28.10.20 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನೀವು
ಈ ಪಾಠಶಾಲೆಗೆ ಸ್ವರ್ಗದ ಪಾಸ್ಪೋರ್ಟ್ ತೆಗೆದುಕೊಳ್ಳಲು ಬಂದಿದ್ದೀರಿ, ಆತ್ಮಾಭಿಮಾನಿಯಾಗಿರಿ ಮತ್ತು
ತನ್ನ ರಿಜಿಸ್ಟರ್ನಲ್ಲಿ ನೋಟ್ ಮಾಡಿಸಿ ಆಗ ಸ್ವರ್ಗದಲ್ಲಿ ಬಂದು ಬಿಡುತ್ತೀರಿ"
ಪ್ರಶ್ನೆ:
ಯಾವ ಸ್ಮೃತಿ
ಇಲ್ಲದಿರುವ ಕಾರಣ ಮಕ್ಕಳು ತಂದೆಗೆ ಗೌರವ ಕೊಡುವುದಿಲ್ಲ?
ಉತ್ತರ:
ಕೆಲವು ಮಕ್ಕಳಿಗೆ ಈ ಸ್ಮೃತಿಯಿರುವುದಿಲ್ಲ - ಯಾರನ್ನು ಇಡೀ ಪ್ರಪಂಚವು ಕೂಗುತ್ತಿದೆಯೋ, ನೆನಪು
ಮಾಡುತ್ತಿದೆಯೋ ಆ ಶ್ರೇಷ್ಠಾತಿ ಶ್ರೇಷ್ಠ ತಂದೆಯೇ ನಾವು ಮಕ್ಕಳ ಸೇವೆಯಲ್ಲಿ ಉಪಸ್ಥಿತರಾಗಿದ್ದಾರೆ.
ಈ ನಿಶ್ಚಯವು ನಂಬರ್ವಾರ್ ಆಗಿದೆ. ಯಾರಿಗೆ ಎಷ್ಟು ನಿಶ್ಚಯವಿದೆಯೋ ಅಷ್ಟು ಗೌರವ ಕೊಡುತ್ತಾರೆ.
ಗೀತೆ:
ಯಾರು ತಂದೆಯ
ಜೊತೆಯಿದ್ದಾರೆಯೋ ಅವರ ಮೇಲೂ ಜ್ಞಾನದ ಮಳೆ.....
ಓಂ ಶಾಂತಿ.
ಎಲ್ಲಾ ಮಕ್ಕಳು ಜ್ಞಾನ ಸಾಗರನ ಜೊತೆಯಂತೂ ಇದ್ದೇ ಇರುವಿರಿ. ಇಷ್ಟೊಂದು ಮಂದಿ ಒಂದೇ ಸ್ಥಳದಲ್ಲಿರಲು
ಸಾಧ್ಯವಿಲ್ಲ. ಭಲೆ ಯಾರು ಇಲ್ಲಿ ಜೊತೆಯಿದ್ದಾರೆಯೋ ಅವರು ಸಮೀಪದಲ್ಲಿ ಡೈರೆಕ್ಟ್ ಜ್ಞಾನವನ್ನು
ಕೇಳುತ್ತಾರೆ ಮತ್ತು ದೂರದಲ್ಲಿರುವವರಿಗೂ ಮುರುಳಿಯು ತಡವಾಗಿ ಸಿಗುತ್ತದೆ ಆದರೆ ಜೊತೆಯಿರುವವರು
ಹೆಚ್ಚು ಉನ್ನತಿಯನ್ನು ಪಡೆಯುತ್ತಾರೆ. ದೂರವಿರುವವರು ಕಡಿಮೆ ಉನ್ನತಿಯನ್ನು ಪಡೆಯುತ್ತಾರೆಂದಲ್ಲ.
ಪ್ರತ್ಯಕ್ಷದಲ್ಲಿ ನೋಡಿದಾಗ ಯಾರು ದೂರದಲ್ಲಿದ್ದಾರೆಯೋ ಅವರೇ ಹೆಚ್ಚು ಓದುತ್ತಾರೆ ಮತ್ತು
ಉನ್ನತಿಯನ್ನು ಪಡೆಯುತ್ತಾರೆ. ಇಷ್ಟಂತೂ ಖಚಿತವಾಗಿದೆ, ಬೇಹದ್ದಿನ ತಂದೆಯು ಇಲ್ಲಿದ್ದಾರೆ.
ಬ್ರಾಹ್ಮಣ ಮಕ್ಕಳಲ್ಲಿಯೂ ನಂಬರ್ವಾರ್ ಇದ್ದಾರೆ. ನೀವು ಮಕ್ಕಳು ದೈವೀ ಗುಣಗಳನ್ನು ಧಾರಣೆ
ಮಾಡಬೇಕಾಗಿದೆ. ಕೆಲವು ಮಕ್ಕಳಿಂದ ದೊಡ್ಡ-ದೊಡ್ಡ ತಪ್ಪುಗಳಾಗುತ್ತವೆ. ಇದನ್ನೂ ತಿಳಿದುಕೊಂಡಿದ್ದಾರೆ
- ಬೇಹದ್ದಿನ ತಂದೆ ಯಾರನ್ನು ಇಡೀ ಸೃಷ್ಟಿಯು ನೆನಪು ಮಾಡುತ್ತದೆ ಅವರೀಗ ನಮ್ಮ ಸೇವೆಯಲ್ಲಿ
ಉಪಸ್ಥಿತರಿದ್ದಾರೆ ಮತ್ತು ನಮಗೆ ಶ್ರೇಷ್ಠಾತಿ ಶ್ರೇಷ್ಠರನ್ನಾಗಿ ಮಾಡುವ ಮಾರ್ಗವನ್ನು
ತಿಳಿಸುತ್ತಾರೆ. ಬಹಳ ಪ್ರೀತಿಯಿಂದ ತಿಳಿಸಿಕೊಡುತ್ತಾರೆ. ಇದು ತಿಳಿದಿದ್ದರೂ ಸಹ ತಂದೆಗೆ ಅಷ್ಟು
ಗೌರವ ಕೊಡುವುದಿಲ್ಲ. ಬಂಧನದಲ್ಲಿರುವವರು ಎಷ್ಟೊಂದು ಪೆಟ್ಟುತಿನ್ನುತ್ತಾರೆ, ಚಡಪಡಿಸುತ್ತಾರೆ ಆದರೂ
ಸಹ ಹೆಚ್ಚು ನೆನಪಿನಲ್ಲಿರುತ್ತಾರೆ. ಶ್ರೇಷ್ಠ ಪದವಿ ಪಡೆಯುತ್ತಾರೆ. ತಂದೆಯು ಎಲ್ಲರಿಗಾಗಿ
ಹೇಳುತ್ತಿಲ್ಲ. ನಂಬರ್ವಾರ್ ಪುರುಷಾರ್ಥದನುಸಾರ ಇದ್ದೇ ಇರುತ್ತಾರೆ. ತಂದೆಯು ಮಕ್ಕಳಿಗೆ ಎಚ್ಚರಿಕೆ
ನೀಡುತ್ತಾರೆ, ಎಲ್ಲರೂ ಒಂದೇ ರೀತಿಯಾಗಿ ಇರಲು ಸಾಧ್ಯವಿಲ್ಲ. ಬಂಧನದಲ್ಲಿರುವವರು ಮೊದಲಾದವರು
ಹೊರಗಡೆ ಇದ್ದುಕೊಂಡೇ ಬಹಳ ಸಂಪಾದನೆ ಮಾಡಿಕೊಳ್ಳುತ್ತಾರೆ. ಈ ಗೀತೆಯಂತೂ ಭಕ್ತಿಮಾರ್ಗದಲ್ಲಿ
ಮಾಡಲ್ಪಟ್ಟಿದೆ. ಆದರೆ ನೀವು ಇದರಲ್ಲಿ ಅರ್ಥ ಮಾಡಿಕೊಳ್ಳುವುದು ಬಹಳಷ್ಟಿದೆ. ಭಕ್ತಿಮಾರ್ಗದವರಿಗೆ
ತಂದೆ ಯಾರು? ಯಾರ ತಂದೆಯಾಗಿದ್ದಾರೆ? ಇದೇನೂ ಗೊತ್ತಿಲ್ಲ. ಆತ್ಮವು ತನ್ನನ್ನೇ
ತಿಳಿದುಕೊಂಡಿಲ್ಲವೆಂದರೆ ತಂದೆಯನ್ನು ಹೇಗೆ ತಿಳಿದುಕೊಳ್ಳುವರು? ಆಗಿರುವುದು ಆತ್ಮವೇ ಅಲ್ಲವೆ ಆದರೆ
ನಾನು ಯಾರಾಗಿದ್ದೇನೆ, ಎಲ್ಲಿಂದ ಬಂದಿದ್ದೇನೆ ಎಂಬುದು ತಿಳಿದಿಲ್ಲ. ಎಲ್ಲರೂ
ದೇಹಾಭಿಮಾನಿಗಳಾಗಿದ್ದಾರೆ. ಆತ್ಮಾಭಿಮಾನಿಗಳು ಯಾರೂ ಇಲ್ಲ. ಒಂದುವೇಳೆ ಆತ್ಮಾಭಿಮಾನಿಯಾದರೆ
ಆತ್ಮಕ್ಕೆ ತನ್ನ ತಂದೆಯ ಬಗ್ಗೆಯೂ ತಿಳಿಯುವುದು. ದೇಹಾಭಿಮಾನಿಗಳಾಗಿರುವ ಕಾರಣ ಆತ್ಮನನ್ನಾಗಲಿ,
ಪರಮಪಿತ ಪರಮಾತ್ಮನನ್ನಾಗಲಿ ಅರಿತುಕೊಂಡಿಲ್ಲ. ಇಲ್ಲಂತೂ ನೀವು ಮಕ್ಕಳಿಗೆ ತಂದೆಯು ಸನ್ಮುಖದಲ್ಲಿ
ಕುಳಿತು ತಿಳಿಸುತ್ತಾರೆ - ಇದು ಬೇಹದ್ದಿನ ಶಾಲೆಯಾಗಿದೆ. ಸ್ವರ್ಗದ ರಾಜ್ಯಭಾಗ್ಯವನ್ನು ಪ್ರಾಪ್ತಿ
ಮಾಡಿಕೊಳ್ಳುವುದು ಇಲ್ಲಿನ ಗುರಿ-ಧ್ಯೇಯವಾಗಿದೆ. ಸ್ವರ್ಗದಲ್ಲಿಯೂ ಪದವಿಗಳು ಬಹಳಷ್ಟಿವೆ. ಕೆಲವರು
ರಾಜ-ರಾಣಿ, ಕೆಲವರು ಪ್ರಜೆಗಳು, ನೌಕರ-ಚಾಕರರು... ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು
ಪುನಃ ಡಬಲ್ ಕಿರೀಟಧಾರಿಗಳನ್ನಾಗಿ ಮಾಡಲು ಬಂದಿದ್ದೇನೆ, ಎಲ್ಲರೂ ಡಬಲ್ ಕಿರೀಟಧಾರಿಗಳಾಗಲು
ಸಾಧ್ಯವಿಲ್ಲ. ಯಾರು ಚೆನ್ನಾಗಿ ಓದುವರೋ ಅವರೇ ನಾವು ಇಷ್ಟು ಶ್ರೇಷ್ಠರಾಗುತ್ತೇವೆ ಎಂಬುದನ್ನು
ಅರಿತುಕೊಳ್ಳುತ್ತಾರೆ. ಸಮರ್ಪಿತರೂ ಆಗಿದ್ದಾರೆ, ನಿಶ್ಚಯವೂ ಇದೆ. ಇವರಿಂದ ಯಾವುದೇ ಅಂತಹ ಪತಿತ
ಕರ್ಮವಾಗುವುದಿಲ್ಲವೆಂದು ಎಲ್ಲರೂ ತಿಳಿಯುತ್ತಾರೆ ಆದರೆ ಕೆಲಕೆಲವರಲ್ಲಿ ಬಹಳ ಅವಗುಣಗಳಿರುತ್ತವೆ.
ನಾವು ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆ ಎಂಬುದನ್ನೇ ತಿಳಿದುಕೊಳ್ಳುವುದಿಲ್ಲ ಆದ್ದರಿಂದ
ಪುರುಷಾರ್ಥವನ್ನೇ ಮಾಡುವುದಿಲ್ಲ. ನಾನು ಇಷ್ಟು ಶ್ರೇಷ್ಠನು ಆಗುತ್ತೇನೆಯೇ ಎಂದು ತಂದೆಯೊಂದಿಗೆ
ಕೇಳಿದರೆ ತಂದೆಯು ಕೂಡಲೇ ತಿಳಿಸಬಲ್ಲರು. ತಮ್ಮನ್ನು ನೋಡಿಕೊಂಡಾಗ ಅವಶ್ಯವಾಗಿ ನಾನು ಶ್ರೇಷ್ಠ
ಪದವಿಯನ್ನು ಪಡೆಯಲು ಸಾಧ್ಯವಿಲ್ಲವೆಂದು ಅರ್ಥವಾಗಿ ಬಿಡುತ್ತದೆ. ಅಂತಹ ಲಕ್ಷಣಗಳೂ ಬೇಕಲ್ಲವೆ.
ಸತ್ಯ-ತ್ರೇತಾಯುಗದಲ್ಲಂತೂ ಇಂತಹ ಮಾತುಗಳಿರುವುದಿಲ್ಲ, ಅಲ್ಲಿ ಸುಖದ ಪ್ರಾಲಬ್ಧವಿರುತ್ತದೆ
ನಂತರದಲ್ಲಿ ಬರುವಂತಹ ರಾಜರೂ ಸಹ ಪ್ರಜೆಗಳನ್ನು ಬಹಳ ಪ್ರೀತಿ ಮಾಡುತ್ತಾರೆ. ಇವರಂತೂ
ಮಾತಾಪಿತನಾಗಿದ್ದಾರೆ. ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಇವರು ಬೇಹದ್ದಿನ
ತಂದೆಯಾಗಿದ್ದಾರೆ, ಇಡೀ ಪ್ರಪಂಚವನ್ನು ರಿಜಿಸ್ಟರ್ ಮಾಡುವವರಾಗಿದ್ದಾರೆ. ನೀವೂ ಸಹ ರಿಜಿಸ್ಟರ್
ಮಾಡಿಕೊಳ್ಳುತ್ತಿದ್ದೀರಲ್ಲವೆ, ಪಾಸ್ಪೋರ್ಟನ್ನು ಕೊಡುತ್ತಿದ್ದೀರಿ. ಸ್ವರ್ಗದ ಮಾಲೀಕರಾಗಲು ನಿಮಗೆ
ಇಲ್ಲಿಂದಲೇ ಪಾಸ್ಪೋರ್ಟ್ ಸಿಗುತ್ತದೆ. ತಂದೆಯು ಹೇಳಿದ್ದರು, ಯಾರು ವೈಕುಂಠಕ್ಕೆ
ಯೋಗ್ಯರಾಗಿದ್ದಾರೆಯೋ ಅವರೆಲ್ಲರ ಭಾವ ಚಿತ್ರವಿರಬೇಕು ಏಕೆಂದರೆ ನೀವು ಮನುಷ್ಯರಿಂದ
ದೇವತೆಗಳಾಗುತ್ತೀರಿ. ನಾವೇ ದೇವತೆಗಳಾಗುತ್ತಿದ್ದೇವೆಂದು ಪಕ್ಕದಲ್ಲಿಯೇ ಕಿರೀಟ ಮತ್ತು
ಸಿಂಹಾಸನವುಳ್ಳ ಚಿತ್ರವಿರಲಿ. ಪ್ರದರ್ಶನಿಗಳಲ್ಲಿಯೂ ಸಹ ಈ ಚಿತ್ರವನ್ನಿಡಬೇಕು - ಇದು
ರಾಜಯೋಗವಾಗಿದೆ. ತಿಳಿದುಕೊಳ್ಳಿ, ಯಾರಾದರೂ ವಕೀಲನಾಗುತ್ತಾನೆಂದರೆ ಅವರು ಒಂದು ಕಡೆ ಸಾಧಾರಣ
ಉಡುಪನ್ನು ಧರಿಸುತ್ತಾರೆ. ಇನ್ನೊಂದು ಕಡೆ ವಕೀಲನ ಉಡುಪಿನಲ್ಲಿರುತ್ತಾರೆ. ಹೇಗೆ ಒಂದು ಕಡೆ ನೀವು
ಸಾಧಾರಣರು ಇನ್ನೊಂದು ಕಡೆ ಡಬಲ್ ಕಿರೀಟಧಾರಿಗಳು, ಹೀಗೆ ನಿಮ್ಮದು ಒಂದು ಚಿತ್ರವಿದೆಯಲ್ಲವೆ.
ಇದರಲ್ಲಿ ನೀವು ಏನಾಗಲು ಬಯಸುತ್ತೀರೆಂದು ಕೇಳುತ್ತೀರಿ - ಈ ವಕೀಲನಾಗಬೇಕೆ? ರಾಜಾಧಿ ರಾಜರಾಗಬೇಕೆ?
ಇಂತಹ ಚಿತ್ರಗಳಿರಬೇಕು - ಬ್ಯಾರಿಸ್ಟರ್, ಜಡ್ಜ್ ಮೊದಲಾದವರು ಇಲ್ಲಿನವರಾಗಿದ್ದಾರೆ. ನೀವಂತೂ ಹೊಸ
ಪ್ರಪಂಚದಲ್ಲಿ ರಾಜಾಧಿ ರಾಜರಾಗುವಿರಿ. ಗುರಿ-ಧ್ಯೇಯವು ಸನ್ಮುಖದಲ್ಲಿದೆ - ನಾವೇ ಈ
ರೀತಿಯಾಗುತ್ತಿದ್ದೇವೆ. ಇದರಲ್ಲಿನ ತಿಳುವಳಿಕೆಯು ಎಷ್ಟು ಚೆನ್ನಾಗಿದೆ! ಚಿತ್ರಗಳೂ ಸಹ ದೊಡ್ಡ
ಗಾತ್ರದಲ್ಲಿ ಬಹಳ ಚೆನ್ನಾಗಿರಲಿ. ಅವರು ಬ್ಯಾರಿಸ್ಟರಿ ಓದುತ್ತಾರೆಂದರೆ ಅವರ ಬುದ್ಧಿಯೋಗವು
ಬ್ಯಾರಿಸ್ಟರ್ನೊಂದಿಗೆ ಇರುತ್ತದೆ ಮತ್ತು ಬ್ಯಾರಿಸ್ಟರ್ ಪದವಿಯನ್ನೇ ಪಡೆಯುತ್ತಾರೆ. ನಿಮ್ಮ ಯೋಗವು
ಪರಮಪಿತ ಪರಮಾತ್ಮನೊಂದಿಗಿದೆ ಆದ್ದರಿಂದ ಡಬಲ್ ಕಿರೀಟಧಾರಿಗಳಾಗುತ್ತೀರಿ. ಈಗ ತಂದೆಯು
ತಿಳಿಸುತ್ತಾರೆ - ಮಕ್ಕಳು ಈಗ ಈ ಸೇವೆಯಲ್ಲಿ ತೊಡಗಬೇಕು, ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ತಿಳಿಸಲು
ಬಹಳ ಸಹಜವಾಗುವುದು. ನಾವೇ ಇವರ ತರಹ ಆಗುತ್ತಿದ್ದೇವೆ ಅಂದಮೇಲೆ ನಮಗಾಗಿ ಹೊಸ ಪ್ರಪಂಚ ಬೇಕು. ನರಕದ
ನಂತರ ಸ್ವರ್ಗವಾಗುವುದು. ಈಗ ಇದು ಪುರುಷೋತ್ತಮ ಸಂಗಮಯುಗವಾಗಿದೆ. ಈ ವಿದ್ಯೆಯು ಎಷ್ಟು
ಶ್ರೇಷ್ಠರನ್ನಾಗಿ ಮಾಡುವಂತದ್ದಾಗಿದೆ. ಇದರಲ್ಲಿ ಹಣದ ಅವಶ್ಯಕತೆಯೂ ಇಲ್ಲ. ವಿದ್ಯಾಭ್ಯಾಸದ
ಉಮ್ಮಂಗವಿರಬೇಕು. ಒಬ್ಬ ವ್ಯಕ್ತಿಯು ಬಹಳ ಬಡವನಾಗಿದ್ದರು, ಓದುವುದಕ್ಕೆ ಹಣವಿರಲಿಲ್ಲ ಮತ್ತೆ
ಓದುತ್ತಾ-ಓದುತ್ತಾ ಪರಿಶ್ರಮ ಪಟ್ಟು ಇಷ್ಟು ಸಾಹುಕಾರನಾದರು, ಅವರು ವಿಕ್ಟೋರಿಯಾ ರಾಣಿಯ
ಮಂತ್ರಿಯಾಗಿ ಬಿಟ್ಟರು. ನೀವೂ ಸಹ ಎಷ್ಟು ಬಡವರಾಗಿದ್ದೀರಿ. ತಂದೆಯು ಎಷ್ಟು ಉನ್ನತ ವಿದ್ಯೆಯನ್ನು
ಓದಿಸುತ್ತಾರೆ. ಇದರಲ್ಲಿ ಕೇವಲ ಬುದ್ಧಿಯಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ. ದೀಪವನ್ನು
ಬೆಳಗಿಸುವ ಅವಶ್ಯಕತೆಯೂ ಇಲ್ಲ. ಎಲ್ಲಾದರೂ ಕುಳಿತು ನೆನಪು ಮಾಡಿ ಆದರೆ ಮಾಯೆಯು ಈ ರೀತಿಯಿದೆ
ತಂದೆಯ ನೆನಪನ್ನೇ ಮರೆಸಿ ಬಿಡುತ್ತದೆ. ನೆನಪಿನಲ್ಲಿಯೇ ವಿಘ್ನಗಳು ಬರುತ್ತವೆ, ಇದೇ ಯುದ್ಧವಲ್ಲವೆ.
ತಂದೆಯನ್ನು ನೆನಪು ಮಾಡುವುದರಿಂದಲೇ ಆತ್ಮವು ಪವಿತ್ರನಾಗುತ್ತದೆ. ಓದುವಾಗ ಮಾಯೆಯು ಏನೂ
ಮಾಡುವುದಿಲ್ಲ, ವಿದ್ಯೆಗಿಂತಲೂ ನೆನಪಿನ ನಶೆಯು ಹೆಚ್ಚಿನದಾಗಿದೆ ಆದ್ದರಿಂದ ಪ್ರಾಚೀನ ಯೋಗವೆಂದು
ಗಾಯನವಿದೆ. ಜ್ಞಾನ ಮತ್ತು ಯೋಗವೆಂದು ಹೇಳಲಾಗುತ್ತದೆ. ಹೀಗೀಗೆ ನೆನಪು ಮಾಡಿ ಎಂದು ಯೋಗಕ್ಕಾಗಿಯೇ
ಇಷ್ಟೊಂದು ಜ್ಞಾನವು ಸಿಗುತ್ತದೆ ಮತ್ತು ಸೃಷ್ಟಿಚಕ್ರದ ಜ್ಞಾನವೂ ಇದೆ. ರಚಯಿತ ಮತ್ತು ರಚನೆಯ
ಜ್ಞಾನವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಭಾರತದ ಪ್ರಾಚೀನ ಯೋಗವನ್ನು ಕಲಿಸುತ್ತಾರೆ. ಹೊಸ
ಪ್ರಪಂಚಕ್ಕೆ ಪ್ರಾಚೀನವೆಂದು ಹೇಳಲಾಗುತ್ತದೆ. ಇದಕ್ಕೆ ಅವರು ಲಕ್ಷಾಂತರ ವರ್ಷಗಳೆಂದು ಹೇಳಿ
ಬಿಟ್ಟಿದ್ದಾರೆ. ಕಲ್ಪದ ಆಯಸ್ಸನ್ನು ಕೆಲಕೆಲವರು ಕೆಲಕೆಲವು ರೀತಿಯಲ್ಲಿ ಅನೇಕ ಪ್ರಕಾರದಿಂದ
ಹೇಳುತ್ತಾರೆ. ಇಲ್ಲಿ ನಿಮಗೆ ಒಬ್ಬ ತಂದೆಯೇ ಓದಿಸುತ್ತಿದ್ದಾರೆ. ನೀವು ಹೊರಗಡೆಯೂ ಹೋಗುತ್ತೀರಿ,
ನಿಮಗೆ ಚಿತ್ರಗಳು ಸಿಗುತ್ತವೆ. ಇವರು ವ್ಯಾಪಾರಿಯಲ್ಲವೆ. ತಂದೆಯು ತಿಳಿಸುತ್ತಾರೆ- ನೀವು ಬಟ್ಟೆಯ
ಮೇಲೂ ಸಹ ಮುದ್ರಿಸಬಹುದು. ಒಂದುವೇಳೆ ಯಾರ ಬಳಿಯಾದರೂ ದೊಡ್ಡ ಸ್ಕ್ರೀನ್ ಪ್ರೆಸ್ ಇಲ್ಲದಿದ್ದರೆ
ಅರ್ಧ-ಅರ್ಧ ಮಾಡಿ ನಂತರ ಅದನ್ನು ಜೋಡಿಸಿದರೂ ಅದು ಗೊತ್ತಾಗುವುದಿಲ್ಲ ಚೆನ್ನಾಗಿ ಕಾಣುತ್ತದೆ.
ಬೇಹದ್ದಿನ ತಂದೆಯು ಹೇಳುತ್ತಾರೆ, ಯಾರಾದರೂ ಈ ರೀತಿ ಮಾಡಿಸಿ ತೋರಿಸಿದರೆ ನಾನು ಅವರ ಹೆಸರನ್ನು
ಪ್ರಸಿದ್ಧಗೊಳಿಸುತ್ತೇನೆ. ಈ ಬಟ್ಟೆಯ ಮೇಲೆ ಚಿತ್ರಗಳನ್ನು ಮಾಡಿಸಿ ವಿದೇಶಕ್ಕೆ ತೆಗೆದುಕೊಂಡು
ಹೋದರೂ ಸಹ ನಿಮ್ಮ ಒಂದೊಂದು ಚಿತ್ರಕ್ಕೆ 5-10 ಸಾವಿರ ರೂ.ಗಳನ್ನು ಕೊಟ್ಟು ಬಿಡುತ್ತಾರೆ. ಅಲ್ಲಿ
ಬಹಳಷ್ಟು ಹಣವಿದೆ, ಇಷ್ಟು ದೊಡ್ಡ-ದೊಡ್ಡ ಮುದ್ರಣಾಲಯಗಳಿವೆ, ನಗರಗಳ ಚಿತ್ರಗಳನ್ನು ಬಹಳ ಚೆನ್ನಾಗಿ
ಮಾಡಿಸಿರುತ್ತಾರೆ. ಅದೇರೀತಿ ಈ ಚಿತ್ರಗಳನ್ನು ಮಾಡಿಸಬಹುದು. ಇವಂತೂ ಬಹಳ ಫಸ್ಟ್ಕ್ಲಾಸ್
ಚಿತ್ರಗಳಾಗಿವೆ. ಸತ್ಯ ಜ್ಞಾನವು ಇವರಲಿಯೇ ಇದೆ, ಮತ್ತ್ಯಾರ ಬಳಿಯೂ ಇಲ್ಲ ಆದರೆ ಯಾರಿಗೂ
ತಿಳಿದಿಲ್ಲ. ಇಂಗ್ಲೀಷಿನಲ್ಲಿ ಚೆನ್ನಾಗಿ ತಿಳಿಸುವಂತಹ ಬುದ್ಧಿವಂತರು ಬೇಕು, ಆಂಗ್ಲಭಾಷೆಯಂತೂ
ಎಲ್ಲರಿಗೂ ಗೊತ್ತಿದೆ. ಅವರಿಗೂ ಸಂದೇಶವನ್ನು ಕೊಡಬೇಕಲ್ಲವೆ. ಡ್ರಾಮಾನುಸಾರ ವಿನಾಶ ಮಾಡಿಸಲು ಅವರೇ
ನಿಮಿತ್ತರಾಗಿದ್ದಾರೆ. ಅವರ ಬಳಿ ಇಂತಹ ಬಾಂಬುಗಳಿವೆ. ಒಂದುವೇಳೆ ಅವರಿಬ್ಬರೂ (ಕ್ರಿಶ್ಚಿಯನ್ನರು)
ಪರಸ್ಪರ ಒಂದಾದರೆ ಇಡೀ ವಿಶ್ವದ ಮಾಲೀಕರಾಗಬಹುದು ಆದರೆ ಈ ನಾಟಕವೇ ಹೀಗೆ ಮಾಡಲ್ಪಟ್ಟಿದೆ. ನೀವು
ಯೋಗಬಲದಿಂದಲೇ ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಶಸ್ತ್ರಗಳಿಂದ ಯಾರೂ ವಿಶ್ವದ
ಮಾಲೀಕರಾಗಲು ಸಾಧ್ಯವಿಲ್ಲ. ಅವರದು ಸೈನ್ಸ್, ನಿಮ್ಮದು ಸೈಲೆನ್ಸ್ ಆಗಿದೆ. ಕೇವಲ ತಂದೆ ಮತ್ತು
ಚಕ್ರವನ್ನು ನೆನಪು ಮಾಡಿ, ತಮ್ಮ ಸಮಾನ ಮಾಡಿಕೊಳ್ಳಿ.
ನೀವು ಮಕ್ಕಳು ಯೋಗಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ, ಅವರು ಖಂಡಿತ
ಪರಸ್ಪರ ಹೊಡೆದಾಡುವರು. ಮಧ್ಯದಲ್ಲಿ ನಿಮಗೆ ವಿಶ್ವರೂಪಿ ಬೆಣ್ಣೆಯು ಸಿಗುವುದು. ಕೃಷ್ಣನ ಬಾಯಲ್ಲಿ
ಬೆಣ್ಣೆಯನ್ನು ತೋರಿಸುತ್ತಾರೆ. ಇಬ್ಬರು ಪರಸ್ಪರ ಕಚ್ಚಾಡಿದರು ಮಧ್ಯದಲ್ಲಿ ಬೆಣ್ಣೆಯನ್ನು
ಮೂರನೆಯವರು ತಿಂದು ಬಿಟ್ಟರೆಂದು ಗಾಯನವಿದೆ. ಇಲ್ಲಿಯೂ ಹಾಗೆಯೇ ಇಡೀ ವಿಶ್ವದ ರಾಜ್ಯಭಾಗ್ಯದ
ಬೆಣ್ಣೆಯು ನಿಮಗೆ ಸಿಗುತ್ತದೆ ಅಂದಮೇಲೆ ನಿಮಗೆ ಎಷ್ಟು ಖುಷಿಯಿರಬೇಕು! ವಾಹ್ ಬಾಬಾ! ನಿಮ್ಮದು
ಚಮತ್ಕಾರವಾಗಿದೆ. ಜ್ಞಾನವು ನಿಮ್ಮದೇ ಆಗಿದೆ. ಬಹಳ ಒಳ್ಳೆಯ ತಿಳುವಳಿಕೆಯಾಗಿದೆ. ಆದಿ ಸನಾತನ
ದೇವಿ-ದೇವತಾ ಧರ್ಮದವರು ವಿಶ್ವದ ರಾಜ್ಯಭಾಗ್ಯವನ್ನು ಹೇಗೆ ಪ್ರಾಪ್ತಿ ಮಾಡಿಕೊಂಡರು ಎಂಬುದು ಯಾರಿಗೂ
ವಿಚಾರವೂ ಬರುವುದಿಲ್ಲ. ಆ ಸಮಯದಲ್ಲಿ ಮತ್ತ್ಯಾವುದೇ ಖಂಡವಿರುವುದಿಲ್ಲ. ತಂದೆಯು ತಿಳಿಸುತ್ತಾರೆ -
ನಾನು ವಿಶ್ವದ ಮಾಲೀಕನಾಗುವುದಿಲ್ಲ, ನಿಮ್ಮನ್ನೇ ಮಾಡುತ್ತೇನೆ. ನೀವು ವಿದ್ಯೆಯಿಂದ ವಿಶ್ವದ
ಮಾಲೀಕರಾಗುತ್ತೀರಿ, ಪರಮಾತ್ಮನಾದ ನಾನು ಅಶರೀರಿಯಾಗಿದ್ದೇನೆ. ನಿಮ್ಮೆಲ್ಲರಿಗೆ ಶರೀರವಿದೆ,
ದೇಹಧಾರಿಗಳಾಗಿದ್ದೀರಿ. ಬ್ರಹ್ಮಾ-ವಿಷ್ಣು-ಶಂಕರನಿಗೂ ಸೂಕ್ಷ್ಮ ಶರೀರವಿದೆ. ಹೇಗೆ
ನೀವಾತ್ಮಗಳಿದ್ದೀರೋ ಹಾಗೆಯೇ ನಾನೂ ಸಹ ಪರಮ ಆತ್ಮನಾಗಿದ್ದೇನೆ. ನನ್ನ ಜನ್ಮವು ದಿವ್ಯ ಮತ್ತು
ಅಲೌಕಿಕವಾಗಿದೆ. ಮತ್ತ್ಯಾರೂ ಈ ರೀತಿ ಜನ್ಮ ತೆಗೆದುಕೊಳ್ಳುವುದಿಲ್ಲ, ಇದು ನಿಶ್ಚಿತವಾಗಿದೆ.
ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಯಾರಾದರೂ ಮರಣ ಹೊಂದುತ್ತಾರೆಂದರೆ ಇದೂ ಸಹ ಡ್ರಾಮಾದಲ್ಲಿ
ನಿಗಧಿಯಾಗಿದೆ. ಡ್ರಾಮಾದ ಎಷ್ಟೊಂದು ತಿಳುವಳಿಕೆ ಸಿಗುತ್ತದೆ ಆದರೆ ನಂಬರ್ವಾರ್ ಆಗಿ
ತಿಳಿದುಕೊಳ್ಳುತ್ತಾರೆ. ಕೆಲವರಂತೂ ಮಂಧಬುದ್ಧಿಯವರಿರುತ್ತಾರೆ. ಮೂರು ದರ್ಜೆಗಳಿರುತ್ತವೆ, ಕೊನೆಯ
ದರ್ಜೆಯವರಿಗೆ ಮಂಧಬುದ್ಧಿಯವರೆಂದು ಹೇಳಲಾಗುತ್ತದೆ. ಪ್ರಥಮ ದರ್ಜೆಯಲ್ಲಿ ಇವರಿದ್ದಾರೆ, ಇವರು
ಎರಡನೇ ದರ್ಜೆಯಲ್ಲಿದ್ದಾರೆ ಎಂಬುದನ್ನು ತಾವೂ ತಿಳಿದುಕೊಳ್ಳಬಹುದು ಮತ್ತು ಪ್ರಜೆಗಳಲ್ಲಿಯೂ ಇದೇ
ರೀತಿಯಿರುತ್ತದೆ. ವಿದ್ಯೆಯಂತೂ ಎಲ್ಲರಿಗಾಗಿ ಒಂದೇ ಇದೆ. ಮಕ್ಕಳಿಗೆ ತಿಳಿದಿದೆ - ನಾವು ಈ
ವಿದ್ಯೆಯನ್ನು ಓದಿ ಡಬಲ್ ಕಿರೀಟಧಾರಿಗಳಾಗುತ್ತೇವೆ. ನಾವು ಡಬಲ್ ಕಿರೀಟಧಾರಿಗಳಾಗಿದ್ದೆವು ನಂತರ
ಸಿಂಗಲ್ ಕಿರೀಟಧಾರಿಗಳು, ನಂತರ ಕಿರೀಟವಿಲ್ಲದವರಾದೆವು. ಎಂತಹ ಕರ್ಮವೋ ಅಂತಹ ಫಲವೆಂದು
ಹೇಳಲಾಗುತ್ತದೆ. ಸತ್ಯಯುಗದಲ್ಲಿ ಈ ರೀತಿ ಹೇಳುವುದಿಲ್ಲ. ಇಲ್ಲಿ ಒಳ್ಳೆಯ ಕರ್ಮ ಮಾಡುತ್ತಾರೆಂದರೆ
ಒಂದು ಜನ್ಮಕ್ಕಾಗಿ ಒಳ್ಳೆಯ ಫಲ ಸಿಗುತ್ತದೆ. ಕೆಲವರು ಇಂತಹ ಕರ್ಮ ಮಾಡುತ್ತಾರೆ, ಅವರು ಜನ್ಮತಃ
ರೋಗಿಗಳಾಗಿರುತ್ತಾರೆ. ಇದೂ ಸಹ ಕರ್ಮಭೋಗವಲ್ಲವೆ. ಮಕ್ಕಳಿಗೆ ಕರ್ಮ-ಅಕರ್ಮ-ವಿಕರ್ಮದ ರಹಸ್ಯವನ್ನು
ತಿಳಿಸಲಾಗಿದೆ. ಇಲ್ಲಿ ಎಂತಹ ಕರ್ಮ ಮಾಡುವರೋ ಅದಕ್ಕೆ ಪ್ರತಿಯಾಗಿ ಒಳ್ಳೆಯ ಅಥವಾ ಕೆಟ್ಟ ಫಲವನ್ನು
ಪಡೆಯುತ್ತಾರೆ. ಯಾರಾದರೂ ಸಾಹುಕಾರರಾಗುತ್ತಾರೆಂದರೆ ಅವಶ್ಯವಾಗಿ ಒಳ್ಳೆಯ ಕರ್ಮ ಮಾಡಿರುತ್ತಾರೆ.
ನೀವೀಗ ಜನ್ಮ-ಜನ್ಮಾಂತರಕ್ಕಾಗಿ ಪ್ರಾಲಬ್ಧವನ್ನು ರೂಪಿಸಿಕೊಳ್ಳುತ್ತೀರಿ. ಈಗಿನ ಪುರುಷಾರ್ಥದನುಸಾರ
ಸಾಹುಕಾರರು ಬಡವರ ವ್ಯತ್ಯಾಸವಂತೂ ಅಲ್ಲಿರುತ್ತದೆಯಲ್ಲವೆ. ಅದು ಅವಿನಾಶಿ 21 ಜನ್ಮಗಳಿಗಾಗಿ
ಪ್ರಾಲಬ್ಧವಾಗಿದೆ. ಇಲ್ಲಿ ಅಲ್ಪಕಾಲಕ್ಕಾಗಿ ಸಿಗುತ್ತದೆ. ಕರ್ಮವಂತೂ ನಡೆಯುತ್ತದೆಯಲ್ಲವೆ. ಇದು
ಕರ್ಮ ಕ್ಷೇತ್ರವಾಗಿದೆ. ಸತ್ಯಯುಗವು ಸ್ವರ್ಗದ ಕರ್ಮ ಕ್ಷೇತ್ರವಾಗಿದೆ. ಅಲ್ಲಿ ವಿಕರ್ಮಗಳೇ
ಆಗುವುದಿಲ್ಲ. ಇವೆಲ್ಲಾ ಮಾತುಗಳನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಕೆಲವರೇ ವಿರಳ
ಸದಾ ಈ ಅಂಶಗಳನ್ನು ಬರೆದುಕೊಳ್ಳುತ್ತಿರುತ್ತಾರೆ. ಚಾರ್ಟನ್ನು ಬರೆಯುತ್ತಾ-ಬರೆಯುತ್ತಾ ಸುಸ್ತಾಗಿ
ಬಿಡುತ್ತಾರೆ. ನೀವು ಮಕ್ಕಳು ಜ್ಞಾನದ ಅಂಶಗಳನ್ನು ಬರೆದುಕೊಳ್ಳಬೇಕು. ಇವು ಬಹಳ ಗುಹ್ಯ-ಗುಹ್ಯವಾದ
ವಿಚಾರಗಳಾಗಿವೆ. ಇವೆಲ್ಲವನ್ನೂ ನೀವು ಎಂದೂ ನೆನಪು ಮಾಡಿಕೊಳ್ಳಲು ಸಾಧ್ಯವಿಲ್ಲ, ಮರೆತು ಹೋಗುತ್ತವೆ.
ಈ ಅಂಶವನ್ನು ನಾವು ಮರೆತು ಹೋದೆವೆಂದು ನಂತರ ಪಶ್ಚಾತ್ತಾಪ ಪಡುವಿರಿ. ಎಲ್ಲರದೂ ಇದೇ
ಸ್ಥಿತಿಯಾಗುತ್ತದೆ, ಬಹಳ ಮರೆತು ಹೋಗುತ್ತಾರೆ ನಂತರ ಇನ್ನೊಂದು ದಿನ ನೆನಪಿಗೆ ಬರುತ್ತದೆ.
ಮಕ್ಕಳಿಗೆ ತಮ್ಮ ಉನ್ನತಿಗಾಗಿ ಚಿಂತನೆ ಮಾಡಬೇಕಾಗಿದೆ. ತಂದೆಗೆ ಗೊತ್ತಿದೆ, ಕೆಲವರೇ ವಿರಳ ಯಥಾರ್ಥ
ರೀತಿಯಿಂದ ಬರೆದಿಟ್ಟುಕೊಳ್ಳುತ್ತಾರೆ. ತಂದೆಯು ವ್ಯಾಪಾರಿಯಲ್ಲವೆ. ಅಲ್ಲಿ ವಿನಾಶೀ ರತ್ನಗಳ
ವ್ಯಾಪಾರಿಗಳಿರುತ್ತಾರೆ, ಇವರು ಜ್ಞಾನ ರತ್ನಗಳ ವ್ಯಾಪಾರಿಯಾಗಿದ್ದಾರೆ. ಯೋಗದಲ್ಲಿಯೂ ಅನೇಕ ಮಕ್ಕಳು
ಅನುತ್ತೀರ್ಣರಾಗುತ್ತಾರೆ. ನೆನಪಿನಲ್ಲಿ ಗಂಟೆ, ಒಂದುವರೆ ಗಂಟೆಯೂ ಸಹ ಕುಳಿತುಕೊಳ್ಳುವುದು ಬಹಳ
ವಿರಳ. 8 ಗಂಟೆಗಳಾದರೂ ಪುರುಷಾರ್ಥ ಮಾಡಬೇಕಾಗಿದೆ. ನೀವು ಮಕ್ಕಳು ಶರೀರ ನಿರ್ವಹಣೆಯನ್ನೂ
ಮಾಡಿಕೊಳ್ಳಬೇಕು. ತಂದೆಯು ಪ್ರಿಯತಮ-ಪ್ರಿಯತಮೆಯರ ಉದಾಹರಣೆಯನ್ನೂ ತಿಳಿಸುತ್ತಾರೆ.
ಕುಳಿತು-ಕುಳಿತಿದ್ದಂತೆಯೇ ನೆನಪು ಮಾಡಿಕೊಂಡ ತಕ್ಷಣ ಅವರ ಚಿತ್ರವು ಸನ್ಮುಖದಲ್ಲಿ ಬಂದು ಬಿಡುತ್ತದೆ.
ಇದೂ ಸಹ ಒಂದು ಸಾಕ್ಷಾತ್ಕಾರವಾಗಿದೆ. ಅವರು ಇವರನ್ನು, ಇವರು ಅವರನ್ನು ನೆನಪು ಮಾಡುತ್ತಾರೆ.
ಇಲ್ಲಂತೂ ಒಬ್ಬರೇ ಪ್ರಿಯತಮನಿದ್ದಾರೆ, ನೀವೆಲ್ಲರೂ ಪ್ರಿಯತಮೆಯರಾಗಿದ್ದೀರಿ. ಆ ಅಪರೂಪದ ಪ್ರಿಯತಮನು
ಸದಾ ಸುಂದರನಾಗಿದ್ದಾರೆ, ಸದಾ ಪಾವನನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಯಾತ್ರಿಕನಾದ ನಾನು
ಸದಾ ಅತಿ ಸುಂದರನಾಗಿದ್ದೇನೆ, ನಿಮ್ಮನ್ನೂ ಬಹಳ ಸುಂದರರನ್ನಾಗಿ ಮಾಡುತ್ತೇನೆ. ಈ ದೇವತೆಗಳಿಗೆ
ಸ್ವಾಭಾವಿಕ ಸೌಂದರ್ಯವಿದೆ. ಇಲ್ಲಾದರೆ ಎಂತೆಂತಹ ಫ್ಯಾಷನ್ ಮಾಡಿಕೊಳ್ಳುತ್ತಾರೆ, ಭಿನ್ನ-ಭಿನ್ನ
ಪ್ರಕಾರದ ಉಡುಪುಗಳನ್ನು ಧರಿಸುತ್ತಾರೆ. ಸತ್ಯಯುಗದಲ್ಲಿ ಏಕರಸ, ಸ್ವಾಭಾವಿಕ ಸೌಂದರ್ಯವಿರುತ್ತದೆ.
ಅಂತಹ ಪ್ರಪಂಚದಲ್ಲಿ ನೀವೀಗ ಹೋಗುತ್ತೀರಿ. ನಾನು ಹಳೆಯ ಪತಿತ ದೇಶ, ಪತಿತ ಶರೀರದಲ್ಲಿ ಬರುತ್ತೇನೆ.
ಇಲ್ಲಿ ಪಾವನ ಶರೀರವೇ ಇಲ್ಲ. ನಾನು ಇವರ ಬಹಳ ಜನ್ಮಗಳ ಅಂತಿಮದಲ್ಲಿ ಪ್ರವೇಶ ಮಾಡಿ ಪ್ರವೃತ್ತಿ
ಮಾರ್ಗದ ಸ್ಥಾಪನೆ ಮಾಡುತ್ತೇನೆ. ಮುಂದೆ ಹೋದಂತೆ ನೀವು ಸರ್ವಿಸೇಬಲ್ ಆಗುತ್ತಾ ಹೋಗುತ್ತೀರಿ.
ಪುರುಷಾರ್ಥ ಮಾಡುತ್ತೀರಿ ಮತ್ತೆ ತಿಳಿದುಕೊಳ್ಳುತ್ತೀರಿ. ಮೊದಲೂ ಸಹ ಇಂತಹ ಪುರುಷಾರ್ಥ ಮಾಡಿದ್ದೆವು,
ಈಗಲೂ ಮಾಡುತ್ತಿದ್ದೇವೆ. ಪುರುಷಾರ್ಥವಿಲ್ಲದೇ ಏನೂ ಸಿಗಲು ಸಾಧ್ಯವಿಲ್ಲ. ನೀವು
ತಿಳಿದುಕೊಂಡಿದ್ದೀರಿ - ನಾವು ನರನಿಂದ ನಾರಾಯಣರಾಗುವ ಪುರುಷಾರ್ಥ ಮಾಡುತ್ತಿದ್ದೇವೆ. ಹೊಸ
ಪ್ರಪಂಚದ ರಾಜಧಾನಿಯಿತ್ತು, ಈಗ ಇಲ್ಲ ಪುನಃ ಆಗುವುದು. ಕಲಿಯುಗದ ನಂತರ ಮತ್ತೆ ಸತ್ಯಯುಗವು
ಅವಶ್ಯವಾಗಿ ಬರುವುದು. ಕಲ್ಪದ ಹಿಂದಿನ ತರಹ ರಾಜಧಾನಿಯು ಸ್ಥಾಪನೆಯಾಗಲೇಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸಮರ್ಪಿತರ
ಜೊತೆ ಜೊತೆಗೆ ನಿಶ್ಚಯ ಬುದ್ಧಿಯವರಾಗಬೇಕಾಗಿದೆ. ಯಾವುದೇ ಪತಿತ ಕರ್ಮವಾಗಬಾರದು. ಒಳಗೆ ಯಾವುದೇ
ಅವಗುಣವಿರಬಾರದು, ಆಗ ಒಳ್ಳೆಯ ಪದವಿ ಸಿಗುತ್ತದೆ.
2. ಜ್ಞಾನ ರತ್ನಗಳ ವ್ಯಾಪಾರ ಮಾಡಲು ತಂದೆಯು ಯಾವ ಒಳ್ಳೊಳ್ಳೆಯ ವಿಚಾರಗಳನ್ನು ತಿಳಿಸುತ್ತಾರೆಯೋ
ಅವನ್ನು ಬರೆದಿಟ್ಟುಕೊಳ್ಳಬೇಕಾಗಿದೆ ಮತ್ತೆ ಅದನ್ನು ನೆನಪು ಮಾಡಿಕೊಂಡು ಅನ್ಯರಿಗೆ ತಿಳಿಸಬೇಕಾಗಿದೆ.
ಸದಾ ತನ್ನ ಉನ್ನತಿಯ ಚಿಂತೆ ಮಾಡಬೇಕಾಗಿದೆ.
ವರದಾನ:
ವೈರ್ಲೆಸ್ ಸೆಟ್
ಮುಖಾಂತರ ವಿನಾಶ ಕಾಲದಲ್ಲಿ ಅಂತಿಮ ಡೈರೆಕ್ಷನ್ ಅನ್ನು ಕ್ಯಾಚ್ ಮಾಡುವಂತಹ ವೈಸ್ಲೆಸ್ (ವಿರ್ವಿಕಾರಿ)
ಭವ.
ವಿನಾಶದ ಸಮಯದಲ್ಲಿ
ಅಂತಿಮ ಡೈರೆಕ್ಷನ್ ಅನ್ನು ಕ್ಯಾಚ್ ಮಾಡುವುದಕ್ಕಾಗಿ ನಿರ್ವಿಕಾರಿ ಬುದ್ಧಿಯ ಅವಶ್ಯಕತೆಯಿದೆ. ಹೇಗೆ
ಆ ಜನರು ವೈರ್ಲೆಸ್ ಸೆಟ್ನ ಮುಖಾಂತರ ಒಬ್ಬರು ಇನ್ನೊಬ್ಬರಿಗೆ ಧ್ವನಿಯನ್ನು ತಲುಪಿಸುತ್ತಾರೆ.
ಇದಾಗಿದೆ ವೈಸ್ಲೆಸ್ನ ವೈರ್ಲೆಸ್. ಈ ವೈರ್ಲೆಸ್ನ ಮುಖಾಂತರ ತಮಗೆ ಧ್ವನಿ ಬರುತ್ತದೆ ನೀವು ಈಗ ಈ
ಸುರಕ್ಷಿತ ಸ್ಥಾನವನ್ನು ತಲುಪಿರಿ ಎಂದು. ಯಾವ ಮಕ್ಕಳು ತಂದೆಯ ನೆನಪಿನಲ್ಲಿರುವಂತಹವರು ವೈಸ್ಲೆಸ್
ಆಗಿರುತ್ತಾರೆ, ಅವರಿಗೆ ಅಶರೀರಿ ಆಗುವಂತಹ ಅಭ್ಯಾಸವಿದೆ. ಅವರು ವಿನಾಶದಲ್ಲಿ ವಿನಾಶವಾಗುವುದಿಲ್ಲ.
ಆದರೆ ಸ್ವ ಇಚ್ಛೆಯಿಂದ ಶರೀರವನ್ನು ಬಿಡುತ್ತಾರೆ.
ಸ್ಲೋಗನ್:
ಯೋಗವನ್ನು ದೂರ ತಳ್ಳಿ
ಕರ್ಮದಲ್ಲಿ ವ್ಯಸ್ತವಾಗುವುದು ಎಂದರೆ - ಇದೇ ಬೇಜವಾಬ್ದಾರಿತನವಾಗಿದೆ.