30.10.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನಿಮಗೆ ಒಬ್ಬ ತಂದೆಯಿಂದ ಒಂದು ಮತ ಸಿಗುತ್ತದೆ, ಇದಕ್ಕೆ ಅದ್ವೈತ ಮತವೆಂದು ಹೇಳುತ್ತಾರೆ, ಈ ಅದ್ವೈತ ಮತದಿಂದಲೇ ನೀವು ದೇವತೆಗಳಾಗಬೇಕಾಗಿದೆ"

ಪ್ರಶ್ನೆ:
ಮನುಷ್ಯರು ಈ ವಿಸ್ಮೃತಿಯ ಆಟದಲ್ಲಿ ಎಲ್ಲದಕ್ಕಿಂತ ಮುಖ್ಯವಾದ ಯಾವ ಮಾತನ್ನು ಮರೆತು ಹೋಗಿದ್ದಾರೆ?

ಉತ್ತರ:
ನಮ್ಮ ಮನೆ ಎಲ್ಲಿದೆ, ಅದರ ಮಾರ್ಗವನ್ನೇ ಈ ಆಟದಲ್ಲಿ ಬಂದು ಮರೆತು ಹೋಗಿದ್ದೀರಿ. ಮನೆಗೆ ಯಾವಾಗ ಹೋಗಬೇಕು, ಹೇಗೆ ಹೋಗಬೇಕೆಂಬುದೇ ಗೊತ್ತಿಲ್ಲ. ಈಗ ತಂದೆಯು ನಿಮ್ಮೆಲ್ಲರನ್ನೂ ಕರೆದುಕೊಂಡು ಹೋಗಲು ಬಂದಿದ್ದಾರೆ. ವಾಣಿಯಿಂದ ದೂರ ಮಧುರ ಮನೆಯಲ್ಲಿ ಹೋಗುವುದು ಈಗ ನಿಮ್ಮ ಪುರುಷಾರ್ಥವಾಗಿದೆ.

ಗೀತೆ:
ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ.....

ಓಂ ಶಾಂತಿ.
ಗೀತೆಯ ಅರ್ಥವನ್ನು ಡ್ರಾಮಾ ಪ್ಲಾನನುಸಾರ ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಮನುಷ್ಯರ ಕೆಲವೊಂದು ಗೀತೆಗಳು ನಿಮಗೆ ಸಹಯೋಗ ಕೊಡುತ್ತವೆ. ನಿಮಗೆ ತಿಳಿದಿದೆ - ನಾವೇ ದೇವಿ-ದೇವತೆಗಳಾಗುತ್ತಿದ್ದೇವೆ. ಹೇಗೆ ಆ ವಿದ್ಯೆಯನ್ನು ಓದುವವರು ನಾವು ಡಾಕ್ಟರ್, ಬ್ಯಾರಿಸ್ಟರ್ ಆಗುತ್ತಿದ್ದೇವೆಂದು ಹೇಳುತ್ತಾರೆ. ಹಾಗೆಯೇ ನಿಮ್ಮ ಬುದ್ಧಿಯಲ್ಲಿದೆ - ನಾವು ಹೊಸ ಪ್ರಪಂಚಕ್ಕಾಗಿ ಓದುತ್ತಿದ್ದೇವೆ. ಇದು ಕೇವಲ ನಿಮಗೇ ವಿಚಾರ ಬರುತ್ತದೆ. ಅಮರ ಲೋಕ, ಹೊಸ ಪ್ರಪಂಚವೆಂದು ಸತ್ಯಯುಗಕ್ಕೇ ಹೇಳಲಾಗುತ್ತದೆ. ಈಗಂತೂ ಸತ್ಯಯುಗವೂ ಇಲ್ಲ, ದೇವತೆಗಳ ರಾಜ್ಯವೂ ಇಲ್ಲ. ಇಲ್ಲಂತೂ ಇರಲು ಸಾಧ್ಯವೇ ಇಲ್ಲ. ಈ ಚಕ್ರವನ್ನು ಸುತ್ತಿ ನೀವೀಗ ಕಲಿಯುಗ ಅಂತ್ಯದಲ್ಲಿ ಬಂದು ತಲುಪಿದ್ದೀರಿ. ಮತ್ತ್ಯಾರ ಬುದ್ಧಿಯಲ್ಲಿಯೂ ಈ ಚಕ್ರದ ಜ್ಞಾನವು ಬರುವುದಿಲ್ಲ. ಅವರಂತೂ ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ, ನೀವು ಮಕ್ಕಳಿಗೆ ನಿಶ್ಚಯವಿದೆ - ಅವಶ್ಯವಾಗಿ ಇದು 5000 ವರ್ಷಗಳ ನಂತರ ಚಕ್ರವು ಸುತ್ತುತ್ತಿರುತ್ತದೆ. ಮನುಷ್ಯರು 84 ಜನ್ಮಗಳನ್ನೇ ತೆಗೆದುಕೊಳ್ಳುತ್ತಾರೆ. ಲೆಕ್ಕವಿದೆಯಲ್ಲವೆ. ಈ ದೇವಿ-ದೇವತಾ ಧರ್ಮವನ್ನು ಅದ್ವೈತ ಧರ್ಮವೆಂದೂ ಹೇಳಲಾಗುತ್ತದೆ. ಅದ್ವೈತ ಶಾಸ್ತ್ರವೆಂದು ಹೇಳಲಾಗುತ್ತದೆ. ಅದು ಒಂದೇ ಆಗಿದೆ, ಉಳಿದಂತೆ ಅನೇಕ ಧರ್ಮಗಳು, ಅನೇಕ ಶಾಸ್ತ್ರಗಳಿವೆ. ನೀವು ಒಂದಾಗಿದ್ದೀರಿ, ಒಬ್ಬರ ಮೂಲಕ ಒಂದು ಮತ ಸಿಗುತ್ತದೆ. ಅದಕ್ಕೆ ಅದ್ವೈತ ಮತವೆಂದು ಹೇಳಲಾಗುತ್ತದೆ. ಈ ಅದ್ವೈತ ಮತವು ನಿಮಗೆ ಸಿಗುತ್ತದೆ. ದೇವಿ-ದೇವತೆಗಳಾಗಲು ಈ ವಿದ್ಯೆಯಿದೆಯಲ್ಲವೆ ಆದ್ದರಿಂದ ತಂದೆಗೆ ಜ್ಞಾನ ಸಾಗರ, ಜ್ಞಾನ ಪೂರ್ಣನೆಂದು ಹೇಳಲಾಗುತ್ತದೆ. ನಮಗೆ ಹೊಸ ಪ್ರಪಂಚಕ್ಕಾಗಿ ಭಗವಂತನೇ ಓದಿಸುತ್ತಾರೆಂದು ಮಕ್ಕಳಿಗೆ ತಿಳಿದಿದೆ. ಅಂದಮೇಲೆ ಇದನ್ನು ಮರೆಯಬಾರದು. ಶಾಲೆಯಲ್ಲಿ ಎಂದಾದರೂ ಮಕ್ಕಳು ಶಿಕ್ಷಕರನ್ನು ಮರೆತು ಹೋಗುತ್ತಾರೆಯೇ? ಇಲ್ಲ ಅಲ್ಲವೆ. ಗೃಹಸ್ಥ ವ್ಯವಹಾರದಲ್ಲಿರುವವರು ಸಹ ಹೆಚ್ಚಿನ ಪದವಿಯನ್ನು ಪಡೆಯಲು ಓದುತ್ತಾರೆ. ನೀವೂ ಸಹ ಗೃಹಸ್ಥದಲ್ಲಿರುತ್ತಾ ತಮ್ಮ ಉನ್ನತಿ ಮಾಡಿಕೊಳ್ಳಲು ಓದುತ್ತೀರಿ. ನಾವು ಬೇಹದ್ದಿನ ತಂದೆಯಿಂದ ಓದುತ್ತೇವೆಂದು ಈಗ ನಿಮ್ಮ ಮನಸ್ಸಿನಲ್ಲಿ ಬರಬೇಕು. ಶಿವ ತಂದೆಯೂ ತಂದೆಯಾಗಿದ್ದಾರೆ, ಪ್ರಜಾಪಿತ ಬ್ರಹ್ಮನೂ ತಂದೆಯಾಗಿದ್ದಾರೆ. ಪ್ರಜಾಪಿತ ಬ್ರಹ್ಮಾರವರ ಆದಿ ದೇವ ಎಂಬ ಹೆಸರು ಪ್ರಸಿದ್ಧವಾಗಿದೆ. ಕೇವಲ ಇದ್ದು ಹೋಗಿದ್ದಾರೆ. ಹೇಗೆ ಗಾಂಧೀಜಿಯೂ ಸಹ ಇದ್ದು ಹೋಗಿದ್ದಾರೆ. ಅವರಿಗೆ ಬಾಪೂಜಿ ಎಂದು ಹೇಳುತ್ತಾರೆ ಆದರೆ ತಿಳಿದುಕೊಳ್ಳುವುದಿಲ್ಲ ಕೇವಲ ಹಾಗೆಯೇ ಹೇಳಿ ಬಿಡುತ್ತಾರೆ. ಈ ಶಿವ ತಂದೆಯು ಸತ್ಯ-ಸತ್ಯವಾಗಿದ್ದಾರೆ. ಬ್ರಹ್ಮಾ ತಂದೆಯೂ ಸತ್ಯ-ಸತ್ಯವಾಗಿದ್ದಾರೆ, ಲೌಕಿಕ ತಂದೆಯೂ ಸತ್ಯ-ಸತ್ಯವಾಗಿ ಇರುತ್ತಾರೆ. ಬಾಕಿ ಮೇಯರ್ ಮೊದಲಾದವರನ್ನು ಕೇವಲ ಹಾಗೆಯೇ ಬಾಪು ಎಂದು ಹೇಳಿ ಬಿಡುತ್ತಾರೆ. ಇದೆಲ್ಲವೂ ತಾತ್ಕಾಲಿಕವಾಗಿದೆ. ಇದು ವಾಸ್ತವ ಕತೆಯಾಗಿದೆ. ಆತ್ಮಗಳ ತಂದೆ ಪರಮಾತ್ಮನು ಬಂದು ಆತ್ಮಗಳನ್ನು ಪ್ರಜಾಪಿತ ಬ್ರಹ್ಮಾರವರ ಮೂಲಕ ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ ಅಂದಮೇಲೆ ಅವರಿಗೆ ಅವಶ್ಯವಾಗಿ ಅನೇಕ ಮಕ್ಕಳಿರುವರಲ್ಲವೆ. ಶಿವ ತಂದೆಗಂತೂ ಎಲ್ಲರೂ ಸಂತಾನರಾಗಿದ್ದಾರೆ, ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ ಆದರೂ ಸಹ ಕೆಲಕೆಲವರು ಅವರನ್ನೂ ಸಹ ಒಪ್ಪುವುದಿಲ್ಲ. ಪಕ್ಕಾ ನಾಸ್ತಿಕರಾಗಿರುತ್ತಾರೆ. ಅವರು ಇದು ಸಂಕಲ್ಪದಿಂದಾದ ಪ್ರಪಂಚವೆಂದು ಹೇಳುತ್ತಾರೆ. ಈಗ ನಿಮಗೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದನ್ನು ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಿ - ನಾವು ಓದುತ್ತಿದ್ದೇವೆ, ಓದಿಸುವವರು ಶಿವ ತಂದೆಯಾಗಿದ್ದಾರೆ, ಇದು ದಿನ-ರಾತ್ರಿ ನೆನಪಿರಬೇಕು. ಇದನ್ನೇ ಮಾಯೆಯು ಮತ್ತೆ-ಮತ್ತೆ ಮರೆಸುತ್ತದೆ ಆದ್ದರಿಂದ ನೆನಪು ಮಾಡಿಕೊಳ್ಳಬೇಕಾಗುತ್ತದೆ. ತಂದೆ, ಶಿಕ್ಷಕ, ಗುರು ಮೂವರನ್ನೂ ಮರೆತು ಹೋಗುತ್ತಾರೆ. ಮೂರೂ ರೂಪಗಳು ಒಬ್ಬರೇ ಆಗಿದ್ದಾರೆ ಆದರೂ ಸಹ ಮರೆತು ಹೋಗುತ್ತಾರೆ. ಇದರಲ್ಲಿ ರಾವಣನ ಜೊತೆ ಯುದ್ಧವಿದೆ. ತಂದೆಯು ತಿಳಿಸುತ್ತಾರೆ - ಹೇ ಆತ್ಮಗಳೇ, ನೀವು ಸತೋಪ್ರಧಾನರಾಗಿದ್ದಿರಿ, ಈಗ ತಮೋಪ್ರಧಾನರಾಗಿದ್ದೀರಿ. ಶಾಂತಿಧಾಮದಲ್ಲಿದ್ದಾಗ ಪವಿತ್ರತೆಯಿತ್ತು, ಪವಿತ್ರತೆಯಿಲ್ಲದೆ ಯಾವುದೇ ಆತ್ಮವು ಮೇಲಿರಲು ಸಾಧ್ಯವಿಲ್ಲ ಆದ್ದರಿಂದ ಎಲ್ಲಾ ಆತ್ಮಗಳು ಈಗ ಪತಿತ-ಪಾವನ ತಂದೆಯನ್ನು ಕರೆಯುತ್ತಿರುತ್ತಾರೆ. ಯಾವಾಗ ಎಲ್ಲರೂ ಪತಿತ, ತಮೋಪ್ರಧಾನರಾಗಿ ಬಿಡುವರೋ ಆಗ ತಂದೆಯು ಬಂದು ತಿಳಿಸುತ್ತಾರೆ - ನಾನು ನಿಮ್ಮನ್ನು ಸತೋಪ್ರಧಾನರನ್ನಾಗಿ ಮಾಡುತ್ತೇನೆ. ನೀವು ಶಾಂತಿಧಾಮದಲ್ಲಿದ್ದಾಗ ಅಲ್ಲಿ ಎಲ್ಲರೂ ಪವಿತ್ರರಾಗಿದ್ದರು, ಅಲ್ಲಿ ಯಾವುದೇ ಅಪವಿತ್ರ ಆತ್ಮನಿರಲು ಸಾಧ್ಯವಿಲ್ಲ. ಎಲ್ಲರೂ ಶಿಕ್ಷೆಗಳನ್ನನುಭವಿಸಿ ಖಂಡಿತ ಪವಿತ್ರರಾಗಬೇಕಾಗಿದೆ. ಪವಿತ್ರರಾಗದೇ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಬ್ರಹ್ಮತತ್ವದಲ್ಲಿ ಲೀನವಾದರು, ಜ್ಯೋತಿಯಲ್ಲಿ ಜ್ಯೋತಿಯು ಸಮಾವೇಶವಾಯಿತೆಂದು ಭಲೆ ಕೆಲವರು ಹೇಳುತ್ತಾರೆ. ಇವೆಲ್ಲವೂ ಭಕ್ತಿಮಾರ್ಗದ ಅನೇಕ ಮತಗಳಾಗಿವೆ. ನಿಮ್ಮದು ಇದು ಅದ್ವೈತ ಮತವಾಗಿದೆ. ತಂದೆಯೇ ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಸಾಧ್ಯ. ತಂದೆಯು ಕಲ್ಪ-ಕಲ್ಪ ಓದಿಸಲು ಬರುತ್ತಾರೆ. ಚಾಚೂ ತಪ್ಪದೆ ಕಲ್ಪದ ಹಿಂದಿನ ತರಹವೇ ಅವರ ಪಾತ್ರವು ನಡೆಯುತ್ತದೆ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಲ್ಲವೆ. ಸೃಷ್ಟಿಚಕ್ರವು ಸುತ್ತುತ್ತಿರುತ್ತದೆ. ಸತ್ಯ-ತ್ರೇತಾ, ದ್ವಾಪರ-ಕಲಿಯುಗ ನಂತರ ಇದು ಸಂಗಮಯುಗವಾಗಿದೆ. ಮುಖ್ಯ ಧರ್ಮಗಳು ಇವಾಗಿವೆ – ದೇವತಾ ಧರ್ಮ, ಇಸ್ಲಾಂ ಧರ್ಮ, ಬೌದ್ಧ ಧರ್ಮ, ಕ್ರೈಸ್ತ ಧರ್ಮ. ಇದರಲ್ಲಿ ರಾಜ್ಯವು ನಡೆಯುತ್ತದೆ. ಬ್ರಾಹ್ಮಣರಿಗಾಗಲಿ, ಕೌರವರಿಗಾಗಲಿ ರಾಜ್ಯಭಾರವಿಲ್ಲ. ನೀವೀಗ ಬೇಹದ್ದಿನ ತಂದೆಯನ್ನು ಮತ್ತೆ ನೆನಪು ಮಾಡಬೇಕಾಗಿದೆ. ಬ್ರಾಹ್ಮಣರಿಗೂ ಸಹ ನೀವು ತಿಳಿಸಬಹುದು. ತಂದೆಯು ಅನೇಕ ಬಾರಿ ತಿಳಿಸಿದ್ದಾರೆ – ಮೊಟ್ಟ ಮೊದಲು ಬ್ರಾಹ್ಮಣರು ಶಿಖೆಯಾಗಿದ್ದಾರೆ, ಮೊಟ್ಟ ಮೊದಲಿಗೆ ಬ್ರಹ್ಮನ ವಂಶಾವಳಿಯು ನೀವಾಗಿದ್ದೀರಿ, ಇದು ನಿಮಗೆ ತಿಳಿದಿದೆ ಮತ್ತೆ ಭಕ್ತಿಮಾರ್ಗದಲ್ಲಿ ನಾವೇ ಪೂಜ್ಯರಿಂದ ಪೂಜಾರಿಗಳಾಗುತ್ತೇವೆ. ನಾವೀಗ ಪೂಜ್ಯರಾಗುತ್ತಿದ್ದೇವೆ. ಆ ಬ್ರಾಹ್ಮಣರು ಗೃಹಸ್ಥಿಗಳಾಗಿರುತ್ತಾರೆಯೇ ಹೊರತು ಸನ್ಯಾಸಿಗಳಲ್ಲ. ಸನ್ಯಾಸಿಗಳು ಹಠಯೋಗಿಗಳಾಗುತ್ತಾರೆ. ಗೃಹಸ್ಥವನ್ನು ಬಿಡುವುದು ಹಠವಲ್ಲವೆ. ಹಠಯೋಗಿಗಳು ಅನೇಕ ಪ್ರಕಾರದ ಯೋಗಗಳನ್ನು ಕಲಿಸುತ್ತಾರೆ. ಜೈಪುರದಲ್ಲಿ ಹಠಯೋಗಿಗಳ ಮ್ಯೂಸಿಯಂ ಇದೆ. ಅದರಲ್ಲಿ ರಾಜಯೋಗದ ಚಿತ್ರವಿಲ್ಲ. ರಾಜಯೋಗದ ಚಿತ್ರವು ದಿಲ್ವಾಡಾ ಮಂದಿರದಲ್ಲಿದೆ. ಇದರ ಮ್ಯೂಸಿಯಂತೂ ಇಲ್ಲ. ಹಠಯೋಗದ ಮ್ಯೂಸಿಯಂಗಳು ಎಷ್ಟೊಂದಿವೆ. ರಾಜಯೋಗದ ಮಂದಿರಗಳು ಇಲ್ಲಿ ಭಾರತದಲ್ಲಿಯೇ ಇವೆ. ಇದು ಚೈತನ್ಯವಾಗಿದೆ. ನೀವಿಲ್ಲಿ ಚೈತನ್ಯದಲ್ಲಿ ಕುಳಿತಿದ್ದೀರಿ. ಸ್ವರ್ಗವು ಎಲ್ಲಿದೆ ಎಂದು ಮನುಷ್ಯರಿಗೇನೂ ತಿಳಿದಿಲ್ಲ. ದಿಲ್ವಾಡಾ ಮಂದಿರದಲ್ಲಿ ಕೆಳಗೆ ತಪಸ್ಸಿನಲ್ಲಿ ಕುಳಿತಿರುವ ಚಿತ್ರವಿದೆ, ಅದು ನಿಮ್ಮ ಪೂರ್ಣ ನೆನಪಾರ್ಥವಾಗಿದೆ. ಅವಶ್ಯವಾಗಿ ಸ್ವರ್ಗವನ್ನು ಮೇಲ್ಭಾಗದಲ್ಲಿಯೇ ತೋರಿಸಬೇಕಾಗುವುದು. ಇದರಿಂದ ಮನುಷ್ಯರು ಸ್ವರ್ಗವು ಮೇಲಿದೆಯಂದು ತಿಳಿದುಕೊಳ್ಳುತ್ತಾರೆ, ಈ ಚಕ್ರವು ಸುತ್ತುತ್ತಿರುತ್ತದೆ. ಅರ್ಧಕಲ್ಪದ ನಂತರ ಸ್ವರ್ಗವು ಮತ್ತೆ ಕೆಳಗಡೆ ಹೊರಟು ಹೋಗುವುದು. ಪುನಃ ಅರ್ಧಕಲ್ಪ ಸ್ವರ್ಗವು ಮೇಲೆ ಬರುವುದು. ಇದರ ಕಾಲಾವಧಿ ಎಷ್ಟೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ನಿಮಗೆ ಇಡೀ ಚಕ್ರದ ಜ್ಞಾನವನ್ನು ತಿಳಿಸಿದ್ದಾರೆ. ನೀವು ಜ್ಞಾನವನ್ನು ತಿಳಿದುಕೊಂಡು ಮೇಲೆ ಹೋಗುತ್ತೀರಿ ನಂತರ ಚಕ್ರವು ಪೂರ್ತಿಯಾಗುತ್ತದೆ. ಮತ್ತೆ ಚಕ್ರವು ಹೊಸದಾಗಿ ಆರಂಭವಾಗುತ್ತದೆ. ಇದು ಬುದ್ಧಿಯಲ್ಲಿ ನಡೆಯಬೇಕು. ಹೇಗೆ ಅವರು ಜ್ಞಾನವನ್ನು ಓದುತ್ತಾರೆಂದರೆ ಬುದ್ಧಿಯಲ್ಲಿ ಗ್ರಂಥಗಳು ಇತ್ಯಾದಿಗಳೆಲ್ಲವೂ ನೆನಪಿರುತ್ತದೆಯಲ್ಲವೆ. ಇದೂ ಸಹ ವಿದ್ಯೆಯಾಗಿದೆ, ಇದೂ ಸಹ ಸಂಪನ್ನವಾಗಿರಬೇಕು, ಮರೆತು ಹೋಗಬಾರದು. ಈ ವಿದ್ಯೆಯನ್ನು ವೃದ್ಧರು, ಯುವಕರು, ಮಕ್ಕಳು ಮೊದಲಾದ ಎಲ್ಲರಿಗೆ ಓದುವ ಹಕ್ಕಿದೆ. ಇಲ್ಲಿ ಕೇವಲ ತಂದೆಯನ್ನು ಅರಿತುಕೊಳ್ಳಬೇಕಾಗಿದೆ. ತಂದೆಯನ್ನು ಅರಿತುಕೊಂಡರೆ ಅವರ ಆಸ್ತಿಯು ಬುದ್ಧಿಯಲ್ಲಿ ಬಂದು ಬಿಡುವುದು. ಪ್ರಾಣಿಗಳಿಗೂ ಸಹ ತನ್ನ ಮಕ್ಕಳು ಮರಿಗಳು ಬುದ್ಧಿಯಲ್ಲಿರುತ್ತದೆ. ಕಾಡಿಗೆ ಹೋದರೂ ಸಹ ಮನೆ ಮತ್ತು ಮರಿಗಳು ನೆನಪಿಗೆ ಬರುತ್ತಿರುತ್ತವೆ, ತಾನೇ ಹುಡುಕಿಕೊಂಡು ಬಂದು ಬಿಡುತ್ತವೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ಮತ್ತು ಮನೆಯನ್ನು ನೆನಪು ಮಾಡಿ ಎಲ್ಲಿಂದ ನೀವು ಪಾತ್ರವನ್ನಭಿನಯಿಸಲು ಬಂದಿದ್ದೀರಿ. ಆತ್ಮಕ್ಕೆ ಮನೆಯು ಬಹಳ ಪ್ರಿಯವೆನಿಸುತ್ತದೆ. ಎಷ್ಟೊಂದು ನೆನಪು ಮಾಡುತ್ತಾರೆ ಆದರೆ ಮಾರ್ಗವನ್ನೇ ಮರೆತು ಹೋಗಿದ್ದಾರೆ. ನಿಮ್ಮ ಬುದ್ಧಿಯಲ್ಲಿದೆ - ನಾವು ಬಹಳ ದೂರವಿರುತ್ತೇವೆ, ಆದರೆ ಅಲ್ಲಿ ಹೋಗುವುದು ಹೇಗೆ? ನಾವು ಏಕೆ ಹೋಗಲು ಸಾಧ್ಯವಾಗುತ್ತಿಲ್ಲ? ಇದೇನೂ ತಿಳಿದಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ - ಒಂದು ಚಕ್ರವ್ಯೂಹದ ಆಟವನ್ನು ರಚಿಸುತ್ತಾರೆ. ಯಾವ ಕಡೆಯಿಂದ ಹೋದರೂ ದಾರಿಯು ಮುಚ್ಚಿರುತ್ತದೆ. ನೀವೂ ಸಹ ತಿಳಿದುಕೊಂಡಿದ್ದೀರಿ – ಈ ಯುದ್ಧದ ನಂತರ ಸ್ವರ್ಗದ ಬಾಗಿಲು ತೆರೆಯುತ್ತದೆ. ಈ ಮೃತ್ಯುಲೋಕದಿಂದ ಎಲ್ಲರೂ ಹೋಗುತ್ತಾರೆ. ಎಷ್ಟೆಲ್ಲಾ ಮನುಷ್ಯರು ನಂಬರ್ವಾರ್ ಧರ್ಮದನುಸಾರ ಮತ್ತು ಪಾತ್ರದನುಸಾರ ಹೋಗಿ ಇರುತ್ತಾರೆ. ನಿಮ್ಮ ಬುದ್ಧಿಯಲ್ಲಿ ಇವೆಲ್ಲಾ ಮಾತುಗಳಿವೆ. ಮನುಷ್ಯರು ಬ್ರಹ್ಮತತ್ವದಲ್ಲಿ ಹೋಗಲು ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ. ನೀವೀಗ ವಾಣಿಯಿಂದ ದೂರ ಹೋಗಬೇಕಾಗಿದೆ. ಆತ್ಮವು ಶರೀರದಿಂದ ಹೊರಟು ಹೋದರೆ ಮತ್ತೆ ಶಬ್ಧವೇ ಇರುವುದಿಲ್ಲ. ಮಕ್ಕಳಿಗೆ ತಿಳಿದಿದೆ - ಅದು ನಮ್ಮ ಮಧುರ ಮನೆಯಾಗಿದೆ ಮತ್ತೆ ದೇವತೆಗಳದು ಮಧುರ ರಾಜಧಾನಿ, ಅದ್ವೈತ ರಾಜಧಾನಿಯಾಗಿದೆ.

ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ. ಸಂಪೂರ್ಣ ಜ್ಞಾನವನ್ನು ತಿಳಿಸುತ್ತಾರೆ ಮತ್ತೆ ಭಕ್ತಿಯಲ್ಲಿ ಇದರ ಶಾಸ್ತ್ರಗಳನ್ನು ರಚಿಸಿದ್ದಾರೆ. ನೀವೀಗ ಆ ಶಾಸ್ತ್ರಗಳನ್ನು ಓದುವ ಅವಶ್ಯಕತೆಯಿಲ್ಲ. ಆ ಶಾಲೆಗಳಲ್ಲಾದರೂ ವೃದ್ಧರು ಓದುವುದಿಲ್ಲ, ಇಲ್ಲಿ ಎಲ್ಲರೂ ಓದುತ್ತೀರಿ. ನೀವು ಮಕ್ಕಳು ಅಮರ ಲೋಕದಲ್ಲಿ ದೇವತೆಗಳಾಗುತ್ತೀರಿ. ಅಲ್ಲಿ ಯಾರದೇ ನಿಂದನೆ ಮಾಡುವಂತಹ ಶಬ್ಧಗಳನ್ನು ಮಾತನಾಡುವುದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ಸ್ವರ್ಗವಿತ್ತು, ಈಗ ಕಳೆದುಹೋಗಿದೆ, ಅದರ ಮಹಿಮೆಯಿದೆ. ಎಷ್ಟೊಂದು ಮಂದಿರಗಳನ್ನು ಕಟ್ಟಿಸುತ್ತಾರೆ. ಅವರೊಂದಿಗೆ ಕೇಳಿ - ಈ ಲಕ್ಷ್ಮೀ-ನಾರಾಯಣರು ಯಾವಾಗ ಇದ್ದುಹೋಗಿದ್ದಾರೆ? ಏನೂ ಗೊತ್ತಿಲ್ಲ. ನಾವೀಗ ನಮ್ಮ ಮನೆಗೆ ಹೋಗಬೇಕೆಂದು ನಿಮಗೆ ಅರ್ಥವಾಗಿದೆ. ಓಂನ ಅರ್ಥವೇ ಬೇರೆಯಾಗಿದೆ ಮತ್ತು ಹಮ್ ಸೋ, ಸೋ ಹಮ್ನ ಅರ್ಥವೇ ಬೇರೆಯಾಗಿದೆ. ಇದನ್ನು ಅವರು ಓಂ-ಸೋ ಹಮ್ - ಎರಡರ ಅರ್ಥವನ್ನು ಒಂದೇ ಮಾಡಿ ಬಿಟ್ಟಿದ್ದಾರೆ. ನೀವಾತ್ಮಗಳು ಶಾಂತಿಧಾಮದ ನಿವಾಸಿಗಳಾಗಿದ್ದೀರಿ. ಇಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೀರಿ. ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ಓಂ ಅರ್ಥಾತ್ ನಾನು ಆತ್ಮ. ಎಷ್ಟೊಂದು ಅಂತರವಿದೆ! ಇದನ್ನು ಅವರು ಎರಡೂ ಒಂದೇ ಮಾಡಿ ಬಿಡುತ್ತಾರೆ. ಇವು ಬುದ್ಧಿಯಿಂದ ತಿಳಿದುಕೊಳ್ಳುವ ಮಾತುಗಳಾಗಿವೆ. ಯಾರು ಇದನ್ನು ಪೂರ್ಣ ರೀತಿಯಿಂದ ತಿಳಿದುಕೊಳ್ಳುವುದಿಲ್ಲವೋ ಅವರು ತೂಕಡಿಸುತ್ತಿರುತ್ತಾರೆ. ಸಂಪಾದನೆಯ ಸಮಯದಲ್ಲೆಂದೂ ತೂಕಡಿಸುವುದಿಲ್ಲ, ಆ ಸಂಪಾದನೆಯು ಅಲ್ಪ ಸಮಯಕ್ಕಾಗಿದೆ, ಇದು ಅರ್ಧಕಲ್ಪಕ್ಕಾಗಿ ಸಂಪಾದನೆಯಾಗಿದೆ. ಆದರೆ ಬುದ್ಧಿಯು ಬೇರೆ ಕಡೆ ಅಲೆದಾಡುವುದರಿಂದ ಸುಸ್ತಾಗಿ ಬಿಡುತ್ತಾರೆ, ಆಕಳಿಸುತ್ತಾರೆ. ನೀವಿಲ್ಲಿ ಕಣ್ಣುಗಳನ್ನು ಮುಚ್ಚಿ ಕುಳಿತುಕೊಳ್ಳಬಾರದು. ನಿಮಗೆ ತಿಳಿದಿದೆ - ಆತ್ಮ ಅವಿನಾಶಿ, ಶರೀರ ವಿನಾಶಿಯಾಗಿದೆ. ಕಲಿಯುಗೀ ನರಕವಾಸಿ ಮನುಷ್ಯರನ್ನು ನೋಡುವುದರಲ್ಲಿ ಮತ್ತು ನಿಮ್ಮನ್ನು ನೋಡುವುದರಲ್ಲಿಯೂ ರಾತ್ರಿ-ಹಗಲಿನ ಅಂತರವಿದೆ. ನಾವಾತ್ಮಗಳು ತಂದೆಯ ಮೂಲಕ ಓದುತ್ತೇವೆ, ಇದು ಯಾರಿಗೂ ತಿಳಿದಿಲ್ಲ. ಜ್ಞಾನ ಸಾಗರ ಪರಮಪಿತ ಪರಮಾತ್ಮನು ಬಂದು ಓದಿಸುತ್ತಾರೆ. ನಾವಾತ್ಮಗಳು ಕೇಳುತ್ತಿದ್ದೇವೆ. ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ನಿಮ್ಮ ಬುದ್ಧಿಯು ಮೇಲೆ ಹೋಗುತ್ತದೆ. ಶಿವ ತಂದೆಯು ನಿಮಗೆ ಜ್ಞಾನವನ್ನು ತಿಳಿಸುತ್ತಿದ್ದಾರೆ ಇದರಲ್ಲಿ ಬುದ್ಧಿಯು ಬಹಳ ಪರಿಶುದ್ಧವಿರಬೇಕು. ಬುದ್ಧಿಯನ್ನು ಪರಿಶುದ್ಧ ಮಾಡಿಕೊಳ್ಳಲು ತಂದೆಯು ಯುಕ್ತಿಯನ್ನು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯುವುದರಿಂದ ತಂದೆಯ ನೆನಪು ಅವಶ್ಯವಾಗಿ ಬರುವುದು. ತಂದೆಯ ನೆನಪು ಬರಲಿ, ಅರ್ಧಕಲ್ಪದಿಂದ ತುಂಡಾಗಿರುವ ಸಂಬಂಧವು ಮತ್ತೆ ಜೋಡಿಸಲ್ಪಡಲಿ ಎಂದೇ ತಮ್ಮನ್ನು ಆತ್ಮನೆಂದು ತಿಳಿಯಬೇಕಾಗಿದೆ. ಸತ್ಯಯುಗದಲ್ಲಂತೂ ಸುಖದ ಪ್ರಾಲಬ್ಧವೇ ಇರುತ್ತದೆ, ದುಃಖದ ಮಾತಿರುವುದಿಲ್ಲ. ಅದಕ್ಕೆ ಸ್ವರ್ಗವೆಂದು ಹೇಳುತ್ತಾರೆ. ಸ್ವರ್ಗದ ರಚಯಿತನೇ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಇಂತಹ ತಂದೆಯನ್ನು ಮಕ್ಕಳು ಎಷ್ಟು ಮರೆತು ಹೋಗುತ್ತಾರೆ! ತಂದೆಯು ಬಂದು ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ. ಮಾರವಾಡಿ ಜನಾಂಗದವರೂ ಸಹ ಬಹಳ ದತ್ತು ಮಾಡಿಕೊಳ್ಳುತ್ತಾರೆ ಆಗ ಅವರಿಗೆ ನಾನು ಸಾಹುಕಾರರ ಮಡಿಲಿಗೆ ಬಂದಿದ್ದೇನೆಂದು ಖುಷಿಯಿರುತ್ತದೆಯಲ್ಲವೆ. ಸಾಹುಕಾರರ ಮಗು ಬಡವರ ಬಳಿ ಎಂದೂ ಹೋಗುವುದಿಲ್ಲ. ಈ ಪ್ರಜಾಪಿತ ಬ್ರಹ್ಮನ ಮಕ್ಕಳಾಗಿದ್ದೀರೆಂದಮೇಲೆ ಅವಶ್ಯವಾಗಿ ಮುಖ ವಂಶಾವಳಿಯಾಗಿರಬೇಕಲ್ಲವೆ. ನೀವು ಬ್ರಾಹ್ಮಣರು ಮುಖ ವಂಶಾವಳಿಯಾಗಿದ್ದೀರಿ, ಅವರು ಕುಖ ವಂಶಾವಳಿಯಾಗಿದ್ದಾರೆ. ಇದರ ಅಂತರವನ್ನು ನೀವೇ ತಿಳಿದುಕೊಂಡಿದ್ದೀರಿ. ನೀವು ಇದನ್ನು ತಿಳಿಸಿದಾಗಲೇ ಅವರು ಮುಖ ವಂಶಾವಳಿಯಾಗುವರು. ಇದು ದತ್ತು ಮಾಡಿಕೊಳ್ಳುವುದಾಗಿದೆ. ಸ್ತ್ರೀಯನ್ನು ನನ್ನ ಸ್ತ್ರೀ ಎಂದು ತಿಳಿದುಕೊಳ್ಳುತ್ತಾರೆ ಅಂದಾಗ ಸ್ತ್ರೀ ಕುಖ ವಂಶಾವಳಿಯೋ ಅಥವಾ ಮುಖ ವಂಶಾವಳಿಯೋ? ಸ್ತ್ರೀ ಮುಖ ವಂಶಾವಳಿಯಾಗುತ್ತಾಳೆ ಮತ್ತೆ ಅವರಿಗೆ ಮಕ್ಕಳಾದಾಗ ಅವರು ಕುಖ ವಂಶಾವಳಿಯಾಗುತ್ತಾರೆ. ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಮುಖ ವಂಶಾವಳಿಯಾಗಿದ್ದೀರಿ. ನನ್ನ ಜ್ಞಾನದಿಂದಲೇ ನನ್ನವರಾದರಲ್ಲವೆ. ನನ್ನ ಮಕ್ಕಳಾಗಿದ್ದೀರಿ, ಇದನ್ನು ಹೇಳಿದೊಡನೆಯೇ ನಶೆಯೇರುತ್ತದೆ ಅಂದಾಗ ನೀವೆಲ್ಲರೂ ಮುಖ ವಂಶಾವಳಿಯಾಗಿದ್ದೀರಿ. ಆತ್ಮಗಳು ಮುಖ ವಂಶಾವಳಿಯಾಗುವುದಿಲ್ಲ, ಆತ್ಮವು ಅನಾದಿ-ಅವಿನಾಶಿಯಾಗಿದೆ. ಈ ಮನುಷ್ಯ ಸೃಷ್ಟಿಯು ಹೇಗೆ ಪರಿವರ್ತನೆಯಾಗುತ್ತದೆಯೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನೀವು ಮಕ್ಕಳಿಗೆ ಬಹಳಷ್ಟು ಯುಕ್ತಿಗಳು ಸಿಗುತ್ತವೆ ಆದರೂ ಸಹ ತಂದೆಯು ಹೇಳುತ್ತಾರೆ - ಏನಾದರೂ ಧಾರಣೆಯಾಗುತ್ತಿಲ್ಲ ಅಥವಾ ಹೇಳಲು ಬರುತ್ತಿಲ್ಲವೆಂದರೆ ಕೇವಲ ನೀವು ತಂದೆಯನ್ನು ನೆನಪು ಮಾಡುತ್ತಾ ಇರಿ ಆಗ ಭಾಷಣ ಮಾಡುವವರಿಗಿಂತಲೂ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಭಾಷಣ ಮಾಡುವವರಾದರೂ ಬಿರುಗಾಳಿಯಲ್ಲಿ ಬೀಳುತ್ತಾರೆ. ಅವರು ಹಾಗೆ ಬೀಳದೇ ತಂದೆಯನ್ನು ನೆನಪು ಮಾಡುತ್ತಾ ಇದ್ದರೆ ಹೆಚ್ಚು ಪದವಿಯನ್ನು ಪಡೆಯಬಲ್ಲರು. ಎಲ್ಲರಿಗಿಂತ ಹೆಚ್ಚು ಯಾರು ವಿಕಾರದಲ್ಲಿ ಬೀಳುತ್ತಾರೆಯೋ ಅವರು ಐದನೇ ಅಂತಸ್ತಿನಿಂದ ಬೀಳುವುದರಿಂದ ಮೂಳೆಗಳು ಪುಡಿ-ಪುಡಿಯಾಗುತ್ತವೆ. ಐದನೇ ಅಂತಸ್ತು ದೇಹಾಭಿಮಾನವಾಗಿದೆ, ನಾಲ್ಕನೆಯ ಅಂತಸ್ತು ಕಾಮ ವಿಕಾರವಾಗಿದೆ. ತಂದೆಯು ತಿಳಿಸುತ್ತಾರೆ – ಕಾಮ ಮಹಾಶತ್ರುವಾಗಿದೆ, ಬಾಬಾ ನಾನು ಬಿದ್ದು ಹೋದೆನೆಂದು ಹೇಳುತ್ತಾರೆ. ಕ್ರೋಧವು ಬಂದಾಗ ನಾವು ಬಿದ್ದು ಹೋದೆವೆಂದು ಹೇಳುವುದಿಲ್ಲ. ಮುಖ ಕಪ್ಪು ಮಾಡಿಕೊಳ್ಳುವುದರಿಂದ ಬಹಳ ದೊಡ್ಡ ಪೆಟ್ಟು ಬೀಳುತ್ತದೆ. ಅವರು ಅನ್ಯರಿಗೆ ಕಾಮ ಮಹಾಶತ್ರುವೆಂದು ಹೇಳಲು ಸಾಧ್ಯವಿಲ್ಲ. ತಂದೆಯು ಮತ್ತೆ-ಮತ್ತೆ ತಿಳಿಸುತ್ತಾರೆ - ವಿಕಾರಿ ದೃಷ್ಟಿಯಿಂದ ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಸತ್ಯಯುಗದಲ್ಲಿ ಸಂಭಾಲನೆ ಮಾಡುವ ಅವಶ್ಯಕತೆಯೇ ಇಲ್ಲ, ವಿಕಾರೀ ದೃಷ್ಟಿಯೇ ಇರುವುದಿಲ್ಲ. ನಿರ್ವಿಕಾರಿ ದೃಷ್ಟಿಯಿರುತ್ತದೆ, ಅದು ನಿರ್ವಿಕಾರಿ ರಾಜ್ಯವಾಗಿದೆ. ಈ ಸಮಯದಲ್ಲಿ ವಿಕಾರೀ ಪ್ರಪಂಚವಾಗಿದೆ. ಈಗ ನೀವಾತ್ಮಗಳಿಗೆ ನಿರ್ವಿಕಾರಿ ದೃಷ್ಟಿಯು ಸಿಗುತ್ತದೆ. ಇದು 21 ಜನ್ಮಗಳವರೆಗೆ ಕೆಲಸ ಮಾಡುತ್ತದೆ. ಅಲ್ಲಿ ಯಾರೂ ಕ್ರಿಮಿನಲ್ ಗಳಾಗುವುದಿಲ್ಲ. ಈಗ ಮುಖ್ಯ ಮಾತನ್ನು ತಂದೆಯು ತಿಳಿಸುತ್ತಾರೆ - ತಂದೆಯನ್ನು ನೆನಪು ಮಾಡಿ ಮತ್ತು 84 ಜನ್ಮಗಳ ಚಕ್ರವನ್ನು ನೆನಪು ಮಾಡಿ. ಇದೂ ಸಹ ಆಶ್ಚರ್ಯದ ಮಾತಾಗಿದೆ. ಶ್ರೀನಾರಾಯಣನ ಆತ್ಮವೇ ಅಂತಿಮದಲ್ಲಿ ಬಂದು ಭಾಗ್ಯಶಾಲಿ ರಥವಾಗುತ್ತಾರೆ. ಅವರಲ್ಲಿ ತಂದೆಯ ಪ್ರವೇಶತೆಯಾಗುತ್ತದೆ ಆಗ ಭಾಗ್ಯಶಾಲಿಯಾಗುತ್ತಾರೆ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮ - ಈ 84 ಜನ್ಮಗಳ ಚರಿತ್ರೆಯು ನಿಮ್ಮ ಬುದ್ಧಿಯಲ್ಲಿರಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ನೆನಪಿನಿಂದ ಬುದ್ಧಿಯನ್ನು ಪರಿಶುದ್ಧ ಮಾಡಿಕೊಳ್ಳಬೇಕಾಗಿದೆ. ಬುದ್ಧಿಯು ವಿದ್ಯೆಯಿಂದ ಸದಾ ಸಂಪನ್ನವಾಗಿರಲಿ. ತಂದೆ ಮತ್ತು ಮನೆಯನ್ನು ಸದಾ ನೆನಪಿಟ್ಟುಕೊಳ್ಳಬೇಕು ಮತ್ತು ಅನ್ಯರಿಗೂ ನೆನಪು ತರಿಸಬೇಕಾಗಿದೆ.

2. ಈ ಅಂತಿಮ ಜನ್ಮದಲ್ಲಿ ವಿಕಾರಿ ದೃಷ್ಟಿಯನ್ನು ಸಮಾಪ್ತಿ ಮಾಡಿಕೊಂಡು ನಿರ್ವಿಕಾರಿ ದೃಷ್ಟಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ವಿಕಾರಿ ಕಣ್ಣುಗಳ ಮೇಲೆ ಬಹಳ ಗಮನವಿಡಬೇಕಾಗಿದೆ.

ವರದಾನ:
ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಮುಖಾಂತರ ಏರುವ ಕಲೆಯ ಅನುಭವ ಮಾಡುವ ರಾಜ್ಯ ಅಧಿಕಾರಿ ಭವ.

ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಇದ್ದಲ್ಲಿ ಪ್ರತಿ ಹೆಜ್ಜೆಯಲ್ಲಿ ಏರುವ ಕಲೆಯ ಅನುಭವ ಮಾಡುತ್ತಿರುತ್ತಾರೆ. ಪ್ರತಿ ಸಂಕಲ್ಪದಲ್ಲಿ ಸೇವೆ ಇದ್ದಲ್ಲಿ ವ್ಯರ್ಥದಿಂದ ಬಿಡಿಸಿಕೊಳ್ಳುವಿರಿ. ಸೇವೆ ಜೀವನದ ಒಂದು ಅಂಗವಾಗಿ ಬಿಡುವುದು, ಹೇಗೆ ಶರೀರದಲ್ಲಿ ಎಲ್ಲಾ ಅಂಗಗಳೂ ಅವಶ್ಯಕ ಹಾಗೆಯೇ ಬ್ರಾಹ್ಮಣ ಜೀವನದ ವಿಶೇಷ ಅಂಗ ಸೇವೆಯಾಗಿದೆ. ಬಹಳ ಸೇವೆಯ ಅವಕಾಶ ಸಿಗುವುದು, ಸ್ಥಾನ ಸಿಗುವುದು, ಸಂಗ ಸಿಗುವುದು ಇದೂ ಸಹ ಭಾಗ್ಯದ ನಿಶಾನಿಯಾಗಿದೆ. ಈ ರೀತಿಯ ಸೇವೆಯ ಗೋಲ್ಡನ್ ಚಾನ್ಸ್ ತೆಗೆದುಕೊಳ್ಳುವವರೇ ರಾಜ್ಯ ಅಧಿಕಾರಿಗಳಾಗುತ್ತಾರೆ.

ಸ್ಲೋಗನ್:
ಪರಮಾತ್ಮ ಪ್ರೀತಿಯ ಪಾಲನೆಯ ಸ್ವರೂಪವಾಗಿದೆ - ಸಹಜಯೋಗಿ ಜೀವನ.