09.11.20 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮ್ಮ
ಈ ಸಮಯವು ಬಹಳ-ಬಹಳ ಅಮೂಲ್ಯವಾಗಿದೆ ಆದ್ದರಿಂದ ಇದನ್ನು ವ್ಯರ್ಥವಾಗಿ ಕಳೆಯಬೇಡಿ, ಪಾತ್ರರನ್ನು ನೋಡಿ
ಜ್ಞಾನ ದಾನ ಮಾಡಿ”
ಪ್ರಶ್ನೆ:
ಗುಣಗಳ ಧಾರಣೆಯೂ
ಆಗುತ್ತಾ ಹೋಗಲಿ ಮತ್ತು ಚಲನೆಯೂ ಸುಧಾರಣೆಯಾಗುತ್ತಾ ಇರಲಿ - ಇದಕ್ಕೆ ಸಹಜ ವಿಧಿ ಏನಾಗಿದೆ?
ಉತ್ತರ:
ಏನನ್ನು ತಂದೆಯು ತಿಳಿಸಿದ್ದಾರೆಯೋ ಅದನ್ನು ಅನ್ಯರಿಗೂ ತಿಳಿಸಿ ಜ್ಞಾನ ಧನದ ದಾನ ಮಾಡಿ, ಆಗ ಗುಣಗಳ
ಧಾರಣೆಯು ಸಹಜವಾಗಿ ಆಗುತ್ತಾಇರುವುದು, ಚಲನೆಯೂ ಸುಧಾರಣೆಯಾಗುತ್ತಾ ಇರುವುದು. ಯಾರ ಬುದ್ಧಿಯಲ್ಲಿ
ಈ ಜ್ಞಾನವಿರುವುದಿಲ್ಲವೋ, ಜ್ಞಾನ ಧನದ ದಾನ ಮಾಡುವುದಿಲ್ಲವೋ ಅವರು ಜಿಪುಣರಾಗಿದ್ದಾರೆ. ಅಂತಹವರು
ವ್ಯರ್ಥವಾಗಿ ತಮಗೇ ನಷ್ಟ ಮಾಡಿಕೊಳ್ಳುತ್ತಾರೆ.
ಗೀತೆ:
ಬಾಲ್ಯದ
ದಿನಗಳನ್ನು ಮರೆಯಬಾರದು...........
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಗೀತೆಯನ್ನು ಕೇಳಿದಿರಿ, ಅರ್ಥವನ್ನಂತೂ ಚೆನ್ನಾಗಿ ತಿಳಿದುಕೊಂಡಿರಿ.
ನಾವಾತ್ಮರಾಗಿದ್ದೇವೆ ಮತ್ತು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ, ಇದನ್ನು ಮರೆಯಬೇಡಿ. ಈಗೀಗ
ತಂದೆಯ ನೆನಪಿನಲ್ಲಿ ಹರ್ಷಿತರಾಗಿರುತ್ತೀರಿ ಮತ್ತು ಈಗೀಗ ನೆನಪನ್ನು ಮರೆಯುವ ಕಾರಣ ಚಿಂತೆಯಲ್ಲಿ
ತೊಡಗುತ್ತೀರಿ. ಈಗೀಗ ಸಾಯುತ್ತೀರಿ ಮತ್ತು ಈಗೀಗ ಬದುಕುತ್ತೀರಿ ಅರ್ಥಾತ್ ಈಗೀಗ ಬೇಹದ್ದಿನ ತಂದೆಯ
ಮಕ್ಕಳಾಗುತ್ತೀರಿ ಮತ್ತೆ ಈಗೀಗ ದೈಹಿಕ ಪರಿವಾರದ ಕಡೆ ಹೊರಟು ಹೋಗುತ್ತೀರಿ. ಆದ್ದರಿಂದಲೇ ತಂದೆಯು
ಹೇಳುತ್ತಾರೆ - ಇಂದು ನಗುತ್ತಾ ನಾಳೆ ಅಳಬೇಡಿ, ಇದು ಗೀತೆಯ ಅರ್ಥವಾಗಿದೆ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಮನುಷ್ಯರು ಶಾಂತಿಗಾಗಿಯೇ ಬಹಳಷ್ಟು ಅಲೆದಾಡುತ್ತಾರೆ,
ತೀರ್ಥ ಯಾತ್ರೆಗಳಿಗೆ ಹೋಗುತ್ತಾರೆ ಆದರೆ ಅಲೆದಾಡುವುದರಿಂದ ಶಾಂತಿ ಸಿಗುತ್ತದೆಯಂದಲ್ಲ. ಇದೊಂದೇ
ಸಂಗಮಯುಗವಾಗಿದೆ ಯಾವಾಗ ತಂದೆಯು ಬಂದು ತಿಳಿಸಿಕೊಡುತ್ತಾರೆ. ಮೊಟ್ಟ ಮೊದಲಿಗೆ ತಮ್ಮನ್ನು
ಅರಿತುಕೊಳ್ಳಿ, ಆತ್ಮವು ಶಾಂತ ಸ್ವರೂಪನಾಗಿದೆ, ಇರುವ ಸ್ಥಾನವೂ ಶಾಂತಿಧಾಮವಾಗಿದೆ. ಇಲ್ಲಿ ಬಂದಾಗ
ಕರ್ಮವನ್ನು ಅವಶ್ಯವಾಗಿ ಮಾಡಬೇಕಾಗುತ್ತದೆ. ತಮ್ಮ ಶಾಂತಿಧಾಮದಲ್ಲಿದ್ದಾಗ ಶಾಂತವಾಗಿರುತ್ತೀರಿ.
ಸತ್ಯಯುಗದಲ್ಲಿಯೂ ಶಾಂತಿಯಿರುತ್ತದೆ. ಸುಖ, ಶಾಂತಿ ಎರಡೂ ಇರುತ್ತದೆ. ಶಾಂತಿಧಾಮಕ್ಕೆ ಸುಖಧಾಮವೆಂದು
ಹೇಳುವುದಿಲ್ಲ. ಎಲ್ಲಿ ಸುಖವಿದೆಯೋ ಅದಕ್ಕೆ ಸುಖಧಾಮವೆಂತಲೂ, ಎಲ್ಲಿ ದುಃಖವಿದೆಯೋ ಅದಕ್ಕೆ
ದುಃಖಧಾಮವೆಂತಲೂ ಹೇಳುತ್ತಾರೆ. ಇವೆಲ್ಲಾ ಮಾತುಗಳನ್ನು ನೀವು ತಿಳಿದುಕೊಳ್ಳುತ್ತಿದ್ದೀರಿ.
ಇದೆಲ್ಲವನ್ನೂ ಯಾರಿಗಾದರೂ ತಿಳಿಸಬೇಕೆಂದರೆ ಸನ್ಮುಖದಲ್ಲಿಯೇ ತಿಳಿಸಲಾಗುತ್ತದೆ. ಪ್ರದರ್ಶನಿಯಲ್ಲಿ
ಯಾರೇ ಒಳ ಪ್ರವೇಶಿಸುತ್ತಾರೆಂದರೆ ಅವರಿಗೆ ಮೊಟ್ಟ ಮೊದಲಿಗೆ ತಂದೆಯ ಪರಿಚಯವನ್ನೇ ಕೊಡಬೇಕು.
ತಿಳಿಸಿಕೊಡಿ, ಆತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ, ಅವರೇ ಗೀತೆಯ ಭಗವಂತನಾಗಿದ್ದಾರೆ,
ಉಳಿದೆಲ್ಲರೂ ಆತ್ಮರಾಗಿದ್ದೇವೆ. ಆತ್ಮವು ಶರೀರವನ್ನು ಬಿಡುತ್ತದೆ ಮತ್ತು ತೆಗೆದುಕೊಳ್ಳುತ್ತದೆ,
ಶರೀರದ ಹೆಸರೇ ಬದಲಾಗುತ್ತದೆ, ಆತ್ಮದ ಹೆಸರು ಬದಲಾಗುವುದಿಲ್ಲ ಅಂದಾಗ ನೀವು ಮಕ್ಕಳು ತಿಳಿಸಬಹುದು
- ಬೇಹದ್ದಿನ ತಂದೆಯಿಂದಲೇ ಸುಖದ ಆಸ್ತಿಯು ಸಿಗುತ್ತದೆ, ತಂದೆಯು ಸುಖದ ಸೃಷ್ಟಿಯನ್ನು ಸ್ಥಾಪನೆ
ಮಾಡುತ್ತಾರೆ. ದುಃಖದ ಸೃಷ್ಟಿಯನ್ನು ತಂದೆಯು ರಚಿಸಿದರೆಂದು ಹೇಳುವುದಿಲ್ಲ. ಭಾರತದಲ್ಲಿ
ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ. ಚಿತ್ರವೂ ಇದೆ - ಸುಖದ ಆಸ್ತಿಯು ಸಿಗುತ್ತದೆ ಎಂಬುದನ್ನು
ಇದರ ಮೂಲಕ ತಿಳಿಸಿ. ಒಂದುವೇಳೆ ಇದು ನಿಮ್ಮ ಕಲ್ಪನೆಯಂದು ಅವರು ಹೇಳಿದರೆ ಅವರನ್ನು ಬಿಟ್ಟು
ಬಿಡಬೇಕು. ಕಲ್ಪನೆಯೆಂದು ತಿಳಿದುಕೊಳ್ಳುವವರು ಮತ್ತೇನನ್ನೂ ತಿಳಿದುಕೊಳ್ಳುವುದಿಲ್ಲ. ನಿಮ್ಮ ಸಮಯವು
ಬಹಳ ಅಮೂಲ್ಯವಾಗಿದೆ. ಇಡೀ ಪ್ರಪಂಚದಲ್ಲಿ ನಿಮ್ಮಷ್ಟು ಅಮೂಲ್ಯ ಸಮಯವು ಮತ್ತ್ಯಾರಿಗೂ ಇಲ್ಲ.
ದೊಡ್ಡ-ದೊಡ್ಡ ಮನುಷ್ಯರ ಸಮಯವು ಅಮೂಲ್ಯವಾಗಿರುತ್ತದೆ. ತಂದೆಯ ಸಮಯವು ಎಷ್ಟು ಅಮೂಲ್ಯವಾಗಿದೆ!
ತಂದೆಯು ಹೇಗಿದ್ದವರನ್ನು ಹೇಗೆ ಮಾಡಿಬಿಡುತ್ತಾರೆ ಅಂದಾಗ ತಂದೆಯು ನೀವು ಮಕ್ಕಳಿಗೇ ಹೇಳುತ್ತಾರೆ -
ಮಕ್ಕಳೇ, ನೀವು ತಮ್ಮ ಅಮೂಲ್ಯ ಸಮಯವನ್ನು ಕಳೆಯಬೇಡಿ, ಪಾತ್ರರಿಗೇ ಜ್ಞಾನ ದಾನ ಮಾಡಿ, ಪಾತ್ರರಿಗೇ
ತಿಳಿಸಿ. ಎಲ್ಲಾ ಮಕ್ಕಳು ತಿಳಿದುಕೊಳ್ಳುವುದಿಲ್ಲ, ತಿಳಿದುಕೊಳ್ಳುವಷ್ಟು ಬುದ್ಧಿಯೂ ಇಲ್ಲ. ಮೊಟ್ಟ
ಮೊದಲಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ನಾವಾತ್ಮಗಳ ತಂದೆಯು ಶಿವನಾಗಿದ್ದಾರೆ ಎಂಬುದನ್ನು
ಎಲ್ಲಿಯವರೆಗೆ ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇನ್ನೇನನ್ನೂ ತಿಳಿದುಕೊಳ್ಳಲು
ಸಾಧ್ಯವಿಲ್ಲ ಅಂದಮೇಲೆ ಅಂತಹವರಿಗೆ ಬಹಳ ಪ್ರೀತಿ, ನಮ್ರತೆಯಿಂದ ತಿಳಿಸಿ ಅಲ್ಲಿಂದ ರವಾನೆ
ಮಾಡಿಬಿಡಬೇಕು ಏಕೆಂದರೆ ಆಸುರೀ ಸಂಪ್ರದಾಯದವರು ಜಗಳ ಮಾಡುವುದರಲ್ಲಿಯೂ ನಿಧಾನಿಸುವುದಿಲ್ಲ.
ಸರ್ಕಾರವು ವಿದ್ಯಾರ್ಥಿಗಳಿಗೆ ಎಷ್ಟೊಂದು ಮಹಿಮೆ ಮಾಡುತ್ತದೆ, ಅವರಿಗಾಗಿ ಎಷ್ಟೊಂದು ಪ್ರಬಂಧ
ಮಾಡುತ್ತದೆ ಏಕೆಂದರೆ ಕಾಲೇಜಿನ ವಿದ್ಯಾರ್ಥಿಗಳೇ ಮೊಟ್ಟ ಮೊದಲಿಗೆ ಕಲ್ಲನ್ನೆಸೆಯುವುದಕ್ಕೂ
ಆರಂಭಿಸುತ್ತಾರೆ, ಆವೇಶವಿರುತ್ತದೆಯಲ್ಲವೆ. ವೃದ್ಧರು ಅಥವಾ ಮಾತೆಯರಂತೂ ಇಷ್ಟು ಜೋರಾಗಿ
ಕಲ್ಲುಗಳನ್ನೆಸೆಯಲು ಸಾಧ್ಯವಿಲ್ಲ. ಬಹುತೇಕವಾಗಿ ವಿದ್ಯಾರ್ಥಿಗಳಿಗೆ ಆವೇಶವಿರುತ್ತದೆ, ಅಂತಹವರನ್ನೇ
ಯುದ್ಧಕ್ಕಾಗಿ ತಯಾರು ಮಾಡುತ್ತಾರೆ. ಈಗ ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ - ನೀವು ಉಲ್ಟಾ ಆಗಿ
ಬಿಟ್ಟಿದ್ದೀರಿ, ತಮ್ಮನ್ನು ಆತ್ಮನ ಬದಲು ಶರೀರವೆಂದು ತಿಳಿಯುತ್ತೀರಿ, ಈಗ ತಂದೆಯು ನಿಮ್ಮನ್ನು
ಸರಿಪಡಿಸುತ್ತಿದ್ದಾರೆ. ರಾತ್ರಿ-ಹಗಲಿನ ಅಂತರವಾಗಿ ಬಿಡುತ್ತದೆ! ನೀವು ತಲೆ ಕೆಳಕಾಗಿದ್ದವರು ಸೀದಾ
ಆಗುವುದರಿಂದ ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಈಗ ನೀವು ತಿಳಿದುಕೊಳ್ಳುತ್ತೀರಿ - ಅರ್ಧಕಲ್ಪ
ನಾವು ಉಲ್ಟಾ ಆಗಿದ್ದೆವು, ಈಗ ತಂದೆಯು ಅರ್ಧ ಕಲ್ಪಕ್ಕಾಗಿ ಸುಲ್ಟಾ ಮಾಡುತ್ತಾರೆ. ಅಲ್ಲಾನ
ಮಕ್ಕಳಾಗಿದ್ದೇ ಆದರೆ ವಿಶ್ವದ ರಾಜ್ಯಭಾಗ್ಯದ ಆಸ್ತಿಯು ಸಿಗುತ್ತದೆ. ರಾವಣನು ಮತ್ತೆ ಉಲ್ಟಾ ಮಾಡಿ
ಬಿಡುತ್ತಾನೆ ಆದ್ದರಿಂದ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ ಮತ್ತೆ ಇಳಿಯತೊಡಗುತ್ತೀರಿ. ರಾಮ
ರಾಜ್ಯ ಮತ್ತು ರಾವಣ ರಾಜ್ಯವನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ನೀವು ತಂದೆಯ
ನೆನಪಿನಲ್ಲಿರಬೇಕಾಗಿದೆ. ಭಲೆ ಶರೀರ ನಿರ್ವಹಣೆಗಾಗಿ ಕರ್ಮವನ್ನೂ ಮಾಡಬೇಕು, ಆದರೂ ಬಹಳಷ್ಟು ಸಮಯ
ಸಿಗುತ್ತದೆ. ಯಾರೂ ಜಿಜ್ಞಾಸುಗಳಿಲ್ಲ ಅಥವಾ ಕೆಲಸವಿಲ್ಲವೆಂದರೆ ತಂದೆಯ ನೆನಪಿನಲ್ಲಿ ಕುಳಿತುಬಿಡಿ.
ಅದಂತೂ ಅಲ್ಪಕಾಲದ ಸಂಪಾದನೆಯಾಗಿದೆ, ನಿಮ್ಮದು ಇದು ಸದಾಕಾಲದ ಸಂಪಾದನೆಯಾಗಿದೆ ಆದ್ದರಿಂದ
ಇದರಲ್ಲಿಯೇ ಹೆಚ್ಚು ಗಮನ ಕೊಡಬೇಕಾಗಿದೆ. ಮಾಯೆಯು ಪದೇ-ಪದೇ ಬೇರೆ-ಬೇರೆ ವಿಚಾರಗಳನ್ನು
ತೆಗೆದುಕೊಂಡು ಬರುತ್ತದೆ. ಇದಂತೂ ಆಗಿಯೇ ಆಗುತ್ತದೆ, ಮಾಯೆಯು ಮರೆಸುತ್ತಿರುತ್ತದೆ. ಇದರ ಮೇಲೆ
ಒಂದು ನಾಟಕವನ್ನು ತೋರಿಸುತ್ತಾರೆ - ಪ್ರಭು ಈ ರೀತಿ ಹೇಳುತ್ತಾರೆ, ಮಾಯೆಯು ಈ ರೀತಿ
ಹೇಳುತ್ತದೆಯೆಂದು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ಇದರಲ್ಲಿಯೂ
ವಿಘ್ನಗಳು ಬರುತ್ತವೆ. ಮತ್ತ್ಯಾವುದೇ ಮಾತಿನಲ್ಲಿ ಇಷ್ಟು ವಿಘ್ನಗಳು ಬರುವುದಿಲ್ಲ.
ಪವಿತ್ರತೆಗಾಗಿಯೇ ಎಷ್ಟೊಂದು ಪೆಟ್ಟನ್ನು ತಿನ್ನುತ್ತಾರೆ. ಭಾಗವತ ಇತ್ಯಾದಿಗಳಲ್ಲಿ ಈ ಸಮಯದ್ದೇ
ಗಾಯನವಿದೆ. ಪೂತನೆಯರು, ಶೂರ್ಪನಖಿಯರೂ ಇದ್ದಾರೆ. ಇವೆಲ್ಲವೂ ಈ ಸಮಯದ ಮಾತುಗಳಾಗಿವೆ ಯಾವಾಗ ತಂದೆಯು
ಬಂದು ಪವಿತ್ರರನ್ನಾಗಿ ಮಾಡುತ್ತಾರೆ. ಉತ್ಸವ ಇತ್ಯಾದಿಗಳೇನೆಲ್ಲವೂ ಆಚರಿಸುತ್ತಾರೆಯೋ ಅದೆಲ್ಲವೂ
ಕಳೆದು ಹೋದದನ್ನು ಹಬ್ಬಗಳ ರೂಪದಲ್ಲಿ ಆಚರಿಸುತ್ತಾ ಬರುತ್ತಾರೆ. ಕಳೆದು ಹೋದುದರ ಮಹಿಮೆ
ಮಾಡುತ್ತಾರೆ. ರಾಮ ರಾಜ್ಯದ ಮಹಿಮೆ ಮಾಡುತ್ತಾರೆ ಏಕೆಂದರೆ ಅದು ಕಳೆದು ಹೋಗಿದೆ. ಹೇಗೆ ಕ್ರೈಸ್ಟ್
ಮೊದಲಾದವರು ಬಂದರು, ಧರ್ಮ ಸ್ಥಾಪನೆ ಮಾಡಿ ಹೋದರು. ತಿಥಿ-ತಾರೀಖನ್ನು ಬರೆಯುತ್ತಾರೆ ಮತ್ತು ಅವರ
ಜನ್ಮ ದಿನವನ್ನಾಚರಿಸುತ್ತಾ ಬರುತ್ತಾರೆ. ಭಕ್ತಿಮಾರ್ಗದಲ್ಲಿಯೂ ಅರ್ಧ ಕಲ್ಪ ಇದೇ ಆಚಾರವು
ನಡೆಯುತ್ತದೆ. ಇದು ಸತ್ಯಯುಗದಲ್ಲಿರುವುದಿಲ್ಲ. ಈ ಪ್ರಪಂಚವೇ ಸಮಾಪ್ತಿಯಾಗಲಿದೆ, ಈ ಮಾತುಗಳನ್ನು
ನಿಮ್ಮಲ್ಲಿಯೂ ಕೆಲವರೇ ಅರಿತುಕೊಳ್ಳುತ್ತಾರೆ. ತಂದೆಯು ತಿಳಿಸಿದ್ದಾರೆ - ಎಲ್ಲಾ ಧರ್ಮಗಳು
ಅಂತ್ಯದಲ್ಲಿ ಹಿಂತಿರುಗಿ ಹೋಗಬೇಕಾಗಿದೆ. ಎಲ್ಲಾ ಆತ್ಮಗಳು ಶರೀರವನ್ನು ಬಿಟ್ಟು ಹೊರಟು ಹೋಗುತ್ತೀರಿ.
ನೀವು ಮಕ್ಕಳ ಬುದ್ಧಿಯಲ್ಲಿದೆ - ಇನ್ನು ಕೆಲವು ದಿನಗಳು ಮಾತ್ರವೇ ಇದೆ, ಇದೆಲ್ಲವೂ ಪುನಃ
ವಿನಾಶವಾಗುವುದು. ಸತ್ಯಯುಗದಲ್ಲಿ ಕೇವಲ ನಾವೇ ಬರುತ್ತೇವೆ, ಎಲ್ಲಾ ಆತ್ಮರು ಬರುವುದಿಲ್ಲ. ಯಾರು
ಕಲ್ಪದ ಹಿಂದೆ ಬಂದಿದ್ದರೋ ಅವರೇ ನಂಬರ್ವಾರ್ ಬರುತ್ತಾರೆ. ಅವರೇ ಚೆನ್ನಾಗಿ ಓದಿ,
ಓದಿಸುತ್ತಿದ್ದಾರೆ. ಯಾರು ಚೆನ್ನಾಗಿ ಓದುವರೋ ಅವರು ನಂಬರ್ವಾರ್ ವರ್ಗಾಯಿತರಾಗುತ್ತಾರೆ. ನೀವೂ ಸಹ
ವರ್ಗಾಯಿತರಾಗುತ್ತೀರಿ. ನಿಮಗೆ ತಿಳಿದಿದೆ, ಯಾರೆಲ್ಲಾ ಆತ್ಮರಿದ್ದಾರೆಯೋ ಎಲ್ಲರೂ ನಂಬರ್ವಾರ್
ಶಾಂತಿಧಾಮದಲ್ಲಿ ಹೋಗಿ ಕುಳಿತುಕೊಳ್ಳುವರು ಮತ್ತೆ ನಂಬರ್ವಾರ್ ಬರತೊಡಗುತ್ತಾರೆ. ತಂದೆಯು ಪುನಃ
ಮೂಲಮಾತನ್ನು ಹೇಳುತ್ತಾರೆ - ತಂದೆಯ ಪರಿಚಯ ಕೊಡಬೇಕಾಗಿದೆ. ತಂದೆಯ ಹೆಸರು ಸದಾ ಬಾಯಲ್ಲಿರಲಿ.
ಆತ್ಮ ಎಂದರೇನು? ಪರಮಾತ್ಮ ಯಾರು? ಎಂಬುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಭೃಕುಟಿಯ
ಮಧ್ಯದಲ್ಲಿ ಹೊಳೆಯುವ ನಕ್ಷತ್ರವೆಂದು ಭಲೆ ಹಾಡುತ್ತಾರೆ, ಮತ್ತೇನನ್ನೂ ತಿಳಿದುಕೊಂಡಿಲ್ಲ. ಆದರೂ ಈ
ಜ್ಞಾನವು ಕೆಲವರ ಬುದ್ಧಿಯಲ್ಲಿಯೇ ಇದೆ. ಪದೇ-ಪದೇ ಮರೆತು ಹೋಗುತ್ತಾರೆ. ಮೊಟ್ಟ ಮೊದಲಿಗೆ ತಿಳಿಸಿ,
ತಂದೆಯೇ ಪತಿತ-ಪಾವನನಾಗಿದ್ದಾರೆ, ಆಸ್ತಿಯನ್ನೂ ಕೊಡುತ್ತಾರೆ ತಾನೆ! ರಾಜಾಧಿ ರಾಜರನ್ನಾಗಿ
ಮಾಡುತ್ತಾರೆ. ನಿಮ್ಮ ಬಳಿ ಕೊನೆಗೂ ಆ ದಿನ ಇಂದು ಬಂದಿತೆಂಬ ಗೀತೆಯಿದೆ. ಯಾವ ಮಾರ್ಗವನ್ನು
ಭಕ್ತಿಮಾರ್ಗದಲ್ಲಿ ಬಹಳ ಹುಡುಕುತ್ತಿದ್ದೆವು, ಅದು ಈಗ ಸಿಕ್ಕಿ ಬಿಟ್ಟಿತು. ದ್ವಾಪರದಿಂದ ಭಕ್ತಿಯು
ಆರಂಭವಾಗುತ್ತದೆ ನಂತರ ಕೊನೆಯಲ್ಲಿ ತಂದೆಯು ಮಾರ್ಗವನ್ನು ತಿಳಿಸುತ್ತಾರೆ. ಇದಕ್ಕೆ ಅಂತಿಮ
ಸಮಯವೆಂದೂ ಹೇಳಲಾಗುತ್ತದೆ. ಆಸುರೀ ಬಂಧನದ ಎಲ್ಲಾ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಂಡು
ಹಿಂತಿರುಗಿ ಹೋಗುತ್ತೀರಿ. 84 ಜನ್ಮಗಳ ಪಾತ್ರವನ್ನು ನೀವು ತಿಳಿದುಕೊಂಡಿದ್ದೀರಿ. ಈ ಪಾತ್ರವು
ಅಭಿನಯವಾಗುತ್ತಲೇ ಇರುತ್ತದೆ, ಶಿವ ಜಯಂತಿಯನ್ನಾಚರಿಸುತ್ತಾರೆಂದಲ್ಲ. ಅವಶ್ಯವಾಗಿ ಶಿವನು
ಬಂದಿರಬೇಕು, ಏನಾದರೂ ಕರ್ತವ್ಯವನ್ನು ಮಾಡಿರಬೇಕಲ್ಲವೆ. ಅವರೇ ಹೊಸ ಪ್ರಪಂಚವನ್ನಾಗಿ ಮಾಡುತ್ತಾರೆ.
ಈ ಲಕ್ಷ್ಮೀ-ನಾರಾಯಣರು ಮಾಲೀಕರಾಗಿದ್ದರು, ಈಗ ಇಲ್ಲ. ಪುನಃ ತಂದೆಯು ರಾಜಯೋಗವನ್ನು ಕಲಿಸುತ್ತಾರೆ.
ಈ ರಾಜಯೋಗವನ್ನು ಕಲಿಸಿದ್ದರು ಎಂಬುದು ನಿಮ್ಮ ವಿನಃ ಮತ್ತ್ಯಾರ ಬಾಯಲ್ಲಿಯೂ ಬರಲು ಸಾಧ್ಯವಿಲ್ಲ.
ನೀವೇ ತಿಳಿಸಿಕೊಡುತ್ತೀರಿ – ಶಿವ ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ಶಿವೋಹಂ (ನಾನೇ
ಶಿವ) ಎಂದು ಉಚ್ಛಾರಣೆ ಮಾಡುತ್ತಾರೆ, ಇದೂ ಸಹ ತಪ್ಪಾಗಿದೆ. ನಿಮಗೆ ಈಗ ತಂದೆಯು ತಿಳಿಸಿದ್ದಾರೆ,
ನೀವೇ ಚಕ್ರವನ್ನು ಸುತ್ತಿ ಬ್ರಾಹ್ಮಣ ಕುಲದಿಂದ ದೇವತಾ ಕುಲದಲ್ಲಿ ಬರುತ್ತೀರಿ. ಹಮ್ ಸೋ, ಸೋ ಹಮ್ನ
ಅರ್ಥವನ್ನು ನೀವೇ ತಿಳಿಸಬಲ್ಲಿರಿ. ನಾವೀಗ ಬ್ರಾಹ್ಮಣರಾಗಿದ್ದೇವೆ, ಇದು 84 ಜನ್ಮಗಳ ಚಕ್ರವಾಗಿದೆ,
ಇದರಲ್ಲಿ ಯಾವುದೇ ಮಂತ್ರವನ್ನು ಜಪಿಸಬೇಕಾಗಿಲ್ಲ, ಬುದ್ಧಿಯಲ್ಲಿ ಅರ್ಥವಿರಬೇಕು. ಅದೂ ಸಹ
ಸೆಕೆಂಡಿನ ಮಾತಾಗಿದೆ. ಹೇಗೆ ಬೀಜ ಮತ್ತು ವೃಕ್ಷವು ಸೆಕೆಂಡಿನಲ್ಲಿ ಎಲ್ಲವೂ ಗಮನಕ್ಕೆ ಬಂದು
ಬಿಡುತ್ತದೆಯೋ ಹಾಗೆಯೇ ಹಮ್ ಸೋ, ಸೋ ಹಮ್ನ ರಹಸ್ಯವೂ ಸಹ ಸೆಕೆಂಡಿನಲ್ಲಿ ಬಂದು ಬಿಡುತ್ತದೆ. ನಾವು
ಈ ರೀತಿಯಾಗಿ ಚಕ್ರವನ್ನು ಸುತ್ತುತ್ತೇವೆ, ಇದಕ್ಕೆ ಸ್ವದರ್ಶನ ಚಕ್ರವೆಂದು ಹೇಳಲಾಗುತ್ತದೆ. ನಾವು
ಸ್ವದರ್ಶನ ಚಕ್ರಧಾರಿಗಳೆಂದು ಯಾರಿಗಾದರೂ ನೀವು ಹೇಳಿದರೆ ಅವರು ಒಪ್ಪುವುದಿಲ್ಲ. ಇವರು ಎಲ್ಲಾ
ಬಿರುದುಗಳನ್ನು ತಮ್ಮ ಮೇಲೆ ಇಟ್ಟುಕೊಳ್ಳುತ್ತಾರೆಂದು ಹೇಳುತ್ತಾರೆ. ನೀವು ಇದನ್ನು ತಿಳಿಸಿ, ನಾವು
ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ, ಈ ಚಕ್ರವು ಸುತ್ತುತ್ತದೆ. ಆತ್ಮಕ್ಕೆ ತನ್ನ 84
ಜನ್ಮಗಳ ದರ್ಶನವಾಗುತ್ತದೆ, ಇದಕ್ಕೆ ಸ್ವದರ್ಶನ ಚಕ್ರಧಾರಿಗಳಾಗುವುದು ಎಂದು ಹೇಳಲಾಗುತ್ತದೆ.
ಇದನ್ನು ಕೇಳಿ ಆಶ್ಚರ್ಯಚಕಿತರಾಗುತ್ತಾರೆ - ಇವರು ಏನೇನನ್ನೋ ಹೇಳುತ್ತಾರೆ ಎಂದುಕೊಳ್ಳುತ್ತಾರೆ.
ಯಾವಾಗ ನೀವು ತಂದೆಯ ಪರಿಚಯ ಕೊಡುತ್ತೀರೋ ಆಗ ಇದು ಅಸತ್ಯವೆನಿಸುವುದಿಲ್ಲ, ತಂದೆಯನ್ನು ನೆನಪು
ಮಾಡುತ್ತಾರೆ. ಬಾಬಾ, ತಾವು ಬಂದರೆ ನಾವು ಬಲಿಹಾರಿಯಾಗುತ್ತೇವೆ, ತಮ್ಮನ್ನೇ ನೆನಪು ಮಾಡುತ್ತೇವೆಂದು
ಹಾಡುತ್ತಾರೆ. ತಂದೆಯು ಹೇಳುತ್ತಾರೆ - ನೀವೂ ಸಹ ಹೇಳುತ್ತಿದ್ದಿರಲ್ಲವೆ, ಈಗ ಪುನಃ ನಿಮಗೆ ನೆನಪು
ತರಿಸುತ್ತಿದ್ದೇನೆ. ನಷ್ಟಮೋಹಿಯಾಗಿ ಈ ದೇಹದಿಂದಲೂ ನಷ್ಟಮೋಹಿಯಾಗಿ ಬಿಡಿ, ತಮ್ಮನ್ನು ಆತ್ಮನೆಂದು
ತಿಳಿದು ನನ್ನನ್ನೇ ನೆನಪು ಮಾಡಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುವವು. ಈ ಮಧುರ ಮಾತು ಎಲ್ಲರಿಗೂ
ಇಷ್ಟವಾಗುವುದು. ತಂದೆಯ ಪರಿಚಯವಿಲ್ಲವೆಂದರೆ ಯಾವುದಾದರೊಂದು ಮಾತಿನಲ್ಲಿ ಸಂಶಯದಲ್ಲಿ ಬಂದು
ಬಿಡುತ್ತಾರೆ. ಆದ್ದರಿಂದ ತಂದೆಯ ಪರಿಚಯವಿರುವ 2-3 ಚಿತ್ರಗಳನ್ನು ಮುಂದಿಡಿ. ತಂದೆಯ ಪರಿಚಯ
ಸಿಕ್ಕಿದರೆ ಆಸ್ತಿಯ ಪರಿಚಯವೂ ಸಿಗುವುದು.
ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ಈ ಚಿತ್ರವನ್ನು
ಮಾಡಿಸಿ - ಡಬಲ್ ಕಿರೀಟಧಾರಿ ರಾಜರ ಮುಂದೆ ಸಿಂಗಲ್ ಕಿರೀಟಧಾರಿಗಳು ತಲೆ ಬಾಗುತ್ತಾರೆ. ತಾವೇ
ಪೂಜ್ಯ, ತಾವೇ ಪೂಜಾರಿಯ ರಹಸ್ಯವೂ ಸಹ ಅವರಿಗೆ ಅರ್ಥವಾಗಲಿ. ಮೊದಲು ತಂದೆಯ ಪೂಜೆ ಮಾಡುತ್ತಾರೆ
ಮತ್ತೆ ತಮ್ಮದೇ ಚಿತ್ರಗಳಿಗೆ ಪೂಜೆ ಮಾಡತೊಡಗುತ್ತಾರೆ. ಯಾರು ಪಾವನರು ಇದ್ದುಹೋಗಿದ್ದಾರೆಯೋ ಅವರ
ಚಿತ್ರಗಳನ್ನು ಮಾಡಿಸಿ ಪೂಜಿಸುತ್ತಾರೆ. ಈ ಜ್ಞಾನವು ನಿಮಗೆ ಈಗ ಸಿಕ್ಕಿದೆ. ಮೊದಲು ತಾವೇ ಪೂಜ್ಯ,
ತಾವೇ ಪೂಜಾರಿಯೆಂದು ಭಗವಂತನಿಗಾಗಿ ಹೇಳುತ್ತಿದ್ದಿರಿ. ಈಗ ನಿಮಗೆ ತಿಳಿಸಿದ್ದೇನೆ - ನೀವೇ ಈ
ಚಕ್ರದಲ್ಲಿ ಬರುತ್ತೀರಿ. ಈ ಜ್ಞಾನವು ಬುದ್ಧಿಯಲ್ಲಿ ಸದಾ ಇರುತ್ತದೆ ಅಂದಮೇಲೆ ಅನ್ಯರಿಗೂ
ತಿಳಿಸಬೇಕಾಗಿದೆ. ಧನ ದಾನ ಮಾಡಿದರೆ ಅದು ಎಂದೂ ಖಾಲಿಯಾಗುವುದಿಲ್ಲ..... ಯಾರು ಈ ಜ್ಞಾನ ಧನದ ದಾನ
ಮಾಡುವುದಿಲ್ಲವೋ ಅವರಿಗೆ ಜಿಪುಣರೆಂದು ಹೇಳಲಾಗುವುದು. ತಂದೆಯು ಏನನ್ನು ತಿಳಿಸಿದ್ದಾರೆಯೋ ಅದನ್ನು
ಅನ್ಯರಿಗೆ ತಿಳಿಸಬೇಕಾಗಿದೆ. ತಿಳಿಸದಿದ್ದರೆ ತಮಗೇ ನಷ್ಟ ಮಾಡಿಕೊಳ್ಳುತ್ತೀರಿ, ಗುಣಗಳೂ
ಧಾರಣೆಯಾಗುವುದಿಲ್ಲ. ಚಲನೆಯೂ ಸುಧಾರಣೆಯಾಗುವುದಿಲ್ಲ. ಪ್ರತಿಯೊಬ್ಬರೂ ತಮ್ಮನ್ನು
ಅರಿತುಕೊಳ್ಳಬಹುದು. ಈಗ ನಿಮಗೆ ತಿಳುವಳಿಕೆ ಸಿಕ್ಕಿದೆ, ಉಳಿದೆಲ್ಲರೂ ತಿಳುವಳಿಕೆಹೀನರಾಗಿದ್ದಾರೆ,
ನೀವೀಗ ಎಲ್ಲವನ್ನೂ ಅರಿತಿದ್ದೀರಿ. ತಂದೆಯು ತಿಳಿಸುತ್ತಾರೆ – ಒಂದು ಕಡೆ ದೈವೀ ಸಂಪ್ರದಾಯ,
ಇನ್ನೊಂದು ಕಡೆ ಆಸುರೀ ಸಂಪ್ರದಾಯವಿದೆ. ಬುದ್ಧಿಯಿಂದ ನೀವು ತಿಳಿದುಕೊಂಡಿದ್ದೀರಿ, ನಾವೀಗ
ಸಂಗಮಯುಗದಲ್ಲಿದ್ದೇವೆ. ಒಂದೇ ಮನೆಯಲ್ಲಿ ಒಬ್ಬರು ಸಂಗಮಯುಗದವರು, ಇನ್ನೊಬ್ಬರು ಕಲಿಯುಗದವರು
ಇಬ್ಬರೂ ಒಟ್ಟಿಗೆ ಇರುತ್ತಾರೆ. ಒಂದುವೇಳೆ ಜೊತೆಯಲ್ಲಿರುವವರು ಹಂಸವಾಗಲು ಯೋಗ್ಯವಿಲ್ಲವೆಂದರೆ
ಅದಕ್ಕಾಗಿ ಯುಕ್ತಿಯನ್ನು ರಚಿಸಬೇಕು ಇಲ್ಲವಾದರೆ ವಿಘ್ನಗಳನ್ನು ಹಾಕುತ್ತಿರುತ್ತಾರೆ ಆದ್ದರಿಂದ
ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಪರಿಶ್ರಮ ಪಡಬೇಕಾಗಿದೆ ಇಲ್ಲವೆಂದರೆ ತೊಂದರೆ
ಕೊಡುತ್ತಿರುತ್ತಾರೆ ಆಗ ಯುಕ್ತಿಯಿಂದ ಅವರಿಂದ ದೂರ ಸರಿಯಬೇಕಾಗುತ್ತದೆ. ವಿಘ್ನಗಳಂತೂ ಬರುತ್ತವೆ,
ಇಂತಹ ಜ್ಞಾನವನ್ನು ನೀವೇ ಕೊಡುತ್ತೀರಿ, ನೀವು ಬಹಳ ಮಧುರರಾಗಬೇಕು ಮತ್ತು ನಷ್ಟಮೋಹಿಗಳಾಗಬೇಕು.
ಒಂದು ವಿಕಾರವನ್ನು ಬಿಟ್ಟರೆ ಅನ್ಯ ವಿಕಾರಗಳು ಕಿರಿ ಕಿರಿ ಮಾಡುತ್ತಿರುತ್ತವೆ. ಈ ರೀತಿ ತಿಳಿಯಿರಿ,
ಏನೆಲ್ಲವೂ ಆಗುತ್ತಿದೆಯೋ ಅದು ಕಲ್ಪದ ಹಿಂದಿನ ತರಹ ಎಂದು ತಿಳಿದು ಶಾಂತವಾಗಿರಬೇಕು. ಇದು ಡ್ರಾಮಾದ
ಪೂರ್ವ ನಿಶ್ಚಿತವೆಂದು ತಿಳಿಯಿರಿ. ಬಹಳ ಚೆನ್ನಾಗಿ ತಿಳಿಸುವ ಮಕ್ಕಳೂ ಸಹ ಬಿದ್ದು ಹೋಗುತ್ತಾರೆ.
ಬಹಳ ದೊಡ್ಡ ಪೆಟ್ಟು ತಿನ್ನುತ್ತಾರೆ ಅಂದಾಗ ಇವರು ಕಲ್ಪದ ಹಿಂದೆಯೂ ಸಹ ಪೆಟ್ಟು ತಿಂದಿದ್ದಾರೆಂದು
ತಿಳಿಯಲಾಗುತ್ತದೆ. ಪ್ರತಿಯೊಬ್ಬರೂ ತಮ್ಮನ್ನು ತಿಳಿದುಕೊಳ್ಳಬಹುದು, ಬಾಬಾ ನಾವು ಕ್ರೋಧದಲ್ಲಿ ಬಂದು
ಬಿಟ್ಟೆವು, ಈ ತಪ್ಪಾಯಿತೆಂದು ತಂದೆಗೆ ಬರೆಯುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ,
ಎಷ್ಟು ಸಾಧ್ಯವೋ ಅಷ್ಟು ನಿಯಂತ್ರಿಸಿ. ಎಂತೆಂತಹ ಮನುಷ್ಯರಿದ್ದಾರೆ! ಅಬಲೆಯರ ಮೇಲೆ ಎಷ್ಟು
ಹತ್ಯಾಚಾರಗಳಾಗುತ್ತವೆ. ಪುರುಷನು ಬಲಶಾಲಿಯಾಗಿರುತ್ತಾನೆ, ಸ್ತ್ರೀ ಅಬಲೆಯಾಗಿರುತ್ತಾಳೆ. ತಂದೆಯು
ನಿಮಗೆ ಈ ಗುಪ್ತ ಯುದ್ಧವನ್ನು ಕಲಿಸುತ್ತಾರೆ. ಇದರಿಂದ ನೀವು ರಾವಣನ ಮೇಲೆ ಜಯ ಗಳಿಸುತ್ತೀರಿ. ಈ
ಯುದ್ಧವು ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ, ನಿಮ್ಮಲ್ಲಿಯೂ ಕೆಲವರೇ ನಂಬರ್ವಾರ್
ಅರಿತುಕೊಳ್ಳುತ್ತಾರೆ. ಇದು ಸಂಪೂರ್ಣ ಹೊಸ ಮಾತಾಗಿದೆ. ನೀವೀಗ ಸುಖಧಾಮಕ್ಕಾಗಿ ಓದುತ್ತಿದ್ದೀರಿ,
ಇದೂ ಸಹ ನಿಮಗೆ ಈಗ ನೆನಪಿದೆ ನಂತರ ಮರೆತು ಹೋಗುತ್ತದೆ. ಮೂಲ ಮಾತು ನೆನಪಿನ ಯಾತ್ರೆಯಾಗಿದೆ,
ನೆನಪಿನಿಂದಲೇ ನಾವು ಪಾವನರಾಗಿ ಬಿಡುತ್ತೇವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಏನೇ ಆದರೂ
ಅದನ್ನು ಡ್ರಾಮಾದ ಪೂರ್ವ ನಿಶ್ಚಿತವೆಂದು ತಿಳಿದು ಶಾಂತವಾಗಿರಬೇಕು, ಕ್ರೋಧ ಮಾಡಬಾರದು. ಎಷ್ಟು
ಸಾಧ್ಯವೋ ಅಷ್ಟು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಿ, ಯುಕ್ತಿಯನ್ನು ರಚಿಸಿ ತಮ್ಮ ಸಮಾನರನ್ನಾಗಿ
ಮಾಡುವ ಪ್ರಯತ್ನ ಪಡಬೇಕು.
2. ಬಹಳ ಪ್ರೀತಿ ಮತ್ತು
ನಮ್ರತೆಯಿಂದ ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಎಲ್ಲರಿಗೆ ಇದೇ ಮಧುರಾತಿ ಮಧುರ ಮಾತನ್ನು
ತಿಳಿಸಿ - ತಂದೆಯು ಹೇಳುತ್ತಾರೆ, ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ, ಈ
ದೇಹದಿಂದ ನಷ್ಟಮೋಹಿಯಾಗಿರಿ.
ವರದಾನ:
ನಮ್ರತಾರೂಪಿ
ಕವಚದ ಮುಖಾಂತರ ವ್ಯರ್ಥದ ರಾವಣನನ್ನು ಸುಡುವಂತಹ ಸತ್ಯ ಸ್ನೇಹಿ, ಸಹಯೋಗಿ ಭವ.
ಸಂಘಟನೆಯಲ್ಲಿ ಯಾರು
ಎಷ್ಟೇ ನಿಮ್ಮ ಬಲಹೀನತೆಗಳನ್ನು ಹುಡುಕಲು ಪ್ರಯತ್ನ ಮಾಡಲಿ ಆದರೆ ಸ್ವಲ್ಪವೂ ಸಹ ಸಂಸ್ಕಾರ-ಸ್ವಭಾವದ
ಘರ್ಷಣೆ ಕಂಡುಬರಬಾರದು. ಒಂದುವೇಳೆ ಯಾರಾದರೂ ನಿಮಗೆ ಬೈಗುಳ ಮಾಡಲಿ, ಅವಮಾನವೂ ಸಹ ಮಾಡಲಿ ಆದರೆ
ನೀವು ಸಂತರಾಗಿ ಬಿಡಿ. ಒಂದುವೇಳೆ ಯಾರಾದರೂ ತಪ್ಪು ಮಾಡಿದರೂ ಸಹ ನೀವು ಸರಿಯಾಗಿರಿ. ಯರಾದರೂ
ಘರ್ಷಣೆ ಮಾಡಿದರೂ ಸಹ ನೀವು ಅವರಿಗೆ ಸ್ನೇಹದ ನೀರನ್ನು ನೀಡಿ. ಇದು ಏನು? ಹೀಗೆ ಏಕೆ? - ಈ ಸಂಕಲ್ಪ
ಮಾಡಿ ಬೆಂಕಿಗೆ ಎಣ್ಣೆಯನ್ನು ಸುರಿಯಬೇಡಿ. ನಮ್ರತೆಯ ಕವಚ ತೊಟ್ಟುಕೊಂಡಿರಿ. ಎಲ್ಲಿ ನಮ್ರತೆ
ಇರುತ್ತದೆ ಅಲ್ಲಿ ಸ್ನೇಹ ಮತ್ತು ಸಹಯೋಗವೂ ಸಹ ಅವಶ್ಯವಾಗಿ ಇರುತ್ತದೆ.
ಸ್ಲೋಗನ್:
ನನ್ನತನದ ಅನೇಕ ಮಿತವಾದ
ಭಾವನೆಗಳನ್ನು ಒಂದು “ನನ್ನ ಬಾಬಾ” ಎನ್ನುವುದರಲ್ಲಿ ಸಮಾವೇಶ ಮಾಡಿಬಿಡಿ.