31.10.20 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ -
ಎಲ್ಲರಿಗೆ ಸ್ಥಿರವಾದ ಸುಖ-ಶಾಂತಿಯ ಮಾರ್ಗವನ್ನು ತಿಳಿಸುವುದು ನಿಮ್ಮ ಕರ್ತವ್ಯವಾಗಿದೆ,
ಶಾಂತಿಯಲ್ಲಿರಿ ಮತ್ತು ಶಾಂತಿಯ ಕಾಣಿಕೆ ಕೊಡಿ"
ಪ್ರಶ್ನೆ:
ಯಾವ ಗುಹ್ಯ
ರಹಸ್ಯವನ್ನು ತಿಳಿದುಕೊಳ್ಳಲು ಬೇಹದ್ದಿನ ಬುದ್ಧಿಯು ಬೇಕು?
ಉತ್ತರ:
ನಾಟಕದ ಯಾವ ದೃಶ್ಯವು ಯಾವ ಸಮಯದಲ್ಲಿ ನಡೆಯಬೇಕೋ ಅದೇ ಸಮಯದಲ್ಲಿ ನಡೆಯುವುದು, ಇದಕ್ಕೆ ನಿಖರವಾದ
ಕಾಲಾವಧಿಯಿಲ್ಲ. ತಂದೆಯೂ ಸಹ ತಮ್ಮ ನಿಖರವಾದ ಸಮಯದಲ್ಲಿಯೇ ಬರುತ್ತಾರೆ, ಇದರಲ್ಲಿ ಒಂದು ಸೆಕೆಂಡಿನ
ಅಂತರವೂ ಆಗುವುದಿಲ್ಲ. ಪೂರ್ಣ 5000 ವರ್ಷಗಳ ನಂತರ ತಂದೆಯು ಬಂದು ಪ್ರವೇಶ ಮಾಡುತ್ತಾರೆ, ಈ ಗುಹ್ಯ
ರಹಸ್ಯವನ್ನು ತಿಳಿದುಕೊಳ್ಳಲು ಬೇಹದ್ದಿನ ಬುದ್ಧಿ ಬೇಕು.
ಗೀತೆ:
ಪ್ರಪಂಚ ಬದಲಾದರೂ
ನಾವು ಬದಲಾಗುವುದಿಲ್ಲ.............
ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ. ಮಕ್ಕಳಿಗೆ ಶಾಂತಿಧಾಮ, ಸುಖಧಾಮದ
ಮಾರ್ಗವನ್ನು ತಿಳಿಸುತ್ತಾರೆ. ಈ ಸಮಯದಲ್ಲಿ ಎಲ್ಲಾ ಮನುಷ್ಯರು ವಿಶ್ವದಲ್ಲಿ ಶಾಂತಿ ಬೇಕೆಂದು
ಬಯಸುತ್ತಾರೆ. ಪ್ರತಿಯೊಬ್ಬರೂ ತನಗೂ ಶಾಂತಿಯನ್ನು ಬಯಸುತ್ತಾರೆ ಮತ್ತು ವಿಶ್ವದಲ್ಲಿಯೂ ಶಾಂತಿಯು
ಬೇಕೆಂದು ಹೇಳುತ್ತಾರೆ. ಮನಃಶ್ಯಾಂತಿ ಬೇಕೆಂದು ಪ್ರತಿಯೊಬ್ಬರೂ ಹೇಳುತ್ತಾರೆ, ಈಗ ಅದು ಎಲ್ಲಿಂದ
ಸಿಗಲು ಸಾಧ್ಯ! ಶಾಂತಿಯ ಸಾಗರನು ತಂದೆಯೇ ಆಗಿದ್ದಾರೆ. ಅವರಿಂದ ಆಸ್ತಿ ಸಿಗುತ್ತದೆ.
ಪ್ರತಿಯೊಬ್ಬರಿಗೂ ಸಿಗುತ್ತದೆ, ಎಲ್ಲರಿಗೂ ಸಿಗುತ್ತದೆ. ಯಾವ ಮಕ್ಕಳು ಓದುವರೋ ಅವರು ಅರ್ಥ
ಮಾಡಿಕೊಳ್ಳುತ್ತಾರೆ - ನಾವು ಶಾಂತಿಯ ಆಸ್ತಿಯನ್ನು ಪಡೆಯಲು ನಮಗಾಗಿಯೂ ಪುರುಷಾರ್ಥ ಮಾಡಿಸುತ್ತೇವೆ,
ಅನ್ಯರಿಗೂ ತಿಳಿಸುತ್ತೇವೆ. ವಿಶ್ವ ಶಾಂತಿಯು ಸ್ಥಾಪನೆಯಾಗಲೇಬೇಕಾಗಿದೆ. ಭಲೆ ಯಾರಾದರೂ ಆಸ್ತಿಯನ್ನು
ತೆಗೆದುಕೊಳ್ಳಲು ಬರಲಿ, ಬಾರದೇ ಇರಲಿ, ಎಲ್ಲಾ ಮಕ್ಕಳಿಗೆ ಶಾಂತಿಯನ್ನು ಕೊಡುವುದು ಮಕ್ಕಳ
ಕರ್ತವ್ಯವಾಗಿದೆ. ಕೇವಲ ಮೂರು-ನಾಲ್ಕು ಜನಕ್ಕೆ ಆಸ್ತಿಯು ಸಿಕ್ಕಿದರೆ ಏನಾಗುವುದು? ಎಂಬುದನ್ನು
ತಿಳಿದುಕೊಳ್ಳುವುದೇ ಇಲ್ಲ. ಅನ್ಯರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ ಆದರೆ ನಿಶ್ಚಯವಿಲ್ಲದ ಕಾರಣ
ಅನ್ಯರನ್ನು ತನ್ನ ಸಮಾನ ಮಾಡಿಕೊಳ್ಳುವುದಿಲ್ಲ. ನಿಶ್ಚಯ ಬುದ್ಧಿಯವರೇ ತಂದೆಯಿಂದ ನಮಗೆ ವರ
ಸಿಗುತ್ತಿದೆಯಂದು ತಿಳಿದುಕೊಳ್ಳುತ್ತಾರೆ. ವರದಾನ ಕೊಡುತ್ತಾರಲ್ಲವೆ - ಆಯುಷ್ಯವಾನ್ ಭವ, ಧನವಾನ್
ಭವ ಎಂದೂ ಹೇಳುತ್ತಾರೆ. ಕೇವಲ ಹೇಳುವುದರಿಂದ ಆಶೀರ್ವಾದ ಸಿಗಲು ಸಾಧ್ಯವಿಲ್ಲ. ಆಶೀರ್ವಾದವನ್ನು
ಬೇಡುತ್ತಾರೆ ಆಗ ಅವರಿಗೆ ತಿಳಿಸಬೇಕಾಗಿದೆ - ನಿಮಗೆ ಶಾಂತಿಯು ಬೇಕೆಂದರೆ ಈ ರೀತಿಯ ಪುರುಷಾರ್ಥ
ಮಾಡಿ. ಪರಿಶ್ರಮದಿಂದ ಏನೂ ಸಿಗುವುದಿಲ್ಲ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಆಶೀರ್ವಾದಗಳನ್ನು
ತೆಗೆದುಕೊಳ್ಳುತ್ತಾರೆ, ತಂದೆ-ತಾಯಿ, ಶಿಕ್ಷಕ, ಗುರು ಮೊದಲಾದವರೆಲ್ಲರಿಂದ ನಾವು ಸುಖ ಮತ್ತು
ಶಾಂತಿಯಿಂದ ಇರಬೇಕೆಂದು ಆಶೀರ್ವಾದವನ್ನು ಬಯಸುತ್ತಾರೆ ಆದರೆ ಸುಖ, ಶಾಂತಿಯಿಂದಿರಲು ಸಾಧ್ಯವಿಲ್ಲ
ಏಕೆಂದರೆ ಇಷ್ಟೊಂದು ಜನಸಂಖ್ಯೆಯಿದೆ, ಅವರಿಗೆ ಸುಖ-ಶಾಂತಿಯು ಸಿಗಲು ಹೇಗೆ ಸಾಧ್ಯ? ಶಾಂತಿ ದೇವ
ಎಂದು ಹೇಳುತ್ತಾರೆ. ಬುದ್ಧಿಯಲ್ಲಿ ಬರುತ್ತದೆ - ಹೇ ಪರಮಪಿತ ಪರಮಾತ್ಮ ನಮಗೆ ಶಾಂತಿಯ ಕಾಣಿಕೆ ಕೊಡಿ.
ವಾಸ್ತವದಲ್ಲಿ ವಸ್ತುವನ್ನು ತೆಗೆದುಕೊಡುವುದಕ್ಕೆ ಕಾಣಿಕೆಯಂದು ಹೇಳಲಾಗುತ್ತದೆ. ಇದು ನಿಮಗಾಗಿ
ಕಾಣಿಕೆ ಅಥವಾ ಬಳುವಳಿ ಆಗಿದೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಕಾಣಿಕೆಯಾಗಿ
ಯಾರೆಷ್ಟಾದರೂ ಕೊಡಬಹುದು, ಹಣ-ಮನೆ ವಸ್ತ್ರಗಳು ಇತ್ಯಾದಿಗಳನ್ನು ಕೊಡುತ್ತಾರೆ ಆದರೆ ಅದು
ಅಲ್ಪಕಾಲಕ್ಕಾಗಿ ದಾನ-ಪುಣ್ಯವಾಯಿತು. ಮನುಷ್ಯರು ಮನುಷ್ಯರಿಗೆ ಕೊಡುತ್ತಾರೆ. ಸಾಹುಕಾರರು ಬಡವರಿಗೆ
ಅಥವಾ ಸಾಹುಕಾರರು ಸಾಹುಕಾರರಿಗೆ ಕೊಡುತ್ತಾ ಬಂದಿದ್ದಾರೆ ಆದರೆ ಇದು ಸ್ಥಿರವಾದ ಸುಖ-ಶಾಂತಿಯ
ಮಾತಾಗಿದೆ. ಇಲ್ಲಂತೂ ಕೇವಲ ಒಂದು ಜನ್ಮಕ್ಕಾಗಿಯೂ ಸುಖ-ಶಾಂತಿ ಕೊಡಲು ಸಾಧ್ಯವಿಲ್ಲ ಏಕೆಂದರೆ ಅವರ
ಬಳಿ ಇಲ್ಲವೇ ಇಲ್ಲ. ಕೊಡುವವರು ತಂದೆಯೊಬ್ಬರೇ ಆಗಿದ್ದಾರೆ, ಅವರಿಗೆ ಸುಖ-ಶಾಂತಿ, ಪವಿತ್ರತೆಯ
ಸಾಗರನೆಂದು ಹೇಳಲಾಗುತ್ತದೆ. ಸರ್ವಶ್ರೇಷ್ಠ ಭಗವಂತನದೇ ಮಹಿಮೆಯನ್ನು ಮಾಡಲಾಗುತ್ತದೆ. ಅವರಿಂದಲೇ
ಶಾಂತಿ ಸಿಗುವುದೆಂದು ತಿಳಿಯುತ್ತಾರೆ ಮತ್ತೆ ಆ ಸಾಧು-ಸಂತರ ಬಳಿ ಹೋಗುತ್ತಾರೆ ಏಕೆಂದರೆ
ಭಕ್ತಿಮಾರ್ಗವಲ್ಲವೆ. ಆದ್ದರಿಂದ ತಿರುಗುತ್ತಲೇ ಇರುತ್ತಾರೆ. ಅದೆಲ್ಲವೂ ಅಲ್ಪಕಾಲಕ್ಕಾಗಿ
ಪುರುಷಾರ್ಥವಾಗಿದೆ. ನೀವು ಮಕ್ಕಳಿಗೆ ಈಗ ಅದೆಲ್ಲವೂ ನಿಂತು ಹೋಗುತ್ತದೆ. ನೀವು ಇದನ್ನು
ಬರೆಯುತ್ತೀರಿ - ಬೇಹದ್ದಿನ ತಂದೆಯಿಂದ 100% ಸುಖ-ಶಾಂತಿ, ಪವಿತ್ರತೆಯ ಆಸ್ತಿಯನ್ನು ಪಡೆಯಬಹುದು.
ಇಲ್ಲಿ 100% ಅಪವಿತ್ರತೆ, ದುಃಖ-ಅಶಾಂತಿಯಿದೆ ಆದ್ದರಿಂದ ಮನುಷ್ಯರು ತಿಳಿದುಕೊಳ್ಳುವುದಿಲ್ಲ.
ಋಷಿ-ಮುನಿ ಮೊದಲಾದವರು ಪವಿತ್ರರಾಗಿದ್ದಾರೆಂದು ಹೇಳುತ್ತಾರೆ ಆದರೆ ಜನ್ಮವು ವಿಕಾರದಿಂದಲೇ
ಆಗುತ್ತದೆಯಲ್ಲವೆ. ಮೂಲಮಾತೇ ಇದಾಗಿದೆ. ರಾವಣ ರಾಜ್ಯದಲ್ಲಿ ಪವಿತ್ರತೆಯಿರಲು ಸಾಧ್ಯವಿಲ್ಲ. ಸುಖ,
ಪವಿತ್ರತೆ ಮೊದಲಾದ ಎಲ್ಲದರ ಸಾಗರನು ಒಬ್ಬರೇ ತಂದೆಯಾಗಿದ್ದಾರೆ.
ನೀವು ತಿಳಿದುಕೊಂಡಿದ್ದೀರಿ - ನಮಗೆ ಶಿವ ತಂದೆಯಿಂದ 21 ಜನ್ಮಗಳು ಅರ್ಥಾತ್ ಅರ್ಧಕಲ್ಪ 2500
ವರ್ಷಗಳಿಗಾಗಿ ಆಸ್ತಿಯು ಸಿಗುತ್ತದೆ. ಇದು ನಿಶ್ಚಿತವಾಗಿದೆ. ಅರ್ಧಕಲ್ಪ ಸುಖಧಾಮ, ಅರ್ಧಕಲ್ಪ
ದುಃಖಧಾಮವಾಗಿದೆ. ಸೃಷ್ಟಿಯ ಎರಡು ಭಾಗಗಳಿವೆ, ಒಂದು ಹೊಸದು, ಇನ್ನೊಂದು ಹಳೆಯದು. ಆದರೆ ಯಾವಾಗ
ಹೊಸದು, ಯಾವಾಗ ಹಳೆಯದಾಗುತ್ತದೆಯಂಬುದನ್ನು ತಿಳಿದುಕೊಂಡಿಲ್ಲ. ವೃಕ್ಷದ ಆಯಸ್ಸನ್ನು ಅಷ್ಟು
ನಿಖರವಾಗಿ ತಿಳಿಸಲು ಸಾಧ್ಯವಿಲ್ಲ. ಈಗ ತಂದೆಯ ಮೂಲಕ ನೀವು ಈ ವೃಕ್ಷವನ್ನು ತಿಳಿದುಕೊಂಡಿದ್ದೀರಿ.
ಇದು 5000 ವರ್ಷಗಳ ಹಳೆಯ ವೃಕ್ಷವಾಗಿದೆ. ಇದರ ನಿಖರವಾದ ಕಾಲಾವಧಿಯು ನಿಮಗೇ ತಿಳಿದಿದೆ. ಸ್ಥೂಲ
ವೃಕ್ಷಗಳ ಆಯಸ್ಸು ಯಾರಿಗೂ ತಿಳಿದಿರುವುದಿಲ್ಲ ಕೇವಲ ಅಂದಾಜಿನಿಂದ ಹೇಳುತ್ತಾರೆ. ಬಿರುಗಾಳಿ ಬಂದಿತು,
ವೃಕ್ಷವು ಬಿದ್ದಿತೆಂದರೆ ಆಯಸ್ಸು ಮುಕ್ತಾಯವಾಯಿತು. ಮನುಷ್ಯರದೂ ಸಹ ಆಕಸ್ಮಿಕ
ಮೃತ್ಯುವಾಗುತ್ತಿರುತ್ತದೆ. ಈ ಬೇಹದ್ದಿನ ವೃಕ್ಷದ ಆಯಸ್ಸು ಪೂರ್ಣ 5000 ವರ್ಷಗಳಾಗಿದೆ. ಇದರಲ್ಲಿ
ಒಂದು ದಿನವೂ ಹೆಚ್ಚು ಕಡಿಮೆಯಿರಲು ಸಾಧ್ಯವಿಲ್ಲ. ಇದು ಮಾಡಿ-ಮಾಡಲ್ಪಟ್ಟ ವೃಕ್ಷವಾಗಿದೆ, ಇದರಲ್ಲಿ
ಅಂತರವಾಗಲು ಸಾಧ್ಯವಿಲ್ಲ. ಡ್ರಾಮಾದಲ್ಲಿ ಯಾವ ದೃಶ್ಯವು ಯಾವ ಸಮಯದಲ್ಲಿ ನಡೆಯಬೇಕೋ ಅದೇ ಸಮಯದಲ್ಲಿ
ನಡೆಯುವುದು. ಚಾಚೂ ತಪ್ಪದೆ ಪುನರಾವರ್ತನೆಯಾಗುವುದು. ಇದರ ಆಯಸ್ಸೂ ನಿಖರವಾಗಿದೆ. ತಂದೆಯೂ ಸಹ ಹೊಸ
ಪ್ರಪಂಚದ ಸ್ಥಾಪನೆ ಮಾಡಲು ಬರಬೇಕಾಗಿದೆ. ತಮ್ಮ ಸರಿಯಾದ ಸಮಯದಲ್ಲಿ ಬರುತ್ತಾರೆ, ಇದರಲ್ಲಿ ಒಂದು
ಘಳಿಗೆಯೂ ಅಂತರವಾಗುವುದಿಲ್ಲ. ಈಗ ನಿಮ್ಮದು ಬೇಹದ್ದಿನ ಬುದ್ಧಿಯಾಗಿದೆ. ನೀವೇ
ತಿಳಿದುಕೊಳ್ಳುತ್ತೀರಿ - ಪೂರ್ಣ 5000 ವರ್ಷಗಳ ನಂತರ ತಂದೆಯು ಬಂದು ಪ್ರವೇಶ ಮಾಡುತ್ತಾರೆ
ಆದ್ದರಿಂದ ಶಿವರಾತ್ರಿಯಂದು ಹೇಳುತ್ತಾರೆ. ಕೃಷ್ಣನಿಗೆ ಜನ್ಮಾಷ್ಟಮಿಯಂದು ಹೇಳುತ್ತಾರೆ, ಶಿವನ
ಜನ್ಮಾಷ್ಟಮಿಯಂದು ಹೇಳುವುದಿಲ್ಲ, ಶಿವನ ರಾತ್ರಿಯಂದು ಹೇಳುತ್ತಾರೆ ಏಕೆಂದರೆ ಒಂದುವೇಳೆ ಜನ್ಮವಾದರೆ
ಮೃತ್ಯುವೂ ಆಗುವುದು. ಮನುಷ್ಯರ ಜನ್ಮ ದಿನವೆಂದು ಹೇಳುತ್ತಾರೆ. ಶಿವನಿಗೆ ಯಾವಾಗಲೂ ಶಿವ
ರಾತ್ರಿಯಂದೇ ಹೇಳುತ್ತಾರೆ. ಪ್ರಪಂಚದಲ್ಲಿ ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ.
ಶಿವರಾತ್ರಿಯಂದು ಏಕೆ ಹೇಳುತ್ತಾರೆ? ಜನ್ಮಾಷ್ಟಮಿಯಂದು ಏಕೆ ಹೇಳುವುದಿಲ್ಲ ಇದನ್ನು ನೀವೇ
ತಿಳಿದುಕೊಳ್ಳುತ್ತೀರಿ. ತಂದೆಯ ಜನ್ಮವು ದಿವ್ಯ, ಅಲೌಕಿಕವಾಗಿದೆ. ಇದು ಮತ್ತ್ಯಾರಿಗೂ ಇರಲು
ಸಾಧ್ಯವಿಲ್ಲ. ಶಿವ ತಂದೆಯು ಯಾವಾಗ ಹೇಗೆ ಬರುತ್ತಾರೆ, ಶಿವರಾತ್ರಿಯ ಅರ್ಥವೇನು ಎಂದು ಯಾರಿಗೂ
ಗೊತ್ತಿಲ್ಲ. ನೀವೇ ತಿಳಿದುಕೊಂಡಿದ್ದೀರಿ - ಇದು ಬೇಹದ್ದಿನ ರಾತ್ರಿಯಾಗಿದೆ. ಭಕ್ತಿಯ ರಾತ್ರಿಯು
ಪೂರ್ಣವಾಗಿ ದಿನವಾಗುತ್ತದೆ. ಬ್ರಹ್ಮನ ರಾತ್ರಿ ಮತ್ತು ದಿನವೆಂದರೆ ಇದು ಬ್ರಾಹ್ಮಣರಿಗೂ
ದಿನ-ರಾತ್ರಿಯಾಯಿತು. ಕೇವಲ ಒಬ್ಬ ಬ್ರಹ್ಮಾರವರ ಆಟವು ನಡೆಯುವುದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ
- ಈಗ ದಿನವು ಆರಂಭವಾಗಲಿದೆ. ಓದುತ್ತಾ-ಓದುತ್ತಾ ಹೋಗಿ ತಮ್ಮ ಮನೆಯನ್ನು ತಲುಪುತ್ತೀರಿ ನಂತರ
ದಿನದಲ್ಲಿ ಬರುತ್ತೀರಿ. ಅರ್ಧಕಲ್ಪ ದಿನ, ಅರ್ಧಕಲ್ಪ ರಾತ್ರಿಯಂದು ಗಾಯನವಿದೆ ಆದರೆ ಇದು ಯಾರ
ಬುದ್ಧಿಯಲ್ಲಿಯೂ ಬರುವುದಿಲ್ಲ. ಕಲಿಯುಗದ ಆಯಸ್ಸು ಇನ್ನೂ 40 ಸಾವಿರ ವರ್ಷಗಳಿದೆಯಂದು ಅವರು
ಹೇಳುತ್ತಾರೆ. ಸತ್ಯಯುಗದ ಆಯಸ್ಸು ಲಕ್ಷಾಂತರ ವರ್ಷಗಳಿದ್ದಿದ್ದೇ ಆದರೆ ಅರ್ಧ-ಅರ್ಧ ಭಾಗದ ಲೆಕ್ಕವೇ
ಬರುವುದಿಲ್ಲ. ಕಲ್ಪದ ಆಯಸ್ಸನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಇಡೀ ವಿಶ್ವದ
ಆದಿ-ಮಧ್ಯ-ಅಂತ್ಯವನ್ನು ತಿಳಿದಿದ್ದೀರಿ. ಇದು 5000 ವರ್ಷಗಳ ನಂತರ ಈ ಸೃಷ್ಟಿಚಕ್ರವು ಸುತ್ತುತ್ತಾ
ಇರುತ್ತದೆ. ವಿಶ್ವವಂತೂ ಇದ್ದೇ ಇರುತ್ತದೆ ಅದರಲ್ಲಿ ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ
ಮನುಷ್ಯರೇ ಬೇಸತ್ತು ಹೋಗುತ್ತಾರೆ - ಇದೇನು ಆವಾಗಮನದ ಚಕ್ರವಿದೆ ಎಂದು ಹೇಳುತ್ತಾರೆ. ಒಂದುವೇಳೆ
84 ಲಕ್ಷ ಜನ್ಮಗಳ ಚಕ್ರವಿದ್ದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ತಿಳಿದುಕೊಳ್ಳದ ಕಾರಣ ಕಲ್ಪದ
ಆಯಸ್ಸನ್ನು ಹೆಚ್ಚಿಸಿದ್ದಾರೆ. ನೀವು ಮಕ್ಕಳೀಗ ತಂದೆಯಿಂದ ಸನ್ಮುಖದಲ್ಲಿ ಓದುತ್ತಿದ್ದೀರಿ. ನಾವು
ಈಗ ಪ್ರತ್ಯಕ್ಷದಲ್ಲಿ ಕುಳಿತಿದ್ದೇವೆಂದು ನಿಮಗೆ ಭಾಸವಾಗುತ್ತದೆ. ಪುರುಷೋತ್ತಮ ಸಂಗಮಯುವು
ಅವಶ್ಯವಾಗಿ ಬರಬೇಕಾಗುತ್ತದೆ. ಯಾವಾಗ ಬರುತ್ತದೆ, ಹೇಗೆ ಬರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಅಂದಮೇಲೆ ಎಷ್ಟೊಂದು ಗದ್ಗದಿತವಾಗಬೇಕು! ನೀವೇ ಕಲ್ಪ-ಕಲ್ಪವೂ
ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ ಅರ್ಥಾತ್ ಮಾಯೆಯ ಮೇಲೆ ಜಯ ಗಳಿಸುತ್ತೀರಿ ಮತ್ತೆ
ಸೋಲುತ್ತೀರಿ. ಇದು ಬೇಹದ್ದಿನ ಸೋಲು ಮತ್ತು ಗೆಲುವಾಗಿದೆ. ಆ ರಾಜರಿಗಂತೂ ಬಹಳಷ್ಟು ಸೋಲು-ಗೆಲುವು
ಆಗುತ್ತಿರುತ್ತದೆ. ಅನೇಕ ಯುದ್ಧಗಳು ನಡೆಯುತ್ತಿರುತ್ತವೆ. ಒಂದು ಚಿಕ್ಕ ಯುದ್ಧವಾದರೂ ಸಹ ನಾವೀಗ
ಗೆದ್ದೆವೆಂದು ಹೇಳುತ್ತಾರೆ. ಏನನ್ನು ಗೆದ್ದರು? ಅತಿ ಚಿಕ್ಕ ತುಣುಕು ಗೆದ್ದರು. ದೊಡ್ಡ
ಯುದ್ಧದಲ್ಲಿ ಸೋಲುತ್ತಾರೆಂದರೆ ನಂತರ ಬಾವುಟವನ್ನು ಕೆಳಗಿಳಿಸಿ ಬಿಡುತ್ತಾರೆ. ಮೊಟ್ಟ ಮೊದಲಿಗೆ
ಒಬ್ಬ ರಾಜನಿರುತ್ತಾರೆ ನಂತರ ವೃದ್ಧಿಯಾಗುತ್ತಾ ಹೋಗುತ್ತದೆ. ಮೊಟ್ಟ ಮೊದಲಿಗೆ ಲಕ್ಷ್ಮೀ-ನಾರಾಯಣರ
ರಾಜ್ಯವಿತ್ತು ನಂತರ ಇಷ್ಟೆಲ್ಲಾ ರಾಜರು ಬರತೊಡಗಿದರು. ಹೇಗೆ ಪೋಪನ್ನು ತೋರಿಸುತ್ತಾರೆ. ಅವರು
ಮೊದಲು ಒಬ್ಬರೇ ಇದ್ದರು, ನಂತರ ನಂಬರ್ವಾರ್. ಅನ್ಯ ಪೋಪರು ಬರತೊಡಗಿದರು. ಯಾರಿಗೂ ಮೃತ್ಯುವು ಹೇಳಿ
ಬರುವುದಿಲ್ಲವಲ್ಲವೆ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ನಮ್ಮನ್ನು ಅಮರರನ್ನಾಗಿ ಮಾಡುತ್ತಿದ್ದಾರೆ.
ಅಮರಪುರಿಯ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ಎಷ್ಟೊಂದು ಖುಷಿಯಿರಬೇಕು! ಇದು ಮೃತ್ಯುಲೋಕ ಅದು
ಅಮರಲೋಕವಾಗಿದೆ. ಈ ಮಾತುಗಳು ಹೊಸಬರಿಗೆ ಅರ್ಥವಾಗುವುದಿಲ್ಲ. ಹಳಬರಿಗೆ ಮಜಾ ಬರುವಷ್ಟು ಹೊಸಬರಿಗೆ
ಬರುವುದಿಲ್ಲ. ದಿನ-ಪ್ರತಿದಿನ ವೃದ್ಧಿಯಾಗುತ್ತಾ ಇರುತ್ತಾರೆ. ನಿಶ್ಚಯವು ಪಕ್ಕಾ ಆಗುತ್ತದೆ.
ಇದರಲ್ಲಿ ಬಹಳ ಸಹನಾಶೀಲತೆಯಿರಬೇಕು. ಇದು ಆಸುರೀ ಪ್ರಪಂಚವಾಗಿದೆ. ಅನ್ಯರಿಗೆ ದುಃಖ ಕೊಡುವುದರಲ್ಲಿ
ತಡ ಮಾಡುವುದಿಲ್ಲ. ನಾವೀಗ ತಂದೆಯ ಶ್ರೀಮತದಂತೆ ನಡೆಯುತ್ತಿದ್ದೇವೆ, ಸಂಗಮಯುಗದಲ್ಲಿದ್ದೇವೆಂದು
ನೀವಾತ್ಮರು ಹೇಳುತ್ತೀರಿ. ಉಳಿದೆಲ್ಲರೂ ಕಲಿಯುಗದಲ್ಲಿದ್ದಾರೆ. ನೀವೀಗ
ಪುರುಷೋತ್ತಮರಾಗುತ್ತಿದ್ದೀರಿ, ಪುರುಷರಲ್ಲಿ ಉತ್ತಮ ಪುರುಷರು ವಿದ್ಯೆಯಿಂದಲೇ ಆಗುತ್ತೀರಿ.
ವಿದ್ಯೆಯಿಂದಲೇ ಚೀಫ್ ಜಸ್ಟೀಸ್ ಮೊದಲಾದ ಪದವಿಯನ್ನು ಪಡೆಯುತ್ತಾರಲ್ಲವೇ. ನಿಮಗಂತೂ ತಂದೆಯು
ಓದಿಸುತ್ತಾರೆ. ಈ ವಿದ್ಯೆಯಿಂದಲೇ ತಮ್ಮ ಪುರುಷಾರ್ಥದನುಸಾರ ಪದವಿಯನ್ನು ಪಡೆಯುವಿರಿ. ಯಾರೆಷ್ಟು
ಓದುವಿರೋ ಅಷ್ಟು ದರ್ಜೆ ಸಿಗುವುದು. ಇದರಲ್ಲಿ ರಾಜ್ಯ ಪದವಿಯ ದರ್ಜೆಯಿದೆ. ಹೇಗೆ ಆ ವಿದ್ಯೆಯಲ್ಲಿ
ರಾಜ್ಯ ಪದವಿಯ ದರ್ಜೆಯಿರುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ನಾವು
ರಾಜಾಧಿರಾಜರಾಗುತ್ತಿದ್ದೇವೆ ಅಂದಮೇಲೆ ಎಷ್ಟು ಖುಷಿಯಿರಬೇಕು! ನಾವು ಡಬಲ್ ಕಿರೀಟಧಾರಿ ಬಹಳ
ಶ್ರೇಷ್ಠರಾಗುತ್ತೇವೆ. ಭಗವಂತ ತಂದೆಯು ನಮಗೆ ಓದಿಸುತ್ತಿದ್ದಾರೆ. ನಿರಾಕಾರ ತಂದೆಯು ಬಂದು ಹೇಗೆ
ಓದಿಸುತ್ತಾರೆ ಎಂಬುದನ್ನು ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಹೇ ಪತಿತ ಪಾವನ ಬಂದು ನಮ್ಮನ್ನು
ಪಾವನ ಮಾಡಿ ಎಂದು ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕಾಮ ಮಹಾಶತ್ರುವಾಗಿದೆ.
ನೀವು ಒಂದು ಕಡೆ ಪತಿತ ಪಾವನ ಎಂದು ಕರೆಯುತ್ತೀರಿ, ನಾನೀಗ ಬಂದಿದ್ದೇನೆ - ಮಕ್ಕಳೇ ಪತಿತತನವನ್ನು
ಬಿಡಿ ಎಂದು ಹೇಳುತ್ತಾರೆ ಆದರೆ ನೀವೇಕೆ ಬಿಡುತ್ತಿಲ್ಲ. ತಂದೆಯು ನಿಮ್ಮನ್ನು ಪಾವನರನ್ನಾಗಿ
ಮಾಡುತ್ತಾರೆ ಮತ್ತೆ ನೀವು ಪತಿತರಾಗುತ್ತಾ ಇದ್ದರೆ ಸರಿಯಲ್ಲ. ಹೀಗೆ ಅನೇಕರು ಪತಿತರಾಗುತ್ತಾರೆ.
ಬಾಬಾ ಈ ತಪ್ಪಾಯಿತೆಂದು ಕೆಲವರು ಸತ್ಯವನ್ನು ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ ಯಾವುದೇ
ಪಾಪಕರ್ಮವಾದರೆ ಕೂಡಲೇ ತಿಳಿಸಿ. ಕೆಲವರು ಸತ್ಯ, ಕೆಲವರು ಸುಳ್ಳು ಹೇಳುತ್ತಾರೆ. ಯಾರು ಕೇಳುತ್ತಾರೆ?
ನಾನೇನು ಒಬ್ಬೊಬ್ಬರಲ್ಲಿಯೂ ಕುಳಿತು ತಿಳಿದುಕೊಳ್ಳುತ್ತೇನೆಯೇ? ಇದು ಸಾಧ್ಯವಿಲ್ಲ. ನಾನು ನಿಮಗೆ
ಸಲಹೆಯನ್ನು ಕೊಡಲು ಬರುತ್ತೇನೆ. ಪಾವನರಾಗದಿದ್ದರೆ ನಿಮಗೇ ನಷ್ಟವಾಗುವುದು. ಪರಿಶ್ರಮ ಪಟ್ಟು
ಪಾವನರಾಗಿ ಮತ್ತೆ ಪತಿತರಾದರೆ ಮಾಡಿಕೊಂಡಿರುವ ಸಂಪಾದನೆಯು ವ್ಯರ್ಥವಾಗುವುದು. ನಾವೇ ಪತಿತರಾಗಿ
ಬಿಟ್ಟೆವು ಎಂದು ನಾಚಿಕೆಯಾಗುವುದು. ಮತ್ತೆ ‘ಪಾವನರಾಗಿ' ಎಂಬುದನ್ನು ಹೇಗೆ ಹೇಳುವಿರಿ? ನಾವು
ತಂದೆಯ ಆಜ್ಞೆಯನ್ನು ಎಷ್ಟು ಉಲ್ಲಂಘನೆ ಮಾಡಿದೆವೆಂದು ಮನಸ್ಸು ತಿನ್ನುತ್ತದೆ. ನೀವಿಲ್ಲಿ
ತಂದೆಯೊಂದಿಗೆ ಡೈರೆಕ್ಟ್ ಪ್ರತಿಜ್ಞೆ ಮಾಡುತ್ತೀರಿ. ನಿಮಗೆ ತಿಳಿದಿದೆ - ತಂದೆಯು ನಮ್ಮನ್ನು
ಸುಖಧಾಮ, ಶಾಂತಿಧಾಮದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ತಂದೆಯು ಪ್ರತ್ಯಕ್ಷವಾಗಿದ್ದಾರೆ, ನಾವು
ಅವರ ಸನ್ಮುಖದಲ್ಲಿ ಕುಳಿತಿದ್ದೇವೆ. ಇವರಲ್ಲಿ ಮೊದಲು ಈ ಜ್ಞಾನವಿರಲಿಲ್ಲ ಅಥವಾ ಜ್ಞಾನವನ್ನು ಕೊಡಲು
ಯಾವ ಗುರುವೂ ಇರಲಿಲ್ಲ. ಒಂದುವೇಳೆ ಈ ಜ್ಞಾನವನ್ನು ಕೊಡುವ ಗುರುಗಳಿದ್ದಿದ್ದರೆ ಕೇವಲ ಒಬ್ಬರಿಗೇ
ಜ್ಞಾನ ಕೊಡುವರೇ? ಗುರುಗಳಿಗೆ ಅನುಯಾಯಿಗಳಂತೂ ಅನೇಕರಿರುತ್ತಾರಲ್ಲವೆ. ಕೇವಲ ಒಬ್ಬರೇ ಇರುವುದಿಲ್ಲ.
ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಸದ್ಗುರು ಒಬ್ಬರೇ ಆಗಿದ್ದಾರೆ ಅವರು ನಿಮಗೆ ಮಾರ್ಗವನ್ನು
ತಿಳಿಸುತ್ತಾರೆ. ನಾವು ಅನ್ಯರಿಗೆ ತಿಳಿಸುತ್ತೇವೆ. ತಂದೆಯನ್ನು ನೆನಪು ಮಾಡಿ ಎಂದು ನೀವು ಎಲ್ಲರಿಗೆ
ಹೇಳಿ. ಸರ್ವಶ್ರೇಷ್ಠ ತಂದೆಯನ್ನು ನೆನಪು ಮಾಡುವುದರಿಂದಲೇ ಶ್ರೇಷ್ಠ ಪದವಿ ಸಿಗುವುದು. ನೀವು
ರಾಜಾಧಿ ರಾಜರಾಗುತ್ತೀರಿ. ನಿಮ್ಮ ಬಳಿ ಅಪಾರ ಧನವಿರುವುದು. ನೀವು ತಮ್ಮ ಜೋಳಿಗೆಯನ್ನು
ತುಂಬಿಸಿಕೊಳ್ಳುತ್ತೀರಲ್ಲವೆ. ತಂದೆಯು ನಮ್ಮ ಜೋಳಿಗೆಯನ್ನು ಹೆಚ್ಚಿನದಾಗಿ ತುಂಬುತ್ತಿದ್ದಾರೆಂದು
ನಿಮಗೆ ತಿಳಿದಿದೆ. ಕುಬೇರನ ಬಳಿ ಬಹಳ ಹಣವಿತ್ತೆಂದು ಹೇಳುತ್ತಾರೆ. ವಾಸ್ತವದಲ್ಲಿ ನೀವು
ಪ್ರತಿಯೊಬ್ಬರೂ ಕುಬೇರರಾಗಿದ್ದೀರಿ. ನಿಮಗೆ ವೈಕುಂಠ ರೂಪಿ ಖಜಾನೆಯು ಸಿಗುತ್ತದೆ. ಖುದಾ ದೋಸ್ತನ
ಕಥೆಯೂ ಸಹ ಇದೆ. ಅವರಿಗೆ ಮೊದಲು ಯಾರು ಸಿಗುತ್ತಿದ್ದರೋ ಅವರಿಗೆ ಒಂದು ದಿನಕ್ಕಾಗಿ ರಾಜ್ಯವನ್ನು
ಕೊಟ್ಟು ಬಿಡುತ್ತಿದ್ದರು. ಇವೆಲ್ಲವೂ ದೃಷ್ಟಾಂತಗಳಾಗಿವೆ. ಅಲ್ಲಾ ಎಂದರೆ ತಂದೆ, ಅವರು
ಅವಲುದ್ದೀನನ್ನು ರಚಿಸುತ್ತಾರೆ. ನಂತರ ಸಾಕ್ಷಾತ್ಕಾರವಾಗುತ್ತದೆ, ನೀವು ತಿಳಿದುಕೊಂಡಿದ್ದೀರಿ -
ಅವಶ್ಯವಾಗಿ ನಾವು ಯೋಗಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೇವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ ಆಸುರೀ
ಪ್ರಪಂಚದಲ್ಲಿ ಬಹಳ ಬಹಳ ಸಹನಾಶೀಲರಾಗಿರಬೇಕಾಗಿದೆ. ಯಾರೇ ನಿಂದನೆ ಮಾಡಲಿ, ದುಃಖ ಕೊಡಲಿ ಆದರೂ ಸಹ
ಸಹಾಯ ಮಾಡಬೇಕಾಗಿದೆ. ತಂದೆಯ ಶ್ರೀಮತವನ್ನೆಂದೂ ಬಿಡಬಾರದು.
2. ಡೈರೆಕ್ಟ್ ತಂದೆಯು ಪಾವನರಾಗುವ ಆದೇಶ ನೀಡಿದ್ದಾರೆ ಆದ್ದರಿಂದ ಪತಿತರೆಂದೂ ಆಗಬಾರದು. ಯಾವುದೇ
ಪಾಪವಾದರೂ ಅದನ್ನು ಮುಚ್ಚಿಡಬಾರದು.
ವರದಾನ:
ಪರಮಾತ್ಮ ಮಿಲನದ
ಮುಖಾಂತರ ಆತ್ಮೀಯ ಸಂಭಾಷಣೆಗೆ ಸರಿಯಾದ ಪ್ರತಿಕ್ರಿಯೆ ಪ್ರಾಪ್ತಿ ಪಡೆಯುವಂತಹ ತಂದೆಯ ಸಮಾನ ಬಹುರೂಪಿ
ಭವ.
ಹೇಗೆ ತಂದೆ
ಬಹುರೂಪಿಯಾಗಿದ್ದಾರೆ - ಸೆಕೆಂಡ್ನಲ್ಲಿ ನಿರಾಕಾರರಿಂದ ಆಕಾರಿ ವಸ್ತ್ರ ಧಾರಣೆ ಮಾಡಿ ಬಿಡುತ್ತಾರೆ,
ಹಾಗೆ ನೀವೂ ಸಹ ಈ ಮಣ್ಣಿನ ವಸ್ತ್ರವನ್ನು ಬಿಟ್ಟು ಆಕಾರಿ ಫರಿಶ್ತಾ ವಸ್ತ್ರ, ಮಿನುಗುವ
ವಸ್ತ್ರವನ್ನು ಧರಿಸಿದ್ದೆ ಆದರೆ ಸಹಜ ಮಿಲನವೂ ಸಹ ಆಗುವುದು ಮತ್ತು ಆತ್ಮೀಯ ಸಂಭಾಷಣೆಗೆ ಸ್ಪಷ್ಠ
ಪ್ರತಿಕ್ರೀಯೆ ತಿಳಿದು ಬರುವುದು ಏಕೆಂದರೆ ಈ ವಸ್ತ್ರ ಹಳೆಯ ಪ್ರಪಂಚದ ವೃತ್ತಿ ಮತ್ತು
ವೈಬ್ರೇಷನ್ನಿಂದ ಮಾಯೆಯ ನೀರು ಹಾಗೂ ಬೆಂಕಿಯ ಫ್ರೂಫ್ ಆಗಿದೆ, ಇದರಲ್ಲಿ ಮಾಯೆ ಹಸ್ತಕ್ಷೇಪ ಮಾಡಲು
ಸಾಧ್ಯವಿಲ್ಲ.
ಸ್ಲೋಗನ್:
ಧೃಢತೆ ಅಸಂಭವವನ್ನೂ ಸಹ
ಸಂಭವ ಮಾಡಿಸಿ ಬಿಡುತ್ತದೆ.