13.10.20 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ತಂದೆಯು
ನಿಮಗೆ ಮನೆಯ ಮಾರ್ಗವನ್ನು ತಿಳಿಸಲು ಬಂದಿದ್ದಾರೆ, ನೀವು ಆತ್ಮಾಭಿಮಾನಿಯಾಗಿ ಆಗ ಈ ಮಾರ್ಗವು
ಸಹಜವಾಗಿ ಕಾಣುವುದು"
ಪ್ರಶ್ನೆ:
ಸಂಗಮಯುಗದಲ್ಲಿ
ಯಾವ ಇಂತಹ ಜ್ಞಾನವು ಸಿಕ್ಕಿದೆ, ಅದರಿಂದ ಸತ್ಯಯುಗೀ ದೇವತೆಗಳು ಮೋಹಜೀತರೆಂದು ಕರೆಸಿಕೊಳ್ಳುವರು?
ಉತ್ತರ:
ಸಂಗಮಯುಗದಲ್ಲಿ ತಂದೆಯು ನಿಮಗೆ ಅಮರ ಕಥೆಯನ್ನು ತಿಳಿಸಿ ಅಮರ ಆತ್ಮನ ಜ್ಞಾನವನ್ನು ಕೊಟ್ಟರು. ಇದು
ಅವಿನಾಶಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಪ್ರತಿಯೊಂದು ಆತ್ಮನು ತನ್ನ-ತನ್ನ ಪಾತ್ರವನ್ನು
ಅಭಿನಯಿಸುತ್ತದೆ. ಅದು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ, ಇದರಲ್ಲಿ
ಅಳುವ ಮಾತಿಲ್ಲವೆಂಬ ಜ್ಞಾನವು ಸಿಕ್ಕಿತು, ಈ ಜ್ಞಾನದಿಂದಲೇ ಸತ್ಯಯುಗೀ ದೇವತೆಗಳನ್ನು ಮೋಹಜೀತರೆಂದು
ಕರೆಯಲಾಗುತ್ತದೆ. ಇದರಲ್ಲಿ ಮೃತ್ಯುವಿನ ಹೆಸರಿರುವುದಿಲ್ಲ. ಖುಷಿ-ಖುಷಿಯಿಂದ ಹಳೆಯ ಶರೀರವನ್ನು
ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತಾರೆ.
ಗೀತೆ:
ನಯನಹೀನನಿಗೆ
ದಾರಿ ತೋರಿಸು ಪ್ರಭು..........
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ - ಮಾರ್ಗವನ್ನಂತೂ
ತೋರಿಸುತ್ತೇನೆ. ಆದರೆ ಮೊದಲು ತನ್ನನ್ನು ಆತ್ಮ ನಿಶ್ಚಯ ಮಾಡಿಕೊಂಡು ಕುಳಿತುಕೊಳ್ಳಿ,
ದೇಹೀ-ಅಭಿಮಾನಿಯಾಗಿ ಕುಳಿತುಕೊಳ್ಳಿ ಆಗ ನಿಮಗೆ ಮಾರ್ಗವು ಬಹಳ ಸಹಜವಾಗಿ ಕಾಣುವುದು.
ಭಕ್ತಿಮಾರ್ಗದಲ್ಲಿ ಅರ್ಧಕಲ್ಪ ಅಲೆದಾಡಿದ್ದೀರಿ. ಭಕ್ತಿಮಾರ್ಗದ ಸಾಮಗ್ರಿಯು ಬಹಳಷ್ಟಿದೆ. ಈಗ
ತಂದೆಯು ತಿಳಿಸಿದ್ದಾರೆ, ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು
ನಿಮಗೆ ಮಾರ್ಗವನ್ನು ತಿಳಿಸುತ್ತಿದ್ದೇನೆ. ಯಾವ ಮಾರ್ಗವನ್ನು ತಿಳಿಸುತ್ತಾರೆ ಎಂಬುದೂ ಸಹ
ಪ್ರಪಂಚದವರಿಗೆ ತಿಳಿದಿಲ್ಲ. ಮುಕ್ತಿ-ಜೀವನ್ಮುಕ್ತಿ, ಗತಿ-ಸದ್ಗತಿಯ ಮಾರ್ಗವನ್ನು ತಿಳಿಸುತ್ತಾರೆ.
ಶಾಂತಿಧಾಮಕ್ಕೆ ಮುಕ್ತಿಯಂದು ಹೇಳಲಾಗುತ್ತದೆ. ಆತ್ಮವು ಶರೀರವಿಲ್ಲದೆ ಏನನ್ನೂ ಮಾತನಾಡಲು
ಸಾಧ್ಯವಿಲ್ಲ. ಕರ್ಮೇಂದ್ರಿಯಗಳ ಮೂಲಕ ಶಬ್ಧವಾಗುತ್ತದೆ. ಬಾಯಿಂದ ಶಬ್ಧವು ಹೊರ ಬರುತ್ತದೆ.
ಬಾಯಿಲ್ಲವೆಂದರೆ ಮಾತೆಲ್ಲಿಂದ ಬರುವುದು? ಆತ್ಮಕ್ಕೆ ಕರ್ಮ ಮಾಡುವುದಕ್ಕಾಗಿ ಈ ಕರ್ಮೇಂದ್ರಿಯಗಳು
ಸಿಕ್ಕಿವೆ. ರಾವಣ ರಾಜ್ಯದಲ್ಲಿ ನೀವು ವಿಕರ್ಮ ಮಾಡುತ್ತೀರಿ. ಈ ವಿಕರ್ಮಗಳು ಛೀ ಛೀ ಕರ್ಮಗಳಾಗಿ
ಬಿಡುತ್ತವೆ. ಸತ್ಯಯುಗದಲ್ಲಿ ರಾವಣ ರಾಜ್ಯವೇ ಇರುವುದಿಲ್ಲ ಆದ್ದರಿಂದ ಕರ್ಮಗಳು ಅಕರ್ಮಗಳಾಗುತ್ತವೆ,
ಅಲ್ಲಿ ಪಂಚ ವಿಕಾರಗಳಿರುವುದಿಲ್ಲ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಭಾರತವಾಸಿಗಳು
ಸ್ವರ್ಗವಾಸಿಗಳಾಗಿದ್ದರು, ಈಗ ನರಕವಾಸಿಗಳೆಂದು ಹೇಳುತ್ತಾರೆ. ವಿಷಯ ವೈತರಣೀ ನದಿಯಲ್ಲಿ
ಮುಳುಗುತ್ತಿರುತ್ತಾರೆ. ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ದುಃಖ ಕೊಡುತ್ತಿರುತ್ತಾರೆ. ಈಗ
ಹೇಳುತ್ತಾರೆ - ಬಾಬಾ, ನಮ್ಮನ್ನು ಇಂತಹ ಜಾಗಕ್ಕೆ ಕರೆದುಕೊಂಡು ಹೋಗಿ, ಎಲ್ಲಿ ದುಃಖದ ಹೆಸರೂ
ಇರಬಾರದು. ಯಾವಾಗ ಭಾರತವು ಸ್ವರ್ಗವಾಗಿತ್ತೋ ಆಗ ದುಃಖದ ಹೆಸರೂ ಇರಲಿಲ್ಲ. ಸ್ವರ್ಗದಿಂದ ನರಕದಲ್ಲಿ
ಬಂದಿದ್ದೀರಿ. ಈಗ ಮತ್ತೆ ಸ್ವರ್ಗದಲ್ಲಿ ಹೋಗಬೇಕಾಗಿದೆ. ಇದು ಆಟವಾಗಿದೆ. ತಂದೆಯೇ ಕುಳಿತು
ಮಕ್ಕಳಿಗೆ ತಿಳಿಸುತ್ತಾರೆ. ಇದು ಸತ್ಯ-ಸತ್ಯವಾದ ಸತ್ಸಂಗವಾಗಿದೆ. ನೀವಿಲ್ಲಿ ಸತ್ಯ ತಂದೆಯನ್ನು
ನೆನಪು ಮಾಡುತ್ತೀರಿ, ಅವರೇ ಸರ್ವಶ್ರೇಷ್ಠ ಭಗವಂತನಾಗಿದ್ದಾರೆ. ಅವರು ರಚಯಿತನಾಗಿದ್ದಾರೆ. ಅವರಿಂದ
ಆಸ್ತಿಯು ಸಿಗುತ್ತದೆ. ತಂದೆಯೇ ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಲೌಕಿಕ ತಂದೆಯಿದ್ದರೂ ಸಹ
ಹೇ ಭಗವಂತ, ಹೇ ಪರಮಪಿತ ಪರಮಾತ್ಮ ದಯೆ ತೋರಿಸಿ ಎಂದು ನೆನಪು ಮಾಡುತ್ತಾರೆ. ಭಕ್ತಿಮಾರ್ಗದಲ್ಲಿ
ಅಲೆದಾಡುತ್ತಾ-ಅಲೆದಾಡುತ್ತಾ ದಣಿದಿದ್ದಾರೆ. ಹೇ ತಂದೆಯೇ, ನಮಗೆ ಸುಖ-ಶಾಂತಿಯ ಆಸ್ತಿಯನ್ನು ಕೊಡಿ
ಎಂದು ಹೇಳುತ್ತಾರೆ. ಇದನ್ನು ತಂದೆಯೇ ಕೊಡುತ್ತಾರೆ ಅದೂ 21 ಜನ್ಮಗಳಿಗಾಗಿ! ಲೆಕ್ಕ ಮಾಡಬೇಕು,
ಸತ್ಯಯುಗದಲ್ಲಿ ಯಾವಾಗ ಇವರ ರಾಜ್ಯವಿತ್ತೋ ಆಗ ಕೆಲವರೇ ಮನುಷ್ಯರಿರುತ್ತಾರೆ. ಒಂದು ಧರ್ಮವಿತ್ತು,
ಒಂದೇ ರಾಜಧಾನಿಯಿತ್ತು ಅದಕ್ಕೆ ಸ್ವರ್ಗ, ಸುಖಧಾಮವೆಂದು ಹೇಳಲಾಗುತ್ತದೆ. ಹೊಸ ಪ್ರಪಂಚಕ್ಕೆ
ಸತೋಪ್ರಧಾನ, ಹಳೆಯ ಪ್ರಪಂಚಕ್ಕೆ ತಮೋಪ್ರಧಾನವೆಂತಲೂ ಹೇಳಲಾಗುತ್ತದೆ. ಪ್ರತಿಯೊಂದು ವಸ್ತುವೂ ಮೊದಲು
ಸತೋಪ್ರಧಾನ ನಂತರ ಸತೋ, ರಜೋ, ತಮೋದಲ್ಲಿ ಬರುತ್ತದೆ. ಚಿಕ್ಕ ಮಕ್ಕಳಿಗೆ ಸತೋಪ್ರಧಾನರೆಂದು
ಹೇಳಲಾಗುತ್ತದೆ. ಚಿಕ್ಕ ಮಕ್ಕಳು ಮಹಾತ್ಮರಿಗಿಂತಲೂ ಶ್ರೇಷ್ಠರೆಂದು ಹೇಳಲಾಗುತ್ತದೆ. ಮಹಾತ್ಮರಾದರೋ
ಜನ್ಮ ತೆಗೆದುಕೊಳ್ಳುತ್ತಾರೆ ನಂತರ ದೊಡ್ಡವರಾಗಿ ವಿಕಾರಗಳ ಅನುಭವ ಮಾಡಿ ನಂತರ ಮನೆಯನ್ನು ಬಿಟ್ಟು
ಹೋಗುತ್ತಾರೆ ಆದರೆ ಚಿಕ್ಕ ಮಕ್ಕಳಿಗಂತೂ ವಿಕಾರಗಳೆಂದರೆ ಏನೆಂಬುದೇ ತಿಳಿದಿರುವುದಿಲ್ಲ. ಸಂಪೂರ್ಣ
ಮುಗ್ಧರಾಗಿರುತ್ತಾರೆ ಆದ್ದರಿಂದ ಮಹಾತ್ಮರಿಗಿಂತಲೂ ಶ್ರೇಷ್ಠರೆಂದು ಹೇಳಲಾಗುತ್ತದೆ. ಸರ್ವಗುಣ
ಸಂಪನ್ನರು... ಎಂದು ದೇವತೆಗಳ ಮಹಿಮೆ ಮಾಡುತ್ತಾರೆ. ಸಾಧುಗಳಿಗೆಂದೂ ಈ ಮಹಿಮೆ ಮಾಡುವುದಿಲ್ಲ.
ತಂದೆಯು ಹಿಂಸೆ ಮತ್ತು ಅಹಿಂಸೆಯ ಅರ್ಥವನ್ನು ತಿಳಿಸಿದ್ದಾರೆ. ಯಾರನ್ನಾದರೂ ಹೊಡೆಯುವುದು ಹಿಂಸೆ
ಹೇಳಲಾಗುತ್ತದೆ. ಎಲ್ಲದಕ್ಕಿಂತ ದೊಡ್ಡ ಹಿಂಸೆಯು ಕಾಮ ಕಟಾರಿಯನ್ನು ನಡೆಸುವುದಾಗಿದೆ. ದೇವತೆಗಳು
ಹಿಂಸಕರಾಗಿರುವುದಿಲ್ಲ. ಕಾಮ ಕಠಾರಿಯನ್ನೂ ನಡೆಸುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನೀಗ
ನಿಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಬಂದಿದ್ದೇನೆ. ದೇವತೆಗಳು
ಸತ್ಯಯುಗದಲ್ಲಿರುತ್ತಾರೆ. ಇಲ್ಲಿ ಯಾರೂ ಸಹ ತಮ್ಮನ್ನು ದೇವತೆಗಳೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ.
ನಾವು ನೀಚ, ಪಾಪಿ ವಿಕಾರಿಗಳಾಗಿದ್ದೇವೆಂದು ಮನುಷ್ಯರು ತಿಳಿಯುತ್ತಾರೆ ಅಂದಮೇಲೆ ತಮ್ಮನ್ನು
ದೇವತೆಗಳೆಂದು ಹೇಗೆ ಹೇಳುತ್ತಾರೆ? ಆದ್ದರಿಂದ ಹಿಂದೂ ಧರ್ಮವೆಂದು ಹೇಳಿ ಬಿಟ್ಟಿದ್ದಾರೆ.
ವಾಸ್ತವದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಹಿಂದೂ ಸ್ಥಾನವಿಲ್ಲ. ಹಿಂದೂ ಸ್ಥಾನದಿಂದ
ಹಿಂದೂ ಎಂಬ ಶಬ್ಧವು ಬಂದಿದೆ. ಇದಕ್ಕೆ ಅವರು ಹಿಂದೂ ಎಂದು ಹೇಳಿ ಬಿಟ್ಟಿದ್ದಾರೆ. ನಾವು ದೇವತಾ
ಧರ್ಮದವರಾಗಿದ್ದೇವೆ ಎಂದು ನೀವು ಹೇಳಿದರೂ ಸಹ ಅವರು ಹಿಂದೂ ಧರ್ಮದ ಪಟ್ಟಿಯಲ್ಲಿಯೇ ಹಾಕಿ
ಬಿಡುತ್ತಾರೆ. ನಮ್ಮ ಬಳಿ ಹಿಂದೂ ಧರ್ಮದ್ದೇ ಪಟ್ಟಿಯಿದೆ ಎಂದು ಹೇಳುತ್ತಾರೆ. ಪತಿತರಾಗಿರುವ ಕಾರಣ
ತಮ್ಮನ್ನು ದೇವತೆಗಳೆಂದು ಹೇಳಿಕೊಳ್ಳುವುದಿಲ್ಲ.
ನೀವೀಗ ತಿಳಿದುಕೊಂಡಿದ್ದೀರಿ - ನಾವು ಪೂಜ್ಯ ದೇವತೆಗಳಾಗಿದ್ದೆವು, ಈಗ ಪೂಜಾರಿಗಳಾಗಿದ್ದೇವೆ.
ಪೂಜೆಯನ್ನೂ ಸಹ ಮೊಟ್ಟ ಮೊದಲಿಗೆ ಕೇವಲ ಶಿವನಿಗೆ ಮಾಡುತ್ತಾರೆ ನಂತರ ವ್ಯಭಿಚಾರಿ ಪೂಜಾರಿಗಳಾದರು.
ತಂದೆಯು ಒಬ್ಬರೇ ಆಗಿದ್ದಾರೆ, ಅವರಿಂದ ಆಸ್ತಿಯು ಸಿಗುತ್ತದೆ. ಈ ಬ್ರಹ್ಮಾರವರಿಂದಲೂ ಸಹ ನಿಮಗೆ
ಆಸ್ತಿಯು ಸಿಗುವುದಿಲ್ಲ. ಒಬ್ಬರು ನಿರಾಕಾರಿ ತಂದೆಯಾಗಿದ್ದಾರೆ, ಇನ್ನೊಬ್ಬರು ಸಾಕಾರಿ
ತಂದೆಯಿದ್ದಾರೆ. ಸಾಕಾರಿ ತಂದೆಯಿದ್ದರೂ ಸಹ ಹೇ ಭಗವಂತ, ಹೇ ಪರಮಪಿತ ಎಂದು ಹೇಳುತ್ತಿರುತ್ತಾರೆ.
ಲೌಕಿಕ ತಂದೆಗೆ ಹೀಗೆ ಹೇಳುವುದಿಲ್ಲ ಅಂದಾಗ ಆಸ್ತಿಯು ತಂದೆಯಿಂದಲೇ ಸಿಗುತ್ತದೆ. ಪತಿ ಮತ್ತು
ಪತ್ನಿಯು ಅರ್ಧಾಂಗಿಯಾಗಿರುತ್ತಾರೆ ಅಂದಮೇಲೆ ಅವರಿಗೆ ಅರ್ಧ ಭಾಗವು ಸಿಗಬೇಕು. ಅವರಿಗೆ ಮೊದಲು
ಅರ್ಧ ಭಾಗವನ್ನು ತೆಗೆದು ಇನ್ನರ್ಧ ಭಾಗವನ್ನು ಮಕ್ಕಳಿಗೆ ಕೊಡಬೇಕು ಆದರೆ ಇತ್ತೀಚೆಗಂತೂ ಎಲ್ಲಾ
ಹಣವನ್ನು ಮಕ್ಕಳೇ ತೆಗೆದುಕೊಂಡು ಬಿಡುತ್ತಾರೆ. ಕೆಲಕೆಲವರಿಗೆ ಬಹಳಷ್ಟು ಮೋಹವಿರುವ ಕಾರಣ ನಾನು
ಸತ್ತ ನಂತರ ಮಗನೇ ಹಕ್ಕುದಾರನಾಗುವರು ಎಂದು ತಿಳಿಯುತ್ತಾರೆ. ಆದರೆ ಈಗಿನ ಮಕ್ಕಳಂತೂ ತಂದೆಯು ಹೊರಟು
ಹೋದ ಮೇಲೆ ತಾಯಿಯನ್ನು ವಿಚಾರಿಸುವುದೂ ಇಲ್ಲ. ಕೆಲಕೆಲವರು ಮಾತೃ ಸ್ನೇಹಿಯಾಗಿರುತ್ತಾರೆ, ಇನ್ನು
ಕೆಲವರು ಮಾತೃ ದ್ರೋಹಿಗಳಿದ್ದಾರೆ. ಈಗಂತೂ ಮಾತೃ ದ್ರೋಹಿಗಳು ಹೆಚ್ಚಿನದಾಗಿ ಇದ್ದಾರೆ, ಎಲ್ಲಾ
ಹಣವನ್ನು ಕಸಿದುಕೊಳ್ಳುತ್ತಾರೆ. ದತ್ತು ಮಕ್ಕಳೂ ಸಹ ಕೆಲಕೆಲವರು ಇಂತಹವರಾಗಿ ಬಿಡುತ್ತಾರೆ
ಮಾತಾಪಿತರಿಗೆ ಬಹಳ ತೊಂದರೆ ಕೊಡುತ್ತಾರೆ. ಈಗ ಮಕ್ಕಳು ಗೀತೆಯನ್ನು ಕೇಳಿದಿರಿ, ಬಾಬಾ ನಮಗೆ ಸುಖದ
ಮಾರ್ಗವನ್ನು ತಿಳಿಸಿ, ಎಲ್ಲಿ ಸಂತುಷ್ಟತೆಯಿರಬೇಕು ಎಂದು ಹೇಳುತ್ತಾರೆ. ರಾವಣ ರಾಜ್ಯದಲ್ಲಂತೂ
ಸುಖವಿರಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಾದರೆ ಇಷ್ಟನ್ನೂ ಸಹ ತಿಳಿದುಕೊಳ್ಳುವುದಿಲ್ಲ - ಶಿವನೇ
ಬೇರೆ, ಶಂಕರನೇ ಬೇರೆಯಾಗಿದ್ದಾರೆಂದು. ತಲೆ ಬಾಗುತ್ತಾ ಇರಿ, ಶಾಸ್ತ್ರಗಳನ್ನು ಓದುತ್ತಾ ಇರಿ ಅಷ್ಟೆ.
ಇದರಿಂದೇನು ಸಿಗುತ್ತದೆ! ಏನೂ ಗೊತ್ತಿಲ್ಲ. ಸರ್ವರ ಶಾಂತಿಯ ಸುಖದಾತನು ಒಬ್ಬ ತಂದೆಯೇ ಆಗಿದ್ದಾರೆ.
ಸತ್ಯಯುಗದಲ್ಲಿ ಸುಖವೂ ಇರುತ್ತದೆ, ಶಾಂತಿಯೂ ಇರುತ್ತದೆ. ಭಾರತದಲ್ಲಿ ಸುಖ-ಶಾಂತಿಯಿತ್ತು, ಈಗ
ಇಲ್ಲ ಆದರೆ ಭಕ್ತಿ ಮಾಡುತ್ತಾ ಅಲ್ಲಿ-ಇಲ್ಲಿ ಅಲೆದಾಡುತ್ತಿರುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ
- ಶಾಂತಿಧಾಮ, ಸುಖಧಾಮದಲ್ಲಿ ಕರೆದುಕೊಂಡು ಹೋಗುವವರು ಒಬ್ಬ ತಂದೆಯೇ ಆಗಿದ್ದಾರೆ. ಬಾಬಾ ನಾವು
ತಮ್ಮನ್ನೇ ನೆನಪು ಮಾಡುತ್ತೇವೆ, ತಮ್ಮಿಂದಲೇ ಆಸ್ತಿಯನ್ನು ಪಡೆಯುತ್ತೇವೆ. ತಂದೆಯು ತಿಳಿಸುತ್ತಾರೆ
– ದೇಹ ಸಹಿತವಾಗಿ ದೇಹದ ಸರ್ವ ಸಂಬಂಧಗಳನ್ನು ಮರೆಯಬೇಕಾಗಿದೆ, ಒಬ್ಬ ತಂದೆಯನ್ನು ನೆನಪು
ಮಾಡಬೇಕಾಗಿದೆ. ಆತ್ಮವು ಇಲ್ಲಿಯೇ ಪವಿತ್ರವಾಗಬೇಕಾಗಿದೆ. ನೆನಪು ಮಾಡದಿದ್ದರೆ ಮತ್ತೆ
ಶಿಕ್ಷೆಗಳನ್ನನುಭವಿಸಬೇಕಾಗುವುದು, ಪದವಿಯೂ ಭ್ರಷ್ಟವಾಗುವುದು ಆದ್ದರಿಂದ ನೆನಪಿನ ಪರಿಶ್ರಮ ಪಡಿ
ಎಂದು ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ. ಮತ್ತ್ಯಾವುದೇ ಸತ್ಸಂಗದಲ್ಲಿ ಹೇ ಆತ್ಮಗಳೇ ಎಂದು
ಹೇಳುವುದಿಲ್ಲ. ಇದು ಆತ್ಮಿಕ ಜ್ಞಾನವಾಗಿದೆ, ಇದು ಆತ್ಮಿಕ ತಂದೆಯಿಂದಲೇ ಮಕ್ಕಳಿಗೆ ಸಿಗುತ್ತದೆ.
ಆತ್ಮ ಎಂದರೆ ನಿರಾಕಾರ ಎಂದರ್ಥ. ಶಿವನೂ ನಿರಾಕಾರನಲ್ಲವೆ. ನೀವಾತ್ಮಗಳೂ ಬಿಂದುವಾಗಿದ್ದೀರಿ, ಅತಿ
ಚಿಕ್ಕ ಬಿಂದು, ಅದನ್ನು ದಿವ್ಯ ದೃಷ್ಟಿಯ ವಿನಃ ಯಾರೂ ನೋಡಲು ಸಾಧ್ಯವಿಲ್ಲ. ದಿವ್ಯ ದೃಷ್ಟಿಯನ್ನು
ತಂದೆಯೇ ಕೊಡುತ್ತಾರೆ. ಭಕ್ತರು ಕುಳಿತು ಹನುಮಂತ, ಗಣೇಶ ಮೊದಲಾದವರ ಪೂಜೆ ಮಾಡುತ್ತಾರೆ ಅಂದಮೇಲೆ
ಈಗ ಅವರ ಸಾಕ್ಷಾತ್ಕಾರ ಹೇಗಾಗುವುದು. ಆದ್ದರಿಂದ ದಿವ್ಯ ದೃಷ್ಟಿಯ ದಾತನು ನಾನೇ ಆಗಿದ್ದೇನೆ, ಯಾರು
ಬಹಳ ಭಕ್ತಿ ಮಾಡುವರೋ ಅವರಿಗೆ ನಾನೇ ಸಾಕ್ಷಾತ್ಕಾರ ಮಾಡಿಸುತ್ತೇನೆಂದು ತಂದೆಯು ತಿಳಿಸುತ್ತಾರೆ
ಆದರೆ ಇದರಿಂದ ಲಾಭವೇನೂ ಇಲ್ಲ, ಕೇವಲ ಖುಷಿಯಾಗಿ ಬಿಡುತ್ತಾರೆ. ಮತ್ತೆ ಪಾಪಗಳನ್ನು ಮಾಡುತ್ತಾರೆ,
ಸಿಗುವುದೇನೂ ಇಲ್ಲ. ವಿದ್ಯಾಭ್ಯಾಸವಿಲ್ಲದೆ ಏನೂ ಆಗಲು ಸಾಧ್ಯವಿಲ್ಲ. ದೇವತೆಗಳು ಸರ್ವಗುಣ
ಸಂಪನ್ನರಾಗಿದ್ದಾರೆ, ನೀವೂ ಸಹ ಅದೇ ರೀತಿಯಾಗಿರಿ. ಉಳಿದಂತೆ ಅದೆಲ್ಲವೂ ಭಕ್ತಿಮಾರ್ಗದ
ಸಾಕ್ಷಾತ್ಕಾರವಾಗಿದೆ. ನೀವಂತೂ ನಿಜವಾಗಿಯೂ ಕೃಷ್ಣನೊಂದಿಗೆ ತೂಗುವಿರಿ, ಸ್ವರ್ಗದಲ್ಲಿ ಅವರ ಜೊತೆ
ಇರುವಿರಿ, ಅದು ಈಗಿನ ವಿದ್ಯೆಯ ಮೇಲೆ ಆಧಾರಿತವಾಗಿದೆ. ಎಷ್ಟು ಶ್ರೀಮತದನುಸಾರ ನಡೆಯುವಿರೋ ಅಷ್ಟು
ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಶ್ರೀಮತವು ಭಗವಂತನದೆಂದು ಗಾಯನವಿದೆ, ಕೃಷ್ಣನ ಶ್ರೀಮತವೆಂದು
ಹೇಳುವುದಿಲ್ಲ. ಪರಮಪಿತ ಪರಮಾತ್ಮನ ಶ್ರೀಮತದಿಂದ ಕೃಷ್ಣನ ಆತ್ಮವು ಈ ಪದವಿಯನ್ನು ಪಡೆದಿದೆ.
ನೀವಾತ್ಮಗಳೂ ಸಹ ದೇವತಾಧರ್ಮದಲ್ಲಿದ್ದಿರಿ, ಅರ್ಥಾತ್ ಕೃಷ್ಣನ ಮನೆತನದಲ್ಲಿದ್ದಿರಿ. ರಾಧೆ-ಕೃಷ್ಣರ
ಪರಸ್ಪರ ಸಂಬಂಧವೇನಾಗಿತ್ತು ಎಂಬುದನ್ನು ಭಾರತವಾಸಿಗಳೇ ತಿಳಿದುಕೊಂಡಿಲ್ಲ. ಇಬ್ಬರೂ ಬೇರೆ-ಬೇರೆ
ರಾಜಧಾನಿಯವರಾಗಿದ್ದರು, ಮತ್ತೆ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣರಾಗುತ್ತಾರೆ. ಇವೆಲ್ಲಾ
ಮಾತುಗಳನ್ನು ತಂದೆಯೇ ಬಂದು ತಿಳಿಸುತ್ತಾರೆ. ನೀವೀಗ ಸ್ವರ್ಗದ ರಾಜಕುಮಾರ-ಕುಮಾರಿಯರಾಗಲು
ಓದುತ್ತೀರಿ. ರಾಜಕುಮಾರ -ಕುಮಾರಿಯರಿಗೆ ಸ್ವಯಂವರವಾದ ಮೇಲೆ ಹೆಸರು ಬದಲಾಗುತ್ತದೆ ಅಂದಾಗ ತಂದೆಯು
ಮಕ್ಕಳನ್ನು ಇಂತಹ ದೇವತೆಗಳನ್ನಾಗಿ ಮಾಡುತ್ತಾರೆ ಆದರೆ ತಂದೆಯ ಶ್ರೀಮತದಂತೆ ನಡೆದಾಗ ಮಾತ್ರ. ನೀವು
ಮುಖ ವಂಶಾವಳಿಯಾಗಿದ್ದೀರಿ, ಅವರು ಕುಖ ವಂಶಾವಳಿಯಾಗಿದ್ದಾರೆ. ಆ ಬ್ರಾಹ್ಮಣರು ಕಾಮ ಚಿತೆಯ ಮೇಲೆ
ಕೂರಿಸುವ ಕಂಕಣವನ್ನು ಕಟ್ಟುತ್ತಾರೆ, ನೀವೀಗ ಸತ್ಯ-ಸತ್ಯವಾದ ಬ್ರಾಹ್ಮಣಿಯರು ಕಾಮ ಚಿತೆಯಿಂದ ಇಳಿಸಿ
ಜ್ಞಾನ ಚಿತೆಯ ಮೇಲೆ ಕೂರಿಸಿ ಕಂಕಣವನ್ನು ಕಟ್ಟುತ್ತೀರಿ ಆದ್ದರಿಂದ ಅದನ್ನು ಬಿಡಬೇಕಾಗಿದೆ. ಈಗಿನ
ಮಕ್ಕಳಂತೂ ಹೊಡೆದಾಡುತ್ತಾ-ಜಗಳವಾಡುತ್ತಾ ಹಣವೆಲ್ಲವನ್ನೂ ಹಾಳು ಮಾಡುತ್ತಾರೆ. ಈಗಿನ ಪ್ರಪಂಚದಲ್ಲಿ
ಬಹಳ ಕೊಳಕಿದೆ. ಎಲ್ಲದಕ್ಕಿಂತ ಕೆಟ್ಟ ಖಾಯಿಲೆಯು ಸಿನಿಮಾ ಆಗಿದೆ. ಒಳ್ಳೊಳ್ಳೆಯ ಮಕ್ಕಳೂ ಸಹ ಸಿನಿಮಾ
ನೋಡುವುದರಿಂದ ಕೆಟ್ಟು ಹೋಗುತ್ತಾರೆ. ಆದ್ದರಿಂದ ಬ್ರಹ್ಮಾಕುಮಾರ-ಕುಮಾರಿಯರು ಸಿನಿಮಾಗೆ
ಹೋಗುವುದನ್ನು ನಿಷೇಧಿಸಲಾಗಿದೆ. ಹಾ! ಯಾರು ಶಕ್ತಿಶಾಲಿಗಳಿದ್ದಾರೆಯೋ ಅವರಿಗೆ ತಂದೆಯು ಹೇಳುತ್ತಾರೆ
- ಅಲ್ಲಿಯೂ ಸಹ ನೀವು ಸರ್ವೀಸ್ ಮಾಡಿ. ಅವರಿಗೂ ತಿಳಿಸಿ - ನಿಮ್ಮದು ಇದು ಹದ್ದಿನ ಸಿನಿಮಾ ಆಗಿದೆ.
ಒಂದು ಬೇಹದ್ದಿನ ಸಿನಿಮಾ ಕೂಡ ಇದೆ. ಬೇಹದ್ದಿನ ಸಿನಿಮಾದಿಂದಲೇ ಮತ್ತೆ ಈ ಹದ್ದಿನ ಸುಳ್ಳು
ಸಿನಿಮಾಗಳು ಬಂದಿದೆ.
ಈಗ ನೀವು ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ - ಮೂಲವತನದಲ್ಲಿ ಎಲ್ಲಾ ಆತ್ಮಗಳಿರುತ್ತಾರೆ, ನಂತರ
ಮಧ್ಯದಲ್ಲಿ ಸೂಕ್ಷ್ಮವತನವಿದೆ, ಇದು ಸಾಕಾರ ವತನವಾಗಿದೆ. ಆಟವೆಲ್ಲವೂ ಇಲ್ಲಿಯೇ ನಡೆಯುತ್ತದೆ. ಈ
ಚಕ್ರವು ಸುತ್ತುತ್ತಲೇ ಇರುತ್ತದೆ. ನೀವು ಬ್ರಾಹ್ಮಣ ಮಕ್ಕಳೇ ಸ್ವದರ್ಶನ ಚಕ್ರಧಾರಿಗಳಾಗಬೇಕಾಗಿದೆ,
ದೇವತೆಗಳಲ್ಲ. ಆದರೆ ಬ್ರಾಹ್ಮಣರಿಗೆ ಈ ಅಲಂಕಾರಗಳನ್ನು ತೋರಿಸುವುದಿಲ್ಲ ಏಕೆಂದರೆ ಇನ್ನೂ
ಪುರುಷಾರ್ಥಿಗಳಾಗಿದ್ದೀರಿ, ಇಂದು ಚೆನ್ನಾಗಿ ನಡೆಯುತ್ತಿದ್ದವರು ನಾಳೆ ಕೆಳಗೆ ಬೀಳುತ್ತಾರೆ.
ಆದ್ದರಿಂದ ಅಲಂಕಾರಗಳನ್ನು ದೇವತೆಗಳಿಗೆ ತೋರಿಸಲಾಗುತ್ತದೆ. ಸ್ವದರ್ಶನ ಚಕ್ರದಿಂದ ಅಕಾಸುರ,
ಬಕಾಸುರನನ್ನು ಕೊಂದನೆಂದು ಕೃಷ್ಣನಿಗೆ ತೋರಿಸುತ್ತಾರೆ ಆದರೆ ಕೃಷ್ಣನನ್ನು ಅಹಿಂಸಾ ಪರಮೋ
ಧರ್ಮಿಯೆಂದು ಹೇಳಲಾಗುತ್ತದೆ, ಅಂದಮೇಲೆ ಹಿಂಸೆಯನ್ನು ಹೇಗೆ ಮಾಡುವರು! ಇದೆಲ್ಲವೂ ಭಕ್ತಿಮಾರ್ಗದ
ಸಾಮಗ್ರಿಯಾಗಿದೆ. ಎಲ್ಲಿಯೇ ಹೋದರೂ ಸಹ ಶಿವಲಿಂಗವೇ ಇರುವುದು, ಕೇವಲ ಅನೇಕ ಹೆಸರುಗಳನ್ನಿಟ್ಟು
ಬಿಟ್ಟಿದ್ದಾರೆ. ಮಣ್ಣಿನಿಂದ ಎಷ್ಟೊಂದು ದೇವಿಯರನ್ನು ಮಾಡುತ್ತಾರೆ, ಶೃಂಗಾರ ಮಾಡುತ್ತಾರೆ,
ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಉತ್ಪತ್ತಿ ಮಾಡಿ, ಪಾಲನೆ ಮಾಡಿ, ಪೂಜೆ ಮಾಡಿ
ನಂತರ ಹೋಗಿ ನೀರಿನಲ್ಲಿ ಮುಳುಗಿಸುತ್ತಾರೆ. ಈ ಗೊಂಬೆಗಳ ಪೂಜೆಗಾಗಿ ಎಷ್ಟೊಂದು ಖರ್ಚು ಮಾಡುತ್ತಾರೆ
ಆದರೆ ಸಿಗುವುದೇನೂ ಇಲ್ಲ. ಇದೆಲ್ಲವೂ ಹಣವನ್ನು ಹಾಳು ಮಾಡುವ ಭಕ್ತಿಯಾಗಿದೆ. ಏಣಿಯನ್ನು
ಇಳಿಯುತ್ತಲೇ ಬಂದಿದ್ದಾರೆ, ತಂದೆಯು ಬರುತ್ತಾರೆಂದರೆ ಎಲ್ಲರ ಏರುವ ಕಲೆಯಾಗುತ್ತದೆ. ಎಲ್ಲರನ್ನೂ
ಶಾಂತಿಧಾಮ, ಸುಖಧಾಮದಲ್ಲಿ ಕರೆದುಕೊಂಡು ಹೋಗುತ್ತಾರೆ, ಹಣವನ್ನು ಹಾಳು ಮಾಡುವ ಮಾತೇ ಇಲ್ಲ. ಮತ್ತೆ
ಭಕ್ತಿಮಾರ್ಗದಲ್ಲಿ ನೀವು ಹಣವನ್ನು ಹಾಳು ಮಾಡುತ್ತಾ-ಮಾಡುತ್ತಾ ಬಡವರಾಗಿ ಬಿಟ್ಟಿದ್ದೀರಿ.
ಸಾಹುಕಾರರು ಬಡವರಾಗುವ ಕಥೆಯನ್ನು ತಂದೆಯು ತಿಳಿಸುತ್ತಾರೆ. ನೀವು ಈ ಲಕ್ಷ್ಮೀ-ನಾರಾಯಣರ
ರಾಜ್ಯದವರಾಗಿದ್ದಿರಿ, ಈಗ ನಿಮಗೆ ತಂದೆಯು ನರನಿಂದ ನಾರಾಯಣನಾಗುವ ಕಥೆಯನ್ನು ತಿಳಿಸುತ್ತಾರೆ.
ಅವರಾದರೆ ಮೂರನೆಯ ನೇತ್ರದ ಕಥೆ, ಅಮರ ಕಥೆಯನ್ನು ತಿಳಿಸುತ್ತಾರೆ, ಎಲ್ಲವೂ ಸುಳ್ಳಾಗಿದೆ. ತೀಜರಿ
ಕಥೆಯಂತೂ ಇದಾಗಿದೆ ಯಾವುದರಿಂದ ಆತ್ಮನಿಗೆ ಜ್ಞಾನದ ಮೂರನೆಯ ನೇತ್ರವು ತೆರೆಯುತ್ತದೆ. ನಿಮಗೆ
ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ, ಅಮರ ಕಥೆಯನ್ನೂ ಕೇಳುತ್ತಿದ್ದೀರಿ. ಅಮರ ತಂದೆಯು ನಿಮಗೆ
ಕಥೆಯನ್ನು ತಿಳಿಸುತ್ತಿದ್ದಾರೆ - ಅಮರಪುರಿಯ ಮಾಲೀಕರನ್ನಾಗಿ ಮಾಡುತ್ತಾರೆ. ಅಲ್ಲಿ ನೀವು ಎಂದೂ
ಮೃತ್ಯುವನ್ನು ಹೊಂದುವುದಿಲ್ಲ. ಇಲ್ಲಂತೂ ಮೃತ್ಯುವು ಮನುಷ್ಯನಿಗೆ ಎಷ್ಟೊಂದು ಭಯವನ್ನುಂಟು
ಮಾಡುತ್ತದೆ. ಅಲ್ಲಿ ಹೆದರುವ, ಅಳುವ ಮಾತೇ ಇಲ್ಲ. ಖುಷಿಯಿಂದ ಹಳೆಯ ಶರೀರವನ್ನು ಬಿಟ್ಟು ಹೊಸದನ್ನು
ತೆಗೆದುಕೊಳ್ಳುತ್ತಾರೆ. ಇಲ್ಲಿ ಮನುಷ್ಯರು ಎಷ್ಟೊಂದು ಅಳುತ್ತಾರೆ. ಇದಂತೂ ಅಳುವ ಪ್ರಪಂಚವೇ ಆಗಿದೆ.
ತಂದೆಯು ತಿಳಿಸುತ್ತಾರೆ - ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಪ್ರತಿಯೊಬ್ಬರದೂ ತಮ್ಮ-ತಮ್ಮದೇ
ಆದ ಪಾತ್ರವನ್ನಭಿನಯಿಸುತ್ತಿದ್ದಾರೆ. ಈ ದೇವತೆಗಳು ಮೋಹಜೀತರಾಗಿದ್ದಾರಲ್ಲವೆ. ಇಲ್ಲಂತೂ
ಪ್ರಪಂಚದಲ್ಲಿ ಅನೇಕ ಗುರುಗಳಿದ್ದಾರೆ, ಅವರಿಂದ ಅನೇಕ ಮತಗಳು ಸಿಗುತ್ತವೆ, ಪ್ರತಿಯೊಬ್ಬರ ಮತವು
ಬೇರೆ-ಬೇರೆಯಾಗಿದೆ. ಒಬ್ಬರು ಸಂತೋಷಿ ದೇವಿಯೂ ಇದ್ದಾರೆ, ಅವರಿಗೆ ಪೂಜೆಯು ನಡೆಯುತ್ತದೆ.
ವಾಸ್ತವದಲ್ಲಿ ಸಂತೋಷಿ ದೇವಿಯರಂತೂ ಸತ್ಯಯುಗದಲ್ಲಿರುತ್ತಾರೆ, ಇಲ್ಲಿರಲು ಹೇಗೆ ಸಾಧ್ಯ!
ಸತ್ಯಯುಗದಲ್ಲಿ ದೇವತೆಗಳು ಸದಾ ಸಂತುಷ್ಟರಾಗಿರುತ್ತಾರೆ. ಇಲ್ಲಂತೂ ಯಾವುದಾದರೊಂದು ಆಸೆಯಿರುತ್ತದೆ.
ಅಲ್ಲಿ ಆಸೆಯಿರುವುದಿಲ್ಲ. ತಂದೆಯು ಎಲ್ಲರನ್ನೂ ಸಂತುಷ್ಟ ಪಡಿಸುತ್ತಾರೆ. ನೀವು
ಪದಮಾಪತಿಗಳಾಗುತ್ತೀರಿ. ಯಾವುದೇ ಪ್ರಾಪ್ತಿಗಾಗಿ ಚಿಂತೆ ಮಾಡಲು ಅಲ್ಲಿ ಅಪ್ರಾಪ್ತ ವಸ್ತು ಯಾವುದೂ
ಇರುವುದಿಲ್ಲ, ಅಲ್ಲಿ ಚಿಂತೆಯೇ ಇರುವುದಿಲ್ಲ. ತಂದೆಯು ತಿಳಿಸುತ್ತಾರೆ - ಸರ್ವರ ಸದ್ಗತಿದಾತನು
ನಾನೇ ಆಗಿದ್ದೇನೆ. ನೀವು ಮಕ್ಕಳಿಗೆ 21 ಜನ್ಮಗಳಿಗಾಗಿ ಖುಷಿಯೇ ಖುಷಿಯನ್ನು ಕೊಡುತ್ತೇನೆ. ಇಂತಹ
ತಂದೆಯನ್ನು ನೆನಪು ಮಾಡಬೇಕು, ನೆನಪಿನಿಂದಲೇ ನಿಮ್ಮ ಪಾಪಗಳು ಭಸ್ಮವಾಗುತ್ತದೆ ಮತ್ತು ನೀವು
ಸತೋಪ್ರಧಾನರಾಗಿ ಬಿಡುತ್ತೀರಿ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ, ಅನ್ಯರಿಗೆ ಎಷ್ಟು ಹೆಚ್ಚು
ತಿಳಿಸುವಿರೋ ಅಷ್ಟು ಪ್ರಜೆಗಳಾಗುತ್ತಾ ಹೋಗುವರು ಮತ್ತು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಇದು
ಯಾವುದೇ ಸಾಧು-ಸನ್ಯಾಸಿಗಳ ಕಥೆಯಲ್ಲ. ಭಗವಂತನೇ ಕುಳಿತು ಇವರ ಮೂಲಕ ತಿಳಿಸುತ್ತಾರೆ, ನೀವೀಗ
ಸಂತುಷ್ಟ ದೇವಿ-ದೇವತೆಗಳಾಗುತ್ತಿದ್ದೀರಿ. ನೀವೀಗ ಸದಾ ಪವಿತ್ರರಾಗಿರುವ ವ್ರತವನ್ನಿಡಬೇಕು ಏಕೆಂದರೆ
ಪಾವನ ಪ್ರಪಂಚದಲ್ಲಿ ಹೋಗಬೇಕಾಗಿದೆ ಆದ್ದರಿಂದ ಪತಿತರಾಗಬಾರದು. ಮನುಷ್ಯರಂತೂ ಪುನಃ ಅನೇಕ ಪ್ರಕಾರದ
ವ್ರತವನ್ನಿಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ತಂದೆಯ
ಮತದಂತೆ ನಡೆದು ಸದಾ ಸಂತುಷ್ಟರಾಗಿ ಸಂತೋಷಿ ದೇವಿಯಾಗಬೇಕಾಗಿದೆ. ಇಲ್ಲಿ ಯಾವುದೇ
ಆಸೆಗಳನ್ನಿಟ್ಟುಕೊಳ್ಳಬಾರದು. ತಂದೆಯಿಂದ ಸರ್ವ ಪ್ರಾಪ್ತಿಗಳನ್ನು ಮಾಡಿಕೊಂಡು
ಪದಮಾಪತಿಗಳಾಗಬೇಕಾಗಿದೆ.
2. ಎಲ್ಲದಕ್ಕಿಂತ ಕೊಳಕಾಗಿ ಮಾಡುವಂತದ್ದು ಬಯೋಸ್ಕೋಪ್ (ಸಿನಿಮಾ) ಆಗಿದೆ. ನಿಮಗೆ ಸಿನಿಮಾ ನೋಡಲು
ಅನುಮತಿಯಿಲ್ಲ. ನೀವು ಸಾಹಸವಂತರಾಗಿದ್ದೀರಿ ಅಂದಾಗ ಹದ್ದಿನ ಮತ್ತು ಬೇಹದ್ದಿನ ಸಿನಿಮಾದ
ರಹಸ್ಯವನ್ನು ತಿಳಿದು ಅನ್ಯರಿಗೂ ತಿಳಿಸಬೇಕಾಗಿದೆ. ಸರ್ವೀಸ್ ಮಾಡಬೇಕಾಗಿದೆ.
ವರದಾನ:
ಫುಲ್ ಸ್ಟಾಪ್ನ
ಸ್ಟೇಜ್ ಮುಖಾಂತರ ಪ್ರಕೃತಿಯ ಏರುಪೇರನ್ನು ಸ್ಟಾಪ್ ಮಾಡುವಂತಹ ಪ್ರಕೃತಿಪತಿ ಭವ.
ವರ್ತಮಾನ ಸಮಯ ಏರುಪೇರು
ಹೆಚ್ಚುವ ಸಮಯವಾಗಿದೆ. ಅಂತಿಮ ಪರೀಕ್ಷೆಯಲ್ಲಿ ಒಂದು ಕಡೆ ಪ್ರಕೃತಿ ಮತ್ತು ಇನ್ನೊಂದು ಕಡೆ ಐದು
ವಿಕಾರಗಳ ವಿಕರಾಳ ರೂಪವಿರುವುದು. ತಮೋಗುಣಿ ಆತ್ಮಗಳ ಯುದ್ಧ ಮತ್ತು ಹಳೆಯ ಸಂಸ್ಕಾರದ ಯುದ್ಧ...
ಎಲ್ಲವೂ ಅಂತಿಮ ಸಮಯದಲ್ಲಿ ತಮ್ಮ ಅವಕಾಶವನ್ನು ತೆಗೆದುಕೊಳ್ಳುತ್ತವೆ. ಅಂತಹ ಸಮಯದಲ್ಲಿ ಸಮಾವೇಶ
ಮಾಡಿಕೊಳ್ಳುವ ಶಕ್ತಿಯ ಮುಖಾಂತರ ಈಗೀಗ ಸಾಕಾರಿ, ಈಗೀಗ ಆಕಾರಿ ಮತ್ತು ಈಗೀಗ ನಿರಾಕಾರಿ
ಸ್ಥಿತಿಯಲ್ಲಿ ಸ್ಥಿತರಾಗುವ ಅಭ್ಯಾಸದ ಅವಶ್ಯಕತೆಯಿದೆ. ನೋಡುತ್ತಿದ್ದರೂ ನೋಡದಂತೆ, ಕೇಳುತ್ತಿದ್ದರೂ
ಕೇಳದಂತೆ ಇರಬೇಕು. ಯಾವಾಗ ಈ ರೀತಿ ಫುಲ್ಸ್ಟಾಪ್ನ ಸ್ಟೇಜ್ ಇರಬೇಕು ಆಗ ಪ್ರಕೃತಿಪತಿ ಆಗಿ
ಪ್ರಕೃತಿಯ ಏರುಪೇರನ್ನು ಸ್ಟಾಪ್ ಮಾಡಲು ಸಾಧ್ಯ.
ಸ್ಲೋಗನ್:
ನಿರ್ವಿಘ್ನ ರಾಜ್ಯ
ಅಧಿಕಾರಿಯಾಗಬೇಕಾದರೆ ನಿರ್ವಿಘ್ನ ಸೇವಾಧಾರಿಗಳಾಗಿ.