14.10.20 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ -
ಸಂಗಮಯುಗದಲ್ಲಿಯೇ ನೀವು ಆತ್ಮಾಭಿಮಾನಿಯಾಗುವ ಪರಿಶ್ರಮ ಪಡಬೇಕಾಗಿದೆ. ಸತ್ಯಯುಗ ಅಥವಾ ಕಲಿಯುಗದಲ್ಲಿ
ಈ ಪರಿಶ್ರಮವಿರುವುದಿಲ್ಲ".
ಪ್ರಶ್ನೆ:
ಶ್ರೀಕೃಷ್ಣನ
ಹೆಸರು ಅವರ ತಂದೆ-ತಾಯಿಗಿಂತಲೂ ಹೆಚ್ಚು ಪ್ರಸಿದ್ಧವಾಗಿದೆ – ಏಕೆ?
ಉತ್ತರ:
ಏಕೆಂದರೆ ಶ್ರೀಕೃಷ್ಣನಿಗಿಂತ ಮೊದಲು ಯಾರದೆಲ್ಲಾ ಜನ್ಮವಾಗುವುದೋ ಆ ಜನ್ಮವು ಯೋಗಬಲದಿಂದ
ಆಗಿರುವುದಿಲ್ಲ. ಕೃಷ್ಣನ ತಂದೆ-ತಾಯಿಯು ಯೋಗಬಲದಿಂದ ಜನ್ಮ ತೆಗೆದುಕೊಂಡಿಲ್ಲ. 2. ಪೂರ್ಣ
ಕರ್ಮಾತೀತ ಸ್ಥಿತಿಯನ್ನು ಹೊಂದಿದವರು ರಾಧೆ-ಕೃಷ್ಣರೇ ಆಗಿದ್ದಾರೆ, ಅವರೇ ಸದ್ಗತಿಯನ್ನು
ಪಡೆಯುತ್ತಾರೆ. ಯಾವಾಗ ಎಲ್ಲಾ ಪಾಪಾತ್ಮರು ಸಮಾಪ್ತಿಯಾಗುವರೋ ಆಗ ಪಾವನ, ಹೊಸ ಪ್ರಪಂಚದಲ್ಲಿ
ಶ್ರೀಕೃಷ್ಣನ ಜನ್ಮವಾಗುತ್ತದೆ, ಅದನ್ನೇ ವೈಕುಂಠವೆಂದು ಹೇಳಲಾಗುತ್ತದೆ. 3. ಸಂಗಮಯುಗದಲ್ಲಿ
ಶ್ರೀಕೃಷ್ಣನ ಆತ್ಮವು ಎಲ್ಲರಿಗಿಂತ ಅಧಿಕ ಪುರುಷಾರ್ಥ ಮಾಡುತ್ತಾರೆ ಆದ್ದರಿಂದ ಶ್ರೀಕೃಷ್ಣನ ಹೆಸರು
ಪ್ರಸಿದ್ಧವಾಗಿದೆ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ತಿಳಿಸುತ್ತಾರೆ - 5000 ವರ್ಷಗಳ ನಂತರ ಒಂದೇ
ಬಾರಿ ತಂದೆಯು ಬಂದು ಮಕ್ಕಳಿಗೆ ಓದಿಸುತ್ತಾರೆ. ನಾವು ಪತಿತರನ್ನು ಬಂದು ಪಾವನ ಮಾಡಿ ಎಂದು
ಕರೆಯುತ್ತಾರೆ. ಅದರಿಂದಲೇ ಇದು ಪತಿತ ಪ್ರಪಂಚವೆಂಬುದು ಸಿದ್ಧವಾಗುತ್ತದೆ. ಹೊಸ ಪ್ರಪಂಚ, ಪಾವನ
ಪ್ರಪಂಚವಿತ್ತು. ಹೊಸ ಮನೆಯು ಅತಿ ಸುಂದರವಾಗಿರುತ್ತದೆ, ಹಳೆಯದು ಎಲ್ಲವೂ ಕಿತ್ತು ಹೋಗಿರುತ್ತದೆ.
ಮಳೆ ಬಂದರೂ ಸಹ ಬೀಳುತ್ತದೆ. ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ - ತಂದೆಯು ಹೊಸ ಪ್ರಪಂಚವನ್ನು
ಮಾಡಲು ಬಂದಿದ್ದಾರೆ. ಈಗ ಓದಿಸುತ್ತಿದ್ದಾರೆ ಮತ್ತೆ 5000 ವರ್ಷಗಳ ನಂತರ ಓದಿಸುತ್ತಾರೆ. ಹೀಗೆ
ಎಂದೂ ಯಾವುದೇ ಸಾಧು-ಸಂತ ಮೊದಲಾದವರು ತಮ್ಮ ಅನುಯಾಯಿಗಳಿಗೆ ಓದಿಸುವುದಿಲ್ಲ. ಅವರಿಗೆ ಇದು ತಿಳಿದೇ
ಇಲ್ಲ. ಆಟದ ಬಗ್ಗೆಯೂ ತಿಳಿದಿಲ್ಲ ಏಕೆಂದರೆ ನಿವೃತ್ತಿ ಮಾರ್ಗದವರಾಗಿದ್ದಾರೆ. ತಂದೆಯ ವಿನಃ ಯಾರೂ
ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುವುದಿಲ್ಲ. ಆತ್ಮಾಭಿಮಾನಿಯಾಗುವುದರಲ್ಲಿಯೇ
ಮಕ್ಕಳಿಗೆ ಪರಿಶ್ರಮವಾಗುತ್ತದೆ. ಅರ್ಧಕಲ್ಪದಲ್ಲಿ ನೀವೆಂದೂ ಆತ್ಮಾಭಿಮಾನಿಯಾಗಿಲ್ಲ. ಈಗ ತಂದೆಯು
ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ. ಆತ್ಮ ಸೋ ಪರಮಾತ್ಮ ಎಂದಲ್ಲ. ತಮ್ಮನ್ನು
ಆತ್ಮನೆಂದು ತಿಳಿದು ಪರಮಪಿತ ಪರಮಾತ್ಮ ಶಿವನನ್ನು ನೆನಪು ಮಾಡಬೇಕಾಗಿದೆ. ನೆನಪಿನ ಯಾತ್ರೆ
ಮುಖ್ಯವಾಗಿದೆ, ಯಾವುದರಿಂದ ನೀವು ಪತಿತರಿಂದ ಪಾವನರಾಗುತ್ತೀರಿ. ಇದರಲ್ಲಿ ಯಾವುದೇ ಸ್ಥೂಲ
ಮಾತಿಲ್ಲ. ಇಲ್ಲಿ ಯಾವುದೇ ಮೂಗು, ಕಿವಿ ಇತ್ಯಾದಿಗಳನ್ನು ಮುಚ್ಚಿ ಕುಳಿತುಕೊಳ್ಳುವಂತಿಲ್ಲ. ಮೂಲ
ಮಾತಾಗಿದೆ, ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ನೀವು ಅರ್ಧಕಲ್ಪದಿಂದ
ದೇಹಾಭಿಮಾನದಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರಿ. ಮೊದಲು ತನ್ನನ್ನು ಆತ್ಮನೆಂದು ತಿಳಿದಾಗಲೇ
ತಂದೆಯನ್ನು ನೆನಪು ಮಾಡಬಲ್ಲಿರಿ. ಭಕ್ತಿಮಾರ್ಗದಲ್ಲಿ ಬಾಬಾ, ಬಾಬಾ ಎಂದು ಹೇಳುತ್ತಾ ಬರುತ್ತಾರೆ.
ಮಕ್ಕಳಿಗೆ ತಿಳಿದಿದೆ, ಸತ್ಯಯುಗದಲ್ಲಿ ಲೌಕಿಕ ತಂದೆಯೊಬ್ಬರೇ ಇರುತ್ತಾರೆ. ಅಲ್ಲಿ ಪಾರಲೌಕಿಕ
ತಂದೆಯನ್ನು ನೆನಪು ಮಾಡುವುದಿಲ್ಲ ಏಕೆಂದರೆ ಸುಖವಿರುತ್ತದೆ. ಭಕ್ತಿಮಾರ್ಗದಲ್ಲಿ ಮತ್ತೆ ಇಬ್ಬರು
ತಂದೆಯರಾಗುತ್ತಾರೆ - ಲೌಕಿಕ ಮತ್ತು ಪಾರಲೌಕಿಕ. ದುಃಖದಲ್ಲಿ ಎಲ್ಲರೂ ಪಾರಲೌಕಿಕ ತಂದೆಯನ್ನು ನೆನಪು
ಮಾಡುತ್ತಾರೆ. ಸತ್ಯಯುಗದಲ್ಲಿ ಭಕ್ತಿಯಿರುವುದಿಲ್ಲ, ಅಲ್ಲಂತೂ ಜ್ಞಾನದ ಪ್ರಾಲಬ್ಧವಿರುತ್ತದೆ,
ಜ್ಞಾನವಿರುವುದಿಲ್ಲ. ಈ ಸಮಯದ ಜ್ಞಾನದ ಪ್ರಾಲಬ್ಧವು ಸಿಗುತ್ತದೆ, ತಂದೆಯಂತೂ ಒಂದೇ ಬಾರಿ
ಬರುತ್ತಾರೆ. ಅರ್ಧ ಕಲ್ಪ ಬೇಹದ್ದಿನ ತಂದೆಯ ಸುಖದ ಆಸ್ತಿಯಿರುತ್ತದೆ. ನಂತರ ಲೌಕಿಕ ತಂದೆಯಿಂದ
ಅಲ್ಪಕಾಲದ ಆಸ್ತಿಯು ಸಿಗುತ್ತದೆ. ಇದನ್ನು ಮನುಷ್ಯರು ತಿಳಿಸಲು ಸಾಧ್ಯವಿಲ್ಲ. 5000 ವರ್ಷಗಳಲ್ಲಿ
ಈ ಸಂಗಮಯುಗದಲ್ಲಿ ಒಂದೇ ಬಾರಿ ತಂದೆಯು ಬರುತ್ತಾರೆ. ಯಾವಾಗ ಕಲಿಯುಗದ ಅಂತ್ಯ, ಸತ್ಯಯುಗದ ಆದಿಯ
ಸಂಗಮವಾಗುವುದೋ ಆಗಲೇ ತಂದೆಗೆ ಪುನಃ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ಬರುತ್ತಾರೆ. ಹೊಸ
ಪ್ರಪಂಚದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ನಂತರ ತ್ರೇತಾದಲ್ಲಿ ರಾಮ ರಾಜ್ಯವಿತ್ತು, ಬಾಕಿ
ದೇವತೆಗಳು ಮೊದಲಾದವರ ಯಾವ ಇಷ್ಟೊಂದು ಚಿತ್ರಗಳನ್ನು ಮಾಡಿದ್ದಾರೆಯೋ ಇವೆಲ್ಲವೂ ಭಕ್ತಿಮಾರ್ಗದ
ಸಾಮಗ್ರಿಗಳಾಗಿವೆ. ತಂದೆಯು ತಿಳಿಸುತ್ತಾರೆ - ಇದೆಲ್ಲವನ್ನು ಮರೆತು ಹೋಗಿ, ಈಗ ತಮ್ಮ ಮನೆಯನ್ನು
ಮತ್ತು ಹೊಸ ಪ್ರಪಂಚವನ್ನು ನೆನಪು ಮಾಡಿ.
ಜ್ಞಾನ ಮಾರ್ಗವು ತಿಳುವಳಿಕೆಯ ಮಾರ್ಗವಾಗಿದೆ, ಇದರಿಂದ ನೀವು 21 ಜನ್ಮಗಳಿಗೆ ಬುದ್ಧಿವಂತರಾಗಿ
ಬಿಡುತ್ತೀರಿ, ಯಾವುದೇ ದುಃಖವಿರುವುದಿಲ್ಲ. ಸತ್ಯಯುಗದಲ್ಲೆಂದೂ ನಮಗೆ ಶಾಂತಿ ಬೇಕೆಂದು
ಹೇಳುವುದಿಲ್ಲ. ಬೇಡುವುದಕ್ಕಿಂತಲೂ ಸಾಯುವುದು ಲೇಸು ಎಂದು ಹೇಳಲಾಗುತ್ತದೆಯಲ್ಲವೆ. ತಂದೆಯು
ನಿಮ್ಮನ್ನು ಇಷ್ಟು ಸಾಹುಕಾರರನ್ನಾಗಿ ಮಾಡುತ್ತಾರೆ ದೇವತೆಗಳಿಗೆ ಭಗವಂತನಿಂದ ಯಾವುದೇ ವಸ್ತುವನ್ನು
ಬೇಡುವ ಅವಶ್ಯಕತೆಯೇ ಇರುವುದಿಲ್ಲ. ಇಲ್ಲಂತೂ ಆಶೀರ್ವಾದವನ್ನು ಬೇಡುತ್ತಾರಲ್ಲವೆ. ಪೋಪ್ ಮೊದಲಾದವರು
ಬಂದರೆ ಆಶೀರ್ವಾದಗಳನ್ನು ತೆಗೆದುಕೊಳ್ಳಲು ಎಷ್ಟೊಂದು ಮಂದಿ ಹೋಗುತ್ತಾರೆ. ಪೋಪ್ ರು ಎಷ್ಟೊಂದು
ಮಂದಿಯ ವಿವಾಹವನ್ನು ಮಾಡಿಸುತ್ತಾರೆ. ತಂದೆಯು ಈ ಕೆಲಸವನ್ನು ಮಾಡುವುದಿಲ್ಲ. ಭಕ್ತಿಮಾರ್ಗದಲ್ಲಿ
ಯಾವುದು ಕಳೆದು ಹೋಗಿದೆಯೋ ಅದು ಈಗ ನಡೆಯುತ್ತಿದೆ, ಇದು ಈಗ ಪುನಃ ಪುನರಾವರ್ತನೆಯಾಗುತ್ತಿದೆ.
ದಿನ-ಪ್ರತಿದಿನ ಭಾರತವು ಎಷ್ಟು ಅವನತಿಯಾಗುತ್ತಾ ಬಂದಿದೆ, ಈಗ ನೀವು ಸಂಗಮದಲ್ಲಿದ್ದೀರಿ,
ಉಳಿದೆಲ್ಲರೂ ಕಲಿಯುಗೀ ಮನುಷ್ಯರಾಗಿದ್ದಾರೆ. ಎಲ್ಲಿಯವರೆಗೆ ಇಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೆ
ಈಗ ಸಂಗಮಯುಗವೇ ಅಥವಾ ಕಲಿಯುಗವೇ ಎಂಬುದನ್ನು ತಿಳಿದುಕೊಳ್ಳಲು ಆಗುವುದಿಲ್ಲ. ಒಂದೇ ಮನೆಯಲ್ಲಿ ನಾವು
ಸಂಗಮದಲ್ಲಿದ್ದೇವೆ ಎಂದು ಮಕ್ಕಳು ತಿಳಿಯುತ್ತಾರೆ, ನಾವು ಕಲಿಯುಗದಲ್ಲಿದ್ದೇವೆಂದು ತಂದೆಯು
ಹೇಳುತ್ತಾರೆ. ಇದರಿಂದ ಎಷ್ಟು ತೊಂದರೆಯಾಗುತ್ತದೆ. ಆಹಾರ-ಪಾನೀಯ ಮೊದಲಾದವುಗಳ ಜಂಜಾಟವಾಗಿ
ಬಿಡುತ್ತದೆ. ನೀವು ಸಂಗಮಯುಗಿಗಳು ಶುದ್ಧ, ಪವಿತ್ರ ಭೋಜನವನ್ನು ಸ್ವೀಕರಿಸುವವರಾಗಿದ್ದೀರಿ.
ದೇವತೆಗಳೆಂದೂ ಈರುಳ್ಳಿ ಇತ್ಯಾದಿಗಳನ್ನು ಸೇವನೆ ಮಾಡುವುದಿಲ್ಲ. ಈ ದೇವತೆಗಳಿಗೆ
ನಿರ್ವಿಕಾರಿಗಳೆಂದು ಹೇಳಲಾಗುತ್ತದೆ. ಭಕ್ತಿಮಾರ್ಗದಲ್ಲಿ ಎಲ್ಲರೂ ತಮೋಪ್ರಧಾನರಾಗಿ ಬಿಟ್ಟಿದ್ದಾರೆ.
ಈಗ ಸತೋಪ್ರಧಾನರಾಗಿ ಎಂದು ತಂದೆಯು ತಿಳಿಸುತ್ತಾರೆ. ಆತ್ಮವು ಮೊದಲು ಸತೋಪ್ರಧಾನವಾಗಿತ್ತು ನಂತರ
ತಮೋಪ್ರಧಾನವಾಗಿದೆ ಎಂದು ತಿಳಿದುಕೊಳ್ಳುವವರು ಯಾರೂ ಇಲ್ಲ ಏಕೆಂದರೆ ಅವರು ಆತ್ಮವನ್ನು
ನಿರ್ಲೇಪವೆಂದು ತಿಳಿಯುತ್ತಾರೆ. ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ.
ತಂದೆಯು ತಿಳಿಸುತ್ತಾರೆ – ಜ್ಞಾನ ಸಾಗರನು ನಾನೇ ಆಗಿದ್ದೇನೆ, ಯಾರು ಈ ದೇವಿ-ದೇವತಾ
ಧರ್ಮದವರಾಗಿರುವರೋ ಅವರೆಲ್ಲರೂ ಬಂದು ಪುನಃ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ, ಈಗ
ನಾಟಿಯಾಗುತ್ತಿದೆ. ಇವರು ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯಲು ಯೋಗ್ಯರಲ್ಲವೆಂದು ನಿಮಗೆ ಅರ್ಥವಾಗಿ
ಬಿಡುತ್ತದೆ. ಮನೆಗೆ ಹೋಗಿ ವಿವಾಹ ಮಾಡಿಕೊಂಡು ಪತಿತರಾಗುತ್ತಿರುತ್ತಾರೆ. ಆದ್ದರಿಂದ ಶ್ರೇಷ್ಠ
ಪದವಿಯನ್ನು ಪಡೆಯಲು ಸಾಧ್ಯವಿಲ್ಲವೆಂದು ತಿಳಿಸುತ್ತಿರುತ್ತಾರೆ. ಈ ರಾಜಧಾನಿಯು
ಸ್ಥಾಪನೆಯಾಗುತ್ತಿದೆ, ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ರಾಜರಿಗೂ ರಾಜರನ್ನಾಗಿ
ಮಾಡುತ್ತೇನೆ ಅಂದಮೇಲೆ ಪ್ರಜೆಗಳನ್ನು ಅವಶ್ಯವಾಗಿ ಮಾಡಿಕೊಳ್ಳಬೇಕಾಗಿದೆ ಇಲ್ಲವೆಂದರೆ ರಾಜ್ಯವನ್ನು
ಹೇಗೆ ಪಡೆಯುತ್ತೀರಿ? ಇದು ಗೀತೆಯ ಅಕ್ಷರವಲ್ಲವೆ. ಇದಕ್ಕೆ ಗೀತಾಯುಗವೆಂದು ಕರೆಯಲಾಗುತ್ತದೆ.
ನೀವೀಗ ರಾಜಯೋಗವನ್ನು ಕಲಿಯುತ್ತಿದ್ದೀರಿ. ನಿಮಗೆ ತಿಳಿದಿದೆ, ಆದಿ ಸನಾತನ ದೇವಿ-ದೇವತಾ ಧರ್ಮದ
ತಳಹದಿಯು ತಯಾರಾಗುತ್ತಿದೆ. ಸೂರ್ಯವಂಶಿ, ಚಂದ್ರವಂಶಿ ಎರಡೂ ರಾಜಧಾನಿಗಳು ಸ್ಥಾಪನೆಯಾಗುತ್ತಿವೆ.
ಬ್ರಾಹ್ಮಣ ಕುಲವು ಸ್ಥಾಪನೆಯಾಗಿ ಬಿಟ್ಟಿದೆ. ಬ್ರಾಹ್ಮಣರೇ ಮತ್ತೆ ಸೂರ್ಯವಂಶಿ,
ಚಂದ್ರವಂಶಿಯರಾಗುತ್ತೀರಿ. ಯಾರು ಚೆನ್ನಾಗಿ ಪರಿಶ್ರಮ ಪಡುವರೋ ಅವರು ಸೂರ್ಯವಂಶಿಗಳಾಗುತ್ತಾರೆ.
ಅನ್ಯ ಧರ್ಮದವರು ಯಾರೆಲ್ಲಾ ಬರುವರೋ ತಮ್ಮ ಧರ್ಮ ಸ್ಥಾಪನೆ ಮಾಡುವುದಕ್ಕಾಗಿಯೇ ಬರುತ್ತಾರೆ. ಅವರ
ಹಿಂದೆ ಆ ಧರ್ಮದ ಆತ್ಮಗಳು ಬರುತ್ತಾ ಇರುತ್ತಾರೆ. ಧರ್ಮದ ವೃದ್ಧಿಯಾಗತೊಡಗುತ್ತದೆ. ಉದಾ: ಯಾರಾದರೂ
ಕ್ರಿಶ್ಚಿಯನ್ನರಾಗಿದ್ದರೆ ಅವರ ಬೀಜರೂಪವು ಕ್ರಿಸ್ತನಾದರು ಅಂದಾಗ ನಿಮ್ಮ ಬೀಜರೂಪ ಯಾರು?
ತಂದೆಯಾಗಿದ್ದಾರೆ ಏಕೆಂದರೆ ತಂದೆಯೇ ಬಂದು ಬ್ರಹ್ಮಾರವರ ಮೂಲಕ ಸ್ವರ್ಗದ ಸ್ಥಾಪನೆ ಮಾಡುತ್ತಾರೆ.
ಬ್ರಹ್ಮನಿಗೇ ಪ್ರಜಾಪಿತನೆಂದು ಹೇಳಲಾಗಿದೆ ಆದರೆ ರಚಯಿತನೆಂದು ಹೇಳುವುದಿಲ್ಲ. ಇವರ ಮೂಲಕ
ಮಕ್ಕಳನ್ನು ದತ್ತು ಮಾಡಿಕೊಳ್ಳಲಾಗುತ್ತದೆ. ಬ್ರಹ್ಮನನ್ನೂ ಸಹ ತಂದೆಯು ರಚನೆ ಮಾಡುತ್ತಾರಲ್ಲವೆ.
ತಂದೆಯು ಬಂದು ಇವರನ್ನು ರಚಿಸುತ್ತಾರೆ ಅರ್ಥಾತ್ ದತ್ತು ಮಾಡಿಕೊಳ್ಳುತ್ತಾರೆ. ನೀವು ನನ್ನ
ಮಕ್ಕಳಾಗಿದ್ದೀರಿ ಎಂದು ಶಿವ ತಂದೆಯು ಹೇಳುತ್ತಾರೆ. ನೀವು ನನ್ನ ಸಾಕಾರಿ ಮಕ್ಕಳಾಗಿದ್ದೀರಿ ಎಂದು
ಬ್ರಹ್ಮಾ ತಂದೆಯೂ ಹೇಳುತ್ತಾರೆ. ನೀವೀಗ ಪತಿತರಾಗಿದ್ದೀರಿ, ಈಗ ಮತ್ತೆ ಬ್ರಾಹ್ಮಣರಾಗಿದ್ದೀರಿ. ಈ
ಸಂಗಮಯುಗದಲ್ಲಿಯೇ ನೀವು ಪುರುಷೋತ್ತಮ ದೇವಿ-ದೇವತೆಗಳಾಗುವ ಪರಿಶ್ರಮ ಪಡುತ್ತೀರಿ. ದೇವತೆಗಳು ಮತ್ತು
ಶೂದ್ರರು ಪರಿಶ್ರಮ ಪಡಬೇಕಾಗುವುದಿಲ್ಲ. ನೀವು ಬ್ರಾಹ್ಮಣರೇ ದೇವತೆಗಳಾಗಲು ಪರಿಶ್ರಮ
ಪಡಬೇಕಾಗುತ್ತದೆ. ತಂದೆಯು ಸಂಗಮದಲ್ಲಿಯೇ ಬರುತ್ತಾರೆ, ಇದು ಬಹಳ ಚಿಕ್ಕದಾದ ಯುಗವಾಗಿದೆ ಆದ್ದರಿಂದ
ಇದಕ್ಕೆ ಲೀಪ್ ಯುಗವೆಂದು ಹೇಳಲಾಗುತ್ತದೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಗೂ ಸಹ
ಪರಿಶ್ರಮವಾಗುತ್ತದೆ. ಕೂಡಲೇ ಹೊಸ ಪ್ರಪಂಚವಾಗಿ ಬಿಡುವುದಿಲ್ಲ. ನೀವು ದೇವತೆಗಳಾಗುವುದರಲ್ಲಿಯೇ
ಸಮಯ ಹಿಡಿಸುತ್ತದೆ. ಯಾರು ಒಳ್ಳೆಯ ಕರ್ಮ ಮಾಡುವರೋ ಅವರು ಒಳ್ಳೆಯ ಕುಲದಲ್ಲಿ ಜನ್ಮ ಪಡೆಯುತ್ತಾರೆ.
ನೀವೀಗ ನಂಬರ್ವಾರ್ ಪುರುಷಾರ್ಥದನುಸಾರ ಪಾವನರಾಗುತ್ತಿದ್ದೀರಿ, ಆತ್ಮವೇ ಆಗುತ್ತದೆ. ಈಗ
ನೀವಾತ್ಮಗಳು ಒಳ್ಳೆಯ ಕರ್ಮವನ್ನು ಕಲಿಯುತ್ತಿದ್ದೀರಿ. ಆತ್ಮವೇ ಒಳ್ಳೆಯ ಅಥವಾ ಕೆಟ್ಟ
ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ನೀವೀಗ ಹೂಗಳಾಗಿ ಒಳ್ಳೆಯ ಮನೆಯಲ್ಲಿ ಜನ್ಮ
ಪಡೆಯುತ್ತೀರಿ. ಇಲ್ಲಿ ಯಾರು ಒಳ್ಳೆಯ ಪುರುಷಾರ್ಥ ಮಾಡುವರೋ ಅವರು ಅವಶ್ಯವಾಗಿ ಒಳ್ಳೆಯ ಕುಲದಲ್ಲಿ
ಜನ್ಮ ಪಡೆಯುತ್ತಾರೆ. ನಂಬರ್ವಾರಂತೂ ಇದ್ದಾರಲ್ಲವೆ. ಎಂತೆಂತಹ ಕರ್ಮ ಮಾಡುತ್ತಾರೆಯೋ ಅಂತಹ ಜನ್ಮ
ಪಡೆಯುತ್ತಾರೆ. ಯಾವಾಗ ಕೆಟ್ಟ ಕರ್ಮ ಮಾಡುವವರು ಸಂಪೂರ್ಣ ಸಮಾಪ್ತಿಯಾಗುವರೋ ಆಗ ಎಲ್ಲವೂ
ಸ್ವಚ್ಛವಾಗಿ ಸ್ವರ್ಗ ಸ್ಥಾಪನೆಯಾಗುತ್ತದೆ. ಏನೆಲ್ಲವೂ ತಮೋಪ್ರಧಾನತೆಯಿದೆಯೋ ಎಲ್ಲವೂ
ಸಮಾಪ್ತಿಯಾಗುತ್ತದೆ ಮತ್ತೆ ಹೊಸ ದೇವತೆಗಳ ಆಗಮನವು ಆರಂಭವಾಗುತ್ತದೆ. ಯವಾಗ ಭ್ರಷ್ಟಾಚಾರಿಗಳೆಲ್ಲರೂ
ಸಮಾಪ್ತಿಯಾಗುವರೋ ಆಗ ಕೃಷ್ಣನ ಜನ್ಮವಾಗುತ್ತದೆ. ಅಲ್ಲಿಯವರೆಗೆ ಅದಲು-ಬದಲಾಗುತ್ತಿರುತ್ತದೆ.
ಯಾವಾಗ ಯಾರೂ ಪತಿತರಿರುವುದಿಲ್ಲವೋ ಆಗ ಕೃಷ್ಣನು ಬರುವನು. ಅಲ್ಲಿಯವರೆಗೆ ನೀವು ಬರುತ್ತಾ
ಇರುತ್ತೀರಿ. ಕೃಷ್ಣನನ್ನು ಆಹ್ವಾನ ಮಾಡುವ ತಂದೆ-ತಾಯಿಯು ಮೊದಲೇ ಬೇಕಲ್ಲವೆ ನಂತರ ಎಲ್ಲರೂ
ಒಳ್ಳೊಳ್ಳೆಯವರು ಬೇಕಲ್ಲವೆ. ಮತ್ತೆ ಎಲ್ಲರೂ ಒಳ್ಳೆಯವರಿರುತ್ತಾರೆ, ಉಳಿದೆಲ್ಲರೂ ಹೊರಟು
ಹೋಗುತ್ತಾರೆ ಆಗಲೇ ಅದಕ್ಕೆ ಸ್ವರ್ಗವೆಂದು ಹೇಳಲಾಗುವುದು. ನೀವು ಕೃಷ್ಣನನ್ನು ಆಹ್ವಾನ
ಮಾಡುವವರಿರುತ್ತೀರಿ. ಭಲೆ ನಿಮ್ಮ ಜನ್ಮವು ಪತಿತವಾಗಿರುವುದು ಏಕೆಂದರೆ ರಾವಣ ರಾಜ್ಯವಲ್ಲವೆ.
ಶುದ್ಧ ಜನ್ಮವಂತೂ ಆಗಲು ಸಾಧ್ಯವಿಲ್ಲ. ಮೊಟ್ಟ ಮೊದಲಿಗೆ ಕೃಷ್ಣನದು ಪವಿತ್ರ ಜನ್ಮವಾಗುತ್ತದೆ, ಅದರ
ನಂತರ ಹೊಸ ಪ್ರಪಂಚ, ವೈಕುಂಠವೆಂದು ಕರೆಯಲಾಗುತ್ತದೆ. ಕೃಷ್ಣನು ಸಂಪೂರ್ಣ ಪವಿತ್ರ ಹೊಸ
ಪ್ರಪಂಚದಲ್ಲಿ ಬರುತ್ತಾನೆ. ರಾವಣ ಸಂಪ್ರದಾಯವು ಸಂಪೂರ್ಣ ಸಮಾಪ್ತಿಯಾಗಿ ಬಿಡುತ್ತದೆ. ಕೃಷ್ಣನ
ಹೆಸರು ಅವನ ತಂದೆ-ತಾಯಿಗಿಂತಲೂ ಬಹಳ ಪ್ರಸಿದ್ಧವಾಗಿದೆ. ಕೃಷ್ಣನ ತಂದೆ-ತಾಯಿಗಳ ಹೆಸರು ಅಷ್ಟು
ಪ್ರಸಿದ್ಧವಾಗಿರುವುದಿಲ್ಲ. ಕೃಷ್ಣನಿಗಿಂತ ಮೊದಲು ಯಾರ ಜನ್ಮವಾಗುತ್ತದೆಯೋ ಅವರದು ಯೋಗಬಲದಿಂದ
ಜನ್ಮವಾಯಿತೆಂದು ಹೇಳುವುದಿಲ್ಲ. ಕೃಷ್ಣನ ತಂದೆ-ತಾಯಿಗಳೂ ಸಹ ಯೋಗಬಲದಿಂದ ಜನ್ಮವಾಗಿದ್ದರೆ ಅವರ
ಹೆಸರೂ ಸಹ ಪ್ರಸಿದ್ಧವಾಗುತ್ತಿತ್ತು. ಇದರಿಂದಲೇ ಎಷ್ಟು ಪುರುಷಾರ್ಥವನ್ನು ಕೃಷ್ಣನು ಮಾಡಿದನೋ
ಅಷ್ಟು ಅವನ ತಂದೆ-ತಾಯಿಯು ಮಾಡಿಲ್ಲವೆಂದು ಸಿದ್ಧವಾಗುತ್ತದೆ. ಇವೆಲ್ಲಾ ಮಾತುಗಳನ್ನು ಮುಂದೆ
ಹೋದಂತೆ ನೀವು ತಿಳಿದುಕೊಳ್ಳುತ್ತಾ ಹೋಗುವಿರಿ. ಪೂರ್ಣ ಕರ್ಮಾತೀತ ಸ್ಥಿತಿಯವರು ರಾಧೆ-ಕೃಷ್ಣರೇ
ಆಗಿದ್ದಾರೆ, ಅವರೇ ಸದ್ಗತಿಯಲ್ಲಿ ಬರುತ್ತಾರೆ. ಪಾಪಾತ್ಮರೆಲ್ಲರೂ ಸಮಾಪ್ತಿಯಾಗುತ್ತಾರೆ ಆಗ ಇವರ
ಜನ್ಮವಾಗುತ್ತದೆ ನಂತರ ಅದನ್ನು ಪಾವನ ಪ್ರಪಂಚವೆಂದು ಹೇಳುತ್ತಾರೆ. ಆದ್ದರಿಂದ ಕೃಷ್ಣನ ಹೆಸರು
ಪ್ರಸಿದ್ಧವಾಗಿದೆ. ಅವರ ತಂದೆ-ತಾಯಿಯದು ಅಷ್ಟೊಂದಿಲ್ಲ. ಬಹಳ ಸಾಕ್ಷಾತ್ಕಾರಗಳಾಗುತ್ತವೆ. ಇನ್ನೂ
ಸಮಯವಿದೆ, ನಾವು ಈ ರೀತಿಯಾಗಲು ಓದುತ್ತಿದ್ದೇವೆಂದು ನೀವು ಯಾರಿಗೆ ಬೇಕಾದರೂ ತಿಳಿಸಬಹುದು.
ವಿಶ್ವದಲ್ಲಿ ಇವರ ರಾಜ್ಯವು ಈಗ ಸ್ಥಾಪನೆಯಾಗುತ್ತಿದೆ, ನಮಗಾಗಿ ಹೊಸ ಪ್ರಪಂಚವು ಬೇಕು. ಈಗ ನಿಮಗೆ
ದೈವೀ ಸಂಪ್ರದಾಯದವರೆಂದು ಹೇಳುವುದಿಲ್ಲ. ನೀವು ಬ್ರಾಹ್ಮಣ ಸಂಪ್ರದಾಯದವರಾಗುತ್ತೀರಿ,
ದೇವತೆಗಳಾಗುವವರಿದ್ದೀರಿ. ದೈವೀ ಸಂಪ್ರದಾಯದವರಾಗಿದ್ದರೆ ನಂತರ ನಿಮ್ಮ ಆತ್ಮ ಮತ್ತು ಶರೀರ ಎರಡೂ
ಸ್ವಚ್ಛವಾಗುತ್ತದೆ. ನೀವೀಗ ಸಂಗಮಯುಗೀ ಪುರುಷೋತ್ತಮರಾಗುವವರಿದ್ದೀರಿ. ಇದೆಲ್ಲವೂ ಪರಿಶ್ರಮದ
ಮಾತಾಗಿದೆ. ನೆನಪಿನಿಂದ ವಿಕರ್ಮಾಜೀತರಾಗಬೇಕಾಗಿದೆ. ಬಾಬಾ, ನೆನಪು ಪದೇ-ಪದೇ ಮರೆತು
ಹೋಗುತ್ತದೆಯಂದು ನೀವು ಹೇಳುತ್ತೀರಿ. ಈ ತಂದೆಯು ಪಿಕ್ನಿಕ್ನಲ್ಲಿ ಕುಳಿತಿರುವಾಗಲೂ ಸಹ ಇವರಿಗೆ
ವಿಚಾರವಿರುತ್ತದೆ, ನಾವು ನೆನಪಿನಲ್ಲಿಲ್ಲವೆಂದರೆ ತಂದೆಯು ಏನು ಹೇಳುವರು? ಎಂದು. ಆದ್ದರಿಂದ
ತಂದೆಯು ತಿಳಿಸುತ್ತಾರೆ - ನೀವು ನೆನಪಿನಲ್ಲಿ ಕುಳಿತು ಪಿಕ್ನಿಕ್ ಮಾಡಿ. ಕರ್ಮ ಮಾಡುತ್ತಾ
ಪ್ರಿಯತಮನನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತದೆ. ಇದರಲ್ಲಿಯೇ ಪರಿಶ್ರಮವಿದೆ.
ನೆನಪಿನಿಂದ ಆತ್ಮವು ಪವಿತ್ರವಾಗುವುದು, ಅವಿನಾಶೀ ಜ್ಞಾನ ಧನವೂ ಜಮಾ ಆಗುವುದು. ಮತ್ತೆ ಒಂದುವೇಳೆ
ಅಪವಿತ್ರರಾಗಿ ಬಿಟ್ಟರೆ ಇಡೀ ಜ್ಞಾನವೇ ವ್ಯರ್ಥವಾಗಿ ಹೋಗುತ್ತದೆ. ಪವಿತ್ರತೆಯೇ ಮುಖ್ಯವಾಗಿದೆ.
ತಂದೆಯು ಒಳ್ಳೊಳ್ಳೆಯ ಮಾತುಗಳನ್ನು ತಿಳಿಸುತ್ತಾರೆ. ಈ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು
ಮತ್ತ್ಯಾರಲ್ಲಿಯೂ ಇಲ್ಲ. ಅನ್ಯ ಯಾವುದೆಲ್ಲಾ ಸತ್ಸಂಗಗಳಿವೆಯೋ ಅವೆಲ್ಲವೂ ಭಕ್ತಿಮಾರ್ಗದ್ದಾಗಿದೆ.
ತಂದೆಯು ತಿಳಿಸುತ್ತಾರೆ - ವಾಸ್ತವದಲ್ಲಿ ಪ್ರವೃತ್ತಿ ಮಾರ್ಗದವರೇ ಮಾಡಬೇಕಾಗಿದೆ. ನಿಮ್ಮಲ್ಲಿ
ಎಷ್ಟೊಂದು ಶಕ್ತಿಯಿರುತ್ತದೆ. ಮನೆಯಲ್ಲಿ ಕುಳಿತಿದ್ದಂತೆಯೇ ನಿಮಗೆ ಸುಖವು ಪ್ರಾಪ್ತಿಯಾಗುತ್ತದೆ.
ಸರ್ವಶಕ್ತಿವಂತ ತಂದೆಯಿಂದ ನೀವು ಇಷ್ಟು ಶಕ್ತಿಯನ್ನು ತೆಗೆದುಕೊಳ್ಳುತ್ತೀರಿ. ಸನ್ಯಾಸಿಗಳಲ್ಲಿಯೂ
ಮೊದಲು ಶಕ್ತಿಯಿತ್ತು, ಅರಣ್ಯದಲ್ಲಿರುತ್ತಿದ್ದರು. ಈಗಂತೂ ಎಷ್ಟು ದೊಡ್ಡ-ದೊಡ್ಡ ಮನೆಗಳನ್ನು
ಕಟ್ಟಿಕೊಂಡಿರುತ್ತಾರೆ, ಈಗ ಆ ಶಕ್ತಿಯಿರುವುದಿಲ್ಲ. ಹೇಗೆ ನಿಮ್ಮಲ್ಲಿಯೂ ಸಹ ಮೊದಲು ಸುಖದ
ಶಕ್ತಿಯಿರುತ್ತದೆ ನಂತರ ಮಾಯವಾಗಿ ಬಿಡುತ್ತದೆ. ಹಾಗೆಯೇ ಅವರಲ್ಲಿಯೂ ಮೊದಲು ಶಾಂತಿಯ ಶಕ್ತಿಯಿತ್ತು,
ಈಗ ಅದು ಉಳಿದಿಲ್ಲ. ಮೊದಲಾದರೋ ನಾವು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲವೆಂದು
ಸಾಧು-ಸನ್ಯಾಸಿಗಳು ಸತ್ಯವನ್ನು ಹೇಳುತ್ತಿದ್ದರು, ಈಗಂತೂ ತಮ್ಮನ್ನೇ ಶಿವೋಹಂ, ನಾನೇ ಭಗವಂತನೆಂದು
ಹೇಳಿಕೊಂಡು ಕುಳಿತುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ - ಇಡೀ ವೃಕ್ಷವು ತಮೋಪ್ರಧಾನವಾಗಿದೆ
ಆದ್ದರಿಂದ ಸಾಧುಗಳು ಮುಂತಾದವರ ಉದ್ಧಾರ ಮಾಡಲು ಬರುತ್ತೇನೆ. ಈ ಪ್ರಪಂಚವೇ ಬದಲಾಗಲಿದೆ. ಎಲ್ಲಾ
ಆತ್ಮಗಳು ಹಿಂತಿರುಗಿ ಹೋಗುತ್ತಾರೆ, ನಾವಾತ್ಮರಲ್ಲಿ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ, ಅದನ್ನು
ಪುನಃ ಪುನರಾವರ್ತಿಸುತ್ತೇವೆ ಎಂಬ ಜ್ಞಾನವಿರುವವರು ಯಾರೊಬ್ಬರೂ ಇಲ್ಲ. ಆತ್ಮವು ಇಷ್ಟು
ಸೂಕ್ಷ್ಮವಾಗಿದೆ, ಇದರಲ್ಲಿ ಅವಿನಾಶಿ ಪಾತ್ರವು ತುಂಬಿದೆ, ಅದೆಂದೂ ವಿನಾಶವಾಗುವುದಿಲ್ಲ. ಇದರಲ್ಲಿ
ಬುದ್ಧಿಯು ಬಹಳ ಪವಿತ್ರವಿರಬೇಕು. ಯಾವಾಗ ನೆನಪಿನ ಯಾತ್ರೆಯಲ್ಲಿ ಮಸ್ತರಾಗುವಿರಿ ಆಗಲೇ
ಪವಿತ್ರರಾಗುತ್ತೀರಿ. ಪರಿಶ್ರಮವಿಲ್ಲದೆ ಪದವಿಯು ಸಿಗುವುದಿಲ್ಲ ಆದ್ದರಿಂದಲೇ ಏರಿದರೆ ವೈಕುಂಠ ರಸ,
ಬಿದ್ದರೆ ಚಕನಾಚೂರ್... ಎಂದು ಗಾಯನವಿದೆ. ಶ್ರೇಷ್ಠಾತಿ ಶ್ರೇಷ್ಠ ರಾಜಾಧಿ ರಾಜ ಡಬಲ್
ಕಿರೀಟಧಾರಿಗಳೆಲ್ಲಿ, ಪ್ರಜೆಗಳೆಲ್ಲಿ! ಓದಿಸುವವರಂತೂ ಒಬ್ಬರೇ ಆಗಿದ್ದಾರೆ, ಇದರಲ್ಲಿ ಬಹಳ ಒಳ್ಳೆಯ
ತಿಳುವಳಿಕೆ ಬೇಕು. ತಂದೆಯು ಪುನಃ-ಪುನಃ ತಿಳಿಸುತ್ತಾರೆ - ನೆನಪಿನ ಯಾತ್ರೆಯು ಮುಖ್ಯವಾಗಿದೆ. ನಾನು
ನಿಮಗೆ ಓದಿಸಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ ಅಂದಾಗ ಶಿಕ್ಷಕ-ಗುರುವೂ ಆಗಿರುವರು. ತಂದೆಯಂತೂ
ಶಿಕ್ಷಕರಿಗೂ ಶಿಕ್ಷಕ, ತಂದೆಯರಿಗೂ ತಂದೆಯಾಗಿದ್ದಾರೆ. ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ
- ನಮ್ಮ ತಂದೆಯು ಬಹಳ ಪ್ರಿಯರಾಗಿದ್ದಾರೆ, – ಇಂತಹ ತಂದೆಯನ್ನಂತೂ ಬಹಳ ನೆನಪು ಮಾಡಬೇಕಾಗಿದೆ.
ಸಂಪೂರ್ಣ ಓದಲೂಬೇಕಾಗಿದೆ. ತಂದೆಯನ್ನು ನೆನಪು ಮಾಡದಿದ್ದರೆ ಪಾಪಗಳು ಕಳೆಯುವುದಿಲ್ಲ. ತಂದೆಯು
ಎಲ್ಲಾ ಆತ್ಮಗಳನ್ನು ಜೊತೆ ಕರೆದುಕೊಂಡು ಹೋಗುತ್ತಾರೆ ಬಾಕಿ ಶರೀರಗಳೆಲ್ಲವೂ ಸಮಾಪ್ತಿಯಾಗುತ್ತದೆ.
ಆತ್ಮಗಳೆಲ್ಲರೂ ತಮ್ಮ-ತಮ್ಮ ವಿಭಾಗದಲ್ಲಿ (ಪರಮಧಾಮ) ಹೋಗಿ ನಿವಾಸ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಬುದ್ಧಿಯನ್ನು
ಪವಿತ್ರ ಮಾಡಿಕೊಳ್ಳಲು ನೆನಪಿನ ಯಾತ್ರೆಯಲ್ಲಿ ಮಸ್ತರಾಗಿರಬೇಕಾಗಿದೆ. ಕರ್ಮ ಮಾಡುತ್ತಲೂ ಒಬ್ಬ
ಪ್ರಿಯತಮನ ನೆನಪಿರಲಿ ಆಗ ವಿಕರ್ಮಾಜೀತರಾಗುತ್ತೀರಿ.
2. ಈ ಚಿಕ್ಕದಾದ ಯುಗದಲ್ಲಿ ಮನುಷ್ಯರಿಂದ ದೇವತೆಗಳಾಗುವ ಪರಿಶ್ರಮ ಪಡಬೇಕಾಗಿದೆ. ಒಳ್ಳೆಯ
ಕರ್ಮಗಳನುಸಾರ ಒಳ್ಳೆಯ ಸಂಸ್ಕಾರಗಳನ್ನು ಧಾರಣೆ ಮಾಡಿಕೊಂಡು ಒಳ್ಳೆಯ ಕುಲದಲ್ಲಿ ಹೋಗಬೇಕಾಗಿದೆ.
ವರದಾನ:
ಜಗತ್ತಿಗೆ
ಪ್ರಕಾಶವಾಗಿ ಭಕ್ತರಿಗೆ ದೃಷ್ಠಿಯಿಂದ ತೃಪ್ತರನ್ನಾಗಿ ಮಾಡುವಂತಹ ದರ್ಶನೀಯ ಮೂರ್ತಿ ಭವ.
ಇಡೀ ವಿಶ್ವ ನೀವು
ಜಗತ್ತಿನ ಕಣ್ಣಿನ ದೃಷ್ಟಿ ಪಡೆಯುವುದಕ್ಕಾಗಿ ಕಾಯುತ್ತಿದೆ. ಯಾವಾಗ ನೀವು ಜಗತ್ತಿನ ಕಣ್ಣುಗಳು
ತಮ್ಮ ಸಂಪೂರ್ಣ ಸ್ಟೇಜ್ ವರೆಗೆ ತಲುಪುವಿರಿ ಅರ್ಥಾತ್ ಸಂಪೂರ್ಣತೆಯ ಕಣ್ಣುಗಳು ತೆರೆಯುತ್ತವೆ. ಆಗ
ಸೆಕೆಂಡ್ನಲ್ಲಿ ವಿಶ್ವ ಪರಿವರ್ತನೆಯಾಗುವುದು. ನಂತರ ನೀವು ದರ್ಶನೀಯ ಮೂರ್ತಿ ಆತ್ಮಗಳು ತಮ್ಮ
ದೃಷ್ಟಿಯಿಂದ ಭಕ್ತ ಆತ್ಮರನ್ನು ತೃಪ್ತಿ ಪಡಿಸಲು ಸಾಧ್ಯ. ದೃಷ್ಟಿಯಿಂದ ತೃಪ್ತರಾಗುವಂತಹವರ
ಉದ್ದನೆಯ ಸಾಲು ಇದೆ. ಆದ್ದರಿಂದ ಸಂಪೂರ್ಣತೆಯ ಕಣ್ಣು ಸದಾ ತೆರೆದಿರಲಿ. ಕಣ್ಣುಗಳ ಮಲಿನತೆ ಮತ್ತು
ಬೇರೆ ಸಂಕಲ್ಪಗಳ ತೂಕಡಿಕೆ ಹಾಗೂ ಆಕಳಿಕೆ ಆಗುವುದನ್ನು ಸಮಾಪ್ತಿ ಮಾಡಿದಾಗ ದರ್ಶನೀಯ ಮೂರ್ತಿ ಆಗಲು
ಸಾಧ್ಯ.
ಸ್ಲೋಗನ್:
ನಿರ್ಮಲ ಸ್ವಭಾವ
ನಿರ್ಮಾನತೆಯ ನಿಶಾನಿಯಾಗಿದೆ. ನಿರ್ಮಲರಾಗಿ ಆಗ ಸಫಲತೆ ದೊರಕುವುದು.