12.10.20 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ತಂದೆಯು
ನೀವು ಮಕ್ಕಳಿಗೆ ಈಜುವುದನ್ನು ಕಲಿಸಲು ಬಂದಿದ್ದಾರೆ, ಇದರಿಂದ ನೀವು ಈ ಪ್ರಪಂಚದಿಂದ ಪಾರಾಗುತ್ತೀರಿ,
ನಿಮಗಾಗಿ ಪ್ರಪಂಚವೇ ಬದಲಾಗಿ ಬಿಡುತ್ತದೆ"
ಪ್ರಶ್ನೆ:
ಯಾರು ತಂದೆಗೆ
ಸಹಯೋಗಿಗಳಾಗುವರೋ ಅವರಿಗೆ ಸಹಯೋಗದ ಪ್ರತಿಯಾಗಿ ಏನು ಪ್ರಾಪ್ತಿಯಾಗುತ್ತದೆ?
ಉತ್ತರ:
ಯಾವ ಮಕ್ಕಳು ಈಗ ತಂದೆಗೆ ಸಹಯೋಗಿಗಳಾಗುವರೋ ಅವರನ್ನು ತಂದೆಯು ಈ ರೀತಿ ಮಾಡಿ ಬಿಡುತ್ತಾರೆ, ಅವರಿಗೆ
ಅರ್ಧ ಕಲ್ಪದವರೆಗೆ ಯಾರಿಂದಲೂ ಸಹಯೋಗವನ್ನು ಪಡೆಯುವ ಹಾಗೂ ಸಲಹೆಯನ್ನು ತೆಗೆದುಕೊಳ್ಳುವ
ಅವಶ್ಯಕತೆಯೇ ಇರುವುದಿಲ್ಲ. ಎಷ್ಟು ದೊಡ್ಡ ತಂದೆಯಾಗಿದ್ದಾರೆ, ತಿಳಿಸುತ್ತಾರೆ - ಮಕ್ಕಳೇ, ನೀವು
ನನ್ನ ಸಹಯೋಗಿಗಳಾಗಲಿಲ್ಲವೆಂದರೆ ನಾನು ಸ್ವರ್ಗದ ಸ್ಥಾಪನೆಯನ್ನು ಹೇಗೆ ಮಾಡಲಿ?
ಓಂ ಶಾಂತಿ.
ಮಧುರಾತಿ ಮಧುರ ನಂಬರ್ವಾರ್ ಅತಿ ಮಧುರ ಆತ್ಮೀಯ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ
ಏಕೆಂದರೆ ಬಹಳ ಮಕ್ಕಳು ತಿಳುವಳಿಕೆಹೀನರಾಗಿ ಬಿಟ್ಟಿದ್ದಾರೆ. ರಾವಣನು ಬಹಳ ತಿಳುವಳಿಕೆಹೀನರನ್ನಾಗಿ
ಮಾಡಿ ಬಿಟ್ಟಿದ್ದಾನೆ. ಈಗ ತಂದೆಯು ನಮ್ಮನ್ನು ಎಷ್ಟು ಬುದ್ಧಿವಂತರನ್ನಾಗಿ ಮಾಡುತ್ತಾರೆ! ಯಾರಾದರೂ
ಐ.ಸಿ.ಎಸ್., ಪರೀಕ್ಷೆಯನ್ನು ತೇರ್ಗಡೆ ಮಾಡಿದರೆ ಇವರು ಬಹಳ ದೊಡ್ಡ ಪರೀಕ್ಷೆಯನ್ನು ತೇರ್ಗಡೆ
ಮಾಡಿದ್ದಾರೆಂದು ತಿಳಿಯುತ್ತಾರೆ. ಈಗ ನೀವಂತೂ ನೋಡಿ, ಎಷ್ಟು ದೊಡ್ಡ ಪರೀಕ್ಷೆಯನ್ನು ತೇರ್ಗಡೆ
ಮಾಡುತ್ತೀರಿ. ಸ್ವಲ್ಪ ಆಲೋಚಿಸಿ, ನಿಜವಾಗಿಯೂ ಓದಿಸುವವರು ಯಾರು? ಓದುವವರು ಯಾರಾಗಿದ್ದಾರೆ? ನಾವು
ಕಲ್ಪ-ಕಲ್ಪವೂ ಪ್ರತೀ 5000 ವರ್ಷಗಳ ನಂತರ ತಂದೆ, ಶಿಕ್ಷಕ, ಸದ್ಗುರುವಿನೊಂದಿಗೆ ಮಿಲನ ಮಾಡುತ್ತಾ
ಇರುತ್ತೇವೆಂಬ ನಿಶ್ಚಯವೂ ಇದೆ. ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ - ನಾವು ಎಷ್ಟು
ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮೂಲಕ ಶ್ರೇಷ್ಠ ಆಸ್ತಿಯನ್ನು ಪಡೆಯುತ್ತೇವೆ. ಶಿಕ್ಷಕರೂ ಸಹ
ವಿದ್ಯೆಯನ್ನು ಓದಿಸಿ ಆಸ್ತಿಯನ್ನು ಕೊಡುತ್ತಾರಲ್ಲವೆ. ನಿಮಗೂ ಸಹ ತಂದೆಯು ಓದಿಸಿ ನಿಮಗಾಗಿ
ಪ್ರಪಂಚವನ್ನೇ ಪರಿವರ್ತನೆ ಮಾಡಿ ಬಿಡುತ್ತಾರೆ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಮಹಿಮೆ ಮಾಡುತ್ತಾರೆ.
ಅವರ ಮೂಲಕ ನೀವೀಗ ತಮ್ಮ ಆಸ್ತಿಯನ್ನು ಪಡೆಯುತ್ತಿದ್ದೀರಿ. ಹಳೆಯ ಪ್ರಪಂಚವು ಬದಲಾಗುತ್ತಿದೆ
ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ನಾವೆಲ್ಲರೂ ಶಿವ ತಂದೆಯ ಮಕ್ಕಳಾಗಿದ್ದೇವೆಂದು
ಹೇಳುತ್ತೀರಿ. ತಂದೆಯೂ ಸಹ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಿ ಬರಬೇಕಾಗುತ್ತದೆ. ತ್ರಿಮೂರ್ತಿ
ಚಿತ್ರದಲ್ಲಿಯೂ ಸಹ ಬ್ರಹ್ಮಾರವರ ಮೂಲಕ ಹೊಸ ಪ್ರಪಂಚದ ಸ್ಥಾಪನೆಯೆಂದು ತೋರಿಸುತ್ತಾರೆ ಅಂದಮೇಲೆ
ಅವಶ್ಯವಾಗಿ ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣ-ಬ್ರಾಹ್ಮಣಿಯರು ಬೇಕು. ಬ್ರಹ್ಮಾರವರಂತೂ ಹೊಸ
ಪ್ರಪಂಚವನ್ನು ಸ್ಥಾಪನೆ ಮಾಡುವುದಿಲ್ಲ. ಶಿವ ತಂದೆಯು ರಚಯಿತನಾಗಿದ್ದಾರೆ. ನಾನು ಬಂದು
ಯುಕ್ತಿಯಿಂದ ಹಳೆಯ ಪ್ರಪಂಚದ ವಿನಾಶ ಮಾಡಿಸಿ ಹೊಸ ಪ್ರಪಂಚವನ್ನಾಗಿ ಮಾಡುತ್ತೇನೆಂದು ತಿಳಿಸುತ್ತಾರೆ.
ಹೊಸ ಪ್ರಪಂಚದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ. ಜನಸಂಖ್ಯೆಯು ಕಡಿಮೆಯಾಗಲಿ ಎಂದು ಸರ್ಕಾರವು
ಪ್ರಯತ್ನ ಪಡುತ್ತಿರುತ್ತದೆ ಆದರೆ ಕಡಿಮೆಯಂತೂ ಆಗುವುದಿಲ್ಲ. ಯುದ್ಧಗಳಲ್ಲಿ ಕೋಟ್ಯಾಂತರ ಮಂದಿ
ಸಾವನ್ನಪ್ಪುತ್ತಾರೆ ಆದರೆ ಮನುಷ್ಯರು ಕಡಿಮೆಯಾಗುತ್ತಾರೆಯೇ? ಜನಸಂಖ್ಯೆಯಂತೂ ಇನ್ನೂ ಹೆಚ್ಚಾಗುತ್ತಾ
ಹೋಗುತ್ತದೆ. ಇದು ನಿಮಗೇ ತಿಳಿದಿದೆ. ನಿಮ್ಮ ಬುದ್ಧಿಯಲ್ಲಿ ವಿಶ್ವದ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ.
ನೀವೀಗ ತಮ್ಮನ್ನು ವಿದ್ಯಾರ್ಥಿಗಳೆಂದೂ ತಿಳಿಯುತ್ತೀರಿ ಮತ್ತು ಈಜುವುದನ್ನೂ ಕಲಿಯುತ್ತೀರಿ. ನಮ್ಮ
ದೋಣಿಯನ್ನು ಪಾರು ಮಾಡು ಎಂದು ಹೇಳುತ್ತಾರಲ್ಲವೆ. ಅನುಭವಿಗಳು ಈಜುವುದನ್ನು ಕಲಿಸುತ್ತಾರೆ, ಈಗ
ನಿಮ್ಮ ಈಜು ನೋಡಿ, ಹೇಗಿದೆ! ಒಮ್ಮೆಲೆ ಮೇಲೆ ಹೊರಟು ಹೋಗುತ್ತೀರಿ ಮತ್ತೆ ಇಲ್ಲಿಗೆ ಬರುತ್ತೀರಿ.
ಎಷ್ಟು ಮೈಲಿಗಳು ಮೇಲೆ ಹೋದೆವೆಂದು ಅಲ್ಲಿ ತೋರಿಸುತ್ತಾರೆ. ಆದರೆ ನೀವಾತ್ಮಗಳು ಎಷ್ಟು ಮೈಲಿಗಳಷ್ಟು
ಮೇಲೆ ಹೋಗುತ್ತೀರಿ! ಅವರದಂತು ಸ್ಥೂಲವಾದುದಾಗಿದೆ, ಆದ್ದರಿಂದ ಎಣಿಕೆ ಮಾಡುತ್ತಾರೆ. ನಿಮ್ಮ
ಪರಮಧಾಮವು ಲೆಕ್ಕವಿಲ್ಲದಷ್ಟು ದೂರವಿದೆ. ನೀವು ತಿಳಿದುಕೊಂಡಿದ್ದೀರಿ - ನಾವಾತ್ಮಗಳು ಮನೆಗೆ ಹೊರಟು
ಹೋಗುತ್ತೇವೆ ಎಲ್ಲಿ ಸೂರ್ಯ, ಚಂದ್ರ ಮೊದಲಾದವರಿಲ್ಲ. ಅದು ನಮ್ಮ ಮನೆಯಾಗಿದೆ, ನಾವು ಅಲ್ಲಿನ
ನಿವಾಸಿಗಳಾಗಿದ್ದೇವೆಂದು ನಿಮಗೆ ಖುಷಿಯಿದೆ. ಮನುಷ್ಯರು ಭಕ್ತಿ ಮಾಡುತ್ತಾರೆ, ಮುಕ್ತಿಧಾಮದಲ್ಲಿ
ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತಾರೆ ಆದರೆ ಯಾರೂ ಹೋಗಲು ಸಾಧ್ಯವಿಲ್ಲ. ಮುಕ್ತಿಧಾಮದಲ್ಲಿ
ಭಗವಂತನೊಂದಿಗೆ ಮಿಲನ ಮಾಡುವ ಪ್ರಯತ್ನ ಪಡುತ್ತಾರೆ. ಅನೇಕ ಪ್ರಕಾರದ ಪ್ರಯತ್ನಗಳನ್ನೂ ಮಾಡುತ್ತಾರೆ.
ನಾವು ಜ್ಯೋತಿಯಲ್ಲಿ ಸಮಾವೇಶವಾಗಬೇಕೆಂದು ಕೆಲವರು ಹೇಳುತ್ತಾರೆ, ಇನ್ನೂ ಕೆಲವರು ಮುಕ್ತಿಧಾಮದಲ್ಲಿ
ಹೋಗಬೇಕೆಂದು ಹೇಳುತ್ತಾರೆ. ಮುಕ್ತಿಧಾಮದ ಬಗ್ಗೆ ಯಾರಿಗೂ ತಿಳಿದಿಲ್ಲ. ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ತಂದೆಯು ನಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದಾರೆ. ಮಧುರಾತಿ ಮಧುರ
ತಂದೆಯು ಬಂದಿದ್ದಾರೆ, ನಮ್ಮನ್ನು ಮನೆಗೆ ಕರೆದುಕೊಂಡು ಹೋಗಲು ಯೋಗ್ಯರನ್ನಾಗಿ ಮಾಡುತ್ತಾರೆ
ಯಾವುದಕ್ಕಾಗಿ ಅರ್ಧಕಲ್ಪ ಪುರುಷಾರ್ಥ ಮಾಡಿದರೂ ಸಹ ಆಗಲು ಸಾಧ್ಯವಾಗಲಿಲ್ಲ. ಜ್ಯೋತಿಯಲ್ಲಿ ಯಾರು
ಸಮಾವೇಶವೂ ಅಗಲಿಲ್ಲ, ಮುಕ್ತಿಧಾಮದಲ್ಲಿಯೂ ಹೋಗಲಿಲ್ಲ, ಮೋಕ್ಷವನ್ನೂ ಪಡೆಯಲಿಲ್ಲ. ಏನೆಲ್ಲಾ
ಪುರುಷಾರ್ಥ ಮಾಡಿದರೋ ಅದು ವ್ಯರ್ಥವಾಯಿತು. ನೀವೀಗ ಬ್ರಾಹ್ಮಣ ಕುಲ ಭೂಷಣರ ಪುರುಷಾರ್ಥವು ಸತ್ಯ
ಸಿದ್ಧವಾಗುತ್ತದೆ. ಈ ಆಟವು ಹೇಗೆ ಮಾಡಲ್ಪಟ್ಟಿದೆ! ಈಗ ನಿಮ್ಮನ್ನು ಆಸ್ತಿಕರೆಂದು ಕರೆಯಲಾಗುತ್ತದೆ.
ತಂದೆಯನ್ನು ನೀವು ಬಹಳ ಚೆನ್ನಾಗಿ ಅರಿತುಕೊಂಡಿದ್ದೀರಿ ಮತ್ತು ತಂದೆಯ ಮೂಲಕ ಸೃಷ್ಟಿಚಕ್ರವನ್ನೂ
ಅರಿತುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ಮುಕ್ತಿ-ಜೀವನ್ಮುಕ್ತಿಯ ಜ್ಞಾನವು ಯಾರಲ್ಲಿಯೂ
ಇಲ್ಲ. ದೇವತೆಗಳಲ್ಲಿಯೂ ಇರುವುದಿಲ್ಲ. ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ. ಯಾರನ್ನು ಹೇಗೆ
ಕರೆದುಕೊಂಡು ಹೋಗುತ್ತಾರೆ, ಎಷ್ಟೊಂದು ಮಂದಿ ಗುರುಗಳಿದ್ದಾರೆ ಅವರಿಗೆ ಅನುಯಾಯಿಗಳು ಎಷ್ಟೊಂದು
ಮಂದಿಯಾಗುತ್ತಾರೆ! ಸತ್ಯ-ಸತ್ಯವಾದ ಸದ್ಗುರು ಶಿವ ತಂದೆಯಾಗಿದ್ದಾರೆ. ಅವರಿಗಂತೂ ಚರಣಗಳಿಲ್ಲ,
ತಂದೆಯು ತಿಳಿಸುತ್ತಾರೆ - ನನಗಂತೂ ಚರಣಗಳೇ ಇಲ್ಲವೆಂದಮೇಲೆ ನಾನು ಹೇಗೆ ಪೂಜೆ ಮಾಡಿಸಿಕೊಳ್ಳಲಿ?
ಮಕ್ಕಳು ವಿಶ್ವದ ಮಾಲೀಕರಾಗುತ್ತೀರೆಂದರೆ ನಿಮ್ಮಿಂದ ಪೂಜೆ ಮಾಡಿಸಿಕೊಳ್ಳಲೇ? ಭಕ್ತಿಮಾರ್ಗದಲ್ಲಿ
ಮಕ್ಕಳು ತಂದೆಯ ಕಾಲಿಗೆ ಬೀಳುತ್ತಾರೆ, ವಾಸ್ತವದಲ್ಲಿ ತಂದೆಯ ಆಸ್ತಿಗೆ ಮಕ್ಕಳು ಮಾಲೀಕರಾಗಿದ್ದೀರಿ
ಆದರೆ ನಮ್ರತೆಯನ್ನು ತೋರಿಸುತ್ತಾರೆ. ಚಿಕ್ಕ ಮಕ್ಕಳು ಮೊದಲಾದವರು ಎಲ್ಲರೂ ಕಾಲಿಗೆ ಬೀಳುತ್ತಾರೆ.
ಇಲ್ಲಿ ತಂದೆಯು ತಿಳಿಸುತ್ತಾರೆ - ನಿಮಗೆ ಕಾಲಿಗೆ ಬೀಳುವುದರಿಂದಲೂ ಬಿಡಿಸುತ್ತೇನೆ. ಎಷ್ಟು ದೊಡ್ಡ
ತಂದೆಯಾಗಿದ್ದಾರೆ! ತಿಳಿಸುತ್ತಾರೆ - ನೀವು ಮಕ್ಕಳು ನನ್ನ ಸಹಯೋಗಿಗಳಾಗಿದ್ದೀರಿ. ನೀವು
ಸಹಯೋಗಿಗಳಾಗದಿದ್ದರೆ ನಾನು ಸ್ವರ್ಗದ ಸ್ಥಾಪನೆಯನ್ನು ಹೇಗೆ ಮಾಡಲಿ? ತಂದೆಯು ತಿಳಿಸುತ್ತಾರೆ -
ಮಕ್ಕಳೇ, ನೀವೀಗ ಸಹಯೋಗಿಗಳಾಗಿ ಮತ್ತೆ ನಾನು ನಿಮ್ಮನ್ನು ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತೇನೆ,
ನಿಮಗೆ ಯಾರಿಂದಲೂ ಸಹಯೋಗ ಪಡೆಯುವ ಅವಶ್ಯಕತೆಯಿರುವುದಿಲ್ಲ. ನಿಮಗೆ ಯಾರ ಸಲಹೆಯ ಅವಶ್ಯಕತೆಯೂ
ಇರುವುದಿಲ್ಲ. ಇಲ್ಲಿ ತಂದೆಯು ಮಕ್ಕಳ ಸಹಯೋಗವನ್ನು ತೆಗೆದುಕೊಳ್ಳುತ್ತಿದ್ದಾರೆ. ತಂದೆಯು
ಹೇಳುತ್ತಿದ್ದಾರೆ - ಈಗ ಪತಿತರಾಗಬೇಡಿ, ಮಾಯೆಯಿಂದ ಸೋಲನ್ನನುಭವಿಸಬೇಡಿ ಇಲ್ಲವಾದರೆ ಹೆಸರನ್ನು
ಹಾಳು ಮಾಡುವಿರಿ. ಮಲ್ಲ ಯುದ್ಧದಲ್ಲಿ ಯಾರಾದರೂ ಗೆಲ್ಲುತ್ತಾರೆಂದರೆ ವಾಹ್! ವಾಹ್! ಎನ್ನುತ್ತಾರೆ.
ಸೋಲನ್ನನುಭವಿಸುವವರ ಮುಖವು ಸಪ್ಪೆಯಾಗಿ ಬಿಡುತ್ತದೆ. ಮಕ್ಕಳು ಇಲ್ಲಿಯೂ ಸೋಲನ್ನನುಭವಿಸುತ್ತಾರೆ.
ಇಲ್ಲಿ ಸೋಲುವವರಿಗೆ ಮುಖ ಕಪ್ಪು ಮಾಡಿಕೊಂಡರೆಂದು ಹೇಳಲಾಗುತ್ತದೆ. ಸುಂದರರಾಗಲು ಬಂದರು ಆದರೆ ಏನು
ಮಾಡಿ ಬಿಡುತ್ತಾರೆ. ಮಾಡಿಕೊಂಡಿರುವ ಸಂಪಾದನೆಯೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ ಮತ್ತೆ ಹೊಸದಾಗಿ
ಆರಂಭಿಸಬೇಕಾಗುತ್ತದೆ. ತಂದೆಗೆ ಸಹಯೋಗಿಗಳಾಗಿ ಮತ್ತೆ ಸೋಲನ್ನನುಭವಿಸಿ ಹೆಸರನ್ನು ಕೆಡಿಸುತ್ತಾರೆ.
ಇಲ್ಲಿ ಎರಡು ಗುಂಪುಗಳಿವೆ - ಒಬ್ಬರು ಮಾಯೆಯ ಶಿಷ್ಯರು, ಇನ್ನೊಬ್ಬರು ಈಶ್ವರನ ಶಿಷ್ಯರು. ನೀವು
ತಂದೆಯನ್ನು ಪ್ರೀತಿ ಮಾಡುತ್ತೀರಿ. ವಿನಾಶ ಕಾಲೇ ವಿಪರೀತ ಬುದ್ಧಿಯವರೆಂದು ಗಾಯನವೂ ಇದೆ. ನಿಮ್ಮದು
ಪ್ರೀತಿ ಬುದ್ಧಿಯಾಗಿದೆ ಅಂದಮೇಲೆ ನೀವು ಹೆಸರನ್ನು ಕೆಡಿಸಬೇಡಿ. ನೀವು ಪ್ರೀತಿ ಬುದ್ಧಿಯವರು
ಮಾಯೆಯಿಂದ ಸೋಲನ್ನೇಕೆ ಅನುಭವಿಸುತ್ತೀರಿ? ಸೋಲುವವರಿಗೆ ದುಃಖವಾಗುತ್ತದೆ, ಗೆಲ್ಲುವವರು ಚಪ್ಪಾಳೆ
ತಟ್ಟುತ್ತಾ, ವಾಹ್ ವಾಹ್ ಎನ್ನುತ್ತಿರುತ್ತಾರೆ. ನಾವಂತೂ ಶಕ್ತಿಶಾಲಿಗಳಾಗಿದ್ದೇವೆಂದು ನೀವು
ತಿಳಿದುಕೊಳ್ಳುತ್ತೀರಿ ಅಂದಮೇಲೆ ಈಗ ಮಾಯೆಯನ್ನು ಖಂಡಿತ ಗೆಲ್ಲಬೇಕಾಗಿದೆ. ತಂದೆಯು ತಿಳಿಸುತ್ತಾರೆ
– ದೇಹ ಸಹಿತವಾಗಿ ಏನೆಲ್ಲವನ್ನೂ ನೋಡುತ್ತೀರೋ ಅದೆಲ್ಲವನ್ನೂ ಮರೆಯುತ್ತಾ ಹೋಗಿ. ನನ್ನೊಬ್ಬನನ್ನೇ
ನೆನಪು ಮಾಡಿ. ಮಾಯೆಯು ನಿಮ್ಮನ್ನು ಸತೋಪ್ರಧಾನರಿಂದ ತಮೋಪ್ರಧಾನರನ್ನಾಗಿ ಮಾಡಿ ಬಿಟ್ಟಿದೆ, ಈಗ
ಪುನಃ ಸತೋಪ್ರಧಾನರಾಗಬೇಕಾಗಿದೆ. ಮಾಯಾಜೀತರು ಜಗಜ್ಜೀತರಾಗಬೇಕಾಗಿದೆ. ಇದು ಸೋಲು ಮತ್ತು ಗೆಲುವು,
ಸುಖ-ದುಃಖದ ಆಟವಾಗಿದೆ. ರಾವಣ ರಾಜ್ಯದಲ್ಲಿ ಸೋಲನ್ನನುಭವಿಸುತ್ತಾರೆ, ಈಗ ತಂದೆಯು ಪುನಃ
ಶ್ರೇಷ್ಠರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಒಬ್ಬ ಶಿವ ತಂದೆಯ ಜಯಂತಿಯೇ ಅತಿ
ಶ್ರೇಷ್ಠ ಜಯಂತಿಯಾಗಿದೆ. ಈಗ ನೀವು ಮಕ್ಕಳು ಈ ಲಕ್ಷ್ಮಿ-ನಾರಾಯಣರಂತೆ ಆಗಬೇಕು. ಸತ್ಯಯುಗದಲ್ಲಿ
ಮನೆ-ಮನೆಯಲ್ಲಿ ದೀಪಾವಳಿಯಿರುತ್ತದೆ, ಎಲ್ಲರ ಜ್ಯೋತಿಯು ಬೆಳಗುತ್ತದೆ. ಮೈನ್ ಪವರ್ನಿಂದ ಜ್ಯೋತಿಯು
ಬೆಳಗುತ್ತದೆ. ತಂದೆಯು ಎಷ್ಟು ಸಹಜ ರೀತಿಯಲ್ಲಿ ಕುಳಿತು ತಿಳಿಸುತ್ತಾರೆ. ತಂದೆಯ ವಿನಃ ಮಧುರಾತಿ
ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮುದ್ದಾದ ಮಕ್ಕಳೇ ಎಂದು ಯಾರು ಹೇಳುವರು! ಆತ್ಮಿಕ ತಂದೆಯೇ
ಹೇಳುತ್ತಾರೆ - ಹೇ ನನ್ನ ಮಧುರ, ಮುದ್ದಾದ ಮಕ್ಕಳೇ, ನೀವು ಅರ್ಧಕಲ್ಪದಿಂದ ಭಕ್ತಿ ಮಾಡುತ್ತಾ
ಬಂದಿದ್ದೀರಿ. ಯಾರೊಬ್ಬರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ತಂದೆಯೇ ಬಂದು ಎಲ್ಲರನ್ನೂ
ಕರೆದುಕೊಂಡು ಹೋಗುತ್ತಾರೆ.
ನೀವು ಸಂಗಮಯುಗವನ್ನು ಕುರಿತು ಬಹಳ ಚೆನ್ನಾಗಿ ತಿಳಿಸಬಹುದು. ತಂದೆಯು ಬಂದು ಹೇಗೆ ಎಲ್ಲಾ
ಆತ್ಮಗಳನ್ನು ಕರೆದುಕೊಂಡು ಹೋಗುತ್ತಾರೆ. ಪ್ರಪಂಚದಲ್ಲಿ ಈ ಬೇಹದ್ದಿನ ನಾಟಕವನ್ನು ಯಾರೂ
ತಿಳಿದುಕೊಂಡಿಲ್ಲ. ಇದು ಬೇಹದ್ದಿನ ನಾಟಕವಾಗಿದೆ ಎಂಬುದನ್ನು ನೀವೇ ತಿಳಿದುಕೊಳ್ಳುತ್ತೀರಿ
ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಒಂದುವೇಳೆ ಇದು ಬೇಹದ್ದಿನ ನಾಟಕವೆಂದು ಹೇಳಿದರೂ ಸಹ ನಾಟಕದ
ವರ್ಣನೆಯನ್ನು ಹೇಗೆ ಮಾಡುವರು? ನೀವಿಲ್ಲಿ 84 ಜನ್ಮಗಳ ಚಕ್ರವನ್ನು ಅರಿತಿದ್ದೀರಿ. ನೀವು ಮಕ್ಕಳೇ
ಅರಿತುಕೊಂಡಿದ್ದೀರಿ, ಅಂದಾಗ ನೀವೇ ನೆನಪು ಮಾಡಬೇಕಾಗಿದೆ. ತಂದೆಯು ಎಷ್ಟು ಸಹಜವಾಗಿ
ತಿಳಿಸಿಕೊಡುತ್ತಾರೆ. ಭಕ್ತಿಮಾರ್ಗದಲ್ಲಿ ನೀವು ಎಷ್ಟೋ ಅಲೆದಾಡುತ್ತೀರಿ, ಎಷ್ಟು ದೂರ-ದೂರದವರೆಗೆ
ಗಂಗಾ ಸ್ನಾನ ಮಾಡಲು ಹೋಗುತ್ತೀರಿ. ಒಂದು ಸರೋವರವಿದೆ, ಅದರಲ್ಲಿ ಮುಳುಗಿದರೆ ದೇವತೆಗಳಾಗಿ
ಬಿಡುತ್ತಾರೆಂದು ಹೇಳುತ್ತಾರೆ. ನೀವೀಗ ಜ್ಞಾನ ಸಾಗರನಲ್ಲಿ ಮಿಂದು ಫರಿಶ್ತೆಗಳಾಗಿ ಬಿಡುತ್ತೀರಿ.
ಯಾರಾದರೂ ಚೆನ್ನಾಗಿ ಅಲಂಕಾರ ಮಾಡಿಕೊಂಡರೆ ಇವರು ಹೇಗೆ ಫರಿಶ್ತೆಯಾಗಿ ಬಿಟ್ಟಿದ್ದಾರೆಂದು
ಹೇಳುತ್ತಾರೆ. ಈಗ ನೀವೂ ಸಹ ರತ್ನವಾಗುತ್ತೀರಿ. ಉಳಿದ ಮನುಷ್ಯರಿಗೆ ಹಾರುವುದಕ್ಕೆ ರೆಕ್ಕೆಗಳೇ
ಇಲ್ಲ. ಹೀಗೆ ಹಾರಲು ಸಾಧ್ಯವಿಲ್ಲ. ಆತ್ಮವೇ ಹಾರುತ್ತದೆ, ಆತ್ಮಕ್ಕೆ ರಾಕೆಟ್ ಎಂತಲೂ ಹೇಳುತ್ತಾರೆ.
ಇದು ಬಹಳ ಸೂಕ್ಷ್ಮವಾಗಿದೆ ಯಾವಾಗ ಎಲ್ಲಾ ಆತ್ಮಗಳು ಹೋಗುವರೋ ಆಗ ನೀವು ಮಕ್ಕಳಿಗೆ ಸಾಕ್ಷಾತ್ಕಾರವೂ
ಆಗುವುದು. ಬುದ್ಧಿಯಿಂದ ತಿಳಿದುಕೊಳ್ಳುತ್ತೀರಿ – ಇಲ್ಲಿ ನೀವು ವರ್ಣನೆಯನ್ನೂ ಮಾಡುತ್ತೀರಿ. ಹೇಗೆ
ವಿನಾಶವನ್ನು ನೋಡಲಾಗುತ್ತದೆಯೋ ಹಾಗೆಯೇ ಆತ್ಮಗಳ ಸಮೂಹವೂ ಸಹ ಹೇಗೆ ಹೋಗುತ್ತದೆ ಎಂಬುದನ್ನೂ ಸಹ
ನೀವು ನೋಡಲು ಸಾಧ್ಯತೆಯಿದೆ. ಹನುಮಂತ, ಗಣೇಶ ಮೊದಲಾದವರು ಯಾರೂ ಇಲ್ಲ. ಆದರೆ ಭಕ್ತರ ಭಾವನೆಯನುಸಾರ
ಸಾಕ್ಷಾತ್ಕಾರವಾಗಿ ಬಿಡುತ್ತದೆ. ತಂದೆಯಂತೂ ಬಿಂದುವಾಗಿದ್ದಾರೆ, ಅವರ ವರ್ಣನೆಯನ್ನೇನು ಮಾಡುತ್ತೀರಿ?
ತಂದೆಯು ಅತಿ ಚಿಕ್ಕ ಬಿಂದುವಾಗಿದ್ದಾರೆಂದು ಹೇಳುತ್ತಾರೆ. ಅವರನ್ನು ಈ ಕಣ್ಣುಗಳಿಂದ ನೋಡಲು
ಸಾಧ್ಯವಿಲ್ಲ. ಶರೀರವು ಎಷ್ಟು ದೊಡ್ಡದಾಗಿದೆ, ಇದರಿಂದ ಕರ್ಮ ಮಾಡಬೇಕಾಗಿದೆ. ಆತ್ಮವು ಎಷ್ಟು
ಚಿಕ್ಕದಾಗಿದೆ! ಅದರಲ್ಲಿ 84 ಜನ್ಮಗಳ ಚಕ್ರವು ನಿಗಧಿಯಾಗಿದೆ. ನಾವು 84 ಜನ್ಮಗಳನ್ನು ಹೇಗೆ
ತೆಗೆದುಕೊಳ್ಳುತ್ತೇವೆ, ಆತ್ಮದಲ್ಲಿ ಹೇಗೆ ಪಾತ್ರವು ಅಡಕವಾಗಿದೆ ಎಂಬ ಜ್ಞಾನವಿರುವ ಮನುಷ್ಯರು
ಯಾರೊಬ್ಬರೂ ಇಲ್ಲ, ಆಶ್ಚರ್ಯವಾಗಿದೆ. ಆತ್ಮವೇ ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತದೆ.
ಅದು ಮಿತವಾದ ನಾಟಕ, ಇದು ಬೇಹದ್ದಿನ ನಾಟಕವಾಗಿದೆ. ಬೇಹದ್ದಿನ ತಂದೆಯೇ ಸ್ವಯಂ ಬಂದು ತಮ್ಮ
ಪರಿಚಯವನ್ನು ಕೊಡುತ್ತಾರೆ. ಯಾರು ಒಳ್ಳೆಯ ಸೇವಾಧಾರಿ ಮಕ್ಕಳಿದ್ದಾರೆಯೋ ಅವರು ಯಾರಿಗೆ ಹೇಗೆ
ತಿಳಿಸಬೇಕೆಂದು ವಿಚಾರ ಸಾಗರ ಮಂಥನ ಮಾಡುತ್ತಿರುತ್ತಾರೆ. ನೀವು ಒಬ್ಬೊಬ್ಬರಿಗೂ ಎಷ್ಟೊಂದು ತಲೆ
ಕೆಡಿಸಿಕೊಳ್ಳುತ್ತೀರಿ ಆದರೂ ಸಹ ಬಾಬಾ ನಾವು ತಿಳಿದುಕೊಂಡೇ ಇಲ್ಲ ಎಂದು ಹೇಳಿ ಬಿಡುತ್ತಾರೆ
ಯಾರಾದರೂ ಓದುವುದಿಲ್ಲವೆಂದರೆ ಇವರು ಕಲ್ಲು ಬುದ್ಧಿಯವರೆಂದು ಹೇಳಲಾಗುತ್ತದೆ. ನೀವು ನೋಡುತ್ತೀರಿ,
ಇಲ್ಲಿಯೂ ಸಹ ಏಳುದಿನಗಳಲ್ಲಿಯೇ ಕೆಲವರು ಬಹಳ ಖುಷಿಯಿಂದ ಬಂದು ನಾವು ತಂದೆಯ ಬಳಿ ಹೋಗಬೇಕೆಂದು
ಹೇಳುತ್ತಾರೆ. ಇನ್ನೂ ಕೆಲವರು ಏನನ್ನೂ ತಿಳಿದುಕೊಳ್ಳುವುದಿಲ್ಲ. ಮನುಷ್ಯರಂತೂ ಕೇವಲ ಕಲ್ಲು ಬುದ್ಧಿ,
ಪಾರಸ ಬುದ್ಧಿಯವರೆಂದು ಹೇಳಿ ಬಿಡುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಆತ್ಮವು
ಪವಿತ್ರವಾದಾಗ ಪಾರಸನಾಥನಾಗುತ್ತದೆ. ಪಾರಸನಾಥನ ಮಂದಿರವೂ ಇದೆ. ಸಂಪೂರ್ಣ ಚಿನ್ನದಿಂದಲೇ ಮಾಡಿರುವ
ಮಂದಿರವಿರುವುದಿಲ್ಲ. ಮೇಲೆ ಅಲ್ಪ ಸ್ವಲ್ಪ ಚಿನ್ನವನ್ನು ಹಾಕಿರುತ್ತಾರೆ. ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ನಮಗೆ ಹೂದೋಟದ ಮಾಲೀಕನು ಸಿಕ್ಕಿದ್ದಾರೆ, ಮುಳ್ಳುಗಳಿಂದ ಹೂಗಳಾಗುವ
ಯುಕ್ತಿಯನ್ನು ತಿಳಿಸುತ್ತಾರೆ. ಅಲ್ಲಾನ ಹೂದೋಟವೆಂದು ಗಾಯನವೂ ಇದೆ. ಆರಂಭದಲ್ಲಿ ಒಬ್ಬರು
ಮುಸಲ್ಮಾನರು ಧ್ಯಾನದಲ್ಲಿ ಹೋಗುತ್ತಿದ್ದರು ಅಲ್ಲಿ ಖುದನು ಹೂವನ್ನು ಕೊಟ್ಟರೆಂದು ಹೇಳುತ್ತಿದ್ದರು.
ನಿಂತು-ನಿಂತಿದ್ದಂತೆಯೇ ಕೆಳಗೆ ಬೀಳುತ್ತಿದ್ದಾರೆ. ಖುದನ ಹೂದೋಟವನ್ನು ನೋಡುತ್ತಿದ್ದರು. ಅಂದಾಗ
ಖುದನ ಹೂದೋಟವನ್ನು ತೋರಿಸುವವರು ಖುದನೇ ಇರಬೇಕಲ್ಲವೆ, ಅನ್ಯರು ಹೇಗೆ ತೋರಿಸುವರು? ನಿಮಗೆ
ವೈಕುಂಠದ ಸಾಕ್ಷಾತ್ಕಾರವನ್ನು ಮಾಡಿಸುತ್ತಾರೆ. ಖುದಾನೇ ಕರೆದುಕೊಂಡು ಹೋಗುತ್ತಾರೆ, ಆದರೆ ಅವರಂತೂ
ಅಲ್ಲಿರುವುದಿಲ್ಲ. ನಿಮ್ಮನ್ನು ವೈಕುಂಠದ ಮಾಲೀಕರನ್ನಾಗಿ ಮಾಡುತ್ತಾರೆ. ಎಷ್ಟು ಒಳ್ಳೊಳ್ಳೆಯ
ಮಾತುಗಳನ್ನು ನೀವು ತಿಳಿದುಕೊಳ್ಳುತ್ತೀರಿ, ಖುಷಿಯಾಗುತ್ತದೆ. ನಾವೀಗ ಸುಖಧಾಮದಲ್ಲಿ ಹೋಗುತ್ತೇವೆ,
ಅಲ್ಲಿ ದುಃಖದ ಮಾತಿರುವುದಿಲ್ಲ ಎಂದು ನಿಮಗೆ ಬಹಳ ಖುಷಿಯಾಗಬೇಕು. ತಂದೆಯು ತಿಳಿಸುತ್ತಾರೆ -
ಸುಖಧಾಮ, ಶಾಂತಿಧಾಮವನ್ನು ನೆನಪು ಮಾಡಿ. ಮನೆಯನ್ನು ಏಕೆ ನೆನಪು ಮಾಡುವುದಿಲ್ಲ! ಆತ್ಮವು ಮನೆಗೆ
ಹೋಗುವುದಕ್ಕಾಗಿಯೇ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತದೆ? ಜಪ-ತಪ ಇತ್ಯಾದಿಗಳನ್ನು ಬಹಳಷ್ಟು ಮಾಡಿ
ಪರಿಶ್ರಮ ಪಡುತ್ತಾರೆ ಆದರೆ ಯಾರೂ ಹೋಗಲು ಸಾಧ್ಯವಿಲ್ಲ. ವೃಕ್ಷದಿಂದ ನಂಬರ್ವಾರ್ ಆತ್ಮಗಳು
ಬರುತ್ತಿರುತ್ತಾರೆ. ಯಾವಾಗ ತಂದೆಯೇ ಇಲ್ಲಿದ್ದಾರೆ ಅಂದಮೇಲೆ ಮಧ್ಯದಲ್ಲಿಯೇ ಹೊರಟು ಹೋಗಲು ಹೇಗೆ
ಸಾಧ್ಯ! ನೀವು ಮಕ್ಕಳಿಗೆ ಪ್ರತಿನಿತ್ಯವೂ ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡಿ ಎಂದು
ತಿಳಿಸುತ್ತಿರುತ್ತಾರೆ. ತಂದೆಯನ್ನು ಮರೆಯುವ ಕಾರಣವೇ ದುಃಖಿಯಾಗುತ್ತೀರಿ, ಮಾಯೆಯ ಪೆಟ್ಟು
ಬೀಳುತ್ತದೆ. ಈಗಂತೂ ಸ್ವಲ್ಪವೂ ಪೆಟ್ಟು ತಿನ್ನಬಾರದು. ಮೂಲವು ದೇಹಾಭಿಮಾನವಾಗಿದೆ.
ನೀವು ಇಲ್ಲಿಯವರೆಗೆ ಯಾವ ತಂದೆಯನ್ನು ಹೇ ಪತಿತ-ಪಾವನ ಬನ್ನಿ ಎಂದು ನೆನಪು ಮಾಡುತ್ತಿದ್ದಿರೋ ಆ
ತಂದೆಯಿಂದ ನೀವೀಗ ಓದುತ್ತಿದ್ದೀರಿ. ನಿಮ್ಮ ವಿಧೇಯ ಸೇವಕ, ಶಿಕ್ಷಕನೂ ಆಗಿದ್ದಾರೆ. ವಿಧೇಯ ಸೇವಕ
ತಂದೆಯೂ ಆಗಿದ್ದಾರೆ. ಹಿರಿಯ ವ್ಯಕ್ತಿಗಳು ಯಾವಾಗಲೂ ಪತ್ರದ ಕೆಳಗೆ ವಿಧೇಯ ಸೇವಕರೆಂದು
ಬರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳಿಗೆ ನೋಡಿ, ಹೇಗೆ ತಿಳಿಸಿಕೊಡುತ್ತೇನೆ!
ತಂದೆಗೆ ಸುಪುತ್ರರ ಮೇಲೆಯೇ ಪ್ರೀತಿಯಿರುತ್ತದೆ. ಯಾರು ಕುಪುತ್ರರಿರುವರೋ ಅರ್ಥಾತ್ ತಂದೆಯವರಾಗಿ
ಮತ್ತೆ ವಿರೋಧಿಗಳಾಗಿ ಬಿಡುವರೋ, ವಿಕಾರದಲ್ಲಿ ಹೋಗುವರೋ ಅಂತಹ ಮಕ್ಕಳು ಜನಿಸದಿದ್ದರೆ
ಚೆನ್ನಾಗಿರುತ್ತಿತ್ತು ಎಂದು ಹೇಳುತ್ತಾರೆ. ಒಬ್ಬರ ಕಾರಣವಾಗಿ ಹೆಸರು ಎಷ್ಟೊಂದು ಕೆಡುತ್ತದೆ,
ಎಷ್ಟೊಂದು ಮಂದಿಗೆ ತೊಂದರೆಯಾಗುತ್ತದೆ. ನೀವಿಲ್ಲಿ ಎಷ್ಟು ಶ್ರೇಷ್ಠ ಕಾರ್ಯವನ್ನು ಮಾಡುತ್ತಿದ್ದೀರಿ.
ವಿಶ್ವದ ಉದ್ಧಾರ ಮಾಡುತ್ತಿದ್ದೀರಿ ಆದರೆ ನಿಮಗೆ ಮೂರು ಹೆಜ್ಜೆಗಳಷ್ಟು ಭೂಮಿಯೂ ಸಿಗುವುದಿಲ್ಲ.
ನೀವು ಮಕ್ಕಳು ಯಾರಿಂದಲೂ ಮನೆ-ಮಠವನ್ನೂ ಬಿಡಿಸುವುದಿಲ್ಲ. ನೀವು ರಾಜರಿಗೂ ಸಹ ಹೇಳುತ್ತೀರಿ - ನೀವು
ಪೂಜ್ಯ, ಡಬಲ್ ಕಿರೀಟಧಾರಿಗಳಾಗಿದ್ದಿರಿ, ಈಗ ಪೂಜಾರಿಗಳಾಗಿ ಬಿಟ್ಟಿದ್ದೀರಿ. ತಂದೆಯು ಈಗ ಪುನಃ
ಪೂಜ್ಯರನ್ನಾಗಿ ಮಾಡುತ್ತಾರೆಂದರೆ ಆಗಬೇಕಲ್ಲವೆ. ಇನ್ನು ಸ್ವಲ್ಪ ಸಮಯವು ಕಳೆಯಲಿ, ನಾವಿಲ್ಲಿ
ಯಾರಿಂದಲಾದರೂ ಲಕ್ಷಗಳನ್ನು ತೆಗೆದುಕೊಂಡು ಏನು ಮಾಡುವುದು? ಬಡವರಿಗೇ ರಾಜ್ಯಭಾಗ್ಯವು ಸಿಗುತ್ತದೆ.
ತಂದೆಯೇ ಬಡವರ ಬಂಧುವಾಗಿದ್ದಾರಲ್ಲವೆ. ತಂದೆಯನ್ನು ಬಡವರ ಬಂಧುವೆಂದು ಏಕೆ ಹೇಳುತ್ತಾರೆ ಎಂಬುದನ್ನು
ನೀವು ಅರ್ಥ ಸಹಿತವಾಗಿ ತಿಳಿದುಕೊಳ್ಳುತ್ತೀರಿ. ಭಾರತವೂ ಸಹ ಎಷ್ಟು ಬಡ ದೇಶವಾಗಿದೆ, ಅದರಲ್ಲಿ ನೀವು
ಬಡ ಮಾತೆಯರಾಗಿದ್ದೀರಿ. ಯಾರು ಸಾಹುಕಾರರಿದ್ದಾರೆಯೋ ಅವರು ಈ ಜ್ಞಾನವನ್ನು ತಿಳಿದುಕೊಳ್ಳುವುದಿಲ್ಲ.
ಬಡವರು, ಅಬಲೆಯರು ಎಷ್ಟೊಂದು ಮಂದಿ ಬರುತ್ತಾರೆ, ಅವರಮೇಲೆ ಅತ್ಯಾಚಾರಗಳಾಗುತ್ತವೆ. ತಂದೆಯು
ತಿಳಿಸುತ್ತಾರೆ - ಮಾತೆಯರನ್ನು ಮುಂದುವರೆಸಬೇಕು. ಶಾಂತಿ ಯಾತ್ರೆಯಲ್ಲಿಯೂ ಮೊಟ್ಟ ಮೊದಲು ನೀವು
ಮಾತೆಯರಿದ್ದೀರಿ. ನಿಮ್ಮ ಬ್ಯಾಡ್ಜ್ ಬಹಳ ಸುಂದರವಾಗಿದೆ. ಈ ಟ್ರಾನ್ಸ್ಲೇಟ್ನ ಚಿತ್ರವು ನಿಮ್ಮ
ಬಳಿಯಿರಲಿ, ಇದರ ಆಧಾರದ ಮೇಲೆ ಈ ಪ್ರಪಂಚವು ಬದಲಾಗುತ್ತಿದೆ. ಕಲ್ಪದ ಹಿಂದಿನ ತರಹ ತಂದೆಯಿಂದ
ಆಸ್ತಿಯು ಸಿಗುತ್ತಿದೆ ಎಂಬ ಮಾತನ್ನು ಎಲ್ಲರಿಗೆ ತಿಳಿಸಿಕೊಡಿ. ಸೇವೆಯನ್ನು ಹೇಗೆ ಕಾರ್ಯದಲ್ಲಿ
ತರುವುದು ಎಂದು ಮಕ್ಕಳು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಇದರಲ್ಲಿ ಸಮಯವಂತೂ
ಹಿಡಿಸುತ್ತದೆಯಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯೊಂದಿಗೆ
ಸಂಪೂರ್ಣ ಪ್ರೀತಿಯನ್ನಿಟ್ಟು ತಂದೆಗೆ ಸಹಯೋಗಿಗಳಾಗಬೇಕಾಗಿದೆ. ಮಾಯೆಯಿಂದ ಸೋಲನ್ನನುಭವಿಸಿ
ಹೆಸರನ್ನೆಂದೂ ಕೆಡಿಸಬಾರದು. ಪುರುಷಾರ್ಥ ಮಾಡಿ ದೇಹ ಸಹಿತವಾಗಿ ಏನೆಲ್ಲವೂ ಕಾಣುತ್ತಿದೆಯೋ
ಎಲ್ಲವನ್ನೂ ಮರೆಯಬೇಕಾಗಿದೆ.
2. ಆಂತರ್ಯದಲ್ಲಿ
ಖುಷಿಯಿರಲಿ - ನಾವೀಗ ಶಾಂತಿಧಾಮ, ಸುಖಧಾಮಕ್ಕೆ ಹೋಗುತ್ತೇವೆ. ತಂದೆಯು ವಿಧೇಯ ಶಿಕ್ಷಕನಾಗಿ
ನಮ್ಮನ್ನು ಮನೆಗೆ ಕರೆದುಕೊಂಡು ಹೋಗಲು ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ಆದ್ದರಿಂದ ಯೋಗ್ಯರು,
ಸುಪುತ್ರರಾಗಬೇಕಾಗಿದೆ, ಕುಪುತ್ರರಲ್ಲ.
ವರದಾನ:
ತ್ರಿ-ಮೂರ್ತಿ
ಸ್ವರೂಪದ ತಿಲಕ ಧಾರಣೆ ಮಾಡುವಂತಹ ಸಂಪೂರ್ಣ ವಿಜಯಿ ಭವ.
ಸ್ವಯಂನ ಸ್ಮೃತಿ, ತಂದೆಯ
ಸ್ಮೃತಿ ಮತ್ತು ಡ್ರಾಮಾದ ಜ್ಞಾನದ ಸ್ಮೃತಿ - ಇದೇ ಮೂರು ಸ್ಮೃತಿಗಳಲ್ಲಿ ಇಡೀ ಜ್ಞಾನದ ವಿಸ್ತಾರ
ಸಮಾವೇಶವಾಗಿದೆ. ಜ್ಞಾನದ ವೃಕ್ಷಕ್ಕೆ ಈ ಮೂರು ಸ್ಮೃತಿಗಳಾಗಿವೆ. ಹೇಗೆ ವೃಕ್ಷಕ್ಕೆ ಮೊದಲು ಬೀಜ
ಇರುತ್ತದೆ, ಆ ಬೀಜದ ಮುಖಾಂತರ ಎರಡು ಎಲೆಗಳು ಹೊರ ಬರುತ್ತವೆ. ನಂತರ ವೃಕ್ಷದ ವಿಸ್ತಾರವಾಗುವುದು,
ಹಾಗೆಯೇ ಮುಖ್ಯ ಬೀಜ ತಂದೆಯ ಸ್ಮೃತಿ ನಂತರ ಎರಡು ಎಲೆಗಳು ಅರ್ಥಾತ್ ಆತ್ಮ ಹಾಗೂ ಡ್ರಾಮಾದ ಇಡೀ
ಜ್ಞಾನ. ಈ ಮೂರು ಸ್ಮತಿಗಳನ್ನು ಧಾರಣೆ ಮಾಡುವಂತಹ ಸ್ಮೃತಿ ಭವ ಅಥವಾ ಸಂಪೂರ್ಣ ವಿಜಯಿ ಭವದ
ವರದಾನಿಯಾಗಿ ಬಿಡುವರು.
ಸ್ಲೋಗನ್:
ಪ್ರಾಪ್ತಿಗಳನ್ನು ಸದಾ
ಎದುರಿನಲ್ಲಿಟ್ಟಾಗ ಬಲಹೀನತೆಗಳು ಸಹಜವಾಗಿ ಸಮಾಪ್ತಿಯಾಗಿ ಬಿಡುವುದು.