24.10.20 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನೀವು
ಸತ್ಯ-ಸತ್ಯ ಪತಂಗಗಳಾಗಿದ್ದೀರಿ, ನೀವೀಗ ಪರಂಜ್ಯೋತಿಗೆ ಬಲಿಹಾರಿಯಾಗುತ್ತೀರಿ, ಈ ಬಲಿಹಾರಿಯಗುವುದರ
ನೆನಪಾರ್ಥ ಹಬ್ಬವೇ ಈ ದೀಪಾವಳಿಯಾಗಿದೆ"
ಪ್ರಶ್ನೆ:
ತಂದೆಯು ತನ್ನ
ಮಕ್ಕಳಿಗೆ ಯಾವ ಸಮಾಚಾರವನ್ನು ತಿಳಿಸಿದ್ದಾರೆ?
ಉತ್ತರ:
ತಂದೆಯು ತಿಳಿಸಿದರು - ನೀವಾತ್ಮಗಳು ನಿರ್ವಾಣಧಾಮದಿಂದ ಹೇಗೆ ಬರುತ್ತೀರಿ ಮತ್ತು ನಾನು ಹೇಗೆ
ಬರುತ್ತೇನೆ, ನಾನು ಯಾರಾಗಿದ್ದೇನೆ, ಏನು ಮಾಡುತ್ತೇನೆ, ಹೇಗೆ ರಾಮ ರಾಜ್ಯವನ್ನು ಸ್ಥಾಪನೆ
ಮಾಡುತ್ತೇನೆ, ಹೇಗೆ ನೀವು ಮಕ್ಕಳಿಗೆ ರಾವಣನ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಸುತ್ತೇನೆ ಎಂದು.
ಇವೆಲ್ಲಾ ಮಾತುಗಳನ್ನು ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ. ನಿಮ್ಮ ಜ್ಯೋತಿಯು ಜಾಗೃತವಾಗಿದೆ.
ಗೀತೆ:
ನೀವೇ ತಾಯಿ,
ತಂದೆಯೂ ನೀವೇ ಆಗಿದ್ದೀರಿ.....
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಗಳು ಈ ಸ್ಥೂಲ ಕರ್ಮೇಂದ್ರಿಯಗಳಿಂದ
ಗೀತೆಯನ್ನು ಕೇಳಿದಿರಿ. ಗೀತೆಯಲ್ಲಿ ಮೊದಲು ಎಲ್ಲವೂ ಸರಿಯಾಗಿತ್ತು, ಕೊನೆಯಲ್ಲಿ ಕೆಲವೊಂದು
ಭಕ್ತಿಯ ಶಬ್ಧಗಳಿದ್ದವು. ನಾವು ನಿಮ್ಮ ಚರಣದ ಧೂಳಾಗಿದ್ದೇವೆಂದು ಆ ಹಾಡಿನಲ್ಲಿತ್ತು. ಮಕ್ಕಳು
ಚರಣದ ಧೂಳಾಗುವರೇ? ಇದು ತಪ್ಪಾಗಿದೆ. ತಂದೆಯು ಮಕ್ಕಳಿಗೆ ಸರಿಯಾದ ಶಬ್ಧಗಳನ್ನು ತಿಳಿಸುತ್ತಾರೆ.
ಎಲ್ಲಿಂದ ನೀವು ಮಕ್ಕಳು ಬರುತ್ತೀರೊ ತಂದೆಯೂ ಅಲ್ಲಿಂದ ಬರುತ್ತಾರೆ, ಅದು ನಿರ್ವಾಣಧಾಮವಾಗಿದೆ.
ಮಕ್ಕಳಿಗೆ ಎಲ್ಲರ ಬರುವಿಕೆಯ ಸಮಾಚಾರವನ್ನಂತೂ ತಿಳಿಸಿದ್ದಾರೆ, ತಮ್ಮ ಪರಿಚಯವನ್ನೂ ತಿಳಿಸಿದ್ದಾರೆ
- ನಾನು ಹೇಗೆ ಬರುತ್ತೇನೆ, ಬಂದು ಏನು ಮಾಡುತ್ತೇನೆ. ರಾಮ ರಾಜ್ಯವನ್ನು ಸ್ಥಾಪನೆ ಮಾಡುವ ಅರ್ಥವಾಗಿ
ರಾವಣನ ಮೇಲೆ ಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ಮಕ್ಕಳಿಗೆ ತಿಳಿದಿದೆ – ರಾಮ ರಾಜ್ಯ ಮತ್ತು
ರಾವಣ ರಾಜ್ಯ, ಈ ಧರಣಿಯ ಮೇಲೆಯೇ ಆಗುತ್ತದೆ. ನೀವೀಗ ವಿಶ್ವದ ಮಾಲೀಕರಾಗುತ್ತೀರಿ. ಧರಣಿ, ಆಕಾಶ,
ಸೂರ್ಯ ಇತ್ಯಾದಿಯಲ್ಲವೂ ನಿಮ್ಮ ಕೈಯಲ್ಲಿ ಬಂದು ಬಿಡುತ್ತವೆ ಆದ್ದರಿಂದಲೇ ರಾವಣ ರಾಜ್ಯವು ಇಡೀ
ವಿಶ್ವದಲ್ಲಿ ಮತ್ತು ರಾಮ ರಾಜ್ಯವು ಇಡೀ ವಿಶ್ವದಲ್ಲಿ ಇರುತ್ತದೆಯಂದು ಹೇಳುತ್ತಾರೆ. ರಾವಣ
ರಾಜ್ಯದಲ್ಲಿ ಎಷ್ಟು ಕೋಟಿ ಮನುಷ್ಯರಿದ್ದಾರೆ, ರಾಮ ರಾಜ್ಯದಲ್ಲಿ ಕೆಲವರೇ ಇರುತ್ತಾರೆ ನಂತರ
ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತದೆ. ರಾವಣ ರಾಜ್ಯವು ಬಹಳ ವೃದ್ಧಿಯಾಗುತ್ತದೆ ಏಕೆಂದರೆ
ಮನುಷ್ಯರು ವಿಕಾರಿಗಳಾಗಿ ಬಿಡುತ್ತಾರೆ. ರಾಮ ರಾಜ್ಯದಲ್ಲಿ ನಿರ್ವಿಕಾರಿಗಳಿರುತ್ತಾರೆ, ಇದು
ಮನುಷ್ಯರದೇ ಕಥೆಯಾಗಿದೆ ಅಂದಾಗ ರಾಮನೂ ಬೇಹದ್ದಿನ ಮಾಲೀಕ, ರಾವಣನೂ ಬೇಹದ್ದಿನ ಮಾಲೀಕನಾಗಿದ್ದಾರೆ.
ಈಗ ಅನೇಕ ಧರ್ಮಗಳ ವಿನಾಶವೆಂದು ಗಾಯನವಿದೆ. ತಂದೆಯು ಕಲ್ಪವೃಕ್ಷದ ಪರಿಚಯವನ್ನೂ ತಿಳಿಸಿದ್ದಾರೆ.
ಈಗ ದಸರಾ ಹಬ್ಬವನ್ನು ಆಚರಿಸುತ್ತಾರೆ, ರಾವಣನನ್ನು ಸುಡುತ್ತಾರೆ. ಇದು ಸ್ಥೂಲವಾಗಿ ಸುಡುವ
ಮಾತಾಗಿದೆ. ನಿಮ್ಮದು ಬೇಹದ್ದಿನ ಮಾತಾಗಿದೆ. ರಾವಣನನ್ನೂ ಕೇವಲ ಭಾರತವಾಸಿಗಳೇ ಸುಡುತ್ತಾರೆ.
ಎಲ್ಲೆಲ್ಲಿ ಭಾರತವಾಸಿಗಳು ಹೆಚ್ಚಾಗಿ ಇರುತ್ತಾರೆಯೋ ಅಲ್ಲಲ್ಲಿ ರಾವಣನನ್ನು ಸುಡುತ್ತಾರೆ. ಅದು
ಹದ್ದಿನ ದಸರಾ ಆಗಿದೆ. ಲಂಕೆಯಲ್ಲಿ ರಾವಣನು ರಾಜ್ಯ ಮಾಡುತ್ತಿದ್ದನು, ಸೀತೆಯನ್ನು ಅಪಹರಿಸಿಕೊಂಡು
ಲಂಕೆಯಲ್ಲಿ ತನ್ನ ಮನೆಗೆ ಕರೆದುಕೊಂಡು ಹೋದನೆಂದು ತೋರಿಸುತ್ತಾರೆ. ಇವೆಲ್ಲವೂ ಹದ್ದಿನ
ಮಾತುಗಳಾಗಿವೆ. ಈಗ ತಂದೆಯು ತಿಳಿಸುತ್ತಾರೆ - ಇಡೀ ವಿಶ್ವದಲ್ಲಿಯೇ ರಾವಣ ರಾಜ್ಯವಿದೆ, ಈಗ ರಾಮ
ರಾಜ್ಯವಿಲ್ಲ. ರಾಮ ರಾಜ್ಯವೆಂದರೆ ಈಶ್ವರನು ಸ್ಥಾಪನೆ ಮಾಡಿರುವುದು. ಸತ್ಯಯುಗಕ್ಕೂ ರಾಮ
ರಾಜ್ಯವೆಂದು ಹೇಳಲಾಗುತ್ತದೆ. ಮಾಲೆಯನ್ನು ಜಪಿಸುತ್ತಾರೆ, ರಘುಪತಿ ರಾಘವ ರಾಜಾರಾಮ ಎಂದು
ಹೇಳುತ್ತಾರೆ ಆದರೆ ರಾಜಾರಾಮನನ್ನು ಸ್ಮರಿಸುವುದಿಲ್ಲ. ಯಾರು ಇಡೀ ವಿಶ್ವದ ಸೇವೆ ಮಾಡುವರೋ ಅವರ
ಮಾಲೆಯನ್ನು ಸ್ಮರಣೆ ಮಾಡುತ್ತಾರೆ.
ಭಾರತವಾಸಿಗಳೇ ದಸರಾದ ನಂತರ ದೀಪಾವಳಿಯನ್ನಾಚರಿಸುತ್ತಾರೆ. ದೀಪಾವಳಿಯನ್ನು ಏಕೆ ಆಚರಿಸುತ್ತಾರೆ?
ಏಕೆಂದರೆ ದೇವತೆಗಳ ಕಿರೀಟಧಾರಣೆಯಾಗುತ್ತದೆ. ಪಟ್ಟಾಭಿಷೇಕದಂದು ಬಹಳಷ್ಟು ದೀಪಗಳನ್ನು
ಬೆಳಗಿಸುತ್ತಾರೆ. ಒಂದನೆಯದಾಗಿ ಕಿರೀಟ ಧಾರಣೆ, ಇನ್ನೊಂದು ಮನೆ-ಮನೆಯಲ್ಲಿ ದೀಪಾವಳಿಯಂದು
ಹೇಳಲಾಗುತ್ತದೆ. ಪ್ರತಿಯೊಂದು ಆತ್ಮನ ಜ್ಯೋತಿಯು ಬೆಳಗುತ್ತದೆ, ಈಗ ಎಲ್ಲಾ ಆತ್ಮಗಳ ಜ್ಯೋತಿಯು ನಂದಿ
ಹೋಗಿದೆ, ಕಬ್ಬಿಣದ ಸಮಾನವಾಗಿದೆ ಅರ್ಥಾತ್ ಅಂಧಕಾರವಾಗಿದೆ. ಅಂಧಕಾರವೆಂದರೆ ಭಕ್ತಿಮಾರ್ಗ, ಭಕ್ತಿ
ಮಾಡುತ್ತಾ-ಮಾಡುತ್ತಾ ಜ್ಯೋತಿಯ ಪ್ರಕಾಶತೆಯು ಕಡಿಮೆಯಾಗಿ ಬಿಡುತ್ತದೆ. ಬಾಕಿ ಆ ದೀಪಾವಳಿಯಂತೂ
ಆರ್ಟಿಫಿಷಿಯಲ್ ಆಗಿದೆ. ಪಟ್ಟಾಭಿಷೇಕವಾಗುತ್ತದೆಯಂದರೆ ಅಲ್ಲಿ ಪಟಾಕಿಯನ್ನು ಸುಡುತ್ತಾರೆಂದಲ್ಲ.
ಇಲ್ಲಿ ದೀಪಾವಳಿಯೆಂದು ಲಕ್ಷ್ಮಿಯನ್ನು ಆಹ್ವಾನಿಸುತ್ತಾರೆ, ಪೂಜೆ ಮಾಡುತ್ತಾರೆ. ಇದು
ಭಕ್ತಿಮಾರ್ಗದ ಉತ್ಸವವಾಗಿದೆ. ಯಾರೆಲ್ಲಾ ರಾಜರು ಸಿಂಹಾಸನದ ಮೇಲೆ ಕುಳಿತುಕೊಳ್ಳುವರೋ ಅವರ
ಪಟ್ಟಾಭಿಷೇಕವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದೆಲ್ಲವೂ ಹದ್ದಿನ ಮಾತುಗಳಾಗಿವೆ.
ಈಗಂತೂ ಬೇಹದ್ದಿನ ವಿನಾಶ, ಸತ್ಯ-ಸತ್ಯವಾದ ದಶಹರಾ ಆಗುವುದಿದೆ. ತಂದೆಯು ಎಲ್ಲರ ಜ್ಯೋತಿಯನ್ನು
ಬೆಳಗಿಸಲು ಬಂದಿದ್ದಾರೆ. ನಮ್ಮ ಜ್ಯೋತಿಯು ದೊಡ್ಡ ಜ್ಯೋತಿಯಲ್ಲಿ ಸೇರಿ ಹೋಗುವುದೆಂದು ಮನುಷ್ಯರು
ತಿಳಿಯುತ್ತಾರೆ. ಬ್ರಹ್ಮ ಸಮಾಜಿಗಳ ಮಂದಿರದಲ್ಲಿಯೂ ಸದಾ ಜ್ಯೋತಿಯು ಬೆಳಗುತ್ತದೆ. ಹೇಗೆ ಪತಂಗಗಳು
ಜ್ಯೋತಿಯ ಸುತ್ತಲೂ ಪ್ರದಕ್ಷಿಣೆ ಮಾಡಿ ಬಲಿಹಾರಿಯಾಗುತ್ತದೆಯೋ ಹಾಗೆಯೇ ನಮ್ಮ ಆತ್ಮವೂ ಸಹ ಈಗ
ದೊಡ್ಡ ಜ್ಯೋತಿಯಲ್ಲಿ ಲೀನವಾಗುವುದೆಂದು ತಿಳಿಯುತ್ತಾರೆ. ಇದರ ಮೇಲೆ ದೃಷ್ಟಾಂತವನ್ನು ಮಾಡುತ್ತಾರೆ.
ನೀವಂತೂ ಅರ್ಧಕಲ್ಪದ ಪ್ರಿಯತಮೆಯರಾಗಿದ್ದೀರಿ, ನೀವು ಬಂದು ಒಬ್ಬ ಪ್ರಿಯತಮನ ಮೇಲೆ
ಬಲಿಹಾರಿಯಾಗಿದ್ದೀರಿ, ಸುಡುವ ಮಾತಿಲ್ಲ. ಹೇಗೆ ಆ ಪ್ರಿಯತಮ-ಪ್ರಿಯತಮೆಯರು ಒಬ್ಬರು ಇನ್ನೊಬ್ಬರಿಗೆ
ಆಕರ್ಷಿತರಾಗುತ್ತಾರೆ, ಇಲ್ಲಿ ಇವರೊಬ್ಬರೇ ಪ್ರಿಯತಮನಾಗಿದ್ದಾರೆ, ಉಳಿದೆಲ್ಲರೂ
ಪ್ರಿಯತಮೆಯರಾಗಿದ್ದೀರಿ. ನಾವೆಲ್ಲಾ ಪ್ರಿಯತಮೆಯರು ಆ ಪ್ರಿಯತಮನನ್ನು ಭಕ್ತಿಮಾರ್ಗದಲ್ಲಿ ನೆನಪು
ಮಾಡುತ್ತಾ ಇರುತ್ತೇವೆ - ಹೇ ಪ್ರಿಯತಮನೇ, ತಾವು ಬಂದರೆ ನಾವು ನಿಮಗೆ ಬಲಿಹಾರಿಯಾಗುವೆವು ನಿಮ್ಮ
ವಿನಃ ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲ. ಈಗ ನೀವು ಮಕ್ಕಳದು ಇದು ದೈಹಿಕ ಪ್ರೀತಿಯಲ್ಲ. ಆ
ಪ್ರಿಯತಮ-ಪ್ರಿಯತಮೆಯರಿಗೆ ಪರಸ್ಪರ ದೈಹಿಕ ಪ್ರೀತಿಯಿರುತ್ತದೆ. ಒಬ್ಬರು ಇನ್ನೊಬ್ಬರನ್ನು
ನೋಡುತ್ತಲೇ ಇರುತ್ತಾರೆ. ನೋಡಿ, ನೋಡಿ ತೃಪ್ತರಾಗುತ್ತಾರೆ. ಇಲ್ಲಂತೂ ಒಬ್ಬನೇ ಪ್ರಿಯತಮನಿದ್ದಾರೆ,
ಉಳಿದೆಲ್ಲರೂ ಪ್ರಿಯತಮೆಯರಾಗಿದ್ದೀರಿ. ಎಲ್ಲರೂ ತಂದೆಯನ್ನು ನೆನಪು ಮಾಡುತ್ತೀರಿ. ಭಲೆ ಕೆಲವರು
ಪ್ರಕೃತಿಯನ್ನು ಪೂಜಿಸುತ್ತಾರೆ. ಆದರೂ ಸಹ ಹೇ ಭಗವಂತ, ಹೇ ಪರಮಾತ್ಮನೆಂದು ಬಾಯಿಂದ ಅವಶ್ಯವಾಗಿ
ಬರುತ್ತದೆ. ನಮ್ಮ ದುಃಖವನ್ನು ದೂರ ಮಾಡು ಎಂದು ಎಲ್ಲರೂ ಅವರನ್ನು ಕರೆಯುತ್ತಾರೆ.
ಭಕ್ತಿಮಾರ್ಗದಲ್ಲಂತೂ ಬಹಳ ಮಂದಿ ಪ್ರಿಯತಮ-ಪ್ರಿಯತಮೆಯರಿರುತ್ತಾರೆ. ಕೆಲಕೆಲವರನ್ನು ಕೆಲಕೆಲವರು
ಪ್ರೀತಿಸುತ್ತಾರೆ. ಹನುಮಂತನನ್ನು ಎಷ್ಟು ಮಂದಿ ಪ್ರೀತಿಸಬಹುದು? ಎಲ್ಲರೂ ತಮ್ಮ-ತಮ್ಮ ಪ್ರಿಯತಮನ
ಚಿತ್ರವನ್ನು ಇಟ್ಟುಕೊಂಡು ಪರಸ್ಪರ ಸೇರಿ ಅವರ ಪೂಜೆ ಮಾಡುತ್ತಾರೆ. ಪೂಜೆ ಮಾಡಿ ಮತ್ತೆ
ಪ್ರಿಯತಮನನ್ನು ನೀರಿನಲ್ಲಿ ಮುಳುಗಿಸಿ ಬಿಡುತ್ತಾರೆ, ಇದಕ್ಕೆ ಅರ್ಥವೇ ಇಲ್ಲ ಆದರೆ ಇಲ್ಲಿ ಆ
ಮಾತಿಲ್ಲ. ಈ ನಿಮ್ಮ ಪ್ರಿಯತಮನು ಸದಾ ಸುಂದರ (ಪಾವನ) ನಾಗಿದ್ದಾರೆ, ಎಂದೂ ಶ್ಯಾಮನಾಗುವುದಿಲ್ಲ.
ತಂದೆಯು ಯಾತ್ರಿಕನಾಗಿ ಬಂದು ಎಲ್ಲರನ್ನೂ ಸುಂದರರನ್ನಾಗಿ ಮಾಡುತ್ತಾರೆ, ನೀವೂ ಸಹ ಯಾತ್ರಿಕರಲ್ಲವೆ,
ದೂರ ದೇಶದಿಂದ ಬಂದು ಇಲ್ಲಿ ಪಾತ್ರವನ್ನಭಿನಯಿಸುತ್ತೀರಿ. ನಿಮ್ಮಲ್ಲಿಯೂ ನಂಬರ್ವಾರ್
ಪುರುಷಾರ್ಥದನುಸಾರ ತಿಳಿದುಕೊಳ್ಳುತ್ತಾರೆ. ನೀವೀಗ ತ್ರಿಕಾಲದರ್ಶಿಗಳಾಗಿ ಬಿಟ್ಟಿದ್ದೀರಿ, ರಚೈತ
ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಆದ್ದರಿಂದ ನೀವು ತ್ರಿಕಾಲದರ್ಶಿ,
ಬ್ರಹ್ಮಾಕುಮಾರ-ಕುಮಾರಿಯರಾದಿರಿ. ಹೇಗೆ ಜಗದ್ಗುರು ಇತ್ಯಾದಿಯಾಗಿ ಬಿರುದು ಸಿಗುತ್ತದೆಯಲ್ಲವೆ.
ನಿಮಗೆ ಈ ಬಿರುದು ಸಿಗುತ್ತದೆ. ಸ್ವದರ್ಶನ ಚಕ್ರಧಾರಿಗಳು ಎಂದು ನಿಮಗೆ ಎಲ್ಲದಕ್ಕಿಂತ ಒಳ್ಳೆಯ
ಬಿರುದು ಸಿಗುತ್ತದೆ. ನೀವು ಬ್ರಾಹ್ಮಣರೇ ಸ್ವದರ್ಶನ ಚಕ್ರಧಾರಿಗಳಾಗಿದ್ದೀರೋ ಅಥವಾ ಶಿವ ತಂದೆಯೂ
ಆಗಿದ್ದಾರೆಯೇ? (ಶಿವ ತಂದೆಯೂ ಆಗಿದ್ದಾರೆ) ಹೌದು, ಏಕೆಂದರೆ ಆತ್ಮವು ಶರೀರದ ಜೊತೆ ಸ್ವದರ್ಶನ
ಚಕ್ರಧಾರಿಯಾಗುತ್ತದೆಯಲ್ಲವೆ. ತಂದೆಯೂ ಸಹ ಇವರಲ್ಲಿ ಬಂದು ತಿಳಿಸಿಕೊಡುತ್ತಾರೆ. ಶಿವ ತಂದೆಯು
ಸ್ವದರ್ಶನ ಚಕ್ರಧಾರಿಯಾಗಿರದಿದ್ದರೆ ನಿಮ್ಮನ್ನು ಹೇಗೆ ಮಾಡುವರು? ಅವರು ಎಲ್ಲರಿಗಿಂತ
ಸರ್ವಶ್ರೇಷ್ಠ ಆತ್ಮನಾಗಿದ್ದಾರೆ. ದೇಹಕ್ಕೆ ಹೇಳಲಾಗುವುದಿಲ್ಲ. ಆ ಶ್ರೇಷ್ಠ ತಂದೆಯೇ ಬಂದು
ನಿಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಸ್ವದರ್ಶನ ಚಕ್ರಧಾರಿ ಆತ್ಮಗಳ ವಿನಃ ಯಾರೂ ಆಗಲು
ಸಾಧ್ಯವಿಲ್ಲ. ಯಾವ ಆತ್ಮಗಳು? ಯಾರು ಬ್ರಾಹ್ಮಣ ಧರ್ಮದಲ್ಲಿದ್ದಾರೆಯೋ ಅವರು. ಶೂದ್ರ
ಧರ್ಮದಲ್ಲಿದ್ದಾಗ ತಿಳಿದುಕೊಂಡಿರಲಿಲ್ಲ. ಈಗ ತಂದೆಯ ಮೂಲಕ ನೀವು ಎಲ್ಲವನ್ನೂ ಅರಿತಿದ್ದೀರಿ. ಎಷ್ಟು
ಒಳ್ಳೊಳ್ಳೆಯ ಮಾತುಗಳಿವೆ. ನೀವೇ ಕೇಳುತ್ತೀರಿ ಮತ್ತು ಖುಷಿ ಪಡುತ್ತೀರಿ. ಹೊರಗಿನವರು ಈ
ಮಾತುಗಳನ್ನು ಕೇಳಿದರೆ ಓಹೋ! ಇದು ಬಹಳ ಶ್ರೇಷ್ಠ ಜ್ಞಾನವೆಂದು ಆಶ್ಚರ್ಯ ಪಡುವರು ನೀವೂ ಸಹ ಈ ರೀತಿ
ಸ್ವದರ್ಶನ ಚಕ್ರಧಾರಿಗಳಾಗಿ ಆಗ ಚಕ್ರವರ್ತಿ ರಾಜರು, ವಿಶ್ವದ ಮಾಲೀಕರಾಗುತ್ತೀರಿ ಎಂಬುದನ್ನು
ತಿಳಿಸಿ, ಆದರೆ ಅವರು ಇಲ್ಲಿಂದ ಹೊರಗೆ ಹೋದರೆಂದರೆ ಸಮಾಪ್ತಿ. ಮಾಯೆಯು ಇಷ್ಟು ಶಕ್ತಿಶಾಲಿಯಾಗಿದೆ,
ಇಲ್ಲಿಯದು ಇಲ್ಲಿಯೇ ಉಳಿದುಕೊಳ್ಳುತ್ತದೆ. ಹೇಗೆ ಗರ್ಭದಲ್ಲಿ ಮಗು ಪ್ರತಿಜ್ಞೆ ಮಾಡಿ ಹೊರ ಬರುತ್ತದೆ,
ಆದರೂ ಸಹ ಅಲ್ಲಿಯದು ಅಲ್ಲಿಯೇ ಉಳಿದುಕೊಳ್ಳುತ್ತದೆ. ನೀವು ಪ್ರದರ್ಶನಿ ಮೊದಲಾದುವುಗಳಲ್ಲಿ
ತಿಳಿಸಿಕೊಡುತ್ತೀರಿ. ಚೆನ್ನಾಗಿದೆ, ಚೆನ್ನಾಗಿದೆ ಎಂದು ಹೇಳುತ್ತಾರೆ. ಜ್ಞಾನವು ಬಹಳ ಚೆನ್ನಾಗಿದೆ,
ನಾನು ಈ ರೀತಿ ಪುರುಷಾರ್ಥ ಮಾಡುತ್ತೇನೆ, ಹಾಗೆ ಮಾಡುತ್ತೇನೆ... ಎಂದು ಹೇಳುತ್ತಾರಷ್ಟೆ. ಹೊರಗೆ
ಹೋದರೆಂದರೆ ಅಲ್ಲಿಯದು ಅಲ್ಲಿಯೇ ಉಳಿದುಕೊಳ್ಳುತ್ತದೆ. ಆದರೂ ಸಹ ಅಲ್ಪ ಸ್ವಲ್ಪ ಪ್ರಭಾವವಿರುತ್ತದೆ.
ಅವರು ಮತ್ತೆಂದೂ ಬರುವುದಿಲ್ಲವೆಂದಲ್ಲ ಬಂದೇ ಬರುತ್ತಾರೆ. ವೃಕ್ಷದ ವೃದ್ಧಿಯಾಗುತ್ತಾ ಹೋಗುತ್ತದೆ.
ವೃಕ್ಷವು ವೃದ್ಧಿಯಾದಂತೆ ಮತ್ತೆ ಎಲ್ಲರನ್ನೂ ಸೆಳೆಯುತ್ತೀರಿ. ಈಗಂತೂ ಇದು ರೌರವ ನರಕವಾಗಿದೆ.
ಗರುಡ ಪುರಾಣದಲ್ಲಿಯೂ ಇಂತಹ ಭಯಾನಕ ಮಾತುಗಳನ್ನು ಬರೆದಿದ್ದಾರೆ. ಸ್ವಲ್ಪವಾದರೂ ಭಯವಿರಲಿ ಎಂದು
ಮನುಷ್ಯರಿಗೆ ಇದನ್ನು ತಿಳಿಸುತ್ತಾರೆ. ಮನುಷ್ಯರು ಚೇಳು-ಹಾವುಗಳಾಗಿ ಬಿಡುತ್ತಾರೆಂಬ ಮಾತು
ಅದರಿಂದಲೇ ಬಂದಿದೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ವಿಷಯ ವೈತರಣೀ ನದಿಯಿಂದ ಹೊರ
ತೆಗೆದು ಕ್ಷೀರ ಸಾಗರದಲ್ಲಿ ಕಳುಹಿಸುತ್ತೇನೆ. ಮೂಲತಃ ನೀವು ಶಾಂತಿಧಾಮದ ನಿವಾಸಿ ನಂತರ
ಸುಖಧಾಮದಲ್ಲಿ ಪಾತ್ರವನ್ನಭಿನಯಿಸಲು ಬಂದಿರಿ. ಈಗ ಮತ್ತೆ ಶಾಂತಿಧಾಮ, ಸುಖಧಾಮಕ್ಕೆ ಹೋಗುತ್ತೀರಿ.
ಈ ಧಾಮವನ್ನಂತೂ ನೆನಪು ಮಾಡುತ್ತೀರಲ್ಲವೆ. ನೀವು ಮಾತಾಪಿತ... ಎಂದು ಹಾಡುತ್ತಾರೆ. ಆ ಅಪಾರ ಸುಖವು
ಸತ್ಯಯುಗದಲ್ಲಿಯೇ ಇರುತ್ತದೆ. ಈಗ ಸಂಗಮವಾಗಿದೆ. ಅಂತಿಮದಲ್ಲಿ ತ್ರಾಹಿ, ತ್ರಾಹಿ (ಅಯ್ಯೊ ಅಯ್ಯೊ)
ಎನ್ನುತ್ತಾರೆ ಏಕೆಂದರೆ ಅತೀ ದುಃಖವಾಗುತ್ತದೆ ನಂತರ ಸತ್ಯಯುಗದಲ್ಲಿ ಅತೀ ಸುಖವಿರುವುದು, ಇದು ಅತಿ
ಸುಖ ಮತ್ತು ಅತಿ ದುಃಖದ ಆಟವು ಮಾಡಲ್ಪಟ್ಟಿದೆ. ವಿಷ್ಣುವಿನ ಅವತಾರವನ್ನೂ ತೋರಿಸುತ್ತಾರೆ.
ಲಕ್ಷ್ಮೀ-ನಾರಾಯಣರ ಜೋಡಿಯು ಹೇಗೆ ಮೇಲಿನಿಂದ ಬರುತ್ತದೆ ಎಂಬುದನ್ನು ತೋರಿಸುತ್ತಾರೆ. ಆದರೆ
ಶರೀರಧಾರಿಗಳು ಮೇಲಿನಿಂದ ಬರುವರೇ! ಮೇಲಿನಿಂದ ಪ್ರತಿಯೊಂದು ಆತ್ಮವು ಬರುತ್ತದೆ. ಆದರೆ ಈಶ್ವರನ
ಅವತರಣೆಯು ಬಹಳ ವಿಚಿತ್ರವಾಗಿದೆ. ಅವರೇ ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಅವರ
ಹಬ್ಬವಾಗಿ ಶಿವ ಜಯಂತಿಯನ್ನಾಚರಿಸುತ್ತಾರೆ. ಒಂದುವೇಳೆ ಪರಮಪಿತ ಪರಮಾತ್ಮ ಶಿವನು
ಮುಕ್ತಿ-ಜೀವನ್ಮುಕ್ತಿಯ ಆಸ್ತಿಯನ್ನು ಕೊಡುತ್ತಾರೆಂಬುದು ತಿಳಿದಿದ್ದರೆ ಇಡೀ ವಿಶ್ವದಲ್ಲಿಯೇ
ಪರಮಾತ್ಮನ ಹಬ್ಬವನ್ನಾಚರಿಸುತ್ತಿದ್ದರು. ಯಾವಾಗ ಶಿವ ತಂದೆಯೇ ಮುಕ್ತಿಧಾತ ಮಾರ್ಗದರ್ಶಕನಾಗಿದ್ದಾರೆ,
ಅವರ ಜನ್ಮವು ಭಾರತದಲ್ಲಿಯೇ ಆಗುತ್ತದೆ ಎಂಬುದು ಯಾವಾಗ ಅರ್ಥವಾಗುವುದೋ ಆಗ ಬೇಹದ್ದಿನ ತಂದೆಯ
ನೆನಪಾರ್ಥ ಹಬ್ಬವನ್ನಾಚರಿಸುವರು. ಶಿವ ಜಯಂತಿಯನ್ನು ಭಾರತದಲ್ಲಿಯೇ ಆಚರಿಸುತ್ತಾರೆ ಆದರೆ ಪೂರ್ಣ
ಪರಿಚಯವಿಲ್ಲದ ಕಾರಣ ರಜಾ ದಿನವನ್ನೂ ಸಹ ಘೋಷಿಸುವುದಿಲ್ಲ. ಯಾವ ತಂದೆಯು ಸರ್ವರ ಸದ್ಗತಿ
ಮಾಡುವವರಾಗಿದ್ದಾರೆ, ಅವರು ಇಲ್ಲಿ ಬಂದು ಅಲೌಕಿಕ ಕರ್ತವ್ಯವನ್ನು ಮಾಡುತ್ತಾರೆ ಅಂದಮೇಲೆ ಅವರ
ಜನ್ಮ ದಿನ ಮತ್ತು ತೀರ್ಥ ಯಾತ್ರೆಯನ್ನು ಬಹಳ ಆಚರಿಸಬೇಕು. ನಿಮ್ಮ ನೆನಪಾರ್ಥ ಮಂದಿರವು ಇಲ್ಲಿಯೇ
ಇದೆ ಆದರೆ ಶಿವ ತಂದೆಯೇ ಬಂದು ಮುಕ್ತಿದಾತ, ಮಾರ್ಗದರ್ಶಕನಾಗುತ್ತಾರೆಂಬುದು ಯಾರಿಗೂ ತಿಳಿದಿಲ್ಲ.
ಎಲ್ಲಾ ದುಃಖಗಳಿಂದ ಬಿಡಿಸಿ ಸುಖಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಎಲ್ಲರೂ ಹೇಳುತ್ತಾರೆ ಆದರೆ
ತಿಳಿದುಕೊಳ್ಳುವುದಿಲ್ಲ. ಭಾರತವು ಬಹಳ ಶ್ರೇಷ್ಠಾತಿ ಶ್ರೇಷ್ಠ ಖಂಡವಾಗಿದೆ, ಭಾರತದ ಮಹಿಮೆಯು
ಅಪರಮಪಾರವೆಂದು ಗಾಯನವಿದೆ. ಇಲ್ಲಿಯೇ ಶಿವ ತಂದೆಯ ಜನ್ಮವಾಗುತ್ತದೆ ಆದರೆ ಇದನ್ನು ಯಾರೂ
ಒಪ್ಪುವುದಿಲ್ಲ. ಸ್ಟಾಂಪನ್ನೂ ಮಾಡಿಸುವುದಿಲ್ಲ. ಬೇರೆಯವರದಾದರೆ ಬಹಳಷ್ಟು ಸ್ಟಾಂಪುಗಳನ್ನು
ಮಾಡಿಸುತ್ತಿರುತ್ತಾರೆ, ಆದರೆ ತಂದೆಯ ಮಹತ್ವಿಕೆಯು ಎಲ್ಲರಿಗೆ ಅರ್ಥವಾಗಬೇಕಾದರೆ ಹೇಗೆ
ತಿಳಿಸಿಕೊಡುವುದು! ಈ ದೇಶದಲ್ಲಿಯೂ ಸನ್ಯಾಸಿ ಮೊದಲಾದವರು ಹೋಗಿ ಭಾರತದ ಪ್ರಾಚೀನ ಯೋಗವನ್ನು
ಕಲಿಸುತ್ತಾರೆ. ಯಾವಾಗ ನೀವೂ ಹೋಗಿ ಈ ರಾಜಯೋಗವನ್ನು ತಿಳಿಸುತ್ತೀರೋ ಆಗ ನಿಮ್ಮ ಹೆಸರು
ಪ್ರಸಿದ್ಧವಾಗುವುದು. ತಿಳಿಸಿಕೊಡಿ, ರಾಜಯೋಗವನ್ನು ಯಾರು ಕಲಿಸಿದ್ದರು, ಇದು ಯಾರಿಗೂ ತಿಳಿದಿಲ್ಲ.
ಕೃಷ್ಣನೂ ಸಹ ಹಠಯೋಗವನ್ನು ಕಲಿಸಲಿಲ್ಲ, ಈ ಹಠಯೋಗವು ಸನ್ಯಾಸಿಗಳದಾಗಿದೆ. ಯಾರು ಬಹಳ ಒಳ್ಳೆಯ
ವಿದ್ಯಾವಂತರಿದ್ದಾರೆಯೋ, ಯಾರು ತಮ್ಮನ್ನು ತತ್ವ ಜ್ಞಾನಿಗಳೆಂದು ಕರೆಸಿಕೊಳ್ಳುತ್ತಾರೆಯೋ ಅವರು ಈ
ಮಾತುಗಳನ್ನು ತಿಳಿದುಕೊಂಡು ಸುಧಾರಣೆಯಾಗಲಿ ಮತ್ತು ನಾವೂ ಸಹ ಶಾಸ್ತ್ರಗಳನ್ನು ಓದಿದ್ದೇವೆ, ಆದರೆ
ಈಗ ತಂದೆಯು ತಿಳಿಸುತ್ತಿರುವುದೇ ಸತ್ಯವಾಗಿದೆ ಉಳಿದೆಲ್ಲವೂ ತಪ್ಪಾಗಿದೆಯಂದು ಅವರು ಹೇಳಲಿ ಮತ್ತು
ಇದೂ ಅರ್ಥವಾಗಲಿ - ಅವಶ್ಯವಾಗಿ ಅತಿದೊಡ್ಡ ತೀರ್ಥ ಸ್ಥಾನವು ಈ ಭಾರತವೇ ಆಗಿದೆ. ಇಲ್ಲಿ ತಂದೆಯು
ಬರುತ್ತಾರೆ. ನೀವು ಮಕ್ಕಳಿಗೆ ತಿಳಿದಿದೆ - ಈ ಭಾರತಭೂಮಿಗೆ ಧರ್ಮ ಭೂಮಿಯೆಂದು ಕರೆಯಲಾಗುತ್ತದೆ.
ನೀವು ಎಷ್ಟು ದಾನ ಪುಣ್ಯಗಳನ್ನು ಮಾಡುತ್ತೀರಿ! ತಂದೆಯನ್ನು ಅರಿತುಕೊಂಡು ತನು-ಮನ-ಧನವೆಲ್ಲವನ್ನೂ
ಈ ಸೇವೆಯಲ್ಲಿ ತೊಡಗಿಸುತ್ತೀರಿ. ತಂದೆಯೇ ಎಲ್ಲರನ್ನೂ ಮುಕ್ತರನ್ನಾಗಿ ಮಾಡುತ್ತಾರೆ, ಎಲ್ಲರನ್ನೂ
ದುಃಖದಿಂದ ಬಿಡಿಸುತ್ತಾರೆ. ಮತ್ತ್ಯಾವ ಧರ್ಮ ಸ್ಥಾಪಕರು ದುಃಖದಿಂದ ಬಿಡಿಸುವುದಿಲ್ಲ. ಅವರೆಲ್ಲರೂ
ಕೊನೆಯಲ್ಲಿಯೇ ಬರುತ್ತಾರೆ. ನಂಬರ್ವಾರ್ ಎಲ್ಲರೂ ಪಾತ್ರವನ್ನಭಿನಯಿಸಲು ಬರುತ್ತಾರೆ.
ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ತಮೋಪ್ರಧಾನರಾಗಿ ಬಿಡುತ್ತಾರೆ. ಪುನಃ ತಂದೆಯು ಬಂದು
ಸತೋಪ್ರಧಾನರನ್ನಾಗಿ ಮಾಡುತ್ತಾರೆ ಅಂದಾಗ ಎಷ್ಟು ದೊಡ್ಡ ತೀರ್ಥ ಸ್ಥಾನವಾಗಿದೆ. ಭಾರತವು
ಎಲ್ಲದಕ್ಕಿಂತ ನಂಬರ್ವನ್ ಶ್ರೇಷ್ಠ ಭೂಮಿಯಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದು ನನ್ನ
ಜನ್ಮಭೂಮಿಯಾಗಿದೆ, ನಾನು ಬಂದು ಎಲ್ಲರ ಸದ್ಗತಿ ಮಾಡುತ್ತೇನೆ. ಭಾರತವನ್ನು ಸ್ವರ್ಗವನ್ನಾಗಿ
ಮಾಡುತ್ತೇನೆ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ,
ಇಂತಹ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಿ, ನಿಮ್ಮನ್ನು ನೋಡಿ ಅನ್ಯರೂ ಮಾಡುವರು. ಇದಕ್ಕೇ
ಅಲೌಕಿಕ ದಿವ್ಯ ಕರ್ಮವೆಂದು ಹೇಳಲಾಗುತ್ತದೆ. ಯಾರಿಗೂ ತಿಳಿಯುವುದಿಲ್ಲ ಎಂದು ತಿಳಿಯಬೇಡಿ, ಇಂತಹವರು
ಬರುತ್ತಾರೆ ನಿಮ್ಮ ಈ ಚಿತ್ರಗಳನ್ನು ತೆಗೆದುಕೊಂಡು ಹೋಗುತ್ತಾರೆ. ಒಳ್ಳೊಳ್ಳೆಯ ಚಿತ್ರಗಳನ್ನು
ತಯಾರಿಸಿದರೆ ಹಡಗಿನಲ್ಲಿ ತುಂಬಿಸಿಕೊಂಡು ತೆಗೆದುಕೊಂಡು ಹೋಗುತ್ತಾರೆ. ಎಲ್ಲೆಲ್ಲಿ ಹಡಗು
ನಿಂತಿರುವುದೋ ಅಲ್ಲಿ ಈ ಚಿತ್ರಗಳನ್ನು ಹಾಕುತ್ತಾರೆ. ನಿಮ್ಮದು ಬಹಳ ಸೇವೆ ಆಗುವುದಿದೆ, ಬಹಳ ಉದಾರ
ಚಿತ್ತರಾಗಿ ಹುಂಡಿಯನ್ನು ತುಂಬಿಸುವಂತಹ ರಾಜಾಧಿ ರಾಜರು ಒಂದು ದಿನ ಬರುತ್ತಾರೆ ಅವರು ಇಂತಹ
ಕಾರ್ಯವನ್ನು ಮಾಡತೊಡಗುತ್ತಾರೆ. ಅದರಿಂದ ಎಲ್ಲರಿಗೂ ಅರ್ಥವಾಗುವುದು - ಇವರು ಯಾರು? ಈ ಹಳೆಯ
ಪ್ರಪಂಚವನ್ನು ಪರಿವರ್ತನೆ ಮಾಡಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ನಿಮ್ಮದೂ ಸಹ ಮೊದಲು
ತುಚ್ಛ ಬುದ್ಧಿಯಾಗಿದ್ದು ನೀವೀಗ ಎಷ್ಟು ಸ್ವಚ್ಛ ಬುದ್ಧಿಯವರಾಗಿದ್ದೀರಿ. ನಿಮಗೆ ತಿಳಿದಿದೆ – ಈ
ಜ್ಞಾನ ಮತ್ತು ಯೋಗಬಲದಿಂದ ನಾವು ವಿಶ್ವವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ. ಉಳಿದೆಲ್ಲರೂ
ಮುಕ್ತಿಧಾಮದಲ್ಲಿ ಹೊರಟು ಹೋಗುವರು. ಈಗ ನೀವೂ ಸಹ ಅಥಾರಿಟಿಯಾಗಬೇಕಾಗಿದೆ. ಬೇಹದ್ದಿನ ತಂದೆಯ
ಮಕ್ಕಳಲ್ಲವೆ. ನೆನಪಿನಿಂದ ಶಕ್ತಿಯು ಸಿಗುತ್ತದೆ, ತಂದೆಗೆ ಸರ್ವಶಕ್ತಿವಂತನೆಂದು ಕರೆಯಲಾಗುತ್ತದೆ.
ತಂದೆಯು ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ ಅಂದಮೇಲೆ ಮಕ್ಕಳಿಗೆ ಸರ್ವೀಸಿನ
ಎಷ್ಟೊಂದು ಉಮ್ಮಂಗವಿರಬೇಕು. ಮುಖದಿಂದ ಸದಾ ಜ್ಞಾನ ರತ್ನಗಳ ವಿನಃ ಮತ್ತೇನೂ ಬರಬಾರದು. ನೀವು
ಪ್ರತಿಯೊಬ್ಬರೂ ರೂಪ ಭಸಂತರಾಗಿದ್ದೀರಿ, ನೀವು ನೋಡುವಿರಿ - ಇಡೀ ಪ್ರಪಂಚವೇ ಹಚ್ಚ ಹಸುರಾಗಿ
ಬಿಡುತ್ತದೆ. ಎಲ್ಲವೂ ಹೊಸದು, ಅಲ್ಲಿ ದುಃಖದ ಹೆಸರೇ ಇರುವುದಿಲ್ಲ. ಪಂಚ ತತ್ವಗಳೂ ಸಹ ನಿಮ್ಮ
ಸೇವೆಗಾಗಿ ಹಾಜರಿರುತ್ತವೆ. ಈಗ ಅವು ಡಿಸ್ಸರ್ವೀಸ್ ಮಾಡುತ್ತವೆ ಏಕೆಂದರೆ ಮನುಷ್ಯರು ಯೋಗ್ಯರಿಲ್ಲ.
ತಂದೆಯು ಈಗ ಯೋಗ್ಯರನ್ನಾಗಿ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ರೂಪ
ಭಸಂತರಾಗಿ ಮುಖದಿಂದ ಸದಾ ಜ್ಞಾನ ರತ್ನಗಳನ್ನೇ ಹೊರಹಾಕಬೇಕಾಗಿದೆ. ಸರ್ವೀಸಿನ ಉಮ್ಮಂಗವಿರಬೇಕಾಗಿದೆ.
ನೆನಪಿನಲ್ಲಿ ಇರುವುದು ಮತ್ತು ಎಲ್ಲರಿಗೆ ತಂದೆಯ ನೆನಪನ್ನು ತರಿಸುವುದು – ಇದೇ ದಿವ್ಯ ಅಲೌಕಿಕ
ಕಾರ್ಯ ಮಾಡಬೇಕಾಗಿದೆ.
2. ಸತ್ಯ-ಸತ್ಯ ಪ್ರಿಯತಮೆಯರಾಗಿ ಒಬ್ಬ ಪ್ರಿಯತಮನಿಗೆ ಬಲಿಹಾರಿಯಾಗಬೇಕಾಗಿದೆ. ಆಗ ಸತ್ಯ
ದೀಪಾವಳಿಯಾಗುವುದು.
ವರದಾನ:
ಗೃಹಸ್ಥ
ವ್ಯವಹಾರ ಮತ್ತು ಈಶ್ವರೀಯ ವ್ಯವಹಾರ ಎರಡರ ಸಮಾನತೆಯ ಮುಖಾಂತರ ಸದಾ ಹಗುರ ಮತ್ತು ಸಫಲ ಭವ.
ಎಲ್ಲಾ ಮಕ್ಕಳಿಗೆ ಶರೀರ
ನಿರ್ವಾಹ ಮತ್ತು ಆತ್ಮ ನಿರ್ವಾಹದ ಡಬಲ್ ಸೇವೆ ಸಿಕ್ಕಿದೆ. ಆದರೆ ಎರಡೂ ಸಹ ಸೇವೆಯಲ್ಲಿ ಸಮಯದ,
ಶಕ್ತಿಗಳ ಸಮಾನ ಗಮನ ಕೊಡಬೇಕಾಗಿದೆ. ಒಂದುವೇಳೆ ಶ್ರೀಮತದ ಮುಳ್ಳು ಸರಿಯಾಗಿದ್ದರೆ ಎರಡೂ ಕಡೆ
ಸಮಾನವಾಗಿರುತ್ತದೆ. ಆದರೆ ಗೃಹಸ್ಥ ಎನ್ನುವ ಶಬ್ಧ ಹೇಳುತ್ತಿದ್ದಂತೆಯೆ ಗೃಹಸ್ಥಿಗಳಾಗಿ ಬಿಡುವಿರಿ.
ಆಗ ನೆಪಗಳು ಶುರುವಾಗಿ ಬಿಡುತ್ತದೆ. ಆದ್ದರಿಂದ ಗೃಹಸ್ಥಿ ಅಲ್ಲ ಟ್ರಸ್ಟಿಯಾಗಿರುವಿರಿ, ಈ
ಸ್ಮೃತಿಯಿಂದ ಗೃಹಸ್ಥ ವ್ಯವಹಾರ ಮತ್ತು ಈಶ್ವರೀಯ ವ್ಯವಹಾರ ಎರಡರಲ್ಲಿಯೂ ಸಮಾನತೆ ಇಟ್ಟಾಗ ಸದಾ
ಹಗುರ ಮತ್ತು ಸಫಲರಾಗಿರುವಿರಿ.
ಸ್ಲೋಗನ್:
ಫಸ್ಟ್ ಡಿವಿಜನ್ನಲ್ಲಿ
ಬರುವುದಕ್ಕಾಗಿ ಕರ್ಮೇಂದ್ರಿಯಾಜೀತ್, ಮಾಯಾಜೀತ್ ಆಗಿ.