03.11.20         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವೇ ಸತ್ಯ ಅಲೌಕಿಕ ಜಾದೂಗಾರರಾಗಿದ್ದೀರಿ, ನೀವು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಜಾದೂ ತೋರಿಸಬೇಕಾಗಿದೆ”

ಪ್ರಶ್ನೆ:
ಒಳ್ಳೆಯ ಪುರುಷಾರ್ಥಿ ವಿದ್ಯಾರ್ಥಿಗಳ ಲಕ್ಷಣಗಳೇನು?

ಉತ್ತರ:
ಅವರು ಪಾಸ್-ವಿತ್-ಆನರ್ ಆಗುವ ಅರ್ಥಾತ್ ವಿಜಯ ಮಾಲೆಯಲ್ಲಿ ಬರುವ ಲಕ್ಷ್ಯವನ್ನಿಡುತ್ತಾರೆ. ಅವರ ಬುದ್ಧಿಯಲ್ಲಿ ಒಬ್ಬ ತಂದೆಯ ನೆನಪೇ ಇರುತ್ತದೆ. ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳಿಂದ ಬುದ್ಧಿಯೋಗವನ್ನು ತೆಗೆದು ಒಬ್ಬ ತಂದೆಯೊಂದಿಗೆ ಪ್ರೀತಿಯನ್ನಿಡುತ್ತಾರೆ. ಇಂತಹ ಪುರುಷಾರ್ಥಿಗಳೇ ಮಾಲೆಯ ಮಣಿಯಾಗುತ್ತಾರೆ.

ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ಕುಳಿತು ತಿಳಿಸಿಕೊಡುತ್ತಾರೆ. ನೀವು ಆತ್ಮಿಕ ಮಕ್ಕಳು ಈಗ ಜಾದೂಗಾರ, ಜಾದೂಗಾರಿಣಿಯರಾಗಿ ಬಿಟ್ಟಿದ್ದೀರಿ, ಆದ್ದರಿಂದ ತಂದೆಯನ್ನೂ ಜಾದೂಗಾರನೆಂದು ಹೇಳುತ್ತಾರೆ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವಂತಹ ಜಾದೂಗಾರರು ಮತ್ತ್ಯಾರೂ ಇರುವುದಿಲ್ಲ. ಇದು ಜಾದೂವಾಗಿದೆಯಲ್ಲವೆ. ಎಷ್ಟು ದೊಡ್ಡ ಸಂಪಾದನೆ ಮಾಡಿಕೊಳ್ಳುವ ಮಾರ್ಗವನ್ನು ತಿಳಿಸುತ್ತೀರಿ. ಶಾಲೆಯಲ್ಲಿ ಶಿಕ್ಷಕರೂ ಸಹ ಸಂಪಾದನೆ ಮಾಡುವುದನ್ನು ಕಲಿಸುತ್ತಾರೆ. ವಿದ್ಯೆಯು ಸಂಪಾದನೆಯಾಗಿದೆಯಲ್ಲವೆ. ಭಕ್ತಿಮಾರ್ಗದ ಕಥೆಗಳು, ಶಾಸ್ತ್ರಗಳು ಇತ್ಯಾದಿಗಳನ್ನು ಕೇಳುವುದಕ್ಕೆ ವಿದ್ಯಾಭ್ಯಾಸವೆಂದು ಹೇಳುವುದಿಲ್ಲ. ಅದರಲ್ಲಿ ಯಾವುದೇ ಸಂಪಾದನೆಯಿಲ್ಲ. ಕೇವಲ ಅದರಲ್ಲಿ ಹಣ ಖರ್ಚಾಗುತ್ತದೆ. ತಂದೆಯು ತಿಳಿಸುತ್ತಾರೆ - ಭಕ್ತಿಮಾರ್ಗದಲ್ಲಿ ಚಿತ್ರಗಳನ್ನು ಮಾಡಿಸುತ್ತಾ, ಮಂದಿರಗಳನ್ನು ಕಟ್ಟಿಸುತ್ತಾ, ಭಕ್ತಿ ಮಾಡುತ್ತಾ-ಮಾಡುತ್ತಾ ನೀವು ಎಷ್ಟೊಂದು ಹಣವನ್ನು ಖರ್ಚು ಮಾಡಿದ್ದೀರಿ. ಶಿಕ್ಷಕರಾದರೂ ಸಂಪಾದನೆ ಮಾಡಿಸುತ್ತಾರೆ ಅದರಿಂದ ಜೀವನಾಧಾರವಾಗುತ್ತದೆ. ನೀವು ಮಕ್ಕಳ ವಿದ್ಯೆಯು ಎಷ್ಟು ಶ್ರೇಷ್ಠವಾಗಿದೆ! ಎಲ್ಲರೂ ಓದಬೇಕಾಗಿದೆ. ನೀವು ಮಕ್ಕಳು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವವರಾಗಿದ್ದೀರಿ. ಆ ವಿದ್ಯೆಯಿಂದ ಬ್ಯಾರಿಸ್ಟರ್ ಇತ್ಯಾದಿಯಾಗಬಹುದು. ಅದೂ ಕೇವಲ ಒಂದು ಜನ್ಮಕ್ಕಾಗಿ ಅಂದಮೇಲೆ ಎಷ್ಟೊಂದು ರಾತ್ರಿ-ಹಗಲಿನ ವ್ಯತ್ಯಾಸವಿದೆ ಆದ್ದರಿಂದ ನೀವಾತ್ಮಗಳಿಗೆ ಶುದ್ಧ ನಶೆಯಿರಬೇಕು. ಇದು ಗುಪ್ತ ನಶೆಯಾಗಿದೆ. ಬೇಹದ್ದಿನ ತಂದೆಯದು ಚಮತ್ಕಾರವಾಗಿದೆ. ಇದು ಎಂತಹ ಆತ್ಮಿಕ ಜಾದೂ ಆಗಿದೆ. ಆತ್ಮವನ್ನು ನೆನಪು ಮಾಡುತ್ತಾ-ಮಾಡುತ್ತಾ ಸತೋಪ್ರಧಾನರಾಗಿ ಬಿಡಬೇಕಾಗಿದೆ. ಹೇಗೆ ಸನ್ಯಾಸಿಗಳು ಹೇಳುತ್ತಾರಲ್ಲವೆ - ನೀವು ತನ್ನನ್ನು ನಾನು ಕೋಣ ಆಗಿದ್ದೇನೆ..... ಎಂದು ತಿಳಿಯಿರಿ, ಅವರು ಅದೇರೀತಿ ತಿಳಿದುಕೊಂಡು ಕೋಣೆಯಲ್ಲಿ ಕುಳಿತು ಬಿಟ್ಟರು ಮತ್ತು ಹೇಳಿದರು - ನಾನು ಕೋಣ ಆಗಿದ್ದೇನೆ, ನನಗೆ ಕೋಡುಗಳಿವೆ, ಕೋಣೆಯಿಂದ ಹೇಗೆ ಹೊರಬರಲಿ? ಎಂದು ಕೇಳಿದರು. ತಂದೆಯು ತಿಳಿಸುತ್ತಾರೆ - ನೀವು ಪವಿತ್ರ ಆತ್ಮನಾಗಿದ್ದಿರಿ, ಈಗ ಅಪವಿತ್ರರಾಗಿದ್ದೀರಿ. ಪುನಃ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ನೀವು ಪವಿತ್ರರಾಗಿ ಬಿಡುತ್ತೀರಿ. ಈ ಜ್ಞಾನವನ್ನು ಕೇಳಿ ನರನಿಂದ ನಾರಾಯಣ ಅಥವಾ ಮನುಷ್ಯರಿಂದ ದೇವತೆಗಳಾಗುತ್ತೀರಿ. ದೇವತೆಗಳದೂ ಸಾಮ್ರಾಜ್ಯವಿದೆಯಲ್ಲವೆ. ನೀವು ಮಕ್ಕಳು ಈಗ ಶ್ರೀಮತದಂತೆ ಭಾರತದಲ್ಲಿ ದೈವೀ ಸಾಮ್ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೀರಿ. ತಂದೆಯು ಹೇಳುತ್ತಾರೆ - ನಾನೀಗ ಯಾವ ಶ್ರೀಮತವನ್ನು ನಿಮಗೆ ಕೊಡುತ್ತಿದ್ದೇನೆ ಅದು ಸರಿಯೋ ಅಥವಾ ಶಾಸ್ತ್ರಗಳ ಮತವು ಸರಿಯೋ? ನೀವೇ ನಿರ್ಣಯ ಮಾಡಿ. ಗೀತೆಯು ಸರ್ವಶಾಸ್ತ್ರಮಯಿ ಶಿರೋಮಣಿ ಶ್ರೀಮತ್ಭಗವದ್ಗೀತೆಯಾಗಿದೆ. ಇದನ್ನು ವಿಶೇಷವಾಗಿ ಬರೆದಿದ್ದಾರೆ ಅಂದಮೇಲೆ ಈಗ ಭಗವಂತನೆಂದು ಯಾರಿಗೆ ಹೇಳುವುದು? ಅವಶ್ಯವಾಗಿ ನಿರಾಕಾರ ಶಿವನೆಂದು ಎಲ್ಲರೂ ಹೇಳುತ್ತಾರೆ. ಅವರ ಮಕ್ಕಳಾದ ನಾವೆಲ್ಲಾ ಆತ್ಮರು ಸಹೋದರರಾಗಿದ್ದೇವೆ. ಅವರೊಬ್ಬರೇ ತಂದೆಯಾಗಿದ್ದಾರೆ. ಆ ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಪ್ರಿಯತಮೆಯರಾಗಿದ್ದೀರಿ. ಪ್ರಿಯತಮನಾದ ನನ್ನನ್ನು ನೆನಪು ಮಾಡುತ್ತೀರಿ ಏಕೆಂದರೆ ನಾನೇ ರಾಜಯೋಗವನ್ನು ಕಲಿಸಿದ್ದೆನು, ಇದರಿಂದ ನೀವು ಪ್ರತ್ಯಕ್ಷವಾಗಿ ನರನಿಂದ ನಾರಾಯಣರಾಗುತ್ತೀರಿ. ನಾವು ಸತ್ಯ ನಾರಾಯಣನ ಕಥೆಯನ್ನು ಕೇಳುತ್ತೇವೆಂದು ಅವರು ಹೇಳಿ ಬಿಡುತ್ತಾರೆ. ಆದರೆ ಇದರಿಂದ ನಾವು ನರನಿಂದ ನಾರಾಯಣರಾಗುತ್ತೇವೆ ಎಂಬುದನ್ನು ತಿಳಿದುಕೊಳ್ಳುತ್ತಾರೆಯೇ! ತಂದೆಯು ನೀವಾತ್ಮರಿಗೆ ಜ್ಞಾನದ ಮೂರನೇ ನೇತ್ರವನ್ನು ಕೊಡುತ್ತಾರೆ. ಇದರಿಂದ ಆತ್ಮವು ಎಲ್ಲವನ್ನು ಅರಿತುಕೊಳ್ಳುತ್ತದೆ. ಶರೀರವಿಲ್ಲದೆ ಆತ್ಮವು ಮಾತನಾಡಲು ಸಾಧ್ಯವಿಲ್ಲ. ಆತ್ಮಗಳ ನಿವಾಸ ಸ್ಥಾನಕ್ಕೆ ನಿರ್ವಾಣಧಾಮವೆಂದು ಹೇಳಲಾಗುತ್ತದೆ. ನೀವು ಮಕ್ಕಳು ಈಗ ಶಾಂತಿಧಾಮ ಮತ್ತು ಸುಖಧಾಮವನ್ನೇ ನೆನಪು ಮಾಡಬೇಕಾಗಿದೆ. ಈ ದುಃಖಧಾಮವನ್ನು ಬುದ್ಧಿಯಿಂದ ಮರೆಯಬೇಕಾಗಿದೆ. ಆತ್ಮಕ್ಕೆ ಈಗ ಯಾವುದು ಸರಿ, ಯಾವುದು ತಪ್ಪು ಎಂಬ ತಿಳುವಳಿಕೆ ಸಿಕ್ಕಿದೆ. ಕರ್ಮ, ಅಕರ್ಮ, ವಿಕರ್ಮದ ರಹಸ್ಯವನ್ನೂ ತಂದೆಯು ತಿಳಿಸಿದ್ದಾರೆ. ತಂದೆಯು ಮಕ್ಕಳಿಗೇ ತಿಳಿಸಿಕೊಡುತ್ತಾರೆ ಮತ್ತು ಮಕ್ಕಳೇ ಅರಿತುಕೊಳ್ಳುತ್ತೀರಿ. ಅನ್ಯ ಮನುಷ್ಯರು ತಂದೆಯನ್ನೇ ಅರಿತುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ರಾವಣ ರಾಜ್ಯದಲ್ಲಿ ಎಲ್ಲಾ ಕರ್ಮಗಳು ವಿಕರ್ಮಗಳೇ ಆಗುತ್ತವೆ, ಸತ್ಯಯುಗದಲ್ಲಿ ಕರ್ಮಗಳು ಅಕರ್ಮಗಳಾಗುತ್ತವೆ. ಅಲ್ಲಿ ಮಕ್ಕಳಾಗುವುದಿಲ್ಲವೆ ಎಂದು ಯಾರಾದರೂ ಕೇಳಿದರೆ ತಿಳಿಸಿ, ಅದಕ್ಕೆ ನಿರ್ವಿಕಾರಿ ಪ್ರಪಂಚವೆಂದು ಕರೆಯಲಾಗುತ್ತದೆ ಅಂದಮೇಲೆ ಅಲ್ಲಿ ಈ ಪಂಚ ವಿಕಾರಗಳು ಎಲ್ಲಿಂದ ಬರುತ್ತವೆ! ಇದು ಬಹಳ ಸರಳ ಮಾತಾಗಿದೆ. ಇದನ್ನು ತಂದೆಯು ತಿಳಿಸುತ್ತಾರೆ - ಯಾರು ಇದನ್ನು ಸರಿಯಂದು ತಿಳಿಯುವರೋ ಅವರು ಕೂಡಲೇ ಜಾಗೃತರಾಗಿ ಬಿಡುತ್ತಾರೆ. ಯಾರು ತಿಳಿದುಕೊಳ್ಳುವುದಿಲ್ಲವೋ ಅವರು ಮುಂದೆ ಹೋದಂತೆ ತಿಳಿದುಕೊಳ್ಳುವರು. ಹೇಗೆ ಪತಂಗಗಳು ಜ್ಯೋತಿಯ ಬಳಿ ಬರುತ್ತವೆ. ಕೆಲವು ಪತಂಗಗಳು ಹೊರಟು ಹೋಗಿ ಮತ್ತೆ ಬರುತ್ತವೆ. ಇವರೂ ಸಹ ಪರಂಜ್ಯೋತಿಯಾಗಿದ್ದಾರೆ. ಈಗ ಎಲ್ಲವೂ ಸುಟ್ಟು ಭಸ್ಮವಾಗುವುದು. ಇದನ್ನೂ ಸಹ ತಿಳಿಸಲಾಗಿದೆ - ಇದಂತೂ ಸಾಮಾನ್ಯ ಮಾತಾಗಿದೆ. ದೀಪದ ಬಳಿ ಪತಂಗಗಳು ಬಹಳಷ್ಟು ಸುಟ್ಟು ಹೋಗುತ್ತವೆ. ದೀಪಾವಳಿಯೆಂದು ಎಷ್ಟು ಚಿಕ್ಕ-ಚಿಕ್ಕ ಸೊಳ್ಳೆಗಳು ಬರುತ್ತವೆ ಮತ್ತು ಸಮಾಪ್ತಿಯಾಗುತ್ತವೆ. ಹುಟ್ಟುತ್ತವೆ ಮತ್ತು ಸತ್ತು ಹೋಗುತ್ತವೆ. ತಂದೆಯೂ ಸಹ ತಿಳಿಸುತ್ತಾರೆ - ಕೊನೆಯಲ್ಲಿ ಬರುವವರು ಜನ್ಮ ತೆಗೆದುಕೊಳ್ಳುತ್ತಾರೆ ಮತ್ತು ಮರಣ ಹೊಂದುತ್ತಾರೆ. ಅವರದು ಹೇಗೆ ಸೊಳ್ಳೆಗಳ ತರಹ ಜನ್ಮವಾಯಿತು. ತಂದೆಯು ಆಸ್ತಿಯನ್ನು ಕೊಡಲು ಬಂದಿದ್ದಾರೆ ಅಂದಮೇಲೆ ಪುರುಷಾರ್ಥ ಮಾಡಿ ಪಾಸ್-ವಿತ್-ಆನರ್ ಆಗಬೇಕು. ಒಳ್ಳೆಯ ವಿದ್ಯಾರ್ಥಿಗಳು ಬಹಳ ಪುರುಷಾರ್ಥ ಮಾಡುತ್ತಾರೆ. ಪಾಸ್-ವಿತ್-ಆನರ್ ಆಗುವವರದೇ ಮಾಲೆಯಾಗುತ್ತದೆ. ಎಷ್ಟು ಸಾಧ್ಯವೋ ಪುರುಷಾರ್ಥ ಮಾಡುತ್ತಾ ಇರಿ. ವಿನಾಶಕಾಲೇ ವಿಪರೀತ ಬುದ್ಧಿಯವರೆಂದು ಹೇಳುತ್ತಾರೆ. ಇದರ ಮೇಲೂ ನೀವು ತಿಳಿಸಬಹುದು. ನಮ್ಮದು ತಂದೆಯ ಜೊತೆ ಪ್ರೀತಿ ಬುದ್ಧಿಯಿದೆ. ಒಬ್ಬ ತಂದೆಯ ವಿನಃ ನಾವು ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ – ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ. ಹೇ ದುಃಖಹರ್ತ-ಸುಖಕರ್ತ..... ಎಂದು ನೀವು ಭಕ್ತಿಮಾರ್ಗದಲ್ಲಿ ಬಹಳ ನೆನಪು ಮಾಡುತ್ತಾ ಬಂದಿದ್ದೀರಿ ಅಂದಾಗ ತಂದೆಯು ಅವಶ್ಯವಾಗಿ ಸುಖ ಕೊಡುವವರಾಗಿದ್ದಾರಲ್ಲವೆ. ಸ್ವರ್ಗಕ್ಕೇ ಸುಖಧಾಮವೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಪಾವನರನ್ನಾಗಿ ಮಾಡುವುದಕ್ಕಾಗಿಯೇ ಬಂದಿದ್ದೇನೆ. ಯಾವ ಮಕ್ಕಳು ಕಾಮ ಚಿತೆಯನ್ನೇರಿ ಭಸ್ಮವಾಗಿದ್ದಾರೆಯೋ ಅವರ ಮೇಲೆ ನಾನು ಬಂದು ಜ್ಞಾನದ ಮಳೆ ಸುರಿಸುತ್ತೇನೆ. ನೀವು ಮಕ್ಕಳಿಗೆ ಯೋಗವನ್ನು ಕಲಿಸುತ್ತೇನೆ, ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಫರಿಸ್ತಾನದ ಮಾಲೀಕರಾಗಿ ಬಿಡುವಿರಿ. ಅಂದಾಗ ನೀವೂ ಸಹ ಜಾದೂಗಾರರಾದಿರಿ. ನಮ್ಮದು ಇದು ಸತ್ಯ-ಸತ್ಯವಾದ ಜಾದೂಗಾರಿಯಾಗಿದೆ ಎಂದು ಮಕ್ಕಳಿಗೆ ನಶೆಯಿರಬೇಕು. ಕೆಲಕೆಲವರು ಬಹಳ ಒಳ್ಳೆಯ ಬುದ್ಧಿವಂತ ಜಾದೂಗಾರರಿರುತ್ತಾರೆ. ಜಾದೂ ಮಾಡಿ ಏನೇನೋ ವಸ್ತುಗಳನ್ನು ಹೊರತೆಗೆಯುತ್ತಾರೆ ಆದರೆ ಈ ಜಾದೂಗಾರಿಯು ಅಲೌಕಿಕವಾಗಿದೆ ಅರ್ಥಾತ್ ಇದನ್ನು ಒಬ್ಬ ತಂದೆಯ ವಿನಃ ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ನಾವು ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆಂದು ನಿಮಗೆ ತಿಳಿದಿದೆ. ಈ ಶಿಕ್ಷಣವೇ ಹೊಸ ಪ್ರಪಂಚಕ್ಕಾಗಿ ಇದೆ. ಅದಕ್ಕೆ ಸತ್ಯಯುಗ ಹೊಸ ಪ್ರಪಂಚವೆಂದು ಹೇಳಲಾಗುತ್ತದೆ ನೀವೀಗ ಸಂಗಮಯುಗದಲ್ಲಿದ್ದೀರಿ. ಈ ಪುರುಷೋತ್ತಮ ಸಂಗಮಯುಗವು ಯಾರಿಗೂ ತಿಳಿದಿಲ್ಲ. ನೀವು ಎಷ್ಟು ಉತ್ತಮ ಪುರುಷರಾಗಿದ್ದೀರಿ. ತಂದೆಯು ಆತ್ಮಗಳಿಗೇ ತಿಳಿಸುತ್ತಾರೆ. ತರಗತಿಯಲ್ಲಿಯೂ ನೀವು ಬ್ರಾಹ್ಮಣಿಯರು ಕುಳಿತುಕೊಂಡಾಗ ಮೊಟ್ಟ ಮೊದಲಿಗೆ ಸಾವಧಾನ ನೀಡುವುದು ನಿಮ್ಮ ಕರ್ತವ್ಯವಾಗಿದೆ. ಸಹೋದರ-ಸಹೋದರಿಯರೇ ತಮ್ಮನ್ನು ಆತ್ಮನೆಂದು ತಿಳಿದು ಕುಳಿತುಕೊಳ್ಳಿ. ನಾನಾತ್ಮನು ಈ ಕರ್ಮೇಂದ್ರಿಯಗಳ ಮೂಲಕ ಕೇಳಿಸಿಕೊಳ್ಳುತ್ತೇನೆ. 84 ಜನ್ಮಗಳ ರಹಸ್ಯವನ್ನೂ ತಂದೆಯು ತಿಳಿಸಿದ್ದಾರೆ. ಯಾವ ಮನುಷ್ಯರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ? ಎಲ್ಲರೂ ತೆಗೆದುಕೊಳ್ಳುವುದಿಲ್ಲ. ಇದರ ಮೇಲೂ ಸಹ ಯಾರಿಗೂ ವಿಚಾರ ನಡೆಯುವುದಿಲ್ಲ. ಏನು ಕೇಳಿದರೆ ಅದನ್ನು ಸತ್ಯವೆಂದು ಹೇಳಿ ಬಿಡುತ್ತಾರೆ. ಹನುಮಂತನು ವಾಯುವಿನಿಂದ ಹುಟ್ಟಿದನೆಂದು ಹೇಳಿದರೆ ಅದನ್ನೇ ಸತ್ಯವೆಂದು ನಂಬುತ್ತಾರೆ. ಮತ್ತೆ ಅನ್ಯರಿಗೂ ಸಹ ಇದೇ ಮಾತುಗಳನ್ನು ತಿಳಿಸುತ್ತಾ ಸತ್ಯ-ಸತ್ಯವೆಂದು ಹೇಳುತ್ತಿರುತ್ತಾರೆ. ಈಗ ನೀವು ಮಕ್ಕಳಿಗೆ ಸರಿ-ತಪ್ಪನ್ನು ಅರಿತುಕೊಳ್ಳುವ ಜ್ಞಾನಚಕ್ಷು ಪ್ರಾಪ್ತಿಯಾಗಿದೆ ಆದ್ದರಿಂದ ಸತ್ಯ ಕರ್ಮವನ್ನೇ ಮಾಡಬೇಕಾಗಿದೆ. ನೀವು ತಿಳಿಸುತ್ತೀರಿ - ನಾವು ಬೇಹದ್ದಿನ ತಂದೆಯಿಂದ ಈ ಆಸ್ತಿಯನ್ನು ಪಡೆಯುತ್ತಿದ್ದೇವೆ. ನೀವೆಲ್ಲರೂ ಪುರುಷಾರ್ಥ ಮಾಡಿ, ಆ ತಂದೆಯು ಎಲ್ಲಾ ಆತ್ಮರ ಪಿತನಾಗಿದ್ದಾರೆ. ಆ ತಂದೆಯು ನೀವಾತ್ಮರಿಗೆ ತಿಳಿಸುತ್ತಾರೆ - ಈಗ ನನ್ನನ್ನು ನೆನಪು ಮಾಡಿ, ತನ್ನನ್ನು ಆತ್ಮನೆಂದು ತಿಳಿಯಿರಿ. ಆತ್ಮದಲ್ಲಿಯೇ ಸಂಸ್ಕಾರವಿದೆ. ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತೀರಿ, ಕೆಲವರದು ಬಾಲ್ಯದಲ್ಲಿಯೇ ಹೆಸರು ಬಹಳ ಪ್ರಸಿದ್ಧವಾಗುತ್ತದೆ ಆಗ ಇವರು ಇಂದಿನ ಜನ್ಮದಲ್ಲಿ ಇಂತಹ ಯಾವುದೋ ಪುಣ್ಯ ಕರ್ಮ ಮಾಡಿದ್ದಾರೆ ಎಂದು ತಿಳಿಯಲಾಗುತ್ತದೆ. ಯಾರಾದರೂ ಕಾಲೇಜು ಇತ್ಯಾದಿಗಳನ್ನು ಕಟ್ಟಿಸಿದರೆ ನಂತರದ ಜನ್ಮದಲ್ಲಿ ಚೆನ್ನಾಗಿ ಓದುತ್ತಾರೆ. ಕರ್ಮಗಳ ಲೆಕ್ಕವಿದೆಯಲ್ಲವೆ. ಸತ್ಯಯುಗದಲ್ಲಿ ವಿಕರ್ಮದ ಮಾತೇ ಇರುವುದಿಲ್ಲ. ಕರ್ಮವನ್ನಂತೂ ಅವಶ್ಯವಾಗಿ ಮಾಡುತ್ತಾರೆ, ರಾಜ್ಯಭಾರ ಮಾಡುತ್ತಾರೆ, ತಿನ್ನುತ್ತಾರೆ, ಕುಡಿಯುತ್ತಾರೆ ಆದರೆ ಉಲ್ಟಾ ಕರ್ಮ ಮಾಡುವುದಿಲ್ಲ. ಅದಕ್ಕೆ ರಾಮ ರಾಜ್ಯವೆಂದು ಕರೆಯಲಾಗುತ್ತದೆ. ಇಲ್ಲಿ ರಾವಣ ರಾಜ್ಯವಿದೆ. ನೀವೀಗ ಶ್ರೀಮತದಂತೆ ರಾಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೀರಿ. ಅದು ಹೊಸ ಪ್ರಪಂಚವಾಗಿದೆ. ಹಳೆಯ ಪ್ರಪಂಚದಲ್ಲಿ ದೇವತೆಗಳ ನೆರಳೂ ಸಹ ಬೀಳುವುದಿಲ್ಲ. ಲಕ್ಷ್ಮಿಯ ಜಡ ಚಿತ್ರವನ್ನು ಇಟ್ಟುಕೊಂಡಾಗ ಅದರ ನೆರಳು ಬೀಳಬಹುದೇ ಹೊರತು ಚೈತನ್ಯ ದೇವತೆಯ ನೆರಳು ಬೀಳಲು ಸಾಧ್ಯವಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಎಲ್ಲರೂ ಪುನರ್ಜನ್ಮವನ್ನು ತೆಗೆದುಕೊಳ್ಳಲೇಬೇಕಾಗಿದೆ. ಹೇಗೆ ರಾಟೆ (ಬಾವಿಯಿಂದ ನೀರು ಹೊರ ತೆಗೆಯುವ ಒಂದು ವಿಧಿ) ಯಿರುತ್ತದೆಯಲ್ಲವೆ. ಅದು ಸುತ್ತುತ್ತಲೇ ಇರುತ್ತದೆ ಹಾಗೆಯೇ ಈ ಸೃಷ್ಟಿಚಕ್ರವೂ ಸಹ ಸುತ್ತುತ್ತಿರುತ್ತದೆ. ಇದರ ಮೇಲೆಯೇ ದೃಷ್ಟಾಂತಗಳನ್ನು ತಿಳಿಸಲಾಗುತ್ತದೆ ಪವಿತ್ರತೆಯು ಎಲ್ಲದಕ್ಕಿಂತ ಒಳ್ಳೆಯದಾಗಿದೆ. ಕುಮಾರಿಯು ಪವಿತ್ರವಾಗಿರುತ್ತಾಳೆ ಆದ್ದರಿಂದ ಎಲ್ಲರೂ ಅವರ ಕಾಲಿಗೆ ಬೀಳುತ್ತಾರೆ. ನೀವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಬಹಳ ಮಂದಿ ಕುಮಾರಿಯರೇ ಇದ್ದೀರಿ ಆದ್ದರಿಂದ ಕುಮಾರಿಯರ ಮೂಲಕ ಬಾಣ ಹೊಡೆಸಿದರೆಂದು ಗಾಯನವಿದೆ. ಇದು ಜ್ಞಾನ ಬಾಣವಾಗಿದೆ. ನೀವು ಪ್ರೀತಿಯಿಂದ ಕುಳಿತು ತಿಳಿಸುತ್ತೀರಿ. ತಂದೆ, ಸದ್ಗುರುವು ಒಬ್ಬರೇ ಆಗಿದ್ದಾರೆ. ಅವರು ಸರ್ವರ ಸದ್ಗತಿದಾತನಾಗಿದ್ದಾರೆ. ಭಗವಾನುವಾಚ - ಮನ್ಮನಾಭವ. ಇದು ಮಂತ್ರವಲ್ಲವೆ. ಇದರಲ್ಲಿಯೇ ಪರಿಶ್ರಮವಿದೆ. ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದು ಗುಪ್ತ ಪರಿಶ್ರಮವಾಗಿದೆ. ಆತ್ಮವೇ ತಮೋಪ್ರಧಾನವಾಗಿದೆ. ಮತ್ತೆ ಸತೋಪ್ರಧಾನವಾಗಬೇಕಾಗಿದೆ. ತಂದೆಯು ತಿಳಿಸಿದ್ದಾರೆ - ಆತ್ಮಗಳು ಮತ್ತು ಪರಮಾತ್ಮನು ಬಹಳ ಕಾಲ ಅಗಲಿ ಹೋಗಿದ್ದರು..... ಯಾರು ಮೊಟ್ಟ ಮೊದಲಿಗೆ ತಂದೆಯಿಂದ ಅಗಲಿದರೋ ಅವರೇ ಮೊಟ್ಟ ಮೊದಲಿಗೆ ಮಿಲನ ಮಾಡುವರು ಆದ್ದರಿಂದ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳೇ ಎಂದು ತಂದೆಯು ಹೇಳುತ್ತಾರೆ. ತಂದೆಗೆ ತಿಳಿದಿದೆ - ಯಾವಾಗಿನಿಂದ ಭಕ್ತಿಯನ್ನು ಆರಂಭಿಸಿದ್ದೀರಿ ಎಂದು ಇದು ಅರ್ಧ-ಅರ್ಧ ಭಾಗವಾಗಿದೆ. ಅರ್ಧ ಕಲ್ಪ ಜ್ಞಾನ, ಅರ್ಧ ಕಲ್ಪ ಭಕ್ತಿ. ಹೇಗೆ ದಿನ ಮತ್ತು ರಾತ್ರಿ 24 ಗಂಟೆಗಳಲ್ಲಿ 12 ಗಂಟೆ ಎ.ಎಂ., 12 ಗಂಟೆಗಳು ಪಿ.ಎಂ., ಇರುತ್ತದೆ. ಹಾಗೆಯೇ ಕಲ್ಪವೂ ಸಹ ಅರ್ಧ-ಅರ್ಧ ಭಾಗವಾಗಿದೆ. ಬ್ರಹ್ಮನ ದಿನ, ಬ್ರಹ್ಮನ ರಾತ್ರಿ ಅಂದಮೇಲೆ ಕಲಿಯುಗದ ಆಯಸ್ಸನ್ನು ಇಷ್ಟೊಂದು ಉದ್ದಗಲವಾಗಿ ಏಕೆ ಹೇಳುತ್ತಾರೆ? ನೀವೀಗ ಸರಿ-ತಪ್ಪನ್ನು ತಿಳಿಸಬಲ್ಲಿರಿ. ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಮತ್ತೆ ಭಗವಂತನು ಬಂದು ಭಕ್ತಿಯ ಫಲವನ್ನು ಕೊಡುತ್ತಾರೆ. ಭಗವಂತನಿಗೆ ಭಕ್ತರ ರಕ್ಷಕನೆಂದು ಹೇಳಲಾಗುತ್ತದೆಯಲ್ಲವೆ. ಮುಂದೆ ಹೋದಂತೆ ನೀವು ಸನ್ಯಾಸಿ ಮೊದಲಾದವರಿಗೂ ಸಹ ಬಹಳ ಪ್ರೀತಿಯಿಂದ ಕುಳಿತು ತಿಳಿಸಿಕೊಡುತ್ತೀರಿ. ನಿಮ್ಮ ಫಾರ್ಮ್ನ್ನು ಅವರು ತುಂಬುವುದಿಲ್ಲ. ತಂದೆ-ತಾಯಿಯ ಹೆಸರನ್ನು ಬರೆಯುವುದಿಲ್ಲ. ಕೆಲಕೆಲವರು ತಿಳಿಸುತ್ತಾರೆ - ಏಕೆ ಸನ್ಯಾಸ ಮಾಡಿದಿರಿ? ಕಾರಣ ತಿಳಿಸಿ ಎಂದು ಮೊದಲು ಬಾಬಾರವರು ಹೋಗಿ ಕೇಳುತ್ತಿದ್ದರು. ವಿಕಾರಗಳ ಸನ್ಯಾಸ ಮಾಡುತ್ತಾರೆ ಆದ್ದರಿಂದ ಮನೆಯ ಸನ್ಯಾಸ ಮಾಡುತ್ತಾರೆ. ನೀವೀಗ ಇಡೀ ಪ್ರಪಂಚದ ಸನ್ಯಾಸ ಮಾಡುತ್ತೀರಿ. ನಿಮಗೆ ಹೊಸ ಪ್ರಪಂಚದ ಸಾಕ್ಷಾತ್ಕಾರವನ್ನೂ ಮಾಡಿಸಲಾಗಿದೆ. ಅದು ನಿರ್ವಿಕಾರಿ ಪ್ರಪಂಚವಾಗಿದೆ. ಸ್ವರ್ಗದ ರಚಯಿತ ತಂದೆಯು ಸ್ವರ್ಗವನ್ನು ಸ್ಥಾಪನೆ ಮಾಡುವವರಾಗಿದ್ದಾರೆ. ಹೂದೋಟವನ್ನಾಗಿ ಮಾಡುವವರಾಗಿದ್ದಾರೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ. ಕಾಮ ವಿಕಾರವು ಮೊಟ್ಟ ಮೊದಲನೆಯ ಮುಳ್ಳಾಗಿದೆ. ಈ ಕಾಮ ವಿಕಾರಕ್ಕೆ ಕತ್ತಿಯೆಂದು ಹೇಳುತ್ತಾರೆ, ಕ್ರೋಧಕ್ಕೆ ಭೂತವೆಂದು ಹೇಳುತ್ತಾರೆ. ದೇವಿ-ದೇವತೆಗಳು ಡಬಲ್ ಅಹಿಂಸಕರಾಗಿದ್ದರು, ನಿರ್ವಿಕಾರಿ ದೇವತೆಗಳ ಮುಂದೆ ಹೋಗಿ ವಿಕಾರಿ ಮನುಷ್ಯರು ತಲೆ ಬಾಗುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಇಲ್ಲಿ ಓದುವುದಕ್ಕಾಗಿ ಬಂದಿದ್ದೇವೆ. ಉಳಿದಂತೆ ಆ ಸತ್ಸಂಗಗಳಲ್ಲಿ ಹೋಗುವುದಂತೂ ಸಾಮಾನ್ಯ ಮಾತಾಗಿದೆ. ಅಲ್ಲಿ ಈಶ್ವರ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ ಆದರೆ ತಂದೆಯು ಎಂದಾದರೂ ಸರ್ವವ್ಯಾಪಿಯಾಗಲು ಸಾಧ್ಯವೇ? ತಂದೆಯಿಂದ ನೀವು ಮಕ್ಕಳಿಗೆ ಆಸ್ತಿ ಸಿಗುತ್ತದೆ. ತಂದೆಯು ಬಂದು ಹಳೆಯ ಪ್ರಪಂಚವನ್ನು ಹೊಸ ಪ್ರಪಂಚ, ಸ್ವರ್ಗವನ್ನಾಗಿ ಮಾಡುತ್ತಾರೆ. ಕೆಲವರಂತೂ ನರಕವನ್ನು ನರಕವೆಂದು ಒಪ್ಪುವುದೇ ಇಲ್ಲ. ಸಾಹುಕಾರರು ತಿಳಿದುಕೊಳ್ಳುತ್ತಾರೆ - ಸ್ವರ್ಗದಲ್ಲಿ ಏನಿದೆ, ನಮ್ಮ ಬಳಿಯಂತೂ ಹಣ-ಅಂತಸ್ತು ಮಹಲು, ವಿಮಾನ ಇತ್ಯಾದಿಗಳೆಲ್ಲವೂ ಇದೆ. ನಮಗಾಗಿ ಇದೇ ಸ್ವರ್ಗವಾಗಿದೆ. ಯಾರು ಕೊಳಕಿನಲ್ಲಿರುತ್ತಾರೆಯೋ ಅವರಿಗೆ ಇದು ನರಕವಾಗಿದೆ ಆದ್ದರಿಂದ ಭಾರತವು ಎಷ್ಟೊಂದು ಬಡದೇಶ, ಕಂಗಾಲಾಗಿದೆ. ಈ ಚರಿತ್ರೆ-ಭೂಗೋಳವು ಪುನಃ ಪುನರಾವರ್ತನೆಯಾಗುವುದು. ತಂದೆಯು ನಮ್ಮನ್ನು ಪುನಃ ಡಬಲ್ ಕಿರೀಟಧಾರಿಗಳನ್ನಾಗಿ ಮಾಡುತ್ತಾರೆಂದು ನಿಮಗೆ ನಶೆಯಿರಬೇಕು. ಭೂತ, ಭವಿಷ್ಯತ್, ವರ್ತಮಾನವನ್ನು ಅರಿತುಕೊಂಡಿದ್ದೀರಿ. ಸತ್ಯ-ತ್ರೇತಾಯುಗದ ಕಥೆಯನ್ನು ತಂದೆಯು ತಿಳಿಸಿದ್ದಾರೆ. ನಂತರ ಮಧ್ಯದಲ್ಲಿ ನಾವು ಕೆಳಗಿಳಿಯುತ್ತೇವೆ. ವಾಮಮಾರ್ಗವು ವಿಕಾರಿ ಮಾರ್ಗವಾಗಿದೆ. ಈಗ ಪುನಃ ತಂದೆಯು ಬಂದಿದ್ದಾರೆ, ನೀವು ತಮ್ಮನ್ನು ಸ್ವದರ್ಶನ ಚಕ್ರಧಾರಿಯೆಂದು ತಿಳಿಯುತ್ತೀರಿ. ಚಕ್ರವನ್ನು ತಿರುಗಿಸಿ, ಇದರಿಂದ ತಲೆ ಕತ್ತರಿಸುತ್ತೀರಿ ಎಂದಲ್ಲ. ಕೃಷ್ಣನಿಗೆ ಚಕ್ರವನ್ನು ತೋರಿಸಿ ಕೃಷ್ಣನು ರಾಕ್ಷಸರನ್ನು ಚಕ್ರದಿಂದ ಕೊಂದನೆಂದು ಹೇಳುತ್ತಾರೆ ಆದರೆ ಇದು ಸಾಧ್ಯವಿಲ್ಲ. ನೀವು ತಿಳಿದುಕೊಳ್ಳುತ್ತೀರಿ - ನಾವು ಬ್ರಾಹ್ಮಣರು ಸ್ವದರ್ಶನ ಚಕ್ರಧಾರಿಗಳಾಗಿದ್ದೇವೆ, ನಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಸತ್ಯಯುಗದಲ್ಲಿ ದೇವತೆಗಳಿಗಂತೂ ಈ ಜ್ಞಾನವಿರುವುದಿಲ್ಲ, ಅಲ್ಲಿ ಸದ್ಗತಿಯಿರುತ್ತದೆ ಆದ್ದರಿಂದ ಅದಕ್ಕೆ ದಿನವೆಂದು ಹೇಳಲಾಗುತ್ತದೆ. ರಾತ್ರಿಯಲ್ಲಿಯೇ ಕಷ್ಟವಾಗುತ್ತದೆ. ಭಕ್ತಿಯಲ್ಲಿ ದರ್ಶನಕ್ಕಾಗಿ ಎಷ್ಟೊಂದು ಹಠಯೋಗ ಇತ್ಯಾದಿಗಳನ್ನು ಮಾಡುತ್ತಾರೆ, ನೌಧಾಭಕ್ತಿ ಮಾಡುವವರು ಪ್ರಾಣ ತ್ಯಾಗ ಮಾಡುವುದಕ್ಕೂ ತಯಾರಾಗಿ ಬಿಡುತ್ತಾರೆ ಆದ್ದರಿಂದ ಸಾಕ್ಷಾತ್ಕಾರವಾಗುತ್ತದೆ. ಡ್ರಾಮಾನುಸಾರ ಅಲ್ಪಕಾಲಕ್ಕಾಗಿ ಅವರ ಇಚ್ಛೆಯು ಪೂರ್ಣವಾಗುತ್ತದೆ ಬಾಕಿ ಈಶ್ವರನು ಏನನ್ನೂ ಮಾಡುವುದಿಲ್ಲ. ಅರ್ಧಕಲ್ಪ ಭಕ್ತಿಯ ಪಾತ್ರವು ನಡೆಯುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಇದೇ ಆತ್ಮಿಕ ನಶೆಯಲ್ಲಿರಿ - ತಂದೆಯು ನಮ್ಮನ್ನು ಡಬಲ್ ಕಿರೀಟಧಾರಿಗಳನ್ನಾಗಿ ಮಾಡುತ್ತಿದ್ದಾರೆ. ನಾವು ಸ್ವದರ್ಶನ ಚಕ್ರಧಾರಿ ಬ್ರಾಹ್ಮಣರಾಗಿದ್ದೇವೆ. ಭೂತ, ಭವಿಷ್ಯತ್, ವರ್ತಮಾನದ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಂಡು ನಡೆಯಬೇಕಾಗಿದೆ.

2. ಪಾಸ್-ವಿತ್-ಆನರ್ ಆಗಲು ತಂದೆಯೊಂದಿಗೆ ಸತ್ಯ-ಸತ್ಯವಾದ ಪ್ರೀತಿಯನ್ನಿಟ್ಟುಕೊಳ್ಳಬೇಕು. ತಂದೆಯನ್ನು ನೆನಪು ಮಾಡುವ ಗುಪ್ತ ಪರಿಶ್ರಮ ಪಡಬೇಕಾಗಿದೆ.

ವರದಾನ:
ಸರ್ವ ಗುಣಗಳ ಅನುಭವಗಳ ಮುಖಾಂತರ ತಂದೆಯನ್ನು ಪ್ರತ್ಯಕ್ಷ ಮಾಡುವಂತಹ ಅನುಭವೀ ಮೂರ್ತಿ ಭವ.

ತಂದೆಯ ಗುಣಗಳ ಗಾಯನ ಏನು ಮಾಡುವಿರಿ, ಆ ಸರ್ವ ಗುಣಗಳ ಅನುಭವಿಗಳಾಗಿ, ಹೇಗೆ ತಂದೆ ಆನಂದ ಸಾಗರ ಆಗಿದ್ದಾರೆ ಅಂದಾಗ ಅದೇ ಆನಂದದ ಸಾಗರನ ಅಲೆಯಲ್ಲಿ ಈಜಾಡುತ್ತಿರಿ. ಯಾರೇ ಸಂಪರ್ಕದಲ್ಲಿ ಬಂದರೂ ಸಹ ಅವರನ್ನು ಆನಂದ ಪ್ರೇಮ, ಸುಖ.... ಎಲ್ಲಾ ಗುಣಗಳ ಅನುಭೂತಿಯನ್ನು ಮಾಡಿಸಿ. ಆ ರೀತಿ ಸರ್ವ ಗುಣಗಳ ಅನುಭವಿ ಮೂರ್ತಿಗಳಾಗಿ ಆಗ ತಮ್ಮ ಮುಖಾಂತರ ತಂದೆಯ ಮುಖ ಪ್ರತ್ಯಕ್ಷವಾಗಬೇಕು ಏಕೆಂದರೆ ತಾವು ಮಹಾನ್ ಆತ್ಮರೇ ಪರಮ ಆತ್ಮನನ್ನು ತಮ್ಮ ಅನುಭವಿ ಮೂರ್ತಿಗಳಿಂದ ಪ್ರತ್ಯಕ್ಷ ಮಾಡಿಸಲು ಸಾಧ್ಯ.

ಸ್ಲೋಗನ್:
ಕಾರಣವನ್ನು ನಿವಾರಣೆಯಲ್ಲಿ ಪರಿವರ್ತನೆ ಮಾಡಿ ಅಶುಭ ಮಾತನ್ನೂ ಸಹ ಶುಭ ಮಾಡಿ ತೆಗೆದುಕೊಳ್ಳಿ.