21.10.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಪ್ರತಿನಿತ್ಯ ರಾತ್ರಿ ತಮ್ಮ ಲೆಕ್ಕ ಪತ್ರವನ್ನು ತೆಗೆಯಿರಿ, ಡೈರಿಯನ್ನಿಡಿ ಆಗ ಎಲ್ಲಿಯೂ ನಷ್ಟವಾಗದಿರಲಿ ಎಂದು ಭಯವಿರುತ್ತದೆ”.

ಪ್ರಶ್ನೆ:
ಕಲ್ಪದ ಹಿಂದಿನ ಭಾಗ್ಯಶಾಲಿ ಮಕ್ಕಳಿಗೆ ತಂದೆಯ ಯಾವ ಮಾತು ಕೂಡಲೇ ಟಚ್ ಆಗುವುದು?

ಉತ್ತರ:
ತಂದೆಯು ಪ್ರತಿನಿತ್ಯವೂ ಮಕ್ಕಳಿಗೆ ನೆನಪಿನ ಯಾವ ಯುಕ್ತಿಗಳನ್ನು ತಿಳಿಸುತ್ತಾರೆಯೋ ಅವು ಭಾಗ್ಯಶಾಲಿ ಮಕ್ಕಳಿಗೇ ಟಚ್ ಆಗುತ್ತಿರುತ್ತವೆ. ಅವರು ಅದನ್ನು ಕೂಡಲೇ ಕಾರ್ಯದಲ್ಲಿ ತರುತ್ತಾರೆ. ತಂದೆಯು ಹೇಳುತ್ತಾರೆ - ಮಕ್ಕಳೇ, ಸ್ವಲ್ಪ ಸಮಯವಾದರೂ ಏಕಾಂತದಲ್ಲಿ ಉದ್ಯಾನವನದಲ್ಲಿ ಹೋಗಿ ಕುಳಿತುಕೊಳ್ಳಿ. ತಂದೆಯೊಂದಿಗೆ ಮಧುರಾತಿ ಮಧುರವಾಗಿ ಮಾತನಾಡಿ. ತಮ್ಮ ಚಾರ್ಟನ್ನಿಡಿ ಆಗ ಉನ್ನತಿಯಾಗುತ್ತಿರುವುದು.

ಓಂ ಶಾಂತಿ.
ಸೈನಿಕರಿಗೆ ಮೊಟ್ಟ ಮೊದಲು ಅಟೆನ್ಶನ್ ಪ್ಲೀಸ್ ಎಂದು ಸಾವಧಾನ ನೀಡಲಾಗುತ್ತದೆ. ತಂದೆಯೂ ಸಹ ಮಕ್ಕಳಿಗೆ ಹೇಳುತ್ತಾರೆ - ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡುತ್ತಾ ಇರುತ್ತೀರಾ? ಮಕ್ಕಳಿಗೆ ತಿಳಿಸಲಾಗಿದೆ - ತಂದೆಯು ಈ ಜ್ಞಾನವನ್ನು ಈ ಸಮಯದಲ್ಲಿಯೇ ಕೊಡುತ್ತಾರೆ, ತಂದೆಯೇ ಓದಿಸುತ್ತಾರೆ. ಮೂಲ ಮಾತೇನೆಂದರೆ ಭಗವಂತ ಯಾರು? ಯಾರು ಓದಿಸುತ್ತಾರೆ? ಈ ಮಾತನ್ನು ಮೊದಲು ತಿಳಿದುಕೊಳ್ಳಬೇಕು ಹಾಗೂ ನಿಶ್ಚಯ ಮಾಡಿಕೊಳ್ಳಬೇಕಾಗಿದೆ ಮತ್ತೆ ಅತೀಂದ್ರಿಯ ಸುಖದಲ್ಲಿಯೂ ಇರಬೇಕಾಗಿದೆ. ಆತ್ಮಕ್ಕೆ ಬಹಳ ಖುಷಿಯಿರಬೇಕು. ನಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ತಂದೆಯು ಆಸ್ತಿಯನ್ನು ಕೊಡಲು ಒಂದೇ ಬಾರಿ ಬಂದು ಮಿಲನ ಮಾಡುತ್ತಾರೆ - ಯಾವ ಆಸ್ತಿ? ವಿಶ್ವದ ರಾಜ್ಯಭಾಗ್ಯದ ಆಸ್ತಿಯನ್ನು ಕೊಡುತ್ತಾರೆ 5000 ವರ್ಷಗಳ ಹಿಂದಿನ ತರಹ. ಇದಂತೂ ಪಕ್ಕಾ ನಿಶ್ಚಯವಿದೆ. ತಂದೆಯು ಪುನಃ ಬಂದಿದ್ದಾರೆ, ಪುನಃ ಸಹಜ ರಾಜಯೋಗವನ್ನು ಕಲಿಸುತ್ತಾರೆ, ಕಲಿಸಿಕೊಡಲೇಬೇಕಾಗುತ್ತದೆ. ಮಕ್ಕಳಿಗೇನೂ ಕಲಿಸಿಕೊಡಲಾಗುವುದಿಲ್ಲ. ಮಕ್ಕಳು ತಾವೇ ಬಾಯಿಂದ ಅಮ್ಮ, ಅಪ್ಪ ಎನ್ನುತ್ತಾ ಹೋಗುತ್ತಾರೆ ಏಕೆಂದರೆ ಶಬ್ಧಗಳನ್ನು ಅನ್ಯರಿಂದ ಕೇಳಿಸಿಕೊಳ್ಳುತ್ತಾರಲ್ಲವೆ. ಇವರು ಆತ್ಮಿಕ ತಂದೆಯಾಗಿದ್ದಾರೆ, ಆತ್ಮಕ್ಕೆ ಆಂತರಿಕ ಗುಪ್ತ ನಶೆಯಿರುತ್ತದೆ, ಆತ್ಮನೇ ಓದಬೇಕಾಗುತ್ತದೆ. ಪರಮಪಿತ ಪರಮಾತ್ಮನಂತೂ ಜ್ಞಾನಪೂರ್ಣನಾಗಿದ್ದಾರೆ, ಅವರೇನನ್ನೂ ಓದಿಲ್ಲ. ಅವರಲ್ಲಿ ಜ್ಞಾನವು ಇದ್ದೇ ಇದೆ. ಯಾವುದರ ಜ್ಞಾನ? ಇದೂ ಸಹ ನೀವಾತ್ಮಗಳಿಗೆ ತಿಳಿದಿದೆ, ತಂದೆಯಲ್ಲಿ ಇಡೀ ಸೃಷ್ಟಿಯ ಆದಿ, ಮಧ್ಯ, ಅಂತ್ಯದ ಜ್ಞಾನವಿದೆ. ಹೇಗೆ ಒಂದು ಧರ್ಮದ ಸ್ಥಾಪನೆ, ಅನೇಕ ಧರ್ಮಗಳ ವಿನಾಶವಾಗುತ್ತದೆ ಎಂಬುದೆಲ್ಲವನ್ನೂ ತಿಳಿದುಕೊಂಡಿದ್ದಾರೆ. ಆದ್ದರಿಂದ ಅವರಿಗೆ ಎಲ್ಲವನ್ನೂ ಬಲ್ಲವರೆಂದು ಹೇಳಿ ಬಿಡುತ್ತಾರೆ, ಅಂದರೆ ಇದರ ಅರ್ಥವೇನು? ಇದನ್ನು ಯಾರೂ ತಿಳಿದುಕೊಂಡಿಲ್ಲ. ಈಗ ತಂದೆ ನೀವು ಮಕ್ಕಳಿಗೂ ತಿಳಿಸಿದ್ದಾರೆ. ಈ ಸ್ಲೋಗನ್ ಅವಶ್ಯವಾಗಿ ಹಾಕಿರಿ - ಮನುಷ್ಯರಾಗಿಯೂ ಒಂದುವೇಳೆ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಕಾಲಾವಧಿ, ಪುನರಾವರ್ತನೆಯನ್ನೇ ಅರಿತುಕೊಂಡಿಲ್ಲವೆಂದರೆ ಅಂತಹವರಿಗೆ ಏನು ಹೇಳಲಾಗುವುದು..... ಈ ಪುನರಾವರ್ತನೆ ಶಬ್ಧವು ಬಹಳ ಅವಶ್ಯಕವಾಗಿದೆ. ಗೀತೆಯ ಭಗವಂತ ಯಾರು.... ಈ ಚಿತ್ರವು ಬಹಳ ಸುಂದರವಾಗಿದೆ. ಇಡೀ ವಿಶ್ವದಲ್ಲಿ ಇದೇ ಎಲ್ಲದಕ್ಕಿಂತ ನಂಬರ್ವನ್ ತಪ್ಪಾಗಿದೆ. ಪರಮಪಿತ ಪರಮಾತ್ಮನನ್ನು ಅರಿತುಕೊಳ್ಳದ ಕಾರಣ ಎಲ್ಲರೂ ಭಗವಂತನ ರೂಪವೆಂದು ಹೇಳಿ ಬಿಡುತ್ತಾರೆ. ಹೇಗೆ ಚಿಕ್ಕ ಮಕ್ಕಳೊಂದಿಗೆ ನೀವು ನೀನು ಯಾರ ಮಗನೆಂದು ಕೇಳಿದರೆ ಇಂತಹವರ ಮಗನೆಂದು ಹೇಳುವರು. ಅವರು ಯಾರ ಮಗನೆಂದು ಕೇಳಿದಾಗ ಕೊನೆಗೆ ಅವರು ನನ್ನ ಮಗ ಎಂದು ಹೇಳಿ ಬಿಡುತ್ತಾರೆ. ಹಾಗೆಯೇ ಇಲ್ಲಿಯೂ ಸಹ ಭಗವಂತನನ್ನು ಅರಿಯದ ಕಾರಣ ನಾನೇ ಭಗವಂತನೆಂದು ಹೇಳಿ ಬಿಡುತ್ತಾರೆ. ಇಷ್ಟು ಪೂಜೆ ಮಾಡುತ್ತಾರೆ ಆದರೆ ತಿಳಿದುಕೊಳ್ಳುವುದಿಲ್ಲ. ಗಾಯನವಿದೆ, ಬ್ರಹ್ಮನ ರಾತ್ರಿಯಂದ ಮೇಲೆ ಅವಶ್ಯವಾಗಿ ಅದು ಬ್ರಾಹ್ಮಣ-ಬ್ರಾಹ್ಮಣಿಯರಿಗೂ ರಾತ್ರಿಯಾಗಿದೆ. ಇವೆಲ್ಲವೂ ಧಾರಣೆ ಮಾಡಿಕೊಳ್ಳುವ ಮಾತುಗಳಾಗಿವೆ. ಯಾರು ಯೋಗದಲ್ಲಿರುವರೋ ಅವರಿಗೆ ಇದು ಧಾರಣೆಯಾಗುತ್ತದೆ. ನೆನಪಿಗೇ ಬಲವೆಂದು ಹೇಳಲಾಗುತ್ತದೆ. ಜ್ಞಾನವಂತೂ ಆದಾಯದ ಮೂಲವಾಗಿದೆ ಆದರೆ ನೆನಪಿನಿಂದ ಶಕ್ತಿ ಸಿಗುತ್ತದೆ. ಅದರಿಂದ ವಿಕರ್ಮಗಳು ವಿನಾಶವಾಗುತ್ತದೆ. ನೀವು ಬುದ್ಧಿಯೋಗವನ್ನು ತಂದೆಯ ಜೊತೆ ಜೋಡಿಸಬೇಕಾಗಿದೆ. ಈ ಜ್ಞಾನವನ್ನು ತಂದೆಯು ಈಗಲೇ ಕೊಡುತ್ತಾರೆ ಮತ್ತೆಂದೂ ಸಿಗುವುದಿಲ್ಲ. ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಉಳಿದೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳು ಹಾಗೂ ಕರ್ಮಕಾಂಡದ ಕ್ರಿಯೆಗಳಾಗಿವೆ. ಅದಕ್ಕೆ ಜ್ಞಾನವೆಂದು ಹೇಳುವುದಿಲ್ಲ. ಆತ್ಮಿಕ ಜ್ಞಾನವು ಒಬ್ಬ ತಂದೆಯ ಬಳಿಯೇ ಇದೆ, ಅದನ್ನವರು ಬ್ರಾಹ್ಮಣರಿಗೇ ತಿಳಿಸುತ್ತಾರೆ. ಮತ್ತ್ಯಾರ ಬಳಿಯೂ ಈ ಆತ್ಮಿಕ ಜ್ಞಾನವಿರುವುದಿಲ್ಲ. ಪ್ರಪಂಚದಲ್ಲಿ ಎಷ್ಟೊಂದು ಧರ್ಮಗಳು, ಮಠ ಪಂಥಗಳಿವೆ, ಎಷ್ಟು ಮತಗಳಿವೆ. ನೀವು ಮಕ್ಕಳಿಗೆ ತಿಳಿಸುವುದರಲ್ಲಿ ಎಷ್ಟು ಪರಿಶ್ರಮವಾಗುತ್ತದೆ, ಎಷ್ಟೊಂದು ಬಿರುಗಾಳಿಗಳು ಬರುತ್ತವೆ. ಅಂಬಿಗನೇ ನಮ್ಮ ದೋಣಿಯನ್ನು ಪಾರು ಮಾಡು ಎಂದು ಹಾಡುತ್ತಾರೆ ಆದರೆ ಎಲ್ಲರ ದೋಣಿಯಂತೂ ಪಾರಾಗಲು ಸಾಧ್ಯವಿಲ್ಲ. ಕೆಲವು ದೋಣಿಗಳು ಮುಳುಗಿ ಹೋಗುವವು, ಕೆಲವು ನಿಂತು ಹೋಗುವವು ಅಂದರೆ ಕೆಲವರು ಎರಡು-ಮೂರು ವರ್ಷಗಳಾದರೂ ಅವರ ಬಗ್ಗೆ ಸಮಾಚಾರವೇ ತಿಳಿಯುವುದಿಲ್ಲ. ಕೆಲವರಂತೂ ಅಲ್ಲಿಯೇ ನಿಂತು ಬಿಡುತ್ತಾರೆ. ಇನ್ನೂ ಕೆಲವು ದೋಣಿಗಳು (ಮಕ್ಕಳು) ಅಲ್ಲಿಯೇ ಪುಡಿ ಪುಡಿಯಾಗಿ ಬಿಡುತ್ತವೆ. ಇದರಲ್ಲಿ ಬಹಳ ಪರಿಶ್ರಮವಿದೆ. ಕೃತಕ ಯೋಗಗಳು ಎಷ್ಟೊಂದು ಬಂದು ಬಿಟ್ಟಿವೆ! ಎಷ್ಟೊಂದು ಯೋಗಾಶ್ರಮಗಳಿವೆ ಆದರೆ ಆತ್ಮಿಕ ಯೋಗಾಶ್ರಮವು ಇದರ ವಿನಃ ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ತಂದೆಯೇ ಬಂದು ಆತ್ಮಗಳಿಗೆ ಆತ್ಮಿಕ ಯೋಗವನ್ನು ಕಲಿಸುತ್ತಾರೆ. ತಂದೆಯು ಹೇಳುತ್ತಾರೆ - ಮಕ್ಕಳೇ, ಇದು ಸಹಜವಾದ ಯೋಗವಾಗಿದೆ. ಇದರಷ್ಟು ಸಹಜ ಮತ್ತ್ಯಾವುದೂ ಇಲ್ಲ. ಆತ್ಮವೇ ಶರೀರದಲ್ಲಿ ಬಂದು ಪಾತ್ರವನ್ನಭಿನಯಿಸುತ್ತದೆ. ಗರಿಷ್ಟ 84 ಜನ್ಮಗಳಿವೆ, ಉಳಿದೆಲ್ಲರದೂ ಕಡಿಮೆಯಾಗುತ್ತಾ ಹೋಗುತ್ತವೆ. ಈ ಮಾತುಗಳೂ ಸಹ ನೀವು ಮಕ್ಕಳಲ್ಲಿ ಕೆಲವರ ಬುದ್ಧಿಯಲ್ಲಿಯೇ ಇವೆ. ಬುದ್ಧಿಯಲ್ಲಿ ಧಾರಣೆಯಾಗುವುದು ಕಷ್ಟವಾಗುತ್ತದೆ. ಮೊಟ್ಟ ಮೊದಲನೇ ಮಾತನ್ನು ತಂದೆಯು ತಿಳಿಸುತ್ತಾರೆ - ಎಲ್ಲಿಗೇ ಹೋಗುತ್ತೀರೆಂದರೆ ಮೊಟ್ಟ ಮೊದಲಿಗೆ ತಂದೆಯ ಪರಿಚಯ ಕೊಡಿ. ತಂದೆಯ ಪರಿಚಯ ಹೇಗೆ ಕೊಡುವುದು ಎಂಬುದಕ್ಕೆ ಯುಕ್ತಿಯನ್ನು ರಚಿಸಬೇಕಾಗಿದೆ. ಯಾವಾಗ ಈ ನಿಶ್ಚಯವಾಗುವುದೋ ಆಗ ತಂದೆಯಂತೂ ಸತ್ಯವಾಗಿದ್ದಾರೆ, ಸತ್ಯ ಮಾತುಗಳನ್ನೇ ತಿಳಿಸುತ್ತಾರೆ ಎಂಬುದು ಅವರಿಗೆ ಅರ್ಥವಾಗುತ್ತದೆ. ಇದರಲ್ಲಿ ಸಂಶಯ ತರಬಾರದು. ನೆನಪಿನಲ್ಲಿಯೇ ಪರಿಶ್ರಮವಿದೆ. ಇದರಲ್ಲಿ ಮಾಯೆಯು ವಿರೋಧ ಮಾಡುತ್ತದೆ. ಪದೇ ಪದೇ ನೆನಪನ್ನು ಮರೆಸುತ್ತದೆ ಆದ್ದರಿಂದ ತಂದೆಯು ಹೇಳುತ್ತಾರೆ - ಮಕ್ಕಳೇ, ಚಾರ್ಟ್ ಬರೆಯಿರಿ ಆಗ ಯಾರೆಷ್ಟು ನೆನಪು ಮಾಡುತ್ತಾರೆಂಬುದನ್ನು ತಂದೆಯೂ ನೋಡುವರು. ಕಾಲು ಭಾಗದಷ್ಟು ಮಕ್ಕಳೂ ಸಹ ಚಾರ್ಟ್ ಇಡುವುದಿಲ್ಲ. ನಾನಂತೂ ಇಡೀ ದಿನ ನೆನಪಿನಲ್ಲಿರುತ್ತೇನೆಂದು ಹೇಳುತ್ತಾರೆ. ಆದರೆ ತಂದೆಯು ಹೇಳುತ್ತಾರೆ - ಇದು ಬಹಳ ಪರಿಶ್ರಮವಿದೆ. ಬಂಧನದಲ್ಲಿ ಯಾರು ಬಹಳ ಪೆಟ್ಟನ್ನು ತಿನ್ನುತ್ತಿರುವರೋ ಅವರೇ ದಿನ-ರಾತ್ರಿ ನೆನಪಿನಲ್ಲಿರುವರು - ಬಾಬಾ, ಯಾವಾಗ ಈ ಸಂಬಂಧಗಳಿಂದ ನಾವು ಮುಕ್ತರಾಗುತ್ತೇವೆ? ಎಂದು. ಬಾಬಾ, ನಾವು ಬಂಧನದಿಂದ ಹೇಗೆ ಬಿಡುಗಡೆಯಾಗುವುದು ಎಂದು ಆತ್ಮವು ಕೂಗುತ್ತದೆ. ಒಂದುವೇಳೆ ಯಾರಾದರೂ ಬಹಳ ನೆನಪಿನಲ್ಲಿರುವುದಾದರೆ ತಂದೆಗೆ ಚಾರ್ಟನ್ನು ಕಳುಹಿಸಿ. ತಂದೆಯ ಆದೇಶ ಸಿಗುತ್ತದೆ - ಪ್ರತಿನಿತ್ಯ ರಾತ್ರಿ ತಮ್ಮ ಲೆಕ್ಕವನ್ನು ನೋಡಿಕೊಳ್ಳಿ, ಡೈರಿಯನ್ನಿಡಿ. ಡೈರಿಯನ್ನಿಡುವುದರಿಂದ ಭಯವಿರುತ್ತದೆ - ಎಲ್ಲಿ ನಷ್ಟವಾಗುವುದೋ, ತಂದೆಯು ನೋಡಿದರೆ ಏನು ಹೇಳುವರು? ಎಷ್ಟು ಪ್ರಿಯಾತಿ ಪ್ರಿಯ ತಂದೆಯನ್ನು ಇಷ್ಟು ಸಮಯವಷ್ಟೇ ನೆನಪು ಮಾಡುತ್ತೀರಾ! ಲೌಕಿಕ ತಂದೆಯನ್ನು, ಸ್ತ್ರೀಯನ್ನು ನೀವು ನೆನಪು ಮಾಡುತ್ತೀರಿ, ನನ್ನನ್ನು ನೆನಪು ಮಾಡಲು ಆಗುವುದಿಲ್ಲವೆ? ಚಾರ್ಟನ್ನು ಬರೆದಾಗ ತನಗೇ ನಾಚಿಕೆಯಾಗುವುದು. ಈ ಸ್ಥಿತಿಯಲ್ಲಿ ನಾನು ಯಾವ ಪದವಿಯನ್ನು ಪಡೆಯಬಲ್ಲೆನು ಎಂದು ಅರ್ಥವಾಗುತ್ತದೆ ಆದ್ದರಿಂದ ತಂದೆಯು ಚಾರ್ಟನ್ನಿಡುವುದರ ಮೇಲೆ ಒತ್ತುಕೊಟ್ಟು ಹೇಳುತ್ತಾರೆ - ತಂದೆ ಮತ್ತು 84 ಜನ್ಮಗಳ ಚಕ್ರವನ್ನು ನೆನಪು ಮಾಡಿದರೆ ಚಕ್ರವರ್ತಿ ರಾಜರಾಗಿ ಬಿಡುವಿರಿ. ಅನ್ಯರನ್ನೂ ತಮ್ಮ ಸಮಾನ ಮಾಡಿಕೊಂಡಾಗಲೇ ಪ್ರಜೆಗಳ ಮೇಲೆ ರಾಜ್ಯ ಮಾಡುವಿರಿ. ಇದು ನರನಿಂದ ನಾರಾಯಣನಾಗುವ ರಾಜಯೋಗವಾಗಿದೆ. ಗುರಿ-ಧ್ಯೇಯವೇ ಇದಾಗಿದೆ. ಹೇಗೆ ಆತ್ಮನನ್ನು ಸ್ಥೂಲ ಕಣ್ಣುಗಳಿಂದ ನೋಡಲಾಗುವುದಿಲ್ಲ, ಅರಿತುಕೊಳ್ಳಲಾಗುತ್ತದೆ. ಇವರಲ್ಲಿ ಆತ್ಮವಿದೆ ಎಂಬುದನ್ನೂ ಸಹ ತಿಳಿದುಕೊಳ್ಳಲಾಗುತ್ತದೆ. ಈ ಲಕ್ಷ್ಮೀ-ನಾರಾಯಣರ ರಾಜಧಾನಿಯೂ ಅವಶ್ಯವಾಗಿ ಇರುವುದು. ಇವರು ಎಲ್ಲರಿಗಿಂತ ಹೆಚ್ಚು ಪರಿಶ್ರಮ ಪಟ್ಟಿದ್ದಾರೆ ಆದ್ದರಿಂದಲೇ ಸ್ಕಾಲರ್ಶಿಪ್ ಪಡೆದುಕೊಂಡಿದ್ದಾರೆ. ಅವಶ್ಯವಾಗಿ ಇವರಿಗೆ ಬಹಳ ಪ್ರಜೆಗಳಿರುವರು. ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪಡೆದಿದ್ದಾರೆ. ಅವಶ್ಯವಾಗಿ ಬಹಳ ಯೋಗ ಮಾಡಿದ್ದಾರೆ ಆದುದರಿಂದಲೇ ಪಾಸ್-ವಿತ್-ಆನರ್ ಆದರು. ಈ ಕಾರಣವನ್ನೂ ತೆಗೆಯಬೇಕು - ನಮಗೆ ಯೋಗವು ಏಕೆ ಹಿಡಿಸುತ್ತಿಲ್ಲ? ಉದ್ಯೋಗ-ವ್ಯವಹಾರಗಳ ಜಂಜಾಟದಲ್ಲಿ ಬುದ್ಧಿಯು ಬಹಳವಾಗಿ ಸಿಲುಕುತ್ತದೆ. ಅದರಿಂದ ಸಮಯವನ್ನು ತೆಗೆದು ಇದರಕಡೆ ಹೆಚ್ಚು ಗಮನ ಕೊಡಬೇಕಾಗಿದೆ. ಸ್ವಲ್ಪ ಸಮಯವಾದರೂ ತೆಗೆದು ಉದ್ಯಾನವನದಲ್ಲಿ ಏಕಾಂತದಲ್ಲಿ ಕುಳಿತುಕೊಳ್ಳಿ. ಸ್ತ್ರೀಯರಂತೂ ಹೋಗಲು ಸಾಧ್ಯವಾಗುವುದಿಲ್ಲ. ಅವರು ಮನೆ ಸಂಭಾಲನೆ ಮಾಡಬೇಕಾಗುತ್ತದೆ. ಪುರುಷರಿಗೆ ಇದು ಸಹಜವಾಗಿದೆ. ಕಲ್ಪದ ಹಿಂದಿನವರು ಯಾರು ಭಾಗ್ಯಶಾಲಿಗಳಾಗಿರುವರೋ ಅವರಿಗೇ ಇದು ಪ್ರೇರಣೆಯಾಗುವುದು. ವಿದ್ಯೆಯು ಬಹಳ ಚೆನ್ನಾಗಿದೆ ಆದರೆ ಪ್ರತಿಯೊಬ್ಬರ ಬುದ್ಧಿಯು ಬೇರೆ-ಬೇರೆಯಾಗಿರುತ್ತದೆ ಆದರೆ ಹೇಗಾದರೂ ಮಾಡಿ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ತಂದೆಯು ಎಲ್ಲಾ ಸಲಹೆಗಳನ್ನು ಕೊಡುತ್ತಾರೆ ಆದರೆ ಮಕ್ಕಳೇ ಮಾಡಬೇಕಲ್ಲವೆ. ತಂದೆಯು ಸಾಮಾನ್ಯವಾಗಿ ಆದೇಶ ನೀಡುತ್ತಾರೆ - ಒಬ್ಬೊಬ್ಬರೂ ವ್ಯಕ್ತಿಗತವಾಗಿ ಬಂದು ಕೇಳಿದರೂ ಸಹ ತಂದೆಯು ಸಲಹೆ ಕೊಡುತ್ತಾರೆ. ತೀರ್ಥ ಯಾತ್ರೆಗಳಲ್ಲಿ ದೊಡ್ಡ -ದೊಡ್ಡ ಪರ್ವತಗಳ ಮೇಲೆ ಹೋದಾಗ ಮಾರ್ಗದರ್ಶಕರು ಸಾವಧಾನ ನೀಡುತ್ತಿರುತ್ತಾರೆ. ಬಹಳ ಪರಿಶ್ರಮದಿಂದ ಹೋಗುತ್ತಾರೆ. ನೀವು ಮಕ್ಕಳಿಗಂತೂ ತಂದೆಯು ಬಹಳ ಸಹಜ ಯುಕ್ತಿಗಳನ್ನು ತಿಳಿಸುತ್ತಾರೆ. ಇಲ್ಲಿ ತಂದೆಯನ್ನು ನೆನಪು ಮಾಡಬೇಕು, ಶರೀರದ ಅಭಿಮಾನವನ್ನು ಕಳೆಯಬೇಕಾಗಿದೆ. ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ತಂದೆಯು ಬಂದು ಜ್ಞಾನವನ್ನು ಕೊಟ್ಟು ಹೊರಟು ಹೋಗುತ್ತಾರೆ. ಆತ್ಮದಂತಹ ತೀಕ್ಷ್ಣ ರಾಕೆಟ್ ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ಆ ವಿಜ್ಞಾನಿಗಳಂತೂ ಚಂದ್ರ ಗ್ರಹದವರೆಗೆ ಹೋಗುವುದರಲ್ಲಿ ಎಷ್ಟೊಂದು ಸಮಯವನ್ನು ವ್ಯರ್ಥ ಮಾಡುತ್ತಾರೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಈ ವಿಜ್ಞಾನದ ಕಲೆಯೂ ಸಹ ವಿನಾಶದ ಸಮಯದಲ್ಲಿ ಸಹಯೋಗ ನೀಡುತ್ತದೆ. ಅದು ಸೈನ್ಸ್, ನಿಮ್ಮದು ಸೈಲೆನ್ಸ್ ಆಗಿದೆ. ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದು ಡೆಡ್ ಸೈಲೆನ್ಸ್ ಆಗಿದೆ. ನಾನಾತ್ಮ, ಈ ಶರೀರದಿಂದ ಭಿನ್ನವಾಗಿದ್ದೇನೆ, ಈ ಶರೀರವು ಹಳೆಯ ಪಾದರಕ್ಷೆಯಾಗಿದೆ, ಸರ್ಪ ಹಾಗೂ ಆಮೆಯ ಉದಾಹರಣೆಯೂ ಸಹ ನಿಮಗಾಗಿಯೇ ಇದೆ. ಕೀಟಗಳಂತಹ ಮನುಷ್ಯರಿಗೆ ನೀವೇ ಜ್ಞಾನದ ಭೂ ಭೂ ಮಾಡಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೀರಿ. ವಿಷಯಸಾಗರದಿಂದ ಕ್ಷೀರ ಸಾಗರದೆಡೆಗೆ ಕರೆದುಕೊಂಡು ಹೋಗುವುದು ನಿಮ್ಮ ಕರ್ತವ್ಯವಾಗಿದೆ. ಸನ್ಯಾಸಿಗಳು ಈ ಯಜ್ಞ, ತಪ ಇತ್ಯಾದಿಗಳೇನನ್ನೂ ಮಾಡುವಂತಿಲ್ಲ. ಭಕ್ತಿ ಮತ್ತು ಜ್ಞಾನವಿರುವುದೇ ಗೃಹಸ್ಥಿಗಳಿಗಾಗಿ. ಸನ್ಯಾಸಿಗಳಂತೂ ಸತ್ಯಯುಗದಲ್ಲಿ ಬರುವುದೇ ಇಲ್ಲವೆಂದ ಮೇಲೆ ಈ ಮಾತುಗಳು ಅವರಿಗೇನು ಗೊತ್ತು? ಈ ನಿವೃತ್ತಿ ಮಾರ್ಗದವರದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರೇ ಡ್ರಾಮಾನುಸಾರ ಬರತೊಡಗುತ್ತಾರೆ. ಇದರಲ್ಲಿಯೂ ನಂಬರ್ವಾರ್ ಉಳಿಯುತ್ತಾರೆ. ಮಾಯೆಯು ಬಹಳ ಪ್ರಬಲವಾಗಿದೆ, ದೃಷ್ಟಿಯು ವಿಕಾರಿಯಾಗಿದೆ. ಜ್ಞಾನದ ಮೂರನೇ ನೇತ್ರವು ಸಿಗುವುದರಿಂದ ದೃಷ್ಟಿಯು ನಿರ್ವಿಕಾರಿಯಾಗುತ್ತದೆ ಮತ್ತೆ ಅರ್ಧ ಕಲ್ಪದವರೆಗೆ ಎಂದೂ ವಿಕಾರಿಯಾಗುವುದಿಲ್ಲ. ಈ ಕಣ್ಣುಗಳು ಮೋಸಗಾರನಾಗಿವೆ, ಎಷ್ಟು ನೀವು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ಕರ್ಮೇಂದ್ರಿಯಗಳು ಶೀತಲವಾಗುವವು. ನಂತರ 21 ಜನ್ಮಗಳವರೆಗೆ ಈ ಕರ್ಮೇಂದ್ರಿಯಗಳು ಚಂಚಲತೆಯಲ್ಲಿ ಬರುವುದಿಲ್ಲ. ಸತ್ಯಯುಗದಲ್ಲಿ ಕರ್ಮೇಂದ್ರಿಯಗಳು ಚಂಚಲತೆಯಲ್ಲಿ ಬರುವುದಿಲ್ಲ, ಎಲ್ಲಾ ಕರ್ಮೇಂದ್ರಿಯಗಳು ಶಾಂತ, ಸತೋಗುಣಿಯಾಗಿರುತ್ತವೆ. ದೇಹಾಭಿಮಾನದ ನಂತರವೇ ಎಲ್ಲಾ ವಿಕಾರಗಳೂ ಬರುತ್ತವೆ. ತಂದೆಯು ನಿಮ್ಮನ್ನು ದೇಹೀ-ಅಭಿಮಾನಿಗಳನ್ನಾಗಿ ಮಾಡುತ್ತಾರೆ. ನಿಮಗೆ ಅರ್ಧಕಲ್ಪಕ್ಕಾಗಿ ಆಸ್ತಿಯು ಸಿಗುತ್ತದೆ. ಯಾರೆಷ್ಟು ಪರಿಶ್ರಮ ಪಡುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುವರು. ಈಗ ಆತ್ಮಾಭಿಮಾನಿಯಾಗುವ ಪರಿಶ್ರಮ ಪಡಬೇಕಾಗಿದೆ. ನಂತರ ಕರ್ಮೇಂದ್ರಿಯಗಳು ಮೋಸ ಮಾಡುವುದಿಲ್ಲ. ಅಂತ್ಯದವರೆಗೆ ಯುದ್ಧ ನಡೆಯುತ್ತಾ ಇರುವುದು. ಯಾವಾಗ ಕರ್ಮಾತೀತ ಸ್ಥಿತಿಯನ್ನು ಪಡೆಯುವಿರೋ ಆಗ ಯುದ್ಧವೂ ಪ್ರಾರಂಭವಾಗುವುದು. ದಿನ-ಪ್ರತಿದಿನ ಸದ್ದುಗದ್ದಲವು ಹೆಚ್ಚುತ್ತಾ ಹೋಗುವುದು. ಮೃತ್ಯುವಿಗೆ ಹೆದರುವರು.

ತಂದೆಯು ಹೇಳುತ್ತಾರೆ - ಈ ಜ್ಞಾನವು ಎಲ್ಲರಿಗಾಗಿ ಇದೆ ಕೇವಲ ತಂದೆಯ ಪರಿಚಯ ಕೊಡಬೇಕಾಗಿದೆ. ನಾವೆಲ್ಲಾ ಆತ್ಮಗಳು ಸಹೋದರ-ಸಹೋದರರಾಗಿದ್ದೇವೆ, ಎಲ್ಲರೂ ಒಬ್ಬ ತಂದೆಯನ್ನು ನೆನಪು ಮಾಡುತ್ತಾರೆ, ಗಾಡ್ ಫಾದರ್ ಎಂದು ಹೇಳುತ್ತಾರೆ. ಭಲೆ ಕೆಲವರು ಪ್ರಕೃತಿಯನ್ನು ಪೂಜಿಸುವವರಿರುತ್ತಾರೆ ಆದರೆ ಭಗವಂತನಂತೂ ಇದ್ದಾರಲ್ಲವೆ. ಅವರನ್ನು ಮುಕ್ತಿ-ಜೀವನ್ಮುಕ್ತಿಗಾಗಿ ನೆನಪು ಮಾಡುತ್ತಾರೆ. ಮೋಕ್ಷವಂತೂ ಇಲ್ಲ, ವಿಶ್ವದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗಬೇಕಾಗಿದೆ. ಬುದ್ಧಿಯೂ ಸಹ ಹೇಳುತ್ತದೆ - ಯಾವಾಗ ಸತ್ಯಯುಗವಿತ್ತೋ ಆಗ ಭಾರತವು ಒಂದೇ ಇತ್ತು, ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ. ಲಕ್ಷಾಂತರ ವರ್ಷಗಳ ಮಾತಿರಲು ಸಾಧ್ಯವಿಲ್ಲ. ಲಕ್ಷಾಂತರ ವರ್ಷಗಳಿರುವುದಾದರೆ ಇನ್ನೆಷ್ಟು ಜನಸಂಖ್ಯೆಯಾಗಬಹುದು! ಆದ್ದರಿಂದ ತಂದೆಯು ಹೇಳುತ್ತಾರೆ - ಈಗ ಕಲಿಯುಗವು ಮುಕ್ತಾಯವಾಗಿ ಸತ್ಯಯುಗದ ಸ್ಥಾಪನೆಯಾಗುತ್ತಿದೆ. ಕಲಿಯುಗವು ಇನ್ನೂ ಮಗುವಾಗಿದೆ. ಇನ್ನೂ ಬಹಳಷ್ಟು ಸಾವಿರ ವರ್ಷಗಳ ಆಯಸ್ಸು ಇದೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಆದರೆ ನೀವು ಮಕ್ಕಳಿಗೆ ತಿಳಿದಿದೆ - ಈ ಕಲ್ಪವೇ 5000 ವರ್ಷಗಳದಾಗಿದೆ. ಭಾರತದಲ್ಲಿಯೇ ಇದು ಸ್ಥಾಪನೆಯಾಗುತ್ತಿದೆ. ಭಾರತವೇ ಈಗ ಸ್ವರ್ಗವಾಗುತ್ತಿದೆ. ನಾವೀಗ ಶ್ರೀಮತದಂತೆ ಈ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ – ಮೊಟ್ಟ ಮೊದಲ ಶಬ್ಧವೇ ಇದನ್ನು ತಿಳಿಸಿ. ಎಲ್ಲಿಯವರೆಗೆ ತಂದೆಯ ಪ್ರತಿ ನಿಶ್ಚಯವಾಗುವುದಿಲ್ಲವೋ ಅಲ್ಲಿಯವರೆಗೆ ಪ್ರಶ್ನೆ ಮಾಡುತ್ತಲೇ ಇರುತ್ತಾರೆ, ಮತ್ತ್ಯಾವುದೇ ಮಾತಿನ ಉತ್ತರ ಸಿಗಲಿಲ್ಲವೆಂದರೆ ಇವರಿಗೆ ಏನೂ ಗೊತ್ತಿಲ್ಲ, ಆದರೆ ನಮಗೆ ಭಗವಂತನೇ ಓದಿಸುವರೆಂದು ಹೇಳುತ್ತಾರೆ ಎಂದು ತಿಳಿದುಕೊಳ್ಳುತ್ತಾರೆ. ಆದ್ದರಿಂದ ಮೊಟ್ಟ ಮೊದಲನೆಯದಾಗಿ ಒಂದೇ ಮಾತಿನಲ್ಲಿ ನಿಲ್ಲಿಸಿ, ಮೊದಲಿಗೆ ಎಲ್ಲಾ ಆತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ ಮತ್ತು ಅವರು ರಚಯಿತನಾಗಿದ್ದಾರೆ. ಅವಶ್ಯವಾಗಿ ಸಂಗಮದಲ್ಲಿಯೇ ಬರುತ್ತಾರೆ ಎಂಬುದು ಅವರಿಗೆ ನಿಶ್ಚಯವಾಗಲಿ. ತಂದೆಯು ತಿಳಿಸುತ್ತಾರೆ - ನಾನು ಯುಗ-ಯುಗದಲ್ಲಿ ಬರುವುದಿಲ್ಲ, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ನಾನು ಹೊಸ ಸೃಷ್ಟಿಯ ರಚಯಿತನಾಗಿದ್ದೇನೆ ಅಂದಮೇಲೆ ಮಧ್ಯದಲ್ಲಿ ಹೇಗೆ ಬರುವೆನು? ಹಳೆಯ ಮತ್ತು ಹೊಸ ಪ್ರಪಂಚದ ಮಧ್ಯದಲ್ಲಿಯೇ ನಾನು ಬರುತ್ತೇನೆ. ಇದಕ್ಕೆ ಪುರುಷೋತ್ತಮ ಸಂಗಮಯುಗವೆಂದು ಹೇಳಲಾಗುತ್ತದೆ. ನೀವು ಇಲ್ಲಿಯೇ ಪುರುಷೋತ್ತಮರಾಗುತ್ತೀರಿ. ಲಕ್ಷ್ಮೀ-ನಾರಾಯಣರು ಎಲ್ಲರಿಗಿಂತ ಪುರುಷೋತ್ತಮರಾಗಿದ್ದಾರೆ, ಗುರಿ-ಧ್ಯೇಯವು ಎಷ್ಟು ಸಹಜವಾಗಿದೆ. ಎಲ್ಲರಿಗೆ ಇದನ್ನು ತಿಳಿಸಿ, ಈಗ ಸತ್ಯಯುಗವು ಸ್ಥಾಪನೆಯಾಗುತ್ತಿದೆ. ತಂದೆಯು ಹೇಳಿದ್ದಾರೆ - ಪುರುಷೋತ್ತಮ ಶಬ್ಧವನ್ನು ಅವಶ್ಯವಾಗಿ ಬರೆಯಿರಿ ಏಕೆಂದರೆ ನೀವಿಲ್ಲಿ ಕನಿಷ್ಟರಿಂದ ಪುರುಷೋತ್ತಮರಾಗುತ್ತೀರಿ. ಇಂತಹ ಮುಖ್ಯ ಮಾತುಗಳನ್ನು ಮರೆಯಬಾರದು ಮತ್ತು ಸಂವತ್ಸರದ ದಿನಾಂಕವನ್ನು ಅವಶ್ಯವಾಗಿ ಬರೆಯಿರಿ. ಇಲ್ಲಿ ನಿಮ್ಮದು ಮೊದಲಿನಿಂದ ರಾಜಧಾನಿಯು ಆರಂಭವಾಗುತ್ತದೆ, ಅನ್ಯರ ರಾಜ್ಯ ಭಾರವು ಮೊದಲಿನಿಂದಲೇ ನಡೆಯುವುದಿಲ್ಲ. ಅವರ ಧರ್ಮ ಸ್ಥಾಪಕರು ಬಂದಾಗ ಅವರ ಹಿಂದೆ ಆ ಧರ್ಮದ ವೃದ್ಧಿಯಾಗುವುದು ಅಂದರೆ ಕೋಟ್ಯಾಂತರ ಅಂದಾಜಿನಲ್ಲಿ ಆ ಧರ್ಮದವರ ವೃದ್ಧಿಯಾದಾಗ ರಾಜ್ಯಭಾರವು ನಡೆಯುವುದು. ಆದರೆ ನಿಮ್ಮದು ಸತ್ಯಯುಗದಲ್ಲಿ ಆರಂಭದಿಂದಲೇ ರಾಜ್ಯಭಾರ ನಡೆಯುವುದು. ಸತ್ಯಯುಗದಲ್ಲಿ ಇಷ್ಟು ರಾಜಧಾನಿಯು ಎಲ್ಲಿಂದ ಬಂದಿತು ಎಂದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಕಲಿಯುಗದ ಅಂತಿಮದಲ್ಲಿ ಇಷ್ಟೊಂದು ಧರ್ಮಗಳಿವೆ, ಮತ್ತೆ ಸತ್ಯಯುಗದಲ್ಲಿ ಒಂದು ಧರ್ಮ, ಒಂದು ರಾಜ್ಯ ಹೇಗಾಯಿತು? ಎಷ್ಟೊಂದು ವಜ್ರ ರತ್ನಗಳ ಮಹಲುಗಳಿರುತ್ತವೆ! ಭಾರತವು ಈ ರೀತಿಯಿತ್ತು, ಅದಕ್ಕೆ ಸ್ವರ್ಗವೆಂದು ಹೇಳುತ್ತಿದ್ದರು. ಇದು 5000 ವರ್ಷಗಳ ಮಾತಾಗಿದೆ. ಲಕ್ಷಾಂತರ ವರ್ಷಗಳ ಲೆಕ್ಕವೆಲ್ಲಿಂದ ಬಂದಿತು! ಮನುಷ್ಯರು ಎಷ್ಟೊಂದು ಗೊಂದಲಕ್ಕೊಳಗಾಗಿದ್ದಾರೆ! ಈಗ ಅವರಿಗೆ ತಿಳಿಸುವವರು ಯಾರು! ನಾವು ಆಸುರೀ ರಾಜ್ಯದಲ್ಲಿದ್ದೇವೆ ಎಂಬುದು ಅವರಿಗೆ ಅರ್ಥವಾಗುತ್ತದೆಯೇ! ದೇವಿ-ದೇವತೆಗಳ ಮಹಿಮೆಯಾಗಿದೆ ಸರ್ವಗುಣ ಸಂಪನ್ನರು.... ಇವರಲ್ಲಿ ಪಂಚ ವಿಕಾರಗಳಿರುವುದಿಲ್ಲ. ಏಕೆಂದರೆ ದೇಹೀ-ಅಭಿಮಾನಿಯಾಗಿದ್ದಾರೆ ಅಂದಾಗ ತಂದೆಯು ತಿಳಿಸುತ್ತಾರೆ – ಮುಖ್ಯ ಮಾತು ನೆನಪಿನದಾಗಿದೆ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನೀವು ಪತಿತರಾಗಿದ್ದೀರಿ, ಈಗ ಮತ್ತೆ ಪವಿತ್ರರಾಗಬೇಕಾಗಿದೆ. ಇದು ಡ್ರಾಮಾದ ಚಕ್ರವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಜ್ಞಾನದಿಂದ ಮೂರನೆಯ ನೇತ್ರವನ್ನು ಧಾರಣೆ ಮಾಡಿಕೊಂಡು ತಮ್ಮ ಮೋಸಗಾರ ಕಣ್ಣುಗಳನ್ನು ನಿರ್ವಿಕಾರಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ನೆನಪಿನಿಂದಲೇ ಕರ್ಮೇಂದ್ರಿಯಗಳು ಶೀತಲ, ಸತೋಗುಣಿಯಾಗುವವು ಆದ್ದರಿಂದ ಇದೇ ಪರಿಶ್ರಮ ಪಡಬೇಕಾಗಿದೆ.

2. ಉದ್ಯೋಗ-ವ್ಯವಹಾರಗಳಿಂದ ಸಮಯವನ್ನು ತೆಗೆದು ಏಕಾಂತದಲ್ಲಿ ಹೋಗಿ ನೆನಪಿನಲ್ಲಿ ಕುಳಿತುಕೊಳ್ಳಬೇಕಾಗಿದೆ. ನಮಗೆ ಯೋಗವು ಏಕೆ ಹಿಡಿಸುತ್ತಿಲ್ಲ ಎಂಬ ಕಾರಣವನ್ನು ನೋಡಿಕೊಳ್ಳಿ. ಚಾರ್ಟನ್ನು ಅವಶ್ಯವಾಗಿ ಇಡಬೇಕಾಗಿದೆ.

ವರದಾನ:
ನಿರ್ಣಯ ಶಕ್ತಿ ಮತ್ತು ನಿಯಂತ್ರಣ ಶಕ್ತಿಯ ಮುಖಾಂತರ ಸದಾ ಸಫಲತಾ ಮೂರ್ತಿ ಭವ.

ಯಾವುದೇ ಲೌಕಿಕ ಅಥವಾ ಅಲೌಕಿಕ ಕಾರ್ಯದಲ್ಲಿಯೂ ಸಹ ಸಫಲತೆ ಪ್ರಾಪ್ತಿ ಮಾಡಿಕೊಳ್ಳಬೇಕಾದರೆ ವಿಶೇಷ ನಿಯಂತ್ರಣ ಶಕ್ತಿ ಮತ್ತು ನಿರ್ಣಯ ಶಕ್ತಿಯ ಆವಶ್ಯಕತೆ ಇರುತ್ತದೆ ಏಕೆಂದರೆ ಯಾವಾಗ ಯಾವುದೇ ಆತ್ಮ ನಿಮ್ಮ ಸಂಪರ್ಕದಲ್ಲಿ ಬಂದಾಗ ಮೊದಲು ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ ಇವರಿಗೆ ಯಾವ ವಸ್ತುವಿನ ಆವಶ್ಯಕತೆಯಿದೆ, ನಾಡಿಯ ಮುಖಾಂತರ ತಿಳಿದುಕೊಂಡು ಅವರ ಇಚ್ಛೆಯ ಪ್ರಮಾಣ ಅವರನ್ನು ತೃಪ್ತಿ ಮಾಡುವುದು ಮತ್ತು ಸ್ವಯಂನ ನಿಯಂತ್ರಣ ಶಕ್ತಿಯಿಂದ ಬೇರೆಯವರ ಮೇಲೆ ತಮ್ಮ ಅಚಲ ಸ್ಥಿತಿಯ ಪ್ರಭಾವ ಬೀರುವುದು - ಈ ಎರಡೂ ಶಕ್ತಿಗಳು ಸೇವೆಯ ಕ್ಷೇತ್ರದಲ್ಲಿ ಸಫಲತಾ ಮೂರ್ತಿಗಳನ್ನಾಗಿ ಮಾಡಿ ಬಿಡುವುದು.

ಸ್ಲೋಗನ್:
ಸರ್ವ ಶಕ್ತಿವಾನ್ ತಂದೆಯನ್ನು ನಿಮ್ಮ ಜೊತೆಗಾರರನ್ನಾಗಿ ಮಾಡಿಕೊಂಡಾಗ ಮಾಯೆ ಕಾಗದ ಹುಲಿಯಾಗಿ ಬಿಡುವುದು.