25.10.20 Avyakt Bapdada
Kannada
Murli
09.04.86 Om Shanti Madhuban
ಸತ್ಯ ಸೇವಾಧಾರಿಯ ಲಕ್ಷಣಗಳು
ಇಂದು ಜ್ಞಾನ ಸೂರ್ಯ,
ಜ್ಞಾನ ಚಂದ್ರಮನು ಧರಣಿಯ ತಾರಾಮಂಡಲದಲ್ಲಿ ತನ್ನ ಎಲ್ಲಾ ತಾರೆ (ನಕ್ಷತ್ರ)ಗಳನ್ನು ನೋಡುತ್ತಿದ್ದಾರೆ.
ತಾರೆಗಳೆಲ್ಲವೂ ಹೊಳೆಯುತ್ತಾ ತನ್ನ ಹೊಳಪನ್ನು ಅಥವಾ ಪ್ರಕಾಶತೆಯನ್ನು ಕೊಡುತ್ತಿವೆ,
ಭಿನ್ನ-ಭಿನ್ನವಾದ ತಾರೆಗಳಿವೆ. ಅದರಲ್ಲಿ ಕೆಲವು ವಿಶೇಷ ಜ್ಞಾನ ತಾರೆಗಳಿವೆ, ಕೆಲವು ಸಹಜಯೋಗಿ
ತಾರೆಗಳಿವೆ, ಕೆಲವು ಗುಣದಾನ ಮೂರ್ತಿ ತಾರೆಗಳು, ಕೆಲವು ನಿರಂತರ ಸೇವಾಧಾರಿ ತಾರೆಗಳು, ಕೆಲವು ಸದಾ
ಸಂಪನ್ನವಾಗಿರುವ ತಾರೆಗಳಿವೆ. ಅವೆಲ್ಲವುಗಳಲ್ಲಿ ಶ್ರೇಷ್ಠವಾಗಿರುವುದೆಂದರೆ - ಪ್ರತೀ
ಸೆಕೆಂಡಿನಲ್ಲಿಯೂ ಸಫಲತೆಯ ತಾರೆ. ಜೊತೆ ಜೊತೆಗೆ ಕೆಲಕೆಲವು ಕೇವಲ ಭರವಸೆಗಳ ತಾರೆಗಳೂ ಸಹ ಇವೆ.
ಹಾಗಾದರೆ ಭರವಸೆಗಳ ತಾರೆಗಳೆಲ್ಲಿ! ಮತ್ತು ಸಫಲತೆಯ ತಾರೆಗಳೆಲ್ಲಿ! ಎರಡರಲ್ಲಿಯೂ ಮಹಾನ್ ಅಂತರವಿದೆ
ಆದರೆ ಎರಡೂ ಸಹ ತಾರೆಗಳೇ ಆಗಿದೆ ಮತ್ತು ಭಿನ್ನ-ಭಿನ್ನವಾದ ಪ್ರತಿಯೊಂದು ತಾರೆಗಳ ಪ್ರಭಾವವು ಆತ್ಮರ
ಮೇಲೆ, ಪ್ರಕೃತಿಯ ಮೇಲೂ ಪ್ರಭಾವಿಸುತ್ತಿದೆ. ಸಫಲತೆಯ ತಾರೆಗಳು ತನ್ನ ಉಮ್ಮಂಗ-ಉತ್ಸಾಹದ
ಪ್ರಭಾವವನ್ನು ನಾಲ್ಕೂ ಕಡೆಗಳಲ್ಲಿ ಪ್ರವಹಿಸುತ್ತಿದೆ. ಭರವಸೆಗಳ ತಾರೆಗಳು ಸ್ವಯಂ ತಾನೇ ಕೆಲವೊಮ್ಮೆ
ಪ್ರೀತಿಯಲ್ಲಿ, ಮತ್ತೆ ಕೆಲವೊಮ್ಮೆ ಪರಿಶ್ರಮ ಪಡುವುದರಲ್ಲಿ - ಎರಡೂ ಪ್ರಭಾವಗಳಲ್ಲಿ ಇರುವ ಕಾರಣ,
ಅನ್ಯರಲ್ಲಿ ಮುಂದುವರೆಯುವ ಭರವಸೆಯನ್ನಿಟ್ಟು ಸ್ವಯಂ ಮುಂದುವರೆಯುತ್ತಿದ್ದಾರೆ. ಹಾಗಾದರೆ
ಪ್ರತಿಯೊಬ್ಬರೂ ತಮ್ಮಲ್ಲಿ ತಾವು ಕೇಳಿಕೊಳ್ಳಿರಿ - ನಾನು ಎಂತಹ ತಾರೆಯಾಗಿದ್ದೇನೆ? ಎಂದು.
ಎಲ್ಲರಲ್ಲಿಯೂ ಜ್ಞಾನ, ಯೋಗ, ಗುಣಗಳ ಧಾರಣೆ ಹಾಗೂ ಸೇವಾ ಭಾವವಂತು ಇದ್ದೇ ಇರುತ್ತದೆ. ಆದರೆ ಎಲ್ಲಾ
ಇದ್ದರೂ ಕೆಲವರಲ್ಲಿ ಜ್ಞಾನದ ಹೊಳಪಿದೆ, ಕೆಲವರಲ್ಲಿ ವಿಶೇಷ ನೆನಪಿನ ಅಂದರೆ ಯೋಗದ ಹೊಳಪಿದೆ. ಮತ್ತೆ
ಕೆಲಕೆಲವರು ತನ್ನ ಗುಣ ಮೂರ್ತಿಯ ಹೊಳಪಿನಿಂದ ವಿಶೇಷವಾಗಿ ಆಕರ್ಷಿಸುತ್ತಿದ್ದಾರೆ. ನಾಲ್ಕೂ
ಪ್ರಕಾರದ ಧಾರಣೆಗಳಲ್ಲಿದ್ದರೂ ಪರ್ಸೆಂಟೇಜಿನಲ್ಲಿ ಅಂತರವಿದೆ. ಆದ್ದರಿಂದ ತಾರೆಗಳು
ಭಿನ್ನ-ಭಿನ್ನವಾಗಿ ಹೊಳೆಯುತ್ತಿರುವಂತೆ ಕಂಡು ಬರುತ್ತಿದೆ. ಇದು ಆತ್ಮಿಕ ವಿಚಿತ್ರ ತಾರಾ
ಮಂಡಲವಾಗಿದೆ, ತಾವು ಆತ್ಮಿಕ ತಾರೆಗಳ ಪ್ರಭಾವವು ಇಡೀ ವಿಶ್ವದ ಮೇಲೆ ಬೀಳುತ್ತದೆ. ಅಂದಾಗ ವಿಶ್ವದ
ಸ್ಥೂಲ ತಾರೆಗಳ ಪ್ರಭಾವವೂ ವಿಶ್ವದ ಮೇಲೆ ಬೀಳುತ್ತದೆ. ಸ್ವಯಂ ತಾವೆಷ್ಟು ಶಕ್ತಿಶಾಲಿ
ತಾರೆಯಾಗುತ್ತೀರಿ, ಅಷ್ಟು ವಿಶ್ವದ ಆತ್ಮರ ಮೇಲೂ ಪ್ರಭಾವ ಬೀಳುತ್ತದೆ ಮತ್ತು ಭವಿಷ್ಯದಲ್ಲಿಯೂ
ಪ್ರವಹಿಸುತ್ತಿರುತ್ತದೆ. ಹೇಗೆ ಎಷ್ಟು ಕಗ್ಗತ್ತಲೆಯಾಗುತ್ತದೆಯೋ ಅಷ್ಟು ತಾರೆಗಳ ಶೋಭೆಯೂ ಸಹ
ಸ್ಪಷ್ಟವಾಗಿ ಕಾಣಿಸುತ್ತದೆ. ಅದೇ ರೀತಿಯಾಗಿ ಅಪ್ರಾಪ್ತಿಯ ಅಂಧಕಾರವು ಎಷ್ಟು ಹೆಚ್ಚಾಗುತ್ತಾ
ಇರುತ್ತದೆಯೋ, ಅಷ್ಟು ತಾವು ಆತ್ಮಿಕ ತಾರೆಗಳೂ ಸಹ ವಿಶೇಷ ಅನುಭವವನ್ನು ಮಾಡುತ್ತಾ ಇರುತ್ತೀರಿ.
ಧರಣಿಯಲ್ಲಿ ಹೊಳೆಯುತ್ತಿರುವ ತಾರೆಗಳು, ಜ್ಯೋತಿ ಬಿಂದು ರೂಪದಲ್ಲಿ, ಪ್ರಕಾಶಮಯ ಕಾಯ ಫರಿಶ್ತೆಯ
ರೂಪದಲ್ಲಿ ಎಲ್ಲರಿಗೂ ಕಾಣಿಸಿಕೊಳ್ಳುತ್ತದೆ. ಹೇಗೆ ಈಗ ಆಕಾಶದ ತಾರೆಗಳನ್ನು ನೋಡುತ್ತಾ, ತನ್ನ ಸಮಯ,
ಶಕ್ತಿ ಹಾಗೂ ಧನವನ್ನು ತೊಡಗಿಸುತ್ತಿದ್ದಾರೆ. ಅದೇ ರೀತಿ ಆತ್ಮಿಕ ತಾರೆಗಳನ್ನು ನೋಡುತ್ತಾ
ಆಶ್ಚರ್ಯ ಚಕಿತರೂ ಆಗುತ್ತಿರುತ್ತಾರೆ. ಹೇಗೆ ಈಗ ಆಕಾಶದಲ್ಲಿ ತಾರೆಗಳನ್ನು ನೋಡುತ್ತಾರೆಯೋ, ಹಾಗೆಯೇ
ಈ ಧರಣಿಯ ಮಂಡಲದ ನಾಲ್ಕೂ ಕಡೆಗಳಲ್ಲಿ ಫರಿಶ್ತೆಗಳ ಹೊಳಪು ಹಾಗೂ ಜ್ಯೋತಿರ್ಮಯ ತಾರೆಗಳ ಹೊಳಪನ್ನು
ನೋಡುವರು. ಅದನ್ನು ನೋಡುತ್ತಾ ಹೀಗೆ ಅನುಭವ ಮಾಡುವರು - ಇವರು ಯಾರು, ಈ ಧರಣಿಯ ಮೇಲೆ ತನ್ನ
ಚಮತ್ಕಾರವನ್ನು ತೋರಿಸಲು ಎಲ್ಲಿಂದ ಬಂದರು! ಎನ್ನುವಂತೆ. ಹೇಗೆ ಸ್ಥಾಪನೆಯ ಆದಿಯಲ್ಲಿಯೂ ಅನುಭವ
ಮಾಡಿದರು – ನಾಲ್ಕೂ ಕಡೆಯಲ್ಲಿ ಬ್ರಹ್ಮಾ ಮತ್ತು ಕೃಷ್ಣನ ಸಾಕ್ಷಾತ್ಕಾರದ ಮಾತು ಹರಡಿತು. ಇವರು
ಯಾರು? ನಮಗೆ ಇದೇನು ಕಾಣಿಸುತ್ತಿದೆ? ಎನ್ನುವುದಿತ್ತು. ಅನೇಕರಿಗೆ ಇದನ್ನು ತಿಳಿದುಕೊಳ್ಳಬೇಕೆಂಬ
ಮನಸ್ಸಾಯಿತು. ಅದೇ ರೀತಿ ಈಗ ಅಂತ್ಯದಲ್ಲಿಯೂ ನಾಲ್ಕೂ ಕಡೆಗಳಲ್ಲಿ, ಇವೆರಡೂ ರೂಪ "ಜ್ಯೋತಿ ಮತ್ತು
ಫರಿಶ್ತಾ", ಬಾಪ್ದಾದಾ ಮತ್ತು ಮಕ್ಕಳು, ಎಲ್ಲರಲ್ಲಿಯೂ ಈ ಹೊಳಪು ಕಾಣಿಸುತ್ತದೆ. ಮತ್ತು ಒಬ್ಬರಿಂದ
ಎಲ್ಲರಿಗೂ ಇದರ ಕಡೆಯೇ ಗಮನ ಹರಿಯುತ್ತದೆ. ಈಗ ಈ ದಿವ್ಯ ದೃಶ್ಯವು ತಾವೆಲ್ಲರೂ
ಸಂಪನ್ನರಾಗುವುದರಲ್ಲಿ ಉಳಿದುಕೊಂಡಿದೆ. ಫರಿಶ್ತಾ ಸ್ಥಿತಿಯು ಸಹಜ ಹಾಗೂ ಸ್ವತಹವಾಗಿ ಅನುಭವ
ಆಗುತ್ತದೆಯೆಂದರೆ, ಸಾಕ್ಷಾತ್ಕಾರದಲ್ಲಿ ಸಾಕ್ಷಾತ್ ಫರಿಶ್ತೆಯು ಕಾಣಿಸುತ್ತದೆ. ಈ ವರ್ಷವನ್ನು
ವಿಶೇಷವಾಗಿ ಫರಿಶ್ತಾ ಸ್ಥಿತಿಗಾಗಿಯೇ ಕೊಡಲಾಗಿದೆ. ಕೆಲವು ಮಕ್ಕಳು ತಿಳಿದುಕೊಳ್ಳುತ್ತಾರೆ - ಕೇವಲ
ನೆನಪಿನ ಅಭ್ಯಾಸವನ್ನಷ್ಟೇ ಮಾಡಬೇಕು ಅಥವಾ ಸೇವೆಯನ್ನೇ ಮಾಡಬೇಕು ಅಥವಾ ಸೇವೆಯಿಂದ ಮುಕ್ತರಾಗಿ
ತಪಸ್ಸಿನಲ್ಲಿಯೇ ಇರಬೇಕು ಎಂದು ತಿಳಿಯುತ್ತಾರೆ.
ಬಾಪ್ದಾದಾರವರು
ಸೇವಾರ್ಥವಾಗಿ ತಿಳಿಸುತ್ತಿದ್ದಾರೆ:
ಸೇವಾಭಾವ ಎಂದರೆ ಸದಾ ಪ್ರತಿಯೊಂದು ಆತ್ಮನ ಪ್ರತಿ ಶುಭಭಾವನೆ, ಶ್ರೇಷ್ಠ ಕಾಮನೆಯ ಭಾವಯನ್ನಿಡುವುದು.
ಸೇವಾಭಾವ ಅಂದರೆ ಪ್ರತಿಯೊಂದು ಆತ್ಮನ ಭಾವನೆಯನುಸಾರ ಫಲ ಕೊಡುವುದು. ಭಾವನೆಯೆನ್ನುವುದು
ಹದ್ದಿನದಲ್ಲ ಆದರೆ ಶ್ರೇಷ್ಠ ಭಾವನೆಯಾಗಿದೆ. ಒಂದುವೇಳೆ ತಾವು ಸೇವಾಧಾರಿಗಳಲ್ಲಿ ಕೆಲವರು ಆತ್ಮಿಕ
ಸ್ನೇಹದ ಭಾವನೆಯನ್ನಿಡುತ್ತಾರೆ, ಶಕ್ತಿಗಳ ಸಹಯೋಗದ ಭಾವನೆಯನ್ನಿಡುತ್ತಾರೆ, ಖುಷಿಯ
ಭಾವನೆಯನ್ನಿಡುತ್ತಾರೆ, ಶಕ್ತಿಗಳ ಪ್ರಾಪ್ತಿಯ ಭಾವನೆಯನ್ನಿಡುತ್ತಾರೆ, ಉಮಂಗ-ಉತ್ಸಾಹದ
ಭಾವನೆಯನ್ನಿಡುತ್ತಾರೆ, ಇಂತಹ ಭಿನ್ನ-ಭಿನ್ನ ಭಾವನೆಗಳ ಫಲ ಅಂದರೆ ಸಹಯೋಗದ ಮೂಲಕ ಅನುಭೂತಿ
ಮಾಡಿಸುವುದಾಯಿತು, ಇದಕ್ಕೇ ಸೇವಾ ಭಾವ ಎಂದು ಹೇಳಲಾಗುತ್ತದೆ. ಕೇವಲ ಭಾಷಣ ಮಾಡಿ ಬಂದು ಬಿಡುವುದು
ಅಥವಾ ಗ್ರೂಪ್ಗೆ ತಿಳಿಸಿ ಬಂದು ಬಿಡುವುದು, ಕೋರ್ಸ್ ಪೂರ್ಣಗೊಳಿಸಿ ಬಂದು ಬಿಡುವುದು, ಅಥವಾ
ಸೇವಾಕೇಂದ್ರವನ್ನು ತೆರೆದು ಬಂದು ಬಿಡುವುದಕ್ಕೆ ಸೇವಾಭಾವ ಎಂದು ಹೇಳುವುದಿಲ್ಲ. ಸೇವೆ ಅಂದರೆ
ಯಾವುದೇ ಆತ್ಮನ ಪ್ರತಿ ಪ್ರಾಪ್ತಿಯ ಫಲದ ಅನುಭೂತಿ ಮಾಡಿಸುವುದು. ಇಂತಹ ಸೇವೆಯಲ್ಲಿ ತಪಸ್ಸು ಸದಾ
ಜೊತೆಯಿರುತ್ತದೆ.
ತಪಸ್ಸು ಎನ್ನುವುದರ ಅರ್ಥವನ್ನು ತಿಳಿಸಿದ್ದೇವೆ - ಯಾವುದೇ ಕಾರ್ಯವನ್ನು ಧೃಡ ಸಂಕಲ್ಪದಿಂದ
ಮಾಡುವುದು. ಎಲ್ಲಿ ಯಥಾರ್ಥ ಸೇವಾ ಭಾವವಿದೆಯೋ, ಅಲ್ಲಿ ತಪಸ್ಸಿನ ಭಾವ ಬೇರೆಯಾಗಿರುವುದಿಲ್ಲ.
ತ್ಯಾಗ, ತಪಸ್ಸು, ಸೇವೆ - ಈ ಮೂರರ ಕಂಬೈಂಡ್ ರೂಪವೇ ಸತ್ಯ ಸೇವೆಯಾಗಿದೆ. ಮತ್ತು ಹೆಸರಿಗಷ್ಟೇ ಸೇವೆ
ಮಾಡುವುದರ ಫಲವು ಅಲ್ಪಕಾಲದ್ದಾಗಿರುತ್ತದೆ. ಅಲ್ಲಿಯೇ ಸೇವೆ ಮಾಡಿದಿರಿ ಮತ್ತು ಅಲ್ಲಿಯೇ ಅಲ್ಪಕಾಲದ
ಪ್ರಭಾವದ ಫಲವು ಪ್ರಾಪ್ತಿಯಾಯಿತು ಮತ್ತು ಅಲ್ಲಿಯೇ ಸಮಾಪ್ತಿಯೂ ಆಗಿ ಬಿಟ್ಟಿತು, ಅಲ್ಪಕಾಲದ
ಪ್ರಭಾವದ ಫಲವು ಅಲ್ಪಕಾಲದ ಮಹಿಮೆಯಾಗಿರುತ್ತದೆ - ಅದೇನೆಂದರೆ, ಇವರು ಬಹಳ ಚೆನ್ನಾಗಿ ಭಾಷಣ
ಮಾಡಿದರು, ಬಹಳ ಚೆನ್ನಾಗಿ ಕೋರ್ಸ್ ಕೊಟ್ಟರು, ಬಹಳ ಒಳ್ಳೆಯ ಸೇವೆ ಮಾಡಿದರು. ಚೆನ್ನಾಗಿದೆ -
ಒಳ್ಳೆಯದೆಂದು ಹೇಳುವ ಅಲ್ಪಕಾಲದ ಫಲವಂತು ಸಿಕ್ಕಿತು ಹಾಗೂ ಆ ಮಹಿಮೆಯನ್ನು ಕೇಳುವ ಅಲ್ಪಕಾಲದ ಫಲವು
ಸಿಕ್ಕಿತು. ಆದರೆ ಅನುಭೂತಿ ಮಾಡಿಸುವುದು ಅಂದರೆ ತಂದೆಯೊಂದಿಗೆ ಸಂಬಂಧವನ್ನು ಜೋಡಣೆ ಮಾಡಿಸುವುದು,
ಶಕ್ತಿಶಾಲಿ ಮಾಡುವುದು ಸತ್ಯ ಸೇವೆಯಾಗಿದೆ. ಸತ್ಯ ಸೇವೆಯಲ್ಲಿ ತ್ಯಾಗ ತಪಸ್ಸು ಇಲ್ಲದಿದ್ದರೆ, ಈ
50-50% ಸೇವೆಯಲ್ಲ, ಆದರೆ 25% ಸೇವೆಯಾಯಿತು.
ಸತ್ಯ ಸೇವಾಧಾರಿಯ ಚಿಹ್ನೆಯಾಗಿದೆ - ತ್ಯಾಗ ಅರ್ಥಾತ್ ನಮ್ರತೆ ಮತ್ತು ತಪಸ್ಸು ಅರ್ಥಾತ್ ಒಬ್ಬ
ತಂದೆಯಲ್ಲಿ ನಿಶ್ಚಯ ಮತ್ತು ನಶೆಯಲ್ಲಿ ಧೃಡತೆಯಿರುವುದಕ್ಕೆ ಯಥಾರ್ಥ ಸೇವೆಯೆಂದು ಹೇಳಲಾಗುತ್ತದೆ.
ಬಾಪ್ದಾದಾರವರು ಮಕ್ಕಳನ್ನು ನಿರಂತರ ಸತ್ಯ ಸೇವಾಧಾರಿ ಆಗುವುದಕ್ಕಾಗಿ ಹೇಳುತ್ತಾರೆ. ಹೆಸರಂತು
ಸೇವೆಯೆಂದು ಇದೆ, ಮತ್ತೆ ಸ್ವಯಂ ತಾವೇ ಬೇಸರವಾಗಿದ್ದೀರಿ, ಅನ್ಯರನ್ನೂ ಬೇಸರ
ಪಡಿಸುತ್ತಿದ್ದೀರೆಂದರೆ - ಬಾಪ್ದಾದಾರವರು ಈ ಸೇವೆಯಿಂದ ಮುಕ್ತರಾಗಲು ಹೇಳುತ್ತಿದ್ದಾರೆ. ಇಂತಹ
ಸೇವೆಯನ್ನು ಮಾಡದಿರುವುದೇ ಒಳ್ಳೆಯದು. ಏಕೆಂದರೆ ಸೇವೆಯ ವಿಶೇಷ ಗುಣ "ಸಂತುಷ್ಟತೆ" ಆಗಿದೆ. ಎಲ್ಲಿ
ಸಂತುಷ್ಟತೆಯಿಲ್ಲ, ಭಲೆ ಸ್ವಯಂನಿಂದಲೂ ಸಂತುಷ್ಟರಿಲ್ಲದೆ ಇರಬಹುದು, ಭಲೆ ಸಂಪರ್ಕದವರೊಂದಿಗೆ
ಸಂತುಷ್ಟವಾಗದೇ ಇರಬಹುದು, ಅಂತಹ ಸೇವೆಯು ಸ್ವಯಂಗೂ ಫಲದ ಪ್ರಾಪ್ತಿಯನ್ನು ಮಾಡಿಸುವುದಿಲ್ಲ,
ಅನ್ಯರಿಗೂ ಮಾಡಿಸುವುದಿಲ್ಲ. ಆದ್ದರಿಂದ ಮೊದಲು ಸ್ವಯಂ ತಮ್ಮನ್ನು ಸಂತುಷ್ಟಮಣಿಯನ್ನಾಗಿ ಮಾಡಿಕೊಂಡು,
ನಂತರ ಸೇವೆಯಲ್ಲಿ ಬರುವುದು ಒಳ್ಳೆಯದು. ಇಲ್ಲವೆಂದರೆ ಅವಶ್ಯವಾಗಿ ಸೂಕ್ಷ್ಮ ಹೊರೆಯಿರುತ್ತದೆ.
ಅಂತಹ ಅನೇಕ ಪ್ರಕಾರದ ಹೊರೆಗಳು ತಮ್ಮ ಹಾರುವ ಕಲೆಯಲ್ಲಿ ವಿಘ್ನ ರೂಪವಾಗಿ ಬಿಡುತ್ತದೆ. ಹೊರೆಯನ್ನು
ಹೆಚ್ಚಿಸಬಾರದು, ಇಳಿಸಿಕೊಳ್ಳಬೇಕಾಗಿದೆ, ಯಾವಾಗ ಏಕಾಂತವಾಸಿಯಾಗುವುದು ಒಳ್ಳೆಯದೆಂದು
ತಿಳಿಯುತ್ತೀರಿ. ಹೀಗೆ ಹೇಳುತ್ತಿರುವುದು ಏಕೆಂದರೆ ಏಕಾಂತವಾಸಿ ಆಗುವುದರಿಂದ ಸ್ವಯಂ
ಪರಿವರ್ತನೆಯಲ್ಲಿ ಗಮನ ಹರಿಯುತ್ತದೆ. ಬಾಪ್ದಾದಾರವರು ತಪಸ್ಸು ಮಾಡುವುದಕ್ಕೇನು ಹೇಳುತ್ತಿದ್ದಾರೆ,
ಅದು ಕೇವಲ ರಾತ್ರಿ-ಹಗಲು ಕುಳಿತು-ಕುಳಿತುಕೊಂಡು ಮಾಡುವುದಕ್ಕಾಗಿ ಹೇಳುತ್ತಿಲ್ಲ. ತಪಸ್ಸಿನಲ್ಲಿ
ಕುಳಿತುಕೊಳ್ಳುವುದೂ ಸಹ ಸೇವೆಯೇ ಆಗಿದೆ, ಲೈಟ್ಹೌಸ್-ಮೈಟ್ಹೌಸ್ ಆಗಿದ್ದು ಶಾಂತಿಯ, ಶಕ್ತಿಯ
ಕಿರಣಗಳ ಮೂಲಕ ವಾಯುಮಂಡಲವನ್ನು ರೂಪಿಸಬೇಕಾಗಿದೆ (ತಯಾರು ಮಾಡಬೇಕಾಗಿದೆ). ತಪಸ್ಸಿನಲ್ಲಿ ಮನಸ್ಸಾ
ಸೇವೆಯೂ ಅಡಕವಾಗಿದೆ, ಅದು ಬೇರೆಯಾಗಿರುವುದಿಲ್ಲ. ಇಲ್ಲದಿದ್ದರೆ ತಪಸ್ಸು ಎಂದರೆ ಏನು ಮಾಡುವಿರಿ!
ಶ್ರೇಷ್ಠಾತ್ಮ ಬ್ರಾಹ್ಮಣ ಆತ್ಮರಾಗಿ ಬಿಟ್ಟಿದ್ದೀರಿ. ಈಗ ತಪಸ್ಸು ಅರ್ಥಾತ್ ಸ್ವಯಂ ತಾವು
ಸರ್ವಶಕ್ತಿಗಳಿಂದ ಸಂಪನ್ನರಾಗಿ ಧೃಡ ಸ್ಥಿತಿ, ಧೃಡ ಸಂಕಲ್ಪದ ಮೂಲಕ ವಿಶ್ವದ ಸೇವೆಯನ್ನು
ಮಾಡುವುದಕ್ಕೆ ತಪಸ್ಸು ಎಂದು ಹೇಳಲಾಗುತ್ತದೆ. ಕೇವಲ ವಾಣಿಯ ಸೇವೆಯೇ ಸೇವೆಯಲ್ಲ. ಯಾವ ರೀತಿ
ಸುಖ-ಶಾಂತಿ-ಪವಿತ್ರತೆಯು ಪರಸ್ಪರದಲ್ಲಿ ಸಂಬಂಧವಿದೆಯೋ ಹಾಗೆಯೇ ತ್ಯಾಗ-ತಪಸ್ಸು-ಸೇವೆಯು
ಒಂದಕ್ಕೊಂದು ಸಂಬಂಧವಿದೆ. ತಪಸ್ವಿ ರೂಪ ಅರ್ಥಾತ್ ಶಕ್ತಿಶಾಲಿ ಸೇವಾಧಾರಿ ರೂಪದಲ್ಲಿರುವುದಕ್ಕೆ
ಬಾಪ್ದಾದಾರವರು ತಿಳಿಸುತ್ತಾರೆ. ತಪಸ್ವಿ ರೂಪದ ದೃಷ್ಟಿಯೂ ಸಹ ಸೇವೆಯನ್ನು ಮಾಡುತ್ತದೆ, ಶಾಂತಿ
ಸ್ವರೂಪದ ಚಹರೆಯೂ ಸಹ ಸೇವೆಯನ್ನು ಮಾಡುತ್ತದೆ. ತಪಸ್ವಿ ಮೂರ್ತಿಯ ದರ್ಶನ ಆಗುವುದರಿಂದಲೂ
ಪ್ರಾಪ್ತಿಯ ಅನುಭೂತಿಯಾಗುತ್ತದೆ ಆದ್ದರಿಂದ ವರ್ತಮಾನದಲ್ಲಿ ನೋಡಿ, ಯಾರು ಹಠದಿಂದ ತಪಸ್ಸು
ಮಾಡುತ್ತಾರೆಯೋ, ಅವರ ದರ್ಶನ ಮಾಡುವುದಕ್ಕಾಗಿ ಗುಂಪು ಕಟ್ಟಿಕೊಂಡು ಹೋಗುತ್ತಾರೆ. ಅಂತ್ಯದವರೆಗೂ
ತಮ್ಮ ಈ ತಪಸ್ಸಿನ ಪ್ರಭಾವದ ನೆನಪಾರ್ಥವು ನಡೆಯುತ್ತಾ ಬರುತ್ತಿದೆ ಅಂದಮೇಲೆ ಸೇವಾಭಾವ ಎಂದು
ಯಾವುದಕ್ಕೆ ಹೇಳಲಾಗುತ್ತದೆ ತಿಳಿಯಿತೆ! ಸೇವಾ ಭಾವ ಎಂದರೆ ಸರ್ವರ ಬಲಹೀನತೆಗಳನ್ನು ಸಮಾವೇಶ
ಮಾಡಿಕೊಳ್ಳುವ ಭಾವವಾಗಿದೆ. ಬಲಹೀನತೆಗಳ ಮೇಲೆ ಯುದ್ಧ ಮಾಡುವ ಭಾವವಲ್ಲ, ಸಮಾವೇಶ ಮಾಡಿಕೊಳ್ಳುವ
ಭಾವ. ಸ್ವಯಂ ತಾವು ಸಹನೆ ಮಾಡುತ್ತಾ ಅನ್ಯರಿಗೂ ಶಾಂತಿ ಕೊಡುವ ಭಾವವನ್ನೇ ಸಹನಾಶಕ್ತಿ ಎಂದು
ಹೇಳಲಾಗುತ್ತದೆ. ಸಹನಾಶಕ್ತಿಯನ್ನು ತಮ್ಮಲ್ಲಿ ತುಂಬಿಕೊಂಡು ಶಕ್ತಿಯನ್ನು ಕೊಡಿ. ಸಹನೆ ಮಾಡುವುದು
ಸಾಯುವುದಲ್ಲ. ಕೆಲವರು ಹೀಗೆ ಯೋಚಿಸುತ್ತಾರೆ - ನಾವಂತು ಸಹನೆ ಮಾಡುತ್ತಾ ಮಾಡುತ್ತಾ ಸತ್ತು
ಹೋಗುತ್ತೇವೆ, ನಾವೇಕೆ ಸಾಯಬೇಕು! ಆದರೆ ಇದು ಸಾಯುವುದಲ್ಲ, ಹೀಗೆ ಸಾಯುವುದು ಎಲ್ಲರ ಹೃದಯಗಳಲ್ಲಿ
ಸ್ನೇಹದಿಂದ ಬದುಕುವುದಾಗಿದೆ. ಎಷ್ಟೇ ವಿರೋಧಿಗಳಾಗಿರಲಿ, ರಾವಣನಿಗಿಂತಲೂ ಜೋರಾಗಿರಲಿ, ಒಂದು ಸಾರಿ
ಅಲ್ಲ 10 ಸಾರಿ ಸಹನೆ ಮಾಡಬೇಕಾಗುತ್ತೆಯೆಂದರೂ, ಈ ಸಹನಾಶಕ್ತಿಯ ಫಲವು ಅವಿನಾಶಿ ಮತ್ತು
ಮಧುರವಾಗಿರುತ್ತದೆ. ಅವಶ್ಯವಾಗಿ ಅವರೂ ಬದಲಾಗುತ್ತಾರೆ. ನಾನಂತು ಇಷ್ಟು ಸಹನೆಯನ್ನು ಮಾಡಿದೆನು,
ಇವರೂ ಸ್ವಲ್ಪ ಸಹನೆ ಮಾಡಲಿ ಎನ್ನುವ ಭಾವನೆಯನ್ನು ಇಟ್ಟುಕೊಳ್ಳಬಾರದು, ಅಲ್ಪಕಾಲದ ಫಲದ
ಭಾವನೆಯನ್ನಿಡಬಾರದು, ದಯಾ ಭಾವನೆಯನ್ನಿಡುತ್ತೀರೆಂದರೆ ಸೇವಾಭಾವ ಎಂದು ಹೇಳಲಾಗುತ್ತದೆ. ಅಂದಾಗ
ಬಾಪ್ದಾದಾರವರು ಈ ವರ್ಷದಲ್ಲಿ ಇಂತಹ ಸತ್ಯ ಸೇವೆಯ ಪ್ರಮಾಣವನ್ನು ಕೊಟ್ಟು, ಸುಪುತ್ರರ ಲಿಸ್ಟ್ನಲ್ಲಿ
ಬರುವ ಗೋಲ್ಡನ್ ಚಾನ್ಸ್ ಕೊಡುತ್ತಿದ್ದಾರೆ. ಈ ವರ್ಷ ಮೇಳ ಅಥವಾ ಕಾರ್ಯಕ್ರಮಗಳನ್ನು ಬಹಳ ಚೆನ್ನಾಗಿ
ಮಾಡಿದಿರಾ ಎನ್ನುವುದನ್ನು ನೋಡುವುದಿಲ್ಲ. ಆದರೆ ಸಂತುಷ್ಟಮಣಿ ಆಗಿದ್ದು ಸಂತುಷ್ಟತೆಯ ಸೇವೆಯಲ್ಲಿ
ಮೊದಲ ನಂಬರಿನಲ್ಲಿ ಹೋಗಬೇಕಾಗಿದೆ. "ವಿಘ್ನ ವಿನಾಶಕ"ನ ಟೈಟಲ್ನ ಸಮಾರೋಹದಲ್ಲಿ ಬಹುಮಾನವನ್ನು
ಪಡೆಯಿರಿ. ತಿಳಿಯಿತೆ! ಇದಕ್ಕೇ "ನಷ್ಟಮೋಹ ಸ್ಮೃತಿ ಸ್ವರೂಪ" ಎಂದು ಹೇಳಲಾಗುತ್ತದೆ. ಹಾಗಾದರೆ
18ನೇ ವರ್ಷದ ಸಂಪನ್ನತೆಯಲ್ಲಿ ವಿಶೇಷವಾಗಿ ಸಂಪನ್ನರಾಗುವ ಅಧ್ಯಾಯದ ಸ್ವರೂಪದಲ್ಲಿ ತೋರಿಸಿರಿ.
ಇದಕ್ಕೇ ತಂದೆಯ ಸಮಾನರಾಗುವುದು ಎಂದು ಹೇಳಲಾಗುತ್ತದೆ. ಒಳ್ಳೆಯದು.
ಸದಾ ಹೊಳೆಯುತ್ತಿರುವ ಆತ್ಮಿಕ ತಾರೆಗಳಿಗೆ, ಸದಾ ಸಂತುಷ್ಟತೆಯ ಪ್ರಕಂಪನಗಳನ್ನು ಹರಡಿಸುವಂತಹ
ಸಂತುಷ್ಟ ಮಣಿಗಳಿಗೆ, ಸದಾ ಒಂದೇ ಸಮಯದಲ್ಲಿ ತ್ಯಾಗ-ತಪಸ್ಸು-ಸೇವೆಯ ಪ್ರಭಾವ ಬೀರುವ ಪ್ರಭಾವಶಾಲಿ
ಆತ್ಮರಿಗೆ, ಸದಾ ಸರ್ವ ಆತ್ಮರಿಗೂ ಆತ್ಮಿಕ ಭಾವನೆಯ ಆತ್ಮಿಕ ಫಲವನ್ನು ಕೊಡುವಂತಹ ಬೀಜ ಸ್ವರೂಪ
ತಂದೆಯ ಸಮಾನ ಶ್ರೇಷ್ಠ ಮಕ್ಕಳಿಗೆ, ಸಂಪನ್ನರಾಗುವ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ
ನಮಸ್ತೆ.
ಪಂಜಾಬ್ ಹಾಗೂ
ಹರಿಯಾಣ ಜೋನ್ ನಿನ ಸಹೋದರ-ಸಹೋದರಿಯರಿಂದ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ:
ತಮ್ಮನ್ನು ಸದಾ ಅಚಲ-ಅಡೋಲ ಆತ್ಮರೆಂದು ಅನುಭವ ಮಾಡುತ್ತೀರಾ? ಯಾವುದೇ ಪ್ರಕಾರದ ಏರುಪೇರಿನಲ್ಲಿಯೂ
ಅಚಲರಾಗಿರುವುದೇ ಶ್ರೇಷ್ಠ ಬ್ರಾಹ್ಮಣ ಆತ್ಮರ ಲಕ್ಷಣವಾಗಿದೆ. ಪ್ರಪಂಚದವರು ಹಲ್ಚಲ್ನಲ್ಲಿ ಇರಲಿ,
ಆದರೆ ಆ ಹಲ್ಚಲ್ನಲ್ಲಿ ತಾವು ಶ್ರೇಷ್ಠಾತ್ಮರು ಬರಲು ಸಾಧ್ಯವಿಲ್ಲ. ಏಕೆ? ಡ್ರಾಮಾದ ಪ್ರತಿಯೊಂದು
ದೃಶ್ಯವನ್ನು ತಿಳಿದಿದ್ದೀರಿ. ಜ್ಞಾನಪೂರ್ಣ ಆತ್ಮರು, ಶಕ್ತಿಪೂರ್ಣರಾಗಿರುವವರು ಸದಾ ಹಾಗೂ
ಸ್ವತಹವಾಗಿಯೇ ಅಚಲರಾಗಿರುತ್ತಾರೆ. ಹಾಗಾದರೆ ವಾಯುಮಂಡಲದಿಂದ ಗಾಬರಿಯಾಗುವುದಿಲ್ಲವೆ!
ನಿರ್ಭಯರಾಗಿದ್ದೀರಾ? ಶಕ್ತಿಯರು ನಿರ್ಭಯರಾಗಿದ್ದೀರಾ? ಅಥವಾ ಸ್ವಲ್ಪ-ಸ್ವಲ್ಪ ಭಯವೆನಿಸುತ್ತದೆಯೇ?
ಏಕೆಂದರೆ ಇದಂತು ಸ್ಥಾಪನೆಯ ಆರಂಭದಿಂದಲೂ ತಿಳಿದಿದ್ದೀರಿ - ಭಾರತದಲ್ಲಿ ಅವಶ್ಯವಾಗಿ ಅಂತರ್ಯುದ್ಧ
ನಡೆಯುತ್ತದೆ, ತಾವು ಮಾಡಿರುವ ಪ್ರಾರಂಭದ ಚಿತ್ರಗಳಲ್ಲಿ ತೋರಿಸಲಾಗಿದೆ. ಏನನ್ನು ತೋರಿಸಲಾಗಿದೆಯೋ
ಅದಂತು ಆಗುತ್ತದೆಯಲ್ಲವೆ! ಭಾರತದ ಪಾತ್ರವೇ ಅಂತರ್ಯುದ್ಧದೊಂದಿಗಿದೆ ಆದ್ದರಿಂದ ನತಿಂಗ್ನ್ಯೂ.
ಹಾಗಾದರೆ ನತಿಂಗ್ ನ್ಯೂ ಎನ್ನುವ ಸ್ಥಿತಿಯಿದೆಯೇ ಅಥವಾ ಗಾಬರಿಯಾಗಿ ಬಿಡುತ್ತೀರಾ? ಏನಾಯಿತು,
ಹೇಗಾಯಿತು, ಇದಾಯಿತು.... ಎಂಬ ಸಮಾಚಾರವನ್ನು ಕೇಳುತ್ತಾ, ನೋಡುತ್ತಿದ್ದರೂ, ಶಕ್ತಿಶಾಲಿಯಾಗಿದ್ದು
ಡ್ರಾಮಾದ ಪೂರ್ವ ನಿಶ್ಚಿತವನ್ನು ನೋಡುತ್ತಾ, ಅನ್ಯರಿಗೂ ಶಕ್ತಿಯನ್ನು ಕೊಡುವುದೇ ತಮ್ಮೆಲ್ಲರ
ಕಾರ್ಯವಲ್ಲವೆ! ಪ್ರಪಂಚದವರು ಗಾಬರಿಯಾಗುತ್ತಾ ಇರುತ್ತಾರೆ ಮತ್ತು ಆ ಆತ್ಮರಲ್ಲಿ ತಾವು ಶಕ್ತಿಯನ್ನು
ತುಂಬುವಿರಿ. ಯಾರೇ ಸಂಪರ್ಕದಲ್ಲಿ ಬರುತ್ತಾರೆ, ಅವರಿಗೆ ಶಕ್ತಿಗಳ ದಾನ ಕೊಡುತ್ತಾ ನಡೆಯಿರಿ,
ಶಾಂತಿಯ ದಾನ ಕೊಡುತ್ತಾ ಸಾಗಿರಿ.
ವರ್ತಮಾನ ಅಶಾಂತಿಯ ಸಮಯದಲ್ಲಿ ಶಾಂತಿಯನ್ನು ಕೊಡುವ ಸಮಯವಾಗಿದೆ. ಹಾಗಾದರೆ ತಾವು ಶಾಂತಿ
ದೂತರಾಗಿದ್ದೀರಿ. ಶಾಂತಿ ದೂತ ಎಂಬ ಗಾಯನವಿದೆಯಲ್ಲವೆ! ಅಂದಾಗ ಯಾರೆಲ್ಲಿಯೇ ಇರುತ್ತೀರಿ, ಸದಾ
ತಮ್ಮನ್ನು ಶಾಂತಿದೂತನೆಂದು ತಿಳಿದು ನಡೆಯಿರಿ. ಶಾಂತಿ ದೂತನಾಗಿದ್ದೇನೆ, ಶಾಂತಿಯ ಸಂದೇಶವನ್ನು
ಕೊಡುವವರಾಗಿದ್ದೇವೆ ಎನ್ನುವಂತಿದ್ದರೆ ಸ್ವಯಂ ತಾವೂ ಸಹ ಶಾಂತ ಸ್ವರೂಪ ಶಕ್ತಿಶಾಲಿಯಾಗುತ್ತೀರಿ
ಮತ್ತು ಅನ್ಯರಿಗೂ ಕೊಡುತ್ತಿರುತ್ತೀರಿ. ಅವರು ಅಶಾಂತಿ ಕೊಡಲಿ, ತಾವು ಶಾಂತಿ ಕೊಡಿ. ಅವರು ಬೆಂಕಿ
ಹಚ್ಚಲಿ, ತಾವು ನೀರನ್ನು ಹಾಕಿರಿ - ತಮ್ಮ ಕಾರ್ಯವು ಇದೇ ಆಗಿದೆಯಲ್ಲವೆ. ಇಂತಹ ಮಕ್ಕಳಿಗೇ ಸತ್ಯ
ಸೇವಾಧಾರಿ ಎಂದು ಹೇಳಲಾಗುತ್ತದೆ. ಇಂತಹ ಸಮಯದಲ್ಲಿ ಈ ಸೇವೆಯದೇ ಅವಶ್ಯಕತೆಯಿದೆ. ಶರೀರವಂತು ವಿನಾಶಿ
ಆದರೆ ಆತ್ಮವು ಶಕ್ತಿಶಾಲಿ ಆಗಿರುತ್ತದೆಯೆಂದರೆ, ಒಂದು ಶರೀರ ಬಿಟ್ಟರೂ ಇನ್ನೊಂದರಲ್ಲಿ ನೆನಪಿನ
ಪ್ರಾಲಬ್ಧವು ನಡೆಯುತ್ತಿರುತ್ತದೆ. ಆದ್ದರಿಂದ ಅವಿನಾಶಿ ಪ್ರಾಪ್ತಿಯನ್ನು ಮಾಡಿಸುತ್ತಾ ಸಾಗಿರಿ.
ಹಾಗಾದರೆ ತಾವು ಯಾರು? ಶಾಂತಿ ದೂತ. ಶಾಂತಿಯ ಸಂದೇಶವಾಹಕ, ಮಾಸ್ಟರ್ ಶಾಂತಿ ದಾತ, ಮಾಸ್ಟರ್ ಶಕ್ತಿ
ದಾತಾ ಎನ್ನುವ ಸ್ಮೃತಿಯು ಸದಾ ಇರುತ್ತದೆಯಲ್ಲವೆ! ಸದಾ ತಮ್ಮನ್ನು ಇದೇ ಸ್ಮೃತಿಯಲ್ಲಿದ್ದು
ಮುಂದುವರೆಸುತ್ತಾ, ಅನ್ಯರನ್ನೂ ಮುಂದುವರೆಸುವ ಸೇವೆಯಿದೆ! ಸರ್ಕಾರದ ಯಾವುದೇ
ನಿಯಮಗಳಾಗುತ್ತದೆಯೆಂದರೆ, ಅದರ ಪಾಲನೆ ಮಾಡಲೇಬೇಕಾಗುತ್ತದೆ. ಆದರೆ ಸ್ವಲ್ಪ ಸಮಯ ಸಿಕ್ಕಿದರೂ
ಅವಶ್ಯವಾಗಿ ಮನಸ್ಸಾ, ವಾಣಿಯಿಂದ ಸೇವೆಯನ್ನು ಮಾಡುತ್ತಿರಿ. ಈಗ ಮನಸ್ಸಾ ಸೇವೆಯಂತು ಬಹಳ
ಅವಶ್ಯಕತೆಯಿದೆ ಆದರೆ ಯಾವಾಗ ಸ್ವಯಂನಲ್ಲಿ ಶಕ್ತಿಗಳು ತುಂಬಿರುತ್ತದೆಯೋ, ಆಗಲೇ ಅನ್ಯರಿಗೂ
ಕೊಡುವುದಕ್ಕೆ ಸಾಧ್ಯವಾಗುವುದು. ಅಂದಾಗ ಸದಾ ಶಾಂತಿದಾತನ ಮಕ್ಕಳು ಶಾಂತಿದಾತ ಆಗಿರಿ. ದಾತನೂ
ಆಗಿದ್ದೀರಿ ಅಂದಮೇಲೆ ವಿದಾತನೂ ಸಹ ಆಗಿದ್ದೀರಿ. ನಡೆಯುತ್ತಾ-ಸುತ್ತಾಡುತ್ತಾ ನೆನಪಿರಲಿ - ನಾನು
ಮಾಸ್ಟರ್ ಶಾಂತಿ ದಾತ, ಮಾಸ್ಟರ್ ಶಕ್ತಿ ದಾತ ಆಗಿರುವೆನು - ಇದೇ ಸ್ಮೃತಿಯಿಂದ ಅನೇಕ ಆತ್ಮರಿಗೂ
ಪ್ರಕಂಪನಗಳನ್ನು ಕೊಡುತ್ತಿರಿ. ಅದರಿಂದ ಅವರು ಅನುಭವ ಮಾಡುತ್ತಾರೆ - ಇವರ ಸಂಪರ್ಕದಲ್ಲಿ
ಬರುವುದರಿಂದ ಶಾಂತಿಯ ಅನುಭೂತಿಯಾಗುತ್ತಿದೆ. ಇಂತಹ ಸೇವೆ ಮಾಡುವುದಕ್ಕಾಗಿ ಇದೇ ವರದಾನವನ್ನು
ನೆನಪಿಟ್ಟುಕೊಳ್ಳಿರಿ - ತಂದೆಯ ಸಮಾನ ಮಾಸ್ಟರ್ ಶಾಂತಿದಾತ, ಶಕ್ತಿದಾತ ಭವ. ಎಲ್ಲರೂ
ಬಹದ್ದೂರರಲ್ಲವೆ! ಹಲ್ಚಲ್ನಲ್ಲಿಯೂ ವ್ಯರ್ಥ ಸಂಕಲ್ಪವು ನಡೆಯಬಾರದು. ಏಕೆಂದರೆ ವ್ಯರ್ಥ ಸಂಕಲ್ಪವು
ಸಮರ್ಥರನ್ನಾಗಿ ಮಾಡುವುದಕ್ಕೆ ಬಿಡುವುದಿಲ್ಲ. ಏನಾಗುತ್ತದೆಯೋ, ಇದಂತು ಆಗುವುದಿಲ್ಲ...... ಈ
ಸಂಕಲ್ಪಗಳು ವ್ಯರ್ಥ ಸಂಕಲ್ಪಗಳಾಗಿವೆ. ಏನಾಗುತ್ತದೆಯೋ ಅದನ್ನು ಶಕ್ತಿಶಾಲಿಯಾಗಿದ್ದು ನೋಡಿರಿ
ಮತ್ತು ಅನ್ಯರಿಗೂ ಶಕ್ತಿ ಕೊಡಿ. ಈ ಸೈಡ್ಸೀನುಗಳೂ ಸಹ ಬರುತ್ತವೆ, ಇದೊಂದು ಬೈಪ್ಲಾಸ್ ನಡೆಯುತ್ತಿದೆ.
ಬೈಪ್ಲಾಟ್ ಎಂದು ತಿಳಿದುಕೊಂಡು ನೋಡುತ್ತೀರೆಂದರೆ ಗಾಬರಿಯಾಗುವುದಿಲ್ಲ. ಒಳ್ಳೆಯದು.
ವಿದಾಯಿಯ
ಸಮಯದಲ್ಲಿ (ಅಮೃತವೇಳೆ) –
ಈ ಸಂಗಮಯುಗವು "ಅಮೃತವೇಳೆ" ಆಗಿದೆ. ಇಡೀ ಸಂಗಮಯುಗವೇ ಅಮೃತವೇಳೆ ಆಗಿರುವುದರಿಂದ, ಈ ಸಮಯಕ್ಕೆ
ಸದಾಕಾಲದ ಮಹಾನತೆಯೆಂದು ಗಾಯನವಾಗಿದೆ. ಹಾಗಾದರೆ ಇಡೀ ಸಂಗಮಯುಗ ಅರ್ಥಾತ್ ಅಮೃತವೇಳೆಯೇ ಡೈಮಂಡ್
ಮಾರ್ನಿಂಗ್ ಆಗಿದೆ. ತಂದೆಯು ಸದಾ ಮಕ್ಕಳ ಜೊತೆಯಿದ್ದಾರೆ ಮತ್ತು ಮಕ್ಕಳು ತಂದೆಯ ಜೊತೆಯಿದ್ದಾರೆ
ಆದ್ದರಿಂದ ಬೇಹದ್ದಿನ ಡೈಮಂಡ್ ಮಾರ್ನಿಂಗ್. ಇದನ್ನು ಸದಾ ಬಾಪ್ದಾದಾರವರು ಹೇಳುತ್ತಿರುತ್ತಾರೆ ಆದರೆ
ಎಲ್ಲಾ ಮಕ್ಕಳು ವ್ಯಕ್ತ ಸ್ವರೂಪದಲ್ಲಿ ವ್ಯಕ್ತ ದೇಶದ ಲೆಕ್ಕದಿಂದ ಜೊತೆಯಿರುವ ಗುಡ್ಮಾರ್ನಿಂಗ್
ಎಂದು ಹೇಳಿರಿ, ಅಥವಾ ಗೋಲ್ಡನ್ ಮಾರ್ನಿಂಗ್ ಎಂದಾದರೂ ಹೇಳಿ ಅಥವಾ ಡೈಮಂಡ್ ಮಾರ್ನಿಂಗ್ ಎಂದು ಹೇಳಿ,
ಅದೆಲ್ಲವನ್ನು ಎಲ್ಲಾ ಮಕ್ಕಳಿಗೂ ಕೊಡುತ್ತಿದ್ದೇವೆ. ಸ್ವಯಂ ಸಹ ಡೈಮಂಡ್ ಆಗಿದ್ದೀರಿ ಮತ್ತು
ಮಾರ್ನಿಂಗ್ ಸಹ ಡೈಮಂಡ್ ಆಗಿದೆ, ಇನ್ನೂ ಅನೇಕರನ್ನು ಡೈಮಂಡ್ ಮಾಡಬೇಕಾಗಿದೆ ಆದ್ದರಿಂದ ಸದಾ
ಜೊತೆಯಿರುವ ಗುಡ್ಮಾರ್ನಿಂಗ್. ಒಳ್ಳೆಯದು.
ವರದಾನ:
ಪಂಚ ತತ್ವಗಳು ಹಾಗೂ ಪಂಚ ವಿಕಾರಗಳನ್ನು ತಮ್ಮ ಸೇವಾಧಾರಿಯನ್ನಾಗಿ ಮಾಡಿಕೊಳ್ಳುವಂತಹ ಮಾಯಾಜೀತ
ಸ್ವರಾಜ್ಯ ಅಧಿಕಾರಿ ಭವ.
ಹೇಗೆ ಸತ್ಯಯುಗದಲ್ಲಿ
ರಾಜ್ಯದ ಪೋಷಾಕಿನಿಂದ ಶೃಂಗಾರಿತರಾಗಿರುವ ವಿಶ್ವ ಮಹಾರಾಜಾ ಅಥವಾ ವಿಶ್ವ ಮಹಾರಾಣಿಯ ವಸ್ತ್ರವು
ನೆಲಕ್ಕೆ ತಾಗದಿರಲು, ಹಿಂದಿನಿಂದ ದಾಸ-ದಾಸಿಯರು ಹಿಡಿದು ಬರುತ್ತಾರೆ. ಅದೇ ರೀತಿಯಲ್ಲಿ
ಸಂಗಮಯುಗದಲ್ಲಿಯೂ ಯಾವಾಗ ತಾವು ಮಕ್ಕಳು ಮಾಯಾಜೀತ, ಸ್ವರಾಜ್ಯ ಅಧಿಕಾರಿಯಾಗಿ ಬಿರುದುಗಳೆಂಬ ಪೋಷಾಕು
(ಉಡುಪು)ಗಳಿಂದ ಶೃಂಗಾರಿತರು ಆಗುತ್ತೀರೆಂದರೆ, ತಮ್ಮ ಪೋಷಾಕನ್ನು ಈ 5 ತತ್ವಗಳು ಮತ್ತು 5
ವಿಕಾರಗಳು ಹಿಂದಿನಿಂದ ಹಿಡಿದು ಬರುತ್ತವೆ ಅಂದರೆ ಅಧೀನವಾಗಿದ್ದು ನಡೆಯುತ್ತವೆ. ಇದಕ್ಕಾಗಿ
ಬಿರುದುಗಳೆಂಬ ಪೋಷಾಕನ್ನು ಧೃಡ ಸಂಕಲ್ಪದ ಬೆಲ್ಟ್ನಿಂದ ಬಿಗಿ ಮಾಡಿ, ವಿಧ-ವಿಧವಾದ ಪೋಷಾಕಿನಿಂದ
ಶೃಂಗರಿತರಾಗಿರುತ್ತಾ ತಂದೆಯ ಜೊತೆಯಿರಿ, ಆಗಲೇ ಈ ವಿಕಾರಗಳು ಅಥವಾ ತತ್ವಗಳು ಪರಿವರ್ತನೆಯಾಗಿ
ಸಹಯೋಗಿ ಸೇವಾಧಾರಿ ಆಗಿ ಬಿಡುತ್ತವೆ.
ಸ್ಲೋಗನ್:
ಯಾವ ಗುಣಗಳು ಅಥವಾ ಶಕ್ತಿಗಳ ವರ್ಣನೆಯನ್ನು ಮಾಡುತ್ತೀರಿ, ಅದರ ಅನುಭವದಲ್ಲಿ ಮುಳುಗಿ ಬಿಡಿ/ತಲ್ಲೀನರಾಗಿರಿ.
ಅನುಭವವೇ ಅತಿ ದೊಡ್ಡ ಅಥಾರಿಟಿ(ಅಧಿಕಾರ)ಯಾಗಿದೆ.
ಮುರಳಿ ಪ್ರಶ್ನೆಗಳು -
1. ತಂದೆ ಯಾವ ಭಿನ್ನ
ಭಿನ್ನ ನಕ್ಷತ್ರಗಳನ್ನು ನೋಡುತ್ತಿದ್ದರು?
2. ಆತ್ಮಿಕ ನಕ್ಷತ್ರಗಳ ಪ್ರಭಾವ ಯಾವುದರ ಮೇಲಾಗುತ್ತದೆ?
3. ಎಲ್ಲರಿಗೆ ಧರಣಿಯ ನಕ್ಷತ್ರಗಳು ಯಾವ ರೀತಿಯಲ್ಲಿ ಕಾಣಿಸುತ್ತವೆ?
4. ಫರಿಸ್ತೆಗಳ ಸಾಕ್ಷಾತ್ಕಾರ ಯಾವಾಗ ಆಗುವುದು?
5. ಸೇವೆಯ ಭಾವನೆ ಎಂದರೇನು?
6. ಸತ್ಯ ಸೇವೆಯೆಂದರೆ ಏನು?
7. ಸತ್ಯ ಸೇವಾಧಾರಿಯ ಲಕ್ಷಣಗಳೇನು?
8. ಸಹನೆ ಮಾಡುವುದು ಎಂದರೇನು?
9. ಈ ವರ್ಷ ತಂದೆಯು ಎಂತಹ ಅವಕಾಶವನ್ನು ಕೊಡುತ್ತಿದ್ದಾರೆ?
10. ನಾವು ಯಾವ ಅನುಭವದಲ್ಲಿ ಮುಳುಗಿರಬೇಕು?