16.10.20 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನೀವು
ಸಂಗಮದಲ್ಲಿ ಸೇವೆ ಮಾಡಿ, ಗಾಯನ ಯೋಗ್ಯರಾಗಬೇಕಾಗಿದೆ, ಸೇವೆ ಮಾಡಿ ಮತ್ತೆ ಭವಿಷ್ಯದಲ್ಲಿ
ಪುರುಷೋತ್ತಮರಾಗುವುದರಿಂದ ನೀವು ಪೂಜೆಗೆ ಯೋಗ್ಯರಾಗಿ ಬಿಡುತ್ತೀರಿ".
ಪ್ರಶ್ನೆ:
ಯಾವ ಖಾಯಿಲೆಯ
ಮೂಲವು ಸಮಾಪ್ತಿಯಾದಾಗ ತಂದೆಯ ಹೃದಯವನ್ನೇರುತ್ತೀರಿ?
ಉತ್ತರ:
1. ದೇಹಾಭಿಮಾನದ ಖಾಯಿಲೆ. ಈ ದೇಹಾಭಿಮಾನದ ಕಾರಣವೇ ಎಲ್ಲಾ ವಿಕಾರಗಳು ಮಹಾರೋಗಿಯನ್ನಾಗಿ
ಮಾಡಿಬಿಟ್ಟಿದೆ. ಈ ದೇಹಾಭಿಮಾನವು ಸಮಾಪ್ತಿಯಾದಾಗಲೇ ನೀವು ತಂದೆಯ ಹೃದಯವನ್ನೇರುತ್ತೀರಿ. 2.
ಹೃದಯವನ್ನೇರಬೇಕೆಂದರೆ ವಿಶಾಲ ಬುದ್ಧಿಯವರಾಗಿ ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಿ. ಆತ್ಮಿಕ
ಸೇವೆಯಲ್ಲಿ ತೊಡಗಿರಿ ಮತ್ತು ವಾಣಿಯನ್ನು ಓದುವ ಜೊತೆ ಜೊತೆಗೆ ತಂದೆಯನ್ನು ಚೆನ್ನಾಗಿ ನೆನಪು ಮಾಡಿ.
ಗೀತೆ:
ಎದ್ದೇಳಿ
ಪ್ರಿಯತಮೆಯರೇ ಎದ್ದೇಳಿ................
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ – ಆತ್ಮಿಕ ತಂದೆಯು ಈ ಸಾಧಾರಣ ಹಳೆಯ
ತನುವಿನ ಮುಖದಿಂದ ಹೇಳಿದರು. ತಂದೆಯು ತಿಳಿಸುತ್ತಾರೆ - ನಾನು ಹಳೆಯ ತನುವಿನಲ್ಲಿ ಹಳೆಯ
ರಾಜಧಾನಿಯಲ್ಲಿ ಬರಬೇಕಾಯಿತು, ಈಗ ಇದು ರಾವಣನ ರಾಜಧಾನಿಯಾಗಿದೆ, ಪರ ಶರೀರವಾಗಿದೆ ಏಕೆಂದರೆ ಈ
ಶರೀರದಲ್ಲಂತೂ ಮೊದಲೇ ಒಂದು ಆತ್ಮ (ಬ್ರಹ್ಮಾ)ವಿದೆ. ನಾನು ಪರ ತನುವಿನಲ್ಲಿ ಪ್ರವೇಶ ಮಾಡುತ್ತೇನೆ.
ಇದು ನನ್ನ ತನುವಾಗಿದ್ದರೆ ಅದಕ್ಕೆ ಹೆಸರಿರುತ್ತಿತ್ತು. ನನ್ನ ಹೆಸರು ಎಂದೂ ಬದಲಾಗುವುದಿಲ್ಲ. ನನಗೆ
ಶಿವ ತಂದೆಯಂದು ಹೇಳುತ್ತಾರೆ. ಗೀತೆಯನ್ನಂತೂ ಮಕ್ಕಳು ಪ್ರತಿನಿತ್ಯವೂ ಕೇಳುತ್ತೀರಿ. ನವಯುಗ
ಅರ್ಥಾತ್ ಹೊಸ ಪ್ರಪಂಚ, ಸತ್ಯಯುಗವು ಬಂದಿತೆಂದರೆ ಬಂದಿತು. ಈಗ ಎದ್ದೇಳಿ ಎಂದು ತಂದೆಯು ಯಾರಿಗೆ
ಹೇಳುತ್ತಾರೆ? ಆತ್ಮಗಳಿಗೆ. ಏಕೆಂದರೆ ಆತ್ಮಗಳು ಘೋರ ಅಂಧಕಾರದಲ್ಲಿ ಮಲಗಿದ್ದಾರೆ, ತಿಳುವಳಿಕೆ ಏನೂ
ಇಲ್ಲ. ತಂದೆಯನ್ನೇ ತಿಳಿದುಕೊಂಡಿಲ್ಲ. ಈಗ ತಂದೆಯು ಪುನಃ ಜಾಗೃತರನ್ನಾಗಿ ಮಾಡಲು ಬಂದಿದ್ದಾರೆ.
ನೀವೀಗ ಬೇಹದ್ದಿನ ತಂದೆಯನ್ನು ಅರಿತುಕೊಂಡಿದ್ದೀರಿ. ಅವರಿಂದ ಹೊಸ ಯುಗದಲ್ಲಿ ಬೇಹದ್ದಿನ ಸುಖವು
ಪ್ರಾಪ್ತಿಯಾಗುವುದು. ಸತ್ಯಯುಗಕ್ಕೆ ಹೊಸದೆಂದು, ಕಲಿಯುಗಕ್ಕೆ ಹಳೆಯ ಯುಗವೆಂದು ಹೇಳುತ್ತಾರೆ.
ಇದನ್ನು ವಿದ್ವಾಂಸ, ಪಂಡಿತ ಮೊದಲಾದವರು ಯಾರೂ ತಿಳಿದುಕೊಂಡಿಲ್ಲ. ಹೊಸ ಯುಗವು ಮತ್ತೆ ಹೇಗೆ
ಹಳೆಯದಾಗುವುದೆಂದು ಯಾರೊಂದಿಗಾದರೂ ಕೇಳಿದರೆ ಅವರ್ಯಾರೂ ತಿಳಿಸಲು ಸಾಧ್ಯವಿಲ್ಲ. ಇದು ಲಕ್ಷಾಂತರ
ವರ್ಷಗಳ ಮಾತಾಗಿದೆಯೆಂದು ಹೇಳಿ ಬಿಡುತ್ತಾರೆ. ನಾವು ಹೊಸ ಯುಗದಿಂದ ಹಳೆಯ ಯುಗದಲ್ಲಿ ಹೇಗೆ
ಬಂದಿದ್ದೇವೆ ಅರ್ಥಾತ್ ಸ್ವರ್ಗವಾಸಿಗಳಿಂದ ನರಕವಾಸಿಗಳು ಹೇಗಾಗಿದ್ದೇವೆ ಎಂಬುದನ್ನು ನೀವೀಗ
ತಿಳಿದುಕೊಂಡಿದ್ದೀರಿ. ಮನುಷ್ಯರು ಏನನ್ನೂ ಅರಿತುಕೊಂಡಿಲ್ಲ. ಯಾರ ಪೂಜೆ ಮಾಡುತ್ತಿದ್ದಾರೆಯೋ ಅವರ
ಚರಿತ್ರೆಯನ್ನೂ ಅರಿತಿಲ್ಲ. ಹೇಗೆ ಜಗದಂಬೆಯ ಪೂಜೆ ಮಾಡುತ್ತಾರೆ. ಆದರೆ ಆ ಜಗದಂಬೆ ಯಾರು? ಎಂಬ
ತಿಳುವಳಿಕೆಯೇ ಇಲ್ಲ. ವಾಸ್ತವದಲ್ಲಿ ಮಾತೆಯರಿಗೇ ಅಂಬೆಯೆಂದು ಹೇಳಲಾಗುತ್ತದೆ ಆದರೆ ಪೂಜೆಯು
ಒಬ್ಬರದೇ ನಡೆಯಬೇಕಲ್ಲವೆ! ಶಿವ ತಂದೆಯೊಬ್ಬರದೇ ಅವ್ಯಭಿಚಾರಿ ನೆನಪಾರ್ಥವಿದೆ. ಜಗದಂಬೆಯು
ಒಬ್ಬರಾಗಿದ್ದಾರೆ ಆದರೆ ಜಗದಂಬೆಯನ್ನು ತಿಳಿದುಕೊಂಡಿಲ್ಲ. ಇವರು ಜಗತ್ತಿನ ಅಂಬೆ (ತಾಯಿ)
ಯಾಗಿದ್ದಾರೆ ಮತ್ತು ಲಕ್ಷ್ಮಿಯು ಜಗತ್ತಿನ ಮಹಾರಾಣಿಯಾಗಿದ್ದಾರೆ. ಈಗ ನಿಮಗೆ ಜಗದಂಬೆ ಯಾರು ಮತ್ತು
ಜಗತ್ತಿನ ಮಹಾರಾಣಿ ಯಾರು ಎಂಬುದು ತಿಳಿದಿದೆ. ಈ ಮಾತುಗಳನ್ನು ಎಂದೂ ಯಾರೂ ತಿಳಿದುಕೊಳ್ಳುವುದಿಲ್ಲ.
ಲಕ್ಷ್ಮಿಯನ್ನು ದೇವಿಯೆಂತಲೂ, ಜಗದಂಬೆಯನ್ನು ಬ್ರಾಹ್ಮಣಿಯೆಂತಲೂ ಹೇಳುತ್ತಾರೆ. ಬ್ರಾಹ್ಮಣರು
ಸಂಗಮದಲ್ಲಿಯೇ ಇರುತ್ತಾರೆ, ಈ ಸಂಗಮಯುಗವನ್ನು ಯಾರೂ ತಿಳಿದುಕೊಂಡಿಲ್ಲ. ಪ್ರಜಾಪಿತ ಬ್ರಹ್ಮನ ಮೂಲಕ
ಹೊಸ ಪುರುಷೋತ್ತಮ ಸೃಷ್ಟಿಯು ರಚಿಸಲ್ಪಡುತ್ತದೆ. ನೋಡಬೇಕೆಂದರೆ ಸತ್ಯಯುಗದಲ್ಲಿಯೇ ಪುರುಷೋತ್ತಮರು
ಸಿಗುತ್ತಾರೆ. ಈ ಸಮಯದಲ್ಲಿ ನೀವು ಬ್ರಾಹ್ಮಣರು ಗಾಯನಯೋಗ್ಯರಾಗಿದ್ದೀರಿ, ಸೇವೆ ಮಾಡುತ್ತಿದ್ದೀರಿ
ಮತ್ತೆ ನೀವು ಪೂಜೆಗೆ ಯೋಗ್ಯರಾಗುವಿರಿ. ಬ್ರಹ್ಮನಿಗಾದರೆ ಇಷ್ಟೊಂದು ಭುಜಗಳನ್ನು ತೋರಿಸುತ್ತಾರೆ
ಅಂದಾಗ ಜಗದಂಬೆಗೆ ಏಕೆ ತೋರಿಸುವುದಿಲ್ಲ? ಅವರಿಗೂ ಸಹ ಎಲ್ಲರೂ ಮಕ್ಕಳಲ್ಲವೆ. ಮಾತಾಪಿತರೇ
ಪ್ರಜಾಪಿತನಾಗುತ್ತಾರೆ. ಮಕ್ಕಳಿಗೆ ಪ್ರಜಾಪಿತನೆಂದು ಹೇಳುವುದಿಲ್ಲ, ಲಕ್ಷ್ಮೀ-ನಾರಾಯಣರಿಗೂ ಸಹ
ಸತ್ಯಯುಗದಲ್ಲಿ ಜಗತ್ಪಿತ, ಜಗನ್ಮಾತೆ ಎಂದು ಹೇಳುವುದಿಲ್ಲ. ಪ್ರಜಾಪಿತನ ಹೆಸರು ಪ್ರಸಿದ್ಧವಾಗಿದೆ.
ಜಗತ್ತಿನ ಪಿತ ಮತ್ತು ಮಾತಾ ಒಬ್ಬರೇ ಆಗಿದ್ದಾರೆ, ಉಳಿದೆಲ್ಲರೂ ಅವರ ಮಕ್ಕಳಾಗಿದ್ದೀರಿ.
ಅಜ್ಮೀರಿನಲ್ಲಿ ಪ್ರಜಾಪಿತ ಬ್ರಹ್ಮನ ಮಂದಿರದಲ್ಲಿ ಹೋದಾಗ ಬಾಬಾ ಎಂದು ಹೇಳುತ್ತಾರೆ ಏಕೆಂದರೆ ಇವರು
ಪ್ರಜಾಪಿತನಾಗಿದ್ದಾರೆ. ಲೌಕಿಕ ತಂದೆಯರು ಮಕ್ಕಳಿಗೆ ಜನ್ಮ ನೀಡುತ್ತಾರೆ ಅಂದಾಗ ಅವರು ಲೌಕಿಕ
ಪ್ರಜಾಪಿತನಾದರು, ಇವರು ಅಲೌಕಿಕ ಪ್ರಜಾಪಿತನಾಗಿದ್ದಾರೆ. ಶಿವ ತಂದೆಯು ಎಲ್ಲಾ ಆತ್ಮಗಳ ಬೇಹದ್ದಿನ
ತಂದೆಯಾಗಿದ್ದಾರೆ. ಈ ಅಂತರವನ್ನು ನೀವು ಮಕ್ಕಳು ಬರೆಯಬೇಕಾಗಿದೆ. ಜಗದಂಬೆ ಸರಸ್ವತಿಯು ಒಬ್ಬರೇ
ಆಗಿದ್ದಾರೆ ಆದರೆ ದುರ್ಗಾ, ಕಾಳಿ ಇತ್ಯಾದಿ ಇಷ್ಟೊಂದು ಹೆಸರುಗಳನ್ನಿಟ್ಟಿದ್ದಾರೆ. ಅಂಬಾ ಮತ್ತು
ತಂದೆಗೆ ನೀವೆಲ್ಲರೂ ಮಕ್ಕಳಾಗಿದ್ದೀರಿ. ಇವರು ರಚನೆಯಲ್ಲವೆ. ಪ್ರಜಾಪಿತ ಬ್ರಹ್ಮನ ಮಗಳು
ಸರಸ್ವತಿಯಾಗಿದ್ದಾರೆ, ಅವರಿಗೆ ಅಂಬಾ ಎಂದು ಹೇಳುತ್ತಾರೆ ಉಳಿದೆಲ್ಲರೂ ಮಕ್ಕಳಾಗಿದ್ದೀರಿ. ಎಲ್ಲರೂ
ದತ್ತು ಮಕ್ಕಳಾಗಿದ್ದೀರಿ. ಇಷ್ಟೊಂದು ಮಂದಿ ಮಕ್ಕಳು ಹೇಗಾಗಲು ಸಾಧ್ಯ? ಇವರೆಲ್ಲರೂ
ಮುಖವಂಶಾವಳಿಯಾಗಿದ್ದಾರೆ. ಮುಖದಿಂದ ಸ್ತ್ರೀಯನ್ನು ರಚನೆ ಮಾಡಿದರು ಆದ್ದರಿಂದ ರಚಯಿತನಾದರು.
ತಂದೆಯು ತಿಳಿಸುತ್ತಾರೆ, ಇವರು (ಬ್ರಹ್ಮಾ) ನನ್ನವರಾಗಿದ್ದಾರೆ, ನಾನು ಇವರ ಮೂಲಕ ನೀವು ಮಕ್ಕಳನ್ನು
ರಚಿಸಿದ್ದೇನೆ, ಎಲ್ಲರೂ ದತ್ತು ಮಕ್ಕಳಾಗಿದ್ದೀರಿ. ಇದು ಮುಖದ ಮೂಲಕ ರಚನೆಯಾಗಿದೆ. ಆತ್ಮಗಳಂತೂ
ಇದ್ದೇ ಇರುತ್ತೀರಿ, ಆತ್ಮನನ್ನೂ ದತ್ತು ಮಾಡಿಕೊಳ್ಳಲಾಗುವುದಿಲ್ಲ. ನೀವಾತ್ಮಗಳು ಸದಾ ನನ್ನ
ಮಕ್ಕಳಾಗಿರುತ್ತೀರಿ ಆದರೆ ಈಗ ನಾನು ಬಂದು ಸಾಕಾರದಲ್ಲಿ ಪ್ರಜಾಪಿತ ಬ್ರಹ್ಮನ ಮೂಲಕ ದತ್ತು
ಮಾಡಿಕೊಳ್ಳುತ್ತೇನೆ. ಆತ್ಮಗಳನ್ನು ದತ್ತು ಮಾಡಿಕೊಳ್ಳುವುದಿಲ್ಲ, ಸಾಕಾರದಲ್ಲಿದ್ದಾಗ ನೀವು
ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತೇನೆ. ಇವು ಬಹಳ ಸೂಕ್ಷ್ಮ ತಿಳಿದುಕೊಳ್ಳುವ ಮಾತುಗಳಾಗಿವೆ. ಈ
ಮಾತನ್ನು ತಿಳಿದುಕೊಳ್ಳುವುದರಿಂದ ನೀವು ಲಕ್ಷ್ಮೀ-ನಾರಾಯಣರಾಗುತ್ತೀರಿ. ಇವರು ಹೇಗಾದರು ಎಂಬುದನ್ನು
ನಾನು ತಿಳಿಸಿಕೊಡುತ್ತೇನೆ. ಇವರು ಇಂತಹ ಯಾವ ಕರ್ಮ ಮಾಡಿದಕಾರಣ ವಿಶ್ವದ ಮಾಲೀಕರಾದರು ಎಂಬುದನ್ನು
ನೀವು ಪ್ರದರ್ಶನಿಗಳಲ್ಲಿಯೂ ಸಹ ಪ್ರಶ್ನಿಸಬಹುದು. ಇವರು ಈ ಸ್ವರ್ಗದ ರಾಜಧಾನಿಯನ್ನು ಹೇಗೆ
ಪಡೆದರೆಂಬುದು ನಿಮಗೆ ತಿಳಿದಿದೆ. ನಿಮ್ಮಲ್ಲಿಯೂ ಎಲ್ಲರೂ ಯಥಾರ್ಥ ರೀತಿಯಲ್ಲಿ ತಿಳಿಸಲು
ಸಾಧ್ಯವಿಲ್ಲ. ಯಾರಲ್ಲಿ ದೈವೀ ಗುಣಗಳಿವೆಯೋ, ಈ ಆತ್ಮಿಕ ಸೇವೆಯಲ್ಲಿ ತೊಡಗಿರುವರೋ ಅವರೇ
ತಿಳಿಸಬಲ್ಲರು. ಅನೇಕರು ಮಾಯೆಯ ರೋಗದಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾರೆ. ಅನೇಕ ಪ್ರಕಾರದ
ರೋಗಗಳಿವೆ, ದೇಹಾಭಿಮಾನವೂ ಒಂದು ರೋಗವಾಗಿದೆ. ಈ ವಿಕಾರಗಳೇ ನಿಮ್ಮನ್ನು ಮಹಾರೋಗಿಯನ್ನಾಗಿ ಮಾಡಿದೆ.
ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಪವಿತ್ರ ದೇವತೆಗಳನ್ನಾಗಿ ಮಾಡುತ್ತೇನೆ. ನೀವು
ಸರ್ವಗುಣ ಸಂಪನ್ನರು... ಪವಿತ್ರರಾಗಿದ್ದಿರಿ, ಈಗ ಪತಿತರಾಗಿ ಬಿಟ್ಟಿದ್ದೀರಿ. ಇದನ್ನು ಬೇಹದ್ದಿನ
ತಂದೆಯು ಹೇಳುತ್ತಾರೆ - ಇದರಲ್ಲಿ ನಿಂದನೆಯ ಮಾತಿಲ್ಲ, ಇದು ತಿಳಿಸುವ ಮಾತಾಗಿದೆ. ಭಾರತವಾಸಿಗಳಿಗೆ
ಬೇಹದ್ದಿನ ತಂದೆಯು ತಿಳಿಸುತ್ತಾರೆ - ನಾನಿಲ್ಲಿ ಭಾರತದಲ್ಲಿ ಬರುತ್ತೇನೆ. ಭಾರತದ ಮಹಿಮೆಯಂತೂ
ಅಪರಮಪಾರವಾಗಿದೆ. ಇಲ್ಲಿ ಬಂದು ತಂದೆಯು ನರಕವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ, ಎಲ್ಲರಿಗೆ
ಶಾಂತಿಯನ್ನು ಕೊಡುತ್ತಾರೆ. ಆದ್ದರಿಂದ ಇಂತಹ ತಂದೆಯ ಮಹಿಮೆಯೂ ಸಹ ಅಪರಮಪಾರವಾಗಿದೆ. ಇದಕ್ಕೆ
ಅಂತ್ಯವೇ ಇಲ್ಲ. ಜಗದಂಬೆ ಮತ್ತು ಅವರ ಮಹಿಮೆಯನ್ನೂ ಯಾರೂ ತಿಳಿದುಕೊಂಡಿಲ್ಲ. ಇವರಿಬ್ಬರ ಅಂತರವನ್ನು
ನೀವು ತಿಳಿಸಬಹುದು, ಇದು ಜಗದಂಬೆಯ ಚರಿತ್ರೆ, ಅದು ಲಕ್ಷ್ಮಿಯ ಚರಿತ್ರೆಯಾಗಿದೆ. ಈ ಜಗದಂಬೆಯೇ
ಮತ್ತೆ ಲಕ್ಷ್ಮಿಯಾಗುತ್ತಾರೆ ಮತ್ತೆ ಲಕ್ಷ್ಮಿಯೇ 84 ಜನ್ಮಗಳ ನಂತರ ಜಗದಂಬೆಯಾಗುವರು. ಚಿತ್ರವನ್ನೂ
ಬೇರೆ-ಬೇರೆಯಾಗಿ ಇಡಬೇಕು. ಲಕ್ಷ್ಮಿಗೆ ಕಳಶವು ಸಿಕ್ಕಿತೆಂದು ತೋರಿಸುತ್ತಾರೆ ಆದರೆ ಲಕ್ಷ್ಮಿಯು
ಸಂಗಮದಲ್ಲಿ ಎಲ್ಲಿಂದ ಬಂದರು! ಲಕ್ಷ್ಮಿಯಂತೂ ಸತ್ಯಯುಗದಲ್ಲಿ ಇರುತ್ತಾರೆ, ಇವೆಲ್ಲಾ ಮಾತುಗಳನ್ನು
ತಂದೆಯು ತಿಳಿಸುತ್ತಾರೆ. ಚಿತ್ರಗಳನ್ನು ಮಾಡಿಸಲು ಯಾರು ನಿಮಿತ್ತರಿದ್ದಾರೆಯೋ ಅವರು ವಿಚಾರ ಸಾಗರ
ಮಂಥನ ಮಾಡಬೇಕು ಆಗ ತಿಳಿಸಿಕೊಡುವುದು ಸಹಜವಾಗುವುದು. ಇಷ್ಟು ವಿಶಾಲ ಬುದ್ಧಿಯಿರಬೇಕು ಆಗಲೇ
ಹೃದಯವನ್ನೇರುವಿರಿ. ಯಾವಾಗ ತಂದೆಯನ್ನು ಚೆನ್ನಾಗಿ ನೆನಪು ಮಾಡುತ್ತೀರಿ, ಜ್ಞಾನ ಚಿತೆಯ ಮೇಲೆ
ಕುಳಿತುಕೊಳ್ಳುತ್ತೀರಿ ಆಗಲೇ ತಂದೆಯ ಹೃದಯವನ್ನೇರುತ್ತೀರಿ. ಯಾರು ಚೆನ್ನಾಗಿ ಮುರುಳಿಯನ್ನು
ಹೇಳುತ್ತಾರೆಯೋ ಅವರು ತಂದೆಯ ಹೃದಯದಲ್ಲಿರುತ್ತಾರೆಂದಲ್ಲ. ತಂದೆಯು ತಿಳಿಸುತ್ತಾರೆ - ನಂಬರ್ವಾರ್
ಪುರುಷಾರ್ಥದನುಸಾರ ಯಾವಾಗ ದೇಹಾಭಿಮಾನವು ಸಮಾಪ್ತಿಯಾಗುವುದು, ಆಗ ಅಂತಿಮದಲ್ಲಿ ನನ್ನ
ಹೃದಯವನ್ನೇರುವಿರಿ.
ತಂದೆಯು ತಿಳಿಸಿದ್ದಾರೆ – ಬ್ರಹ್ಮ ಜ್ಞಾನಿಗಳು ಬ್ರಹ್ಮ ತತ್ವದಲ್ಲಿ ಲೀನವಾಗುವ ಪರಿಶ್ರಮ
ಪಡುತ್ತಾರೆ. ಆದರೆ ಹೀಗೆ ಯಾರೂ ಲೀನವಾಗಲು ಸಾಧ್ಯವಿಲ್ಲ. ಬಾಕಿ ಪರಿಶ್ರಮ ಪಡುವ ಕಾರಣ ಉತ್ತಮ
ಪದವಿಯನ್ನು ಪಡೆಯುತ್ತಾರಷ್ಟೆ. ಇಂತಿಂತಹ ಮಹಾತ್ಮರಿರುತ್ತಾರೆ ಅವರನ್ನು ಪ್ಲಾಟಿನಂನಲ್ಲಿ ತುಲಾಭಾರ
ಮಾಡುತ್ತಾರೆ, ಏಕೆಂದರೆ ಬ್ರಹ್ಮನಲ್ಲಿ ಲೀನವಾಗುವ ಪರಿಶ್ರಮ ಪಡುತ್ತಾರಲ್ಲವೆ. ಆದ್ದರಿಂದ ಅವರ
ಪರಿಶ್ರಮಕ್ಕೆ ಈ ರೂಪದಲ್ಲಿ ಫಲ ಸಿಗುತ್ತದೆ ಬಾಕಿ ಮುಕ್ತಿ-ಜೀವನ್ಮುಕ್ತಿ ಸಿಗುವುದಿಲ್ಲ. ನೀವು
ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ಈ ಹಳೆಯ ಪ್ರಪಂಚವು ಹೋಯಿತೆಂದರೆ ಹೋಯಿತು. ಇಷ್ಟೊಂದು
ಬಾಂಬುಗಳನ್ನು ತಯಾರಿಸಿದ್ದಾರೆಂದರೆ ಕೇವಲ ಇಟ್ಟುಕೊಳ್ಳುವುದಕ್ಕಾಗಿ ತಯಾರಿದ್ದಾರೆಯೇ? ನಿಮಗೆ
ತಿಳಿದಿದೆ, ಹಳೆಯ ಪ್ರಪಂಚದ ವಿನಾಶಕ್ಕಾಗಿ ಈ ಬಾಂಬುಗಳು ಕೆಲಸಕ್ಕೆ ಬರುತ್ತವೆ. ಅನೇಕ ಪ್ರಕಾರದ
ಬಾಂಬುಗಳಿವೆ, ತಂದೆಯು ಜ್ಞಾನ ಮತ್ತು ಯೋಗವನ್ನು ಕಲಿಸುತ್ತಾರೆ ನಂತರ ರಾಜ ರಾಜೇಶ್ವರಿ, ಡಬಲ್
ಕಿರೀಟಧಾರಿ ದೇವಿ-ದೇವತೆಗಳಾಗುತ್ತೀರಿ. ಶ್ರೇಷ್ಠ ಪದವಿಯು ಯಾವುದಾಗಿದೆ, ಬ್ರಾಹ್ಮಣ ಶಿಖೆಯು
ಮೇಲಿರುತ್ತದೆ. ಶಿಖೆಯೇ ಎಲ್ಲದಕ್ಕಿಂತ ಮೇಲಿರುತ್ತದೆ. ಈಗ ನೀವು ಮಕ್ಕಳನ್ನು ಪತಿತರಿಂದ ಪಾವನ
ಮಾಡಲು ಬಂದಿದ್ದಾರೆ, ಮತ್ತೆ ನೀವೂ ಸಹ ಪತಿತ-ಪಾವನಿಯರಾಗುತ್ತೀರಿ - ಈ ನಶೆಯಿದೆಯೇ? ನಾವು
ಎಲ್ಲರನ್ನು ಪಾವನರನ್ನಾಗಿ ಮಾಡಿ ರಾಜ ರಾಜೇಶ್ವರಿಯನ್ನಾಗಿ ಮಾಡುತ್ತಿದ್ದೇವೆಯೇ? ನಶೆಯಿದ್ದಾಗ ಬಹಳ
ಖುಷಿಯಲ್ಲಿರುವಿರಿ. ತಮ್ಮ ಹೃದಯದಿಂದ ಕೇಳಿಕೊಳ್ಳಿ, ನಾವು ಎಷ್ಟು ಮಂದಿಯನ್ನು ನಮ್ಮ ಸಮಾನ
ಮಾಡಿಕೊಳ್ಳುತ್ತಿದ್ದೇವೆ? ಪ್ರಜಾಪಿತ ಬ್ರಹ್ಮಾ ಮತ್ತು ಜಗದಂಬೆ ಇಬ್ಬರೂ ಸಹ ಒಂದೇ ಸಮನಾಗಿದ್ದಾರೆ,
ಬ್ರಾಹ್ಮಣರ ರಚನೆ ಮಾಡುತ್ತಾರೆ. ಶೂದ್ರರಿಂದ ಬ್ರಾಹ್ಮಣರಾಗುವ ಯುಕ್ತಿಯನ್ನು ತಂದೆಯೇ
ತಿಳಿಸಿಕೊಡುತ್ತಾರೆ. ಇದ್ಯಾವುದೇ ಶಾಸ್ತ್ರಗಳಲಿಲ್ಲ. ಇದು ಗೀತಾಯುಗವಾಗಿದೆ. ಕಲ್ಪದ ಹಿಂದೆಯೂ ಸಹ
ಮಹಾಭಾರತ ಯುದ್ಧವು ನಡೆದಿತ್ತು, ಅಂದಮೇಲೆ ರಾಜಯೋಗವನ್ನು ಕೇವಲ ಒಬ್ಬರಿಗೆ ಕಲಿಸಿದರೆ? ಮನುಷ್ಯರ
ಬುದ್ಧಿಯಲ್ಲಿ ಕೇವಲ ಅರ್ಜುನ ಮತ್ತು ಕೃಷ್ಣನೇ ಇರುತ್ತಾರೆ. ವಾಸ್ತವದಲ್ಲಿ ಇಲ್ಲಂತೂ ಅನೇಕ ಮಕ್ಕಳು
ಓದುತ್ತೀರಿ. ನೋಡಿ, ಎಷ್ಟು ಸಾಧಾರಣ ರೂಪದಲ್ಲಿ ಕುಳಿತಿದ್ದೀರಿ, ಹೇಗೆ ಚಿಕ್ಕ ಮಕ್ಕಳು ಅ, ಆ, ಇ ಈ
ಓದುತ್ತಾರಲ್ಲವೆ. ನೀವೂ ಸಹ ಕುಳಿತಿದ್ದೀರಿ, ನಿಮಗೆ ತಂದೆ ಮತ್ತು ಆಸ್ತಿ ಎಂದು ಓದಿಸುತ್ತಿದ್ದಾರೆ.
ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ವಿಶ್ವದ ಮಾಲೀಕರಾಗುವಿರಿ. ಯಾವುದೇ
ಆಸುರೀ ಕರ್ಮ ಮಾಡಬೇಡಿ, ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ನೋಡಿಕೊಳ್ಳಿ, ನನ್ನಲ್ಲಿ
ಯಾವುದೇ ಅವಗುಣವಿಲ್ಲವೆ? ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹೇಳುತ್ತಾರೆ. ನಿರ್ಗುಣ
ಆಶ್ರಮವೂ ಇದೆ, ಆದರೆ ಅವರಿಗೆ ಅರ್ಥವು ಗೊತ್ತಿಲ್ಲ. ನಿರ್ಗುಣ ಅರ್ಥಾತ್ ನನ್ನಲ್ಲಿ ಯಾವುದೇ
ಗುಣವಿಲ್ಲವೆಂದರ್ಥ. ಈಗ ಗುಣವಂತರನ್ನಾಗಿ ಮಾಡುವುದು ತಂದೆಯ ಕರ್ತವ್ಯವೇ ಆಗಿದೆ. ತಂದೆಯ ಮಹಿಮೆಯ
ಟೋಪಿಯನ್ನು ತಮ್ಮ ಮೇಲಿಟ್ಟುಕೊಂಡಿದ್ದಾರೆ. ತಂದೆಯು ಎಷ್ಟೊಂದು ಮಾತುಗಳನ್ನು ತಿಳಿಸುತ್ತಾರೆ,
ಸಲಹೆಯನ್ನೂ ಕೊಡುತ್ತಾರೆ. ಜಗದಂಬೆ ಮತ್ತು ಲಕ್ಷ್ಮಿಯ ಅಂತರವನ್ನು ಬರೆಯಿರಿ. ಸಂಗಮಯುಗದಲ್ಲಿ
ಬ್ರಹ್ಮಾ-ಸರಸ್ವತಿಯೂ, ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರಿರುತ್ತಾರೆ. ಇದನ್ನು ತಿಳಿಸುವುದಕ್ಕಾಗಿ
ಈ ಚಿತ್ರವಿದೆ. ಸರಸ್ವತಿಯು ಬ್ರಹ್ಮನ ಮಗಳಾಗಿದ್ದಾರೆ, ಮನುಷ್ಯರಿಂದ ದೇವತೆಗಳಾಗಲು ಓದುತ್ತಾರೆ.
ನೀವೀಗ ಬ್ರಾಹ್ಮಣರಾಗಿದ್ದೀರಿ, ಸತ್ಯಯುಗೀ ದೇವತೆಗಳೂ ಸಹ ಮನುಷ್ಯರೇ ಆಗಿದ್ದಾರೆ ಆದರೆ ಅವರಿಗೆ
ದೇವತೆಯಂದು ಹೇಳುತ್ತಾರೆ. ಮನುಷ್ಯರೆಂದು ಹೇಳಿದರೆ ಅವರ ನಿಂದನೆ ಮಾಡಿದಂತಾಗುತ್ತದೆ. ಆದ್ದರಿಂದ
ಅವರಿಗೆ ದೇವಿ-ದೇವತೆ ಅಥವಾ ಭಗವಾನ್-ಭಗವತಿ ಎಂದು ಹೇಳುತ್ತಾರೆ. ಒಂದುವೇಳೆ ರಾಜ-ರಾಣಿಗೆ
ಭಗವಾನ್-ಭಗವತಿಯಂದು ಹೇಳಿದರೆ ಮತ್ತೆ ಪ್ರಜೆಗಳಿಗೂ ಹೇಳಬೇಕಾಗುತ್ತದೆ. ಆದುದರಿಂದ ಅವರಿಗೆ
ದೇವಿ-ದೇವತೆಗಳೆಂದು ಹೇಳಲಾಗುತ್ತದೆ. ತ್ರಿಮೂರ್ತಿಯ ಚಿತ್ರವೂ ಇದೆ, ಸತ್ಯಯುಗದಲ್ಲಿ ಕೆಲವರೇ
ಮನುಷ್ಯರಿರುತ್ತಾರೆ, ಕಲಿಯುಗದಲ್ಲಿ ನೋಡಿದರೆ ಎಷ್ಟೊಂದು ಜನಸಂಖ್ಯೆಯಿದೆ. ಇದನ್ನು ಹೇಗೆ
ತಿಳಿಸುವುದು? ಇದಕ್ಕಾಗಿಯೇ ಗೋಲದ ಚಿತ್ರವು ಅವಶ್ಯವಾಗಿ ಇರಬೇಕು. ಪ್ರದರ್ಶನಿಯಲ್ಲಿ ಇಷ್ಟೊಂದು
ಮಂದಿಯನ್ನು ಕರೆಸುತ್ತಾರೆ ಆದರೆ ಕಲೆಕ್ಟರ್ ಮೊದಲಾದವರಿಗೆ ಎಂದೂ ಯಾರೂ ನಿಮಂತ್ರಣ ನೀಡಿಲ್ಲ
ಆದ್ದರಿಂದ ಇದರ ಬಗ್ಗೆ ವಿಚಾರ ಮಾಡಬೇಕಾಗಿದೆ. ಇದರಲ್ಲಿ ಬಹಳ ವಿಶಾಲಬುದ್ಧಿಯು ಬೇಕು.
ತಂದೆಗೆ ಬಹಳ ಗೌರವ ಕೊಡಬೇಕು. ಹುಸೇನನ ಕುದುರೆಯನ್ನು ಎಷ್ಟೊಂದು ಶೃಂಗರಿಸುತ್ತಾರೆ, ಕುದುರೆಯು
ಎಷ್ಟು ದೊಡ್ಡದಾಗಿರುತ್ತದೆ. ಅದರ ವಸ್ತ್ರವು ಎಷ್ಟು ಚಿಕ್ಕದಾಗಿರುತ್ತದೆ. ಆತ್ಮವೂ ಸಹ ಎಷ್ಟು
ಚಿಕ್ಕ ಬಿಂದುವಾಗಿದೆ! ಅದರ ಶೃಂಗಾರವು ಎಷ್ಟು ದೊಡ್ಡದಾಗಿದೆ! ಇದು ಅಕಾಲಮೂರ್ತಿಯ ಸಿಂಹಾಸನವಲ್ಲವೆ.
ಸರ್ವವ್ಯಾಪಿಯಂಬ ಮಾತನ್ನು ಗೀತೆಯಿಂದ ತೆಗೆದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು
ಆತ್ಮಗಳಿಗೆ ರಾಜಯೋಗವನ್ನುಕಲಿಸುತ್ತೇನೆ ಅಂದಮೇಲೆ ಸರ್ವವ್ಯಾಪಿಯಾಗಿರಲು ಹೇಗೆ ಸಾಧ್ಯ? ತಂದೆ,
ಶಿಕ್ಷಕ, ಗುರುಗಳು ಹೇಗೆ ಸರ್ವವ್ಯಾಪಿಯಾಗಿದ್ದಾರೆ? ನಾನು ನಿಮ್ಮ ತಂದೆಯೂ ಆಗಿದ್ದೇನೆ, ಜ್ಞಾನ
ಸಾಗರನೂ ಆಗಿದ್ದೇನೆ. ನೀವು ಚರಿತ್ರೆ, ಭೂಗೋಳವನ್ನು ತಿಳಿದುಕೊಂಡರೆ ಬೇಹದ್ದಿನ ರಾಜ್ಯವು ಸಿಗುವುದು.
ದೈವೀ ಗುಣಗಳನ್ನೂ ಧಾರಣೆ ಮಾಡಬೇಕು. ಮಾಯಯು ಒಮ್ಮೆಲೆ ಮೂಗನ್ನು ಹಿಡಿಯುತ್ತದೆ. ನಡವಳಿಕೆಯು
ಹಾಳಾಗುತ್ತದೆ ಆಗ ಬಾಬಾ, ನಮ್ಮಿಂದ ತಪ್ಪಾಗಿ ಹೋಯಿತು. ನಾವು ಮುಖ ಕಪ್ಪು ಮಾಡಿಕೊಂಡೆವು ಎಂದು
ತಂದೆಗೆ ಪತ್ರ ಬರೆಯುತ್ತಾರೆ. ಇಲ್ಲಂತೂ ಪವಿತ್ರತೆಯನ್ನು ಕಲಿಸಿಕೊಡಲಾಗುತ್ತದೆ. ಮತ್ತೆ ಒಂದುವೇಳೆ
ಯಾರಾದರೂ ಬಿದ್ದರೆ ಅದರಲ್ಲಿ ತಂದೆಯು ಏನು ಮಾಡಲು ಸಾಧ್ಯ! ಮನೆಯಲ್ಲಿ ಮಕ್ಕಳು ಕೆಟ್ಟು ಹೋಗುತ್ತಾರೆ,
ಮುಖ ಕಪ್ಪು ಮಾಡಿಕೊಳ್ಳುತ್ತಾರೆಂದರೆ ನೀನು ಇರುವುದಕ್ಕಿಂತ ಸಾಯುವುದೇ ಲೇಸೆಂದು ಮಾತಾಪಿತರು
ಹೇಳುತ್ತಾರೆ. ಬೇಹದ್ದಿನ ತಂದೆಯು ಭಲೆ ನಾಟಕವನ್ನು ಅರಿತಿದ್ದಾರೆ ಆದರೂ ಸಹ ಹೀಗೆಯೇ
ಹೇಳುತ್ತಾರಲ್ಲವೆ. ನೀವು ಅನ್ಯರಿಗೆ ಶಿಕ್ಷಣವನ್ನು ನೀಡಿ ತಾವೇ ಬೀಳುತ್ತೀರೆಂದರೆ ಒಂದಕ್ಕೆ ಸಾವಿರ
ಪಟ್ಟು ಪಾಪವಾಗುವುದು. ಆಗ ಹೇಳುತ್ತಾರೆ - ಮಾಯೆಯು ಪೆಟ್ಟು ಕೊಟ್ಟಿತು ಎಂದು. ಮಾಯೆಯು ಈ ರೀತಿ
ಪೆಟ್ಟನ್ನು ಕೊಡುತ್ತದೆ. ಒಮ್ಮೆಲೆ ಬುದ್ದಿಯನ್ನೇ ಭ್ರಷ್ಟ ಮಾಡಿ ಬಿಡುತ್ತದೆ.
ತಂದೆಯು ಬಹಳಷ್ಟು ತಿಳಿಸುತ್ತಾರೆ, ಕಣ್ಣುಗಳು ಬಹಳ ಮೋಸಗಾರನಾಗಿದೆ. ಎಂದೂ ಯಾವುದೇ ವಿಕರ್ಮ
ಮಾಡಬೇಡಿ. ಬಿರುಗಾಳಿಗಳು ಬಹಳ ಬರುತ್ತವೆ ಏಕೆಂದರೆ ಯುದ್ದದ ಮೈದಾನದಲ್ಲಿದ್ದೀರಲ್ಲವೆ.
ಏನಾಗುವುದೆಂದು ತಿಳಿಯುವುದೇ ಇಲ್ಲ. ಮಾಯೆಯು ಪೆಟ್ಟನ್ನು ಕೊಟ್ಟು ಬಿಡುತ್ತದೆ. ನೀವೀಗ ಎಷ್ಟು
ಬುದ್ಧಿವಂತರಾಗುತ್ತೀರಿ, ಆತ್ಮವೇ ಬುದ್ಧಿವಂತನಾಗುತ್ತದೆಯಲ್ಲವೆ. ಆತ್ಮವೇ ಬುದ್ಧಿಹೀನನಾಗಿತ್ತು,
ಈಗ ತಂದೆಯು ಬುದ್ಧಿವಂತರನ್ನಾಗಿ ಮಾಡುತ್ತಾರೆ. ಮನುಷ್ಯರು ಬಹಳ ದೇಹಾಭಿಮಾನದಲ್ಲಿದ್ದಾರೆ,
ನಾವಾತ್ಮರಾಗಿದ್ದೇವೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯಾವುದೇ ವಿಕಾರದ ಮಾತನ್ನು ಈ
ಕಿವಿಗಳಿಂದ ಕೇಳಲೇಬೇಡಿ. ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಗುರಿಯು ಬಹಳ
ಉನ್ನತವಾಗಿದೆ. ಮೃತ್ಯುವು ಸಮೀಪ ಬಂದಾಗ ನಿಮಗೆ ಬಹಳ ಭಯವಾಗುವುದು. ಮನುಷ್ಯರು ಸಾಯುವ ಸಮಯದಲ್ಲಿ
ಮಿತ್ರ ಸಂಬಂಧಿಗಳು ಅವರಿಗೆ ಭಗವಂತನನ್ನು ನೆನಪು ಮಾಡಿ ಅಥವಾ ತಮ್ಮ ಗುರು ಮೊದಲಾದವರನ್ನು ನೆನಪು
ಮಾಡಿ ಎಂದು ಹೇಳುತ್ತಾರಲ್ಲವೆ. ದೇಹಧಾರಿಯನ್ನು ನೆನಪು ಮಾಡುವುದನ್ನು ಕಲಿಸುತ್ತಾರೆ. ಇಲ್ಲಿ
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ. ಇದು ನೀವು ಮಕ್ಕಳ
ಬುದ್ಧಿಯಲ್ಲಿಯೇ ಇದೆ. ತಂದೆಯು ಆಜ್ಞೆ ಮಾಡುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ದೇಹಧಾರಿಗಳ
ನೆನಪು ಮಾಡಬಾರದು. ತಂದೆ, ತಾಯಿಯೂ ಸಹ ದೇಹಧಾರಿಗಳಲ್ಲವೆ. ನಾನಂತೂ ವಿಚಿತ್ರನಾಗಿದ್ದೇನೆ,
ವಿದೇಹಿಯಾಗಿದ್ದೇನೆ. ಇವರಲ್ಲಿ ಕುಳಿತು ನಿಮಗೆ ಜ್ಞಾನವನ್ನು ಕೊಡುತ್ತೇನೆ. ನೀವೀಗ ಜ್ಞಾನ,
ಯೋಗವನ್ನು ಕಲಿಯುತ್ತೀರಿ, ಜ್ಞಾನ ಸಾಗರ ತಂದೆಯ ಮೂಲಕ ನಾವು ರಾಜ ರಾಜೇಶ್ವರಿಯಾಗಲು ಜ್ಞಾನವನ್ನು
ಕಲಿಯುತ್ತಿದ್ದೇವೆಂದು ನೀವು ಹೇಳುತ್ತೀರಿ. ಜ್ಞಾನ ಸಾಗರನ್ನು ಜ್ಞಾನವನ್ನೂ ಕಲಿಸುತ್ತಾರೆ,
ರಾಜಯೋಗವನ್ನೂ ಕಲಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಬುದ್ಧಿವಂತರಾಗಿ ಮಾಯೆಯ ಬಿರುಗಾಳಿಗಳಿಂದ ಎಂದೂ ಸೋಲಬೇಡಿ. ಕಣ್ಣುಗಳು ಮೋಸ ಮಾಡುತ್ತವೆ ಆದ್ದರಿಂದ
ತಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು. ಯಾವುದೇ ವಿಕಾರಿ ಮಾತುಗಳನ್ನು ಈ ಕಿವಿಗಳಿಂದ ಕೇಳಬಾರದು.
2. ತಮ್ಮ ಹೃದಯದಲ್ಲಿ ಕೇಳಿಕೊಳ್ಳಿ - ನಾವು ಎಷ್ಟು ಮಂದಿಯನ್ನು ನಮ್ಮ ಸಮಾನ
ಮಾಡಿಕೊಳ್ಳುತ್ತಿದ್ದೇವೆ? ಮಾ|| ಪತಿತ-ಪಾವನಿಯಾಗಿ ಎಲ್ಲರನ್ನು ಪಾವನ (ರಾಜ ರಾಜೇಶ್ವರಿ) ರನ್ನಾಗಿ
ಮಾಡುವ ಸೇವೆ ಮಾಡುತ್ತಿದ್ದೇವೆಯೇ? ನನ್ನಲ್ಲಿ ಯಾವುದೇ ಅವಗುಣವಿಲ್ಲವೆ? ಎಲ್ಲಿಯವರೆಗೆ ದೈವೀ
ಗುಣಗಳನ್ನು ಧಾರಣೆ ಮಾಡಿಕೊಂಡಿದ್ದೇನೆ?
ವರದಾನ:
ಎಲ್ಲರಿಗೂ ನೆಲೆ
ತೋರಿಸುವಂತಹ ದಯಾ ಹೃದಯಿ ತಂದೆಯ ಮಕ್ಕಳು ದಯಾ ಹೃದಯಿ ಭವ.
ದಯಾಹೃದಯಿ ತಂದೆಯ
ದಯಾಹೃದಯಿ ಮಕ್ಕಳು ಯಾರನ್ನೂ ಸಹ ಭಿಕಾರಿಗಳ ರೂಪದಲ್ಲಿ ನೋಡಿದರೆಂದರೆ ಅವರಿಗೆ ದಯೆ ಬರುತ್ತದೆ. ಈ
ಆತ್ಮಕ್ಕೂ ಸಹ ನೆಲೆ ಸಿಗಲಿ, ಇವರ ಕಲ್ಯಾಣ ಆಗಲಿ ಎಂದು. ಅವರ ಸಂಪರ್ಕದಲ್ಲಿ ಯಾರೇ ಬರುತ್ತಾರೆ
ಅವರಿಗೆ ತಂದೆಯ ಪರಿಚಯ ಖಂಡಿತ ಕೊಡುತ್ತಾರೆ. ಹೇಗೆ ಯಾರಾದರೂ ಮನೆಗೆ ಬಂದರೆ ಅವರಿಗೆ ಮೊದಲು ನೀರು
ಬೇಕೆ ಎಂದು ಕೇಳಲಾಗುತ್ತದೆ, ಹಾಗೆಯೇ ಅವರು ಹೊರಟು ಬಿಟ್ಟರೆ ಬೇಸರ ಪಟ್ಟುಕೊಳ್ಳುತ್ತಾರೆ, ಹಾಗೆ
ಯಾರೇ ಸಂಪರ್ಕದಲ್ಲಿ ಬಂದರೆ ಅವರಿಗೆ ತಂದೆಯ ಪರಿಚಯದ ನೀರು ಖಂಡಿತ ಕೇಳಿ ಅರ್ಥಾತ್ ದಾತನ ಮಕ್ಕಳು
ದಾತನಾಗಿ ಏನಾದರೂ ಒಂದು ಕೊಡಿ ಅದರಿಂದ ಅವರಿಗೂ ಸಹ ನೆಲೆ ಸಿಗಲಿ.
ಸ್ಲೋಗನ್:
ಯಥಾರ್ಥ ವೈರಾಗ್ಯ
ವೃತ್ತಿಯ ಸಹಜ ಅರ್ಥವಾಗಿದೆ - ಎಷ್ಟು ಭಿನ್ನವಾಗಿರುತ್ತೀರಿ (ನ್ಯಾರಾ) ಅಷ್ಟೇ ಪ್ರಿಯರಾಗಿರುತ್ತೀರಿ
(ಪ್ಯಾರಾ).