30.11.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ತನು-ಮನ-ಧನ ಅಥವಾ ಮನಸ್ಸಾ-ವಾಚಾ-ಕರ್ಮಣಾ ಇಂತಹ ಸರ್ವೀಸ್ ಮಾಡಿ, ಅದರಿಂದ 21 ಜನ್ಮಗಳಿಗಾಗಿ
ತಂದೆಯಿಂದ ಆಸ್ತಿ ಸಿಗಲಿ ಆದರೆ ಸರ್ವೀಸಿನಲ್ಲಿ ಎಂದೂ ಪರಸ್ಪರ ಮತ ಭೇದವುಂಟಾಗಬಾರದು”
ಪ್ರಶ್ನೆ:
ಡ್ರಾಮಾನುಸಾರ
ತಂದೆಯು ಯಾವ ಸರ್ವೀಸ್ ಮಾಡಿಸುತ್ತಿದ್ದಾರೆ, ಅದರಲ್ಲಿ ಇನ್ನೂ ತೀವ್ರತೆಯನ್ನು ತರುವ ವಿಧಿ ಯಾವುದು?
ಉತ್ತರ:
ಪರಸ್ಪರ ಏಕಮತವಾಗಿರಬೇಕು, ಎಂದೂ ಯಾವುದೇ ಕಿರಿಕಿರಿಯಾಗಬಾರದು. ಒಂದುವೇಳೆ ಪರಸ್ಪರ
ಕಿರಿಕಿರಿಯಿದ್ದರೆ ಸರ್ವೀಸನ್ನೇನು ಮಾಡುತ್ತೀರಿ! ಆದ್ದರಿಂದ ಪರಸ್ಪರ ಸೇರಿ ಸಂಘಟನೆ ಮಾಡಿಕೊಂಡು
ಸಲಹೆ ತೆಗೆದುಕೊಳ್ಳಿ. ಒಬ್ಬರು ಇನ್ನೊಬ್ಬರಿಗೆ ಸಹಯೋಗಿಗಳಾಗಿ. ತಂದೆಯಂತೂ ಸಹಯೋಗಿಗಳಾಗಿಯೇ
ಇದ್ದಾರೆ. ಆದರೆ “ಸಾಹಸ ಮಕ್ಕಳದು ಸಹಯೋಗ ತಂದೆಯದು....”, ಇದರ ಅರ್ಥವನ್ನು ಯಥಾರ್ಥವಾಗಿ
ತಿಳಿದುಕೊಂಡು ದೊಡ್ಡ ಕಾರ್ಯದಲ್ಲಿ ಸಹಯೋಗಿಗಳಾಗಿ.
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಇಲ್ಲಿ ಆತ್ಮಿಕ ತಂದೆಯ ಬಳಿಗೆ ರಿಫ್ರೆಷ್ ಆಗಲು ಬರುತ್ತೀರಿ. ಯಾವಾಗ
ರಿಫ್ರೆಷ್ ಆಗಿ ಹಿಂತಿರುಗಿ ಹೋಗುತ್ತೀರೆಂದರೆ ಏನಾದರೂ ಮಾಡಿ ತೋರಿಸಬೇಕು. ಒಂದೊಂದು ಮಗುವೂ ಸಹ
ಸರ್ವೀಸಿನ ಪ್ರತ್ಯಕ್ಷ ಪ್ರಮಾಣವನ್ನು ತೋರಿಸಬೇಕಾಗಿದೆ. ಹೇಗೆ ಕೆಲ ಕೆಲವು ಮಕ್ಕಳು ಬಾಬಾ, ನಮಗೆ
ಸೇವಾಕೇಂದ್ರವನ್ನು ತೆರೆಯುವ ಸಂಕಲ್ಪವಿದೆಯೆಂದು ಹೇಳುತ್ತಾರೆ, ಹಳ್ಳಿಗಳಲ್ಲಿಯೂ ಸರ್ವೀಸ್
ಮಾಡುತ್ತಾರಲ್ಲವೆ ಅಂದಾಗ ಮಕ್ಕಳಿಗೆ ಸದಾ ಇದೇ ಸಂಕಲ್ಪವಿರಲಿ - ನಾವು ಮನಸ್ಸಾ-ವಾಚಾ-ಕರ್ಮಣಾ,
ತನು-ಮನ-ಧನದಿಂದ ಇಂತಹ ಸರ್ವೀಸ್ ಮಾಡಬೇಕು. ಅದರಿಂದ 21 ಜನ್ಮಗಳಿಗಾಗಿ ತಂದೆಯಿಂದ ಆಸ್ತಿಯು
ಸಿಗಬೇಕು, ಇದೇ ಚಿಂತೆಯಿರಬೇಕಾಗಿದೆ. ನಾವು ಸರ್ವೀಸ್ ಮಾಡುತ್ತಿದ್ದೇವೆಯೇ? ಅನ್ಯರಿಗೆ ಜ್ಞಾನ
ತಿಳಿಸುತ್ತಿದ್ದೇವೆಯೇ? ಇಡೀ ದಿನ ಇದೇ ಚಿಂತನೆಯಿರಬೇಕು. ಭಲೆ ಸೇವಾಕೇಂದ್ರವನ್ನು ತೆರೆಯಿರಿ. ಆದರೆ
ಮನೆಯಲ್ಲಿ ಸ್ತ್ರೀ-ಪುರುಷರ ಮತಭೇದವಿರಬಾರದು ಅರ್ಥಾತ್ ಹೊಂದಾಣಿಕೆಯಿಂದ ನಡೆಯಬೇಕು. ಯಾವುದೇ
ಗಲಾಟೆಯಿರಬಾರದು. ಸನ್ಯಾಸಿಗಳು ಮನೆಯ ಗಲಾಟೆಗಳಿಂದಲೇ ಹೊರಗಡೆ ಹೋಗುತ್ತಾರೆ, ಎಲ್ಲವನ್ನೂ
ನಿರ್ಲಕ್ಷ್ಯ ಮಾಡಿ ಹೊರಟು ಹೋಗುತ್ತಾರೆ. ಅಂತಹವರನ್ನು ಸರ್ಕಾರವು ತಡೆಯುತ್ತದೆಯೇ! ಅವರಂತೂ ಕೇವಲ
ಪುರುಷರೇ ಹೋಗುತ್ತಾರೆ, ಈಗಂತೂ ಕೆಲಕೆಲವರು ಮಾತೆಯರೂ ಹೋಗುತ್ತಾರೆ. ಯಾರಿಗೆ ಯಾವುದೇ
ಸಂಬಂಧಿಕರಿರುವುದಿಲ್ಲ ಅಥವಾ ವೈರಾಗ್ಯವು ಬಂದು ಬಿಡುತ್ತದೆ, ಅಂತಹವರಿಗೂ ಸಹ ಆ ಸನ್ಯಾಸಿ ಪುರುಷರು
ಕುಳಿತು ಕಲಿಸಿಕೊಡುತ್ತಾರೆ. ಅವರ ಮೂಲಕ ಎಲ್ಲಾ ಕರ್ತವ್ಯವನ್ನು ಮಾಡಿಸುತ್ತಾರೆ. ಹಣವೆಲ್ಲವೂ ಅವರ
ಬಳಿಯಿರುತ್ತದೆ. ವಾಸ್ತವದಲ್ಲಿ ಮನೆ-ಮಠವನ್ನು ಬಿಟ್ಟು ಹೋದ ನಂತರ ಹಣವನ್ನಿಟ್ಟುಕೊಳ್ಳುವ
ಅವಶ್ಯಕತೆಯೇ ಇರುವುದಿಲ್ಲ, ಅಂದಾಗ ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ - ಪ್ರತಿಯೊಬ್ಬರ
ಬುದ್ಧಿಯಲ್ಲಿಯೂ ನಾವು ತಂದೆಯ ಪರಿಚಯ ಕೊಡಬೇಕೆಂಬ ಸಂಕಲ್ಪವು ಬರಬೇಕಾಗಿದೆ. ಮನುಷ್ಯರಂತೂ ಏನನ್ನೂ
ತಿಳಿದುಕೊಂಡಿಲ್ಲ ಬುದ್ಧಿಹೀನರಾಗಿದ್ದಾರೆ. ನೀವು ಮಕ್ಕಳಿಗಾಗಿ ತಂದೆಯ ಆದೇಶವಾಗಿದೆ - ಮಧುರಾತಿ
ಮಧುರ ಮಕ್ಕಳೇ, ನೀವು ತಮ್ಮನ್ನು ಆತ್ಮನೆಂದು ತಿಳಿಯಿರಿ. ಕೇವಲ ಪಂಡಿತರಾಗಬಾರದು, ತಮ್ಮ
ಕಲ್ಯಾಣವನ್ನೂ ಮಾಡಿಕೊಳ್ಳಬೇಕಾಗಿದೆ. ನೆನಪಿನಿಂದ ಸತೋಪ್ರಧಾನರಾಗಬೇಕಾಗಿದೆ, ಈಗ ಬಹಳ ಪುರುಷಾರ್ಥ
ಮಾಡಿರಿ. ಇಲ್ಲವಾದರೆ ಬಹಳ ಪಶ್ಚಾತ್ತಾಪ ಪಡಬೇಕಾಗುವುದು. ಬಾಬಾ, ನಾವು ಪದೇ-ಪದೇ ಮರೆತು
ಹೋಗುತ್ತೇವೆ. ಸಂಕಲ್ಪಗಳು ಬಂದು ಬಿಡುತ್ತವೆಯೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ -
ಸಂಕಲ್ಪ-ವಿಕಲ್ಪಗಳು ಬಂದೇ ಬರುತ್ತವೆ, ನೀವು ತಂದೆಯ ನೆನಪಿನಲ್ಲಿದ್ದು ಸತೋಪ್ರಧಾನರಾಗಬೇಕಾಗಿದೆ,
ಆತ್ಮವು ಅಪವಿತ್ರವಾಗಿದೆ, ಅದು ಪರಮಪಿತ ಪರಮಾತ್ಮನನ್ನು ನೆನಪು ಮಾಡಿಯೇ ಪವಿತ್ರವಾಗಬೇಕಾಗಿದೆ.
ತಂದೆಯೇ ಮಕ್ಕಳಿಗೆ ಆದೇಶ ನೀಡುತ್ತಾರೆ - ಹೇ ಆಜ್ಞಾಕಾರಿ ಮಕ್ಕಳೇ, ನಿಮಗೆ ಆಜ್ಞೆ ಮಾಡುತ್ತೇನೆ,
ನನ್ನನ್ನು ನೆನಪು ಮಾಡಿರಿ. ಆಗ ನಿಮ್ಮ ಪಾಪಗಳು ಕಳೆಯುತ್ತವೆ. ಮೊಟ್ಟ ಮೊದಲನೆಯದಾಗಿ ಇದೇ ಮಾತನ್ನು
ತಿಳಿಸಿ - ನಿರಾಕಾರ ಶಿವ ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿ. ನಾನು
ಪತಿತ-ಪಾವನನಾಗಿದ್ದೇನೆ, ನನ್ನ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ, ಮತ್ತ್ಯಾವುದೇ
ಉಪಾಯವಿಲ್ಲ, ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಅನೇಕ ಮಂದಿ ಸನ್ಯಾಸಿಗಳಿದ್ದಾರೆ, ಬಂದು ನಮ್ಮ
ಯೋಗ ಸಮ್ಮೇಳನದಲ್ಲಿ ಶಾಮೀಲಾಗಿರಿ ಎಂದು ನಿಮಂತ್ರಣ ಕೊಡುತ್ತಾರೆ. ಅವರ ಹಠಯೋಗದಿಂದ ಯಾರದೇ
ಕಲ್ಯಾಣವಂತೂ ಆಗುವುದಿಲ್ಲ, ಅನೇಕ ಯೋಗಾಶ್ರಮಗಳಿವೆ. ಅವರ್ಯಾರಿಗೂ ಈ ರಾಜಯೋಗದ ಬಗ್ಗೆ ತಿಳಿದೇ
ಇಲ್ಲ. ತಂದೆಯನ್ನೇ ತಿಳಿದುಕೊಂಡಿಲ್ಲ. ಬೇಹದ್ದಿನ ತಂದೆಯೇ ಬಂದು ಸತ್ಯ-ಸತ್ಯವಾದ ಯೋಗವನ್ನು
ಕಲಿಸುತ್ತಾರೆ. ತಂದೆಯು ನೀವು ಮಕ್ಕಳನ್ನು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತಾರೆ. ಮಕ್ಕಳೇ,
ಹೇಗೆ ನಾನು ನಿರಾಕಾರನಾಗಿದ್ದೇನೆ, ಈ ತನುವಿನಲ್ಲಿ ತತ್ಕಾಲಕ್ಕಾಗಿ ಬಂದಿದ್ದೇನೆ. ಭಾಗ್ಯಶಾಲಿ
ರಥವಂತೂ ಅವಶ್ಯವಾಗಿ ಮನುಷ್ಯನದೇ ಇರಬೇಕಲ್ಲವೆ. ಎತ್ತಿಗೆ ಭಾಗ್ಯಶಾಲಿ ರಥವೆಂದು ಹೇಳುವುದಿಲ್ಲ ಅಥವಾ
ಯಾವುದೇ ಕುದುರೆ ಗಾಡಿಯ ಮಾತಿಲ್ಲ, ಯುದ್ಧದ ಮಾತೂ ಇಲ್ಲ. ನಿಮಗೀಗ ತಿಳಿದಿದೆ - ನಾವೀಗ
ಮಾಯೆಯೊಂದಿಗೆ ಯುದ್ಧ ಮಾಡಬೇಕಾಗಿದೆ. ಮಾಯೆಯೊಂದಿಗೆ ಸೋಲುವುದೇ ಸೋಲು ಎಂದು ಗಾಯನವಿದೆ. ನೀವು ಬಹಳ
ಚೆನ್ನಾಗಿ ತಿಳಿಸಬಲ್ಲಿರಿ. ಆದರೆ ಈಗ ಕಲಿಯುತ್ತಿದ್ದೀರಿ. ಕೆಲವರು ಕಲಿಯುತ್ತಾ-ಕಲಿಯುತ್ತಾ ಮತ್ತೆ
ಕೆಳಗೆ ಬೀಳುತ್ತಾರೆ. ಏನಾದರೂ ಕಿರಿಕಿರಿಯುಂಟಾಗಿ ಬಿಡುತ್ತದೆ. ಇಬ್ಬರು ಸಹೋದರಿಯರಿದ್ದರೂ ಸಹ
ಪರಸ್ಪರ ಹೊಂದಾಣಿಕೆಯಾಗುವುದಿಲ್ಲ. ಉಪ್ಪು ನೀರಾಗಿ ವರ್ತಿಸುತ್ತಾರೆ. ಆದರೆ ಪರಸ್ಪರ ನಿಮ್ಮಲ್ಲಿ
ಯಾವುದೇ ಕಿರಿಕಿರಿಯಾಗಬಾರದು. ಪರಸ್ಪರದಲ್ಲಿ ಕಿರಿಕಿರಿಯಿದ್ದರೆ ತಂದೆಯು ಹೇಳುತ್ತಾರೆ - ನೀವು ಏನು
ಸರ್ವೀಸ್ ಮಾಡುತ್ತೀರಿ? ಬಹಳ ಒಳ್ಳೊಳ್ಳೆಯ ಮಕ್ಕಳದೂ ಸಹ ಹೀಗೆಯೇ ಸ್ಥಿತಿಯಾಗಿ ಬಿಡುತ್ತದೆ. ಈಗ
ಮಾಲೆಯನ್ನು ಮಾಡಿದರೂ ಸಹ ಅದಕ್ಕೆ ಡಿಫೆಕ್ಟೆಡ್ ಮಾಲೆಯೆಂದೇ ಹೇಳಲಾಗುತ್ತದೆ. ಏಕೆಂದರೆ ಇನ್ನೂ
ಬಹಳಷ್ಟು ಅವಗುಣಗಳಿವೆ. ಡ್ರಾಮಾ ಪ್ಲಾನನುಸಾರ ತಂದೆಯು ಸೇವೆಯನ್ನೂ ಮಾಡಿಸುತ್ತಿರುತ್ತಾರೆ,
ಸಲಹೆಗಳನ್ನೂ ಕೊಡುತ್ತಾರೆ. ದೆಹಲಿಯಲ್ಲಿ ಮುತ್ತಿಗೆ ಹಾಕಿರಿ. ಕೇವಲ ಒಬ್ಬರು ಮಾಡುವುದಲ್ಲ,
ಪರಸ್ಪರ ಸೇರಿ ಸಲಹೆಯನ್ನು ತೆಗೆದುಕೊಳ್ಳಿ, ಎಲ್ಲರೂ ಏಕಮತವಾಗಿರಿ. ತಂದೆಯು ಒಬ್ಬರೇ ಆಗಿದ್ದಾರೆ
ಆದರೆ ಸಹಯೋಗಿ ಮಕ್ಕಳಿಲ್ಲದೆ ಕೆಲಸ ನಡೆಯುವುದಿಲ್ಲ. ನೀವು ಸೇವಾಕೇಂದ್ರಗಳನ್ನು ತೆರೆಯುತ್ತೀರಿ,
ಮತವನ್ನು ತೆಗೆದುಕೊಳ್ಳುತ್ತೀರಿ. ನೀವು ಸಹಯೋಗ ಕೊಡುವವರಾಗಿದ್ದೀರಾ ಎಂದು ತಂದೆಯು ಕೇಳಿದಾಗ ಹೌದು
ಬಾಬಾ ಎಂದು ಹೇಳುತ್ತಾರೆ. ಒಂದುವೇಳೆ ಸಹಯೋಗ ಕೊಡುವವರು ಇಲ್ಲವೆಂದರೆ ಏನೂ ಮಾಡಲು ಸಾಧ್ಯವಿಲ್ಲ.
ಮನೆಯಲ್ಲಿಯೂ ಸಹ ಮಿತ್ರ ಸಂಬಂಧಿ ಮೊದಲಾದವರು ಬರುತ್ತಾರಲ್ಲವೆ. ಭಲೆ ನಿಂದನೆ ಮಾಡಲಿ ಅವರು
ನಿಮ್ಮನ್ನು ಚುಚ್ಚುತ್ತಾ ಇರುತ್ತಾರೆ. ಆದರೂ ಸಹ ನೀವು ಅದರ ಬಗ್ಗೆ ಚಿಂತೆ ಮಾಡಬಾರದು.
ನೀವು ಮಕ್ಕಳು ಪರಸ್ಪರ ಕುಳಿತು ಸಲಹೆ ತೆಗೆದುಕೊಳ್ಳಿ. ಹೇಗೆ ಸೇವಾಕೇಂದ್ರಗಳು ತೆರೆದಾಗಲೂ ಸಹ
ಎಲ್ಲರೂ ಸೇರಿ ಬಾಬಾ, ನಾವು ಸಹೋದರಿಯವರ ಸಲಹೆಯಿಂದ ಈ ಕಾರ್ಯವನ್ನು ಮಾಡುತ್ತೇವೆಂದು ಬರೆಯುತ್ತಾರೆ.
ಹೇಗೆ ಸಿಂಧಿ ಭಾಷೆಯಲ್ಲಿಯೂ ಹೇಳುತ್ತಾರೆ - ಒಂದರ ಪಕ್ಕದಲ್ಲಿ ಎರಡು ಸೇರಿದರೆ 12 ಆಗಿ ಬಿಡುತ್ತದೆ.
12 ಮಂದಿಯಾದಾಗ ಇನ್ನೂ ಒಳ್ಳೆಯ ಸಲಹೆ ಸಿಗುತ್ತದೆ. ಕೆಲವೊಂದು ಕಡೆ ಮಕ್ಕಳು ಒಬ್ಬರು
ಇನ್ನೊಬ್ಬರಿಂದ ಸಲಹೆಯನ್ನು ತೆಗೆದುಕೊಳ್ಳುವುದೇ ಇಲ್ಲ. ಇದರಿಂದ ಕೆಲಸವು ನಡೆಯುತ್ತದೆಯೇ? ತಂದೆಯು
ಹೇಳುತ್ತಾರೆ - ಎಲ್ಲಿಯವರೆಗೆ ನೀವು ಪರಸ್ಪರ ಸಂಘಟನೆಯಾಗುವುದಿಲ್ಲವೋ ಅಲ್ಲಿಯವರೆಗೆ ಇಷ್ಟು ದೊಡ್ಡ
ಕಾರ್ಯವನ್ನು ಹೇಗೆ ಮಾಡಬಲ್ಲಿರಿ! ಚಿಕ್ಕ ಅಂಗಡಿ, ದೊಡ್ಡ ಅಂಗಡಿಗಳೂ ಇರುತ್ತವೆಯಲ್ಲವೆ? ಪರಸ್ಪರ
ಸೇರಿ ಸಂಘಟನೆ ಮಾಡಿ. ಬಾಬಾ, ತಾವು ಸಹಯೋಗ ನೀಡಿ ಎಂದು ಯಾರೂ ಹೇಳುವುದಿಲ್ಲ. ಮೊದಲು ಸಹಯೋಗಿಗಳನ್ನು
ಮಾಡಿಕೊಳ್ಳಬೇಕು. ಬಾಬಾ, ನಾವು ಇಷ್ಟು ಮಾಡುತ್ತೇವೆ, ಉಳಿದಂತೆ ತಾವು ಸಹಯೋಗ ಕೊಡಿ. ಮೊದಲು ತಾವು
ಸಹಯೋಗ ಕೊಡಿ ಎಂದು ಹೇಳುವುದಲ್ಲ, ಸಾಹಸ ಮಕ್ಕಳದು ಸಹಯೋಗ ತಂದೆಯದು. ಇದರ ಅರ್ಥವನ್ನೂ
ತಿಳಿದುಕೊಳ್ಳುವುದಿಲ್ಲ. ಮೊದಲು ಮಕ್ಕಳದು ಸಾಹಸ ಬೇಕು. ಯಾರ್ಯಾರು ಯಾವ ಸಹಯೋಗ ಕೊಡುತ್ತೀರೆಂದು
ಇಂತಿಂತಹ ಸಹಯೋಗವನ್ನು ಕೊಡಬಲ್ಲರು ಎಂಬುದನ್ನು ಬರೆಯಿರಿ. ನಿಯಮಾನುಸಾರವಾಗಿ ಬರೆದುಕೊಡಿ, ಅದನ್ನು
ಬಿಟ್ಟು ನಾವು ಸೇವಾಕೇಂದ್ರವನ್ನು ತೆರೆಯುತ್ತೇವೆ, ನೀವು ಸಹಯೋಗ ಕೊಡಿ ಎಂದು ಒಬ್ಬೊಬ್ಬರೂ
ಕೇಳುವುದಲ್ಲ. ಹಾಗೆ ಹೇಳುವುದಾದರೆ ತಂದೆಯು ತೆರೆಯಲು ಸಾಧ್ಯವಿಲ್ಲವೆ? ಆದರೆ ಈ ಕಾರ್ಯವು
ಮಕ್ಕಳಿಂದಲೇ ಆಗಬೇಕಾಗಿದೆ. ನೀವು ಪರಸ್ಪರ ಸೇರಿ ಮಾಡಬೇಕು. ನಿಮ್ಮಲ್ಲಿಯೂ ನಂಬರ್ವಾರ್
ಇದ್ದಾರಲ್ಲವೆ. ಕೆಲವರಂತೂ ಏನನ್ನೂ ತಿಳಿದುಕೊಳ್ಳುವುದಿಲ್ಲ. ಇನ್ನೂ ಕೆಲವರು ಬಹಳ
ಹರ್ಷಿತರಾಗಿರುತ್ತಾರೆ. ತಂದೆಯು ತಿಳಿಯುತ್ತಾರೆ - ಈ ಜ್ಞಾನದಲ್ಲಂತೂ ಬಹಳ ಖುಷಿಯಿರಬೇಕು. ಒಬ್ಬರೇ
ತಂದೆ, ಶಿಕ್ಷಕ, ಗುರುವಿನ ರೂಪದಲ್ಲಿ ಸಿಕ್ಕಿದ್ದಾರೆ ಅಂದಮೇಲೆ ಖುಷಿಯಿರಬೇಕಲ್ಲವೆ. ಪ್ರಪಂಚದಲ್ಲಿ
ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಶಿವ ತಂದೆಯೇ ಪತಿತ-ಪಾವನ, ಜ್ಞಾನ ಸಾಗರ, ಸರ್ವರ
ಸದ್ಗತಿದಾತನಾಗಿದ್ದಾರೆ. ಎಲ್ಲರಿಗೆ ತಂದೆ ಅವರೊಬ್ಬರೇ ಆಗಿದ್ದಾರೆ, ಇದು ಮತ್ತ್ಯಾರ
ಬುದ್ಧಿಯಲ್ಲಿಯೂ ಇರುವುದಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಜ್ಞಾನ ಸಾಗರ,
ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ. ಆದ್ದರಿಂದ ತಂದೆಯ ಮತದಂತೆ ನಡೆಯಬೇಕಾಗಿದೆ, ಪರಸ್ಪರ ಸೇರಿ
ಸಲಹೆ ತೆಗೆದುಕೊಳ್ಳಬೇಕು, ಖರ್ಚು ಮಾಡಬೇಕಾಗಿದೆ. ಒಬ್ಬರ ಮತದಂತೆ ನಡೆಯಲು ಸಾಧ್ಯವಿಲ್ಲ,
ಸಹಯೋಗಿಗಳೆಲ್ಲರೂ ಬೇಕು. ಇದರಲ್ಲಿಯೂ ಬುದ್ಧಿ ಬೇಕಲ್ಲವೆ. ನೀವು ಮಕ್ಕಳು ಮನೆ-ಮನೆಗೆ ಸಂದೇಶ
ಕೊಡಬೇಕಾಗಿದೆ. ವಿವಾಹದ ನಿಮಂತ್ರಣ ಸಿಗುತ್ತದೆ, ಅದಕ್ಕೆ ಹೋಗಬಹುದೇ ಎಂದು ಕೆಲವರು ಕೇಳುತ್ತಾರೆ.
ಅದಕ್ಕೆ ತಂದೆಯು ತಿಳಿಸುತ್ತಾರೆ, ಭಲೆ ಹೋಗಿರಿ, ಹೋಗಿ ತಮ್ಮ ಸರ್ವೀಸ್ ಮಾಡಿ. ಅನೇಕರ ಕಲ್ಯಾಣ ಮಾಡಿ.
ನೀವು ಭಾಷಣವನ್ನೂ ಮಾಡಬಹುದು, ಮೃತ್ಯು ಸನ್ಮುಖದಲ್ಲಿ ನಿಂತಿದೆ. ತಂದೆಯು ತಿಳಿಸುತ್ತಾರೆ -
ನನ್ನೊಬ್ಬನನ್ನೇ ನೆನಪು ಮಾಡಿರಿ. ಇಲ್ಲಿ ಎಲ್ಲರೂ ಪಾಪಾತ್ಮರಾಗಿದ್ದಾರೆ. ತಂದೆಗೇ ನಿಂದನೆ
ಮಾಡುತ್ತಿರುತ್ತಾರೆ. ತಂದೆಯಿಂದ ನಿಮ್ಮನ್ನು ವಿಮುಖರನ್ನಾಗಿ ಮಾಡಿ ಬಿಡುತ್ತಾರೆ. ವಿನಾಶಕಾಲೇ
ವಿಪರೀತ ಬುದ್ಧಿಯೆಂದು ಗಾಯನವೂ ಇದೆ. ಯಾರು ಹೇಳಿದರು? ಸ್ವಯಂ ತಂದೆಯೇ ಹೇಳಿದ್ದಾರೆ - ನನ್ನೊಂದಿಗೆ
ಪ್ರೀತಿ ಬುದ್ಧಿಯಿಲ್ಲ, ವಿನಾಶಕಾಲೇ ವಿಪರೀತ ಬುದ್ಧಿಯವರಾಗಿದ್ದಾರೆ. ನನ್ನನ್ನು ಅರಿತುಕೊಂಡೇ
ಇಲ್ಲ. ಯಾರಿಗೆ ಪ್ರೀತಿ ಬುದ್ಧಿಯಿದೆಯೋ ಅವರು ನನ್ನನ್ನು ನೆನಪು ಮಾಡುತ್ತಾರೆ, ಅವರೇ ವಿಜಯವನ್ನು
ಪಡೆಯುತ್ತಾರೆ. ಭಲೆ ಪ್ರೀತಿಯಿದೆ ಆದರೆ ನೆನಪು ಮಾಡುವುದಿಲ್ಲವೆಂದರೂ ಸಹ ಕಡಿಮೆ ಪದವಿಯನ್ನು
ಪಡೆಯುತ್ತಾರೆ. ತಂದೆಯು ಮಕ್ಕಳಿಗೆ ಆದೇಶ ನೀಡುತ್ತಾರೆ – ಮೂಲ ಮಾತೇನೆಂದರೆ ಎಲ್ಲರಿಗೆ ಸಂದೇಶ
ಕೊಡಬೇಕಾಗಿದೆ. ತಂದೆಯನ್ನು ನೆನಪು ಮಾಡುವುದರಿಂದ ಪಾವನರಾಗಿ ಪಾವನ ಪ್ರಪಂಚದ ಮಾಲೀಕರಾಗಿ.
ಡ್ರಾಮಾನುಸಾರ ತಂದೆಯು ವೃದ್ಧನ ಶರೀರವನ್ನೇ ತೆಗೆದುಕೊಳ್ಳಬೇಕಾಗಿದೆ. ವಾನಪ್ರಸ್ಥದಲ್ಲಿ ಪ್ರವೇಶ
ಮಾಡುತ್ತಾರೆ. ಮನುಷ್ಯರು ವಾನಪ್ರಸ್ಥ ಸ್ಥಿತಿಯಲ್ಲಿಯೇ ಭಗವಂತನನ್ನು ಮಿಲನ ಮಾಡಲು ಪರಿಶ್ರಮ
ಪಡುತ್ತಾರೆ. ಜಪ-ತಪ ಇತ್ಯಾದಿಗಳನ್ನು ಮಾಡುವುದು ಭಗವಂತನೊಂದಿಗೆ ಮಿಲನ ಮಾಡುವ ಮಾರ್ಗಗಳಾಗಿವೆಯೆಂದು
ಭಕ್ತಿಯಲ್ಲಿ ತಿಳಿಯುತ್ತಾರೆ. ಆದರೆ ಯಾವಾಗ ಭಗವಂತನು ಸಿಗುವರೆಂಬುದೇನೂ ತಿಳಿದಿಲ್ಲ.
ಜನ್ಮ-ಜನ್ಮಾಂತರದಿಂದ ಭಕ್ತಿ ಮಾಡುತ್ತಲೇ ಬಂದಿದ್ದಾರೆ, ಭಗವಂತನಂತೂ ಯಾರಿಗೂ ಸಿಕ್ಕಿಲ್ಲ. ಆದರೆ
ಯಾವಾಗ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಬೇಕೋ ಆಗಲೇ ತಂದೆಯು ಬರುತ್ತಾರೆಂಬುದನ್ನು
ತಿಳಿದುಕೊಳ್ಳುವುದಿಲ್ಲ. ರಚಯಿತ ತಂದೆಯೇ ಆಗಿದ್ದಾರೆ, ಚಿತ್ರಗಳೂ ಇವೆ ಆದರೆ ತ್ರಿಮೂರ್ತಿ
ಚಿತ್ರಗಳಲ್ಲಿ ಶಿವನನ್ನು ತೋರಿಸಿಲ್ಲ. ಶಿವ ತಂದೆಯನ್ನು ಬಿಟ್ಟು ಬ್ರಹ್ಮಾ-ವಿಷ್ಣು-ಶಂಕರನನ್ನು
ತೋರಿಸಿದ್ದಾರೆ. ಇದು ಹೇಗೆ ತಲೆಯನ್ನೇ ಕತ್ತರಿಸಿದಂತಾಗಿದೆ. ತಂದೆಯ ಪರಿಚಯವಿಲ್ಲದ ಕಾರಣ
ನಿರ್ಧನಿಕರಾಗಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಬಂದು ನಿಮ್ಮನ್ನು ಧನಿಕರನ್ನಾಗಿ
ಮಾಡುತ್ತೇನೆ. 21 ಜನ್ಮಗಳವರೆಗೆ ನೀವು ಧನಿಕರಾಗಿ ಬಿಡುತ್ತೀರಿ. ಯಾವುದೇ ಕಷ್ಟವಿರುವುದಿಲ್ಲ.
ತಂದೆಯು ಸಿಗುವವರೆಗೆ ನಾವೂ ಸಹ ಸಂಪೂರ್ಣ ಅನಾಥರು, ತುಚ್ಛ ಬುದ್ಧಿಯವರಾಗಿದ್ದೇವೆಂದು ನೀವೂ ಸಹ
ಹೇಳುತ್ತೀರಿ. ಪತಿತ-ಪಾವನ ಎಂದು ಹೇಳುತ್ತಾರೆ. ಆದರೆ ಅವರು ಯಾವಾಗ ಬರುತ್ತಾರೆಂಬುದನ್ನು
ತಿಳಿದುಕೊಂಡಿಲ್ಲ. ಪಾವನ ಪ್ರಪಂಚವೆಂದರೆ ಹೊಸ ಪ್ರಪಂಚವಾಗಿದೆ. ತಂದೆಯು ಎಷ್ಟು ಸಹಜವಾಗಿ
ತಿಳಿಸುತ್ತಾರೆ! ನಿಮಗೂ ಸಹ ಅರ್ಥವಾಗುತ್ತದೆ - ನಾವು ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ
ಖಂಡಿತವಾಗಿಯೂ ಸ್ವರ್ಗದ ಮಾಲೀಕರಾಗುತ್ತೇವೆ. ಶಿವ ತಂದೆಯು ಬೇಹದ್ದಿನ ಮಾಲೀಕನಾಗಿದ್ದಾರೆ. ತಂದೆಯೇ
ಬಂದು ಸುಖ-ಶಾಂತಿಯ ಆಸ್ತಿಯನ್ನು ಕೊಟ್ಟಿದ್ದರು. ಸತ್ಯಯುಗದಲ್ಲಿ ಸುಖವಿತ್ತು, ಉಳಿದೆಲ್ಲಾ ಆತ್ಮಗಳು
ಶಾಂತಿಧಾಮದಲ್ಲಿದ್ದರು, ಈ ಮಾತುಗಳನ್ನು ನೀವೇ ತಿಳಿದುಕೊಂಡಿದ್ದೀರಿ. ಶಿವ ತಂದೆಯು ಏಕೆ ಬಂದಿರುವರು?
ಅವಶ್ಯವಾಗಿ ಹೊಸ ಪ್ರಪಂಚವನ್ನು ರಚಿಸಲು, ಪತಿತರನ್ನು ಪಾವನ ಮಾಡಲು ಬಂದಿದ್ದಾರೆ. ಶ್ರೇಷ್ಠ
ಕಾರ್ಯವನ್ನೇ ಮಾಡಿರಬೇಕಲ್ಲವೆ. ಈಗಂತೂ ಮನುಷ್ಯರು ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. ತಂದೆಯು
ತಿಳಿಸುತ್ತಾರೆ - ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ತಂದೆಯು ನೀವು ಮಕ್ಕಳನ್ನು
ಜಾಗೃತಗೊಳಿಸುತ್ತಾರೆ. ಹೇಗೆ ಹೊಸ ಪ್ರಪಂಚವು ನಂತರ ಹಳೆಯದಾಗುತ್ತದೆ ಎಂದು ಇಡೀ ಡ್ರಾಮಾದ ಬಗ್ಗೆ
ನಿಮಗೆ ತಿಳಿದಿದೆ. ಈಗ ಮತ್ತೆಲ್ಲವನ್ನು ಬಿಟ್ಟು ಒಬ್ಬ ತಂದೆಯನ್ನು ನೆನಪು ಮಾಡಿ. ನಮಗೆ ಯಾರೊಂದಿಗೂ
ತಿರಸ್ಕಾರ ಬರುವುದಿಲ್ಲವೆಂಬುದನ್ನು ತಿಳಿಸಬೇಕಾಗಿದೆ. ಡ್ರಾಮಾನುಸಾರ ಮಾಯೆಯ ರಾಜ್ಯವೂ ಇರಬೇಕಾಗಿದೆ.
ಈಗ ಪುನಃ ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಈಗ ಚಕ್ರವು ಮುಕ್ತಾಯವಾಗುತ್ತದೆ.
ಈಗ ನಿಮಗೆ ಈಶ್ವರೀಯ ಮತ ಸಿಗುತ್ತದೆ, ಅದರಂತೆ ನಡೆಯಬೇಕಾಗಿದೆ. ಈಗ ಪಂಚ ವಿಕಾರಗಳ ಮತದಂತೆ
ನಡೆಯಬೇಡಿ. ಅರ್ಧಕಲ್ಪ ನೀವು ಮಾಯೆಯ ಮತದಂತೆ ನಡೆದು ತಮೋಪ್ರಧಾನರಾಗಿದ್ದೀರಿ. ಈಗ ನಾನು ನಿಮ್ಮನ್ನು
ಸತೋಪ್ರಧಾನರನ್ನಾಗಿ ಮಾಡಲು ಬಂದಿದ್ದೇನೆ. ಇದು ಸತೋಪ್ರಧಾನ ಮತ್ತು ತಮೋಪ್ರಧಾನತೆಯ ಆಟವಾಗಿದೆ.
ಯಾವುದೇ ನಿಂದನೆಯ ಮಾತಿಲ್ಲ. ಭಗವಂತನು ಈ ಆವಾಗಮನದ ನಾಟಕವನ್ನು ರಚಿಸಿದ್ದಾದರೂ ಏಕೆ ಎಂದು ಕೆಲವರು
ಹೇಳುತ್ತಾರೆ. ಆದರೆ ಇಲ್ಲಿ ಏಕೆ ಎಂಬ ಪ್ರಶ್ನೆಯೇ ಬರುವುದಿಲ್ಲ. ಇದು ಸೃಷ್ಟಿಚಕ್ರವಾಗಿದೆ,
ಪುನರಾವರ್ತನೆಯಾಗುತ್ತಾ ಇರುತ್ತದೆ. ನಾಟಕವು ಅನಾದಿಯಾಗಿದೆ. ಸತ್ಯಯುಗವು ಕಳೆದು ಈಗ ಕಲಿಯುಗವಿದೆ.
ಪುನಃ ತಂದೆಯು ಬಂದಿದ್ದಾರೆ. ಬಾಬಾ, ಬಾಬಾ ಎನ್ನುತ್ತಾ ಇರಿ ಆಗ ಕಲ್ಯಾಣವಾಗುತ್ತಾ ಇರುವುದು.
ತಂದೆಯು ತಿಳಿಸುತ್ತಾರೆ - ಇವು ಅತಿಗುಹ್ಯ ರಮಣೀಕ ಮಾತುಗಳಾಗಿವೆ. ಸಿಂಹದ ಹಾಲಿಗೆ ಚಿನ್ನದ
ಪಾತ್ರೆಯು ಬೇಕೆಂದು ಹೇಳುತ್ತಾರೆ ಅಂದಮೇಲೆ ಬುದ್ಧಿಯು ಚಿನ್ನದಂತೆ ಹೇಗಾಗುವುದು? ಆತ್ಮದಲ್ಲಿಯೇ
ಬುದ್ಧಿಯಿದೆಯಲ್ಲವೆ. ನನ್ನ ಬುದ್ಧಿಯು ಈಗ ತಂದೆಯ ಕಡೆಯಿದೆ. ನಾನು ತಂದೆಯನ್ನು ಬಹಳ ನೆನಪು
ಮಾಡುತ್ತೇನೆಂದು ಆತ್ಮವೇ ಹೇಳುತ್ತದೆ. ಕುಳಿತು-ಕುಳಿತಿದ್ದಂತೆಯೇ ಬುದ್ಧಿಯು ಎಲ್ಲೆಲ್ಲಿಯೋ ಹೊರಟು
ಹೋಗುತ್ತದೆ. ಉದ್ಯೋಗ-ವ್ಯವಹಾರಗಳ ನೆನಪೇ ಬರುತ್ತಿರುತ್ತದೆ. ಆದ್ದರಿಂದ ನಿಮ್ಮ ಮಾತನ್ನು ಅವರು
ಕೇಳಿಸಿಕೊಳ್ಳುವುದೇ ಇಲ್ಲ. ಎಷ್ಟೆಷ್ಟು ಮೃತ್ಯುವು ಸಮೀಪಿಸುವುದೋ ಅಷ್ಟು ನೀವು ಬಹಳ
ನೆನಪಿನಲ್ಲಿರುತ್ತೀರಿ. ಸಾಯುವ ಸಮಯದಲ್ಲಿ ಎಲ್ಲರೂ ಭಗವಂತನನ್ನು ನೆನಪು ಮಾಡಿ ಎಂದು ಹೇಳುತ್ತಾರೆ.
ಈಗ ಸ್ವಯಂ ತಂದೆಯೇ ಹೇಳುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ, ನಿಮ್ಮೆಲ್ಲರದು ವಾನಪ್ರಸ್ಥ
ಸ್ಥಿತಿಯಾಗಿದೆ. ಹಿಂತಿರುಗಿ ಹೋಗಬೇಕಾಗಿದೆ. ಆದ್ದರಿಂದ ನನ್ನನ್ನು ನೆನಪು ಮಾಡಿ, ಮತ್ತ್ಯಾರದೇ
ಮಾತುಗಳನ್ನು ಕೇಳಬೇಡಿ. ನಿಮ್ಮ ತಲೆಯ ಮೇಲೆ ಜನ್ಮ-ಜನ್ಮಾಂತರದ ಪಾಪಗಳ ಹೊರೆಯು ಬಹಳಷ್ಟಿದೆ, ಈ
ಸಮಯದಲ್ಲಿ ಎಲ್ಲರೂ ಅಜಾಮೀಳರಾಗಿದ್ದಾರೆ. ಮೂಲ ಮಾತೇನೆಂದರೆ ನೆನಪಿನ ಯಾತ್ರೆಯಿಂದಲೇ ನೀವು
ಪಾವನರಾಗುತ್ತೀರಿ ಮತ್ತೆ ಪರಸ್ಪರ ಪ್ರೀತಿಯೂ ಇರಬೇಕು. ಒಬ್ಬರು ಇನ್ನೊಬ್ಬರಿಂದ ಸಲಹೆ
ತೆಗೆದುಕೊಳ್ಳಬೇಕು. ತಂದೆಯು ಪ್ರೇಮ ಸಾಗರನಲ್ಲವೆ! ಅಂದಮೇಲೆ ನೀವೂ ಸಹ ಪರಸ್ಪರ ಬಹಳ
ಪ್ರೀತಿಯಿಂದಿರಬೇಕು, ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಸಹೋದರ-ಸಹೋದರಿಯ
ಸಂಬಂಧವನ್ನೂ ಕಳೆಯಬೇಕಾಗಿದೆ. ಸಹೋದರ-ಸಹೋದರಿಯರೊಂದಿಗೂ ಯೋಗವನ್ನಿಡಬೇಡಿ, ಒಬ್ಬ ತಂದೆಯೊಂದಿಗೇ
ಬುದ್ಧಿಯೋಗವನ್ನಿಡಿ. ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ
ವಿಕಾರೀ ದೃಷ್ಟಿಯು ಸಮಾಪ್ತಿಯಾಗುವುದು. ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮ ಮಾಡಬೇಡಿ.
ಮನಸ್ಸಿನಲ್ಲಿ ಬಿರುಗಾಳಿಗಳು ಅವಶ್ಯವಾಗಿ ಬರುತ್ತವೆ. ಇದು ಬಹಳ ಉನ್ನತ ಗುರಿಯಾಗಿದೆ. ನೋಡಿ,
ಕರ್ಮೇಂದ್ರಿಯಗಳು ಮೋಸ ಮಾಡುತ್ತವೆಯೆಂದರೆ ಎಚ್ಚರಿಕೆಯಿಂದಿರಿ. ಒಂದುವೇಳೆ ಉಲ್ಟಾ ಕೆಲಸವನ್ನು ಮಾಡಿ
ಬಿಟ್ಟರೆ ಸಮಾಪ್ತಿಯಾಗುವುದು. ಏರಿದರೆ ವೈಕುಂಠ ರಸ, ಬಿದ್ದರೆ ಪುಡಿ ಪುಡಿ.... ಪರಿಶ್ರಮವಿಲ್ಲದೆ
ಏನೂ ಆಗುವುದಿಲ್ಲ. ಬಹಳ ಪರಿಶ್ರಮವಿದೆ. ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು......
ಕೆಲವರಿಗಂತೂ ಯಾವುದೇ ಬಂಧನವಿಲ್ಲ ಆದರೂ ಸಹ ಅದರಲ್ಲಿಯೇ ಸಿಲುಕಿರುತ್ತಾರೆ. ತಂದೆಯ ಶ್ರೀಮತದಂತೆ
ನಡೆಯುವುದಿಲ್ಲ. ಬಹಳಷ್ಟು ಹಣವಿದೆ. ಭಲೆ ದೊಡ್ಡ ಕುಟುಂಬವಾಗಿದ್ದರೂ ಸಹ ಹೆಚ್ಚಿನ
ಉದ್ಯೋಗ-ವ್ಯವಹಾರಗಳಲ್ಲಿ ಸಿಕ್ಕಿ ಹಾಕಿಕೊಳ್ಳಬೇಡಿ, ವಾನಪ್ರಸ್ಥಿಗಳಾಗಿ ಖರ್ಚನ್ನು ಕಡಿಮೆ ಮಾಡಿ.
ಬಡವರು ಎಷ್ಟು ಸಾಧಾರಣವಾಗಿ ನಡೆಯುತ್ತಾರೆ. ಈಗಂತೂ ಎಂತೆಂತಹ ವಸ್ತುಗಳೋ ಬಂದು ಬಿಟ್ಟಿವೆ, ಅದರ
ಮಾತೇ ಕೇಳಬೇಡಿ. ಸಾಹುಕಾರರು ಬಹಳಷ್ಟು ಖರ್ಚು ಮಾಡುತ್ತಿರುತ್ತಾರೆ, ಇಲ್ಲವಾದರೆ ಹೊಟ್ಟಿಗೆ ಎಷ್ಟು
ಬೇಕು? ಒಂದು ಪಾವು ಹಿಟ್ಟಾದರೆ ಸಾಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಪರಸ್ಪರ
ಬಹಳ-ಬಹಳ ಪ್ರಿಯರಾಗಬೇಕಾಗಿದೆ ಆದರೆ ಸಹೋದರ-ಸಹೋದರಿಯರೊಂದಿಗೆ ಯೋಗವನ್ನಿಡಬಾರದು.
ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮ ಮಾಡಬಾರದಾಗಿದೆ.
2. ಒಂದು ಈಶ್ವರೀಯ
ಮತದಂತೆ ನಡೆದು ಸತೋಪ್ರಧಾನರಾಗಬೇಕಾಗಿದೆ. ಮಾಯೆಯ ಮತವನ್ನು ಬಿಡಬೇಕಾಗಿದೆ. ಪರಸ್ಪರ ಸಂಘಟನೆಯನ್ನು
ಶಕ್ತಿಶಾಲಿ ಮಾಡಿಕೊಳ್ಳಬೇಕು. ಒಬ್ಬರು ಇನ್ನೊಬ್ಬರಿಗೆ ಸಹಯೋಗಿಗಳಾಗಬೇಕಾಗಿದೆ.
ವರದಾನ:
ಅಮೃತವೇಳೆಯ
ಮಹತ್ವ ತಿಳಿದು ತೆರೆದ ಭಂಢಾರದಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳುವಂತಹ ಅದೃಷ್ಟಶಾಲಿ ಭವ.
ಅಮೃತವೇಳೆ ವರದಾತ,
ಭಾಗ್ಯ ವಿಧಾತನಿಂದ ಯಾವ ಅದೃಷ್ಟದ ರೇಖೆಯನ್ನು ಎಳೆಸಿಕೊಳ್ಳಲು ಇಚ್ಛೆ ಪಡುವಿರೋ ಅದನ್ನು
ಎಳೆಸಿಕೊಳ್ಳಿ. ಏಕೆಂದರೆ ಆ ಸಮಯ ಭೋಲಾ ಭಗವಂತನ ರೂಪದಲ್ಲಿ ಪ್ರೀತಿಯ ರೂಪ (ಲವ್ಫುಲ್) ಆಗಿರುತ್ತಾರೆ.
ಆದ್ದರಿಂದ ಮಾಲೀಕರಾಗಿ ಮತ್ತು ಅಧಿಕಾರವನ್ನು ಪಡೆಯಿರಿ. ಖಜಾನೆಗೆ ಯಾವುದೇ ಬೀಗ - ಕೀಲಿ ಕೈ ಇಲ್ಲ.
ಆ ಸಮಯದಲ್ಲಿ ಕೇವಲ ಮಾಯೆಯ ನೆಪಗಳ ಆಟವನ್ನು ಬಿಟ್ಟು ಒಂದು ಸಂಕಲ್ಪ ಮಾಡಿ ನಾನು ಹೇಗೇ ಇರಲಿ, ಏನೇ
ಆಗಿರಲಿ, ಆದರೆ ನಿನ್ನವನಾಗಿದ್ದೇನೆ. ಮನಸ್ಸು, ಬುದ್ಧಿಯನ್ನು ತಂದೆಗೆ ಒಪ್ಪಿಸಿ
ಸಿಂಹಾಸನಾಧಿಕಾರಿಯಾಗಿ ಬಿಡಿ. ಆಗ ತಂದೆಯ ಸರ್ವ ಖಜಾನೆ ನಿಮ್ಮ ಖಜಾನೆ ಹಾಗೆ ಅನುಭವವಾಗುವುದು.
ಸ್ಲೋಗನ್:
ಸೇವೆಯಲ್ಲಿ ಒಂದುವೇಳೆ
ಸ್ವಾರ್ಥ ಮಿಕ್ಸ್ ಆಗಿದ್ದರೆ ಸಫಲತೆಯಲ್ಲಿಯೂ ಸಹ ಮಿಕ್ಸ್ ಆಗಿ ಬಿಡುವುದು ಆದ್ದರಿಂದ ನಿಸ್ವಾರ್ಥ
ಸೇವಾಧಾರಿಗಳಾಗಿ.