14.11.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಸತ್ಯ-ಸತ್ಯವಾದ ರಾಜಋಷಿಗಳಾಗಿದ್ದೀರಿ, ನಿಮ್ಮ ಕರ್ತವ್ಯವಾಗಿದೆ - ತಪಸ್ಸು ಮಾಡುವುದು,
ತಪಸ್ಸಿನಿಂದಲೇ ಪೂಜೆಗೆ ಯೋಗ್ಯರಾಗುವಿರಿ”
ಪ್ರಶ್ನೆ:
ಯಾವ
ಪುರುಷಾರ್ಥವು ಸದಾಕಾಲಕ್ಕಾಗಿ ಪೂಜೆಗೆ ಯೋಗ್ಯರನ್ನಾಗಿ ಮಾಡಿ ಬಿಡುತ್ತದೆ?
ಉತ್ತರ:
ಆತ್ಮ ಜ್ಯೋತಿಯನ್ನು ಬೆಳಗಿಸುವ ಮತ್ತು ತಮೋಪ್ರಧಾನ ಆತ್ಮನನ್ನು ಸತೋಪ್ರಧಾನವನ್ನಾಗಿ ಮಾಡುವ
ಪುರುಷಾರ್ಥ ಮಾಡಿ ಆಗ ಸದಾಕಾಲಕ್ಕಾಗಿ ಪೂಜೆಗೆ ಯೋಗ್ಯರಾಗಿ ಬಿಡುವಿರಿ. ಯಾರು ಈಗ ಹುಡುಗಾಟಿಕೆ
ಮಾಡುವರೋ ಅವರು ಬಹಳ ಅಳುತ್ತಾರೆ. ಒಂದುವೇಳೆ ಪುರುಷಾರ್ಥ ಮಾಡಿ ತೇರ್ಗಡೆಯಾಗಲಿಲ್ಲ, ಧರ್ಮರಾಜನ
ಶಿಕ್ಷೆಗಳನ್ನನುಭವಿಸುವರು. ಶಿಕ್ಷೆಯನ್ನನುಭವಿಸುವವರು ತಲೆಯತ್ತಲು ಸಾಧ್ಯವಿಲ್ಲ.
ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಿದ್ದಾರೆ. ಮೊಟ್ಟ ಮೊದಲಿಗೆ ಮಕ್ಕಳಿಗೆ
ತಿಳಿಸುತ್ತಾರೆ - ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ. ಮೊದಲು ಆತ್ಮ ನಂತರ ಈ ಶರೀರವಾಗಿದೆ.
ಎಲ್ಲಿಯೇ ಪ್ರದರ್ಶನಿ ಅಥವಾ ಮ್ಯೂಸಿಯಂಗಳಲ್ಲಿ, ತರಗತಿಗಳಲ್ಲಿ ಮೊದಲು ಈ ಎಚ್ಚರಿಕೆ ನೀಡಬೇಕು -
ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಮಕ್ಕಳು ಕುಳಿತುಕೊಂಡಾಗ ಎಲ್ಲರೂ
ದೇಹೀ-ಅಭಿಮಾನಿಗಳಾಗಿ ಕುಳಿತುಕೊಳ್ಳುವುದಿಲ್ಲ. ಇಲ್ಲಿ ಕುಳಿತಾಗಲೂ ಸಹ ಬುದ್ಧಿಯು ಎಲ್ಲೆಲ್ಲಿಯೋ
ಹೊರಟು ಹೋಗುತ್ತದೆ. ಹೇಗೆ ಸತ್ಸಂಗಗಳಲ್ಲಿ ಸಾಧುಗಳು ಬರುವವರೆಗೆ ಕುಳಿತು ಏನು ಮಾಡುತ್ತಾರೆ?
ಯಾವುದಾದರೊಂದು ಸಂಕಲ್ಪಗಳಲ್ಲಿ ಕುಳಿತಿರುತ್ತಾರೆ. ಮತ್ತೆ ಸಾಧು ಬಂದರೆಂದರೆ ಕಥೆಯನ್ನು
ಕೇಳತೊಡಗುತ್ತಾರೆ. ತಂದೆಯೂ ತಿಳಿಸಿದ್ದಾರೆ - ಅದೆಲ್ಲವೂ ಭಕ್ತಿಮಾರ್ಗದಲ್ಲಿ
ಹೇಳುವುದು-ಕೇಳುವುದಾಗಿದೆ. ತಂದೆಯು ತಿಳಿಸುತ್ತಾರೆ - ಇದೆಲ್ಲವೂ ಆಡಂಬರವಾಗಿದೆ, ಇದರಲ್ಲಿ ಏನೂ
ಇಲ್ಲ. ದೀಪಾವಳಿಯನ್ನೂ ಸಹ ಆಡಂಬರವಾಗಿ ಆಚರಿಸುತ್ತಾರೆ. ಆದರೆ ಜ್ಞಾನದ ಮೂರನೆಯ ನೇತ್ರವು
ತೆರೆದಾಗಲೇ ಮನೆ-ಮನೆಯಲ್ಲಿ ಬೆಳಕಾಗುವುದು. ಈಗಂತೂ ಮನೆ-ಮನೆಯಲ್ಲಿ ಅಂಧಕಾರವಿದೆ, ಇದೆಲ್ಲವೂ
ಹೊರಗಿನ ಪ್ರಕಾಶತೆಯಾಗಿದೆ. ನೀವು ತಮ್ಮ ಜ್ಯೋತಿಯನ್ನು ಸಂಪೂರ್ಣ ಶಾಂತಿಯಲ್ಲಿ ಕುಳ್ಳರಿಸುತ್ತೀರಿ.
ಮಕ್ಕಳಿಗೆ ತಿಳಿದಿದೆ, ಸ್ವಧರ್ಮದಲ್ಲಿದ್ದಾಗಲೇ ಪಾಪಗಳು ಕಳೆಯುತ್ತವೆ. ಜನ್ಮ-ಜನ್ಮಾಂತರದ ಪಾಪಗಳು
ಈ ನೆನಪಿನ ಯಾತ್ರೆಯಿಂದಲೇ ಕಳೆಯುತ್ತದೆ. ಆತ್ಮ ಜ್ಯೋತಿಯು ನಂದಿ ಹೋಗಿದೆಯಲ್ಲವೆ. ಶಕ್ತಿಯೆಂಬ
ಪೆಟ್ರೋಲ್ ಎಲ್ಲವೂ ಮುಗಿದು ಹೋಗಿದೆ ಅದು ಪುನಃ ತುಂಬುವುದು ಏಕೆಂದರೆ ಆತ್ಮವು ಪವಿತ್ರವಾಗುತ್ತದೆ.
ಎಷ್ಟೊಂದು ರಾತ್ರಿ-ಹಗಲಿನ ಅಂತರವಿದೆ! ಈಗ ಲಕ್ಷ್ಮಿಗೆ ಎಷ್ಟೊಂದು ಪೂಜೆ ನಡೆಯುತ್ತದೆ! ಲಕ್ಷ್ಮಿಯು
ದೊಡ್ಡವರೋ ಅಥವಾ ಸರಸ್ವತಿ ತಾಯಿಯು ದೊಡ್ಡವರೋ ಎಂದು ಕೆಲವರು ಕೇಳುತ್ತಾರೆ. ಶ್ರೀ ನಾರಾಯಣನ
ಲಕ್ಷ್ಮಿಯು ಒಬ್ಬರೇ ಇರುತ್ತಾರೆ. ಒಂದುವೇಳೆ ಮಹಾಲಕ್ಷ್ಮಿಯನ್ನು ಪೂಜಿಸಿದರೆ ಲಕ್ಷ್ಮಿಗೆ ನಾಲ್ಕು
ಭುಜಗಳನ್ನು ತೋರಿಸುತ್ತಾರೆ ಅದರಲ್ಲಿ ಇಬ್ಬರೂ ಬಂದು ಬಿಡುತ್ತಾರೆ. ವಾಸ್ತವದಲ್ಲಿ ಅದಕ್ಕೆ
ಲಕ್ಷ್ಮೀ-ನಾರಾಯಣರ ಪೂಜೆಯಂದು ಹೇಳಬೇಕಾಗುವುದು. ಚತುರ್ಭುಜವಲ್ಲವೆ. ಅಂದರೆ ಇಬ್ಬರೂ ಒಟ್ಟಿಗೆ
ಇದ್ದಾರೆ ಆದರೆ ಮನುಷ್ಯರಿಗೇನೂ ತಿಳುವಳಿಕೆಯಿಲ್ಲ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ಎಲ್ಲರೂ
ಬುದ್ಧಿಹೀನರಾಗಿ ಬಿಟ್ಟಿದ್ದಾರೆ. ಲೌಕಿಕ ತಂದೆಯು ಎಂದೂ ಇಡೀ ಪ್ರಪಂಚದ ಮಕ್ಕಳಿಗೆ ಬುದ್ಧಿಹೀನರೆಂಬ
ಮಾತನ್ನು ಹೇಳುವುದಿಲ್ಲ. ಈಗ ನೀವು ಮಕ್ಕಳು ವಿಶ್ವದ ತಂದೆ ಯಾರೆಂಬುದನ್ನು ತಿಳಿದುಕೊಂಡಿದ್ದೀರಿ.
ಅವರೇ ಸ್ವಯಂ ಹೇಳುತ್ತಾರೆ - ಈಗ ನಾನು ಎಲ್ಲಾ ಆತ್ಮರ ತಂದೆಯಾಗಿದ್ದೇನೆ, ನೀವೆಲ್ಲರೂ
ಮಕ್ಕಳಾಗಿದ್ದೀರಿ. ಆ ಸಾಧು-ಸಂತರು ಎಲ್ಲರೂ ಭಗವಂತರೇ ಭಗವಂತರೆಂದು ಹೇಳುತ್ತಾರೆ ಆದರೆ ನೀವು
ತಿಳಿದುಕೊಂಡಿದ್ದೀರಿ - ಬೇಹದ್ದಿನ ತಂದೆಯು ಬೇಹದ್ದಿನ ಜ್ಞಾನವನ್ನು ನಾವಾತ್ಮರಿಗೆ
ತಿಳಿಸುತ್ತಿದ್ದಾರೆ. ಮನುಷ್ಯರಿಗಾದರೆ ನಾನು ಇಂತಹವನಾಗಿದ್ದೇನೆ... ಎಂಬ ದೇಹಾಭಿಮಾನವಿರುತ್ತದೆ.
ಶರೀರಕ್ಕೆ ಯಾವ ಹೆಸರು ಬಂದಿತೋ ಅದರ ಮೇಲೆ ನಡೆಯುತ್ತಾ ಬಂದಿದ್ದಾರೆ. ಈಗ ಶಿವ ತಂದೆಯಂತು ನಿರಾಕಾರ,
ಪರಮ ಆತ್ಮನಾಗಿದ್ದಾರೆ. ಆ ಆತ್ಮನ ಹೆಸರಾಗಿದೆ - ಶಿವ. ಆತ್ಮನ ಮೇಲೆ ಹೆಸರಿರುವುದು ಒಬ್ಬ ಶಿವ
ತಂದೆಗೆ ಮಾತ್ರ. ಅವರು ಪರಮ ಆತ್ಮ ಅರ್ಥಾತ್ ಪರಮಾತ್ಮನಾಗಿದ್ದಾರೆ. ಅವರ ಹೆಸರಾಗಿದೆ - ಶಿವ.
ಉಳಿದಂತೆ ಯಾರೆಲ್ಲಾ ಅನೇಕಾನೇಕ ಆತ್ಮರಿದ್ದಾರೆಯೋ ಅವರೆಲ್ಲರಿಗೆ ಶರೀರಕ್ಕೆ ಹೆಸರುಗಳಿವೆ. ಶಿವ
ತಂದೆಯಂತೂ ಇಲ್ಲಿರುವುದಿಲ್ಲ, ಅವರು ಪರಮಧಾಮದಿಂದ ಬರುತ್ತಾರೆ. ಶಿವ ಅವತರಣೆಯೂ ಇದೆ. ಈಗ ಶಿವ
ತಂದೆಯು ತಿಳಿಸಿದ್ದಾರೆ - ಎಲ್ಲಾ ಆತ್ಮಗಳು ಇಲ್ಲಿಗೆ ಪಾತ್ರವನ್ನಭಿನಯಿಸಲು ಬರುತ್ತೀರಿ. ತಂದೆಯದೂ
ಪಾತ್ರವಿದೆ, ತಂದೆಯಂತೂ ಇಲ್ಲಿ ಬಹಳ ದೊಡ್ಡ ಕಾರ್ಯವನ್ನು ಮಾಡುತ್ತಾರೆ. ಅವರ
ಅವತರಣೆಯಾಗುತ್ತದೆಯೆಂಬುದನ್ನು ಒಪ್ಪುವುದಾದರೆ ಅವರ ಅವತರಣೆಯ ದಿನದಂದು ರಜಾ ದಿನ ಮತ್ತು ಸ್ಟಾಂಪ್
ಇತ್ಯಾದಿಗಳನ್ನು ಮಾಡಬೇಕು. ಎಲ್ಲಾ ದೇಶಗಳಲ್ಲಿ ಅಂದು ರಜಾ ದಿನವಿರಬೇಕು ಏಕೆಂದರೆ ತಂದೆಯು ಎಲ್ಲರ
ಸದ್ಗತಿ ದಾತನಲ್ಲವೆ. ಅವರ ಜನ್ಮ ದಿನ ಮತ್ತು ಹೊರಟು ಹೋಗುವ ದಿನ, ದಿನಾಂಕ ಇತ್ಯಾದಿಗಳೇನೂ
ತಿಳಿಯುವುದಿಲ್ಲ ಏಕೆಂದರೆ ಇವರು ಎಲ್ಲರಿಗಿಂತ ಭಿನ್ನವಾಗಿದ್ದಾರಲ್ಲವೆ. ಆದ್ದರಿಂದ ಅವರು
ಶಿವರಾತ್ರಿಯೆಂದು ಹೇಳಿ ಬಿಡುತ್ತಾರೆ. ಇದನ್ನೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ -
ಅರ್ಧಕಲ್ಪ ಬೇಹದ್ದಿನ ದಿನ, ಅರ್ಧಕಲ್ಪ ಬೇಹದ್ದಿನ ರಾತ್ರಿಯಾಗಿದೆ. ರಾತ್ರಿಯು ಮುಗಿದ ನಂತರ
ದಿನವಾಗುತ್ತದೆ. ಅದರ ಮಧ್ಯದಲ್ಲಿ ತಂದೆಯು ಬರುತ್ತಾರೆ. ಇದು ನಿಖರವಾದ ಸಮಯವಿದೆ. ಮನುಷ್ಯರು ಜನ್ಮ
ಪಡೆದಾಗ ಮುನ್ಸಿಪಾಲಿಟಿಯಲ್ಲಿ ನೋಟ್ ಮಾಡಿಸುತ್ತಾರಲ್ಲವೆ ಮತ್ತೆ 6 ದಿನಗಳ ನಂತರ
ಹೆಸರನ್ನಿಡುತ್ತಾರೆ. ಅದಕ್ಕೆ ನಾಮಕರಣ ಅಥವಾ ಚಟಿ (ಆರನೆಯ ದಿನ) ಯೆಂದು ಹೇಳುತ್ತಾರೆ. ಭಾಷೆಗಳು
ಬಹಳಷ್ಟಿವೆಯಲ್ಲವೆ. ಲಕ್ಷ್ಮಿಯ ಪೂಜೆ ಮಾಡುತ್ತಾರೆ, ಪಟಾಕಿ ಸುಡುತ್ತಾರೆ. ನೀವಿದನ್ನು ಕೇಳಬಹುದು
- ತಾವು ಲಕ್ಷ್ಮಿಯ ಹಬ್ಬವನ್ನಾಚರಿಸುತ್ತೀರಿ, ಇವರು ಯಾವಾಗ ಸಿಂಹಾಸನದ ಮೇಲೆ ಕುಳಿತುಕೊಂಡರು?
ಪಟ್ಟಾಭಿಷೇಕದ ದಿನವನ್ನಾಚರಿಸುತ್ತಾರೆ, ಅವರ ಜನ್ಮದಿನವನ್ನಾಚರಿಸುವುದಿಲ್ಲ. ಲಕ್ಷ್ಮಿಯ
ಚಿತ್ರವನ್ನು ತಟ್ಟೆಯಲ್ಲಿಟ್ಟು ಅವರಿಂದ ಹಣ ಬೇಡುತ್ತಾರೆ, ಮತ್ತೇನೂ ಇಲ್ಲ. ಮಂದಿರಗಳಲ್ಲಿ ಹೋಗಿ
ಬಹಳಷ್ಟು ಬೇಡುತ್ತಾರೆ ಆದರೆ ದೀಪಾವಳಿಯ ದಿನದಂದು ಅವರಿಂದ ಬಹಳ ಕೇಳುತ್ತಾರೆ, ಆದರೆ ಹಣವನ್ನೇನೂ
ಕೊಡುವುದಿಲ್ಲ. ಯಾರದು ಯಾವ-ಯಾವ ಭಾವನೆಯಿದೆಯೋ...... ಯಾರಾದರೂ ಸತ್ಯ ಭಾವನೆಯಿಂದ ಪೂಜೆ
ಮಾಡುತ್ತಾರೆಂದರೆ ಅವರಿಗೆ ಅಲ್ಪಕಾಲಕ್ಕಾಗಿ ಹಣ ಸಿಗುತ್ತದೆ. ಇದು ಅಲ್ಪಕಾಲದ ಸುಖವಾಗಿದೆ ಅಂದಮೇಲೆ
ಶಾಶ್ವತ ಸುಖವು ಎಲ್ಲಿಯೋ ಇರಬೇಕಲ್ಲವೆ. ಸ್ವರ್ಗದ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ಇದನ್ನು
ಸ್ವರ್ಗಕ್ಕೆ ಹೋಲಿಕೆ ಮಾಡಲು ಇಲ್ಲಿಯದೇನೂ ಅದಕ್ಕೆ ಸರಾಸರಿಯಾಗಿ ನಿಲ್ಲಲು ಸಾಧ್ಯವೇ ಇಲ್ಲ.
ನೀವು ತಿಳಿದುಕೊಂಡಿದ್ದೀರಿ - ಅರ್ಧಕಲ್ಪ ಜ್ಞಾನ, ಅರ್ಧಕಲ್ಪ ಭಕ್ತಿಯಾಗಿದೆ ನಂತರ
ವೈರಾಗ್ಯವಾಗುತ್ತದೆ. ಮಕ್ಕಳಿಗೆ ತಿಳಿಸಲಾಗಿದೆ - ಇದು ಹಳೆಯ ಛೀ ಛೀ ಪ್ರಪಂಚವಾಗಿದೆ. ಇದರ ನಂತರ
ಅವಶ್ಯವಾಗಿ ಹೊಸ ಪ್ರಪಂಚವು ಅವಶ್ಯವಾಗಿ ಬೇಕು. ವೈಕುಂಠಕ್ಕೆ ಹೊಸ ಪ್ರಪಂಚವೆಂದು ಹೇಳುತ್ತಾರೆ.
ಅದಕ್ಕೆ ಹೆವೆನ್, ಪ್ಯಾರಡೈಸ್ ಎಂದು ಹೇಳಲಾಗುತ್ತದೆ. ಈ ಡ್ರಾಮಾದಲ್ಲಿ ಪಾತ್ರಧಾರಿಗಳು
ಅವಿನಾಶಿಯಾಗಿದ್ದೀರಿ. ನಾವಾತ್ಮಗಳೂ ಹೇಗೆ ಪಾತ್ರವನ್ನಭಿನಯಿಸುತ್ತೇವೆ ಎಂಬುದು ನೀವು ಮಕ್ಕಳಿಗೆ
ಅರ್ಥವಾಗಿದೆ. ಯಾರಿಗಾದರೂ ಪ್ರದರ್ಶನಿ ಇತ್ಯಾದಿಗಳನ್ನು ತೋರಿಸಬೇಕೆಂದರೆ ಮೊಟ್ಟ ಮೊದಲು ಈ
ಗುರಿ-ಧ್ಯೇಯವನ್ನು ತಿಳಿಸಬೇಕು. ಸೆಕೆಂಡಿನಲ್ಲಿ ಹೇಗೆ ಜೀವನ್ಮುಕ್ತಿ ಸಿಗುತ್ತದೆ - ಜನನ
ಮರಣದಲ್ಲಂತೂ ಅವಶ್ಯವಾಗಿ ಬರಲೇಬೇಕಾಗಿದೆ. ನೀವು ಏಣಿಯ ಚಿತ್ರದಲ್ಲಿ ಬಹಳ ಚೆನ್ನಾಗಿ
ತಿಳಿಸಿಕೊಡಬಹುದು. ರಾವಣ ರಾಜ್ಯದಲ್ಲಿಯೇ ಭಕ್ತಿಯು ಪ್ರಾರಂಭವಾಗುವುದು. ಸತ್ಯಯುಗದಲ್ಲಿ ಭಕ್ತಿಯ
ಹೆಸರು, ಗುರುತು ಇರುವುದಿಲ್ಲ. ಜ್ಞಾನ ಮತ್ತು ಭಕ್ತಿ ಎರಡೂ ಬೇರೆ-ಬೇರೆಯಲ್ಲವೆ. ಈಗ ನಿಮಗೆ ಈ
ಹಳೆಯ ಪ್ರಪಂಚದೊಂದಿಗೆ ವೈರಾಗ್ಯವಿದೆ. ನಿಮಗೆ ತಿಳಿದಿದೆ - ಈ ಹಳೆಯ ಪ್ರಪಂಚವು ಈಗ
ಸಮಾಪ್ತಿಯಾಗಲಿದೆ, ತಂದೆಯು ಸದಾ ಮಕ್ಕಳಿಗೆ ಸುಖದಾಯಿಯಾಗಿರುತ್ತಾರೆ. ಮಕ್ಕಳಿಗಾಗಿಯೇ ತಂದೆಯು
ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ. ಮಕ್ಕಳಿಗಾಗಿಯೇ ಗುರುಗಳ ಬಳಿ ಹೋಗುತ್ತಾರೆ. ಹೇಗಾದರೂ ಮಾಡಿ
ನಮಗೆ ಮಕ್ಕಳಾಗಬೇಕೆಂದು ಸಾಧುಗಳ ಬಳಿ ಹೋಗುತ್ತಾರೆ ಏಕೆಂದರೆ ಗಂಡು ಮಗುವಾದರೆ ಅವರಿಗೆ ಆಸ್ತಿಯನ್ನು
ಕೊಟ್ಟು ಹೋಗೋಣವೆಂದು ತಿಳಿಯುತ್ತಾರೆ. ಮಕ್ಕಳಾದರೆ ಅವರನ್ನು ವಾರಸುಧಾರರನ್ನಾಗಿ
ಮಾಡಿಕೊಳ್ಳೋಣವೆಂದು ತಿಳಿಯುತ್ತಾರೆ. ಅಂದಾಗ ತಂದೆಯು ಮಕ್ಕಳಿಗೆಂದೂ ದುಃಖ ಕೊಡುವುದಿಲ್ಲ.
ಅಸಂಭವವಾಗಿದೆ. ನೀವು ಮಾತಾಪಿತಾ.... ಎಂದು ಹೇಳಿ ಎಷ್ಟೊಂದು ಕೂಗುತ್ತಿರುತ್ತೀರಿ ಆದ್ದರಿಂದ
ಆತ್ಮಿಕ ತಂದೆಯು ಎಲ್ಲರಿಗೆ ಸುಖದ ಮಾರ್ಗವನ್ನೇ ತಿಳಿಸುತ್ತಾರೆ. ಸುಖ ಕೊಡುವವರು ಒಬ್ಬರೇ
ತಂದೆಯಾಗಿದ್ದಾರೆ. ದುಃಖಹರ್ತ, ಸುಖಕರ್ತನು ಆತ್ಮಿಕ ತಂದೆಯೊಬ್ಬರೇ ಆಗಿದ್ದಾರೆ. ಈ ವಿನಾಶವೂ ಸಹ
ಸುಖಕ್ಕಾಗಿಯೇ ಇದೆ, ಇಲ್ಲವಾದರೆ ಮುಕ್ತಿ-ಜೀವನ್ಮುಕ್ತಿಯನ್ನು ಹೇಗೆ ಪಡೆಯುವಿರಿ? ಆದರೆ ಇದನ್ನು
ಯಾರೂ ತಿಳಿದುಕೊಳ್ಳುವುದಿಲ್ಲ. ಇಲ್ಲಂತೂ ಬಡವರು, ಅಬಲೆಯರಿದ್ದಾರೆ ಅಂದಮೇಲೆ ತಮ್ಮನ್ನು ಆತ್ಮ
ನಿಶ್ಚಯ ಮಾಡಿಕೊಳ್ಳಬಹುದು. ಬಾಕಿ ದೊಡ್ಡ-ದೊಡ್ಡವರಿಗೆ ದೇಹಾಭಿಮಾನವು ಇಷ್ಟು ಪಕ್ಕಾ ಆಗಿ
ಬಿಟ್ಟಿರುತ್ತದೆ, ಇದರ ಮಾತೇ ಕೇಳಬೇಡಿ. ತಂದೆಯು ಮತ್ತೆ-ಮತ್ತೆ ತಿಳಿಸುತ್ತಾರೆ - ಮಕ್ಕಳೇ, ನೀವು
ರಾಜಋಷಿಗಳಾಗಿದ್ದೀರಿ. ಋಷಿಗಳು ಯಾವಾಗಲೂ ತಪಸ್ಸು ಮಾಡುತ್ತಾರೆ. ಆ ಋಷಿಗಳಾದರೆ ಬ್ರಹ್ಮತತ್ವವನ್ನು,
ಇನ್ನೂ ಕೆಲವರು ಕಾಳಿ ಮುಂತಾವರನ್ನು ನೆನಪು ಮಾಡುತ್ತಾರೆ. ಬಹಳ ಮಂದಿ ಸನ್ಯಾಸಿಗಳೂ ಸಹ ಕಾಳಿಯ ಪೂಜೆ
ಮಾಡುತ್ತಾರೆ. ಕಾಳಿ ತಾಯಿಯೆಂದು ಹೇಳಿ ಕೂಗುತ್ತಾರೆ. ತಂದೆಯು ಹೇಳುತ್ತಾರೆ - ಈ ಸಮಯದಲ್ಲಿ ಎಲ್ಲರೂ
ವಿಕಾರಿಗಳಾಗಿದ್ದಾರೆ, ಕಾಮ ಚಿತೆಯ ಮೇಲೆ ಕುಳಿತು ಎಲ್ಲರೂ ಕಪ್ಪಾಗಿದ್ದಾರೆ. ತಂದೆ, ತಾಯಿ, ಮಕ್ಕಳು
ಎಲ್ಲರೂ ವಿಕಾರಿಗಳು ಅರ್ಥಾತ್ ಕಪ್ಪಾಗಿದ್ದಾರೆ. ಇದು ಬೇಹದ್ದಿನ ಮಾತಾಗಿದೆ. ಸತ್ಯಯುಗದಲ್ಲಿ
ಪತಿತರಿರುವುದಿಲ್ಲ, ಎಲ್ಲರೂ ಸುಂದರರಿರುತ್ತಾರೆ ನಂತರ ಕೊನೆಯಲ್ಲಿ ಕಪ್ಪಾಗುತ್ತಾರೆ. ಇದನ್ನು ನೀವು
ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ. ಸ್ವಲ್ಪ-ಸ್ವಲ್ಪವಾಗಿಯೇ ಪತಿತರಾಗುತ್ತಾ-ಆಗುತ್ತಾ ಅಂತ್ಯದಲ್ಲಿ
ಸಂಪೂರ್ಣ ಕಪ್ಪಾಗಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ರಾವಣನು ಕಾಮ ಚಿತೆಯ ಮೇಲೆ ಕೂರಿಸಿ
ಕಪ್ಪಾಗಿ ಮಾಡಿ ಬಿಟ್ಟಿದ್ದಾನೆ. ಈಗ ಮತ್ತೆ ನಿಮ್ಮನ್ನು ಜ್ಞಾನ ಚಿತೆಯ ಮೇಲೆ ಕೂರಿಸುತ್ತೇನೆ.
ಆತ್ಮವನ್ನೇ ಪವಿತ್ರನನ್ನಾಗಿ ಮಾಡಲಾಗುತ್ತದೆ. ಈಗ ಪತಿತ-ಪಾವನ ತಂದೆಯು ಬಂದು ಪಾವನರಾಗುವ
ಯುಕ್ತಿಯನ್ನು ತಿಳಿಸುತ್ತಾರೆ. ಸ್ಥೂಲವಾದ ನೀರು ಯುಕ್ತಿಯನ್ನೇನು ತಿಳಿಸುತ್ತದೆ! ಆದರೆ ನೀವು
ಯಾರಿಗಾದರೂ ತಿಳಿಸಿದರೂ ಸಹ ಕೋಟಿಯಲ್ಲಿ ಕೆಲವರೇ ತಿಳಿದುಕೊಂಡು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ.
ನೀವೀಗ ತಂದೆಯಿಂದ 21 ಜನ್ಮಗಳಿಗಾಗಿ ತಮ್ಮ ಆಸ್ತಿಯನ್ನು ಪಡೆಯಲು ಬಂದಿದ್ದೀರಿ. ಮುಂದೆ ಹೋದಂತೆ
ಬಹಳ ಸಾಕ್ಷಾತ್ಕಾರಗಳನ್ನು ನೋಡುತ್ತೀರಿ. ನಿಮಗೆ ತಮ್ಮ ವಿದ್ಯಾಭ್ಯಾಸದ ಫಲಿತಾಂಶವೆಲ್ಲವೂ ಅರ್ಥವಾಗಿ
ಬಿಡುವುದು. ಈಗ ಯಾರು ಹುಡುಗಾಟಿಕೆ ಮಾಡುವರೋ ಅವರು ಬಹಳ ಅಳುತ್ತಾರೆ, ಬಹಳ
ಶಿಕ್ಷೆಗಳಿರುತ್ತವೆಯಲ್ಲವೆ. ಮತ್ತೆ ಪದವಿಯೂ ಭ್ರಷ್ಟವಾಗುತ್ತದೆ. ತಲೆಯೆತ್ತಲು ಸಾಧ್ಯವಿಲ್ಲ.
ಆದ್ದರಿಂದ ತಂದೆಯು ಹೇಳುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಪುರುಷಾರ್ಥ ಮಾಡಿ ತೇರ್ಗಡೆಯಾಗಿರಿ,
ಸ್ವಲ್ಪವೂ ಶಿಕ್ಷೆಯನ್ನನುಭವಿಸಿಬಾರದು ಆಗ ಪೂಜೆಗೆ ಯೋಗ್ಯರಾಗುವಿರಿ. ಶಿಕ್ಷೆಯನ್ನನುಭವಿಸಿದರೆ
ಪೂಜೆಗೆ ಯೋಗ್ಯರಾಗುವುದಿಲ್ಲ. ನೀವು ಮಕ್ಕಳು ಬಹಳ ಪುರುಷಾರ್ಥ ಮಾಡಬೇಕು, ತಮ್ಮ ಆತ್ಮ ಜ್ಯೋತಿಯನ್ನು
ಬೆಳಗಿಸಿಕೊಳ್ಳಬೇಕು. ಈಗ ಆತ್ಮವು ತಮೋಪ್ರಧಾನವಾಗಿದೆ, ಅದನ್ನೇ ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ.
ಆತ್ಮವು ಬಿಂದುವಾಗಿದೆ, ಒಂದು ನಕ್ಷತ್ರ ಮಾದರಿಯಾಗಿದೆ. ಅದಕ್ಕೆ ಮತ್ತ್ಯಾವುದೇ ಹೆಸರನ್ನಿಡಲು
ಸಾಧ್ಯವಿಲ್ಲ. ಮಕ್ಕಳಿಗೆ ತಿಳಿಸಲಾಗಿದೆ - ಆತ್ಮದ ಸಾಕ್ಷಾತ್ಕಾರವಾಗಿದೆ, ಸ್ವಾಮಿ ವಿವೇಕಾನಂದ
ಮತ್ತು ರಾಮಕೃಷ್ಣ ಪರಮ ಹಂಸರ ಉದಾಹರಣೆಯನ್ನು ತಿಳಿಸುತ್ತಾರೆ. ರಾಮಕೃಷ್ಣ ಪರಮಹಂಸರಿಂದ ಒಂದು
ಜ್ಯೋತಿಯು ಹೊರ ಬರುತ್ತಿರುವುದನ್ನು ವಿವೇಕಾನಂದರು ನೋಡಿದರು ಅಂದಾಗ ಆತ್ಮವೇ ಹೊರ ಬರುತ್ತದೆ, ಅದು
ನನ್ನಲ್ಲಿ ಸಮಾವೇಶವಾಯಿತೆಂದು ಅವರು ತಿಳಿದುಕೊಂಡರು ಆದರೆ ಯಾವುದೇ ಆತ್ಮವು ಬಂದು ತನ್ನಲ್ಲಿ
ಲೀನವಾಗಲು ಸಾಧ್ಯವಿಲ್ಲ. ಅದು ಹೋಗಿ ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತದೆ. ಕೊನೆಯಲ್ಲಿ
ನೀವು ಬಹಳಷ್ಟು ನೋಡುತ್ತೀರಿ. ನಾಮ, ರೂಪದಿಂದ ಭಿನ್ನವಾದ ವಸ್ತು ಯಾವುದೂ ಇರುವುದಿಲ್ಲ. ಹೇಗೆ
ಆಕಾಶವಿದೆ, ಅದಕ್ಕೂ ಹೆಸರಿದೆ. ಈಗ ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ಕಲ್ಪ-ಕಲ್ಪವೂ ಯಾವ
ಸ್ಥಾಪನೆಯಾಗುತ್ತಾ ಬಂದಿದೆಯೋ ಅದು ಈಗಲೂ ಆಗಬೇಕಾಗಿದೆ. ನಾವು ಬ್ರಾಹ್ಮಣರು ನಂಬರ್ವಾರ್
ಪುರುಷಾರ್ಥ ಮಾಡುತ್ತಿರುತ್ತೇವೆ. ಯಾವ-ಯಾವ ಕ್ಷಣವು ಕಳೆಯುತ್ತಿದೆಯೋ ಅದಕ್ಕೆ ಡ್ರಾಮಾ ಎಂದೇ
ಹೇಳಲಾಗುತ್ತದೆ. ಇಡೀ ಪ್ರಪಂಚದ ಚಕ್ರವು ಸುತ್ತುತ್ತಿರುತ್ತದೆ. 5000 ವರ್ಷಗಳ ಚಕ್ರವು ನಿಧಾನವಾಗಿ
ಸುತ್ತುತ್ತಿರುತ್ತದೆ, ಕ್ಷಣ-ಪ್ರತಿಕ್ಷಣವು ಕಳೆಯುತ್ತಿರುತ್ತದೆ. ಈಗ ನೀವು ಮಧುರಾತಿ ಮಧುರ ಮಕ್ಕಳು
ತಂದೆಯನ್ನೇ ನೆನಪು ಮಾಡಬೇಕಾಗಿದೆ. ನಡೆಯುತ್ತಾ-ತಿರುಗಾಡುತ್ತಾ, ಕೆಲಸ ಕಾರ್ಯಗಳನ್ನು ಮಾಡುತ್ತಾ
ತಂದೆಯನ್ನು ನೆನಪು ಮಾಡುವುದರಲ್ಲಿಯೇ ಕಲ್ಯಾಣವಿದೆ, ಇಲ್ಲವಾದರೆ ಮಾಯೆಯು ಪೆಟ್ಟು ಕೊಡುತ್ತದೆ.
ನೀವು ಬ್ರಾಹ್ಮಣರಾಗಿದ್ದೀರಿ, ಭ್ರಮರಿಯ ತರಹ ಕೀಟಗಳಂತಿರುವವರನ್ನು ತಮ್ಮ ಸಮಾನ ಬ್ರಾಹ್ಮಣರನ್ನಾಗಿ
ಮಾಡಿಕೊಳ್ಳಬೇಕಾಗಿದೆ. ಆ ಭ್ರಮರಿಯದು ಕೇವಲ ದೃಷ್ಟಾಂತವಾಗಿದೆ. ನೀವು ಸತ್ಯ-ಸತ್ಯ
ಬ್ರಾಹ್ಮಣರಾಗಿದ್ದೀರಿ, ಬ್ರಾಹ್ಮಣರೇ ಮತ್ತೆ ದೇವತೆಗಳಾಗಬೇಕಾಗಿದೆ. ಆದ್ದರಿಂದ ನಿಮ್ಮದು ಇದು
ಪುರುಷೋತ್ತಮರಾಗುವ ಸಂಗಮಯುಗವಾಗಿದೆ. ಇಲ್ಲಿ ನೀವು ಪುರುಷೋತ್ತಮರಾಗುವುದಕ್ಕಾಗಿಯೇ ಬರುತ್ತೀರಿ
ಅಂದಮೇಲೆ ಅವಶ್ಯವಾಗಿ ಮೊದಲು ಬ್ರಾಹ್ಮಣರಾಗಬೇಕಾಗುವುದು. ಬ್ರಾಹ್ಮಣರು ಶಿಖೆಯ ಸಮಾನರಲ್ಲವೆ. ನೀವು
ಆ ಬ್ರಾಹ್ಮಣರಿಗೂ ಸಹ ತಿಳಿಸಿರಿ - ನೀವು ಬ್ರಾಹ್ಮಣರದಂತೂ ಕುಲವಾಗಿದೆ, ಬ್ರಾಹ್ಮಣರಿಗೆ
ರಾಜಧಾನಿಯಿಲ್ಲ, ನಿಮ್ಮ ಈ ಕುಲವನ್ನು ಯಾರು ಸ್ಥಾಪನೆ ಮಾಡಿದರು? ನಿಮ್ಮ ಹಿರಿಯರು ಯಾರು? ನೀವು
ಯಾವಾಗ ಇದೆಲ್ಲವನ್ನೂ ತಿಳಿಸುವಿರೋ ಆಗ ಖುಷಿ ಪಡುತ್ತಾರೆ. ಬ್ರಾಹ್ಮಣರಿಗೆ ಗೌರವ ಕೊಡುತ್ತಾರೆ
ಏಕೆಂದರೆ ಅವರು ಶಾಸ್ತ್ರ ಇತ್ಯಾದಿಗಳನ್ನು ತಿಳಿಸುತ್ತಾರೆ. ಮೊದಲು ಶ್ರೀರಕ್ಷೆಯನ್ನು ಕಟ್ಟಲು
ಬ್ರಾಹ್ಮಣರೇ ಹೋಗುತ್ತಿದ್ದರು. ಇತ್ತೀಚೆಗೆ ಕನ್ಯೆಯರು ಹೋಗುತ್ತೀರಿ. ನೀವಂತೂ ಯಾರು ಪವಿತ್ರತೆಯ
ಪ್ರತಿಜ್ಞೆ ಮಾಡುವರೋ ಅವರಿಗೆ ನೀವು ಶ್ರೀ ರಕ್ಷೆಯನ್ನು ಕಟ್ಟಬೇಕು. ಅವಶ್ಯವಾಗಿ ಪ್ರತಿಜ್ಞೆ
ಮಾಡಬೇಕಾಗಿದೆ. ಭಾರತವನ್ನು ಪುನಃ ಪಾವನವನ್ನಾಗಿ ಮಾಡಲು ನಾವು ಈ ಪ್ರತಿಜ್ಞೆ ಮಾಡುತ್ತೇವೆ. ನೀವೂ
ಪಾವನರಾಗಿ, ಅನ್ಯರನ್ನೂ ಪಾವನರನ್ನಾಗಿ ಮಾಡಿ - ಈ ರೀತಿ ಹೇಳಲು ಮತ್ತ್ಯಾರಿಗೂ ಧೈರ್ಯವಿಲ್ಲ. ಈ
ಅಂತಿಮ ಜನ್ಮದಲ್ಲಿ ಪಾವನರಾಗಿರುವುದರಿಂದ ನಾವು ಪಾವನ ಪ್ರಪಂಚದ ಮಾಲೀಕರಾಗುತ್ತೇವೆಂದು ನಿಮಗೆ
ತಿಳಿದಿದೆ. ನಿಮ್ಮ ಕರ್ತವ್ಯವೇ ಇದಾಗಿದೆ. ನೀವು ಹೋಗಿ ಈ ಪ್ರತಿಜ್ಞೆ ಮಾಡಿಸಬೇಕಾಗಿದೆ - ತಂದೆಯು
ತಿಳಿಸುತ್ತಾರೆ, ಕಾಮ ಮಹಾಶತ್ರುವಾಗಿದೆ, ಇದರ ಮೇಲೆ ಜಯ ಗಳಿಸಬೇಕಾಗಿದೆ. ಇದನ್ನು ಜಯಿಸುವುದರಿಂದಲೇ
ನೀವು ಜಗಜ್ಜೀತರಾಗುವಿರಿ. ಈ ಲಕ್ಷ್ಮೀ-ನಾರಾಯಣರೇ ಅವಶ್ಯವಾಗಿ ಹಿಂದಿನ ಜನ್ಮದಲ್ಲಿ ಅಂತಹ
ಪುರುಷಾರ್ಥ ಮಾಡಿದ ಕಾರಣವೇ ಇಷ್ಟು ಶ್ರೇಷ್ಠರಾಗಿದ್ದೀರಲ್ಲವೆ! ಯಾವ ಕರ್ಮದಿಂದ ಇವರಿಗೆ ಈ ಪದವಿ
ಸಿಕ್ಕಿತೆಂಬುದನ್ನು ನೀವೀಗ ತಿಳಿಸಿಕೊಡಿ, ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ನಿಮಗೆ ಈ ದೀಪಾವಳಿ
ಮೊದಲಾದುದರ ಖುಷಿಯಿಲ್ಲ, ನಿಮಗಂತೂ ಇದೇ ಖುಷಿಯಿದೆ - ನಾವು ತಂದೆಯ ಮಕ್ಕಳಾಗಿದ್ದೇವೆ, ಅವರಿಂದ
ಆಸ್ತಿಯನ್ನು ಪಡೆಯುತ್ತೇವೆ ಎಂದು. ಭಕ್ತಿಮಾರ್ಗದಲ್ಲಿ ಮನುಷ್ಯರು ಎಷ್ಟೊಂದು ಖರ್ಚು ಮಾಡುತ್ತಾರೆ,
ಬೆಂಕಿ ಹತ್ತಿಕೊಂಡು ಎಷ್ಟು ನಷ್ಟವುಂಟಾಗುತ್ತದೆ ಆದರೆ ತಿಳಿದುಕೊಳ್ಳುವುದೇ ಇಲ್ಲ.
ನಾವು ಪುನಃ ನಮ್ಮ ಹೊಸ
ಮನೆಗೆ ಹೋಗುವವರಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ, ಚಕ್ರವು ಚಾಚೂ ತಪ್ಪದೇ
ಪುನರಾವರ್ತನೆಯಾಗುತ್ತದೆಯಲ್ಲವೆ. ಇದು ಬೇಹದ್ದಿನ ಚಲನಚಿತ್ರವಾಗಿದೆ. ಬೇಹದ್ದಿನ ತಂದೆಯ
ಮಕ್ಕಳಾಗಿದ್ದೀರಿ ಅಂದಮೇಲೆ ಅಪಾರ ಖುಷಿಯಿರಬೇಕು. ನಾವು ತಂದೆಯಿಂದ ಸ್ವರ್ಗದ ಆಸ್ತಿಯನ್ನು ಖಂಡಿತ
ಪಡೆಯುತ್ತೇವೆ. ತಂದೆಯು ಹೇಳುತ್ತಾರೆ - ಪುರುಷಾರ್ಥದಿಂದ ಯಾವ ಪದವಿ ಬೇಕಾದರೂ ಪಡೆಯಿರಿ, ನೀವು
ಅವಶ್ಯವಾಗಿ ಪುರುಷಾರ್ಥ ಮಾಡಬೇಕಾಗಿದೆ. ಪುರುಷಾರ್ಥದಿಂದಲೇ ನೀವು ಇಷ್ಟು ಶ್ರೇಷ್ಠರಾಗುವಿರಿ. ಈ
ತಂದೆಯು (ವೃದ್ಧ) ಇಷ್ಟು ಶ್ರೇಷ್ಠರಾಗುತ್ತಾರೆಂದರೆ ನೀವೇಕೆ ಆಗಬಾರದು! ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಹೇಗೆ ತಂದೆ
ಮಕ್ಕಳ ಪ್ರತಿ ಸುಖದಾಯಿಯಾಗಿರುತ್ತಾರೆ, ಅದೇ ರೀತಿ ಸುಖದಾಯಿಯಾಗಿರಬೇಕು. ಎಲ್ಲರಿಗೂ
ಮುಕ್ತಿ-ಜೀವನ್ಮುಕ್ತಿಯ ಮಾರ್ಗ ತೋರಿಸಿರಿ.
2. ದೇಹೀ ಅಭಿಮಾನಿಯಾಗುವ
ತಪಸ್ಯ ಮಾಡಬೇಕು. ಈ ಹಳೆಯ ಛೀ!-ಛೀ! ಪ್ರಪಂಚದಿಂದ ಬೆಹದ್ದಿನ ವೈರಾಗಿಗಳಾಗಬೇಕು.
ವರದಾನ:
ದಿವ್ಯ ಗುಣಗಳ
ಆಹ್ವಾನದ ಮುಖಾಂತರ ಸರ್ವ ಅವಗುಣಗಳ ಆಹುತಿ ಕೊಡುವಂತಹ ಸಂತುಷ್ಠ ಆತ್ಮ ಭವ.
ಹೇಗೆ ದೀಪಾವಳಿಯಲ್ಲಿ
ವಿಶೇಷ ಸ್ವಚ್ಚತೆ ಮತ್ತು ಸಂಪಾದನೆಯ ಕಡೆ ಗಮನವಿಡುತ್ತಾರೆ. ಹಾಗೆ ತಾವೂ ಸಹ ಎಲ್ಲಾ ಪ್ರಕಾರದ
ಸ್ವಚ್ಚತೆ ಮತ್ತು ಸಂಪಾದನೆಯ ಲಕ್ಷ್ಯವನ್ನಿಟ್ಟು ಸಂತುಷ್ಠ ಆತ್ಮ ಆಗಿ. ಸಂತುಷ್ಠತೆಯ ಮುಖಾಂತರವೇ
ಸರ್ವ ದಿವ್ಯ ಗುಣಗಳ ಆಹ್ವಾನ ಮಾಡಲು ಸಾಧ್ಯ. ನಂತರ ಅವಗುಣಗಳ ಆಹುತಿ ಸ್ವತಃವಾಗಿ ಆಗಿ ಬಿಡುತ್ತದೆ.
ಒಳಗೆ ಯಾವ ಬಲಹೀನತೆಗಳು, ಕೊರತೆಗಳು, ನಿರ್ಬಲತೆ, ಕೋಮಲತೆ ಉಳಿದುಕೊಂಡಿದೆ, ಅದನ್ನು ಸಮಾಪ್ತಿ ಮಾಡಿ
ಈಗ ಹೊಸ ಖಾತೆಯನ್ನು ಪ್ರಾರಂಭ ಮಾಡಿ ಮತ್ತು ಹೊಸ ಸಂಸ್ಕಾರಗಳ ಹೊಸ ವಸ್ತ್ರವನ್ನು ಧಾರಣೆ ಮಾಡಿ
ಸತ್ಯ ದೀಪಾವಳಿಯನ್ನು ಆಚರಿಸಿ.
ಸ್ಲೋಗನ್:
ಸ್ವಮಾನದ ಸೀಟ್ ಮೇಲೆ
ಸೆಟ್ ಆಗಿರಬೇಕಾದರೆ ದೃಢ ಸಂಕಲ್ಪದ ಬೆಲ್ಟ್ (ನಡುಪಟ್ಟಿ) ಸರಿಯಾದ ರೀತಿಯಲ್ಲಿ ಕಟ್ಟಿಕೊಳ್ಳಿ.