04.11.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಸದಾ ನೆನಪು ಎಂಬ ನೇಣು ಹಾಕಿಕೊಂಡಿರಬೇಕಾಗಿದೆ, ನೆನಪಿನಿಂದಲೇ ಆತ್ಮವು ಸತ್ಯ ಚಿನ್ನವಾಗುವುದು”
ಪ್ರಶ್ನೆ:
ಯಾವ ಬಲವು
ವಿಕಾರೀ ದೃಷ್ಟಿಯನ್ನು ಕೂಡಲೇ ಪರಿವರ್ತನೆ ಮಾಡಿ ಬಿಡುತ್ತದೆ?
ಉತ್ತರ:
ಆತ್ಮದಲ್ಲಿ ಯಾವಾಗ ಜ್ಞಾನದ ಮೂರನೇ ನೇತ್ರದ ಬಲ ಬಂದು ಬಿಡುತ್ತದೆಯೋ ಆಗ ವಿಕಾರೀತನವು ಸಮಾಪ್ತಿಯಾಗಿ
ಬಿಡುತ್ತದೆ. ತಂದೆಯ ಶ್ರೀಮತವಾಗಿದೆ - ಮಕ್ಕಳೇ, ನೀವೆಲ್ಲರೂ ಪರಸ್ಪರ ಸಹೋದರ -ಸಹೋದರರಾಗಿದ್ದೀರಿ,
ಸಹೋದರ-ಸಹೋದರಿಯರಾಗಿದ್ದೀರಿ. ನಿಮ್ಮ ದೃಷ್ಟಿ ಎಂದೂ ವಿಕಾರಿಯಾಗಲು ಸಾಧ್ಯವಿಲ್ಲ. ನೀವು ಸದಾ
ನೆನಪಿನ ಮಸ್ತಿಯಲ್ಲಿರಿ. ವಾಹ್! ಅದೃಷ್ಟವೇ ವಾಹ್! ನಮಗೆ ಭಗವಂತನೇ ಓದಿಸುತ್ತಾರೆ - ಹೀಗೆ ವಿಚಾರ
ಮಾಡಿದಾಗ ಸದಾ ನಶೆಯೇರುವುದು.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಿದ್ದಾರೆ. ಮಕ್ಕಳಿಗೆ ತಿಳಿದಿದೆ
- ಆತ್ಮಿಕ ತಂದೆಯೂ ಸಹ ಆತ್ಮನೇ ಆಗಿದ್ದಾರೆ ಆದರೆ ಅವರು ಸಂಪೂರ್ಣನಾಗಿದ್ದಾರೆ. ಅವರಲ್ಲಿ ಯಾವುದೇ
ತುಕ್ಕು ಹಿಡಿಯುವುದಿಲ್ಲ. ಶಿವ ತಂದೆಯು ಕೇಳುತ್ತಾರೆ - ನನ್ನಲ್ಲಿ ತುಕ್ಕು ಇದೆಯೇ? ಇಲ್ಲವೇ ಇಲ್ಲ.
ಈ ದಾದಾರವರಲ್ಲಿ ತುಕ್ಕು ಹಿಡಿದಿತ್ತು. ಇವರಲ್ಲಿ ತಂದೆಯು ಪ್ರವೇಶ ಮಾಡುವುದರಿಂದ ಸಹಯೋಗವು
ಸಿಗುತ್ತದೆ. ಮೂಲ ಮಾತೇನೆಂದರೆ ಪಂಚ ವಿಕಾರಗಳ ಕಾರಣ ಆತ್ಮದಲ್ಲಿ ತುಕ್ಕು ಹಿಡಿಯುವುದರಿಂದ ಆತ್ಮವು
ಅಪವಿತ್ರವಾಗಿ ಬಿಟ್ಟಿದೆ. ಆದ್ದರಿಂದ ತಂದೆಯನ್ನು ಎಷ್ಟೆಷ್ಟು ನೆನಪು ಮಾಡುತ್ತೀರೋ ಅಷ್ಟು ತುಕ್ಕು
ಇಳಿಯುತ್ತಾ ಹೋಗುವುದು. ಭಕ್ತಿಮಾರ್ಗದ ಕಥೆಗಳನ್ನಂತೂ ಜನ್ಮ-ಜನ್ಮಾಂತರಗಳಿಂದ ಕೇಳುತ್ತಾ
ಬಂದಿದ್ದೀರಿ ಆದರೆ ಇಲ್ಲಿನ ಮಾತೇ ಭಿನ್ನವಾಗಿದೆ. ಈಗ ನಿಮಗೆ ಜ್ಞಾನ ಸಾಗರನಿಂದ ಜ್ಞಾನವು
ಸಿಗುತ್ತಿದೆ. ನಿಮ್ಮ ಬುದ್ಧಿಯಲ್ಲಿ ಗುರಿ-ಧ್ಯೇಯವಿದೆ. ಮತ್ತ್ಯಾವುದೇ ಸತ್ಸಂಗಗಳಲ್ಲಿ
ಗುರಿ-ಧ್ಯೇಯವಿರುವುದಿಲ್ಲ. ಡ್ರಾಮಾ ಪ್ಲಾನನುಸಾರ ಈಶ್ವರ ಸರ್ವವ್ಯಾಪಿ ಎಂದು ಹೇಳಿ ನನ್ನ ನಿಂದನೆ
ಮಾಡುತ್ತಿರುತ್ತಾರೆ. ಮನುಷ್ಯರು ಇದನ್ನೂ ಸಹ ತಿಳಿದುಕೊಳ್ಳುವುದಿಲ್ಲ - ಇದು ಡ್ರಾಮಾ ಆಗಿದೆ,
ಇದರಲ್ಲಿ ರಚಯಿತ, ನಿರ್ದೇಶಕನೂ ಸಹ ಡ್ರಾಮಾದಲ್ಲಿ ಬಂಧಿತರಾಗಿದ್ದಾರೆ. ಭಲೆ ಸರ್ವಶಕ್ತಿವಂತನೆಂದು
ಗಾಯನವಿದೆ ಆದರೆ ನಿಮಗೆ ತಿಳಿದಿದೆ - ಅಂತಹ ತಂದೆಯೂ ಸಹ ಡ್ರಾಮಾದ ಪಟ್ಟಿಯ ಮೇಲೆ ನಡೆಯುತ್ತಿದ್ದಾರೆ.
ತಂದೆಯೇ ಸ್ವಯಂ ಬಂದು ತಿಳಿಸಿಕೊಡುತ್ತಾರೆ, ಹೇಳುತ್ತಾರೆ - ನಾನಾತ್ಮನಲ್ಲಿ ಅವಿನಾಶಿ ಪಾತ್ರವು
ನಿಗಧಿಯಾಗಿದೆ ಅದರನುಸಾರ ಓದಿಸುತ್ತೇನೆ. ಏನೆಲ್ಲವನ್ನು ತಿಳಿಸುತ್ತೇನೆಯೋ ಎಲ್ಲವೂ ಡ್ರಾಮಾದಲ್ಲಿ
ಪೂರ್ವ ನಿಶ್ಚಿತವಾಗಿದೆ. ಈಗ ನೀವು ಪುರುಷೋತ್ತಮ ಸಂಗಮಯುಗದಲ್ಲಿ ಪುರುಷೋತ್ತಮರಾಗಬೇಕಾಗಿದೆ.
ಭಗವಾನುವಾಚವಿದೆಯಲ್ಲವೆ. ನೀವು ಮಕ್ಕಳು ಪುರುಷಾರ್ಥ ಮಾಡಿ ಈ ಲಕ್ಷ್ಮೀ-ನಾರಾಯಣರಾಗಬೇಕಾಗಿದೆ. ನೀವು
ವಿಶ್ವದ ಮಾಲೀಕರಾಗಬೇಕೆಂಬ ಮಾತನ್ನು ಮತ್ತ್ಯಾವ ಮನುಷ್ಯರೂ ಹೇಳಲು ಸಾಧ್ಯವಿಲ್ಲ. ನೀವು
ತಿಳಿದುಕೊಂಡಿದ್ದೀರಿ - ನಾವು ವಿಶ್ವದ ಮಾಲೀಕರು, ನರನಿಂದ ನಾರಾಯಣನಾಗುವುದಕ್ಕಾಗಿಯೇ ಬಂದಿದ್ದೇವೆ.
ಭಕ್ತಿಮಾರ್ಗದಲ್ಲಿ ಜನ್ಮ-ಜನ್ಮಾಂತರದಿಂದ ಕಥೆಗಳನ್ನು ಕೇಳುತ್ತಾ ಬರುತ್ತಿದ್ದೆವು, ಅರ್ಥವೇನೂ
ಆಗುತ್ತಿರಲಿಲ್ಲ. ಈಗ ನಿಮಗೆ ತಿಳಿದಿದೆ, ಅವಶ್ಯವಾಗಿ ಈ ಲಕ್ಷ್ಮೀ-ನಾರಾಯಣರ ರಾಜ್ಯವು
ಸ್ವರ್ಗದಲ್ಲಿತ್ತು, ಈಗ ಇಲ್ಲ. ತ್ರಿಮೂರ್ತಿಯ ಬಗ್ಗೆಯೂ ಮಕ್ಕಳಿಗೆ ತಿಳಿಸಲಾಗಿದೆ. ಬ್ರಹ್ಮನ ಮೂಲಕ
ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಸತ್ಯಯುಗದಲ್ಲಿ ಇದೊಂದೇ ಧರ್ಮವಿತ್ತು,
ಮತ್ತ್ಯಾವ ಧರ್ಮವೂ ಇರಲಿಲ್ಲ. ಈಗ ಆ ಮೊದಲಿನ ಧರ್ಮವಿಲ್ಲ, ಪುನಃ ಸ್ಥಾಪನೆಯಾಗುತ್ತಿದೆ. ತಂದೆಯು
ತಿಳಿಸುತ್ತಾರೆ - ನಾನು ಕಲ್ಪ-ಕಲ್ಪದ ಸಂಗಮಯುಗದಲ್ಲಿ ಬಂದು ನೀವು ಮಕ್ಕಳಿಗೆ ಓದಿಸುತ್ತೇನೆ. ಇದು
ಪಾಠಶಾಲೆಯಲ್ಲವೆ! ಮಕ್ಕಳು ಇಲ್ಲಿ ನಡವಳಿಕೆಯನ್ನೂ ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಪಂಚ
ವಿಕಾರಗಳನ್ನು ತೆಗೆಯಬೇಕಾಗಿದೆ. ನೀವೇ ದೇವತೆಗಳ ಮುಂದೆಹೋಗಿ ತಾವು ಸರ್ವಗುಣ ಸಂಪನ್ನರು..... ನಾವು
ಪಾಪಿಗಳಾಗಿದ್ದೇವೆಂದು ಹಾಡುತ್ತಿದ್ದಿರಿ. ಭಾರತವಾಸಿಗಳೇ ದೇವತೆಗಳಾಗಿದ್ದಿರಿ, ಸತ್ಯಯುಗದಲ್ಲಿ ಈ
ಲಕ್ಷ್ಮೀ-ನಾರಾಯಣರು ಪೂಜ್ಯರಾಗಿದ್ದರು ನಂತರ ಕಲಿಯುಗದಲ್ಲಿ ಪೂಜಾರಿಗಳಾದರು. ಈಗ ಪುನಃ
ಪೂಜ್ಯರಾಗುತ್ತಿದ್ದೀರಿ. ಮೊದಲು ಪೂಜ್ಯ, ಸತೋಪ್ರಧಾನ ಆತ್ಮಗಳಿದ್ದರು, ಅವರ ಶರೀರವೂ
ಸತೋಪ್ರಧಾನವಾಗಿತ್ತು. ಆತ್ಮವು ಹೇಗೋ ಶರೀರವೂ ಹಾಗೆಯೇ ತಯಾರಾಗುತ್ತದೆ. ಚಿನ್ನದಲ್ಲಿ ಲೋಹವು
ಬೆರಕೆಯಾದರೆ ಅದರ ಬೆಲೆಯೇ ಕಡಿಮೆಯಾಗಿ ಬಿಡುತ್ತದೆ. ನಿಮ್ಮ ಬೆಲೆಯೂ ಸಹ ಬಹಳ ಶ್ರೇಷ್ಠವಾಗಿತ್ತು,
ಈಗ ಎಷ್ಟೊಂದು ಕನಿಷ್ಟರಾಗಿ ಬಿಟ್ಟಿದ್ದೀರಿ! ನೀವು ಪೂಜ್ಯರಾಗಿದ್ದಿರಿ, ಈಗ ಪೂಜಾರಿಗಳಾಗಿದ್ದೀರಿ.
ಈಗ ಎಷ್ಟು ಯೋಗದಲ್ಲಿರುತ್ತೀರೋ ಅಷ್ಟು ತುಕ್ಕು ಇಳಿಯುತ್ತದೆ ಮತ್ತು ತಂದೆಯೊಂದಿಗೆ
ಪ್ರೀತಿಯುಂಟಾಗುತ್ತಾ ಹೋಗುತ್ತದೆ. ಖುಷಿಯೂ ಇರುತ್ತದೆ. ತಂದೆಯು ಸ್ಪಷ್ಟವಾಗಿ ತಿಳಿಸುತ್ತಾರೆ -
ಮಕ್ಕಳೇ, ಇಡೀ ದಿನದಲ್ಲಿ ನಾವು ಎಷ್ಟು ಸಮಯ ನೆನಪು ಮಾಡುತ್ತೇವೆಂದು ಚಾರ್ಟ್ ಇಡಿ. ನೆನಪಿನ ಯಾತ್ರೆ
ಎಂಬ ಶಬ್ಧವು ಸರಿಯಾಗಿದೆ. ನೆನಪು ಮಾಡುತ್ತಾ-ಮಾಡುತ್ತಾ, ತುಕ್ಕು ಇಳಿಯುತ್ತಾ ಅಂತಿಮದ ಗತಿ ಸೋ
ಗತಿಯಾಗುವುದು. ಆ ಮಾರ್ಗದರ್ಶಕರಂತೂ ತೀರ್ಥ ಯಾತ್ರೆಗಳಿಗೆ ಕರೆದುಕೊಂಡು ಹೋಗುತ್ತಾರೆ ಆದರೆ ಇಲ್ಲಿ
ಸ್ವಯಂ ಆತ್ಮವೇ ಯಾತ್ರೆ ಮಾಡುತ್ತದೆ. ತನ್ನ ಪರಮಧಾಮಕ್ಕೆ ಹೋಗಬೇಕಾಗಿದೆ ಏಕೆಂದರೆ ಈಗ
ಸೃಷ್ಟಿಚಕ್ರವು ಮುಕ್ತಾಯವಾಗುತ್ತದೆ. ಇದು ಬಹಳ ಕೊಳಕು ಪ್ರಪಂಚವಾಗಿದೆ. ಪರಮಾತ್ಮನನ್ನು ಯಾರೂ
ತಿಳಿದುಕೊಂಡಿಲ್ಲ, ತಿಳಿದುಕೊಳ್ಳುವುದೂ ಇಲ್ಲ ಆದ್ದರಿಂದ ವಿನಾಶಕಾಲೇ ವಿಪರೀತ ಬುದ್ಧಿಯೆಂದು
ಹೇಳಲಾಗುತ್ತದೆ. ಅವರಿಗೆ ಈ ನರಕವೇ ಸ್ವರ್ಗದ ಸಮಾನವಾಗಿದೆ. ಅವರ ಬುದ್ಧಿಯಲ್ಲಿ ಈ ಮಾತುಗಳು
ಕುಳಿತುಕೊಳ್ಳಲು ಸಾಧ್ಯವಿಲ್ಲ. ನೀವು ಮಕ್ಕಳಿಗೆ ಇದೆಲ್ಲವನ್ನು ವಿಚಾರ ಸಾಗರ ಮಂಥನ ಮಾಡಲು ಬಹಳ
ಏಕಾಂತವು ಬೇಕು. ಇಲ್ಲಂತೂ ಏಕಾಂತವು ಬಹಳ ಚೆನ್ನಾಗಿದೆ ಆದ್ದರಿಂದ ಮಧುಬನದ ಮಹಿಮೆಯಿದೆ. ಮಕ್ಕಳಿಗೆ
ಈಗ ಬಹಳ ಖುಷಿಯಿರಬೇಕು. ನಾವು ಜೀವಾತ್ಮರಿಗೆ ಪರಮಾತ್ಮನು ಓದಿಸುತ್ತಿದ್ದಾರೆ. ಕಲ್ಪದ ಹಿಂದೆಯೂ ಸಹ
ಇದೇ ರೀತಿ ಓದಿಸಿದ್ದರು. ಕೃಷ್ಣನ ಮಾತಿಲ್ಲ. ಕೃಷ್ಣನು ಚಿಕ್ಕ ಮಗುವಾಗಿದ್ದನು, ಕೃಷ್ಣನು
ಆತ್ಮನಾಗಿದ್ದಾನೆ, ತಂದೆಯು ಪರಮ ಆತ್ಮನಾಗಿದ್ದಾರೆ. ಮೊದಲ ನಂಬರಿನ ಶ್ರೀಕೃಷ್ಣನ ಆತ್ಮವೇ ಈಗ
ಅಂತಿಮದಲ್ಲಿ ಬಂದು ಬಿಟ್ಟಿದೆ ಆದ್ದರಿಂದ ಹೆಸರೂ ಸಹ ಬದಲಾಯಿತು. ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ
ಹೆಸರಂತೂ ಬದಲಾಗುತ್ತದೆಯಲ್ಲವೆ. ಇವರು ದಾದಾ ಲೇಖರಾಜ್ ಆಗಿದ್ದಾರೆ, ಇವರದೇ ಬಹಳ ಜನ್ಮಗಳ ಅಂತಿಮ
ಜನ್ಮವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡಿ ನಿಮಗೆ
ರಾಜಯೋಗವನ್ನು ಕಲಿಸುತ್ತಿದ್ದೇನೆ. ತಂದೆಯು ಯಾರಲ್ಲಿಯಾದರೂ ಬರಲೇಬೇಕಲ್ಲವೆ. ಶಾಸ್ತ್ರಗಳಲ್ಲಿ ಈ
ಮಾತುಗಳಿಲ್ಲ. ತಂದೆಯು ನೀವು ಮಕ್ಕಳಿಗೆ ಓದಿಸುತ್ತಾರೆ, ನೀವೇ ಓದುತ್ತೀರಿ ನಂತರ ಸತ್ಯಯುಗದಲ್ಲಿ ಈ
ಜ್ಞಾನವಿರುವುದಿಲ್ಲ. ಅಲ್ಲಿ ಪ್ರಾಲಬ್ಧವಿರುತ್ತದೆ. ತಂದೆಯು ಸಂಗಮಯುಗದಲ್ಲಿ ಬಂದು ಈ ಜ್ಞಾನವನ್ನು
ತಿಳಿಸುತ್ತಾರೆ ನಂತರ ನೀವು ಪದವಿಯನ್ನು ಪಡೆಯುತ್ತೀರಿ. ಈ ಸಮಯವೇ ಬೇಹದ್ದಿನ ತಂದೆಯಿಂದ ಬೇಹದ್ದಿನ
ಆಸ್ತಿಯನ್ನು ಪಡೆಯುವ ಸಮಯವಾಗಿದೆ ಆದ್ದರಿಂದ ಮಕ್ಕಳು ಹುಡುಗಾಟಿಕೆ ಮಾಡಬಾರದು. ಮಾಯೆಯು ಬಹಳ
ಆಲಸ್ಯ ತರಿಸುತ್ತದೆ ಆಗ ಅವರ ಅದೃಷ್ಟದಲ್ಲಿ ಇಲ್ಲವೆಂದು ತಿಳಿಯಲಾಗುವುದು. ತಂದೆಯಂತು ಪುರುಷಾರ್ಥ
ಮಾಡಿಸುತ್ತಾರೆ ಆದರೆ ಅದೃಷ್ಟದಲ್ಲಿ ಎಷ್ಟೊಂದು ಅಂತರವಾಗಿ ಬಿಡುತ್ತದೆ. ಕೆಲವರು ಉತ್ತೀರ್ಣರು,
ಇನ್ನೂ ಕೆಲವರು ಅನುತ್ತೀರ್ಣರಾಗಿ ಬಿಡುತ್ತಾರೆ. ಡಬಲ್ ಕಿರೀಟಧಾರಿಗಳಾಗಲು ಪುರುಷಾರ್ಥ
ಮಾಡಬೇಕಾಗಿದೆ.
ತಂದೆಯು ತಿಳಿಸುತ್ತಾರೆ – ಗೃಹಸ್ಥ ವ್ಯವಹಾರದಲ್ಲಿ ಭಲೆ ಇರಿ. ಮಕ್ಕಳು ಲೌಕಿಕ ತಂದೆಯ ಸಾಲವನ್ನೂ
ತೀರಿಸಬೇಕಾಗಿದೆ. ನಿಯಮಬದ್ಧವಾಗಿ ನಡೆಯಬೇಕಾಗಿದೆ. ಕಲಿಯುಗದಲ್ಲಂತೂ ಎಲ್ಲವೂ ನಿಯಮಕ್ಕೆ
ವಿರುದ್ಧವಾಗಿದೆ. ನೀವು ತಿಳಿದುಕೊಂಡಿದ್ದೀರಿ - ನಾವೇ ಇಷ್ಟು ಶ್ರೇಷ್ಠ, ಪವಿತ್ರರಾಗಿದ್ದೆವು
ನಂತರ ಕೆಳಗಿಳಿಯುತ್ತಾ ಬಂದಿದ್ದೇವೆ. ಈಗ ಮತ್ತೆ ಪವಿತ್ರರಾಗಬೇಕಾಗಿದೆ. ಪ್ರಜಾಪಿತ ಬ್ರಹ್ಮನ
ಮಕ್ಕಳೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ ಅಂದಮೇಲೆ ವಿಕಾರಿ ದೃಷ್ಟಿಯಿರಲು ಸಾಧ್ಯವಿಲ್ಲ
ಏಕೆಂದರೆ ನೀವು ಸಹೋದರ-ಸಹೋದರಿಯರಾದಿರಿ. ತಂದೆಯು ಯುಕ್ತಿಯನ್ನು ತಿಳಿಸುತ್ತಾರೆ. ನೀವೆಲ್ಲರೂ ಬಾಬಾ,
ಬಾಬಾ ಎಂದು ಹೇಳುತ್ತಿರುತ್ತೀರಿ ಅಂದಮೇಲೆ ಸಹೋದರ-ಸಹೋದರಿಯರಾದಿರಿ. ಭಗವಂತನಿಗೆ ಎಲ್ಲರೂ ತಂದೆಯಂದು
ಹೇಳುತ್ತಾರಲ್ಲವೆ. ಆತ್ಮಗಳೂ ಸಹ ಹೇಳುತ್ತೀರಿ - ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ, ಮತ್ತೆ
ಶರೀರದಲ್ಲಿ ಬಂದಾಗ ಸಹೋದರ-ಸಹೋದರಿಯರಾದೆವು ಅಂದಮೇಲೆ ನಮ್ಮದು ವಿಕಾರೀ ದೃಷ್ಟಿ ಬರಲು ಹೇಗೆ ಸಾಧ್ಯ?
ನೀವು ದೊಡ್ಡ-ದೊಡ್ಡ ಸಭೆಯಲ್ಲಿಯೂ ಸಹ ಇದನ್ನು ತಿಳಿಸಬಹುದು - ನೀವೆಲ್ಲರೂ
ಸಹೋದರ-ಸಹೋದರರಾಗಿದ್ದೀರಿ, ಮತ್ತೆ ಪ್ರಜಾಪಿತ ಬ್ರಹ್ಮನ ಮೂಲಕ ರಚನೆಯನ್ನು ರಚಿಸಿದ್ದರಿಂದ
ಸಹೋದರ-ಸಹೋದರಿಯರಾದಿರಿ. ಇಲ್ಲಿ ಮತ್ತ್ಯಾವುದೇ ಸಂಬಂಧವಿಲ್ಲ. ನಾವೆಲ್ಲರೂ ಒಬ್ಬ ತಂದೆಯ
ಮಕ್ಕಳಾಗಿದ್ದೇವೆ. ಒಬ್ಬ ತಂದೆಯ ಮಕ್ಕಳು ವಿಕಾರದಲ್ಲಿ ಹೋಗಲು ಹೇಗೆ ಸಾಧ್ಯ? ಸಹೋದರ-ಸಹೋದರರೂ
ಆಗಿದ್ದೀರಿ ಮತ್ತು ಸಹೋದರ-ಸಹೋದರಿಯರೂ ಆಗಿದ್ದೀರಿ. ತಂದೆಯು ತಿಳಿಸಿದ್ದಾರೆ, ಈ ಕಣ್ಣುಗಳು ಬಹಳ
ಮೋಸ ಮಾಡುತ್ತವೆ. ಕಣ್ಣುಗಳು ಒಳ್ಳೆಯ ವಸ್ತುಗಳನ್ನು ನೋಡಿತೆಂದರೆ ಅದರ ಮೇಲೆ ಮನಸ್ಸಾಗುತ್ತದೆ.
ಒಂದುವೇಳೆ ನೋಡುವುದೇ ಇಲ್ಲವೆಂದರೆ ಇಚ್ಛೆಯೂ ಆಗುವುದಿಲ್ಲ. ಈ ವಿಕಾರಿ ಕಣ್ಣುಗಳನ್ನು ಪರಿವರ್ತನೆ
ಮಾಡಿಕೊಳ್ಳಬೇಕಾಗಿದೆ. ಸಹೋದರ-ಸಹೋದರಿಯರು ವಿಕಾರದಲ್ಲಿ ಹೋಗಲು ಸಾಧ್ಯವಿಲ್ಲ. ಆ ದೃಷ್ಟಿಯು ಹೊರಟು
ಹೋಗಬೇಕು. ಜ್ಞಾನದ ಮೂರನೆಯ ನೇತ್ರದ ಬಲ ಬೇಕು. ಅರ್ಧಕಲ್ಪ ಈ ಕಣ್ಣುಗಳಿಂದ ಕೆಲಸ ಮಾಡಿದ್ದೀರಿ. ಈಗ
ತಂದೆಯು ತಿಳಿಸುತ್ತಾರೆ - ಈ ತುಕ್ಕೆಲ್ಲವೂ ಈಗ ಕಳೆಯುವುದು ಹೇಗೆ? ನಾವಾತ್ಮಗಳು
ಪವಿತ್ರರಾಗಿದ್ದೆವು, ಆದರೆ ಈಗ ಆತ್ಮದಲ್ಲಿ ತುಕ್ಕು ಹಿಡಿದಿದೆ. ತಂದೆಯನ್ನು ಎಷ್ಟು ನೆನಪು
ಮಾಡುತ್ತೀರೋ ಅಷ್ಟು ತಂದೆಯೊಂದಿಗೆ ಪ್ರೀತಿಯಿರುವುದು. ನೆನಪಿನಿಂದಲೇ ಪ್ರೀತಿಯು ಹೆಚ್ಚುತ್ತದೆ,
ವಿದ್ಯೆಯಿಂದಲ್ಲ. ಭಾರತದ ಪ್ರಾಚೀನ ಯೋಗವಾಗಿದೆ, ಇದರಿಂದಲೇ ಆತ್ಮವು ಪವಿತ್ರವಾಗಿ ತನ್ನ ಧಾಮಕ್ಕೆ
ಹೊರಟು ಹೋಗುವುದು. ಎಲ್ಲಾ ಸಹೋದರರಿಗೆ ತನ್ನ ತಂದೆಯ ಪರಿಚಯ ಕೊಡಬೇಕಾಗಿದೆ. ಸರ್ವವ್ಯಾಪಿಯ
ಜ್ಞಾನದಿಂದ ಬಹಳ ಕೆಳಗಿಳಿದು ಬಿಟ್ಟಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ಡ್ರಾಮಾನುಸಾರ
ನಿಮ್ಮದು ಪಾತ್ರವಿದೆ, ರಾಜಧಾನಿಯು ಅವಶ್ಯವಾಗಿ ಸ್ಥಾಪನೆಯಾಗುವುದು. ಕಲ್ಪದ ಹಿಂದೆ ಎಷ್ಟು
ಪುರುಷಾರ್ಥ ಮಾಡಿದ್ದಿರೋ ಅಷ್ಟೇ ಅವರು ಖಂಡಿತ ಮಾಡುತ್ತಾರೆ. ನೀವು ಸಾಕ್ಷಿಯಾಗಿ ನೋಡುತ್ತಾ ಇರಿ.
ಈ ಪ್ರದರ್ಶನಿಗಳು ಮೊದಲಾದುವುಗಳನ್ನು ಬಹಳ ನೋಡುತ್ತಿರುತ್ತೀರಿ. ನಿಮ್ಮದು ಈಶ್ವರೀಯ ಮೆಷಿನ್ ಆಗಿದೆ,
ಇದು ನಿರಾಕಾರ ಪರಮಪಿತ ಪರಮಾತ್ಮನ ಮೆಷಿನ್ ಆಗಿದೆ. ಅವರದು ಕ್ರಿಶ್ಚಿಯನ್ ಮೆಷಿನ್, ಬೌದ್ಧಿ ಮೆಷಿನ್
ಇರುತ್ತದೆ ಹಾಗೆಯೇ ಇದೂ ನಿರಾಕಾರ, ಈಶ್ವರೀಯ ಮೆಷಿನ್ ಆಗಿದೆ. ನಿರಾಕಾರನು ಅವಶ್ಯವಾಗಿ ಯಾವ
ಶರೀರದಲ್ಲಿಯೋ ಬರುವರಲ್ಲವೆ. ನೀವೂ ಸಹ ನಿರಾಕಾರ ಆತ್ಮಗಳು ನನ್ನ ಜೊತೆಯಲ್ಲಿದ್ದಿರಿ. ಈ ಡ್ರಾಮಾ
ಹೇಗಿದೆ? ಇದು ಯಾರ ಬುದ್ಧಿಯಲ್ಲಿಯೂ ಇಲ್ಲ. ರಾವಣ ರಾಜ್ಯದಲ್ಲಿ ಎಲ್ಲರೂ ವಿಪರೀತ ಬುದ್ಧಿಯವರಾಗಿ
ಬಿಟ್ಟಿದ್ದಾರೆ. ಈಗ ತಂದೆಯೊಂದಿಗೆ ಪ್ರೀತಿಯನ್ನಿಡಬೇಕಾಗಿದೆ. ನಿಮ್ಮ ಪ್ರತಿಜ್ಞೆಯಾಗಿದೆ -
ನನ್ನವರು ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ ಅಂದಮೇಲೆ ನಷ್ಟಮೋಹಿಗಳಾಗಬೇಕಾಗಿದೆ. ಇದರಲ್ಲಿಯೇ
ಪರಿಶ್ರಮವಿದೆ. ಇದು ಹೇಗೆ ನೆನಪು ಎನ್ನುವ ನೇಣು ಹಾಕಿಕೊಂಡಿರಬೇಕಾಗಿದೆ. ತಂದೆಯನ್ನು ನೆನಪು
ಮಾಡುವುದು ಎಂದರೆ ನೆನಪು ಎನ್ನುವ ನೇಣಿನಲ್ಲಿ ಇರುವುದಾಗಿದೆ. ಶರೀರವನ್ನು ಮರೆತು ಆತ್ಮವು ತಂದೆಯ
ನೆನಪಿನಲ್ಲಿಯೇ ಹೊರಟು ಹೋಗಬೇಕಾಗಿದೆ. ತಂದೆಯ ನೆನಪು ಬಹಳ ಅವಶ್ಯಕವಾಗಿದೆ ಇಲ್ಲವೆಂದರೆ ತುಕ್ಕು
ಹೇಗೆ ಇಳಿಯುವುದು? ಮಕ್ಕಳಲ್ಲಿ ನಮಗೆ ಶಿವ ತಂದೆಯೇ ಓದಿಸುತ್ತಾರೆಂದು ಬಹಳ ಖುಷಿಯಿರಬೇಕು. ಯಾರಾದರೂ
ಕೇಳಿಸಿಕೊಂಡರೆ ಇವರೇನು ಹೇಳುತ್ತಾರೆ ಎಂದುಕೊಳ್ಳುತ್ತಾರೆ. ಏಕೆಂದರೆ ಅವರು ಕೃಷ್ಣನನ್ನೇ
ಭಗವಂತನೆಂದು ತಿಳಿಯುತ್ತಾರೆ.
ನಾವೀಗ ಕೃಷ್ಣನ ರಾಜಧಾನಿಯಲ್ಲಿ ಹೋಗುತ್ತೇವೆ. ನಾವು ರಾಜಕುಮಾರ-ಕುಮಾರಿಯರಾಗುತ್ತೇವೆಂದು ಈಗ ನೀವು
ಮಕ್ಕಳಿಗೆ ಬಹಳ ಖುಷಿಯಾಗುತ್ತದೆ. ಕೃಷ್ಣನು ಮೊದಲ ರಾಜಕುಮಾರನಾಗಿದ್ದಾನೆ, ಹೊಸ ಮನೆಯಲ್ಲಿರುತ್ತಾನೆ
ನಂತರದಲ್ಲಿ ಯಾವ ಮಕ್ಕಳು ಜನ್ಮ ಪಡೆಯುವರೋ ಅವರು ತಡವಾಗಿ ಬರುತ್ತಾರಲ್ಲವೆ. ಜನ್ಮವು
ಸ್ವರ್ಗದಲ್ಲಿಯೇ ಆಗುವುದು. ನೀವೂ ಸಹ ಸ್ವರ್ಗದಲ್ಲಿ ರಾಜಕುಮಾರ-ಕುಮಾರಿಯರಾಗುತ್ತೀರಿ. ಎಲ್ಲರೂ
ಮೊದಲ ನಂಬರಿನಲ್ಲಿಯೇ ಬರುವುದಿಲ್ಲ, ನಂಬರ್ವಾರ್ ಮಾಲೆಯಾಗುತ್ತದೆ. ತಂದೆಯು ತಿಳಿಸುತ್ತಾರೆ -
ಮಕ್ಕಳೇ, ಹೆಚ್ಚಿನ ಪುರುಷಾರ್ಥ ಮಾಡಿ. ನೀವಿಲ್ಲಿ ನರನಿಂದ ನಾರಾಯಣನಾಗಲು ಬಂದಿದ್ದೀರಿ. ಇದು ಸತ್ಯ
ನಾರಾಯಣನ ಕಥೆಯಾಗಿದೆ. ಸತ್ಯ ಲಕ್ಷ್ಮಿಯ ಕಥೆಯನ್ನೆಂದೂ ಕೇಳಿರುವುದಿಲ್ಲ. ಎಲ್ಲರಿಗೆ ಕೃಷ್ಣನ ಮೇಲೆ
ಪ್ರೀತಿಯಿದೆ, ಕೃಷ್ಣನನ್ನೇ ಉಯ್ಯಾಲೆಯಲ್ಲಿ ತೂಗುತ್ತಾರೆ. ರಾಧೆಯನ್ನು ಏಕೆ ತೂಗುವುದಿಲ್ಲ? ಡ್ರಾಮಾ
ಪ್ಲಾನನುಸಾರ ಅವರ ಹೆಸರೇ ನಡೆದು ಬರುತ್ತದೆ. ನಿಮ್ಮ ಜೊತೆಗಾರ ರಾಧೆಯಾಗಿದ್ದಾಳೆ ಆದರೂ ಸಹ
ಪ್ರೀತಿಯು ಕೃಷ್ಣನೊಂದಿಗಿದೆ. ಡ್ರಾಮಾದಲ್ಲಿ ಅವರ ಪಾತ್ರವೂ ಹೀಗಿದೆ. ಮಕ್ಕಳು ಯಾವಾಗಲೂ
ಪ್ರಿಯವೆನಿಸುತ್ತಾರೆ. ತಂದೆಯು ಮಕ್ಕಳನ್ನು ನೋಡಿ ಬಹಳ ಖುಷಿ ಪಡುತ್ತಾರೆ. ಮಗನಾದರೆ ಖುಷಿಯಾಗುವುದು,
ಮಗಳಾದರೆ ಗುಟುಕರಿಸುತ್ತಿರುತ್ತಾರೆ. ಕೆಲವರಂತೂ ಸಾಯಿಸಿ ಬಿಡುತ್ತಾರೆ. ರಾವಣ ರಾಜ್ಯದಲ್ಲಿ
ನಡವಳಿಕೆಯಲ್ಲಿ ಎಷ್ಟೊಂದು ಅಂತರವಾಗಿ ಬಿಡುತ್ತದೆ. ತಾವು ಸರ್ವಗುಣ ಸಂಪನ್ನರು, ನಾವು
ನಿರ್ಗುಣರಾಗಿದ್ದೇವೆಂದು ಹಾಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪುನಃ ಇಂತಹ
ಗುಣವಂತರಾಗಿ ನಾವು ಅನೇಕ ಬಾರಿ ವಿಶ್ವದ ಮಾಲೀಕರಾಗಿದ್ದೇವೆಂದು ತಿಳಿದುಕೊಳ್ಳುತ್ತೀರಿ. ಈಗ ಪುನಃ
ಆಗಬೇಕಾಗಿದೆ. ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು - ಓಹೋ, ನಮಗೆ ಶಿವ ತಂದೆಯು ಓದಿಸುತ್ತಾರೆ.
ಕುಳಿತು ಇದನ್ನೇ ಚಿಂತನೆ ಮಾಡಿ. ಭಗವಂತನು ನಮಗೆ ಓದಿಸುತ್ತಾರೆ. ವಾಹ್! ಅದೃಷ್ಟವೇ ವಾಹ್! ಹೀಗೆ
ವಿಚಾರ ಮಾಡುತಾ ಮಸ್ತರಾಗಿ. ವಾಹ್! ಅದೃಷ್ಟವೇ ವಾಹ್! ಬೇಹದ್ದಿನ ತಂದೆಯು ನಮಗೆ ಸಿಕ್ಕಿದ್ದಾರೆ,
ನಾವು ತಂದೆಯನ್ನೇ ನೆನಪು ಮಾಡುತ್ತೇವೆ, ಪವಿತ್ರತೆಯ ಧಾರಣೆ ಮಾಡಿಕೊಳ್ಳಬೇಕಾಗಿದೆ. ನಾವೇ ದೈವೀ
ಗುಣಗಳನ್ನು ಧಾರಣೆ ಮಾಡಿ ಇವರ ಸಮಾನರಾಗುತ್ತೇವೆ. ಇದೂ ಮನ್ಮನಾಭವವಲ್ಲವೆ. ತಂದೆಯು ನಮ್ಮನ್ನು
ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಇದು ಪ್ರತ್ಯಕ್ಷ ಅನುಭವದ ಮಾತಾಗಿದೆ.
ತಂದೆಯು ಮಧುರಾತಿ ಮಧುರ ಮಕ್ಕಳಿಗೆ ಸಲಹೆ ನೀಡುತ್ತಾರೆ - ಮಕ್ಕಳೇ, ಚಾರ್ಟ್ ಇಡಿ ಮತ್ತು
ಏಕಾಂತದಲ್ಲಿ ಕುಳಿತು ಹೀಗೆ ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಿ. ಈ ಬ್ಯಾಡ್ಜನ್ನು ಹೃದಯದ ಮೇಲೆ
ಹಾಕಿಕೊಳ್ಳಿರಿ. ನಾವು ಭಗವಂತನ ಶ್ರೀಮತದಂತೆ ಈ ರೀತಿಯಾಗುತ್ತಿದ್ದೇವೆ ಎಂದು ನೋಡಿ-ನೋಡಿ ಪ್ರೀತಿ
ಮಾಡುತ್ತಾ ಇರಿ. ತಂದೆಯ ನೆನಪಿನಿಂದ ನಾವು ಈ ರೀತಿಯಾಗುತ್ತೇವೆ. ಬಾಬಾ, ತಮ್ಮದು ಕಮಾಲ್ ಆಗಿದೆ.
ಬಾಬಾ, ತಾವು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೀರೆಂದು ನಮಗೆ ಮೊದಲು ತಿಳಿದೇ ಇರಲಿಲ್ಲ.
ನೌಧಾಭಕ್ತಿಯಲ್ಲಿ ದರ್ಶನಕ್ಕಾಗಿ ತಲೆಯನ್ನು ಕತ್ತರಿಸಿಕೊಳ್ಳಲು, ಪ್ರಾಣ ತ್ಯಾಗ ಮಾಡುವುದಕ್ಕೂ
ತ್ಯಾಗ ಮಾಡಿ ಬಿಡುತ್ತಾರೆ. ಆಗ ದರ್ಶನವಾಗುತ್ತದೆ. ಅಂತಹವರದೇ ಭಕ್ತಮಾಲೆಯು ತಯಾರಾಗಿದೆ. ಭಕ್ತರಿಗೆ
ಮಾನ್ಯತೆಯೂ ಇದೆ ಆದರೆ ಕಲಿಯುಗದ ಭಕ್ತರಂತೂ ಹೇಗೆ ಚಕ್ರವರ್ತಿಗಳಾಗಿದ್ದಾರೆ. ಈಗ ನೀವು ಮಕ್ಕಳಿಗೆ
ಬೇಹದ್ದಿನ ತಂದೆಯ ಜೊತೆ ಪ್ರೀತಿಯಿದೆ. ಒಬ್ಬ ತಂದೆಯ ವಿನಃ ಮತ್ತ್ಯಾರೂ ನೆನಪಿಗೆ ಬರಬಾರದು.
ಒಮ್ಮೆಲೆ ನಿಮ್ಮ ಬುದ್ಧಿಯೋಗವು ಸ್ಪಷ್ಟವಾಗಿರಲಿ. ಈಗ ನಮ್ಮ 84 ಜನ್ಮಗಳು ಪೂರ್ಣವಾಯಿತು, ನಾವೀಗ
ತಂದೆಯ ಆದೇಶದಂತೆ ಪೂರ್ಣ ರೀತಿಯಲ್ಲಿ ನಡೆಯುತ್ತೇವೆ. ಕಾಮ ಮಹಾಶತ್ರುವಾಗಿದೆ, ಅದರಿಂದ
ಸೋಲನ್ನನುಭವಿಸಬಾರದು. ಸೋಲನ್ನನುಭವಿಸಿ ಮತ್ತೆ ಪಶ್ಚಾತ್ತಾಪವನ್ನೇಕೆ ಪಡುತ್ತೀರಿ.
ಸೋಲನ್ನನುಭವಿಸಿದರೆ ಒಮ್ಮೆಲೆ ಮೂಳೆಗಳು ಪುಡಿ-ಪುಡಿಯಾಗುತ್ತವೆ ಅಂದರೆ ಬಹಳ ಕಠಿಣ ಶಿಕ್ಷೆ
ಸಿಗುತ್ತದೆ. ತುಕ್ಕು ಇಳಿಯುವ ಬದಲು ಇನ್ನೂ ಹೆಚ್ಚಾಗಿ ಏರತೊಡಗುತ್ತದೆ, ಯೋಗವು ಹಿಡಿಸುವುದಿಲ್ಲ.
ನೆನಪಿನಲ್ಲಿರುವುದು ಬಹಳ ಪರಿಶ್ರಮವಾಗಿದೆ. ನಾವಂತೂ ತಂದೆಯ ನೆನಪಿನಲ್ಲಿರುತ್ತೇವೆಂದು ಕೆಲವರು
ಹರಟೆ ಹೊಡೆಯುತ್ತಾರೆ ಆದರೆ ಅವರು ನೆನಪು ಮಾಡುವುದಿಲ್ಲವೆಂದು ತಂದೆಗೆ ಗೊತ್ತಿದೆ. ಇದರಲ್ಲಿ
ಮಾಯೆಯ ಬಹಳ ಬಿರುಗಾಳಿಯು ಬರುತ್ತದೆ. ಇಂತಹ ಸ್ವಪ್ನಗಳು ಬರುತ್ತವೆ, ಒಮ್ಮೆಲೆ ಬೇಸರಗೊಳಿಸುತ್ತವೆ.
ಜ್ಞಾನವಂತೂ ಬಹಳ ಸಹಜವಾಗಿದೆ, ಚಿಕ್ಕ ಮಕ್ಕಳೂ ಸಹ ತಿಳಿಸಿಕೊಡಬಹುದು ಆದರೆ ನೆನಪಿನ ಯಾತ್ರೆಯಲ್ಲಿಯೇ
ಬಹಳ ಗೊಂದಲವಿದೆ. ನಾವು ಸರ್ವೀಸ್ ಮಾಡುತ್ತೇವೆಂದು ಖುಷಿಯಾಗಿ ಬಿಡಬೇಡಿ. ತಮ್ಮ ನೆನಪಿನ ಗುಪ್ತ
ಸರ್ವೀಸ್ ಮಾಡುತ್ತಾ ಇರಿ. ಇವರಿಗಂತೂ (ಬ್ರಹ್ಮಾ) ನಶೆಯಿರುತ್ತದೆ - ನಾನು ಶಿವ ತಂದೆಯ ಒಬ್ಬನೇ
ಮಗನಾಗಿದ್ದೇನೆ, ತಂದೆಯು ವಿಶ್ವದ ರಚಯಿತನಾಗಿದ್ದಾರೆ ಅಂದಮೇಲೆ ನಾನೂ ಸಹ ಖಂಡಿತ ಸ್ವರ್ಗದ
ಮಾಲೀಕನಾಗುತ್ತೇನೆ. ರಾಜಕುಮಾರನಾಗಲಿದ್ದೇನೆ, ಈ ಆಂತರಿಕ ಖುಷಿಯಿರಬೇಕು ಆದರೆ ನೀವು ಮಕ್ಕಳು ಎಷ್ಟು
ನೆನಪಿನಲ್ಲಿರುತ್ತೀರೋ ಅಷ್ಟು ನಾನಿರುವುದಿಲ್ಲ ಏಕೆಂದರೆ ಬಹಳಷ್ಟು ಆಲೋಚನೆ ಮಾಡಬೇಕಾಗುತ್ತದೆ.
ತಂದೆಯು ದೊಡ್ಡ ವ್ಯಕ್ತಿಗಳಿಗೆ ಏಕೆ ಇಷ್ಟೊಂದು ಉಪಚಾರ ಮಾಡುತ್ತಾರೆ ಎಂದು ಮಕ್ಕಳಿಗೆಂದೂ ಈರ್ಷ್ಯೆ
ಬರಬಾರದು. ತಂದೆಯು ಪ್ರತಿಯೊಬ್ಬ ಮಗುವಿನ ನಾಡಿಯನ್ನು ನೋಡಿ ಅವರ ಕಲ್ಯಾಣಾರ್ಥವಾಗಿ
ಪ್ರತಿಯೊಬ್ಬರನ್ನೂ ಅದರನುಸಾರ ನಡೆಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಹೇಗೆ
ನಡೆಸಬೇಕೆಂಬುದು ಶಿಕ್ಷಕರಿಗೆ ತಿಳಿದಿದೆ, ಆದ್ದರಿಂದ ಮಕ್ಕಳು ಇದರಲ್ಲಿ ಸಂಶಯ ತಂದುಕೊಳ್ಳಬಾರದು.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಏಕಾಂತದಲ್ಲಿ
ಕುಳಿತು ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಬೇಕು. ಆತ್ಮದಲ್ಲಿ ಏರಿರುವ ತುಕ್ಕನ್ನು ಕಳೆಯಲು
ನೆನಪಿನ ಯಾತ್ರೆಯಲ್ಲಿರಬೇಕಾಗಿದೆ.
2. ಯಾವುದೇ ಮಾತಿನಲ್ಲಿ ಸಂಶಯ ಬರಬಾರದು. ಈರ್ಷ್ಯೆ ಮಾಡಬಾರದು. ಆಂತರಿಕ ಖುಷಿಯಲ್ಲಿರಬೇಕು. ತನ್ನ
ಗುಪ್ತ (ನೆನಪಿನ) ಸರ್ವೀಸ್ ಮಾಡಬೇಕಾಗಿದೆ.
ವರದಾನ:
ಸೇವೆ ಮಾಡುತ್ತಾ
ಉಪರಾಮ ಸ್ಥಿತಿಯಲ್ಲಿರುವಂತಹ ಯೋಗಯುಕ್ತ, ಯುಕ್ತಿಯುಕ್ತ ಸೇವಾಧಾರಿ ಭವ.
ಯಾರು ಯೋಗಯುಕ್ತ,
ಯುಕ್ತಿಯುಕ್ತ ಸೇವಾಧಾರಿ ಇದ್ದಾರೆ ಅವರು ಸೇವೆ ಮಾಡುತ್ತಿದ್ದರೂ ಸಹ ಸದಾ ಉಪರಾಮವಾಗಿರುತ್ತಾರೆ.
ಸೇವೆ ಹೆಚ್ಚಾಗಿದೆ ಆದ್ದರಿಂದ ಅಶರೀರಿ ಆಗಲು ಸಾಧ್ಯವಾಗಲಿಲ್ಲ ಎಂದಲ್ಲ. ಆದರೆ ನೆನಪಿರಲಿ ನನ್ನ
ಸೇವೆ ಅಲ್ಲ, ತಂದೆಯು ಕೊಟ್ಟಿದ್ದಾರೆ, ಆದರಿಂದ ನಿರ್ಬಂಧನರಾಗಿರುತ್ತಾರೆ. ಟ್ರಸ್ಟಿ ಆಗಿರುವೆ,
ಬಂಧನಮುಕ್ತ ಆಗಿರುವೆ ಈ ರೀತಿ ಅಭ್ಯಾಸ ಮಾಡಿ. ಹೇಗೆ ಮಧ್ಯ-ಮಧ್ಯ ಸಂಕಲ್ಪಗಳ ಟ್ರಾಫಿಕ್ ಅನ್ನು
ಕಂಟ್ರೋಲ್ ಮಾಡುವಿರಿ ಹಾಗೆ ಅತೀಯ ಸಮಯದಲ್ಲಿ ಅಂತ್ಯದ ಸ್ಟೇಜ್ನ ಅನುಭವ ಮಾಡಿ ಆಗ ಅಂತಿಮ ಸಮಯದಲ್ಲಿ
ಪಾಸ್ ವಿತ್ ಆನರ್ ಆಗಲು ಸಾಧ್ಯ.
ಸ್ಲೋಗನ್:
ಶುಭ ಭಾವನೆ ಕಾರಣವನ್ನು
ನಿವಾರಣೆಯಲ್ಲಿ ಪರಿವರ್ತನೆ ಮಾಡಿ ಬಿಡುತ್ತದೆ.