಯನಗಳ ಮೂಲಕ ಸ್ವ-ದೇಶ ಮತ್ತು
ಸ್ವರಾಜ್ಯದ ಮಾರ್ಗವನ್ನು ತೋರಿಸಿರಿ. ಮುಖದ ಮೂಲಕ ರಚೈತನ ಮತ್ತು ರಚನೆಯ ವಿಸ್ತಾರವನ್ನು
ಸ್ಪಷ್ಟಗೊಳಿಸುತ್ತಾ, ಬ್ರಾಹ್ಮಣರಿಂದ ದೇವತೆಯಾಗುವ ವರದಾನವನ್ನು ಕೊಡಿ. ಹಸ್ತಗಳ ಮೂಲಕ ಸದಾ
ಸಹಜಯೋಗಿ, ಕರ್ಮಯೋಗಿಯಗುವ ವರದಾನವನ್ನು ಕೊಡಿ. ಚರಣ ಕಮಲದ ಮೂಲಕ ಪ್ರತೀ ಹೆಜ್ಜೆಯಲ್ಲಿ ಫಾಲೋ ಫಾದರ್
ಮಾಡುತ್ತಾ ಹೆಜ್ಜೆಯಲ್ಲಿ ಪದಮಗಳ ಸಂಪಾದನೆಯನ್ನು ಜಮಾ ಮಾಡಿಕೊಳ್ಳುವ ವರದಾನಿಯಾಗಿರಿ. ಹೀಗೆ ಪ್ರತೀ
ಕರ್ಮೇಂದ್ರಿಯಗಳಿಂದ ಮಹಾದಾನ, ವರದಾನವನ್ನು ಕೊಡುತ್ತಾ ಸಾಗಿರಿ. ಮಾಸ್ಟರ್ ದಾತಾರಾಗಿದ್ದು
ಪರಿಸ್ಥಿತಿಗಳನ್ನು ಪರಿವರ್ತನೆ ಮಾಡುವ, ಬಲಹೀನರನ್ನು ಶಕ್ತಿಶಾಲಿಗೊಳಿಸುವ, ವಾಯುಮಂಡಲ ಅಥವಾ
ವೃತ್ತಿಯನ್ನು ತಮ್ಮ ಶಕ್ತಿಗಳ ಮೂಲಕ ಪರಿವರ್ತನೆ ಮಾಡುವ, ಸದಾ ಸ್ವಯಂನ್ನು ಕಲ್ಯಾಣಾರ್ಥವಾಗಿ
ಜವಾಬ್ದಾರ ಆತ್ಮನೆಂದು ತಿಳಿದುಕೊಂಡು, ಪ್ರತಿಯೊಂದು ಮಾತಿನಲ್ಲಿ ಸಹಯೋಗ ಅಥವಾ ಶಕ್ತಿಯ ಮಹಾದಾನ
ಅಥವಾ ವರದಾನವನ್ನು ಕೊಡುವ ಸಂಕಲ್ಪ ಮಾಡಿರಿ. ನಾನು ಕೊಡಬೇಕು, ನಾನು ಬದಲಾಗಬೇಕು, ನಾನು
ನಿರ್ಮಾಣನಾಗಬೇಕು - ಹೀಗೆ "ಯಾರು ಮೊದಲು ಮಾಡುವರು" ಅರ್ಥಾತ್ ದಾತಾನಾಗುವ ವಿಶೇಷತೆಯನ್ನು ಧಾರಣೆ
ಮಾಡಿಕೊಳ್ಳಿರಿ.
ಈಗ ಪ್ರತಿಯೊಂದು ಆತ್ಮನ ಬಗ್ಗೆ ವಿಶೇಷವಾಗಿ ಅನುಭವಿಯಾಗಿ, ವಿಶೇಷ ಅನುಭವಗಳ ಗಣಿಯಾಗಿ, ಅನುಭವೀ
ಮೂರ್ತಿಯನ್ನಾಗಿ ಮಾಡುವ ಮಹಾದಾನ ಮಾಡಿರಿ. ಅದರಿಂದ ಪ್ರತಿಯೊಂದು ಆತ್ಮವು ಅನುಭವದ ಆಧಾರದಿಂದ
ಅಂಗಧನ ಸಮಾನವಾಗಿ ಬಿಡಲಿ. ನಡೆಯುತ್ತಿದ್ದೇವೆ, ಮಾಡುತ್ತಿದ್ದೇವೆ, ಕೇಳುತ್ತಿದ್ದೇವೆ,
ತಿಳಿಸುತ್ತಿದ್ದೇವೆ ಎನ್ನಬಾರದು. ಆದರೆ ಅನುಭವಗಳ ಖಜಾನೆಯನ್ನೇ ಪಡೆದು ಬಿಟ್ಟೆವು ಎಂಬ
ಹಾಡನ್ನಾಡುತ್ತಾ ಖುಷಿಯ ಉಯ್ಯಾಲೆಯಲ್ಲಿ ತೂಗುತ್ತಿರಬೇಕು. ತಂದೆಯ ಮೂಲಕ ತಾವು ಮಕ್ಕಳಿಗೆ ಏನೆಲ್ಲಾ
ಖಜಾನೆಗಳು ಸಿಕ್ಕಿದ್ವೆಯೋ, ಅವನ್ನು ಹಂಚುತ್ತಿರಿ ಅಂದರೆ ಮಹಾದಾನಿಯಾಗಿರಿ. ಸದಾ ಯಾರೇ
ಬರುತ್ತಾರೆಂದರೆ ತಮ್ಮ ಭಂಡಾರದಿಂದ ಖಾಲಿಯಾಗಿ ಹೋಗಬಾರದು. ತಾವೆಲ್ಲರೂ ಬಹಳ ಕಾಲದ
ಜೊತೆಗಾರರಾಗಿದ್ದೀರಿ ಮತ್ತು ಬಹಳ ಕಾಲದ ರಾಜ್ಯಾಧಿಕಾರಿ ಆಗಿದ್ದೀರಿ. ಅಂದಾಗ ಅಂತ್ಯದಲ್ಲಿರುವ
ಬಲಹೀನ ಆತ್ಮರಿಗೂ ಮಹಾದಾನಿ, ವರದಾನಿಯಾಗಿ ಅನುಭವದ ದಾನ ಮತ್ತು ಪುಣ್ಯ ಮಾಡಿಕೊಳ್ಳಿರಿ. ಈ ಪುಣ್ಯವು
ಅರ್ಧಕಲ್ಪಕ್ಕಾಗಿ ತಮ್ಮನ್ನು ಪೂಜ್ಯನೀಯ ಮತ್ತು ಗಾಯನ ಯೋಗ್ಯನನ್ನಾಗಿ ಮಾಡಿ ಬಿಡುತ್ತದೆ.
ತಾವೆಲ್ಲರೂ ಜ್ಞಾನದ ಖಜಾನೆಯಿಂದ ಸಂಪನ್ನಧನದ ದೇವಿಯರಾಗಿದ್ದೀರಿ. ಯಾವಾಗಿನಿಂದ ಬ್ರಾಹ್ಮಣರಾದಿರಿ,
ಆಗಿನಿಂದ ಜನ್ಮ-ಸಿದ್ಧ ಅಧಿಕಾರದಲ್ಲಿ ಜ್ಞಾನ ಖಜಾನೆ, ಶಕ್ತಿಗಳ ಖಜಾನೆಯು ಸಿಕ್ಕಿದೆ. ಈ
ಖಜಾನೆಗಳನ್ನು ಸ್ವಯಂಗಾಗಿ ಹಾಗೂ ಅನ್ಯರಿಗಾಗಿ ಉಪಯೋಗಿಸುತ್ತೀರಿ ಎಂದರೆ ಖುಷಿಯು ಹೆಚ್ಚಾಗುವುದು,
ಇದರಲ್ಲಿ ಮಹಾದಾನಿಯಾಗಿರಿ. ಮಹಾದಾನಿ ಅರ್ಥಾತ್ ಸದಾ ಅಖಂಡ ಭಂಡಾರವು ಉಪಯೋಗವಾಗುತ್ತಿರಲಿ.
ಈಶ್ವರೀಯ ಸೇವೆಯ ಅತಿ ಶ್ರೇಷ್ಠವಾದ ಪುಣ್ಯವಾಗಿದೆ - ಪವಿತ್ರತೆಯ ದಾನ ಕೊಡುವುದು. ಪವಿತ್ರರಾಗುವುದು
ಮತ್ತು ಅನ್ಯರನ್ನು ಮಾಡುವುದೇ ಪುಣ್ಯಾತ್ಮರಾಗುವುದಾಗಿದೆ ಏಕೆಂದರೆ ಯಾವುದೇ ಆತ್ಮನನ್ನು ಆತ್ಮಘಾತ
ಮಹಾಪಾಪದಿಂದ ಮುಕ್ತಗೊಳಿಸುತ್ತೀರಿ. ಅಪವಿತ್ರತೆಯು ಆತ್ಮಘಾತವಾಗಿದೆ. ಪವಿತ್ರತೆಯು ಜೀವದಾನವಾಗಿದೆ.
ಪವಿತ್ರರಾಗಿ ಮತ್ತು ಅನ್ಯರನ್ನೂ ಮಾಡಿರಿ - ಇದೇ ಮಹಾದಾನ ಮಾಡುತ್ತಾ ಪುಣ್ಯಾತ್ಮರಾಗಿರಿ. ಮಹಾದಾನಿ
ಅರ್ಥಾತ್ ಸಂಪೂರ್ಣ ನಿರ್ಬಲ, ಹೃದಯವಿಧೀರ್ಣ ಅಸಮರ್ಥ ಆತ್ಮರಿಗೆ ವಿಶೇಷ ಶಕ್ತಿಯನ್ನು ಕೊಟ್ಟು,
ಆತ್ಮಿಕ ದಯಾ ಹೃದಯಿಯಾಗುವುದು. ಮಹಾದಾನಿ ಅರ್ಥಾತ್ ಸಂಪೂರ್ಣವಾಗಿ ಹೋಪ್ಲೆಸ್ ಕೇಸ್ನಲ್ಲಿ
ಹೋಪ್(ಭರವಸೆ)ನ್ನು ಉತ್ಪನ್ನಮಾಡುವುದು. ಅಂದಾಗ ಮಾಸ್ಟರ್ ರಚೈತನಾಗಿದ್ದು ಪ್ರಾಪ್ತಿಯಾಗಿರುವಂತಹ
ಶಕ್ತಿಗಳನ್ನು ಅಥವಾ ಪ್ರಾಪ್ತಿಯಾಗಿರುವ ಜ್ಞಾನ, ಗುಣ, ಅಥವಾ ಸರ್ವ ಖಜಾನೆಗಳನ್ನು ಅನ್ಯರಿಗಾಗಿ
ಮಹಾದಾನಿಯಾಗಿದ್ದು ಕೊಡುತ್ತಿರಿ. ಸದಾ ದಾನವನ್ನು ಕಡು ಬಡವರಿಗೇ ಕೊಡಲಾಗುತ್ತದೆ. ನಿರಾಶ್ರಿತರಿಗೆ
ಆಶ್ರಯವನ್ನು ಕೊಡಲಾಗುತ್ತದೆ. ಅಂದಮೇಲೆ ಪ್ರಜೆಗಳ ಪ್ರತಿ ಮಹಾದಾನಿ ಅಥವಾ ಅಂತ್ಯದಲ್ಲಿ ಭಕ್ತಾತ್ಮರ
ಪ್ರತಿ ಮಹಾದಾನಿಯಾಗಿರಿ. ಪರಸ್ಪರದಲ್ಲಿ ಒಬ್ಬರಿನ್ನೊಬ್ಬರ ಬಗ್ಗೆ ಬ್ರಾಹ್ಮಣ ಮಹಾದಾನಿಯಾಗುವುದಲ್ಲ,
ಪರಸ್ಪರದಲ್ಲಿ ಸಹಯೋಗಿ ಜೊತೆಗಾರರಾಗಿದ್ದೀರಿ. ಸಹೋದರ-ಸಹೋದರನಾಗಿದ್ದೀರಿ ಅಥವಾ ಸಮಾನ
ಪುರುಷಾರ್ಥಿಗಳಾಗಿದ್ದೀರಿ. ಅವರಿಗೆ ಸಹಯೋಗಿಯಾಗಿರಿ. ಒಳ್ಳೆಯದು.
ವರದಾನ:
ಶಕ್ತಿಶಾಲಿ ವೃತ್ತಿಯ ಮೂಲಕ ಮನಸ್ಸಾ ಸೇವೆಯನ್ನು ಮಾಡುವಂತಹ ವಿಶ್ವ ಕಲ್ಯಾಣಕಾರಿ ಭವ.
ವಿಶ್ವದಲ್ಲಿ
ಚಡಪಡಿಸುತ್ತಿರುವ ಆತ್ಮರುಗಳಿಗೆ ಮಾರ್ಗವನ್ನು ತೋರಿಸುವುದಕ್ಕಾಗಿ, ಸಾಕ್ಷಾತ್ ತಂದೆಯ ಸಮಾನ
ಲೈಟ್ಹೌಸ್-ಮೈಟ್ಹೌಸ್ ಆಗಿರಿ. ಲಕ್ಷ್ಯವನ್ನಿಟ್ಟುಕೊಳ್ಳಿ - ನಾನು ಪ್ರತಿಯೊಂದು ಆತ್ಮನಿಗೂ ಏನಾದರೂ
ಕೊಡಬೇಕು. ಭಲೆ ಮುಕ್ತಿಯನ್ನಾದರೂ ಕೊಡಿ, ಜೀವನ್ಮುಕ್ತಿಯನ್ನಾದರೂ ಕೊಡಿ. ಸರ್ವರ ಬಗ್ಗೆ ಮಹಾದಾನಿ
ಮತ್ತು ವರದಾನಿಯಾಗಿರಿ. ಈಗ ತಮ್ಮ-ತಮ್ಮ ಸ್ಥಾನದ ಸೇವೆಯನ್ನಂತು ಮಾಡುತ್ತೀರಿ. ಆದರೆ ಒಂದು
ಸ್ಥಾನದಲ್ಲಿಯೇ ಇದ್ದು ಮನಸ್ಸಾ ಶಕ್ತಿಯ ಮೂಲಕ ವಾಯುಮಂಡಲ, ವೈಬ್ರೇಷನ್ ಮೂಲಕ ವಿಶ್ವ ಸೇವೆಯನ್ನು
ಮಾಡಿರಿ. ಅಂತಹ ಶಕ್ತಿಶಾಲಿ ವೃತ್ತಿಯನ್ನು ತಯಾರು ಮಾಡಿರಿ, ಅದರಿಂದ ವಾಯುಮಂಡಲವಾಗಲಿ - ಆಗ ವಿಶ್ವ
ಕಲ್ಯಾಣಕಾರಿ ಎಂದು ಹೇಳಲಾಗುತ್ತದೆ.
ಸ್ಲೋಗನ್:
ಅಶರೀರಿಯಾಗುವ
ವ್ಯಾಯಾಮ ಮತ್ತು ತಮ್ಮನ್ನು ವ್ಯರ್ಥ ಸಂಕಲ್ಪವೆಂಬ ಭೋಜನದ ಪತ್ಯೆಯಿಂದ ಆರೋಗ್ಯವಾಗಿಟ್ಟುಕೊಳ್ಳಿರಿ.
ಸೂಚನೆ:-
ಇಂದು ತಿಂಗಳಿನ
ಮೂರನೇ ರವಿವಾರವಾಗಿದೆ, ಎಲ್ಲಾ ರಾಜಯೋಗಿ ತಪಸ್ವಿ ಸಹೋದರ-ಸಹೋದರಿಯರು ಸಂಜೆ 6.30ರಿಂದ
7.30ರವರೆಗೆ, ವಿಶೇಶವಾಗಿ ಯೋಗಾಭ್ಯಾಸದ ಸಮಯದಲ್ಲಿ ತಮ್ಮ ಆಕಾರಿ ಫರಿಶ್ತಾ ಸ್ವರೂಪದಲ್ಲಿ
ಸ್ಥಿತರಾಗಿದ್ದು, ಭಕ್ತರ ಕರೆಯನ್ನು ಆಲಿಸಿರಿ ಮತ್ತು ಉಪಕಾರ ಮಾಡಿರಿ. ಮಾಸ್ಟರ್ ದಯಾಳು, ಕೃಪಾಳು
ಆಗಿದ್ದು, ಎಲ್ಲರ ಬಗ್ಗೆ ದಯಾದೃಷ್ಟಿಯನ್ನಿಡಿ. ಮುಕ್ತಿ-ಜೀವನ್ಮುಕ್ತಿಯ ವರದಾನ ಕೊಡಿ.
ಮುರಳಿ ಪ್ರಶ್ನೆಗಳು -
1. ಮಹಾನ್ ಆತ್ಮನೆಂದು
ಕರೆಸಿಕೊಳ್ಳುವವರೂ ಪಾವನರಾಗಿರುತ್ತಾರೆ ಆದರೆ ಅವರು ಪಾವನವಾಗುವುದರಲ್ಲಿ ಮತ್ತು ತಾವು ಪಾವನ
ಆತ್ಮರಲ್ಲಿ ಅಂತರವಿದೆ ಅದು ಏನು?
2. ಹೋಲಿಯ ವಿಶೇಷತೆ ಏನಾಗಿದೆ? - ಸುಡುವುದು, ಸುಟ್ಟ ನಂತರ ಆಚರಿಸುವುದು, ಆನಂತರ ಮಂಗಳ ಮಿಲನ
ಮಾಡುವುದು.
3. ತಂದೆಯೊಂದಿಗೆ ಹೋಲಿಯನ್ನಾಚರಿಸುವುದರ ಅರ್ಥವೇನು?
4. ತಾವು ತ್ರಿಕಾಲದರ್ಶಿಯಾಗಿ ಬಿಟ್ಟಿದ್ದೀರಿ ಎಂದಾಗ ಯಾವ ಸಂಕಲ್ಪವು ಉತ್ಪನ್ನವಾಗಲು ಸಾಧ್ಯವಿಲ್ಲ?
5. ನಾಲ್ಕೂ ಪ್ರಕಾರದ ಹೋಲಿ ಯಾವುದುದಾಗಿದೆ?
6. ಮಹಾದಾನಿಯೆಂದರೆ ಏನು?
7. ತಮ್ಮ ಬಳಿ ಅತ್ಯಂತ ಶ್ರೇಷ್ಠವಾದ ಖಜಾನೆ ಯಾವುದುದಾಗಿದೆ?
8. ಈಗ ಸಮಯದನುಸಾರವಾಗಿ ನಾವು ಎಂತಹ ವರದಾನಿಗಳಾಗಬೇಕು?
9. ಯಾವ ಸೇವೆ ಮಾಡಿದಾಗ ನಾವು ವಿಶ್ವ ಕಲ್ಯಾಣಕಾರಿಗಳಾಗುತ್ತೇವೆ?
10. ಯಾವ ಭೋಜನದ ಪತ್ಯೆಯಿಂದ ನಾವು ಆರೋಗ್ಯವಾಗಿರಬಹುದು?