28.11.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಹೃದಯದಿಂದ ಬಾಬಾ, ಬಾಬಾ ಎಂದು ಹೇಳಿರಿ ಆಗ ಖುಷಿಯಲ್ಲಿ ರೋಮಾಂಚನವಾಗಿ ಬಿಡುತ್ತದೆ, ಖುಷಿಯಲ್ಲಿದ್ದಾಗ ಮಾಯಾಜೀತರಾಗಿ ಬಿಡುತ್ತೀರಿ”

ಪ್ರಶ್ನೆ:
ಮಕ್ಕಳಿಗೆ ಯಾವ ಒಂದು ಮಾತಿನಲ್ಲಿ ಪರಿಶ್ರಮವೆನಿಸುತ್ತದೆ ಆದರೆ ಖುಷಿ ಮತ್ತು ನೆನಪಿಗೆ ಅದೇ ಆಧಾರವಾಗಿದೆ?

ಉತ್ತರ:
ಆತ್ಮಾಭಿಮಾನಿಯಾಗುವುದರಲ್ಲಿಯೇ ಪರಿಶ್ರಮವೆನಿಸುತ್ತದೆ, ಆದರೆ ಇದರಿಂದಲೇ ಖುಷಿಯ ನಶೆಯೇರುತ್ತದೆ. ಮಧುರ ತಂದೆಯ ನೆನಪು ಬರುತ್ತದೆ. ಮಾಯೆಯು ನಿಮ್ಮನ್ನು ದೇಹಾಭಿಮಾನದಲ್ಲಿ ತರುತ್ತಿರುತ್ತದೆ, ಶಕ್ತಿಶಾಲಿಯೊಂದಿಗೆ ತಾನೂ ಶಕ್ತಿಶಾಲಿಯಾಗಿ ಹೋರಾಡುತ್ತದೆ ಆದರೆ ಇದರಲ್ಲಿ ತಬ್ಬಿಬ್ಬಾಗಬೇಡಿ. ತಂದೆಯು ಹೇಳುತ್ತಾರೆ - ಮಕ್ಕಳೇ, ಮಾಯೆಯ ಬಿರುಗಾಳಿಗಳಿಗೆ ಹೆದರಬೇಡಿ, ಕೇವಲ ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮ ಮಾಡಬೇಡಿ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಿದ್ದಾರೆ ಹಾಗೂ ಶಿಕ್ಷಣ ಕೊಡುತ್ತಿದ್ದಾರೆ, ಓದಿಸುತ್ತಿದ್ದಾರೆ. ಮಕ್ಕಳಿಗೆ ತಿಳಿದಿದೆ - ಓದಿಸುವಂತಹ ತಂದೆಯು ಸದಾ ದೇಹೀ-ಅಭಿಮಾನಿಯಾಗಿದ್ದಾರೆ, ಅವರು ನಿರಾಕಾರನಾಗಿದ್ದಾರೆ, ದೇಹವನ್ನು ತೆಗೆದುಕೊಳ್ಳುವುದೇ ಇಲ್ಲ. ಪುನರ್ಜನ್ಮದಲ್ಲಿ ಬರುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ನನ್ನಹಾಗೆ ತಮ್ಮನ್ನು ಆತ್ಮನೆಂದು ತಿಳಿಯಿರಿ. ನಾನು ಪರಮಪಿತನಾಗಿದ್ದೇನೆ. ಪರಮಪಿತನಿಗೆ ದೇಹವಿರುವುದಿಲ್ಲ. ಅವರನ್ನು ದೇಹೀ-ಅಭಿಮಾನಿಯೆಂದೂ ಹೇಳುವುದಿಲ್ಲ. ತಂದೆಯು ನಿರಾಕಾರನಾಗಿದ್ದಾರೆ. ತಿಳಿಸುತ್ತಾರೆ - ನನಗೆ ನನ್ನದೇ ಆದ ದೇಹವಿಲ್ಲ. ನಿಮಗಾದರೆ ದೇಹವು ಸಿಗುತ್ತಾ ಬಂದಿದೆ. ಈಗ ನನ್ನ ಸಮಾನ ದೇಹದಿಂದ ಭಿನ್ನವಾಗಿ ಒಂದುವೇಳೆ ವಿಶ್ವದ ಮಾಲೀಕರಾಗಬೇಕೆಂದರೆ ತಮ್ಮನ್ನು ಆತ್ಮನೆಂದು ತಿಳಿಯಿರಿ. ಮತ್ತ್ಯಾವುದೇ ಕಷ್ಟದ ಮಾತಿಲ್ಲ. ದೇಹಾಭಿಮಾನವನ್ನು ಬಿಟ್ಟು ನನ್ನ ಸಮಾನರಾಗಿ. ಸದಾ ಬುದ್ಧಿಯಲ್ಲಿ ನೆನಪಿರಲಿ - ನಾವಾತ್ಮರಾಗಿದ್ದೇವೆ. ನಮಗೆ ತಂದೆಯು ಓದಿಸುತ್ತಿದ್ದಾರೆ. ತಂದೆಯು ನಿರಾಕಾರನಾಗಿದ್ದಾರೆ ಆದರೆ ನಮಗೆ ಓದಿಸುವುದು ಹೇಗೆ? ಆದ್ದರಿಂದ ತಂದೆಯು ಈ ತನುವಿನಲ್ಲಿ ಬಂದು ಓದಿಸುತ್ತಾರೆ. ಗೋಮುಖವನ್ನು ತೋರಿಸುತ್ತಾರಲ್ಲವೆ ಆದರೆ ಗೋವಿನ ಬಾಯಿಂದ ನೀರು ಬರಲು ಸಾಧ್ಯವಿಲ್ಲ. ಮಾತೆಗೂ ಸಹ ಗೋಮಾತ ಎಂದು ಹೇಳಲಾಗುತ್ತದೆ. ನೀವೆಲ್ಲರೂ ಗೋವುಗಳಾಗಿದ್ದೀರಿ, ಈ ಬ್ರಹ್ಮಾರವರು ಗೋವು ಅಲ್ಲ, ಬಾಯಿಯ ಮೂಲಕ ಜ್ಞಾನವು ಸಿಗುತ್ತದೆ. ಎತ್ತಿನ ಮೇಲೆ ಸವಾರಿಯನ್ನು ತೋರಿಸುತ್ತಾರೆ. ಶಿವ-ಶಂಕರ ಒಂದೇ ಎಂದು ಹೇಳಿ ಬಿಡುತ್ತಾರೆ. ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ - ಶಿವ-ಶಂಕರ ಒಂದೇ ಅಲ್ಲ. ಶಿವನು ಸರ್ವಶ್ರೇಷ್ಠನಾಗಿದ್ದಾರೆ, ಅವರ ನಂತರ ಬ್ರಹ್ಮಾ-ವಿಷ್ಣು-ಶಂಕರನಿದ್ದಾರೆ. ಬ್ರಹ್ಮಾರವರು ಸೂಕ್ಷ್ಮವತನವಾಸಿಯಾಗಿದ್ದಾರೆ. ನೀವು ಮಕ್ಕಳು ವಿಚಾರ ಸಾಗರ ಮಂಥನ ಮಾಡಿ ವಿಷಯಗಳನ್ನು ತೆಗೆದು ತಿಳಿಸಬೇಕು ಮತ್ತು ನಿರ್ಭಯರಾಗಬೇಕಾಗಿದೆ. ನೀವು ಮಕ್ಕಳಿಗೇ ಖುಷಿಯಿದೆ - ನಾವು ಈಶ್ವರನ ವಿದ್ಯಾರ್ಥಿಗಳು, ನಮಗೆ ತಂದೆಯು ಓದಿಸುತ್ತಾರೆಂದು ನೀವು ಹೇಳುತ್ತೀರಿ. ಭಗವಾನುವಾಚವೂ ಇದೆ - ಹೇ ಮಕ್ಕಳೇ, ನಿಮ್ಮನ್ನು ರಾಜಾಧಿ ರಾಜರನ್ನಾಗಿ ಮಾಡಲು ಓದಿಸುತ್ತೇನೆ. ಭಲೆ ಎಲ್ಲಿಯಾದರೂ ಹೋಗಿರಿ, ಸೇವಾಕೇಂದ್ರಕ್ಕೂ ಹೋದಾಗ ತಂದೆಯು ನಮಗೆ ಓದಿಸುತ್ತಾರೆ, ನಾವೀಗ ಸೇವಾಕೇಂದ್ರದಲ್ಲಿ ಕೇಳುತ್ತೇವೆ. ತಂದೆಯು ಮುರುಳಿಯನ್ನು ನುಡಿಸುತ್ತಾರೆ ಎಂದು ನಿಮ್ಮ ಬುದ್ಧಿಯಲ್ಲಿದೆ. ಬಾಬಾ, ಬಾಬಾ ಎನ್ನುತ್ತಾ ಇರಿ, ಇದೂ ಸಹ ನಿಮ್ಮ ಯಾತ್ರೆಯಾಯಿತು. ಯೋಗ ಶಬ್ಧವು ಶೋಭಿಸುವುದಿಲ್ಲ, ಮನುಷ್ಯರು ಅಮರನಾಥ, ಬದರಿನಾಥ ಮೊದಲಾದ ಕಡೆ ಯಾತ್ರೆ ಮಾಡಲು ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ನೀವು ಮಕ್ಕಳಂತೂ ಈಗ ತಮ್ಮ ಮನೆಗೆ ಹೋಗಬೇಕಾಗಿದೆ. ಈಗ ನಿಮಗೆ ಅರ್ಥವಾಗಿದೆ - ಈ ಬೇಹದ್ದಿನ ನಾಟಕವು ಈಗ ಮುಕ್ತಾಯವಾಗುತ್ತದೆ. ತಂದೆಯು ನಮ್ಮನ್ನು ಯೋಗ್ಯರನ್ನಾಗಿ ಮಾಡಿ ಕರೆದುಕೊಂಡು ಹೋಗಲು ಬಂದಿದ್ದಾರೆ. ಸ್ವಯಂ ನೀವೇ ಹೇಳುತ್ತೀರಿ, ನಾವು ಪತಿತರಾಗಿದ್ದೇವೆಂದು ಅಂದಮೇಲೆ ಪತಿತರು ಮುಕ್ತಿಯನ್ನು ಪಡೆಯುವರೇ? ಆದ್ದರಿಂದ ತಂದೆಯು ತಿಳಿಸುತ್ತಾರೆ - ಹೇ ಆತ್ಮಗಳೇ, ನೀವು ಪತಿತರಾಗಿದ್ದೀರಿ, ಅವರಂತೂ ಶರೀರವನ್ನು ಪತಿತವೆಂದು ತಿಳಿದು ಗಂಗೆಯಲ್ಲಿ ಸ್ನಾನ ಮಾಡಲು ಹೋಗುತ್ತಾರೆ. ಆತ್ಮವನ್ನು ನಿರ್ಲೇಪವೆಂದು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ - ಮೂಲ ಮಾತೇ ಆತ್ಮದ್ದಾಗಿದೆ. ಪಾಪಾತ್ಮ, ಪುಣ್ಯಾತ್ಮನೆಂದು ಹೇಳುತ್ತಾರೆ. ಈ ಶಬ್ಧವನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ, ತಿಳಿದುಕೊಳ್ಳಬೇಕು ಮತ್ತು ತಿಳಿಸಲೂಬೇಕಾಗಿದೆ. ನೀವು ಭಾಷಣ ಮಾಡಬೇಕಾಗಿದೆ. ತಂದೆಯಂತೂ ಹಳ್ಳಿ-ಹಳ್ಳಿಯಲ್ಲಿ, ಗಲ್ಲಿ-ಗಲ್ಲಿಯಲ್ಲಿ ಹೋಗಲು ಸಾಧ್ಯವಿಲ್ಲ. ಆದ್ದರಿಂದ ನೀವು ಮನೆ-ಮನೆಯಲ್ಲಿ ಈ ಚಿತ್ರಗಳನ್ನಿಟ್ಟುಕೊಳ್ಳಿ, 84 ಜನ್ಮಗಳ ಚಕ್ರವು ಹೇಗೆ ಸುತ್ತುತ್ತದೆ ಎಂದು ಏಣಿಯ ಚಿತ್ರದಲ್ಲಿ ಬಹಳ ಸ್ಪಷ್ಟವಾಗಿದೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸತೋಪ್ರಧಾನರಾಗಿ ಈಗ ತಮ್ಮ ಮನೆಗೆ ಹೋಗಬೇಕಾಗಿದೆ ಅಂದಮೇಲೆ ಪವಿತ್ರರಾಗದೇ ಮನೆಗೆ ಹೋಗುವಂತಿಲ್ಲ. ಆದ್ದರಿಂದ ಇದೇ ಚಿಂತೆಯಿರಲಿ - ಬಾಬಾ, ನಮಗೆ ಬಹಳ ಬಿರುಗಾಳಿಗಳು ಬರುತ್ತವೆ, ಮನಸ್ಸಿನಲ್ಲಿ ಬಹಳ ಕೆಟ್ಟ ಸಂಕಲ್ಪಗಳು ಬರುತ್ತವೆ, ಮೊದಲು ಬರುತ್ತಿರಲಿಲ್ಲವೆಂದು ಅನೇಕ ಮಕ್ಕಳು ಬರೆಯುತ್ತಾರೆ.

ತಂದೆಯು ತಿಳಿಸುತ್ತಾರೆ - ನೀವು ಈ ಚಿಂತನೆ ಮಾಡಬೇಡಿ, ಮೊದಲು ನೀವು ಯುದ್ಧದ ಮೈದಾನದಲ್ಲಿರಲಿಲ್ಲ, ನೀವೀಗ ತಂದೆಯ ನೆನಪಿನಲ್ಲಿದ್ದು ಮಾಯೆಯ ಮೇಲೆ ಜಯ ಗಳಿಸಬೇಕಾಗಿದೆ. ಇದನ್ನು ಮತ್ತೆ-ಮತ್ತೆ ನೆನಪು ಮಾಡುತ್ತಾ ಇರಿ. ಗಂಟು ಹಾಕಿಕೊಳ್ಳಿ. ಹೇಗೆ ನೆನಪಿರುವುದಕ್ಕಾಗಿ ಮಾತೆಯರು ಗಂಟು ಹಾಕಿಕೊಳ್ಳುತ್ತಾರೆ ಮತ್ತೆ ಪುರುಷರು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಾರೆ. ನಿಮಗಂತೂ ಈ ಬ್ಯಾಡ್ಜ್ ಒಳ್ಳೆಯ ಸಂಕೇತವಾಗಿದೆ. ನಾವು ರಾಜಕುಮಾರರಾಗುತ್ತೇವೆ, ಇದು ವಿಕಾರಿಗಳಿಂದ ರಾಜಕುಮಾರರಾಗುವ ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ನೀವೇ ರಾಜಕುಮಾರರಾಗಿದ್ದಿರಲ್ಲವೆ! ಶ್ರೀಕೃಷ್ಣನು ವಿಶ್ವದ ರಾಜಕುಮಾರನಾಗಿದ್ದನು, ಹೇಗೆ ಇಂಗ್ಲೆಂಡಿನಲ್ಲಿಯೂ ಪ್ರಿನ್ಸ್ ಆಫ್ ವೆಲ್ಸ್ ಎಂದು ಹೇಳಲಾಗುತ್ತದೆ. ಅವು ಹದ್ದಿನ ಮಾತು, ರಾಧೆ-ಕೃಷ್ಣರಂತೂ ಬಹಳ ಪ್ರಸಿದ್ಧರಾಗಿದ್ದಾರೆ. ಸ್ವರ್ಗದ ರಾಜಕುಮಾರ-ಕುಮಾರಿಯರಾಗಿದ್ದರಲ್ಲವೆ. ಆದ್ದರಿಂದ ಅವರನ್ನು ಎಲ್ಲರೂ ಬಹಳ ಪ್ರೀತಿ ಮಾಡುತ್ತಾರೆ. ಶ್ರೀಕೃಷ್ಣನನ್ನಂತೂ ಬಹಳ ಪ್ರೀತಿಸುತ್ತಾರೆ. ವಾಸ್ತವದಲ್ಲಿ ಇಬ್ಬರನ್ನೂ ಪ್ರೀತಿ ಮಾಡಬೇಕು. ಮೊದಲು ರಾಧೆಯನ್ನು ಮಾಡಬೇಕು. ಆದರೆ ಗಂಡು ಮಕ್ಕಳ ಮೇಲೆ ಹೆಚ್ಚಿನ ಪ್ರೀತಿಯಿರುತ್ತದೆ ಏಕೆಂದರೆ ಮಗನು ವಾರಸುಧಾರನಾಗುತ್ತಾನೆ. ಸ್ತ್ರೀಯರಿಗೂ ಸಹ ಪತಿಯ ಮೇಲೆ ಪ್ರೀತಿಯಿರುತ್ತದೆ ಆದ್ದರಿಂದ ನಿಮ್ಮ ಪತಿಯೇ ನಿಮಗೆ ಗುರು, ಈಶ್ವರನೆಂದು ಹೇಳುತ್ತಾರೆ. ಸ್ತ್ರೀಯರ ಬಗ್ಗೆ ಹೀಗೆ ಹೇಳುವುದಿಲ್ಲ. ಸತ್ಯಯುಗದಲ್ಲಂತೂ ಮಾತೆಯರಿಗೆ ಮಹಿಮೆಯಿರುತ್ತದೆ. ಮೊದಲು ಲಕ್ಷ್ಮೀ ನಂತರ ನಾರಾಯಣ. ಜಗದಂಬೆಗೂ ಸಹ ಎಷ್ಟೊಂದು ಮಾನ್ಯತೆ ಕೊಡುತ್ತಾರೆ! ಸರಸ್ವತಿಯು ಬ್ರಹ್ಮನ ಮಗಳಾಗಿದ್ದಾರೆ. ಬ್ರಹ್ಮನಿಗೆ ಅಷ್ಟೊಂದು ಮಾನ್ಯತೆಯಿಲ್ಲ, ಬ್ರಹ್ಮನ ಮಂದಿರವು ಕೇವಲ ಅಜ್ಮೀರ್ನಲ್ಲಿದೆ, ಅಲ್ಲಿ ಮೇಳಗಳಾಗುತ್ತವೆ. ಜಗದಂಬೆಯ ಮಂದಿರದಲ್ಲಿಯೂ ಮೇಳವಾಗುತ್ತದೆ. ವಾಸ್ತವದಲ್ಲಿ ಇವೆಲ್ಲಾ ಮೇಳಗಳು ಮೈಲಿಗೆಯನ್ನಾಗಿ ಮಾಡುವಂತದ್ದಾಗಿವೆ. ನಿಮ್ಮ ಈ ಮೇಳವು ಸ್ವಚ್ಛವಾಗುವಂತದ್ದಾಗಿದೆ. ಸ್ವಚ್ಛವಾಗುವುದಕ್ಕಾಗಿ ನೀವು ಸ್ವಚ್ಛ ತಂದೆಯನ್ನು ನೆನಪು ಮಾಡಬೇಕಾಗಿದೆ, ನೀರಿನಿಂದ ನಿಮ್ಮ ಪಾಪ ನಾಶವಾಗುವುದಿಲ್ಲ. ಗೀತೆಯಲ್ಲಿಯೂ ಮನ್ಮನಾಭವ ಎಂದು ಭಗವಾನುವಾಚವಿದೆ. ಆದಿ ಮತ್ತು ಅಂತ್ಯದಲ್ಲಿ ಈ ಶಬ್ಧವಿದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವೇ ಮೊಟ್ಟ ಮೊದಲು ಭಕ್ತಿಯನ್ನು ಆರಂಭಿಸಿದೆವು. ಸತೋಪ್ರಧಾನ ಭಕ್ತಿಯು ನಂತರ ಸತೋ, ರಜೋ, ತಮೋ ಭಕ್ತಿಯಾಗುತ್ತದೆ. ಈಗಂತೂ ನೋಡಿ, ಕಲ್ಲು-ಮಣ್ಣು ಎಲ್ಲದಕ್ಕೂ ಪೂಜೆ ಮಾಡುತ್ತಾರೆ. ಇದೆಲ್ಲವೂ ಅಂಧ ಶ್ರದ್ಧೆಯಾಗಿದೆ. ನೀವೀಗ ಸಂಗಮದಲ್ಲಿ ಕುಳಿತಿದ್ದೀರಿ, ಇದು ತಲೆ ಕೆಳಕಾದ ವೃಕ್ಷವಾಗಿದೆ, ಇದರ ಬೀಜರೂಪ ತಂದೆಯು ಮೇಲಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಈ ಮನುಷ್ಯ ಸೃಷ್ಟಿಯ ಬೀಜ, ರಚಯಿತನಾಗಿದ್ದೇನೆ. ಈಗ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಿದ್ದೇನೆ, ಹೇಗೆ ಸಸಿಯನ್ನು ನಾಟಿ ಮಾಡುತ್ತಾರಲ್ಲವೆ. ವೃಕ್ಷದ ಹಳೆಯ ಎಲೆಗಳು ಉದುರಿ ಹೋಗುತ್ತವೆ, ಹೊಸ-ಹೊಸ ಎಲೆಗಳು ಬರುತ್ತವೆ. ಈಗ ತಂದೆಯು ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದಾರೆ. ಬಹಳಷ್ಟು ಎಲೆಗಳಿವೆ, ಎಲ್ಲವೂ ಬೆರಕೆಯಾಗಿ ಬಿಟ್ಟಿವೆ ಅಂದರೆ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ. ವಾಸ್ತವದಲ್ಲಿ ಹಿಂದೂಗಳು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಾರೆ. ವಾಸ್ತವದಲ್ಲಿ ಹಿಂದೂಸ್ಥಾನದ ಹೆಸರೇ ಆಗಿದೆ - ಭಾರತ. ಇಲ್ಲಿ ದೇವತೆಗಳಿರುತ್ತಿದ್ದರು, ಮತ್ತ್ಯಾವುದೇ ದೇಶದ ಹೆಸರು ಬದಲಾಗುವುದಿಲ್ಲ. ಕೇವಲ ಭಾರತದ ಹೆಸರನ್ನು ಬದಲಾಯಿಸಿದ್ದಾರೆ. ಹಿಂದೂಸ್ಥಾನವೆಂದು ಹೇಳುತ್ತಾರೆ. ನಮ್ಮ ಧರ್ಮವು ಜಪಾನಿ ಅಥವಾ ಚೀನಿಯಾಗಿದೆ ಎಂದು ಬೌದ್ಧರು ಹೇಳುವುದಿಲ್ಲ. ನಾವು ಬೌದ್ಧ ಧರ್ಮವರೆಂದೇ ಅವರು ಹೇಳಿಕೊಳ್ಳುತ್ತಾರೆ ಆದರೆ ನಿಮ್ಮಲ್ಲಿಯೂ ಯಾರು ಆದಿ ಸನಾತನ ದೇವಿ-ದೇವತಾ ಧರ್ಮದವರೆಂದು ಹೇಳಿಕೊಳ್ಳುವುದಿಲ್ಲ. ಒಂದುವೇಳೆ ಯಾರಾದರೂ ಹೇಳಿದರೂ ಸಹ ನೀವು ತಿಳಿಸಿ - ಆ ಧರ್ಮವನ್ನು ಯಾವಾಗ ಮತ್ತು ಯಾರು ಸ್ಥಾಪನೆ ಮಾಡಿದರು? ಇದಕ್ಕೆ ಅವರು ಏನೂ ಹೇಳುವುದಿಲ್ಲ ಏಕೆಂದರೆ ಕಲ್ಪದ ಆಯಸ್ಸನ್ನೇ ಬಹಳ ಉದ್ದಗಲ ಮಾಡಿ ಬಿಟ್ಟಿದ್ದಾರೆ. ಇದಕ್ಕೆ ಅಜ್ಞಾನ ಅಂಧಕಾರವೆಂದು ಹೇಳಲಾಗುತ್ತದೆ. ಒಂದನೆಯದಾಗಿ ಮೊದಲು ತಮ್ಮ ಧರ್ಮ ಗೊತ್ತಿಲ್ಲ, ಎರಡನೆಯದಾಗಿ ಲಕ್ಷ್ಮೀ-ನಾರಾಯಣ ರಾಜ್ಯವನ್ನೇ ಬಹಳ ದೂರ ತೆಗೆದುಕೊಂಡು ಹೋಗಿದ್ದಾರೆ. ಆದ್ದರಿಂದ ಘೋರ ಅಂಧಕಾರವೆಂದು ಹೇಳಲಾಗುತ್ತದೆ. ಜ್ಞಾನ ಮತ್ತು ಅಜ್ಞಾನದಲ್ಲಿ ಎಷ್ಟೊಂದು ಅಂತರವಿದೆ! ಜ್ಞಾನ ಸಾಗರನು ಒಬ್ಬರೇ ಶಿವ ತಂದೆಯಾಗಿದ್ದಾರೆ, ಅದರಿಂದ ಕೇವಲ ಒಂದು ಲೋಟದಷ್ಟನ್ನು ಕೊಡುತ್ತಾರೆ. ಎಲ್ಲರಿಗೆ ಇದನ್ನೇ ತಿಳಿಸಿ – ಶಿವ ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಇದು ಕೇವಲ ಒಂದು ಬೊಗಸೆ ನೀರಾಯಿತಲ್ಲವೆ. ಕೆಲವರಂತೂ ಸ್ನಾನ ಮಾಡುತ್ತಾರೆ, ಇನ್ನೂ ಕೆಲವರು ಗಡಿಗೆಯನ್ನು ತುಂಬಿಸಿಕೊಂಡು ಹೋಗುತ್ತಾರೆ. ಕೆಲವರು ಚಿಕ್ಕ-ಚಿಕ್ಕ ಲೋಟದಷ್ಟನ್ನೂ ತೆಗೆದುಕೊಂಡು ಹೋಗುತ್ತಾರೆ. ನಿತ್ಯವೂ ಒಂದೊಂದು ಹನಿಯನ್ನು ಮಡಿಕೆಯಲ್ಲಿ ಹಾಕಿ ಅದನ್ನು ಜ್ಞಾನ ಜಲವೆಂದು ಕುಡಿಯುತ್ತಾರೆ. ವಿದೇಶದಲ್ಲಿಯೂ ವೈಷ್ಣವರು ಗಂಗಾ ಜಲವನ್ನು ಗಡಿಗೆಯಲ್ಲಿ ತುಂಬಿಸಿಕೊಂಡು ಹೋಗುತ್ತಾರೆ ಮತ್ತೆ ತರಿಸಿಕೊಳ್ಳುತ್ತಿರುತ್ತಾರೆ. ಈ ನೀರೆಲ್ಲವೂ ಪರ್ವತಗಳಿಂದಲೇ ಬರುತ್ತವೆ, ಮೇಲಿನಿಂದಲೂ ನೀರು ಬೀಳುತ್ತದೆ. ಇತ್ತೀಚೆಗೆ ನೋಡಿ, 100 ಅಂತಸ್ತುಗಳ ಕಟ್ಟಡಗಳನ್ನೂ ಕಟ್ಟಿಸುತ್ತಾರೆ, ಸತ್ಯಯುಗದಲ್ಲಿ ಈ ರೀತಿಯಿರುವುದಿಲ್ಲ. ಅಲ್ಲಿ ನಿಮಗೆ ಬಹಳಷ್ಟು ಜಮೀನು ಇರುತ್ತದೆ, ಅದರ ಮಾತೇ ಕೇಳಬೇಡಿ. ಇಲ್ಲಿ ನೋಡಿ, ಇರುವುದಕ್ಕಾಗಿ ಸ್ಥಳವೇ ಇಲ್ಲ. ಆದ್ದರಿಂದ ಇಷ್ಟೊಂದು ಅಂತಸ್ತುಗಳವರೆಗೆ ಕಟ್ಟಿಸುತ್ತಾರೆ. ಸತ್ಯಯುಗದಲ್ಲಿ ಬಹಳಷ್ಟು ದವಸ-ಧಾನ್ಯಗಳಿರುತ್ತವೆ. ಹೇಗೆ ಅಮೇರಿಕಾದಲ್ಲಿ ಬಹಳಷ್ಟು ದವಸ-ಧಾನ್ಯಗಳಿದ್ದರೆ ಸುಟ್ಟು ಹಾಕುತ್ತಾರೆ. ಇದು ಮೃತ್ಯುಲೋಕವಾಗಿದೆ, ಅದು ಅಮರಲೋಕವಾಗಿದೆ. ಅರ್ಧ ಕಲ್ಪದವರೆಗೆ ಅಲ್ಲಿ ನೀವು ಸುಖದಲ್ಲಿರುತ್ತೀರಿ. ಕಾಲವು ನಿಮ್ಮನ್ನು ಕಬಳಿಸಲು ಸಾಧ್ಯವಿಲ್ಲ. ಇದರ ಮೇಲೆ ಒಂದು ಕಥೆಯೂ ಇದೆ. ಇದು ಬೇಹದ್ದಿನ ಮಾತಾಗಿದೆ. ಬೇಹದ್ದಿನ ಮಾತುಗಳಿಂದ ಮತ್ತೆ ಈ ಚಿಕ್ಕ-ಚಿಕ್ಕ ಕಥೆಗಳನ್ನು ಬರೆದಿದ್ದಾರೆ. ಗ್ರಂಥವು ಮೊದಲು ಎಷ್ಟು ಚಿಕ್ಕದಾಗಿತ್ತು, ಈಗ ದೊಡ್ಡದಾಗಿ ಮಾಡಿ ಬಿಟ್ಟಿದ್ದಾರೆ. ಶಿವ ತಂದೆಯು ಎಷ್ಟು ಸೂಕ್ಷ್ಮ ಬಿಂದುವಾಗಿದ್ದಾರೆ! ಅವರ ಸಂಕೇತವಾಗಿ ಎಷ್ಟು ದೊಡ್ಡ ಪ್ರತಿಮೆಯನ್ನು ಮಾಡಿ ಬಿಟ್ಟಿದ್ದಾರೆ. ಬುದ್ಧನ ಚಿತ್ರ, ಪಾಂಡವರ ಚಿತ್ರಗಳನ್ನು ಬಹಳ ದೊಡ್ಡ-ದೊಡ್ಡದಾಗಿ ಮಾಡಿಸಿದ್ದಾರೆ ಆದರೆ ಇಷ್ಟು ದೊಡ್ಡ ರೂಪದಲ್ಲಿ ಯಾರೂ ಇರುವುದಿಲ್ಲ. ಈಗ ನೀವು ಮಕ್ಕಳು ಈ ಗುರಿ-ಧ್ಯೇಯದ ಚಿತ್ರವನ್ನು ಮನೆ-ಮನೆಯಲ್ಲಿಯೂ ಇಟ್ಟುಕೊಳ್ಳಬೇಕು, ನಾವು ಈ ರೀತಿಯಾಗುತ್ತೇವೆ. ಮತ್ತೆ ಅಳುವುದೇಕೆ? ಯಾರು ಅಳುವರೋ ಅವರು ಕಳೆದುಕೊಳ್ಳುವರು. ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ನೀವು ಮಕ್ಕಳಂತೂ ಆತ್ಮಾಭಿಮಾನಿಯಾಗಬೇಕಾಗಿದೆ. ಇದರಲ್ಲಿಯೇ ಪರಿಶ್ರಮವಾಗುತ್ತದೆ. ಆತ್ಮಾಭಿಮಾನಿಯಾಗುವುದರಿಂದಲೇ ಖುಷಿಯ ನಶೆಯೇರುತ್ತದೆ, ಮಧುರ ತಂದೆಯ ನೆನಪು ಬರುತ್ತದೆ. ತಂದೆಯಿಂದ ನಾವು ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ತಂದೆಯು ನಮಗೆ ಈ ಭಾಗ್ಯಶಾಲಿ ರಥದಲ್ಲಿ ಬಂದು ಓದಿಸುತ್ತಾರೆ. ದಿನ-ರಾತ್ರಿ ಬಾಬಾ, ಬಾಬಾ ಎಂದು ನೆನಪು ಮಾಡುತ್ತಾ ಇರಿ. ನೀವು ಅರ್ಧಕಲ್ಪದ ಪ್ರಿಯತಮೆಯರಾಗಿದ್ದೀರಿ. ಭಕ್ತರು ಭಗವಂತನನ್ನು ನೆನಪು ಮಾಡುತ್ತಾರೆ. ಭಕ್ತರು ಅನೇಕರಿದ್ದಾರೆ. ಜ್ಞಾನದಲ್ಲಿ ಎಲ್ಲರೂ ಒಬ್ಬ ತಂದೆಯನ್ನು ನೆನಪು ಮಾಡುತ್ತೀರಿ, ಅವರೇ ಎಲ್ಲರ ತಂದೆಯಾಗಿದ್ದಾರೆ. ಜ್ಞಾನ ಸಾಗರ ತಂದೆಯು ನಮಗೆ ಓದಿಸುತ್ತಿದ್ದಾರೆ ಅಂದಾಗ ನೀವು ಮಕ್ಕಳಿಗೆ ರೋಮಾಂಚನವಾಗಬೇಕು. ಮಾಯೆಯ ಬಿರುಗಾಳಿಗಳಂತೂ ಬಂದೇ ಬರುತ್ತವೆ. ತಂದೆಯು ತಿಳಿಸುತ್ತಾರೆ - ಎಲ್ಲರಿಗಿಂತ ಹೆಚ್ಚಿನ ಬಿರುಗಾಳಿಯು ನನಗೆ (ಬ್ರಹ್ಮಾ) ಬರುತ್ತದೆ ಏಕೆಂದರೆ ನಾನು ಎಲ್ಲರಿಗಿಂತ ಮುಂದೆ ಇದ್ದೇನೆ. ನನ್ನ ಬಳಿ ಬರುತ್ತವೆ ಆದ್ದರಿಂದಲೇ ಮಕ್ಕಳ ಬಳಿ ಇನ್ನೆಷ್ಟು ಬರಬಹುದು, ಮಕ್ಕಳು ಇನ್ನೆಷ್ಟು ತಬ್ಬಿಬ್ಬಾಗಬಹುದೆಂದು ತಿಳಿದುಕೊಳ್ಳುತ್ತೇನೆ. ಅನೇಕ ಪ್ರಕಾರದ ಬಿರುಗಾಳಿಗಳು ಬರುತ್ತವೆ, ಇವು ಅಜ್ಞಾನ ಕಾಲದಲ್ಲಿ ಎಂದೂ ಬರುತ್ತಿರಲಿಲ್ಲ, ಅಂತದ್ದೆಲ್ಲವೂ ಈಗ ಬರುತ್ತದೆ. ಮೊದಲು ನನಗೇ ಬರಬೇಕು, ಇಲ್ಲದಿದ್ದರೆ ನಾನು ಅದರ ಬಗ್ಗೆ ಮಕ್ಕಳಿಗೆ ಹೇಗೆ ತಿಳಿಸಲಿ? ನಾನೇ ಮೊಟ್ಟ ಮೊದಲಿಗೆ ಇದ್ದೇನೆ. ಶಕ್ತಿಶಾಲಿಯಾಗಿರುವುದರಿಂದ ಮಾಯೆಯೂ ಸಹ ಶಕ್ತಿಶಾಲಿಯಾಗಿ ಹೋರಾಡುತ್ತದೆ. ಮಲ್ಲ ಯುದ್ಧದಲ್ಲಿ ಎಲ್ಲರೂ ಒಂದೇರೀತಿ ಇರುವುದಿಲ್ಲ. ಪ್ರಥಮ, ಮಧ್ಯಮ, ತೃತಿಯ ದರ್ಜೆಗಳಿರುತ್ತವೆ ಅಂದಾಗ ತಂದೆಯ ಬಳಿ ಎಲ್ಲರಿಗಿಂತ ಹೆಚ್ಚಿನ ಬಿರುಗಾಳಿಗಳು ಬರುತ್ತವೆ. ಆದ್ದರಿಂದಲೇ ತಂದೆಯು (ಬ್ರಹ್ಮಾ) ತಿಳಿಸುತ್ತಾರೆ - ಮಕ್ಕಳೇ, ಈ ಬಿರುಗಾಳಿಗಳಿಗೆ ಹೆದರಬೇಡಿ. ಕೇವಲ ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮ ಮಾಡಬೇಡಿ. ಜ್ಞಾನದಲ್ಲಿ ಬಂದಿದ್ದೇವೆ ಅಂದಮೇಲೆ ಇದೆಲ್ಲವೂ ಏಕೆ ಆಗುತ್ತಿದೆ? ಇದಕ್ಕಿಂತಲೂ ಜ್ಞಾನವನ್ನು ತೆಗೆದುಕೊಳ್ಳದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು, ಸಂಕಲ್ಪವೇ ಬರುತ್ತಿರಲಿಲ್ಲವೆಂದು ಕೆಲವರು ಹೇಳುತ್ತಾರೆ. ಅರೆ! ಇದು ಯುದ್ಧವಲ್ಲವೆ. ಸ್ತ್ರೀಯ ಸನ್ಮುಖದಲ್ಲಿದ್ದರೂ ಸಹ ಪವಿತ್ರ ದೃಷ್ಟಿಯಿರಲು ಶಿವ ತಂದೆಯ ಮಕ್ಕಳು ನಾವು ಸಹೋದರ-ಸಹೋದರರಾಗಿದ್ದೇವೆ ಮತ್ತು ಪ್ರಜಾಪಿತ ಬ್ರಹ್ಮನ ಸಂತಾನರಾಗಿರುವ ಕಾರಣ ಸಹೋದರ-ಸಹೋದರಿಯರಾದೆವೆಂದು ತಿಳಿಯಿರಿ ಮತ್ತೆ ವಿಕಾರವೆಲ್ಲಿಂದ ಬರುವುದು? ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ. ಶಿಖೆಗೆ ಸಮಾನರಾಗಿರುವ ಬ್ರಾಹ್ಮಣರೇ ನಂತರ ದೇವತೆಗಳಾಗುತ್ತೀರಿ. ಅಂದಾಗ ನಾವು ಸಹೋದರ-ಸಹೋದರಿಯರಾಗಿದ್ದೇವೆ. ಒಬ್ಬ ತಂದೆಯ ಮಕ್ಕಳು ಕುಮಾರ-ಕುಮಾರಿಯರಾಗಿದ್ದೇವೆಂದು ತಿಳಿಯಿರಿ. ಒಂದುವೇಳೆ ಇಬ್ಬರೂ ಕುಮಾರ-ಕುಮಾರಿಯಾಗಿಲ್ಲವೆಂದರೆ ಅಲ್ಲಿ ಕಲಹವಾಗುತ್ತದೆ. ಅಬಲೆಯರ ಮೇಲೆ ಅತ್ಯಾಚಾರಗಳಾಗುತ್ತವೆ. ನನ್ನ ಪತ್ನಿಯು ಹೇಗೆ ಪೂತನ ಆಗಿದ್ದಾಳೆಂದು ಕೆಲವರು ಪುರುಷರೂ ಸಹ ಬರೆಯುತ್ತಾರೆ. ಬಹಳ ಪರಿಶ್ರಮವಿದೆ. ಯುವಕರಿಗಂತೂ ಬಹಳ ಪರಿಶ್ರಮವಾಗುತ್ತದೆ. ಅಂದಾಗ ಯಾರು ಗಾಂಧರ್ವ ವಿವಾಹ ಮಾಡಿಕೊಂಡು ಒಟ್ಟಿಗೆ ಇರುವರೋ ಅವರದು ಕಮಾಲ್ ಆಗಿದೆ. ಅವರು ಬಹಳ ಶ್ರೇಷ್ಠ ಪದವಿಯನ್ನು ಪಡೆಯುವರು, ಆದರೆ ಅಂತಹ ಸ್ಥಿತಿಯನ್ನು ಧಾರಣೆ ಮಾಡಿಕೊಳ್ಳಬೇಕು. ಜ್ಞಾನದಲ್ಲಿ ತೀಕ್ಷ್ಣವಾಗಿ ಹೋಗಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮಾಯೆಯ ಬಿರುಗಾಳಿಗಳಿಗೆ ಹೆದರಬಾರದು ಅಥವಾ ತಬ್ಬಿಬ್ಬಾಗಬಾರದು. ಕೇವಲ ಗಮನವಿರಲಿ - ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮವಾಗದಿರಲಿ. ಜ್ಞಾನ ಸಾಗರ ತಂದೆಯು ನಮಗೆ ಓದಿಸುತ್ತಾರೆ - ಇದೇ ಖುಷಿಯಲ್ಲಿರಬೇಕಾಗಿದೆ.

2. ಸತೋಪ್ರಧಾನರಾಗಲು ಆತ್ಮಾಭಿಮಾನಿಯಾಗುವ ಪರಿಶ್ರಮ ಪಡಬೇಕಾಗಿದೆ, ಜ್ಞಾನದ ವಿಚಾರ ಸಾಗರ ಮಂಥನ ಮಾಡಬೇಕು, ನೆನಪಿನ ಯಾತ್ರೆಯಲ್ಲಿರಬೇಕಾಗಿದೆ.

ವರದಾನ:
ಶ್ರೇಷ್ಠ ಪುರುಷಾರ್ಥದ ಮುಖಾಂತರ ಫೈನಲ್ ರಿಸಲ್ಟ್ನಲ್ಲಿ (ಅಂತಿಮ ಫಲಿತಾಂಶದಲ್ಲಿ) ಫಸ್ಟ್ ನಂಬರ್ ಪಡೆಯುವಂತಹ ಹಾರುವ ಪಕ್ಷಿ ಭವ.

ಫೈನಲ್ ರಿಸಲ್ಟ್ನಲ್ಲಿ ಫಸ್ಟ ನಂಬರ್ ಪಡೆಯುವುದಕ್ಕಾಗಿ:- 1. ಹೃದಯದ ಅವಿನಾಶಿ ವೈರಾಗ್ಯದ ಮುಖಾಂತರ ಕಳೆದು ಹೋದ ಮಾತುಗಳಿಗೆ ಸಂಸ್ಕಾರರೂಪಿ ಬೀಜವನ್ನು ಸುಟ್ಟು ಹಾಕಿ ಬಿಡಿ. 2. ಅಮೃತವೇಳೆಯಿಂದ ರಾತ್ರಿಯವರೆಗೆ ಈಶ್ವರೀಯ ನಿಯಮ ಮರ್ಯಾದೆಗಳನ್ನು ಸದಾ ಪಾಲನೆ ಮಾಡುವ ವ್ರತವನ್ನು ತೆಗೆದುಕೊಳ್ಳಿ ಮತ್ತು 3. ಮನಸ್ಸಿನ ಮೂಲಕ, ವಾಣಿಯ ಮೂಲಕ ಅಥವಾ ಸಂಬಂಧ ಸಂಪರ್ಕದ ಮೂಲಕ ನಿರಂತರ ಮಹಾದಾನಿಯಾಗಿರಿ, ಪುಣ್ಯಾತ್ಮ ಆಗಿರಿ ದಾನ, ಪುಣ್ಯ ಮಾಡುತ್ತಿರಿ. ಯಾವಾಗ ಈ ರೀತಿಯ ಹೈ ಜಂಪ್ ಹಾಕುವ ಪುರುಷಾರ್ಥ ಮಾಡುವಿರಿ. ಆಗ ಹಾರುವ ಪಕ್ಷಿಯಾಗಿ ಫೈನಲ್ ರಿಸಲ್ಟ್ನಲ್ಲಿ ನಂಬರ್ವನ್ ಆಗಲು ಸಾಧ್ಯ.

ಸ್ಲೋಗನ್:
ವೃತ್ತಿಯ ಮುಖಾಂತರ ವಾಯುಮಂಡಲವನ್ನು ಶಕ್ತಿಶಾಲಿಯನ್ನಾಗಿ ಮಾಡುವುದೇ ಅಂತಿಮ ಪುರುಷಾರ್ಥ ಹಾಗೂ ಸೇವೆಯಾಗಿದೆ.