03.10.20 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ -
ಆತ್ಮರೂಪಿ ಬ್ಯಾಟರಿಯು 84 ಮೋಟಾರುಗಳಲ್ಲಿ ಬರುವ ಕಾರಣ ಡಲ್ ಆಗಿ ಬಿಟ್ಟಿದೆ, ಈಗ ಅದನ್ನು ನೆನಪಿನ
ಯಾತ್ರೆಯಿಂದ ಚಾರ್ಜ್ ಮಾಡಿಕೊಳ್ಳಿ"
ಪ್ರಶ್ನೆ:
ತಂದೆಯು ಯಾವ
ಮಕ್ಕಳನ್ನು ಬಹಳ-ಬಹಳ ಭಾಗ್ಯಶಾಲಿಗಳೆಂದು ತಿಳಿಯುತ್ತಾರೆ?
ಉತ್ತರ:
ಯಾರಿಗೆ ಯಾವುದೇ ಜಂಜಾಟವಿಲ್ಲವೋ, ನಿರ್ಬಂಧನರಾಗಿದ್ದಾರೆಯೋ ಅಂತಹ ಮಕ್ಕಳಿಗೆ ತಂದೆಯು ಹೇಳುತ್ತಾರೆ
- ನೀವು ಬಹಳ-ಬಹಳ ಭಾಗ್ಯಶಾಲಿಗಳಾಗಿದ್ದೀರಿ. ನೀವು ನೆನಪಿನಲ್ಲಿದ್ದು ತಮ್ಮ ಬ್ಯಾಟರಿಯನ್ನು
ಫುಲ್ಚಾರ್ಜ್ ಮಾಡಿಕೊಳ್ಳಬಹುದು. ಒಂದುವೇಳೆ ಕೇವಲ ಜ್ಞಾನವನ್ನು ತಿಳಿಸುತ್ತೀರಿ, ಯೋಗವಿಲ್ಲವೆಂದರೆ
ಬಾಣವು ನಾಟುವುದಿಲ್ಲ. ಭಲೆ ಯಾರೆಷ್ಟಾದರೂ ನಶೆಯಿಂದ ತಮ್ಮ ಅನುಭವವನ್ನು ತಿಳಿಸಬಹುದು ಅದರೆ
ಸ್ವಯಂನಲ್ಲಿ ಧಾರಣೆಯಿಲ್ಲವೆಂದರೆ ಮನಸ್ಸು ತಿನ್ನುತ್ತಿರುವುದು.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ. ಆತ್ಮಿಕ ತಂದೆಯ ಹೆಸರೇನು?
ಶಿವಬಾಬಾ. ಅವರು ಭಗವಂತ, ಬೇಹದ್ದಿನ ತಂದೆಯಾಗಿದ್ದಾರೆ. ಮನುಷ್ಯರಿಗೆಂದೂ ಬೇಹದ್ದಿನ ತಂದೆ ಅಥವಾ
ಈಶ್ವರ ಹಾಗೂ ಭಗವಂತನೆಂದು ಕರೆಯಲು ಸಾಧ್ಯವಿಲ್ಲ. ಭಲೆ ಅನೇಕರು ತಮಗೆ ಶಿವ ಎಂದು
ಹೆಸರನ್ನಿಟ್ಟುಕೊಳ್ಳುತ್ತಾರೆ. ಆದರೆ ಅವರೆಲ್ಲರೂ ದೇಹಧಾರಿಗಳಾಗಿದ್ದಾರೆ ಆದ್ದರಿಂದ ಅವರಿಗೆ
ಭಗವಂತನೆಂದು ಹೇಳಲಾಗುವುದಿಲ್ಲ. ಇದನ್ನು ತಂದೆಯೇ ಮಕ್ಕಳಿಗೆ ತಿಳಿಸುತ್ತಾರೆ - ನಾನು ಯಾರಲ್ಲಿ
ಪ್ರವೇಶ ಮಾಡಿದ್ದೇನೆಯೋ ಅವರದು ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ನೀವು ಇವರಿಗೆ ಭಗವಂತನೆಂದು
ಏಕೆ ಹೇಳುತ್ತೀರಿ ಎಂದು ನಿಮ್ಮೊಂದಿಗೆ ಕೆಲವರು ಕೇಳುತ್ತಾರೆ. ತಂದೆಯು ಮೊದಲೇ ತಿಳಿಸಿದ್ದಾರೆ -
ಯಾವುದೇ ಸ್ಥೂಲ ಅಥವಾ ಸೂಕ್ಷ್ಮ ದೇಹಧಾರಿಗಳಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಸೂಕ್ಷ್ಮ
ದೇಹಧಾರಿಗಳು ಸೂಕ್ಷ್ಮವತನವಾಸಿಗಳಾದರು. ಅವರಿಗೆ ದೇವತೆಗಳೆಂದು ಹೇಳಲಾಗುತ್ತದೆ. ಸರ್ವ ಶ್ರೇಷ್ಠನು
ಭಗವಂತ, ಪರಮಪಿತನೇ ಆಗಿದ್ದಾರೆ. ಅವರ ನಾಮವೂ ಶ್ರೇಷ್ಠ, ಧಾಮವೂ ಶ್ರೇಷ್ಠವಾಗಿದೆ. ತಂದೆಯು ಎಲ್ಲಾ
ಆತ್ಮಗಳ ಸಹಿತ ಅಲ್ಲಿ ನಿವಾಸ ಮಾಡುತ್ತಾರೆ. ಅವರ ಕುಳಿತುಕೊಳ್ಳುವಿಕೆಯು ಶ್ರೇಷ್ಠವಾಗಿದೆ.
ವಾಸ್ತವದಲ್ಲಿ ಅವರಿಗೆ ಕುಳಿತುಕೊಳ್ಳುವ ಸ್ಥಾನವಿಲ್ಲ. ಹೇಗೆ ನಕ್ಷತ್ರಗಳು ಎಲ್ಲಿಯಾದರೂ
ಕುಳಿತಿವೆಯೇ? ನಿಂತಿವೆಯಲ್ಲವೆ. ನೀವಾತ್ಮಗಳೂ ಸಹ ತಮ್ಮ ಶಕ್ತಿಯಿಂದ ಅಲ್ಲಿ ಹೋಗಿ ನಿಲ್ಲುತ್ತೀರಿ.
ನಿಮಗೆ ಇಂತಹ ಶಕ್ತಿ ಸಿಗುತ್ತದೆ, ನೀವು ಅಲ್ಲಿ ಹೋಗಿ ನಿಲ್ಲುತ್ತೀರಿ. ತಂದೆಯ ಹೆಸರೇ ಆಗಿದೆ -
ಸರ್ವಶಕ್ತಿವಂತ, ಅವರಿಂದ ಶಕ್ತಿ ಸಿಗುತ್ತದೆ. ಆತ್ಮವು ಅವರನ್ನು ನೆನಪು ಮಾಡುತ್ತದೆ ಅದರಿಂದ
ಬ್ಯಾಟರಿಯು ಚಾರ್ಜ್ ಆಗುತ್ತದೆ. ಹೇಗೆ ಮೋಟಾರಿನಲ್ಲಿ ಬ್ಯಾಟರಿಯಿರುತ್ತದೆ, ಅದರ ಶಕ್ತಿಯಿಂದಲೇ
ಮೋಟಾರು ನಡೆಯುತ್ತದೆ. ಬ್ಯಾಟರಿಯಲ್ಲಿ ಕರೆಂಟ್ ತುಂಬಿರುತ್ತದೆ ಮತ್ತೆ ಅದು ನಡೆಯುತ್ತಾ-ನಡೆಯುತ್ತಾ
ಖಾಲಿಯಾಗಿ ಬಿಡುತ್ತದೆ ಆಗ ಮತ್ತೆ ಆ ಬ್ಯಾಟರಿಯನ್ನು ಮೈನ್ಪವರ್ನಿಂದ ಚಾರ್ಜ್ ಮಾಡಿ ಮೋಟಾರಿನಲ್ಲಿ
ಹಾಕುತ್ತಾರೆ. ಅವು ಹದ್ದಿನ ಮಾತುಗಳಾಗಿವೆ. ಇವು ಬೇಹದ್ದಿನ ಮಾತಾಗಿವೆ. ನಿಮ್ಮ ಬ್ಯಾಟರಿಯು 5000
ವರ್ಷಗಳವರೆಗೆ ನಡೆಯುತ್ತದೆ. ನಡೆಯುತ್ತಾ-ನಡೆಯುತ್ತಾ ಮತ್ತೆ ಅದರಲ್ಲಿ ಶಕ್ತಿಯು ಕಡಿಮೆಯಾಗಿ
ಬಿಡುತ್ತದೆ. ಒಮ್ಮೆಲೆ ಸಮಾಪ್ತಿಯಾಗುವುದಿಲ್ಲ, ಅಲ್ಪಸ್ವಲ್ಪ ಶಕ್ತಿಯು ಉಳಿದಿರುತ್ತದೆ. ಹೇಗೆ
ಬ್ಯಾಟರಿಯಲ್ಲಿ ಬೆಳಕು ಮಂಧವಾಗಿ ಬಿಡುತ್ತದೆಯಲ್ಲವೆ. ಆತ್ಮವೇ ಈ ಶರೀರದ ಬ್ಯಾಟರಿಯಾಗಿದೆ, ಇದೂ ಸಹ
ಚಾರ್ಜ್ ಕಡಿಮೆಯಾಗಿ ಬಿಡುತ್ತದೆ. ಬ್ಯಾಟರಿಯು ಈ ಶರೀರದಿಂದ ಬಿಟ್ಟು ಹೋಗುತ್ತದೆ ಮತ್ತೆ ಎರಡನೆಯದು,
ಮೂರನೆಯ ಮೋಟಾರಿನಲ್ಲಿ ಹೋಗಿ ಸೇರುತ್ತದೆ. ಅದು 84 ಮೋಟಾರುಗಳಲ್ಲಿ ಹೋಗುತ್ತದೆ. ಆದ್ದರಿಂದ ಈಗ
ತಂದೆಯು ತಿಳಿಸುತ್ತಾರೆ, ನೀವು ಎಷ್ಟು ಮಂಧ ಬುದ್ಧಿಯವರು, ಕಲ್ಲು ಬುದ್ಧಿಯವರಾಗಿ ಬಿಟ್ಟಿದ್ದೀರಿ.
ಈಗ ಮತ್ತೆ ನಿಮ್ಮ ಬ್ಯಾಟರಿಯನ್ನು ತುಂಬಿಸಿಕೊಳ್ಳಿ. ತಂದೆಯ ನೆನಪಿನ ವಿನಃ ಆತ್ಮವೆಂದೂ
ಪವಿತ್ರವಾಗಲು ಸಾಧ್ಯವಿಲ್ಲ. ಒಬ್ಬರೇ ಸರ್ವಶಕ್ತಿವಂತ ತಂದೆಯಾಗಿದ್ದಾರೆ, ಅವರೊಂದಿಗೆ
ಬುದ್ಧಿಯೋಗವನ್ನಿಡಬೇಕಾಗಿದೆ. ನಾನು ಯಾರಾಗಿದ್ದೇನೆ, ಹೇಗಿದ್ದೇನೆ, ಹೇಗೆ ನೀವಾತ್ಮಗಳ ಬ್ಯಾಟರಿಯು
ಖಾಲಿಯಾಗುತ್ತದೆ ಎಂದು ತಂದೆಯು ತಾವೇ ಪರಿಚಯವನ್ನು ಕೊಡುತ್ತಾರೆ. ನಾನೀಗ ನಿಮಗೆ ಸಲಹೆ ಕೊಡುತ್ತೇನೆ,
ನನ್ನನ್ನು ನೆನಪು ಮಾಡಿದರೆ ನಿಮ್ಮ ಬ್ಯಾಟರಿಯು ಸತೋಪ್ರಧಾನ, ಫಸ್ಟ್ಕ್ಲಾಸ್ ಆಗಿ ಬಿಡುವುದು.
ಪವಿತ್ರರಾದರೆ ಆತ್ಮವು 24 ಕ್ಯಾರೇಟ್ ಚಿನ್ನದಂತಾಗಿ ಬಿಡುತ್ತದೆ. ಈಗ ನೀವು ಮೇಣದಂತಾಗಿ
ಬಿಟ್ಟಿದ್ದೀರಿ. ಶಕ್ತಿಯೆಲ್ಲವೂ ಸಮಾಪ್ತಿಯಾಗಿದೆ. ಆ ಶೋಭೆಯೂ ಇಲ್ಲ. ಈಗ ತಂದೆಯು ನೀವು ಮಕ್ಕಳಿಗೆ
ತಿಳಿಸುತ್ತಾರೆ – ಮುಖ್ಯ ಮಾತಾಗಿದೆ, ಯೋಗದಲ್ಲಿರುವುದು ಮತ್ತು ಪವಿತ್ರರಾಗುವುದು ಇಲ್ಲದಿದ್ದರೆ
ಬ್ಯಾಟರಿಯು ತುಂಬುವುದಿಲ್ಲ, ಯೋಗವು ಹಿಡಿಸುವುದಿಲ್ಲ. ಭಲೆ ಅರ್ಧಂಬರ್ಧ ಜ್ಞಾನಿಗಳು ಅನೇಕರಿದ್ದಾರೆ.
ಜ್ಞಾನವನ್ನು ತಿಳಿಸುತ್ತಾರೆ ಆದರೆ ಆ ಸ್ಥಿತಿಯಿಲ್ಲ. ಇಲ್ಲಿ ಬಹಳ ನಶೆಯಿಂದ ಅನುಭವವನ್ನೂ
ತಿಳಿಸುತ್ತಾರೆ ಆದರೆ ನಾನು ಏನು ವರ್ಣನೆ ಮಾಡುತ್ತಿದ್ದೇನೆ, ಆ ಸ್ಥಿತಿಯಂತೂ ಇಲ್ಲವೆಂದು ಮನಸ್ಸು
ತಿನ್ನುತ್ತಿರುತ್ತದೆ. ಇನ್ನೂ ಕೆಲವರು ಯೋಗಿ ಆತ್ಮಗಳೂ ಇದ್ದಾರೆ. ತಂದೆಯೂ ಅಂತಹ ಮಕ್ಕಳಿಗೆ ಬಹಳ
ಮಹಿಮೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಬಹಳ-ಬಹಳ ಭಾಗ್ಯಶಾಲಿಗಳಾಗಿದ್ದೀರಿ,
ನಿಮಗಂತೂ ಅಷ್ಟು ಜಂಜಾಟವಿಲ್ಲ. ಯಾರಿಗೆ ಹೆಚ್ಚು ಮಕ್ಕಳಿರುವರೋ ಅವರಿಗೆ ಬಂಧನವೂ ಇರುತ್ತದೆ.
ತಂದೆಗೆ ಇಷ್ಟೊಂದು ಮಂದಿ ಮಕ್ಕಳಿದ್ದಾರೆ, ಎಲ್ಲರ ಸಂಭಾಲನೆ ಮಾಡಬೇಕಾಗುತ್ತದೆ. ತಂದೆಯನ್ನೂ ನೆನಪು
ಮಾಡಬೇಕಾಗುತ್ತದೆ. ಪ್ರಿಯತಮನ ನೆನಪು ಪಕ್ಕಾ ಆಗಿ ಬಿಡಬೇಕು. ಭಕ್ತಿಮಾರ್ಗದಲ್ಲಿ ಹೇ! ಭಗವಂತನೆಂದು
ನೀವು ತಂದೆಯನ್ನು ಎಷ್ಟು ನೆನಪು ಮಾಡುತ್ತಾ ಬಂದಿದ್ದೀರಿ. ಮೊಟ್ಟ ಮೊದಲಿಗೆ ಅವರ ಪೂಜೆಯನ್ನೇ
ಮಾಡುತ್ತೀರಿ. ಮೊದಲು ನಿರಾಕಾರ ಭಗವಂತನಿಗೇ ಮಹಿಮೆ ಮಾಡುತ್ತಾರೆ ಆ ಸಮಯದಲ್ಲಿ ನೀವು
ಆತ್ಮಾಭಿಮಾನಿಗಳಾಗಿರುತ್ತೀರೆಂದಲ್ಲ, ಆತ್ಮಾಭಿಮಾನಿಗಳ ಪೂಜೆ ಮಾಡುವುದಿಲ್ಲ. ತಂದೆಯು
ತಿಳಿಸುತ್ತಾರೆ – ಮೊಟ್ಟ ಮೊದಲು ಭಕ್ತಿಯು ಆರಂಭವಾದಾಗ ಒಬ್ಬ ಶಿವ ತಂದೆಯ ಪೂಜೆ ಮಾಡುತ್ತಾರೆ. ಯಥಾ
ರಾಜ-ರಾಣಿ ತಥಾ ಪ್ರಜಾ. ಸರ್ವಶ್ರೇಷ್ಠನು ಭಗವಂತನೇ ಆಗಿದ್ದಾರೆ ಅವರನ್ನೇ ನೆನಪು ಮಾಡಬೇಕಾಗಿದೆ.
ನಂತರ ಕೆಳಗೆ ಯಾರೆಲ್ಲರೂ ಇದ್ದಾರೆಯೋ ಅಂದರೆ ಬ್ರಹ್ಮಾ, ವಿಷ್ಣು, ಶಂಕರನನ್ನೂ ನೆನಪು ಮಾಡುವ
ಅವಶ್ಯಕತೆಯಿಲ್ಲ, ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನೇ ನೆನಪು ಮಾಡಬೇಕಾಗಿದೆ ಆದರೆ ಡ್ರಾಮಾದ
ಪಾತ್ರವು ಈ ರೀತಿಯಿದೆ, ನೀವು ಕೆಳಗಿಳಿಯುವುದಕ್ಕಾಗಿ ಬಂಧಿತರಾಗಿದ್ದೀರಿ. ನೀವು ಹೇಗೆ
ಕೆಳಗಿಳಿಯುತ್ತೀರಿ ಎಂಬುದನ್ನು ತಂದೆಯು ತಿಳಿಸುತ್ತಾರೆ. ಆದಿಯಿಂದ ಅಂತ್ಯದವರೆಗೆ, ಮೇಲಿನಿಂದ
ಕೆಳಗಿನವರೆಗೆ ಪ್ರತಿಯೊಂದು ಮಾತನ್ನು ತಂದೆಯು ತಿಳಿಸುತ್ತಾರೆ. ಭಕ್ತಿಯೂ ಸಹ ಮೊದಲು
ಸತೋಪ್ರಧಾನವಾಗಿರುತ್ತದೆ ನಂತರ ಸತೋ, ರಜೋ, ತಮೋ ಆಗುತ್ತದೆ. ನೀವೀಗ ಪುನಃ
ಸತೋಪ್ರಧಾನರಾಗುತ್ತಿದ್ದೀರಿ, ಇದರಲ್ಲಿಯೇ ಪರಿಶ್ರಮವಿದೆ. ಪವಿತ್ರರಾಗಬೇಕಾಗಿದೆ. ತಮ್ಮನ್ನು
ನೋಡಿಕೊಳ್ಳಿ, ಮಾಯೆಯು ಎಲ್ಲಿಯೂ ಮೋಸ ಮಾಡುತ್ತಿಲ್ಲವೆ? ನನಗೆ ವಿಕಾರಿ ದೃಷ್ಟಿಯಂತೂ ಆಗುತ್ತಿಲ್ಲವೆ?
ಯಾವುದೇ ಪಾಪದ ಸಂಕಲ್ಪವು ಬರುತ್ತಿಲ್ಲವೆ? ಪ್ರಜಾಪಿತ ಬ್ರಹ್ಮನೆಂದೂ ಗಾಯನವಿದೆ ಅಂದಮೇಲೆ ಅವರ
ಸಂತಾನರು ಬ್ರಾಹ್ಮಣ-ಬ್ರಾಹ್ಮಿಣಿಯರು ಸಹೋದರ-ಸಹೋದರಿಯರಾದರಲ್ಲವೆ. ಇಲ್ಲಿನ ಬ್ರಾಹ್ಮಣರೂ ಸಹ
ತಮ್ಮನ್ನು ಬ್ರಹ್ಮನ ಸಂತಾನರೆಂದು ಕರೆಸಿಕೊಳ್ಳುತ್ತಾರೆ. ನೀವೂ ಸಹ ಬ್ರಾಹ್ಮಣರು
ಸಹೋದರ-ಸಹೋದರಿಯಾದರಲ್ಲವೆ. ಮತ್ತೆ ವಿಕಾರ ದೃಷ್ಟಿಯನ್ನೇಕೆ ಇಡುತ್ತೀರಿ? ಬ್ರಾಹ್ಮಣರಿಗೆ ನೀವು
ಬಹಳ ಚೆನ್ನಾಗಿ ದೃಷ್ಟಿಯನ್ನು ಕೊಡಬಹುದು. ಈಗ ನೀವು ಮಕ್ಕಳೆ ತಿಳಿದುಕೊಂಡಿದ್ದೀರಿ - ಬ್ರಹ್ಮಾನ
ಸಂತಾನ ಬ್ರಾಹ್ಮಣ-ಬ್ರಾಹ್ಮಿಣಿಯರಾಗಿ ಮತ್ತೆ ದೇವತೆಗಳಾಗುತ್ತೀರಿ. ತಂದೆಯು ಬಂದು ಬ್ರಾಹ್ಮಣ
ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆಂದು ಹೇಳುತ್ತಾರೆ. ಇದು ತಿಳಿದುಕೊಳ್ಳುವ ಮಾತಲ್ಲವೆ.
ನಾವು ಬ್ರಹ್ಮಾನ ಸಂತಾನರು ಸಹೋದರ-ಸಹೋದರಿಯರಾದೆವು ಅಂದಮೇಲೆ ಎಂದೂ ಕುದೃಷ್ಟಿಯಿರಬಾರದು. ಅದನ್ನು
ತಡೆಯಬೇಕಾಗಿದೆ. ಇವರೂ ಸಹ ನಮ್ಮ ಮಧುರ ಸಹೋದರಿಯಾಗಿದ್ದಾರೆಂಬ ಪ್ರೀತಿಯಿರಬೇಕು. ಹೇಗೆ ರಕ್ತ
ಸಂಬಂಧದಲ್ಲಿ ಪ್ರೀತಿಯಿರುತ್ತದೆ ಹಾಗೆಯೇ ಈಗ ಅದು ಆತ್ಮಿಕ ಸಂಬಂಧದಲ್ಲಿಯೂ ಬರಲಿ. ಇದರಲ್ಲಿ
ಬಹಳ-ಬಹಳ ಪರಿಶ್ರಮವಿದೆ. ಇದು ಸಹಜ ನೆನಪಾಗಿದೆ. ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು
ಮಾಡಬೇಕಾಗಿದೆ, ವಿಕಾರೀ ದೃಷ್ಟಿಯನ್ನಿಡಲು ಸಾಧ್ಯವಿಲ್ಲ. ತಂದೆಯು ತಿಳಿಸಿದ್ದಾರೆ - ಈ ಕಣ್ಣುಗಳು
ಬಹಳ ಮೋಸ ಮಾಡುತ್ತವೆ, ದೃಷ್ಟಿಯನ್ನು ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ - ನಾವಾತ್ಮರಾಗಿದ್ದೇವೆ,
ನಾವೀಗ ಶಿವ ತಂದೆಯ ಮಕ್ಕಳಾಗಿದ್ದೇವೆ, ದತ್ತು ಮಾಡಲ್ಪಟ್ಟಿರುವ ಸಹೋದರ-ಸಹೋದರಿಯರಾಗಿದ್ದೇವೆ. ನಾವು
ನಮ್ಮನ್ನು ಬಿ.ಕೆ.ಗಳೆಂದು ಕರೆಸಿಕೊಳ್ಳುತ್ತೇವೆ. ಚಲನೆಯಲ್ಲಿ ಅಂತರವಂತೂ ಇರುತ್ತದೆಯಲ್ಲವೆ.
ಟೀಚರ್ಸ್ನ ಕರ್ತವ್ಯವಾಗಿದೆ - ತರಗತಿಯಲ್ಲಿ ಎಲ್ಲರನ್ನೂ ಕೇಳಬೇಕು - ನಮಗೆ ಸಹೋದರ-ಸಹೋದರಿಯ
ದೃಷ್ಟಿಯಿರುತ್ತದೆಯೇ ಅಥವಾ ಏನಾದರೂ ಚಂಚಲತೆಯು ನಡೆಯುತ್ತದೆಯೇ ಎಂಬುದನ್ನು ನೀವು
ತಿಳಿದುಕೊಂಡಿದ್ದೀರಾ? ಸತ್ಯ ತಂದೆಯ ಮುಂದೆ ಸತ್ಯವನ್ನು ತಿಳಿಸಲಿಲ್ಲ, ಸುಳ್ಳು ಹೇಳಿದಿರೆಂದರೆ
ಬಹಳ ಶಿಕ್ಷೆಯಾಗುವುದು. ಹೇಗೆ ನ್ಯಾಯಾಲಯದಲ್ಲಿ ಪ್ರತಿಜ್ಞೆ ಮಾಡಿಸುತ್ತಾರಲ್ಲವೆ - ಸತ್ಯ ಈಶ್ವರ
ತಂದೆಯ ಮುಂದೆ ಸತ್ಯವನ್ನೇ ಹೇಳುತ್ತೇವೆ ಎಂದು. ಅಂದಾಗ ಸತ್ಯ ತಂದೆಯ ಮಕ್ಕಳು ಸತ್ಯವಂತರಾಗಿರುವರು.
ತಂದೆಯು ಸತ್ಯವಾಗಿದ್ದಾರಲ್ಲವೆ. ಅವರು ಸತ್ಯವನ್ನೇ ತಿಳಿಸುತ್ತಾರೆ. ಉಳಿದೆಲ್ಲವೂ ಅಸತ್ಯವಾಗಿದೆ.
ಶ್ರೀ ಶ್ರೀ 108 ಎಂದು ತಮ್ಮನ್ನು ಕರೆಸಿಕೊಳ್ಳುತ್ತಾರೆ, ವಾಸ್ತವದಲ್ಲಿ ಇದು ಮಾಲೆಯಲ್ಲವೆ, ಅದನ್ನು
ಜಪಿಸುತ್ತಾರೆ. ನಾವು ಏಕೆ ಅದನ್ನು ಸ್ಮರಣೆ ಮಾಡುತ್ತೇವೆ ಎಂಬುದೂ ಸಹ ಅವರಿಗೆ ಗೊತ್ತಿಲ್ಲ.
ಬೌದ್ಧರ ಹಾಗೂ ಕ್ರಿಶ್ಚಿಯನ್ನರದೂ ಮಾಲೆಯಿರುತ್ತದೆ. ಪ್ರತಿಯೊಬ್ಬರೂ ತಮ್ಮ ಶೈಲಿಯಿಂದ ಮಾಲೆಯನ್ನು
ಜಪಿಸುತ್ತಾರೆ. ನೀವು ಮಕ್ಕಳಿಗೆ ಈಗ ಜ್ಞಾನವು ಸಿಕ್ಕಿದೆ. ತಿಳಿಸಿ, 108ರ ಮಾಲೆಯಲ್ಲಿ ಮೇಲಿರುವ
ಹೂ ನಿರಾಕಾರನಾಗಿದ್ದಾರೆ, ಅವರನ್ನೇ ಎಲ್ಲರೂ ನೆನಪು ಮಾಡುತ್ತಾರೆ. ಅವರ ನೆನಪಿನಿಂದಲೇ ನಾವು
ಸ್ವರ್ಗದ ಪಟ್ಟದ ರಾಣಿಯರು ಅರ್ಥಾತ್ ಮಹಾರಾಣಿಯರಾಗುತ್ತೇವೆ. ನರನಿಂದ ನಾರಾಯಣ, ನಾರಿಯಿಂದ
ಲಕ್ಷ್ಮಿಯಾಗುವುದು - ಇದು ಸೂರ್ಯವಂಶಿ, ಮಕ್ಮಲ್ (ರೇಷ್ಮೆ) ನ ಪಟ್ಟದ ರಾಣಿಯರಾಗುವುದು ನಂತರ
ಖಾದಿಯ ರಾಣಿಯರಾಗಿ ಬಿಡುತ್ತೀರಿ. ಇಂತಿಂತಹ ವಿಚಾರಗಳನ್ನು ಬುದ್ಧಿಯಲ್ಲಿಟ್ಟುಕೊಂಡು ಮತ್ತೆ
ತಿಳಿಸಬೇಕು ಆಗ ನಿಮ್ಮ ಹೆಸರು ಪ್ರಸಿದ್ಧವಾಗುವುದು. ಮಾತನಾಡುವುದರಲ್ಲಿ ಸಿಂಹಿಣಿಯರಾಗಿ, ನೀವು
ಶಿವ ಶಕ್ತಿ ಸೇನೆಯಲ್ಲವೆ. ಅನೇಕ ಪ್ರಕಾರದ ಸೈನ್ಯವಿರುತ್ತದೆಯಲ್ಲವೆ. ಅಲ್ಲಿಯೂ ನೀವು ಹೋಗಿ ನೋಡಿ,
ಏನನ್ನು ಕಲಿಸುತ್ತಾರೆ? ಲಕ್ಷಾಂತರ ಮಂದಿ ಹೋಗುತ್ತಾರೆ, ತಂದೆಯು ತಿಳಿಸುತ್ತಾರೆ – ವಿಕಾರಿ
ದೃಷ್ಟಿಯು ಬಹಳ ಮೋಸ ಮಾಡುವಂತದ್ದಾಗಿದೆ, ತಮ್ಮ ಸ್ಥಿತಿಯ ವರ್ಣನೆ ಮಾಡಬೇಕು. ನಾವು ಮನೆಯಲ್ಲಿ
ಹೇಗಿರುತ್ತೇವೆ? ಸ್ಥಿತಿಯ ಮೇಲೆ ಯಾವ ಪ್ರಭಾವ ಬೀರುತ್ತದೆ? ಎಂದು ತಮ್ಮ ಅನುಭವವನ್ನು ತಿಳಿಸಬೇಕು.
ಎಷ್ಟು ಸಮಯ ನಾನು ಈ ಸ್ಥಿತಿಯಲ್ಲಿರುತ್ತೇನೆಂದು ಡೈರಿಯನ್ನು ಇಟ್ಟುಕೊಳ್ಳಿ. ತಂದೆಯು
ತಿಳಿಸುತ್ತಾರೆ - ಶಕ್ತಿಶಾಲಿಗಳೊಂದಿಗೆ ಮಾಯೆಯೂ ಸಹ ಶಕ್ತಿಶಾಲಿಯಾಗಿ ಹೋರಾಡುತ್ತದೆ. ಯುದ್ಧದ
ಮೈದಾನವಲ್ಲವೆ. ಮಾಯೆಯು ಬಹಳ ಬಲಶಾಲಿಯಾಗಿದೆ. ಮಾಯೆ ಅರ್ಥಾತ್ ಪಂಚ ವಿಕಾರಗಳು. ಹಣಕ್ಕೆ ಸಂಪತ್ತು
ಎಂದು ಹೇಳಲಾಗುತ್ತದೆ, ಯಾರ ಬಳಿ ಹೆಚ್ಚು ಸಂಪತ್ತಿರುವುದೋ ಅವರೇ ಹೆಚ್ಚು ಅಜಾಮೀಳರಂತಹ
ಪಾಪಾತ್ಮರಾಗುತ್ತಾರೆ.
ತಂದೆಯು ತಿಳಿಸುತ್ತಾರೆ – ಮೊಟ್ಟ ಮೊದಲು ನೀವು ವೇಶ್ಯೆಯರನ್ನು ರಕ್ಷಣೆ ಮಾಡಿ. ಅವರು ತಮ್ಮ
ಸಂಗವನ್ನು ಕಟ್ಟುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಶಿವಾಲಯದ ಮಾಲೀಕರನ್ನಾಗಿ ಮಾಡಲು
ಬಂದಿದ್ದೇನೆ. ಇದು ಅಂತಿಮ ಜನ್ಮವಾಗಿದೆ. ವೇಶ್ಯೆಯರಿಗೂ ಸಹ ತಿಳಿಸಿ - ನಿಮ್ಮ ಹೆಸರಿನ ಕಾರಣ
ಭಾರತದ ಗೌರವ ಇಷ್ಟೊಂದು ಕಳೆದು ಹೋಗಿದೆ, ತಂದೆಯು ಶಿವಾಲಯದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ.
ನಾವು ಶ್ರೀಮತದನುಸಾರ ನಿಮ್ಮ ಬಳಿ ಬಂದಿದ್ದೇವೆ. ನೀವೀಗ ವಿಶ್ವದ ಮಾಲೀಕರಾಗಿಬಿಡಿ. ನಮ್ಮ ತರಹ
ಭಾರತದ ಹೆಸರನ್ನು ಪ್ರಖ್ಯಾತಗೊಳಿಸಿ. ನಾವೂ ಸಹ ತಂದೆಯನ್ನು ನೆನಪು ಮಾಡಿ ಪವಿತ್ರರಾಗುತ್ತಿದ್ದೇವೆ,
ಹಾಗೆಯೇ ನೀವೂ ಈ ಒಂದು ಜನ್ಮ ಪತಿತ ಕರ್ಮವನ್ನು ಬಿಟ್ಟು ಬಿಡಿ. ಅವರ ಮೇಲೂ ದಯೆ ತೋರಿಸಬೇಕಲ್ಲವೆ.
ಆಗ ನಿಮ್ಮ ಹೆಸರು ಬಹಳ ಪ್ರಸಿದ್ಧವಾಗುವುದು. ಇವರಲ್ಲಿ ಇಂತಹ ಶಕ್ತಿಯಿದೆ, ಇಂತಹ ಕೆಟ್ಟ ಕೆಲಸವನ್ನೂ
ಇವರಿಂದ ಬಿಡಿಸಿದರು ಎಂದು ಎಲ್ಲರೂ ಹೇಳುವರು. ಎಲ್ಲರ ಸಂಗಗಳಿವೆ, ನೀವೂ ಸಹ ತಮ್ಮ ಸಂಗವನ್ನು
ಮಾಡಿಕೊಂಡು ಸರ್ಕಾರದಿಂದ ಏನು ಬೇಕೋ ಅದನ್ನು ತೆಗೆದುಕೊಳ್ಳಬಹುದು. ಈಗ ಇಂತಹ ಪತಿತರು ಯಾರು ಭಾರತದ
ಹೆಸರನ್ನು ಕೆಡಿಸಿದ್ದಾರೆಯೋ ಅವರ ಸೇವೆಯನ್ನು ಮಾಡಿ ನಿಮ್ಮ ಸಂಗವು ಬಹಳ ಒಗ್ಗಟ್ಟಿನಿಂದ ಕೂಡಿರಬೇಕು.
10-12 ಮಂದಿ ಸೇರಿ ಹೋಗಿ ತಿಳಿಸಿ ಕೊಡಬೇಕು. ಒಳ್ಳೆಯ ಮಾತೆಯರೂ ಇರಬೇಕು. ನವ ದಂಪತಿಗಳೂ ಸಹ ಹೋಗಿ
ತಿಳಿಸಬೇಕು - ನಾವು ಪವಿತ್ರರಾಗಿರುತ್ತೇವೆ, ಪವಿತ್ರರಾಗಿರುವುದರಿಂದಲೇ ವಿಶ್ವದ ಮಾಲೀಕರಾಗುತ್ತೇವೆ
ಅಂದಮೇಲೆ ಏಕೆ ಪವಿತ್ರರಾಗಿರಬಾರದು? ಎಂದು ಹೇಳಬೇಕು. ಇಡೀ ಗುಂಪು-ಗುಂಪೇ ಹೋಗಿ ಬಹಳ ನಮ್ರತೆಯಿಂದ
ಹೋಗಿ ತಿಳಿಸಬೇಕು - ನಾವು ನಿಮಗೆ ಪರಮಪಿತ ಪರಮಾತ್ಮನ ಸಂದೇಶವನ್ನು ಕೊಡಲು ಬಂದಿದ್ದೇವೆ. ಈಗ
ವಿನಾಶವು ಸನ್ಮುಖದಲ್ಲಿ ನಿಂತಿದೆ. ತಂದೆಯು ತಿಳಿಸುತ್ತಾರೆ - ನಾನು ಎಲ್ಲರ ಉದ್ಧಾರವನ್ನು ಮಾಡಲು
ಬಂದಿದ್ದೇನೆ. ನೀವೂ ಸಹ ಈ ಒಂದು ಜನ್ಮ ವಿಕಾರದಲ್ಲಿ ಹೋಗಬೇಡಿ. ನಾವು ಬ್ರಹ್ಮಾಕುಮಾರ-ಕುಮಾರಿಯರು
ನಮ್ಮದೇ ತನು-ಮನ-ಧನದಿಂದ ಸೇವೆ ಮಾಡುತ್ತೇವೆ, ನಾವು ಭಿಕ್ಷೆಯನ್ನು ಬೇಡುತ್ತಿಲ್ಲ. ಈಶ್ವರನ
ಮಕ್ಕಳಾಗಿದ್ದೇವೆ ಎಂಬುದನ್ನು ನೀವು ತಿಳಿಸಬಹುದು. ಇಂತಹ ಪ್ಲಾನ್ ಮಾಡಿ - ನೀವು ಸಹಯೋಗ ಕೊಡಲು
ಸಾಧ್ಯವಿಲ್ಲವೆಂದಲ್ಲ. ಎಲ್ಲರೂ ವಾಹ್ ವಾಹ್ ಎನ್ನುವಂತಹ ಕಾರ್ಯ ಮಾಡಿ. ಇದರಿಂದ ಸಹಯೋಗ
ಕೊಡುವಂತಹವರು ಸಾವಿರಾರು ಮಂದಿ ಬರುತ್ತಾರೆ. ಹೀಗೆ ತಮ್ಮ ಸಂಘಟನೆ ಮಾಡಿಕೊಳ್ಳಿ.
ಮುಖ್ಯ-ಮುಖ್ಯವಾದವರನ್ನು ಆಯ್ಕೆ ಮಾಡಿಕೊಂಡು ಸೆಮಿನಾರ್ ಮಾಡಿ. ಮಕ್ಕಳನ್ನು ಸಂಭಾಲನೆ ಮಾಡುವವರಂತೂ
ಮುಂದೆ ಅನೇಕರು ಬರುತ್ತಾರೆ. ನೀವು ಈಶ್ವರೀಯ ಸೇವೆಯಲ್ಲಿ ತೊಡಗಿರಿ. ಒಮ್ಮೆಲೆ ಸೇವೆಗಾಗಿ ತೊಡಗುವ
ವಿಶಾಲಹೃದಯಿಗಳಾಗಬೇಕು. ಒಂದು ಕಡೆ ಈ ಸೇವೆ, ಇನ್ನೊಂದು ಕಡೆ ಗೀತೆಯ ಮಾತು, ಇವೆಲ್ಲಾ ಮಾತುಗಳನ್ನು
ಸೇರಿಸಿ ತಿಳಿಸಿ, ನೀವು ಲಕ್ಷ್ಮೀ-ನಾರಾಯಣರಾಗುವುದಕ್ಕಾಗಿಯೇ ಓದುತ್ತಿದ್ದೀರಿ ಅಂದಮೇಲೆ ಇಲ್ಲಿ
ನೀವು ಮಕ್ಕಳಲ್ಲಿ ಪರಸ್ಪರ ಮತಭೇದವಿರಬಾರದು. ಒಂದುವೇಳೆ ತಂದೆಯಿಂದ ಯಾವುದೇ ಮಾತನ್ನು
ಮುಚ್ಚಿಡುತ್ತೀರಿ, ಸತ್ಯವನ್ನು ತಿಳಿಸುವುದಿಲ್ಲವೆಂದರೂ ಸಹ ತಮ್ಮದೇ ನಷ್ಟ ಮಾಡಿಕೊಳ್ಳುತ್ತೀರಿ.
ಇನ್ನೂ ಒಂದಕ್ಕೆ ನೂರರಷ್ಟು ಪಾಪವಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನಾವು ಮಧುರ
ತಂದೆಯ ಮಕ್ಕಳಾಗಿದ್ದೇವೆ, ಪರಸ್ಪರ ಮಧುರ ಸಹೋದರ-ಸಹೋದರಿಯರಾಗಿ ಇರಬೇಕಾಗಿದೆ. ಎಂದೂ ವಿಕಾರದ
ದೃಷ್ಟಿಯನ್ನಿಡಬಾರದು. ದೃಷ್ಟಿಯಲ್ಲಿ ಯಾವುದೇ ಚಂಚಲತೆಯಿದ್ದರೆ ಆತ್ಮಿಕ ತಜ್ಞರಿಗೆ ಸತ್ಯವನ್ನು
ತಿಳಿಸಬೇಕಾಗಿದೆ.
2. ಎಂದೂ ಪರಸ್ಪರ ಮತಭೇದದಲ್ಲಿ ಬರಬಾರದು. ವಿಶಾಲ ಹೃದಯಿಗಳಾಗಿ ಸೇವೆ ಮಾಡಬೇಕಾಗಿದೆ. ತಮ್ಮ
ತನು-ಮನ-ಧನದಿಂದ ಬಹಳ-ಬಹಳ ನಮ್ರತೆಯಿಂದ ಸೇವೆ ಮಾಡಿ. ಎಲ್ಲರಿಗೆ ತಂದೆಯ ಪರಿಚಯ (ಸಂದೇಶ)
ಕೊಡಬೇಕಾಗಿದೆ.
ವರದಾನ:
ತಮ್ಮ ಶ್ರೇಷ್ಠ
ಜೀವನದ ಮೂಲಕ ಪರಮಾತ್ಮ ಜ್ಞಾನದ ಪ್ರತ್ಯಕ್ಷ ನಿದರ್ಶನ ಕೊಡುವಂತಹ ಮಯಾ ಫ್ರೂಫ್ ಭವ.
ಸ್ವಯಂನ್ನು ಪರಮಾತ್ಮ
ಜ್ಞಾನದ ಪ್ರತ್ಯಕ್ಷ ಪ್ರಮಾಣ ಅಥವಾ ಫ್ರೂಫ್ ಎಂದು ತಿಳಿಯುವುದರಿಂದ ಮಾಯಾ ಫ್ರೂಫ್ ಆಗಿ ಬಿಡುವಿರಿ.
ಪ್ರತ್ಯಕ್ಷ ಪ್ರಮಾಣವಾಗಿದೆ - ತಮ್ಮ ಶ್ರೇಷ್ಠ ಪವಿತ್ರ ಜೀವನ. ಎಲ್ಲಕ್ಕಿಂತಲೂ ದೊಡ್ಡ ಅಸಂಭವದಿಂದ
ಸಂಭವವಾಗುವಂತಹ ಮಾತು ಪ್ರವೃತ್ತಿಯಲ್ಲಿರುತ್ತಾ ಪರ-ವೃತ್ತಿಯಲ್ಲಿರುವುದು. ದೇಹ ಮತ್ತು ದೇಹದ
ಪ್ರಪಂಚದ ಸಂಬಂಧಗಳಿಂದ ಭಿನ್ನ ಇರುವುದು. ಹಳೆಯ ಶರೀರದ ಕಣ್ಣಿನಿಂದ ಹಳೆಯ ಪ್ರಪಂಚದ ವಸ್ತುಗಳನ್ನು
ನೋಡುತ್ತಿದ್ದರೂ ನೋಡದಂತಿರುವುದು ಅರ್ಥಾತ್ ಸಂಪೂರ್ಣ ಪವಿತ್ರ ಜೀವನದಲ್ಲಿ ನಡೆಯುವುದು - ಇದೇ
ಪರಮಾತ್ಮನನ್ನು ಪ್ರತ್ಯಕ್ಷ ಮಾಡುವ ಹಾಗೂ ಮಾಯಾ ಪ್ರೂಫ್ ಆಗಲು ಸಹಜ ಸಾಧನವಾಗಿದೆ.
ಸ್ಲೋಗನ್:
ಎಚ್ಚರಿಕೆ ಎಂಬ ಚೌಕಿಧಾರ
ಸರಿಯಾಗಿದ್ದಲ್ಲಿ ಅತೀಂದ್ರಿಯ ಸುಖದ ಖಜಾನೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ.