27.10.20 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ -
ಭಿನ್ನ-ಭಿನ್ನ ಯುಕ್ತಿಗಳನ್ನು ಮುಂದಿಟ್ಟುಕೊಂಡು ನೆನಪಿನ ಯಾತ್ರೆಯಲ್ಲಿರಿ, ಈ ಹಳೆಯ ಪ್ರಪಂಚವನ್ನು
ಮರೆತು ತಮ್ಮ ಮಧುರ ಮನೆ ಮತ್ತು ಹೊಸ ಪ್ರಪಂಚವನ್ನು ನೆನಪು ಮಾಡಿ"
ಪ್ರಶ್ನೆ:
ಯಾವ
ಪುರುಷಾರ್ಥವು ಈಗಲೇ ನಡೆಯುತ್ತದೆ, ಇಡೀ ಕಲ್ಪದಲ್ಲಿ ಇರುವುದಿಲ್ಲ?
ಉತ್ತರ:
ನೆನಪಿನ ಯಾತ್ರೆಯಲ್ಲಿದ್ದು ಆತ್ಮವನ್ನು ಪಾವನವನ್ನಾಗಿ ಮಾಡಿಕೊಳ್ಳುವ ಪುರುಷಾರ್ಥ, ಇಡೀ
ಪ್ರಪಂಚವನ್ನು ಪತಿತರಿಂದ ಪಾವನ ಮಾಡುವ ಪಾತ್ರವು ಇಡೀ ಕಲ್ಪದಲ್ಲಿ ಕೇವಲ ಈ ಸಂಗಮದ ಸಮಯದಲ್ಲಿಯೇ
ನಡೆಯುತ್ತದೆ. ಈ ಪಾತ್ರವು ಪ್ರತೀ ಕಲ್ಪವು ಪುನರಾವರ್ತನೆಯಾಗುತ್ತದೆ. ನೀವು ಮಕ್ಕಳು ಈ ಅನಾದಿ,
ಅವಿನಾಶಿ ನಾಟಕದ ಅದ್ಭುತ ರಹಸ್ಯವನ್ನು ತಿಳಿದುಕೊಂಡಿದ್ದೀರಿ.
ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ಆದ್ದರಿಂದ ಆತ್ಮಿಕ ಮಕ್ಕಳು
ದೇಹೀ-ಅಭಿಮಾನಿಯಾಗಿ ಅಥವಾ ಆತ್ಮಿಕ ಸ್ಥಿತಿಯಲ್ಲಿ ನಿಶ್ಚಯಬುದ್ಧಿಯವರಾಗಿ ಕುಳಿತುಕೊಳ್ಳಬೇಕು ಹಾಗೂ
ಕೇಳಬೇಕಾಗಿದೆ. ತಂದೆಯು ತಿಳಿಸಿದ್ದಾರೆ - ಆತ್ಮವೇ ಈ ಕರ್ಮೇಂದ್ರಿಯಗಳ ಮೂಲಕ ಕೇಳಿಸಿಕೊಳ್ಳುತ್ತದೆ.
ಇದನ್ನು ಪಕ್ಕಾ ನೆನಪು ಮಾಡುತ್ತಾ ಇರಿ. ಸದ್ಗತಿಯ ಹಾಗೂ ದುರ್ಗತಿಯ ಈ ಚಕ್ರವು ಪ್ರತಿಯೊಬ್ಬರ
ಬುದ್ಧಿಯಲ್ಲಿ ಇರಲೇಬೇಕು, ಇದರಲ್ಲಿ ಜ್ಞಾನ ಮತ್ತು ಭಕ್ತಿ ಎಲ್ಲವೂ ಬಂದು ಬಿಡುತ್ತದೆ
ನಡೆಯುತ್ತಾ-ತಿರುಗಾಡುತ್ತಾ ಇದು ಬುದ್ಧಿಯಲ್ಲಿರಲಿ - ಜ್ಞಾನ ಮತ್ತು ಭಕ್ತಿ, ಸುಖ ಮತ್ತು ದುಃಖ,
ದಿನ ಮತ್ತು ರಾತ್ರಿಯ ಆಟವು ಹೇಗೆ ನಡೆಯುತ್ತದೆ? ನಾವು 84 ಜನ್ಮಗಳ ಪಾತ್ರವನ್ನಭಿನಯಿಸುತ್ತೇವೆ.
ತಂದೆಗೆ ನೆನಪಿದೆ ಆದ್ದರಿಂದ ಮಕ್ಕಳಿಗೂ ನೆನಪಿನಲ್ಲಿರುವ ಪುರುಷಾರ್ಥ ಮಾಡಿಸುತ್ತಾರೆ. ಇದರಿಂದ
ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ರಾಜ್ಯವನ್ನು ಪಡೆಯುತ್ತೀರಿ. ನಿಮಗೆ ಗೊತ್ತಿದೆ,
ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗಲಿದೆ. ಹೇಗೆ ಯಾವುದೇ ಹಳೆಯ ಮನೆಯಿರುತ್ತದೆ ನಂತರ ಹೊಸ
ಮನೆಯನ್ನು ಕಟ್ಟಿಸುತ್ತಾರೆಂದರೆ ನಾವೀಗ ಹೊಸ ಮನೆಗೆ ಹೋಗುತ್ತೇವೆಂದು ತನ್ನಲ್ಲಿ ನಿಶ್ಚಯವಿರುತ್ತದೆ.
ಮತ್ತೆ ಮನೆಯನ್ನು ಕಟ್ಟುವುದರಲ್ಲಿ ಕೆಲವೊಮ್ಮೆ ಒಂದೆರಡು ವರ್ಷಗಳೂ ಹಿಡಿಸುತ್ತವೆ. ಹೇಗೆ ಹೊಸ
ದೆಹಲಿಯಲ್ಲಿ ಸರ್ಕಾರಿ ಮನೆಗಳು ತಯಾರಾಗುತ್ತವೆಯಂದರೆ ಅವಶ್ಯವಾಗಿ ನಾವು ವರ್ಗಾಯಿತರಾಗಿ ಹೊಸ
ದೆಹಲಿಗೆ ಹೋಗುತ್ತೇವೆಂದು ಸರ್ಕಾರದವರು ಹೇಳುತ್ತಾರೆ ಹಾಗೆಯೇ ನೀವು ಮಕ್ಕಳೂ ತಿಳಿದುಕೊಂಡಿದ್ದೀರಿ
- ಈ ಬೇಹದ್ದಿನ ಪ್ರಪಂಚವು ಹಳೆಯದಾಗಿದೆ, ಈಗ ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ. ಇಂತಿಂತಹ
ಯುಕ್ತಿಗಳಿಂದ ಬುದ್ಧಿಯನ್ನು ನೆನಪಿನ ಯಾತ್ರೆಯಲ್ಲಿ ತೊಡಗಿಸಬೇಕೆಂದು ತಂದೆಯು ಯುಕ್ತಿಗಳನ್ನು
ತಿಳಿಸುತ್ತಾರೆ. ನಾವೀಗ ಮನೆಗೆ ಹೋಗಬೇಕಾಗಿದೆ ಆದ್ದರಿಂದ ಮಧುರಮನೆಯನ್ನು ನೆನಪು ಮಾಡಬೇಕಾಗಿದೆ.
ಇದಕ್ಕಾಗಿಯೇ ಮನುಷ್ಯರು ತಲೆ ಕೆಡಿಸಿಕೊಳ್ಳುತ್ತಾರೆ. ಇದನ್ನೂ ಸಹ ಮಧುರಾತಿ ಮಧುರ ಮಕ್ಕಳಿಗೆ
ತಿಳಿಸಲಾಗಿದೆ - ಈ ದುಃಖಧಾಮವು ಈಗ ಸಮಾಪ್ತಿಯಾಗುವುದಿದೆ. ಭಲೆ ನೀವು ಇಲ್ಲಿಯೇ ಇದ್ದೀರಿ ಆದರೆ ಈ
ಹಳೆಯಪ್ರಪಂಚವು ನಿಮಗೆ ಇಷ್ಟವಿಲ್ಲ. ನಾವು ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ ಎಂದು ಹೇಳುತ್ತೀರಿ.
ಭಲೆ ನಿಮ್ಮ ಮುಂದೆ ಯಾವುದೇ ಚಿತ್ರವಿಲ್ಲದಿದ್ದರೂ ಸಹ ನೀವು ತಿಳಿದುಕೊಳ್ಳುತ್ತೀರಿ. ಈಗ ಹಳೆಯ
ಪ್ರಪಂಚದ ಅಂತ್ಯವಾಗಿದೆ. ನಾವೀಗ ಹೊಸ ಪ್ರಪಂಚದಲ್ಲಿ ಹೋಗುತ್ತೇವೆ. ಭಕ್ತಿಮಾರ್ಗದ ಚಿತ್ರಗಳಂತೂ
ಬಹಳಷ್ಟಿವೆ. ಅದರ ಹೋಲಿಕೆಯಲ್ಲಿ ನಿಮ್ಮ ಚಿತ್ರಗಳು ಬಹಳ ಕಡಿಮೆಯಿದೆ. ನಿಮ್ಮದು ಇವು ಜ್ಞಾನಮಾರ್ಗದ
ಚಿತ್ರಗಳಾಗಿವೆ, ಅವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಚಿತ್ರಗಳಿಂದಲೇ ಇಡೀ ಜ್ಞಾನವು ನಡೆಯುತ್ತದೆ.
ಈಗ ನಿಮ್ಮದು ರಿಯಲ್ ಚಿತ್ರವಾಗಿದೆ ಆದ್ದರಿಂದ ಯಾವುದು ಸರಿ, ಯಾವುದು ತಪ್ಪೆಂದು ನೀವು
ತಿಳಿಸುತ್ತೀರಿ. ತಂದೆಗೆ ಜ್ಞಾನಪೂರ್ಣನೆಂದು ಹೇಳಲಾಗುತ್ತದೆ. ನಿಮಗೆ ಈ ಜ್ಞಾನವಿದೆ. ನಾವು ಇಡೀ
ಕಲ್ಪದಲ್ಲಿ ಎಷ್ಟು ಜನ್ಮಗಳನ್ನು ತೆಗೆದುಕೊಂಡಿದ್ದೇವೆ, ಈ ಚಕ್ರವು ಹೇಗೆ ಸುತ್ತುತ್ತದೆಯೆಂಬುದು
ನಿಮಗೆ ತಿಳಿದಿದೆ. ನೀವೀಗ ನಿರಂತರ ತಂದೆಯ ನೆನಪು ಮತ್ತು ಈ ಜ್ಞಾನದಲ್ಲಿರಬೇಕಾಗಿದೆ. ತಂದೆಯು
ನಿಮಗೆ ರಚಯಿತ ಮತ್ತು ರಚನೆಯ ಜ್ಞಾನವನ್ನು ಕೊಡುತ್ತಾರೆ ಆದ್ದರಿಂದ ತಂದೆಯ ನೆನಪೂ ಇರುತ್ತದೆ.
ತಂದೆಯು ತಿಳಿಸಿದ್ದಾರೆ - ನಾನು ನಿಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದೇನೆ. ಕೇವಲ ನೀವು
ಇಷ್ಟನ್ನೇ ತಿಳಿಸಿ- ತಂದೆಯು ಹೇಳುತ್ತಾರೆ, ನೀವು ನನ್ನನ್ನು ಪತಿತ-ಪಾವನ, ಮುಕ್ತಿದಾತ
ಮಾರ್ಗದರ್ಶಕನೆಂದು ಹೇಳುತ್ತೀರಲ್ಲವೆ ಅಂದಾಗ ಎಲ್ಲಿಯ ಮಾರ್ಗದರ್ಶಕ? ಶಾಂತಿಧಾಮ, ಮುಕ್ತಿಧಾಮದ
ಮಾರ್ಗದರ್ಶಕನಾಗಿದ್ದಾರೆ. ತಂದೆಯು ಅಲ್ಲಿಯವರೆಗೆ (ಪರಮಧಾಮ) ಕರೆದುಕೊಂಡು ಹೋಗಿ ಬಿಟ್ಟು
ಬಿಡುತ್ತಾರೆ. ಮಕ್ಕಳಿಗೆ ಓದಿಸಿ, ಕಲಿಸಿ, ಪವಿತ್ರರನ್ನಾಗಿ ಮಾಡಿ ಕರೆದುಕೊಂಡು ಹೋಗಿ ಅಲ್ಲಿ
ಬಿಡುತ್ತಾರೆ. ತಂದೆಯ ವಿನಃ ಮತ್ತ್ಯಾರೂ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಭಲೆ ಯಾರೆಷ್ಟಾದರೂ
ತತ್ವ ಜ್ಞಾನಿ ಅಥವಾ ಬ್ರಹ್ಮ ಜ್ಞಾನಿಗಳಿರಬಹುದು ಅವರಂತೂ ನಾವು ಬ್ರಹ್ಮತತ್ವದಲ್ಲಿ ಹೋಗಿ
ಲೀನವಾಗುತ್ತೇವೆಂದು ಹೇಳುತ್ತಾರೆ ಆದರೆ ನಿಮ್ಮ ಬುದ್ಧಿಯಲ್ಲಿದೆ - ಶಾಂತಿಧಾಮವು ನಮ್ಮ ಮನೆಯಾಗಿದೆ,
ನಾವು ಅಲ್ಲಿ ಹೋಗಿ ಮತ್ತೆ ಹೊಸ ಪ್ರಪಂಚದಲ್ಲಿ ಮೊಟ್ಟ ಮೊದಲಿಗೆ ಬರುತ್ತೇವೆ. ಅವರೆಲ್ಲರೂ
ನಂತರದಲ್ಲಿ ಬರುವವರಾಗಿದ್ದಾರೆ. ಹೇಗೆ ಎಲ್ಲಾ ಧರ್ಮದವರು ನಂಬರ್ವಾರ್ ಆಗಿ ಬರುತ್ತಾರೆ.
ಸತ್ಯ-ತ್ರೇತಾಯುಗದಲ್ಲಿ ಯಾರ ರಾಜ್ಯವಿರುತ್ತದೆ, ಅವರ ಧರ್ಮಶಾಸ್ತ್ರ ಯಾವುದು ಎಂಬುದೆಲ್ಲಾ ನಿಮಗೆ
ತಿಳಿದಿದೆ. ಸೂರ್ಯವಂಶಿ, ಚಂದ್ರವಂಶಿಯರದು ಒಂದೇ ಶಾಸ್ತ್ರವಾಗಿದೆ ಆದರೆ ಆ ಗೀತೆಯು ಸತ್ಯವಾದುದಲ್ಲ
ಏಕೆಂದರೆ ನಿಮಗೆ ಈಗ ಯಾವ ಜ್ಞಾನವು ಸಿಗುತ್ತದೆಯೇ ಇದು ಇಲ್ಲಿಯೇ ಸಮಾಪ್ತಿಯಾಗುತ್ತದೆ,
ಸತ್ಯಯುಗದಲ್ಲಿ ಯಾವುದೇ ಶಾಸ್ತ್ರಗಳಿರುವುದಿಲ್ಲ. ದ್ವಾಪರದಿಂದ ಯಾವ ಧರ್ಮಗಳಿರುತ್ತವೆಯೋ ಅವು
ಹಾಗೆಯೇ ಇವೆ, ನಡೆದುಬರುತ್ತಿದೆ. ಈಗ ಮತ್ತೆ ಒಂದು ಧರ್ಮದ ಸ್ಥಾಪನೆಯಾದರೆ ಉಳಿದೆಲ್ಲವೂ
ವಿನಾಶವಾಗುವವು. ಒಂದು ರಾಜ್ಯ, ಒಂದು ಧರ್ಮ, ಒಂದು ಭಾಷೆ, ಒಂದು ಮತ ಬೇಕೆಂದು ಹೇಳುತ್ತಿರುತ್ತಾರೆ
ಅದು ಒಬ್ಬರಿಂದಲೇ ಸ್ಥಾಪನೆಯಾಗುತ್ತದೆ. ಸತ್ಯಯುಗದಿಂದ ಹಿಡಿದು ಕಲಿಯುಗದವರೆಗಿನ ಸಂಪೂರ್ಣ ಜ್ಞಾನವು
ನಿಮ್ಮ ಬುದ್ಧಿಯಲ್ಲಿದೆ ಅಂದಾಗ ಈಗ ಪಾವನರಾಗಲು ಪುರುಷಾರ್ಥ ಮಾಡಿ ಎಂದು ತಂದೆಯು ತಿಳಿಸುತ್ತಾರೆ.
ಪತಿತರಾಗುವುದರಲ್ಲಿ ನಿಮಗೆ ಅರ್ಧಕಲ್ಪ ಹಿಡಿಸಿತು, ವಾಸ್ತವದಲ್ಲಿ ಇಡೀ ಕಲ್ಪವೆಂದೇ ಹೇಳಬಹುದು. ಈ
ನೆನಪಿನ ಯಾತ್ರೆಯನ್ನು ನೀವು ಈಗಲೇ ಕಲಿಯುತ್ತೀರಿ, ಇದು ಸತ್ಯಯುಗದಲ್ಲಿರುವುದಿಲ್ಲ. ದೇವತೆಗಳು
ಪತಿತರಿಂದ ಪಾವನರಾಗುವ ಪುರುಷಾರ್ಥ ಮಾಡುವುದಿಲ್ಲ. ಅವರು ಮೊದಲು ರಾಜಯೋಗವನ್ನು ಕಲಿತು ಇಲ್ಲಿಂದಲೇ
ಪಾವನರಾಗಿ ಹೋಗುತ್ತಾರೆ. ಅದಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ,
ಕೇವಲ ಈಗಲೇ ನಾವು ನೆನಪಿನ ಯಾತ್ರೆಯ ಪುರುಷಾರ್ಥ ಮಾಡುತ್ತೇವೆ ನಂತರ ಪತಿತ ಪ್ರಪಂಚವನ್ನು ಪಾವನ
ಮಾಡಲು ಈಗ ನಡೆಯುವ ಪುರುಷಾರ್ಥವು ಕಲ್ಪದ ನಂತರ ಪುನರಾವರ್ತನೆಯಾಗುತ್ತದೆ. ಚಕ್ರವನ್ನು ಅವಶ್ಯವಾಗಿ
ಸುತ್ತುತ್ತೀರಲ್ಲವೆ. ನಿಮ್ಮ ಬುದ್ಧಿಯಲ್ಲಿ ಇವೆಲ್ಲಾ ಮಾತುಗಳಿವೆ ಇದು ನಾಟಕವಾಗಿದೆ, ಎಲ್ಲಾ
ಪಾತ್ರಧಾರಿಗಳು ಅವಿನಾಶಿಯಾಗಿದ್ದಾರೆ, ಅವರಲ್ಲಿ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ. ಹೇಗೆ ಆ
ನಾಟಕವು ನಡೆಯುತ್ತಿರುತ್ತದೆ ಆದರೆ ಆ ಚಿತ್ರಗಳು ಸವೆದು ಹಳೆಯದಾಗಿ ಬಿಡುತ್ತದೆ. ಇದಂತೂ
ಅವಿನಾಶಿಯಾಗಿದೆ, ಅದ್ಭುತವಾಗಿದೆ. ಎಷ್ಟು ಚಿಕ್ಕ ಆತ್ಮನಲ್ಲಿ ಇಡೀ ಪಾತ್ರವು ಅಡಕವಾಗಿದೆ, ತಂದೆಯು
ನಿಮಗೆ ಎಷ್ಟು ಗುಹ್ಯ-ಗುಹ್ಯವಾದ ಮಾತುಗಳನ್ನು ತಿಳಿಸಿಕೊಡುತ್ತಾರೆ. ಈಗ ಇದನ್ನು ಯಾರಾದರೂ
ಕೇಳುತ್ತಾರೆಂದರೆ ಬಹಳ ವಿಚಿತ್ರ ಮಾತುಗಳನ್ನು ತಿಳಿಸುತ್ತೀರಿ, ಆತ್ಮವೆಂದರೇನು ಎಂಬುದು ಈಗ
ಅರ್ಥವಾಯಿತೆಂದು ಹೇಳುತ್ತಾರೆ. ಶರೀರವನ್ನಂತೂ ಎಲ್ಲರೂ ತಿಳಿದುಕೊಂಡಿದ್ದಾರೆ, ವೈದ್ಯರು ಮನುಷ್ಯನ
ಹೃದಯವನ್ನು ಹೊರ ತೆಗೆದು ಮತ್ತೆ ಹಾಕುತ್ತಾರೆ ಆದರೆ ಆತ್ಮನ ಬಗ್ಗೆ ಯಾರಿಗೂ ತಿಳಿದಿಲ್ಲ. ಆತ್ಮವು
ಪತಿತನಿಂದ ಹೇಗೆ ಪಾವನವಾಗುತ್ತದೆ, ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಪತಿತ ಆತ್ಮ, ಪಾಪಾತ್ಮ,
ಮಹಾನ್ ಆತ್ಮ ಎಂದು ಹೇಳುತ್ತಾರಲ್ಲವೆ. ಹೇ ಪತಿತ-ಪಾವನ ಬಂದು ನನ್ನನ್ನು ಪಾವನ ಮಾಡಿ ಎಂದು ಎಲ್ಲರೂ
ಕರೆಯುತ್ತಾರೆ ಆದರೆ ಆತ್ಮವು ಹೇಗೆ ಪಾವನವಾಗುವುದು? ಇದಕ್ಕಾಗಿ ಅವಿನಾಶಿ ವೈದ್ಯರು ಬೇಕು. ಆತ್ಮವೇ
ಅವರನ್ನು ಕರೆಯುತ್ತದೆ, ಯಾರು ಪುನರ್ಜನ್ಮರಹಿತನಾಗಿದ್ದಾರೆ. ಆತ್ಮವನ್ನು ಪವಿತ್ರವನ್ನಾಗಿ ಮಾಡುವ
ಔಷಧಿಯು ಅವರ ಬಳಿಯೇ ಇದೆ ಅಂದಮೇಲೆ ನಮಗೆ ಭಗವಂತನೇ ಓದಿಸುತ್ತಾರೆ ಎಂದು ನೀವು ಮಕ್ಕಳು ಖುಷಿಯಲ್ಲಿ
ರೋಮಾಂಚನವಾಗಿ ನಿಲ್ಲಬೇಕು. ಅವಶ್ಯವಾಗಿ ಭಗವಂತನು ನಿಮ್ಮನ್ನು ಭಗವಾನ್-ಭಗವತಿಯರನ್ನಾಗಿ
ಮಾಡುತ್ತಾರೆ. ಭಕ್ತಿಮಾರ್ಗದಲ್ಲಿ ಈ ಲಕ್ಷ್ಮೀ-ನಾರಾಯಣರಿಗೆ ಭಗವಾನ್-ಭಗವತಿಯಂದೇ ಹೇಳುತ್ತಾರೆ.
ಅಂದಮೇಲೆ ಯಥಾರಾಜ-ರಾಣಿ, ತಥಾ ಪ್ರಜೆಗಳಿರುತ್ತಾರಲ್ಲವೆ. ತಮ್ಮ ಸಮಾನ ಪವಿತ್ರರನ್ನಾಗಿಯೂ
ಮಾಡುತ್ತಾರೆ. ಜ್ಞಾನ ಸಾಗರರನ್ನಾಗಿಯೂ ಮಾಡುತ್ತಾರೆ, ತನಗಿಂತಲೂ ಹೆಚ್ಚು ವಿಶ್ವದ ಮಾಲೀಕರನ್ನಾಗಿ
ಮಾಡುತ್ತಾರೆ. ನೀವು ಪವಿತ್ರ, ಅಪವಿತ್ರರ ಸಂಪೂರ್ಣ ಪಾತ್ರವನ್ನಭಿನಯಿಸುತ್ತೀರಿ. ನಿಮಗೆ ತಿಳಿದಿದೆ-–ತಂದೆಯು
ಪುನಃ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡಲು ಬಂದಿದ್ದಾರೆ. ಪ್ರಾಯಲೋಪವಾಗಿ
ಬಿಟ್ಟಿದೆ ಎಂದು ಈ ಧರ್ಮವನ್ನೇ ಹೇಳುತ್ತಾರೆ. ಆಲದ ಮರದೊಂದಿಗೆ ಇದರ ಹೋಲಿಕೆ ಮಾಡಲಾಗಿದೆ. ಬಹಳಷ್ಟು
ರೆಂಬೆ-ಕೊಂಬೆಗಳಿರುತ್ತವೆ, ಬುಡವೇ ಇರುವುದಿಲ್ಲ. ಇದೂ ಸಹ ಎಷ್ಟೊಂದು ಧರ್ಮಗಳ ಶಾಖೆಗಳು ಹೊರಟಿವೆ.
ದೇವತಾ ಧರ್ಮದ ಬುಡವೇ ಇಲ್ಲ, ಪ್ರಾಯಲೋಪವಾಗಿದೆ. ತಂದೆಯು ತಿಳಿಸುತ್ತಾರೆ, ಆ ಧರ್ಮವಿದೆ ಆದರೆ
ಧರ್ಮದ ಹೆಸರನ್ನೇ ತಿರುಗಿಸಿ ಬಿಟ್ಟಿದ್ದಾರೆ. ಪವಿತ್ರರಾಗದೇ ಇರುವ ಕಾರಣ ತಮ್ಮನ್ನು ದೇವತೆಗಳೆಂದು
ಹೇಳಿಕೊಳ್ಳುವುದಿಲ್ಲ. ಇಲ್ಲದ ಕಾರಣವೇ ತಂದೆಯು ಬಂದು ರಚನೆಯನ್ನು ರಚಿಸುತ್ತಾರಲ್ಲವೆ. ನೀವೀಗ
ತಿಳಿದುಕೊಂಡಿದ್ದೀರಿ - ನಾವು ಪವಿತ್ರ ದೇವತೆಗಳಾಗಿದ್ದೆವು, ಈಗ ಪತಿತರಾಗಿದ್ದೇವೆ. ಪ್ರತಿಯೊಂದು
ವಸ್ತು ಇದೇರೀತಿ ಆಗುತ್ತದೆ. ನೀವು ಮಕ್ಕಳು ಇದನ್ನು ಮರೆಯಬಾರದು. ಮೊದಲ ಮುಖ್ಯ ಗುರಿಯಾಗಿದೆ -
ತಂದೆಯನ್ನು ನೆನಪು ಮಾಡುವುದು, ಇದರಿಂದಲೇ ಪಾವನರಾಗಬೇಕಾಗಿದೆ. ನಮ್ಮನ್ನು ಪಾವನರನ್ನಾಗಿ ಮಾಡಿ
ಎಂದು ಎಲ್ಲರೂ ಇದೇರೀತಿ ಹೇಳುತ್ತಾರೆ. ನಮ್ಮನ್ನು ರಾಜ-ರಾಣಿಯರನ್ನಾಗಿ ಮಾಡಿ ಎಂದು ಹೇಳುವುದಿಲ್ಲ
ಅಂದಾಗ ನೀವು ಮಕ್ಕಳಿಗೆ ಬಹಳ ನಶೆಯಿರಬೇಕು ಏಕೆಂದರೆ ಈಗ ನಿಮಗೆ ತಿಳಿದಿದೆ, ನಾವು ಭಗವಂತನ
ಮಕ್ಕಳಾಗಿದ್ದೇವೆ, ನಮಗೆ ಅವಶ್ಯವಾಗಿ ಆಸ್ತಿಯು ಸಿಗಬೇಕು. ಕಲ್ಪ-ಕಲ್ಪವೂ ಈ
ಪಾತ್ರವನ್ನಭಿನಯಿಸಿದ್ದೇವೆ, ವೃಕ್ಷವು ವೃದ್ಧಿಯಾಗುತ್ತಲೇ ಇರುವುದು. ತಂದೆಯು ಚಿತ್ರಗಳ ಬಗ್ಗೆಯೂ
ತಿಳಿಸಿದ್ದಾರೆ - ಇವು ಸದ್ಗತಿಯ ಚಿತ್ರಗಳಾಗಿವೆ, ನೀವು ಹಾಗೆಯೇ ಸಾರ ರೂಪದಲ್ಲಿಯೂ ತಿಳಿಸುತ್ತೀರಿ.
ಚಿತ್ರಗಳ ಮೇಲೂ ತಿಳಿಸುತ್ತೀರಿ. ನಿಮ್ಮ ಈ ಚಿತ್ರಗಳಲ್ಲಿ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವು
ಬಂದು ಬಿಡುತ್ತದೆ. ಯಾವ ಮಕ್ಕಳು ಸರ್ವೀಸ್ ಮಾಡುವವರಿದ್ದಾರೆಯೋ ಅವರು ತಮ್ಮ ಸಮಾನ ಮಾಡಿಕೊಳ್ಳುತ್ತಾ
ಹೋಗುತ್ತಾರೆ. ಅಂದಾಗ ವಿದ್ಯೆಯನ್ನು ಓದಿಸುವ ಪ್ರಯತ್ನ ಪಡಬೇಕು. ಎಷ್ಟು ಹೆಚ್ಚು ಓದಿಸುವಿರೋ ಅಷ್ಟು
ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ಪುರುಷಾರ್ಥವನ್ನಂತೂ
ಮಾಡಿಸುತ್ತೇನೆ ಆದರೆ ಅದೃಷ್ಟವು ಬೇಕಲ್ಲವೆ. ಪ್ರತಿಯೊಬ್ಬರು ಡ್ರಾಮಾನುಸಾರ ಪುರುಷಾರ್ಥ
ಮಾಡುತ್ತಿರುತ್ತಾರೆ, ಡ್ರಾಮಾದ ರಹಸ್ಯವನ್ನೂ ತಂದೆಯು ತಿಳಿಸುತ್ತಾರೆ. ತಂದೆ ತಂದೆಯೂ ಆಗಿದ್ದಾರೆ,
ಶಿಕ್ಷಕನೂ ಆಗಿದ್ದಾರೆ, ಜೊತೆ ಕರೆದುಕೊಂಡು ಹೋಗುವ ಸತ್ಯ-ಸತ್ಯ ಸದ್ಗುರುವೂ ಆಗಿದ್ದಾರೆ. ಆ ತಂದೆಯು
ಅಕಾಲಮೂರ್ತಿಯಾಗಿದ್ದಾರೆ. ಈ ಶರೀರವು ಆತ್ಮನ ಸಿಂಹಾಸನವಲ್ಲವೆ. ಇದರಿಂದ ಈ ಪಾತ್ರವನ್ನು
ಅಭಿನಯಿಸುತ್ತೀರಿ. ಅಂದಮೇಲೆ ತಂದೆಗೂ ಸಹ ಪಾತ್ರವನ್ನಭಿನಯಿಸಲು, ಸದ್ಗತಿ ಮಾಡಲು ಸಿಂಹಾಸನ
ಬೇಕಲ್ಲವೆ. ತಂದೆಯು ತಿಳಿಸುತ್ತಾರೆ- ನಾನು ಸಾಧಾರಣ ತನುವಿನಲ್ಲಿಯೇ ಬರಬೇಕಾಗಿದೆ. ನಾನು ಯಾವುದೇ
ಆಡಂಬರದಿಂದ ಬರುವುದಿಲ್ಲ. ಆ ಗುರುಗಳ ಅನುಯಾಯಿಗಳಾದರೆ ತಮ್ಮ ಗುರುಗಳಿಗಾಗಿ ಚಿನ್ನದ ಸಿಂಹಾಸನ,
ಮಹಲು ಇತ್ಯಾದಿಗಳನ್ನು ಮಾಡಿಸುತ್ತಾರೆ, ನೀವೇನು ಮಾಡಿಸುತ್ತೀರಿ? ನೀವು ಮಕ್ಕಳೂ ಆಗಿದ್ದೀರಿ,
ವಿದ್ಯಾರ್ಥಿಗಳೂ ಆಗಿದ್ದೀರಿ ಅಂದಮೇಲೆ ನೀವು ತಂದೆಗಾಗಿ ಏನು ಮಾಡುತ್ತೀರಿ? ಎಲ್ಲಿ ಕಟ್ಟಿಸುತ್ತೀರಿ?
ಇವರು (ಬ್ರಹ್ಮಾ) ಸಾಧಾರಣವಾಗಿದ್ದಾರಲ್ಲವೆ.
ಮಕ್ಕಳಿಗೆ ಇದನ್ನೂ ಸಹ ತಿಳಿಸುತ್ತಿರುತ್ತಾರೆ - ವೇಶ್ಯೆಯರಿಗೂ ಸರ್ವೀಸ್ ಮಾಡಿ. ಬಡವರ
ಉದ್ಧಾರವನ್ನೂ ಮಾಡಬೇಕಾಗಿದೆ. ಮಕ್ಕಳು ಪ್ರಯತ್ನ ಪಡುತ್ತಾರೆ, ಕಾಶಿಗೂ ಹೋಗಿದ್ದಾರೆ. ನೀವು
ಅವರನ್ನು ಮೇಲೆತ್ತಿದರೆ ಆಗ ಈ ಬ್ರಹ್ಮಾಕುಮಾರ-ಕುಮಾರಿಯರದು ಚಮತ್ಕಾರವಾಗಿದೆ. ಇವರು ವೇಶ್ಯೆಯರಿಗೂ
ಸಹ ಜ್ಞಾನವನ್ನು ಕೊಡುತ್ತಾರೆಂದು ಹೇಳುತ್ತಾರೆ. ಅವರಿಗೂ ತಿಳಿಸಬೇಕು - ನೀವೀಗ ಈ ಕೆಲಸವನ್ನು
ಬಿಟ್ಟು ಶಿವಾಲಯದ ಮಾಲೀಕರಾಗಿ, ಈ ಜ್ಞಾನವನ್ನು ಕಲಿತು ಅನ್ಯರಿಗೂ ಕಲಿಸಿಕೊಡಿ. ವೇಶ್ಯೆಯರೂ ಸಹ
ಮತ್ತೆ ಅನ್ಯರಿಗೆ ಕಲಿಸಿಕೊಡಬಹುದು. ಕಲಿತು ಬುದ್ಧಿವಂತರಾಗಿ ಬಿಟ್ಟರು. ಮತ್ತೆ ತಮ್ಮ
ಅಧಿಕಾರಿಗಳಿಗೂ ಸಹ ತಿಳಿಸುತ್ತಾರೆ, ಹಾಲ್ನಲ್ಲಿ ಚಿತ್ರ ಇತ್ಯಾದಿಗಳನ್ನಿಟ್ಟುಕೊಂಡು ಕುಳಿತು
ತಿಳಿಸಿಕೊಡಿ ಆಗ ವಾಹ್! ಈ ಬಿ.ಕೆ.ಗಳು ವೇಶ್ಯೆಯರನ್ನೂ ಸಹ ಶಿವಾಲಯದ ನಿವಾಸಿಗಳನ್ನಾಗಿ ಮಾಡಲು
ನಿಮಿತ್ತರಾಗಿದ್ದಾರೆಂದು ಎಲ್ಲರೂ ಹೇಳುತ್ತಾರೆ. ಮಕ್ಕಳಿಗೆ ಸರ್ವೀಸಿನ ಚಿಂತನೆ ನಡೆಯಬೇಕು. ನಿಮ್ಮ
ಮೇಲೆ ಬಹಳ ಜವಾಬ್ದಾರಿಯಿದೆ. ನೀವು ಅಬಲೆಯರು, ಕುಬ್ಜೆಯರು, ಬಿಲ್ಲಿನಿಯರು, ಗಣಿಕೆಯರು, ಇವರೆಲ್ಲರ
ಉದ್ಧಾರ ಮಾಡಬೇಕಾಗಿದೆ. ಸಾಧುಗಳ ಉದ್ಧಾರವನ್ನೂ ಮಾಡಿದರೆಂದು ಗಾಯನವಿದೆ. ಇದು ನಿಮಗೆ ತಿಳಿದಿದೆ,
ಕೊನೆಯಲ್ಲಿ ಸಾಧುಗಳ ಉದ್ಧಾರವೂ ಆಗುವುದು, ಈಗಲೇ ಅವರು ನಿಮ್ಮ ಮಾರ್ಗದಲ್ಲಿ ಬಂದು ಬಿಟ್ಟರೆ
ಭಕ್ತಿಮಾರ್ಗವೇ ಕ್ರಾಂತಿಯಾಗಿ ಬಿಡುವುದು. ಸನ್ಯಾಸಿಗಳೇ ತಮ್ಮ ಆಶ್ರಮವನ್ನು ಬಿಟ್ಟು ಬಿಡುವರು. ಇದು
ಕೊನೆಯಲ್ಲಿ ಆಗುವುದು. ತಂದೆಯು ಹೀಗೀಗೆ ಮಾಡಿ ಎಂದು ಸಲಹೆ ನೀಡುತ್ತಿರುತ್ತಾರೆ. ಈ ತಂದೆಯಂತೂ
ಎಲ್ಲಿಯೂ ಹೊರಗಡೆ ಹೋಗಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ - ಹೋಗಿ ಮಕ್ಕಳಿಂದ ಕಲಿಯಿರಿ ಎಂದು.
ಮಕ್ಕಳಿಗೆ ತಿಳಿಸಿಕೊಡುವ ಎಲ್ಲಾ ಯುಕ್ತಿಗಳನ್ನು ಹೇಳುತ್ತಿರುತ್ತಾರೆ. ಇಂತಹ ಕಾರ್ಯ ಮಾಡಿ ತೋರಿಸಿ,
ಮನುಷ್ಯರ ಬಾಯಿಂದ ವಾಹ್! ವಾಹ್! ಎಂಬ ಶಬ್ಧ ಹೊರಡಲಿ. ಗಾಯನವೂ ಇದೆ - ಶಕ್ತಿಯರಿಂದ ಭಗವಂತನು
ಜ್ಞಾನ ಬಾಣವನ್ನು ಹೊಡೆಸಿದರೆಂದು. ಇವು ಜ್ಞಾನ ಬಾಣಗಳಾಗಿವೆ, ಈ ಬಾಣಗಳು ನಿಮ್ಮನ್ನು ಈ
ಪ್ರಪಂಚದಿಂದ ಆ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತಾರೆ. ಆದ್ದರಿಂದ ನೀವು ಮಕ್ಕಳು ಬಹಳ ವಿಶಾಲ
ಬುದ್ಧಿಯವರಾಗಬೇಕಾಗಿದೆ. ಒಂದು ಸ್ಥಳದಲ್ಲಾದರೂ ನಿಮ್ಮ ಹೆಸರೇ ಪ್ರಸಿದ್ಧವಾಗಿ ಸರ್ಕಾರಕ್ಕೆ
ತಿಳಿಯಿತೆಂದರೆ ನಿಮ್ಮದು ಬಹಳ ಪ್ರಭಾವ ಬೀರುವುದು. ಒಂದು ಸ್ಥಳದಿಂದಲೇ ಯಾರಾದರೂ 5-7 ಮಂದಿ
ಒಳ್ಳೆಯ ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಂಡರೆ ಅವರೇ ಪತ್ರಿಕೆಗಳಲ್ಲಿ ಹಾಕಿಸತೊಡಗುತ್ತಾರೆ. ಈ
ಬಿ.ಕೆ.ಗಳು ವೇಶ್ಯೆಯರಿಂದಲೂ ಆ ವೃತ್ತಿಯನ್ನು ಬಿಡಿಸಿ, ಶಿವಾಲಯದ ಮಾಲೀಕರನ್ನಾಗಿ ಮಾಡುತ್ತಾರೆಂದರೆ
ಹೇಳುತ್ತಾರೆ, ಬಹಳ ವಾಹ್! ವಾಹ್! ಆಗುತ್ತದೆ. ಹಣ ಇತ್ಯಾದಿಗಳೆಲ್ಲವನ್ನೂ ಅವರು ತೆಗೆದುಕೊಂಡು
ಬರುತ್ತಾರೆ. ನೀವು ಹಣವನ್ನೇನು ಮಾಡುತ್ತೀರಿ! ನೀವು ದೊಡ್ಡ-ದೊಡ್ಡ ಸೇವಾಕೇಂದ್ರಗಳನ್ನು ತೆರೆಯಿರಿ,
ಹಣದಿಂದ ಚಿತ್ರ ಇತ್ಯಾದಿಗಳನ್ನು ಮಾಡಿಸಬಹುದು. ಮನುಷ್ಯರು ನೋಡಿ ಬಹಳ ಆಶ್ಚರ್ಯಚಕಿತರಾಗುತ್ತಾರೆ.
ಮೊಟ್ಟ ಮೊದಲು ನಿಮಗೆ ಬಹುಮಾನ ಕೊಡಬೇಕೆಂದು ಹೇಳುತ್ತಾರೆ. ಸರ್ಕಾರಿ ಕಟ್ಟಡಗಳಲ್ಲಿಯೂ ನಿಮ್ಮ ಈ
ಚಿತ್ರಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇವುಗಳ ಮೇಲೆ ಬಹಳ ಪ್ರಭಾವಿತರಾಗುತ್ತಾರೆ ಅಂದಮೇಲೆ
ನಿಮಗೆ ಇದೇ ಬಯಕೆಯಿರಬೇಕು - ಮನುಷ್ಯರನ್ನು ಹೇಗೆ ದೇವತೆಗಳನ್ನಾಗಿ ಮಾಡುವುದು? ಇದಂತೂ ನಿಮಗೆ
ತಿಳಿದಿದೆ- ಯಾರು ಕಲ್ಪದ ಹಿಂದೆ ಆಸ್ತಿಯನ್ನು ತೆಗೆದುಕೊಂಡಿದ್ದರೋ ಅವರೇ ತೆಗೆದುಕೊಳ್ಳುವರು.
ಇಷ್ಟೆಲ್ಲಾ ಹಣ ಇತ್ಯಾದಿಗಳನ್ನು ಬಿಟ್ಟು ಬರುವುದು ಪರಿಶ್ರಮವಿದೆ. ತಂದೆಯು ತಿಳಿಸಿದರು - ಮನೆ-ಮಠ,
ಮಿತ್ರ ಸಂಬಂಧಿಗಳು ಇತ್ಯಾದಿಯೇನೂ ನನ್ನದಲ್ಲ. ನನಗೇನೂ ನೆನಪಿಗೆ ಬರುವುದಿಲ್ಲ. ನೀವು ಮಕ್ಕಳಿಗೆ
ತಂದೆಯ ವಿನಃ ಮತ್ತ್ಯಾರೂ ಇಲ್ಲ. ಎಲ್ಲವನ್ನು ಹೀಗೆ ಬ್ರಹ್ಮಾ ತಂದೆಯು ತ್ಯಾಗ ಮಾಡಿ ಬಿಟ್ಟರು
ಅಂದಮೇಲೆ ಬುದ್ಧಿಯು ಮತ್ತೆಲ್ಲಿ ಹೋಗುವುದು? ತಂದೆಗೆ ರಥವನ್ನು ಕೊಟ್ಟಿದ್ದಾರೆ. ನೀವು ಹೇಗೋ
ಅದೇರೀತಿ ಇವರೂ ಓದುತ್ತಿದ್ದಾರೆ, ಕೇವಲ ತಂದೆಗೆ ಬಾಡಿಗೆಯಾಗಿ ಕೊಟ್ಟಿದ್ದಾರೆ.
ನೀವು ತಿಳಿದುಕೊಂಡಿದ್ದೀರಿ, ನಾವು ಸೂರ್ಯವಂಶಿ ಮನೆತನದಲ್ಲಿ ಬರುವುದಕ್ಕಾಗಿ ಪುರುಷಾರ್ಥ
ಮಾಡುತ್ತಿದ್ದೇವೆ. ಇದು ನರನಿಂದ ನಾರಾಯಣನಾಗುವ ಕಥೆಯಾಗಿದೆ. ಆತ್ಮಕ್ಕೆ ಮೂರನೆಯ ನೇತ್ರವು
ಸಿಗುತ್ತದೆ. ನಾವಾತ್ಮಗಳು ಓದಿ ಜ್ಞಾನವನ್ನು ಕೇಳಿ ದೇವತೆಗಳಾಗುತ್ತಿದ್ದೇವೆ ಮತ್ತೆ ನಾವೇ
ರಾಜಾಧಿರಾಜರಾಗುತ್ತೇವೆ. ಶಿವ ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಡಬಲ್
ಕಿರೀಟಧಾರಿಗಳನ್ನಾಗಿ ಮಾಡುತ್ತೇನೆ. ಡ್ರಾಮಾನುಸಾರ ಕಲ್ಪದ ಹಿಂದಿನಂತೆ ನಿಮ್ಮ ಬುದ್ಧಿಯು ಈಗ ಎಷ್ಟು
ವಿಶಾಲವಾಗಿದೆ! ಮತ್ತು ನೆನಪಿನ ಯಾತ್ರೆಯಲ್ಲಿಯೇ ಇರಬೇಕಾಗಿದೆ. ಸೃಷ್ಟಿಚಕ್ರವನ್ನೂ ನೆನಪು ಮಾಡಬೇಕು.
ಹಳೆಯ ಪ್ರಪಂಚವನ್ನು ಬುದ್ಧಿಯಿಂದ ಮರೆಯಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಬುದ್ಧಿಯಲ್ಲಿರಲಿ - ಈಗ ನಮಗಾಗಿ ಹೊಸ ಪ್ರಪಂಚದ ಸ್ಥಾಪನೆಯಾಗುತ್ತಿದೆ. ಈ ದುಃಖದ ಹಳೆಯ ಪ್ರಪಂಚವು
ಸಮಾಪ್ತಿಯಾಯಿತೆಂದರೆ ಆಯಿತು. ಈ ಹಳೆಯ ಪ್ರಪಂಚವು ನಿಮಗೆ ಇಷ್ಟವಾಗಲೇಬಾರದು.
2. ಹೇಗೆ ತಂದೆಯು ತನ್ನದೆಲ್ಲವನ್ನೂ ಸಫಲ ಮಾಡಿ ಬಿಟ್ಟರು. ಆದ್ದರಿಂದ ಬುದ್ಧಿಯು ಎಲ್ಲಿಯೂ
ಹೋಗಲಿಲ್ಲ ಅದೇರೀತಿ ಫಾಲೋ ಫಾದರ್ ಮಾಡಬೇಕಾಗಿದೆ. ಹೃದಯದಲ್ಲಿ ಕೇವಲ ಇದೇ ಬಯಕೆಯಿರಲಿ - ನಾವು
ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಸೇವೆ ಮಾಡಬೇಕು, ಈ ವೇಶ್ಯಾಲಯವನ್ನು ಶಿವಾಲಯವನ್ನಾಗಿ
ಮಾಡಬೇಕು.
ವರದಾನ:
ಮುರುಳಿಯ ಸ್ವರದ
ಮುಖಾಂತರ ಮಾಯೆಯನ್ನು ಸರೆಂಡರ್ ಮಾಡಿಸುವಂತಹ ಮಾಸ್ಟರ್ ಮುರಳೀಧರ ಭವ.
ಮುರಳಿಗಳಂತೂ ಬಹಳಷ್ಟು
ಕೇಳಿರುವಿರಿ ಈಗ ಈ ರೀತಿ ಮುರಳಿಧರರಾಗಿ ಯಾವುದರಿಂದ ಮಾಯೆ ಮುರಳಿಯ ಮುಂದೆ ಸರೆಂಡರ್ ಆಗಿ ಬಿಡಬೇಕು.
ಮುರಳಿಯ ರಹಸ್ಯದ ಸ್ವರ ಒಂದುವೇಳೆ ಸದಾ ನುಡಿಯುತ್ತಿದ್ದರೆ ಆಗ ಮಾಯೆ ಸದಾಕಾಲಕ್ಕಾಗಿ ಸರೆಂಡರ್ ಆಗಿ
ಬಿಡುವುದು. ಮಾಯೆಯ ಮುಖ್ಯ ಸ್ವರೂಪ ಕಾರಣದ ರೂಪದಲ್ಲಿ ಬರುವುದು. ಯಾವಾಗ ಮುರಳಿಯ ಮುಖಾಂತರ ಕಾರಣದ
ನಿವಾರಣೆ ಸಿಕ್ಕಿ ಬಿಡುವುದು. ಆಗ ಮಾಯೆ ಸದಾಕಾಲಕ್ಕಾಗಿ ಸಮಾಪ್ತಿಯಾಗಿ ಬಿಡುವುದು. ಕಾರಣ ಸಮಾಪ್ತಿ
ಅರ್ಥಾತ್ ಮಾಯೆ ಸಮಾಪ್ತಿ.
ಸ್ಲೋಗನ್:
ಅನುಭವಿ ಸ್ವರೂಪರಾದಾಗ
ಮುಖದಿಂದ ಅದೃಷ್ಟದ ಹೊಳಪು ಕಂಡು ಬರುವುದು.