12.09.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಸದಾ ಇದೇ ಸ್ಮೃತಿಯಿರಲಿ, ನಾವು ಶ್ರೀಮತದಂತೆ ಸತ್ಯಯುಗೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ, ಅಂದಮೇಲೆ ಅಪಾರ ಖುಷಿಯಿರುತ್ತದೆ".

ಪ್ರಶ್ನೆ:
ಈ ಜ್ಞಾನದ ಭೋಜನವನ್ನು ಯಾವ ಮಕ್ಕಳು ಜೀರ್ಣ ಮಾಡಿಕೊಳ್ಳುವುದಿಲ್ಲ?

ಉತ್ತರ:
ಯಾರು ತಪ್ಪುಗಳನ್ನು ಮಾಡುತ್ತಾ, ಛೀ-ಛೀ (ಪತಿತ) ರಾಗಿ ನಂತರ ಕ್ಲಾಸಿನಲ್ಲಿ ಬಂದು ಕುಳಿತುಕೊಳ್ಳುತ್ತಾರೆ, ಅವರು ಜ್ಞಾನವನ್ನು ಜೀರ್ಣ ಮಾಡಿಕೊಳ್ಳಲು ಸಾಧ್ಯವಿಲ್ಲ. ಭಗವಾನುವಾಚ - ಕಾಮ ಮಹಾಶತ್ರುವಾಗಿದೆ ಎಂದು ಅವರ ಬಾಯಿಂದ ಎಂದೂ ಹೇಳಲು ಸಾಧ್ಯವಿಲ್ಲ. ಅವರ ಹೃದಯದ ಒಳಗೊಳಗೆ ತಿನ್ನುತ್ತಿರುತ್ತದೆ. ಅವರು ಆಸುರೀ ಸಂಪ್ರದಾಯದವರಾಗಿ ಬಿಡುತ್ತಾರೆ.

ಓಂ ಶಾಂತಿ.
ತಂದೆಯು ಆತ್ಮೀಯ ಮಕ್ಕಳಿಗೆ ಸನ್ಮುಖದಲ್ಲಿ ತಿಳಿಸುತ್ತಿದ್ದಾರೆ, ಅವರು ಎಂತಹ ತಂದೆಯಾಗಿದ್ದಾರೆ, ಆ ತಂದೆಯ ಮಹಿಮೆಯನ್ನು ನೀವು ಮಕ್ಕಳು ಮಾಡುತ್ತೀರಿ. ಸತ್ಯ ಶಿವ ತಂದೆ, ಸತ್ಯ ಶಿವ ಶಿಕ್ಷಕ, ಸತ್ಯ ಶಿವ ಗುರು ಎಂದೂ ಗಾಯನ ಮಾಡಲಾಗುತ್ತದೆ. ಸತ್ಯನಂತೂ ಅವರಾಗಿದ್ದಾರಲ್ಲವೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಮಗೆ ಸತ್ಯ ಶಿವ ತಂದೆಯು ಸಿಕ್ಕಿದ್ದಾರೆ, ನಾವು ಮಕ್ಕಳೀಗ ಶ್ರೀಮತದಂತೆ ಒಂದು ಮತದವರಾಗುತ್ತಿದ್ದೇವೆ ಅಂದಾಗ ಶ್ರೀಮತದಂತೆ ನಡೆಯಬೇಕಾಗಿದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಒಂದಂತೂ ದೇಹೀ-ಅಭಿಮಾನಿಗಳಾಗಿ ಮತ್ತು ತಂದೆಯನ್ನು ನೆನಪು ಮಾಡಿ. ಎಷ್ಟು ನೆನಪು ಮಾಡುತ್ತೀರಿ ಅಷ್ಟು ತಮ್ಮ ಕಲ್ಯಾಣವನ್ನು ಮಾಡಿಕೊಳ್ಳುತ್ತೀರಿ. ನೀವು ತಮ್ಮ ರಾಜಧಾನಿಯನ್ನು ಪುನಃ ಸ್ಥಾಪನೆ ಮಾಡುತ್ತಿದ್ದೀರಿ ಮೊದಲೇ ನಮ್ಮ ರಾಜಧಾನಿಯಿತ್ತು, ನಾವು ದೇವಿ-ದೇವತಾ ಧರ್ಮದವರೇ 84 ಜನ್ಮಗಳನ್ನು ಭೋಗಿಸಿ ಅಂತಿಮ ಜನ್ಮದಲ್ಲಿ ಈಗ ಸಂಗಮಯುಗದಲ್ಲಿದ್ದೇವೆ. ನೀವು ಮಕ್ಕಳ ವಿನಃ ಮತ್ತ್ಯಾರಿಗೂ ಈ ಪುರುಷೋತ್ತಮ ಸಂಗಮಯುಗವು ಗೊತ್ತಿಲ್ಲ. ಮಕ್ಕಳೇ, ಒಂದುವೇಳೆ ಚೆನ್ನಾಗಿ ನೆನಪಿನಲ್ಲಿರುತ್ತೀರೆಂದರೆ ಬಹಳ ಖುಷಿಯಲ್ಲಿರುತ್ತೀರಿ ಎಂದು ತಂದೆಯು ಎಷ್ಟು ಪಾಯಿಂಟ್ಸ್ನ್ನು ಕೊಡುತ್ತಾರೆ. ಆದರೆ ತಂದೆಯನ್ನು ನೆನಪು ಮಾಡುವುದರ ಬದಲು ಮತ್ತ್ಯಾವುದೋ ಪ್ರಪಂಚದ ಮಾತುಗಳಲ್ಲಿ ತೊಡಗಿ ಬಿಡುತ್ತಾರೆ. ನಾವು ಶ್ರೀಮತದಂತೆ ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ ಎಂದು ನಿಮಗೆ ನೆನಪಿರಬೇಕಾಗಿದೆ. ಗಾಯನವೂ ಮಾಡಲ್ಪಟ್ಟಿದೆ – ಶ್ರೇಷ್ಠಾತಿ ಶ್ರೇಷ್ಠ ಭಗವಂತ, ಅವರದೇ ಶ್ರೇಷ್ಠಾತಿ ಶ್ರೇಷ್ಠ ಮತವಾಗಿದೆ. ಶ್ರೀಮತವು ಏನನ್ನು ಕಲಿಸುತ್ತದೆ? ಸಹಜ ರಾಜಯೋಗ. ರಾಜ್ಯ ಭಾಗ್ಯಕ್ಕಾಗಿ ಓದುತ್ತಿದ್ದೀರಿ. ತಮ್ಮ ತಂದೆಯ ಮೂಲಕ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದು ನಂತರ ದೈವೀ ಗುಣವನ್ನೂ ಧಾರಣೆ ಮಾಡಬೇಕಾಗಿದೆ. ಎಂದೂ ತಂದೆಗೆ ಎದುರಾಗಬಾರದು. ಬಹಳ ಮಕ್ಕಳು ತಮ್ಮನ್ನು ಸರ್ವೀಸೇಬಲ್ ಎಂದು ತಿಳಿದು ಅಹಂಕಾರದಲ್ಲಿ ಬಂದು ಬಿಡುತ್ತಾರೆ. ಹೀಗೆ ಅನೇಕರಿರುತ್ತಾರೆ, ಇನ್ನೂ ಕೆಲವೊಮ್ಮೆ ಸೋಲನ್ನನುಭವಿಸಿದಾಗಲೂ ಸಹ ನಶೆಯು ಮಾಯವಾಗುತ್ತದೆ. ನೀವು ಮಾತೆಯರಂತೂ ಅವಿದ್ಯಾವಂತರಾಗಿದ್ದೀರಿ. ವಿದ್ಯೆಯನ್ನು ಕಲಿತಿದ್ದರೆ ಕಮಾಲ್ ಮಾಡಿ ತೋರಿಸುತ್ತೀರಿ. ಪುರುಷರಲ್ಲಾದರೂ ವಿದ್ಯಾವಂತರಿದ್ದಾರೆ, ನೀವು ಕುಮಾರಿಯರು ತಂದೆಯ ಹೆಸರನ್ನು ಎಷ್ಟೊಂದು ಪ್ರಖ್ಯಾತಗೊಳಿಸಬೇಕು. ನೀವು ಶ್ರೀಮತದನುಸಾರ ರಾಜಧಾನಿಯನ್ನು ಸ್ಥಾಪನೆ ಮಾಡಿದ್ದಿರಿ. ನಾರಿಯಿಂದ ಲಕ್ಷ್ಮಿಯಾಗಿದ್ದಿರಿ ಅಂದಮೇಲೆ ಎಷ್ಟು ನಶೆಯಿರಬೇಕು! ಇಲ್ಲಾದರೆ ನೋಡಿ, ಬಿಡುಗಾಸಿನ ವಿದ್ಯೆಗಾಗಿ ತನ್ನ ಪ್ರಾಣವನ್ನೇ ಬಲಿ ಕೊಡುತ್ತಿದ್ದಾರೆ. ಅರೆ! ನೀವಂತೂ ಈಗ ಸುಂದರ (ಪಾವನ) ರಾಗುತ್ತೀರಿ. ಅಂದಮೇಲೆ ಪತಿತ, ತಮೋಪ್ರಧಾನರೊಂದಿಗೆ ಮನಸ್ಸನ್ನೇಕೆ ಇಡುತ್ತೀರಿ? ಈ ಸ್ಮಶಾನದೊಂದಿಗೆ ಮನಸ್ಸನ್ನಿಡಬೇಡಿ. ನಾವಂತೂ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ. ಪ್ರಪಂಚದೊಂದಿಗೆ ಮನಸ್ಸನ್ನಿಡುವುದು ಎಂದರೆ ನರಕದಲ್ಲಿ ಹೋಗುವುದಾಗಿದೆ. ತಂದೆಯು ಬಂದು ನರಕದಿಂದ ಪಾರು ಮಾಡುತ್ತಾರೆ. ಅಂದಾಗ ಮತ್ತೆ ನೀವೇಕೆ ನರಕದ ಕಡೆ ಮುಖವನ್ನಿಡುತ್ತೀರಿ. ನಿಮ್ಮ ವಿದ್ಯೆಯು ಎಷ್ಟು ಸಹಜವಾಗಿದೆ! ಯಾವುದನ್ನು ಯಾವ ಋಷಿ-ಮುನಿಗಳೂ ಸಹ ತಿಳಿದುಕೊಂಡಿಲ್ಲ. ಯಾವುದೇ ಶಿಕ್ಷಕರಾಗಲಿ, ಋಷಿ-ಮುನಿಗಳಾಗಲಿ ತಿಳಿಸಲು ಸಾಧ್ಯವಿಲ್ಲ. ತಂದೆಯು ತಂದೆ, ಶಿಕ್ಷಕ, ಗುರುವೂ ಆಗಿದ್ದಾರೆ. ಆ ಗುರುಗಳಾದರೆ ವೇದ-ಶಾಸ್ತ್ರಗಳನ್ನು ಓದಿ ತಿಳಿಸುತ್ತಾರೆ. ಅವರಿಗೇನು ಶಿಕ್ಷಕರೆಂದು ಹೇಳುವುದಿಲ್ಲ ಏಕೆಂದರೆ ನಾನು ಪ್ರಪಂಚದ ಇತಿಹಾಸ-ಭೂಗೋಳವನ್ನು ತಿಳಿಸುತ್ತೇನೆಂದು ಹೇಳುವುದಿಲ್ಲ. ಅವರಂತೂ ಶಾಸ್ತ್ರಗಳ ಮಾತುಗಳನ್ನು ತಿಳಿಸುತ್ತಾರೆ. ತಂದೆಯು ನಿಮಗೆ ಇವೆಲ್ಲಾ ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ ಮತ್ತು ವಿಶ್ವದ ಚರಿತ್ರೆ-ಭೂಗೋಳವನ್ನೂ ತಿಳಿಸುತ್ತಾರೆ ಅಂದಾಗ ಈ ಶಿಕ್ಷಕರು ಒಳ್ಳೆಯವರೋ ಅಥವಾ ಆ ಶಿಕ್ಷಕರು ಒಳ್ಳೆಯವರೋ? ಆ ಶಿಕ್ಷಕರಿಂದ ನೀವು ಎಷ್ಟಾದರೂ ಓದಿರಿ ಆದರೆ ಸಂಪಾದನೆ ಮಾಡುತ್ತೀರಿ? ಅದು ಅದೃಷ್ಟದನುಸಾರ. ಓದುತ್ತಾ-ಓದುತ್ತಾ ಒಂದುವೇಳೆ ಅಪಘಾತವಾಗಿ ಮರಣ ಹೊಂದಿದರೆ ವಿದ್ಯೆಯು ಸಮಾಪ್ತಿ. ಇಲ್ಲಿ ನೀವು ಈ ವಿದ್ಯೆಯನ್ನು ಎಷ್ಟಾದರೂ ಓದಿರಿ ಅದು ವ್ಯರ್ಥವಾಗಿ ಹೋಗುವುದಿಲ್ಲ. ಶ್ರೀಮತದಂತೆ ನಡೆಯದೆ ಉಲ್ಟಾ ನಡೆಯುತ್ತಾರೆ ಅಥವಾ ಹೋಗಿ ವಿಕಾರದಲ್ಲಿ ಬಿದ್ದರೂ ಸಹ ಎಷ್ಟು ಓದಿರುತ್ತೀರೋ ಅದು ಹೊರಟು ಹೋಗುವುದಿಲ್ಲ. ಈ ವಿದ್ಯೆಯು 21 ಜನ್ಮಗಳಿಗಾಗಿ ಇದೆ ಆದರೆ ಇದರಲ್ಲಿ ಬೀಳುವುದರಿಂದ ಕಲ್ಪಾಂತರಕ್ಕಾಗಿ ಬಹಳ ನಷ್ಟವಾಗುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮುಖ ಕಪ್ಪು ಮಾಡಿಕೊಳ್ಳಬೇಡಿ. ಹೀಗೆ ಅನೇಕರಿದ್ದಾರೆ, ಮುಖ ಕಪ್ಪು ಮಾಡಿಕೊಂಡು ಪತಿತರಾಗಿ ಮತ್ತೆ ಬಂದು ಕುಳಿತುಕೊಳ್ಳುತ್ತಾರೆ. ಅವರಿಗೆಂದೂ ಈ ಜ್ಞಾನವು ಜೀರ್ಣವಾಗುವುದಿಲ್ಲ, ಅಜೀರ್ಣವಾಗಿ ಬಿಡುತ್ತದೆ. ಏನನ್ನು ಕೇಳುವರೋ ಅದು ಅಜೀರ್ಣವಾಗುವುದು ಮತ್ತು ಬಾಯಿಂದ ಯಾರಿಗೂ ಭಗವಾನುವಾಚ - ಕಾಮ ಮಹಾಶತ್ರವಾಗಿದೆ, ಅದನ್ನು ಗೆಲ್ಲಬೇಕೆಂದು ಹೇಳಲು ಆಗುವುದಿಲ್ಲ. ತಾವೇ ಗೆಲ್ಲುವುದಿಲ್ಲವೆಂದರೆ ಅನ್ಯರಿಗೆ ಹೇಗೆ ಹೇಳುವರು? ವಿವೇಕವು ತಿನ್ನುತ್ತದೆಯಲ್ಲವೆ. ಅಂತಹವರಿಗೆ ಆಸುರೀ ಸಂಪ್ರದಾಯದವರೆಂದು ಹೇಳಲಾಗುವುದು. ಅಮೃತವನ್ನು ಕುಡಿಯುತ್ತಾ-ಕುಡಿಯುತ್ತಾ ವಿಷ ಸೇವಿಸಿ ಬಿಟ್ಟರೆ (ವಿಕಾರದಲ್ಲಿ ಬಿದ್ದರೆ) 100% ಕಪ್ಪಾಗಿ ಬಿಡುತ್ತಾರೆ. ಮೂಳೆ-ಮೂಳೆಗಳು ಪುಡಿಯಾಗುತ್ತವೆ.

ನೀವು ಮಾತೆಯರ ಸಂಘಟನೆಯು ಬಹಳ ಚೆನ್ನಾಗಿರಬೇಕು. ಲಕ್ಷ್ಯವು ಸಮ್ಮುಖದಲ್ಲಿದೆ. ಈ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಒಂದು ದೇವಿ-ದೇವತಾ ಧರ್ಮವಿತ್ತು, ಒಂದು ರಾಜ್ಯ, ಒಂದು ಭಾಷೆ 100% ಸುಖ-ಶಾಂತಿ-ಪವಿತ್ರತೆಯಿತ್ತು. ಆ ಒಂದು ರಾಜ್ಯವನ್ನು ತಂದೆಯು ಈಗ ಸ್ಥಾಪನೆ ಮಾಡುತ್ತಿದ್ದಾರೆ. ಇದು ನಿಮ್ಮ ಗುರಿಯಾಗಿದೆ. 100% ಸುಖ, ಶಾಂತಿ, ಪವಿತ್ರತೆ, ಸಂಪತ್ತಿನ ಸ್ಥಾಪನೆಯೂ ಈ ಸಮಯದಲ್ಲಿ ನಡೆಯುತ್ತದೆ. ವಿನಾಶದ ನಂತರ ಶ್ರೀಕೃಷ್ಣನು ಬರಲಿದ್ದಾನೆಂದು ನೀವು ತೋರಿಸುತ್ತೀರಿ. ಇದನ್ನು ಸ್ಪಷ್ಟವಾಗಿ ಬರೆಯಿರಿ, ಸತ್ಯಯುಗೀ ಒಂದೇ ದೇವಿ-ದೇವತೆಗಳ ರಾಜ್ಯ, ಒಂದು ಭಾಷೆ, ಸುಖ-ಶಾಂತಿ-ಪವಿತ್ರತೆಯು ಪುನಃ ಸ್ಥಾಪನೆಯಾಗುತ್ತಿದೆ. ಸರ್ಕಾರವೂ ಇದನ್ನೇ ಬಯಸುತ್ತದೆಯಲ್ಲವೆ. ಸ್ವರ್ಗವಿರುವುದೇ ಸತ್ಯ-ತ್ರೇತಾಯುಗದಲ್ಲಿ ಆದರೆ ಮನುಷ್ಯರು ಈಗ ತಮ್ಮನ್ನು ನರಕವಾಸಿಗಳೆಂದು ತಿಳಿದುಕೊಳ್ಳುವುದಿಲ್ಲ. ನೀವು ಇದನ್ನು ಬರೆಯಬಹುದು - ದ್ವಾಪರ-ಕಲಿಯುಗದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ. ನೀವೀಗ ಸಂಗಮಯುಗಿಗಳಾಗಿದ್ದೀರಿ. ಮೊದಲು ನೀವೂ ಸಹ ನರಕವಾಸಿಗಳಾಗಿದ್ದಿರಿ ಈಗ ಸ್ವರ್ಗವಾಸಿಗಳಾಗುತ್ತಿದ್ದೀರಿ. ಶ್ರೀಮತದನುಸಾರ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೀರಿ. ಆದರೆ ಆ ಸಾಹಸ, ಸಂಘಟನೆಯಿರಬೇಕು. ಸುತ್ತಾಡಲು ಹೋದಾಗ ಈ ಲಕ್ಷ್ಮೀ-ನಾರಾಯಣರ ಚಿತ್ರವನ್ನು ತೆಗೆದುಕೊಂಡು ಹೋಗಿ ಇದು ಚೆನ್ನಾಗಿದೆ, ಇದರಲ್ಲಿ ಈ ರೀತಿ ಬರೆಯಿರಿ - ತ್ರಿಮೂರ್ತಿ ಶಿವ ತಂದೆಯ ಶ್ರೀಮತದನುಸಾರ ಆದಿ ಸನಾತನ ದೇವಿ-ದೇವತಾ ಧರ್ಮ, ಸುಖ-ಶಾಂತಿಯ ರಾಜ್ಯವು ಸ್ಥಾಪನೆಯಾಗುತ್ತಿದೆ. ಹೀಗೆ ದೊಡ್ಡ-ದೊಡ್ಡ ಅಕ್ಷರಗಳಿಂದ ಬರೆದ ದೊಡ್ಡ-ದೊಡ್ಡ ಚಿತ್ರಗಳಿರಲಿ. ಚಿಕ್ಕ ಮಕ್ಕಳು ಚಿಕ್ಕದಾದ ಚಿತ್ರಗಳನ್ನು ಇಷ್ಟ ಪಡುತ್ತಾರೆ ಆದರೆ ಚಿತ್ರವು ಎಷ್ಟು ದೊಡ್ಡದಿರುವುದೋ ಅಷ್ಟು ಒಳ್ಳೆಯದು. ಈ ಲಕ್ಷ್ಮೀ-ನಾರಾಯಣರ ಚಿತ್ರವು ಬಹಳ ಚೆನ್ನಾಗಿದೆ, ಕೇವಲ ಇದರಲ್ಲಿ ಬರೆಯಿರಿ - ಒಬ್ಬರೇ ಸತ್ಯ ತ್ರಿಮೂರ್ತಿ ಶಿವ ತಂದೆ ಸತ್ಯ ತ್ರಿಮೂರ್ತಿ ಶಿವ ಶಿಕ್ಷಕ, ಸತ್ಯ ತ್ರಿಮೂರ್ತಿ ಶಿವಗುರು ಆಗಿದ್ದಾರೆ, ತ್ರಿಮೂರ್ತಿ ಶಬ್ಧವನ್ನು ಬರೆಯದಿದ್ದರೆ ಪರಮಾತ್ಮನಂತೂ ನಿರಾಕಾರನಾಗಿದ್ದಾರೆ, ಅವರು ಹೇಗೆ ಶಿಕ್ಷಕರಾಗಲು ಸಾಧ್ಯ ಎಂದು ತಿಳಿಯುತ್ತಾರೆ. ಏಕೆಂದರೆ ಜ್ಞಾನವಂತೂ ಇಲ್ಲ ಅಲ್ಲವೆ. ಲಕ್ಷ್ಮೀ-ನಾರಾಯಣರ ಚಿತ್ರವನ್ನು ತಗಡಿನ ಮೇಲೆ ಮಾಡಿಸಿ ಪ್ರತಿಯೊಂದು ಸ್ಥಾನಗಳಲ್ಲಿ ಇಡಬೇಕು. ಇದನ್ನು ಬರೆಯಿರಿ - ಇಂತಹ ರಾಜ್ಯವು ಸ್ಥಾಪನೆಯಾಗುತ್ತಿದೆ, ತಂದೆಯು ಬ್ರಹ್ಮಾರವರ ಮೂಲಕ ಬಂದಿದ್ದಾರೆ. ಒಂದು ಧರ್ಮದ ಸ್ಥಾಪನೆ ಉಳಿದೆಲ್ಲದರ ವಿನಾಶ ಮಾಡಿಸುತ್ತಾರೆ, ಇದು ಮಕ್ಕಳಿಗೆ ಸದಾ ನಶೆಯಿರಬೇಕು. ಚಿಕ್ಕ-ಚಿಕ್ಕ ಮಾತಿನಲ್ಲಿ ಹೊಂದಾಣಿಕೆಯಾಗಲಿಲ್ಲವೆಂದರೆ ತಕ್ಷಣ ಮುನಿಸಿಕೊಳ್ಳುತ್ತಾರೆ. ಇದಂತೂ ಆಗಿಯೇ ಆಗುತ್ತದೆ. ಕೆಲಕೆಲವರು ಕೆಲವೊಂದು ಕಡೆಯಿದ್ದಾರೆ ಆದ್ದರಿಂದ ಮೆಜಾರಿಟಿಯಿರುವವರನ್ನು ಏಳಿಸಲಾಗುತ್ತದೆ, ಇದರಲ್ಲಿ ಬೇಸರವಾಗುವ ಮಾತಿಲ್ಲ. ನಮ್ಮ ಮಾತನ್ನು ಒಪ್ಪಲಿಲ್ಲವೆಂದು ಮಕ್ಕಳು ಮುನಿಸಿಕೊಳ್ಳುತ್ತಾರೆ. ಅರೆ! ಇದರಲ್ಲಿ ಮುನಿಸಿಕೊಳ್ಳುವ ಮಾತೇನಿದೆ! ತಂದೆಯಂತೂ ಎಲ್ಲರನ್ನೂ ಖುಷಿ ಪಡಿಸುವವರಾಗಿದ್ದಾರೆ. ಮಾಯೆಯು ಎಲ್ಲರನ್ನೂ ಮುನಿಸಿಕೊಳ್ಳುವಂತೆ ಮಾಡಿದೆ. ತಂದೆಯೊಂದಿಗೆ ಎಲ್ಲರೂ ಮುನಿಸಿಕೊಳ್ಳುವುದೇನು, ಆ ತಂದೆಯನ್ನೇ ಅರಿತುಕೊಂಡಿಲ್ಲ. ಯಾವ ತಂದೆಯು ಸ್ವರ್ಗದ ರಾಜ್ಯಭಾಗ್ಯವನ್ನು ಕೊಟ್ಟರು, ಅವರನ್ನೇ ಅರಿತುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಉಪಕಾರ ಮಾಡುತ್ತೇನೆ ಆದ್ದರಿಂದ ನೀವು ನನಗೆ ಅಪಕಾರ ಮಾಡುತ್ತೀರಿ. ಭಾರತದ ಸ್ಥಿತಿ ನೋಡಿ ಹೇಗಿದೆ! ನಿಮ್ಮಲ್ಲಿಯೂ ಕೆಲವರಿದ್ದಾರೆ ಯಾರಿಗೆ ನಶೆಯಿರುತ್ತದೆ. ಇದು ನಾರಾಯಣೀ ನಶೆಯಾಗಿದೆ. ನಾವಂತೂ ರಾಮ-ಸೀತೆಯಾಗುತ್ತೇವೆಂದು ಹೇಳುವುದಲ್ಲ, ನರನಿಂದ ನಾರಾಯಣನಾಗುವುದು ನಿಮ್ಮ ಲಕ್ಷ್ಯ ಆಗಿದೆ. ಆದರೆ ನೀವು ರಾಮ-ಸೀತೆಯರಾಗುವುದರಲ್ಲಿ ಖುಷಿಯಾಗಿ ಬಿಡುತ್ತೀರಿ, ಸಾಹಸವನ್ನು ತೋರಿಸಬೇಕಲ್ಲವೆ. ಹಳೆಯ ಪ್ರಪಂಚದೊಂದಿಗೆ ಮನಸ್ಸನ್ನಿಡಲೇಬಾರದು. ಯಾರೊಂದಿಗಾದರೂ ಮನಸ್ಸನ್ನಿಟ್ಟರೆ ಸತ್ತರೆಂದರ್ಥ. ಜನ್ಮ-ಜನ್ಮಾಂತರಕ್ಕಾಗಿ ನಷ್ಟವಾಗಿ ಬಿಡುವುದು. ತಂದೆಯಿಂದ ಸ್ವರ್ಗದ ಸುಖವು ಸಿಗುತ್ತದೆ, ಮತ್ತೇಕೆ ನಾವು ನರಕದಲ್ಲಿದ್ದೇವೆ? ತಂದೆಯು ತಿಳಿಸುತ್ತಾರೆ - ನೀವು ಸ್ವರ್ಗದಲ್ಲಿದ್ದಾಗ ಮತ್ತ್ಯಾವುದೇ ಧರ್ಮವಿರಲಿಲ್ಲ. ಈಗ ಡ್ರಾಮಾನುಸಾರ ನಿಮ್ಮ ಧರ್ಮವೇ ಇಲ್ಲ. ಯಾರು ತಮ್ಮನ್ನು ದೇವತಾ ಧರ್ಮದವರೆಂದು ತಿಳಿದುಕೊಳ್ಳುವುದಿಲ್ಲ. ಮನುಷ್ಯರಾಗಿಯೂ ತಮ್ಮ ಧರ್ಮವನ್ನು ತಿಳಿದುಕೊಂಡಿಲ್ಲವೆಂದರೆ ಏನು ಹೇಳುವುದು? ಹಿಂದೂ ಎನ್ನುವುದು ಒಂದು ಧರ್ಮವೇ! ಯಾರು ಸ್ಥಾಪನೆ ಮಾಡಿದರೆಂಬುದೂ ಸಹ ತಿಳಿದಿಲ್ಲ. ಮಕ್ಕಳಿಗೆ ಎಷ್ಟೊಂದು ತಿಳಿಸಿಕೊಡುತ್ತೇನೆ. ನಾನು ಕಾಲರ ಕಾಲ ಮಹಾಕಾಲನು ಎಲ್ಲರನ್ನೂ ಮರಳಿ ಕರೆದುಕೊಂಡು ಹೋಗಲು ಬಂದಿದ್ದೇನೆ. ಆದರೆ ಯಾರು ಚೆನ್ನಾಗಿ ಓದುವರೋ ಅವರು ವಿಶ್ವದ ಮಾಲೀಕರಾಗುತ್ತಾರೆ ಆದ್ದರಿಂದ ಈಗ ಮನೆಗೆ ನಡೆಯಿರಿ. ಈ ಪ್ರಪಂಚದಲ್ಲಿ ಇರಲು ಯೋಗ್ಯವಿಲ್ಲ. ಆಸುರೀ ಮತದಂತೆ ನಡೆದು ಬಹಳ ಕೊಳಕು ಪ್ರಪಂಚವನ್ನಾಗಿ ಮಾಡಿ ಬಿಟ್ಟಿದ್ದಾರೆ. ತಂದೆಯು ಹೀಗೆಯೇ ಹೇಳುತ್ತಾರಲ್ಲವೆ. ನೀವು ಭಾರತವಾಸಿಗಳು ಯಾರು ವಿಶ್ವದ ಮಾಲೀಕರಾಗಿದ್ದಿರಿ, ಈಗ ಎಷ್ಟೊಂದು ಅಲೆದಾಡುತ್ತಿರುತ್ತೀರಿ, ನಾಚಿಕೆಯಾಗುವುದಿಲ್ಲವೆ? ನಿಮ್ಮಲ್ಲಿಯೂ ಕೆಲವರಿದ್ದಾರೆ, ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ನಂಬರ್ವಾರಂತೂ ಇದ್ದಾರಲ್ಲವೆ. ಬಹಳ ಮಕ್ಕಳು ನಿದ್ರೆಯಲ್ಲಿರುತ್ತಾರೆ, ಆ ಖುಷಿಯ ನಶೆಯೇರುವುದೇ ಇಲ್ಲ. ತಂದೆಯು ನಮಗೆ ಪುನಃ ರಾಜಧಾನಿಯನ್ನು ಕೊಡುತ್ತಾರೆ. ತಿಳಿಸುತ್ತಾರೆ - ನಾನು ಈ ಸಾಧು-ಸಂತ ಮೊದಲಾದವರ ಉದ್ಧಾರವನ್ನೂ ಮಾಡುತ್ತೇನೆ. ಅವರು ತನಗಾಗಲಿ, ಅನ್ಯರಿಗಾಗಲಿ ಮುಕ್ತಿಯನ್ನು ಕೊಡಲು ಸಾಧ್ಯವಿಲ್ಲ. ಸತ್ಯವಾದ ಗುರುವಂತೂ ಒಬ್ಬರೇ ಸದ್ಗುರುವಾಗಿದ್ದಾರೆ. ಅವರು ಸಂಗಮದಲ್ಲಿ ಬಂದು ಎಲ್ಲರ ಸದ್ಗತಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪದ ಸಂಗಮಯುಗ-ಯುಗದಲ್ಲಿ ಬರುತ್ತೇನೆ, ಯಾವಾಗ ನಾನು ಇಡೀ ಪ್ರಪಂಚವನ್ನು ಪಾವನ ಮಾಡಬೇಕಾಗುತ್ತದೆ. ಮನುಷ್ಯರು ತಿಳಿಯುತ್ತಾರೆ, ತಂದೆಯು ಸರ್ವಶಕ್ತಿವಂತನಾಗಿದ್ದಾರೆ ಅಂದಮೇಲೆ ಅವರೇನು ತಾನೆ ಮಾಡಲು ಸಾಧ್ಯವಿಲ್ಲ! ಅರೆ! ನಾವು ಪತಿತರನ್ನು ಪಾವನ ಮಾಡಿ ಎಂದು ಕರೆಯುತ್ತೀರಿ. ಆದ್ದರಿಂದ ನಾನು ಬಂದು ಪಾವನರನ್ನಾಗಿ ಮಾಡುತ್ತೇನೆ, ಮತ್ತೆ ಇನ್ನೇನು ಮಾಡುವೆನು? ಉಳಿದಂತೆ ರಿದ್ಧಿ-ಸಿದ್ಧಿಯವರು ಅನೇಕರಿದ್ದಾರೆ, ನನ್ನ ಕರ್ತವ್ಯವೇ ಆಗಿದೆ - ನರಕವನ್ನು ಸ್ವರ್ಗವನ್ನಾಗಿ ಮಾಡುವುದು. ಇದು ಪ್ರತೀ 5000 ವರ್ಷಗಳ ನಂತರ ಆಗಿದೆ, ನೀವೇ ಇದನ್ನು ತಿಳಿದುಕೊಂಡಿದ್ದೀರಿ. ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ ಉಳಿದೆಲ್ಲರೂ ಕೊನೆಯಲ್ಲಿ ಬಂದಿದ್ದಾರೆ. ಅರವಿಂದ ಘೋಷರಂತೂ ಈಗೀಗ ಬಂದರು, ಆದರೂ ಸಹ ಅವರ ಆಶ್ರಮಗಳು ಎಷ್ಟೊಂದಾಗಿ ಬಿಟ್ಟಿದೆ! ಅಲ್ಲಿ ಯಾವುದೇ ನಿರ್ವಿಕಾರಿಗಳಾಗುವ ಮಾತಿಲ್ಲ ಏಕೆಂದರೆ ಗೃಹಸ್ಥ ವ್ಯವಹಾರದಲ್ಲಿದ್ದು ಪವಿತ್ರವಾಗಿರಲು ಸಾಧ್ಯವಿಲ್ಲವೆಂದು ಅವರು ತಿಳಿಯುತ್ತಾರೆ. ಇಲ್ಲಿ ತಂದೆಯು ತಿಳಿಸುತ್ತಾರೆ – ಗೃಹಸ್ಥ ವ್ಯವಹಾರದಲ್ಲಿರುತ್ತಾ ಕೇವಲ ಒಂದು ಜನ್ಮ ಪವಿತ್ರರಾಗಿರಿ. ನೀವು ಜನ್ಮ-ಜನ್ಮಾಂತರವಂತೂ ಪತಿತರಾಗಿದ್ದಿರಿ, ನಾನೀಗ ನಿಮ್ಮನ್ನು ಪಾವನರನ್ನಾಗಿ ಮಾಡಲು ಬಂದಿದ್ದೇನೆ. ಈ ಅಂತಿಮ ಜನ್ಮದಲ್ಲಿ ಪಾವನರಾಗಿ ಸತ್ಯ-ತ್ರೇತಾಯುಗದಲ್ಲಂತೂ ವಿಕಾರವಿರುವುದೇ ಇಲ್ಲ.

ಈ ಲಕ್ಷ್ಮೀ-ನಾರಾಯಣರ ಚಿತ್ರ ಮತ್ತು ಏಣಿಯ ಚಿತ್ರವು ಬಹಳ ಚೆನ್ನಾಗಿದೆ. ಸತ್ಯಯುಗದಲ್ಲಿ ಒಂದು ಧರ್ಮ, ಒಂದು ರಾಜ್ಯವಿತ್ತೆಂದು ಇದರಲ್ಲಿ ಬರೆಯಲಾಗಿದೆ. ಇದನ್ನು ತಿಳಿಸುವುದಕ್ಕೂ ಬಹಳ ಯುಕ್ತಿಯಿರಬೇಕು. ಪ್ರದರ್ಶನಿಯಲ್ಲಿ ತಿಳಿಸಿಕೊಡಲು ವೃದ್ಧ ಮಾತೆಯರಿಗೂ ಸಹ ಕಲಿಸಿ ಅವರನ್ನು ತಯಾರು ಮಾಡಬೇಕು. ಯಾರಿಗಾದರೂ ಈ ಚಿತ್ರವನ್ನು ತೋರಿಸಿ, ತಿಳಿಸಿ - ಇವರ ರಾಜ್ಯವಿತ್ತು, ಈಗಂತೂ ಇಲ್ಲ. ತಂದೆಯು ತಿಳಿಸುತ್ತಾರೆ, ಈಗ ನೀವು ನನ್ನನ್ನು ನೆನಪು ಮಾಡಿರಿ, ಇದರಿಂದ ಪಾವನರಾಗಿ ಪಾವನ ಪ್ರಪಂಚದಲ್ಲಿ ಹೋಗುತ್ತೀರಿ. ಈಗ ಪಾವನ ಪ್ರಪಂಚವು ಸ್ಥಾಪನೆಯಾಗುತ್ತಿದೆ. ಎಷ್ಟು ಸಹಜವಾಗಿದೆ! ವೃದ್ಧರು ಕುಳಿತು ಪ್ರದರ್ಶನಿಯಲ್ಲಿ ತಿಳಿಸಿದರೆ ಹೆಸರು ಎಷ್ಟು ಪ್ರಖ್ಯಾತವಾಗುವುದು! ಕೃಷ್ಣನ ಚಿತ್ರದಲ್ಲಿಯೂ ಎಷ್ಟು ಒಳ್ಳೆಯ ಬರವಣಿಗೆಯಿದೆ. ಯಾರೇ ಬರಲಿ ಈ ಬರವಣಿಗೆಯನ್ನು ಖಂಡಿತವಾಗಿ ಓದಿರಿ, ಇದನ್ನು ಓದುವುದರಿಂದಲೇ ನಿಮಗೆ ನಾರಾಯಣೀ ನಶೆ ಅಥವಾ ವಿಶ್ವದ ಮಾಲೀಕತ್ವದ ನಶೆಯೇರುವುದು ಎಂದು ತಿಳಿಸಿ.

ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಇಂತಹ ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತೇನೆ ಅಂದಮೇಲೆ ನೀವೂ ಸಹ ಅನ್ಯರ ಮೇಲೆ ದಯಾಹೃದಯಿಗಳಾಗಬೇಕು. ಯಾವಾಗ ಅನ್ಯರ ಕಲ್ಯಾಣ ಮಾಡುತ್ತೀರೋ ಆಗ ತಮ್ಮ ಕಲ್ಯಾಣ ಮಾಡಿಕೊಳ್ಳುತ್ತೀರಿ. ವೃದ್ಧ ಮಾತೆಯರಿಗೆ ಈ ರೀತಿ ಕಲಿಸಿ ಬುದ್ಧಿವಂತರನ್ನಾಗಿ ಮಾಡಿ. ಒಂದುವೇಳೆ ತಂದೆಯು 8-10 ಮಂದಿ ಮಾತೆಯರನ್ನು ಕಳುಹಿಸಿ ಎಂದು ಹೇಳಿದರೆ ತಕ್ಷಣ ಬಂದು ಬಿಡುವಂತಿರಲಿ. ಯಾರು ಮಾಡುವರೋ ಅವರು ಪಡೆಯುವರು. ಮುಂದಿರುವ ಲಕ್ಷ್ಯ ನೋಡಿದರೆ ಸಾಕು ಖುಷಿಯಾಗುತ್ತದೆ. ನಾವು ಈ ಶರೀರವನ್ನು ಬಿಟ್ಟು ಹೋಗಿ ವಿಶ್ವದ ಮಾಲೀಕರಾಗುತ್ತೇವೆ. ಎಷ್ಟು ನೆನಪಿನಲ್ಲಿರುತ್ತೀರೋ ಅಷ್ಟು ಪಾಪಗಳು ಕಳೆಯುತ್ತವೆ. ನೋಡಿ, ಪತ್ರದ ಮೇಲೂ ಸಹ ಮುದ್ರಿಸಲ್ಪಟ್ಟಿದೆ – ಒಂದು ಧರ್ಮ, ಒಂದು ಭಾಷೆ, ಒಂದು ರಾಜಧಾನಿಯು ಸದ್ಯದಲ್ಲಿಯೇ ಸ್ಥಾಪನೆಯಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಎಂದೂ ಪರಸ್ಪರ ಹಾಗೂ ತಂದೆಯೊಂದಿಗೆ ಮುನಿಸಿಕೊಳ್ಳಬಾರದು, ತಂದೆಯು ಖುಷಿ ಪಡಿಸಲು ಬಂದಿದ್ದಾರೆ ಆದ್ದರಿಂದ ಎಂದೂ ಬೇಸರವಾಗಬಾರದು. ತಂದೆಗೆ ಎಂದೂ ಎದುರಾಗಬಾರದು.

2. ಹಳೆಯ ಪ್ರಪಂಚದೊಂದಿಗೆ, ಹಳೆಯ ದೇಹದೊಂದಿಗೆ ಮನಸ್ಸನ್ನಿಡಬಾರದು. ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವಿನ ಜೊತೆಗೆ ಸತ್ಯವಂತರಾಗಿರಬೇಕು. ಸದಾ ಒಬ್ಬ ತಂದೆಯ ಶ್ರೀಮತದಂತೆ ನಡೆಯಬೇಕು. ದೇಹೀ-ಅಭಿಮಾನಿಗಳಾಗಬೇಕು.

ವರದಾನ:
ಆದಿ ರತ್ನದ ಸ್ಮೃತಿಯಿಂದ ತಮ್ಮ ಜೀವನದ ಮೂಲ್ಯ ತಿಳಿಯುವಂತಹ ಸದಾ ಸಮರ್ಥ ಭವ.

ಹೇಗೆ ಬ್ರಹ್ಮಾ ಆದಿ ದೇವ ಆಗಿದ್ದಾರೆ, ಅದೇ ರೀತಿ ಬ್ರಹ್ಮಾಕುಮಾರ, ಕುಮಾರಿಯರೂ ಸಹ ಆದಿ ರತ್ನವಾಗಿದ್ದಾರೆ. ಆದಿ ದೇವನ ಮಕ್ಕಳು ಮಾಸ್ಟರ್ ಆದಿ ದೇವ ಆಗಿದ್ದಾರೆ. ಆದಿ ರತ್ನ ಎಂದು ತಿಳಿಯುವುದರಿಂದಲೇ ತಮ್ಮ ಜೀವನದ ಮೂಲ್ಯವನ್ನು ತಿಳಿದುಕೊಳ್ಳಬಹುದು ಏಕೆಂದರೆ ಆದಿ ರತ್ನ ಅರ್ಥಾತ್ ಫ್ರಭುವಿನ ರತ್ನ, ಈಶ್ವರೀಯ ರತ್ನ - ಆದ್ದರಿಂದ ಎಷ್ಟು ಬೆಲೆ ಬಾಳುವಂತಾದಿರಿ. ಆದ್ದರಿಂದ ಸದಾ ತಮ್ಮನ್ನು ಆದಿ ದೇವನ ಮಕ್ಕಳು ಮಾಸ್ಟರ್ ಆದಿ ದೇವ, ಆದಿ ರತ್ನ ಎಂದು ತಿಳಿದು ಪ್ರತಿಯೊಂದು ಕಾರ್ಯ ಮಾಡಿದಾಗ ಸಮರ್ಥ ಭವದ ವರದಾನ ಸಿಗುವುದು. ಯಾವುದೂ ವ್ಯರ್ಥವಾಗಿ ಹೋಗಲು ಸಾಧ್ಯವಿಲ್ಲ.

ಸ್ಲೋಗನ್:
ಜ್ಞಾನಿ ಆತ್ಮ ಅವರೇ ಆಗಿದ್ದಾರೆ ಯಾರು ಮೋಸ ಹೋಗುವುದಕ್ಕೆ ಮೊದಲೇ ಪರಿಶೀಲಿಸಿ ಸ್ವಯಂನ್ನು ರಕ್ಷಿಸಿಕೊಳ್ಳುತ್ತಾರೆ.