29.11.20    Avyakt Bapdada     Kannada Murli    23.01.87     Om Shanti     Madhuban


ಸಫಲತಾ ನಕ್ಷತ್ರಗಳ ವಿಶೇಷತೆಗಳು


ಇಂದು ಜ್ಞಾನ ಸೂರ್ಯ, ಜ್ಞಾನ ಚಂದ್ರಮನು ಹೊಳೆಯುತ್ತಿರುವ ತನ್ನ ತಾರಾಮಂಡಲವನ್ನು ನೋಡುತ್ತಿದ್ದಾರೆ. ಅವು ಆಕಾಶದ ನಕ್ಷತ್ರಗಳಾಗಿವೆ ಮತ್ತು ಇವು ಧರಣಿಯ ನಕ್ಷತ್ರಗಳಾಗಿವೆ, ಅವು ಪ್ರಕೃತಿಯ ಶಕ್ತಿಯಾಗಿದೆ, ಇವು ಪರಮಾತ್ಮನ ನಕ್ಷತ್ರಗಳಾಗಿವೆ, ಆತ್ಮಿಕ ನಕ್ಷತ್ರಗಳಾಗಿವೆ. ಆ ನಕ್ಷತ್ರಗಳೂ ಸಹ ರಾತ್ರಿಯಲ್ಲಿಯೇ ಪ್ರಕಟವಾಗುತ್ತದೆ, ಈ ಆತ್ಮಿಕ ನಕ್ಷತ್ರ, ಜ್ಞಾನ ನಕ್ಷತ್ರಗಳು, ಹೊಳೆಯುತ್ತಿರುವ ನಕ್ಷತ್ರಗಳೂ ಸಹ ಬ್ರಹ್ಮನ ರಾತ್ರಿಯಲ್ಲಿಯೇ ಪ್ರಕಟವಾಗುತ್ತವೆ. ಆ ನಕ್ಷತ್ರಗಳು ರಾತ್ರಿಯನ್ನು ದಿನವನ್ನಾಗಿ ಮಾಡುವುದಿಲ್ಲ, ಕೇವಲ ಸೂರ್ಯನಷ್ಟೇ ರಾತ್ರಿಯನ್ನು ದಿನವನ್ನಾಗಿ ಮಾಡುತ್ತಾನೆ ಆದರೆ ತಾವು ನಕ್ಷತ್ರಗಳು ಜ್ಞಾನ ಸೂರ್ಯ, ಜ್ಞಾನ ಚಂದ್ರಮನ ಜೊತೆಗೆ ಜೊತೆಗಾರನಾಗಿ, ರಾತ್ರಿಯನ್ನು ದಿನವನ್ನಾಗಿ ಮಾಡುತ್ತೀರಿ. ಪ್ರಕೃತಿಯ ತಾರಾಮಂಡಲದಲ್ಲಿ ಯಾವ ರೀತಿ ಅನೇಕ ಪ್ರಕಾರದ ನಕ್ಷತ್ರಗಳು ಹೊಳೆಯುತ್ತಿರುವಂತೆ ಕಾಣಿಸುತ್ತದೆಯೋ, ಹಾಗೆಯೇ ಪರಮಾತ್ಮನ ತಾರಾಮಂಡಲದಲ್ಲಿಯೂ ಭಿನ್ನ-ಭಿನ್ನ ಪ್ರಕಾರದ ನಕ್ಷತ್ರಗಳು ಹೊಳೆಯುತ್ತಿರುವಂತೆ ಕಾಣಿಸುತ್ತದೆ. ಅದರಲ್ಲಿ ಕೆಲವು ಸಮೀಪದಲ್ಲಿ ಇರುವ ನಕ್ಷತ್ರಗಳಾಗಿದ್ದರೆ, ಇನ್ನೂ ಕೆಲವು ದೂರದಲ್ಲಿನ ನಕ್ಷತ್ರಗಳೂ ಇವೆ. ಕೆಲವು ಸಫಲತಾ ನಕ್ಷತ್ರಗಳಾಗಿವೆ, ಇನ್ನೂ ಕೆಲವು ಭರವಸೆಯ ನಕ್ಷತ್ರಗಳಾಗಿವೆ. ಕೆಲವು ಒಂದು ಸ್ಥಿತಿಯಲ್ಲಿರುವ ನಕ್ಷತ್ರಗಳಾದರೆ, ಕೆಲವು ಸ್ಥಿತಿಯನ್ನು ಬದಲಿಸುವ ನಕ್ಷತ್ರಗಳು. ಆಕಾಶದಲ್ಲಿನ ನಕ್ಷತ್ರಗಳು ಸ್ಥಾನ ಪಲ್ಲಟ ಮಾಡುತ್ತದೆ, ಇಲ್ಲಿ ಸ್ಥಿತಿಯ ಪಲ್ಲಟ ಮಾಡುತ್ತೀರಿ. ಹೇಗೆ ಪ್ರಕೃತಿಯ ತಾರಾಮಂಡಲದಲ್ಲಿ ಧೂಮಕೇತುಗಳೂ ಇವೆ ಅರ್ಥಾತ್ ಪ್ರತೀ ಮಾತಿನಲ್ಲಿ, ಪ್ರತೀ ಕಾರ್ಯದಲ್ಲಿ ``ಇದೇಕೆ, ಇದೇನು'' ಎಂದು ಕೇಳುವಂತಹ ಬಾಲವಿರುವವರು ಅರ್ಥಾತ್ ಪ್ರಶ್ನಾರ್ಥಕ ಚಿಹ್ನೆ ಮಾಡುವಂತಹ ಧೂಮಕೇತುಗಳಿದ್ದಾರೆ. ಪ್ರಕೃತಿಯ ಧೂಮಕೇತುಗಳ ಪ್ರಭಾವವು ಪೃಥ್ವಿಯ ಮೇಲೆ ಕೆಟ್ಟದೆಂದು ಒಪ್ಪಿಕೊಳ್ಳುತ್ತಾರೆ, ಹಾಗೆಯೇ ಮತ್ತೆ-ಮತ್ತೆ ಪ್ರಶ್ನಿಸುವವರು, ಈ ಬ್ರಾಹ್ಮಣ ಪರಿವಾರದಲ್ಲಿ ವಾಯುಮಂಡಲವನ್ನು ಬಾರಿಗೊಳಿಸುತ್ತಾರೆ. ಇದರಲ್ಲಿ ಎಲ್ಲರೂ ಅನುಭವಿ ಆಗಿದ್ದೀರಿ. ಸ್ವಯಂ ಪ್ರತಿಯೂ ಯಾವಾಗ ಸಂಕಲ್ಪದಲ್ಲಿ `ಏಕೆ ಮತ್ತು ಏನು' ಎಂಬ ಬಾಲ ಅಂಟಿಕೊಳ್ಳುತ್ತದೆ ಎಂದರೆ, ಮನಸ್ಸು-ಬುದ್ಧಿಯ ಸ್ಥಿತಿಯು ಸ್ವಯಂಗಾಗಿಯೂ ಭಾರಿಯಾಗಿ ಬಿಡುತ್ತದೆ. ಜೊತೆ ಜೊತೆಗೆ ಯಾವುದೇ ಸಂಘಟನೆಯಲ್ಲಿ ಅಥವಾ ಸೇವಾಕ್ಷೇತ್ರದ ವಾತಾವರಣದಲ್ಲಿ ತಕ್ಷಣವೇ ಭಾರಿಯಾಗಿ ಬಿಡುತ್ತದೆಯೆಂದರೆ, ಸ್ವಯಂ ಪ್ರತಿ ಅಥವಾ ಸಂಘಟನೆ ಅಥವಾ ಸೇವಾ ಪ್ರತಿಯೂ ಪ್ರಭಾವ ಬೀಳುತ್ತದೆಯಲ್ಲವೆ. ಜೊತೆ ಜೊತೆಗೆ ಪ್ರಕೃತಿಯ ಕೆಲವು ನಕ್ಷತ್ರಗಳು ಮೇಲಿಂದ ಕೆಳಗೂ ಬೀಳುತ್ತವೆ ಎಂದರೆ ಏನಾಗಿ ಬಿಡುತ್ತದೆ? ಕಲ್ಲು. ಪರಮಾತ್ಮ-ನಕ್ಷತ್ರಗಳಲ್ಲಿಯೂ ಯಾವಾಗ ನಿಶ್ಚಯ, ಸಂಬಂಧ ಅಥವಾ ಸ್ವಯಂನ ಧಾರಣೆಯು ಶ್ರೇಷ್ಠ ಸ್ಥಿತಿಯಿಂದ ನೀಚ ಸ್ಥಿತಿಯಲ್ಲಿ ಬಂದು ಬಿಡುತ್ತದೆ ಎಂದರೆ ಕಲ್ಲು ಬುದ್ಧಿಯವರು ಆಗಿ ಬಿಡುತ್ತಾರೆ. ಕಲ್ಲು ಬುದ್ಧಿಯವರು ಹೇಗಾಗುತ್ತಾರೆ? ಕಲ್ಲಿನ ಮೇಲೆ ಎಷ್ಟೇ ನೀರು ಹಾಕಿರಿ ಆದರೆ ಕಲ್ಲು ಕರಗುವುದಿಲ್ಲ, ರೂಪವು ಬದಲಾಗುತ್ತದೆ ಆದರೆ ಕರಗುವುದಿಲ್ಲ. ಕಲ್ಲಿಗೆ ಧಾರಣೆಯೇನೂ ಆಗುವುದಿಲ್ಲ, ಅದೇರೀತಿ ಯಾವಾಗ ಕಲ್ಲು ಬುದ್ಧಿಯವರಾದಾಗ ಅವರಿಗೆಷ್ಟಾದರೂ ಒಳ್ಳೆಯ ಮಾತುಗಳ ಅನುಭವ ಮಾಡಿಸುತ್ತೀರೆಂದರೂ ಅನುಭೂತಿಯಾಗುವುದಿಲ್ಲ. ಜ್ಞಾನ ಜಲವನ್ನು ಎಷ್ಟಾದರೂ ಹಾಕಿರಿ ಆದರೆ ಬದಲಾಗುವುದಿಲ್ಲ. ಮಾತುಗಳು ಬದಲಾಗುತ್ತಿರುತ್ತವೆ ಆದರೆ ಸ್ವಯಂ ಬದಲಾಗುವುದಿಲ್ಲ. ಇದಕ್ಕೆ ಹೇಳಲಾಗುತ್ತದೆ - ಕಲ್ಲು ಬುದ್ಧಿಯವರು ಆಗಿ ಬಿಡುವುದು ಅಂದಾಗ ತಾವು ತಮ್ಮೊಂದಿಗೆ ಕೇಳಿಕೊಳ್ಳಿರಿ - ಈ ಪರಮಾತ್ಮನ ತಾರಾಮಂಡಲದ ನಕ್ಷತ್ರಗಳಲ್ಲಿ ನಾನು ಯಾವ ನಕ್ಷತ್ರವಾಗಿದ್ದೇನೆ?

ಅತಿ ಶ್ರೇಷ್ಠ ನಕ್ಷತ್ರವಾಗಿದೆ - ಸಫಲತಾ ನಕ್ಷತ್ರ. ಸಫಲತಾ ನಕ್ಷತ್ರ ಅರ್ಥಾತ್ ಯಾರು ಸದಾ ಸ್ವಯಂನ ಪ್ರಗತಿಯಲ್ಲಿ ಸಫಲತೆಯ ಅನುಭವ ಮಾಡುತ್ತಿರುತ್ತಾರೆ ಅರ್ಥಾತ್ ತನ್ನ ಪುರುಷಾರ್ಥದ ವಿಧಿಯಲ್ಲಿ ಸದಾ ಸಹಜ ಸಫಲತೆಯ ಅನುಭವ ಮಾಡುತ್ತಿರುತ್ತಾರೆ. ಸಫಲತಾ ನಕ್ಷತ್ರಗಳ ಸಂಕಲ್ಪದಲ್ಲಿಯೂ ಸಹ ಎಂದಿಗೂ ಸ್ವಯಂ ಪುರುಷಾರ್ಥದ ಪ್ರತಿ "ಗೊತ್ತಿಲ್ಲ ಇದಾಗುತ್ತದೆಯೋ ಅಥವಾ ಇಲ್ಲವೋ", "ಮಾಡುತ್ತೇನೆಯೋ ಅಥವಾ ಮಾಡಲು ಸಾಧ್ಯವಾಗುವುದಿಲ್ಲವೋ" - ಈ ಅಸಫಲತೆಯ ಸಂಕಲ್ಪವು ಅಂಶದಷ್ಟೂ ಇರುವುದಿಲ್ಲ. ಸಫಲತೆಯು ಜನ್ಮ ಸಿದ್ಧ ಅಧಿಕಾರವಾಗಿದೆ ಎಂಬ ಯಾವ ಸ್ಲೋಗನ್ ಇದೆ, ಅದೇ ರೀತಿ ಅವರು ಸ್ವಯಂ ಪ್ರತಿ ಸದಾ ಸಫಲತೆಯನ್ನು ಅಧಿಕಾರದ ರೂಪದಲ್ಲಿ ಅನುಭವ ಮಾಡುವರು. ಅಧಿಕಾರದ ಪರಿಭಾಷೆಯೇ ಆಗಿದೆ - ಪರಿಶ್ರಮ ಪಡದೆ, ಬೇಡದೆಯೇ ಪ್ರಾಪ್ತಿಯಾಗುವುದು. ಸಹಜ ಮತ್ತು ಸ್ವತಹವಾಗಿಯೇ ಪ್ರಾಪ್ತಿಯಾಗುವುದಕ್ಕೆ ಅಧಿಕಾರವೆಂದು ಹೇಳಲಾಗುತ್ತದೆ. ಅದೇ ರೀತಿ ಒಂದು – ಸ್ವಯಂ ಪ್ರತಿ ಸಫಲತೆ, ಇನ್ನೊಂದು - ಭಲೆ ಬ್ರಾಹ್ಮಣರಿರಲಿ ಅಥವಾ ಲೌಕಿಕ ಪರಿವಾರ ಅಥವಾ ಲೌಕಿಕ ಕಾರ್ಯದ ಸಂಬಂಧದಲ್ಲಿ, ಸರ್ವರ ಸಂಬಂಧ-ಸಂಪರ್ಕದಲ್ಲಿ ಬರುತ್ತಾ, ಎಷ್ಟೇ ಕಷ್ಟದ ಮಾತುಗಳನ್ನೂ ಸಫಲತೆಯ ಅಧಿಕಾರದ ಆಧಾರದಿಂದ ಸಹಜತೆಯ ಅನುಭವ ಮಾಡುವುದು ಅರ್ಥಾತ್ ಸಫಲತೆಯ ಪ್ರಗತಿಯಲ್ಲಿ ಮುಂದುವರೆಯುತ್ತಿರುವುದು. ಹಾಂ, ಸಮಯ ಹಿಡಿಸುತ್ತದೆ ಆದರೆ ಸಫಲತೆಯ ಅಧಿಕಾರವನ್ನು ಅವಶ್ಯವಾಗಿ ಪ್ರಾಪ್ತಿ ಮಾಡಿಕೊಳ್ಳುತ್ತೇವೆ, ಹೀಗೆ ಸ್ಥೂಲ ಕಾರ್ಯ ಅಥವಾ ಅಲೌಕಿಕ ಸೇವಾಕಾರ್ಯ ಅರ್ಥಾತ್ ಎರಡೂ ಕ್ಷೇತ್ರದ ಕರ್ಮದಲ್ಲಿ ಸಫಲತೆಯ ನಿಶ್ಚಯ ಬುದ್ಧಿ ವಿಜಯಿಯಾಗಿರುತ್ತಾರೆ. ಕೆಲವೊಂದು ಕಡೆ ಪರಿಸ್ಥಿತಿಯನ್ನೂ ಎದುರಿಸಬೇಕಾಗುತ್ತದೆ, ವ್ಯಕ್ತಿಗಳ ಮೂಲಕ ಸಹನೆಯನ್ನೂ ಮಾಡಬೇಕಾಗುತ್ತದೆ. ಆದರೆ ಹಾಗೆ ಸಹನೆ ಮಾಡುವುದೂ ಸಹ ಉನ್ನತಿಯ ಮಾರ್ಗವಾಗಿ ಬಿಡುತ್ತದೆ. ಪರಿಸ್ಥಿತಿಯನ್ನು ಎದುರಿಸುತ್ತಾ, ಪರಿಸ್ಥಿತಿಯು ಸ್ವ ಸ್ಥಿತಿಯ ಹಾರುವ ಕಲೆಯ ಸಾಧನವಾಗಿ ಬಿಡುತ್ತದೆ ಅರ್ಥಾತ್ ಪ್ರತೀ ಮಾತಿನಲ್ಲಿ ಸಫಲತೆಯು ಸ್ವತಹ ಸಹಜ ಮತ್ತು ಅವಶ್ಯವಾಗಿ ಪ್ರಾಪ್ತಿಯಾಗುತ್ತದೆ.

ಸಫಲತಾ ನಕ್ಷತ್ರದ ವಿಶೇಷ ಚಿಹ್ನೆಯಾಗಿದೆ - ಸ್ವಯಂನ ಸಫಲತೆಯಲ್ಲಿ ಎಂದಿಗೂ ಅಭಿಮಾನ ಉಂಟಾಗುವುದಿಲ್ಲ, ಅದರ ವರ್ಣನೆ ಮಾಡುವುದಿಲ್ಲ, ಸಫಲತೆಯ ವರ್ಣನೆಯ ಗೀತೆಯನ್ನು ಹಾಡುವುದಿಲ್ಲ ಆದರೆ ಸಫಲತೆಯು ಎಷ್ಟಾಗುವುದು, ಅಷ್ಟು ನಮ್ರಚಿತ್ತ, ನಿರ್ಮಾಣ, ನಿರ್ಮಲ ಸ್ವಭಾವ ಇರುತ್ತದೆ. ಅವರ ಸಫಲತೆಯ ಗೀತೆಯನ್ನು ಅನ್ಯರು ಹಾಡುವರು ಆದರೆ ಅವರಂತು ಸದಾ ತಂದೆಯ ಗುಣಗಾನ ಮಾಡುವರು. ಸಫಲತೆಯ ನಕ್ಷತ್ರಗಳು ಎಂದಿಗೂ ಸಹ ಪ್ರಶ್ನೆಯನ್ನು ಮಾಡುವುದಿಲ್ಲ, ಅವರು ಸದಾ ಪ್ರತೀ ಕಾರ್ಯದಲ್ಲಿ ಬಿಂದು ರೂಪದಲ್ಲಿ ಸ್ಥಿತರಾಗಿದ್ದು, ಅನ್ಯರಿಗೂ `ಡ್ರಾಮಾದ ಬಿಂದು'ವಿನ ಸ್ಮೃತಿಯನ್ನು ತರಿಸುತ್ತಾ, ವಿಘ್ನ ವಿನಾಶಕರನ್ನಾಗಿ ಮಾಡುತ್ತಾ, ಸಮರ್ಥರನ್ನಾಗಿ ಮಾಡುತ್ತಾ, ಸಫಲತೆಯ ಗುರಿಯ ಸಮೀಪಕ್ಕೆ ಕರೆ ತರುತ್ತಾರೆ. ಸಫಲತೆಯ ನಕ್ಷತ್ರಗಳು ಎಂದಿಗೂ ಸಹ ಅಲ್ಪಕಾಲದ ಸಫಲತೆಯ ಪ್ರಾಪ್ತಿಯನ್ನು ನೋಡುತ್ತಾ, ಪ್ರಾಪ್ತಿಯ ಸ್ಥಿತಿಯಲ್ಲಿ ಬಹಳ ಖುಷಿಯಾಗುವರು ಮತ್ತು ಪರಿಸ್ಥಿತಿಯು ಬಂದಿತೊ ಅಥವಾ ಪ್ರಾಪ್ತಿಯಲ್ಲಿ ಸ್ವಲ್ಪ ಕಡಿಮೆ ಆಯಿತೆಂದರೂ ಸಹ ಖುಷಿಯಂತು ಕಡಿಮೆಯಾಗುತ್ತದೆ ಎಂಬ ಸ್ಥಿತಿ ಪರಿವರ್ತನೆ ಮಾಡುವವರಾಗಿರುವುದಿಲ್ಲ. ಸದಾ ಬೇಹದ್ದಿನ ಸಫಲತಾ ಮೂರ್ತಿ ಆಗಿರುತ್ತಾರೆ, ಏಕರಸ ಮತ್ತು ಒಂದು ಶ್ರೇಷ್ಠ ಸ್ಥಿತಿಯಲ್ಲಿಯೇ ಸ್ಥಿತರಾಗಿರುತ್ತಾರೆ. ಭಲೆ ಹೊರಗಿನ ಪರಿಸ್ಥಿತಿ ಅಥವಾ ಕಾರ್ಯದಲ್ಲಿ ಬಾಹ್ಯ ರೂಪದಲ್ಲಿ ಭಲೆ ಅನ್ಯರಿಗೆ ಅಸಫಲತೆಯ ಅನುಭವವಾಗುತ್ತದೆ. ಆದರೆ ಸಫಲತಾ ನಕ್ಷತ್ರವು ಅಸಫಲತೆಯ ಸ್ಥಿತಿಯ ಪ್ರಭಾವದಲ್ಲಿ ಬರದೆ, ಸಫಲತೆಯ ಸ್ವ ಸ್ಥಿತಿಯಿಂದ ಅಸಫಲತೆಯನ್ನೂ ಪರಿವರ್ತನೆ ಮಾಡಿ ಬಿಡುತ್ತಾರೆ - ಇದು ಸಫಲತಾ ನಕ್ಷತ್ರಗಳ ವಿಶೇಷತೆಗಳು. ತಮ್ಮೊಂದಿಗೆ ತಾವು ಕೇಳಿಕೊಳ್ಳಿರಿ - ನಾನು ಯಾರಾಗಿದ್ದೇನೆ? ಕೇವಲ ಭರವಸೆ ಇರುವವನೇ ಅಥವಾ ಸಫಲತಾ ಸ್ವರೂಪ ಆಗಿದ್ದೇನೆಯೇ? ಭರವಸೆ ಇರುವುದೂ ಸಹ ಒಳ್ಳೆಯದು, ಆದರೆ ಕೇವಲ ಭರವಸೆಯಲ್ಲಿಯೇ ನಡೆಯುವುದು, ಪ್ರತ್ಯಕ್ಷ ಸಫಲತೆಯ ಅನುಭವವನ್ನು ಮಾಡದಿರುವುದು - ಇದರಲ್ಲಿ ಕೆಲವೊಮ್ಮೆ ಶಕ್ತಿಶಾಲಿ, ಕೆಲವೊಮ್ಮೆ ಹೃದಯ ವಿಧೀರ್ಣ...... ಹೀಗೆ ಹೆಚ್ಚು ಕಡಿಮೆ ಆಗುವ ಅನುಭವವನ್ನು ಹೆಚ್ಚಾಗಿ ಮಾಡುತ್ತಾರೆ. ಹೇಗೆ ಯಾವುದೇ ಮಾತಿನಲ್ಲಿ ಏನಾದರೂ ಹೆಚ್ಚಾಗಿ ಹೆಚ್ಚು ಕಡಿಮೆ ಅಥವಾ ಏರುಪೇರಾಗುತ್ತಾ ಇರುತ್ತದೆ ಎಂದರೆ ಸುಸ್ತಾಗಿ ಬಿಡುತ್ತದೆಯಲ್ಲವೆ. ಅಂದಾಗ ಇದರಲ್ಲಿಯೂ ಸಹ ನಡೆಯುತ್ತಾ-ನಡೆಯುತ್ತಾ ಸುಸ್ತಿನ ಅನುಭವವು ಹೃದಯ ವಿಧೀರ್ಣರನ್ನಾಗಿ ಮಾಡಿ ಬಿಡುತ್ತದೆ. ಹಾಗಾದರೆ ಭರವಸೆ ಇಲ್ಲದವರಿಂದ ಭರವಸೆಯಿರುವವರು ಆಗುವುದು ಒಳ್ಳೆಯದು ಆದರೆ ಸಫಲತಾ-ಸ್ವರೂಪದ ಅನುಭವ ಮಾಡುವವರು ಸದಾ ಶ್ರೇಷ್ಠವಾಗಿದ್ದಾರೆ. ತಾರಾಮಂಡಲದ ಕಥೆಯನ್ನು ಕೇಳಿದಿರಾ? ಕೇವಲ ಮಧುಬನ ಹಾಲ್ನ ತಾರಾಮಂಡಲವಲ್ಲ, ಬೇಹದ್ದಿನ ಬ್ರಾಹ್ಮಣ ಸಂಸಾರದ ತಾರಾಮಂಡಲವಿದೆ. ಒಳ್ಳೆಯದು.

ಬರುವಂತಹ ಎಲ್ಲಾ ಹೊಸ ಮಕ್ಕಳು, ಹೊಸಬರೂ ಇದ್ದಾರೆ ಮತ್ತು ಹಳಬರೂ ಬಹಳಷ್ಟಿದ್ದಾರೆ. ಏಕೆಂದರೆ ಅನೇಕ ಕಲ್ಪದವರಾಗಿದ್ದೀರಿ ಅಂದಾಗ ಅತ್ಯಂತ ಹಳಬರೂ ಆಗಿದ್ದೀರಿ. ಹೊಸ ಮಕ್ಕಳ ಮಿಲನವನ್ನಾಚರಿಸುವ ಹೊಸ ಉಮ್ಮಂಗ-ಉತ್ಸಾಹವು, ಡ್ರಾಮಾದ ನೊಂದಣಿಯ ಅನುಸಾರವಾಗಿ ಪೂರ್ಣವಾಯಿತು. ಹೋಗೋಣ, ಹೋಗೋಣ.... ಎಂದು ಬಹಳ ಉಮ್ಮಂಗ ಇತ್ತಲ್ಲವೆ, ಇಷ್ಟೂ ಉಮ್ಮಂಗವಿತ್ತು, ಅದರಿಂದ ಡೈರೆಕ್ಷನ್ ಸಹ ಕೇಳಿಸಿಕೊಳ್ಳಲಿಲ್ಲ. ಮಿಲನದ ಮಸ್ತಿಯಲ್ಲಿ ಮಸ್ತರಾಗಿದ್ದಿರಲ್ಲವೆ. ಕಡಿಮೆ ಮಂದಿ ಬನ್ನಿರಿ, ಕಡಿಮೆ ಬನ್ನಿರಿ ಎಂದು ಎಷ್ಟು ಹೇಳಲಾಯಿತು, ಯಾರಾದರೂ ಇದನ್ನು ಕೇಳಿಸಿಕೊಂಡಿರಾ? ಬಾಪ್ದಾದಾರವರು ಡ್ರಾಮಾದ ಪ್ರತಿಯೊಂದು ದೃಶ್ಯವನ್ನು ನೋಡುತ್ತಾ ಹರ್ಷಿತವಾಗುತ್ತಾರೆ - ಇಷ್ಟೆಲ್ಲಾ ಮಕ್ಕಳು ಬರಲೇ ಬೇಕಿತ್ತು ಆದ್ದರಿಂದ ಬಂದು ಬಿಟ್ಟರು. ಎಲ್ಲವೂ ಸಹಜವಾಗಿ ಸಿಗುತ್ತಿದೆಯಲ್ಲವೆ? ಕಷ್ಟ ಅನಿಸುತ್ತಿಲ್ಲವೇ? ಪ್ರತಿಯೊಂದು ಕಾರ್ಯದಲ್ಲಿ ಸಹಯೋಗ ಕೊಡಿ, ಡೈರೆಕ್ಷನ್ ಏನು ಸಿಗುತ್ತದೆಯೋ ಅದರಲ್ಲಿ ಸಹಯೋಗಿಯಾಗಬೇಕು ಅರ್ಥಾತ್ ಸಹಜ ಮಾಡಬೇಕಾಗಿದೆ. ಒಂದು ವೇಳೆ ಸಹಯೋಗಿ ಆಗದಿದ್ದರೆ 5000 ಮಂದಿಯೂ ಸಮಾವೇಶವಾಗಿ ಬಿಡುತ್ತೀರಿ ಮತ್ತು ಸಹಯೋಗಿ ಆಗಿರದಿದ್ದರೆ ಅರ್ಥಾತ್ ವಿಧಿ ಪೂರ್ವಕವಾಗಿ ನಡೆಯದಿದ್ದರೆ 500 ಮಂದಿಯಿರುವುದಕ್ಕೂ ಕಷ್ಟವಾಗುತ್ತದೆ. ಆದ್ದರಿಂದ ದಾದಿಯವರು ತಮ್ಮ ಈ ರಿಕಾರ್ಡ್ನ್ನು ನೋಡುತ್ತಾ, ಎಲ್ಲರ ಹೃದಯದಿಂದ ಇದೇ ಬರುತ್ತದೆ - 5000 ಮಂದಿ, 500 ಮಂದಿಯ ಸಮಾನ ಸಮಾವೇಶವಾಗಿದ್ದರು. ಇದಕ್ಕೆ ಕಷ್ಟವನ್ನು ಸಹಜ ಮಾಡುವುದು ಎಂದು ಹೇಳಲಾಗುತ್ತದೆ. ಅಂದಾಗ ಎಲ್ಲರೂ ತಮ್ಮ ರಿಕಾರ್ಡ್ನ್ನು ಬಹಳ ಚೆನ್ನಾಗಿ ತುಂಬಿದ್ದೀರಲ್ಲವೇ? ಒಳ್ಳೆಯ ಪ್ರಮಾಣ ಪತ್ರವು ಸಿಗುತ್ತಿದೆ, ಇದೇ ರೀತಿಯಲ್ಲಿ ಸದಾ ಖುಷಿಯಾಗಿ ಇರಿ ಮತ್ತು ಖುಷಿ ಪಡಿಸಿರಿ, ಸದಾ ಕಾಲವೂ ಹೀಗೆ ಚಪ್ಪಾಳೆಯನ್ನು ಹಾಕುತ್ತಿರುತ್ತೀರಿ. ಆದ್ದರಿಂದ ನೋಡಿ, ಡ್ರಾಮಾನುಸಾರ ಎರಡು ಬಾರಿ ಮಿಲನವಾಯಿತು! ಇದು ಹೊಸಬರಿಗಾಗಿ ಡ್ರಾಮಾನುಸಾರ ಆಯಿತು. ಒಳ್ಳೆಯದು.

ಸದಾ ಆತ್ಮಿಕ ಸಫಲತೆಯ ಶ್ರೇಷ್ಠ ನಕ್ಷತ್ರಗಳಿವೆ, ಸದಾ ಏಕರಸ ಸ್ಥಿತಿಯ ಮೂಲಕ ವಿಶ್ವಕ್ಕೆ ಪ್ರಕಾಶತೆಯನ್ನು ಕೊಡುವಂತಹ, ಜ್ಞಾನ ಸೂರ್ಯ - ಜ್ಞಾನ ಚಂದ್ರಮನ ಜೊತೆ ಸದಾಕಾಲ ಇರುವಂತಹ, ಸದಾ ಅಧಿಕಾರದ ನಿಶ್ಚಯದಿಂದ ನಶೆ ಮತ್ತು ನಮ್ರಚಿತ್ತ ಸ್ಥಿತಿಯಲ್ಲಿ ಇರುವಂತಹ ಪರಮಾತ್ಮನ ತಾರಮಂಡಲದಲ್ಲಿ ಹೊಳೆಯುತ್ತಿರುವ ಸರ್ವ ನಕ್ಷತ್ರಗಳಿಗೆ, ಜ್ಞಾನ ಸೂರ್ಯ-ಜ್ಞಾನ ಚಂದ್ರಮ ಬಾಪ್ದಾದಾರವರ ಆತ್ಮಿಕ ಸ್ನೇಹ ಸಂಪನ್ನ ನೆನಪು-ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ ವಾರ್ತಾಲಾಪ:-

1. ಸದಾ ತಮ್ಮನ್ನು ನಿರ್ವಿಘ್ನ, ವಿಜಯಿ ರತ್ನವೆಂದು ತಿಳಿಯುತ್ತೀರಾ? ವಿಘ್ನ ಬರುವುದಂತು ಒಳ್ಳೆಯ ಮಾತಾಗಿದೆ ಆದರೆ ವಿಘ್ನದಿಂದ ಸೋಲನ್ನು ಅನುಭವಿಸಬಾರದು. ವಿಘ್ನವು ಬರುವುದು ಅರ್ಥಾತ್ ಸದಾಕಾಲಕ್ಕಾಗಿ ತಮ್ಮ ಶಕ್ತಿಶಾಲಿ ಮಾಡುವುದಾಗಿದೆ. ವಿಘ್ನವನ್ನೂ ಸಹ ಒಂದು ಮನೋರಂಜನೆಯ ಆಟವೆಂದು ತಿಳಿದುಕೊಂಡು ಪಾರು ಮಾಡಿರಿ - ಇವರಿಗೆ ನಿರ್ವಿಘ್ನ ವಿಜಯಿಗಳೆಂದು ಹೇಳುತ್ತಾರೆ. ಹಾಗಾದರೆ ವಿಘ್ನಗಳಿಂದ ಗಾಬರಿ ಆಗುವುದಿಲ್ಲವೇ? ಯಾವಾಗ ತಂದೆಯ ಜೊತೆಯಿದೆ ಅಂದಮೇಲೆ ಗಾಬರಿಯಾಗುವ ಮಾತೇ ಇಲ್ಲ. ಯಾರೇ ಒಂಟಿಯಾಗಿರುತ್ತಾರೆ ಎಂದರೆ ಗಾಬರಿಯಾಗುತ್ತಾರೆ ಆದರೆ ಯಾರಾದರೂ ಜೊತೆಯಿದ್ದಾರೆ ಎಂದರೆ ಗಾಬರಿಯಾಗುವುದಿಲ್ಲ, ಧೈರ್ಯವಂತರಾಗುತ್ತಾರೆ. ಹಾಗಾದರೆ ಎಲ್ಲಿ ತಂದೆಯ ಜೊತೆಯಿದೆಯೋ ಅಲ್ಲಿ ವಿಘ್ನವು ಗಾಬರಿಯಾಗುತ್ತದೆಯೋ ಅಥವಾ ತಾವು ಗಾಬರಿ ಪಡುತ್ತೀರಾ? ಸರ್ವಶಕ್ತಿವಂತನ ಮುಂದೆ ವಿಘ್ನವೇನು? ಏನೂ ಇಲ್ಲ. ಆದ್ದರಿಂದ ವಿಘ್ನವು ಆಟವೆನಿಸುತ್ತದೆ, ಕಷ್ಟವೆನಿಸುವುದಿಲ್ಲ. ವಿಘ್ನವು ಅನುಭವಿ ಹಾಗೂ ಶಕ್ತಿಶಾಲಿಯನ್ನಾಗಿ ಮಾಡಿ ಬಿಡುತ್ತದೆ. ಯಾರು ಸದಾ ತಂದೆಯ ನೆನಪು ಮತ್ತು ಸೇವೆಯಲ್ಲಿ ತೊಡಗಿರುತ್ತಾರೆ, ಇದರಲ್ಲಿಯೇ ಬ್ಯುಸಿಯಾಗಿರುತ್ತಾರೆ, ಅವರು ನಿರ್ವಿಘ್ನವಾಗಿರುತ್ತಾರೆ. ಒಂದುವೇಳೆ ಬುದ್ಧಿಯು ಬ್ಯುಸಿಯಾಗಿ ಇರುವುದಿಲ್ಲವೆಂದರೆ ವಿಘ್ನ ಅಥವಾ ಮಾಯೆಯು ಬಂದು ಬಿಡುತ್ತದೆ. ಒಂದುವೇಳೆ ಬ್ಯುಸಿಯಾಗಿರುತ್ತೀರಿ ಎಂದರೆ ಮಾಯೆಯೂ ಸಹ ದೂರವಾಗಿ ಬಿಡುತ್ತದೆ, ಬರುವುದೇ ಇಲ್ಲ ಹೊರಟು ಹೋಗುತ್ತದೆ. ಮಾಯೆಗೂ ಸಹ ಗೊತ್ತಿದೆ - ಇವರು ನನ್ನ ಜೊತೆಗಾರರಲ್ಲ, ಈಗ ಪರಮಾತ್ಮನ ಜೊತೆಗಾರರಾಗಿದ್ದಾರೆ ಆದ್ದರಿಂದ ಹೊರಟು ಹೋಗುತ್ತದೆ. ಲೆಕ್ಕವಿಲ್ಲದಷ್ಟು ಬಾರಿ ವಿಜಯಿಗಳಾಗಿದ್ದೀರಿ ಆದ್ದರಿಂದ ವಿಜಯದ ಪ್ರಾಪ್ತಿ ಮಾಡಿಕೊಳ್ಳುವುದರಲ್ಲಿ ದೊಡ್ಡ ಮಾತೇನಿಲ್ಲ. ಯಾವ ಕಾರ್ಯವನ್ನು ಅನೇಕ ಬಾರಿ ಮಾಡಲಾಗಿರುತ್ತದೆಯೋ, ಅದು ಸಹಜವೆನಿಸುತ್ತದೆ ಅಂದಾಗ ಅನೇಕ ಬಾರಿಯ ವಿಜಯಿಯಾದಿರಿ. ಸದಾ ಖುಷಿಯಾಗಿ ಇರುತ್ತೀರಲ್ಲವೆ? ಮಾತೆಯರು ಸದಾ ಖುಷಿಯಾಗಿ ಇರುತ್ತೀರಾ? ಕೆಲವೊಮ್ಮೆ ಅಳುವುದಿಲ್ಲವೇ? ಎಂದಾದರೂ ಯಾವುದೇ ಅಂತಹ ಪರಿಸ್ಥಿತಿಯು ಬಂದರೆ ಅಳುತ್ತೀರಾ? ಬಹದ್ದೂರರು ಆಗಿದ್ದೀರಿ. ಪಾಂಡವರು ಮನಸ್ಸಿನಲ್ಲಂತು ಅಳುವುದಿಲ್ಲವೇ? ಇದೇಕೆ ಆಯಿತು, ಏನಾಯಿತು - ಹೀಗೆ ಅಳು ಬರುವುದಿಲ್ಲವೇ? ತಂದೆಯ ಮಕ್ಕಳಾಗಿಯೂ ಸದಾ ಖುಷಿಯಾಗಿ ಇರದಿದ್ದರೆ ಮತ್ತ್ಯಾವ ಸಮಯದಲ್ಲಿ ಖುಷಿಯಾಗಿರುತ್ತೀರಿ? ತಂದೆಯ ಮಕ್ಕಳಾಗುವುದು ಅಂದರೆ ಸದಾ ಖುಷಿಯಲ್ಲಿರುವುದಾಗಿದೆ. ದುಃಖವೂ ಇಲ್ಲ, ದುಃಖದಲ್ಲಿ ದುಃಖಿತರೂ ಆಗಬಾರದು, ಎಲ್ಲಾ ದುಃಖಗಳೂ ದೂರವಾಗಿ ಬಿಟ್ಟಿದೆ ಅಂದಾಗ ತಾವು ಈ ವರದಾನವನ್ನು ಸದಾ ನೆನಪಿಟ್ಟುಕೊಳ್ಳಿರಿ. ಒಳ್ಳೆಯದು.

2. ತಮ್ಮನ್ನು ಈ ಆತ್ಮಿಕ ಹೂದೋಟದ ಆತ್ಮಿಕ ಗುಲಾಬಿಯೆಂದು ತಿಳಿಯುತ್ತೀರಾ? ಹೇಗೆ ಎಲ್ಲಾ ಹೂಗಳಲ್ಲಿ ಗುಲಾಬಿ ಹೂವಿನಲ್ಲಿ ಸುಗಂಧವಿರುವ ಕಾರಣದಿಂದ ಪ್ರಿಯವೆನಿಸುತ್ತದೆ. ಅದಾಗಿದೆ ಗುಲಾಬಿ ಮತ್ತು ತಾವೆಲ್ಲರೂ ಆತ್ಮಿಕ ಗುಲಾಬಿ ಆಗಿದ್ದೀರಿ. ಆತ್ಮಿಕ ಗುಲಾಬಿ ಅರ್ಥಾತ್ ಯಾರಲ್ಲಿ ಸದಾ ಆತ್ಮಿಕ ಸುಗಂಧವಿರುತ್ತದೆ. ಆತ್ಮಿಕ ಸುಗಂಧ ಇರುವವರು ಎಲ್ಲಿಯೇ ನೋಡಲಿ, ಯಾರನ್ನೇ ನೋಡುತ್ತಾರೆ ಎಂದರೆ ಆತ್ಮವನ್ನೇ ನೋಡುವರು, ಶರೀರವನ್ನು ನೋಡುವುದಿಲ್ಲ. ಸ್ವಯಂ ಸಹ ಸದಾ ಆತ್ಮಿಕ ಸ್ಥಿತಿಯಲ್ಲಿ ಇರುವರು ಮತ್ತು ಅನ್ಯರನ್ನೂ ಆತ್ಮವೆಂದು ನೋಡುವರು - ಇವರಿಗೆ ಆತ್ಮಿಕ ಗುಲಾಬಿ ಎಂದು ಹೇಳಲಾಗುತ್ತದೆ. ಇದು ತಂದೆಯ ಹೂದೋಟವಾಗಿದೆ, ತಂದೆಯು ಹೇಗೆ ಸರ್ವ ಶ್ರೇಷ್ಠನಾಗಿದ್ದಾರೆಯೋ ಹಾಗೆಯೇ ಹೂದೋಟವೂ ಸಹ ಸರ್ವ ಶ್ರೇಷ್ಠವಾಗಿದೆ. ಈ ಹೂದೋಟದ ವಿಶೇಷ ಶೃಂಗಾರವು ತಾವೆಲ್ಲಾ ಆತ್ಮಿಕ ಗುಲಾಬಿಗಳಾಗಿದ್ದೀರಿ ಮತ್ತು ಈ ಆತ್ಮಿಕ ಸುಗಂಧವು ಅನೇಕ ಆತ್ಮರ ಕಲ್ಯಾಣ ಮಾಡುವಂತದ್ದಾಗಿದೆ.

ಇಂದು ವಿಶ್ವದಲ್ಲಿ ಏನೆಲ್ಲಾ ಕಷ್ಟಗಳಿವೆ, ಅದರ ಕಾರಣವೇ ಆಗಿದೆ - ಒಬ್ಬರು ಇನ್ನೊಬ್ಬರನ್ನು ಆತ್ಮವೆಂದು ನೋಡದಿರುವುದು. ದೇಹಾಭಿಮಾನದ ಕಾರಣವೇ ಎಲ್ಲಾ ಸಮಸ್ಯೆಗಳು ಇವೆ. ದೇಹೀ-ಅಭಿಮಾನಿಯಾದರೆ ಎಲ್ಲಾ ಸಮಸ್ಯೆಗಳೂ ಸಮಾಪ್ತಿಯಾಗಿ ಬಿಡುತ್ತವೆ. ಅಂದಾಗ ತಾವು ಆತ್ಮಿಕ ಗುಲಾಬಿಗಳು ವಿಶ್ವದಲ್ಲಿ ಆತ್ಮಿಕ ಸುಗಂಧವನ್ನು ಹರಡಿಸಲು ನಿಮಿತ್ತರಾಗಿದ್ದೀರಿ - ಇಂತಹ ನಶೆಯು ಸದಾ ಇರುತ್ತದೆಯೇ? ಕೆಲವೊಮ್ಮೆ ಒಂದು ನಶೆ, ಕೆಲವೊಮ್ಮೆ ಇನ್ನೊಂದು ಎನ್ನುವಂತಿರಬಾರದು. ಸದಾ ಏಕರಸ ಸ್ಥಿತಿಯಲ್ಲಿ ಶಕ್ತಿಯಿರುತ್ತದೆ, ಸ್ಥಿತಿಯು ಬದಲಾಗುವುದರಿಂದ ಶಕ್ತಿಯೂ ಕಡಿಮೆಯಾಗಿ ಬಿಡುತ್ತದೆ. ಸದಾ ತಂದೆಯ ನೆನಪಿನಲ್ಲಿರುತ್ತಾ, ಎಲ್ಲಿ ಸೇವಾ ಸಾಧನಗಳಿವೆ ಅವಕಾಶವನ್ನು ತೆಗೆದುಕೊಂಡು ಮುಂದುವರೆಯುತ್ತಿರಿ. ಪರಮಾತ್ಮ-ಹೂದೋಟದ ಆತ್ಮಿಕ ಗುಲಾಬಿ ಎಂದು ತಿಳಿದುಕೊಂಡು ಆತ್ಮಿಕ ಸುಗಂಧವನ್ನು ಹರಡುತ್ತಿರಿ. ಯಾವ ಸುಗಂಧವನ್ನು ಎಲ್ಲರೂ ಬಯಸುತ್ತಾರೆ, ಇದೆಷ್ಟು ಮಧುರ ಆತ್ಮಿಕ ಸುಗಂಧವಾಗಿದೆ! ಈ ಆತ್ಮಿಕ ಸುಗಂಧವು ಅನೇಕ ಆತ್ಮರ ಜೊತೆ ಜೊತೆಗೆ ಸ್ವಯಂನ ಕಲ್ಯಾಣವನ್ನೂ ಮಾಡಿ ಬಿಡುತ್ತದೆ. ಬಾಪ್ದಾದಾರವರು ನೋಡುತ್ತಾರೆ - ಆತ್ಮಿಕ ಸುಗಂಧವನ್ನು ಎಲ್ಲಿಯವರೆಗೆ ಎಷ್ಟು ಹರಡುತ್ತಿರುತ್ತಾರೆ? ಎಲ್ಲಿಯಾದರೂ ಸ್ವಲ್ಪ ದೇಹಾಭಿಮಾನವು ಮಿಕ್ಸ್ ಆಯಿತೆಂದರೆ ಸತ್ಯವಾದ ಆತ್ಮಿಕ ಸುಗಂಧವಿರುವುದಿಲ್ಲ. ಸದಾ ಈ ಆತ್ಮಿಕ ಸುಗಂಧದಿಂದ ಅನ್ಯರನ್ನೂ ಸುಗಂಧ ಭರಿತರನ್ನಾಗಿ ಮಾಡುತ್ತಾ ಸಾಗಿರಿ. ಸದಾ ಅಚಲರಾಗಿದ್ದೀರಾ? ಯಾವುದೇ ಪರಿಸ್ಥಿತಿ ಅಥವಾ ಏರುಪೇರುಗಳು ತಮ್ಮನ್ನು ಅಲುಗಾಡಿಸುವುದಿಲ್ಲವೇ? ಏನೇ ಆಗಲಿ, ಅದನ್ನು ನೋಡುತ್ತಾ ಸ್ವಲ್ಪ ಏರುಪೇರಿನಲ್ಲಂತು ಬಂದು ಬಿಡುವುದಿಲ್ಲವೇ? ಯಾವಾಗ ಇದು ಹೊಸದೇನಲ್ಲ, ಅಂದಮೇಲೆ ಏರುಪೇರಿನಲ್ಲೇಕೆ ಬರುವುದು? ಹೊಸ ಮಾತಾಗಿದ್ದರೆ ಇದೇಕೆ ಇದೇನು ಎನ್ನುವ ಏರುಪೇರಾಗುತ್ತದೆ, ಇದಂತು ಅನೇಕ ಕಲ್ಪಗಳಲ್ಲಿ ಆಯಿತು ಅಷ್ಟೇ. ಇದಕ್ಕೆ ಡ್ರಾಮಾದ ಪ್ರತಿ ನಿಶ್ಚಯಬುದ್ಧಿ ಎಂದು ಹೇಳಲಾಗುತ್ತದೆ. ಸರ್ವಶಕ್ತಿವಂತನು ಜೊತೆಗಾರನಾಗಿದ್ದಾರೆ, ಆದ್ದರಿಂದ ನಿಶ್ಚಿಂತ ಚಕ್ರವರ್ತಿಯಾಗಿದ್ದೀರಿ. ಎಲ್ಲಾ ಚಿಂತೆಗಳನ್ನು ತಂದೆಯವರಿಗೆ ಕೊಡುತ್ತೀರೆಂದರೆ ತಾವು ಸದಾ ನಿಶ್ಚಿಂತ ಚಕ್ರವರ್ತಿಗಳು. ಸದಾ ಆತ್ಮಿಕ ಸುಗಂಧವನ್ನು ಹರಡಿಸುತ್ತಾ ಇರುತ್ತೀರೆಂದರೆ ಸರ್ವ ವಿಘ್ನಗಳೂ ಸಮಾಪ್ತಿಯಾಗಿ ಬಿಡುತ್ತವೆ.

ವರದಾನ:  
ವರದಾನ: ಪ್ರತ್ಯಕ್ಷತೆಯ ಸಮಯವನ್ನು ಸಮೀಪ ತರುವಂತಹ ಸದಾ ಶುಭ ಚಿಂತಕ ಮತ್ತು ಸ್ವ-ಚಿಂತಕ ಭವ.

ಸೇವೆಯಲ್ಲಿ ಸಫಲತೆಯ ಆಧಾರವಾಗಿದೆ – ಶುಭ ಚಿಂತಕ ವೃತ್ತಿ. ಏಕೆಂದರೆ ತಮ್ಮ ಈ ವೃತ್ತಿಯು ಆತ್ಮರಲ್ಲಿ ಗ್ರಹಿಸುವ ಶಕ್ತಿ ಅಥವಾ ಆಸೆಯನ್ನು ಹೆಚ್ಚಿಸುತ್ತದೆ, ಇದರಿಂದ ವಾಣಿಯ ಸೇವೆಯು ಸಹಜವಾಗಿ ಸಫಲವಾಗಿ ಬಿಡುತ್ತದೆ. ಮತ್ತು ಸ್ವಯಂನ ಪ್ರತಿ ಸ್ವ-ಚಿಂತನೆ ಮಾಡುವಂತಹ ಸ್ವ-ಚಿಂತಕ ಆತ್ಮನು ಸದಾ ಮಾಯಾ ಪ್ರೂಫ್, ಯಾರದೇ ಬಲಹೀನತೆಗಳನ್ನು ಗ್ರಹಿಸುವುದರಿಂದ ಮತ್ತು ವ್ಯಕ್ತಿ ಅಥವಾ ವೈಭವದ ಆಕರ್ಷಣೆಯಿಂದಲೂ ಪ್ರೂಫ್(ಮುಕ್ತ) ಆಗಿ ಬಿಡುತ್ತಾನೆ. ಯಾವಾಗ ಇವೆರಡೂ ವರದಾನಗಳು ಪ್ರತ್ಯಕ್ಷ ಜೀವನದಲ್ಲಿ ತರುತ್ತೀರಿ ಆಗ ಪ್ರತ್ಯಕ್ಷತೆಯ ಸಮಯವೂ ಸಮೀಪಕ್ಕೆ ಬರುತ್ತದೆ.

ಸ್ಲೋಗನ್:
ಸ್ಲೋಗನ್: ತಮ್ಮ ಸಂಕಲ್ಪಗಳನ್ನೂ ಅರ್ಪಣೆ ಮಾಡುತ್ತೀರೆಂದರೆ ಸರ್ವ ಬಲಹೀನತೆಗಳು ಸ್ವತಹವಾಗಿ ದೂರವಾಗಿ ಬಿಡುತ್ತವೆ.


ಮುರಳಿ ಪ್ರಶ್ನೆಗಳು -

1. ಎಲ್ಲದಕ್ಕಿಂತ ಶ್ರೇಷ್ಠ ನಕ್ಷತ್ರ ಯಾವುದು?

2. ಸಫಲತೆಯ ನಕ್ಷತ್ರಗಳು ರಾತ್ರಿಯನ್ನು ದಿನವನ್ನಾಗಿ ಹೇಗೆ ಮಾಡುತ್ತವೆ?

3. ಪರಮಾತ್ಮನ ನಕ್ಷತ್ರಗಳು ಯಾವಾಗ ಕಲ್ಲು ಬುದ್ಧಿಯವರಾಗಿ ಬಿಡುತ್ತಾರೆ?

4. ಸಫಲತೆಯ ನಕ್ಷತ್ರಗಳ ವಿಶೇಷ ಲಕ್ಷಣಗಳು ಏನು?

5. ಇದು ಎಂತಹ ನಕ್ಷತ್ರಗಳ ಮಂಡಲವಾಗಿದೆ?

6. ಬಾಬಾ ನಾವು ಬ್ರಾಹ್ಮಣ ಮಕ್ಕಳಿಗೆ ಸದಾ ನಿರ್ವಿಘ್ನರಾಗಲು ಯಾವ ಯುಕ್ತಿಯನ್ನು ತಿಳಿಸುತ್ತಿದಾರೆ?

7. ಸಫಲತೆಯು ನಮ್ಮ ಎಂತಹ ಅಧಿಕಾರವಾಗಿದೆ?

8. ಅಧಿಕಾರದ ಪರಿಭಾಷೆ ಏನಾಗಿದೆ?

9. ಆತ್ಮಿಕ ಗುಲಾಬಿಯೆಂದು ಯಾರಿಗೆ ಹೇಳಲಾಗುತ್ತದೆ?

10. ಸೇವೆಯಲ್ಲಿ ಸಫಲತೆಯ ಆಧಾರವೇನು?