27.09.20 Avyakt Bapdada
Kannada
Murli
27.03.86 Om Shanti Madhuban
ಸದಾ ಸ್ನೇಹಿಯಾಗಿರಿ
ಇಂದು ಸ್ನೇಹದ ಸಾಗರ
ತಂದೆಯು ತನ್ನ ಸ್ನೇಹಿ ಮಕ್ಕಳೊಂದಿಗೆ ಮಿಲನವಾಗಲು ಬಂದಿದ್ದಾರೆ. ಈ ಆತ್ಮಿಕ ಸ್ನೇಹವು ಪ್ರತಿಯೊಂದು
ಮಗುವನ್ನು ಸಹಜಯೋಗಿಯನ್ನಾಗಿ ಮಾಡಿ ಬಿಡುತ್ತದೆ. ಈ ಸ್ನೇಹವು ಸಹಜವಾಗಿ ಹಳೆಯ ಪ್ರಪಂಚವೆಲ್ಲವನ್ನೂ
ಮರೆಸುವ ಸಾಧನವಾಗಿದೆ. ಇದೊಂದೇ ಸ್ನೇಹವು ಪ್ರತಿಯೊಂದು ಆತ್ಮನನ್ನು ತಂದೆಯ ಮಗುವನ್ನಾಗಿ
ಮಾಡುವುದರಲ್ಲಿ ಶಕ್ತಿಶಾಲಿಯಾದ ಸಾಧನವಾಗಿದೆ. ಸ್ನೇಹವು ಬ್ರಾಹ್ಮಣ ಜೀವನದ ಫೌಂಡೇಷನ್ ಆಗಿದೆ.
ಸ್ನೇಹವು ಶಕ್ತಿಶಾಲಿ ಜೀವನವನ್ನಾಗಿ ತಯಾರು ಮಾಡುವ, ಪಾಲನೆಯ ಆಧಾರವಾಗಿದೆ. ಯಾರೆಲ್ಲಾ
ಶ್ರೇಷ್ಠಾತ್ಮರು ತಂದೆಯ ಬಳಿ ಸನ್ಮುಖದಲ್ಲಿ ತಲುಪಿದ್ದಾರೆ, ಅವರೆಲ್ಲರೂ ತಲುಪಿರುವುದಕ್ಕೆ ಆಧಾರ
ಸ್ನೇಹವಾಗಿದೆ. ಸ್ನೇಹದ ರೆಕ್ಕೆಗಳಿಂದ ಹಾರಿಕೊಂಡು ಬಂದು ಮಧುಬನ ನಿವಾಸಿಯಾಗಿದ್ದಾರೆ.
ಬಾಪ್ದಾದಾರವರು ಸರ್ವ ಸ್ನೇಹಿ ಮಕ್ಕಳನ್ನು ನೋಡುತ್ತಿದ್ದರು - ಸ್ನೇಹಿಯಂತು ಎಲ್ಲಾ ಮಕ್ಕಳು
ಆಗಿದ್ದಾರೆ ಆದರೆ ಅಂತರವೇನಿದೆ! ನಂಬರ್ವಾರ್ ಏಕೆ ಆಗುವರು, ಅದರ ಕಾರಣವೇನು? ಸ್ನೇಹಿಯಂತು ಎಲ್ಲರೂ
ಆಗಿದ್ದಾರೆ. ಆದರೆ ಕೆಲವರು ಸದಾ ಸ್ನೇಹಿ ಮತ್ತೆ ಕೆಲವರು ಸ್ನೇಹಿಗಳಾಗಿದ್ದಾರೆ. ಮತ್ತು ಮೂರನೆಯವರು
ಸಮಯದನುಸಾರ ಸ್ನೇಹವನ್ನು ನಿಭಾಯಿಸುವವರು. ಬಾಪ್ದಾದಾರವರು ಮೂರು ಪ್ರಕಾರದ ಸ್ನೇಹಿಯನ್ನು ನೋಡಿದರು.
ಯಾರು ಸದಾ ಸ್ನೇಹಿಯಾಗಿದ್ದಾರೆಯೋ, ಅವರು ಲವಲೀನರಾಗುವ ಕಾರಣದಿಂದ ಸದಾ ಪರಿಶ್ರಮ ಮತ್ತು
ಕಷ್ಟಗಳಿಂದ ಮೇಲಿರುತ್ತಾರೆ. ಪರಿಶ್ರಮವನ್ನೂ ಪಡಬೇಕಾಗುವುದಿಲ್ಲ, ಕಷ್ಟದ ಅನುಭವವೂ ಆಗುವುದಿಲ್ಲ
ಏಕೆಂದರೆ ಸದಾ ಸ್ನೇಹಿಯಾಗಿರುವ ಕಾರಣದಿಂದ, ಅವರ ಮುಂದೆ ಪ್ರಕೃತಿ ಹಾಗೂ ಮಾಯೆ, ಎರಡೂ ಸಹ
ಈಗಿನಿಂದಲೇ ದಾಸಿಯಾಗಿ ಬಿಡುತ್ತದೆ ಅಂದರೆ ಸದಾ ಸ್ನೇಹಿ ಆತ್ಮನು ಮಾಲೀಕನಾಗಿ ಬಿಡುವನು. ಆದ್ದರಿಂದ
ಪ್ರಕೃತಿ, ಮಾಯೆಯು ಸ್ವತಹವಾಗಿಯೇ ದಾಸಿಯ ರೂಪವಾಗಿ ಬಿಡುತ್ತದೆ. ಸದಾ ಸ್ನೇಹಿಯ ಸಮಯ ಅಥವಾ
ಸಂಕಲ್ಪವನ್ನು ತನ್ನ ಕಡೆಗೆ ಸೆಳೆಯಲು ಪ್ರಕೃತಿ ಹಾಗೂ ಮಾಯೆಗೆ ಸಾಹಸವಿಲ್ಲ. ಸದಾ ಸ್ನೇಹಿ ಆತ್ಮರ
ಪ್ರತೀ ಸಮಯ, ಪ್ರತೀ ಸಂಕಲ್ಪವಿರುವುದೇ ತಂದೆಯ ನೆನಪು ಮತ್ತು ಸೇವೆಗಾಗಿ. ಆದ್ದರಿಂದ ಪ್ರಕೃತಿ
ಮತ್ತು ಮಾಯೆಯೂ ತಿಳಿದುಕೊಂಡಿದೆ - ಸದಾ ಸ್ನೇಹಿ ಮಕ್ಕಳು ಸಂಕಲ್ಪದಿಂದಲೂ ಸಹ ನನ್ನ ಅಧೀನರಾಗಲು
ಸಾಧ್ಯವಿಲ್ಲ. ಸರ್ವ ಶಕ್ತಿಗಳ ಅಧಿಕಾರಿ ಆತ್ಮರಾಗಿದ್ದಾರೆ. ಸದಾ ಸ್ನೇಹಿ ಆತ್ಮನ ಸ್ಥಿತಿಯದೇ
ಗಾಯನವಿದೆ - ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ. ತಂದೆಯೇ ಸಂಸಾರವಾಗಿದ್ದಾರೆ.
ಎರಡನೆಯ ನಂಬರ್- ಸ್ನೇಹಿ ಆತ್ಮರು, ಅವಶ್ಯವಾಗಿ ಸ್ನೇಹದಲ್ಲಿರುತ್ತಾರೆ ಆದರೆ ಸದಾ ಇಲ್ಲದಿರುವ
ಕಾರಣದಿಂದ, ಸ್ನೇಹವು ಕೆಲವೊಮ್ಮೆ ಮನಸ್ಸಿನ ಸಂಕಲ್ಪದಿಂದಲೂ ಬೇರೆ ಕಡೆಗೆ ಹೋಗುತ್ತದೆ. ಸ್ವಯಂನ್ನು
ಮಧ್ಯ-ಮಧ್ಯದಲ್ಲಿ ಬಹಳ ಸ್ವಲ್ಪವೇ ಪರಿವರ್ತನೆ ಮಾಡಿಕೊಳ್ಳುವ ಕಾರಣ ಕೆಲವೊಮ್ಮೆ ಪರಿಶ್ರಮದ,
ಕೆಲವೊಮ್ಮೆ ಕಷ್ಟದ ಅನುಭವವನ್ನು ಮಾಡುತ್ತಾರೆ. ಆದರೆ ಬಹಳ ಸ್ವಲ್ಪ. ಯಾವಾಗ ಪ್ರಕೃತಿ ಅಥವಾ ಮಾಯೆಯ
ಯಾವುದೇ ಸೂಕ್ಷ್ಮ ಯುದ್ಧ ಆಗುತ್ತದೆಯೆಂದರೆ, ಅದೇ ಸಮಯದಲ್ಲಿ ಸ್ನೇಹವಿರುವ ಕಾರಣ ನೆನಪು ಬೇಗನೆ
ಬಂದು ಬಿಡುತ್ತದೆ ಮತ್ತು ನೆನಪಿನ ಶಕ್ತಿಯಿಂದ ತನ್ನನ್ನು ಬಹಳ ಬೇಗನೆ ಪರಿವರ್ತನೆಯನ್ನೂ ಮಾಡಿಕೊಂಡು
ಬಿಡುತ್ತಾರೆ. ಆದರೆ ಸ್ವಲ್ಪ ಸಮಯ ಮತ್ತೆ ನಂತರದಲ್ಲಿ ಸಂಕಲ್ಪವು ಕಷ್ಟ ಅಥವಾ ಪರಿಶ್ರಮದಲ್ಲಿ ತೊಡಗಿ
ಬಿಡುತ್ತದೆ. ಕೆಲವೊಮ್ಮೆ ಸ್ನೇಹವು ಸಾಧಾರಣವಾಗಿ ಬಿಡುತ್ತದೆ. ಕೆಲವೊಮ್ಮೆ ಸ್ನೇಹದಲ್ಲಿ
ಲವಲೀನರಾಗಿರುತ್ತಾರೆ - ಸ್ಥಿತಿಯಲ್ಲಿ ಅಂತರವಾಗಿ ಬಿಡುತ್ತದೆ. ಆದರೆ ಸದಾ ಸ್ನೇಹಿಯಾಗಿರದ
ಕಾರಣದಿಂದ ಸೆಕೆಂಡ್ ನಂಬರ್ ಆಗಿ ಬಿಡುತ್ತಾರೆ.
ಮೂರನೆಯವರು - ಸಮಯ ಪ್ರಮಾಣ ಸ್ನೇಹವನ್ನು ನಿಭಾಯಿಸುವವರು. ಇಂತಹ ಆತ್ಮರು ತಿಳಿದುಕೊಳ್ಳುತ್ತಾರೆ -
ಸತ್ಯ ಸ್ನೇಹವು ತಂದೆಯಿಂದಲ್ಲದೆ ಮತ್ತ್ಯಾರಿಂದಲೂ ಸಿಗಲು ಸಾಧ್ಯವಿಲ್ಲ. ಮತ್ತು ಇದೇ ಆತ್ಮಿಕ
ಸ್ನೇಹವು ಸದಾಕಾಲಕ್ಕಾಗಿ ಶ್ರೇಷ್ಠರನ್ನಾಗಿ ಮಾಡುತ್ತದೆ. ಜ್ಞಾನವೆಂದರೆ ತಿಳುವಳಿಕೆಯು
ಸಂಪೂರ್ಣವಾಗಿ ಇದೆ ಮತ್ತು ಇದೇ ಸ್ನೇಹಿ ಜೀವನವು ಪ್ರಿಯವೆನಿಸುತ್ತದೆ. ಆದರೆ ಅವರಲ್ಲಿ ತನ್ನ ದೇಹದ
ಸೆಳೆತದ ಸಂಸ್ಕಾರ ಅಥವಾ ಯಾವುದೇ ವಿಶೇಷ ಹಳೆಯ ಸಂಸ್ಕಾರ ಅಥವಾ ಯಾವುದೇ ವ್ಯಕ್ತಿ ಅಥವ ವಸ್ತುವಿನ
ಸಂಸ್ಕಾರ ಅಥವ ವ್ಯರ್ಥಸಂಕಲ್ಪಗಳ ಸಂಸ್ಕಾರಕ್ಕೆ ವಶರಾಗಿ, ಅದರ ನಿಯಂತ್ರಣ ಮಾಡುವ
ಶಕ್ತಿಯಿಲ್ಲದಿರುವ ಕಾರಣದಿಂದ ವ್ಯರ್ಥ ಸಂಕಲ್ಪಗಳ ಹೊರೆಯಿದೆ. ಅಥವಾ ಸಂಘಟನೆಯ ಶಕ್ತಿಯ
ಕೊರೆತೆಯಿರುವ ಕಾರಣದಿಂದ ಸಂಘಟನೆಯಲ್ಲಿ ಸಫಲರಾಗಲು ಸಾಧ್ಯವಿಲ್ಲ. ಸಂಘಟನೆಯ ಪರಿಸ್ಥಿತಿಯು
ಸ್ನೇಹವನ್ನು ಸಮಾಪ್ತಿಗೊಳಿಸಿ ತನ್ನ ಕಡೆಗೆ ಸೆಳೆದು ಬಿಡುತ್ತದೆ. ಮತ್ತೆ ಕೆಲವರು ಸದಾಕಾಲವೂ ಬೇಗನೆ
ಹೃದಯ ವಿಧೀರ್ಣರಾಗುತ್ತಾರೆ. ಈಗೀಗ ಬಹಳ ಚೆನ್ನಾಗಿ ಹಾರುತ್ತಿರುತ್ತಾರೆ ಮತ್ತೆ ಈಗೀಗ ನೋಡಿದರೆ,
ತನ್ನೊಂದಿಗೆ ತಾನೇ ಬೇಸರವಾಗುತ್ತಾರೆ. ಸ್ವಯಂನೊಂದಿಗೆ ಬೇಸರವಾಗುವ ಈ ಸಂಸ್ಕಾರವೂ ಸಹ ಸದಾ
ಸ್ನೇಹಿಯನ್ನಾಗಲು ಬಿಡುವುದಿಲ್ಲ. ಯಾವುದಾದರೊಂದು ಪ್ರಕಾರದ ಸಂಸ್ಕಾರವು ಪರಿಸ್ಥಿತಿಯ ಕಡೆಗೆ,
ಪ್ರಕೃತಿಯ ಕಡೆಗೆ ಆಕರ್ಷಣೆ ಮಾಡಿ ಬಿಡುತ್ತದೆ. ಮತ್ತೆ ಯಾವಾಗ ಏರುಪೇರಿನಲ್ಲಿ ಬರುತ್ತಾರೆಂದರೆ,
ಸ್ನೇಹದ ಅನುಭವವಿರುವ ಕಾರಣದಿಂದ, ಸ್ನೇಹಿ ಜೀವನವು ಪ್ರಿಯವಾಗುವ ಕಾರಣ ತಂದೆಯ ನೆನಪು ಬರುತ್ತದೆ.
ಈಗ ಪುನಃ ತಂದೆಯ ಸ್ನೇಹದಲ್ಲಿ ಸಮಾವೇಶವಾಗಿ ಬಿಡೋಣ ಎಂದು ಪ್ರಯತ್ನ ಪಡುತ್ತಾರೆ. ಆಗ ಸಮಯ ಪ್ರಮಾಣ,
ಪರಿಸ್ಥಿತಿ ಅನುಸಾರವಾಗಿ ಏರುಪೇರಿನಲ್ಲಿ ಬರುವ ಕಾರಣ ಕೆಲವೊಮ್ಮೆ ನೆನಪು ಮಾಡುತ್ತಾರೆ, ಕೆಲವೊಮ್ಮೆ
ಯುದ್ಧ ಮಾಡುತ್ತಾರೆ. ಯುದ್ಧ ಮಾಡುವ ಜೀವನವು ಹೆಚ್ಚಾಗಿರುತ್ತದೆ, ಈ ಅಂತರದಲ್ಲಿ ಸ್ನೇಹದಲ್ಲಿ
ಸಮಾವೇಶವಾಗುವ ಜೀವನ ಕಡಿಮೆಯಾಗುತ್ತದೆ, ಆದ್ದರಿಂದ ಮೂರನೇ ನಂಬರಿನವರಾಗುತ್ತಾರೆ. ಆದರೂ ವಿಶ್ವದ
ಸರ್ವಾತ್ಮರುಗಳಿಗಿಂತ ಮೂರನೇ ನಂಬರಿನವರೂ ಸಹ ಅತಿ ಶ್ರೇಷ್ಠರೆಂದೇ ಹೇಳುತ್ತೇವೆ ಏಕೆಂದರೆ
ತಂದೆಯನ್ನು ಗುರುತಿಸಿದರು, ತಂದೆಯವರಾದರು, ಬ್ರಾಹ್ಮಣ ಪರಿವಾರದವರಾದರು. ಶ್ರೇಷ್ಠಾತಿ ಶ್ರೇಷ್ಠ
ಬ್ರಾಹ್ಮಣ ಆತ್ಮರು ಬ್ರಹ್ಮಾಕುಮಾರ, ಬ್ರಹ್ಮಾಕುಮಾರಿಯೆಂದು ಕರೆಸಿಕೊಳ್ಳುತ್ತಾರೆ ಆದ್ದರಿಂದ
ಪ್ರಪಂಚದವರ ಅಂತರದಲ್ಲಿ, ಅವರೂ ಸಹ ಶ್ರೇಷ್ಠಾತ್ಮರಾಗಿದ್ದಾರೆ. ಆದರೆ ಸಂಪೂರ್ಣತೆಯ ಅಂತರದಲ್ಲಿ
ಮೂರನೆಯ ನಂಬರಿನವರಾಗಿದ್ದಾರೆ. ಹಾಗಾದರೆ ಎಲ್ಲರೂ ಸ್ನೇಹಿಯಾಗಿದ್ದಾರೆ ಆದರೆ ನಂಬರ್ವಾರ್.
ನಂಬರ್ವನ್ ಸದಾ ಸ್ನೇಹಿ ಆತ್ಮರು ಸದಾ ಕಮಲಪುಷ್ಪ ಸಮಾನ ಭಿನ್ನ ಹಾಗೂ ತಂದೆಯ ಅತಿ ಪ್ರಿಯರಾಗಿದ್ದಾರೆ.
ಸ್ನೇಹಿ ಆತ್ಮರು ಭಿನ್ನರೂ ಇದ್ದಾರೆ, ಪ್ರಿಯರೂ ಆಗಿದ್ದಾರೆ ಆದರೆ ತಂದೆಯ ಸಮಾನ ಶಕ್ತಿಶಾಲಿ
ವಿಜಯಿಗಳಲ್ಲ. ಲವಲೀನರಾಗಿರುವುದಿಲ್ಲ ಆದರೆ ಸ್ನೇಹಿಯಾಗಿದ್ದಾರೆ. ಅವರ ವಿಶೇಷ ಸ್ಲೋಗನ್ ಇದೇ ಆಗಿದೆ
- ನಿನ್ನವರಾಗಿದ್ದೇವೆ, ನಿಮ್ಮವರಾಗಿ ಇರುತ್ತೇವೆ. ಸದಾ ಇದೇ ಹಾಡನ್ನಾಡುತ್ತಾರೆ, ಆದರೂ ಸ್ನೇಹವಿದೆ.
ಆದ್ದರಿಂದ 80% ಸುರಕ್ಷಿತವಾಗಿರುತ್ತಾರೆ. ಆದರೆ ಪುನಃ ಕೆಲವೊಮ್ಮೆ ಎಂಬ ಶಬ್ಧವು ಬಂದು ಬಿಡುತ್ತದೆ,
ಸದಾ ಶಬ್ಧವು ಬರುವುದಿಲ್ಲ. ಮತ್ತು ಮೂರನೇ ನಂಬರಿನ ಆತ್ಮರು ಸೇಹವಿರುವ ಕಾರಣದಿಂದ ಈಗಿನಿಂದ ಹೀಗಾಗ
ಬೇಕು ಅಷ್ಟೇ ಮತ್ತೆ-ಮತ್ತೆ ಪ್ರತಿಜ್ಞೆಗಳನ್ನೂ ಮಾಡುತ್ತಿರುತ್ತಾರೆ. ಈಗಿನಿಂದ ಇದನ್ನು
ಮಾಡುತ್ತೇವೆ, ಈಗಿನಿಂದ ಹೀಗಾಗಬೇಕು ಎನ್ನುತ್ತಾರೆ ಏಕೆಂದರೆ ಅಂತರವಂತು ಗೊತ್ತಿದೆಯಲ್ಲವೆ.
ಪ್ರತಿಜ್ಞೆಯನ್ನೂ ಮಾಡುತ್ತಾ, ಪುರುಷಾರ್ಥವನ್ನೂ ಮಾಡುತ್ತಾರೆ ಆದರೆ ವಿಶೇಷ ಹಳೆಯ ಯಾವುದೋ ಒಂದು
ಸಂಸ್ಕಾರವು ಲಗನ್ನಿನಲ್ಲಿ ಮಗ್ನರಾಗಲು ಬಿಡುವುದಿಲ್ಲ. ವಿಘ್ನವು ಮಗ್ನಾವಸ್ಥೆಯಿಂದ ಕೆಳಗೆ
ತರುತ್ತದೆ. ಆದ್ದರಿಂದ ಸದಾ ಶಬ್ಧವು ಬರಲು ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ಹೇಗೋ, ಕೆಲವೊಮ್ಮೆ
ಹೇಗೋ ಆಗುವ ಕಾರಣದಿಂದ ಒಂದಲ್ಲ ಒಂದು ವಿಶೇಷ ಬಲಹೀನತೆಯು ಉಳಿದುಕೊಂಡು ಬಿಡುತ್ತದೆ. ಇಂತಹ ಆತ್ಮರು
ಬಾಪ್ದಾದಾರವರ ಮುಂದೆ ಬಹಳ ಮಧುರವಾಗಿ ಆತ್ಮಿಕ ವಾರ್ತಾಲಾಪ ಮಾಡುತ್ತಾರೆ. ಬಹಳ ಗೌರವ ತೋರಿಸುತ್ತಾರೆ.
ಮತ್ತೆ ಹೇಳುತ್ತಾರೆ - ಡೈರೆಕ್ಷನ್ ತಮ್ಮದೇ ಆಗಿದೆ ಆದರೆ ನಮ್ಮ ಕಡೆಯಿಂದ ತಾವೇ ಮಾಡಿರಿ ಮತ್ತು
ನಾವು ಪಡೆಯುವೆವು. ಯಾವಾಗ ತಾವು ತಮ್ಮವರನ್ನಾಗಿ ಮಾಡಿಕೊಂಡಿರೆಂದರೆ ತಾವೇ ತಿಳಿದಿದ್ದೀರಿ ಎಂದು
ಗೌರವದಿಂದ, ಸ್ನೇಹದಿಂದ ಹೇಳುತ್ತಾರೆ. ತಂದೆಯು ಹೇಳುತ್ತಾರೆ - ತಂದೆಯಂತು ತಿಳಿದಿದ್ದಾರೆ ಆದರೆ
ಮಕ್ಕಳು ಅದನ್ನು ಒಪ್ಪಿಕೊಂಡರೆ ಸರಿ. ಆದರೆ ಮಕ್ಕಳು ಗೌರವದಿಂದ ಇದನ್ನೇ ಹೇಳುತ್ತಾರೆ - ನಾವು
ಒಪ್ಪಲಿ, ಅಥವಾ ಇಲ್ಲ ಆದರೆ ತಾವಂತು ಒಪ್ಪಿಕೊಳ್ಳಬೇಕಾಗುತ್ತದೆ. ಆದರೂ ತಂದೆಗೆ ಮಕ್ಕಳ ಬಗ್ಗೆ
ಕರುಣೆ ಬರುತ್ತದೆ - ಇವರಂತು ಬ್ರಾಹ್ಮಣ ಮಕ್ಕಳು ಆದ್ದರಿಂದ ಸ್ವಯಂ ಸಹ ನಿಮಿತ್ತರಾಗಿರುವ ಆತ್ಮರ
ಮೂಲಕ ವಿಶೇಷ ಶಕ್ತಿಯನ್ನು ಕೊಡುತ್ತಾರೆ. ಆದರೆ ಕೆಲವರು ಶಕ್ತಿಯನ್ನು ತೆಗೆದುಕೊಂಡು
ಪರಿವರ್ತನೆಯಾಗುತ್ತಾರೆ ಮತ್ತು ಕೆಲವರು ಶಕ್ತಿಯು ಸಿಗುತ್ತಿದ್ದಂತೆಯೇ ತನ್ನ ಸಂಸ್ಕಾರಗಳಲ್ಲಿ
ಮಸ್ತರಾಗಿರುವ ಕಾರಣದಿಂದ, ಶಕ್ತಿಯನ್ನು ಧಾರಣೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೇಗೆ ಶಕ್ತಿ
ಕೊಡುವ ಆಹಾರವನ್ನು ತಿನ್ನಿಸಿರಿ ಮತ್ತೆ ಅವರು ತಿನ್ನುವುದೇ ಇಲ್ಲವೆಂದರೆ ಏನು ಮಾಡುವುದು!
ಇಂದು ಜರ್ಮನಿಯವರ ಟರ್ನ್ ಆಗಿದೆ. ಇಡೀ ಗ್ರೂಪ್ ನಂಬರ್ವನ್ ಆಗಿದ್ದಾರಲ್ಲವೆ. ನಂಬರ್ವನ್ ಸಮೀಪ
ರತ್ನಗಳಾಗಿದ್ದಾರೆ ಏಕೆಂದರೆ ಯಾರು ಸಮಾನರಾಗುತ್ತಾರೆಯೋ ಅವರೇ ಸಮೀಪವಿರುತ್ತಾರೆ. ಭಲೆ ಶರೀರದಿಂದ
ಎಷ್ಟೇ ದೂರವಿರಬಹುದು ಆದರೆ ಹೃದಯದಿಂದ ಇಷ್ಟೂ ಸಮೀಪದಲ್ಲಿದ್ದಾರೆ, ಅವರಿರುವುದೇ ಹೃದಯದಲ್ಲಿ.
ಸ್ವಯಂ ತಂದೆಯ ಹೃದಯ ಸಿಂಹಾಸನದಲ್ಲಿ ಇರುತ್ತಾರೆ. ಅವರ ಹೃದಯದಲ್ಲಿ ಸ್ವತಹವಾಗಿಯೇ ತಂದೆಯಲ್ಲದೆ
ಮತ್ತ್ಯಾರೂ ಇರುವುದಿಲ್ಲ ಏಕೆಂದರೆ ಬ್ರಾಹ್ಮಣ ಜೀವನದಲ್ಲಿ ತಂದೆಯವರು ಹೃದಯದ ವ್ಯಾಪಾರವನ್ನು
ಮಾಡಿದ್ದಾರೆ. ಹೃದಯ ತೆಗೆದುಕೊಂಡರು ಮತ್ತು ಹೃದಯ ಕೊಟ್ಟರು. ಹೃದಯದ ವ್ಯಾಪಾರವನ್ನು
ಮಾಡಿದ್ದಾರಲ್ಲವೆ. ಹೃದಯದಿಂದ ತಂದೆಯ ಜೊತೆ ಇರುತ್ತೀರಾ. ಶರೀರದಿಂದಂತು ಕೆಲವರು ಕೆಲವು ಕಡೆ,
ಕೆಲವರು ಕೆಲವು ಕಡೆ ಇರುತ್ತಾರೆ. ಎಲ್ಲರನ್ನೂ ಇಲ್ಲಿಟ್ಟುಕೊಂಡರೆ ಕುಳಿತು ಏನು ಮಾಡುವಿರಿ!
ಸೇವೆಗಾಗಿ ಮಧುಬನದಲ್ಲಿರುವವರನ್ನೂ ಹೊರಗೆ ಕಳುಹಿಸಬೇಕಾಗುತ್ತದೆ. ಇಲ್ಲವೆಂದರೆ ವಿಶ್ವದ ಸೇವೆಯು
ಹೇಗಾಗುತ್ತದೆ. ತಂದೆಯ ಜೊತೆಯೂ ಪ್ರೀತಿಯಿದೆ, ಸೇವೆಯ ಜೊತೆಯೂ ಪ್ರೀತಿಯಿದೆ ಆದ್ದರಿಂದ
ಡ್ರಾಮಾನುಸಾರವಾಗಿ ಭಿನ್ನ-ಭಿನ್ನ ಸ್ಥಾನಗಳಲ್ಲಿ ತಲುಪಿದ್ದೀರಿ ಮತ್ತು ಅಲ್ಲಿಯ ಸೇವೆಗೆ
ನಿಮಿತ್ತರಾಗಿದ್ದೀರಿ. ಅಂದಾಗ ಇದೂ ಸಹ ಡ್ರಾಮಾದಲ್ಲಿ ಪಾತ್ರವು ನೊಂದಣಿಯಾಗಿದೆ. ತಾವು ತಮ್ಮ
ಜೊತೆಗಾರರ ಸೇವೆಗೆ ನಿಮಿತ್ತರಾಗಿಬಿಟ್ಟಿರಿ. ಜರ್ಮನಿಯವರು ಸದಾ ಖುಷಿಯಾಗಿ ಇರುವವರಲ್ಲವೆ. ಯಾವಾಗ
ತಂದೆಯಿಂದ ಇಷ್ಟು ಸಹಜವಾಗಿ ಸದಾಕಾಲದ ಆಸ್ತಿಯು ಸಿಗುತ್ತಿದೆ ಅಂದಮೇಲೆ ಸದಾಕಾಲದ್ದನ್ನು ಬಿಟ್ಟು
ಸ್ವಲ್ಪ ಅಥವಾ ಕೆಲವೊಮ್ಮೆ ತೆಗೆದುಕೊಳ್ಳುವುದೇಕೆ! ದಾತನು ಕೊಡುತ್ತಿದ್ದಾರೆ ಅಂದಮೇಲೆ
ತೆಗೆದುಕೊಳ್ಳುವವರೇಕೆ ಕಡಿಮೆ ತೆಗೆದುಕೊಳ್ಳುವುದು! ಆದ್ದರಿಂದ ಸದಾ ಖುಷಿಯ ಉಯ್ಯಾಲೆಯಲ್ಲಿ
ತೂಗುತ್ತಿರಿ. ವಿಶ್ವದ ಮುಂದೆ ಸದಾ ಮಾಯಾಜೀತ, ಪ್ರಕೃತಿ ಜೀತ, ವಿಜಯಿಗಳಾಗಿ ವಿಜಯದ ನಗಾರಿಯನ್ನು
ಮೊಳಗಿಸಿರಿ.
ಇತ್ತೀಚಿನ ಆತ್ಮರು ವಿನಾಶಿ ಸಾಧನಗಳಲ್ಲಿ ಬಹಳ ಮಸ್ತ್ ನಶೆಯಲ್ಲಿರುತ್ತಾರೆ, ಇಲ್ಲವೆಂದರೆ
ದುಃಖ-ಅಶಾಂತಿಯಿಂದ ಸುಸ್ತಾಗಿ ಅಷ್ಟೂ ಗಾಡ ನಿದ್ರೆಯಲ್ಲಿ ಮಲಗಿದ್ದಾರೆ, ಅವರು ಚಿಕ್ಕ ಧ್ವನಿಯನ್ನು
ಕೇಳಿಸಿಕೊಳ್ಳುವವರು ಅಲ್ಲ. ಯಾರು ನಶೆಯಲ್ಲಿ ಮುಳುಗಿರುತ್ತಾರೆ ಅವರನ್ನು ಅಲುಗಾಡಿಸ ಬೇಕಾಗುತ್ತದೆ.
ಗಾಡ ನಿದ್ರೆಯಲ್ಲಿ ಇರುವವರನ್ನೂ ಸಹ ಅಲುಗಾಡಿಸ ಬೇಕಾಗುತ್ತದೆ. ಅಂದಾಗ ಹ್ಯಾಮ್ಬರ್ಗ್ನವರು ಏನು
ಮಾಡುತ್ತಿದ್ದೀರಿ? ಬಹಳ ಶಕ್ತಿಶಾಲಿ ಗ್ರೂಪ್ ಆಗಿದೆ. ಎಲ್ಲರಲ್ಲಿ ತಂದೆ ಹಾಗೂ ವಿದ್ಯೆಯೊಂದಿಗಿನ
ಪ್ರೀತಿಯು ಬಹಳ ಚೆನ್ನಾಗಿ ಇದೆ. ಯಾರಿಗೆ ವಿದ್ಯೆಯೊಂದಿಗೆ ಪ್ರೀತಿಯಿದೆಯೋ ಅವರು ಸದಾ
ಶಕ್ತಿಶಾಲಿಯಾಗಿರುತ್ತಾರೆ. ಬಾಬಾ ಅರ್ಥಾತ್ ಮುರುಳೀಧರನೊಂದಿಗೆ ಪ್ರೀತಿ ಅಂದರೆ ಮುರುಳಿಯೊಂದಿಗಿನ
ಪ್ರೀತಿ. ಮುರುಳಿಯೊಂದಿಗೆ ಪ್ರೀತಿಯಿಲ್ಲದಿದ್ದರೆ ಮುರುಳೀಧರನೊಂದಿಗೂ ಪ್ರೀತಿಯಿಲ್ಲ. ನನಗೆ
ಬಾಬಾರವರೊಂದಿಗೆ ಪ್ರೀತಿಯಿದೆ ಆದರೆ ಓದುವುದಕ್ಕೆ ಸಮಯವಿಲ್ಲ ಎಂದು ಯಾರೆಷ್ಟೇ ಹೇಳಬಹುದು, ಅದನ್ನು
ಬಾಬಾರವರು ಒಪ್ಪುವುದಿಲ್ಲ. ಎಲ್ಲಿ ಲಗನ್ ಇರುತ್ತದೆಯೋ ಅಲ್ಲಿ ಯಾವುದೇ ವಿಘ್ನವಿರಲು ಸಾಧ್ಯವಿಲ್ಲ,
ಸ್ವತಹವಾಗಿಯೇ ಸಮಾಪ್ತಿಯಾಗಿ ಬಿಡುತ್ತದೆ. ಓದುವುದರಲ್ಲಿ ಪ್ರೀತಿ, ಮುರುಳಿಯೊಂದಿಗೆ
ಪ್ರೀತಿಯಿರುವವರು ಸಹಜವಾಗಿಯೇ ವಿಘ್ನಗಳನ್ನು ಪಾರು ಮಾಡಿ ಬಿಡುತ್ತಾರೆ. ಹಾರುವ ಕಲೆಯ ಮೂಲಕ ಸ್ವಯಂ
ಶ್ರೇಷ್ಠರಾಗಿ ಬಿಡುತ್ತಾರೆ. ವಿಘ್ನವು ಕೆಳಗೆ ಇದ್ದು ಬಿಡುತ್ತದೆ. ಹಾರುವ ಕಲೆಯವರಿಗಾಗಿ ಪರ್ವತವೂ
ಒಂದು ಕಲ್ಲಿನ ಸಮಾನದಂತೆ. ಓದುವುದರಲ್ಲಿ ಪ್ರೀತಿಯನ್ನಿಡುವವರಲ್ಲಿ ನೆಪಗಳೇನೂ ಇರುವುದಿಲ್ಲ.
ಪ್ರೀತಿಯು ಕಷ್ಟವನ್ನು ಸಹಜಗೊಳಿಸುತ್ತದೆ. ಒಂದು ಮುರುಳಿಯಲ್ಲಿನ ಪ್ರೀತಿಯು, ಓದುವುದರೊಂದಿಗೆ ಹಾಗೂ
ಪರಿವಾರದ ಪ್ರೀತಿಯ ಕೋಟೆಯಾಗಿ ಬಿಡುತ್ತದೆ. ಕೋಟೆಯಲ್ಲಿ ಇರುವವರು ಸುರಕ್ಷಿತವಾಗಿರುತ್ತಾರೆ. ಈ
ಗ್ರೂಪ್ಗಳು ಇವೆರಡೂ ವಿಶೇಷತೆಗಳಿಂದ ಮುಂದುವರೆಯುತ್ತಿದೆ. ವಿದ್ಯೆ ಹಾಗೂ ಪರಿವಾರದ ಪ್ರೀತಿಯ
ಕಾರಣದಿಂದ, ಪ್ರೀತಿಯ ಪ್ರಭಾವದಿಂದ ಒಬ್ಬರಿನ್ನೊಬ್ಬರನ್ನು ಸಮೀಪಕ್ಕೆ ಕರೆ ತರುತ್ತದೆ. ಮತ್ತೆ
ನಿಮಿತ್ತರಾಗಿರುವ ಆತ್ಮ(ಪುಷ್ಪಾಲ್)ವೂ ಪ್ರಿಯವಾಗಿರುವವರು ಸಿಕ್ಕಿದ್ದಾರೆ. ಸ್ನೇಹವು ಭಾಷೆಯನ್ನೂ
ನೋಡುವುದಿಲ್ಲ. ಸ್ನೇಹದ ಭಾಷೆಯು ಎಲ್ಲಾ ಭಾಷೆಗಳಿಗಿಂತ ಶ್ರೇಷ್ಠವಾದುದು. ಎಲ್ಲರೂ ಅವರನ್ನು ನೆನಪು
ಮಾಡುತ್ತಿದ್ದಾರೆ, ಬಾಪ್ದಾದಾರವರಿಗೂ ನೆನಪಿದೆ. ಒಳ್ಳೆಯ ಪ್ರತ್ಯಕ್ಷ ಪ್ರಮಾಣವನ್ನು
ನೋಡುತ್ತಿದ್ದೇವೆ. ಸೇವೆಯ ವೃದ್ಧಿಯಾಗುತ್ತಿದೆ. ಎಷ್ಟು ವೃದ್ಧಿಗೊಳಿಸುತ್ತಿರುತ್ತಾರೆ ಅಷ್ಟು
ಸರ್ವರ ಆಶೀರ್ವಾದದ ಫಲವು ಮಹಾನ್ ಪುಣ್ಯಾತ್ಮರಾಗುವ ಪ್ರಾಪ್ತಿ ಆಗುತ್ತದೆ. ಪುಣ್ಯಾತ್ಮರೇ
ಪೂಜ್ಯಾತ್ಮನಾಗುವರು. ಈ ಪುಣ್ಯಾತ್ಮರಾಗಿದಿದ್ದರೆ ಭವಿಷ್ಯದಲ್ಲಿ ಪೂಜ್ಯಾತ್ಮನಾಗಲು ಸಾಧ್ಯವಿಲ್ಲ.
ಪುಣ್ಯಾತ್ಮರಾಗುವುದೇ ಅವಶ್ಯಕವಿದೆ. ಒಳ್ಳೆಯದು!
ಅವ್ಯಕ್ತ
ಮುರುಳಿಗಳಿಂದ ಆಯ್ಕೆಯಾಗಿರುವ ಪ್ರಶ್ನೆ-ಉತ್ತರ :
ಪ್ರಶ್ನೆ:-
ಬ್ರಾಹ್ಮಣ ಜೀವನದ ವಿಶೇಷ ಗುಣ, ಶೃಂಗಾರ ಅಥವಾ ಖಜಾನೆ ಯಾವುದಾಗಿದೆ?
ಉತ್ತರ:-
"ಸಂತುಷ್ಟತೆ". ಹೇಗೆ ಯಾವುದೇ ಪ್ರಿಯ ವಸ್ತುವಾಗಿರುತ್ತದೆಯೆಂದರೆ ಪ್ರಿಯ ವಸ್ತುವನ್ನೆಂದಿಗೂ
ಬಿಡುವುದಿಲ್ಲ, ಸಂತುಷ್ಟತೆ ವಿಶೇಷತೆಯಾಗಿದೆ, ಬ್ರಾಹ್ಮಣ ಜೀವನದ ಪರಿವರ್ತನೆಯ ವಿಶೇಷ ದರ್ಪಣವಾಗಿದೆ.
ಎಲ್ಲಿ ಸಂತುಷ್ಟತೆಯಿದೆಯೋ ಅಲ್ಲಿ ಅವಶ್ಯವಾಗಿ ಖುಷಿಯಿದೆ. ಒಂದುವೇಳೆ ಬ್ರಾಹ್ಮಣ ಜೀವನದಲ್ಲಿ
ಸಂತುಷ್ಟತೆಯಿಲ್ಲದಿದ್ದರೆ ಅದು ಸಾಧಾರಣ ಜೀವನವಾಗಿದೆ.
ಪ್ರಶ್ನೆ:-
ಸಂತುಷ್ಟ ಮಣಿಗಳ
ವಿಶೇಷಗಳು ಏನಾಗಿರುತ್ತದೆ?
ಉತ್ತರ:-
ಸಂತುಷ್ಟ ಮಣಿಗಳೆಂದಿಗೂ ಯಾವುದೇ ಕಾರಣದಿಂದ ಸ್ವಯಂನೊಂದಿಗಾಗಲಿ, ಅನ್ಯ ಆತ್ಮರೊಂದಿಗಾಗಲಿ, ತನ್ನ
ಸಂಸ್ಕಾರಗಳಿಂದ, ವಾಯುಮಂಡಲದ ಪ್ರಭಾವದಿಂದ ಅಸಂತುಷ್ಟರಾಗಲು ಸಾಧ್ಯವಿಲ್ಲ. ಅವರು ಹೀಗೆಂದಿಗೂ ಸಹ
ಹೇಳುವುದಿಲ್ಲ - ನಾವಂತು ಸಂತುಷ್ಟರಿದ್ದೇವೆ ಆದರೆ ಅನ್ಯರು ಅಸಂತುಷ್ಟ ಮಾಡುತ್ತಾರೆ. ಏನಾದರೂ ಆಗಲಿ
ಸಂತುಷ್ಟ ಮಣಿಗಳು ತನ್ನ ಸಂತುಷ್ಟತೆಯ ವಿಶೇಷತೆಯನ್ನು ಬಿಡಲು ಸಾಧ್ಯವಿಲ್ಲ.
ಪ್ರಶ್ನೆ:-
ಯಾರು ಸದಾ
ಸಂತುಷ್ಟವಾಗಿರುತ್ತಾರೆ ಅವರ ಲಕ್ಷಣಗಳು ಏನಾಗಿರುತ್ತವೆ?
ಉತ್ತರ:-
1. ಯಾರು ಸದಾ ಸಂತುಷ್ಟವಾಗಿರುತ್ತಾರೆಯೋ ಅವರ ಪ್ರತಿ ಎಲ್ಲರ ಸ್ನೇಹವಿರುತ್ತದೆ ಏಕೆಂದರೆ
ಸಂತುಷ್ಟತೆಯು ಬ್ರಾಹ್ಮಣ ಪರಿವಾರದ ಸ್ನೇಹಿಯನ್ನಾಗಿ ಮಾಡಿ ಬಿಡುತ್ತದೆ.
2. ಸಂತುಷ್ಟ ಆತ್ಮವು ಎಲ್ಲರನ್ನೂ ಸ್ವಯ ಸಮೀಪಕ್ಕೆ ತರುವ ಅಥವಾ ಪ್ರತಿಯೊಂದು ಶ್ರೇಷ್ಠ ಕಾರ್ಯದಲ್ಲಿ
ಸಹಯೋಗಿಯನ್ನಾಗಿ ಮಾಡುವ ಪ್ರಯತ್ನ ಪಡುತ್ತಾರೆ.
3. ಸಂತುಷ್ಟತೆಯ ವಿಶೇಷತೆಯು ಸ್ವತಹವಾಗಿಯೇ ಪ್ರತಿಯೊಂದು ಕಾರ್ಯದಲ್ಲಿ ಗೋಲ್ಡನ್ ಚಾನ್ಸ್ಲರ್ ಮಾಡಿ
ಬಿಡುತ್ತದೆ. ಅವರಿಗೆ ಹೇಳುವುದು ಅಥವಾ ಯೋಚಿಸುವುದು ಮಾಡ ಬೇಕಾಗಿರುವುದಿಲ್ಲ.
4. ಸಂತುಷ್ಟತೆಯು ಸದಾ ಸರ್ವರ ಸ್ವಭಾವ-ಸಂಸ್ಕಾರಗಳನ್ನು ಮಿಲನ ಮಾಡಿಸುವಂತದ್ದಾಗಿದೆ. ಅವರೆಂದಿಗೂ
ಯಾರದೇ ಸ್ವಭಾವ-ಸಂಸ್ಕಾರಗಳಿಂದ ಗಾಬರಿಯಾಗುವುದಿಲ್ಲ.
5. ಅವರೊಂದಿಗೆ ಎಲ್ಲರಿಗೂ ಹೃದಯದ ಪ್ರೀತಿಯಿರುತ್ತದೆ. ಅವರು ಪ್ರೀತಿ ತೆಗೆದುಕೊಳ್ಳಲು
ಪಾತ್ರರಾಗಿರುತ್ತಾರೆ. ಸಂತುಷ್ಟತೆಯೇ ಆ ಆತ್ಮನ ಪರಿಚಯವನ್ನು ಕೊಡುತ್ತದೆ. ಪ್ರತಿಯೊಬ್ಬರಿಗೂ
ಇವರೊಂದಿಗೆ ಮಾತನಾಡೋಣ, ಇವರೊಂದಿಗೆ ಕುಳಿತುಕೊಳ್ಳೋಣ ಎಂದು ಮನಸ್ಸಾಗುತ್ತದೆ.
6. ಸಂತುಷ್ಟ ಆತ್ಮರು ಸದಾ ಮಾಯಾಜೀತರಂತು ಇದ್ದೇ ಇರುತ್ತಾರೆ ಏಕೆಂದರೆ ಆಜ್ಞಾಕಾರಿಯಾಗಿದ್ದಾರೆ,
ಸದಾ ಮರ್ಯಾದೆಗಳ ರೇಖೆಯೊಳಗೆ ಇರುತ್ತಾರೆ. ಮಾಯೆಯನ್ನು ದೂರದಿಂದಲೇ ಗುರುತಿಸಿ ಬಿಡುತ್ತಾರೆ.
ಪ್ರಶ್ನೆ:-
ಒಂದುವೇಳೆ ಸಮಯದಲ್ಲಿ ಮಾಯೆಯನ್ನು ಗುರುತಿಸುವುದಕ್ಕಾಗಲಿಲ್ಲ, ಮತ್ತೆ-ಮತ್ತೆ ಮೋಸ ಮಾಡಿ ಬಿಡುತ್ತದೆ
ಎಂದರೆ ಅದರ ಕಾರಣವೇನು?
ಉತ್ತರ:-
ಗುರುತಿಸುವ ಶಕ್ತಿಯ ಕೊರತೆಗೆ ಕಾರಣವಾಗಿದೆ - ಸದಾ ತಂದೆಯ ಶ್ರೇಷ್ಠ ಮತದಂತೆ ನಡೆಯುವುದಿಲ್ಲ.
ಕೆಲವೊಮ್ಮೆ ನಡೆಯುವುದು, ಕೆಲವೊಮ್ಮೆ ಇಲ್ಲ. ಕೆಲವೊಮ್ಮೆ ನೆನಪು ಮಾಡುತ್ತಾರೆ, ಕೆಲವೊಮ್ಮೆ ಇಲ್ಲ.
ಕೆಲವೊಮ್ಮೆ ಉಮ್ಮಂಗ-ಉತ್ಸಾಹದಲ್ಲಿರುವುದು, ಮತ್ತೆ ಕೆಲವೊಮ್ಮೆ ಇಲ್ಲ. ಸದಾ ಆಜ್ಞೆಯ ರೇಖೆಯೊಳಗೆ
ಇರುವುದಿಲ್ಲ ಆದ್ದರಿಂದ ಮಾಯೆಯು ಸಮಯದಲ್ಲಿ ಮೋಸ ಮಾಡಿ ಬಿಡುತ್ತದೆ. ಮಾಯೆಯಲ್ಲಿ ಪರಿಶೀಲಿಸುವ
ಶಕ್ತಿಯು ಹೆಚ್ಚಾಗಿರುತ್ತದೆ, ಈ ಸಮಯದಲ್ಲಿ ಇವರು ಬಲಹೀನರಾಗಿದ್ದಾರೆಯೇ ಎಂದು ನೋಡುತ್ತದೆ, ಆಗ ಆ
ಬಲಹೀನತೆಯಿಂದಲೇ ತನ್ನವರನ್ನಾಗಿ ಮಾಡಿಕೊಳ್ಳುತ್ತದೆ. ಮಾಯೆಯು ಬರುವ ಮಾರ್ಗವೇ ಬಲಹೀನತೆ ಆಗಿದೆ.
ಪ್ರಶ್ನೆ:-
ಮಾಯಾಜೀತರಾಗಲು ಸಹಜ ಸಾಧನವು ಯಾವುದು?
ಉತ್ತರ:-
ಸದಾ ತಂದೆಯ ಜೊತೆಯಿರಿ, ಜೊತೆಯಿರುವುದು ಅಂದರೆ ಸ್ವತಹವಾಗಿಯೇ ಮರ್ಯಾದೆಗಳ ರೇಖೆಯೊಳಗೆ ಇರುವುದು.
ಆನಂತರ ಒಂದೊಂದು ವಿಕಾರದ ಹಿಂದೆ ವಿಜಯಿಯಾಗುವ ಪರಿಶ್ರಮವು ಸಮಾಪ್ತಿಯಾಗುತ್ತದೆ.
ಜೊತೆಯಿರುವುದೆಂದರೆ ತಂದೆಯಂತೆ ಮಗುವಾಗಿರುವುದು. ಸಂಗದ ರಂಗು ಸ್ವತಹವಾಗಿಯೇ ರಂಗೇರುತ್ತದೆ
ಆದ್ದರಿಂದ ಬೀಜವನ್ನು ಬಿಟ್ಟು ರೆಂಬೆ ಕೊಂಬೆಗಳನ್ನು ತುಂಡರಿಸುವ ಕಷ್ಟ ಪಡಬಾರದು. ಇಂದು
ಕಾಮಜೀತರಾಗಿ ಬಿಟ್ಟೆವು, ನೆನ್ನೆ ಕ್ರೋಧಜೀತರಾದೆವು - ಈ ರೀತಿಯಲ್ಲ. ಸದಾ ವಿಜಯಿಯಾಗಬೇಕು. ಕೇವಲ
ಬೀಜರೂಪನನ್ನು ಜೊತೆಯಿಟ್ಟುಕೊಳ್ಳಿರಿ, ಆಗ ಮಾಯೆಯ ಬೀಜವು ಈ ರೀತಿ ಭಸ್ಮವಾಗಿ ಬಿಡುತ್ತದೆ, ಮತ್ತೆ
ಆ ಬೀಜದಿಂದ ಅಂಶವೂ ಬರಲು ಸಾಧ್ಯವಾಗುವುದಿಲ್ಲ.
ವರದಾನ:
ಪ್ರತಿಯೊಂದು ಆತ್ಮನಿಗೆ ಸಾಹಸ, ಉಲ್ಲಾಸ ತರಿಸುವ, ದಯಾಹೃದಯಿ, ವಿಶ್ವ ಕಲ್ಯಾಣಕಾರಿ ಭವ.
ಕೆಲವೊಮ್ಮೆ ಬ್ರಾಹ್ಮಣ
ಪರಿವಾರದಲ್ಲಿ ನೀನು ಬಲಹೀನನಾಗಿರುವೆ ಎಂದು ಯಾವುದೇ ಬಲಹೀನ ಆತ್ಮನಿಗೆ ಹೇಳಬಾರದು. ತಾವು ದಯಾಹೃದಯಿ
ವಿಶ್ವ ಕಲ್ಯಾಣಕಾರಿ ಮಕ್ಕಳ ಮುಖದಿಂದ ಸದಾ ಪ್ರತಿಯೊಂದು ಆತ್ಮನ ಪ್ರತಿ ಶುಭ ನುಡಿಗಳು ಬರಬೇಕು,
ಬೇಸರ ಪಡಿಸುವವರನ್ನಾಗಿ ಅಲ್ಲ. ಭಲೆ ಯಾರೆಷ್ಟೇ ಬಲಹೀನರಾಗಿರಲಿ, ಅವರಿಗೆ ಸೂಚನೆ ಅಥವಾ
ಶಿಕ್ಷಣವನ್ನು ಕೊಡಬೇಕೆಂದರೂ, ಮೊದಲು ಸಮರ್ಥರನ್ನಾಗಿ ಮಾಡಿ. ನಂತರ ಶಿಕ್ಷಣವನ್ನು ಕೊಡಿ. ಮೊದಲು
ಧರಣಿಯಲ್ಲಿ ಸಾಹಸ ಮತ್ತು ಉತ್ಸಾಹದ ನೇಗಿಲು ಮಾಡಬೇಕು, ನಂತರ ಬೀಜವನ್ನು ಬಿತ್ತಿದರೆ ಸಹಜವಾಗಿ
ಪ್ರತಿಯೊಂದು ಬೀಜದ ಫಲವು ಬರುತ್ತದೆ, ಇದರಿಂದ ವಿಶ್ವ ಕಲ್ಯಾಣದ ಸೇವೆಯು ತೀವ್ರವಾಗಿ ಬಿಡುತ್ತದೆ.
ಸ್ಲೋಗನ್:
ತಂದೆಯ
ಆಶೀರ್ವಾದಗಳನ್ನು ತೆಗೆದುಕೊಳ್ಳುತ್ತಾ, ಸದಾ ಸಂಪನ್ನತೆಯ ಅನುಭವ ಮಾಡಿರಿ.
ಮುರಳಿ ಪ್ರಶ್ನೆಗಳು -
1. ಸದಾ
ಸ್ನೇಹಿಯಾಗಿರುವವರು ಹೇಗಿರುತ್ತಾರೆ?
2. ಪ್ರಕೃತಿ ಮತ್ತು ಮಾಯೆಯೂ ಯಾರನ್ನು ತನ್ನ ಅಧೀನರಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ?
3. ಯಾವ ಶಕ್ತಿಯಿಲ್ಲದಿರುವ ಕಾರಣದಿಂದ ವ್ಯರ್ಥ ಸಂಕಲ್ಪಗಳ ಹೊರೆಯಾಗುತ್ತದೆ?
4. ಸಮೀಪ ರತ್ನಗಳು ಯಾರಾಗಿರುತ್ತಾರೆ?
5. ಬ್ರಾಹ್ಮಣ ಜೀವನದಲ್ಲಿ ತಂದೆಯವರು ಎಂತಹ ವ್ಯಾಪಾರವನ್ನು ಮಾಡಿದ್ದಾರೆ?
6. ಇತ್ತೀಚಿನ ಆತ್ಮರು ಯಾವ ನಶೆಯಲ್ಲಿರುತ್ತಾರೆ ಅಥವಾ ಯಾವ ಗಾಡ ನಿದ್ರೆಯಲ್ಲಿ ಮಲಗಿದ್ದಾರೆ?
7. ತಂದೆಯೊಂದಿಗೆ ಯಾವಗ ಪ್ರೀತಿಯಿರುತ್ತದೆ?
8. ನಾವು ಸದಾ ಸಂಪನ್ನ ಹೇಗಾಗಬಹುದು?
9. ಸ್ನೇಹ ಎಂತಹ ಶಕ್ತಿಯಾಗಿದೆ?
10. ಕಷ್ಟ ಮತ್ತು ಪರಿಶ್ರಮ ಯಾವಾಗ ಅನುಭವವಾಗುತ್ತದೆ?